ಹಿಂದೂ ಸಂಘಟನೆಗಳು ‘ಕಠಾರಿವೀರ ಸುರಸುಂದರಾಂಗಿ’ ಎನ್ನುವ ಚಿತ್ರದ ವಿರುದ್ಧ ಸಮರ ಸಾರಿವೆ. ಏನೇ ಆಗಲಿ, ಪ್ರದರ್ಶನ ನಡೆ ಯಲು ಬಿಡುವುದಿಲ್ಲ ಎಂದು ಕೆಲವು ಕಾವಿಧಾರಿ ಗಳು ಹೇಳಿದ ಬಳಿಕವೂ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೂ ಬೆನ್ನು ಬಿಡದ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿವಿಧ ಠಾಣೆಗಳಿಗೆ ಚಿತ್ರವನ್ನು ಪ್ರದರ್ಶಿಸಲು ಬಿಡಬೇಡಿ ಎಂದು ದೂರು ಕೊಡುತ್ತಿದ್ದಾರೆ. ಇದನ್ನು ತಪ್ಪಲ್ಲ ಎನ್ನಬಹುದಾದರೂ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇದ ಕ್ಕಿಂತ ಜ್ವಲಂತ ಸಮಸ್ಯೆಗಳು ಇನ್ನೂ ಬೇಕಾದ ಷ್ಟಿವೆ. ಹಿಂದೂ ದೇವತೆಗಳಿಗೆ ಅವಮಾನವಾಗು ವುದನ್ನು ಖಂಡಿಸಬೇಕು ನಿಜ. ಆದರೆ ಇನ್ನು ಕೆಲವೇ ಸಮಯದಲ್ಲಿ ನಮ್ಮ ಭೂಮಿಯೇ ವಿದೇಶಿ ಕಂಪೆನಿಗಳ ಪಾಲಾಗಲಿವೆ. ಇದನ್ನು ವಿರೋಧಿ ಸುವವರಾರು? ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ನಾಗಾರ್ಜುನ ಎನ್ನುವ ರಕ್ತಬೀಜಾಸುರ ಅವ ತಾರವೆತ್ತಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಝ್ ಎನ್ನುವ ವಿಷವರ್ತುಲ ಜನರನ್ನು ಅಪೋಶನ ತೆಗೆದುಕೊಳ್ಳಲು ತಯಾರಾಗಿದೆ. ಈಗಾಗಲೇ ಸಾವಿರಾರು ಎಕರೆಯಷ್ಟು ಕೃಷಿಭೂಮಿ ನಾಶ ವಾಗಿದೆ. ಜನರು ಗುಳೇ ಹೋಗಿದ್ದಾರೆ. ಮಠ-ಮಂದಿರಗಳು ಕೆಡವಲ್ಪಟ್ಟಿವೆ. ಇದರ ಬಗ್ಗೆ ಜಿಲ್ಲೆಯ ಹಿಂದೂ ಸಂಘಟನೆಗಳಿಗೆ ಕಾಳ ಜಿಯೇ ಇಲ್ಲ.
ಯಾಕೆಂದರೆ ಸೆಝ್ ಇರಲಿ, ಇನ್ನಿತರ ಬೃಹತ್ ಕಂಪೆನಿಗಳಿರಲಿ ಇದನ್ನು ಜಿಲ್ಲೆಗೆ ತಂದ ವರು ಇವರನ್ನು ಸಾಕಿ ಸಲಹುತ್ತಿರುವವರು ಕೇಸರಿ ಪಕ್ಷವೇ ತಾನೇ? ಹೀಗಾಗಿ ಹಿಂದೂ ಸಂಘಟನೆಗಳು ಇಂಥ ಸಮಸ್ಯೆಗಳ ವಿರುದ್ಧ ಹೋರಾಡಿ ಜನರಿಗೆ ನ್ಯಾಯ ಕೊಡಿಸುವು ದನ್ನು ಬಿಟ್ಟು ಯಾವುದೋ ಪ್ರಯೋಜನಕ್ಕೆ ಬಾರದ ಸಿನಿಮಾದ ವಿರುದ್ಧ ಹೋರಾಡು ವುದು ನಾಚಿಕೆಗೇಡಿನ ವರ್ತನೆಯೇ ಸರಿ.
ದೇಶಭಕ್ತ, ಉಳ್ಳಾಲ
ಗಲ್ಲಿ ಕ್ರಿಕೆಟ್ನಲ್ಲಿ ಮಕ್ಕಳ ಜೂಜಾಟವನ್ನು ನಿಲ್ಲಿಸಿ
ಮಕ್ಕಳು ಕ್ರಿಕೆಟ್ ಆಡುವುದು ಸಾಮಾನ್ಯ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಮಕ್ಕಳು ಗಲ್ಲಿ ಕ್ರಿಕೆಟ್ನ ನೆಪದಲ್ಲಿ ಹಣವಿಟ್ಟು ಪಂದ್ಯಾಟ ವಾಡುವಲ್ಲಿ ತೊಡಗಿದ್ದಾರೆ. ನಗರ ಪ್ರದೇಶವನ್ನು ಬಿಟ್ಟು ಹಳ್ಳಿ ಪ್ರದೇಶಗಳತ್ತ ತೆರಳಿದರೆ ಇಂತಹ ಅದೆಷ್ಟೋ ಗಲ್ಲಿ ಕ್ರಿಕೆಟ್ನ ಚಿತ್ರಣ ದೊರೆಯು ತ್ತದೆ. ಇನ್ನೂ ಮೀಸೆ ಚಿಗುರದ ಸಣ್ಣ ಸಣ್ಣ ಮಕ್ಕಳು ಮೈದಾನದ ಶುಲ್ಕ ಪಡೆದು ಕ್ರಿಕೆಟ್ ಪಂದ್ಯಗಳನ್ನು ನಡೆಸುತ್ತಿದ್ದಾರೆ. ನೂರರಿಂದ ಇನ್ನೂರು ರುಪಾಯಿವರೆಗೆ ಪಡೆದು ಸಾವಿರ ರುಪಾಯಿಯವರೆಗೆ ಬಹುಮಾನವಿಟ್ಟು ಮಕ್ಕಳ ಸಾರಥ್ಯದಲ್ಲೇ ಕ್ರಿಕೆಟ್ ಪಂದ್ಯಾಟಗಳು ನಡೆ ಯುತ್ತಿವೆ. ಈ ವೇಳೆ ಹಣದ ವಿಚಾರವಾಗಿ ಮಕ್ಕಳು ಹೊಡೆದಾಡಿಕೊಳ್ಳುವ ಘಟನೆಗಳೂ ನಡೆಯುತ್ತಿವೆ. ಭಾನುವಾರ ಹೆಚ್ಚಾಗಿ ಈ ರೀತಿಯ ಪಂದ್ಯಾಟಗಳು ನಡೆಯುತ್ತಿರುವ ಕಾರಣ ಸಾಕಷ್ಟು ಮಕ್ಕಳು ಇದರಲ್ಲಿ ಭಾಗವಹಿಸುತ್ತಾರೆ. ಕೆಲ ವೊಂದು ವೇಳೆ ದೊಡ್ಡವರು ಕೂಡ ಮಕ್ಕಳ ಈ ಜೂಜಾಟಕ್ಕೆ ಸಾಥ್ ನೀಡುತ್ತಿದ್ದು, ಗಲಾಟೆ ಎದ್ದಾಗ ಮಾತ್ರ ಅಲ್ಲಿಂದ ಕಾಲ್ಕೀಳುತ್ತಾರೆ. ಇನ್ನಾ ದರೂ ಸ್ಥಳೀಯ ಪೊಲೀಸರು ಇತ್ತ ಗಮನ ಹರಿಸಿ ಈ ರೀತಿಯ ಜೂಜಾಟದ ಗಲ್ಲಿ ಕ್ರಿಕೆಟ್ ಗಳತ್ತ ಗಮನ ಹರಿಸಲಿ.
ಇಸ್ಮಾಯಿಲ್, ತೊಕ್ಕೊಟ್ಟು
ಲೈಟ್ಹೌಸ್ ಬಸ್ ನಿಲ್ದಾಣ ಕುಸಿಯಲಿದೆ!
ಹಳೆಯಂಗಡಿ ಸಮೀಪದ ಲೈಟ್ ಹೌಸ್-ತೋಕೂರು ರಸ್ತೆಯ ಬದಿ ಬಸ್ ತಂಗುದಾಣವೊಂದಿದೆ. ಸ್ಥಳೀಯ ಸಂಘ ಟನೆ ಪಂಚಾಯತ್ ಸಹಯೋಗದೊಂ ದಿಗೆ ಹಲವು ವರ್ಷಗಳ ಹಿಂದೆ ಇದನ್ನು ನಿರ್ಮಿಸಿದೆ. ಇದು ಬಸ್ ಕಾಯುವ ಜನ ರಿಗೆ ಬಿಸಿಲು, ಮಳೆಯಿಂದ ಆಶ್ರಯ ನೀಡುತ್ತಿತ್ತು. ಆದರೆ ಈಗ ಬಸ್ ನಿಲ್ದಾಣದ ಮೇಲಿನ ಸೂರು ಕುಸಿಯುವ ಹಂತಕ್ಕೆ ತಲುಪಿದೆ. ಕಬ್ಬಿಣದ ಬೀಮ್ಗಳು ತುಕ್ಕು ಹಿಡಿದು ಮುರಿಯಲ್ಪಟ್ಟಿವೆ. ಸಿಮೆಂಟ್ ಸ್ಲ್ಯಾಬ್ನಲ್ಲೂ ಬಿರುಕು ಕಾಣಿಸಿಕೊಂಡಿದ್ದು ಮಳೆಗಾಲದಲ್ಲಿ ಇದು ಕುಸಿಯುವ ಸೂಚನೆ ನೀಡುತ್ತಿದೆ. ಸಂಬಂಧಪಟ್ಟ ಪಂಚಾಯತ್ ಈ ಬಗ್ಗೆ ತಕ್ಷಣ ಗಮನಿ ಸಬೇಕು. ಈಗಲೂ ಬಸ್ ಪ್ರಯಾಣಿಕರು ಇದರಡಿ ನಿಂತು ಬಸ್ ಕಾಯುತ್ತಾರೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಸಂಬಂಧಪಟ್ಟವರೇ ಹೊಣೆ ಹೊರ ಬೇಕಾ ಗುತ್ತದೆ. ಆದ್ದರಿಂದ ಇದನ್ನು ಒಡೆದು ತೆಗೆ ಯುವುದು ಇಲ್ಲವೇ ಬಸ್ ತಂಗುದಾ ಣಕ್ಕೆ ಪ್ರವೇಶ ನಿರ್ಬಂಧಿಸುವುದು ಒಳಿತು. ಇಲ್ಲಿ ಸಾರ್ವಜನಿಕರ ಸಹಕಾರದಿಂದ ಹೊಸ ಬಸ್ ತಂಗುದಾಣ ನಿರ್ಮಿಸಲು ಸ್ಥಳೀಯಾಡಳಿತ ಮುಂದಾಗಲಿ.
ಓರ್ವ ನಾಗರಿಕ, ಹಳೆಯಂಗಡಿ
ಆಂಬ್ಯುಲೆನ್ಸ್ಗಳ ಸ್ಥಿತಿ ಹೀಗೇಕೆ?
ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಆಂಬ್ಯುಲೆನ್ಸ್ಗಳು ಜನರಿಗೆ ಸಕಾಲದಲ್ಲಿ ನೆರವಾದ ಉದಾ ಹರಣೆಗಳೇ ಇಲ್ಲವೆನ್ನಬಹುದು. ತುರ್ತು ಸಂದರ್ಭ ಇಲ್ಲಿಗೆ ಕರೆ ಮಾಡಿದರೆ, ಆಂಬ್ಯುಲೆನ್ಸ್ ಸರಿಯಿಲ್ಲ, ಚಾಲಕರು ಇಲ್ಲ, ಟೈರ್ ಪಂಕ್ಚರ್ ಆಗಿದೆ ಎಂಬ ಉತ್ತರ ಸಾಮಾನ್ಯವಾ ಗಿದೆ.
ವೆನ್ಲಾಕ್ ಆಸ್ಪ ತ್ರೆಯ ವಠಾರದಲ್ಲಿ ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳು ಉದಾರ ದಾನವಾಗಿ ಕೊಡಮಾಡಿದ ಹತ್ತಾರು ಆಂಬ್ಯು ಲೆನ್ಸ್ಗಳು ಪಾಳು ಬಿದ್ದಿವೆ. ಕೆಲವಂತೂ ಗುಜರಿಗೂ ಲಾಯ ಕ್ಕಿಲ್ಲದೆ ತುಕ್ಕು ಹಿಡಿದಿದೆ. ಈ ಬಗ್ಗೆ ಸಂಬಂಧಪಟ್ಟವರು ಕಣ್ತೆರೆದು ನೋಡಿಲ್ಲವೆಂದೇ ತೋರುತ್ತಿದೆ. ಸರಕಾರಿ ಆಸ್ಪ ತ್ರೆಯಲ್ಲಿನ ಆಂಬ್ಯುಲೆನ್ಸ್ಗಳನ್ನು ಇನ್ನಾದರೂ ಸುಸ್ಥಿತಿಯ ಲ್ಲಿಡುವ ಮೂಲಕ ಜನರ ಸಮಸ್ಯೆಗೆ ವೆನ್ಲಾಕ್ ಆಡಳಿತ ಸ್ಪಂದಿಸುವುದೇ?
ಕೀರ್ತನ್, ನೀರ್ಮಾರ್ಗ
ಅನ್ಲೈನ್ ಅರ್ಜಿದಾರರೇ ಎಚ್ಚರಿಕೆ
ರಾಜ್ಯ ರಾಜಕೀಯದ ಭ್ರಷ್ಟಾಚಾರದ ಸಾಲಿಗೆ ಇನ್ನೊಂದು ಸೇರ್ಪಡೆ ಎಂದರೆ ಬ್ಯಾಂಕ್ ನೇಮಕಾತಿ ಪರೀಕ್ಷೆ. ಅನ್ಲೈನ್ ಅರ್ಜಿ, ಪರೀಕ್ಷಾ ಶುಲ್ಕ, ಸೇವಾಶುಲ್ಕವೆಂದು ವಿದ್ಯಾರ್ಥಿಗಳನ್ನು-ನಿರುದ್ಯೋಗಿಗಳನ್ನು ಲೂಟಿ ಮಾಡುವ ಹಗಲು ದರೋಡೆಗೆ ಸಂಬಂಧಪಟ್ಟ ಕಾನೂನು ಇಲಾಖೆ ಕಡಿವಾಣ ಹಾಕಬೇಕಾಗಿದೆ. ಪರೀಕ್ಷೆಗೆ ಪೂರ್ವ ತಯಾರಿ, ತರಬೇತಿಗೆಂದು ನಾಯಿಕೊಡೆಗಳಂತೆ ಹಲವಾರು ತರಬೇತಿ ಸಂಸ್ಥೆಗಳು ಹುಟ್ಟಿಕೊಂ ಡಿದ್ದು, ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಗಳ ಶೋಷಣೆಯಲ್ಲಿ ತೊಡಗಿವೆ.
ಶಾಲಾ-ಕಾಲೇಜು ಪರೀಕ್ಷೆ ಸಂಕಟದಲ್ಲಿ ಹೆತ್ತವರ ನಿರೀಕ್ಷೆಯನ್ನು ಸಾಧಿಸುವಲ್ಲಿ ಆಶಾ ಭಂಗವಾಗಿ ಮಾನಸಿಕ ಖಿನ್ನತೆಯಿಂದ ಎಷ್ಟೋ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರ ಣಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದುದರಿಂದ ವಿದ್ಯಾರ್ಥಿಗಳೇ, ನಿರುದ್ಯೋಗಿ ಗಳೇ, ಖಾಸಗಿ ನೌಕರರೇ, ಇನ್ನಾದರೂ ಎಚ್ಚೆ ತ್ತುಕೊಳ್ಳಿ. ಅನ್ಯಾಯದ ವಿರುದ್ಧ ಸಂಘಟಿತರಾಗಿ ಶೋಷಣೆ, ಸುಲಿಗೆಯಂತಹ ಭ್ರಷ್ಟ ಅವ್ಯವಸ್ಥೆ ಯನ್ನು ಕಿತ್ತೊಗೆಯಲು ಸನ್ನದ್ಧರಾಗಿ, ಸ್ವಚ್ಛ ವ್ಯವಸ್ಥೆಯನ್ನು ಹೊಂದುವ ನಮ್ಮ ಹಕ್ಕುನ್ನು ಪ್ರತಿಪಾದಿಸೋಣ.
ಪಿ.ಆರ್., ಸಫಲಿಗ
ತಾಲೂಕು ಕಚೇರಿಯಲ್ಲೊಂದು ಮಾಫಿಯಾ!
ಮಂಗಳೂರು ತಾಲೂಕು ಕಚೇರಿಯಲ್ಲಿ ಪಹಣಿ ತಿದ್ದುಪಡಿ ಶಾಖೆ ಆ.ಅ.ಖ. ಮತ್ತು ಹಾಗೂ ಖ.ಖ.ಖಿ.ಅ.ಖ ಶಾಖೆ ಯಾ ಪ್ರಥಮ ದರ್ಜೆಯ ಹಾಗೂ ದ್ವಿತೀಯ ದರ್ಜೆಯ ನೌಕರರು ಬ್ರೋಕರ್ಗಳ (ಏಜೆಂಟ್)ಜೊತೆ ಶಾಮೀಲಾ ಗಿದ್ದಾರೆ. ಇವರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು, ಲಂಚ ಕೊಡುವ ವ್ಯಕ್ತಿಗಳಿಗೆ ಮಾತ್ರ ಬೇಗ ಅರ್ಜಿ ವಿಲೇವಾರಿ ಆಗುತ್ತದೆ. ಇದರಿಂದ ದೂರದಿಂದ ಬರುವ ಅರ್ಜಿದಾರರೂ ಲಂಚ ಕೊಡುವ ಅನಿವಾರ್ಯತೆ ಬಂದೊದಗಿದೆ. ಕರ್ನಾಟಕದಲ್ಲಿ ನಾಗರಿಕ ಸೇವಾ ಖಾತರಿ ಯೋಜನೆ ಜಾರಿಯಲ್ಲಿದ್ದೂ ಪ್ರಯೋ ಜನ ಆಗಿಲ್ಲ. ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ನೊಂದಾವಣಿ ಅದ ಮೇಲೆ, ಮಂಗಳೂರು ತಾಲೂಕು ಕಚೇರಿಯಲ್ಲಿ ಪಹಣಿ ಪ್ರತಿಗೆ ಚೆಕ್ ಲಿಸ್ಟ್ಟ್ ತೆಗೆಯು ವಾಗ, ಲಂಚ ಪಡೆಯುವ ಸಲುವಾಗಿ ತಪ್ಪಾಗಿ ಹೆಸರು ನಮೂದನೆ ಕಾರ್ಯ ಭೂಮಿ ಶಾಖೆಯ ನೌಕರರು ಮಾಡುತ್ತಿದ್ದು, ಇದರಿಂದ ತಿಂಗಳುಗಟ್ಟಳೆ ತಾಲೂಕು ಕಛೇರಿಯನ್ನು ಅಲೆದಾಡುವ ಸಂದರ್ಭ ಅರ್ಜಿದಾರರಿಗೆ ಒದಗಿ ಬರುತ್ತದೆ. ಇದಕ್ಕೆ ಇಲಾಖೆ ಕೊಟ್ಟ ಹೆಸರು ಡಿ.ಸಿ.ಅರ್ ಶಾಖೆ. ಸರಕಾರಿ ನೌಕ ರರು ತಪ್ಪು ಮಾಡಿದರೆ ಬಡ ಅರ್ಜಿದಾರರು ಪರದಾಡುವಂತಹ ಕಾರ್ಯ ನಡೆ ಯುತ್ತದೆ. ಇದನ್ನು ಸರಿ ಮಾಡಲು ತಿಂಗಳು ಗಟ್ಟಲೆ ಕಾಲ ವ್ಯಯಿಸುತ್ತಾರೆ. ಇದೊಂದು ತಾಲೂಕು ಕಛೇರಿಯಲ್ಲಿರುವ ದೊಡ್ಡ ಮಾಫಿಯಾ. ಇಂತಹ ಪ್ರಕ ರಣಗಳು ಎಷ್ಟ್ಟಿವೆ? ಎಂದು ಸರಕಾರ ತನಿಖೆ ಮಾಡಿ ಪತ್ತೆ ಹಚ್ಚಿ ಕ್ರಮ ಜರಗಿಸಿ ದರೆ, ಭ್ರ್ರಷ್ಟ ಅಧಿಕಾರಿಗಳಿಂದ ಹಾಗೂ ದಲ್ಲಾಳಿಗಳಿಂದ ಅರ್ಜಿದಾರರಿಗೆ ಮುಕ್ತಿ ಸಿಗಬಹುದು.
ಉದಾ; ಭೂ ಪರಿವರ್ತನೆಗೆ ಸಕಾಲದಲ್ಲಿ ಅರ್ಜಿ ವಿಲೇವಾರಿಗೆ ೧೨೦ ದಿನ. ಆದರೆ ಚಿgeಟಿಣ ಕ್ಯೆಯಲ್ಲಿ ಕೊಟ್ಟರೆ ಹತ್ತು ದಿವಸದಲ್ಲಿ ಆಗುತ್ತದೆ. ಈ ಬಗ್ಗೆ ಮಂಗಳೂರು ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ, ಅಪಾರ ಜಿಲ್ಲಾಧಿಕಾರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈ ಗೊಂಡಿಲ್ಲ. ಪ್ರಕರಣದಲ್ಲಿ ಮಂಗ ಳೂರು ತಹಶೀಲ್ದಾರರೂ ಬಾಗಿಯಾಗಿದ್ದಾರೆ ಎಂಬ ಅನುಮಾನ ಮಂಗಳೂ ರಿನ ಜನತೆಯಲ್ಲಿದೆ. ಈ ಬಗ್ಗೆ ಸರಕಾರ ಕೂಡಲೇ ತನಿಖೆ ನಡೆಸಿ ಮಂಗಳೂರಿನ ಜನತೆಗೆ ನ್ಯಾಯ ಒದಗಿಸ ಬೇಕಾಗಿ ಕೇಳಿಕೊಳ್ಳುತ್ತೇವೆ .
ನೊಂದ ನಾಗರಿಕರು, ಮಂಗಳೂರು
ಸೆಝ್ ಗೂಂಡಾಗಿರಿಯ ವಿರುದ್ದ ಎದ್ದು ನಿಲ್ಲೋಣ
ಕೂಳೂರಿನ ಫಲ್ಗುಣಿ ನದಿಗೆ ಅಕ್ರಮವಾಗಿ ಮಣ್ಣು ತುಂಬಿಸಿರುವ ಸೆಝ್ ಅಧಿಕಾರಿಗಳು ಸ್ಥಳೀಯರ ವಿರುದ್ಧ ಗೂಂಡಾಗಿರಿಗೆ ಇಳಿಯುವುದು ಸರಿಯಲ್ಲ. ನದಿ ಯಾರೊ ಬ್ಬನ ಸೊತ್ತೂ ಅಲ್ಲ. ಹೀಗಿರುವಾಗ ನದಿಯನ್ನು ಸ್ವಚ್ಛಂ ದವಾಗಿ ಹರಿಯಲು ಬಿಡದೆ ತಡೆಯೊಡ್ಡಿದರೆ ನಾಳೆ ನದಿ ಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿ ಪಕ್ಕದ ಮನೆಗಳು ಮುಳುಗಡೆಯಾಗುವ ಭೀತಿಯಿದೆ. ಹೀಗಾಗಿ ಸೆಝ್ ಗೂಂಡಾಗಿರಿಗೆ ಕಡಿವಾಣ ಹಾಕಲೇ ಬೇಕಿದೆ. ಕೂಳೂರು, ಮೇಲ್ಕೊಪ್ಪಳ ನಿವಾಸಿಗಳು ಮಾತ್ರ ಇದನ್ನು ವಿರೋ ಧಿಸಿದರೆ ಸಾಲದು. ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳುತ್ತಿರುವ ಬೃಹತ್ ಕಂಪೆನಿಗಳ ವಿರುದ್ಧ ನಾಗರಿಕರು ಒಂದಾಗಿ ಪ್ರತಿ ಭಟಿಸಬೇಕು. ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿಟ್ಟ ಕೂಡಲೇ ಹೋರಾಟವನ್ನು ದಮನ ಮಾಡಿದಂತಾಗು ತ್ತದೆ ಎಂಬ ಭ್ರಮೆಯಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಇನ್ನಾದರೂ ಹೊರಬರಬೇಕು. ಯಾಕೆಂದರೆ ವ್ಯವಸ್ಥೆ ಜನ ಪರವಾಗಿ ಕಾರ್ಯನಿರ್ವಹಿಸದೇ ಇದ್ದರೆ ಮುಂದೊಂದು ದಿನ ಜನರೇ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವುದು ನಿಶ್ಚಿತ.
ನಿತಿನ್, ಕೋಡಿಕಲ್
ವಿವಾಹ ವಿಚ್ಛೇದನೆಯಲ್ಲಿ ಫೇಸ್ಬುಕ್ಗೆ ಪ್ರಥಮ ಸ್ಥಾನ!
ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಇತ್ತೀಚೆಗೆ ಅಮೇರಿಕಾದ ಸಂಸ್ಥೆಯೊಂದು ಫೇಸ್ಬುಕ್ ಕುರಿತು ನಡೆಸಿದ ಸಮೀಕ್ಷೆಯಲ್ಲಿ ವಿವಾಹ ವಿಚ್ಛೇದನೆಯಲ್ಲಿ ಫೇಸ್ಬುಕ್ ಪ್ರಥಮ ಸ್ಥಾನ ಪಡೆದಿರುವುದನ್ನು ಪತ್ರಿಕಾ ವರದಿ ಬಹಿ ರಂಗ ಪಡಿಸಿದೆ. ಮಕ್ಕಳಿಂದ ವೃದ್ಧರವರೆಗೂ ಮೆಚ್ಚಿ ಕೊಂಡಿರುವ ಫೇಸ್ಬುಕ್ನಿಂದ ಸಾಮಾ ಜಿಕ ವ್ಯವಸ್ಥೆಯಲ್ಲಿ ಎಷ್ಟೊಂದು ಬದಲಾವಣೆ ಉಂಟಾಗಿದೆ, ಎಷ್ಟು ಯುವಜನರು ತಪ್ಪು ಹಾದಿ ತುಳಿದಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಫೇಸ್ಬುಕ್ ದಂಪತಿಯ ನಡುವೆ ಜಗಳಕ್ಕೆ ಕಾರಣವಾಗಿ ಅವರ ವಿಚ್ಛೇದನೆಗೂ ಸಹಕಾರ ನೀಡುತ್ತಿರುವುದು ಗಂಭೀರವಾಗಿ ಚರ್ಚಿಸಲೇಬೇಕಾದ ಸಂಗತಿ. ಫೇಸ್ಬುಕ್ ಖಾತೆ ಹೊಂದಿರುವ ವಿವಾಹಿತ ಮಹಿಳೆಯರು ಬಲು ಬೇಗನೆ ಬೇರೆ ಗಂಡಸರತ್ತ ಆಕರ್ಷಣೆ ಬೆಳೆಸಿ ಕೊಳ್ಳುತ್ತಾರೆ ಎಂದು ವರದಿ ಹೇಳಿರುವುದು ನಿಜಕ್ಕೂ ಖೇದಕರ. ಆದ್ದರಿಂದ ಇನ್ನಾದರೂ ಫೇಸ್ ಬುಕ್ ಬಳಸುವ ಮುನ್ನ ಎಚ್ಚೆತ್ತುಕೊಳ್ಳಿ. ಒಂದು ವೇಳೆ ಬಳಕೆ ಮಾಡಿದರೂ ಮಿತಿಯ ಲ್ಲಿರಲಿ.
ರೆಹಮಾನ್ ಖಾನ್, ಬಂದರ್
ಮುಖ್ಯಮಂತ್ರಿಗಳೇ, ಇದೆಂಥಾ ಯುವಜಾಗೃತಿ?
ಇತ್ತೀಚೆಗೆ ಬಿಜೆಪಿ ಯುವಮೋರ್ಚಾ ವತಿ ಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ಯುವಜಾಗೃತಿ ಸಮಾವೇಶ ನಡೆಯಿತು. ಮುಖ್ಯ ಮಂತ್ರಿ ಸದಾನಂದ ಗೌಡ ಸಹಿತ ಸರಕಾರದ ವಿವಿಧ ಇಲಾಖೆಗಳ ಸಚಿವರು, ಶಾಸಕರುಗಳು ಸಮಾವೇಶದಲ್ಲಿ ಪಾಲ್ಗೊಂಡರು. ಇದೇ ವೇಳೆ ಇಲ್ಲಿ ಆಗಮಿಸಿದ ಯುವಜನತೆ ವೀಕ್ಷಿಸಲೆಂದು ಪ್ರದರ್ಶನ ಗ್ಯಾಲರಿ ತೆರೆಯಲಾಗಿತ್ತು. ಇದರಲ್ಲಿ ದೇಶಭಕ್ತರ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿ ಕಾರಿ ಯುವಜನರ ಸಾಧನೆ, ಬದುಕಿನ ಚಿತ್ರಣ ವನ್ನು ಯುವಜನತೆಗೆ ವಿವರಿಸಬಹುದು ಎಂದು ಒಳಹೊಕ್ಕರೆ ಅಲ್ಲಿದ್ದದ್ದೇ ಬೇರೆ. ವರ್ಣಿಸಲು ಆಗದಂಥ ಘನಘೋರ ದೃಶ್ಯಾವಳಿಗಳು! ಹಿಂದೂ ಸಂಘಟನೆಗಳ ನಾಯಕರಾಗಿ ಮೆರೆದ ರೌಡಿ ಹಿನ್ನೆಲೆಯ ಯುವಕರ ಭಾವಚಿತ್ರಗಳನ್ನು ಅಲ್ಲಿ ಇಡಲಾಗಿತ್ತು. ಅದರ ಮೇಲ್ಗಡೆ ಅವರು ಗೋ ಹತ್ಯೆ, ಮತಾಂತರ, ಮುಸ್ಲಿಮರ ದೌರ್ಜನ್ಯವನ್ನು ಖಂಡಿಸಿದ್ದಕ್ಕೆ ಕೊಲೆ ಮಾಡಲಾಯಿತು ಎಂದು ಬರೆದು ದೇಶಸೇವೆಗೆ ಅದನ್ನು ಹೋಲಿಸಲಾ ಗಿತ್ತು. ಇಷ್ಟೇ ಅಲ್ಲದೆ ಗುಜರಾತ್ ಗಲಭೆಯಲ್ಲಿ ಮಚ್ಚಿನೇಟಿಗೆ ರುಂಡ ಕತ್ತರಿಸಲ್ಪಟ್ಟು ಸತ್ತ ಅಲ್ಲಿನ ಇಬ್ಬರು ಯುವಕರ ಮೃತದೇಹದ ಭಾವಚಿತ್ರ ವನ್ನು ಇರಿಸಿ ಹೂವಿನ ಹಾರ ಹಾಕಲಾಗಿತ್ತು. ಆ ಭಾವಚಿತ್ರಗಳು ಎಷ್ಟರ ಮಟ್ಟಿಗೆ ಕ್ರೌರ್ಯ ವನ್ನು ಬಿಂಬಿಸುತ್ತಿತ್ತೆಂದರೆ ನೋಡಿದವರ ಮನಸ್ಸು ವಿಚಲಿತವಾಗುತ್ತಿತ್ತು.
ಕೆಲವರು ಅದನ್ನೇ ತದೇಕಚಿತ್ತದಿಂದ ನೋಡಿ ‘ಮುಸ್ಲಿಮರನ್ನು ಬಡಿಯಬೇಕು’ ಎಂದು ಇಲ್ಲೇ ಹೇಳುತ್ತಿದ್ದರೆ, ಮತ್ತೆ ಕೆಲವರು ಅತ್ತಕಡೆ ನೋಡ ಲಾಗದೆ ಹಿಂದೂ ಸಂಘಟನೆಗಳಿಗೆ ಶಪಿಸಿ ಕೊಂಡೇ ಮುಂದೆ ಹೋಗುತ್ತಿದ್ದರು. ಇದೆಂಥಾ ವಿಪರ್ಯಾಸ? ಬಿಜೆಪಿ ಯುವ ಮೋರ್ಚಾ ಸಂಘಟನೆ ವಿದ್ಯಾರ್ಥಿಗಳಿಗೆ, ಯುವಜನರಿಗೆ ಉಂಟುಮಾಡುವ ಜಾಗೃತಿಯೆಂದರೆ ಹೀಗೆಯೇ? ಯಾರೋ ಅಮಾಯಕ, ಮುಗ್ಧ ಹಿಂದೂ ಯುವಕರನ್ನು ಮುಸ್ಲಿಮರ ವಿರು ದ್ಧವೋ, ಕ್ರೈಸ್ತರ ವಿರುದ್ಧವೋ ಛೂ ಬಿಟ್ಟು ಅವರು ಪ್ರತಿದಾಳಿ ನಡೆಸಿದಾಗ ಸಾಯುವುದು ದೇಶಕ್ಕಾಗಿ ಬಲಿದಾನವೇ? ಹಿಂದೂ ಸಂಘ ಟನೆಗಳ ಕೋಮು ಪ್ರಚೋದಕ ಹೇಶಾರವಕ್ಕೆ ಮುಖ್ಯಮಂತ್ರಿಗಳು ನಗುತ್ತಲೇ ಬೆಂಬಲ ನೀಡಿದ್ದು, ದೇಶದ ಅತೀ ದೊಡ್ಡ ದುರಂತ. ಯುವಜನರೇ, ಇಂಥ ವಿಕೃತಿಗೆ ಬಲಿಯಾ ಗಬೇಡಿ. ಪ್ರಚೋದನೆ ಮಾಡುವವರು ಎಂದೂ ಸತ್ತು ಹುತಾತ್ಮರಾಗುವುದಿಲ್ಲ ಎನ್ನು ವುದು ನಿಮ್ಮ ನೆನಪಿನಲ್ಲಿರಲಿ.
ರವಿಕಿರಣ್, ಮಂಗಳೂರು