
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಅಬ್ಬರ ಸ್ವಲ್ಪ ಹೆಚ್ಚೇ ಎನ್ನುವಂತಿದೆ. ಅದರಲ್ಲೂ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನೋಡಿದರೆ ಅದು ಭೋದನಾಲಯವೋ ಅಥವಾ ಧಾರ್ಮಿಕ ಕೇಂದ್ರವೋ ಎಂಬ ಅನು ಮಾನ ಕಾಡುತ್ತದೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಶಿಲುಬೆ, ಏಸುವಿನ ಮೂರ್ತಿಗ ಳನ್ನು ತರಗತಿಯ ಪ್ರತೀ ಕೊಠಡಿಗಳಲ್ಲಿ ನೇತು ಹಾಕಿರುತ್ತಾರೆ. ಹಿಂದುಗಳ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದು ದೇವರ ಫೋಟೋಗಳನ್ನು, ಮುಸ್ಲಿಮರು ತಮ್ಮ ದೇವರ ಫೋಟೋಗಳನ್ನು ನೇತು ಹಾಕಿರುತ್ತಾರೆ. ಸರ್ವ ಧರ್ಮದ ವಿದ್ಯಾರ್ಥಿ ಗಳೂ ಬರುವ ಶಿಕ್ಷಣ ಕೇಂದ್ರಗಳಲ್ಲಿ ಈ ರೀತಿಯ ಧರ್ಮ ತಾರತಮ್ಯ ಎಷ್ಟು ಸರಿ? ರಾಷ್ಟ್ರದ ಮಹಾನ್ ನಾಯಕರನ್ನು ಪರಿಚಯಿಸಬೇಕಾದ ಶಿಕ್ಷಣ ಸಂಸ್ಥೆ ಗಳು ತರಗತಿಗಳಲ್ಲಿ ಧರ್ಮ ಶಿಕ್ಷಣದ ಭೋದನೆಗೆ ಇಳಿದಂತೆ ಕಾಣುತ್ತಿದೆ. ಜಾತಿ, ಧರ್ಮ ಎನ್ನುವುದು ಅವರವರ ಮನೆ, ಮನಸ್ಸಿಗೆ ಸೀಮಿತವಾಗಿರ ಬೇಕೇ ಹೊರತು ಎಂದಿಗೂ ಶಿಕ್ಷಣ ಸಂಸ್ಥೆಗಳಲ್ಲಿ ತನ್ನ ಪ್ರಾಬಲ್ಯ ಮೆರೆಯಬಾ ರದು. ಅಲ್ಲದೇ ಶಿಕ್ಷಕರು ಕೂಡ ತಮ್ಮ ಧಾರ್ಮಿಕ ವಾದಗಳನ್ನು ಬದಿಗಿಟ್ಟು ತಾನೊಬ್ಬ ಶಿಕ್ಷಕ ಎಂಬ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಶಿಕ್ಷಣ ನೀಡಬೇಕು. ಆಗ ಮಾತ್ರ ಕೋಮು ಭಾವನೆಗಳನ್ನು ಮೊಳಕೆಯಲ್ಲೇ ಚವುಟಿ ಹಾಕಲು ಸಾಧ್ಯ. ಸ್ವಾಮೀಜಿಗಳು, ಚರ್ಚ್ಗಳು, ಮಸೀದಿಗಳು ನಡೆಸುವ ಶಿಕ್ಷಣ ಸಂಸ್ಥೆಗಳು ಕೇವಲ ಶೈಕ್ಷಣಿಕ ಕೆಂದ್ರವಾಗಿರಲಿ. ಅದು ಬಿಟ್ಟು ಧರ್ಮ ಭೋದನೆ ಗಿಳಿದರೆ ಬೆಳೆಯುವ ಮಕ್ಕಳನ್ನು ನಾವೇ ಕೋಮುವಾದಿಗಳಾಗಿ ಬೆಳೆಸಿದಂ ತಾಗುತ್ತದೆ. ಮುಂದೆ ಧರ್ಮದ ಹೆಸರಿನಲ್ಲಿ ನಡೆಯುವ ಕಚ್ಚಾಟಗಳಿಗೆ ಈ ಶಿಕ್ಷಣ ಸಂಸ್ಥೆಗಳೇ ಪ್ರಮುಖ ಕಾರಣವಾಗಬಹುದು. ಹಾಗಾಗಿ ಇನ್ನಾದರೂ ಸರ್ಕಾರ ಇವುಗಳನ್ನು ನಿಲ್ಲಿಸುವ ಕೆಲಸ ಮಾಡಲಿ.
ಇಸ್ಮಾಯಿಲ್, ತೊಕ್ಕೊಟ್ಟು
ಹೊರಜಿಲ್ಲೆಗಳ ಕಾರ್ಮಿಕರ ಅವಾಂತರ
ಪಡುಬಿದ್ರಿ, ಎಲ್ಲೂರು, ಮುದರಂ ಗಡಿ ಪರಿಸರದಲ್ಲಿ ಸುಜ್ಲಾನ್ ಮತ್ತು ನಾಗಾರ್ಜುನ ಎಂಬೆರಡು ರಕ್ಕಸ ಕಂಪೆ ನಿಗಳು ತಳವೂರಿದ ಬಳಿಕ ಊರಿನ ಚಿತ್ರಣವೇ ಬದಲಾಗಿದೆ. ಎಲ್ಲಿ ನೋಡಿ ದರೂ ಹೊರರಾಜ್ಯಗಳ ಕಾರ್ಮಿಕರೇ ತುಂಬಿಕೊಂಡಿದ್ದಾರೆ.
ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ, ಹೆಣ್ಣುಮಕ್ಕಳ ಚುಡಾವಣೆ ಪ್ರಕ ರಣಗಳು ಹಿಂದೆಂದಿಗಿಂತ ಹೆಚ್ಚಾಗಿ ನಡೆಯುತ್ತಿರುವುದು ಗುಟ್ಟಾಗಿ ಉಳಿ ದಿಲ್ಲ. ಇದೆಲ್ಲ ಕಂಪೆನಿಯ ಅವಾಂತ ರಕ್ಕೆ ಸಣ್ಣ ಉದಾಹರಣೆಯಷ್ಟೇ. ಕೆಲವು ದಿನಗಳ ಹಿಂದಷ್ಟೇ ಸ್ಥಳೀಯ ಯುವತಿ ಯನ್ನು ರೂಮಿಗೆ ಕರೆಸಿ ರಾಸಲೀಲೆ ಯಾಡಿದ ಕಂಪೆನಿಯ ವಿಕೃತಕಾಮಿ ಇಂಜಿನಿಯರ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆಯೂ ಜರು ಗಿದೆ. ಮುಖ್ಯವಾಗಿ ಪೊಲೀಸ್ ಇಲಾಖೆ ಇವರ ಉಪಟಳವನ್ನು ನಿಯಂತ್ರಿಸಲು ಗಂಭೀರವಾಗಿ ಚಿಂತಿಸಿಲ್ಲ. ಕಂಪೆನಿ ಕಾರ್ಮಿಕರ ಮೇಲೆ ತಳೆಯುವ ಮೃದು ಧೋರಣೆಯೇ ಜನರನ್ನು ತ್ರಿಶಂಕು ಸ್ಥಿತಿಯಲ್ಲಿ ಬದುಕುವಂತೆ ಮಾಡಿದೆ. ಇಲ್ಲಿ ಭೂಮಿ ಕಳೆದುಕೊಂಡಿರುವ ರೈತರು ಸಮಸ್ಯೆಯಿಂದಲೇ ದಿನ ಕಳೆ ಯುತ್ತಿದ್ದಾರೆ.
ಕಂಪೆನಿಗಳಲ್ಲಿ ಸಾವಿರಾರು ಮಂದಿ ಹೊರರಾಜ್ಯದ ಕಾರ್ಮಿಕರು ದುಡಿಯುತ್ತಿದ್ದು, ಅಪರಾಧ ಕೃತ್ಯಗಳಲ್ಲಿ ಸುಲಭವಾಗಿ ತೊಡಗಿಕೊಂಡು ಇಲ್ಲಿನ ಠಾಣೆಗಳಲ್ಲಿ ಪ್ರಕರಣ ದಾಖ ಲಾದ ತಕ್ಷಣ ಊರು ತೊರೆಯು ತ್ತಾರೆ. ಪೊಲೀಸ್ ಇಲಾಖೆ ಇನ್ನಾ ದರೂ ಇಲ್ಲಿನ ಜನರ ಸಮಸ್ಯೆಯನ್ನು ಅರಿತುಕೊಳ್ಳಲಿ.
ಕೇಶವ, ಪಡುಬಿದ್ರಿ
ನಕಲಿ ರಶೀದಿ ಕೊಡುವ ಪೊಲೀಸರು!
ಟ್ರಾಫಿಕ್ ನಿಯಮಗಳನ್ನು ಬ್ರೇಕ್ ಮಾಡಿದರೆ ಕೇಸ್ ಹಾಕುವುದು ಪೊಲೀಸರ ಕರ್ತವ್ಯ. ಆದರೆ ಇತ್ತೀಚೆಗೆ ಪೊಲೀಸರು ಕೇಸ್ ಜಡಿದು ಫೈನ್ ಕಿತ್ತುಕೊಂಡ ನಂತರ ಕೊಡುವ ರಶೀದಿ ಡಮ್ಮಿಯಾಗಿರುತ್ತದೆ. ಮೊನ್ನೆ ನಾನು ಮತ್ತು ನನ್ನ ಗೆಳೆಯ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ತಡೆದ ಟ್ರಾಫಿಕ್ ಪೊಲೀಸ್ ಒಬ್ಬರು ಸೈಡ್ ಮಿರರ್ ಇಲ್ಲ ಎಂಬ ಕಾರಣಕ್ಕೆ ಕೇಸ್ ಜಡಿದು ಫೈನ್ ಹಾಕಿ ದರು. ಈ ವೇಳೆ ನಾನು ಕೇಸ್ ಹಾಕಿದ ರಶೀದಿ ಕೊಡಿ ಎಂದು ಕೇಳಿದೆ. ಬೇಕೋ ಬೇಡವೋ ಎಂಬಂತೆ ತಡವರಿಸಿದ ಪೊಲೀಸಪ್ಪ ನಂತರ ಯಾವುದೋ ಓಬೀರಾಯನ ಕಾಲದ ರಶೀದಿ ಕಿತ್ತು ಕೊಟ್ಟ. ಈ ವೇಳೆ ನಾನು ಇದು ಹಳೆಯ ರಶೀದಿ ಅಂದಿದ್ದಕ್ಕೆ ಹೊಸ ರಶೀದಿ ಪ್ರಿಂಟ್ಗೆ ಹೋಗಿದೆ ಎಂದು ಸಮಜಾಯಿಸಿ ನೀಡಿದರು. ಇಷ್ಟು ದೊಡ್ಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೇಸ್ ಹಾಕಿದ ನಂತರ ಕೊಡಲು ಪ್ರಸ್ತುತ ವರ್ಷದ ರಶೀದಿ ಇಲ್ಲವೆಂದರೆ ದುರಂತ ವಲ್ಲದೇ ಇನ್ನೇನು? ಅಥವಾ ವಾಹನ ಸವಾರರಿಗೆ ರಶೀದಿ ಕೊಡದೆ ಹಣ ಪೀಕಿಸಬಹುದು ಎಂಬ ಉದ್ದೇಶದಿಂದ ಈ ಮೊಂಡು ಧೈರ್ಯ ಮಾಡಿ ರಬಹುದೇ? ಅಲ್ಲದೇ ಕೆಲವೊಂದು ಟ್ರಾಫಿಕ್ ಪೊಲೀಸ್ ಠಾಣೆಯಿರುವ ವ್ಯಾಪ್ತಿಯಲ್ಲಿ ಸ್ಥಳೀಯ ಠಾಣೆಯ ಪೊಲೀಸರು ವಾಹನದವರಿಂದ ವಸೂ ಲಿಗೆ ನಿಂತಿರುತ್ತಾರೆ. ಮಂಗಳೂರು ನಗರದಲ್ಲಿ ಅಷ್ಟು ದೊಡ್ಡ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಇರುವಾಗ ಅಪರಾಧ ಪತ್ತೆಹಚ್ಚಬೇಕಾದ ಪೊಲೀಸರಿಗೆ ಈ ಉಸಾ ಬರಿ ಯಾಕೆ? ತಮ್ಮ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ್ರಕರಣ ಗಳನ್ನು ಮೊದಲು ಪತ್ತೆ ಹಚ್ಚಲಿ. ಇನ್ನಾದರೂ ಕಮಿಷನರ್ ಇತ್ತ ಗಮನ ಹರಿ ಸುವರೇ?
ಲೋಕೇಶ್ ಕಿರಣ್, ಕಿನ್ಯಾ
ಫಲಿತಾಂಶದ ಬಗ್ಗೆ ಎಚ್ಚರವಿರಲಿ
ಇನ್ನು ಕೆಲವೇ ದಿನಗಳಲ್ಲಿ ಎಸ್ ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾ ರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾ ರ್ಥಿಗಳ ಫಲಿತಾಂಶ ಮುಂದಿನ ದಿನ ಗಳಲ್ಲಿ ಹೊರಬೀಳುವ ಸಾಧ್ಯತೆಯಿದೆ. ಫಲಿತಾಂಶ ಎಂದ ಮೇಲೆ ಅಲ್ಲಿ ಉತ್ತೀರ್ಣ, ಅನುತ್ತೀರ್ಣ ಎರಡೂ ಇದ್ದೇ ಇರುತ್ತದೆ. ಈ ವೇಳೆ ಮನ ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಮೂಹವೂ ದೊಡ್ಡ ದಿದೆ. ಈ ಹಿಂದಿನ ವರ್ಷದಲ್ಲಿ ಅನೇಕ ಮಂದಿ ವಿದ್ಯಾರ್ಥಿಗಳು ಫಲಿತಾಂಶ ದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂ ಡಿದ್ದರು. ಹಾಗಾಗಿ ಈ ಬಾರಿಯಾ ದರೂ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಜಾಗೃತೆ ವಹಿಸಿ. ಮಕ್ಕಳು ಫಲಿತಾಂಶಕ್ಕೆ ತೆರಳುವಾಗ ಸಾಧ್ಯವಾದರೆ ನೀವೂ ಅವರ ಜೊತೆಗೆ ಕಾಲೇಜಿಗೆ ಇಲ್ಲವೇ ಶಾಲೆಗೆ ಹೋಗಿ. ಒಂದು ವೇಳೆ ಅನುತ್ತೀರ್ಣರಾಗಿದ್ದರೂ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ. ಯಾಕೆಂದರೆ ಫಲಿತಾಂಶ ಆ ಒಂದು ಕ್ಷಣಕ್ಕೆ ಎಂಥಹ ಅನಾಹುತವನ್ನೂ ತಂದೊಡ್ಡುವ ಸಾಧ್ಯತೆಯಿದೆ. ಇನ್ನು ನಿಮ್ಮ ಮಕ್ಕಳು ಅನುತ್ತೀರ್ಣರಾದರು ಎಂದ ತಕ್ಷಣ ಉತ್ತೀರ್ಣರಾದವರಿಗೆ ಹೋಲಿಕೆ ಮಾಡುವ ಕೆಟ್ಟ ಚಾಳಿ ಖಂಡಿತಾ ಬೇಡ.
ಸಾದಿಕ್, ಬಂದರ್
ಹಿಂದುಗಳೇ ಹಿಂದುತ್ವವನ್ನು ವಿರೋಧಿಸುವುದು ಸರಿಯಲ್ಲ
ಇತ್ತೀಚೆಗೆ ಕಠಾರಿವೀರ ಚಿತ್ರದಲ್ಲಿ ಹಿಂದು ಧರ್ಮಕ್ಕೆ ಅವಹೇಳನ ಮಾಡಲಾಗಿದೆ ಎಂಬ ಬಗ್ಗೆ ಕನ್ನಡದ ಸುದ್ದಿ ವಾಹಿನಿಯೊಂದರಲ್ಲಿ ಭಾರೀ ಚರ್ಚೆ ನಡೆಯುತ್ತಿತ್ತು. ನಾನು ಕೂಡ ಈ ಚರ್ಚೆಯನ್ನು ವೀಕ್ಷಿಸುತ್ತಿದ್ದೆ. ಈ ವೇಳೆ ವಾಹಿನಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಕಠಾರಿವೀರ ಚಿತ್ರದಲ್ಲಿ ಚಿತ್ರಿ ಸಿದ್ದು ಸರಿ ಎಂದು ಸಮರ್ಥಿಸುತ್ತಾ, ನಮ್ಮ ಧರ್ಮದ ಕೆಲ ತತ್ವಗಳನ್ನೇ ಪ್ರಶ್ನಿಸುವ ಹಂತಕ್ಕೆ ಇಳಿದಿದ್ದ. ಬಹುಶಃ ಇಂಥವರಿದ್ದರೆ ಹಿಂದುತ್ವ ಎಂಬ ಜೀವನ ವಿಧಾನ ಮಾಯವಾಗುವುದರಲ್ಲಿ ಸಂದೇಹವಿಲ್ಲ. ನಮ್ಮಲ್ಲಿ ಕೆಲ ಹಿಂದುಗಳೇ ಹಿಂದುತ್ವವನ್ನು ವಿರೋಧಿಸುತ್ತಾರೆ. ಹಾಗಂತ ನಾನು ಸಂಘಪ ರಿವಾರದವರ ರೀತಿಯ ಹಿಂದುತ್ವನ್ನು ಬೆಳೆಸಿಕೊಳ್ಳಿ ಎಂದು ಹೇಳುತ್ತಿಲ್ಲ. ಬದಲಾಗಿ ನಮ್ಮ ಸನಾತನ ಧರ್ಮವನ್ನು ಆತ್ಮಸಾಕ್ಷಿಗೆ ಬೆಲೆಕೊಟ್ಟಾದರೂ ಗೌರವಿಸಿ. ನಮ್ಮ ಧಾರ್ಮಿಕ ಭಾವನೆಗಳಿಗೆ ಇನ್ನೊಬ್ಬರು ಘಾಸಿ ಮಾಡಿ ದರು ಎನ್ನುವ ಬದಲು ನಾವೇ ನಮ್ಮ ಧಾರ್ಮಿಕ ಭಾವೆನಗಳನ್ನು ಗೌರವಿ ಸುವುದನ್ನು ಕಲಿಯಬೇಕಿದೆ. ಕೆಲ ಹಿಂದುಗಳಿಗೆ ಹಿಂದುತ್ವ ಎಂದರೆ ಸಂಘ ಪರಿವಾರದ ಸ್ವತ್ತು ಎಂಬ ಭಾವನೆಯಿದೆ. ಇಂತಹ ಭಾವೆನೆಯನ್ನು ಬಿಟ್ಟು ಬಿಡಿ. ಸಂಘಪರಿವಾರ ಎನ್ನುವುದು ಕೇವಲ ಹಿಂದುತ್ವದ ರಕ್ಷಣೆಗೆ ಇರುವ ಒಂದು ಸಂಘಟನೆಯಷ್ಟೇ. ಇವರಿಗೆ ಯಾರೂ ಹಿಂದುತ್ವನ್ನು ಗುತ್ತಿಗೆ ಕೊಟ್ಟಿಲ್ಲ. ನಮ್ಮ ಧರ್ಮವನ್ನು ನಾವಾಗಿಯೇ ಪ್ರೀತಿಯಿಂದ ಗೌರವಿಸಿದರೆ ಅದಕ್ಕಿಂತ ಹೆಚ್ಚಿನ ರಕ್ಷಣೆ ನಮ್ಮ ಧರ್ಮಕ್ಕೆ ಬೇಕಿಲ್ಲ.
ಇಂದಿಗೂ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳಲ್ಲಿ ಧಾರ್ಮಿಕ ಭಾವನೆ ಗಳಿಗೆ ಅದರದ್ದೇ ಆದ ಬೆಲೆಯಿದೆ. ಹಾಗಾಗಿಯೇ ಯಾರೊಬ್ಬರೂ ಈ ಎರಡು ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧೈರ್ಯ ತೋರುವುದಿಲ್ಲ. ನಮ್ಮ ಧರ್ಮವನ್ನು ನಾವೇ ಕೀಳಾಗಿ ಕಂಡರೆ ಇನ್ನೊಬ್ಬ ರಿಗೆ ಅಪಹಾಸ್ಯ ಮಾಡುವುದು ಕಷ್ಟವೇನಲ್ಲ. ಕೆಲ ಮಾಧ್ಯಮಗಳಲ್ಲಿ, ಸಿನಿಮಾ ಗಳಲ್ಲಿ ಹಿಂದು ಧರ್ಮವನ್ನು ಅಪಹಾಸ್ಯ ಮಾಡಿದಾಗ ನಾವದನ್ನು ಸಮ ರ್ಥಿಸಿದರೆ ಹಿಂದುತ್ವದ ರಕ್ಷಣೆ ಖಂಡಿತಾ ಸಾಧ್ಯವಿಲ್ಲ. ಇನ್ನಾದರೂ ಧರ್ಮ ವನ್ನು ನಾವೊಬ್ಬ ಹಿಂದುಗಳಾಗಿ ಗೌರವಿಸೋಣ.
ವಿನ್ಯಾಸ್ ಆರ್.ಶೆಟ್ಟಿ, ಜೆಪ್ಪು
ಆದಾಯ ತೆರಿಗೆ ನಿಗದಿ ಮಾಡಿರುವುದು ಸ್ವಾಗತಾರ್ಹ
ಈ ಬಾರಿಯ ಕೇಂದ್ರ ಮುಂಗಡ ಪತ್ರದಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ೧.೮ ಲಕ್ಷ ರೂ.ಗಳಿಂದ ಎರಡು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಆದರೆ ಈ ಮಿತಿ ಯನ್ನು ೩.೫ ಲಕ್ಷ ರೂ.ಗಳಿಗೆ ಏರಿಸಿ ದ್ದರೆ ಲಕ್ಷಾಂತರ ಉದ್ಯೋಗಿಗಳಿಗೆ ಲಾಭವಾಗುತ್ತಿತ್ತು. ಅದೇ ರೀತಿ ಎರಡು ರಿಂದ ಐದು ಲಕ್ಷ ರೂ. ಆದಾಯ ಗಳಿಸುವವರಿಗೆ ಶೇ.೧೦.೫ರಿಂದ ೧೦ ಲಕ್ಷದವರಿಗೆ ೨೦ ಹಾಗೂ ೧೦ ಲಕ್ಷ ರೂ. ಮೇಲ್ಪಟ್ಟು ಆದಾಯ ಗಳಿಸು ವವರಿಗೆ ಶೇ.೩೦ರಷ್ಟು ತೆರಿಗೆ ನಿಗದಿ ಮಾಡಿರುವುದು ಸ್ವಾಗತಾರ್ಹ.
ಕಾರ್ಪೊರೇಟ್ ಟ್ಯಾಕ್ಸ್ನಲ್ಲಿ ಬದಲಾವಣೆ ಮಾಡಬೇಕಿತ್ತು. ಆ ಮೂಲಕ ಬಂಡವಾಳ ಹೂಡಿಕೆಗೆ ಸ್ವಲ್ಪ ಮಟ್ಟಿನ ಪ್ರೋತ್ಸಾಹ ನೀಡಬಹುದಿತ್ತು. ಸೇವಾ ತೆರಿಗೆ ಬಗ್ಗೆ ಮುಂಗಡ ಪತ್ರದಲ್ಲಿ ಸ್ಪಷ್ಟ ಚಿತ್ರಣವಿಲ್ಲ. ಕೆಲ ಕ್ಷೇತ್ರ ಗಳನ್ನು ಸೇವಾ ತೆರಿಗೆಯಿಂದ ಸಂಪೂ ರ್ಣವಾಗಿ ಹೊರಗಿಡಲಾಗಿದೆ. ಆ ಕ್ಷೇತ್ರ ಗಳನ್ನು ಟ್ಯಾಕ್ಸ್ ನೆಟ್ನಲ್ಲಿ ತರಬೇಕಿತ್ತು. ಮೈಕ್ರೋ ಫೈನಾನ್ಸ್ಗೆ ಉತ್ತೇಜನ ನೀಡಿ ರುವುದು ಒಳ್ಳೆಯದು. ಶಿಕ್ಷಣ ಕ್ಷೇತ್ರಕ್ಕೆ ಸಾಲ ಸೌಲಭ್ಯ ನೀಡಲು ಅನುದಾನ ಮೀಸಲಿಟ್ಟಿರುವುದು ಬಡ ವಿದ್ಯಾರ್ಥಿ ಗಳ ಪಾಲಿಗೆ ವರದಾನವಾಗಲಿದೆ. ಆದರೆ ಚಿನ್ನದ ಗ್ರಾಹಕ ತೆರಿಗೆ ಶೇ ಎರಡರಿಂದ ನಾಲ್ಕಕ್ಕೆ ಏರಿಸಿರುವ ಕ್ರಮ ಖಂಡಿತಾ ಸರಿಯಲ್ಲ. ಈ ಬಗ್ಗೆ ಸರ ಕಾರ ಪರಿಶೀಲನೆ ನಡೆಸಲಿ.
ಕಿರಣ್ ಕುಮಾರ್, ಮಂಗಳೂರು
ಅದೃಷ್ಟದ ಮೆಸೇಜ್ಗೆ ಮರುಳಾಗದಿರಿ
ಮೊಬೈಲ್ ಮೂಲಕ ಬೇರೆ-ಬೇರೆ ಕಂಪೆನಿಗಳ ಹೆಸರಿನಲ್ಲಿ ಮೆಸೇಜ್ ಕಳುಹಿಸಿ ‘ನೀವು ಅದೃಷ್ಟ ಶಾಲಿಗಳಾಗಿದ್ದೀರಿ, ನಿಮಗೆ ಬಹುಮಾನ ಬಂದಿದೆ. ಅದರ ಬೆಲೆ ೧೦,೦೦೦ ರೂ., ನಿಮಗೆ ಅದನ್ನು ೧,೫೦೦ರೂ.ಗೆ ಕೊಡುತ್ತೇವೆ ಎನ್ನುವ ಮೆಸೇಜ್ಗಳನ್ನು ನಂಬಿ ಅಸಂಖ್ಯ ಜನರು ತಮ್ಮ ಹಣ ಕಳೆದು ಕೊಂಡಿದ್ದಾರೆ. ಇಲ್ಲಿ ಮೆಸೇಜ್ ಕಳುಹಿಸಿದವರ ಹೆಸರು, ವಿಳಾಸ ಲಭ್ಯವಿ ರುವುದಿಲ್ಲ. ಹೀಗಾಗಿ ಯಾರ ಮೇಲೂ ದೂರು ಕೊಡಲಾಗುವುದಿಲ್ಲ. ಹಣ ವನ್ನು ಅಕೌಂಟ್ ನಂಬರ್ ಕೊಟ್ಟು ಅದಕ್ಕೆ ಕಳುಹಿಸಿ ಎಂದಿರುತ್ತದೆ. ಪೊಲೀ ಸರು ತನಿಖೆ ನಡೆಸಿದರೂ ವಂಚಕರು ಸಿಗುವುದಿಲ್ಲ. ಕಾರ್ಕಳ, ಮೂಡಬಿದ್ರೆ, ಮಂಗಳೂರು ಪರಿಸರದಲ್ಲಿ ಅನೇಕ ಮಂದಿ ಮೆಸೇಜ್ ಮೋಸಕ್ಕೆ ಬಲಿ ಯಾಗಿದ್ದಾರೆ. ಈ ಬಗ್ಗೆ ಈಗಾಗಲೇ ಅನೇಕ ಬಾರಿ ಪತ್ರಿಕೆಗಳಲ್ಲಿ ವರದಿಯಾ ಗಿದೆ. ಪೊಲೀಸರೂ ಎಚ್ಚರಿಕೆ ನೀಡಿದ್ದಾರೆ. ಆದರೂ ಜನತೆ ಎಚ್ಚೆತ್ತುಕೊಂ ಡಿಲ್ಲ. ಜನರು ಇನ್ನಾದರೂ ಎಚ್ಚರಗೊಳ್ಳಬೇಕು. ಬಹುಮಾನದ ಹಿಂದಿನ ವಾಸ್ತವ ಸಂಗತಿ ತಿಳಿಯ ಬೇಕು.
ಸುಜಿತ್, ಕಾರ್ಕಳ
ಹಳೆಯಂಗಡಿ ಒಳರಸ್ತೆಯಲ್ಲಿ ಬಸ್, ಲಾರಿ ಸಂಚಾರ ನಿಷೇಧಿಸಿ
ಪಾವಂಜೆ ಬಳಿ ರಾ.ಹೆದ್ದಾರಿಯಿಂದ ಹಳೆಯಂಗಡಿ ಒಳರಸ್ತೆಗೆ ತಿರುವು ಪಡೆದು ಬಸ್ಗಳು ಸಂಚರಿಸುತ್ತವೆ. ಸುಗಮ ರಸ್ತೆ ಸಂಚಾರದ ದೃಷ್ಟಿಯಿಂದ ಒಳರಸ್ತೆಯಲ್ಲಿ ಬಸ್, ಲಾರಿ ಮುಂತಾದ ವಾಹನಗಳು ಸಂಚಾರ ನಡೆಸುವುದು ಯೋಗ್ಯವಲ್ಲ. ಯಾಕೆಂದರೆ ಇಲ್ಲಿ ಘನವಾಹನಗಳ ಸಂಚಾರಕ್ಕೆ ಸಾಕಷ್ಟು ಸ್ಥಳಾ ವಕಾಶವಿಲ್ಲ. ರಸ್ತೆಯ ಎರಡೂ ಬದಿಯಲ್ಲಿ ಅಂಗಡಿ-ಮನೆಗಳಿದ್ದು, ಬಸ್, ಲಾರಿಗಳು ಸಂಚ ರಿಸುವಾಗ ರಸ್ತೆ ಬ್ಲಾಕ್ ಆಗುತ್ತದೆ. ರಸ್ತೆಯ ಎರಡೂ ಬದಿಗಳಲ್ಲಿ ರಿಕ್ಷಾ, ಟೆಂಪೋ, ಕಾರು ಗಳು ನಿಂತಿರುತ್ತದೆ. ಇದರಿಂದ ಒಳರಸ್ತೆ ವಾಹನ ಗಳ ಬೇಕಾಬಿಟ್ಟಿ ಓಡಾಟದಿಂದ ಅಸ್ತವ್ಯಸ್ತವಾ ಗಿರುತ್ತದೆ. ಇಲ್ಲಿ ರಸ್ತೆ ಸುರಕ್ಷತೆಗಾಗಿ ಗ್ರಾ.ಪಂ. ಅಗತ್ಯ ಕ್ರಮ ಕೈಗೊಳ್ಳಬೇಕು. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ ಬಸ್ಗಳು ಒಳ ರಸ್ತೆಯಾಗಿ ಸಂಚಾರ ನಡೆಸುವುದು ಕಷ್ಟಸಾಧ್ಯ. ಪ್ರಯಾಣಿಕರು ರಸ್ತೆಯನ್ನು ದಾಟಿ ಬಸ್ ಹಿಡಿ ಯುವುದೂ ಕಷ್ಟ. ಇದನ್ನು ತಪ್ಪಿಸಲು ಒಳರ ಸ್ತೆಯಲ್ಲಿ ಬಸ್ ಸಂಚಾರ ನಿಷೇಧಿಸಿ ಕ್ರಮ ಕೈಗೊ ಳ್ಳಬೇಕಾಗಿ ವಿನಂತಿ.
ಗಣೇಶ್, ಹಳೆಯಂಗಡಿ
ಮೌಲವಿಗಳೇ ನಿಮ್ಮ ವರ್ತನೆ ಸರಿಯೇ?
ಹೇಳುವುದು ಶಾಸ್ತ್ರ, ಇಕ್ಕುವುದು ಗಾಳ ಎನ್ನುವ ಮಾತು ಇಂದಿನ ಕೆಲವು ಮೌಲವಿಗಳಿಗೆ ಹೊಂದಾ ಣಿಕೆಯಾಗುತ್ತದೆ. ಲೋಕಾಭಿರಾಮರಾಗಿ ಮಾತನಾಡು ವಾಗ ಪಾಪಪುಣ್ಯ, ಸ್ವರ್ಗ-ನರಕದ ಬಗ್ಗೆ ಕೊರೆಯುವ ಮೌಲವಿಗಳು ಗ್ರೂಫಿಸಂನ ವೇದಿಕೆಗೆ ಬಂದರೆ ಕುಡು ಕರಿಗಿಂತಲೂ ಕೆಟ್ಟದಾಗಿ ಮಾತನಾಡುತ್ತಾರೆ.
ಕೆಲವು ಮೌಲವಿಗಳಿಗೆ ಕಾಂತಪುರಂನ ಎ.ಪಿ. ಪ್ರವಾದಿಯಾದರೆ, ಇನ್ನು ಕೆಲವರಿಗೆ ಇ.ಕೆ.ಯೇ ಸರ್ವಸ್ವ. ಈ ಗ್ರೂಫಿಸಂಗಾಗಿ ಯಾವ ಪರದೂಷಣೆಗೂ ಈ ಮೌಲವಿಗಳು ಹಿಂಜರಿಯುವುದಿಲ್ಲ. ಪರದೂಷಣೆ ನರ ಮಾಂಸ ತಿನ್ನುವುದಕ್ಕೆ ಸಮಾನ ಎನ್ನುವ ಪ್ರವಾದಿ ವಚನ ಇಂತಹ ನೀಚರಿಗೆ ಅನ್ವಯಯವಾಗುವುದಿಲ್ಲವೇ?
ವೇದಿಕೆಯಲ್ಲಿ ಒಬ್ಬ ಮೌಲವಿ ಗ್ರೂಫಿಸಂನ ಹೆಸರಿ ನಲ್ಲಿ ಮತ್ತೊಬ್ಬ ಮೌಲವಿಯನ್ನೇ ಕೀಳಾಗಿ ಬೈದರೆ ಯಾರು ಮೌಲವಿಗಳನ್ನು ಗೌರವಿಸಿಯಾರು?
ತಮ್ಮ ಮಸೀದಿಯ ವ್ಯಾಪ್ತಿಯಲ್ಲಿ ಮದುವೆಯಾಗದೆ ಉಳಿದ ಹೆಣ್ಮಕ್ಕಳ ಬಗ್ಗೆಯಾಗಲೀ ಮನೆಯಿಲ್ಲದವರ ಕುರಿ ತಾಗಲೀ, ತುತ್ತು ಅನ್ನಕ್ಕೆ ಗತಿ ಇಲ್ಲದೆ ಉಪವಾಸವಿರುವ ವರ ಬಗ್ಗೆಯಾಗಲೀ ಒಂದು ಮಾತು ಆಡಲು ಪುರು ಸೊತ್ತು ಇಲ್ಲದ ಮೌಲವಿಗಳು ಗ್ರೂಫಿಸಂಗಾಗಿ ಹಗಲಿ ರಳು ಕಷ್ಟಪಡುತ್ತಾರೆ. ದಿನದಲ್ಲಿ ಬರೇ ಎರಡು ಗಂಟೆ ಕೆಲಸ ಮಾಡಿ ಮೂರು ಹೊತ್ತು ಬೇರೆ-ಬೇರೆ ಮನೆಯ ಮೃಷ್ಟಾನ್ನ ಭೋಜನ ಸವಿಯುವ ಮೌಲವಿಗಳೇ ಗ್ರೂಫಿಸಂ ಹೆಸರಿನಲ್ಲಿ ಸಮಾಜವನ್ನು ಧರ್ಮವನ್ನು ಒಡೆಯದೆ ಅಲ್ಲಾಹು ಮತ್ತು ಮರಣಕ್ಕೆ ಭಯಪಟ್ಟು ಜೀವಿಸಿ, ಆಗ ನಿಮಗೆ ಮುಸ್ಲಿಮರು ನೀಡಿದ ಸಂಬಳ ಮತ್ತು ಊಟದ ಹಿಂದಿನ ಶ್ರಮ ಸಾರ್ಥಕವಾಗಬಹುದು.
ಯಾಕೂಬ್, ಮಂಗಿಲಪದವು
ಭಾರತದ ಮೇಲೂ ಅಮೆರಿಕದ ಕಾಕದೃಷ್ಟಿ
ಅಮೆರಿಕ ಜಗತ್ತಿನ ಇತರ ದೇಶಗಳಿಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಆರಕ್ಷಕನಂತೆ ವರ್ತಿಸುತ್ತಾ ಬಂದಿದೆ. ಅಣ್ವಸ್ತ್ರ ಶಕ್ತಿ ಸಂಪನ್ನ ದೇಶವಾಗಿರುವ ತಾನು ಮಾತ್ರ ಶ್ರೀಮಂತಿಕೆಯನ್ನು, ಸವಲತ್ತುಗಳನ್ನು, ಸರ್ವ ರೀತಿಯ ಶ್ರೇಷ್ಠತೆಯನ್ನು ಹೊಂದಿರಬೇಕೆಂಬ ಸ್ವಾರ್ಥಭಾವನೆ ಈ ದೊಡ್ಡಣ್ಣನದು. ಜಾಗತಿಕ ತೈಲಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಈಗ ಬರಾಕ್ ಒಬಾಮರ ಕಾಕದೃಷ್ಟಿ ಭಾರತ, ಚೀನಾ, ಬ್ರೆಝಿಲ್ನಂತಹ ದೇಶಗಳ ಮೇಲೆ ಬಿದ್ದಿದೆ. ಈ ದೇಶಗಳ ಜನರು ಹೆಚ್ಚು-ಹೆಚ್ಚು ವಾಹನಗಳನ್ನು ಖರೀದಿಸುತ್ತಿರುವುದರಿಂದ ಅವರ ಜೀವನಮಟ್ಟ ಏರುತ್ತಿರುವುದರಿಂದ ಕಳವಳಗೊಂಡಿರುವ ಒಬಾಮಾ ಅಸಹನೆ ಪ್ರದರ್ಶಿಸುತ್ತಿದ್ದಾರೆ. ತಲೆಗೊಂದು ಕಾರ್ ಹೊಂದಿರುವ ಅಮೆರಿಕನ್ನರ ಇಂಧನ ಬೇಡಿಕೆ ಪೂರೈಸಲು ಅದು ಮುಂದಿನ ಕೆಲವೇ ಸಮಯದಲ್ಲಿ ಇರಾನ್ ಮೇಲೂ ಯುದ್ಧ ಸಾರಲೂ ಸಿದ್ಧವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳ ಬೇಕಿದೆ. ಸೌದಿ ರಾಷ್ಟ್ರಗಳು ತೈಲ ನಿಕ್ಷೇಪ ಹೊಂದಿದ್ದರೂ ಇದರ ಮೇಲೆ ಪ್ರಭುತ್ವ ಹೊಂದಿರುವುದು ಮಾತ್ರ ಅಮೆರಿಕಾ ಎನ್ನುವುದು ದುರದೃಷ್ಟಕರ ವಿಚಾರ.
ರಾಜೇಶ್ ಕುಮಾರ್, ಸುಳ್ಯ