ಪರೀಕ್ಷಾ ಮಂಡಳಿ ಎಸ್ಎಸ್ಎಲ್ಸಿ ಫಲಿ ತಾಂಶವನ್ನು ನಿಗದಿತ ಸಮಯಕ್ಕೆ ಪ್ರಕಟಿಸಿ ವಿದ್ಯಾ ರ್ಥಿಗಳ ಮುಂದಿನ ಶೈಕ್ಷಣಿಕ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದೆ. ಪರೀಕ್ಷಾ ವ್ಯವಸ್ಥೆಯ ಪಾರದರ್ಶ ಕತೆ ಕಾಪಾಡಿಕೊಳ್ಳಲು ಉತ್ತರ ಪತ್ರಿಕೆಯ ಜೆರಾಕ್ಸ್, ಪ್ರತಿ ನೀಡಿಕೆ, ಮರು ಎಣಿಕೆ, ಮರು ಮೌಲ್ಯಮಾಪನ ಸೌಲಭ್ಯ ಒದಗಿಸುತ್ತಿದೆ. ಆದರೆ ಇವುಗಳಿಗೆ ನಿಗದಿ ಪಡಿಸಿರುವ ಶುಲ್ಕ ಸಂಪೂರ್ಣ ಅವೈeನಿಕವಾಗಿದೆ.
ಒಂದು ವಿಷಯದ ಜೆರಾಕ್ಸ್ ಪ್ರತಿ ಪಡೆಯಲು ೩೦೦ ರೂ. ಮರು ಎಣಿಕೆಗೆ ೧೫೦ರೂ. ಮರು ಮೌಲ್ಯಮಾಪನಕ್ಕೆ ೭೦೦ ರೂ. ಈ ರೀತಿಯಾಗಿ ದರ ನಿಗದಿ ಪಡಿಸಿದೆ. ಮೌಲ್ಯಮಾಪಕರು ಮಾಡುವ ನಿರ್ಲಕ್ಷ್ಯ ಮತ್ತು ತಪ್ಪಿಗೆ ವಿದ್ಯಾರ್ಥಿಗಳಿಗೆ ದಂಡ ವಿಧಿಸುವುದು ನ್ಯಾಯವೇ? ಮೊದಲು ಮಾಡಿದ ಮೌಲ್ಯ ಮಾಪನಕ್ಕಿಂತ ಹೆಚ್ಚಿನ ಅಂಕವಿದ್ದರೆ ಅದಕ್ಕೆ ದಂಡ ಇಲ್ಲ, ಮತ್ತೆ ಮೌಲ್ಯಮಾಪನ ಸರಿಯಾಗಿದ್ದರೆ ದಂಡ ವಿಧಿಸುವ ಕ್ರಮವನ್ನು ಮಾಡಬೇಕಾಗಿತ್ತು. ಏಕೆಂದರೆ ಮಾಡಿದ ಮೌಲ್ಯಮಾಪನಕ್ಕಿಂತ ಹೆಚ್ಚು ಅಂಕ ಗಳಿಸಿದರೆ ಅದು ಮೌಲ್ಯಮಾಪಕರ ತಪ್ಪಿನಿಂದಾಗಿದೆ ಇದಕ್ಕೆ ವಿದ್ಯಾರ್ಥಿಯಲ್ಲಿ ದಂಡ ಪಡೆಯುವುದ ರಲ್ಲಿ ಅರ್ಥವಿಲ್ಲ.
ಒಂದು ವಿಷಯದ ಉತ್ತರ ಪತ್ರಿಕೆ ಸರಾಸರಿ ೨೦ ರಿಂದ ೨೪ ಪುಟಗಳಿರುತ್ತದೆ. ಅದರ ಛಾಯಾ ಪ್ರತಿ ಪಡೆಯಲು ಗರಿಷ್ಠ ೩೦ ರೂ. ಖರ್ಚಾಗು ತ್ತದೆ. ಅದನ್ನು ವಿದ್ಯಾರ್ಥಿಗೆ ತಲುಪಿಸಲು ಅಂಚೆ ವೆಚ್ಚ ೨೫ ರೂ. ಈ ಕೆಲಸ ಮಾಡಿದ್ದಕ್ಕೆ ೨೦ರೂ. ಶುಲ್ಕ ಪಡೆಯಬಹುದು. ಒಟ್ಟು ೭೫ ರೂ. ನಿಗದಿ ಮಾಡುವುದು ನ್ಯಾಯಸಮ್ಮತ. ಆದರೆ ಪರೀಕ್ಷಾ ಮಂಡಳಿ ೩೦೦ ರೂ. ಶುಲ್ಕ ಸಂಗ್ರಹಿಸಿ ವಿದ್ಯಾರ್ಥಿ ಗಳನ್ನು ಶೋಷಣೆಗೆ ಈಡು ಮಾಡುತ್ತಿದೆ. ಈ ವ್ಯವಸ್ಥೆ ತಪ್ಪಬೇಕು. ಆದ್ದರಿಂದ ಇನ್ನು ಮುಂದೆ ಯಾದರೂ ಶಿಕ್ಷಣ ಸಚಿವರು ಇತ್ತ ಗಮನಹರಿ ಸಬೇಕಾಗಿ ವಿನಂತಿ.
ಧನು, ಮೂಡಬಿದ್ರೆ
ಬಿಜೆಪಿ ಸಾಧನೆ ಏನು?
ರಾಜ್ಯ ಬಿಜೆಪಿ ಸರಕಾರ ಹೇಗೋ ನಾಲ್ಕು ವರ್ಷಗಳನ್ನು ಯಶ ಸ್ವಿಯಾಗಿ ಪೂರೈಸಿದೆ. ಅವೆಷ್ಟೋ ಹಗ ರಣ, ಭ್ರಷ್ಟಾಚಾರಗಳ ನಡುವೆ ಸಿಲು ಕಿದ ಸರಕಾರ ಇಷ್ಟು ಕಾಲ ಬಾಳಿಕೆ ಬಂದಿದ್ದೇ ಹೆಚ್ಚು. ಈ ನಾಲ್ಕು ವರ್ಷ ಗಳಲ್ಲಿ ಪಕ್ಷದ ಅನೇಕ ಹಿರಿ-ಕಿರಿಯ ಸಚಿವರು, ಶಾಸಕರುಗಳು ನಾನಾ ರೀತಿಯ ತಪ್ಪು ಕಾರ್ಯಗಳನ್ನು ಎಸಗಿ ಪಕ್ಷಕ್ಕೆ ಅಪಚಾರವೆಸಗಿದರು. ಬಿಜೆಪಿ ಪಕ್ಷ ತನ್ನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜಿಗಿಟ್ಟಿತು. ನಾಲ್ಕು ವರ್ಷಗಳಲ್ಲಿ ಬಿಜೆಪಿ ಎಸಗಿರುವ ಭ್ರಷ್ಟಾ ಚಾರ ಈ ಹಿಂದಿನ ಯಾವುದೇ ರಾಜ ಕೀಯ ಪಕ್ಷ ನಡೆಸಿದ್ದಿಲ್ಲ. ಮುಖ್ಯ ಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷರು ಸರ ಕಾರವನ್ನು ಉಳಿಸುವಲ್ಲಿ ಕಾಲ ಕಳೆ ದರೇ ಹೊರತು ಜನರಿಗಾಗಿ ಉತ್ತಮ ಯೋಜನೆಯನ್ನು ರೂಪಿಸಲಿಲ್ಲ. ಇದ ರಿಂದ ರಾಜ್ಯದ ಬಡವರ್ಗದ ಜನತೆ ಮತ್ತಷ್ಟು ಬಡವರಾದರೆ, ಶ್ರೀಮಂ ತರು ಹಣ ಮಾಡುತ್ತಲೇ ಸಾಗಿದರು. ರಾಜ್ಯ ಬಿಜೆಪಿ ಸರಕಾರ ಮತ್ತೂ ನಾಲ್ಕು ವರ್ಷ ಆಡಳಿತದಲ್ಲಿ ಮುಂದು ವರಿದರೆ ರಾಜ್ಯದ ಅಮೂಲ್ಯ ಪ್ರಾಕೃತಿಕ ಸಂಪತ್ತು ನಾಶವಾಗುವುದು ನಿಶ್ಚಿತ.
ಕರುಣಾಕರ, ಹೊಸಬೆಟ್ಟು
ಫೇಸ್ಬುಕ್ ಸಾಮಾಜಿಕ ಜೀವನಕ್ಕೆ ಅಪಾಯ
ಫೇಸ್ಬುಕ್ ಎನ್ನುವ ಸಾಮಾ ಜಿಕ ತಾಣವನ್ನು ಮಿತಿಮೀರಿ ಬಳಕೆ ಮಾಡುತ್ತಿರುವುದರ ಪರಿಣಾಮ ಜನರ ಸಾಮಾಜಿಕ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬರುತ್ತಿವೆ. ಡೈವೋರ್ಸ್ ಪ್ರಕರಣಗಳು ಮಾತ್ರವ ಲ್ಲದೆ ಹೆಣ್ಮಕ್ಕಳ ಹದಿವಯಸ್ಸಿನ ಪ್ರೀತಿ, ಲೈಂಗಿಕತೆಗೂ ಫೇಸ್ಬುಕ್ ಕಾರಣ ವಾಗುತ್ತಿದೆ. ಇತ್ತೀಚೆಗೆ ಅಸ್ಸಾಂನ ಕಾಂಗ್ರೆಸ್ ಪಕ್ಷದ ಮಹಿಳಾ ರಾಜ ಕಾರಣಿಯೊಬ್ಬರೂ ಫೇಸ್ಬುಕ್ ಜೊತೆ ಪರಿಚಯವಾದ ಯುವಕನ ಜೊತೆ ಗಂಡ-ಮಕ್ಕಳನ್ನು ಮನೆ ಯಲ್ಲೇ ಬಿಟ್ಟು ನಾಪತ್ತೆಯಾದ ಘಟನೆ ನಡೆದಿದೆ. ಇಂಥ ಘಟನೆಗಳು ಬಾರಿ-ಬಾರಿ ಮರುಕಳಿಸುತ್ತಿದ್ದರೂ ಜನರು ಫೇಸ್ಬುಕ್ ಅನ್ನು ಮೆಚ್ಚಿಕೊಂಡಿರು ವುದು ಅಪಾಯವನ್ನು ಆಹ್ವಾನಿಸಿ ದಂತೆ. ಇನ್ನಾದರೂ ಫೇಸ್ ಬುಕ್ ಸಾಮಾಜಿಕ ತಾಣದ ಬಳಕೆ ಮಿತಿಯ ಲ್ಲಿರಲಿ.
ಲೋಕೇಶ್, ಪುತ್ತೂರು
ಇಲ್ಲಸಲ್ಲದ ಆರೋಪ ಖಂಡನೀಯ
ಕಳೆದ ೨೭ರ ಜಯಕಿರಣ ಪತ್ರಿ ಕೆಯ ‘ಬಹಿರಂಗ ಪತ್ರ’ ವಿಭಾಗ ದಲ್ಲಿ ‘ಭ್ರಷ್ಟಾಚಾರದ ವಿರುದ್ಧ ಹೋರಾಡುವವರೇ ಭ್ರಷ್ಟರಾದರೆ?’ ಎಂಬ ಶೀರ್ಷಿಕೆಯಡಿಯಲ್ಲಿ ಪತ್ರ ಬರೆದವರು ಮಂಚಿ ವಲಯದ ಎಸ್ ಡಿಪಿಐ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಮೇ. ೧೫ರಲ್ಲಿ ಇರಾ ಗ್ರಾಮದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆದಿದ್ದ ಹೋರಾಟವನ್ನೇ ನೆಪ ವಾಗಿಟ್ಟುಕೊಂಡು ಎಸ್ಡಿಪಿಐ ನಾಯಕರು ಬಿಜೆಪಿ ನಾಯಕನಿಂದ ಹಣ ಪಡೆದು ಕಾರ್ಯಕರ್ತರನ್ನು ಸೇರಿಸಿದ್ದಾರೆ ಎಂದು ಬರೆದಿದ್ದಾರೆ. ಇವರು ಬರೆದಿರುವ ಶೈಲಿಯನ್ನು ಗಮನಿಸಿದರೆ ಮತಿಭ್ರಮಣೆಗೆ ಒಳ ಗಾದಂತೆ ತೋರುತ್ತಿದೆ. ಯಾಕೆಂ ದರೆ ಭ್ರಷ್ಟಾಚಾರ ಎನ್ನುವುದು ಯಾವುದೇ ಪಕ್ಷದ, ಯಾವುದೇ ನಾಯಕನ ಸಮಸ್ಯೆಯಲ್ಲ. ಇದೇ ನಿದ್ದರೂ ಸಮಾಜದ ಎಲ್ಲ ವರ್ಗಗಳ ಜನರ ಸಮಸ್ಯೆ. ಹೀಗಾಗಿ ಇದರ ವಿರುದ್ಧ ಹೋರಾಡಬೇಕಾದ್ದು ಎಲ್ಲ ವರ್ಗಗಳ ಜನರ ಕರ್ತವ್ಯ. ಇದಕ್ಕೆ ಆ ಪಕ್ಷ, ಈ ಪಕ್ಷವೆಂಬ ಬೇಧಭಾವ ವಿಲ್ಲ. ಹೀಗಾಗಿ ಪ್ರತಿಭಟನೆಯಲ್ಲಿ ಎಸ್ಡಿಪಿಐ ಕಾರ್ಯಕರ್ತರೂ ಕೂಡಾ ಸ್ವಇಚ್ಛೆಯಿಂದಲೇ ಭಾಗವ ಹಿಸಿದ್ದರು. ಇನ್ನು ದೇವಸ್ಥಾನ, ಮಠ-ಮಂದಿರಗಳು, ಮುಸ್ಲಿಂ ಬಂಧುಗಳ ಶ್ರದ್ಧಾಭಕ್ತಿಯ ಕೇಂದ್ರ, ಕ್ರೈಸ್ತರ ಇಗ ರ್ಜಿಗಳು ನಮಗೇ ಬೇರೆ-ಬೇರೆ ಯಲ್ಲ. ಎಲ್ಲವೂ ದೇವರು ನೆಲೆಸಿ ರುವ ಸಾನಿಧ್ಯವೇ ಆಗಿದೆ. ಹೀಗಾಗಿ ಇದನ್ನು ಟೀಕಿಸುವ ಕೋಮುವಾದಿತನ ಲೇಖಕರು ಬಿಡುವುದೊಳಿತು. ಇನ್ನು ಎಸ್ಡಿಪಿಐ ಸಂಘಟನೆ ಮುಂಜಿ ಕಾರ್ಯಕ್ರಮ ಮಾಡುತ್ತದೆ ಎಂದಿದ್ದೀರಿ. ಲೇಖಕರು ಇನ್ನೂ ಎಸ್ಡಿಪಿಐ ಸಂಘ ಟನೆಯ ಬಗ್ಗೆ ಸರಿಯಾಗಿ ತಿಳಿದು ಕೊಂಡಿಲ್ಲವೆಂದು ಕಾಣುತ್ತದೆ. ಯಾಕೆಂ ದರೆ ಎಸ್ಡಿಪಿಐ ಎಲ್ಲೂ ಮುಂಜಿ ಕಾರ್ಯಕ್ರಮ ನಡೆಸುವುದಿಲ್ಲ.
ಇನ್ನು ಕಾರ್ಯಕರ್ತರಿಗೆ ಗುಡ್ಡ ಗಾಡು ತರಬೇತಿ ನೀಡಲು ಎಸ್ಡಿಪಿಐ ಉಗ್ರಗಾಮಿ ಸಂಘಟನೆಯಲ್ಲ, ಇದೊಂದು ಶೋಷಿತ ಸಮಾಜಕ್ಕೆ ರೂಪಿತವಾದ ರಾಜಕೀಯ ಪಕ್ಷ ಎನ್ನುವು ದನ್ನು ಅರಿತುಕೊಳ್ಳಿ. ಎಸ್ಡಿಪಿಐ ಸಂಘ ಟನೆ ವತಿಯಿಂದ ರಕ್ತದಾನ, ಬಡ ಕುಟುಂಬಕ್ಕೆ ಆರ್ಥಿಕ ನೆರವು, ಮಕ್ಕಳಿಗೆ ಪುಸ್ತಕ ವಿತರಣೆಯಂಥ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಎಸ್ಡಿ ಪಿಐ ತನ್ನ ಕ್ಯಾಂಪ್ಗಳಲ್ಲಿ ಸಂಗ್ರಹಿಸುವ ರಕ್ತವನ್ನು ಹಿಂದೂ-ಮುಸ್ಲಿಂ-ಕ್ರೈಸ್ತ ರೆಂಬ ಬೇಧಭಾವವಿಲ್ಲದೆ ಎಲ್ಲ ರಿಗೂ ದಾನವಾಗಿ ನೀಡುತ್ತಿದೆ. ಇಲ್ಲಿ ಧರ್ಮ ರಾಜಕೀಯಕ್ಕೆ ಅವಕಾಶ ನೀಡುವುದಿಲ್ಲ. ಎಸ್ಡಿಪಿಐ ಪಕ್ಷದ ಏಳಿಗೆಯನ್ನು ಸಹಿಸದ ಕುಹಕಿಗಳು ವ್ಯರ್ಥವಾಗಿ ಸಂಘಟನೆಯ ಕಾಲೆಳೆ ಯುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗುತ್ತದೆ. ಇನ್ನಾದರೂ ಪಕ್ಷದ ಕುರಿತು ಅವಹೇಳನಕಾರಿ ಬರಹ ಪ್ರಕಟಿಸುವುದನ್ನು ನಿಲ್ಲಿಸುವುದೊ ಳಿತು. ಎಸ್ಡಿಪಿಐ ವಿರುದ್ಧ ಏನೇನೋ ಬರೆದು ಕೊನೆಗೆ ‘ನೊಂದ ಎಸ್ಡಿಪಿಐ ಕಾರ್ಯ ಕರ್ತರು’ ಎಂದು ಬರೆದ ಮಾತ್ರಕ್ಕೆ ನೀವೇನೂ ಸುಭಗರಾಗುವುದಿಲ್ಲ. ಸಂಘಟನೆಯ ಬಗ್ಗೆ ಬರೆಯುವು ದಾದರೆ ನಿಮ್ಮ ಸ್ಪಷ್ಟ ವಿಳಾಸ ಹಿಡಿದು ಪುರಾವೆಯೊಂದಿಗೆ ಬನ್ನಿ.
ಅಶ್ರಫ್, ಮಂಚಿ ಎಸ್ಡಿಪಿಐ-ಮಂಚಿ
ಹಳೆಯಂಗಡಿ-ಕಿನ್ನಿಗೋಳಿ ರಸ್ತೆಯಲ್ಲಿ ಅನಗತ್ಯ ಹಂಪ್ಸ್ಗಳು!
ಹಳೆಯಂಗಡಿಯಿಂದ ಕಿನ್ನಿ ಗೋಳಿ ಕಡೆ ಸಂಚರಿಸುವ ರಸ್ತೆ ಯನ್ನು ಇಂಟರ್ಲಾಕ್ ಹಾಕಿ ಮೇಲ್ದ ರ್ಜೆಗೆ ಏರಿಸಲಾಗಿದೆ. ಹಿಂದೆ ಗುಂಡಿ ನಿರ್ಮಾಣವಾಗಿ ವಾಹನ ಸವಾರ ರಿಗೆ ಸವಾಲಾಗಿದ್ದ ಸುಮಾರು ಅರ್ಧ ಕಿ.ಮೀ. ದೂರದ ರಸ್ತೆಯಲ್ಲಿ ಈಗ ಅನಗತ್ಯ ಹಂಪ್ಸ್ಗಳು ರಾರಾಜಿಸು ತ್ತಿವೆ. ಕೆಲವೇ ಮೀಟರ್ ಅಂತರ ದಲ್ಲಿ ಹಂಪ್ಸ್ಗಳನ್ನು ಹಾಕಲಾಗಿದ್ದು, ರಸ್ತೆ ಸಂಚಾರಕ್ಕೆ ಅನಗತ್ಯ ವಿಳಂಬ ವಾಗುತ್ತಿದೆ. ಇಂಟರ್ಲಾಕ್ ಕಾಮ ಗಾರಿಯ ಮೇಲೆ ಒಟ್ಟು ಮೂರು ಕಡೆ ಹಂಪ್ಸ್ ಇದ್ದರೆ, ರೈಲ್ವೇ ಗೇಟ್ ಸಮೀಪ ಮತ್ತೊಂದು ಇದೆ. ರಾತ್ರಿ ಇಲ್ಲವೇ ನಸುಕಿನ ವೇಳೆ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಂಪ್ಸ್ ಗಮನಕ್ಕೆ ಬಾರದೆ ಸ್ಕಿಡ್ ಆಗುವ ಸಂಭ ವವೂ ಇದೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಅಗತ್ಯವಾಗಿ ಗಮನಿಸ ಬೇಕು. ಅನಗತ್ಯ ಹಂಪ್ಸ್ಗಳನ್ನು ಕಿತ್ತುಹಾಕುವ ಮೂಲಕ ಸುಗಮ ಸಂಚಾರಕ್ಕೆ ಶ್ರಮಿಸಬೇಕಾಗಿ ವಿನಂತಿ.
ಗಣೇಶ್, ಹಳೆಯಂಗಡಿ
ಎಂಡೋ ಪೀಡಿತರಿಗೆ ಪರಿಹಾರ ಕೊಡಿ
ಕೇರಳ ಸರಕಾರ ಎಂಡೋ ಸಲ್ಫಾನ್ ಪೀಡಿತರಿಗೆ ಇನ್ನೂ ಸರಿ ಯಾಗಿ ಪರಿಹಾರ ನೀಡಿಲ್ಲ. ಎಂಡೋ ಪೀಡಿತರನ್ನು ಗಣನೆಗೆ ತೆಗೆದುಕೊಳ್ಳದೆ ಹೀನಾಯವಾಗಿ ಕಾಣುತ್ತಿದೆ. ಹಾಸಿಗೆ ಹಿಡಿದಿರುವ ರೋಗಿಗಳು ಅಥವಾ ಮೃತಪಟ್ಟಿರುವ ವರ ಹತ್ತಿರದ ಬಂಧುಗಳಿಗೆ ಪರಿ ಹಾರ ಧನ ವಿತರಿಸುವುದಾಗಿ ಹೇಳಿದ್ದ ಕೇರಳ ಸರಕಾರ ತನ್ನ ಮಾತಿನಿಂದ ನುಣುಚಿ ಕೊಂಡಿದೆ. ಸಂತ್ರಸ್ತರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ವರು ಹಾಸಿಗೆ ಹಿಡಿದು ನರಳುತ್ತಿದ್ದರೆ ಕೇರಳ ಸರಕಾರ ಪ್ರಯೋಜನಕ್ಕೆ ಬಾರದ ಯೋಜನೆಗಳನ್ನು ರೂಪಿಸು ತ್ತಿದೆ. ಎಂಡೋ ಸಲ್ಫಾನ್ ಪೀಡಿತರಿಗೆ ಇನ್ನಾದರೂ ಕೇರಳ ಸರಕಾರ ಆಶಾ ಕಿರಣವಾಗಲಿ.
ರವೀಶ್, ಕಾಸರಗೋಡು
ಕಾನೂನನ್ನೇ ತಿದ್ದಿಕೊಳ್ಳುವ ರಾಜಕಾರಣಿಗಳು ಬೇಕೇ?
ಈಗಿನ ಬಹುತೇಕ ರಾಜಕಾರಣಿಗಳು ಕೀಳುಮಟ್ಟದ ರಾಜಕೀಯಕ್ಕಿಳಿ ದಿದ್ದಾರೆ ಎಂದರೆ ತಪ್ಪಾಗಲಾರದು. ಒಬ್ಬರನ್ನೊಬ್ಬರು ಹೀಯಾಳಿಸುವುದು ಮಾಮೂಲಿಯಾಗಿದೆ. ಕಾನೂನನ್ನೇ ತಿದ್ದಿಕೊಳ್ಳುವಷ್ಟರ ಮಟ್ಟಿಗೆ ಈಗಿನ ರಾಜ ಕೀಯ ಬೆಳೆದಿದೆ. ಇದರಿಂದ ನ್ಯಾಯಾಂಗದ ಘನತೆಗೆ ಧಕ್ಕೆಯಾಗುತ್ತಿದೆ. ಇಂಥವರನ್ನು ಹೀಗೆಯೇ ಬಿಟ್ಟರೆ ನ್ಯಾಯಾಂಗ ತನ್ನ ಪಾವಿತ್ರ್ಯತೆಯನ್ನು ಕಳೆದು ಕೊಳ್ಳಬಹುದು. ತನ್ನ ಶಕ್ತಿ ಏನೆಂಬುದನ್ನು ನ್ಯಾಯಾಲಯ ತೋರಿಸಬೇಕಾಗಿದೆ. ನ್ಯಾಯಮೂರ್ತಿಗಳನ್ನು ಹೀಯಾಳಿಸುತ್ತಿರುವ ಭ್ರಷ್ಟ ರಾಜಕಾರಣಿಗಳ ವಿರುದ್ಧ ನ್ಯಾಯಾಲಯ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಿಕೊಂಡು ಭ್ರಷ್ಟ ರಾಜಕಾರಣಿಗಳ ದುರಹಂಕಾರಕ್ಕೆ ತಕ್ಕ ಶಾಸ್ತ್ರಿ ಮಾಡಬೇಕಾಗಿದೆ.
ಕಿರಣ್ ಕುಮಾರ್, ಮಂಗಳೂರು
ಗಾಡ್ಗಿಳ್ ಶಿಫಾರಸ್ಸು ಜಾರಿಗೆ ಬರುವುದೇ?
ಪಶ್ಚಿಮಘಟ್ಟ ಪ್ರದೇಶದ ಅಸಮತೋಲನಕ್ಕೆ ಕಾರಣವಾಗುತ್ತಿರುವ ವಾಣಿಜ್ಯ ಬೆಳೆಗಳಾದ ಚಹಾ, ಕಾಫಿ, ರಬ್ಬರ್ ಅನ್ನು ಘಟ್ಟ ವ್ಯಾಪ್ತಿಯಿಂದ ನಿಷೇ ಧಿಸಬೇಕೆಂಬ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದಿಂದ ನೇಮಿಸಲ್ಪಟ್ಟಿದ್ದ ಗಾಡ್ಗಿಳ್ ಸಮಿತಿಯ ವರದಿಯನ್ನು ಚಾಚೂ ತಪ್ಪದೇ ಜಾರಿ ಮಾಡುವ ಉಪಕ್ರಮವನ್ನು ಕೇಂದ್ರ ಅನುಸರಿ ಸಬೇಕು. ಚಹಾ, ಕಾಫಿ, ರಬ್ಬರ್ ಸೇರಿದಂತೆ ಕೆಲವೊಂದು ವಾಣಿಜ್ಯ ಬೆಳೆಗಳಿಗೆ ಯದ್ವಾ ತದ್ವಾ ರಸಾಯನಿಕಗಳನ್ನು ಸಿಂಪಡಿಸಿ ಸಮಸ್ತ ಜೀವ ಜಗತ್ತಿಗೆ ಹಾನಿ ಮಾಡಲಾಗುತ್ತಿದೆ. ಇದರಿಂದಾಗಿ ಪಶ್ಚಿಮಘಟ್ಟದಲ್ಲಿ ಜೀವಜಾಲಗಳ ಕೊಂಡಿ ತಪ್ಪಿ ಹೋಗಿದೆ. ಈಗಂತೂ ಶ್ರೀಮಂತರ ತೆವಲಾಗಿ ಹೋಗಿರುವ ರೆಸಾರ್ಟ್ ಸಂಸ್ಕೃತಿ ಅಲ್ಲಲ್ಲಿ ಅನುಷ್ಠಾ ನಕ್ಕೆ ಬರುತ್ತಿದೆ.
ಅರಣ್ಯದಲ್ಲಿ ಖಾಸಗಿ ಜಮೀನಿಗೆ ಹೊಂದಿ ಕೊಂಡ ತುಂಡು ಭೂಮಿಯನ್ನು ಖರೀದಿಸಿ ಆನಂತರ ಇಡೀ ಅರಣ್ಯಕ್ಕೆ ಬೇಲಿ ಹಾಕುವುದು ಮುಂದುವರಿದಿದೆ. (ಇದೇ ಕಾರಣಕ್ಕೆ ಇತ್ತೀಚೆಗೆ ಅರಣ್ಯ ಸಂರಕ್ಷಣಾಧಿ ಕಾರಿ ಮದನ ನಾಯ್ಕ್ ದಾಂಡೇಲಿಯಲ್ಲಿ ಬಲಿಯಾ ದರು) ಕೇರಳದಿಂದ ಮಲಯಾಳಿಗಳು ಚಾರ್ಮಾಡಿ ಘಾಟಿಯಲ್ಲಿ ಜಮೀನು ಖರೀದಿಸಿ ಬೇಲಿ ಹಾಕಿದ್ದಾರೆ. ಆದರೂ ಜಿಲ್ಲಾಡಳಿತ ಇವರನ್ನೆಲ್ಲಾ ಮುಟ್ಟದೆ ಕಾಡಿ ನಲ್ಲಿ ತಲೆತಲಾಂತರದಿಂದ ವಾಸ ಮಾಡುತ್ತಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಾರೆ. ಚಾರ್ಮಾಡಿ ಯಲ್ಲಂತೂ ಮಂಗಳೂರಿನ ಕೆಲವೊಂದು ಶ್ರೀಮಂ ತರ ಜಮೀನು ಬೇಕಾದಷ್ಟು ಇದೆ. ಅರಣ್ಯ ಇಲಾಖೆ ಇದನ್ನು ವಾಪಸ್ ಪಡೆಯಲು ಪ್ರಯತ್ನಿಸುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿರುವ ಜಮೀನಿಗೆ ಕೆಲವೊಂದು ಮಂತ್ರಿ ಗಳೇ ಅಕ್ರಮ ಅಪ್ಪಂದಿರು.
ಗಾಡ್ಗಿಳ್ ವರದಿ ಇದರ ಬಗ್ಗೆಯೂ ಗಮನ ಹರಿಸಲಿ. ಈಗಾಗಲೇ ಪ್ರಾಕೃತಿಕ ಏರುಪೇರಿನಿಂದಾಗಿ ಭೂಮಿಯ ತಾಪಮಾನ ಏರುತ್ತಿದೆ. ಕನಿಷ್ಟ ಇರುವ ಅರಣ್ಯವನ್ನಾದರೂ ಉಳಿಸೋಣ. ಹೆಚ್ಚು-ಹೆಚ್ಚು ಮರಗಳನ್ನು ಬೆಳೆಸೋಣ.
ಚಂದ್ರ, ಚಾರ್ಮಾಡಿ