ಹಳೆಯಂಗಡಿಯಲ್ಲಿ ಬ್ಯಾಂಕ್ ಸೇವೆ ಲಭ್ಯವಿದ್ದರೂ ಒಂದೇ ಒಂದು ಎಟಿಎಂ ಮೆಷಿನ್ ಇಲ್ಲ. ಇದರಿಂದ ಹಳೆಯಂಗಡಿ ಹಾಗೂ ಸುತ್ತಲಿನ ಪ್ರದೇಶದ ಜನರು ಸಮಸ್ಯೆಗೊಳಗಾಗಿ ದ್ದಾರೆ. ತುರ್ತು ಸಂದರ್ಭದಲ್ಲಿ ಹಣ ಡ್ರಾ ಮಾಡಬೇಕಾದರೆ ಮುಕ್ಕ ಅಥವಾ ಮೂಲ್ಕಿಗೆ ಹೋಗಬೇಕಾಗಿದೆ. ಇಲ್ಲಿ ಗ್ರಾಮೀಣ ಬ್ಯಾಂಕ್ಗಳು ಮಾತ್ರವ ಲ್ಲದೆ ರಾಷ್ಟ್ರೀಕೃತ ಬ್ಯಾಂಕ್ಗಳ ಶಾಖೆ ಗಳೂ ಇವೆ. ಎಟಿಎಂ ಮೆಷಿನ್ ಸ್ಥಾಪ ನೆಗೆ ಅಗತ್ಯವಿರುವ ಗ್ರಾಹಕರ ಸಂಖ್ಯೆ ಇಲ್ಲಿದೆ. ಇಲ್ಲಿ ಒಂದಾದರೂ ಎಟಿಎಂ ಮೆಷಿನ್ ಸ್ಥಾಪಿಸಿದರೆ ಒಳ್ಳೆಯದ ಲ್ಲವೇ? ಬ್ಯಾಂಕ್ಗಳ ಅಧಿಕಾರಿ ವರ್ಗ ಗಮನಿಸಿ ಕ್ರಮ ಕೈಗೊಳ್ಳಲಿ.
ಗಣೇಶ್, ಹಳೆಯಂಗಡಿ
ದೇವಳ ಪ್ರವೇಶಕ್ಕೆ ವಸ್ತ್ರಸಂಹಿತೆ ಅತ್ಯಗತ್ಯ
ದೇವಸ್ಥಾನವನ್ನು ಪ್ರವೇಶಿಸಲು ಪುರುಷರು ಮತ್ತು ಮಹಿಳೆಯರಿಗೆ ಸೂಕ್ತ ವಸ್ತ್ರಸಂಹಿತೆಯನ್ನು ಅಳವಡಿಸಬೇಕಿರುವುದು ಅತ್ಯಗತ್ಯವಾಗಿದೆ. ಯಾಕೆಂ ದರೆ ಇಂದಿನ ಸನ್ನಿವೇಶದಲ್ಲಿ ಯುವತಿಯರು ಅರೆಬರೆ ಬಟ್ಟೆ ಧರಿಸಿ ದೇವಳವನ್ನು ಪ್ರವೇಶಿಸು ತ್ತಾರೆ. ಇದು ದೇವಳದೊಳಗೆ ಭಕ್ತರ ಚಿತ್ತ ಚಾಂಚ ಲ್ಯಕ್ಕೆ ಕಾರಣವಾಗುತ್ತದೆ.
ಶಾಲೆ-ಕಾಲೇಜ್ಗಳಿಗೆ ಹೋಗುವ ಹೆಣ್ಣು ಮಕ್ಕಳು ಇಂಥ ಪ್ರಚೋದಕ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸುತ್ತಿದ್ದು, ಇವರಿಗೆ ಹೆತ್ತವರೇ ಪ್ರೋತ್ಸಾಹ ನೀಡು ತ್ತಾರೆ ಎಂದರೆ ತಪ್ಪಾಗದು. ಇತರರನ್ನು ತಮ್ಮೆಡೆಗೆ ಸೆಳೆಯುವಂತೆ ಬಟ್ಟೆಯನ್ನು ಧರಿಸಿ ಓಡಾಡುವ ಹೆಣ್ಣು ಮಕ್ಕಳು ನೈತಿಕ ಅಧ:ಪತನವನ್ನೂ ಕಾಣುತ್ತಿದ್ದಾರೆ. ಮಿಡಿ-ಸ್ಕರ್ಟ್, ಬಿಗಿಯಾದ ಉಡುಪುಗಳು ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಪೂರಕ ಆಗಿರುವ ಬದಲು ಅವರನ್ನು ಕಾಮದ ಗೊಂಬೆಗಳನ್ನಾಗಿ ಮಾಡು ತ್ತದೆ. ಕಾಮುಕರು ಬಲು ಸುಲಭವಾಗಿ ಇಂಥವರ ಮೇಲೆ ವಕ್ರದೃಷ್ಟಿ ಬೀಳಲು ಕಾರಣವಾಗುತ್ತದೆ.
ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಹೆತ್ತವರು, ಪೋಷ ಕರು ಅಗತ್ಯ ಗಮನಿಸಬೇಕು. ಹಿಂದೂ ದೇವಾಲ ಯಕ್ಕೆ ಪ್ರವೇಶಿಸಲು ಪುರುಷರು ಮತ್ತು ಮಹಿಳೆ ಯರಿಗೆ ವಸ್ತ್ರಸಂಹಿತೆಯು ಎಲ್ಲೆಡೆ ಜಾರಿಗೆ ಬರು ವಂತಾಗಲಿ.
ರಮೇಶ್ ಕುಮಾರ್, ಮೂಡುಕೊಣಾಜೆ
ಅಭಿನಂದನೆಗಳು
ಕೆಲವು ದಿನಗಳ ಹಿಂದೆ ಜಯ ಕಿರಣ ಪತ್ರಿಕೆಯಲ್ಲಿ ಮುಸ್ಲಿಂ ನೂತನ ವಾದಿ ಸಂಘಟನೆಯೊಂದರ ನಾಯ ಕನ ಅಸಲಿಮುಖವನ್ನು ಬಹಿರಂಗ ಪಡಿಸಿದ್ದಕ್ಕೆ ಧನ್ಯವಾದಗಳು. ತಾನೇ ಸಂಘಟನೆಯೊಂದನ್ನು ಹುಟ್ಟು ಹಾಕಿ ಅದರ ಸ್ವಯಂಘೋಷಿತ ಅಧ್ಯಕ್ಷ ನಾಗಿದ್ದು ಮಾತ್ರವಲ್ಲದೆ, ಲಕ್ಷಾಂತರ ಮಂದಿಯನ್ನು ಮರಳು ಗೊಳಿಸಿದ್ದ ಭೂಪ ಇತ್ತೀಚೆಗೆ ವಿವಾಹಿತ ಮಹಿ ಳೆಯ ಸಂಗ ಮಾಡಿ ಕಾಟಿಪಳ್ಳದಲ್ಲಿ ಒದೆ ತಿಂದಿದ್ದು ಮುಸ್ಲಿಂ ಸಮುದಾ ಯದ ಬಹುತೇಕರಿಗೆ ತಿಳಿದಿತ್ತು. ಆದರೆ ಇದನ್ನು ಯಾರೂ ಚರ್ಚಿಸು ತ್ತಿರಲಿಲ್ಲ. ಆದರೆ ಪತ್ರಿಕೆ ಅಂಥ ಸಾಹ ಸಕ್ಕೆ ಕೈಹಾಕಿ ಭೇಷ್ ಅನ್ನಿಸಿಕೊಂ ಡಿದೆ. ಮುಸ್ಲಿಂ ಮಹಿಳೆಯರನ್ನು ಮಾತಿನಿಂದಲೇ ಮರಳು ಮಾಡಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಈತನಿಗೆ ಇನ್ನಾದರೂ ಸಮಾಜದ ಹಿರಿಯರು ಬಹಿಷ್ಕಾರ ಹಾಕಬೇಕಿದೆ. ಪತ್ರಿಕಾ ಬಳ ಗಕ್ಕೆ ನಾವು ಚಿರಋಣಿಯಾಗಿರುತ್ತೇವೆ.
ಎಸ್.ಆರ್., ಬಂದರ್
ಸಂಘ-ಸಂಸ್ಥೆಗಳು ಊರಿನ ಏಳಿಗೆಗಾಗಿ ಶ್ರಮಿಸುವುದೇ?
ರಾಜ್ಯದಲ್ಲಿ ಸಾರಾಯಿ ನಿಷೇಧ ಜಾರಿಯಲ್ಲಿದ್ದರೂ ಕೂಡಾ ನಮ್ಮ ನರಿಕೊಂಬು ಹಾಗೂ ಸುತ್ತಮುತ್ತ ಲಿನ ಕೆಲವು ಮನೆಗಳು ಹಾಗೂ ದಿನಸಿ ಅಂಗಡಿಗಳಲ್ಲಿ ನಿತ್ಯ ನಿರಂತರ ವಾಗಿ ಮಾರಾಟವಾಗುತ್ತಿದೆ. ಇದು ಸಂಬಂಧ ಪಟ್ಟ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಅಧಿಕಾರಿಗಳಿಗೆ ತಿಳಿದೇ ಇದ್ದರೂ ಯಾರು ಕೂಡಾ ಇದರ ಬಗ್ಗೆ ಕ್ರಮ ಕೈಗೊಳ್ಳುವುದು ಕಂಡು ಬರುತ್ತಿಲ್ಲ. ನಮ್ಮ ಊರಿನ ಪೊಲೀಸರು ಅಕ್ರಮ ಸಾರಾಯಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಮಹಾತ್ಮಗಾಂಧಿ ಜನ್ಮ ದಿನದಂದು ಮಾತ್ರ. ಒಬ್ಬ ಕಳ್ಳನನ್ನು ಹಿಡಿದ ನಂತರ ಅವನನ್ನು ತನಿಖೆ ಮಾಡು ವಾಗ ಐದಾರು ಮಂದಿ ಕಳ್ಳರು ಸಿಗು ತ್ತಾರೆ. ಅದೇ ರೀತಿ ಒಬ್ಬ ಕುಡುಕ ನನ್ನು ಹಿಡಿದು ಬಾಯಿ ಬಿಡಿಸಿದರೆ ಅವನಿಂದಲೇ ಎಲ್ಲಿ ಸಾರಾಯಿ ಸಿಗು ತ್ತದೆ ಎನ್ನುವುದನ್ನು ಪತ್ತೆಹಚ್ಚಬ ಹುದು.
ನೊಂದ ಮಹಿಳೆ, ನೆಲ್ಕಡ್ಕ
ಹಿಂದು ಸಂಘಟನೆಗಳು ಗಮನಿಸಲಿ
ಹಿಂದೂ ಸಂಘಟನೆಗಳ ನಾಯಕರು, ಕಾರ್ಯಕರ್ತರು ಮತ್ತೊಬ್ಬರ ಕಡೆ ಕೈತೋರಿಸುವ ಬದಲು ಮೊದಲು ಹಿಂದೂ ಸಮಾಜ ಬಾಂಧವರ ಸಮಸ್ಯೆಯನ್ನು ಬಗೆಹ ರಿಸಲಿ. ಬಡತನ, ವರದಕ್ಷಿಣೆ ಸಮಸ್ಯೆ ಇನ್ನೂ ಜ್ವಲಂತವಾಗಿಯೇ ಇದೆ. ಕುಡಿತ, ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಹಿಂದೂ ಯುವಕರ ಮನಸ್ಸನ್ನು ಬದಲಾಯಿಸಬೇಕು. ಈ ಮೂಲಕ ಹಿಂದೂ ಸಂಘಟನೆಯನ್ನು ಬಲಪಡಿಸಬೇಕಾಗಿದೆ.
ಎ.ಕುಮಾರ್, ಅಜ್ಜಿಯಮಜಲು
ಜ್ಯೋತಿಷಿಗಳು ಕೆಂಪುಗೂಟದ ಕಾರು ಬಳಸಬಹುದೇ?
ತಮ್ಮ ಕಾರುಗಳಲ್ಲಿ ಕೆಂಪು ಗೂಟಗಳನ್ನು ಹಾಕಿ ಕೊಂಡು ತಿರುಗುವುದಕ್ಕೂ ಒಂದು ಕಾನೂನು ಎನ್ನು ವುದು ಇದೆ. ಕೆಲ ಅಧಿಕೃತರಿಗೆ ಮಾತ್ರ ಈ ರೀತಿ ರೆಡ್ ಲೈಟ್ ಬಳಸಲು ಅಧಿಕಾರವಿದೆ ಎಂಬ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದೆ. ಆದರೆ ಇತ್ತೀಚೆಗೆ ಜ್ಯೋತಿಷಿ ಯೊಬ್ಬರು ತಮ್ಮ ಕಾರಿನಲ್ಲಿ ರೆಡ್ಲೈಟ್ ಹಾಕಿಕೊಂಡು ತಿರುಗುವ ವಿಚಾರ ತಿಳಿದು ನನಗೆ ಆಶ್ಚರ್ಯವಾಯಿತು. ಮಂತ್ರಿಗಳಲ್ಲೂ ಎಲ್ಲರೂ ಈ ಕೆಂಪು ಗೂಟವನ್ನು ಬಳಸು ವಂತಿಲ್ಲ.
ಹೀಗಿರುವಾಗ ಸರ್ಕಾರದ ಯಾವುದೇ ವಿಚಾರಕ್ಕೆ ಸಂಬಂಧಪಡದ ವ್ಯಕ್ತಿಯೊಬ್ಬ ಈ ರೀತಿ ಕೆಂಪು ಗೂಟ ವನ್ನೇರಿಸಿಕೊಂಡು ರಾಜಾರೋಷವಾಗಿ ತಿರುಗಾಡುವುದನ್ನು ಕೇಳುವವರಿಲ್ಲವೇ? ಈ ಹಿಂದೆ ಕನ್ನಡದ ಖ್ಯಾತ ಮಾಧ್ಯಮ ವೊಂದು ಅನಧಿಕೃತರು ರೆಡ್ಲೈಟ್ ಹಾಕಿ ಓಡಾಡುವ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿತ್ತು. ಆದರೆ ತಮ್ಮ ವಾಹಿನಿಯ ಆಪ್ತನಾದ ಈ ಜ್ಯೋತಿಷಿಯ ಕೆಂಪು ಗೂಟದ ಗೀಳು ಇವರ ಕಣ್ಣಿಗೆ ಬಿದ್ದಿಲ್ಲವೇ? ತಾನ್ಯಾವ ಸಂಸದನಿಗೂ ಕಮ್ಮಿಯಿಲ್ಲ ಎಂಬಂತೆ ರೆಡ್ಲೈಟ್ ಹಾಕಿ ಸುತ್ತಾಡುವ, ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರುವ ಇಂಥವರ ವಿರುದ್ದ ಕ್ರಮ ಕೈಗೊಳ್ಳುವವರು ಯಾರು? ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಲಿ.
ಸಂಕೇತ್ ನಾಯಕ್, ಕಂಕನಾಡಿ
ಬಸ್ ಚಾಲಕರಲ್ಲೇ ಒಗ್ಗಟ್ಟಿಲ್ಲವೇ?
ಮೊನ್ನೆಯಷ್ಟೇ ಖಾಸಗಿ ಬಸ್ ಚಾಲಕನ ಮೇಲೆ ಮುಡಿಪುವಿನಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಮತ್ತು ಆರೋಪಿಯ ಬಂಧನಕ್ಕೆ ಆಗ್ರಹಿಸಿ ಬಸ್ ಮುಷ್ಕರ ನಡೆಯಿತು. ಆದರೆ ಈ ಮುಷ್ಕರದಲ್ಲೂ ಸಿಟಿ, ಸರ್ವೀಸ್ ಎಂಬ ಭೇದಭಾವ ತಾಳಿದ್ದು ಎಷ್ಟು ಸರಿ? ಬಸ್ ಚಾಲಕರೆಂದ ಮೇಲೆ ಅದು ಸರ್ವೀಸ್ ಇರಲಿ ಅಥವಾ ಸಿಟಿ ಬಸ್ ಇರಲಿ. ಎರಡೂ ಒಂದೇ. ಇಲ್ಲಿ ಯಾವ ಬಸ್ಸಿನ ಚಾಲಕನ ಮೇಲೆ ಹಲ್ಲೆ ನಡೆದರೂ ಅದು ಹಲ್ಲೆಯೇ. ಹೀಗಿರುವಾಗ ಮುಷ್ಕ ರದ ದಿನ ಸಿಟಿ ಬಸ್ಸಿನವರು ರಾಜಾರೋಷವಾಗಿ ಬಸ್ ಚಲಾಯಿಸಿದ್ದು, ಎಷ್ಟು ಸರಿ? ಹೀಗಾದರೆ ಆರೋಪಿಗಳ ಬಂಧನ ಖಂಡಿತಾ ಸಾಧ್ಯವಿಲ್ಲ. ನಮ್ಮಲ್ಲೇ ಒಗ್ಗಟ್ಟಿಲ್ಲ ಎನ್ನುವುದು ಇದರಿಂದ ಬಹಿರಂಗಗೊಳ್ಳುತ್ತದೆ. ಮೊನ್ನೆ ನಡೆದ ಬಸ್ ಮುಷ್ಕರದಿಂದ ಯಾವುದೇ ಲಾಭವಾಗಿಲ್ಲ ಎನ್ನಬಹುದು. ಯಾಕೆಂದರೆ ಸಿಟಿ ಬಸ್ಗಳು ಎಂದಿನಂತೆ ಈ ಪ್ರದೇಶದಲ್ಲಿ ರಾಜಾರೋಷವಾಗಿ ಸಂಚರಿಸುತ್ತಿ ದ್ದವು. ನಮಗೂ ಘಟನೆಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದರು. ಇನ್ನಾ ದರೂ ಸಿಟಿ ಬಸ್, ಸರ್ವೀಸ್ ಬಸ್ ಎಂಬ ಭೇದಭಾವ ಬೇಡ. ಬಸ್ ಚಾಲಕ ಎಂದ ಮೇಲೆ ಎಲ್ಲರೂ ಒಂದೇ. ಹೀಗಿರುವಾಗ ಸರ್ವೀಸ್ ಬಸ್ ಚಾಲಕನ ಮೇಲೆ ನಡೆದ ಹಲ್ಲೆಯನ್ನು ಎಲ್ಲಾ ಖಾಸಗಿ ಬಸ್ ಚಾಲಕರು ಖಂಡಿಸಲೇ ಬೇಕು. ಆಗ ಮಾತ್ರ ಅಧಿಕಾರದ ಮದದಿಂದ ಬೇಕಾಬಿಟ್ಟಿ ವರ್ತಿಸುವ ಹಲ್ಲೆ ಕೋರರಿಗೆ ಸೂಕ್ತ ಪಾಠ ಕಲಿಸಲು ಸಾಧ್ಯ. ಇನ್ನಾದರೂ ಬಸ್ ಚಾಲಕರು ಈ ರೀತಿಯ ವಿಚಾರಗಳಲ್ಲಿ ಒಗ್ಗಟ್ಟಿನಿಂದಿರಲಿ.
ನೊಂದ ಬಸ್ ಚಾಲಕ, ಮಂಗಳೂರು
ಬಾವಿ ದುರಂತದ ಬಗ್ಗೆ ಎಚ್ಚರಿಕೆ ಅಗತ್ಯ
ಇತ್ತೀಚಿಗೆ ಹಳೆಯಂಗಡಿಯಲ್ಲಿ ಬಾವಿ ತೋಡುತ್ತಿದ್ದ ಇಬ್ಬರು ಕಾರ್ಮಿ ಕರು ಮಣ್ಣು ಕುಸಿದು ಮೃತಪಟ್ಟ ಘಟನೆ ನಡೆದಿದೆ. ಇಂಥ ಘಟನೆ ಅದೆಷ್ಟು ಬಾರಿ ನಡೆದರೂ ಗುತ್ತಿಗೆದಾರರು, ಕಾರ್ಮಿಕರು ಎಚ್ಚರಗೊಳ್ಳುವುದಿಲ್ಲ. ಮಣ್ಣು ತೇವಗೊಂಡಿರುವ ಜಾಗದಲ್ಲಿ ಬಾವಿಯನ್ನು ತೋಡುವಾಗ ಎಚ್ಚರ ವಹಿಸದಿ ದ್ದಲ್ಲಿ ಅಪಾಯ ತಪ್ಪಿದ್ದಲ್ಲ. ಬಾವಿ ತೋಡುವಾಗ ದುರಂತ ನಡೆದರೆ ಕಾರ್ಮಿ ಕರು ಸುರಕ್ಷಿತವಾಗಿ ಪಾರಾಗುವ ಬಗ್ಗೆ ಅವರಿಗೆ ತರಬೇತಿಯನ್ನು ನೀಡು ವುದು ಅವಶ್ಯ. ಗುತ್ತಿಗೆದಾರರು ವಹಿಸಿ ಕೊಂಡ ಕೆಲಸವನ್ನು ಬೇಗನೆ ಮುಗಿ ಸುವ ನಿಟ್ಟಿನಲ್ಲಿ ಹೊರಜಿಲ್ಲೆಗಳ ಕೂಲಿ ಕಾರ್ಮಿಕರನ್ನು ಹೀನಾಯವಾಗಿ ದುಡಿಸಿಕೊಳ್ಳುವುದೂ ಕಂಡುಬರುತ್ತಿದೆ. ಇದೆಲ್ಲದಕ್ಕೆ ಜಿಲ್ಲಾಡಳಿತದ ಸೂಕ್ತ ನಿಯಮಗಳು ಅನ್ವಯಿಸದೇ ಇರುವುದು ಕಾರಣ. ಅಲ್ಲದೇ ಬಾವಿ ದುರಂತ ಗಳು ಸಂಭವಿಸಲು ಅವೈಜ್ಞಾನಿಕ ವಿಧಾನಗಳೂ ಕಾರಣ ಎನ್ನಬಹುದು. ಎಷ್ಟೇ ತಾಂತ್ರಿಕ ವಿಧಾನಗಳು ನಮ್ಮಲ್ಲಿದ್ದರೂ ಬಾವಿಗೆ ಕಾರ್ಮಿಕರನ್ನು ಇಳಿಸುವಾಗ ಎಲ್ಲೂ ಮುನ್ನೆಚ್ಚರಿಕೆಯನ್ನು ವಹಿಸುವುದೇ ಇಲ್ಲ. ಇದರಿಂದ ದುರಂತಗಳು ಸಂಭವಿಸುತ್ತಿವೆ. ಕೂಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಡಳಿತ ಇನ್ನಾದರೂ ಗಮನಹರಿಸಲಿ.
ರಾಕೇಶ್, ಸುರತ್ಕಲ್
ಕೀಳುಮಟ್ಟದಿಂದ ಟೀಕಿಸಿದರೆ ಪ್ರಯೋಜನವಿಲ್ಲ
ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿ ಹುದ್ದೆಯನ್ನು ಏರಿದಾಗಿ ನಿಂದ ಅನಾವಶ್ಯವಾಗಿ ರಾಜ್ಯದ ಕೆಲವು ರಾಜಕಾರಣಿಗಳು ಅಪಸ್ವರ ಎತ್ತುತ್ತಿ ದ್ದಾರೆ. ಆಡಳಿತಕ್ಕೆ ಧಕ್ಕೆ ತರಲು ಇನ್ನಿ ಲ್ಲದ ಸಾಹಸ ಪಡುತ್ತಿದ್ದಾರೆ. ಕೆಲವ ರಂತೂ ಹುದ್ದೆಗಾಗಿ ಕಾನೂನಿನ ಜೊತೆ ಗುದ್ದಾಡಲು ತಯಾರಾಗಿದ್ದಾರೆ. ಇದು ತೀರಾ ನಾಚಿಕೆಗೇಡಿನ ಸಂಗತಿ.
ಒಬ್ಬ ಆಡಳಿತಗಾರನು ತಮ್ಮ ಹುದ್ದೆಯನ್ನು ನಿರ್ವಹಿಸುವಾಗ ಸಣ್ಣ ಪುಟ್ಟ ತಪ್ಪುಗಳು ಕಂಡುಬರುವುದು ಸಹಜ. ಆ ಸಂದರ್ಭದಲ್ಲಿ ಅವನನ್ನು ಟೀಕಿಸುವಾಗ ಸೂಕ್ತ ಸಲಹೆ ನೀಡಲು ವಿರೋಧ ಪಕ್ಷಗಳು ಇರಲೇಬೇಕು. ಆದರೆ ಸುಖಾಸುಮ್ಮನೆ ಮತಿಭ್ರಮೆ ಯಾದಂತೆ ಇಲ್ಲಸಲ್ಲದ ಆರೋಪ ಹೊರಿಸುವುದು ಸರಿಯಲ್ಲ. ವಾಟಾಳ್ ನಾಗರಾಜ್ ಅವರು ಸಿಎಂ ಅವರನ್ನು ಗಂಡಸೇ ಅಲ್ಲ ಎಂದಿರುವುದು ಶೋಭೆ ತರುವ ವಿಚಾರವಲ್ಲ. ಅದೂ ಮುಖ್ಯ ಮಂತ್ರಿಯವರು ಚಾಮರಾಜನಗರಕ್ಕೆ ವಿಶೇಷ ಅಭಿವೃದ್ಧಿ ಪ್ಯಾಕೇಜ್ ನೀಡಿಲ್ಲ ಎಂಬ ವಿಚಾರಕ್ಕೆ. ಎಲ್ಲಾ ಕೆಲಸ ಒಂದೇ ಕ್ಷಣ ಆಗಲು ಸಾಧ್ಯವಿಲ್ಲ. ಪ್ರತಿ ಯೊಂದಕ್ಕೂ ತನ್ನದೇ ಆದ ಸಮ ಯದ ಅಗತ್ಯವಿರುತ್ತದೆ. ಕಾಯುವುದನ್ನು ಬಿಟ್ಟು ಸಾರ್ವಜನಿಕವಾಗಿ ಕೀಳುಮಟ್ಟ ದಲ್ಲಿ ಟೀಕಿಸುವುದು ನಿಷ್ಪ್ರಯೋಜಕ.
ಗಣೇಶ್ ಉಕ್ಕಿನಡ್ಕ, ಪುತ್ತೂರು
ಜನ ಸೇವೆ ಯಾವಾಗ?
ಜನಪ್ರತಿನಿಧಿಗಳೆಲ್ಲ ಪರಸ್ಪರ ಕಚ್ಚಾಡುತ್ತಾ ರಾಜಕೀಯ ಮಾಡು ವುದರಲ್ಲೇ ತೊಡಗಿಕೊಂಡಿದ್ದಾರೆ. ಇವರಿಗೆ ಜನರ ಮೇಲೆ ಎಳ್ಳಷ್ಟೂ ಕಾಳಜಿಯಿಲ್ಲ. ರಾಜ್ಯದಲ್ಲಿ ಬರ ಪರಿ ಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ನೀರು, ಮೇವು ಸಿಗದೆ ಜಾನುವಾರು ಗಳು ಸಾವನ್ನಪ್ಪುತ್ತಿವೆ. ಪರಿಸ್ಥಿತಿ ಹೀಗಿ ದ್ದರೂ ರಾಜ್ಯದ ಜನತೆಯ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸದೆ ತಮ್ಮ ವೈಯಕ್ತಿಕ ಹಿತಸಾಧನೆಯಲ್ಲಿ ತೊಡ ಗಿರುವ ರಾಜಕಾರಣಿಗಳನ್ನು ಜನರೇ ಅಧಿಕಾರದಿಂದ ಕಿತ್ತೊಗೆಯಬೇಕು. ಸದಾ ಅಧಿಕಾರ ವ್ಯಾಮೋಹದಿಂದ ಅಲೆದಾಡುವ ಇಂಥ ಜನಪ್ರತಿನಿಧಿ ಗಳು ಜನರ ಸೇವೆ ಮಾಡುವುದು ಯಾವಾಗ? ಇದೆಲ್ಲ ಜನಸಾಮಾ ನ್ಯರು ಬೇಕಾಬಿಟ್ಟಿ ಮತ ಚಲಾಯಿ ಸಿದ್ದರ ಪರಿಣಾಮ. ಮುಂದಿನ ಚುನಾ ವಣೆಯಲ್ಲಾದರೂ ಜನರ ಯೋಗ ಕ್ಷೇಮ ವಿಚಾರಿಸುವ ಯೋಗ್ಯರನ್ನು ಆರಿಸೋಣ. ಈ ಮೂಲಕ ಜನಪರ ಆಡಳಿತ ನಿರೀಕ್ಷಿಸೋಣ.
ಕೀರ್ತನ್, ನಾರಾವಿ
ಹಾಸ್ಯ ಯಾವತ್ತೂ ಅಪಹಾಸ್ಯವಾಗದಿರಲಿ
ಮನುಷ್ಯ ಜೀವನದಲ್ಲಿ ನಗುವುದು ಹಾಗೂ ಇತರರನ್ನು ನಗಿಸುವುದು ಉತ್ತಮ ಹವ್ಯಾಸ. ಆದರೆ ಹಾಸ್ಯವು ವಿಪರೀತವಾದರೆ ಅದು ಹಾಸ್ಯ ವಾಗುವುದಿಲ್ಲ. ಅದು ಅಪಹಾಸ್ಯವೆಂದಾಗುತ್ತದೆ. ಈಗೀಗ ಕೆಲವೊಂದು ಟಿವಿ ಚಾನೆಲ್ಗಳು ಹಾಸ್ಯ ಕ್ಕೆಂದು ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯ, ಆಚರಣೆಗಳನ್ನು ಬಿಂಬಿಸಿ, ಆ ಮೂಲಕ ವಿಕೃತ ಹಾಸ್ಯವನ್ನು ತೋರ್ಪಡಿಸುತ್ತದೆ. ಆದರೆ ಇದು ಎಷ್ಟರಮಟ್ಟಿಗೆ ಸರಿಯಾದುದು ಎಂದು ಯೋಚಿ ಸಬೇಕಾಗಿದೆ. ಈ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಆಯೋಜಕರ, ಕಾರ್ಯಕ್ರಮ ನಿರೂ ಪಕರ ಮತ್ತು ವಾಹಿನಿಯ ಅಜ್ಞಾನದ ಅಂಧಕಾ ರವೋ ಅಥವಾ ಜ್ಞಾನದ ದುರಹಂಕಾರದ ಪರ ಮಾವಧಿಯೋ ತಿಳಿಯುತ್ತಿಲ್ಲ. ಧರ್ಮದ ಆಚರ ಣೆಯ ಕಟ್ಟುಪಾಡುಗಳನ್ನು ಕೆಲವೊಂದು ಕಾರ್ಯ ಕ್ರಮಗಳಲ್ಲಿ ವಿಡಂಬನೆ ಮಾಡಿ ತೋರಿಸುತ್ತಾರೆ. ನಮ್ಮ ನಾಡಿನ ಮಹಾಪುರುಷರು ನೀಡಿದಂತಹ ಸಾತ್ವಿಕ ಭಜನೆಗಳನ್ನು, ಮಾನವ ಜೀವನಕ್ಕೆ ಪೂರ ಕವಾದ ಜ್ಞಾನ ಸಾಹಿತ್ಯ ಭಂಡಾರಗಳನ್ನು ಮತ್ತು ಕಾಡು ಜನರಲ್ಲಿರುವ ಧರ್ಮಾಭಿಮಾನ, ಜ್ಞಾನ, ಗೌರವ, ದೇಶಪ್ರೇಮ ಇಂತಹ ವಿಚಾರಗಳನ್ನು ನಮ್ಮ ಭಾರತದ ವಾಹಿನಿಗಳು ಗೌರವಿಸುವುದಿಲ್ಲ ಅಥವಾ ಗೌರವಿಸುವುದನ್ನು ಕಂಡರೆ ಅವರಿಗೆ ಆಗುವುದಿ ಲ್ಲವೋ ಏನೋ! ನಮ್ಮ ವಾಹಿನಿಗಳಿಗೆ ಧರ್ಮದ ಮತ್ತು ಭಾರತ ದೇಶದ ಸಂಸ್ಕೃತಿಯ ಆಚರಣೆ ಯನ್ನು ಮೂಢನಂಬಿಕೆ ಎಂದು ಬಿಂಬಿಸದಿದ್ದರೆ ಇವರು ಮಾಡಿದ ಕೆಲಸಕ್ಕೆ ತೃಪ್ತಿ ಸಿಗುವುದಿಲ್ಲವೋ ಅಥವಾ ಇಂತಹ ಆಚರಣೆಗಳನ್ನು ವಿಡಂಬನೆ ಮಾಡಿದರೆ ತಮ್ಮ ವಾಹಿನಿಯ ಪ್ರಚಾರ ಜಾಸ್ತಿಯಾ ಗುತ್ತದೆ ಎಂಬ ಭಾವನೆಯೋ? ಇನ್ನು ಇದನ್ನು ನೋಡುವ ಮಹಾನುಭಾವರು ಇದನ್ನು ನೋಡಿ ತಮ್ಮ ಜೀವನ ಸಾರ್ಥಕವಾಯಿತೆಂಬಂತೆ, ಹಲ್ಲು ಕಿಸಿದುಕೊಂಡು ಅದರ ಬಗ್ಗೆ ಚರ್ಚೆಯಲ್ಲಿ ತೊಡಗಿ ರುತ್ತಾರೆ. ಆದರೆ ನಮ್ಮ ದೇಶದ ಬಗ್ಗೆ ಚರ್ಚಿಸಬೇ ಕೆಂದು ಇವರ ಮನಸ್ಸಿಗೆ ಬರುವುದೇ ಇಲ್ಲ!
ಕಿಶೋರ್, ಮಂಗಳೂರು