Crime News

E-paper

Cinema News

Local News

State News

Sports News

Articles

೧೦೨ ಕಿ.ಮೀ. ಉದ್ದದ ರಸ್ತೆಗೆ ೨ ಕಿ.ಮೀ. ಮಾತ್ರ ಕಾಂಕ್ರೀಟ್‌ಚರಂಡಿ ವ್ಯವಸ್ಥೆ!

Posted by JAYAKIRANA Kirana on Monday, 20 May 2013 | 0 comments | Leave a comment...





ಮಾಜಿ ಸಿಎಂ ಮೊಲಿ ಸತತ ಆರು ಬಾರಿ ಪ್ರತಿನಿಧಿಸಿದ ಕ್ಷೇತ್ರದ ಕಥೆ-ವ್ಯಥೆ
ಕಾರ್ಕಳ:
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು ೧೦೨ ಕಿ.ಮೀ ಉದ್ದದ ರಸ್ತೆ ಇದೆ. ಇವುಗಳಲ್ಲಿ ೯೫ ಕಿ.ಮೀ ಪುರಸಭಾ ಅಧೀನಕ್ಕೊಳಪಟ್ಟರೆ, ೨ ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇಲಾ ಖೆಗೆ ಒಳಪಟ್ಟಿದೆ. ೫ ಕಿ.ಮೀ ಜಿ.ಪಂ. ಹಿಡಿತದಲ್ಲಿದೆ. ಇಷ್ಟು ಉದ್ದದ ರಸ್ತೆ ಇದ್ದರೂ ಮಳೆನೀರು ಹರಿದು ಹೋಗಲು ಕಾಂಕ್ರೀಟೀಕರಣ ಚರಂಡಿ ವ್ಯವಸ್ಥೆ ಇರುವುದು ಕೇವಲ ೨ ಕಿ.ಮೀ ದೂರದವರೆಗೆ ಮಾತ್ರ. ಕೆಲವಡೆಗಳಲ್ಲಿ ತಾತ್ಕಾಲಿಕವಾಗಿ ತೋಡುಗಳನ್ನು ನಿರ್ಮಿಸಿದರೆ, ಉಳಿದೆಡೆಗಳಲ್ಲಿ ಊಳು ತುಂಬಿಹೋಗಿರುವುದರಿಂದ ತೋಡು ಗಳ ನೆಲಸಮವಾಗಿದೆ. ರಸ್ತೆ ಮೇಲ್ಬಾ ಗದಲ್ಲಿ ಮಳೆನೀರು ಹರಿದುಹೋಗು ತ್ತಿರುವುದರಿಂದ ಹಾಕಲಾಗಿದ್ದ ಡಾಂಬರು ಕಿತ್ತು ಹೋಗಿ ರಸ್ತೆ ದುಸ್ಥಿತಿಗೆ ತಲುಪಲು ಪ್ರಮುಖ ಕಾರಣವಾಗಿದೆ.
ಇದು ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿರುವ ಚರಂಡಿ ದುರವಸ್ಥೆಯ ಇಣುಕು ನೋಟವಷ್ಟೇ. ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೇರಲು ಅನುವು ಮಾಡಿಕೊಟ್ಟಂತಹ ಕ್ಷೇತ್ರದ ಮುಖ್ಯ ಕೇಂದ್ರಭಾಗ ಕಾರ್ಕಳ ಪುರಸಭೆಯಾ ಗಿದೆ. ಮಾತ್ರವಲ್ಲದೇ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಇಲ್ಲಿ ಅಧಿಕಾರ ನಡೆಸಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಅಭಿವೃದ್ಧಿ ಮಂತ್ರ ರಾಜಕಾರಣಿಗಳು ಬಾಯಿಂದ ಕೇಳಿಬರುತ್ತಿದೆಯಾದರೂ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಂಡಿಲ್ಲವೆಂದರೂ ತಪ್ಪಾಗಲಾರದು. ಇದುಲೋಕಸತ್ಯವಾಗಿದೆ.
ರಸ್ತೆ ಅಗಲೀಕರಣವಾಗಲಿಲ್ಲ ಚರಂಡಿ ಕಾಮಗಾರಿ ಪೂರ್ಣಗೊಳ್ಳಲಿಲ್ಲ
ಪೊನ್ನುರಾಜ್ ಅವರು ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಯ ಪ್ರಮುಖ ರಸ್ತೆ ಎಂದೇ ಗುರುತಿಸಲಾ ಗಿದ್ದ ಅನಂತ ಶಯನದಿಂದ ಸಾಲ್ಮರ ತನಕ ರಸ್ತೆ ಅಗಲೀಕರಣಕ್ಕೆ ಪೀಠಿಕೆ ಹಾಕಿದ್ದರು. ಇದನ್ನು ಕಾರ್ಯಗತಗೊಳಿಸಲು ಮುಂದಾಗಿ ವಿಫಲ ಗೊಂಡವರೆಂದರೆ ಜಿಲ್ಲಾಧಿಕಾರಿ ಹೇಮಲತಾ. ಪೊನ್ನುರಾಜ್ ಅವರ ಪತ್ನಿಯಾಗಿರುವ ಹೇಮಲತಾ ಕಾನೂನು ಚೌಕಟ್ಟಿ ನೊಳಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾ ಗದೇ ಭೂಮಾಲಕರೊಂದಿಗೆ ಒಡಂಬಡಿಕೆ ಮಾಡಿರು ವುದೇ ಈ ಎಲ್ಲಾ ಸಮಸ್ಯೆಗೆ ಕಾರಣವಾಗಿದೆ.
ಸ್ವಇಚ್ಛೆಯಿಂದ ಜಾಗ ಬಿಟ್ಟುಕೊಡುವ ಸೌಜನ್ಯಕ್ಕೆ ಮುಂದಾಗದೇ ಇದ್ದ ಸ್ಥಳದ ವಾರಿಸುದಾರರು ಹೆಸರಿಗಷ್ಟೇ ಎರಡರಿಂದ ಐದು ಅಡಿ ಜಾಗ ಬಿಟ್ಟುಕೊಟ್ಟು ಅದರ ಪಕ್ಕ ದಲ್ಲಿಯೇ ಬಹುಮಹಡಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಕೆಲ ಮಂದಿ ಸ್ಥಳವಾರಿಸುದಾರು ಒಂದು ತುಂಡು ಜಾಗ ವನ್ನು ಬಿಟ್ಟುಕೊಡದೇ ಇರುವುದರಿಂದ ರಸ್ತೆ ಅಗಲೀಕರಣ ಯೋಜನೆ ಮೊಟಕುಗೊಳ್ಳಲು ಕಾರಣವಾಗಿದೆ. ಇದರಿಂದ ರಸ್ತೆ ಅಭಿವೃದ್ಧಿಯಾಗಲಿಲ್ಲ. ಚರಂಡಿ ಪೂರ್ಣಗೊಳಲಿಲ್ಲ.
ಅರೆಬರೆ ಕಾಮಗಾರಿಗೆ ಜಿಲ್ಲಾಡಳಿತವೇ ಹೊಣೆ!
 ಜಾಗದ ಮಾಲಕರು ಒಂದಿಷ್ಟು ಜಾಗ ಬಿಟ್ಟು ಕೊಟ್ಟಿರುವುದರಿಂದ ಹಾಗೂ ಕೆಲವೆಡೆಗಳಲ್ಲಿ ಹಳೆಯದಾದ ಕಟ್ಟಡ ಕಡವಿ ನೂತನ ಕಟ್ಟದ ನಿರ್ಮಿಸಿರುವುದರಿಂದಾಗಿ ತೀರಾ ಹಳೆಯದಾಗಿದ್ದ ಚರಂಡಿಯು ಅಸ್ತವ್ಯಸ್ಥ ಗೊಂಡಿ ತ್ತಲ್ಲದೆ ಕಳೆದ ಮಳೆಗಾಲ ಸಂದರ್ಭದಲ್ಲಿ ನಗರದಲ್ಲಿ ಕೃತಕ ನೆರೆ ಹಾವಳಿ ತಲೆದೋರಿತ್ತು. ಇದೇ ಸಂದರ್ಭದಲ್ಲಿ ಕಾರ್ಕಳ ಪುರಸಭೆಯು ಚರಂಡಿ ಕಾಮಗಾರಿ ನಡೆಸಲು ಮುಂದಾಗಿತ್ತು. ೨ ಕೋಟಿ ರೂಪಾಯಿ ವೆಚ್ಚದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದು ನಿರ್ಮಿತಿ ಕೇಂದ ಸಂಸ್ಥೆ.
ಆಯಾಯ ಜಿಲ್ಲಾಧಿಕಾರಿಗಳು ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿರುತ್ತಾರೆ. ಹೆಸರಿಗಷ್ಟೇ ನಿರ್ಮಿತಿ ಕೇಂದ್ರ ಸಂಸ್ಥೆಯು ಕಾಮಗಾರಿ ನಡೆಸುತ್ತಿದೆ ಎಂಬುದು ಕಂಡು ಬಂದರೂ, ಸ್ಥಳೀಯ ಕಂಟ್ರಾಕ್ಟರ್‌ದಾರರಿಗೆ ನೇರವಾಗಿ ಕಾಮಗಾರಿಯ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರ ಸಂಸ್ಥೆ ವಹಿಸಿಕೊಡುತ್ತದೆ. ಜಿಲ್ಲಾಧಿಕಾರಿ ಅಧೀನದಲ್ಲಿ ಸಂಸ್ಥೆ ಇರುವು ದರಿಂದರಿಂದ ಕಾಮಗಾರಿಯ ಬಗ್ಗೆ ತಲೆಕೆಡಿಸಿಕೊಳ್ಳಲು ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿ ಮುಂದಾಗುವುದಿಲ್ಲ. ಆದುದರಿಂದಲೇ ಕಾಮಗಾರಿಯ ಗುಣಮಟ್ಟ ತೃಪ್ತಿಕರ ವಾಗಿರುವುದಿಲ್ಲ ಎಂಬ ಆರೋಪವು ಜನಸಾಮಾನ್ಯರಿಂದ ಕೇಳಿಬರುತ್ತಿದೆ.
ಇಲ್ಲೂ ಅದೇ ನಡೆದಿರುತ್ತದೆ. ಮೂರು ಕಿ.ಮೀ. ಉದ್ದದ ಚರಂಡಿ ನಿರ್ಮಾಣದ ಕಾಮಗಾರಿಯು ಕಳೆದ ಒಂದು ವರ್ಷದಿಂದ ಆಮೆನಡಿಗೆಯಲ್ಲಿ ಸಾಗುತ್ತಾ ಬಂದಿದೆ. ಜಾಗದ ಮಾಲಿಕರು ತಾವು ಸ್ವಇಚ್ಛೆಯಂತೆ ಜಾಗವನ್ನು ರಸ್ತೆ ಅಗ ಲೀಕರಣಕ್ಕೆ ಪುರಸಭೆಗೆ ಬಿಟ್ಟುಕೊಟ್ಟಿದ್ದೇವೆಂದು ಒಪ್ಪಂದ ಪತ್ರದಲ್ಲಿ ಲಿಖಿತವಾಗಿ ದಾಖಲಿಸಿಕೊಟ್ಟಲ್ಲಿ ಮಾತ್ರವೇ ಅಂತಹ ಜಾಗದಲ್ಲಿ ಕಾಮಗಾರಿ ಮುಂದುವರಿದಿದೆ. ಸುಮಾರು ೧.೪ ಕಿ.ಮೀ ಮಾತ್ರವೇ ಕಾಂಕ್ರಿಟೀಕರಣದ ಚರಂಡಿ ನಿರ್ಮಾಣಗೊಂಡಿದೆ. ಉಳಿದ ೧.೬ ಕಿ.ಮೀ ಉದ್ದ ದಲ್ಲಿ ಕಾಮಗಾರಿ ನಡೆಯಲು ಬಾಕಿ ಇದೆ. ಕಾಂಕ್ರಿಟೀಕರಣ ಚರಂಡಿಯ ಒಂದು ತುದಿಯು ಮತ್ತೊಂದು ತುದಿಯನ್ನು ಜೋಡಿಸದೇ ಹೋದುದರಿಂದ ಮಳೆ ನೀರು ಹರಿದು ಹೋಗದೇ ಶೇಖರಣೆಗೊಂಡು ಸಾಂಕ್ರಮಿಕ ರೋಗ ಹರಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ರೂಪುರೇಷೆ ಇಲ್ಲದೇ ಇರುವಂತಹ ಯೋಜನೆಗಳು ಅನುಷ್ಠಾನಗೊಂಡರೇ ಅದ್ದರಿಂದ ಅಗುವಂತಹ ತೊಂದ ರೆಗಳಿಗೆ ಕಾರ್ಕಳ ನಗರದಲ್ಲಿ ಕೈಗೊಂಡಿರುವ ಚರಂಡಿ ಕಾಮಗಾರಿ ತಾಜಾ ಉದಾಹರಣೆ.
ಸಂಪರ್ಕ ಕಲ್ಪಿಸಲಾಗುತ್ತದೆ: ಪುರಸಭಾ ಮುಖ್ಯಾಧಿಕಾರಿ
ಚರಂಡಿ ನಿರ್ಮಾಣದಲ್ಲಿ ತೃಪ್ತಿಕರವಿಲ್ಲದಿದ್ದರೂ, ಈ ಸಾಲಿನ ಮಳೆಗಾಲದೊಳಗಾಗಿ ಮಳೆ ನೀರು ಹರಿದು ಹೋಗಲು ಸಮರ್ಪಕ ರೀತಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಕೆಲವೆಡೆಗಳಲ್ಲಿ ಜಾಗ ತೆರವುಗೊಳಿಸದೇ ಇರುವುದರಿಂದ ಚರಂಡಿ ಹಾದು ಹೋಗುವ ಮಧ್ಯೆಭಾಗದಲ್ಲಿ ಅಂಗಡಿಗಳು ಇದ್ದುದರಿಂದ ಅಂಗಡಿಯ ಮುಂಭಾಗದಲ್ಲಿ ಚರಂಡಿ ನಿರ್ಮಿಸಿ ಸಂಪರ್ಕ ಕಲ್ಪಿಸುವುದರೊಂದಿಗೆ ಸಮಸ್ಯೆ ಇತ್ಯರ್ಥಪಡಿಸುವ ಯೋಜನೆ ಇದೆ.


ಪ್ರೇಯಸಿಯನ್ನು ಅಪಹರಿಸಲು ಗುಜರಾತಿನಿಂದ ಬಂದಾತನಿಗೆ ಮಂಗಳೂರಿನಲ್ಲಿ ಮಂಗಳಾರತಿ

Posted by JAYAKIRANA Kirana on | 0 comments | Leave a comment...



ಮಂಗಳೂರು: ಪ್ರೇಯಸಿಯನ್ನು ಅಪ ಹರಿಸುವ ಉದ್ದೇಶದಿಂದ ಗುಜರಾತಿನಿಂದ ನಗರಕ್ಕೆ ಬಂದಿದ್ದ ಯುವಕನಿಗೆ ಯುವ ತಿಯ ಸಹೋದರಿಯರ ಸಹಿತ ಸ್ಥಳೀಯ ಯುವಕರು ತಪರಾಕಿ ನೀಡಿದ ಘಟನೆ ನಿನ್ನೆ ಮಧ್ಯಾಹ್ನ ಬಲ್ಲಾಳ್‌ಬಾಗ್ ಜನತಾ ಡಿಲೆಕ್ಸ್ ಸಮೀಪ ಸಂಭವಿಸಿದೆ.
ಘಟನೆಗೆ ಸಂಬಂಧಿಸಿದಂತೆ ಗುಜ ರಾತಿ ಹುಡುಗನನ್ನು ಹಿಡಿದಿಟ್ಟುಕೊಂಡ ಪೊಲೀಸರು ಯುವತಿಯ ಮನೆಮಂದಿ ಯನ್ನು ಕರೆಸಿ ವಿಚಾರಣೆ ನಡೆಸಿದರಾದರೂ ಯುವತಿಯ ಮನೆಮಂದಿ ದೂರು ನೀಡದ ಕಾರಣ ಪ್ರಕರಣ ದಾಖಲುಗೊಂಡಿಲ್ಲ. ಆದರೆ ಪೊಲೀಸರು ಯುವಕನಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೂಲತಃ ಮೂಲ್ಕಿ ನಿವಾಸಿಯಾಗಿರುವ ರಚನಾ (ಹೆಸರು ಬದಲಾಯಿಸಲಾಗಿದೆ) ಹೆತ್ತವರ ಜೊತೆ ಗುಜರಾತಿನಲ್ಲಿ ವಾಸವಾಗಿದ್ದಳು, ಈಕೆಯ ಮನೆಯಿದ್ದ ಫ್ಲಾಟ್‌ನಲ್ಲಿಯೇ ಸೂರಜ್ (ಹೆಸರು ಬದಲಾಯಿಸಲಾಗಿದೆ) ಎಂಬಾತನ ಮನೆಯೂ ಇದ್ದು ಇಬ್ಬರ ನಡುವೆ ವಯೋ ಸಹಜ ಪ್ರೀತಿ ಉಂಟಾಗಿತ್ತು. ಆದರೆ ಇವರ ಪ್ರೀತಿ ಬಹಿರಂಗವಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಪ್ರೀತಿಯ ವಿಚಾರ ತಿಳಿಯುತ್ತಿರುವಂತೆ ಯುವತಿಯ ಮನೆಯಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಯುವಕನಿಗೆ ಈ ಮೊದಲೇ ಮದುವೆಯಾಗಿ ವಿಚ್ಚೇಧನವೂ ಆಗಿತ್ತು. ಸದಾ ಪೋಲಿಯಾಗಿ ತಿರುಗುತ್ತಿದ್ದ ಈತನಿಗೆ ೧೦ ಲಕ್ಷಕ್ಕೂ ಮಿಕ್ಕಿದ ಸಾಲಗಳಿದ್ದವು ಎಂಬ ಕಾರಣಕ್ಕೆ ಇವರ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತ ಪಡಿಸಿದ್ದಲ್ಲದೆ ರಚನಾಳನ್ನು ಮಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಆದರೆ ಇಲ್ಲಿಗೆ ಬಂದ ಬಳಿಕವೂ ಇವರ ಪ್ರೀತಿ ಎಗ್ಗಿಲ್ಲದೆ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಕಾರಣದಿಂದ ಪ್ರೇಯಸಿಯನ್ನು ಕರೆದುಕೊಂಡು ಹೋಗಲೇ ಬೇಕು ಎನ್ನುವ ಹಠಕ್ಕೆ ಬಿದ್ದ ಸೂರಜ್ ತನ್ನ ಸ್ನೇಹಿತನ ಜೊತೆ ಸೇರಿ ಕಾರೊಂದನ್ನು ಗೊತ್ತು ಪಡಿಸಿಕೊಂಡು ಮಂಗಳೂರಿಗೆ ಬಂದೇ ಬಿಟ್ಟಿದ್ದ. ನಗರದ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿದ್ದ ರಚನಾ ನಗರದ ಪತ್ತುಮುಡಿ ಸೌಧದ ಬಳಿ ಸೂರಜ್‌ನನ್ನು ಭೇಟಿಯಾಗಲು ತೀರ್ಮಾನಿಸಿದ್ದಳು. ಈ ಬಗ್ಗೆ ಆತನಿಗೆ ಮಾಹಿತಿಯನ್ನೂ ನೀಡಿದ್ದಳು.
ನಿಗದಿತ ಸಮಯಕ್ಕೆ ಸರಿಯಾಗಿ ರಚನಾ ಹೊರಟಳಾದರೂ ಇದರ ಸುಳಿವು ಪಡೆದಿದ್ದ ರಚನಾಳ ಸಹೋದರಿಯೂ ಜೊತೆಗೆ ತೆರಳಿದ್ದಳು. ಜನತಾ ಡಿಲೆಕ್ಸ್ ಹೊಟೇಲು ಸಮೀಪ ಸೂರಜ್ ಕಾರು ನಿಲ್ಲಿಸಿದ್ದು ಅಕ್ಕನ ಜೊತೆ ರಿಕ್ಷಾದಲ್ಲಿ ಬಂದ ರಚನಾ ರಿಕ್ಷಾದಿಂದ ಇಳಿದು ನೇರವಾಗಿ ಕಾರು ಹತ್ತಲು ಅಣಿಯಾಗಿದ್ದಳು. ಇದನ್ನು ತಿಳಿದ ಸಹೋದರಿ ಕಾರಿಗೆ ಅಡ್ಡಾ ನಿಂತು ಬೊಬ್ಬೆ ಹೊಡೆದು ಸಾರ್ವಜನಿಕರು ಒಟ್ಟು ಸೇರುವಂತೆ ಮಾಡಿದ್ದಳು.
ಯುವತಿಯ ಅಪಹರಣ ನಡೆಯುತ್ತಿದೆ ಎನ್ನುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ಮುಖಂಡ ಪ್ರಮೋದ್ ಬಳ್ಳಾಲ್‌ಬಾಗ್ ಮತ್ತವರ ಸ್ನೇಹಿತರು ಯುವಕರಿಬ್ಬರನ್ನು ಕಾರಿನಿಂದ ತಡೆದರು. ಅಷ್ಟರಲ್ಲಿ ಸೂರಜ್ ಸ್ನೇಹಿತ ಪರಾರಿಯಾದರೆ ಸೂರಜ್ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದ. ಉದ್ರಿಕ್ತ ಗೊಂಡಿದ್ದ ಕೆಲ ಯುವಕರು ಸೂರಜ್‌ಗೆ  ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕಾಗಮಿಸಿ ಇಬ್ಬರನ್ನೂ ವಶಕ್ಕೆ ತೆಗೆದು ಕೊಂಡಿದ್ದಾರೆ. ಯುವತಿಯ ಮನೆಮಂದಿಯನ್ನು ಪೊಲೀಸರು ಕರೆಸಿ ಕೊಂಡಿದ್ದು, ಅವರು ದೂರು ನೀಡಲು ಹಿಂಜರಿದ ಕಾರಣ ಪೊಲೀಸರು ಗುಜರಾತಿ ಯುವಕನಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೈಕ್‌ಗೆ ಟಿಪ್ಪರ್ ಡಿಕ್ಕಿ: ಸಹಸವಾರ ಮೃತ್ಯು, ಸವಾರ ಗಂಭೀರ

Posted by JAYAKIRANA Kirana on | 0 comments | Leave a comment...


cn
ಉಪ್ಪಿನಂಗಡಿ:
ಬೈಕ್ ಹಾಗೂ ಟಿಪ್ಪರ್ ನಡುವಿನ  ಡಿಕ್ಕಿಯಿಂದ ಬೈಕ್ ಸಹಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ  ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಸಮೀಪದ ಮಾಯಿಲ್ಗ ಎಂಬಲ್ಲಿ ಸೋಮ ವಾರ ನಡೆದಿದೆ.
ಮೃತಪಟ್ಟ ಯುವಕನನ್ನು ಆಲಂಕಾರು ಗ್ರಾಮದ ಕೇಪುಳು ದಿ. ಕೃಷ್ಣಪ್ಪ ಪೂಜಾರಿ ಯವರ ಪುತ್ರ ದಿವಾಕರ(೩೦) ಎಂದು ಗುರು ತಿಸಲಾಗಿದ್ದು,  ದಿವಾಕರನ ಸಹೋದರ ಸವಾರ ದಿನೇಶ್ ಗಂಭೀರ ಗಾಯಗೊಂ ಡವರು. ಸೋಮವಾರ ಕಾರ್ಯಕ್ರಮವೊಂ ದರಲ್ಲಿ ಭಾಗವಹಿಸಲು ಆಲಂಕಾರಿನಿಂದ ಕುಂತೂರು  ಕಡೆಗೆ ದಿನೇಶ ಚಲಾಯಿಸುತ್ತಿದ್ದ ಬೈಕ್‌ನಲ್ಲಿ ದಿವಾಕರ ಹಿಂಬದಿಯಲ್ಲಿ ಸವಾರನಾಗಿ ಪ್ರಯಾಣಿಸುತ್ತಿದ್ದ. ಬೈಕ್ ಮಾಯಿಲ್ಗ ಎಂಬಲ್ಲಿನ ತಿರುವು ತಲುಪುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆಯಿತು. ಇದರಿಂದ  ಸಹಸವಾರ ದಿವಾಕರನ ತಲೆಗೆ ಗಂಭೀರ ಗಾಯ ಗೊಂಡು  ಸ್ಥಳದಲ್ಲಿಯೇ ಸಾವನ್ನಪ್ಪಿದ. ಸವಾರ ಗಂಭೀರ ಗಾಯಗೊಂಡು ಉಪ್ಪಿನಂಗಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದ ಸ್ಥಳದಲ್ಲಿ ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಕ್ಷಣ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.
ಮೃತನು  ಕಾಸರಗೋಡಿನಲ್ಲಿ ಕೆಂಪು ಕಲ್ಲು ಕೊರೆಯುವ ಮೆಷಿನ್ ಆಪ ರೇಟರ್ ಆಗಿ ಕೆಲಸ ಮಾಡುತ್ತಿದ್ದು, ರಜೆಯಲ್ಲಿ  ಊರಿಗೆ ಬಂದಿದ್ದ. ಮೃತನು ಪತ್ನಿ ನಳಿನಿ ಹಾಗು ಎರಡು ವರ್ಷದ ಪುತ್ರ ಧನ್ವಿತ್ ಸೇರಿದಂತೆ ತಾಯಿ ವಾರಿಜ ಹಾಗೂ ಸಹೋದರ ದಿನೇಶನನ್ನು ಅಗಲಿದ್ದಾರೆ. ಪೂವಪ್ಪ ಪೂಜಾರಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರ ಬೈಕೊಂದು ಪಲ್ಟಿಯಾಗಿ ಓರ್ವ ಮೃತಪಟ್ಟ  ಮರುದಿನವೇ ಈ ಘಟನೆ ನಡೆ ದಿದ್ದು, ಇದರಿಂದ ರಾಜ್ಯ ಹೆದ್ದಾರಿ ಮರು ಡಾಮರೀಕರಣಗೊಂಡು ಮೂರು ವರ್ಷ ಗಳಾತ್ತಿದ್ದಂತೆ ೧೫ಕ್ಕೂ ಹೆಚ್ಚು ಬಲಿಯಾದಂತಾಗಿದೆ. ಸುಸಜ್ಜಿತ ರಸ್ತೆಯಿಂದಾಗಿ ಲಾರಿ, ಬಸ್ಸುಗಳು ಲಂಗು ಲಗಾಮಿಲ್ಲದ ಚಲಾವಣೆಯಿಂದ ದುರ್ಘಟನೆಗಳು ನಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಕೋರಲಾಗಿದೆ.


ಇರಾಕ್ ಸರಣಿ ಬಾಂಬ್ ಸ್ಫೋಟ: ಎಪ್ಪತ್ತು ಸಾವು

Posted by JAYAKIRANA Kirana on | 0 comments | Leave a comment...


ಬಾಗ್ದಾದ್: ಇರಾಕಿನ ಪ್ರಮುಖ ನಗರಗಳಲ್ಲಿ ನಿನ್ನೆ ಕಿಡಿಗೇಡಿಗಳು ನಡೆಸಿದ ಸರಣಿ ಕಾರ್ ಬಾಂಬ್ ಸ್ಫೋಟಕ್ಕೆ ಕನಿಷ್ಠ ಎಪ್ಪತ್ತು ಮಂದಿ ಸಾವನ್ನಪ್ಪಿದ್ದು, ೨೦೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಾಜಧಾನಿ ಬಾಗ್ದಾದ್‌ನ ಬಸ್ ಸ್ಟ್ಯಾಂಡ್ ಮತ್ತು ಮಾರುಕಟ್ಟೆಯ ಪ್ರದೇಶದ ಸುತ್ತಮುತ್ತ ಒಟ್ಟು ಎಂಟು ಕಡೆ ಕಾರ್ ಬಾಂಬ್ ಸ್ಫೋಟಿ ಸಲಾಗಿದೆ.
ಮುಂಜಾನೆ ಮೂವರನ್ನು ಬಲಿ ತೆಗೆದುಕೊಂಡ ಬಾಸ್ರಾ ನಗರದಲ್ಲಿ ನಡೆದ ಅವಳಿ ಕಾರ್ ಬಾಂಬ್ ಸ್ಫೋಟದ ಬೆನ್ನಲ್ಲೇ ಬಾಗ್ದಾದ್‌ನಲ್ಲೂ ಸ್ಫ್ಪೋಟ ನಡೆಸಲಾಗಿದ್ದು, ಯಾವುದೇ ಸಂಘಟನೆ ಸ್ಫ್ಪೋಟದ ಹೊಣೆ ಹೊತ್ತುಕೊಂಡಿಲ್ಲ.
ಇರಾಕಿನಲ್ಲಿ ತಲೆದೋರಿರುವ ರಾಜ ಕೀಯ ಮತ್ತು ಪ್ರಾದೇಶಿಕ ಜನಸಮುದಾ ಯಗಳ ಭಿಕ್ಕಟ್ಟಿನಿಂದಾಗಿ ಈ ಸ್ಫೋಟ ನಡೆಸಲಾಗಿದೆ ಎಂದು ಶಂಕಿಸಲಾಗಿದ್ದು, ಬಹುತೇಕ ಶಿಯಾ ಸಮುದಾಯದ ಮುಸಲ್ಮಾನರನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕುಖ್ಯಾತ ಭಯೋತ್ಪಾದಕ ಸಂಘಟನೆ ಅಲ್-ಖಾಯಿದಾದೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿರುವ ಸುನ್ನಿ ಸಮುದಾಯಕ್ಕೆ ಸೇರಿದ ಬಂಡುಕೋರರು, ತಮ್ಮ ಸಮುದಾಯ ರಾಜಕೀಯ ಹಾಗೂ ಆರ್ಥಿಕ ಶೋಷಣೆಗೊಳಪಟ್ಟಿದೆ ಎಂದು ಆರೋಪಿಸುತ್ತಾ, ಇದಕ್ಕೆಲ್ಲಾ ಶಿಯಾ ಸಮುದಾಯವೇ ಕಾರಣವೆಂಬಂತೆ ಅವರನ್ನು ಗುರಿಮಾಡಿಕೊಂಡು ದಾಳಿ ನಡೆಸುತ್ತಾ ಬರುತ್ತಿರುವುದಾಗಿ ತಿಳಿದುಬಂದಿದೆ.


ಉದ್ಯಮಿಗೆ ಕೊಲೆ ಬೆದರಿಕೆ: ಆರು ಮಂದಿ ವಿರುದ್ಧ ದೂರು

Posted by JAYAKIRANA Kirana on | 0 comments | Leave a comment...


ಮಂಗಳೂರು:
ಉಡುಪಿಯ ಉದ್ಯಮಿಯೋರ್ವರ ಸಂಸ್ಥೆಗೆ ಅಕ್ರಮ ಪ್ರವೇಶಗೈದು ಸೊತ್ತುಗಳನ್ನು ನಾಶಪಡಿಸಿ ಜೀವಬೆದರಿಕೆ ಒಡ್ಡಿದ ಆರೋಪದ ಮೇಲೆ ಆರು ಮಂದಿಯ ವಿರುದ್ಧ ನ್ಯಾಯಾಲ ಯದಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ.
ಈ ಸಂಬಂಧ ಆರೋಪಿಗಳ ವಿರುದ್ಧ ತನಿಖೆ ನಡೆಸಿ ಸಮನ್ಸ್ ಜಾರಿಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಉಡುಪಿ ಬೊಮ್ಮಾರಬೆಟ್ಟು ಎಂಬಲ್ಲಿನ ಉದ್ಯಮಿ ನಾರಾಯಣ  ಕೋಟ್ಯಾನ್ ಎಂಬವರಲ್ಲಿ ಹಫ್ತಾ ವಸೂಲಿ ಮಾಡುವ ಉದ್ದೇಶದಿಂದ ಆರೋಪಿಗಳಾದ ರಮಾನಂದ್ ನಾಯಕ್, ನಾಗೇಶ್‌ನಾಯಕ್, ಉಪೇಂದ್ರ ನಾಯಕ್, ಗೋಪಾಲ್ ನಾಯಕ್, ಪ್ರೇಮಚಂದ್ರ ನಾಯಕ್ ಮತ್ತು ಸುಬ್ರಾಯ ನಾಯಕ್ ಎಂಬವರು ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ನಾರಾಯಣ್ ಕೋಟ್ಯಾನ್ ನಿರಾಕರಿಸಿದ ಹಿನ್ನೆಲೆಯಲ್ಲಿ ಇವರ ಹಾಲೋ ಬ್ಲಾಕ್ ಕಾರ್ಖಾನೆಯ ವಠಾರಕ್ಕೆ ಬಂದು ಸೊತ್ತುಗಳನ್ನು ನಾಶಪಡಿಸಿದ್ದಾರೆ. ಅಲ್ಲದೇ ನಾರಾಯಣ್ ಕೋಟ್ಯಾನ್‌ರನ್ನು  ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ನಾರಾ ಯಣ್ ಕೋಟ್ಯಾನ್ ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖ ಲಿಸಿದ್ದು, ಮಾನ್ಯ ನ್ಯಾಯಾಲಯ ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸುವಂತೆ ಆದೇಶ ನೀಡಿದೆ.

ಸಮುದ್ರದಲ್ಲಿ ಮುಳುಗಿ ಮಹಿಳೆ ದುರ್ಮರಣ

Posted by JAYAKIRANA Kirana on | 0 comments | Leave a comment...



ಮಣಿಪಾಲ:
ಮಲ್ಪೆ ಸಮುದ್ರ ತೀರದಲ್ಲಿ ವಿಹಾರಕ್ಕೆಂದು ಬಂದ ಮಹಿಳೆಯೊಬ್ಬರು ಈಜಲು ಹೋಗಿ ಸಮುದ್ರ ಪಾಲಾಗಿರುವ ಘಟನೆ  ನಿನ್ನೆ ಸಂಜೆ ವೇಳೆ ಸಂಭವಿಸಿದೆ.
ಉಡುಪಿ ಕಕ್ಕುಂಜೆ ನಿವಾಸಿ ಪ್ರಭಾಕರ್ ಶೆಟ್ಟಿ ಎಂಬವರ ಪತ್ನಿ ವಿಜಯಲಕ್ಷ್ಮಿ(೨೫)  ಮೃತಪಟ್ಟವರು. ಕುಟುಂಬ ಸಮೇತರಾಗಿ  ಮಲ್ಪೆ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಸಂದರ್ಭ  ಸಹೋದರ  ಶ್ರೀನಿವಾಸ್ ಎಂಬ ವರ ಜತೆ ಈಜುತ್ತಾ ಮುಂದೆ ಹೋದಂತೆ ಆಯತಪ್ಪಿ ವಿಜಯಲಕ್ಷ್ಮಿ ಸಮುದ್ರ ಅಲೆಗ ಳಿಗೆ ಸಿಲುಕಿದರು. ಕೂಡಲೇ ಸ್ಥಳೀಯ ಮೀನು ಗಾರರು ನೀರಿನಿಂದ ಹೊರತಂದರಾದರೂ ಪ್ರಯೋಜನವಾಗಲಿಲ್ಲ.
ಬೇಸಿಗೆ ರಜೆಯ ಸಮಯವಾಗಿರು ವುದರಿಂದ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ  ಸಮುದ್ರ ವಿಹಾರಕ್ಕೆಂದು ಬರುತ್ತಿದ್ದು,  ಸ್ಥಳ ದಲ್ಲಿ ಅಪಾಯಕಾರಿ ಸೂಚನೆಗಳಿದ್ದರೂ,  ಅದನ್ನು ಗಮನಿಸಿಯೂ ಪ್ರವಾಸಿಗರು ಸಮುದ್ರಕ್ಕಿಳಿಯುತ್ತಿದ್ದು, ದುರಂತಗಳಿಗೆ ಕಾರಣವಾಗುತ್ತಿದೆ.
ಬೋಟ್ ದುರಂತ: ಮಗುವಿನ ಶವ ಪತ್ತೆ
ವಿಹಾರಕ್ಕೆಂದು ಮೊನ್ನೆ ಸಂಜೆ ತೆರಳಿದ್ದ ಬೋಟ್ ಮಗುಚಿ ನೀರುಪಾಲಾಗಿದ್ದ ಮಗು ಶವವಾಗಿ ನಿನ್ನೆ ಸಂಜೆ ವೇಳೆ ಮಲ್ಪೆ ಬೀಚ್ ನಲ್ಲಿ ಪತ್ತೆಯಾಗಿದೆ.
ಘಟನೆಯಲ್ಲಿ ಹಿತೇಶ್(೨) ಎನ್ನುವ ಮಗು ನೀರುಪಾಲಾಗಿದ್ದು, ಅದರ ಪತ್ತೆ ಕಾರ್ಯ ನಿನ್ನೆ ಸಂಜೆಯವರೆಗೂ ಮುಂದು ವರಿದಿತ್ತು.  ಮಗು ಪತ್ತೆಯಾಗದ ಹಿನ್ನೆಲೆ ಯಲ್ಲಿ ಮಗುವಿನ ಹುಡುಕಾಟಕ್ಕಾಗಿ ಎರಡು ಬೋಟ್‌ಗಳನ್ನು ಕಳಿಸಲಾಗಿತ್ತು.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)