ಟಿಂಟ್ ಗ್ಲಾಸ್ ನಿಷೇಧ ಎಷ್ಟು ಸರಿ?

Posted by JAYAKIRANA Kirana on Thursday, 24 May 2012 | 0 comments | Leave a comment...

ಗೆಳೆಯರೇ, ಕಾರ್‌ಗಳಲ್ಲಿ ಸನ್‌ಸ್ಕ್ರೀನ್ ಸ್ಟಿಕ್ಕರ್ ಐ ಮೀನ್ ಟಿಂಟ್ ಸ್ಟಿಕ್ಕರ್ ಬಳಸುವಿಕೆಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿ ರುವ ವಿಚಾರ ನಿಮಗೆಲ್ಲ ಗೊತ್ತಿರುವಂತದ್ದೆ! ಸನ್‌ಸ್ಕ್ರೀನ್ ಹೊಂದಿ ರುವ ಗಾಜುಗಳಿರುವ ಕಾರ್‌ಗಳಲ್ಲಿ ಅಪರಾಧ ಕೃತ್ಯಗಳು (ಅಪಹ ರಣ, ಅನೈತಿಕ, ಲೈಂಗಿಕ ಚಟುವಟಿಕೆ... ಇತ್ಯಾದಿ) ನಡೆಯುತ್ತಿರು ವುದು ಹೆಚ್ಚಾಗಿ ಕಂಡು ಬರುವುದರಿಂದ ಉಚ್ಚ ನ್ಯಾಯಾಲಯ ಇಂಥಾ ತೀರ್ಮಾನಕ್ಕೆ ಬಂದಿದೆಯಂತೆ. ಸಾಧಾರಣವಾಗಿ ಉಚ್ಚ ನ್ಯಾಯಾಲಯ ಏನಾದರೂ ಈ ವಿಷಯವಾಗಿ ತೀರ್ಪನ್ನಿತ್ತರೆ ಅದರ ಬಗ್ಗೆ ಸಂಬಂಧಪಟ್ಟವರು ತಕರಾರು ಎತ್ತುವುದು ಕಡಿ ಮೆಯೇ. ಯಾಕೆಂದರೆ ಉಚ್ಛ ನ್ಯಾಯಾಲಯದ ತೀರ್ಪು ಏನೇ ಆಗಿದ್ದರೂ ಅದೇ ಅಂತಿಮವಾಗಿರುವುದರಿಂದ ಆ ತೀರ್ಪಿನ ಆಚೆ ಯಾರೂ ಚಿಂತಿಸಲು ಹೋಗುವುದೇ ಇಲ್ಲ. ಆದರೆ ಈ ಬಾರಿ ಹಾಗಾಗಿಲ್ಲ. ಉಚ್ಛ ನ್ಯಾಯಾಲಯದ ತೀರ್ಪಿನ ಬಗ್ಗೆ ಸಾರ್ವ ಜನಿಕ ವಲಯದಲ್ಲಿ ಬಹಳಷ್ಟು ಟೀಕೆ - ಟಿಪ್ಪಣಿಗಳು ವ್ಯಕ್ತವಾ ಗಿವೆ. ಕಾರ್ ಹೊಂದಿರುವವರಲ್ಲಿ ಹೆಚ್ಚಿನವರು ಈ ತೀರ್ಪನ್ನು ಅಸಂಬಂಧ ಮತ್ತು ಅನಾವಶ್ಯಕ ಎಂದಿದ್ದಾರೆ.
ಹೀಗೆ ಉಚ್ಛ ನ್ಯಾಯಾಲಯದ ತೀರ್ಪನ್ನು ವಿರೋಧಿಸುವ ವರು ಹೇಳುವ ಪ್ರಕಾರ ಈ ತೀರ್ಪು ನೆಗಡಿಯಾಯಿತೆಂದು ಮೂಗನ್ನೇ ಕತ್ತರಿಸಬೇಕೆಂದು ತೀರ್ಪು ಕೊಟ್ಟ ಹಾಗಾಗಿದೆಯಂತೆ! ಅನೈತಿಕ ಚಟುವಟಿಕೆಗಳು ಕೇವಲ ಕಾರ್‌ಗಳಲ್ಲಿ ಮಾತ್ರ ನಡೆಯು ವುದೇ? ಕೆಲ ಲಾಡ್ಜುಗಳಲ್ಲಿ ಮತ್ತೆ ಕೆಲವು ಮನೆಗಳಲ್ಲಿ ಕೂಡಾ ಅನೈತಿಕ ಚಟುವಟಿಕೆಗಳು ನಡೆಯುವುದಿಲ್ವೇ? ಹಾಗಂತ ಲಾಡ್ಜ್ಜ್ ಕಟ್ಟ ಬಾರದು, ಮನೆ ಕಟ್ಟಬಾರದು ಎನ್ನಲು ಸಾಧ್ಯಾನಾ? ಎಂದು ಪ್ರಶ್ನಿಸುತ್ತಿ ದ್ದಾರೆ ಇವರು. ಗೆಳೆಯರೇ, ನಿಮಗೇನನ್ನಿಸುತ್ತಿದೆ? ಈ ಸನ್‌ಸ್ಕ್ರೀನ್ ಬೆಂಬಲಿಗರ ವಾದ/ಅಭಿಪ್ರಾಯದಲ್ಲಿ ಹುರುಳಿಲ್ಲ ಎಂದಾಗಿದೆಯೇ ನಿಮ್ಮ ಭಿಪ್ರಾಯ?
ನನ್ನ ಪ್ರಕಾರವಂತೂ ಇವರ ವಾದದಲ್ಲಿ ಹುರುಳಿದೆ. ಅರ್ಥವಿದೆ. ನಮಗೆ ನೆಗಡಿಯಾಯಿತೆಂದಿಟ್ಟುಕೊಳ್ಳಿ. ನಾವು ಏನು ಮಾಡುತ್ತೇವೆ. ನೆಗಡಿ ದೆಸೆಯಿಂದ ವೈದ್ಯರಲ್ಲಿಗೆ ತೆರಳಿ ಸಾರ್, ಈ ಕಿರಿ ಕಿರಿ ಸಹಿಸಲಾಗು ತ್ತಿಲ್ಲ ಮೂಗನ್ನೊಮ್ಮೆ ಕತ್ತರಿಸಿ ತೆಗೆದುಬಿಡಿ ಎಂದು ಹೇಳಿಕೊಂಡೆವು ಎಂದಿಟ್ಟುಕೊಳ್ಳಿ. ಆಗ ವೈದ್ಯನಾದವನು ಮೂಗು ಕತ್ತರಿಸುತ್ತಾನಾ? ಅಲ್ಲಾ ನೆಗಡಿಗೆ ಔಷಧಿ ಕೊಟ್ಟು ನೆಗಡಿಯನ್ನು ಶಮನಗೊಳಿಸುತ್ತಾನಾ? ಖಂಡಿ ತವಾಗಿಯೂ ಆ ವೈದ್ಯ ನೆಗಡಿಗೆ ಔಷಧಿ ಕೊಟ್ಟು ನಮ್ಮ ಮೂಗನ್ನು ಅದರ ಪಾಡಿಗೆ ಬಿಟ್ಟು ಬಿಡುವುದಿಲ್ವಾ? ಅದೇ ರೀತಿ ಕೆಲ ದುರುಳರು ಕಾರ್‌ಗಳ ಗಾಜಿಗೆ ಸನ್‌ಸ್ಕ್ರೀನ್ ಸ್ಟಿಕ್ಕರ್ ಅಂಟಿಸಿ ಅದರೊಳಗಡೆ ಅನೈ ತಿಕ ಚಟುವಟಿಕೆಗಳ, ಸಮಾಜ ಬಾಹಿರ ಕೃತ್ಯಗಳು ನಡೆಸುತ್ತಿರುವುದು ಕಂಡು ಬಂದರೆ ಏನು ಮಾಡಬೇಕಿತ್ತು? ಸನ್‌ಸ್ಕ್ರೀನನ್ನು ಬಳಸಬಾ ರದು ಎಂದು ಒಂದೇ ಉಸಿರಿನಲ್ಲಿ ತೀರ್ಮಾನಿಸಿ ಬಿಡುವುದು ಸರಿಯಾ ಗುತ್ತದಾ? ಸನ್‌ಸ್ಕ್ರೀನ್ ಸ್ಟಿಕ್ಕರ್ ತಪ್ಪು ಮಾಡಿದೆಯಾ? ಕಾರಿನ ಗಾಜು ತಪ್ಪು ಮಾಡಿದೆಯಾ? ಅಥವಾ ಕಾರ್ ತಪ್ಪು ಮಾಡಿದೆಯಾ? ಮತ್ಯಾಕೆ ಕಾರು ಅಥವ ಕಾರಿನ ಗಾಜಿನ ಮೇಲೆ ಸವಾರಿ!? ಅದು ಮಾತನಾಡು ವುದಿಲ್ಲ ಎಂದು ತಾತ್ಸಾರನಾ!? ಗೆಳೆಯರೇ, ಇದನ್ನೆಲ್ಲ ಯೋಚಿಸು ವಾಗ ಕಾರನ್ನೇ ಬಳಸಬಾರದು ಎಂದು ನ್ಯಾಯಾಲಯ ತೀರ್ಪು ಕೊಡದಿದ್ದುದು ಪುಣ್ಯ ಎಂದೆನಿಸುತ್ತಿದೆ!
ಉಚ್ಚ ನ್ಯಾಯಾಲಯದ ಈ ತೀರ್ಪು ಏನು ಧ್ವನಿಸುತ್ತದೆಯೆಂ ದರೆ ಸನ್‌ಸ್ಕ್ರೀನ್ ಸ್ಟಿಕ್ಕರ್ ಅಂಟಿಸಿರುವ ಭಾರತೀಯ ಪ್ರಜೆಗಳೆಲ್ಲರೂ ಅನೈತಿಕ ಚಟುವಟಿಕೆ ಅಥವಾ ಸಮಾಜ ಬಾಹಿರ ಕೃತ್ಯ ಎಸಗುವ ಉದ್ದೇಶದಿಂದಲೇ ತಮ್ಮ ಕಾರುಗಳಿಗೆ ಅದನ್ನು ಅಂಟಿಸಿದ್ದಾರೆ ಎನ್ನು ವಂತಿದೆ (ಅಂದರೆ ಇಷ್ಟರವರೆಗೆ ತಮ್ಮ ಕಾರುಗಳಿಗೆ ಸನ್‌ಸ್ಕ್ರೀನ್ ಸ್ಟಿಕ್ಕರ್ ಅಂಟಿಸಿದವರೆಲ್ಲರೂ ನೀಚರು ಎಂದಾಯ್ತು) ಹಾಗಾದರೆ ಉಚ್ಚ ನ್ಯಾಯಾ ಲಯಕ್ಕೆ ಈ ಅಂಶ ಹೇಗೆ ಕಂಡು ಹಿಡಿದಿದೆ? ಎಷ್ಟು ಕಂಡು ಹಿಡಿದಿದೆ? ಯಾವ ಮಟ್ಟದಲ್ಲಿ ಸತ್ಯಾಸತ್ಯತೆ ಪರಿಶೀಲಿಸಿದೆ?
ನಮಗೆಲ್ಲ ತಿಳಿದಿರುವ ಪ್ರಕಾರ ಉಚ್ಚ ನ್ಯಾಯಾಲಯ ಆ ಬಗ್ಗೆ ಸರಿ ಯಾಗಿ ಪರಿಶೀಲನೆ ನಡೆಸಿಯೇ ಇಲ್ಲ. ಪ್ರಜೆಗಳ ಅಭಿಪ್ರಾಯ ಕೇಳಿಯೇ ಇಲ್ಲ. ಚರ್ಚೆಗೆ ಅವಕಾಶ ಕೊಟ್ಟೇ ಇಲ್ಲ. ಈ ದೇಶದಲ್ಲಿ ಸನ್‌ಸ್ಕ್ರೀನ್ ಹೊಂದಿರುವ ಒಟ್ಟು ಕಾರ್‌ಗಳ ಸಂಖ್ಯೆ ಎಷ್ಟು? ಅವುಗಳಲ್ಲಿ ಅಪರಾಧ ನಡೆಸಿರುವುದು ಸಾಬೀತಾದ ಕಾರ್‌ಗಳು ಎಷ್ಟು? ಅಪರಾಧ ನಡೆಸುವಾತ ನಿಗೆ ಅಪರಾಧ ನಡೆಸಲು ಹತ್ತು ಹಲವಾರು ಬೇರೆ ಬೇರೆ ತರದ ಅವಕಾ ಶಗಳಿರುವಾಗ ಉಚ್ಛ ನ್ಯಾಯಾಲಯ ಈ ಸನ್‌ಸ್ಕ್ರೀನ್ ಹೊಂದಿರುವ ಕಾರ್‌ಗಳ ಮೇಲೆ ಮಾತ್ರ ನಿಷೇಧ ವಿಧಿಸಲು ಕಾರಣವೇನು? ಜನರಿಗೆ ಒಂದೂ ಆರ್ಥವಾಗುತ್ತಾ ಇಲ್ಲ!
ಇಲ್ಲಿ ಗಮನಿಸಿ. ಪ್ರಸಕ್ತ ಮುಂಬಯಿಯಲ್ಲಿ ಮಾರುತಿ ಓಮ್ನಿ ಕಾರಿಗೆ ನಿಷೇಧವಿದೆ. ಅದಕ್ಕೆ ಕಾರಣ ಈ ಒಮ್ನಿ ಕಾರಿನಲ್ಲಿ ಅಪಹರಣ ಕೃತ್ಯಗಳು ಮುಂಬಯಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದುದು. ನಿಷೇಧ ಹೇರಿದ ಸಂದ ರ್ಭದಲ್ಲಿ ಸಾರ್ವಜನಿಕರಿಂದ ಆ ಬಗ್ಗೆ ಅಂಥಾ ಪ್ರತಿರೋಧ ಏನೂ ವ್ಯಕ್ತ ವಾಗಲಿಲ್ಲ. ಬಹುತೇಕ ಜನರು ನಿಷೇಧವನ್ನು ಮುಕ್ತ ಮನಸ್ಸಿನಲ್ಲಿ ಸ್ವಾಗತಿ ಸಿದ್ದರು. ಜನರ ಈ ಒಪ್ಪಿಗೆಗೆ ಕಾರಣ ಒಮ್ನಿ ನಿಷೇಧಕ್ಕೆ ಒಂದು ಅರ್ಥ ವಿತ್ತು. ನಿಷೇಧದ ವ್ಯಾಖ್ಯೆ ಎಂಥವನೂ ಒಪ್ಪಿಕೊಳ್ಳುವಂತಿತ್ತು. ಅದೂ ಅಲ್ಲದೆ ಸರಕಾರ ನಿಷೇಧಿಸಿದ್ದು ಒಮ್ನಿ ಕಾರನ್ನು ಮಾತ್ರ. ಎಲ್ಲಾ ಕಾರನ್ನು ನಿಷೇಧಿಸಿರಲಿಲ್ಲ. ಜನರಿಗೆ ಒಮ್ನಿಗೆ ಸ್ವಲ್ಪಮಟ್ಟಿಗೆ ಪರ್ಯಾಯವಾದ ಬೇರೆ ವಾಹನಗಳ ಲಭ್ಯವಿತ್ತು. ಅದರೊಂದಿಗೆ ಸದ್ರಿ ಓಮ್ನಿ ನಿಷೇಧ ಓಮ್ನಿ ಕಾರಿ ನಲ್ಲಿ ಅಪಹರಣ, ದರೋಡೆ ಕೃತ್ಯಗಳು ಬೇಜಾನ್ ನಡೆಯುತ್ತಿದ್ದ ಮುಂಬ ಯಿಗೆ ಮಾತ್ರ ಸೀಮಿತವಾಗಿತ್ತು. ಹೀಗಾಗಿ ಎಲ್ಲಾ ಸ್ತರಗಳಲ್ಲಿ ಮುಂಬಯಿ ಯಲ್ಲಿ ಒಮ್ನಿ ನಿಷೇಧ ಅಂಗೀಕರಿಸಲ್ಪಟ್ಟಿತ್ತು. ಆದರೆ ಈಗ ದೇಶವ್ಯಾಪಿ ಕಾರ್‌ಗಳ ಸನ್‌ಸ್ಕ್ರೀನ್ ಬಳಕೆಗೆ ನಿಷೇಧ ವಿಧಿಸಿರುವ ವಿಚಾರ ಮಾತ್ರ ಸ್ವಲ್ಪ ಅತಿರೇಕವೆಂದೆನಿಸುತ್ತಿದೆ.
ನಾನು ಮೇಲೆ ಹೇಳಿದಂತೆ ಅಪರಾಧ ಮಾಡುವಾತನಿಗೆ ಈ ದೇಶ ದಲ್ಲಿ ಹತ್ತು ಹಲವಾರು ಸುಲಭ ಅವಕಾಶಗಳಿವೆ. ಒಂದು ಕಡೆ ಅವನನ್ನು ತಡೆದರೆ ಇನ್ನೊಂದು ಕಡೆ ಆತ ಖಂಡಿತಾ ಅದನ್ನು ಮಾಡುತ್ತಾನೆ. ಪರ್ಯಾಯ ಮಾರ್ಗಗಳನ್ನು ಆತ ಕಂಡು ಹುಡುಕಿಯೇ ಹುಡುಕುತ್ತಾನೆ. ಕಾರಿನ ಟಿಂಟ್ ಪ್ರಕರಣವೂ ಅಷ್ಟೇ. ಕಾರಿನ ಟಿಂಟ್ ನಿಷೇಧಿಸಿದ ತಕ್ಷಣ ಕಾರಿನೊಳಗಡೆ ಕೂರುವ ದುಷ್ಟ ತನ್ನ ಅಪರಾಧ ಕೃತ್ಯವನ್ನು ನಡೆಸುವ ಉದ್ದೇಶದಿಂದ ವಿಮುಖನಾಗುತ್ತಾನೆ ಎನ್ನುವ ಯಾವ ಖಚಿತತೆಯೂ ಇಲ್ಲ. ನಿಜ ಹೇಳಬೇಕೆಂದರೆ ಕಾರಿನ ಗಾಜಿನ ಮೇಲೆ ಅಂಟಿಸಲಾಗುವ ಸನ್ ಸ್ಕ್ರೀನ್ ಸ್ಟಿಕ್ಕರ್ ತೆಗೆಯುವ ಬದಲು ಆ ಕಾರಿನೊಳಗಡೆ ಕೂತು ಸಂಚು ಹೂಡುವ ದುಷ್ಟನ ಹೃದಯದ ಮೇಲೆ ಅಂಟಿರುವ ಕೆಡುಕೆನ್ನುವ ಸ್ಟಿಕ್ಕರ್ ತೆಗೆಯುವ ಕೆಲಸ ನಡೆಯಬೇಕಾಗಿದೆ. ಇದು ಸಾಧ್ಯವಾದರೆ ಎಂಥಾ ಸಂದ ರ್ಭದಲ್ಲೂ ಎಂಥವನೂ ಅಪಹರಣಕ್ಕೊಳಗಾಗಲ್ಲ. ಎಂಥವನೂ ದರೋಡೆ ಗೊಳಗಾಗಲ್ಲ.
ಈ ಸನ್‌ಸ್ಕ್ರೀನ್ ಬಳಕೆ ನಿಷೇಧ ಪ್ರಕರಣ ‘ಇಲಿಗೆ ಪೆಟ್ಟು ಕೊಡಲು ಹೋಗಿ ಗಣಪತಿಗೆ ಪೆಟ್ಟುಕೊಟ್ಟ’ ಎಂಬ ಗಾದೆಯನ್ನು ನೆನಪಿಸುತ್ತಿದೆ. ಕಾರ್‌ಗಳಲ್ಲಿ ದರೋಡೆ ನಡೆಯುತ್ತಿರುವುದನ್ನು ತಡೆಯಲು ಹೋಗಿ ಕಾರ್‌ಗಳನ್ನೇ ದರೋಡೆಗೈಯಲು ಮುಕ್ತ ಅವಕಾಶ ಮಾಡಿಕೊಡಲಾಗುತ್ತಿ ರುವುದಂತೂ ಸ್ಪಷ್ಟ. ಸನ್‌ಸ್ಕ್ರೀನ್ ಹೊಂದಿರುವ ಒಟ್ಟು ಕಾರ್‌ಗಳ ಸಂಖ್ಯೆ ಗಳನ್ನು ಗಣನೆಗೆ ತೆಗೆದುಕೊಂಡು ಮತ್ತವುಗಳಲ್ಲಿ ನಡೆಯುತ್ತಿರುವ ಅಪ ರಾಧ ಪ್ರಕರಣಗಳನ್ನು ಪರಿಶೀಲಿಸಿದರೆ ಅಪರಾಧಕೃತ್ಯಗಳಿಗೆ ಬಳಕೆಯಾಗುವ ಟಿಂಟ್ ಗ್ಲಾಸ್‌ಗಳ ಕಾರುಗಳ ಸಂಖ್ಯೆ ಒಟ್ಟು ಸನ್‌ಸ್ಕ್ರೀನ್ ಕಾರುಗಳ ಪೈಕಿ ಶೇಕಡಾ ಹತ್ತರಷ್ಟೂ ಇರಲಿಕ್ಕಿಲ್ಲ ಎಂಬುವುದನ್ನು ಧೈರ್ಯವಾಗಿ ಹೇಳಬಹುದು. ಅಂದರೆ ಇದರರ್ಥ ಶೇಕಡಾ ತೊಂಭತ್ತರಷ್ಟು ಜನರು ತಮ್ಮ ಕಾರ್‌ಗಳಿಗೆ ಸನ್ ಸ್ಕ್ರೀನ್ ಅಳಡಿಸಿಕೊಂಡಿರುವುದು ಇತರ ಕಾರಣಗಳಿಗಾಗಿ ಎನ್ನಬಹುದು. ಗಣ್ಯ ವ್ಯಕ್ತಿಗಳಿಗೆ, ಶ್ರೀಮಂತರಿಗೆ, ಉದ್ಯಮಿಗಳಿಗೆ, ಮಹಿಳೆಯರಿಗೆ, ಕೆಲವು ಸಂದರ್ಭ ಗಳಲ್ಲಿ ತಂದೆ ತಾಯಂದಿರು ಬೇರೆ ಬೇರೆ ಕಡೆಯಿದ್ದು ಒಬ್ಬಂಟಿಯಾಗಿ ಶಾಲಾ ಕಾಲೇಜುಗಳಿಗೆ ಹೋಗಬೇಕಾಗಿ ಬರುವ ಒಬ್ಬಂಟಿ ಶ್ರೀಮಂತರ ಮಕ್ಕಳಿಗೆ, ಇನ್ನು ಕೆಲವು ಜೀವಭಯ ಎದುರಿಸುತ್ತಿರುವ ವ್ಯಕ್ತಿಗಳಿಗೆ ಟಿಂಟ್ ಗ್ಲಾಸ್‌ಗಳನ್ನು ಹೊಂದಿರುವ ಕಾರ್‌ಗಳಲ್ಲೇ ಪ್ರಯಾಣಿಸುವುದು ಅನಿವಾರ್ಯ. ಇಲ್ಲದಿದ್ದರೆ ಇವರೆಲ್ಲ ದುಷ್ಕರ್ಮಿಗಳ ಕೈಗೆ ಸುಲಭ ತುತ್ತಾಗುವ ಸಾಧ್ಯತೆ ಇರುತ್ತದೆ. ಬಹ ಳಷ್ಟು ಜನರಿಗೆ ಟಿಂಟ್ ಗ್ಲಾಸ್‌ಗಳಿರುವ ಕಾರುಗಳಲಿನ್ಲ ಪ್ರಯಾಣ ಒಬ್ಬ ಪೊಲೀಸ್ ಅಧಿಕಾರಿ ತಮ್ಮ ಹತ್ತಿರವೇ ಇದ್ದಷ್ಟು ಧೈರ್ಯ ಕೊಡುತ್ತದೆ. ತಮ್ಮ ಬೆಲೆಬಾ ಳುವ ಆಭರಣ, ಹಣ, ಲ್ಯಾಪ್‌ಟಾಪ್ ಮತ್ತಿತರ ಪರಿಕರಗಳನ್ನು ಕಾರ್‌ನಲ್ಲೇ ಬಿಟ್ಟು ಆರಾಮವಾಗಿ ತಿರುಗಾಡಿ ಬರಲು ಧೈರ್ಯ ಬರುತ್ತದೆ.
ಇಷ್ಟಾದ ಮೇಲೂ ಟಿಂಟ್ ಗ್ಲಾಸ್‌ಗಳುಲ್ಲ ಕಾರ್‌ಗಳಲ್ಲಿ ನಡೆಯುತ್ತಿರುವ ಅಪಹರಣ, ದರೋಡೆ ಮೊದಲಾದ ದುಷ್ಕೃತ್ಯಗಳನ್ನು ತಡೆಯುವುದೇ ತನ್ನ ಮೊದಲ ಆದ್ಯತೆಯೆಂದು ನ್ಯಾಯಾಲಯ ಪರಿಗಣಿಸಿದರೆ ಆಗಲೂ ಇಂಥಾ ಕಾರುಗಳಲ್ಲಿ ನಡೆಯುವ ದುಷ್ಕೃತ್ಯಗಳನ್ನು ತಡೆಯಲು ಇನ್ನೊಂದು ಮಾರ್ಗವೂ ಇದೆ. ಪ್ರಜೆಗಳಿಗೆ ಭದ್ರತೆ ಖಚಿತ ಪಡಿಸಲು ಮತ್ತು ಭಯ ನಿವಾರಿಸಲು ನಿಯು ಕ್ತಗೊಂಡ ಪೊಲೀಸರು ಈ ದೇಶದಲ್ಲಿದ್ದಾರೆ. ಎಷ್ಟು ತಡರಾತ್ರಿಯಾದರೂ ಸರಿ ಎಂಥವನಾದರೂ ಸರಿ ಸೀದಾ ಹೋಗಿ ಅವನನ್ನು ಬಂಧಿಸಲು, ತನಿಖೆ ನಡೆ ಸಲು ಪೊಲೀಸರಿಗೂ ಗೊತ್ತಿದೆ. ಅಂಥಾ ಪೊಲೀಸರನ್ನು ಟಿಂಟ್ ಗ್ಲಾಸ್ ಹಾಕಿ ಸಂಚರಿಸುವ ಕಾರುಗಳನ್ನು ಎಲ್ಲಿ ಕಂಡರೂ ತಡೆದು ಸ್ವಲ್ಪ ಗ್ಲಾಸ್ ಕೆಳಗೆ ಸರಿಸಿ ಪ್ಲೀಸ್ ಎಂದು ಪ್ರಯಾಣಿಕರಲ್ಲಿ ಕೇಳಿ ಒಳಗಡೆ ಏನು ನಡೆಯುತ್ತಿದೆ ಎಂದು ಗಮನಿಸತೊಡಗಿದರೆ ಸಮಾಜಘಾತುಕರು ಎಚ್ಚೆತ್ತು ತಮ್ಮ ದುಷ್ಕೃತ್ಯಗಳನ್ನು ಟಿಂಟ್ ಕಾರ್‌ಗಳಿಂದ ವರ್ಗಾಯಿಸುವ ಸಾಧ್ಯತೆ ಇರುತ್ತದೆ. ತನ್ಮೂಲಕ ಟಿಂಟ್ ಗ್ಲಾಸ್ ಬಳಕೆ ಭಯಮುಕ್ತರಾಗಿ ಸಂಚರಿಸುವ ಸಜ್ಜನರ ಹಕ್ಕು ಕಾಪಾಡಿದಂ ತೆಯೂ ಆಗುತ್ತದೆ. ಅಲ್ಲವೇ?

ಎ.ಪಿ.ಉಸ್ತಾದರಿಗೆ ಸರಿಸಮಾನರಿಲ್ಲ...

Posted by JAYAKIRANA Kirana on | 0 comments | Leave a comment...


ವರಕ್ಕಲ್ ಮುಲ್ಲಕೋಯ ತಂಙಳ್, ಕಣ್ಣಿಯತ್ ಉಸ್ತಾದ್, ಶಂಸುಲ್ ಉಲಮಾರವರು ನೇತೃತ್ವ ನೀಡಿದ ಸಮಸ್ತದ ಎಸ್.ಕೆ.ಎಸ್.ಎಫ್.ನವರು ಹಳೇ ಕಾಲದ ಇಸ್ಲಾಮನ್ನು ಪ್ರಚಾರ ಮಾಡುವುದಾದರೆ ಎಸ್.ಎಸ್.ಎಫ್‌ನವರಾದ ನಾವು ಎ.ಪಿ ಉಸ್ತಾದರ ನೇತೃತ್ವದಲ್ಲಿ ಇಸ್ಲಾಮಿಗೆ ಆಧುನಿಕ ಕಾಲದ ಹೊಸ ಹೊಸ ನಿಯಮಗಳನ್ನು ಅಳವಡಿಸಿ ಇಸ್ಲಾಮನ್ನು ಪ್ರಚಾರ ಮಾಡುತ್ತಿದ್ದೇವೆ. ಸಮಸ್ತದವರು ನೂತನವಾದಿಗಳ ಸರ್ವ ಅನಾಚಾರಗಳನ್ನು ಕುರಾನ್, ಹದೀಸುಗಳ ಆಧಾರದೊಂದಿಗೆ ಒಂದು ಸ್ಥಳದಲ್ಲಿ ಖಂಡಿಸಿದರೆ ಆ ಸ್ಥಳದಲ್ಲಿ ಮತ್ತೆ ನೂತನವಾದಿಗಳು ತಲೆ ಎತ್ತುವುದಿಲ್ಲ. ಆದುದರಿಂದ ಸಮಸ್ತದವರು ಇರುವ ಊರುಗಳಲ್ಲಿ ಕೇವಲ ಒಂದೇ ಒಂದು ಮಸೀದಿ ಮತ್ತು ಮದ್ರಸಾಗಳಿರುತ್ತವೆ. ಅಂಬಲಕ್ಕಡವು ಉಸ್ತಾದ್, ಮುಸ್ತಫಾ ಅಶ್ರಫಿ ಕಕ್ಕುಪಡಿ, ಮುತ್ತೇಡಂ ಉಸ್ತಾದ್, ಮುಸ್ತಫಲ್ ಫೈಝಿ ತಿರೂರು, ಸಲಾಂ ದಾರಿಮಿ ಆಲಂಪಾಡಿ, ಎಂ.ಟಿ. ಅಬೂಬಕರ್ ದಾರಿಮಿ, ಸಲೀಂ ಇರ್ಫಾನಿ ಫೈಝಿ ಮುಂತಾದವರು ಒಂದು ಮೊಹಲ್ಲಾದಲ್ಲಿ ಸುನ್ನತ್ ಜಮಾಅತ್‌ನ ಕುರಿತು ಭಾಷಣ ಮಾಡಿದರೆ ಮತ್ತೆ ಅಲ್ಲಿ ಸಲಫಿಗಳ ಆಟ ಮುಗಿದಂತೆ.

ಮೆಹಬೂಬು ಉಳ್ಳಾಲ
‘ನಮ್ಮ ಸಮಸ್ತ ಏಕೆ ಹೀಗಾಯಿತು?’ ಎಂಬ ಉಳ್ಳಾಲ ರಫೀಕ್‌ರವರ ಬರಹವು ಸಮಸ್ತದ ಒಳರೂಪವನ್ನು ಬಹಿರಂಗಗೊಳಿಸುವಂತಿತ್ತು. ಸಮಸ್ತ ದೊಳಗಿದ್ದುಕೊಂಡು ಅಂತಹ ಬರಹವನ್ನು ಬರೆಯಲು ಧೈರ್ಯ ತೋರಿ ಸಿದ ಲೇಖಕರನ್ನು ಅಭಿನಂದಿಸಬೇಕು. ಅದನ್ನು ಓದಿ ನನಗೂ ಬರೆಯಲು ಧೈರ್ಯ ಬಂತು.
ನಮ್ಮ ಸಮಸ್ತ ಅಂದರೆ ವರಕ್ಕಲ್ ಮುಲ್ಲಕೋಯ ತಂಙಳ್‌ರವರು ಸ್ಥಾಪಿಸಿ ಕಣ್ಣಿಯತ್ ಉಸ್ತಾದ್, ಸಂಶುಲ್ ಉಲಮಾರಂತವರು ನೇತೃತ್ವ ನೀಡಿದ್ದು, ಅದರ ಸ್ಥಾಪಕರು ಮತ್ತು ನೇತಾರರು ಇಸ್ಲಾಮಿನ ಪೂರ್ಣ ರೂಪವನ್ನು ಜನ ರಿಗೆ ತಲುಪಿಸದಿದ್ದ ಕಾರಣ ಶೈಖುನಾ ಖಬರುಲ್ ಉಲಮಾ ಕಾಂತಪುರಂ ಉಸ್ತಾದ್, ಶೈಖುನಾ ಕಫರುಲ್ ಉಲಮಾ ಉಳ್ಳಾಲ ತಂಞಳ್‌ರವರು ಬಹುಮಾ ನ್ಯರಾದ ಮೌಲಾನಾ ಅರವಿಂದಾಕ್ಷಣ ಮೆನೋನ್‌ರವರನ್ನು ಭೇಟಿಯಾಗಿ ಧೀರತೆ ಯಿಂದ ಯಾರಿಗೂ ಹೆದರದೆ ಸ್ವಂತ ಗುರುವರ್ಯರಾದ ಕಣ್ಣಿಯತ್ ಉಸ್ತಾದ್ ಹಾಗು ಶಂಸುಲ್ ಉಲಮಾರ ವಿರುದ್ಧ ಹಲವಾರು ಕೇಸು ಕೊಟ್ಟು ಅವರನ್ನು ಮೂಲೆಗಿಟ್ಟು, ಮೌಲಾನಾ ಮೆನೋನ್‌ರವರ ಅಧ್ಯಕ್ಷತೆ ಮತ್ತು ಆಶೀರ್ವಾದ ದೊಂದಿಗೆ ಹೊಸ ಸಮಸ್ತವನ್ನು ೧೯೮೯ರಲ್ಲಿ ಸ್ಥಾಪಿಸಲಾಯಿತು. ಎಸ್.ಕೆ. ಎಸ್.ಎಸ್.ಎಫ್‌ನವರು ೧೯೨೬ರಲ್ಲಿ ವರಕ್ಕಲ್ ತಂಙಲ್ ಸ್ಥಾಪಿಸಿದ ಸಮಸ್ತ ವನ್ನು ಅಂಗೀಕರಿಸುವವರಾದರೆ ನಾವು ಎಸ್.ಎಸ್.ಎಫ್‌ನವರು ೧೯೮೯ರಲ್ಲಿ ಮೌಲಾನಾ ಮೆನೋನ್‌ರವರು ಸ್ಥಾಪಿಸಿದ ಸುನ್ನೀ ಸಮಸ್ತವನ್ನು ಅಂಗೀಕರಿಸು ವವರಾಗಿದ್ದೇವೆ.
ವರಕ್ಕಲ್ ಮುಲ್ಲಕೋಯ ತಂಙಳ್, ಕಣ್ಣಿಯತ್ ಉಸ್ತಾದ್, ಶಂಸುಲ್ ಉಲಮಾರವರು ನೇತೃತ್ವ ನೀಡಿದ ಸಮಸ್ತದ ಎಸ್.ಕೆ.ಎಸ್.ಎಫ್.ನವರು ಹಳೇ ಕಾಲದ ಇಸ್ಲಾಮನ್ನು ಪ್ರಚಾರ ಮಾಡುವುದಾದರೆ ಎಸ್.ಎಸ್.ಎಫ್‌ನವರಾದ ನಾವು ಎ.ಪಿ ಉಸ್ತಾದರ ನೇತೃತ್ವದಲ್ಲಿ ಇಸ್ಲಾಮಿಗೆ ಆಧುನಿಕ ಕಾಲದ ಹೊಸ ಹೊಸ ನಿಯಮಗಳನ್ನು ಅಳವಡಿಸಿ ಇಸ್ಲಾಮನ್ನು ಪ್ರಚಾರ ಮಾಡುತ್ತಿದ್ದೇವೆ. ಸಮಸ್ತದವರು ನೂತನವಾದಿಗಳ ಸರ್ವ ಅನಾಚಾರಗಳನ್ನು ಕುರಾನ್, ಹದೀಸು ಗಳ ಆಧಾರದೊಂದಿಗೆ ಒಂದು ಸ್ಥಳದಲ್ಲಿ ಖಂಡಿಸಿದರೆ ಆ ಸ್ಥಳದಲ್ಲಿ ಮತ್ತೆ ನೂತನವಾದಿಗಳು ತಲೆ ಎತ್ತುವುದಿಲ್ಲ. ಆದುದರಿಂದ ಸಮಸ್ತದವರು ಇರುವ ಊರುಗಳಲ್ಲಿ ಕೇವಲ ಒಂದೇ ಒಂದು ಮಸೀದಿ ಮತ್ತು ಮದ್ರಸಾಗಳಿರುತ್ತವೆ. ಅಂಬಲಕ್ಕಡವು ಉಸ್ತಾದ್, ಮುಸ್ತಫಾ ಅಶ್ರಫಿ ಕಕ್ಕುಪಡಿ, ಮುತ್ತೇಡಂ ಉಸ್ತಾದ್, ಮುಸ್ತಫಲ್ ಫೈಝಿ ತಿರೂರು, ಸಲಾಂ ದಾರಿಮಿ ಆಲಂಪಾಡಿ, ಎಂ.ಟಿ. ಅಬೂಬಕರ್ ದಾರಿಮಿ, ಸಲೀಂ ಇರ್ಫಾನಿ ಫೈಝಿ ಮುಂತಾದವರು ಒಂದು ಮೊಹಲ್ಲಾದಲ್ಲಿ ಸುನ್ನತ್ ಜಮಾಅತ್‌ನ ಕುರಿತು ಭಾಷಣ ಮಾಡಿದರೆ ಮತ್ತೆ ಅಲ್ಲಿ ಸಲಫಿಗಳ ಆಟ ಮುಗಿದಂತೆ. ಆದರೆ ನಮ್ಮ ಎ.ಪಿ. ವಿಭಾಗದ ಉಲಮಾ ಗಳು ಸಲಫಿಗಳ ವೈಯುಕ್ತಿಕ ಹಣೆಬರಹಗಳನ್ನು ಬಹಿರಂಗಗೊಳಿಸಿ ಗಂಟಲು ಬಿರಿಯುವಂತೆ ಕಿರುಚಾಡಿದಾಗ ಸಲಫಿಗಳು ಮತ್ತೂ ಕೆರಳುತ್ತಾರೆ. ಆಗ ಒಂದೇ ಮೊಹಲ್ಲಾದಲ್ಲಿ ಇಸ್ಲಾಂಗೆ ಶಕ್ತಿ ಹೆಚ್ಚಾಗಿ ಹಲವು ಮಸೀದಿಗಳು, ಮದ್ರಸಾಗಳು ತಲೆ ಎತ್ತುತ್ತವೆ. ಉಳ್ಳಾಲ ಎಂಬುದು ಅದರ ಒಂದು ಉದಾಹರಣೆಯಾಗಿದೆ. ಸಂಸುಲ್ ಉಲಮಾರವರು ಉಳ್ಳಾಲ ಉರೂಸಿಗೆ ಬರುತ್ತಿದ್ದ ಕಾಲದಲ್ಲಿ ಹಳೆಯದಾದ ಕೆಲವು ಮಸೀದಿ ಮದ್ರಸಾಗಳು ಮಾತ್ರವಿತ್ತು. ಇ.ಕೆ. ಉಸ್ತಾದರು ಉಳ್ಳಾಲಕ್ಕೆ ಬರುವು ದನ್ನು ನಿಲ್ಲಿಸಿ ಪೇರೋಡು ಉಸ್ತಾದ್, ಜೋಕೆ ಸಖಾಫಿಯಂತವರು ಬರತೊಡ ಗಿದಾಗ ಇಸ್ಲಾಮಿಗೆ ಬಲ ಹೆಚ್ಚಾಗಿ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಮಸೀದಿ, ಮದ್ರಸಾ, ಕಾಲೇಜುಗಳು ಸಲಫಿ ಅಧೀನದಲ್ಲಿ ಕಾರ್ಯಾಚರಿಸಲಾರಂಭಿಸಿತು. ಮಾತ್ರವಲ್ಲದೆ ಉಳ್ಳಾಲ ದರ್ಗಾ ಸಮಿತಿಯ ಪದಾಧಿಕಾರಿಗಳಲ್ಲಿ ಹೆಚ್ಚಿನವರು ಸಲ ಫಿಗಳೇ ಆಗಿರುತ್ತಾರೆ. ಹೀಗೆ ಭಾರತದಲ್ಲಿ ಸುಮಾರು ಎರಡು ಸಾವಿರಕ್ಕಿಂತಲೂ ಹೆಚ್ಚು ಮಸೀದಿಗಳು ಎ.ಪಿ.ಉಸ್ತಾದರ ಕಾರಣದಿಂದ ತಲೆ ಎತ್ತಿದೆ. ಇಂದು ಯಾವುದೇ ಮೊಹಲ್ಲಾಗಳಿಗೂ ಹೋದರೆ ಹಲವು ರೀತಿಯಲ್ಲಿ ನಮಾಜು ಮಾಡುವ ಮಸೀದಿ ಗಳು ಕಾಣಸಿಗುತ್ತವೆ.

ತಿಳಿಯದೇ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡಬೇಡಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೨೫ ವರ್ಷ. ನಾನು ಗೃಹಿಣಿ. ಮನೆಯಲ್ಲೇ ಇದ್ದೇನೆ. ಮೂರು ವರ್ಷಗಳ ಹಿಂದೆ ನನ್ನ ಮದುವೆ ಆಯಿತು. ನಾನು ಕಾಲೇಜು ಮುಗಿಸಿ ಕೆಲವು ಸಮಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಅಷ್ಟರಲ್ಲಿ ಒಳ್ಳೆಯ ಸಂಬಂಧ ಬಂತೆಂದು ಮದುವೆ ಮಾಡಿದರು. ನಾನು ಕಾಲೇಜಿನಲ್ಲಿ ಯಾರನ್ನೂ ಲವ್ ಮಾಡಿಲ್ಲ. ನನಗೆ ತುಂಬಾ ಮಂದಿ ಫ್ರೆಂಡ್ಸ್ ಇದ್ದರು. ಅವರನ್ನು ಒಂದೇ ಭಾವನೆಯಿಂದ ನೋಡುತ್ತಿದ್ದೆ. ನನಗೆ ವಯಸ್ಸಿಗೆ ಬಂದ ಒಬ್ಬಳು ತಂಗಿ ಇದ್ದಾಳೆ. ನಾನು ಇಷ್ಟು ಬೇಗ ಮದುವೆ ಬೇಡ ಎನ್ನು ತ್ತಿದ್ದೆ. ಆದರೆ ಮನೆಯಲ್ಲಿ ಒತ್ತಾಯ ಮಾಡಿದ್ದರಿಂದ ಏನೂ ಮಾಡ ಲಾಗಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಕಡೆ ಒಬ್ಬನನ್ನು ಗೆಳೆಯ ನಾಗಿ ಇಷ್ಟಪಟ್ಟಿದ್ದೆ. ಆತ ಮತ್ತು ನಾನು ಜಾತಿ ಬೇರೆ-ಬೇರೆ. ನಾವಿ ಬ್ಬರೂ ಪ್ರತೀ ದಿನ ಸಮಯ ಸಿಕ್ಕಾಗ ಮಾತಾಡುತ್ತಿದ್ದೆವು. ಆತ ನನ್ನನ್ನು ಪ್ರೀತಿಸುತ್ತಿದ್ದ ಎನ್ನುವುದು ನನಗೆ ತಿಳಿದಿತ್ತು. ಆದರೆ ಆತ ನನ್ನಲ್ಲಿ ಹೇಳಿರಲಿಲ್ಲ. ಈ ನಡುವೆ ನನ್ನ ಎಂಗೇಜ್‌ಮೆಂಟ್ ಆಯಿತು. ನಾನು ಮತ್ತೆ ಕೆಲಸಕ್ಕೆ ಹೋಗುವುನ್ನು ನಿಲ್ಲಿಸಿದೆ. ಆಗ ಅವನು ನನ್ನಲ್ಲಿ ಕಾರಣ ಕೇಳಿದ. ನಾನು ಮೊದಲಿಗೆ ಆತನಲ್ಲಿ ನನ್ನ ಮದುವೆಯ ವಿಚಾರ ತಿಳಿಸಲಿಲ್ಲ. ಆತ ಒಂದು ದಿನ ನನ್ನನ್ನು ಲವ್ ಮಾಡುವು ದಾಗಿ ತಿಳಿಸಿದ. ಅದಕ್ಕೆ ನಾನು ಆತನಲ್ಲಿ ನನ್ನ ಎಂಗೇಜ್‌ಮೆಂಟ್ ಆಗಿದೆ ಅಂದೆ. ಆತ ಅದನ್ನು ಕೇಳಿ ತುಂಬಾ ಅತ್ತು ಬಿಟ್ಟ. ಇದೇ ಬೇಸ ರದಲ್ಲಿ ಆತ ಇಲ್ಲಿದ್ದ ಕೆಲಸ ಬಿಟ್ಟು ಬೆಂಗಳೂರಿಗೆ ಹೋದ. ಆನಂತರ ನನಗೆ ಒಮ್ಮೆ ಫೋನ್ ಮಾಡಿದ್ದ. ಈ ವೇಳೆ ನಾನು ಅವನಲ್ಲಿ ಕ್ಷಮೆ ಯಾಚಿಸಿ ‘ನನ್ನನ್ನು ಮರೆತು ಬಿಡು’ ಎಂದೆ. ಆತ ನೀನು ನನ್ನಿಂದ ದೂರವಾದರೆ ಖಂಡಿತಾ ಸಾಯುತ್ತೇನೆ ಎಂದ. ನಾನು ಇದಕ್ಕೆ ಸೊಪ್ಪುಹಾಕದೆ ಆತ ನಿಂದ ದೂರವಾದೆ. ನನ್ನ ಮೊಬೈಲ್ ನಂಬರ್ ಬದಲಾಯಿಸಿದೆ. ಈಗ ನನ್ನ ಮದು ವೆಯಾಗಿದ್ದು, ಸುಖೀ ಸಂಸಾರ ನಡೆಸುತ್ತಿದ್ದೇನೆ. ನನ್ನ ಪತಿ ತುಂಬಾ ಒಳ್ಳೆಯವರು. ಆತ ಏನು ಮಾಡುತ್ತಿದ್ದಾನೆ ಎನ್ನುವುದು ನನಗೆ ತಿಳಿದಿಲ್ಲ. ಆದರೂ ಆತ ನನಗೆ ಆಗಾಗ ನೆನಪಾಗುತ್ತಾನೆ. ಆಗೆಲ್ಲಾ ನಾನು ತಪ್ಪು ಮಾಡುತ್ತಿದ್ದೇನೆ ಎಂದೇ ಅನಿಸು ತ್ತಿದೆ. ಇದೇಕೆ ಹೀಗೆ? ನಾನು ಮಗು ಇಷ್ಟು ಬೇಗ ಬೇಡ ಎಂದು ಗಂಡನಿಗೆ ಹೇಳಿ ದ್ದೇನೆ. ಅವರೂ ಒಪ್ಪಿದ್ದಾರೆ. ಅವರಿಗೆ ಸಮಾಜದಲ್ಲಿ ಒಳ್ಳೆಯ ಗೌರವ ಇದೆ. ನನ್ನ ಪತಿಯ ಜತೆ ಖಾಸಗಿಯಾಗಿ ಜತೆಯಿರುವಾಗಲೂ ಆತನ ನೆನಪಾ ಗುವುದು ವ್ಯಭಿಚಾರಕ್ಕೆ ಸಮವಲ್ಲವೇ? ಈವೇಳೆ ನಾನು ನಿರಾಸಕ್ತಿ ತಾಳಿದರೆ ನನ್ನವರು ಬೇಸರಗೊಳ್ಳುತ್ತಾರೆ. ನನಗೆ ಸಂದಿಗ್ಧ ಸ್ಥಿತಿ ಎದು ರಾಗಿದೆ. ನಾನೇನು ಮಾಡಲಿ? ಸಲಹೆ ಕೊಡಿ.
ಸಲಹೆ: ನಿಮ್ಮ ಪತ್ರ ನೋಡಿದ ಮೇಲೆ ನಿಜಕ್ಕೂ ಸಮಸ್ಯೆ ಏನೆಂದೇ ತಿಳಿಯದಾಗಿದೆ. ಯಾಕೆಂದರೆ ಕೆಲವೊಂದು ನೆನಪುಗಳು ಬೇಡ ಬೇಡವೆಂದರೂ ಮರೆಯಲು ಸಾಧ್ಯವಾಗದೆ ಮತ್ತೆ-ಮತ್ತೆ ಕಾಡುತ್ತವೆ. ಇಂತಹ ನೆನಪನ್ನು ಮನಸ್ಸಿನಿಂದ ಅಳಿಸಿ ಹಾಕಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದು. ಆದರೆ ಅದನ್ನೇ ನೆನಪಿಸುತ್ತಾ ಕುಳಿತುಕೊ ಳ್ಳುವುದು ಬುದ್ಧಿವಂತರ ಲಕ್ಷಣವಲ್ಲ. ನೀವು ಮದುವೆ ಮಾಡಿಕೊಳ್ಳು ವಾಗ ಗಟ್ಟಿ ಮನಸ್ಸಿನಿಂದ ಇದ್ದಿರಿ. ಮತ್ತೆ ಈಗೇಕೆ ಮನಸ್ಸು ಚಂಚಲ ಗೊಳ್ಳುತ್ತಿದೆ? ಆತನನ್ನು ಮನಸ್ಸಿನಿಂದ ಕಿತ್ತು ಹಾಕಿ. ಪತಿ ನಿಮ್ಮನ್ನು ಪ್ರೀತಿಸುತ್ತಾರೆಂದಾದ ಮೇಲೆ ಅವರಿಗೆ ಪ್ರೀತಿ ಧಾರೆಯೆರೆಯಬೇಕಾ ದದ್ದು ಸತಿಯಾದ ನಿಮ್ಮ ಧರ್ಮ. ಮಗುವನ್ನು ಪಡೆಯಲು ನಿಮ್ಮದು ಸೂಕ್ತ ವಯಸ್ಸು. ಈ ಬಗ್ಗೆ ಚಿಂತಿಸಿ. ವಿಳಂಬವಾದರೆ ಸಮಸ್ಯೆಯಾಗ ಬಹುದು. ನೀವು, ನಿಮ್ಮ ಗಂಡ, ಸಂಸಾರ ನೆಮ್ಮದಿಯಿಂದಿದೆ ತಾನೇ? ಮತ್ತೇಕೆ ಹಿಂದಿನ ಯೋಚನೆಗಳು? ತಿಳಿಯದೆ ಮಾಡಿದ ತಪ್ಪಿಗೆ ನೀವು ಕಾರಣ ರಲ್ಲ. ಆದ್ದರಿಂದ ಕಳೆದುಹೋದ ಸಮಯವನ್ನು ಮತ್ತೆ ನೆನೆಯು ವುದು ಬೇಡ. ಪ್ರೀತ್ಸೋರಿಗೆ ಯಾವ ಕೊರತೆಯೂ ಇಲ್ಲ. ನಿಮ್ಮ ಸಂಸಾರ, ಗಂಡನ ಪ್ರೀತಿ, ಮುಂದಿನ ಜೀವನ ಇದರ ಬಗ್ಗೆ ಮಾತ್ರ ಚಿಂತಿಸಿ. ಸಲಹೆ ಬೇಕಾದಲ್ಲಿ ಪತ್ರ ಬರೆಯುತ್ತಿರಿ. ದಾಂಪತ್ಯ ಜೀವನದಲ್ಲಿ ಕಹಿ ಘಟನೆಗಳನ್ನು ಮರೆತು ಇನ್ನಾದರೂ ಖುಷಿಯಾ ಗಿರುತ್ತೀರಿ ಎನ್ನುವ ಭರವಸೆ ನಮ್ಮದು.

25-05-2012

Posted by JAYAKIRANA Kirana on | 0 comments | Leave a comment...

ಮೇಷ : ಸಂಬಂಧಿಕರಲ್ಲಿ ಮನಸ್ತಾಪ ಇರುತ್ತದೆ.
ವೃಷಭ : ನೆರೆಹೊರೆಯವರಿಂದ ಕಿರಿಕಿರಿ ಇರುತ್ತದೆ.
ಮಿಥುನ : ನಿರೀಕ್ಷಿತ ಧನ ಲಾಭ ದೊರೆಯಲಿದೆ.
ಕರ್ಕಾಟಕ : ಶೃಂಗಾರ ವಸ್ತುಗಳನ್ನು ಖರೀದಿ ಮಾಡುತ್ತೀರಿ.
ಸಿಂಹ : ಕೆಟ್ಟ ಜನರಿಂದ ದೂರ ಇರಬೇಕು.
ಕನ್ಯಾ : ಜಂಟಿ ವ್ಯಾಪಾರ ವ್ಯವಹಾರ ಮಾಡಬೇಡಿ.
ತುಲಾ : ಮನೆ ನಿರ್ಮಾಣದಲ್ಲಿ ಪ್ರಗತಿಯಾಗಲಿದೆ.
ವೃಶ್ಚಿಕ : ಮಿತ್ರರಿಂದ ಸಹಾಯ ದೊರೆಯಲಿದೆ.
ಧನು : ತಾಳ್ಮೆಯಿಂದ ಕೆಲಸವನ್ನು ಮಾಡಿರಿ.
ಮಕರ : ಕೆಲಸ ಕಾರ್ಯಗಳಲ್ಲಿ ಅಡೆತಡೆಯಾಗಲಿದೆ.
ಕುಂಭ : ವಿನಾಕಾರಣ ಹಣ ಖರ್ಚಾಗಲಿದೆ.
ಮೀನ : ಮಕ್ಕಳಿಂದ ತುಂಬಾ ಕಿರಿಕಿರಿ ಇರುತ್ತದೆ.

25-05-2012

Posted by JAYAKIRANA Kirana on | 0 comments | Leave a comment...

ಮಂಗಳೂರು: ಪವರ್ ಸರ್ವಿಸ್ ಸಂಸ್ಥೆಗೆ ಡೀಸೆಲ ಮೆಕ್ಯಾನಿಕ್ ಬೇಕು. ೯೮೪೫೨೫೩೫೮೨
ಕಾರ್ಕಳ : ಬಾರ್ & ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೇಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ್ ಬೇಕು ೯೪೪೮೧೦೯೬೮೬.
ಕೊಣಾಜೆ : ಸ್ಟುಡಿಯೋಗೆ ಕೆಲಸಕ್ಕೆ ಜನ ಬೇಕು ೮೭೨೨೭೨೧೦೫೦.
ಉಡುಪಿ : ಸಸ್ಯಾಹಾರಿ ಹೊಟೇಲಿಗೆ ತಿಂಡಿ ಮಾಡುವವರು, ಸಪ್ಲಾಯರ್ ೯೬೬೩೦೯೮೦೨೫.
ಕಾವೂರು : ಕಾರ್ ಡ್ರೈವರ್ ಬೇಕು ೭೨೦೪೬೪೩೪೫೫.
ಮಂಗಳೂರು : ಸೇಲ್ಸ್ ಗರ್ಲ್ಸ್ ಬೇಕು ೮೨೭೭೧೬೫೬೬೨.
ಮಂಗಳೂರು : ಕಾರ್ ಡ್ರೈವರ್‌ಬೇಕು ೦೮೨೪-೪೨೬೮೫೨೪.
ಮಂಗಳೂರು : ಕಂಪ್ಯೂಟರ್ ತರಗತಿ, ಟ್ಯೂಷನ್ ಮತ್ತು ಸಂಸ್ಥೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಅನುಭವ ಇರುವವರು ಬೇಕು ೭೨೦೪೬೪೩೪೫೫.
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಮ್ಯಾನ್ ಬೇಕು ೯೮೪೪೪೬೪೩೭೭.
ಮೋರ್ಗನ್‌ಗೇಟ್ : ಟ್ಯೂಷನ್ - ಕಂಪ್ಯೂಟರ್ ತರಗತಿ ನೀಡಲು ಪುರುಷರು, ಮಹಿಳೆಯರು ಬೇಕು ೯೯೭೨೭೨೫೩೫೭.
ಕೊಡಿಯಾಲ್‌ಬೈಲ್ : ಟ್ರಾವೆಲ್ ಏಜೆನ್ಸಿಗೆ ಲೇಡೀಸ್ ಸ್ಟಾಫ್ ಬೇಕು ೨೪೯೭೮೬೨.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಬಿಲ್ ರೈಟರ್, ವೈಟರ್, ಕ್ಲೀನರ್ ಬೇಕು ೯೬೩೨೮೭೨೯೩೮.
ಮಂಗಳೂರು : ಟೈಲರ್ & ಹೆಲ್ಪರ್ ಬೇಕು ೯೪೪೯೨೦೮೩೫೯.
ಕೊಟ್ಟಾರ: ಡ್ರೈವರ್ ಬೇಕು ೯೫೯೧೩೪೮೭೧೮.
ಕಾವೂರು : ಲೇಡಿಸ್ ಟೈಲರ್ ಬೇಕು ೯೪೪೯೫೫೧೨೦೦.
ಮಂಗಳೂರು : ಲೇಡಿಸ್ ಹಾಸ್ಟೆಲ್‌ಗೆ ಮಹಿಳಾ ಅಡುಗೆಯವರು ಬೇಕು ೯೨೪೧೨೧೪೧೨೨.
ಮಂಗಳೂರು : ಮನೆ ಬಾಡಿಗೆಗೆ ಇದೆ ೯೮೮೬೩೩೦೨೭೧.
ಸುರತ್ಕಲ್ : ಬಟ್ಟೆ ಅಂಗಡಿ ಕೆಲಸಕ್ಕೆ ಆಸುಪಾಸಿನ ಜನ ಬೇಕು ೮೪೯೪೮೫೮೫೪೪.
ಮಂಗಳೂರು : ಎಕೌಂಟೆಂಟ್, ಶೋರೂಂಗೆ ಜನ ಬೇಕು ೭೨೫೯೧೨೪೬೯೨.
ಬಲ್ಮಠ : ಬುಕ್‌ಸ್ಟಾಲ್‌ಗೆ ಜನ ಬೇಕು ೨೪೨೪೭೪೪.
ಮಂಗಳೂರು : ಕೆಲಸಕ್ಕೆ ಜನ ಬೇಕು ೯೮೪೫೮೦೬೪೮೦.
ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ಏಕೌಂಟ್ಸ್ ಗೊತ್ತಿರುವವರು ಬೇಕು ೯೮೪೫೮೭೪೦೬೮.
ಪಡುಬಿದ್ರೆ : ಗೃಹೋಪಕರಣ ಶೋರೂಂ ಗೆ ಸೇಲ್ಸ್‌ಮ್ಯಾನ್, ಲೇಡಿ ಎಕೌಂಟೆಂಟ್, ಸ್ಟೋರ್‌ಕೀಪರ್, ಡ್ರೈವರ್ ಬೇಕು ೯೮೪೫೮೮೪೫೭೪.
ಮಂಗಳೂರು : ಕಾಲ್‌ಸೆಂಟರ್‌ಗೆ ಹೌಸ್‌ಕೀಪರ್ ಬೇಕು ೯೯೧೬೧೧೯೪೬೯.
ಜಪ್ಪು: ಕಚೇರಿ ಕೆಲಸಕ್ಕೆ ಯುವತಿ ಬೇಕು ೯೮೪೪೦೦೯೯೦೫.

ಫೇಸ್‌ಬುಕ್ ಯುವಕರ ದುಶ್ಚಟಕ್ಕೆ ಕೊನೆಯಿಲ್ಲವೇ?

Posted by JAYAKIRANA Kirana on | 0 comments | Leave a comment...

ಈಗಿನ ಯುವಜನತೆ ಅದರಲ್ಲೂ ಹದಿ ಹರೆಯಕ್ಕೆ ಕಾಲಿಟ್ಟ ಮಕ್ಕಳು ಆರ್ಕುಟ್, ಫೇಸ್ ಬುಕ್‌ನಂತಹ ಸಾಮಾಜಿಕ ತಾಣಗಳಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿರುವುದು ಆತಂಕಕಾರಿ ಸಂಗತಿ. ಯಾಕೆಂದರೆ ಸಾಮಾಜಿಕ ತಾಣಗ ಳಲ್ಲಿ ಮುಖ ಪರಿಚಯವಿಲ್ಲದ ಯಾರದ್ದೋ ಜೊತೆ ಸ್ನೇಹ ಬೆಳೆಸುವ ಮಕ್ಕಳು ತಮಗೆ ಅರಿವಿಲ್ಲದೆಯೇ ಅಪಾಯವನ್ನು ಆಹ್ವಾನಿಸು ತ್ತಾರೆ. ಇಲ್ಲಿ ಪ್ರೀತಿ, ಪ್ರೇಮ, ಸ್ವೇಚ್ಛೆ, ಸ್ವಚ್ಛಂದ ಕಾಮ ಎಲ್ಲವನ್ನೂ ಶೇರ್ ಮಾಡುತ್ತಾರೆ. ಫೇಸ್ ಬುಕ್ ದಿನಕಳೆದಂತೆ ಸಾಮಾಜಿಕ ತಾಣವಾಗಿ ಉಳಿದಿಲ್ಲ, ಅದೊಂದು ಸಲಿಂಗ ಕಾಮಿಗಳ, ವೇಶ್ಯೆಯರ, ತಲೆಹಿಡುಕರ ಅಡ್ಡೆಯಾಗುತ್ತಿದೆ. ಇಲ್ಲಿ ಯಾರ ಮುಖವನ್ನು ಯಾರಿಗೋ ಅಂಟಿಸಿ ಯಾರದ್ದೋ ಪ್ರೋಫೈಲ್ ಹಾಕಬಹುದು. ಇದನ್ನೇ ಸತ್ಯವೆಂದು ನಂಬಿ ಮೂರ್ಖರಾಗುವ ಅದೆಷ್ಟೋ ಮಂದಿ ಇರುತ್ತಾರೆ. ಚಂದದ ಹುಡುಗಿಯರ ಫೊಟೋ ಹಾಕಿದರೆ ಸಾಕು, ಅದಕ್ಕೆ ನೂರಾರು ಕಮೆಂಟ್ಸ್‌ಗಳು. ವಾಸ್ತವವಾಗಿ ಆ ಫೊಟೋ ಆಕೆ ಯದ್ದೇ, ಅಲ್ಲವೇ ಎನ್ನುವುದೂ ಕೂಡಾ ತಿಳಿದಿರು ವುದಿಲ್ಲ. ವೇಶ್ಯೆಯರು, ಸಲಿಂಗ ಕಾಮಿಗಳು ಇಂಥ ಸಾಮಾಜಿಕ ತಾಣಗಳನ್ನು ಹೆಚ್ಚಾಗಿ ಆಶ್ರಯಿಸಿ ಕೊಳ್ಳುತ್ತಿದ್ದು, ಭರ್ಜರಿ ವ್ಯವಹಾರವನ್ನೂ ಮಾಡು ತ್ತಿದ್ದಾರೆ ಎನ್ನಲಾಗುತ್ತಿದೆ. ಭಾರತ ಹೊರತುಪಡಿಸಿ ಮುಸ್ಲಿಂ ರಾಷ್ಟ್ರಗಳಲ್ಲಿ ಫೇಸ್‌ಬುಕ್ ಅನ್ನು ಈಗಾ ಗಲೇ ನಿಷೇಧಿಸಲಾಗಿದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಅದನ್ನು ವ್ಯಾಪಕ ಪ್ರಚಾರ ಮಾಡಲಾಗು ತ್ತಿದೆ. ಶಾಲೆ, ಕಾಲೇಜ್ ಕಲಿಯುವ ಹೆಣ್ಣುಮ ಕ್ಕಳು ಮನೆಯಲ್ಲಿ ಕಂಪ್ಯೂಟರ್, ಇಂಟರ್‌ನೆಟ್ ಇರದಿದ್ದರೆ ಸೈಬರ್ ಕೆಫೆಯಲ್ಲಿ ಒಂದು ಗಂಟೆ ಯಾರೊಡನೆಯೋ ಚಾಟಿಂಗ್ ಮಾಡಿ ಮನೆಗೆ ಹಿಂತಿರುಗುತ್ತಾರೆ. ಇದಕ್ಕೆ ಸ್ಪೆಷಲ್ ಕ್ಲಾಸ್ ಎಂದು ಕಾರಣ ಹೇಳುವವರೇ ಹೆಚ್ಚು. ಆದ್ದರಿಂದ ಪೋಷಕರೇ ಜಾಗೃತರಾಗಿ. ನಿಮ್ಮ ಮಕ್ಕಳು ತಡವಾಗಿ ಮನೆ ಸೇರುತ್ತಿದ್ದರೆ, ರೂಮಿನಲ್ಲಿ ಇಂಟರ್‌ನೆಟ್ ಅಳವಡಿಸಿ ಬಾಗಿಲು ಮುಚ್ಚಿ ಹೆಚ್ಚಿನ ಸಮಯ ಕಳೆಯುತ್ತಿದ್ದರೆ ಫೇಸ್‌ಬುಕ್ ಹುಚ್ಚು ಹಿಡಿದಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ. ಅನ್ಯಾಯವಾಗಿ ಮಕ್ಕಳು ಸಲಿಂಗಿ ಗಳ, ವೇಶ್ಯೆಯರ ಜಾಲದಲ್ಲಿ ಸಿಲುಕಿಕೊಳ್ಳುವು ದನ್ನು ತಡೆಯಿರಿ.
ಶಶಿಕಾಂತ್, ರಥಬೀದಿ

ಶ್ರೀಮಂತ ದೇವರುಗಳೂ ಹೈಟೆಕ್ ಭಕ್ತರೂ!
ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳು ಎನ್ನುವುದು ಶ್ರೀಮಂತಿಕೆಯ ಕೇಂದ್ರ ಸ್ಥಾನಗಳಾಗುತ್ತಿವೆ. ಇಲ್ಲಿಗೆ ಬರುವ ಭಕ್ತರು ಬಡವರಾದರೂ ತಮ್ಮನ್ನು ತಾವು ಹೈಟೆಕ್ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ದಿನಬೆಳಗಾದರೆ ಸೃಷ್ಟಿಯಾಗುವ ದೇವಸ್ಥಾನಗಳು ಮೊದಲು ಮಾಡುವ ಕೆಲಸ ಆ ಊರಿನ ಶ್ರೀಮಂತ ವರ್ಗವನ್ನು ಪಟ್ಟಿ ಮಾಡುವುದು. ನಂತರ ಅವ ರನ್ನು ಕರೆತಂದು ದೇವಸ್ಥಾನದ ಟ್ರಸ್ಟಿಗಳನ್ನಾಗಿಸಿ ನಂಬಿಕೆ ಯನ್ನೇ ಬಂಡವಾಳ ಮಾಡಿಕೊಳ್ಳುವ ಒಂದು ದೊಡ್ಡ ವರ್ಗವೇ ನಮ್ಮಲ್ಲಿದೆ. ವರ್ಷವಿಡೀ ಜಾತ್ರೆ, ಹಬ್ಬ ಹರಿದಿನ ಎಂಬ ನೆಪದಲ್ಲಿ ಚಂದ ವಸೂಲಿ ಮಾಡುವ ಈ ವರ್ಗಕ್ಕೆ ನಂಬಿಕೆ, ಭಕ್ತಿಯೇ ಬಂಡವಾಳವಾಗಿ ಹೋಗಿದೆ. ಬಡ ಭಕ್ತರು ದೇವರ ಮೇಲಿನ ಅಪಾರ ಭಕ್ತಿಯಿಂದ ತಮ್ಮಲ್ಲಿ ಇದ್ದರೂ ಇಲ್ಲದಿದ್ದರೂ ಸಾಲ ಮಾಡಿಯಾದರೂ ದೇಣಿಗೆ ಒಪ್ಪಿಸುವ ಸ್ಥಿತಿ ಬಂದಿದೆ. ಇದು ಭಕ್ತಿಯೋ ಸುಲಿಗೆಯೋ ಎಂಬುದು ಅರ್ಥವಾಗುತ್ತಿಲ್ಲ.
ಒಂದು ಊರಿಗೆ ಜನರ ಆರಾಧನೆಗೆ ಒಂದು ದೇವ ಸ್ಥಾನವಿದ್ದರೆ ಪರವಾಗಿಲ್ಲ. ಆದರೆ ಇತ್ತೀಚೆಗೆ ಒಂದೇ ಊರಿ ನಲ್ಲಿ ನಾಲ್ಕೈದು ದೇವಸ್ಥಾನಗಳು ತಲೆಯೆತ್ತುತ್ತಿವೆ. ನಂಬಿ ಕೆಯ ಹೆಸರಿನಲ್ಲಿ ವರ್ಷವಿಡೀ ದೇಣಿಗೆ ಎತ್ತುವ ವರ್ಗವೂ ಈ ದೇವಾಲಯಗಳ ಆಡಳಿತ ಮಂಡಳಿಯಲ್ಲಿದೆ. ದೇವ ರಿಗೆ ಕಾಣಿಕೆ ಕೊಟ್ಟರೆ ಮಾತ್ರ ದೇವರು ಒಲಿಯುತ್ತಾನೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರು ಒಲಿಯು ವುದು ಪರಿಶುದ್ದ ಭಕ್ತಿಗೆ ವಿನಹ ಲೋಡುಗಟ್ಟಲೇ ಸುರಿ ಯುವ ಕಾಣಿಕೆಗಳಲ್ಲ ಎಂಬ ವಿಚಾರವನ್ನು ಎಲ್ಲರೂ ಅರಿ ತುಕೊಳ್ಳಲಿ. ಭಕ್ತರ ರಕ್ಷಣೆಗೆ ಇರುವವನು ದೇವರೇ ಹೊರತು ಭಕ್ತರು ಅವನ ರಕ್ಷಣೆಗಿರುವವರಲ್ಲ. ದೇವಸ್ಥಾನಗಳಿಗೆ ಅಪಾರ ದೇಣಿಗೆ ನೀಡುವುದರಿಂದ ನಿಜವಾಗಿಯೂ ಲಾಭ ವಾಗುವುದು ದೇವಾಲಯದ ಟ್ರಸ್ಟ್‌ಗಳಿಗೆ ಎಂಬ ಸತ್ಯವನ್ನು ಭಕ್ತವರ್ಗ ಅರಿತುಕೊಳ್ಳಲಿ. ದೇವರು ಎನ್ನುವುದು ಇಲ್ಲ್ಲಿ ನೆಪಮಾತ್ರ. ಭಕ್ತಿ ಎನ್ನುವುದು ಹೈಟೆಕ್ ಆಗುವುದು ಬೇಡ. ಇನ್ನಾದರೂ ಜನರು ಈ ಸತ್ಯವನ್ನು ಅರಿತುಕೊಂಡು ಪರಿಶುದ್ದ ಭಕ್ತಿಯಿಂದ ದೇವರನ್ನು ಆರಾಧಿಸಲಿ.
ವಿನ್ಯಾಸ್.ಆರ್ ಶೆಟ್ಟಿ, ಜೆಪ್ಪು

ದೂರದೂರಿನ ನ್ಯಾಯಬೆಲೆ ಅಂಗಡಿಯಿಂದ ಪಡಿತರರಿಗೆ ತೊಂದರೆ
ಇತ್ತೀಚಿಗೆ ವಿಧಾನ ಮಂಡಲದಲ್ಲಿ ಇನ್ನು ಮುಂದೆ ಗ್ರಾಮೀಣ ಪ್ರದೇಶದಲ್ಲಿ ೩೦೦ ಪಡಿತರ ಚೀಟಿಗಳಿಗೆ ಒಂದು ಮತ್ತು ನಗರ ಪ್ರದೇಶಗಳಲ್ಲಿ ೫೦೦ ಪಡಿತರ ಚೀಟಿಗಳಿಗೆ ಒಂದರಂತೆ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಗುವುದು ಎಂಬ ಆಹಾರ ಸಚಿವರ ಹೇಳಿಕೆ ಸ್ವಾಗತಾರ್ಹ. ಪ್ರಸ್ತುತ ರಾಜ್ಯದ ಬಹಳಷ್ಟು ಚಿಕ್ಕ ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿ ಇರದಿರುವುದರಿಂದ ಪಡಿತರ ಚೀಟಿ ಹೊಂದಿರುವ ಚಿಕ್ಕ ಗ್ರಾಮದ ಜನರು ತಮ್ಮ ಪಡಿತರಕ್ಕಾಗಿ ೪-೫ ಕಿ.ಮೀ. ದೂರದ ನ್ಯಾಯ ಬೆಲೆ ಇರುವ ಅಂಗಡಿಗಳಿಗೆ ಹೋಗಿ ದಿನವಿಡೀ ಕಾದು ಪಡಿತರ ಪಡೆಯುವ ವ್ಯವಸ್ಥೆಯಿತ್ತು. ನ್ಯಾಯ ಬೆಲೆ ಅಂಗಡಿ ದೂರದಲ್ಲಿರುವುದರಿಂದ ಕೆಲ ವೊಂದು ಬಾರಿ ಪಡಿತರ ಬಂದಿದೆಯೋ, ಇಲ್ಲವೋ ಮತ್ತು ಬಂದಿದ್ದರೂ ಯಾವಾಗ ಈ ವಿತರಣೆ ಮಾಡುತ್ತಾರೆ ಎಂಬುದು ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ತಿಳಿದಿರುವುದಿಲ್ಲ. ಈ ಮಾಹಿತಿ ಸಿಗದಿರುವುದರಿಂದ ಕೆಲವೊಂದು ಗ್ರಾಹ ಕರು ಪಡಿತರ ವಂಚಿತರಾಗುತ್ತಾರೆ.
ಕೆಲವೊಂದು ಜನ ಪಡಿತರ ವಿತರಣೆಗಿಂತ ಮುಂಚೆಯೇ ಹೋಗಿ ಹಿಂತಿರುಗುವ ಪ್ರಮೇಯವೂ ಬರುತ್ತದೆ. ಅದೇ ರೀತಿ ನಗರಗಳಲ್ಲಿ ಪಡಿತರಕ್ಕಾಗಿ ಜಗಳವು ಆಗುವು ದುಂಟು. ತಿಂಗಳ ಕೊನೆಯಲ್ಲಿ ಪಡಿತರ ಬರುವುದರಿಂದ ಎಲ್ಲರೂ ಹೆಚ್ಚಾಗಿ ಒಂದೇ ದಿವ ಸವೇ ಬರುತ್ತಾರೆ. ಇದರಿಂದ ಸರದಿ ಸಾಲಿನಲ್ಲಿ ತಾ ಮುಂದು, ನಾ ಮುಂದು ಎಂದು ಚೀಟಿ ದಾರರು ಜಗಳವಾಡುತ್ತಾರೆ. ಅಂಗಡಿಯಾತನಿಗೆ ಅಷ್ಟೊಂದು ಪಡಿತರ ಚೀಟಿದಾರರಿಗೆ ಪಡಿ ತರ ವಿತರಿಸುವಾಗ ಸಾಮಾನ್ಯವಾಗಿ ಗೊಂದಲ, ಒತ್ತಡ ಉಂಟಾಗುತ್ತದೆ. ಆ ಎಲ್ಲಾ ಸಮಸ್ಯೆ ಗಳಿಗೆ ಇತಿಶ್ರೀ ಹಾಡಲು ಸಚಿವರ ಹೇಳಿಕೆ ಆದಷ್ಟು ಶೀಘ್ರದಲ್ಲಿ ಜಾರಿಗೆ ಬರಲಿ ಎಂಬುವುದೇ ಎಲ್ಲರ ಆಶಯ.
ಕಿರಣ್ ಕುಮಾರ್, ತಾರಿಗುಡ್ಡೆ

ಮಲ್ಲಿಕಾ ಶೆಟ್ಟಿ ಪ್ರಕರಣ ತನಿಖೆಯಾದೀತೇ?
ಇತ್ತೀಚೆಗೆ ಪುತ್ತೂರು ತಾಲೂಕಿನ ಕುಂಬ್ರದಲ್ಲಿ ಶಂಕಾಸ್ಪದವಾಗಿ ಸಾವನ್ನು ಕಂಡಿ ರುವ ಮಲ್ಲಿಕಾ ಪ್ರಕರಣದ ನೈಜ ವೃತ್ತಾಂತ ವನ್ನು ಪೊಲೀಸರು ಹೊರಗೆಡಬೇಕು. ಯಾಕೆಂದರೆ ಯಾರೊಂದಿಗೂ ವಿರೋಧ ಕಟ್ಟಿಕೊಂಡಿರದ ಮಲ್ಲಿಕಾಳದ್ದು ಆತ್ಮಹತ್ಯೆಯಾ ಗಿರಲು ಸಾಧ್ಯವೇ ಇಲ್ಲ. ಪೊಲೀಸರು ಆಕೆ ಯದ್ದು ಆತ್ಮಹತ್ಯೆ ಎಂದು ನಂಬಿಸುವುದು ಬೇಡ. ಪ್ರಕರಣದಲ್ಲಿ ಕಾಣದ ಕೈಗಳು ಕೈಯಾ ಡಿಸಿರುವ ಸಾಧ್ಯತೆಯಿದೆ. ಆಕೆಯನ್ನು ಬೇರೆಲ್ಲೋ ಸಾಯಿಸಿ ವಿಷ ಸೇವಿಸಿ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗಿದೆ. ಪುತ್ತೂರು ಶಾಸಕಿ ಈ ಬಗ್ಗೆ ಗಮನಹರಿಸಿ ಓರ್ವ ಹೆಣ್ಣಿನ ಸಾವಿಗೆ ನ್ಯಾಯ ಒದಗಿಸಲು ಮುಂದಾಗಲಿ. ಮಲ್ಲಿಕಾ ಶೆಟ್ಟಿ ಪ್ರಕರಣ ವನ್ನು ಮರುತನಿಖೆ ನಡೆಸಿ ಆರೋಪಿ ಗಳನ್ನು ಜೈಲಿಗಟ್ಟುವಂತೆ ಇಲಾಖೆಗೆ ಆದೇಶ ನೀಡಲಿ.
ಕಿರಣ್, ಪೆರುವಾಯಿ

ಕಪಿಲ್‌ದೇವ್‌ಗೆ ಅವಮಾನ ಅಕ್ಷಮ್ಯ ಅಪರಾಧ
ಇಂದು ದುಡ್ಡಿನ ಕುದುರೆಯಂತಾಗಿರುವ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಹಣದ ಮದದಿಂದ ನೈಜ ಕ್ರಿಕೆಟಿಗ ರನ್ನು ಮರೆಯುತ್ತಿದೆ. ಯಾವುದೇ ಸವಲತ್ತು ಇರದ ಕಾಲದಲ್ಲಿ ಕಪಿಲ್‌ದೇವ್ ಅವರ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಬಲಿಷ್ಠ ವೆಸ್ಟಿಂಡೀಸ್ ತಂಡದೆದುರು ಸೆಣಸಾಡಿ ವಿಶ್ವಕಪ್ ತನ್ನದಾಗಿಸಿಕೊಂ ಡಿತ್ತು. ಈ ಮೂಲಕ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಭಾರತದ ಹೆಸರು ಹಾರಾಡುವಂತೆ ನೋಡಿಕೊಂಡಿದ್ದರು.
ಅದರ ನಂತರವೂ ಕಪಿಲ್‌ದೇವ್ ಅವರ ಯಶಸ್ವಿ ನಾಯಕತ್ವ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಅವರಿಂದಾಗಿ ಕ್ರಿಕೆಟ್ ನಲ್ಲಿ ಸಭ್ಯ ಕ್ರಿಕೆಟಿಗರ ಪರಂಪರೆ ಬೆಳೆದು ಬಂತು. ಇಂದು ಐಪಿಎಲ್ ನಂತಹ ಮಂಗಾಟಗಳಲ್ಲಿ ನೋಡುವಾಗ ಕ್ರಿಕೆಟ್ ಬರೀ ಆಟವಾಗಿ ಉಳಿದಿಲ್ಲ, ಹಣದ ಮದ ಇಲ್ಲಿ ಕಾಣುತ್ತಿದೆ. ಇದೀಗ ಬಿಸಿಸಿಐ ಮತ್ತೆ ಕಪಿಲ್‌ದೇವ್ ಅವರಿಗೆ ಅವಮಾನ ಮಾಡಿದೆ. ಇಂದು ಕ್ರಿಕೆಟ್ ಎಂದರೆ ನೆನಪಾಗುವುದು ಕಪಿಲ್‌ದೇವ್. ಅವರಂತಹ ಸಭ್ಯ ಕ್ರಿಕೆಟಿಗರು ಹುಟ್ಟು ಹಾಕಿದ ಪರಂಪರೆಯಿಂದಲೇ ಹೊರತು ಸೆಕ್ಸ್, ಕುಡಿತ, ಕಾಂಚಾ ಣದ ಸಂಗಮವಾಗಿರುವ ಐಪಿಎಲ್‌ನಿಂದ ಅಲ್ಲ.
ಕೂಡಲೇ ಕಪಿಲ್‌ದೇವ್ ಅವರ ಕ್ಷಮೆಯನ್ನು ಬಿಸಿಸಿಐ ಕೇಳ ಬೇಕು. ಅವರಿಗೆ ಆಗಿರುವ ಅವಮಾನವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಸಹಿಸಲು ಸಾಧ್ಯವಿಲ್ಲ.
ಅರುಣ್ ಪಿಂಟೋ, ಬಿಜೈ

ಉಡುಪಿ ಜಿಲ್ಲೆ ಕ್ರಿಮಿನಲ್‌ಗಳ ಸ್ವರ್ಗವಾಗುತ್ತಿದೆಯೇ?
ಉಡುಪಿ ಜಿಲ್ಲೆಯನ್ನು ಹಿಂದೆ ‘ಸುಸಂ ಸ್ಕೃತರ ಜಿಲ್ಲೆ’ ಎಂದು ಕರೆಯುತ್ತಿದ್ದರು. ಉಡುಪಿ ಬ್ರಾಹ್ಮಣರ ಹೋಟೆಲ್ ಹಿಂದೆ ವಿಶ್ವ ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಈಗ ಅದೇ ಉಡುಪಿ ಜಿಲ್ಲೆ ಕ್ರಿಮಿನಲ್‌ಗಳ ಸ್ವರ್ಗ ವಾಗುತ್ತಿದೆ. ಅತ್ಯಾಚಾರ, ಕೊಲೆ, ದರೋ ಡೆಯಂಥ ಪ್ರಕರಣಗಳು ತೀರಾ ಸಾಮಾ ನ್ಯವೆಂಬಂತೆ ನಡೆಯುತ್ತಿವೆ. ಅಪರಾಧ ಹಿನ್ನೆ ಲೆಯ ಯುವಕರು ಉಡುಪಿ ಹಾಗೂ ಸುತ್ತ ಮುತ್ತ ವೇಗವಾಗಿ ಬೆಳೆಯುತ್ತಿದ್ದಾರೆ. ಇವ ರನ್ನು ಬಾಲ್ಯದಲ್ಲೇ ಸರಿದಾರಿಗೆ ತರಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿಲ್ಲ. ಇದಕ್ಕೆ ಕಾರಣ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬೀಡು ಬಿಟ್ಟಿರುವ ಹಳೇ ಮುಖ ಗಳು. ಇವರು ಅಪರಾಧಿಗಳ ಸಂಪೂರ್ಣ ಜಾತಕವನ್ನು ಬಲ್ಲವರಾದ್ದರಿಂದ ಮಾಮೂಲಿ ಪಡೆದು ಕೈ ತೊಳೆದುಕೊಳ್ಳುವುದೂ ನಡೆಯು ತ್ತದೆ. ಹೀಗಾಗಿ ನಾಗರಿಕರಿಗೆ ನೆಮ್ಮದಿಯ ಜೀವನ ಮರೀಚಿಕೆಯಾಗಿದೆ. ಪೊಲೀಸ್ ಇಲಾ ಖೆಯ ಹಿರಿಯ ಅಧಿಕಾರಿಗಳೂ ಅಪರಾಧಿ ಗಳ ಜೊತೆ ಸೇರಿಕೊಂಡು ಜಿಲ್ಲೆಯ ಮಾನ ಹರಾಜು ಹಾಕುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾನೂನು, ಸುವ್ಯವಸ್ಥೆ ಯಾವ ರೀತಿ ಕುಸಿದಿದೆ ಎನ್ನುವುದಕ್ಕೆ ಇತ್ತೀಚೆಗೆ ಮಲ್ಪೆ ಬೀಚ್‌ನಲ್ಲಿ ನಡೆದ ವಿದೇಶಿ ಯುವತಿಯ ಸರಣಿ ಅತ್ಯಾ ಚಾರ ಪ್ರಕರಣವೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ನಾಗ ರಿಕ ಸಮಾಜವೇ ತಲೆತಗ್ಗಿಸುವ ಘಟನೆ ಗಳು ಉಡುಪಿಯಲ್ಲಿ ನಡೆಯುತ್ತಿದ್ದರೂ ಸರ ಕಾರ, ಪೊಲೀಸ್ ಇಲಾಖೆ ಸುಮ್ಮನಿರುವುದು ನಾಚಿಕೆಗೇಡು. ಮೊದಲು ಇಲ್ಲಿನ ಠಾಣೆಗಳಲ್ಲಿ ಬೇರು ಬಿಟ್ಟಿರುವ ಪೊಲೀಸರಿಗೆ ಬೇರೆಡೆ ಜಾಗ ತೋರಿಸುವುದು ಒಳಿತು.
ಯಶವಂತ್, ಉದ್ಯಾವರ

ಹೋಟೆಲ್‌ಗಳಲ್ಲಿ ಬಾಲಕಾರ್ಮಿಕರು
ಮಂಗಳೂರಿನ ವಿವಿಧೆಡೆ ಹೋಟೆಲ್‌ಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿದ್ದಾರೆ. ರಜಾದಿನ ಗಳಲ್ಲಿ ಕೆಲವು ಮಕ್ಕಳು ಪುಸ್ತಕ, ಶಾಲೆಯ ಫೀಸ್ ಹೊಂದಿಸಲೆಂದು ಹೋಟೆಲ್‌ಗಳಲ್ಲಿ ಕೆಲಸ ಮಾಡು ವುದು ಮಾಮೂಲಿ. ಆದರೆ ರಜಾದಿನಗಳನ್ನು ಹೊರ ತುಪಡಿಸಿಯೂ ಕೆಲವು ಹೋಟೆಲ್‌ಗಳ ಕಿಚನ್‌ಗಳಲ್ಲಿ ೧೬ ವರ್ಷಗಳಿಗಿಂತ ಕಡಿಮೆ ಪ್ರಾಯದ ಮಕ್ಕಳು ದುಡಿ ಯುತ್ತಿರುತ್ತಾರೆ. ಇವರ ಬಗ್ಗೆ ಹೋಟೆಲ್ ಮಾಲಕ ರಲ್ಲಿ ಕೇಳಿದರೆ, ಅವರಿಗೆ ೧೮ ವರ್ಷ ವಯಸ್ಸಾಗಿದೆ ಎನ್ನುತ್ತಾರೆ. ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾ ರಿಗಳು ಯಾರಾದರೂ ದೂರು ಕೊಟ್ಟರೆ ಮಾತ್ರ ಬಾಲಕಾರ್ಮಿಕರು ಕೆಲಸ ಮಾಡುವಲ್ಲಿಗೆ ದಾಳಿ ನಡೆ ಸುತ್ತಾರೆ, ಇಲ್ಲದಿದ್ದರೆ ಇಲ್ಲ.
ಮಂಗಳೂರು ನಗರದ ಪ್ರಮುಖ ಕಡೆಗಳಲ್ಲಿ ಇಂದಿಗೂ ಅನೇಕ ಬಾಲ ಕಾರ್ಮಿಕರನ್ನು ದುಡಿಸಲಾ ಗುತ್ತದೆ. ಇವರಿಗೆ ಸಂಬಳ, ವಸತಿ ವ್ಯವಸ್ಥೆ, ಶಿಕ್ಷಣ ಯಾವುದೂ ಸಿಗುತ್ತಿಲ್ಲ. ಆದ್ದರಿಂದ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಚೇರಿಯಲ್ಲೇ ಕುಳಿತಿ ರುವ ಬದಲು ಬಾಲಕಾರ್ಮಿಕರನ್ನು ಎಲ್ಲೆಲ್ಲಿ ದುಡಿಸ ಲಾಗುತ್ತಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸುವ ಅಗತ್ಯ ವಿದೆ. ಇನ್ನಾದರೂ ಇಲಾಖೆ ಎಚ್ಚೆತ್ತುಕೊಳ್ಳಲಿ.
ನಿರಂಜನ್, ಮರಕಡ

ವಿಷಾದವಿದೆ
ದಿನಾಂಕ ೨೧-೨-೨೦೦೧೨ರ ಜಯಕಿರಣದ ಸಂಚಿಕೆಯಲ್ಲಿ ‘ಮಾಲೆ ಗಾಂವ್ ಸ್ಪೋಟ; ಬೆಳ್ತಂಗಡಿಯ ಇಬ್ಬರು ಎನ್‌ಐಎ ವಶಕ್ಕೆ ಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿ ಯಲ್ಲಿ ಸನಾತನ ಸಂಸ್ಥೆಯವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವರದಿಯ ಬಗ್ಗೆ ಸನಾತನದ ಹಿರಿಯರು ಕೆಲವೊಂದು ಆಕ್ಷೇಪ ಸೂಚಿಸಿದ್ದಾರೆ. ಮಾಲೆಂಗಾವ್ ಸ್ಪೋಟ ಪ್ರಕರಣದಲ್ಲಿ ಉದ್ದೇಶ ಪೂರ್ವ ಕವಾಗಿ ಎಳೆದು ತರಲಾಗಿತ್ತು. ಈ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಪಾತ್ರದ ಬಗ್ಗೆ ಇನ್ನೂ ಖಚಿತವಾಗಿಲ್ಲ. ತನಿಖೆ ನಡೆಯುತ್ತಿದೆ. ಹಾಗೆಯೇ ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಬಂಧಿಸಲ್ಪಟ್ಟವರ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ತಮ್ಮ ಪಾತ್ರ ಯಾವುದೇ ಇಲ್ಲ ಎನ್ನುವುದರ ಬಗ್ಗೆ ಸನಾತನ ಸಂಸ್ಥೆ ಕಾನೂನು ಹೋರಾಟ ನಡೆಸು ತ್ತಿದೆ ಎಂದು ಸಂಸ್ಥೆಯ ಸಂಬಂಧಿ ತರು ತಿಳಿಸಿದ್ದಾರೆ. ಪತ್ರಿಕೆಯಲ್ಲಿ ಪ್ರಕಟ ವಾದ ವರದಿಗೆ ಸಂಬಂಧಪಟ್ಟು ಸನಾ ತನ ಸಂಸ್ಥೆಗೆ ನೋವಾಗಿದ್ದರೆ ಪತ್ರಿಕೆ ವಿಷಾದ ವ್ಯಕ್ತಪಡಿಸುತ್ತದೆ.
- ಸಂ

ಮೂಡಬಿದ್ರೆಯಲ್ಲಿ ಎಲ್ಲಾ ವ್ಯವಸ್ಥೆ ಸರಿಯಿದ್ದರೂ ಕಾನೂನು ವ್ಯವಸ್ಥೆ ಏಕೆ ಸರಿಯಿಲ್ಲ?

Posted by JAYAKIRANA Kirana on | 0 comments | Leave a comment...


ಮೂಡಬಿದ್ರೆಯ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಟ್ರಾಫಿಕ್ ಸಮಸ್ಯೆ ಹೇಳತೀರದು. ದೀನ-ದಲಿತರ, ಬಡವರ ಸಮಸ್ಯೆಗಳನ್ನು ಆಲಿಸುವ ಬಗೆಹರಿಸುವ ಅಧಿಕಾರಿಗಳಿಲ್ಲ. ಠಾಣಾ ವ್ಯಾಪ್ತಿಯ ಹೊರಗಿನ ಪ್ರದೇಶದಲ್ಲಿ ಇಸ್ಪಿಟ್, ಕೋಳಿಅಂಕ, ಗೂಡಂಗಡಿ, ಹೊಟೇಲ್‌ಗಳಲ್ಲಿ ಮದ್ಯದ ಬಾಟಲಿಗಳ ಮಾರಾಟ ಭರಾಟೆ ಮಿತಿಮೀರಿದೆ.

ಸಾರ್ವಜನಿಕರ ಪರವಾಗಿ, ಚಿತ್ತರಂಜನ್ ಜೈನ್, ಕರಿಯನಂಗಡಿ, ಬೆಳುವಾಯಿ
ಮಂಗಳೂರು ನಗರದಿಂದ ಪಶ್ಚಿಮ ದಿಕ್ಕಿಗೆ ಸುಮಾರು ೩೮ ಕಿ.ಮೀ. ಕ್ರಮಿಸಿದರೆ ಸಿಗುವುದೇ ಮೂಡುವೇಣುಪುರ. ಸಾವಿರ ವರ್ಷಗಳ ಇತಿಹಾಸವಿರುವ ಜೈನಕಾಶಿ ಕ್ಷೇತ್ರ ಮೂಡ ಬಿದ್ರೆ. ಮೂಡಬಿದ್ರೆ ಮುಂದುವರೆಯುತ್ತಿರುವ ಪಟ್ಟಣ. ಪ್ರಗತಿ ಹೊಂದುತ್ತಿರುವ ನಗರ. ಇದಕ್ಕೆ ಆಳ್ವಾಸ್ ವಿದ್ಯಾ ಸಂಸ್ಥೆ ಅಧ್ಯ ಕ್ಷರು ಡಾ.ಮೋಹನ ಆಳ್ವರೇ ಸಾಕ್ಷಿ. ನಗರ ವ್ಯಾಪ್ತಿ ಎಷ್ಟೇ ಇದ್ದರೂ ದಿನದಿಂದ ದಿನಕ್ಕೆ ಕಟ್ಟಡಗಳು ಮೇಲೇಳುತ್ತಿದೆ. ಜನ ಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಇಮ್ಮಡಿಯಾಗುತ್ತಿದೆ.
ಮೂಡಬಿದ್ರೆಯ ಜನರು ಸರ್ವಧರ್ಮಿಯರು ಶಾಂತಿ ಪ್ರಿಯರು, ಸೌಹಾರ್ದತೆ ಸಹಬಾಳ್ವೆಯಿಂದ ತಮ್ಮ ಜಾತಿ, ಧರ್ಮ, ಭೇದಭಾವವನ್ನು ಮರೆತು ತಮ್ಮ ಬದುಕನ್ನು ನಿರ್ವ ಹಿಸುತ್ತಿರುವ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಮಾದರಿಯಾಗಿದೆ. ಈ ನಗರದಲ್ಲಿ ಪೊಲೀಸ್ ಠಾಣೆ ಇದೆ, ಆದರೆ ಸಬ್‌ಇನ್ಸ್ ಪೆಕ್ಟರ್, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಇದ್ದಾರೆಂದರೆ ನಮ್ಮಂತ ಸಾರ್ವಜನಿಕರು ನಂಬಲು ಸಾಧ್ಯವಿಲ್ಲ. ಇಲ್ಲಿನ ಎಸ್‌ಐ ವರ್ಷದ ಹಿಂದೆ ಹಾಗೂ ಇನ್ಸ್‌ಪೆಕ್ಟರ್ ಎಂಟು ತಿಂಗಳ ಹಿಂದೆ ಈ ಠಾಣೆಗೆ ಸರಕಾರ ನೇಮಕ ಮಾಡಿದೆ. ಆದರೆ ಮೂಡಬಿದ್ರೆ ಜನರ ನಿರೀಕ್ಷಿಸುವಂತಹ ಯೋಗ್ಯ ಅಧಿಕಾರಿಗಳನ್ನು ನೇಮಿ ಸಿಲ್ಲ. ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಟ್ರಾಫಿಕ್ ಸಮಸ್ಯೆ ಹೇಳತೀರದು. ದೀನ-ದಲಿತರ, ಬಡವರ ಸಮಸ್ಯೆಗಳನ್ನು ಆಲಿಸುವ ಬಗೆಹರಿಸುವ ಅಧಿಕಾರಿಗಳಿಲ್ಲ. ಠಾಣಾ ವ್ಯಾಪ್ತಿಯ ಹೊರಗಿನ ಪ್ರದೇಶದಲ್ಲಿ ಇಸ್ಪೀಟ್, ಕೋಳಿಅಂಕ, ಗೂಡಂಗಡಿ, ಹೊಟೇಲ್‌ಗಳಲ್ಲಿ ಮದ್ಯದ ಬಾಟಲಿಗಳ ಮಾರಾಟ ಭರಾಟೆ ಮಿತಿಮೀರಿದೆ. ನಗರದ ಮಧ್ಯಭಾಗದಲ್ಲಿ ಪುರಸಭೆ ಬಳಿ ಹಗಲು ವೇಶ್ಯಾವಾಟಿಕೆ ನಡೆಯುತ್ತಿದ್ದರೂ ಎಸ್‌ಐ, ಪಿ.ಐ ರವರು ಕಣ್ಣು ಮುಚ್ಚಿ ಕುಳಿತುಕೊಂಡಿರುತ್ತಾರೆ. ಈ ಹಿಂದಿನ ದಕ್ಷ ಅಧಿಕಾರಿಯಾಗಿದ್ದ ಎಸ್‌ಐ ಭಾರತಿಯವರು ಈ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು.
ಈಗಿರುವ ಸಬ್‌ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಇನ್ಸ್‌ಪೆ ಕ್ಟರ್ ಸಾರ್ವಜನಿಕರಿಗೆ ಕಾಣಿಸುವುದೇ ಬಹಳ ವಿರಳವಾಗಿರು ತ್ತದೆ. ಇವರು ಸಾರ್ವಜನಿಕರಿಗೆ ಭದ್ರತೆಯನ್ನು ಒದಗಿಸುವಲ್ಲಿ ವಿಫಲರಾಗಿದ್ದರೆ, ಇವರು ಕರ್ತವ್ಯವನ್ನು ನಿಭಾಯಿಸದೆ ತಮ್ಮ ಹೆಚ್ಚಿನ ಸಮಯವನ್ನು ಎಲ್ಲಿ ಕಳೆಯುತ್ತಾರೆ ಎಂದು ತಿಳಿದು ಬರುತ್ತಿಲ್ಲ. ಇವರ ಇಂತಹ ವರ್ತನೆಯಿಂದ ಸಾರ್ವಜನಿಕರು ಇವರ ಬಗ್ಗೆ ಸಂಪೂರ್ಣ ವಿಶ್ವಾಸವನ್ನು ಕಳೆದುಕೊಂಡಿರುತ್ತಾರೆ. ಠಾಣೆಗೆ ದೂರು ನೀಡಲು ಹೋದಲ್ಲಿ ಇವರು ಬೇಜವಾಬ್ದಾರಿ ಯಾಗಿ ವರ್ತಿಸುವುದಲ್ಲದೆ ಏಕವಚನ ಪದಗಳನ್ನು ಬಳಸು ತ್ತಾರೆ. ಇವರು ಮೂಡಬಿದ್ರೆ ಠಾಣೆಗೆ ಯೋಗ್ಯರಲ್ಲವೆಂದು ನಮ್ಮೆ ಲ್ಲರ ಸಾರ್ವಜನಿಕ ಅಭಿಪ್ರಾಯ. ಯಾವುದೇ ಪ್ರಕರಣದಲ್ಲಿ ಇವರು ಸರಿಯಾಗಿ ಸ್ಪಂದಿಸಿರುವುದು ಇದುವರೆಗೂ ಕಂಡು ಬಂದಿರುವುದಿಲ್ಲ. ಪ್ರಕರಣಗಳನ್ನು ತಿರುಚುವ ಅಪಾರ ಹಣ ಗಳಿಸುವ ಅಭಿಪ್ರಾಯವಿದ್ದಂತೆ ಕಂಡುಬರುತ್ತದೆ.
ನಾವು ದೂರು ನೀಡಲು ಹೋದ ಸಮಯದಲ್ಲೆಲ್ಲ ಇವರು ಠಾಣಾ ಸಿಬ್ಬಂದಿಯವರನ್ನು ತನ್ನ ಚೇಂಬರಿನಲ್ಲಿ ಇರಿಸಿಕೊಂಡು ಗಂಟೆಗಟ್ಟಲೆ ಉಪದೇಶ ನೀಡುತ್ತಿರುವಂತೆ ಕಂಡುಬರುತ್ತದೆ. ತಮ್ಮ ಚೆಂಬರಿನ ಬಾಗಿಲಿಗೆ ಕಪ್ಪು ಬಣ್ಣದ ಗಾಜನ್ನು ಹಾಕಿಸಿ ರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಇದರಿಂದ ತಿಳಿಯುವುದೇನೆಂದರೆ ಒಳಗಿನ ದೃಶ್ಯ ಬಯಲಾಗದಿರಲಿ ಹಾಗೂ ಹೊರಗಿನ ದೃಶ್ಯ ಮನವರಿಕೆಯಾಗಲಿ ಎಂಬ ಉದ್ದೇಶವಿರ ಬಹುದೇ? ಇದು ತಮ್ಮ ಕರ್ತವ್ಯದಲ್ಲಿನ ಪಾರದರ್ಶಕತೆಯನ್ನು ಸೂಚಿಸುವುದೇ? ತನ್ನ ವಸತಿಗೃಹವನ್ನು ಹಾಗೂ ಠಾಣೆಯನ್ನು ನವೀಕರಣಗೊಳಿಸಿದ್ದಲ್ಲದ್ದೆ ತನ್ನ ಐಶಾರಾಮಿ ಚೇಂಬರನ್ನು ನಿರ್ಮಿಸಿಕೊಂಡಿದ್ದಾರೆ. ಈ ಕಾಮಗಾರಿಗಳಿಗೆ ತಗಲುವ ವೆಚ್ಚ ವನ್ನು ಯಾವ ಮೂಲದಿಂದ ಭರಿಸಲಾಗಿದೆ? ಕಾಮಗಾರಿ ಯನ್ನು ನಿರ್ವಹಿಸಲು ಅನುಮತಿ ಇದೆಯೇ? ಆ ಎಲ್ಲಾ ಕಾಮ ಗಾರಿಗೆ ಇವರು ಸಾರ್ವಜನಿಕರಿಂದ ನಗದು ಹಾಗೂ ಸೊತ್ತುಗಳನ್ನು ಬಳಸಿಕೊಂಡಿರುತ್ತಾರೆಂದು ತಿಳಿದುಬಂದಿದೆ.
ಠಾಣೆಗೆ ದೂರು ನೀಡಲು ಹೋದಲ್ಲಿ ಅಥವಾ ದೂರಿನ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಕೇಳಲು ಹೋದಲ್ಲಿ ಇವರು ಸಿಬ್ಬಂದಿಯ ಕೊರತೆ ಇರುವುದಾಗಿ ಉತ್ತರ ನೀಡುತ್ತಾರೆ. ಸಿಬ್ಬಂದಿಯ ಕೊರತೆ ಇರಲು ಕಾರಣವೇನು? ಇಲ್ಲಿಗೆ ಸಿಬ್ಬಂದಿ ವರ್ಗಾವಣೆಯಾಗಿ ಬರಲು ಹಿಂಜರಿಯಲು ಕಾರಣವೇನು? ಹಾಗೂ ಸಿಬ್ಬಂದಿ ಈ ಠಾಣೆಯಿಂದ ಬೇರೆ ಠಾಣೆಗೆ ವರ್ಗಾ ವಣೆಯಾಗುತ್ತಿರುವುದು ಏಕೆ? ಕೆಲವು ಸಿಬ್ಬಂದಿಯ ಮನಸ್ಥಿತಿ ಕಳೆದುಕೊಂಡ ಅನಾರೋಗ್ಯದಿಂದ ವೈದ್ಯಕೀಯ ರಜೆಯ ಮೇಲೆ ತೆರಳುತ್ತಿರುವುದು ಏಕೆ? ಸಾರ್ವಜನಿಕರು ವಿಚಾರಿಸಿದಂತೆ ಈ ಪೊಲೀಸ್ ಇನ್ಸ್‌ಪೆಕ್ಟರ್ ತಮ್ಮ ಸಿಬ್ಬಂದಿ ವರ್ಗದವರಿಗೆ ಮಾನಸಿಕವಾಗಿ ಕಿರುಕುಳ, ಸಿಬ್ಬಂದಿಯನ್ನು ನಡೆಸಿಕೊಳ್ಳವ ರೀತಿ ನೀತಿ ಸರಿಯಿಲ್ಲವೆಂದು ಕಂಡುಬಂದಿರುತ್ತದೆ. ಮಾನ್ಯ ಪೊಲೀಸ್ ಆಯುಕ್ತರವರು ಮೇಲಿನ ಸಮಸ್ಯೆಗಳ ಬಗ್ಗೆ ಕೂಲಂ ಕುಷವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವರೇ ಕಾದು ನೋಡ ಬೇಕಾಗಿದೆ.

ಸೆಝ್ ಕಾಮಗಾರಿಗೆ ತಡೆ: ಬಂಧಿತರನ್ನು ರಕ್ಷಿಸಿದ ಮಕ್ಕಳು

Posted by JAYAKIRANA Kirana on | 0 comments | Leave a comment...



ಮಂಗಳೂರು: ಎಂಎಸ್‌ಇಝಡ್ ಕಾರಿಡಾರ್ ರಸ್ತೆ ಕಾಮಗಾರಿಗೆ ತಡೆಯೊಡ್ಡಿ ಬಂಧನಕ್ಕೊಳಗಾದ ಕೂಳೂರು ಮೇಲುಕೊಪ್ಪಳ ಗ್ರಾಮಸ್ಥರನ್ನು ಅವರ ಮಕ್ಕಳು ರಕ್ಷಿಸಿದ ಘಟನೆ ನಿನ್ನೆ ಪಣಂಬೂರು ಠಾಣೆಯಲ್ಲಿ ನಡೆದಿದೆ.
ಕೂಳೂರಿನಿಂದ ಎಂಎಸ್ ಇಝಡ್‌ಗೆ ನೇರ ಸಂಪರ್ಕ ಕಲ್ಪಿಸುವ ಕಾರಿಡಾರ್ ರಸ್ತೆಯನ್ನು ವಿಸ್ತರಿಸಲು ಎಂಎಸ್‌ಇಝಡ್ ಫಲ್ಗುಣಿ ನದಿಗೆ ಮಣ್ಣು ತುಂಬಿತ್ತು. ನದಿಗೆ ಮಣ್ಣು ಹಾಕಿದ ಕಾರಣ ಮಳೆಗಾಲದಲ್ಲಿ ನೆರೆ ನೀರು ಮನೆ ಹಾಗೂ ತೋಟಕ್ಕೆ ನುಗ್ಗು ತ್ತದೆ ಎಂಬ ಆತಂಕ ವ್ಯಕ್ತಪಡಿಸಿ, ಕೂಳೂರು ನದಿ ತೀರದ ಮೇಲು ಕೊಪ್ಪಳ ನಿವಾಸಿಗಳು ಫಲ್ಗುಣಿ ನದಿಗೆ ಮಣ್ಣು ತುಂಬಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಿದ್ದರೂ ಎಂಎಸ್ ಇಝಡ್ ತನ್ನ ಕಾಮಗಾರಿ ಮುಂದು ವರಿಸಿತ್ತು. ಇದರಿಂದ ಅಕ್ರೋಶಗೊಂ ಡಿದ್ದ ಗ್ರಾಮಸ್ಥರು ನದಿಗೆ ಮಣ್ಣು ತುಂಬುವುದನ್ನು ವಿರೋಧಿಸಿ ಹಲ ವಾರು ಬಾರಿ ಪ್ರತಿಭಟನೆ ನಡೆಸಿದ್ದರು. ಬುಧವಾರವೂ ಜಿಲ್ಲಾಧಿಕಾರಿ ಕಚೇರಿ ಮುಂದೆ ನೆರೆ ಭೀತಿಯಿಂದ ಪ್ರಾಣ ಕಳೆದುಕೊಳ್ಳುವ ಅಣುಕು ಶವ ಪ್ರದ ರ್ಶನ ನಡೆಸಿದ್ದರು. ಹೀಗಿರುವಾಗಲೇ ಜಿಲ್ಲಾಧಿಕಾರಿಗಳ ಲಿಖಿತ ಅನುಮತಿ ಪಡೆದುಕೊಂಡ ಎಂಎಸ್‌ಇಝಡ್ ನಿನ್ನೆ ಪೊಲೀಸ್ ಬಂದೋಬಸ್ತ್ ಮೂಲಕ ಕಾಮಗಾರಿ ಆರಂಭಿಸಿತ್ತು. ಇದನ್ನು ಗಮನಿಸಿದ ಮೆಲುಕೊಪ್ಪಳ ನಿವಾಸಿಗಳು ಕಾಮಗಾರಿಗೆ ತಡೆವೊಡ್ಡಿದ್ದರು. ಹೀಗಾಗಿ ಸ್ಥಳದಲ್ಲಿದ್ದ ಪೊಲೀಸರು ೪೮ ಮಂದಿ ಗ್ರಾಮಸ್ಥರನ್ನು ಕೆಲಸಕ್ಕೆ ತಡೆಯೊಡ್ಡಿದ ಆರೋಪದ ಮೇಲೆ ಬಂಧಿಸಿದ್ದರು. ಬಂಧನಕ್ಕೊಳಗಾದ ಮಹಿಳೆಯರ ಕೈಯಲ್ಲಿ ಮಕ್ಕಳಿದ್ದು ಇವರನ್ನು ಅಲ್ಲೆ ಬಿಟ್ಟು ಬರುವಂತೆ ಪೊಲೀಸರು ಒತ್ತಾಯಿಸಿದ್ದರು. ಆದರೆ ಮಹಿಳೆಯರು ಇದಕ್ಕೆ ಒಪ್ಪಲೇ ಇಲ್ಲ, ಹೀಗಿರುವಾಗ ಪೊಲೀಸರು ಮಕ್ಕಳ ಜೊತೆಗೆ ಮಹಿಳೆಯರನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ವಿಚಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಗೆ ತಿಳಿದು ಬಂದಿದ್ದು. ಮಕ್ಕಳನ್ನು ಪೊಲೀಸ್ ಠಾಣೆಯಲ್ಲಿ ಇರಿಸಿಕೊಳ್ಳಲು ಅವಕಾಶ ಇಲ್ಲದ ಕಾರಣ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿದರೆನ್ನಲಾಗಿದೆ. ಹೀಗಾಗಿ ಗ್ರಾಮಸ್ಥರನ್ನು ಪೊಲೀಸರು ಕೂಡಲೇ ಬಿಡುಗಡೆ ಮಾಡಿದ್ದಾರೆ. ಎಂಎಸ್‌ಇಝಡ್ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿಯನ್ನು ಮುಂದುವರಿಸಿದೆ.

ವಿದ್ಯಾ ದಿನಕರ್ ಬಂಧನ
ಫಲ್ಗುಣಿ ನದಿಯನ್ನು ಅತಿಕ್ರಮಿಸಿ ಎಂಎಸ್‌ಇಝಡ್ ರಸ್ತೆ ನಿರ್ಮಿಸುವುದನ್ನು ಪ್ರತಿಭಟಿಸಿದ ಮೇಲ್‌ಕೊಪ್ಪಳ, ಕೂಳೂರು ಪರಿಸರದ ನಿವಾಸಿಗಳನ್ನು ಪೊಲೀಸರು ಬಂಧಿಸಿ ಕೇಸ್ ದಾಖಲಿಸಿರುವಂತೆಯೇ, ಸ್ಥಳಕ್ಕೆ ಭೇಟಿ ನೀಡದ ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದ ಹೋರಾಟಗಾರ್ತಿ ವಿದ್ಯಾ ದಿನಕರ್ ಹಾಗೂ ಇತರ ನಾಲ್ವರನ್ನು ಸಂಜೆ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಪ್ರತಿಭಟನೆ ನಡೆಯುವ ವೇಳೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಸಾರ್ವಜನಿಕರ ಸಮಸ್ಯೆಯನ್ನು ಆಲಿಸುತ್ತೇನೆ ಎಂದಿದ್ದು, ಸಂಜೆಯಾದರೂ ಸ್ಥಳಕ್ಕೆ ಭೇಟಿ ನೀಡದ್ದರಿಂದ ಹೋರಾಟಗಾರ್ತಿ ವಿದ್ಯಾ ದಿನಕರ್ ಹಾಗೂ ಇತರರು ಜಿಲ್ಲಾಧಿಕಾರಿ ಕಚೇರಿಗೆ ಕಾರಣ ಕೇಳಿ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ವಿದ್ಯಾ ಅವರಿಗೆ ಲಾಠಿ ಎತ್ತಿದ್ದರಿಂದ ಕುಪಿತಗೊಂಡ ಹೋರಾಟಗಾರರು ಪ್ರಶ್ನಿಸಿದ್ದನ್ನೇ ನೆಪವಾಗಿಟ್ಟುಕೊಂಡು ವಿದ್ಯಾ ದಿನಕರ್ ಹಾಗೂ ಸಂತಸ್ತ ಗುಂಪಿನ ಜೆಸಿಂತಾ ಡಿಸೋಜ, ಲತಾ ಡಿಸೋಜ, ಗಾಡ್‌ಫ್ರಿ ಹಾಗೂ ಸಾಮಾಜಿಕ ಕಾರ್ಯಕರ್ತ ಅಶೋಕ್ ಅಮೀನ್ ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಅಕ್ರಮ ಕೂಟ ಸೇರಿ ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವೂ ಸೇರಿದಂತೆ ಇನ್ನಿತರ ಗಂಭೀರ ಪ್ರಕರಣಗಳೂ ದಾಖಲಾಗಿವೆ. ಇದು ಹೋರಾಟವನ್ನು ಹತ್ತಿಕ್ಕುವ ಕ್ರಮವಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಫೇಸ್‌ಬುಕ್ ಪ್ರೇಮ: ಟೆಕ್ಕಿ ಸಾವು, ಪ್ರಿಯತಮೆ ಬಂಧನ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಎಚ್‌ಪಿ ಸಂಸ್ಥೆ ಉದ್ಯೋಗಿ ಟೆಕ್ಕಿ ರಾಜು ವಿಕೃತ ಸಾವಿಗೆ ಕಾರಣಳಾದ ಮಾಯಾಂಗನೆ ಜೆನ್ನಿಫರ್ ಳನ್ನು ಮಹದೇವಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೇಸ್‌ಬುಕ್ ಮೂಲಕ ಪರಿಚಯ ವಾಗಿದ್ದ ರಾಜು (ಶ್ರೀರಾಜ್)ನನ್ನು ಮೋಹದ ಬಲೆಗೆ ಬೀಳಿಸಿ ಪ್ರೀತಿ ಹೆಸರಲ್ಲಿ ಮೋಸ ಮಾಡಿದ ಜೆನ್ನಿಫರ್ ತನ್ನ ಅಸಲಿ ಕತೆಯನ್ನು ಮಹದೇವಪುರ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.
ಎಂಬಿಎ ಅಂದಿದ್ದ ಎಸ್ಸೆಸೆಲ್ಸಿ ಓದಿದ ಪ್ರಿಯತಮೆ
ಅಸಲಿಗೆ ಪ್ರೀತಿ ಕೊಂದ ಕೊಲೆಗಾರ್ತಿ ಹೆಸರು ಜೆನ್ನಿಫರ್ ಅಲ್ಲ. ಶ್ರೀರಾಜುಗೆ ಬೇರೆಯೊಬ್ಬ ಹುಡುಗಿಯ ಫೋಟೊ ಕಳಿಸಿದಂತೆ ತನ್ನ ಹೆಸರನ್ನು ಸಹ ಈಕೆ ಮರೆಮಾಚಿದ್ದಳು.
ಜೆನ್ನಿಫರ್ ನಿಜವಾದ ಹೆಸರು ಎಲಿಜಬೆತ್. ಬ್ಯಾಂಕ್‌ವೊಂದರ ಕಾಲ್‌ಸೆಂಟರ್‌ನಲ್ಲಿ ಟೆಲಿ ಕಾಲರ್ ಆಗಿ ಉದ್ಯೋಗ ನಡೆಸುತ್ತಿರುವ ಈಕೆ ಶ್ರೀರಾಜ್ ಜೊತೆ ಹೇಳಿದ್ದೆಲ್ಲವೂ ಅಪ್ಪಟ ಸುಳ್ಳು.
ಹುಡುಗಿಯರು ಫ್ಲರ್ಟ್ ಮಾಡುತ್ತಾರೆ ಹುಷಾರ್:
ಕೇವಲ ಎಸ್‌ಎಸ್‌ಎಲ್‌ಸಿ ಓದಿರುವ ಎಲಿಜಬೆತ್ ತಾನು ಎಂಬಿಎ ಓದಿದ್ದೇನೆ. ಐಬಿಎಂನಲ್ಲಿ ಉದ್ಯೋಗ ಎಂದು ಹೇಳಿಕೊಂಡು ರಾಜುವನ್ನು ಬಲೆಗೆ ಹಾಕಿಕೊಂಡಿದ್ದಳು. ಟೆಲಿ ಕಾಲರ್ ಆಗಿ ಮಧುರ ದನಿ ಹೊಂದಿದ್ದ ಎಲ್ಸಿ ಹುಡುಗಾಟಕ್ಕೆ ರಾಜು ಜೊತೆ ಮಾತುಕತೆಗೆ ಇಳಿದಳು.
ಯಾವುದೋ ಪರ್ಸನಲ್ ಲೋನ್ ಸಂಬಂಧ ಮಾತುಕತೆ ಆರಂಭವಾ ಗಿದ್ದು, ಪ್ರೇಮಕ್ಕೆ ತಿರುಗಿಬಿಟ್ಟಿತ್ತು. ಎಲ್ಸಿಗೆ ಸರಿ ಸುಮಾರು ೬ ಸಾವಿರಕ್ಕೂ ಹೆಚ್ಚು ಎಸ್‌ಎಂಎಸ್ ಕಳಿಸಿದ್ದ ರಾಜು, ಫೇಸ್‌ಬುಕ್‌ನಲ್ಲಿ ಆಕೆ ಕಳಿಸಿದ್ದ ನಕಲಿ ಫೋಟೋವನ್ನೇ ಅಸಲಿ ಎಂದು ತಿಳಿದು ಖುಷಿ ಪಟ್ಟಿದ್ದ.
ಎಲ್ಸಿ(ಜೆನ್ನಿ) ಫ್ಲರ್ಟ್ ಮಾಡುತ್ತಿದ್ದಾಳೆ ಎಂಬ ಸಣ್ಣ ಸುಳಿವು ಕೂಡಾ ರಾಜುಗೆ ಸಿಕ್ಕಿರಲಿಲ್ಲ. ರಾಜು ದಿನೇದಿನೇ ತನ್ನನ್ನು ಇಷ್ಟಪಡುವುದು ಹೆಚ್ಚಾಗತೊಡಗಿದ್ದಂತೆ ಎಚ್ಚೆತ್ತ ಕೊಂಡ ಎಲ್ಸಿ ಆತನ ಪ್ರೇಮವನ್ನು ನಿರಾಕರಿಸಿದಳು. ಒಮ್ಮೆ ಕೂಡಾ ಭೇಟಿಯಾಗುವ ಅವಕಾಶ ನೀಡಲಿಲ್ಲ.
ಎಲ್ಸಿ ತನ್ನ ನಿಜಸ್ವರೂಪ ಹೇಳಿದ್ದರೆ ರಾಜು ಸಣ್ಣ ಶಾಕ್ ಅನುಭವಿಸಿ ಬದುಕಿರುತ್ತಿದ್ದನೋ ಏನೋ ಆದರೆ, ಎಲ್ಸಿ ಮತ್ತೆ ಎಡವಿದಳು. ಡೇವಿಡ್ ಎಂಬುವರ ಜೊತೆ ನನ್ನ ನಿಶ್ಚಿತಾರ್ಥವಾಗಿದೆ ಮುಂದಿನ ತಿಂಗಳು ನಾವು ಇಂಗ್ಲೆಂಡ್‌ಗೆ ಹೋಗುತ್ತಿದ್ದೇವೆ ಎಂದು ಮತ್ತೊಂದು ಸುಳ್ಳು ಪೋಣಿಸಿಬಿಟ್ಟಳು.
ನಿಶ್ಚಿತಾರ್ಥದ ವಿಷಯ ತಿಳಿದ ಮೇಲೆ ರಾಜು ಕಂಗಾಲಾಗಿ ೨೫ಕ್ಕೂ ಅಧಿಕ ಇಮೇಲ್ ಕಳಿಸಿದ. ಮತ್ತೆ ಮತ್ತೆ ಕರೆ ಮಾಡಲು ಯತ್ನಿಸಿ ವಿಫಲನಾಗಿ ಎಸ್‌ಎಂಎಸ್ ಕಳಿಸಿದ. ಆದರೆ ಆಕೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಪರಿಣಾಮ ಟೆಕ್ಕಿ ರಾಜು ವಿಚಿತ್ರವಾಗಿ ತನ್ನ ಜೀವನಕ್ಕೆ ಅಂತ್ಯ ಹಾಡಿಕೊಂಡು ಬಿಟ್ಟ. ಈ ಪ್ರಕರಣ ಬೇಧಿಸಿದ ಮಹದೇವಪುರ ಠಾಣೆ ಪೊಲೀಸರನ್ನು ಶ್ಲಾಘಿಸಿದ ಎಸಿಪಿ ನರಸಿಂಹಯ್ಯ ಅವರು, ಎಲಿಜಬೆತ್ ವಿಚಾರಣೆ ನಂತರ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.

ಶಿರ್ವ: ಮುದರಂಗಡಿ ರಸ್ತೆ ಕಾಮಗಾರಿಗೆ ಆಗ್ರಹಿಸಿ ರಸ್ತೆ ತಡೆ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಜನ ಸಂಚಾರಕ್ಕೆ ಅಯೋಗ್ಯ ಎನಿಸಿದ ಮುದ ರಂಗಡಿಯಿಂದ ಶಿರ್ವ ಪ್ರಿನ್ಸ್‌ಪಾ ಯಿಂಟ್ ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀ ಯರು ಗುರುವಾರ ಶಿರ್ವ-ಕಟಪಾಡಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಸುಮಾರು ಮೂರು ಕಿ.ಮೀ ಉದ್ದದ ಶಿರ್ವ ಪ್ರಿನ್ಸ್‌ಪಾಯಿಂಟ್‌ನಿಂದ ಮುದರಂಗಡಿಯವರೆಗೆ ಅತೀ ಹತ್ತಿರದ ಜಿ.ಪಂ ಅಧೀನದಲ್ಲಿರುವ ರಸ್ತೆ, ಈ ಭಾಗದ ೫೦೦ಕ್ಕೂ ಅಧಿಕ ಮನೆಗಳ ಜೀವನಾಡಿಯಾಗಿ ಪ್ರಮುಖ ಸಂಪರ್ಕ ಕಲ್ಪಿಸುವಂತದ್ದಾಗಿದೆ. ಈ ರಸ್ತೆಯು ಹಲವಾರು ಸಮಯದಿಂದ ಅತ್ಯಂತ ಕುಲಗೆಟ್ಟಿದ್ದು, ಸ್ಥಳೀಯಾಡಳಿತ ಸಹಿತ ವಿವಿಧ ಇಲಾಖೆಗಳಿಗೆ, ಜನಪ್ರತಿನಿಧಿ ಗಳಿಗೆ ಹಲವು ಬಾರಿ ಮನವಿ ಅರ್ಪಿ ಸಿದ್ದರೂ ರಸ್ತೆ ದುರಸ್ತಿಯಾಗಿಲ್ಲ. ಬಸ್ ಸಂಚಾರವಿರದ ಈ ರಸ್ತೆಯಲ್ಲಿ ರಿಕ್ಷಾ ಚಾಲಕರು ಬರಲು ಹಿಂದೇಟು ಹಾಕು ತ್ತಾರೆ. ಇದರಿಂದಾಗಿ ಅನಾರೋಗ್ಯ ಪೀಡಿತರು ನಡೆದುಕೊಂಡೇ ಹೋಗ ಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.
ಪ್ರಿನ್ಸ್ ಪಾಯಿಂಟ್, ಕುಂಜುಗುಡ್ಡೆ, ಮುದರಂಗಡಿ ಪರಿಸರದ ಸಾರ್ವ ಜನಿಕರು ಬುಧವಾರದಿಂದ ಮುದರಂ ಗಡಿ - ಪ್ರಿನ್ಸ್ ಪಾಯಿಂಟ್ ಈ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸುತ್ತಿದ್ದಾರೆ. ಜಿಲ್ಲಾಡಳಿತವು ಮಳೆ ಗಾಲಕ್ಕೆ ಮುನ್ನ ರಸ್ತೆ ದುರಸ್ತಿ ಮಾಡದಿದ್ದರೆ, ತೀವ್ರ ಪ್ರತಿಭಟನೆ ಮಾಡುವುದಾಗಿ ಆಗ್ರಹಿಸಿದ್ದಾರೆ. ಗುರುವಾರವೂ ಪ್ರತಿಭಟನಾಕಾರರು ರಸ್ತೆ ಪಕ್ಕದ ಶಿರ್ವ- ಕಟಪಾಡಿ ರಸ್ತೆಯ ಮಧ್ಯೆ ಕುಳಿತು ಸುಮಾರು ಹತ್ತು ನಿಮಿಷಗಳ ಕಾಲ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.
 ಈ ಸಂದರ್ಭ ಮುದರಂಗಡಿ ಗಾ.ಪಂ ಉಪಾಧ್ಯಕ್ಷ ಮುದ್ದು ಸುವರ್ಣ ಮಾತನಾಡಿ, ಹಿಂದಿನ ಮಂಡಲ ಪಂಚಾಯತ್ ಅವಧಿಯಲ್ಲಷ್ಟೇ ಈ ರಸ್ತೆ ಕೆಟ್ಟುಹೋಗಿತ್ತು. ಬಳಿಕ ದುರಸ್ಥಿ ಕಾಣದೆ ಸಂಚಾರಕ್ಕೆ ಅಯೋಗ್ಯವೆನಿಸಿದೆ. ಹಾಗಾಗಿ ಮಳೆಗಾಲಕ್ಕೆ ಮುನ್ನ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆ ಪಂಚಾಯತ್ ಅಧ್ಯಕ್ಷ ಸುನೀಲ್ ರಾಜ್ ಶೆಟ್ಟಿ ಈ ರಸ್ತೆಯೇ ಇಲ್ಲ ಎಂಬ ಹೇಳಿಕೆಯನ್ನು ಮಾಧ್ಯಮಕ್ಕೆ ನೀಡಿದ್ದು, ಇದರಿಂದ ಇಲ್ಲಿಯ ಜನರು ಸಿಟ್ಟಿಗೆದ್ದು ಪ್ರಿನ್ಸ್ ಪಾಯಿಂಟ್‌ನಿಂದ ಮುದರಂಗಡಿಗೆ ಸಾಗುವ ಈ ರಸ್ತೆಯನ್ನೇ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
 ಸ್ಥಳೀಯರೂ ಮಾತನಾಡಿ, ರಸ್ತೆ ಸರಿಪಡಿಸುವ ತನಕ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದಿದ್ದಾರೆ.
 ಇದೇ ಸಂದರ್ಭ ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜರೊಂದಿಗೆ ದೂರವಾಣಿ ಮೂಲಕ ಜಿಲ್ಲಾ ಪಂಚಾಯತ್ ಸಿಓ ಮಾತನಾಡಿ, ರಸ್ತೆ ದುರಸ್ಥಿಗೆ ಮಂಜೂರಾತಿ ದೊರಕಿದೆ. ಮಳೆಗಾಲ ಮುಗಿದ ತಕ್ಷಣ ದುರಸ್ಥಿಗೊಳಿಸುವ ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರರು ಅವರ ಭರವಸೆಯ ಮಾತಿಗೆ ಬೆಲೆಕೊಡದೆ ತುರ್ತಾಗಿ ರಸ್ತೆ ಕಾಮಗಾರಿ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಯಡಿಯೂರಪ್ಪ ಕಾಂಗ್ರೆಸ್‌ಗೆ ಬರಲು ಬಿಡುವುದಿಲ್ಲ: ಪೂಜಾರಿ

Posted by JAYAKIRANA Kirana on | 0 comments | Leave a comment...

ಸುಳ್ಯ: ಯಡಿಯೂರಪ್ಪ ಕಾಂಗ್ರೆ ಸ್‌ಗೆ ಬರಲು ಪೂಜಾರಿ ಬಿಡುವುದಿಲ್ಲ, ಅವರ ಕೊಳಕು ಪಕ್ಷಕ್ಕೆ ಬೇಡ ಎಂದು ಕಾಂಗ್ರೆಸ್ ಮುಖಂಡ, ಬಿ.ಜನಾರ್ದನ ಪೂಜಾರಿ ಹೇಳಿದ್ದಾರೆ.
ಗುರುವಾರ ಬಕ್ ಕಾಂಗ್ರೆಸ್ ಘಟಕದ ನವೀಕೃತ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು. ಮೇಲ್ಮ ನೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸುತ್ತದೆ. ಉಡುಪಿ -ಚಿಕ್ಕಮಗಳೂರು ಚುನಾಣೆಯಲ್ಲಿ ಕಾಂಗ್ರೆಸ್ ಒಗ್ಗಟ್ಟಿನಿಂದ ಕೆಲಸ ಮಾಡಿದೆ. ಬಿಜೆಪಿ ಭ್ರಷ್ಟಾಚಾರ, ಒಳಜಗಳದಿಂದ ಸರ್ಕಾರ ನಡೆಸಲು ವಿಫಲವಾಗಿದೆ. ಬಿಕ್ಕಟ್ಟು ತಾರಕಕ್ಕೆ ಏರಿದ್ದು, ಜನ ಬೇಸತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂಬ ಕಹಿಮಾತನ್ನು ಯಡಿಯೂರಪ್ಪ ಹೇಳಿದ್ದಾರೆ. ಅವರ ಗುಂಪು ಬಿಜೆಪಿ ಅಧಿಕೃತ ಅಭ್ಯರ್ಥಿಯನ್ನು ಸೋಲಿಸುತ್ತದೆ ಎಂಬ ಶಂಕೆ ಇದೆ. ಅವರ ಗುಂಪಿನವರೇ ಉಡುಪಿ ಚುನಾವಣೆಯಲ್ಲಿ ನಮ್ಮ ಆಟ ತೋರಿಸಿದ್ದೇವೆ ಎಂದಿದ್ದರು. ಅದು ಸತ್ಯವೋ ಸುಳ್ಳೋ ಎಂದು ಈ ಚುನಾವಣೆಯಲ್ಲಿ ತಿಳಿಯಲಿದೆ. ನಮ್ಮ ಕಾಲ ಮೇಲೆ ನಾವು ನಿಲ್ಲುವ ಕೆಲಸ ಮಾಡುತ್ತೇವೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಇಂದು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದರೆ ಇಂತಹ ಸ್ಥಿತಿಯಿಂದ ಭಾರತವನ್ನು ರಕ್ಷಿಸಲು ನಮ್ಮ ಆರ್ಥಿಕ ಸ್ಥಿತಿಯನ್ನು ಉಳಿಸಿಕೊಳ್ಳುವುದು ಅನಿವಾರ್ಯ. ಜಿ.ಡಿ.ಪಿ.ಯನ್ನು ಶೇ.೮ರಷ್ಟನ್ನು ಇಟ್ಟುಕೊಂಡಿದ್ದೇವೆ. ಬೇರೆ ರಾಷ್ಟ್ರಗಳಿಗೆ ನಾವು ಮಾದರಿಯಾಗಿದ್ದೇವೆ ಎಂದ ಅವರು ಪರದೇಶಗಳ ಹಾಗೆ ಭಾರತದ ಆರ್ಥಿಕ ಸ್ಥಿತಿ ಕುಸಿದು ಬೀಳಬೇಕಾ ಎಂದು ಪ್ರಶ್ನಿಸಿದರು. ಸರ್ಕಾರದೊಂದಿಗೆ ವಿರೋಧ ಪಕ್ಷಗಳು ಕೈಜೋಡಿಸಿ ಕೆಲಸ ಮಾಡಬೇಕಾಗಿದೆ. ಆ ಕೆಲಸ ಮಾಡದಿದ್ದರೆ ಭಾರತ ಬೇಡುವ ಸ್ಥಿತಿಗೆ ಬರಬಹುದು. ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರ ಕುಸಿಯುತ್ತಿದೆ. ಡಾಲರ್ ದರ ೧ ರೂಪಾಯಿ ಏರಿಕೆ ಆದರೆ ೮ ಸಾವಿರ ಕೋಟಿಯಷ್ಟು ದೇಶಕ್ಕೆ ನಷ್ಟ ಆಗುತ್ತದೆ. ದೇಶದ ಆರ್ಥಿಕ ಸ್ಥಿತಿ ಕುಸಿದು ಬೀಳದೇ ಇರಬೇಕಾದರೆ ಪೆಟ್ರೋಲ್ ಬೆಲೆ ಏರಿಕೆ ಅನಿವಾರ್ಯ ಎಂದವರು ಹೇಳಿದರು.
ಎಂ.ವೆಂಕಪ್ಪ ಗೌಡ, ಪಿ.ಎಸ್.ಗಂಗಾಧರ್, ಎನ್.ಜಯಪ್ರಕಾಶ್ ರೈ, ಡಾ.ರಘು, ನಿತ್ಯಾನಂದ ಮುಂಡೋಡಿ, ಗೋಕುಲ್‌ದಾಸ್, ರಾಜೀವಿ ರೈ, ಯತೀಶ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪಾಲೆಮಾರ್ ಈಗಲೂ ಜನಮೆಚ್ಚಿದ ನಾಯಕ

Posted by JAYAKIRANA Kirana on | 0 comments | Leave a comment...

ಮಂಗಳೂರು: ಯಾವುದೋ ಆರೋಪ ಹೊತ್ತು ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರೂ ಶಾಸಕ ಕೃಷ್ಣ ಜೆ. ಪಾಲೆಮಾರ್ ಅವರ ಜನಪ್ರಿಯತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಸಮಸ್ಯೆಗಳನ್ನು ಹೊತ್ತು ಸಹಾಯ ಯಾಚಿಸಿ ಅವರ ಮನೆ ಬಾಗಿಲಿಗೆ ಬರುವವರ ಸಂಖ್ಯೆ ಈಗಲೂ ಹಿಂದಿ ನಂತೆಯೇ ಇದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ಅವರೊಬ್ಬ ಸಮರ್ಥ, ಜನಪರ ಕಾಳಜಿಯ ಜನಪ್ರತಿನಿಧಿ ಎಂಬುದನ್ನು ಮತದಾರರು ತಿಳಿದು ಕೊಂಡುದೇ ಇದಕ್ಕೆ ಕಾರಣ. ಇದು ಅವರು ತಮ್ಮ ಕ್ಷೇತ್ರದ ಜನತೆಯ ಬಗ್ಗೆ ತೋರಿಸುತ್ತಿರುವ ಕಾಳಜಿಯ ದ್ಯೋತಕ.
ಪಾಲೆಮಾರ್‌ಗೆ ಅಧಿಕಾರಿಗಳು ಈಗಲೂ ಹಿಂದಿನಂತೆಯೇ ಗೌರವ ನೀಡುತ್ತಿರುವುದು ಕೆಲವರಲ್ಲಿ ಅಸೂಯೆ ಹುಟ್ಟಿಸುತ್ತಿದೆ. ಆದರೆ ಓರ್ವ ಜನ ಪ್ರತಿನಿಧಿ ಹೇಗಿರಬೇಕು ಎಂಬುದನ್ನು ಪಾಲೆಮಾರ್‌ನಿಂದ ಕಲಿತುಕೊಳ್ಳಬೇ ಕಾಗಿದೆ ಎಂದು ಅಧಿಕಾರಿಗಳು ಹಾಗೂ ಸುರತ್ಕಲ್ ಕ್ಷೇತ್ರದ ಜನತೆ ಹೇಳುತ್ತಿದ್ದಾರೆ. ಜನರು ಪಾಲೆಮಾರ್ ಮೇಲೆ ಕಿಂಚಿತ್ತೂ ಅನುಮಾನದ ದೃಷ್ಟಿ ಬೀರುತ್ತಿಲ್ಲ. ನಮ್ಮ ಶಾಸಕರು ಅಂಥವರಲ್ಲ ಎಂಬ ವಿಶ್ವಾಸ ಅವರ ಲ್ಲಿದೆ. ಕೆಲವು ಸ್ವಾರ್ಥಹಿತ ಸಾಧನೆಯ ಮಾಧ್ಯಮಗಳಿಂದ ಪಾಲೆಮಾರ್ ಹೆಸರಿಗೆ ಕಳಂಕ ತಟ್ಟಿದೆಯೇ ಹೊರತು ಅವರು ಯಾವುದೇ ತಪ್ಪು ಮಾಡಿರುವುದು ಮೇಲ್ನೋಟಕ್ಕೂ ಸಾಬೀತಾಗಿಲ್ಲ.
ಬಿಜೆಪಿ ನಾಯಕರಾಗಿದ್ದರೂ ಪಾಲೆಮಾರ್ ಎಲ್ಲ ಕೋಮಿನ ಜನರು ಮೆಚ್ಚುವ ಜನಪ್ರತಿನಿಧಿ. ಆದ್ದರಿಂದಲೇ ಮುಸ್ಲಿಂ ಮತದಾರರ ಮತವನ್ನು ಗಳಿಸಲು ಅವರಿಗೆ ಸಾಧ್ಯವಾಗಿರು ವುದು. ಅವರ ಕ್ಷೇತ್ರದ ಮುಸ್ಲಿಂ, ಕ್ರೈಸ್ತ ಬಂಧುಗಳು ಕೂಡ ಪಾಲೆಮಾರ್ ಬೆಂಬಲಕ್ಕೆ ನಿಂತಿರುವುದು ಅವರ ಪ್ರಾಮಾಣಿಕತೆ, ಜನಪರತೆಗೆ ಉತ್ತಮ ಉದಾಹರಣೆ.
ಯಡಿಯೂರಪ್ಪನಂಥ ನಾಯಕರು ಕೂಡ ಅಧಿಕಾರ ಕಳಕೊಂಡಾಗ ಬೆಂಬಲಿಗರನ್ನೂ ಕಳಕೊಳ್ಳುತ್ತಿದ್ದಾರೆ, ಜನತೆಯ ಪ್ರೀತಿಯನ್ನೂ ಕಳಕೊಳ್ಳುತ್ತಿದ್ದಾರೆ. ಆದರೆ ಓರ್ವ ಸಾಮಾನ್ಯ ಶಾಸಕ- ಸಚಿವನಾಗಿದ್ದ ಪಾಲೆಮಾರ್ ಅಧಿಕಾರ ಕಳಕೊಂಡರೂ ಅವರ ಬೆಂಬಲಿಗರು ಕಡಿಮೆಯಾಗಿಲ್ಲ, ಜನತೆಯ ಪ್ರೀತಿ ಕುಂದಿಲ್ಲ. ಆದ್ದರಿಂದಲೇ ಹೇಳೋದು ಪಾಲೆಮಾರ್ ಓರ್ವ ವಿಶಿಷ್ಠ ಪ್ರತಿನಿಧಿ ಎಂದು.
ಈಗಲೂ ಪಾಲೆಮಾರ್ ಎಲ್ಲೇ ಹೋಗಲಿ ಅವರ ಹಿಂದೆ ಸಮಸ್ಯೆಯನ್ನು ಹೊತ್ತುಕೊಂಡ ಜನರು ಮುಗಿಬೀಳುತ್ತಿರುತ್ತಾರೆ. ಪಾಲೇಮಾರ್ ಸಚಿವರಾಗಿದ್ದಾಗ ಮನೆಯ ಅಂಗಳದಲ್ಲಿ ಸೇರುತ್ತಿದ್ದ ಜನರು ಅವರು ಸಚಿವ ಸ್ಥಾನ ಕಳೆದುಕೊಂಡು ಶಾಸಕರಾದರೂ ಜನ ಸಂದಣಿ ಮಾತ್ರ ಹಾಗೆಯೇ ಮುಂದುವರಿದಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಶೇಷ ಆಸಕ್ತಿ ಹೊಂದಿರುವ ಪಾಲೆಮಾರ್, ಕಾನೂನು ವ್ಯಾಪ್ತಿಯೊಳಗೆ ಆ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತಾರೆ. ಅಂಥ ವಿಶ್ವಾಸವಿ ರುವುದರಿಂದಲೇ ಜನರಿಗೆ ಅವರು ಈಗಲೂ ಪ್ರೀತಿಯ ನೇತಾರ, ಜನಪ್ರತಿನಿಧಿ. ಅಧಿಕಾರ ವರ್ಗದ ಮೇಲೂ ಯಾವುದೇ ಒತ್ತಡ, ಬೆದರಿಕೆ ಹಾಕದ ಪಾಲೆಮಾರ್, ಕಾನೂನು ಪರಿಧಿ ದಾಟಿ ಇಂಥ ಕೆಲಸ ಮಾಡಿ ಎಂದು ಯಾವ ಅಧಿಕಾರಿಗೂ ಹೇಳಿದವರಲ್ಲ. ತಾನೊಬ್ಬ ಜನಪ್ರತಿನಿಧಿ, ಸಚಿವ ಎಂಬ ದರ್ಪವನ್ನು ಅಧಿಕಾರಿಗಳ ಮುಂದೆ ತೋರಿಸಿದವರಲ್ಲ. ಅಧಿಕಾರಿಗಳಿಗೂ ಸೂಕ್ತ ಗೌರವ ನೀಡುವ ಹೃದಯ ವಿಶಾಲತೆ ಪಾಲೆಮಾರ್‌ರಲ್ಲಿ ಇರುವುದರಿಂದಲೇ ಅಧಿಕಾರಿಗಳು ಕೂಡ ಅವರನ್ನು ಈಗಲೂ ಗೌರವದಿಂದ ಕಾಣುತ್ತಿರುವುದು.
 ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಆರೋಪದಲ್ಲಿ ಮೇಲ್ನೋಟಕ್ಕೇ ಅಮಾಯಕ ಎಂದು ಕಂಡು ಬಂದ ಪಾಲೆ ಮಾರ್‌ರನ್ನು ಸದನ ಸಮಿತಿ ಕೂಡ ದೋಷಮುಕ್ತಗೊಳಿಸಿದೆ. ತಾನು ಪಕ್ಷಕ್ಕೆ ಕಿರಿಕಿರಿಯಾಗಬಾರದು ಎಂಬ ಕಾರಣಕ್ಕಾಗಿ ಮಾತ್ರ ರಾಜೀನಾಮೆ ನೀಡಿದ್ದೇನೆ ಎಂದು ಹೇಳುವ ಅವರ ಪಕ್ಷಪ್ರೀತಿ ಮೆಚ್ಚುವಂಥದ್ದು ಎಂದು ಹೇಳಲೇಬೇಕಾಗಿದೆ.

ಬಿಜೆಪಿಯಲ್ಲಿ ಬದಲಾವಣೆಯ ಸಮಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಬಹಳಷ್ಟು ಬದಲಾವಣೆಗಳನ್ನು ತರಲಿದೆ ಎಂದು ಸಂಘ ಪರಿವಾರದ ನಾಯಕರು ಹೇಳುತ್ತಿದ್ದಾರೆ.
ರಾಜ್ಯ ರಾಜಕೀಯದ ಗೊಂದಲದ ನಡುವೆಯೂ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿಯೇ ಇದೆ. ಕಾಂಗ್ರೆಸ್‌ನ್ನು ಎದುರಿಸಲು ಬೇಕಾದ ರಾಜಕೀಯ ತಂತ್ರಗಾರಿಕೆಯನ್ನು ನಮ್ಮ ನಾಯಕರು ರೂಪಿಸುತ್ತಿದ್ದಾರೆ ಎಂದು ಹೇಳುವ ಬಿಜೆಪಿಯವರು ದ.ಕ. ಜಿಲ್ಲೆಯಲ್ಲಿ ಪ್ರಮುಖ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬದಲಾ ಗಲಿದ್ದಾರೆ ಎಂಬ ಸೂಚನೆ ನೀಡಿದ್ದಾರೆ. ಸುಳ್ಯದಲ್ಲಿ ಅಂಗಾರರು ಆರಮಾವಾಗಿದ್ದಾರೆ. ಈ ಹಿಂದೆ ಸ್ಪರ್ಧಿಗಳಾಗಿದ್ದವರು ಈ ಬಾರಿ ಸ್ಪರ್ಧೆಯಿಂದ ಹಿಂದೆ ಸರಿಯುವ ಇಲ್ಲವೆ ತಮ್ಮ ಕ್ಷೇತ್ರಗಳನ್ನು ಬದಲಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ದ.ಕ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಇದರಲ್ಲಿ ಪುತ್ತೂರಿನ ಮಲ್ಲಿಕಾ ಪ್ರಸಾದ್ ಮರು ಸ್ಪರ್ಧೆ ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ಇದೆ. ಮಂಗಳೂರು ಉತ್ತರದಲ್ಲಿರುವ ಹಾಲಿ ಸಚಿವ ಕೃಷ್ಣ ಪಾಲೇಮಾರರ ಸ್ಪರ್ಧೆ ಎಲ್ಲಿಂದ ಎಂಬ ಲೆಕ್ಕಾಚಾರ ನಡೆದಿದೆ. ಮಂಗಳೂರು ದಕ್ಷಿಣದಲ್ಲಿ ಯೋಗೀಶ್ ಭಟ್ಟರನ್ನು ಬದಲಾಯಿಸಲಾಗುತ್ತದೆ ಎಂಬ ಗಾಳಿ ಸುದ್ದಿಗೆ ಸದ್ಯಕ್ಕೆ ತೆರೆ ಬಿದ್ದಂತೆ ಕಾಣುತ್ತದೆ. ಇಲ್ಲಿ ಕಣ್ಣಿಟ್ಟಿರುವ ಶ್ರೀಕರ ಪ್ರಭು ಈಗ ಮುಂದೇನು ಎಂಬ ಆಲೋಚನೆಯಲ್ಲಿದ್ದಾರೆ.
ಕಾಂಗ್ರೆಸ್ ಶಾಸಕರ ಕೈಯಲ್ಲಿರುವ ಮಂಗಳೂರು ನಗರ ವಿಧಾನ ಸಭಾ ಕ್ಷೇತ್ರವನ್ನು ಶಾಸಕ ಯು.ಟಿ.ಖಾದರ್ ಕೈಯಿಂದ ಕಿತ್ತುಕೊಳ್ಳುವುದು ಹೇಗೆ ಎಂಬ ಚಿಂತನೆ ನಡೆದಿದೆ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದ ಪದ್ಮನಾಭ ಕೊಟ್ಟಾರಿಯವರು ಬಂಟ್ವಾಳದ ಮೇಲೆ ಕಣ್ಣಿಟ್ಟಿದ್ದಾರೆ. ಇವರಿಗೆ ಇಲ್ಲಿ ಅಡ್ಡಗಾಲಾಗಿ ಜಿತೆಂದ್ರ ಕೊಟ್ಟಾರಿ ಬರುತ್ತಿದ್ದಾರೆ. ಉದ್ಯಮಿ ಜಿತೆಂದ್ರ ಕೊಟ್ಟಾರಿಯ ಸಮಾಜ ಸೇವೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಬಂಟ್ವಾಳದಲ್ಲಿ ರಮಾನಾಥ ರೈಯವರನ್ನು ಅಲುಗಾಡಿಸುವುದು ಸುಲಭದ ಮಾತಲ್ಲ. ಸದ್ಯದ ಸ್ಥಿತಿಯಲ್ಲಿ ನಾಗರಾಜ್ ಶೆಟ್ಟರು ಬಂಟ್ವಾಳದಲ್ಲಿ ಕಾಣುತ್ತಿಲ್ಲ. ನಾಗರಾಜ್ ಶೆಟ್ಟರು ಮಂಗಳೂರು ಉತ್ತರದತ್ತ ಕಣ್ಣು ಹಾಯಿಸಿರುವ ಲಕ್ಷಣಗಳಿವೆ. ಸತ್ಯಜಿತ್ ಸುರತ್ಕಲ್ ಅವಕಾಶ ಒದಗಿ ಸಲೇಬೇಕು ಎನ್ನುವವರ ಬಳಗ ದೊಡ್ಡದಾಗಿದೆ.
ಮಂಗಳೂರು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಬೊಳಿಯಾರು ಸಂತೋಷ್‌ಕುಮಾರ್ ಶೆಟ್ಟಿ ಸಂಭಾವ್ಯ ಅಭ್ಯರ್ಥಿಯಾಗಿ ಬಿಂಬಿತರಾಗುತ್ತಿದ್ದರೆ, ಸತೀಶ್ ಕುಂಪಲ ಮಾಜಿ ಶಾಸಕ ಜಯರಾಮ್ ಶೆಟ್ಟರನ್ನು ಕಡೆಗಣಿಸುವಂತಿಲ್ಲ ಎನ್ನುವವರೂ ಇದ್ದಾರೆ. ಮೂಡಬಿದ್ರೆಯಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಸಿದ್ಧವಾಗಿದೆ. ವಲಸಿಗರು ಹಾಗೂ ಮೂಲ ಬಿಜೆಪಿಗರು ತಮ್ಮ ತಮ್ಮ ಪಾಲಿನ ಪ್ರಯತ್ನವನ್ನು ಈಗಿನಿಂದಲೇ ಆರಂಭಿಸಿದ್ದಾರೆ. ಜೆಡಿಎ ಸ್‌ನಿಂದ ಬಂದ ಭರತ್ ಶೆಟ್ಟಿ, ಸುಚರಿತ ಶೆಟ್ಟಿ ಒಂದು ಕೈ ನೋಡುವ ಸಿದ್ದತೆ ಯಲ್ಲಿದ್ದರೆ. ಕಳೆದ ಬಾರಿ ಸ್ಪರ್ಧಿಸಿ ಸೋತಿರುವ ಜಗದೀಶ್ ಅಧಿಕಾರಿ ನಾವಿ ರುವುದೇಕೆ ಎಂದು ಓಡಾಡುತ್ತಿದ್ದಾರೆ. ಇನ್ನೊಂದು ಹೆಸರು ಸತ್ಯಜಿತ್ ಸುರತ್ಕಲ್ ರವರದು. ಮಂಗಳೂರು ಉತ್ತರದಲ್ಲಿ ಸತ್ಯಜಿತ್ ಸುರತ್ಕಲ್‌ಗೆ ಸ್ಥಾನ ಸಿಗದಿದ್ದರೆ ಬಿಲ್ಲವ ಪ್ರಭಾವಿತ ಕ್ಷೇತ್ರವಾಗಿರುವ ಮೂಡಬಿದ್ರೆಯಲ್ಲಿ ಹೋರಾಟಕ್ಕಾಗಿ ಶ್ರಮಿ ಸುತ್ತಿದ್ದಾರೆ ಎನ್ನಲಾಗಿದೆ. ಇಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವು ದರಿಂದ ಭಿನ್ನಮತ ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಸಂಸದ ನಳಿನ್ ಕುಮಾರ್ ಕಟೀಲ್‌ರನ್ನು ರಾಜ್ಯ ರಾಜಕಾರಣಕ್ಕೆ ಕರೆ ತರಲು ಪ್ರಯತ್ನಿಸ ಲಾಗುತ್ತಿದೆ. ಮುಲ್ಕಿ, ಮೂಡಬಿದ್ರೆಯಿಂದ ಅವರಿಗೇ ಟಿಕೇಟು ಕೊಡಿಸುವ ಕುರಿತು ಕೂಡಾ ಮಾತುಕತೆ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಇಲ್ಲಿ ಸಹೋದರರ ಕಾದಾಟಕ್ಕೆ ವಿರಾಮ ಹಾಡಲು ಬಿಜೆಪಿಯ ವರಿಷ್ಠರು ತಿರ್ಮಾನಿಸಿದ್ದಾರೆ. ಅಲ್ಲೀಗ ರಂಜನ್ ಗೌಡರ ಪ್ರಭಾವ ವಲಯ ಸ್ಥಾಪಿಸಲು ಅವರ ತಂದೆ ಗಂಗಾಧರ ಗೌಡರು ಶ್ರಮಿಸುತ್ತಿದ್ದಾರೆ.

ಈ ನಡಿಗೆಯಿಂದ ಕೇಂದ್ರದ ಅಧಿಕಾರಕ್ಕೆ ತಲುಪುವುದು ಬಿಜೆಪಿಗೆ ಸಾಧ್ಯವೇ?

Posted by JAYAKIRANA Kirana on | 0 comments | Leave a comment...

ಸುದ್ದಿ ವಿಶ್ಲೇಷಣೆ
ಗುರುವಾರ ಮುಂಬಯಿಯಲ್ಲಿ ಆರಂಭವಾಗಿದ್ದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರೀಕ್ಷೆ ಯಂತೆ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೈರು ಹಾಜರಾಗಿದ್ದಾರೆ. ಗುಜ ರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತುಂಬಾ ವಿಳಂಬ ವಾಗಿ ಪಾಲ್ಗೊಂಡಿದ್ದಾರೆ. ಇವರು ಕೂಡ ಗೈರು ಹಾಜರಾಗುತ್ತಾರೆ ಎಂದೇ ಭಾವಿಸಲಾಗಿತ್ತು. ಪPಧ್ಯಕ್ಷ ನಿತಿನ್ ಗಡ್ಕರಿಯೊಂದಿಗೆ ಇರುವ ವೈಮ ನಸ್ಯದಿಂದಾಗಿ ಮೋದಿ ಕಾರ್ಯ ಕಾರಿಣಿ ಸಭೆಯಿಂದ ದೂರವಿರಲು ನಿರ್ಧರಿಸಿದ್ದರು.
೨೦೧೪ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಏನೆಲ್ಲ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕಾರಿಣಿಯಲ್ಲಿ ವಿಶೇಷವಾಗಿ ಚರ್ಚಿಸಲಾಗಿದೆ. ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರು ಪಕ್ಷದ ಕಾರ್ಯ ಕರ್ತರಿಗೆ ಮೂರು ಮಂತ್ರಗಳನ್ನೂ ಬೋಧಿಸಿದ್ದಾರೆ. ಆದರೆ ಇಷ್ಟರಿಂದ ಮಾತ್ರ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಸಾಧ್ಯವಾದೀತೋ ಎಂಬುದು ಈಗ ಎದ್ದಿರುವ ಮುಖ್ಯ ಪ್ರಶ್ನೆ.
ಕಾರ್ಯಕರ್ತರಿಗೆ ಮಂತ್ರ ಬೋಧಿಸಿಕೊಟ್ಟ ಮಾತ್ರಕ್ಕೆ ಅವುಗಳು ಮತವಾಗಿ ಬದಲಾವಣೆಯಾಗದು. ನಾಯಕರಿಗೆ ಒಗ್ಗಟ್ಟಿನ ಮಂತ್ರ ಬೋಧಿಸಬೇಕು ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುವಂತೆ ಅವರನ್ನು ಬದಲಾಯಿ ಸಬೇಕು. ನರೇಂದ್ರ ಮೋದಿ ವಿಳಂಬ ವಾಗಿ ಆಗಮಿಸಿದುದು ಮತ್ತು ಯಡಿ ಯೂರಪ್ಪ ಗೈರು ಪಕ್ಷದೊಳಗೆ ಬೂದಿ ಮುಚ್ಚಿದ ಕೆಂಡವಾಗಿರುವ ಸಮಸ್ಯೆಗಳ ಲವಾಗಿದೆ. ಅವುಗಳಿಗೆ ಪರಿಹಾರ ಕಂಡುಕೊಳ್ಳದೆ ೨೦೧೪ರಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಹೇಗೆ ಸಾಧ್ಯ?
ಇದರ ನಡುವೆ ಮತ್ತೊಂದು ದೊಡ್ಡ ಬೆಳವಣಿಗೆ ನಡೆದಿದೆ. ಯಾವ ಕಾರಣಕ್ಕಾಗಿ ಮೋದಿ ಗೈರುಹಾಜರಾಗು ತ್ತಾರೆ ಎಂದು ಭಾವಿಸಲಾಗಿತ್ತೋ, ಯಾವ ಕಾರಣಕ್ಕಾಗಿ ಮೋದಿ ಪPಧ್ಯಕ್ಷ ಗಡ್ಕರಿಯೊಂದಿಗೆ ವೈಮನಸ್ಸು ಹೊಂದಿ ದ್ದರೋ ಆ ಕಾರಣ ಇದೀಗ ಮೂಲೆಗೆ ಸರಿದಂತಿದೆ. ತನ್ನ ಬದ್ಧ ವೈರಿ ಸಂಜಂii ಜೋಷಿಗೆ ಪಕ್ಷದಲ್ಲಿ ಒಂದು ಉನ್ನತ ಸ್ಥಾನ ನೀಡಿ, ಅವರನ್ನು ಉತ್ತರಪ್ರದೇಶದ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದುದೇ ಮೋದಿ ಅವರು ಗಡ್ಕರಿಯೊಂದಿಗೆ ಅಸಮಾಧಾನ ಹೊಂದಲು ಕಾರಣ. ಇದೇ ಕಾರಣ ದಿಂದಾಗಿ ಮೋದಿ ಗೈರು ಹಾಜರಾಗು ತ್ತಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಸಂಜಯ್ ಜೋಷಿ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ತಾನು ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರು ರಾಜೀನಾಮೆ ನೀಡಿದ ಬಳಿಕವೇ ಮೋದಿ ಮನಸ್ಸು ಬದಲಾಯಿಸಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಮುಂದಾಗಿರುವ ಸಾಧ್ಯತೆ ಹೆಚ್ಚು. ಆದರೆ ಜೋಷಿ ರಾಜೀನಾಮೆ ನೀಡಿರುವುದು ವೈಯಕ್ತಿಕವಾಗಿ ನಿತಿನ್ ಗಡ್ಕರಿಗೆ ಒಂದು ದೊಡ್ಡ ಹಿನ್ನೆಡೆ ಮತ್ತು ಮೋದಿಗೆ ಪರೋಕ್ಷವಾಗಿ ಸಿಕ್ಕಿದ ಜಯ ಎಂದು ವ್ಯಾಖ್ಯಾನಿಸಬಹುದು.
ಹಾಗೆ ನೋಡಿದರೆ ಮೋದಿ ಮತ್ತು ಯಡಿಯೂರಪ್ಪ ಕೋಪ ಒಂದೇ ರೀತಿಯದ್ದಲ್ಲ. ಇಬ್ಬರೂ ಅಧಿಕಾರ ಕ್ಕಾಗಿ ಹೋರಾಡುವವರೇ. ಮೋದಿಗೆ ಮುಂದಿನ ಪ್ರಧಾನಿಯಾ ಗಬೇಕು, ಯಡಿಯೂರಪ್ಪಗೆ ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾ ಗಬೇಕು. ಮೋದಿ ಭ್ರಷ್ಟಾಚಾರ ವಿಷಯ ದಲ್ಲಿ ಶುದ್ಧ ಹಸ್ತ, ಯಡಿಯೂರಪ್ಪ ಕಳಂಕಿತ. ಮೋದಿಗೆ ನಿರೀಕ್ಷೆ ಇದೆ, ಯಡಿಯೂರಪ್ಪಗೆ ಹತಾಶೆ ಮೂಡಿದೆ. ಯಡಿಯೂರಪ್ಪನನ್ನು ಬಿಟ್ಟರೆ ಬಿಜೆಪಿಗೆ ವಿಶೇಷ ನಷ್ಟವಾಗದು, ಆದರೆ ಮೋದಿಯನ್ನು ಬಿಟ್ಟರೆ ಬಿಜೆಪಿ ಸ್ಥಿತಿ ಕಂಗಾಲಾದೀತು. ಆದ್ದರಿಂದಲೇ ಸಂಜಂii ಜೋಷಿಯಿಂದ ರಾಜೀ ನಾಮೆ ಪಡೆದುಕೊಂಡು ಮೋದಿ ಯನ್ನು ಸಮಾಧಾನ ಮಾಡಲಾಗಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಇಷ್ಟು ಸಾಕು. ಇಂಥ ಸ್ಥಿತಿಯನ್ನು ಇದೇ ರೀತಿ ಉಳಿಸಿಕೊಂಡು ಬಿಜೆಪಿಯಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಹೇಗೆ ಸಾಧ್ಯವಾದೀತು?
ಮತ್ತೊಂದೆಡೆ ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ವಿಷಯದಲ್ಲೂ ತೀವ್ರ ಸ್ಪರ್ಧೆಯಿದೆ. ಆಡ್ವಾಣಿ, ಮೋದಿಯ ನಡುವೆ ಪ್ರಬಲ ಸ್ಪರ್ಧೆ ಕಂಡು ಬರುತ್ತಿದೆ. ಜತೆಗೆ ಬಿಹಾರದ ನಿತೀಶ್ ಕುಮಾರ್‌ಗೂ ಪ್ರಧಾನಿಯಾಗುವ ಆಸೆಯಿದೆ. ಎನ್‌ಡಿಎಯ ಒಂದು ಅಂಗವಾಗಿರುವ ನಿತೀಶ್ ಮುಂದಿನ ಚುನಾವಣೆ ಹೊತ್ತಿಗೂ ಅದನ್ನು ಉಳಿಸಿಕೊಳ್ಳುತ್ತಾರೆ ಎಂಬುದು ಖಚಿತವಾಗಿಲ್ಲ. ಹೇಳಿಕೇಳಿ ನಿತೀಶ್ ಮತ್ತು ಮೋದಿ ಪ್ರಬಲ ವಿರೋಧಿಗಳು. ಇಬ್ಬರೂ ತಮ್ಮದೇ ಆದಂತಹ ಸ್ನೇಹಿತರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಆಡ್ವಾಣಿ ಸ್ಪರ್ಧೆ ದುರ್ಬಲವಾದರೂ ನಿತೀಶ್ ಮತ್ತು ಮೋದಿ ನಡುವಿನ ಸ್ಪರ್ಧೆ ಸುಲಭದಲ್ಲಿ ದುರ್ಬಲವಾಗುವ ಸಾಧ್ಯತೆ ಇಲ್ಲ. ಇದರ ನಡುವೆ ಗಣಿ ಹಗರಣದಲ್ಲಿ ಬಿಜೆಪಿಯ ನಾಯಕಿ ಸುಷ್ಮಾ ಸ್ವರಾಜ್ ಹೆಸರೂ ಇಣುಕಾಡುತ್ತಿದೆ. ಅದೂ ಬಿಜೆಪಿಗೆ ಒಂದು ಮೈನಸ್ ಪಾಯಿಂಟ್‌ಎಂದೇ ಹೇಳಬಹುದು.
 ಬಿಜೆಪಿಯಲ್ಲಿ ಈಗ ಸಮಸ್ಯೆಯೇ ಹೆಚ್ಚಾಗಿದೆ. ಆ ಸಮಸ್ಯೆಗಳೆಲ್ಲವೂ ನಾಯಕರಿಂದ ಸೃಷ್ಟಿಯಾದುದೇ ಹೊರತು ಕಾರ್ಯಕರ್ತರಿಂದಲೂ ಅಲ್ಲ, ವಿಪಕ್ಷಗಳಿಂದಲೂ ಅಲ್ಲ. ಮೊದಲು ಆ ಸಮಸ್ಯೆ ಪರಿಹಾರಕ್ಕೆ ಬಿಜೆಪಿ ಶ್ರಮಿಸಬೇಕಾಗಿದೆ. ತಾನು ಒಡಲು ತುಂಬಾ ಸಮಸ್ಯೆ ಹೊತ್ತುಕೊಂಡು ಸರಕಾರದ ಮತ್ತು ಎದುರಾಳಿ ಪಕ್ಷದ ದೌರ್ಬಲ್ಯವನ್ನು ಎತ್ತಿ ತೋರಿಸಿದ ಮಾತ್ರಕ್ಕೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಬಿಜೆಪಿ ನಾಯಕರು ತಿಳಿದುಕೊಳ್ಳಬೇಕಾಗಿದೆ.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)