ಜಾತಿ ಹೆಸರಿನಲ್ಲಿ ಕಾರ್ಯಕ್ರಮಗಳು ಅಗತ್ಯವೇ?

Posted by JAYAKIRANA Kirana on Thursday, 31 May 2012 | 0 comments | Leave a comment...

ಸಂವಿಧಾನದಲ್ಲಿ ಉಲ್ಲೇಖವಿರುವಂತೆ ನಮ್ಮದು ಜಾತ್ಯತೀತ ರಾಷ್ಟ್ರವಾಗಿದೆ. ಆದರೆ ವಾಸ್ತವವಾಗಿ ಆಗುತ್ತಿರುವುದು ಮಾತ್ರ ಬೇರೆಯೇ. ಸಣ್ಣಪುಟ್ಟ ಜಾತಿಯಿಂದ ಹಿಡಿದು ಹೆಚ್ಚಿನ ಜನಸಂಖ್ಯೆ ಇರುವ ಜಾತಿಗಳವರೆಗೆ ಎಲ್ಲರೂ ಜಾತಿವೈಭವೀಕರಣಕ್ಕಾಗಿ ಸಣ್ಣಪುಟ್ಟ ಕಾರ್ಯಕ್ರಮವನ್ನೂ ಜಾತಿ ಹೆಸರಿನಲ್ಲಿ ನಡೆ ಯುವುದು ಸರಿಯೇ? ಜಾತಿ ವೈಯಕ್ತಿಕ ವಾಗಿ ಮತ್ತು ಕುಟುಂಬ ಸೀಮಿತವಾಗಿದ್ದರೆ ಅದರಿಂದ ಸಮಾಜಕ್ಕೆ ಹಾನಿ ಇಲ್ಲ. ಆದರೆ ಬಹಿ ರಂಗವಾಗಿ ಜಾತಿ ಸಂಘಟನೆಗೆ ತೊಡಗಿ ಬೃಹತ್ ಸಮಾವೇಶ ನಡೆಯುವುದು, ತಮ್ಮ ಜಾತಿಯ ರಾಜಕಾರಣಿಗಳಿಗೆ ಕುಮ್ಮಕ್ಕು ಕೊಡುವುದು, ಮಾಧ್ಯಮ ಗಳು ಪ್ರತಿಯೊಬ್ಬರನ್ನೂ ಜಾತಿ ಹೆಸರಿಂದ ಗುರುತಿಸು ವುದು ಇತ್ಯಾದಿ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಪ್ರತಿಯೊಂದು ಘಟನೆಯನ್ನೂ ಜಾತಿಯ ಹಿನ್ನೆಲೆಯಲ್ಲಿ ನೋಡುವ ಮನಸ್ಥಿತಿಯನ್ನು ಜನರು ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದ ಸಮಾ ಜದ ನೆಮ್ಮದಿ ಹಾಳಾಗುವುದರಲ್ಲಿ ಸಂಶಯ ವಿಲ್ಲ. ಇದರಿಂದಲೇ ಜಾತಿ ಘರ್ಷಣೆಗಳು ಹೆಚ್ಚುತ್ತಿವೆ. ಸಹಜೀವನ ದೂರವಾಗುತ್ತಿದೆ. ಈ ಎಲ್ಲ ನಡವಳಿಕೆಗಳು ಸಂವಿಧಾನಕ್ಕೆ ಅಪ ಚಾರ ಎಸಗಿದಂತೆ. ಇತ್ತೀಚಿನ ಸರಕಾರಗಳೂ ಜಾತಿ ವ್ಯವಸ್ಥೆ ಕುಮ್ಮಕ್ಕು ನೀಡುತ್ತಿವೆ.
ನಮ್ಮ ದೇಶದಲ್ಲಿ ಜಾತಿ ಸಮಾವೇಶ ಗಳನ್ನು ನಡೆಸದಂತೆ, ಮಾಧ್ಯಮಗಳಲ್ಲಿ ಜಾತಿ ಹೆಸರು ಬಳಸದಂತೆ ನಿರ್ಬಂಧ ಹೇರುವ ನಡೆ ಯಲಿ.
ಪ್ರಜಾ, ಮಂಗಳೂರು

ಇತ್ತ ಗಮನಿಸಲಿ
ಕೇಂದ್ರ ಸರಕಾರ ಜಾರಿಗೆ ತಂದಿ ರುವ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಟಾನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದ ಬಗ್ಗೆ ಸಾರ್ವ ಜನಿಕರಿಗೆ ಅನುಮಾನಗಳಿವೆ. ಏಕೆಂ ದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಎಲ್ಲಾ ಅಕ್ರಮ ವ್ಯವಹಾರಗಳಿಗೆ ತರಬೇತಿ ದೊರೆಯುವುದೇ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ. ಖಾಸಗಿ ಶಿಕ್ಷಣ ಸಂಸ್ಥೆಗಳ ಕಾನೂನುಬಾಹಿರ ದಂಧೆ ಗಳು, ಅವ್ಯವಹಾರಗಳು ಮಕ್ಕಳಿಗೂ ಗೊತ್ತಿವೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲ ದವರಂತೆ ನಟಿಸುತ್ತಾರೆ. ಶಿಕ್ಷಣ ಹಕ್ಕು ಕಾಯಿದೆ ಅನುಷ್ಠಾನದ ವಿಷಯ ದಲ್ಲೂ ಇಲಾಖೆ ಜಾಣಕುರುಡು ಮತ್ತು ಕಿವುಡುತನ ಪ್ರದರ್ಶಿಸುವ ಸಾಧ್ಯತೆ ಇದೆ. ಶಿಕ್ಷಣ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಈ ಕುರಿತು ಎಚ್ಚರವಹಿಸಬೇಕು.
ರಾಜೇಶ್, ಮಂಗಳೂರು

ಕವನಗಳಿಗೆ ಸೆನ್ಸಾರ್ ಸರಿಯೇ?
ಮೊನ್ನೆ ತಾನೇ ಬಿ.ಸಿ.ರೋಡ್ ನಲ್ಲಿ ಬಂಟ್ವಾಳ ತಾಲೂಕು ಮಟ್ಟದ ಚುಟುಕು ಕವಿಗೋಷ್ಠಿ ನಡೆಯಿತು. ಇದರಲ್ಲಿ ಕೆಲವೇ ಮಂದಿಗೆ ಕವನ ವಾಚಿಸಲು ಅವಕಾಶ ನೀಡಲಾಯಿತು. ಕಾರಣ ಕವನಗಳಿಗೆ ಸೆನ್ಸಾರ್ ಹಾಕಿದ್ದು, ಇಂದಿನ ದಿನದಲ್ಲಿ ತುಳು, ಕನ್ನಡ, ಕೊಂಕಣಿ ಭಾಷೆಯಲ್ಲಿ ಯಾವುದೇ ಕೃತಿ ರಚಿಸದವರು ಇದರ ಅಧ್ಯಕ್ಷರಾ ಗಿದ್ದಾರೆ. ಇವರೊಂದಿಗಿರುವ ಕೆಲವೇ ಸಾಹಿತಿಗಳು ಸೆನ್ಸಾರ್ ಹಾಕಿ ದ್ದಾರೆ. ಇನ್ನಾದರೂ ಕವನ ಓದಲು ಅವಕಾಶ ನೀಡಿ.
ನೊಂದವರು, ಕಲ್ಲಡ್ಕ

ಪ್ರಯಾಣಿಕರಿಗೆ ಸಹಕರಿಸಿ
ವಿಟ್ಲ-ಮಂಗಳೂರು ಮಧ್ಯ ಚಲಿ ಸುವ ಸಿ.ಸಿ.ಬಸ್ಸುಗಳು ಜನರಿಗೆ ಬೇಕಾ ದಲ್ಲಿ ನಿಲ್ಲಿಸುತ್ತವೆ. ಆದರೆ ಕೆಎಸ್ ಆರ್‌ಟಿಸಿ ಬಸ್ಸುಗಳು ಬೋರ್ಡು ಇರು ವಲ್ಲಿ ಮಾತ್ರ ನಿಲ್ಲುತ್ತವೆ ಇದರಿಂದ ಪ್ರಯಾಣಿಕರಿಗೆ ತೊಂದರೆಯಾ ಗುತ್ತದೆ. ಖಾಲಿ ಬಸ್ಸುಗಳನ್ನು ಬಿಡಿಸಿ ಸರಕಾರಕ್ಕೆ ನಷ್ಟ ಉಂಟು ಮಾಡುವ ಬದಲು ಕೆಎಸ್‌ಆರ್‌ಟಿಸಿ ಪ್ರಯಾಣಿ ಕರಿಗೆ ಉತ್ತಮ ಸೇವೆ ಒದಗಿಸಲಿ ಎಂಬುವುದೇ ನನ್ನ ಹಾರೈಕೆ.
ಪ್ರಯಾಣಿಕ, ಕಲ್ಲಡ್ಕ

ಕೆಟರಿಂಗ್‌ನವರಿಗಿಂಥ ಅಡುಗೆ ಭಟ್ಟರೇ ವಾಸಿ!
ಕೇಟರಿಂಗ್ ಉದ್ಯಮ ಬೆಳೆದಂತೆಲ್ಲಾ ಇಲ್ಲಿಯೂ ಗ್ರಾಹಕರನ್ನು ಬೋಳಿ ಸುವ ದಂಧೆ ಆರಂಭವಾಗಿದೆ. ಒಂದು ಊಟಕ್ಕೆ ೧೫೦ಕ್ಕಿಂತಲೂ ಹೆಚ್ಚು ದರ ವಿಧಿಸುವ ಕೇಟರಿಂಗ್‌ನವರು ವಿಶೇಷ ಖಾದ್ಯಕ್ಕಾದರೆ ಇನ್ನೂ ಹೆಚು ವಸೂಲು ಮಾಡುತ್ತಾರೆ. ಮಂಗಳೂರಿನಂತಹ ನಗರದಲ್ಲಿ ಅಡುಗೆ ಮಾಡುವ ಕಿರಿಕಿರಿ ಬೇಡವೆಂದು ಹೆಚ್ಚಿನವರು ತಮ್ಮ ಮನೆಯ ಸಮಾರಂಭಕ್ಕೆ ಕೇಟರಿಂಗ್‌ನವ ರನ್ನೇ ಹೇಳುತ್ತಾರೆ.
ಇಂಥ ಪರಿಪಾಠ ಹಳ್ಳಿಗಳಲ್ಲೂ ಆರಂಭವಾಗಿದೆ. ಆದರೆ ನಾನು ಗಮನಿ ಸಿದ ಮಟ್ಟಿಗೆ ಕೇಟರಿಂಗ್‌ಗಿಂತ ಶುಚಿ ಹಾಗೂ ಮಿತ ದರದಲ್ಲಿ ಅಡುಗೆ ಭಟ್ಟರು ಉತ್ತದ ಖಾದ್ಯ ತಯಾರಿಸಬಲ್ಲರು. ಪ್ರತೀ ಊರಲ್ಲೂ ಅಡುಗೆ ಭಟ್ಟರು ಇದ್ದೇ ಇರುತ್ತಾರೆ. ಅವರಿಗೆ ದಿನದ ಸಂಬಳ ಕೊಟ್ಟು ಕೇಟರಿಂಗ್ ನವರಿಗಿಂತಲೂ ಉತ್ತಮ ಪದಾರ್ಥಗಳನ್ನು ಮಾಡಿಸಬಹುದು. ನಗರದ ಕೇಟರಿಂಗ್‌ನ ಅಡುಗೆ ವಿಭಾಗವನ್ನು ಒಮ್ಮೆ ನೋಡಿದವರು ಆನಂತರ ಅದ ರತ್ತ ತಲೆ ಹಾಕಿಯೂ ಮಲಗುವುದಿಲ್ಲ. ಅಲ್ಲದೆ ಖರ್ಚಿನ ದೃಷ್ಟಿಯಿಂದ ನೋಡಿದರೂ ಅರ್ಧಕ್ಕರ್ಧ ಲಾಭವಂತೂ ಗ್ಯಾರಂಟಿ. ಸಣ್ಣ ಪುಟ್ಟ ಸಮಾ ರಂಭ ಮಾಡಬೇಕಿದ್ದರೂ ಲಕ್ಷಾಂತರ ರುಪಾಯಿಗಳನ್ನು ವ್ಯಯಿಸಬೇಕಾದ ಇಂದಿನ ದಿನಗಳಲ್ಲಿ ಊರವರೆಲ್ಲಾ ಸೇರಿಕೊಂಡು ತಯಾರಿಸುವ ಅಡುಗೆ ಯಲ್ಲಿ ರುಚಿ, ಶುಚಿ ಮಾತ್ರವಲ್ಲ ಮಾನವೀಯ ಸಂಬಂಧವೂ ಅಡಗಿದೆ. ಪ್ರತಿ ಯೊಬ್ಬರು ಅಡುಗೆಯ ಕೆಲಸದಲ್ಲಿ ಪಾಲ್ಗೊಳ್ಳುವುದರಿಂದ ಸೌಹಾರ್ದತಾ ಸಂಬಂ ಧವೂ ಬೆಳೆಯುತ್ತದೆ. ಕೆಟರಿಂಗ್‌ನವರ ಸಪ್ಪೆ ಅಡುಗೆ, ಪಕ್ಕಾ ವಾಣಿಜ್ಯ ಧೋರ ಣೆಯ ಬದಲು ಒಮ್ಮೆ ನಿಮ್ಮ ಊರಲ್ಲಿಯೋ, ಮನೆಯಲ್ಲೋ ಇರುವ ಅಡುಗೆ ಭಟ್ಟರಿಂದ ಅಡುಗೆ ಮಾಡಿಸಿ ನೋಡಿ. ಆನಂತರ ಕೆಟರಿಂಗ್‌ನ ಲೆಕ್ಕಕ್ಕೂ ನಿಮ್ಮ ಲೆಕ್ಕಕ್ಕೂ ತಾಳೆ ಹಾಕಿ ನೋಡಿ. ಇಂದು ಹಳ್ಳಿಗಳಲ್ಲೂ ಪ್ರತಿಯೊಂದು ಕಾರ‍್ಯಕ್ರ ಮಕ್ಕೆ ಕೆಟರಿಂಗ್‌ನವರನ್ನು ಕರೆಯುತ್ತಾರೆ.
ಮನುಷ್ಯ ಸಂಬಂಧವೂ ಇಲ್ಲಿಲ್ಲ. ಊಟದ ಸಮಯಕ್ಕೇ ಸರಿಯಾಗಿ ನೆಂಟರಿಸ್ಟರು ಹಾಜರು. ಸರಿಯಾದ ಮಾತುಕತೆಯಿಲ್ಲ. ಕರೆದಿದ್ದಾರೆ... ಹೋಗ ಬೇಕಲ್ಲ ಎನ್ನುವ ಮನೋಭಾವನೆ. ಅದರ ಬದಲು ಬೆಳ್ಳಂಬೆಳಗ್ಗೆಯೇ ಊರಿನ ಯುವಕರು ನೀರುಳ್ಳಿ ಕತ್ತರಿಸುವುದನ್ನು, ಈಳಿಗೆ ಮನೆಯಲ್ಲಿ ಕೆಲಸ ಮಾಡುತ್ತಾ ಹೆಂಗಸರು ಸುಖ-ದು:ಖವನ್ನು ಮಾತನಾಡುತ್ತಾ ಇಡೀ ಸಮಾರಂಭ ತಮ್ಮದೇ ಕಾರ‍್ಯಕ್ರಮ ಎನ್ನುತ್ತಾ ಪಾಲ್ಗೊಳ್ಳುವ ಸುಖ ಕೆಟರಿಂಗ್‌ನವರಿಂದ ವಂಚಿತವಾ ಗಿದೆ ಎಂದು ಅನ್ನಿಸುವುದಿಲ್ಲವೇ?
ಪ್ರಮೋದ್ ಶೆಟ್ಟಿ, ಮೂಡುನಡುಗೋಡು

ಗೋಕರ್ಣನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರ ಬದಲಾಯಿಸಿ
ಗೋಕರ್ಣನಾಥೇಶ್ವರ ಕಾಲೇಜಿನ ೨೦೧೨೧೩ರ ಪ್ರಸಕ್ತ ಸಾಲಿನಲ್ಲಿ ಜಾರಿಗೆ ಬರುವ ಸಮವಸ್ತ್ರ ಸರಿಯಾಗಿಲ್ಲ. ಹೀಗೆ ಆರಿಸಿಕೊಂಡಿರುವ ಸಮವಸ್ತ್ರವು ಹುಡುಗರಿಗೆ ಕೆಂಪು ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟನ್ನು ಹಾಗೂ ಹುಡುಗಿಯರಿಗೆ ಕೆಂಪುಬಣ್ಣದ ಟಾಪ್‌ನ್ನು ಮತ್ತು ಬೂದು ಬಣ್ಣದ ಪ್ಯಾಂಟನ್ನು ಧರಿಸುವಂತೆ ಘೋಷಿಸ ಲಾಗಿದೆ. ಸಮವಸ್ತ್ರ ಬಣ್ಣ ಬದಲಾವಣೆ ಯಾಗಬೇಕು. ಕಾಲೇಜ್‌ನಲ್ಲಿರುವ ಯಾವುದೇ ವಿದ್ಯಾರ್ಥಿ ಈ ಸಮ ವಸ್ತ್ರವನ್ನು ಧರಿಸಲು ಇಷ್ಟಪಡುತ್ತಿಲ್ಲ.
ಎಲ್‌ಕೆಜಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳು ಧರಿ ಸುವ ಸಮವಸ್ತ್ರ ನೀಡಿ ನಮ್ಮ ಕಾಲೇಜಿನ ಹಾಗೂ ನಮ್ಮ ಮರ್ಯಾದೆಯನ್ನು ತೆಗೆದು ಹಾಕಲು ನೀವು ಪ್ರಯತ್ನಿಸು ತ್ತಿದ್ದೀರಿ. ಇದರಿಂದ ತುಂಬಾ ಬೇಸರವಾಗಿದೆ. ಕಾಲೇಜು ಗಳಲ್ಲಿಯೂ ಮುಜುಗರವಾಗಿದೆ. ಇದರ ಬಗ್ಗೆ ಚರ್ಚಿ ಸಲು ಹೋದರೆ ಟೀಸಿ ಕೊಡುತ್ತೇನೆ ಎಂದು ಹೇಳಿ ಬಾಯಿ ಮುಚ್ಚಿಸಿ ಬಿಡುತ್ತಾರೆ.
ಸಮವಸ್ತ್ರ ಜಾರಿಗೆಯಾದದ್ದು ಸಂತೋಷದ ವಿಷ ಯವೇ. ಆದರೆ ಅವರ ಬಣ್ಣ ಯಾವುದೇ ರೀತಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹೋಲಿಕೆಯಾಗುವುದಿಲ್ಲ. ದಯ ವಿಟ್ಟು ಇದನ್ನು ಸರಿಪಡಿಸಿ ವಿದ್ಯಾರ್ಥಿಗಳ ಇಚ್ಛೆಗೆ ಅನು ಸಾರವಾಗಿ ಹಾಗೂ ಸಮವಸ್ತ್ರದ ಬದಲಾವಣೆಯನ್ನು ಕಾಲೇಜು ವಿದ್ಯಾರ್ಥಿ ಸಂಘಟನೆಯ ಈ ಸದಸ್ಯರ ಸಮ್ಮುಖ ದಲ್ಲಿ ಸಭೆ ಕರೆದು ಚರ್ಚಿಸಬೇಕಾಗಿ ವಿನಂತಿಸುತ್ತೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇದಕ್ಕೆ ಸಂಬಂಧಪಟ್ಟವರು ಇದರ ಬಗ್ಗೆ ಗಮನಿಸಿ ನಿಯಾಮನುಸಾರ ಸರಿಯಾದ ರೀತಿಯಲ್ಲಿ ಸಮವಸ್ತ್ರ ಜಾರಿಗೆಗೊಳಿಸಲು ಕೇಳಿಕೊಳ್ಳುತ್ತಿವೆ.
ಮನನೊಂದ ವಿದ್ಯಾರ್ಥಿಗಳು, ಶ್ರೀಗೋಕರ್ಣನಾಥೇಶ್ವರ ಕಾಲೇಜು

ಗೋಲ್‌ಮಾಲ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ ನಿಂದನೆ ಪ್ರಕರಣ ಠಾಣೆಗಳಲ್ಲಿ ದಾಖಲಾಗುವುದು ಸರ್ವೇ ಸಾಮಾನ್ಯವಾಗಿದೆ. ದಲಿತರ ಕಷ್ಟದಲ್ಲಿ ಭಾಗಿ ಯಾಗದಿದ್ದರೂ ಪರವಾಗಿಲ್ಲ. ಆದರೆ ದಲಿತರ ಜಾತಿ ನಿಂದನೆ ಎಂಬ ಸುಳ್ಳು ಕೇಸು ದಾಖಲಿಸಲು ಕೆಲವು ರಾಜಕೀಯ ಪ್ರೇರಿತ ದಲಿತ ನಾಯ ಕರು ತುದಿಕಾಲಲ್ಲಿ ನಿಂತಿರಲು ಒಂದೇ ಕಾರಣ ಅದು ಏನು ಗೊತ್ತೇ?
ದಲಿತ ದೌರ್ಜನ್ಯ ಕೇಸು ಠಾಣೆಗಳಲ್ಲಿ ದಾಖ ಲಾದರೆ ಆ ಸಂಘಕ್ಕೆ ದಲಿತರಿಗೆ ಪರಿಹಾರ ಎಂಬ ನೆಪದಲ್ಲಿ ಸರಕಾರದಿಂದ ಹೋಗುವ ೫೦೦೦೦ ರೂ.ನ್ನು ಗೋಲ್‌ಮಾಲ್ ಮಾಡಲು ದಲಿತ ನಾಯಕರು ತುದಿಕಾಲಲ್ಲಿ ನಿಂತಿರುವುದು ಒಂದೇ ಕಾರಣ. ಸಣ್ಣ ಪುಟ್ಟ ಮಾತುಕತೆಯಾದರೂ ಅದನ್ನು ಜಾತಿ, ನಿಂದನೆ ಎಂಬ ಹಣೆಪಟ್ಟಿ ಕಟ್ಟಿ ಅಮಾಯ ಕರ ವಿರುದ್ಧ ಕೇಸು ದಾಖಲಿಸಲು ಎಸ್‌ಪಿ ಸಾಹೇಬ್ರ ರಿಗೆ ಫೋನ್ ಮೂಲಕ ಒತ್ತಡ ಹೇರುವ ಈ ಗೋಲ್ ಮಾಲ್ ದಲಿತ ನಾಯಕರಿಗೆ ಎನ್‌ಮಾ ಡ್ಬೇಕು ಸ್ವಾಮಿ?
ಇತ್ತೀಚಿನ ದಿನಗಳಲ್ಲಿ ವಿಐಪಿಗಳಂತೆ ವರ್ತಿ ಸುವ ಈ ದಲಿತ ಕಪಟ ನಾಯಕರಿಗೆ ಪೊಲೀಸ್ ಭದ್ರತೆ ನೀಡಬೇಕು ಎಂಬ ಬೇಡಿಕೆಗೆ ಪೊಲೀಸರು ಸ್ಪಂದಿ ಸಿದರೆ ಅವರ ಅವತಾರಕ್ಕೆ ಆ ದೇವರೇ ಗತಿ. ಹಣ ಮಾಡುವ ಒಂದೇ ಉದ್ದೇಶದಿಂದ ಹುಟ್ಟಿರುವ ದಲಿತ ಸಂಘದ ನಾಯಕರ ವಿರುದ್ಧ ಸೂಕ್ತ ಕ್ರಮವನ್ನು ಸರಕಾರ ಕೈಗೊಳ್ಳಬೇಕು.
ಅಮಾಯಕರ ವಿರುದ್ಧ ಎಫ್‌ಐಆರ್ ದಾಖ ಲಿಸುವ ಠಾಣಾಧಿಕಾರಿಗಳು ಏನು ಎಂಥ ಅಂತ ವಿಚಾರಿಸಬೇಕು. ಕೋರ್ಟಿನಲ್ಲಿ ಕಪಟ ದಲಿತ ನಾಯ ಕರ ಸಾಹಸ ದೋಷದಿಂದ ಹಾಕಿರುವ ಕೇಸು ಸುಳ್ಳು ಎಂಬ ಸಾಬೀತು ಆದರೆ ಅಮಾಯಕರಿಗೆ ಕೋರ್ಟ್ ಕಚೇರಿ ವೆಚ್ಚವನ್ನು ಕೇಸು ದಾಖಲಿಸಿದ ದಲಿತರಿಂದ ಅಮಾಯಕರಿಗೆ ಸಿಗಬೇಕು.
ಇಂತಹ ಕಾನೂನು ಅನ್ನು ಕರ್ನಾಟಕ ಸರ ಕಾರ ಕೂಡಲೇ ಜಾರಿಗೊಳಿಸಬೇಕು. ಸುಳ್ಳು ಕೇಸು ದಾಖಲಿಸುವ ದಲಿತರಿಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು. ದಲಿತರಿಗಾಗಿ ಕೆಲಸ ಮಾಡುವ ನಿಜವಾದ ಕಾಳಜಿಯ ದಲಿತ ನಾಯಕರು ಈ ಬಗ್ಗೆ ಗಮನ ಹರಿಸು ವಂತಾಗಬೇಕು.
ಸುರೇಶ್, ಬೆಳ್ತಂಗಡಿ

ಎಸ್‌ಇಝಡ್ ವಿರೋಧಿಸೋಣ
ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳುತ್ತಿ ರುವ ಎಂಎಸ್‌ಇಝಡ್ ಯೋಜ ನೆಯ ತ್ಯಾಜ್ಯ ನೀರನ್ನು ಪೈಪ್‌ಲೈನ್ ಮೂಲಕ ಸಮುದ್ರಕ್ಕೆ ಸೇರಿಸುವ ಯತ್ನ ಖಂಡನೀಯ ವಾದುದು. ಇದರಿಂದ ಸಮುದ್ರ ಕಲುಷಿತವಾಗು ವುದಲ್ಲದೆ ಮೀನಿನ ಸಂತತಿಯೇ ನಾಶವಾಗುವ ಸಾಧ್ಯತೆಯಿದೆ. ಮೀನು ಗಾರಿಕೆಯನ್ನೇ ವೃತ್ತಿಯನ್ನಾಗಿ ಸ್ವೀಕ ರಿಸಿ ಅದರ ಆಧಾರದಿಂದಲೇ ಸಂಸಾ ರವನ್ನು ನಿಭಾಯಿಸುತ್ತಿರುವ ಮೀನು ಗಾರರು ಇದರಿಂದ ನಿರುದ್ಯೋಗಿ ಗಳಾಗಲಿದ್ದಾರೆ. ಕಂಪೆನಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ನಿರ್ಣಯ ಕೈಗೊಂಡು ಸಮುದ್ರಕ್ಕೆ ತ್ಯಾಜ್ಯದ ಪೈಪ್‌ಲೈನ್ ಅಳವಡಿಸಲು ಮುಂದಾಗಿರುವುದು ಜಿಲ್ಲೆಯ ಜನರು ಒಂದಾಗಿ ತಡೆಯ ಬೇಕಿದೆ. ಕೇವಲ ಮೊಗವೀರ ಜಾತಿ ಬಾಂಧವರು ಮಾತ್ರ ಇಲ್ಲಿ ಮೀನುಗಾರಿಕೆ ನಡೆಸು ತ್ತಿಲ್ಲ. ಬದಲಿಗೆ ಇತರ ಜಾತಿ, ಸಮು ದಾಯಕ್ಕೆ ಸೇರಿರುವ ಜನರೂ ಮೀನು ಗಾರಿಕೆಯನ್ನು ಜೀವನ ನಿರ್ವಹಣೆಗೆ ನೆಚ್ಚಿಕೊಂಡಿದ್ದಾರೆ. ಸರಕಾರ ರೈತನ ಅನ್ನದ ಬಟ್ಟಲಿಗೆ ವಿಷ ಹಾಕಿದ್ದನ್ನೇ ಇಲ್ಲಿಯೂ ಮುಂದುವರಿಸುವ ಯತ್ನ ಬೇಡ. ಆದ್ದರಿಂದ ಪರಿಸರ ಪ್ರೇಮಿ ಗಳು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಸಮುದ್ರ ತೀರಕ್ಕೆ ಕಂಪೆನಿಗಳು ಬೇಲಿ ಹಾಕಿ ಅದನ್ನು ತಮ್ಮ ಖಾಸಗಿ ಸೊತ್ತು ಎಂದುಕೊಳ್ಳ ಬಹುದು. ಇಂಥ ಪ್ರಯತ್ನವನ್ನು ಪ್ರಾರಂಭದಲ್ಲೇ ತಡೆಯುವುದು ಒಳಿತ ಲ್ಲವೇ?
ನಾಗರಿಕರು, ಮುಕ್ಕ

ಅಡ್ಮೀಷನ್‌ಗೆ ಒಳ್ಳೆಯ ಅಂಕಗಳಿದ್ದರಷ್ಟೇ ಸಾಲದು, ಒಳ್ಳೆಯ ಬ್ಯಾಂಕ್ ಬ್ಯಾಲೆನ್ಸ್ ಬೇಕು

Posted by JAYAKIRANA Kirana on | 0 comments | Leave a comment...


ಹುಟ್ಟಿದ ಮಗುವಿನ ಎಲ್‌ಕೆಜಿ, ಯುಕೆಜಿಗೆ ಸಾವಿರಾರು ರೂ.ಗಳಿಂದ ಲಕ್ಷಕ್ಕಿಂತಲೂ ಹೆಚ್ಚು ಹಣ ನೀಡಿ ಸೀಟುಗಳನ್ನು ಬುಕ್ ಮಾಡಲಾಗುತ್ತಿದೆ. ಇಂದು ಒಳ್ಳೆಯ ಅಂಕಗಳಿದ್ದರಷ್ಟೇ ಸಾಲದು ಒಳ್ಳೆಯ ಬ್ಯಾಂಕ್ ಬ್ಯಾಲೆನ್ಸ್ ಕೂಡ ಇರಬೇಕು. ಇಲ್ಲವಾದರೆ ಸೀಟುಗಳು ಸಿಗುವುದು ಸಾಧ್ಯವಿಲ್ಲವಾಗಿದೆ.

ಧನು, ಮೂಡಬಿದ್ರೆ
ದೇಶದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೆಚ್ಚಾಗುತ್ತಿರುವ ಬಗ್ಗೆ ಬೇಸರವಿಲ್ಲ. ಆದರೆ ವಿಶ್ವವಿದ್ಯಾಲಯ ಗಳ ಗುಣಮಟ್ಟವೇನಾಗುತ್ತಿದೆ ಎಂಬುದರ ಬಗ್ಗೆ ಗಂಭೀರ ವಾದ ಚಿಂತನೆಯಾಗಬೇಕಿದೆ. ಇಂದು ವಿಶ್ವವಿದ್ಯಾಲಯಗಳ ಚಟುವಟಿಕೆಗಳನ್ನು ನೋಡಿದರೆ ವಿಧಾನಸೌಧವೂ ನಾಚಬೇ ಕಾಗುತ್ತದೆ. ರಾಜ್ಯದ ಅನೇಕ ವಿಶ್ವವಿದ್ಯಾಲಯಗಳ ಕುಲಪತಿ ಗಳು ಮಾಡಿದ ಹಗರಣಗಳ ಬಗ್ಗೆ ನ್ಯಾಯಾಂಗ ತನಿಖೆ, ಸಿ.ಬಿ.ಐ ತನಿಖೆ ನಡೆದು ಅವರು ತಪ್ಪು ಮಾಡಿದ್ದಾರೆಂದು ಸಾಬೀತಾದರೂ ಕೂಡಾ ಅವರಿಗೆ ಯಾವ ರೀತಿಯಲ್ಲೂ ಖೇದವೆನಿಸುತ್ತಿಲ್ಲ. ಅಂತಹ ಕುಲಪತಿಗಳಿಗೆ ಧಿಕ್ಕಾರವಿರಲಿ. ರಾಜ್ಯದ ದುರ್ದೈವವೆಂದರೆ ಇಂತಹ ಭ್ರಷ್ಟ ಕುಲಪತಿಗಳ ಸಂಖ್ಯೆ ಹೆಚ್ಚುತ್ತಿದೆ. ವಿಶ್ವವಿದ್ಯಾಲಯಗಳು ಇಂದು ಜಾತೀಯತೆ, ಪರೀಕ್ಷಾ ಅವ್ಯವಹಾರ, ಭ್ರಷ್ಟಾಚಾರ, ಸಂಶೋಧನಾ ವಿದ್ಯಾರ್ಥಿಗಳ ಶೋಷಣೆ, ನೇಮ ಕಾತಿಯಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿರುವುದು ಹೀಗೆ ಅನೇಕ ಸಮಸ್ಯೆಗಳಿಂದ ತೋಳಲಾಡುತ್ತಿವೆ.
ಸಾಮಾನ್ಯವಾಗಿ ಪರೀಕ್ಷೆ ಬರೆದಾಗಲೂ ಕೆಲವರಿಗೆ ಅಂಕ ಪಟ್ಟಿ ಬಾರದಿರುವುದನ್ನು ಕೇಳಿದ್ದೇವೆ. ಆದರೆ ಕರ್ನಾಟಕ ರಾಜ್ಯ ಮುಕ್ಯ ವಿಶ್ವವಿದ್ಯಾಲಯದಲ್ಲಿ ೯೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ.... ಅಂಕಪಟ್ಟಿಗಳನ್ನು ಪಡೆದಿರುವ ಐತಿಹಾಸಿಕ ಅಂಕಪಟ್ಟಿ ಹಗರಣ ರಾಜ್ಯದಲ್ಲಿ ನಡೆದಿದೆ. ಸರಕಾರ ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು.
ಮಾನ್ಯರೇ ವಿಶ್ವವಿದ್ಯಾಲಯಗಳಲ್ಲಿ ನಡೆದಿರುವ ಈ ಎಲ್ಲಾ ಹಗರಣಗಳಲ್ಲಿ ಒಬ್ಬ ಸಾಮಾನ್ಯ ಕ್ಲಾರ್ಕ್ ತಪ್ಪೆಸಗಿದ್ದರೆ ಅವನಿಗೆ ಕೂಡಲೇ ಶಿಕ್ಷೆಯಾಗುತ್ತಿತ್ತು. ಆದರೆ ಹಗರಣಗಳಲ್ಲಿ ಕುಲ ಪತಿಗಳು ಇತರ ಅಧಿಕಾರಿಗಳೇ ಭಾಗಿಯಾಗಿದ್ದರೂ ಇವರ ಕುರಿತು ಸರಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ ಏಕೆ ಎಂಬುದೇ ಅತ್ಯಂತ ಗಂಭೀರವಾದ ಹಾಗೂ ನೋವಿನ ವಿಚಾರವಾಗಿದೆ.
ಇಂದು ಬಡ ತಂದೆತಾಯಿಗಳ ಮಕ್ಕಳು ವಿeನಿ, ಡಾಕ್ಟರ್ ಆಗಲು ಸಾಧ್ಯವೇ? ಹಾಗಾದರೆ ಶಾಲಾಕಾಲೇಜಿನ ಶುಲ್ಕ, ಡೋನೇಷನ್ ಎಷ್ಟಿರಬೇಕು? ಅದಕ್ಕೆ ಮಿತಿಯೇ ಇಲ್ಲವೇ? ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಿಸುವುದಾದರೆ ತಂದೆ-ತಾಯಿಗಳಿಗೆ ಮಹಾನ್ ಚಿಂತೆಯಾಗಿ ಪರಿಣಮಿಸಿದೆ. ಇಂದಿನ ಅರ್ಥದಲ್ಲಿ ಖಾಸಗಿ ಶಾಲಾಕಾಲೇಜುಗಳೆಂದರೆ... ಡೋನೇಷನ್ ಅರ್ಥಾತ್ ಸೀಟಿನ ವ್ಯಾಪಾರ ಎಂದು ಅರ್ಥ. ಹುಟ್ಟಿದ ಮಗುವಿನ ಎಲ್‌ಕೆಜಿ, ಯುಕೆಜಿಗೆ ಸಾವಿರಾರು ರೂ.ಗಳಿಂದ ಲಕ್ಷಕ್ಕಿಂತಲೂ ಹೆಚ್ಚು ಹಣ ನೀಡಿ ಸೀಟುಗಳನ್ನು ಬುಕ್ ಮಾಡಲಾಗುತ್ತಿದೆ. ಇಂದು ಒಳ್ಳೆಯ ಅಂಕಗಳಿದ್ದರಷ್ಟೇ ಸಾಲದು ಒಳ್ಳೆಯ ಬ್ಯಾಂಕ್ ಬ್ಯಾಲೆನ್ಸ್ ಕೂಡ ಇರಬೇಕು. ಇಲ್ಲವಾದರೆ ಸೀಟುಗಳು ಸಿಗುವುದು ಸಾಧ್ಯವಿಲ್ಲವಾಗಿದೆ.
ದುಡ್ಡಿಲ್ಲದ ಬಡ ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಲ್ಲಿ ಹಾಗೂ ಉದ್ಯೋಗ ಸಿಗದ ಸಾಮಾನ್ಯ ಕೋರ್ಸುಗಳಿಗೆ ಪ್ರವೇಶ ಪಡೆಯಬೇಕಾದ ಅನಿವಾರ್ಯತೆ ಇಂದಿನದು. ಎಂ.ಬಿ.ಎ., ಎಂ.ಬಿ. ಬಿ.ಎಸ್, ಎಂ.ಸಿ.ಎ. ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯ ಬೇಕಾದರೆ ಶ್ರೀಮಂತ ಆಗಿರಬೇಕು. ಬಹಳಷ್ಟು ಶಾಲಾಕಾಲೇಜುಗಳು ಹಣ ಗಳಿಸುವ ಉದ್ದೇಶದಿಂದಲೇ ಪ್ರಾರಂಭಗೊಂಡಿವೆ. ಇಂತಹ ವ್ಯಾಪಾರಿ ಸಂಸ್ಥೆಗಳ ವಿರುದ್ಧ ಕ್ರಮ ಯಾವಾಗ? ಕ್ರಮ ತೆಗೆದು ಕೊಳ್ಳುವವರು ಯಾರು?
ಡೊನೇಶನ್‌ನ ಈ ಪಿಡುಗನ್ನು ನಿಯಂತ್ರಿಸಲಾಗಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಶಿಕ್ಷಣ ಹೆಚ್ಚೆಚ್ಚು ಬಿಕರಿಯಾಗುವ ಸರಕಾಗಿದೆ. ಬಹಳಷ್ಟು ಶಾಲಾ-ಕಾಲೇಜುಗಳು ಶಿಕ್ಷಣದಂಗಡಿಗಳಾಗಿ ಮಾರ್ಪಟ್ಟಿವೆ. ವಿದ್ಯಾರ್ಥಿಗಳು ಬಡವರ ಹೊಟ್ಟೆಯಲ್ಲಿ ಹುಟ್ಟಿದ್ದೇ... ತಪ್ಪಾ? ದೇಶದಲ್ಲಿ ಆಟೋಗಳಿಗೂ ಮೀಟರ್ ಅಳವಡಿಸಲಾಗಿದೆ. ಮೀಟರ್ ತೋರಿ ಸಿದಷ್ಟೇ ಹಣನನ್ನು ಡ್ರೈವರ್‌ಗಳು ಪಡೆಯುತ್ತಾರೆ. ಆದರೆ ದುರ್ದೈವದ ಸಂಗತಿಯೆಂದರೆ ನಮ್ಮ ರಾಜ್ಯದಲ್ಲಿ ಒಂದೊಂದು ಶಾಲೆ, ಕಾಲೇಜಿನ ಸೀಟಿಗೆ ಒಂದೊಂದು ರೇಟು ಇಂತಹ ಕಾಲೇಜುಗಳ ವಿರುದ್ಧ ಆಟೋಗಳಿಗೆ ಅಳವಡಿಸಿದಂತೆ ಮೀಟರ್ ಅಳವಡಿಸುವುದು ಏಕೆ ಸಾಧ್ಯವಿಲ್ಲ? ಮೇಲಿನ ಎಲ್ಲಾ ಇಲಾಖೆಗಳಿಗೆ ಡೊನೇಷನ್ ನಿಯಂತ್ರಣ ಸಾಧ್ಯವಿಲ್ಲವೆಂದಾದರೆ ಈ ವ್ಯಾಪಾರಿ ಬೆಕ್ಕುಗಳಿಗೆ ಗಂಟೆ ಕಟ್ಟುವ ವರಾರು?
ಬಡ ಪ್ರತಿಭಾವಂತ ವಿದ್ಯಾರ್ಥಿಗಳೂ ಕೂಡ ಉತ್ತಮ ಶಾಲೆಯಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುವಂತೆ ರಾಜ್ಯದಲ್ಲಿ ಸಿಇಟಿ ಕೌನ್ಸಲಿಂಗ್ ಮೂಲಕ ಸೀಟು ಹಂಚಿಕೆ ಮಾದರಿಯಲ್ಲಿ ಎಲ್‌ಕೆಜಿ, ಯುಕೆಜಿ, ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಕೇಂದ್ರೀಯ ಪ್ರವೇಶ ನೀತಿಯನ್ನು ಜಾರಿಗೊಳಿಸಬೇಕೆಂದು ಈ ಕುರಿತು ಕಾನೂನು ರೂಪಿಸಬೇಕೆಂದು ಆ ಮೂಲಕ ವಿದ್ಯಾರ್ಥಿಪೋಷಕರ ಶೋಷಣೆಯನ್ನು ತಪ್ಪಿಸಬೇಕು.
 ಇನ್ನು ವೈದ್ಯಕೀಯ ಪಿಜಿ ಸೀಟುಗಳ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ಪ್ರಶ್ನೆಪತ್ರಿಕೆ ಮಾರಾಟ ಹಾಗೂ ಕೌನ್ಸಲಿಂಗ್‌ನಲ್ಲಿ ೫೦ ಲಕ್ಷಗಳಿಂದ ಕೋಟಿ ರೂಪಾಯಿಗಳವರೆಗೆ ಹಣ ಪಡೆದು ಬೇಡಿಕೆಯಿರುವ ಕ್ಲಿನಿಕಲ್ ವಿಷಯಗಳ ಸೀಟುಗಳನ್ನು ಬ್ಲಾಕ್ ಮಾಡುವ ಅವ್ಯವಹಾರ, ಅನೇಕ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಸೀಟು ದೊರಕಿದ್ದರೂ ಆ ಸೀಟನ್ನು ಹೆಚ್ಚಿನ ಹಣ ಪಡೆದು ಪ್ರವೇಶ ನೀಡುವ ಪ್ರಕರಣಗಳು, ದಂತ ಹಾಗೂ ವೈದ್ಯಕೀಯ ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಸರಕಾರದ ಪಾಲಿನ ಶೇಕಡಾವಾರು ಸೀಟುಗಳನ್ನು ನಾವು ನೀಡುವುದಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಅವ್ಯವಹಾರ ಭ್ರಷ್ಟಾಚಾರಗಳ ಬಗ್ಗೆ ಸಿಒಡಿ ತನಿಖೆ ನಡೆಸಿ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಸಿಇಟಿ ಸಮಸ್ಯೆಗೆ ಕಾನೂನು ರೂಪಿಸಬೇಕು. ಆತ್ಮೀಯರೇ.... ವಿಶ್ವವಿ ದ್ಯಾಲಯಗಳ ಅಕ್ರಮಗಳು, ಹಗರಣಗಳೆಲ್ಲವನ್ನೂ ಡೊನೇಷನ್ನಿನ ರಾಕ್ಷಸೀಕೃತ್ಯಗಳನ್ನು ಇಲ್ಲಿ ಬರೆದಿಲ್ಲ. ನೀರಿನಲ್ಲಿ ತೇಲಿದ ಮಂಜುಗಡ್ಡೆಯೋಪಾದಿಯಲ್ಲಿ ಮಾತ್ರ ಇಲ್ಲಿ ತೋರಿ ಸಿದ್ದೇವೆ.
ಭ್ರಷ್ಟಕುಲಪತಿಗಳ ಬಗ್ಗೆ ಹಾಗೂ ಡೊನೇಷನ್ ಕುರಿತು ಅನೇಕ ವರ್ಷಗಳಿಂದ ಆಂದೋಲನ ನಡೆಸುತ್ತಾ ಬಂದಿದೆ. ಆದರೆ ಯಾವ ಸರಕಾರವೂ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಬಡ ವಿದ್ಯಾರ್ಥಿ ಪೋಷಕರ ಪ್ರಾಣ ಹಿಂಡುತ್ತಿರುವ ಡೊನೇಷನ್ ವಿರುದ್ಧ ಕೇಂದ್ರಿಯ ಪ್ರವೇಶ ನೀತಿ ಜಾರಿಗೊಳಿಸಲು ಹಾಗೂ ವಿಶ್ವವಿದ್ಯಾಲಯಗಳ ಗೌರವ ರಕ್ಷಿಸಲು ಭ್ರಷ್ಟ ಕುಲಪತಿಗಳ ಬಗ್ಗೆ ತನಿಖಾ ವರದಿ ಬಹಿರಂಗಪಡಿಸಿ ಕ್ರಮ ತೆಗೆದುಕೊಳ್ಳುವವರೆಗೂ ನಿರ್ಣಾಯಕ ಆಂದೋಲನ ಮುಂದುವರೆಯಲಿದೆ.

ಅವರು ಬುದ್ದಿವಂತರು, ಹಾಗಾದರೆ ನಾವು........!?

Posted by JAYAKIRANA Kirana on | 0 comments | Leave a comment...

ಸಾಮಾನ್ಯ ಜನರು ಅವಕಾಶಗಳನ್ನು ಕಾಯುತ್ತಾರೆ. ಆದರೆ ಬುದ್ದಿವಂತರು ಅವಕಾಶಗಳನ್ನು ಸೃಷ್ಟಿಸುತ್ತಾರೆ ಎಂಬುವುದೊಂದು ಪ್ರಸಿದ್ದ ಲೋಕೋಕ್ತಿ. ಅದೆಷ್ಟೋ ಮಹಾನ್ ಸಾಧಕರು ಅವಕಾಶ ಗಳೇ ಇಲ್ಲ ಎಂಬ ಸ್ಥಿತಿಯಲ್ಲಿರುವಾಗಲೇ ತಾವೇ ಅವಕಾಶಗಳನ್ನು ಸೃಷ್ಟಿಸಿ ಆ ಅವಕಾಶಗಳನ್ನೇ ಏಣಿಯಾಗಿ ಬಳಸಿ ಯಶಸ್ಸಿನ ತುತ್ತ ತುದಿಗೇರುವುದನ್ನು ನಾವು ಕಂಡಿದ್ದೇವೆ. ಅಷ್ಟರವರೆಗೆ ಜಗತ್ತು ಅನು ಕರಿಸುತ್ತಾ ಬಂದಿದ್ದ ಸಿದ್ದ ಸಮೀಕರಣಗಳಿಗೆ ವ್ಯತಿರಿಕ್ತವಾದ ತಮ್ಮದೇ ಸ್ವಂತ ಸಮೀಕರಣಗಳನ್ನು ಸ್ಥಾಪಿಸಿ ಅವುಗಳನ್ನು ಜಗತ್ತು ಅನುಕರಣೆ ಮಾಡಲು ನಿರ್ಬಂಧಿತರಾಗುವಷ್ಟು ಜಗತ್ತನ್ನು ಅವರು ಬದಲಾಯಿ ಸಿದ್ದನ್ನೂ ನಾವು ಕಂಡಿದ್ದೇವೆ.
ಅದೆಲ್ಲಾ ಇರಲಿ, ಇದನ್ನೆಲ್ಲಾ ಬರೆಯುತ್ತಿರುವ ನಾನು ಓದುತ್ತಿ ರುವ ನೀವೂ ಸೇರಿದಂತೆ ಜಗತ್ತಿನ ಬಹುತೇಕ ಜನ ಅಂಥಾ ಅವಕಾ ಶಗಳನ್ನು ಸ್ವಯಂ ಸೃಷ್ಟಿಸಿಕೊಳ್ಳಲು ಅರಿಯದವರೇ ಆಗಿರುತ್ತಾರೆ. ಅಂದರೆ ನಾವೆಲ್ಲರೂ ಶೇಕಡಾ ತೊಂಭತ್ತೊಂಭತ್ತರಷ್ಟು ಸಾಮಾ ನ್ಯರೇ ಆಗಿದ್ದೇವೆ ಎಂಬುವುದು ಇದರರ್ಥ. ನಮಗೆ ಗೊತ್ತಿರುವುದು ಒಂದೇ, ಅಂಥಾ ವಿಶೇಷ ಜನರ ಬುದ್ದಿವಂತಿಕೆಯ ಬಗ್ಗೆ, ಸಾಧನೆ ಗಳ ಬಗ್ಗೆ ಬರೆಯುವುದೂ, ಓದುವುದೂ, ಟೀಕೆ ಟಿಪ್ಪಣಿ ಮಾಡು ವುದೂ. ವಗೈರೆ.. ವಗೈರೆ.. ಇರಲಿ. ನಮ್ಮ ‘ಕೆಪಾಕಿಟಿ’ ನಮಗೆ. ಅವರ ಕೆಪಾಸಿಟಿ ಅವರಿಗೆ ಏನಂತೀರಿ?
ಈಗ ನಮಗೆ ಅಂದರಂತೆಯೇ ಓದಲೂ ಬರೆಯಲೂ ಟೀಕೆ ಟಿಪ್ಪಣಿ ಮಾಡಲು ವಿಷಯವೊಂದು ಸಿಕ್ಕಿದೆ! ಬುದ್ದಿವಂತಿಕೆ ಮತ್ತು ಅವಕಾಶಗಳು ಇದರ ಮೂಲ ಐಪಿಎಲ್ ಎಂದು ಹೆಸರು ಮಾತ್ರ. ಲಲಿತ್ ಮೋದಿ ಎಂಬವನೊಬ್ಬನಿಂದ ರಚಿಸಲ್ಪಟ್ಟ ಹೊಸ ಐಡಿಯಾ ವದು. ಸಾಮಾನ್ಯ ಜನರಿಗೆ ಅವಕಾಶಗಳೇ ಗೋಚರವಾಗದಿದ್ದ ಕಾಲ ಘಟ್ಟದಲ್ಲಿ ಇನ್ನೊಂದು ಕಡೆಯ ಸಣ್ಣ ಮಟ್ಟದ ಕ್ಲೂ ಪಡೆದು ಸ್ಥಾಪನೆ ಗೊಂಡ ಕ್ರಿಕೆಟ್ ಸಮೀಕರಣಗಳಿಂದ ಮೂರ್ತರೂಪ. ಅವಕಾಶ ಗಳೇ ಇಲ್ಲದಂತಹಾ ಸ್ಥಳದಲ್ಲಿ ಅವಕಾಶಗಳನ್ನು ಹೇಗೆ ಸೃಷ್ಟಿಸಿಕೊಳ್ಳ ಬಹುದು ಎಂಬುವುದಕ್ಕೆ ಐಪಿಎಲ್ ಸಾಕ್ಷಿ ಎಂಬುವುದಾಗಿ ಹಿಂದೊಮ್ಮೆ ‘ಜನಸಂಖ್ಯೆ ಜಾಸ್ತಿಯಾಗುತ್ತಿದೆ. ಅವಕಾಶಗಳು ಕಡಿಮೆಯಾಗುತ್ತಿದೆ’ ಎಂದು ಒಂದು ಮಿತಿಗಿಂತ ಹೆಚ್ಚು ಚಿಂತೆಗೀಡಾದವರಿಗೆ ಸಮಾಧಾನಿ ಸುವ ಸಲುವಾಗಿ ನಾನು ಹೇಳಿದ್ದೆ. ಅಂದರೆ ಬುದ್ದಿವಂತರು ಅವಕಾಶ ಗಳನ್ನು ಸೃಷ್ಟಿಸುತ್ತಾರೆ, ಕೈಲಾಗದವರು ಮೈ ಪರಚಿಕೊಳ್ಳುತ್ತಾರೆ ಅಷ್ಟೆ ಎಂದಾಗಿತ್ತು ಅದರ ತಾತ್ಪರ್ಯ.!
ಆದರೆ ಸದ್ರಿ ಐಪಿಎಲ್‌ಗಿರುವ ಹಲವು ಮುಖಗಳ ಪೈಕಿ ಅತೀ ಮುಖ್ಯ ಮುಖವೊಂದರ ಬಗ್ಗೆ ಅಂದೇ ನಾನು ಬರೆಯಬೇಕೆಂದಿದ್ದೆ. ಆಗಿರಲಿಲ್ಲ. ಸ್ಥಳಾವಕಾಶದ ಕೊರತೆ ಮತ್ತು ವಾರಗಳು ಕಳೆದಂತೆ ವಿಷಯ ಅಪ್ರಸ್ತುತಗೊಳ್ಳುವ ಆತಂಕವಿರುವುದರಿಂದ ಐಪಿಎಲ್‌ನ ಆ ಮುಖದ ಬಗ್ಗೆ ಬರೆಯಲಾಗಲಿಲ್ಲ. ಇಂದು ಆ ಬಗ್ಗೆ ಸ್ವಲ್ಪ ಚರ್ಚೆ ಮಾಡಬಹುದೆಂದನಿಸುತ್ತೆ.
ನೀವು ಗಮನಿಸಿ. ಇಂದು ಪತ್ರಿಕೆಗಳಲ್ಲಿ ಟಿವಿ ವಾಹಿನಿಗಳಲ್ಲಿ ಐಪಿಎಲ್ ಬಗ್ಗೆ ಬರುವ ಸುದ್ದಿಗಳನ್ನು ಗಮನಿಸಿ. ಯಾವುದೋ ಒಂದು ಕಾರ್ಪೋರೇಟ್ ಸಂಸ್ಥೆಯ ಹೆಸರಾಗಿರಬಹುದು ಎಂಬಂತೆ ಐಪಿಎಲ್ ಹೆಸರು ಕೇಳಿ ಬರುತ್ತಿದೆ. ಕೇವಲ ಐಪಿಎಲ್... ಐಪಿಎಲ್... ಐಪಿಎಲ್ ಅಷ್ಟೆ ! ಅದೊಂದು ಕ್ರಿಕೆಟ್ ಆಟಕ್ಕೆ ಸಂಬಂಧಿಸಿದ ಹೆಸ ರೆಂದು ಅನಿಸುವುದೇ ಇಲ್ಲ. ನಿಜ ಹೇಳಬೇಕೆಂದರೆ ‘ಜೈಸಾ ಕರ್ನಿ ವೈಸಾ ಬರ್ನಿ’ ಎಂಬಂತ ಯಾವ ಉದ್ದೇಶವನ್ನಿಟ್ಟುಕೊಂಡು ಐಪಿಎಲ್ ಸ್ಥಾಪನೆಯಾಯಿತೋ ಆ ಉದ್ದೇಶ ಈಡೇರುತ್ತಲಿದೆ ಎನ್ನಬಹುದಷ್ಟೆ. ಐಪಿ ಎಲ್ ಸ್ಥಾಪನೆಯ ಉದ್ದೇಶವೇ ದುಡ್ಡನ್ನು ಬಾಚಿಕೊಳ್ಳುವುದು ಎನ್ನುವುದು ಇಂದು ಹೆಚ್ಚೆಚ್ಚು ದೃಢವಾಗುತ್ತಲಿದೆ. ಕೇವಲ ‘ದುಡ್ಡಿದ್ದವರು’ ಎಂಬ ಒಂದೇ ಒಂದು ಕಾರಣಕ್ಕಾಗಿ ಕ್ರಿಕೆಟ್ ಎಂಬ ಆಟದ ಇತಿಹಾಸ - ವರ್ತಮಾನ - ಭವಿಷ್ಯದ ಬಗ್ಗೆ ಚಿಂತೆ - ಚಿಂತನೆ ಏನೂ ಇಲ್ಲದವರನ್ನು ಆಹ್ವಾನಿಸಿ ಕ್ರಿಕೆ ಟ್‌ನ ಮೂಗುದಾರವನ್ನು ಅವರ ಕೈಗೆ ಹಸ್ತಾಂತರಿಸಿದರಲ್ಲಾ ಈ ಬಿಸಿಸಿಐ ನವರು, ‘ನಿಜವಾದ ಕ್ರಿಕೆಟ್ ಆಟ’ ಅಂದೇ ತನ್ನ ಕೊನೇ ದಿನಗಳನ್ನು ಎಣಿಸ ತೊಡಗಿತ್ತು. ಇಂದು ಐಪಿಎಲ್ ವಿರುದ್ಧವಾಗಿ ಧ್ವನಿ ಎತ್ತುವವರ ಸಂಖ್ಯೆಯೇ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಐಪಿಎಲ್ ನಿಷೇಧಿಸಿ ಕ್ರಿಕೆಟ್ ಉಳಿಸಿ ಎಂಬ ಕೂಗು ದಶದಿಕ್ಕುಗಳಿಂದಲೂ ಹಬ್ಬುತ್ತಲಿದೆ.
ಯಾಕೆ ಹೀಗಾಯಿತು!?
ನಿಮಗೆ ಆಶ್ಚರ್ಯವಾಗಬಹುದು. ಐಪಿಎಲ್ ಬುದ್ದಿವಂತರಿಂದ ಸ್ಥಾಪಿ ಸಲ್ಪಟ್ಟಿದೆ ಎಂದ ಅದೇ ಬಾಯಲ್ಲಿ ಐಪಿಎಲ್ ನಿಷೇಧಿಸಬೇಕು ಎಂಬ ಮಾತು ಕೇಳಿಬರುತ್ತಿರುವುದು ನಿಮಗೆ ಆಶ್ಚರ್ಯ ತರಿಸಬಹುದು. ಆದರೆ ಇದಕ್ಕೆ ಕಾರಣವೂ ಇದೆ. ನೀವು ನೋಡಿ. ಪ್ರಜೆಗಳನ್ನು ಆಳುವುದಕ್ಕೆ ಅತ್ಯಂತ ಸೂಕ್ತ ವಾದ ವಿಧಾನ ಯಾವುದು ಅಂದ್ರೆ ಪ್ರಪಂಚದ ಪ್ರತಿಯೋರ್ವ ಪ್ರಜೆಯೂ ತಟ್ಟನೆ ಪ್ರಜಾಪ್ರಭುತ್ವ ವಿಧಾನವೇ ಅತ್ಯಂತ ಸೂಕ್ತ ಎನ್ನುವುದಿಲ್ಲವೇ? ಅದೇ ಸಂದರ್ಭ ಅದರ ನಂತರ ಯಾವ ದೇಶದ ಮಾದರಿ ಅಂದರೆ ಅಮೆರಿಕಾ ಮಾದರಿ, ಭಾರತ ಮಾದರಿ ಅಥವಾ ಇನ್ನಿತರ ಪ್ರಜಾಪ್ರಭುತ್ವವನ್ನು ಮಾದ ರಿಯಾಗಿಸಿ ಆಡಳಿತ ನಡೆಸಿಕೊಂಡು ಬರುತ್ತಿರುವ ಯಾವ ದೇಶದ ಮಾದರಿ ಹೆಚ್ಚು ಸೂಕ್ತ ಎಂಬ ಚರ್ಚೆ ನಡೆಯುತ್ತಿಲ್ಲವೇ ಅದೇ ರೀತಿ ಐಪಿಎಲ್ ಎಂಬ ಚಿಂತನೆ ಸರಿಯಾಗೇ ಇರಬಹುದು. ಆದರೆ ಅದರ ಸಮೀಕರಣ ದಲ್ಲಿ ಮಾತ್ರ ಬಹಳಷ್ಟು ದೋಷಗಳಿವೆ. ಇಂದು ಐಪಿಎಲ್ ನಿಷೇಧಿಸಬೇ ಕೆಂಬ ಕೂಗು ಕೇಳಿ ಬರಲು ಸದ್ರಿ ಸಮೀಕರಣವೇ ಕಾರಣ ಎನ್ನಬಹುದು.
ನಿಮಗೆ ಗೊತ್ತು. ಇಂದು ಈ ದೇಶದಲ್ಲಿ ವಾಸ್ತವದಲ್ಲಿ ಕ್ರಿಕೆಟ್ ಮೈದಾನ ದಲ್ಲಿ ಸಾಧನೆ ಮಾಡಿದ ಕ್ರಿಕೆಟ್ ಕಲಿಗಳಿಗಿರುವಷ್ಟು ಅಭಿಮಾನಿಗಳು ಬೇರೆ ಯಾವ ಕ್ಷೇತ್ರದಲ್ಲೂ ಸಾಧನೆ ಮಾಡಿದ ಸಾಧಕರಿಗೂ ಇಲ್ಲ. ಸಿನಿಮಾ ಕ್ಷೇತ್ರ ದವರಿಗೂ ಇಲ್ಲ. ಉದ್ಯಮ ಕ್ಷೇತ್ರದವರಿಗೂ ಇಲ್ಲ. ಬಹುಶಃ ರಾಜಕೀಯ ಕ್ಷೇತ್ರದವರಿಗೂ ಇಲ್ಲ. ಅಂಥಾ ಕ್ರಿಕೆಟ್ ಕಲಿಗಳನ್ನು ಹೊಕ್ಕುಳ, ಕಂಕುಳ ಮತ್ತು ತೊಡೆಗಳನ್ನು ಪ್ರದರ್ಶಿಸಿ ದುಡ್ಡು ಕಮಾಯಿಸುವ ಸಿನಿಮಾ ನಟ - ನಟಿಯರುಗಳು ಮತ್ತು ದೇಶಕ್ಕೇನೂ ಕೊಡದೆ ತಮ್ಮ ಮಕ್ಕಳಿಗೆ ಮತ್ತು ಮರಿ ಮಕ್ಕಳಿಗೆ ದುಡ್ಡು ಗುಡ್ಡೆ ಹಾಕಿಡುವ ಉದ್ಯಮಿಗಳ ‘ಆಳು’ಗಳೆಂಬಂತೆ ಈ ಬಿಸಿಸಿಐನವರು ಪರಿವರ್ತನೆಯಾಗಿ ಬಿಟ್ಟಿದ್ದಾರಲ್ಲಾ... ಇದು ಕ್ರಿಕೆಟ್‌ನ ಬಗ್ಗೆ ಜಗತ್ತಿಗೆ ಏನು ಸಂದೇಶ ರವಾನಿಸಿರಬಹುದು? ಹೇಳಿ.
ನಿಮಗೆ ಗೊತ್ತಿದೆ. ಬಿಸಿಸಿಐ ಎಂಬುವುದು ಪ್ರಪಂಚದ ಅತ್ಯಂತ ದೊಡ್ಡ ಶ್ರೀಮಂತ ಸಂಸ್ಥೆಗಳಲ್ಲೊಂದು. ಆದರೆ ಈ ಸಂಸ್ಥೆ ಈ ಮಟ್ಟದ ಶ್ರೀಮಂ ತಿಕೆ ಗಳಿಸಿಕೊಂಡಿರುವುದು ಅದು ಇಷ್ಟ್ರವರೆಗೆ ಕ್ರಿಕೆಟ್ ಆಟವನ್ನು ಕೇವಲ ಆಟವನ್ನಾಗಿ ಬಗೆದುಕೊಂಡಿರುವುದರಿಂದಲೇ. ಮುಂದೆಯೂ ಅದು ಇನ್ನಷ್ಟು ಶ್ರೀಮಂತಿಕೆ ಗಳಿಸಿಕೊಳ್ಳಲು ಕ್ರಿಕೆಟನ್ನು ಕೇವಲ ಆಟವನ್ನಾಗಿಯೇ ಭಾವಿಸಿಕೊಂ ಡರೆ ಸಾಕಾಗಿತ್ತು. ಬಂಡವಾಳ ಹೂಡಲು ಇತರರನ್ನು ಕರೆಯಿಸಿಕೊಳ್ಳುವ ಬದಲಾಗಿ ತನ್ನಲ್ಲಿಯೇ ಇರುವ ಹೇರಳ ದುಡ್ಡನ್ನು ಧಾರಾಳವಾಗಿ ಬಳಸ ಬಹುದಿತ್ತು. ಐಪಿಎಲ್ ಸ್ಥಾಪಿಸಿ ಅದರ ಶಾಖೆಗಳ ಕೀಲಿ ಕೈಗಳನ್ನು ಆಯಾ ಪ್ರದೇಶದ ಕ್ರಿಕೆಟ್ ಚಿಂತಕರ ಕೈಗೆ ಕೊಡಬಹುದಿತ್ತು. ಈ ಐಪಿಎಲ್ ಸ್ಥಾಪನೆ ಸಂದರ್ಭ ಈ ಮಾನದಂಡಕ್ಕೂ ಅವಕಾಶ ಮಾಡಿಕೊಟ್ಟಿದ್ದರೆ ಇಂದು ನಮ್ಮ ದೇಶದ ಮತ್ತು ವಿದೇಶದ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ಪಟುಗಳು ಯಕಶ್ಚಿತ್ ಸಿನಿಮಾ ನಟನಟಿಯರ ಅಥವಾ ಕೆಲ ಉದ್ಯಮಿಗಳ ಆಳುಗಳೆಂ ಬಂತೆ ಜನರು ಮರುಕದ ದೃಷ್ಟಿಯಲ್ಲಿ ನೋಡುವ ಪ್ರಮೇಯವೇ ಬರುತ್ತಿರ ಲಿಲ್ಲ. ಶಾರೂಖ್ ಖಾನ್, ಪ್ರೀತಿ ಝಿಂಟಾರಂತಹಾ ಸಿನಿಮಾ ಮಂದಿ ತಾವು ಕ್ರಿಕೆಟ್ ತಾರೆಗಳ ಧಣಿ ಎಂಬಂತೆ ಬೀಗಿ ಅಪರಾತಪರಾ ಮಂಗಾಟ ನಡೆಸು ವುದೂ ಘಟಿಸುತ್ತಿರಲಿಲ್ಲ.
ಇನ್ನೊಂದು ಚೋದ್ಯದ ಸಂಗತಿಯೆಂದರೆ ಈ ಐಪಿಎಲ್ ಪ್ರಸ್ತುತಪಡಿ ಸುವ ತಂಡಗಳಿಗೆ ಬೇರೆ ಬೇರೆ ನಗರದ ರಾಜಧಾನಿಗಳ ಹೆಸರುಗಳನ್ನು ಜೋಡಿಸಿ ಆ ನಗರಗಳು ಸದ್ರಿ ತಂಡಗಳಿಗೆ ‘ತವರು ನೆಲ’ ಎಂಬ ಘೋಷಣೆ ಮಾಡಿದಂ ತಿದೆ. ಆದರೆ ದುರ್ಬೀನು ಹಾಕಿ ನೋಡಿದರೂ ತವರು ನೆಲದ ತಂಡಗಳಲ್ಲಿ ತವರು ನೆಲದ ಸದಸ್ಯರೇ ಇರುವುದಿಲ್ಲ. ಬೆಂಗಳೂರು ತಂಡದಲ್ಲಿರುವವರು ಹೊರಗಿನವರೇ, ಚೆನ್ನೈ ತಂಡದಲ್ಲಿರುವವರೂ ಹೊರಗಿನವರೇ. ಕೊಲ್ಕತ್ತಾ ತಂಡದಲ್ಲಿರುವವರು ಬಹುತೇಕ ಹೊರಗಿನವರೇ. ಹಾಗಾದರೆ ಇಲ್ಲಿ ‘ಐಪಿಎಲ್ ಸ್ಥಾಪಕರು ಬುದ್ದಿವಂತರೋ, ಆಥವಾ ಜನರು ದಡ್ಡರೋ?’ ಜನ ಚಿಂತಿಸ ಬೇಕಾಗಿದೆ.
ಗೆಳೆಯರೇ, ಐಪಿಎಲ್ ನಿಷೇಧಿಸಬೇಕೆಂದು ಕರೆ ಕೊಡಲು ಕೆಲವು ಮೇಧಾ ವಿಗಳು ಕೊಡುವ ಕಾರಣಗಳನ್ನು ದೇಶಪ್ರೇಮಿಗಳೆನ್ನುವ ನಾವು ಅತ್ಯವಶ್ಯಕ ವಾಗಿ ಗಮನಿಸಬೇಕಾಗಿದೆ. ನಿಮಗೆ ಗೊತ್ತಿರಬಹುದು. ಹದಿನೈದಿಪ್ಪತ್ತು ವರ್ಷ ಗಳ ಹಿಂದೆ ನಮ್ಮ ಊರುಗಳಲ್ಲಿ ಕೇರಿಗಳಲ್ಲಿ ನಾವು ಆಡುತ್ತಿದ್ದ ಆಟಗಳಲ್ಲಿ ಎಷ್ಟು ಬಗೆಯ ಆಟಗಳಿದ್ದವು? ನಮ್ಮ ಶಾಲೆಗಳಲ್ಲಿ ಎಷ್ಟೆಲ್ಲ ಬಗೆಯ ಆಟಗಳು ನಡೆಯುತ್ತಿದ್ದವು? ವಾಲಿಬಾಲ್, ಫುಟ್‌ಬಾಲ್, ಥ್ರೋಬಾಲ್, ಕೋಕೋ, ಕಬ್ಬಡ್ಡಿ, ಕುಸ್ತಿ, ಚದುರಂಗ, ಪಗಡೆಯಾಟ, ಕೇರಂ, ಹಾಕಿ, ಮನೆಕಡೆಗಳಲ್ಲಾದರೆ ಮರ ಕೋತಿಯಾಟ, ಲಗೋರಿ, ಗೋಲಿಯಾಟ, ಬಚ್ಚೆಯಾಟ, ಕಳ್ಳ ಪೊಲೀಸ್ ಆಟ.. ಹೀಗೆ ಎಷ್ಟು ಬಗೆಯ ಆಟಗಳು. ಅಯ್ಯೋ ಈಗ ಅದೆಲ್ಲಾ ನೆನಪುಗ ಳಷ್ಟೇ ಎಂಬಂತಾಗುತ್ತಿದೆ. ಕ್ರಿಕೆಟ್ ಎಲ್ಲಾ ಆಟಗಳನ್ನು ನುಂಗಿ ನೀರು ಕುಡಿಯು ತ್ತಿದೆ. ಅದರಲ್ಲೂ ಐಪಿಎಲ್ ಸ್ಥಾಪನೆಯಾದ ನಂತರವಂತೂ ನಮ್ಮ ನಾಡಿನ ಆಟಗಳೆಲ್ಲವೂ ವೇಗವಾಗಿ ನಾಶದತ್ತ ಸಾಗುತ್ತಿದೆ. ಇಂದಿನ ಸಣ್ಣ ಮಕ್ಕಳ ಬಾಯಲ್ಲೂ ಐಪಿಎಲ್‌ನದ್ದೇ ಕಲರವ.
 ಗೆಳೆಯರೇ, ಐಪಿಎಲ್ ಸ್ಥಾಪಿಸಿದವರು ಬುದ್ದಿವಂತರೇ ಆಗಿರಬಹುದು. ಆದರೆ ಅವರ ಬುದ್ದಿವಂತಿಕೆ ನಡೆಯುವುದು ದಡ್ಡರಾದ ನಾವು ಮುಗಿಬಿದ್ದು ಅನ್ನಾಹಾರ ತೊರೆದು ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವುದರಿಂದಲೇ. ನಾವು ಅಷ್ಟೊಂದು ದೊಡ್ಡ ದಡ್ಡರಾಗಿರುವುದು ಬೇಕಾ!? ತನ್ನ ಮರಿ ಹೊನ್ನ ಮರಿ ಪರರ ಮರಿ ಕಾಗೆ ಮರಿ ಎಂಬ ಗಾದೆ ಮಾತಿದೆ. ಆದರೆ ನಾವು ಈ ಗಾದೆ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದೇವೆಯಲ್ಲವೇ?

ಫಿಕ್ಸಿಂಗ್ ಹಿಂದಿರುವ ಬಂಡವಾಳ ಬಹಿರಂಗ

Posted by JAYAKIRANA Kirana on | 0 comments | Leave a comment...


ಕರೋಡ್‌ಪತಿ ನಿತೀಶ್ ಕುಮಾರ್ ಟ್ರಿಕ್ಕನ್ನೇ ಐಪಿಎಲ್‌ನಲ್ಲಿ ಶಾರೂಖ್ - ಮಮತಾ ದೀದಿ ಅನುಕರಿಸಿದ್ದು, ಮತ್ತು ಕೊಲ್ಕತ್ತಾ ತಂಡವನ್ನು ಫೈನಲ್‌ನಲ್ಲಿ ಗೆಲ್ಲಿಸಿದ್ದು!

ಪಿ.ಶಿವರಾಮ ಶೆಟ್ಟಿ, ಮಣ್ಣಗುಡ್ಡ
ಮೊನ್ನೆ ಮುಗಿದ ಐಪಿಎಲ್ ಕ್ರಿಕೆಟ್‌ನಲ್ಲಿ ಕೊಲ್ಕತ್ತಾ ತಂಡದ್ದು ನಿಜ ವಾದ ಗೆಲುವೇ ಅಥವಾ ‘ಫಿಕ್ಸಿಂಗ್’ ಆದ ಗೆಲುವೇ ಎಂಬ ಸಂಶಯ ಹಲವ ರನ್ನು ಕಾಡುತ್ತಿದೆ. ಚೆನ್ನೈ ತಂಡ ಉತ್ತಮ ೧೯೦ ರನ್ ಗಳಿಸಿತ್ತು. ಕೊಲ್ಕತ್ತಾ ತಂಡದವರಿಗೆ ಸುಲಭವಾಗಿ ರನ್ ಪೇರಿಸಲು ಅನುವು ಮಾಡಿಕೊಟ್ಟಿದ್ದು ಹಾಗೂ ಕೊನೆಯ ಏಳು ಬಾಲ್‌ನಲ್ಲಿ ೧೬ ರನ್ ಬೇಕಿದ್ದು ಕೇವಲ ೫ ಬಾಲ್‌ಗಳಲ್ಲಿ ಕೊಲ್ಕತ್ತಾ ಬ್ಯಾಟ್ಸ್‌ಮೆನ್‌ಗಳು ಸುಲಭವಾಗಿ ೧೭ ರನ್ ಗಳಿಸಲು ಚೆನ್ನೈ ಆಟಗಾ ರರು ಅನುವು ಮಾಡಿಕೊಟ್ಟದ್ದೇ ಸಂಶಯವನ್ನು ಹೆಚ್ಚಿಸಲು ಕಾರಣ.
ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಶಾರೂಖ್ ಖಾನ್ ನಡೆಸಿದ ಪುಂಡಾಟಿಕೆಯಿಂದಾಗಿ ಎಂ.ಸಿ.ಪಿ ಅವನನ್ನು ಐದು ವರ್ಷ ನಿಷೇಧಿಸಿದಾಗ ‘ಹಿಟ್ಲರ್ - ದೀದೀ’ ಎಂದೇ ಪ್ರಸಿದ್ಧರಾಗಿರುವ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕ್ರಿಕೆಟ್ ಆಟದ ತಲೆಬುಡ ಅರ್ಥವಾಗದಿದ್ದರೂ ವಿನಾ ಕಾರಣ ಎಂ.ಸಿ.ಎ ವಿರುದ್ಧ ಪ್ರತಿಭಟಿಸಿ ಅಪಹಾಸ್ಯಕ್ಕೀಡಾಗಿ, ಕಾರ್ಟೂನ್‌ಗಳಿಗೆ ಮತ್ತೊಮ್ಮೆ ಆಹಾರವಾದರು. ಕಾರಣ ಶಾರೂಕ್ ಖಾನ್ ಕೊಲ್ಕತ್ತಾ ತಂಡದ ಮಾಲಿಕನಾಗಿರುವುದು ಮಾತ್ರವಲ್ಲ ಅವನು ಪ.ಬಂಗಾಳ ರಾಜ್ಯದ ‘ಬ್ರಾಂಡ್ ರಾಯಭಾರಿ’ ಸಹಾ ಆಗಿರುವವನು.
ಇವನನ್ನು ಕಳೆದ ವರ್ಷವೇ ಕೋಟ್ಯಂತರ ಹಣ ಸುರಿದು ಪ.ಬಂಗಾಳ ರಾಜ್ಯದ ಏಕೈಕ ಬ್ರಾಂಡ್ ರಾಯಭಾರಿ ಆಗಿ ನೇಮಿಸಿದವರು ಇದೇ ಹಿಟ್ಲರ್ - ದೀದೀ ಮಮತಾ. ಆದರೆ ಇತ್ತೀಚೆಗೆ ಇದೇ ಶಾರುಖ್ ಸಾರ್ವಜನಿಕವಾಗಿ ಸಿಗರೇಟ್ ಸೇದಿ ಕೇಸ್ ಜಡಿಸಿಕೊಂಡು, ಮುಂಬೈ ಕ್ರೀಡಾಂಗಣದಲ್ಲಿ ಪುಡಿ ರೌಡಿಯಂತೆ ವರ್ತಿಸಿ, ಶಿರೀಷ್ ಕುಂದರ್‌ನೊಂದಿಗೆ ಕುಡಿದ ಅಮಲಿನಲ್ಲಿ ಬಡಿದಾಡಿ. ಅಮೇರಿಕಾದಲ್ಲಿ ಇಮಿಗ್ರೇಶನ್‌ನವರಿಂದ ಇಕ್ಕಿಸಿಕೊಂಡು, ಇನ್‌ಕಮ್ ಟ್ಯಾಕ್ಸ್‌ನವರಿಂದ ಕಕ್ಕಿಸಿಕೊಂಡು ರಾ-ವನ್ ಮತ್ತು ಡಾನ್ - ೨ ದಾರುಣವಾಗಿ ಫ್ಲಾಫ್ ಆದಾಗ ಡಿಸ್ಟ್ರಿಬ್ಯೂಟರ್‌ಗಳೊಂದಿಗೆ ಜಗಳವಾಡಿ, ಸೌರವ್‌ಗಂಗೂಲಿಯ ಅಭಿಮಾನಿಗಳಿಂದ ಬೈಸಿಕೊಂಡು, ಶಾರೂಖ್‌ನ ಬ್ರಾಂಡ್ ವ್ಯಾಲ್ಯೂ ಪಾತಾಳ ಕ್ಕಿಳಿದಿತ್ತು. ಇಂತಹಾ ಕೆಟ್ಟ ಬ್ರಾಂಡ್ ಅಂಬಾಸಿಡರ್ ಶಾರೂಖ್‌ನಿಂದಾಗಿ ಪ.ಬಂಗಾಳ ರಾಜ್ಯದ ಬ್ರಾಂಡ್ -ವ್ಯಾಲ್ಯೂ ಮತ್ತೂ ಆತನನ್ನು ಆರಿಸಿದ ಮಮತಾ ಬ್ಯಾನರ್ಜಿಯವರ ವರ್ಚಸ್ಸಿಗೆ ಸಹಾ ಭಾರೀ ಪೆಟ್ಟು ಬಿದ್ದಿತ್ತು.
ಈ ಡ್ಯಾಮೇಜನ್ನು ಸರಿಪಡಿಸಲು ಮತ್ತ್ತು ವರ್ಚಸ್ಸನ್ನು ಮೇಲೆಬ್ಬಿಸಲು ಐಪಿಎಲ್‌ನಲ್ಲಿ ಕೊಲ್ಕತ್ತಾ ತಂಡ ಗೆಲ್ಲಲೇ ಬೇಕಿತ್ತು. ಅದಕ್ಕಾಗಿ ಚೆನ್ನೈ ತಂಡದೊಂ ದಿಗೆ ತೃಣಮೂಲ ಪಕ್ಷದ ಸ್ಟ್ರಾಟಜಿಸ್ಟ್‌ಗಳು ಕೋಟ್ಯಾಂತರದ ಒಳ ಒಪ್ಪಂದ ನಡೆಸಿ ಚೆನ್ನೈ ಟೀಮ್ ಬೇಕೆಂದೇ ಸೋಲುವಂತೆ ಮಾಡಿದ್ದು ಎಂದು ಅನೇಕರ ಅನಿಸಿಕೆ. ರಾಜಕಾರಣಿಗಳು ಎಲ್ಲವನ್ನೂ ಹೊಲಸುಗೆಡಹುತ್ತಾರೆ ಎಂಬುದು ಸಾರ್ವತ್ರಿಕ ಸತ್ಯ ಅಲ್ಲವೇ?
ಸೋನಿ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮಿತಾಬ್ ಬಚ್ಚನ್ನರ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಬಿಹಾರಿಗಳೇ ಏಕೆ ಕೋಟಿಗಟ್ಟಲೆ ಗೆದ್ದಿದ್ದು ಎಂಬ ಪ್ರಶ್ನೆಗೆ ನಂತರ ಉತ್ತರ ಸಿಕ್ಕಿದೆ. ಇದೂ ಸಹಾ ‘ಫಿಕ್ಸಿಂಗ್’ ಆಗಿತ್ತಂತೆ! ಇಲ್ಲಿ ಸಹಾ ರಾಜಕಾರಣಿಗಳೇ ಮೋಸದಾಟ ಆಡಿದ್ದಂತೆ. ಅಂದರೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾದ ಮೇಲೆ ಐದೇ ವರ್ಷದಲ್ಲಿ ಬಿಹಾರ ರಾಜ್ಯ ಭಯಂಕರ ಅಭಿವೃದ್ದಿಗೊಂಡಿದೆ. ಹಾಗಾಗಿ ಬಿಹಾರಿಗಳು ಸಾಮಾ ಜಿಕವಾಗಿ ಜಾಗೃತರಾಗಿದ್ದಾರೆ ಹಾಗೂ ಬೌದ್ಧಿಕವಾಗಿಯೂ ಒಮ್ಮೆಲೇ ಉಚ್ಚ್ರಾಯಕ್ಕೆ ಮುಟ್ಟಿದ್ದಾರೆ ಎಂಬುದಾಗಿ ಸಂಕೇತಿಸಲು ಮತ್ತ್ತು ಈ ಮೂಲಕ ನಿತೀಶ್ ಕುಮಾರ್ ಸರಕಾರದ ವರ್ಚಸ್ಸನ್ನು ರಾಷ್ಟ್ರಮಟ್ಟದಲ್ಲಿ ದಿಢೀರನೇ ಎತ್ತರಿ ಸಲು ಮಾಡಿದ ನಾಟಕವೇ ಕರೋಡ್‌ಪತಿಯಲ್ಲಿ ಬಿಹಾರಿಗಳನ್ನು ಗೆಲ್ಲಿಸಿದ್ದು. ಇದಕ್ಕಾಗಿ ಈ ಪ್ರೋಗ್ರಾಂನ ನಿರ್ಮಾಪಕರು ನಿತೀಶ್ ಸರಕಾರದೊಂದಿಗೆ ಒಳ - ಒಪ್ಪಂದ ಮಾಡಿಕೊಂಡಿದ್ದರಂತೆ. ಇದನ್ನು ಬಿಹಾರದ ಹಿಂದಿ ಪತ್ರಿಕೆಗಳೇ ಬಯಲು ಗೊಳಿಸಿತ್ತು.
ಆಗ ಈ ಕರೋಡ್‌ಪತಿ ಪ್ರೋಗ್ರಾಂನಲ್ಲಿ ದಕ್ಷಿಣ ಭಾರತೀಯರ ವಿರುದ್ಧ ತಾರ ತಮ್ಯ ಮಾಡಲಾಗಿದೆ. ಘೋರ ಅನ್ಯಾಯವೆಸಗಲಾಗಿದೆ ಎಂಬ ಆರೋಪ ತೀವ್ರ ವಾಗಿ ಎದ್ದಿದ್ದರಿಂದಲೇ ದಾಕ್ಷಿಣಾತ್ಯರನ್ನು ಸಂಪ್ರೀತಿಗೊಳಿಸಲು ಈಗ ಅದೇ ಕಾರ್ಯ ಕ್ರಮ ದಕ್ಷಿಣದ ಎಲ್ಲಾ ನಾಲ್ಕೂ ಭಾಷೆಗಳಲ್ಲಿ ‘ಕೋಟ್ಯಧಿಪತಿ’ ಎಂದಾಗಿ ಅದೇ ನಿರ್ಮಾಪಕರಿಂದ ಪ್ರಸಾರಗೊಳ್ಳುತ್ತಿದೆ. ಕರೋಡ್‌ಪತಿ ನಿತೀಶ್ ಕುಮಾರ್ ಟ್ರಿಕ್ಕನ್ನೇ ಐಪಿಎಲ್‌ನಲ್ಲಿ ಶಾರೂಖ್ - ಮಮತಾ ದೀದಿ ಅನುಕರಿಸಿದ್ದು, ಮತ್ತು ಕೊಲ್ಕತ್ತಾ ತಂಡವನ್ನು ಫೈನಲ್‌ನಲ್ಲಿ ಗೆಲ್ಲಿಸಿದ್ದು.
ಈ ರೀತಿ ವಿಪರೀತ (ದುರ್) ಅಭಿಮಾನಿಗಳಾದ ಬೆಂಗಾಳಿ ಬಾಬುಗಳ ‘ಇಗೋ’ವನ್ನು ಉಬ್ಬಿಸಿ ಮಮತಾ - ಹಿಟ್ಲರ್ -ದೀದಿಯ ಆಡಳಿತದಲ್ಲಿ ಬೆಂಗಾಳಿ ಗಳ ವರ್ಚಸ್ಸು ಹೆಚ್ಚುತ್ತಿದೆ. ಪ.ಬಂಗಾಳ ರಾಜ್ಯದ ಬ್ರಾಂಡ್ ವ್ಯಾಲ್ಯೂ ಬಹಳ ಏರುತ್ತಿದೆ ಎಂದು ರಾಷ್ಟ್ರಮಟ್ಟದಲ್ಲಿ ಬಿಂಬಿಸುವ ಪ್ರಯತ್ನವಾಗಿದೆ ಇದು ಎಂದು ಬಂಗಾಳದ ಎಡಪಂಥೀಯ ಮಾಧ್ಯಮಗಳ ಅಭಿಪ್ರಾಯ. ರಾಜಕಾರಣಿಗಳು ಎಲ್ಲ ವನ್ನೂ ಭ್ರಷ್ಟಗೊಳಿಸುತ್ತಾರೆಂಬುದು ನಿಜ. ದೇವರನ್ನೇ ಭ್ರಷ್ಟಗೊಳಿಸುವ ರಾಜಕಾರ ಣಿಗಳು ಜನಪ್ರಿಯ ಕ್ರಿಕೆಟ್ ಆಟ ಅಥವಾ ಟಿವಿ ಪ್ರೋಗ್ರಾಂಗಳನ್ನು ಭ್ರಷ್ಟಗೊಳಿಸದೇ ಇರಲು ಸಾಧ್ಯವೇ?

ಮಿಲನ ಪ್ರಕ್ರಿಯೆಯಲ್ಲಿ ಬದಲಾವಣೆ ತಂದುಕೊಳ್ಳುವುದು ಒಳಿತು

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೯ ವರ್ಷ ಪ್ರಾಯ. ಮದುವೆಯಾಗಿ ಐದು ವರ್ಷವಾಯಿತು. ನಮ್ಮದು ಪ್ರೇಮ ವಿವಾಹ, ನಾಲ್ಕು ವರ್ಷದ ಮಗ ನಿದ್ದಾನೆ. ನನಗೆ ಹಾಗೂ ನನ್ನ ಪತಿಗೆ ಸೆಕ್ಸ್‌ನಲ್ಲಿ ಸಮಾನ ಆಸಕ್ತಿಯಿದೆ. ಹೀಗಾಗಿ ನಾವು ವಾರಕ್ಕೆ ಎರಡು ಅಥವಾ ಮೂರು ಬಾರಿ ಸೆಕ್ಸ್ ಮಾಡುತ್ತೇವೆ. ಆದರೆ ನನ್ನವರು ಮಗುವಾದ ಬಳಿಕ ಸೆಕ್ಸ್‌ನಲ್ಲಿ ಆಸಕ್ತಿ ಯಿಲ್ಲದಂತೆ ವರ್ತಿಸುತ್ತಿದ್ದಾರೆ. ನಾನು ಕೇಳಿದರೆ, ನನಗೆ ತೃಪ್ತಿ ಸಿಗು ತ್ತಿಲ್ಲ ಎನ್ನುತ್ತಾರೆ. ಅದಕ್ಕಾಗಿ ಸೆಕ್ಸ್ ಮಾಡುವ ವೇಳೆ ಮನೆಯಲ್ಲೇ ಸ್ವಲ್ಪ ಮದ್ಯ ಸೇವಿಸುತ್ತಾರೆ. ಇದನ್ನು ನಾನೂ ಬೇಡವೆನ್ನುವುದಿಲ್ಲ. ಅವರಿಗೆ ಇದರಿಂದ ಖುಷಿ ಸಿಗುತ್ತದೆ ಎನ್ನುತ್ತಾರೆ. ಆದರೆ ಅವರು ಬೇಗನೆ ಸ್ಖಲಿ ಸುತ್ತಾರೆ. ನನಗೆ ಮತ್ತೆ ಲೈಂಗಿಕ ಬಯಕೆ ಜಾಸ್ತಿಯಾದರೂ ಅವರು ಸುಸ್ತಾಗಿ ಮಲಗುತ್ತಾರೆ. ಅವರಿಗೆ ನನ್ನಿಂದ ಹಿಂದೆ ಸಿಗುತ್ತಿದ್ದ ಸುಖ ಸಿಗದಿರಲು ಕಾರಣವೇನು? ಅವರು ಮದ್ಯ ಸೇವಿಸಿ ಸೆಕ್ಸ್‌ನಲ್ಲಿ ತೊಡಗಿ ಕೊಳ್ಳುತ್ತಾರೆ. ಇದರಿಂದ ಏನಾದರೂ ಸಮಸ್ಯೆಯಿದೆಯೇ? ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ಸೆಕ್ಸ್ ಅನ್ನುವುದು ವಿವಾಹ ನಂತರದ ಜೀವನಕ್ಕೆ ಮುಖ್ಯ ವಾದುದು. ಆದರೆ ಮದುವೆಯಾದ ನಂತರ ಎಷ್ಟು ವರ್ಷ ಕಳೆ ದರೂ ಸೆಕ್ಸ್ ಬಗೆಗಿನ ಆಸಕ್ತಿ ಹಾಗೇ ಉಳಿದಿರುತ್ತದೆ ಎನ್ನಲಾಗುವು ದಿಲ್ಲ. ದೇಹದಲ್ಲಿ ಬದಲಾವಣೆ ಕಂಡುಬಂದಂತೆ ಕಾಮವಾಂಛೆಯು ತಗ್ಗುತ್ತದೆ. ನಿಮ್ಮ ಗಂಡ ಲೈಂಗಿಕ ಸುಖ ಸಿಗುವುದಿಲ್ಲ ಎನ್ನಲು ಕಾರಣ ವಿದೆ. ಮದುವೆಯ ಹೊಸತರಲ್ಲಿ ಹೆಣ್ಣಿನ ಜನನಾಂಗದ ದ್ವಾರವು ಬಿಗಿಯಾಗಿದ್ದು, ಲೈಂಗಿಕ ಸಂವೇದನೆ ಪ್ರಮಾಣ ಹೆಚ್ಚಿರುತ್ತದೆ. ಆದರೆ ಕ್ರಮೇಣ ನಿರಂತರ ಸಂಭೋಗದಿಂದಾಗಿ ಜನನಾಂಗವು ತನ್ನ ಬಿಗಿ ಯನ್ನು ಕಳೆದುಕೊ ಳ್ಳುತ್ತದೆ. ಒಂದು ಮಗುವಾದ ನಂತರವಂತೂ ಸಂಭೋಗ ದಲ್ಲಿ ಮೊದಲಿನ ಆಸಕ್ತಿ ಇರುವುದಿಲ್ಲ. ಇದರಿಂದ ಗಂಡನಿಗೆ ಸೆಕ್ಸ್‌ನಲ್ಲಿ ಹೆಚ್ಚಿನ ಸುಖ ಸಿಗದಿರಬಹುದು. ಆದರೆ ಸೆಕ್ಸ್‌ನಲ್ಲಿ ಸುಖ ಕೊಡುವ ಕಲೆ ಹೆಣ್ಣಿಗೆ ತಿಳಿದಿ ರಬೇಕು. ಸೆಕ್ಸ್ ಎಂದರೆ ಕೇವಲ ಸಂಭೋಗ ಮಾತ್ರವಲ್ಲ. ಬೇರೆ ಬೇರೆ ವಿಧಾನ ಗಳ ಮೂಲಕ ಲೈಂಗಿಕ ಪರಮಸುಖವನ್ನು ಪಡೆಯಬಹುದು. ಸಂಭೋಗದ ಆಸನಗಳನ್ನು ಬದಲಾಯಿಸಿದರೆ ಸಂಪೂರ್ಣ ಆನಂದ ಪಡೆಯಲು ಸಾಧ್ಯ ವಿದೆ. ಈ ಬಗ್ಗೆ ಗಂಡನಲ್ಲಿ ನೇರವಾಗಿ ಹೇಳಿ. ಅವರಿಗೆ ಯಾವ ರೀತಿ ಇಷ್ಟ ಎಂಬುದನ್ನು ಅರಿಯಿರಿ. ಆಗ ಯಾವುದೇ ಸಮಸ್ಯೆಯಾಗುವುದಿಲ್ಲ. ಗಂಡ ಸುಖಕ್ಕಾಗಿ ಬೇರೆ ಹೆಂಗಸರ ಕಡೆಗೆ ಮನಸ್ಸು ಮಾಡಿದರೆ ಸಮಸ್ಯೆ ಯಾಗಬಹುದು.
ಮದ್ಯ ಸೇವಿಸಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡರೆ ನರಮಂಡ ಲದ ಮೇಲೆ ಪ್ರಭಾವ ಬೀರಿ ಕಾಮ ಚಟುವಟಿಕೆಗಳಲ್ಲಿ ಆಸಕ್ತಿ ಬರು ವುದು ಸಹಜ. ಆದರೆ ಇದನ್ನೇ ಅಭ್ಯಾಸ ಮಾಡುವುದು ಬೇಡ. ಮದ್ಯ ಸೇವಿಸದೆ ಸೆಕ್ಸ್‌ನಲ್ಲಿ ಆಸಕ್ತಿ ಹೇಗೆ ತಂದುಕೊಳ್ಳುವುದೆಂದು ಅವರಿಗೆ ತಿಳಿಸಿ. ಈ ಬಗ್ಗೆ ಮಾರುಕಟ್ಟೆಯಲ್ಲಿ ದೊರಕುವ ಲೈಂಗಿಕ ಸಾಹಿತ್ಯ ವನ್ನು ಕೊಂಡು ಓದಬಹುದು. ಇನ್ನು ಶೀಘ್ರಸ್ಖಲನವನ್ನು ತಡೆಯಲು ಸೆಕ್ಸ್ ವೇಳೆ ಕೆಲವೊಂದು ಪ್ರಯತ್ನವನ್ನು ನೀವೇ ಮಾಡಿ ನೋಡಬ ಹುದು. ಜನನಾಂಗದ ಚಲನೆ ವೇಳೆ ನಿಲ್ಲಿಸಿ ಮತ್ತೆ ಮುಂದುವರಿಯು ವುದು, ಸ್ತ್ರೀ ಪ್ರಧಾನ ಆಸನ(ಹೆಣ್ಣು ಮೇಲಕ್ಕೆ ಬರುವಂತೆ) ಸಂಭೋಗ ಮತ್ತಿತರ ಸಾಮಾನ್ಯ ವಿಧಾನದಿಂದ ಪರಿಣಾಮ ಸಾಧ್ಯವಿದೆ. ವೈದ್ಯರ ಸಲಹೆ ಔಷಧಿಯನ್ನು ಬಳಕೆ ಮಾಡಬಹುದು. ಹೆಚ್ಚಿನ ಮಾಹಿತಿ ಬೇಕಾ ದಲ್ಲಿ ವೈದ್ಯರನ್ನು ಅವಶ್ಯವಾಗಿ ಸಂಪರ್ಕಿಸಿ ಸುಖಮಯ ಜೀವನ ನಡೆಸಿ. ಆಸಕ್ತಿ ಬರುವುದು ಸಹಜ. ಆದರೆ ಇದನ್ನೇ ಅಭ್ಯಾಸ ಮಾಡುವುದು ಬೇಡ. ಮದ್ಯ ಸೇವಿಸದೆ ಸೆಕ್ಸ್‌ನಲ್ಲಿ ಆಸಕ್ತಿ ಹೇಗೆ ತಂದುಕೊಳ್ಳುವು ದೆಂದು ಅವರಿಗೆ ತಿಳಿಸಿ. ಇನ್ನು ಶೀಘ್ರಸ್ಖಲನವನ್ನು ತಡೆಯಲು ಸೆಕ್ಸ್ ವೇಳೆ ಕೆಲವೊಂದು ಪ್ರಯತ್ನವನ್ನು ನೀವೇ ಮಾಡಿ ನೋಡಬಹುದು. ಜನನಾಂಗದ ಚಲನೆ ವೇಳೆ ನಿಲ್ಲಿಸಿ ಮತ್ತೆ ಮುಂದುವರಿಯುವುದು, ಸ್ತ್ರೀ ಪ್ರಧಾನ ಆಸನ ಸಂಭೋಗ ವಿಧಾನದಿಂದ ಪರಿಣಾಮ ಸಾಧ್ಯವಿದೆ. ವೈದ್ಯರ ಸಲಹೆ ಔಷಧಿಯನ್ನು ಬಳಕೆ ಮಾಡಬಹುದು. ಹೆಚ್ಚಿನ ಮಾಹಿತಿ ಬೇಕಾದಲ್ಲಿ ವೈದ್ಯರನ್ನು ಅವಶ್ಯವಾಗಿ ಸಂಪರ್ಕಿಸಿ.

01-06-2012

Posted by JAYAKIRANA Kirana on | 0 comments | Leave a comment...

ಮೇಷ : ಹಣಕಾಸಿನ ಬಗ್ಗೆ ಜಾಗ್ರತೆ ಮಾಡಿರಿ.
ವೃಷಭ : ಹಣದ ವಿಷಯದಲ್ಲಿ ಅಸಮಾಧಾನ ಇರುತ್ತದೆ.
ಮಿಥುನ : ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಇರುತ್ತದೆ.
ಕರ್ಕಾಟಕ : ಕೆಲಸ ಕಾರ್ಯಗಳಲ್ಲಿ ಜಯ ಇರುತ್ತದೆ.
ಸಿಂಹ : ಸರಕಾರಿ ನೌಕರರಿಗೆ ಸಂತೋಷದ ದಿನ.
ಕನ್ಯಾ : ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ.
ತುಲಾ : ಧರ್ಮ ಕಾರ್ಯಗಳಿಗೆ ಹಣ ವ್ಯಯವಾಗುತ್ತದೆ.
ವೃಶ್ಚಿಕ : ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ.
ಧನು : ಜಂಟಿ ವ್ಯಾಪಾರವನ್ನು ಮಾಡಬೇಡಿ.
ಮಕರ : ಮಕ್ಕಳಿಂದ ತೊಂದರೆ ಇರುತ್ತದೆ.
ಕುಂಭ : ಬಂಧುಗಳಿಂದ ಸಹಾಯ ದೊರೆಯುತ್ತದೆ.
ಮೀನ : ಮಾನಸಿಕ ನೆಮ್ಮದಿ ಇರುವುದಿಲ್ಲ.

01-06-2012

Posted by JAYAKIRANA Kirana on | 0 comments | Leave a comment...

ಬಿಜೈ ಬಳಿಯ ಲಾಡ್ಜ್ ಒಂದಕ್ಕೆ ರೂಂಬಾಯ್ ಬೇಕಾಗಿದ್ದಾರೆ. ೯೯೮೦೯೫೧೫೯೯
ಮಂಗಳೂರು:ಸಾಫ್ಟ್‌ಡ್ರಿಂಕ್ಸ್ ಅಪರೇಟರ್ ಬೇಕು ೯೯೬೪೪೫೫೯೮೮.
ಮಂಗಳೂರು: ಬಟ್ಟೆ ಅಂಗಡಿಗೆ ಜನ ಬೇಕು ೮೨೭೭೪೦೫೩೬೩.
ಕಾಸರಗೋಡು: ಹೌಸ್‌ಕೀಪಿಂಗ್, ಸೂಪರ್ ವೈಸರ್ ಬೇಕು ೯೯೧೬೧೧೯೪೬೯
ಪಿವಿಎಸ್: ಕಂಪೆನಿಗೆ ಕ್ಲರ್ಕ್ ಬೇಕು ೯೭೪೩೩೯೦೭೯೭
ಮೂಲ್ಕಿ: ಪ್ರಿಂಟರ್ ಬೇಕು ೮೭೪೮೮೭೦೬೯೧.
ಕಾವೂರು: ಲೇಡೀಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು: ಕಚೇರಿ ಕೆಲಸಕ್ಕೆ ಹುಡುಗರು ಬಏಕು ೯೪೪೮೮೪೩೪೯೯.
ಬಂದರ್: ಕೆಲಸಕ್ಕೆ ಜನ ಬಏಕು ೯೪೪೮೩೦೭೬೭೯೯.
ಅಳಕೆ: ಪ್ರಿಂಟಿಂಗ್ ಪ್ರೆಸ್‌ಗೆ ಬೈಂಡಿಂಗ್ ತಿಳಿದಿರುವವ ಯುವತಿಯರು ಬೇಕು ೯೮೮೬೬೯೨೨೧೫.
ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು ೮೨೭೭೧೬೫೬೬೨.
ಮಂಗಳೂರು : ಕಾರ್ ಡ್ರೈವರ್‌ಬೇಕು ೦೮೨೪-೪೨೬೮೫೨೪.
ಮಂಗಳೂರು : ಕಂಪ್ಯೂಟರ್ ತರಗತಿ, ಟ್ಯೂಷನ್ ಮತ್ತು ಸಂಸ್ಥೆಯ ಮೇಲ್ವಿಚಾರಣೆ ಗೆ ಜನ ಬೇಕು ೭೨೦೪೬೪೩೪೫೫.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಮ್ಯಾನ್ ಬೇಕು ೯೮೪೪೪೬೪೩೭೭.
ಮೋರ್ಗನ್‌ಗೇಟ್ : ಟ್ಯೂಷನ್ - ಕಂಪ್ಯೂಟರ್ ತರಗತಿ ನೀಡಲು ಪುರುಷರು, ಮಹಿಳೆಯರು ಬೇಕು ೯೯೭೨೭೨೫೩೫೭.
ಕೊಡಿಯಾಲ್‌ಬೈಲ್ : ಟ್ರಾವೆಲ್ ಏಜೆನ್ಸಿಗೆ ಲೇಡೀಸ್ ಸ್ಟಾಫ್ ಬೇಕು ೨೪೯೭೮೬೨.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೈಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು : ಲೇಡಿಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು : ಲೇಡಿಸ್ ಹಾಸ್ಟೆಲ್‌ಗೆ ಮಹಿಳಾ ಅಡುಗೆಯವರು ಬೇಕು ೯೨೪೧೨೧೪೧೨೨.
ಮಂಗಳೂರು : ಮನೆ ಬಾಡಿಗೆಗೆ ಇದೆ ೯೮೮೬೩೩೦೨೭೧.

ಹೊಳೆಗೆ ಹಾರಿದ ಜೋಡಿ

Posted by JAYAKIRANA Kirana on | 0 comments | Leave a comment...


ಕಾಸರಗೋಡು: ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿ ಸಿರುವ ವಿವಾಹಿತ ವ್ಯಕ್ತಿ ಹಾಗೂ ಆತನ ಪ್ರೇಯಸಿಯ ಪತ್ತೆ ಕಾರ್ಯ ಇನ್ನಷ್ಟು ಚುರುಕುಗೊಳಿಸಲಾಗಿದೆ. ಹೊಸದುರ್ಗ ಚಿಮೇನಿಯ ಕಾರ್ಯಂಕೋಡು ಹೊಳೆಗೆ ಪ್ರೇಮಿಗಳು ನಿನ್ನೆ ಮುಂಜಾನೆ ಹಾರಿದ್ದರು.
 ಚೀಮೇನಿ ಕಞಿಪಾರೆ ಎಂಬಲ್ಲಿ ವಾಸಿಸುವ ಮೂಲತ: ಪಯ್ಯನ್ನೂರು ಚೀಮೇನಿಯ ನಿವಾಸಿ ಪಿ.ಜಿ. ಮನು (೨೭) ಹಾಗೂ ಈತನ ಪ್ರೇಯಸಿ ವೆಳ್ಳೇರಿ ಕುಂಡು ಕನಕಪಳ್ಳಿಯ ಡಾನಿಯಾ (೧೯) ಎಂಬವರು ಬದುಕಿಗೆ ವಿದಾಯ ಹಾಡಿ ಹೊಳೆಗೆ ಹಾರಿದವರು. ಡಾನಿಯಾ ಅವಿವಾಹಿತೆಯಾದರೆ, ಮನು ವಿವಾ ಹಿತನೂ ಅವಳಿ ಮಕ್ಕಳ ತಂದೆಯೂ ಆಗಿದ್ದಾನೆ. ಇವರಿಬ್ಬರೂ ಪರಸ್ಪರ ಕೈ-ಕೈ ಹಿಡಿದು ಸೇತುವೆಯಿಂದ ಹೊಳೆಗೆ ಜಿಗಿಯುತ್ತಿದ್ದುದನ್ನು ಕಂಡ ಮೀನುಗಾರರು ರಕ್ಷಣೆಗಾಗಿ ಪ್ರಯತ್ನಿಸಿದರೂ ನೀರಿನ ತೀವ್ರ ಹರಿಯುವಿಕೆಯಿಂದಾಗಿ ಸಾಧ್ಯವಾಗಿರಲಿಲ್ಲ.
 ಸೇತುವೆ ಬದಿಯಲ್ಲಿ ಇವರ ಎರಡು ಮೊಬೈಲ್ ಫೋನ್, ಯುವತಿಯ ಬ್ಯಾಗ್ ಪತ್ತೆಯಾಗಿದೆ. ಪೊಲೀಸರು ಬ್ಯಾಗ್ ಹಾಗೂ ಮೊಬೈಲ್ ಫೋನನ್ನು ತಪಾಸಣೆ ನಡೆಸಿ ಹೊಳೆಗೆ ಹಾರಿದವರು ಮನು ಹಾಗೂ ಡಾನಿಯಾ ಎಂಬುದನ್ನು ಖಾತ್ರಿಪಡಿಸಿದ್ದಾರೆ. ಪತ್ನಿ, ಅವಳಿ ಮಕ್ಕಳಿರುವ ಮನು ಕಳೆದ ಎರಡು ದಿನಗಳಿಂದ ಮನೆಗೆ ಹೋಗಿರಲಿಲ್ಲವೆನ್ನಲಾಗಿದೆ. ಇವರು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಪತಿಯ ನಾಪತ್ತೆ ಬಗ್ಗೆ ಪತ್ನಿ ರಮ್ಯಾ ಚೀಮೇನಿ ಪೊಲೀಸರಿಗೆ ದೂರು ನೀಡಿ ದ್ದರು. ಮನುವಿಗೆ ಡಾನಿಯಾ ಜೊತೆ ಸಂಪರ್ಕವಿರುವುದು ಇತ್ತೀಚೆಗೆ ಈತನ ಪತ್ನಿ ಹಾಗೂ ಮನೆಯವರಿಗೂ ಅರಿವಾಗಿತ್ತು. ಕಲ್ಲಿಕೋಟೆ ನಿರ್ಮಲಗಿರಿ ಕಾನ್ವೆಂಟಿನ ನೌಕರಳಾಗಿರುವ ಡಾನಿಯಾಳು ಹಿಂದೆ ಮನುವಿನ ನೆರೆಮನೆಯಲ್ಲಿ ಕುಟುಂಬ ಸಮೇತ ವಾಸವಿದ್ದಾಗ ಇವರ ನಡುವೆ ಪ್ರೇಮಾಂಕುರಿಸಿತ್ತು. ಮನು ಲಾಡ್ಜ್ ನೌಕರನಾಗಿದ್ದಾನೆ. ಈಜುಗಾರರು ಹಾಗೂ ಸ್ಪೀಡ್ ಬೋಟನ್ನು ಕರೆಸಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಮದುವೆ ದಿಬ್ಬಣದ ವ್ಯಾನ್ ಪಲ್ಟಿ: ೧೫ ಮಂದಿಗೆ ಗಾಯ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಗ್ರಾಮದ ಶಾಂತಿ ಮೊಗೇರು ಎಂಬಲ್ಲಿ ಕುಮಾರಧಾರ ನದಿ ದಾಟಿ ಸಾಗುತ್ತಿದ್ದ ಮದುವೆ ದಿಬ್ಬಣದ ಟೆಂಪೋ ವ್ಯಾನೊಂದು ಪಲ್ಟಿಯಾಗಿ ಹದಿನೈದು ಜನರಿಗೆ ಗಾಯವಾದ ಘಟನೆ ಗುರುವಾರ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಪಟ್ರಮೆಯಿಂದ ಕಾಣಿ ಯೂರಿಗೆ ಬಂದು ಮದುವೆ ಮುಗಿಸಿಕೊಂಡು ವಾಪಾಸಾಗುತ್ತಿದ್ದ ವೇಳೆ ಶಾಂತಿಮುಗೇರುನಲ್ಲಿ ನದಿ ದಾಟಿ ಹೋಗುವಾಗ ನದಿ ದಡದಲ್ಲಿ ಈ ದುರ್ಘಟನೆ ನಡೆದಿದೆ. ಗಾಯಗೊಂ ಡವರನ್ನು ಬೆಳ್ತಂಗಡಿ ತಾಲೂಕಿನ ಉಜಿರೆ ವಿವೇಕಾನಂದ ನಗರದ ಸಂಜೀವ ಕುಲಾಲ್(೩೫), ಸಂಜೀವ ಕುಲಾಲ್ (೪೨), ಪಟ್ರಮೆಯ ದೂಮ ಪೂಜಾರಿಯವರ ಪತ್ನಿ ಅಕ್ಕು(೭೦), ಉಜಿರೆ ನಾವೂರ ನಿವಾಸಿಗಳಾದ ಅಪ್ಪಿ((೬೦), ಗೋಪಾಲಕೃಷ್ಣ(೫೨), ಪಟ್ರಮೆಯ ರಮೇಶ್(೨೭), ಸತೀಶ್(೨೬), ಸೌಜನ್ಯ(೬),ಸಂತೋಷ(೧೮), ಸೇಸಮ್ಮ(೭೦), ರತ್ನಾ(೩೦), ಸುಂದರಿ(೩೫), ಸಾಂತಪ್ಪ(೩೫), ಗಂಗಾಧರ(೪೦), ಸರೋಜಿನಿ(೩೨) ಎಂದು ಗುರುತಿಸಲಾಗಿದೆ. ಈ ಪೈಕಿ ಸಂಜೀವ ಕುಲಾಲ್ ಎಂಬವರಿಗೆ ತೀವ್ರ ಸ್ವರೂಪದ ಗಾಯವಾದರೆ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದ್ದಾರೆ. ಇವರಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
 ಪಟ್ರಮೆಯ ನೀಲಯ್ಯ ಕುಂಬಾರ ಅವರ ಪುತ್ರಿ ಸುಜಾತ ಎಂಬ ಯುವತಿಯನ್ನು ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಕೆಳಗಿನಕೇರಿ ಜಿನ್ನಪ್ಪ ಕುಂಬಾರ ಅವರ ಪುತ್ರ ಸೀತಾರಾಮ ಎಂಬ ಯುವಕನಿಗೆ ಗುರುವಾರ ಮದುವೆ ನಿಗದಿಯಾಗಿತ್ತು. ಅಂತೆಯೇ ಕಾಣಿಯೂರಿನ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಮದುವೆ ಕೂಡಾ ನಡೆಯಿತು. ಬೆಳಿಗ್ಗೆ ಎರಡು ಜೀಪು ಒಂದು ವ್ಯಾನಿನಲ್ಲಿ ಹೊರಟ ಈ ಮದುವೆ ದಿಬ್ಬಣ ಕಡಬ ಮೂಲಕ ಕಾಣಿಯೂರಿಗೆ ಹೋಗಿತ್ತು. ಮದುವೆ ನಡೆದು ಕೆಳಗಿನಕೇರಿಗೆ ಮದುಮಗ ಹಾಗು ವಧುವನ್ನು ಅಲ್ಲಿ ಬಿಟ್ಟು ಕೊಕ್ಕಡಕ್ಕೆ ಹತ್ತಿರದ ರಸ್ತೆಯಾಗಿರುವುದರಿಂದ ಮದುವೆ ದಿಬ್ಬಣದ ಟೆಂಪೋ ಕೂಡಾ ಇಲ್ಲಿಂದ ಸಾಗಿತು. ವ್ಯಾನ್ ನದಿಯನ್ನು ದಾಟಿ ಇತ್ತ ಆಲಂಕಾರು ಸಂಪರ್ಕಿಸುವ ರಸ್ತೆಗೆ ಬರುತ್ತಿದ್ದಂತೆ ನದಿ ದಡದ ಏರು ರಸ್ತೆಯಲ್ಲಿ ಚಾಲಕನ ಹತೋಟಿ ತಪ್ಪಿ ಪಲ್ಟಿಯಾಯಿತು. ವ್ಯಾನಿನಲ್ಲಿ ಇಪ್ಪತ್ತಕ್ಕೂ ಅಧಿಕ ಜನರ ಪೈಕಿ ೧೫ ಜನರಿಗೆ ಸಣ್ಣಪುಟ್ಟ ಗಾಯಗಳಾದವು. ತಕ್ಷಣ ಗಾಯಾಳುಗಳಲ್ಲಿ ಕೆಲವರನ್ನು ಹತ್ತಿರದ ಆಲಂಕಾರಿನ ಕ್ಲೀನಿಕ್‌ನಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಉಳಿದವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಯದಿಂದ ಪಾರಾಗಿ ದ್ದಾರೆ. ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ರಾಹಕರಿಗೆ ಗ್ಯಾಸ್ ನೀಡದೆ ವಂಚಿಸುತ್ತಿರುವ ಚಾಲಕ!

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಅಡುಗೆ ಅನಿಲವನ್ನು ಸರಬರಾಜು ಮಾಡುವ ಕಂಪೆನಿಯ ವ್ಯಕ್ತಿಯೊಬ್ಬ ಅಧಿಕೃತ ಗ್ರಾಹಕರಿಗೆ ಅನಿಲ ನೀಡದೆ ವಂಚಿಸಿ ಅದನ್ನು ಬ್ಲ್ಯಾಕ್ ನಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ಆರೋಪಿಸಿ ಆತನನ್ನು ತರಾಟೆಗೆ ತೆಗೆದುಕೊಂಡ ಘಟನೆ ಆಲಂಕಾರಿನಲ್ಲಿ ನಡೆದಿದೆ.
ಕೊಯಿಲ ಎಂಬಲ್ಲಿಯ ಸುಮಾರು ೬೦ ಮಂದಿ ಗ್ರಾಹಕರು ಪುತ್ತೂರು ಮಹಾಲಿಂಗೇಶ್ವರ ಗ್ಯಾಸ್ ಏಜನ್ಸಿ ಮೂಲಕ ಅಡುಗೆ ಅನಿಲ ಪಡೆದುಕೊಳ್ಳುತ್ತಿದ್ದು, ಈ ಮಂದಿಗೆ ಗ್ಯಾಸ್ ನೀಡದೆ ಕಡಬದಲ್ಲಿ ಇದೇ ಅನಿಲ ಸಿಲಿಂಡರ್‌ಗಳನ್ನು ಹೆಚ್ಚು ಬೆಲೆಗೆ ಬೇರೆಯವರಿಗೆ ಈತ ಮಾರಾಟ ಮಾಡುತ್ತಿದ್ದಾನೆ ಎಂದು ಕೊಯಿಲದ ಗ್ರಾಹಕರು ಆರೋಪಿಸಿದ್ದಾರೆ. ಮಹಾಲಿಂಗೇಶ್ವರ ಏಜೆನ್ಸಿಯ ಟೆಂಪೊ ಚಾಲಕನೊಬ್ಬ ಕೊಯಿಲಕ್ಕೆ ನೀಡಬೇಕಾದ ದಿನಾಂಕದಂದು ಇಲ್ಲಿ ಟೆಂಪೊ ನಿಲ್ಲಿಸದೇ ಕಡಬಕ್ಕೆ ಒಯ್ಯುತ್ತಿದ್ದು, ನಂತರ ವಿಚಾರಿಸಿದರೆ ನೀವು ತೆಗೆದುಕೊಂಡಿಲ್ಲ. ಹಾಗಾಗಿ ಇನ್ನೊಂದು ತಿಂಗಳ ನಂತರವೇ ಗ್ಯಾಸ್ ಸಿಗುತ್ತದೆ ಎಂದು ಚಾಲಾಕಿತನ ಪ್ರದರ್ಶಿಸುತ್ತಿದ್ದಾನೆ ಎಂದು ಇಲ್ಲಿನ ಗ್ರಾಹಕರು ಆರೋಪಿಸಿದ್ದಾರೆ. ಮೇ ೩೦ರಂದು ಇದೇ ರೀತಿ ಈ ಚಾಲಕ ಟೆಂಪೊ ನಿಲ್ಲಿಸದೆ ಹೋದಾಗ ಕೊಯಿಲದ ಗ್ರಾಹಕರು ಬೇರೊಂದು ವಾಹನದಲ್ಲಿ ಬೆನ್ನಟ್ಟಿ ಆಲಂಕಾರು ಎಂಬಲ್ಲಿ ಈತನ ಟೆಂಪೊವನ್ನು ತಡೆದು ನಿಲ್ಲಿಸಿ ತರಾಟೆಗೆ ತೆಗೆದುಕೊಂಡರು.
ಕಳೆದ ಹಲವಾರು ತಿಂಗಳಿನಿಂದ ಈತ ಇದೇ ರೀತಿ ಕೊಯಿಲದ ಮಂದಿಗೆ ಗ್ಯಾಸ್ ನೀಡದೆ ವಂಚಿಸುತ್ತಿರುವುದಾಗಿ ತಿಳಿಸಿರುವ ಗ್ರಾಹಕರು ಈತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಏಳು ವರ್ಷವಾದರೂ ಎದ್ದೇಳಲೇ ಇಲ್ಲ!

Posted by JAYAKIRANA Kirana on | 0 comments | Leave a comment...

ಬಂಟರ ಸಂಘ ಗಮನ ಹರಿಸುವುದೇ?
ಕಾರ್ಕಳ: ದುಡಿಯಲು ಹೋಗಿದ್ದ ಯುವಕನಿಗೆ ಗ್ರಹಚಾರ ಉಲ್ಟಾ ಹೊಡೆ ಯಿತೋ ಅಥವಾ ಕಾಲವಿಧಿಯೋ?
ಆಯತಪ್ಪಿ ವಿದ್ಯುತ್ ಕಂಬದಿಂದ ಬಿದ್ದವನು ಇನ್ನೂ ಹಾಸಿಗೆಯಿಂದ ಎದ್ದೇಳದೇ ಏಳು ವರ್ಷಗಳು ಕಳೆದಿವೆ.
ಆತನ ಹೆಸರು ನಾಗರಾಜಶೆಟ್ಟಿ (೩೪) ಕಾರ್ಕಳ ತಾಲೂಕು ಅಜೆಕಾರು ಬಂಗ್ಲೆಗುಡ್ಡೆಯ ನಿವಾಸಿಯಾಗಿದ್ದಾನೆ. ಕೃಷ್ಣಯ್ಯ ಶೆಟ್ಟಿ ಹಾಗೂ ಪ್ರೇಮ ದಂಪತಿಯ ಇಬ್ಬರು ಗಂಡು ಮಕ್ಕಳಲ್ಲಿ ಈತ ಕಿರಿಯವ.
ಬಡತನದ ಬೇಗೆಯಲ್ಲಿ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿದ ಈತ ಪಿಯುಸಿಯ ಬಳಿಕ ಡಿಪ್ಲೋಮಾ ವ್ಯಾಸಂಗ ಮಾಡ ಬೇಕೆಂಬ ಕನಸು ಹೊತ್ತು ದುಡಿಯಲು ಹೋಗಿರುವುದರಿಂದ ಶಾಶ್ವತವಾಗಿ ಮೂಲೆಗುಂಪಿಗೆ ಸೇರಿದ್ದಾನೆ. ಬೆನ್ನಿನ ಮೂಳೆ ಮುರಿತಕ್ಕೊಳಗಾಗಿದೆ. ಕವುಚಿ ಮಲಗಿಕೊಂಡು ಸಾವು- ಬದುಕಿನ ನಡುವೆ ಹೋರಾಡುತ್ತಿರುವ ನತದೃಷ್ಟನಾಗಿದ್ದಾನೆ.
೨೦೦೫ ಏಪ್ರಿಲ್ ೪ರಂದು ಜಾರ್ಕಳ ಮುಂಡ್ಲಿ ಎಂಬಲ್ಲಿ ಹೊಸ ವಿದ್ಯುತ್‌ಮಾರ್ಗ ಕಾಮಗಾರಿಯ ವೇಳೆಗೆ ಕಂಬಕ್ಕೇರಿದ ಆತ ಆಕಸ್ಮಿಕವಾಗಿ ಜಾರಿ ನೆಲಕ್ಕುರುಳಿದ್ದ. ಕೋಮಾಸ್ಥಿತಿಯಲ್ಲಿದ್ದ ಆತನಿಗೆ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಗೆ ಇದುವರೆಗೆ ಏಳು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬೆನ್ನುಮೂಳೆ, ಕೈ ಮೂಳೆ, ಎರಡು ಬಾರಿ ಪ್ಲಾಸ್ಟಿಕ್ ಸರ್ಜರಿ, ಮೂರು ಬಾರಿ ಮೂತ್ರಕೋಶಕ್ಕೆ ಸಂಬಂಧಿಸಿದ ಶಸ್ರಚಿಕಿತ್ಸೆಗಳು ನಡೆದಿವೆ.
ವಿದ್ಯುತ್ ಕಂಟ್ರಾಕ್ಟರ್ ಅಶೋಕ್ ಎಂಬವರೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಂದು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಕಂಟ್ರಾಕ್ಟರ್, ಕೇಸು ದಾಖಲಿಸದಂತೆ ಮನೆಮಂದಿಯಲ್ಲಿ ಒತ್ತಡ ಹೇರಿ ಆಸ್ಪತ್ರೆಯ ಖರ್ಚಿಗೆಂದು ೨೫,೦೦೦ ರೂಪಾಯಿ ನೀಡಿದ್ದರಂತೆ. ಆ ಸಂದರ್ಭದಲ್ಲಿ ಚಿಕಿತ್ಸೆ ವೆಚ್ಚ ಭರಿಸಲು ಅಶಕ್ತರಾಗಿದ್ದ ಮನೆಮಂದಿ ಕಂಟ್ರಾಕ್ಟರ್‌ದಾರರೊಂದಿಗೆ ರಾಜಿಸಂಧಾನಕ್ಕೆ ಮುಂದಾಗಿದ್ದರಂತೆ.
ಶಸ್ತ್ರಚಿಕಿತ್ಸೆ ಒಳಗಾಗಿದ್ದ ಭಾಗದಲ್ಲಿ ಗಾಯವು ಮತ್ತಷ್ಟು ಉಲ್ಭಣಿಸಿದಾಗ ಶಿರ್ಲಾಲಿನ ಸುಂದರ ಎಂಬವರಲ್ಲಿ ಊರ ಔಷಧಿಯನ್ನು ಮಾಡಿದ ಪರಿಣಾಮವಾಗಿ ಗಾಯವು ಶಮನಗೊಂಡಿತ್ತು. ಇದುವರೆಗೆ ಸಾಲ ಮಾಡಿ ನಾಲ್ಕು ಲಕ್ಷ ರೂಪಾಯಿ ತನಕ ಖರ್ಚು ಮಾಡಲಾಗಿದೆ ಎಂದು ತಿಳಿಸಿರುವ ಆತನ ತಂದೆ ಕೃಷ್ಣಯ್ಯ ಶೆಟ್ಟಿ ಅವರು, ನಾನೊಬ್ಬ ಅಂಗವಿಕಲನಾಗಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಮಗನ ಸ್ಥಿತಿ ಕಂಡು ದಿನನಿತ್ಯ ಮಾನಸಿಕವಾಗಿ ಕೊರಗುತ್ತಿದ್ದೇನೆ ಎಂದರು. ಪ್ರತಿತಿಂಗಳು ಸುಮಾರು ಐದು ಸಾವಿರ ರೂಪಾಯಿ ಆತನ ಔಷಧಿಗೆ ಕಾದಿರಿಸಬೇಕು. ಮೂತ್ರ ಶೇಖರಣ ಪ್ಲಾಸ್ಟಿಕ್ ಚೀಲ ಬದಲಾವಣೆಯನ್ನು ಪ್ರತಿತಿಂಗಳು ಮಾಡಲೇ ಬೇಕು. ಅದಕ್ಕಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಗನಿಗೆ ತಮ್ಮಿಂದಾಗುವ ನೆರವನ್ನು ನೀಡುವಂತೆ ಅವರು ಜಯಕಿರಣ ಮೂಲಕ ಕೋರುತ್ತಿದ್ದಾರೆ. ಬ್ಯಾಂಕ್ ಖಾತೆಯ ನಂಬ್ರ -ಸಿಂಡಿಕೇಟ್ ಬ್ಯಾಂಕ್ ಮುನಿಯಾಲು ಶಾಖೆ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ೦೧೭೦೨೨೦೦೦೩೦೮೩೩

ಬೀಡಿ ಬ್ರಾಂಚ್‌ಗಳಿಗೆ ಸಿಐಟಿಯು ಕಾರ್ಯಕರ್ತೆಯರ ದಾಳಿ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೀಡಿ ಮಜೂರಿ ಏರಿಕೆ ಮಾಡುವಂತೆ ಸಿ.ಐ.ಟಿ.ಯು. ನಡೆಸುತ್ತಿದ್ದ ಮುಷ್ಕರವನ್ನು ಧಿಕ್ಕರಿಸಿದ ಬೀಡಿ ಬ್ರಾಂಚ್‌ಗಳಿಗೆ ಸಿ.ಐ.ಟಿ.ಯು. ಕಾರ್ಯಕರ್ತೆಯರು ನಿನ್ನೆ ದಾಳಿ ನಡೆಸಿದರು.
ಸಾವಿರ ಬೀಡಿಗೆ ೧೧೬.೨೫ರೂ. ಆಗ ಬೇಕೆಂದು ಒತ್ತಾಯಿಸಿ ಬೀಡಿ ಕಾರ್ಮಿ ಕರು ಮೇ.೨೪ರಿಂದ ಸಿಐಟಿಯು ನೇತೃತ್ವದಲ್ಲಿ ಅನಿರ್ದಿಷ್ಠಾವಧಿ ಮುಷ್ಕರ ನಡೆಸುತ್ತಿದ್ದಾರೆ. ಆದರೆ ಗ್ರಾಮೀಣ ಭಾಗಗಳಲ್ಲಿ ಗುತ್ತಿಗೆದಾರರ ಸಹಕಾ ರದಿಂದಾಗಿ ಬೀಡಿ ಉದ್ಯಮ ಎಂದಿ ನಂತೆ ನಡೆಯುತ್ತಿದ್ದ ಕಾರಣ ಈ ಭಾಗದಲ್ಲಿ ಮುಷ್ಕರದ ಬಿಸಿ ತಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಬೆಂಬಲ ನೀಡುವಂತೆ ಸಿ.ಪಿ.ಐ.ಎಂ. ಮುಖಂ ಡರು ಬೀಡಿ ಗುತ್ತಿಗೆದಾರರಲ್ಲಿ ಮನವಿ ಮಾಡಿದ್ದರು.
ಆದರೂ ಅವರು ಮುಖಂಡರ ಮಾತಿಗೆ ಬೆಲೆ ನೀಡದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಪಾವೂರು ಗ್ರಾಮ ದಾದ್ಯಂತ ಕಾರ್ಯಾಚರಣೆ ಆರಂಭಿಸಿದ ಸಿ.ಐ.ಟಿ.ಯು ಕಾರ್ಯ ಕರ್ತೆಯರಾದ ವೇದಾವತಿ, ಗುಲಾಬಿ, ಸುಮತಿ, ಲಲಿತಾ, ಪ್ರೇಮಲತಾ ಮತ್ತು ಅನಿತಾ ಎಂಬವರು ಗ್ರಾಮದಲ್ಲಿರುವ ಎಲ್ಲಾ ಬೀಡಿ ಬ್ರಾಂಚ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿ ಗುತ್ತಿಗೆದಾರರನ್ನು ಎಚ್ಚರಿಸಿದ್ದರು.
ಇದೇ ವೇಳೆ ೧೦-೧೫ ಮಹಿಳೆಯರು ಕಂಬಳಪದವಿನಲ್ಲಿರುವ ಬ್ರಾಂಚ್‌ಗೆ ಬೀಡಿ ತಂದು ಗುತ್ತಿಗೆದಾರ ಮಜೀದ್ ಅವರನ್ನು ಕಾಯುತ್ತಿದ್ದರು. ೧೧ ಗಂಟೆ ವೇಳೆಗೆ ಅಲ್ಲಿಗೆ ಬಂದ ಸಿ.ಐ.ಟಿ.ಯು. ಕಾರ್ಯಕರ್ತೆಯರು ಮಹಿಳೆಯರ ಕೈಯಿಂದ ಬೀಡಿಯಿದ್ದ ಕೈಚೀಲವನ್ನು ಎಳೆದು ರಸ್ತೆಬದಿ ಸುರಿದು ಬೆಂಕಿ ಕೊಡಲು ಮುಂದಾದರು. ಈ ಸಂದರ್ಭ ಅಲ್ಲಿಗೆ ಧಾವಿಸಿದ ಅಕ್ರಂ ಮತ್ತು ವಿಶ್ವನಾಥ ಎಂಬವರು, ಮಹಿಳೆಯರು ಅಹೋರಾತ್ರಿ ಕಷ್ಟಪಟ್ಟು ಕಟ್ಟಿದ ಬೀಡಿಗೆ ಬೆಂಕಿ ಕೊಡಲು ಮುಂದಾದ ಸಿ.ಐ.ಟಿ.ಯು. ಕಾರ್ಯಕರ್ತೆಯರನ್ನು ತರಾಟೆಗೆ ತೆಗೆದುಕೊಂಡಾಗ ಮಾತಿನ ಚಕಮಕಿಯೂ ನಡೆಯಿತು.
ಇದರಿಂದ ಆಕ್ರೋಶಗೊಂಡ ಕಾರ್ಯಕರ್ತೆಯರು ಗುತ್ತಿಗೆದಾರ ಮಜೀದ್‌ನ ಮನೆಗೆ ಹೋದಾಗ ಅಲ್ಲಿ ಅವರು ಇರಲಿಲ್ಲ. ವಾಪಸ್ ಬಂದ ಕಾರ್ಯಕರ್ತೆಯರು ಮತ್ತೆ ಬೀಡಿಗೆ ಬೆಂಕಿ ಕೊಡಲು ಮುಂದಾದರು. ಆ ವೇಳೆ ಮಾಹಿತಿ ತಿಳಿದ ಕೊಣಾಜೆ ಎಸ್.ಐ.ಶಿವಪ್ರಕಾಶ್ ಮತ್ತು ಪಿ.ಸಿ.ಸತೀಶ್ ಸ್ಥಳಕ್ಕೆ ಧಾವಿಸಿ ಗುತ್ತಿಗೆದಾರನಿಗೆ ಕರೆ ಮಾಡಿದರು. ಆ ವೇಳೆ ಗುತ್ತಿಗೆದಾರ ತಾನು ದೂರ ಇರುವುದಾಗಿ ಹೇಳಿದರೂ ಬಿಡದ ಎಸ್.ಐ., ಬಂದ್‌ನ ಕರ್ತವ್ಯದ ಮಧ್ಯೆಯೂ ಗುತ್ತಿಗೆದಾರ ಸ್ಥಳಕ್ಕೆ ಬರುವವರೆಗೆ ಕಾದು ಕುಳಿತರು. ೩೦ ನಿಮಿಷದ ಬಳಿಕ ಗುತ್ತಿಗೆದಾರ ಸ್ಥಳಕ್ಕೆ ಬಂದಿದ್ದು, ಅ ವೇಳೆ ಮುಷ್ಕರ ಮುಗಿಯುವವರೆಗೆ ಬೀಡಿ ತೆಗೆಯದಂತೆ ಎಚ್ಚರಿಸಿದ ಎಸ್.ಐ., ಗುರುವಾರ ಬೀಡಿ ತಂದಿದ್ದ ಮಹಿಳೆಯರಿಗೆ ಅದರ ಮಜೂರಿ ನೀಡುವಂತೆ ಸೂಚಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾದರು.

ಬಿಜೆಪಿಗೆ ಅಪಥ್ಯವಾದರೂ ಆಡ್ವಾಣಿ ಮಾತು ವಾಸ್ತವದ ಪ್ರತಿಬಿಂಬ

Posted by JAYAKIRANA Kirana on | 0 comments | Leave a comment...


ಕಂಡದ್ದನ್ನು ಕಂಡಂತೆ ಹೇಳಿದರೆ ಕೆಂಡದಂತ ಕೋಪ ಎಂಬ ಮಾತು ಈಗ ಬಿಜೆಪಿಗೆ ಸೂಕ್ತವಾಗಿ ಅನ್ವಯವಾಗುತ್ತದೆ. ಆಡ್ವಾಣಿ ಮಾತಿಗೆ ಕ್ಷಿಪ್ರವಾಗಿ ಸ್ಪಂದಿಸಿರುವ ಕೆಲವು ನಾಯಕರು ಆಡ್ವಾಣಿ ವಿರುದ್ಧವೇ ಸಮರ ಸಾರಲು ಹೊರಟಿದ್ದಾರೆಯೇ ಹೊರತು ತಾವು ತಿದ್ದಿಕೊಳ್ಳಲು ಮುಂದಾಗಿಲ್ಲ.

ದೇಶದ ಜನತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದ ರೊಂದಿಗೆ ಬಿಜೆಪಿ ಮೇಲೂ ಅಸಮಾ ಧಾನಗೊಂಡಿದ್ದಾರೆ ಎಂದು ಹೇಳಿ ರುವ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರ ಮಾತು ಪಕ್ಷದಲ್ಲಿ ಸಂಚಲನ ಮೂಡಿಸಿದೆ. ಮುಖಕ್ಕೆ ಹೊಡೆದಂತೆ ನೇರಾನೇರ ಹೇಳಿಕೆ ನೀಡಿರುವ ಆಡ್ವಾಣಿ ಅವರ ಮಾತು ಅಧಿಕಾರ ಪ್ರಿಯ ಮತ್ತು ಭ್ರಷ್ಟಾ ಚಾರ ಆರೋಪದಲ್ಲಿ ಸಿಲುಕಿಕೊಂ ಡಿರುವ ಪಕ್ಷದ ಹಲವು ನಾಯಕರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ. ಈಗಾಗಲೇ ಬಿಜೆಪಿಯಲ್ಲಿ ಮೂಲೆಗೆ ಸರಿದಿರುವ ಆಡ್ವಾಣಿಗೆ ಅವರ ಹೊಸ ಹೇಳಿಕೆ ಮತ್ತಷ್ಟು ಸಂಕಷ್ಟ ತಂದು ಕೊಟ್ಟೀತು. ಆದರೆ ಆಡ್ವಾಣಿ ಅವರ ಮಾತು ದೇಶದ ಜನತೆಯ ಅಭಿಪ್ರಾ ಯದ ಪ್ರತಿಬಿಂಬ ಮತ್ತು ಬಿಜೆಪಿಯ ವಾಸ್ತವ ಸ್ಥಿತಿಯ ದರ್ಶನ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಉತ್ತರಪ್ರದೇಶದಲ್ಲಿ ಭ್ರಷ್ಟಾಚಾರದ ಆರೋಪದಿಂದ ಮಾಯಾವತಿ ಕೈಬಿಟ್ಟಿರುವ ಹಲವು ನಾಯಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಬಿಜೆಪಿ ಆಳ್ವಿಕೆಯಿರುವ ಮತ್ತು ಆಳಿದ್ದ ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲೂ ಭ್ರಷ್ಟಾಚಾರದ ಆರೋಪ ಪಕ್ಷಕ್ಕೆ ಸಾಕಷ್ಟು ಹಾನಿ ಮಾಡಿಕೊಂಡಿದೆ. ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಹೇಳುತ್ತಾ ಮೇಲಿನ ದಾರಿಯಲ್ಲಿ ಸಾಗಿದರೆ ಹೇಗೆ ಎಂದು ಪ್ರಶ್ನಿಸಿರುವ ಆಡ್ವಾಣಿ, ಪಕ್ಷ ಈಗ ನಡೆಯುತ್ತಿರುವ ದಾರಿಯ ಬಗ್ಗೆ, ನಿತಿನ್ ಗಡ್ಕರಿಗೆ ಮತ್ತೊಂದು ಬಾರಿ ಪPಧ್ಯಕ್ಷ ಸ್ಥಾನ ನೀಡಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಅವರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ತೋರಿಸಿದ ಅಸ ಮಾಧಾನ ಎಂದು ವ್ಯಾಖ್ಯಾನಿಸು ವಂತಿಲ್ಲ. ನಿಜವಾಗಿಯೂ ಆಡ್ವಾಣಿ ಎತ್ತಿರುವ ಪ್ರಶ್ನೆ, ನೀಡಿರುವ ಹೇಳಿಕೆ ಯಲ್ಲಿ ಪಕ್ಷದ ಕಾಳಜಿ, ಹಿತದೃಷ್ಟಿ ಅಡ ಗಿದೆ. ಆದರೆ ಅದನ್ನು ಅರ್ಥೈಸಿ ಕೊಳ್ಳುವ ನಾಯಕರು ಮತ್ತು ಮಾರ್ಗ ದರ್ಶಕರ ಕೊರತೆ ಬಿಜೆಪಿಯನ್ನು ಕಾಡುತ್ತಿದೆ ಎಂಬುದು ಆ ಪಕ್ಷದ ದುರಾ ದೃಷ್ಟ ಎಂದೇ ಹೇಳಬೇಕಾಗುತ್ತದೆ.
ಕಂಡದನ್ನು ಕಂಡಂತೆ ಹೇಳಿದರೆ ಕೆಂಡದಂತ ಕೋಪ ಎಂಬ ಮಾತು ಈಗ ಬಿಜೆಪಿಗೆ ಸೂಕ್ತವಾಗಿ ಅನ್ವಯವಾಗುತ್ತದೆ. ಆಡ್ವಾಣಿ ಮಾತಿಗೆ ಕ್ಷಿಪ್ರವಾಗಿ ಸ್ಪಂದಿಸಿ ರುವ ಕೆಲವು ನಾಯಕರು ಆಡ್ವಾಣಿ ವಿರುದ್ಧವೇ ಸಮರ ಸಾರಲು ಹೊರಟಿ ದ್ದಾರೆಯೇ ಹೊರತು ತಾವು ತಿದ್ದಿ ಕೊಳ್ಳಲು ಮುಂದಾಗಿಲ್ಲ. ಕರ್ನಾಟಕದ ಬಿಜೆಪಿ ಅಧ್ಯಕ್ಷ ಈಶ್ವರಪ್ಪರಂತೂ ಆಡ್ವಾಣಿ ಮೇಲೂ ಹವಾಲಾ ಆರೋಪ ಇತ್ತು ಹೇಳುವ ಮೂಲಕ ತನ್ನ ಬಂಡವಾಳ ಇಷ್ಟೇ ಎಂದು ತೋರಿಸಿಕೊಟ್ಟಿದ್ದಾರೆ. ಆ ಈಶ್ವರಪ್ಪರಿಗೆ ಆಡ್ವಾಣಿ ಮೇಲೆ ಹವಾಲಾ ಆರೋಪ ಬಂದದ್ದು ಮಾತ್ರವೇ ಗೊತ್ತಾಗಿದೆಯೇ ಹೊರತು, ಅವರು ಆರೋಪಮುಕ್ತನಾಗುವವರೆಗೆ ಸಂಸತ್ತು ಪ್ರವೇಶಿಸುವುದಿಲ್ಲ ಎಂದು ಹೇಳಿದ್ದು ಗೊತ್ತಿಲ್ಲವೋ? ಗೊತ್ತಿದ್ದರೆ ಆಡ್ವಾಣಿ ತುಳಿದಿರುವ ದಾರಿಯನ್ನು ಭ್ರಷ್ಟಾಚಾರದ ಆರೋಪ ಹೊತ್ತಿರುವ ಕರ್ನಾಟಕದ ಎಷ್ಟು ಬಿಜೆಪಿ ನಾಯಕರು ಅನುಕರಿಸಿದ್ದಾರೆ ಎಂದು ಹೇಳಬೇಕಲ್ಲಾ?
ಬಿಜೆಪಿಯಲ್ಲಿ ಆಡ್ವಾಣಿ ಹಿಡಿತ ಮತ್ತು ಪ್ರತಿಷ್ಠೆ ಕಡಿಮೆಯಾಗಿದೆ. ಜತೆಗೆ ಅವರ ಜತೆ ಗುರುತಿಸಿಕೊಂಡಿರುವ ಮತ್ತು ಒಂದು ಹಿರಿಯ ತಲೆಮಾರಿನ ನಾಯಕರಾದ ಅರುಣ್ ಜೇತ್ಲೀ, ರಾಜ ನಾಥ ಸಿಂಗ್, ಸುಷ್ಮಾ ಸ್ವರಾಜ್, ಜಸ್ವಂತ್ ಸಿಂಗ್ ಮುಂತಾದ ಪ್ರಭಾವಿ ನಾಯಕರೂ ನಿಧಾನವಾಗಿ ಮೂಲೆಗುಂ ಪಾಗುತ್ತಿದ್ದಾರೆ. ಉಕ್ಕಿನ ಮನುಷ್ಯ, ರಥ ಯಾತ್ರೆಯ ಹರಿಕಾರ ಮುಂತಾದ ವಿಶೇಷತೆಗಳಿಂದ ಗುರುತಿಸಿಕೊಂಡಿ ರುವ ಆಡ್ವಾಣಿಯನ್ನು ಮೂಲೆಗುಂಪು ಮಾಡಿ ಬಿಜೆಪಿ ಏನು ಸಾಧಿಸಲಿದೆಯೋ? ಆಡ್ವಾಣಿ ಹಿತವಚನವೇ ಪಕ್ಷಕ್ಕೆ ಬೇಡವೆಂದಾದರೆ, ತನ್ನ ಹಿಂದಿನ ಅವಧಿಯಲ್ಲಿ ಕಾರ್ಯಕರ್ತರ ಮೇಲೆ, ಮತದಾರರ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಾಗದೇ ಇರುವ ನಿತಿನ್ ಗಡ್ಕರಿಯೇ ಪವಾಡಪುರುಷನಾಗಿ ಕಂಡು ಬಂದರೆ ಬಿಜೆಪಿಯ ಕಣ್ಣಿಗೆ ಕಾಮಾಲೆ ಬಡಿದಿದೆ ಎಂದೇ ಅರ್ಥ!
ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿ ಬಗ್ಗೆ ಮತದಾರರಲ್ಲಿ ಒಂದು ಅಭಿ ಪ್ರಾಯ ಸಂಗ್ರಹ ಮಾಡಿದರೆ ಅಲ್ಲಿ ಆಡ್ವಾಣಿ ಮಾತು ಎಷ್ಟು ಸರಿ ಎಂಬುದು ಸಾಬೀತಾದೀತು. ಆದರೆ ಅಂಥ ಧೈರ್ಯ ಬಿಜೆಪಿ ನಾಯಕರಿಗೆ ಇದೆಯೇ? ನಾವು ಎಲ್ಲರಂತಲ್ಲ ಎಂದು ಹೇಳುತ್ತಲೇ ಮತ ಯಾಚಿಸುತ್ತಿದ್ದ ಬಿಜೆಪಿ ಈಗ ಹತ್ತರೊಂದಿಗೆ ಹನ್ನೊಂದಾಗಿದೆ. ಇದೇ ರೀತಿ ಮುಂದುವರಿದರೆ, ಒಳಜಗಳ ಶಮನಗೊಳಿಸದಿದ್ದರೆ, ಮೋದಿ-ನಿತಿನ್‌ಗೇ ಮಣೆ ಹಾಕಿ ಕಾದರೆ ಮುಂದಿನ ಚುನಾವಣೆಯಲ್ಲಿ ದಿಲ್ಲಿಯ ಸಿಂಹಾಸನ ಏರುವುದು ಕನಸಾಗಿಯೇ ಉಳಿಯಲಿದೆ.
ಆಡ್ವಾಣಿ ಕೈಯಲ್ಲಿ ಈಗ ಅಧಿಕಾರ ಇರುತ್ತಿದ್ದರೆ ಕರ್ನಾಟಕದ ಗೊಂದಲ ಗಳಿಗೆ ಯಾವತ್ತೋ ಒಂದು ಪರಿಹಾರ ಸಿಗುತ್ತಿತ್ತು. ಅಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಇರುತ್ತಿರಲಿಲ್ಲ. ಅಲ್ಲಿ ಪಕ್ಷದ ಶಿಸ್ತು ಮತ್ತು ಭ್ರಷ್ಟಾಚಾರದ ವಿಷಯಕ್ಕೆ ಆದ್ಯತೆ ನೀಡಲಾಗುತ್ತಿತ್ತು. ಆದರೆ ನಿತಿನ್ ಗಡ್ಕರಿ ಕರ್ನಾಟಕದ ಭ್ರಷ್ಟ ಬಿಜೆಪಿ ನಾಯಕರ ಜತೆ ಉಂಡುಹೋಗುತ್ತಿ ದ್ದಾರೆ, ಅವರಿಂದ ಉಡುಗೊರೆ ಪಡೆದು ಕೊಳ್ಳುತ್ತಾರೆ. ಗೊಂದಲಗಳನ್ನು ಮುಂದುವರಿಸುತ್ತಾ ಕಾರ್ಯಕರ್ತರೇ ಪಕ್ಷದ ಮೇಲೆ ಜಿಗುಪ್ಸೆ ಮೂಡಿಸಿ ಕೊಳ್ಳುವಂತೆ ಮಾಡುತ್ತಿದ್ದಾರೆ. ಇಂಥ ನಾಯಕನಿಂದ ಬಿಜೆಪಿಯನ್ನು ಮುನ್ನಡೆಸಿ ದಿಲ್ಲಿ ಗದ್ದುಗೆಗೆ ಏರಿಸುವುದು ಸಾಧ್ಯ ಎಂಬುದು ಅನುಮಾನದ ಸಂಗತಿ.
ನಿತಿನ್ ಗಡ್ಕರಿ ಮನೆಯಲ್ಲಿ ಬಂದು ಪರಾಮರ್ಶೆ ನಡೆಯು ವುದ ಕ್ಕಿಂತ ಮೊದಲು ಪಕ್ಷದ ಗೊಂದ ಲಗಳನ್ನು ಬಗೆಹರಿಸುವ ಬಗ್ಗೆ, ಪಕ್ಷಕ್ಕೆ ಆಗುತ್ತಿರುವ ಹಾನಿಯನ್ನು ಕಡಿಮೆ ಮಾಡುವ ವಿಷಯಕ್ಕೆ ಸಂಬಂಧಿಸಿ ಚರ್ಚೆ ನಡೆಯ ಬೇಕಿತ್ತು. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರುವ ಮೊದಲು ನಿತಿನ್ ಗಡ್ಕರಿ ಎಂದರೆ ಯಾರು ಎಂಬುದೇ ಮಹಾರಾಷ್ಟ್ರ ಹೊರತು ಪಡಿಸಿದ ಬಿಜೆಪಿ ಕಾರ್ಯ ಕರ್ತರಿಗೆ ಗೊತ್ತಿ ರಲಿಲ್ಲ. ಇದೀಗ ಅಂಥ ಗಡ್ಕರಿ ಆಡ್ವಾಣಿ ಯಂಥ ನಾಯಕರನ್ನು ಮೂಲೆಗೆ ಸರಿ ಸಲು ಶ್ರಮಿಸುವುದೆಂದರೆ ಅದು ಬಿಜೆ ಪಿಯ ಅಧಪತನದ ಲಕ್ಷಣ ಎಂದಲ್ಲದೆ ಬೇರೆ ಏನೆಂದು ಹೇಳಬೇಕು?

ಶಿಕ್ಷಣದ ತೇರ ಎಳೆಯೋಣ ಬಾರಾ, ಇದು ಕಲಿಯಲು ಬಂದವರ ದಿಬ್ಬಣ

Posted by JAYAKIRANA Kirana on | 0 comments | Leave a comment...

ಸುರತ್ಕಲ್ : ಶಾಲೆ ಆರಂಭದ ದಿನದಲ್ಲಿ ಹೊಸ ಬ್ಯಾಗು, ಹೊಸ ಪುಸ್ತಕ, ಹೊಸ ಕೊಡೆ, ಹೋಸ ಸಮವಸ್ತ್ರ ಇವುಗಳನ್ನು ಪ್ರದರ್ಶಿಸುವ ತವಕದಲ್ಲಿ ಅವಧಿಗಿಂತ ಮುನ್ನವೇ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಆ ಒಂದು ದಿನ ಒಂದೇ ವಾರದಲ್ಲಿ ಮರೆತು ಹೋಗ ಬಹುದು ಮಕ್ಕಳ ಉಲ್ಲಾಸ ಪ್ರದರ್ಶನಕ್ಕೆ ಸೀಮಿತವಾಗ ಬಹುದು. ಆದರೆ ಇವೆಲ್ಲಕ್ಕೆ ಅಪವಾದ ಎನ್ನುವಂತೆ ಶಾಲೆಗೆ ಬರುವ ಹೊಸ ಮಕ್ಕಳನ್ನು ತೇರಲ್ಲಿ ಕೂರಿಸಿ ದಿಬ್ಬಣದಲ್ಲಿ ಕರೆತರುವ ಮೂಲಕ ಶಾಲೆಯ ಆರಂಭಕ್ಕೆ ಕ್ರಿಯಾತ್ಮಕತೆಯನ್ನು ವಿದ್ಯಾ ಮಾನ ವೊಂದು ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಇದು ಕುಳಾಯಿ ವೆಂಕಟರಣ ಹಿರಿಯ ಪ್ರಾಥಮಿಕ ಶಾಲೆಯ ಈ ವರುಷದ ಪ್ರಥಮ ಹೈಲೆಟ್ಸ್ ಸದಾ ಒಂದಲ್ಲೊಂದು ಕ್ರಿಯಾ ಶೀಲತೆಯ ಚಟುವಟಿಕೆ ಗಳನ್ನು ನಡೆಸುತ್ತಾ ವಿದ್ಯಾರ್ಥಿಗಳಲ್ಲಿ ಶಾಲೆಯ ಬಗ್ಗೆ ಹೊಸ ಕನಸ್ಸು ಚಿಗುರುವಂತೆ ಮಾಡುವ ಮೂಲಕ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಕನ್ನಡ ಮಾಧ್ಯಮ ಶಾಲೆಯತ್ತ ಆಕರ್ಷಿಸುವ ಕೆಲಸವನ್ನು ಕುಳಾಯಿ ವೆಂಕಟರಮಣ ಶಾಲೆ ಮಾಡುತ್ತಾ ಬಂದಿದೆ. ಅವರ ಈ ಸಾಧನೆಗೆ ಈ ವರುಷದ ಸೇರ್ಪಡೆ ಶಿಕ್ಷಣದ ತೇರ ಎಳೆಯೋಣ ಬಾರಾ ಎನ್ನುವ ಕಾರ್ಯಕ್ರಮ.
ಒಂದನೇ ತರಗತಿಗೆ ಪ್ರವೇಶ ಪಡೆದ ೪೦ ಮಂದಿ ವಿದ್ಯಾರ್ಥಿಗಳನ್ನು ತೇರಲ್ಲಿ ಕುಳ್ಳಿರಿಸಿ ಅದನ್ನು ಸಿಂಗರಿಸಿ ದೇವಸ್ಥಾನದಲ್ಲಿ ದೇವರ ತೇರನ್ನು ಎಳೆಯುವ ಮಾದರಿಯಲ್ಲೇ ಈ ತೇರನ್ನು ಎಳೆದು ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸಲಾಯಿತು. ತೇರಲ್ಲಿರುವ ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಏಳನೇ ತರಗತಿಯ ವಿದ್ಯಾರ್ಥಿಗಳು ಎಳೆದರೆ ಶಿಕ್ಷಕರು ಆರ್ಶೀವಾದದ ಹೂ ಪನ್ನೀರನ್ನು ಚೆಲ್ಲಿ ಮಕ್ಕಳನ್ನು ಸ್ವಾಗತಿಸಿದರು. ಶಾಲಾ ಆವರಣದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಒಂದು ಕಿ.ಮಿ ಸಾಗಿದ ಈ ತೇರು ಹೆತ್ತವರಲ್ಲೂ ಮಕ್ಕಳಲ್ಲೂ ಹೊಸ ಚೈತನ್ಯವನ್ನೇ ತುಂಬಿಸಿದೆ. ತೇರು ಶಾಲಾ ಆವರಣ ಪ್ರವೇಶಿಸುತ್ತಿರುವಂತೆ ಇತರ ವಿದ್ಯಾರ್ಥಿಗಳು ಮತ್ತು ಹೆತ್ತವರು ಹಾಕಿದ ಜಯಕಾರದಿಂದಾಗಿ ಶಾಲಾ ಆವರಣ ದೇವಸ್ಥಾನದಂತಾಗಿತ್ತು.
ವಿದ್ಯಾರ್ಥಿಗಳ ಮೆರವಣಿಗೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಲಾಯಿತು.
ಸಭಾಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿಕೊಂಡಿದ್ದ ಗಿರಿಧರ ಅತ್ವಾರ್ ಇವರು ಮಾತನಾಡಿ ಶಿಕ್ಷಣದ ಜೊತೆ ಕ್ರಿಯಾಶೀಲತೆಯನ್ನು ತುಂಬಿದಾಗ ಮಾತ್ರ ವಿದ್ಯಾರ್ಥಿ ಪರಿ ಪೂರ್ಣ ಶಿಕ್ಷಣ ಪಡೆಯಲು ಸಾಧ್ಯ ಆ ಪ್ರಯತ್ನ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ನಡೆದಿದೆ. ಇದು ಶ್ಲಾಘ ನೀಯ ಕಾರ್ಯ ಎಂದರು.
ಡಿಆರ್‌ಪಿ ನಳಿನಾಕ್ಷಿ ವಿದ್ಯಾರ್ಥಿ ಗಳಿಗೆ ಸಮವಸ್ತ್ರ ವಿತರಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯರಾಮ್ ಆಚಾರ್ಯ ಉಪಾಧ್ಯಕ್ಷೆ ಶ್ರೀಮತಿ ಕವಿತಾ, ಎಂ ವೆಂಕಟರಾವ್, ಉದ್ಯಮಿ ಶ್ರೀನಾಥ್, ವಂಶಿ, ಹಾಗೂ ಶಾಲಾ ಮುಖ್ಯ ಶಿಕ್ಷಕ ಕೆ.ಕೆ ಪೇಜಾವರ ಉಪಸ್ಥಿತರಿದ್ದರು.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4067) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2514) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (150) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3688) lokayukta (3) madikeri (1) maleria (1) mangalore (593) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (419) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (805) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (953) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)