ಕಟೀಲಿನಲ್ಲಿ ವಾಹನ ಪಾರ್ಕಿಂಗ್ ಅವ್ಯವಸ್ಥೆ

Posted by JAYAKIRANA Kirana on Monday, 7 May 2012 | 0 comments | Leave a comment...

ಕಟೀಲು ದೇವಳದಲ್ಲಿ ವಾಹನಗಳನ್ನು ಪಾರ್ಕ್ ಮಾಡಲು ಸೂಕ್ತ ವ್ಯವಸ್ಥೆಯಿಲ್ಲ. ಪ್ರತಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ಕೊಡುವ ಪುಣ್ಯಕ್ಷೇತ್ರ ಇದಾಗಿದ್ದರೂ ಪಾರ್ಕಿಂಗ್ ಸ್ಥಳ ಸರಿಯಿಲ್ಲದೆ ದೇವಸ್ಥಾನದೆದುರು ಅಡ್ಡಾದಿಡ್ಡಿಯಾಗಿ ವಾಹನ ಲ್ಲಿಸುತ್ತಾರೆ. ಇರುವ ಸ್ವಲ್ಪಜಾಗದಲ್ಲೇ ಬೈಕ್, ಕಾರುಗಳನ್ನು ಲ್ಲಿಸಿ ಭಕ್ತರು ತೆರಳುತ್ತಾರೆ. ಇದರಿಂದ ಪಾದಚಾರಿಗಳ ಸುಗಮ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಕಟೀಲು ದೇವಳದಲ್ಲಿ ಶುಭದಿನಗಳಂದು ಅಸಂಖ್ಯ ಮದುವೆಗಳು ನಡೆಯುತ್ತವೆ. ಈ ವೇಳೆ ರಸ್ತೆ ಬ್ಲಾಕ್ ಆಗುವುದರಿಂದ ಸಾರ್ವಜಕರು ತುಂಬಾ ಸಮಸ್ಯೆ ಎದುರಿಸುತ್ತಾರೆ. ರಸ್ತೆಯಲ್ಲಿ ಸಂಚರಿಸುವುದೇ ಪ್ರಯಾಸಕರವಾಗುತ್ತದೆ. ಈ ನಿಟ್ಟಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಗತ್ಯ ಗಮನಿಸಬೇಕು. ದೇವಳದ ಹೊರಗೆ ಸೂಕ್ತ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸದಿದ್ದರೆ ಸಮಸ್ಯೆ ತಪ್ಪದು.
ನಿರಂಜನ್, ಕಾಟಿಪಳ್ಳ

ಲಜ್ಜೆಗೇಡಿ ಸರಕಾರ
ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವುದು ಲಜ್ಜೆಗೇಡಿ ಸರಕಾರ ಎನ್ನಲಡ್ಡಿಯಿಲ್ಲ. ಯಾಕೆಂದರೆ ಕೇವಲ ಅಧಿಕಾರಕ್ಕಾಗಿ ಹಾತೊರೆಯುವ ಜನಪ್ರತಿನಿಧಿಗಳೇ ಸರಕಾರದಲ್ಲಿ ತುಂಬಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರಂತೂ ತಾವೇ ರಾಜ್ಯದ ಮುಖ್ಯಮಂತ್ರಿ ಎಂಬ ಭ್ರಮೆಯಲ್ಲಿದ್ದಾರೆ. ಇವರನ್ನು ನಿಯಂತ್ರಿಸಲು ಪಕ್ಷದ ವರಿಷ್ಠರು, ಹೈಕಮಾಂಡ್‌ಗೇ ಸಾಧ್ಯವಾಗುತ್ತಿಲ್ಲ. ರಾಜ್ಯದೆಲ್ಲೆಡೆ ಬರ ಪರಿಸ್ಥಿತಿ ತಾಂಡವವಾಡುತ್ತಿದ್ದರೂ ಮುಖ್ಯಮಂತ್ರಿಗೆ ಇದರ ಚಿಂತೆಯಿಲ್ಲ. ಬರಪೀಡಿತ ಪ್ರದೇಶಗಳಿಗೆ ಭೇಟಿಮಾಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆಯೇ ಹೊರತು ಸಮಸ್ಯೆಗೆ ನೆರವಾಗುತ್ತಿಲ್ಲ. ಮೂರೂ ಬಿಟ್ಟವ ಲೋಕಕ್ಕೆ ಹಿರಿಯ ಅನ್ನೋ ಗಾದೆಮಾತಿನಂತೆ ಸರಕಾರ ನಡೆದುಕೊಳ್ಳುತ್ತಿದೆ. ಇದೆಲ್ಲವನ್ನು ನೋಡಿಕೊಂಡು ಸುಮ್ಮನಿರಬೇಕಾದ ಪರಿಸ್ಥಿತಿ ಜನಸಾಮಾನ್ಯರದ್ದಾಗಿದೆ. ಮುಂದಿನ ಬಾರಿ ಚುನಾವಣೆಯಲ್ಲಾದರೂ ನಾಗರಿಕರು ಎಚ್ಚೆತ್ತುಕೊಳ್ಳುವುದು ಒಳಿತು.
ನರೇಂದ್ರ, ಸುಬ್ರಹ್ಮಣ್ಯ

ಕಡಬ ಘಟನೆ ಸತ್ಯಾಂಶವೇನು?
ಇತ್ತೀಚೆಗೆ ಪುತ್ತೂರು ತಾಲೂಕಿನ ಕಡಬದಲ್ಲಿ ಮುಸ್ಲಿಂ ಯುವಕನ ಕಾರಿನಲ್ಲಿ ಸ್ವಯಂಪ್ರೇರಣೆಯಿಂದ ದಲಿತ ಯುವತಿ ಪ್ರಯಾಣಿಸಿದ್ದನ್ನೇ ದೊಡ್ಡ ಸಂಗತಿಯನ್ನಾಗಿ ಮಾಡಿ ಹಿಂದೂ ಸಂಘಟನೆಯ ಯುವಕರು ಸಾಮಾಜಿಕ ಶಾಂತಿಭಂಗ ಮಾಡಿದರು. ಪ್ರಾರಂಭದಲ್ಲಿ ಮುಸ್ಲಿಂ ಯುವಕನ ವಿರುದ್ಧ ಯುವತಿ ದೂರಿದ್ದರೆ, ಬಳಿಕ ಆತನ ಮೇಲಿನ ಪ್ರಕರಣವನ್ನು ಹಿಂಪಡೆದು ಸಂಘಟನೆಯ ಯುವಕರ ವಿರುದ್ಧ ದೂರು ಡಿದ್ದಾಳೆ. ಇಲ್ಲಿ ವಾಸ್ತವಾಂಶ ಏನೆಂದು ಜನರಿಗೆ ತಿಳಿದಿಲ್ಲ. ದಲಿತ ಯುವತಿ ಅತ್ಯಾಚಾರ ದೂರು ನೀಡಿದವಳು ತಿರುಗಿ ಬಿದ್ದಿದ್ದೇಕೆ? ಇಲ್ಲಿ ಯುವತಿ ಯಾರದ್ದೋ ಒತ್ತಡಕ್ಕೆ ಒಳಗಾಗಿ ದೂರು ನೀಡಿರುವ ಸಾಧ್ಯತೆಯೂ ಇದೆ. ಹಿಂದೂ ಸಂಘಟನೆಗಳು ಕೂಡಾ ವಾಸ್ತವಾಂಶ ತಿಳಿಯದೆ ಹೊಡೆದಾಟಕ್ಕೆ ಇಳಿಯುವುದು ಮೂರ್ಖ ತನವಾದೀತು. ಯಾಕೆಂದರೆ ಇಂಥ ಘಟನೆಗಳು ಸಾಮಾಜಿಕ ಅಶಾಂತಿ, ಕೋಮು ಸಾಮರಸ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಸಮಾಜದಲ್ಲಿನ ಒಡಕನ್ನು ಸರಿಪಡಿಸದೆ ಅನ್ಯಕೋಮಿನ ಕಡೆ ಕೈ ತೋರಿಸಿ ಯಾವುದೇ ಪ್ರಯೋಜನವಿರದು.
ನಾಗೇಶ್ ನಾಯ್ಕ, ಪುತ್ತೂರು

‘ಮಡೆಸ್ನಾನ ನಿಷೇಧದಿಂದ ಹಾನಿಯಿಲ್ಲ’ ಎಂದರೇನು?
ಇತ್ತೀಚೆಗೆ ಮಡೆಸ್ನಾನ ವಿವಾದದ ಕುರಿತು ಪ್ರತಿಕ್ರಿಯೆ ನೀಡಿ ರುವ ಪೇಜಾವರ ಮಠದ ಹಿರಿಯ ಯತಿವರ್ಯರು ಮಡೆಸ್ನಾನ ನಿಷೇಧ ದಿಂದ ಹಾನಿಯಿಲ್ಲ ಎಂದಿದ್ದಾರೆ. ಯಾವಾಗಲೂ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುವ ಶ್ರೀಗಳು ಮಡೆಸ್ನಾನದ ವಿಚಾರದಲ್ಲೂ ಸ್ಪಷ್ಟ ನಿಲುವು ತಳೆಯದಿದ್ದುದೇಕೆ? ಮಡೆಸ್ನಾನ ನಾಗರಿಕ ಸಮಾಜದ ಕಳಂಕವೇ ಸರಿ.
ಇಲ್ಲಿ ಜನರನ್ನು ವಿಂಗಡಿಸಿ ಅವರ ಮನಸ್ಸನ್ನು ಒಡೆಯ ಲಾಗುತ್ತದೆ. ಮಡೆಸ್ನಾನದಿಂದ ಆರೋಗ್ಯ ಸಂಬಂಧಿ ಸಮಸ್ಯೆ ಗಳೆಲ್ಲ ಮಾಯವಾಗುತ್ತಿದ್ದರೆ ವೈದ್ಯರಿಗೆ ಬೆಲೆಯೇ ಇರುತ್ತಿರಲಿಲ್ಲ ಅಲ್ಲವೇ? ಶ್ರೀಗಳು ಒಂದೋ ಮಡೆಸ್ನಾನ ನಿಷೇಧಿಸಿ, ಇಲ್ಲವೇ ನಿಷೇಧ ಬೇಡ ಎನ್ನುವುದನ್ನು ಸ್ಪಷ್ಟವಾಗಿ ಹೇಳು ವುದೊಳಿತು.
ಅದನ್ನು ಬಿಟ್ಟು ಮಡೆಸ್ನಾನ ನಿಷೇಧದಿಂದ ಹಾನಿ ಯಿಲ್ಲ, ಅಲ್ಲಿನ ಜನರೊಂದಿಗೆ ಚರ್ಚಿ ಸುತ್ತೇನೆ ಎಂದು ಕಾಲಕ್ಕೆ ತಕ್ಕಂತೆ ಮಾತಾಡುವುದು ಅವರಿಗೆ ಶೋಭೆ ತರುವಂಥದ್ದಲ್ಲ.
ಗಣೇಶ್, ಮೂಡಬಿದ್ರೆ

ಕರ್ನಾಟಕದಲ್ಲಿ ಕನ್ನಡ ಬಲ್ಲವರಿಗೆ ಕೆಲಸವಿಲ್ಲವೇ?
ನಮ್ಮ ರಾಜಕಾರಣಿಗಳು ಕನ್ನಡದ ಬಗ್ಗೆ ಇಷ್ಟೆಲ್ಲ ಮಾತನಾಡುತ್ತಾರೆ. ಆದರೆ ಕರ್ನಾ ಟಕದಲ್ಲಿ ಕನ್ನಡಿಗರಿಗೇ ಕೆಲಸವಿಲ್ಲ. ಎಲ್ಲೇ ಕೆಲಸ ಕೇಳಲಿಕ್ಕೆ ಹೋದರೂ ಮೊದಲು ಇಂಗ್ಲಿಷ್ ಬರುತ್ತಾ ಅಂತ ಕೇಳುತ್ತಾರೆ. ನಾವೋ ಕನ್ನಡ ಮಾಧ್ಯಮದಲ್ಲಿ ಓದಿ ಬಂದವರು. ಎಲ್ಲ ಕಂಪನಿಗಳು ಇಂಗ್ಲಿಷ್ ಬಲ್ಲವರನ್ನೆ ಬಯ ಸಿದರೆ ಕನ್ನಡ ಮಾಧ್ಯಮದಲ್ಲಿ ಓದಿ ಬಂದಿರು ವವರ ಗತಿ ಏನು? ಅವರು ಎಲ್ಲಿ ಕೆಲಸ ಕೇಳಲು ಹೋಗಬೇಕು?
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲು ಪ್ರಾಮುಖ್ಯತೆ ಕೊಡಬೇಕು. ಕರ್ನಾಟಕದ ಎಲ್ಲಾ ಕಂಪೆಗಳಲ್ಲಿ ಮೊದಲು ಕನ್ನಡದ ಬಳಕೆ ಆಗಬೇಕು. ನಂತರ ಬೇರೆ ಭಾಷೆಯನ್ನು ಉಪ ಯೋಗಿಸಬೇಕು. ಆವಾಗ ನಮ್ಮ ಕರ್ನಾಟಕದ ಎಲ್ಲಾ ವಿದ್ಯಾವಂತರಿಗೂ ಕೆಲಸ ಸಿಗಬಹುದೇ.ಈಗಂತೂ ರಾಜ್ಯದ ಯಾವುದೇ ಕಂಪೆನಿಗಳಿU ಹೋದರೂ ಅಲ್ಲಿ ತಮಿಳುನಾಡಿ-ನವರು, ಆಂಧ್ರಪ್ರದೇಶದವರೇ ತುಂಬಿರುತ್ತಾರೆ. ಕನ್ನಡಿಗರಿಗೆ ಕೆಲಸವೇ ಇರುವುದಿಲ್ಲ. ಅದೇ ನಾವು ತಮಿಳು ನಾಡು ಅಥವಾ ಆಂಧ್ರಪ್ರದೇಶಕ್ಕೆ ಹೋದರೆ ಅಲ್ಲಿ ನಮಗೆ ಮೊದಲ ಪ್ರಾಮುಖ್ಯತೆ ಕೊಡುವುದಿಲ್ಲ. ಅಲ್ಲಿ ಅವರಿಗೇ ಆದ್ಯತೆ. ಇದೇ ತರಹ ಇತರ ಭಾಷಿಕರು ಕರ್ನಾಟಕದಲ್ಲಿ ತುಂಬಿಹೋದರೆ ಕನ್ನಡ ಅನ್ನುವ ಭಾಷೆಯೇ ಇರುವುದಿಲ್ಲ. ನಮ್ಮ ಜನರು ತಮಿಳು ಮತ್ತು ತೆಲುಗು ಮಾತನಾಡಬೇಕಾಗುತ್ತಿದೆ. ಆದ್ದರಿಂದ ಕನ್ನಡ ಉಳಿಯಬೇಕಾದರೆ ಮೊದಲು ಎಲ್ಲಾ ಕಡೆಯೂ ಕನ್ನಡದ ಬಳಕೆ ಆಗಬೇಕು. ಅದಕ್ಕಾಗಿ ಮೊದಲಾಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಬೇಕು. ಕನ್ನಡಪರ ಸಂಘಟನೆಗಳು ಇದಕ್ಕಾಗಿ ಹೋರಾಡಲಿ.
ಆಕಾಶ್ ಎಂ.ಆರ್ , ಮೂಡಬಿದ್ರೆ

ಬಸ್‌ನಲ್ಲಿ ವೃದ್ಧರ ಮೇಲೆ ಸಹಾನುಭೂತಿ ಇರಲಿ
ನಾವು ಪ್ರತಿನಿತ್ಯ ಸಂಚರಿಸುವ ಬಸ್‌ಗಳಲ್ಲಿ ಇಂತಹ ಕೆಲವು ಘಟನೆಗಳನ್ನು ಕಣ್ಣಾರೆ ಕಾಣು ತ್ತೇವೆ. ಅದೇನೆಂದರೆ ವೃದ್ಧರು, ಮಕ್ಕಳನ್ನು ಹಿಡಿದ ಮಹಿಳೆಯರು, ನಿಲ್ಲಲು ಸಾಧ್ಯವಿಲ್ಲದವರು ಬಸ್ ಹತ್ತಿದರೆ ಕನಿಷ್ಟ ಸೌಜನ್ಯಕ್ಕಾಗಿಯಾದರೂ ಕೆಲವರು ಸೀಟ್ ಬಿಟ್ಟುಕೊಡುವುದಿಲ್ಲ. ಇನ್ನು ಮಹಿಳಾ ಪ್ರಯಾಣಿಕರಿಗೆ ಮಹಿಳೆಯರು ಸೀಟ್ ಬಿಟ್ಟು ಕೊಡುವುದಿಲ್ಲ ಎಂಬುದು ನಾಣ್ಣುಡಿಯಷ್ಟೇ ಪ್ರಚಲಿತ. ಮಗುವನ್ನು ಎತ್ತಿಕೊಂಡ ಮಹಿಳೆಯರು, ವೃದ್ಧೆಯರು ಬಸ್ ಹತ್ತಿದರೆ ಮಹಿಳಾ ಸೀಟ್‌ಗಳಲ್ಲಿ ಆರಾಮವಾಗಿ ಕುಳಿತಿರುವ ನಾರಿಯರು ಕಿಟಕಿ ಯಾಚೆ ನೋಡುತ್ತಾ ಪ್ರಕೃತಿಯ ಸೌಂದ ರ್ಯವನ್ನು ಸವಿಯುತ್ತಾರೆ. ತಪ್ಪಿಯೂ ಈ ಕಡೆ ನೋಡಿ ಸೀಟ್ ಬಿಟ್ಟುಕೊಡುವುದಿಲ್ಲ. ಇಲ್ಲಿ ಹೆಚ್ಚಾಗಿ ಸೀಟ್ ಬಿಟ್ಟುಕೊಟ್ಟು ಮಾನವೀಯ ನೆಲೆಯಲ್ಲಿ ಸ್ಪಂದಿಸುವವರು ಗಂಡಸರೇ ಆಗಿ ರುತ್ತಾರೆ. ವಯ ಸ್ಸಾದವರ ಮೇಲೆ, ವೃದ್ಧರ ಮೇಲೆ ಬಸ್‌ಗಳಲ್ಲಿ ಸಹಾನುಭೂತಿ ಯಾಕೆ ವ್ಯಕ್ತವಾಗು ವುದಿಲ್ಲವೋ ತಿಳಿಯದು. ಮುಂದೆ ಪ್ರಾಯ ಬಂದಂತೆ ತಾವೂ ಇದೇ ರೀತಿ ಆಗುತ್ತೇವೆ ಎಂಬ ಪರಿಜ್ಞಾನವೇ ಇವರಲ್ಲಿ ಇರುವುದಿಲ್ಲ. ಈ ಬಗ್ಗೆ ಬಸ್ ಸಿಬ್ಬಂದಿ ಪ್ರಯಾಣಿಕರನ್ನು ಪ್ರಶ್ನಿಸು ವಂತೆಯೂ ಇಲ್ಲ. ಯಾಕೆಂದರೆ ಬಸ್‌ನಲ್ಲಿ ಊರಿಗೆ ಅರಸನಾದರೂ ಆತ ಪ್ರಯಾಣಿಕ ಎಂಬ ಮಾತೇ ರೂಢಿ ಯಲ್ಲಿದೆ. ಇಲ್ಲಿ ಹೆಣ್ಣುಮಕ್ಕಳು, ಮಹಿಳೆಯರೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕನಿಷ್ಟ ಮಗು ವನ್ನು ಹಿಡಿದಿರುವವರು, ವೃದ್ಧೆಯರು ಬಂದಾಗಲಾ ದರೂ ಸೀಟ್ ಬಿಟ್ಟುಕೊಟ್ಟು ಮರ್ಯಾದೆ ಉಳಿಸಿ ಕೊಳ್ಳುವುದು ಒಳಿತಲ್ಲವೇ?
ನೀತಾ ನರ‍್ಹೋನಾ, ಜೆಪ್ಪು

ಪುರುಷಸಮಾಜದ ಬಲಿಪಶು
ಸಮಾಜದಲ್ಲಿ ದಿನತ್ಯ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಮಿತಿಮೀರುತ್ತಿದೆ. ಉನ್ನತ ಸ್ಥಾನಮಾನ ಪಡೆದಿರುವ ವ್ಯಕ್ತಿಗಳೇ ಇಂಥ ಹೀನ ಕೃತ್ಯದಲ್ಲಿ ಪಾಲ್ಗೊಂಡ ಅನೇಕ ಉದಾಹರಣೆಗಳಿವೆ. ಪುರುಷ ಪ್ರಧಾನ ಸಮಾಜವೆಂದೇ ಕರೆಯಲ್ಪ ಡುವ ಇಲ್ಲಿ ಹೆಣ್ಣನ್ನು ಕೀಳಾಗಿ ನಡೆಸಿಕೊ ಳ್ಳಲಾಗುತ್ತಿದೆ. ಇದು ನಾಗರಿಕ ಸಮಾಜದ ಘೋರ ದುರಂತವೇ ಸರಿ. ಅತ್ಯಾಚಾರ, ಲೈಂಗಿಕ ಕಿರುಕುಳ ಮನೆಯಿಂದ ಕೆಲಸ ಮಾಡುವ ಕಚೇರಿ ಯವರೆಗೂ ಕಾಲಿಟ್ಟಿದೆ. ಹೆಣ್ಣು ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ ಸಬಲೆಯಾಗಿದ್ದರೂ ಅವಳನ್ನು ಅಬಲೆ ಯಂತೆ ಕಾಣುತ್ತಾರೆ. ಹೀಗಾಗಿ ಹೆಣ್ಮಕ್ಕಳು ಇನ್ನಷ್ಟು ಜಾಗೃತರಾಗಬೇಕು. ಪುರುಷರ ಅಡಿಯಾಳಾಗಿ ಜೀವಿಸಲು ಮುಂದಾಗಬಾರದು. ವಿದ್ಯೆ ಕಲಿತು ತಮ್ಮ ಕಾಲ ಮೇಲೆ ನಿಂತರೆ ಮಾತ್ರ ಆಕೆ ಯಶಸ್ಸು ಸಾಧಿಸಬಹುದು.
ಲತಾ ಕುಮಾರಿ, ಸುಳ್ಯ

ರಸ್ತೆಯಲ್ಲೇ ಬಸ್ ನಿಲ್ದಾಣ
ಇದೇ ಅಂಕಣದಲ್ಲಿ ಈ ಹಿಂದೆ ಪಣಂಬೂರು ಬೀಚ್ ರಸ್ತೆ ಎದುರಿನ ಖಾಸಗಿ ಬಸ್‌ಗಳ ಆವಾಂತರಗಳ ಬಗ್ಗೆ ಪತ್ರ ಬಂದಿತ್ತು. ರಜಾದಿನದಂದು ಬೀಚ್‌ಗೆ ಹೋಗಲೆಂದು ಇಲ್ಲಿಗೆ ಸಾಕಷ್ಟು ಮಂದಿ ಬರುತ್ತಾರೆ. ಸಂಜೆ ಆದರೆ ಸಾಕು ಇಲ್ಲಿ ಮಂಗಳೂರಿಗೆ ಹೋಗುವ ಖಾಸಗಿ ಬಸ್ಸುಗಳು ರಾಷ್ಟ್ರೀಯ ಹೆದ್ದಾರಿಯ ನಡುವೆಯೇ ಬಸ್ಸು ನಿಲ್ಲಿಸಿ ಬೀಚ್ ಕಡೆಯಿಂದ ಬರುವವರನ್ನು ಕೈ ಬೀಸಿ ಕರೆಯುತ್ತವೆ. ಇದರಿಂದಾಗಿ ರಸ್ತೆ ಬ್ಲಾಕ್ ಆಗುತ್ತದೆ. ಮಾತ್ರವಲ್ಲದೆ ಮಕ್ಕಳು. ಹೆಂಗಸರು ಬಸ್ಸು ಹಿಡಿಯುವ ಧಾವಂತದಲ್ಲಿ ವೇಗವಾಗಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಾರೆ. ಇದರಿಂದಾಗಿ ವಾಹನದಡಿಗೆ ಬಿದ್ದು ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ. ಇಲ್ಲಿ ಬಸ್ಸು ನಿಲ್ಲಿಸಲು ಅವಕಾಶ ಕೊಡಲೇ ಕೂಡದು. ಹಾಗೊಂದು ವೇಳೆ ಕೊಟ್ಟರೂ ಸಮೀಪದ ಟ್ರಕ್ ಟರ್ಮಿನಲ್ ಬಳಿ ಪರ‍್ಯಾಯ ವ್ಯವಸ್ಥೆ ಮಾಡಬೇಕಿದೆ. ಪಣಂಬೂರು ಪೊಲೀಸರು ಈ ಬಗ್ಗೆ ಹೆಚ್ಚು ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಸರಕಾರ ಪಿಸಿಆರ್ ವಾಹನ ಕೊಟ್ಟಿದ್ದರೂ ಅದರಲ್ಲಿ ಊರಿಡೀ ತಿರುಗಾಡಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಬದಲು ಅವಘಡಗಳನ್ನು ತಡೆಯಲು ಯೋಜನೆ ರೂಪಿಸುವುದು ಒಳಿತಲ್ಲವೇ?
ಶುಕೂರು ಅಹಮ್ಮದ್ ಜೋಕಟ್ಟೆ

ಟೌನ್‌ಹಾಲ್ ಟಾಯ್ಲೆಟ್‌ನಲ್ಲಿ ವಿಕೃತ ಬರಹ
ನಗರದ ಟೌನ್‌ಹಾನ್‌ನಲ್ಲಿ ಇರವ ಶೌಚಾಲಯಗಳ ಒಳಗೆ ಕಾಲಿಟ್ಟರೆ ಸಾಕು ಗೋಡೆ, ನೆಲದ ತುಂಬಾ ವಿಕೃತ ಬರಹಗಳು. ಇಲ್ಲಿ ಬೇಕು ಬೇಕೆಂದೇ ಹೆಣ್ಣುಮಕ್ಕಳ ನಂಬರ್‌ಗಳನ್ನು ಬರೆದು ವಿಕೃತಕಾಮಿಗಳು ವಿಕೃತ ಆನಂದ ಪಡುವ ಸಾಧ್ಯತೆಯಿದೆ. ಆದ್ದರಿಂದ ಈ ಸಮಸ್ಯೆಯನ್ನು ನಿಯಂತ್ರಿಸಲು ಟೌನ್‌ಹಾಲ್ ಆಡಳಿತ ಸಮಿತಿ ಕ್ರಮ ಕೈಗೊಳ್ಳಬೇಕು. ಇಲ್ಲಿನ ಶೌಚಾಲಯಗಳ ಗೋಡೆಗಳಿಗೆ ಟೈಲ್ಸ್ ಅಳವಡಿಸಿದರೆ ಒಳ್ಳೆಯದು. ಇದರಿಂದ ಈ ಸಮಸ್ಯೆ ಯನ್ನು ನಿಯತ್ರಿಸಲು ಸಾಧ್ಯವಿದೆ. ಟೌನ್‌ಹಾನ್ ಹೊರಗಿನ ಆವರಣ, ಹತ್ತಿರದ ಪಾರ್ಕ್ ಅನ್ನು ಸಲಿಂಗಿಗಳು, ವಿಕೃತಕಾಮಿಗಳು ತಮ್ಮ ಕಾರಾ ಸ್ಥಾನವನ್ನಾಗಿ ಮಾಡಿಕೊಂಡಿದ್ದು, ಇಲ್ಲಿ ಸಭ್ಯ ನಾಗರಿಕರು ಸಂಚರಿಸಲು ಮುಜುಗರ ಪಡಬೇಕಾಗುತ್ತದೆ. ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಟೌನ್‌ಹಾಲ್‌ನಲ್ಲಿ ರಾತ್ರಿಯ ವೇಳೆ ನಾಟಕ ಮತ್ತಿತರ ಕಾರ್ಯಕ್ರಮಗಳಿರುವಾಗ ವಿಕೃತರು ಇಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಕಾರ್ಯಕ್ರಮ ನೋಡಲೆಂದು ಬರುವ ಪ್ರೇಕ್ಷಕರನ್ನು ತಮ್ಮ ಬುಟ್ಟಿಗೆ ಬೀಳಿಸಿ ಕೊಳ್ಳುವ ಇವರು ಹಣ ದೋಚುತ್ತಿರುವ ಪ್ರಸಂಗಗಳೂ ನಡೆಯುತ್ತಿದೆ. ನಗರದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿ ಕಲವು ಕೊಲೆ ಪ್ರಕರಣಗಳೂ ನಡೆದಿದೆ. ಈ ಬಗ್ಗೆ ಇನ್ನಾದರೂ ಇಲಾಖೆ ಗಂಭೀರವಾಗಿ ಚಿಂತಿಸಲಿ.
ಹರೀಶ್, ಮಾಂಟ್ರಾಡಿ

ಮುಖ್ಯಮಂತ್ರಿಗಳಿಗೆ ದ.ಕ. ಸಮಸ್ಯೆಗಳ ಹಿನ್ನೋಟದ ಬಹಿರಂಗಪತ್ರ

Posted by JAYAKIRANA Kirana on | 0 comments | Leave a comment...

ಯು.ಟಿ.ಖಾದರ್, ಶಾಸಕರು, ಮಂಗಳೂರು
ಮಂಗಳೂರು ವಿಧಾನಸಭಾಕ್ಷೇತ್ರದ ಜನಸಾಮಾನ್ಯರು ಕೆಲವೊಂದು ಸಮಸ್ಯೆಗಳನ್ನು ಬಗೆಹರಿಯದ ಪರದಾಡುತ್ತಿದ್ದಾರೆ. ಈ ಸಮಸ್ಯೆಗಳತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೆ ತಮ್ಮ ಇಚ್ಛೆಯಂತೆ ನಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕಾಗಿ ಮಾನ್ಯ ಮುಖ್ಯಮಂತ್ರಿಯವರಲ್ಲಿ ಕಳಕಳಿಯಿಂದ ವಿನಂತಿ.
ದಕ್ಷಿಣ ಕನ್ನಡ ಜಿಲ್ಲೆ ಸಮಸ್ಯೆಗಳ ಗೂಡಾಗಿದ್ದು, ಇದರಲ್ಲಿ ಗಂಭೀರ ಸಮಸ್ಯೆಗಳತ್ತ ಗಮನಿಸಿದಾಗ...
ಹಕ್ಕು ಪತ್ರ ಹೆಚ್ಚಿನ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಸಿಕ್ಕಿಲ್ಲ. ಬಹುತೇಕರು ಗ್ರಾಮೀಣ ಪ್ರದೇಶದ ನಿವಾಸಿಗಳಾಗಿದ್ದು, ಹೆಚ್ಚಾಗಿ ಸರಕಾರಿ ಜಮೀನಿನಲ್ಲಿ ಮನೆಗಳನ್ನು ಕಟ್ಟಿ ಜೀವನವನ್ನು ಸಾಗಿಸುತ್ತಿದ್ದಾರೆ. ಇಂತಹವರಿಗೆ ಹಕ್ಕುಪತ್ರವನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮಸಕ್ರಮ ಯೋಜನೆಯನ್ನು ಸರಿ ಯಾಗಿ ಜಾರಿಗೊಳಿಸಲು ಜಿಲ್ಲಾಮಟ್ಟದ ಸಭೆಯನ್ನು ಕರೆ ಯಲು ಸೂಕ್ತ ಆದೇಶವನ್ನು ನೀಡಬೇಕು.
ಕುಡಿಯುವ ನೀರಿನ ಸಮಸ್ಯೆಯು ಬೇಸಿಗೆ ಕಾಲದಲ್ಲಿ ತೀವ್ರವಾಗಿದ್ದು, ಈ ಬಗ್ಗೆ ತಾವುಗಳು ವಿಧಾನಸಭಾ ಅಧಿ ವೇಶನದಲ್ಲಿ ಪ್ರತಿ ಕ್ಷೇತ್ರವಾರು ೩೦ ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿರುತ್ತೀರಿ. ಆದರೆ ಈ ವರೆಗೆ ಸದ್ರಿ ಅನು ದಾನವು ಬಿಡುಗಡೆಯಾಗಿರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದು.
ಪಡಿತರ ಚೀಟಿಯನ್ನು ಮನೆನಂಬ್ರ, ವಿದ್ಯುತ್ ರಹಿತ, ನಿರ್ಗತಿಕ ಕುಟುಂಬಗಳಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳುವುದು.
ಅಂಗವಿಕಲ, ವೃದ್ಧಾಪ್ಯ, ವಿಧವಾ ವೇತನಗಳನ್ನು ನೀಡುವ ಸಂದರ್ಭದಲ್ಲಿ ಜಿಲ್ಲಾವಾರು ಗುರಿಗಳನ್ನು ನಿಗದಿಪಡಿಸಿದ್ದು, ಇದು ಆರ್ಥಿಕ ಹಾಗೂ ಅವೈeನಿಕ ಕ್ರಮವಾಗಿದ್ದು, ಇದನ್ನು ರದ್ದುಪಡಿಸಬೇಕು ಹಾಗೂ ಸೂಕ್ತ ಫಲಾನುಭವಿಗಳಿಗೆ ದೊರಕುವಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡ ಬೇಕು.
ಮಂಗಳೂರು ವಿಧಾನಸಭಾಕ್ಷೇತ್ರವು ಗ್ರಾಮೀಣ ಪ್ರದೇಶಗಳಿಂದ ಕೂಡಿದ್ದು, ಈ ಗ್ರಾಮಗಳ ಹೆಚ್ಚಿನ ಗ್ರಾಮೀಣ ರಸ್ತೆಗಳು ಹಾಗೂ ಲೋಕೋಪಯೋಗಿ ರಸ್ತೆಗಳು ತೀವ್ರ ನಾದುರಸ್ತಿಯಲ್ಲಿದ್ದು, ಸದ್ರಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಬೇಕು.
ಮಂಗಳೂರು ವಿಧಾನಸಭಾ ಕ್ಷೇತ್ರವು ಗ್ರಾಮೀಣ ಪ್ರದೇಶಗಳಿಂದ ಕೂಡಿದ್ದು, ಈ ಪ್ರದೇಶದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಪಿಯುಸಿ ಹಾಗೂ ಡಿಗ್ರಿ ಕಾಲೇಜುಗಳಿಲ್ಲದಿರುವುದರಿಂದ ಹಾಗೂ ಪ್ರೌಢಶಾಲೆಗಳ ಅಗತ್ಯವಿರುವುದರಿಂದ ಎರಡು ಪ್ರೌಢಶಾಲೆ, ಎರಡು ಪದವಿಪೂರ್ವ ಕಾಲೇಜು ಹಾಗೂ ಎರಡು ಪದವಿ ಕಾಲೇ ಜುಗಳನ್ನು ಶೈಕ್ಷಣಿಕ ಹಿತದೃಷ್ಟಿಯಿಂದ ಮಂಜೂರುಗೊಳಿಸಬೇಕು. ಈ ಬಗ್ಗೆ ತಮ್ಮೊಂದಿಗೆ ಈ ಮೊದಲು ಮಾತನಾಡಿದ್ದು, ಭರ ವಸೆಯನ್ನು ನೀಡಿರುತ್ತೀರಿ.
ಮಂಗಳೂರು ವಿಧಾನಸಭಾಕ್ಷೇತ್ರದ ವ್ಯಾಪ್ತಿಯ ಉಳ್ಳಾಲದಲ್ಲಿ ಕಡಲ್ಕೊರೆತವಿದ್ದು, ಸದ್ರಿ ಕಡಲ್ಕೊರೆತ ತಡೆಯಲು ಶಾಶ್ವತ ಯೋಜ ನೆಗೆ ಇನ್ನು ಕೂಡಾ ಚಾಲನೆ ದೊರಕಿರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಸದ್ರಿ ಕಾಮ ಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಲು ಸಂಬಂಧಪಟ್ಟ ಅಧಿಕಾ ರಿಗಳಿಗೆ ಸೂಕ್ತ ಆದೇಶ ನೀಡಬೇಕು. ಪ್ರಸ್ತುತ ಮಳೆಗಾಲವು ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿಯನ್ನು ರಕ್ಷಿಸಲು ತಾತ್ಕಾಲಿಕ ರಕ್ಷಣಾ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಕ್ಷಿಸಲು ಸೂಕ್ತ ಕ್ರಮಕೈಗೊಳ್ಳಬೇಕಾಗಿ ಈ ಮೂಲಕ ಕೋರುತ್ತೇನೆ.
ಈ ಎಲ್ಲಾ ಗಂಭೀರವಾದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಗಣನೆಗೆ ತೆಗೆದುಕೊಂಡು ಇವುಗಳ ಪರಿಹಾರಕ್ಕಾಗಿ ಶ್ರಮಿಸಬೇಕು.

ಐತಿಹಾಸಿಕ, ಮಹತ್ವದ ಸ್ಥಳಗಳು

Posted by JAYAKIRANA Kirana on | 0 comments | Leave a comment...

ಸೋಮನಾಥ ಅಗ್ರಹಾರವು ಶೃಂಗೇರಿಗೆ ಸಂಬಂಧಪಟ್ಟ ಸ್ಮಾರ್ತ ಶಿವ ಬ್ರಾಹ್ಮಣರ ಎಂಬುದಕ್ಕೆ ಇನ್ನೂ ಕೆಲವು ಸನ್ನಿವೇಶಗಳು ಮತ್ತು ಆಧಾರಗಳಿಂದ ತಿಳಿಯಬಹುದಾಗಿದೆ. ಸಾಧಾರಣ ೧೮೪೫ರ ವರೆಗೆ ಅಂದರೆ ದೇವಳದ ಆಡಳಿತವು ಮಾಧ್ವ ಸ್ವಾಮಿಗಳ ಆಡಳಿತೆಗೆ ಬರುವ ಮುಂಚೆ ಶೃಂಗೇರಿ ಕಡೆಯ ಅನೇಕ ಬ್ರಾಹ್ಮಣರು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಪಾಧಿವಂತರಾಗಿ ದೇವರ ಸೇವೆಯನ್ನು ನಡೆಸುತ್ತಿದ್ದರು ಎಂದು ಅಲ್ಲಿಯ ಶೃಂಗೇರಿ ಶಾಖಾ ಮಠದಲ್ಲಿ ಆಗ ಅಚ್ಚಣ್ಣ ಶಾಸ್ತ್ರಿಯವರಿಂದ ಆಗಿನ ಮಾಧ್ವ ಮಠದ ಸ್ವಾಮಿಗಳು ಪ್ರಥಮ ಅವರು ದೇವಸ್ಥಾನದಲ್ಲಿ ನಡೆಸುತ್ತಿದ್ದ ಉಪಾಧಿಗಳನ್ನು ರೂಪಾ ೨೦೦ಕ್ಕೆ ಅಡವಿಗೆ ಪಡಕೊಂಡದ್ದೂ ಈ ಉಪಾಧಿಗಳು ಈಗಲೂ ಈ ಮಾಧ್ವ ಮಠಕ್ಕೆ ಇರುವುದರಿಂದ ವ್ಯಕ್ತವಾಗುತ್ತದೆ.
ಕುಮಾರಧಾರಾ ನದಿ ಮತ್ತು ಮತ್ಸ್ಯತೀರ್ಥ : ಕುಮಾರಧಾರಾ ನದಿಯು ಪಶ್ಚಿಮ ಘಟ್ಟಗಳಲ್ಲಿ ಒಂದಾದ ಕುಮಾರ ಪರ್ವತದಲ್ಲಿ ಹುಟ್ಟಿ ಸಾಧಾರಣ ೩೨ ಮೈಲು ಪಶ್ಚಿಮದಲ್ಲಿ ಗಯಾಪದ ಕ್ಷೇತ್ರ ವ ಉಪ್ಪಿನಂಗಡಿ ಎಂಬಲ್ಲಿ ನೇತ್ರಾವತಿ ನದಿಯೊಂದಿಗೆ ಸಂಗಮವಾಗಿ ಆ ಮೇಲೆ ನೇತ್ರಾವತಿ ಎಂಬ ಹೆಸರಿನಿಂದಲೇ ಮಂಗಳೂರಲ್ಲಿ ಅರಬಿ ಸಮುದ್ರಕ್ಕೆ ಸೇರುತ್ತದೆ. ಈ ನದಿಗೆ ಒಂದು ಕಾಲದಲ್ಲಿ ಮಹೀ ನದಿಯೆಂದು ಹೆಸರಿತ್ತು. ಶ್ರೀ ಸುಬ್ರಹ್ಮಣ್ಯೇಶ್ವರನಿಗೆ ತಾರಕಾಸುರ ಸಂಹಾರಕ್ಕಾಗಿ ಸೇನಾಧಿಪತಿ ಪಟ್ಟ ಕಟ್ಟುವಾಗ ಈ ನದಿಯ ನೀರಿನಿಂದ ಧಾರೆ ಎರೆದುದರಿಂದ ಆ ನೀರು ಇದರೊಂದಿಗೆ ಸೇರಿ ಹರಿದುದರಿಂದ ಇದಕ್ಕೆ ಕುಮಾರಧಾರಾ ನದಿ ಎಂಬ ಹೆಸರು ಬಂತೆಂದು ಪೌರಾಣಿಕ ಐತಿಹ್ಯವಾಗಿದೆ. ದೇವಸ್ಥಾನದಿಂದ ಸಾಧಾರಣ ಒಂದೂವರೆ ಮೈಲು ದೂರದಲ್ಲಿ ಈ ನದಿಗೆ ದೇವಸ್ಥಾನದ ಎದುರಿನಲ್ಲಿ ಹರಿಯುತ್ತಿರುವ ದರ್ಪಣತೀರ್ಥವೆಂಬ ಹೊಳೆಯು ಸೇರು ವಲ್ಲಿಗೆ ಮತ್ಸ್ಯತೀರ್ಥವೆಂದು ಕರೆಯುತ್ತಾರೆ. ಇಲ್ಲಿ ಸ್ನಾನಘಟ್ಟವು ಇದೆ. ಈ ಒಂದು ಭಾಗದಲ್ಲಿ ಕುಮಾರಧಾರೆಯಲ್ಲಿ ತುಂಬಾ ಮೀನುಗಳು ಗುಂಪು ಗುಂಪಾಗಿ ಇವೆ. ಇವುಗಳು ಸ್ನಾನಕ್ಕೆ ಇಳಿಯುವವನ ಮೈಯನ್ನು ಶರೀರದಲ್ಲಿರುವ ಹುಣ್ಣುಗಳ ಕೊಳೆಯನ್ನು ಸ್ವಚ್ಛಪಡಿಸುತ್ತವೆ. ಈ ಮೀನುಗಳು ಇಲ್ಲಿ ಗುಂಪು ಗುಂಪಾಗಿ ಇರುವುದರಿಂದಲೇ ಇಲ್ಲಿಗೆ ಮತ್ಸ್ಯತೀರ್ಥವೆಂಬ ಹೆಸರು ಬಂದುದಾಗಿದೆ. ಈ ಕುಮಾರಧಾರಾ ನದಿಯು ಅಭ್ರಕ ಮಿಶ್ರಿತ ಮಣ್ಣಿನಲ್ಲಿ ಹರಿದುಬರುವುದರಿಂದ ಇದರಲ್ಲಿ ಸ್ನಾನವು ಗಂಗಾ ನದಿ ಸ್ನಾನದಂತೆ ಆರೋಗ್ಯದಾಯಕವೂ ಪುಣ್ಯಪ್ರದವೂ ಆಗಿದೆ. ಇದರ ಮಣ್ಣಿನಲ್ಲಿ ಮೈ ತೊಳೆಯುತ್ತ ಇದರಲ್ಲಿ ನಿತ್ಯವೂ ಸ್ನಾನ ಮಾಡಿಕೊಂಡು ಶ್ರೀ ಸುಬ್ರಹ್ಮಣ್ಯೇಶ್ವರನ ಮೂಲ ಮೃತ್ತಿಕೆಯನ್ನು ಸೇವಿಸುತ್ತಾ ಮೂರು ವರ್ಷ ಕಾಲ ಇಲ್ಲಿ ಕಳೆದರೆ ಮಹಾ ಕುಷ್ಠ ರೋಗಗಳೂ ಕೂಡ ಗುಣವಾಗುತ್ತದೆ ಎಂಬ ಪ್ರತೀತಿ ಇದೆ. ಬೀದಿ ಮಡೆ ಸ್ನಾನ ಮಾಡುವ ಹರಕೆ ಹೊತ್ತವರು ಇಲ್ಲಿ ಸ್ನಾನ ಮಾಡಿ ಬೀದಿಯಲ್ಲಿ ಮಡೆಸ್ನಾನ ಮಾಡಲು ಆರಂಭಿಸುತ್ತಾರೆ. ಈ ಸ್ಥಳದಲ್ಲೇ ಶ್ರೀ ಸುಬ್ರಹ್ಮಣ್ಯೇಶ್ವರನ ಅವಭೃತ ಸ್ನಾನವೂ ಅದೇ ದಿವಸ ತೆಪೋ ವಿಜೃಂಭಣೆಯಿಂದ ಜರಗುತ್ತದೆ. ಈ ಕ್ಷೇತ್ರದಲ್ಲಿ ಕುಮಾರಧಾರಾ ನದೀ ಸ್ನಾನವು ಅತಿ ಪ್ರಾಮುಖ್ಯವಾದುದು.
ರುದ್ರಪಾದ : ಈ ಸ್ಥಳವು ದೇವಳದಿಂದ ಸಾಧಾರಣ ಎರಡೂವರೆ ಫರ್ಲಾಂಗು ದೂರದಲ್ಲಿ ದರ್ಪಣ ತೀರ್ಥದ ದಡದಲ್ಲಿದೆ. ಇಲ್ಲಿ ಪಾದಗಳ ಗುರುತಿನ ಶಿಲೆಕಲ್ಲುಗಳು ಶಿಲಾ ಲೇಖನಗಳು ಇವೆ. ಮತ್ತು ಇಲ್ಲಿ ಹಾಳುಗೆಡವಲ್ಪಟ್ಟ ಒಂದು ಗರ್ಭಗುಡಿ ಇದೆ. ಶ್ರೀ ಷಣ್ಮುಖನು ಪ್ರತಿಷ್ಠಾಪಿಸಿದ ಮೂರು ಲಿಂಗಗಳ ಪೈಕಿ ಇಲ್ಲಿ ಒಂದು ಲಿಂಗ ಪ್ರತಿಷ್ಠಿಸಿದ್ದೆಂದು ತಿಳಿದು ಬರುತ್ತದೆ. ದೇವಸ್ಥಾನದ ಆಡಳಿತೆಯು ಮಾಧ್ವರ ಸ್ವಾಧೀನ ಬಂದ ನಂತರ ಇದು ಪಾಳುಬಿದ್ದಿರಬೇಕು. ಈ ಸ್ಥಳವು ಕೂಡ ಈ ಕ್ಷೇತ್ರದ ಒಂದು ಪ್ರಾಮುಖ್ಯ ಪ್ರೇಕ್ಷಣೀಯ ಸ್ಥಳವಾಗಿದೆ. ಈ ಸ್ಥಳದಲ್ಲಿ ಕ್ಷೇತ್ರ ವಿಧಿಯನ್ನು ಕೆಲವರು ಮಾಡಿಹೋಗುವ ಪದ್ಧತಿ.
ಬಿಲದ್ವಾರ : ಈ ಬಿಲದ್ವಾರವು ದೇವಸ್ಥಾನದಿಂದ ಮತ್ಸ್ಯತೀರ್ಥಕ್ಕೆ ಹೋಗುವ ದಾರಿಯಲ್ಲಿ ದೇವಳದಿಂದ ಸಾಧಾರಣ ಒಂದೂವರೆ ಮೈಲು ದೂರದಲ್ಲಿದೆ. ಇದು ರಸ್ತೆಯ ದಕ್ಷಿಣ ಪಾರ್ಶ್ವದಲ್ಲಿದೆ. ಈ ಬಿಲದ್ವಾರದಲ್ಲಿ ಎರಡು ದ್ವಾರಗಳಿವೆ. ಇದರಲ್ಲಿ ಉತ್ತರ ದ್ವಾರವು ಅಗಮ್ಯವಾಗಿದೆ. ಈ ದ್ವಾರದಿಂದ ಹೋದರೆ ಕಾಶಿಗೆ ಹೋಗಬಹುದು ಎಂಬ ಕತೆಯಿದೆ. ದಕ್ಷಿಣ ದ್ವಾರದಲ್ಲಿ ಪ್ರವೇಶಿಸಿ ಸಾಧಾರಣ ಒಂದು ಫರ್ಲಾಂಗ್ ದೂರದಲ್ಲಿ ಹೊರಬರಬಹುದು. ಇದರ ಒಳಗೆ ಗೋಗರ್ಭವೆಂದು ಹೇಳಲ್ಪಡುವ ತೀರ್ಥವಿದೆ. ಇಲ್ಲಿ ಭಕ್ತಾಧಿಗಳು ಬಂದು ತೀರ್ಥ ಪ್ರಾಶನ ಮಾಡುತ್ತಾರೆ. ಮಳೆಗಾಲದಲ್ಲಿ ಅದರ ಒಳಗೆ ಹೋಗಲು ಸಾಧ್ಯವಿಲ್ಲ. ೧೮೩೭ನೇ ಇಸವಿಯಲ್ಲಿ ನಡೆದ ಕಲ್ಯಾಣಪ್ಪನ ಕಾmಕಾಯಿ ಎಂಬ ಬ್ರಿಟಿಷ್ ವಿರೋಧಿ ಸ್ವಾತಂತ್ರ ಸಮರ ಸಮಯದಲ್ಲಿ ದಂಗೆ ನಡೆಸುವವರು ಸ್ಥಳದ ದೇವಳದ ಆಡಳಿತೆದಾರರಾದ ಸ್ಥಳೀಯ ಸ್ಮಾರ್ತ ಶಿವ ಬ್ರಾಹ್ಮಣ ಹೆಬ್ಬಾರರ ಸಹಾಯ ಪಡೆದು ಅದರ ಒಳಗೆ ಅಡಗಿ ಕುಳಿತುಕೊಳ್ಳುತ್ತಿದ್ದರೆಂದು ಪ್ರತೀತಿ. ಈ ಸ್ವಾತಂತ್ರ ಚಳವಳದಲ್ಲಿ ಸುಬ್ರಹ್ಮಣ್ಯಕ್ಕೆ ಹತ್ತಿರವಿರುವ ಕೂಜುಗೋಡಿನಲ್ಲಿ ಆಗ ಇದ್ದ ಮಲ್ಲಪ್ಪ ಗೌಡ, ರಾಮಯ್ಯ ಗೌಡ ಮತ್ತು ಗುಡ್ಡೆಮನೆ ಅಪ್ಪಯ್ಯ ಗೌಡ ಮೊದಲಾದವರು ಕೂಡ ಈ ಸ್ವಾತಂತ್ರ ಸಮರಕ್ಕೆ ಸೇರಿರುತ್ತಾರೆಂದೂ ತಿಳಿದು ಬರುತ್ತದೆ. ಈ ಬಿಲದ್ವಾರದಲ್ಲಿ ಪುರಾಣೋಕ್ತ ಪ್ರಕಾರ ವಾಸುಕಿಯು ಗರುಡನ ಭಯಕ್ಕೆ ಮೊತ್ತಮೊದಲು ಅಡಗಿ ಕುಳಿತ ಸ್ಥಳವೆಂಬ ಪ್ರತೀತಿಯಿಂದ ಈ ಸ್ಥಳವು ಕೂಡ ಶ್ರೀ ಸುಬ್ರಹ್ಮಣ್ಯದಲ್ಲಿ ಪ್ರೇಕ್ಷಣೀಯ ಸ್ಥಳವಾಗಿದೆ.
ಕಾಶೀಕಟ್ಟೆ : ಇದು ದೇವಳದಿಂದ ಸಾಧಾರಣ ೨ ಫರ್ಲಾಂಗ್ ದೂರದಲ್ಲಿ ಕುಮಾರಧಾರಾ ನದಿಗೆ ಹೋಗುವ ರಸ್ತೆಯು ಇಬ್ಭಾಗವಾಗಿ ಒಳ ಬರುವ ಸ್ಥಳದಲ್ಲಿದೆ. ಇಲ್ಲಿ ಎಂದು ದೊಡ್ಡ ಅಶ್ವತ್ಥ ಕಟ್ಟೆ ಇದೆ. ಈ ಸ್ಥಳವೇ ಬಲ್ಲಾಳರಾಯನ ಕಾಲದಲ್ಲಿ ಈಗ ಸುಬ್ರಹ್ಮಣ್ಯವೆಂದು ಹೇಳಲ್ಪಡುವ ಆಗಿನ ಕುಕ್ಕೆ ಪಟ್ಟಣಕ್ಕೆ ಒಳಬರುವ ಹೆಬ್ಬಾಗಿಲು. ಮುಂಚಿನ ಕಾಲದಲ್ಲಿ ನಗರದ ಒಳಬರುವಾಗ ಬಾಗಿಲಿನಲ್ಲಿ ನಗರದ ರಕ್ಷಣೆಗೋಸ್ಕರ ಆಂಜನೇಯ ಸ್ವಾಮಿಯ ಮತ್ತು ಮಹಾಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಪದ್ಧತಿ ಇತ್ತು. ಆ ಪ್ರಕಾರ ಇಲ್ಲಿಯೂ ಮುಂಚಿನವರು ಈ ಸ್ಥಳದಲ್ಲಿ ಈ ಎರಡು ದೇವತೆಗಳನ್ನು ಪ್ರತಿಷ್ಠಿಸಿ ಗುಡಿಗಳನ್ನು ಕಟ್ಟಿಸಿರಬೇಕು. ಈ ಎರಡು ಗಡಿಗಳು ಇಲ್ಲಿ ಇರುವುದರಿಂದ ಈ ಸ್ಥಳವು ಒಂದು ಕಾಲದಲ್ಲಿ ರಾಜವೈಭವದಿಂದ ಮೆರೆದುಕೊಂಡಿದ್ದ ಪ್ರಸಿದ್ಧ ಸ್ಥಳವಾಗಿತ್ತೆಂದು ತಿಳಿಯಬೇಕಾಗುತ್ತದೆ. ಇದಕ್ಕೆ ಕಾಶೀಕಟ್ಟೆ ಎಂಬ ಹೆಸರು ಈ ದೇವಳವು ೧೮೪೫ರ ನಂತರ ಈ ಸ್ಥಳಕ್ಕೆ ಕಾಶೀಕಟ್ಟೆ ಎಂಬ ಹೆಸರು ಬಂತೆಂದು ತಿಳಿಯುತ್ತದೆ. ಇಲ್ಲಿಯ ಮಹಾ ಗಣಪತಿಯು ಬಹಳ ಪ್ರಾಚೀನದ್ದಾದುದರಿಂದ ಕ್ಷಿಪ್ರಫಲದಾಯಕನೆಂದು ಪ್ರತೀತಿ. ನಿತ್ಯವು ಗಣಪತಿಗೆ ಪಂಚಕಜ್ಜಾಯವೂ ಈ ಪೂಜೆಯು ನಡೆಯುತ್ತದೆ. ಇದು ನಾರಾದರಿಂದ ಪ್ರತಿಷ್ಠಿಸಲ್ಪಟ್ಟದೆಂದು ಪೌರಾಣಿಕ ಕತೆಯಾಗಿದೆ.
ಬಲ್ಲಾಳರಾಯ ವಿಗ್ರಹ : ಈ ಸ್ಥಳವು ಒಂದು ಕಾಲದಲ್ಲಿ ಬಂಗರ ಪೈಕಿ ಬಲ್ಲಾಳರಾಯನೆಂಬ ಒಬ್ಬ ಪಾಳೆಗಾರರರ ಆಳ್ವಿಕೆಯಲ್ಲಿ ಇತ್ತು ಎಂಬುದಕ್ಕೆ ನಿದರ್ಶನವಾಗಿ ಈ ದೇವಸ್ಥಾನದ ಒಳ ಅಂಗಣದಿಂದ ಹೊರಬರುವಾಗ ಗೋಪುರದ ಬಲಭಾಗದಲ್ಲಿ ಬಲ್ಲಾಳರಾಯನ ವಿಗ್ರಹವೆಂದು ಕರೆಯಲ್ಪಡುವ ದೊಡ್ಡ ಶಿಲಾವಿಗ್ರಹವೊಂದು ಇರುವುದು ದೃಷ್ಟಾಂತವಾಗಿದೆ. ಅಲ್ಲದೆ ಈ ದೇವಸ್ಥಾನದಿಂದ ಸಾಧಾರಣ ಒಂದು ಮೈಲು ದೂರದ ಇಂಜಾಡಿ ಎಂಬಲ್ಲೂ ಮತ್ತು ಈಗ ಜಾನುವಾರು ಸಂತೆ ಆಗುವ ಕುಳುಕುಂದ ಎಂಬ ಸ್ಥಳದ ನೈಋತ್ಯ ಭಾಗದಲ್ಲಿಯೂ ಅವನ ಅರಮನೆಯು ಇತ್ತೆಂದು ಅಲ್ಲಿರುವ ಕುರುಹುಗಳಿಂದ ತಿಳಿದುಬರುತ್ತದೆ. ಸಾಧಾರಣ ೧೧ನೇ ಶತಮಾನದಿಂದ ೩೨ ಗ್ರಾಮಗಳಿಂದ ಕೂಡಿ ಈ ಸುಬ್ರಹ್ಮಣ್ಯ ಸೀಮೆ ಹೊಸಳ ಬಲ್ಲಾಳರ ಆಳ್ವಿಕೆಯಲ್ಲಿ ಇತ್ತೆಂದು ಕಂಡುಬರುತ್ತದೆ. ಆ ಮೇಲೆ ಇಕ್ಕೇರಿ ನಾಯಕರ ಆಳ್ವಿಕೆಗೆ ಬಂದ ನಂತರ ಈ ಸೀಮೆಯು ಪಾಳೆಗಾರರ ಸ್ವಾಧೀನಕ್ಕೆ ಬಂತು ಎಂದು ಚರಿತ್ರೆಯು ತಿಳಿಸುತ್ತದೆ. ಇಲ್ಲಿ ಆಳಿಕೊಂಡಿದ್ದ ಪಾಳೆಗಾರನ್ನು ಬಲ್ಲಾಳ ರಾಜರು ಎಂದು ಕರೆಯುತ್ತಿದ್ದರು. ಇವರು ಜೈನ ಮನೆತನದವರು ಬಲ್ಲಾಳ ರಾಜನ ಆಳ್ವಿಕೆ ಸಮಯದಲ್ಲಿ ಈ ವಿಗ್ರಹವನ್ನು ದೇವರ ಸನ್ನಿಧಿಯಲ್ಲಿ ರಾಜನಿಗೆ ಮರ್ಯಾದೆ ಕೊಡುವುದಕ್ಕೋಸ್ಕರ ಪ್ರತಿಷ್ಠಿಸಿರಬೇಕು. ಈ ರೀತಿ ಮೈಸೂರು ವಗೈರೆ ದೇಶಗಳಲ್ಲಿ ರಾಜರ ಭಕ್ತಿಗಾಗಿ ಯಾಯ ದೇಶವನ್ನಾಳಿದ ಹಿಂದಿನ ರಾಜರುಗಳ ವಿಗ್ರಹವನ್ನು ಪ್ರತಿಷ್ಠಿಸಿದ್ದಂತೆ ಇಲ್ಲಿಯೂ ಹಾಗೆ ಮಾಡಿರಬೇಕು.

ಮಂಗಳೂರಿನಲ್ಲಿ ತಾಲಿಬಾನಿ ಶಕ್ತಿಗಳ ಸುಳಿವು

Posted by JAYAKIRANA Kirana on | 0 comments | Leave a comment...


ಸೈಂಟ್ ಅಲೋಶಿಯಸ್‌ನಂತಹ ಕಾಲೇಜು ತಾಲಿಬಾನಿ ರೀತಿಯ ಬೆದರಿಕೆಗೆ ಮಣಿದದ್ದು ನಾಚಿಗೇಡಿನ ವಿಚಾರ.

ಪ್ರಜ್ವಲ್, ಮಣ್ಣಗುಡ್ಡ
ನೂರಾರು ವರ್ಷಗಳ ಇತಿಹಾಸ ಇರುವ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು ಇತ್ತೀಚೆಗೆ ಪತ್ರಿಕೆಗಳಲ್ಲಿ ಸುದ್ದಿಮಾಡಿತು. ಬುರ್ಖಾ ವಿವಾದ ಈ ಕಾಲೇಜಿನಲ್ಲಿ ನಡೆದು ಅದು ವಿವಿಧ ರೀತಿಯ ಚರ್ಚೆಗೆ ಕಾರಣ ವಾಯಿತು. ಕಾಲೇಜಿನಲ್ಲಿ ಬುರ್ಖಾ ಧರಿಸಬಾರದು ಎಂಬ ನಿಯಮವನ್ನು ಮಾಡಿದ ಈ ಕಾಲೇಜಿನ ಆಡಳಿತ ಮಂಡಳಿ ಅದನ್ನು ತನ್ನ ವಿವರಣಾ ಪತ್ರದಲ್ಲಿ ಸೇರಿಸಿ ವಿದ್ಯಾರ್ಥಿಗಳಿಗೆ ವಿತರಿಸಿದಾಗ ಈ ವಿಚಾರ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರಿಗೆ ತಿಳಿದು ಅವರು ಗುಲ್ಲೆಬ್ಬಿಸಿದ ಕಾರಣದಿಂದ ಕಾಲೇಜು ಸ್ಪಷ್ಟೀಕರಣ ನೀಡಿ ಕಾಲೇಜಿನಲ್ಲಿ ಬುರ್ಖಾ ಧರಿಸಲು ಯಾವುದೇ ನಿರ್ಬಂಧ ಇಲ್ಲ ಎಂದು ಪ್ರಕಟಣೆ ನೀಡಿತು.
ಸೈಂಟ್ ಅಲೋಶಿಯಸ್‌ನಂತಹ ಕಾಲೇಜು ಈ ರೀತಿಯ ಬೆದರಿಕೆಗೆ ಬಗ್ಗಿ ತನ್ನ ನಿಯಮವನ್ನು ಬದಲಾವಣೆ ಮಾಡಿದ್ದು ಖಂಡಿತವಾಗಿಯೂ ನಾಚಿಕೆಗೇಡಿನ ವಿಚಾರವಾಗಿದೆ. ಬುರ್ಖಾ ಧರಿಸಿ ಕಾಲೇಜಿಗೆ ಬರುವುದನ್ನು ಬಹುಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿಯರು ಮಾನಸಿಕವಾಗಿ ಒಪ್ಪುತ್ತಿಲ್ಲ ಎಂಬುದೂ ಬಹಿರಂಗ ಸತ್ಯವಾಗಿದೆ. ಕೆಲವರು ಈ ಬಗ್ಗೆ ತಮ್ಮ ಅಭಿಪ್ರಾ ಯಗಳನ್ನೂ ಹೇಳುತ್ತಿದ್ದಾರೆ. ಬುರ್ಖಾದಿಂದ ಅನಾನುಕೂಲತೆಗಳು ಆದರೂ ಮನೆಯವರ, ಮುಸ್ಲಿಂ ಸಂಘಟನೆಗಳ ಒತ್ತಾಯಕ್ಕೆ ಅನಿವಾರ‍್ಯವಾಗಿ ತೊಡಲೇ ಬೇಕಾದ ಪರಿಸ್ಥಿತಿಯ ಬಗ್ಗೆ ಒಳಗೊಳಗೆ ಅಸಮಾಧಾನವೂ ಇದೆ. ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಬಗ್ಗೆ ಒಲವನ್ನು ತೋರಿಸಬಹುದು. ಆದರೆ ವಿವರಣ ಪತ್ರದಲ್ಲಿರುವ ಸೂಚನೆ ಕೆಲವು ಮತಾಂಧ ಮುಸ್ಲಿಮರಿಗೆ ತನ್ನ ಧರ್ಮಶ್ರದ್ದೆಯನ್ನು ದೃಢೀಕರಿಸುವ ಮಾಧ್ಯಮವಾಗಿಬಿಟ್ಟದ್ದು ವಿಪರ‍್ಯಾಸವಾಗಿದೆ. ಇವರು ನೀಡಿದ ಬೆದರಿಕೆಗೆ ಕಾಲೇಜಿನ ಆಡಳಿತ ಮಂಡಳಿ ಮಣಿದಿರುವುದು ಬೇಸರದ ವಿಷಯ.
ಖಂಡಿತವಾಗಿಯೂ ಇದು ಮಂಗಳೂರಿನಲ್ಲಿ ತಾಲೀಬಾನ್ ಸಂಸ್ಕೃತಿಯ ಮುನ್ಸೂಚನೆ. ಹಿಂದೂ ಚಿನ್ಹೆಗಳ ಬಗ್ಗೆ ಮೊಂಡು ವಾದವನ್ನು ಮಾಡುತ್ತಿದ್ದ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ತಾಲಿಬಾನ್ ಉಗ್ರವಾದಕ್ಕೆ ಮಣಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕಾಲೇಜಿನ ಆಡಳಿತ ಮಂಡಳಿಯ ಮೇಲೆ ಈ ರೀತಿ ಆರೋಪವನ್ನು ಸುಮ್ಮನೆ ಮಾಡುತ್ತಿಲ್ಲ. ಯಾಕೆಂದರೆ ಇವರಿಗೆ ಹಿಂದೂ ಧರ್ಮದ ಪದ್ಧತಿ, ಜೀವನ ವಿಧಾನಗಳ ಬಗ್ಗೆ ತನ್ನ ಬಿಗು ಧೋರಣೆ ಸದಾಕಾಲವೂ ಇದೆ. ಈ ಬಗ್ಗೆ ಈ ಹಿಂದೆ ಕೆಲವು ಬಾರಿ ಕೆಲವೊಂದು ಘಟನೆಗಳು ನಡೆದಿದ್ದವು. ಹಿಂದೂ ಹುಡುಗಿಯರು ತಮ್ಮ ಧಾರ್ಮಿಕ ಸಂಪ್ರದಾಯವಾದ ಬಳೆ, ಕುಂಕುಮ, ತಲೆಗೆ ಹೂವಿಟ್ಟುಕೊಂಡು ಬರುವುದು ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯ ಕಣ್ಣಿಗೆ ಮುಳ್ಳಿನಂತೆ ಚುಚ್ಚುತ್ತಿದೆ. ಸಮವಸ್ತ್ರದ ನೆಪದಲ್ಲಿ ಕ್ರೈಸ್ತ ಆಡಳಿತ ಮಂಡಳಿಯು ಹಿಂದೂ ಹುಡುಗಿಯರ ಹಿಂದೂ ಚಿನ್ಹೆಗಳನ್ನು ಒರೆಸುವಲ್ಲಿ ಶತಮಾನದಿಂದ ಯಶಸ್ಸನ್ನು ಗಳಿಸಿತ್ತು. ಈ ಬಗ್ಗೆ ಯಾರಾದರೂ ಆಕ್ಷೇಪ ಎತ್ತಿದರೆ ಅದು ಕಾಲೇಜಿನ ನಿಯಮ. ಈ ನಿಯಮವನ್ನು ಪಾಲಿಸದೇ ಇದ್ದಲ್ಲಿ ಕಾಲೇಜಿಗೆ ಬರುವುದು ಬೇಡ. ಬೇರೆ ಕಾಲೇಜು ನೋಡಿಕೊಳ್ಳಬಹುದು ಎಂದು ಮುಖಕ್ಕೆ ಹೊಡೆದಂತೆ ಹಿಂದುಗಳಿಗೆ ಉತ್ತರ ನೀಡುತ್ತಿದ್ದವು.
ಕ್ರೈಸ್ತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ವಿದ್ಯಾರ್ಥಿನಿಯರು ಇದ್ದರೂ ಆಡಳಿತ ಮಂಡಳಿ ಹಿಂದುಗಳ ಮೇಲೆ ತನ್ನ ಉದ್ಧಟತನವನ್ನು ಪ್ರಕಟಿಸುತ್ತಿದ್ದವು. ಇವರಿಗೆ ಹಿಂದುಗಳೆಂದರೆ ಅಷ್ಟೊಂದು ತಾತ್ಸಾರದ ಮನೋಭಾವ. ಸಾತ್ವಿಕರ ಪ್ರತಿಭಟನೆಗೆ ಎಳ್ಳಷ್ಟೂ ಬೆಲೆ ಕೊಡದೆ. ಅವರ ಜೀವನ ವಿಧಾನವನ್ನು ಸಾರಾ ಸಗಾಟಾಗಿ ತಿರಸ್ಕರಿಸಿದ ಅಲೋಶಿಯಸ್ ಕಾಲೇಜು ಮುಸ್ಲಿಂ ತಾಲಿಬಾನಿಗಳ ಒಂದೇ ಒಂದು ಅವಾಜ್‌ಗೆ ನಡುಗಿ, ಮೈಯೆಲ್ಲಾ ಒದ್ದೆಮಾಡುತ್ತಾ ತನ್ನ ನಿಯ ಮಕ್ಕೇ ತಿದ್ದುಪಡಿ ತಂದು ಬಿಟ್ಟಿದೆ. ಇದು ಮಂಗಳೂರಿನಲ್ಲಿ ತಾಲಿಬಾನ್ ಸಂಸ್ಕೃತಿಯ ಮುನ್ಸೂಚನೆಯಾಗಿದೆ.
ಶಾಲಾ ಕಾಲೇಜಿನ ನಿಯಮಗಳನ್ನು ಯಾವುದೋ ಬೆದರಿಕೆಗೆ ಒಳಗಾಗಿ, ಮತ್ತು ಸಮಯಾನುಸಾರ ಬದಲಾವಣೆ ಮಾಡಿಕೊಳ್ಳುತ್ತಾ ಹೋಗುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಿಕೊಂಡೇ ವಿದ್ಯೆ ಕಲಿಯಬೇಕು ಎಂದು ಅನಿಸಿದರೆ ಅದಕ್ಕಾಗಿ ಬೇಕಾದಷ್ಟು ಮುಸ್ಲಿಂ ಸಂಸ್ಥೆಗಳ ಶಾಲೆಗಳು ಇವೆ. ಅಲ್ಲಿಗೆ ಹೋಗಿ ವಿದ್ಯಾಭ್ಯಾಸ ಮಾಡಬಹುದಾಗಿದೆ. ಈ ಬಗ್ಗೆ ಅಲೋಶಿಯಸ್ ಕಾಲೇಜು ಕೂಡಾ ಸ್ಪಷ್ಟವಾಗಿ ಹೇಳಬಹುದಾಗಿತ್ತು. ನಮ್ಮ ನಿಯಮಗಳಿಗೆ ಅನುಸಾರವಾಗಿ ಶಾಲಾ ಕಾಲೇಜುಗಳಿಗೆ ಬರಬಹುದು. ಇದು ಯಾರಿಗಾದರೂ ತೊಂದರೆ ಯಾಗುವುದಾದರೆ ಅವರು ನಮ್ಮ ವಿದ್ಯಾಸಂಸ್ಥೆಗಳಿಗೆ ಬರಬೇಕೆಂಬ ಒತ್ತಾಯ ಇಲ್ಲ. ಅವರಿಗೆ ಇಷ್ಟವಿರುವ ಶಾಲಾ ಕಾಲೇಜುಗಳಿಗೆ ಹೋಗಬಹುದು ಎಂದು ಹೇಳಬಹುದಾಗಿತ್ತು. ಆದರೆ ಸಹಿಷ್ಣು ಹಿಂದೂಗಳನ್ನು ದಮನಿಸಿದಷ್ಟು ಮುಸ್ಲಿಂ ಉಗ್ರರನ್ನು ದಮನಿಸಲು ಸಾಧ್ಯವಿಲ್ಲ ಎಂದು ಅಲೋಶಿಯಸ್ ಕಾಲೇಜಿಗೆ ಮನವರಿಕೆಯಾಗಿದೆ.
ಮುಂದಿನ ದಿನಗಳಲ್ಲಿ ಹಿಂದೂ ಹುಡುಗರ ಕೇಸರಿ ಶಾಲು, ಮುಸ್ಲಿಂ ಹುಡುಗರ ಬಿಳಿ ಟೊಪ್ಪಿ, ಮುಂಡಾಸು, ಹಿಂದೂ ಹುಡುಗಿಯರ ಕುಂಕುಮ, ಬಳೆ, ಹೂಗಳಿಗೂ ಅಲೋಶಿಯಸ್ ಕಾಲೇಜು ಅವಕಾಶ ನೀಡಿ ತನ್ನ ಜಾತ್ಯತೀತ ಮನೋಭಾವವನ್ನು ಪ್ರಕಟಿಸಬೇಕಾಗಿದೆ. ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ದೀಕ್ಷೆ ಪಡೆದ ಹಿಂದೂ ಹುಡುಗರು ಕಪ್ಪು ಮುಂಡು, ಶಾಲು, ಅಂಗಿ ಹಾಕಿಕೊಂಡು ಬಂದರೂ ಅವರ ಮನಸ್ಸಿಗೆ ನೋವಾಗದಂತೆ, ಅವರ ವೃತ ಭಂಗವಾಗದಂತೆ ಸೈಂಟ್ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಸಹಕಾರ ನೀಡುತ್ತದೆ ಎಂದು ನಿರೀಕ್ಷಿಸಬಹುದಾಗಿದೆ. ಇವೆಲ್ಲದಕ್ಕೂ ಇಲ್ಲಿ ಅವಕಾಶ ಸಿಗದೇ ಇದ್ದರೆ ಬುರ್ಖಾ ವಿವಾದದಲ್ಲಿ ತಾಲಿಬಾನಿ ಶಕ್ತಿಗಳಿಗೆ ಶರಣಾಗತಿ ಪ್ರದರ್ಶಿಸಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಕಾಲೇಜು ಎಂದರೆ ಸಮಾನತೆ ಬೇಕಲ್ಲವೇ?

Posted by JAYAKIRANA Kirana on | 0 comments | Leave a comment...

ಓರ್ವ ಓದುಗ, ಮಂಗಳೂರು
ಜಯಕಿರಣ ಪತ್ರಿಕೆಯ ಲೇಖನದ ಫರಿಯಾದ್‌ನಲ್ಲಿ ಇಖ ಇವರ ಲೇಖನವನ್ನು ನಾನು ಸದಾ ಓದುತ್ತಿರುತ್ತೇನೆ. ಇವರ ಲೇಖನವು ತುಂಬಾ ವಿಶಾಲ ದೃಷ್ಟಿಕೋನದಿಂದ ಬರುತ್ತಿದೆ. ಆದರೆ ಮೊನ್ನೆಯ ಮೇ. ೪ರ ಲೇಖನದಲ್ಲಿ ‘ವಿದ್ಯಾರ್ಥಿಗಳನ್ನು ಸಮಾಜ ಕಂಟಕರನ್ನಾಗಿ ಮಾಡಬೇಡಿ’ ಎಂಬ ಲೇಖನದಲ್ಲಿ ಅವರು ಬರೆಯುವ ವಿಷಯವು ಪೂರ್ವಾಗ್ರಹ ಪೀಡಿತವಾಗಿದೆ. ಬುರ್ಖಾ ವಿಷಯದಲ್ಲಿ ಅವರು ಬರೆಯುವಾಗ ಅವರು ಅವರ ಧರ್ಮವನ್ನು ಸಮರ್ಥಿಸುತ್ತಿದ್ದಾರೆ. ಇವರು ಹೇಳಿದ ಹಾಗೆ ಶಾಲಾ ಕಾಲೇಜು ಎಂದರೆ ಅಲ್ಲಿ ಸಮಾನತೆ ಇರಬೇಕಲ್ಲವೇ? ಅಲ್ಲಿ ಯೂನಿಫಾರಂ ಹಾಕಿ ಬರಬೇಕೆಂದು ಯಾಕೆ ಹೇಳುತ್ತಾರೆ ಅಂದರೆ ಎಲ್ಲರೂ ಸಮಾನ ಎಂದು. ಆದರೆ ಅಲ್ಲಿ ಬುರ್ಖಾ ಹಾಕಿ ಮತಾಂಧತೆಯನ್ನು ಯಾಕೆ ತೋರಿಸುತ್ತಾರೆ. ಹಿಂದು, ಕ್ರಿಶ್ಚಿಯನ್ ಹುಡುಗಿಯರ ಹಾಗೆ ಸಮಾನತೆ ತೋರಿಸಿ. ಯೂನಿಫಾರಂ ತೊಟ್ಟು ಬರಬಹುದಲ್ಲವೇ?
ಬೇರೆ ಧರ್ಮದ ಹುಡುಗಿಯರು ಮುಖ ತೋರಿಸಿಕೊಂಡು ಶಾಲಾ ಕಾಲೇಜುಗಳಿಗೆ ಬರುವುದಿಲ್ಲವೇ? ಅವರನ್ನು ಯಾರಾದರೂ ಅತ್ಯಾಚಾರ ಮಾಡುತ್ತಿದ್ದಾರೆಯೇ. ಅಥವಾ ಕಿಡ್ನಾಪ್ ಮಾಡುತ್ತಿದ್ದಾರೆಯೇ? ಇಲ್ಲವಲ್ಲ. ಹಾಗಿರುವಾಗ ಇವರು ಷರಿಯತ್ ಕಾನೂನನ್ನು ಒಪ್ಪಿಕೊಳ್ಳಲಿ. ಆಗ ಗೊತ್ತಾಗುತ್ತದೆ ಅದು ಹೇಗಿದೆ ಎಂದು. ಇಖರವರೇ ಸ್ವಲ್ಪ ಉದಾರ ಮನೋಭಾವ ಬೆಳೆಸಿಕೊಂಡು ಬರೆಯಿರಿ. ಕಾಲಕ್ಕೆ ತಕ್ಕಂತೆ ಕೆಲವು ಮಾರ್ಪಾಡುಗಳನ್ನು ಮಾಡಬೇಕು. ಭಾರತದಲ್ಲಿ ಈ ರೀತಿಯಾಗಿ ಸ್ವತಂತ್ರವಾಗಿ ಮಾತಾಡಬಹುದು. ಆದರೆ ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ಗಲ್ಫ್, ಅಪಘಾನಿಸ್ತಾನದಲ್ಲಿ ಈ ರೀತಿ ಅಭಿಪ್ರಾಯ ಪಡಲು ಧೈರ್ಯವಿದೆಯೇ? ಪಾಕಿಸ್ಥಾನದಲ್ಲಿ ಮುಸ್ಲಿಮೇತರ ಹುಡುಗಿಯರ ಅವಸ್ಥೆ ನೋಡಿ. ಅದನ್ನು ಯಾಕೆ ಬರೆಯುವುದಿಲ್ಲ. ಮತಾಂಧತೆಯನ್ನು ಬಿಡದೇ ಇದ್ದಲ್ಲಿ ಯಾರೂ ಉದ್ದಾರವಾಗುವುದಿಲ್ಲ.

ಲೈಂಗಿಕ ವಿಚಾರಗಳು ಮನಸ್ಸನ್ನು ಆವರಿಸಲು ಬಿಡಬೇಡಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನ್ನ ವಯಸ್ಸು ೨೧ ವರ್ಷ. ನಾನು ಕಲಿಯುತ್ತಿ ದ್ದೇನೆ. ನನಗೆ ಹೆಣ್ಣು ಮಕ್ಕಳ ಮೇಲೆ ಆಸಕ್ತಿ. ನನಗೆ ಕೆಲವು ಮಂದಿ ಗರ್ಲ್‌ಫ್ರೆಂಡ್‌ಗಳಿದ್ದಾರೆ. ನನಗೆ ಅವರ ಜತೆ ಸೆಕ್ಸ್ ನಡೆ ಸಬೇಕೆಂಬ ಮನಸ್ಸಿದೆ. ಆದರೆ ಅಷ್ಟು ಧೈರ್ಯ ನನ್ನಲ್ಲಿಲ್ಲ. ಅವರು ನನ್ನನ್ನು ಟೈಂಪಾಸ್‌ಗಾಗಿ ಇಷ್ಟ ಪಡುತ್ತಾರೆಯೇ ಹೊರತು ನನ್ನನ್ನು ಯಾರೂ ಲವ್ ಮಾಡುತ್ತಿಲ್ಲ. ನನಗೆ ಕೆಲವೊಮ್ಮೆ ಲೈಂಗಿಕ ಬಯ ಕೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ. ರಾತ್ರಿ ಪ್ರತಿನಿತ್ಯ ಹಸ್ತಮೈ ಥುನ ಮಾಡಿಕೊಳ್ಳುತ್ತೇನೆ. ಇದರಿಂದ ನನಗೆ ಸಂತೋಷ ಸಿಗು ತ್ತದೆ. ನನಗೆ ಒಂದು ದಿನ ಹಸ್ತಮೈಥುನ ಮಾಡಿಕೊಳ್ಳದಿದ್ದರೂ ನಿದ್ದೆಯಲ್ಲಿ ವೀರ್ಯ ಸ್ರವಿಸುತ್ತೇನೆ. ನನ್ನ ಸಹಪಾಠಿ ಗೆಳೆಯರ ಜೊತೆ ಸಲಿಂಗಕಾಮದ ಬಯಕೆಯಾಗುತ್ತದೆ. ಈ ಸಮಸ್ಯೆಗ ಳಿಂದ ನನಗೆ ಓದಿನಲ್ಲಿ ತೊಡಗಿಕೊಳ್ಳಲು ಆಗುತ್ತಿಲ್ಲ.
ಕಾಲೇಜಿ ನಲ್ಲೂ ನನಗೆ ಹುಡುಗಿಯರನ್ನು ಕಂಡಾಗ ಅವರ ಬಗ್ಗೆ ಕಲ್ಪನೆ ಮಾಡಿದರೆ ಕಾಮೋದ್ರೇಕವಾಗುತ್ತದೆ. ಆಗ ಓದಿನ ಕಡೆಗೆ ಗಮನ ಕೊಡಲಾಗುವುದಿಲ್ಲ. ನಾನು ನನ್ನನ್ನು ಕಂಟ್ರೋಲ್ ಮಾಡಿಕೊಳ್ಳು ವುದು ಹೇಗೆ? ಲೈಂಗಿಕ ಬಯಕೆಗಳು ಮನಸ್ಸಿನಲ್ಲಿ ಮೂಡದಿರಲು ಸಾಧ್ಯವೇ? ನನಗೆ ಸಲಹೆ ಕೊಡಿ.
ಸಲಹೆ: ನೀವು ಮೊದಲು ಕಲಿಯುವ ಸಮಯದಲ್ಲಿ ಕಾಮೋ ತ್ತೇಜಕ ಚಟುವಟಿಕೆ, ಕಲ್ಪನೆಯಿಂದ ದೂರವಿದ್ದು ಓದಿನ ಕಡೆಗೆ ಗಮನವನ್ನು ಹರಿಸಬೇಕು. ಚೆನ್ನಾಗಿ ಓದಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲ ನಿಮ್ಮಲ್ಲಿ ಮೂಡಬೇಕು. ಹದಿಹರೆಯದಲ್ಲಿ ನಿಮ್ಮ ಮನಸ್ಸು ಆಗಾಗ ಏಕಾಗ್ರತೆ ಕಳೆದುಕೊಳ್ಳುವುದು ಸಹಜ. ಲೈಂಗಿಕತೆಯ ಬಗ್ಗೆ ಕಪೋಲ ಕಲ್ಪಿತ ಸುದ್ದಿಗಳು, ನಾನಾ ಬಗೆಯ ಚಿತ್ರ, ವಿಚಿತ್ರ ಕಲ್ಪನೆಗಳಿಂದ ಮನಸ್ಸು ಲೈಂಗಿ ಕತೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತಳೆಯುತ್ತದೆ. ಇದನ್ನು ತಪ್ಪೆನ್ನಲಾಗದು. ಕಾಲೇಜಿನಲ್ಲಿ ಗರ್ಲ್‌ಫ್ರೆಂಡ್ಸ್ ಹೊಂದಿದ್ದರೆ ಪರವಾಗಿಲ್ಲ. ಹಾಯ್-ಬಾಯ್ ಆಗಿದ್ದರೆ ಒಳ್ಳೆಯದು. ಅದು ಮುಂದುವರಿದು ಬೇರೆ ಹಾದಿ ಹಿಡಿಯುವುದು ಬೇಡ. ಇದರಿಂದ ಮುಂದೆ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಲೈಂಗಿಕ ಬಯಕೆಯನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯ ನಮ್ಮಲ್ಲಿಯೇ ಇರುತ್ತದೆ. ನೀವು ಜೀವನದಲ್ಲಿ ಮುಂದ ಬರಬೇಕು, ಎಲ್ಲರಂತೆ ಆಗಬೇಕು ಎಂದು ಬಯ ಸಿದ್ದೀರಿ ಅಲ್ಲವೇ? ನೀವು ಕಲ್ಪಿಸಿ ದ್ದೆಲ್ಲಾ ನಿಜವಾಗಬೇಕಾ ದರೆ ಕಠಿಣ ಪರಿಶ್ರಮ ಅಗತ್ಯ. ಆದ್ದರಿಂದ ಬೇಡವಾದ ಯೋಚನೆ ಬಿಟ್ಟುಬಿಡಿ. ಕಾಮದ ಬಗೆಗಿನ ವಿಚಾರ ಮನಸ್ಸಿಗೆ ಬಂದ ತಕ್ಷಣ ಏಕಾಂತದಿಂದ ಹೊರಬಂದು ಮನೆಯ ಸದಸ್ಯರ ಜತೆ ಕಾಲ ಕಳೆಯಿರಿ. ದೇವರ ಧ್ಯಾನ, ಉತ್ತಮ ಪುಸ್ತಕ ಓದುವಿಕೆಯಿಂದ ನೀವು ಇಂತಹ ಸಮಸ್ಯೆಯಿಂದ ದೂರವಿರಬಹುದು. ಕಾಮದ ವಾಂಛೆ ಅತಿಯಾದರೆ ಮಾತ್ರ ತಡೆಯಬೇಡಿ.
ಆಗ ಹಸ್ತಮೈಥುನ ಮಾಡುವ ಮೂಲಕ ಆನಂದ ಪಡುವುದೊಳ್ಳೆಯದು. ಇನ್ನೂ ಒಂದು ಮಾತು. ಹಸ್ತ ಮೈಥುನ ಮಾಡುತ್ತೀರೆಂದಾದರೆ ಅದರಿಂದ ಕೀಳು ಭಾವನೆ ಬೆಳೆಸಿಕೊಳ್ಳಬೇಡಿ. ಹದಿಹರೆಯದ ಗಂಡು-ಹೆಣ್ಣು ಸಾಮಾ ನ್ಯವಾಗಿ ಇದರಿಂದ ಆನಂದ ಪಟ್ಟು ಕೊಳ್ಳುತ್ತಾರೆ. ಹಸ್ತ ಮೈಥುನ ಮಾಡುವುದರಿಂದ ಯಾವುದೇ ತೊಂದರೆಯಿಲ್ಲ. ಆದರೆ ಅದನ್ನೇ ಅಭ್ಯಾಸ ಮಾಡಿಕೊಂಡು ಅತಿಯಾಗದಂತೆ ನೋಡಿಕೊಳ್ಳಿ. ಇನ್ನು ಸಲಿಂಗಕಾಮದಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಏಡ್ಸ್‌ನಂತಹ ಮಾರಕ ರೋಗಕ್ಕೂ ಸಿಕ್ಕಿ ಬಳಲ ಬೇಕಾದೀತು. ಆದ್ದರಿಂದ ಲೈಂಗಿಕ ವಿಚಾರಗಳು ಮನಸ್ಸನ್ನು ಆವರಿ ಸಲು ಬಿಡಬೇಡಿ.

08-05-2012

Posted by JAYAKIRANA Kirana on | 0 comments | Leave a comment...

ಮೇಷ : ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ಇದೆ.
ವೃಷಭ : ಪ್ರಯಾಣದಲ್ಲಿ ನಷ್ಟ ಉಂಟಾಗಲಿದೆ.
ಮಿಥುನ : ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ.
ಕರ್ಕಾಟಕ : ಉದ್ಯೋಗದಲ್ಲಿ ಕಿರಿಕಿರಿ ಇರುತ್ತದೆ.
ಸಿಂಹ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ಕನ್ಯಾ : ದೂರ ಸಂಚಾರದಿಂದ ತೊಂದರೆ ಇರುತ್ತದೆ.
ತುಲಾ : ನೆರೆ ಹೊರೆಯವರಿಂದ ತೊಂದರೆ ಇರುತ್ತದೆ.
ವೃಶ್ಚಿಕ : ಶುಭ ಕೆಲಸಗಳನ್ನು ಮಾಡುತ್ತೀರಿ.
ಧನು : ಕೆಲವು ಸಮಸ್ಯೆಗಳು ಎದುರಾಗುತ್ತದೆ.
ಮಕರ : ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.
ಕುಂಭ : ಸಾಲದಿಂದ ತೊಂದರೆಯನ್ನು ಅನುಭವಿಸುತ್ತೀರಿ.
ಮೀನ : ಕುಟುಂಬದಲ್ಲಿ ವಾದ ವಿವಾದಗಳು ನಡೆಯುತ್ತದೆ.

08-05-2012

Posted by JAYAKIRANA Kirana on | 0 comments | Leave a comment...

ತೊಕ್ಕೊಟ್ಟು : ಕಚೇರಿ ಕೆಲಸಕ್ಕೆ ಪಿಯುಸಿ ಯಾದ ಯುವತಿ ೭೭೯೫೧೬೯೭೮೭.
ಮಂಗಳೂರು : ಸೇಲ್ಸ್‌ಮ್ಯಾನ್ ಮತ್ತು ಎಕ್ಸಿಕ್ಯೂಟಿವ್ ಬೇಕು ೭೨೫೯೩೫೪೮೮೪
ಮಂಗಳೂರು : ಏಜೆನ್ಸಿಯೊಂದಕ್ಕೆ ಸೇಲ್ಸ್‌ಗೆ ಯುವತಿಯರು ಬೇಕು ೨೪೪೩೫೭೬.
ಮಂಗಳೂರು : ಮಂಗಳಾದೇವಿ ಬಳಿ ಆಫೀಸ್ ಕೆಲಸಕ್ಕೆ ಹೆಲ್ಪರ್ ಬೇಕು ೯೮೪೪೦೦೯೯೦೫
ಬೈಕಂಪಾಡಿ : ಹೊಟೇಲಿಗೆ ಮಾಂಸಾಹಾರಿ ಅಡುಗೆಯವರು, ಕಿಚನ್ ಹೆಲ್ಪರ್ ಬೇಕು ೯೯೮೦೨೬೭೮೮೪.
ಪಡೀಲ್ : ಪೆಟ್ರೋಲ್ ಪಂಪ್‌ಗೆ ಯುವಕರು ಬೇಕು ೯೪೪೮೧೩೪೧೨೩.
ಕೋಡಿಕಲ್ : ಮನೆಕಾರಿಗೆ ಡ್ರೈವರ್ ಬೇಕು ೨೪೫೧೮೨೮.
ಮಂಗಳೂರು : ಕಂಪ್ಯೂಟರ್ ತಿಳಿದಿರುವ ಲೇಡಿ ಬೇಕು ೯೮೪೪೪೯೦೯೮.
ಮಂಗಳೂರು : ಕಂಕನಾಡಿ ಅಟೋಮೊಬೈಲ್ ಶಾಪಿಗೆ ಜನಬೇಕು. ೯೪೪೯೪೪೧೨೩೪.
ಉಡುಪಿ : ಕಂಪೆನಿ ಕೆಲಸಕ್ಕೆ ಯುವಕ - ಯುವತಿಯರು ಬೇಕು ೯೯೮೦೪೬೩೬೧೧.
ಮಂಗಳೂರು : ಯೆಯ್ಯಾಡಿಯಲ್ಲಿರುವ ಮುದ್ರಣಾಯಲಕ್ಕೆ ಡಿ.ಟಿ.ಪಿ. ಅಪರೇಟರ್ ಬೇಕು ೨೨೧೧೦೫೦.
ಮಂಗಳೂರು : ತಿಂಡಿ (ಪಪ್ಸ್) ಮಾಡುವವರು ಬೇಕು ೯೯೦೧೩೫೦೪೩೧.
ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೯೮೬೬೪೮೧೧೮.
ಸುರತ್ಕಲ್ : ಬಟ್ಟೆ ಅಂಗಡಿಗೆ ಲೇಡಿಸ್ ಕಟ್ಟಿಂಗ್ ಮಾಸ್ಟರ್ ಬೇಕು ೯೮೪೪೫೪೩೧೫೧.
ಉಡುಪಿ : ಎಲೆಕ್ಟ್ರಾನಿಕ್ಸ್ ಶಾಪಿಗೆ ಲೇಡಿಸ್ ಕ್ಯಾಶಿಯರ್ ಬೇಕು ೯೮೮೦೨೧೯೯೪೯.
ಮೂಡಬಿದ್ರೆ : ದೋಸೆ ಮಾಡುವ ಹೆಂಗಸರು ಬೇಕು. ೯೯೦೨೦೭೧೫೪೯.
ಕಂಕನಾಡಿ :ಟೈಲರಿಂಗ್ ಶಾಪಿಗೆ ಅಲ್ ಟ್ರೇಶನ್ ಮತ್ತು ಫಿನಿಶಿಂಗ್‌ಗೆ ಜನ ಬೇಕು ೯೮೮೬೪೪೩೯೬೧.
ಮಂಗಳೂರು : ಪ್ಲಂಬರ್ & ಎಲೆಕ್ಟ್ರಿಶಿಯನ್ ಬೇಕು. ೯೮೪೪೬೬೭೦೨೪
ತೊಕ್ಕೊಟ್ಟು : ಬಾರ್ & ರೆಸ್ಟೋರೆಂಟ್‌ಗೆ ಕಿಚನ್ ಹೆಲ್ಪರ್ ಮತ್ತು ವೇಟರ್ (ಪಾರ್ಟ್‌ಟೈಂ) ಬೇಕು. ೯೭೪೨೨೮೫೪೮೫.
ತೊಕ್ಕೊಟ್ಟು ವೆಜ್ ರೆಸ್ಟೋರೆಂಟಿಗೆ ಚೈನೀಸ್ ಕುಕ್ ಬೇಕಾಗಿದ್ದಾರೆ. ೯೯೦೧೧೪೩೦೮೯
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ ಬೇಕು. ೯೮೪೫೫೯೬೯೬೦
ಉಡುಪಿ : ಬೇಕರಿಗೆ ಜನ ಬೇಕು ೯೭೪೩೪೯೨೯೧೨
ಕೈಕಂಬ : ಹೆಲ್ಪರ್ ಕೆಲಸಕ್ಕೆ ಹುಡುಗರು, ಹುಡುಗಿಯರು ಬೇಕು.೯೮೪೪೦೦೯೯೦೫
ಕೈಕಂಬ : ಕವಾಟು ಫ್ಯಾಕ್ಟರಿಗೆ ಕೆಲಸಕ್ಕೆ ಹೆಲ್ಪರ್ ಬೇಕು.೯೮೪೫೯೫೬೧೪೦
ಮಂಗಳೂರು :ಸೂಪರ್ ಮಾರ್ಕೆಟ್‌ಗೆ ಮ್ಯಾನೇಜರ್ ಬೇಕು. ೯೮೮೦೨೩೯೧೭೦
ಮಂಗಳೂರು :ಸ್ಪೇರ್ ಪಾರ್ಟ್ಸ್ ಅಂಗಡಿಗೆ ಕೆಲಸಕ್ಕೆ ಜನ ಬೇಕು. ೯೩೪೩೩೫೫೮೩೫
ಮಂಗಳೂರು : ಲೇಡಿಸ್ ಟೈಲರ್ ಬೇಕು ೮೦೫೦೧೬೩೨೭೮.

ಭಾರತದ ಜೋಡಿ ಪ್ರೀಕ್ವಾರ್ಟರ್ ಫೈನಲ್‌ಗೆ

Posted by JAYAKIRANA Kirana on | 0 comments | Leave a comment...

ಮ್ಯಾಡ್ರಿಡ್: ಲಿಯಾಂಡರ್ ಪೇಸ್ ಮತ್ತು ರಾಡೆಕ್ ಸ್ಟೆಪ್ನೆಕ್ ಹಾಗೂ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಇಲ್ಲಿ ನಡೆಯುತ್ತಿರುವ ಎಟಿಪಿ ಮ್ಯಾಡ್ರಿಡ್ ಮಾಸ್ಟರ‍್ಸ್‌ನಲ್ಲಿ ಪ್ರೀಕ್ವಾರ್ಟರ್ ಫೈನಲಿಗೆ ಪ್ರವೇಶಿಸಿದ್ದಾರೆ.
ಭಾರತ-ಜೆಕ್ ಜೋಡಿ ಐದನೇ ಶ್ರೇಯಾಂಕ ಪಡೆದಿದ್ದರೆ, ಭೂಪತಿ ಮತ್ತು ಬೋಪಣ್ಣ ಜೋಡಿ ಏಳನೇ ಶ್ರೇಯಾಂಕ ಪಡೆದಿದೆ. ಪೇಸ್ ಮತ್ತು ಸ್ಟೆಪ್ನೆಕ್ ಜೋಡಿ ಮುಂದಿನ ಸುತ್ತಿನಲ್ಲಿ ಗೇಲ್ ಮೊನಫಿಲ್ಸ್-ರಿಚರ್ಡ್ ಗಾಸ್ಕಟ್ ಮತ್ತು ಸೆರ್ಗಿ ಬುಬ್ಕ-ಜವೇರ್ ಮಾರ್ಟಿ ನಡುವಿನ ವಿಜೇತರನ್ನು ಎದುರಿಸಲಿ ದ್ದಾರೆ. ಭೂಪತಿ ಮತ್ತು ಬೋಪಣ್ಣ ಕ್ರಿಸ್ಟೋಪರ್ ಕಾಸ್-ಸ್ಯಾಂಟಿಗೋ ಗೊಂಝಲೆಜ್ ಮತ್ತು ಒಲಿವರ್ ಮರಾಚಿ-ಅಲೆಕ್ಸಾಂಡರ್ ಪೆಯಾ ನಡುವಿನ ವಿಜೇತರನ್ನು ಎದುರಿಸ ಬೇಕಾಗಿದೆ.

ಪ್ರಶಸ್ತಿ ಸನಿಹಕ್ಕೆ ಮ್ಯಾಂಚೆಸ್ಟರ್ ಸಿಟಿ

Posted by JAYAKIRANA Kirana on | 0 comments | Leave a comment...

ಲಂಡನ್: ನ್ಯೂಕಾಸ್ಟಲ್ ಯುನೈಟೆಡ್ ವಿರುದ್ಧ ೨-೦ಯಿಂದ ಗೆಲುವು ದಾಖಲಿಸಿಕೊಂಡ ಮ್ಯಾಂಚೆಸ್ಟರ್ ಸಿಟಿ ಪ್ರಶಸ್ತಿ ಗೆಲ್ಲುವ ಸನಿಹಕ್ಕೆ ಬಂದಿದೆ.
ಐವಾರಿಯಾದ ಯಾಯಾ ಟೌರೆ ೭೦ ಮತ್ತು ೮೯ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಗೆಲುವಿನ ರೂವಾರಿಯಾದರು. ಮೊದಲ ಅವಧಿಯಲ್ಲಿ ಮುಂಪಡೆ ಆಟಗಾರರು ಹೆಚ್ಚಿನ ಅವಕಾಶವನ್ನು ಕೈಚೆಲ್ಲಿದ ಬಳಿಕ ಯಾಯಾ ಗೋಲುಗಳು ಸಿಟಿಗೆ ಜೀವ ತುಂಬಿದವು.
ಪ್ರಶಸ್ತಿಗೆ ತುಂಬಾ ಹತ್ತಿರದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಕೂಡ ಸ್ವಾನ್‌ಸೀ ವಿರುದ್ಧ ೨-೦ ಯಿಂದ ಸುಲಭ ಗೆಲುವು ದಾಖಲಿಸಿಕೊಂಡಿದೆ. ಗೋಲಿನ ಅಂತರದಲ್ಲಿ ಸಿಟಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಮ್ಯಾಂಚೆಸ್ಟರ್ ದೊಡ್ಡ ಅಂತರದಿಂದ ಗೆಲುವು ದಾಖಲಿಸಿಕೊಳ್ಳಬೇಕಿದ್ದು ಇದು ತುಂಬಾ ಕಠಿಣವೆನ್ನಲಾಗಿದೆ. ಇದರಿಂದ ಮ್ಯಾಂಚೆಸ್ಟರ್ ಸಿಟಿಗೆ ಅತೀ ಹೆಚ್ಚು ಅವಕಾಶವಿದೆ.

ಅರಣ್ಯ ಇಲಾಖೆ ಪ್ರದೇಶದಲ್ಲಿ ಅಕ್ರಮ ಶವ ದಫನ!

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ದಫನಕ್ಕೆ ಭೂಮಿ ಮಂಜೂರಾಗದಿದ್ದರೂ ಅಕ್ರಮವಾಗಿ ಶವವನ್ನು ದಫನ ಮಾಡಿರುವುದು ಲಾಯಿಲ ಗ್ರಾಮದಲ್ಲಿ ಸೋಮವಾರ ನಡೆದಿದೆ. ಅದೂ ಅರಣ್ಯ ಇಲಾಖೆಯ ನಡುತೋಪಿನ ಮಧ್ಯೆ.
ಲಾಯಿಲ ಗ್ರಾ. ಪಂ.ನಿಂದ ಸುಮಾರು ೩ ಕಿ.ಮೀ. ದೂರದಲ್ಲಿರುವ ಬೆರಿಕ್ಕೆ ಎಂಬ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಅಂಬ್ಯುಲೆನ್ಸ್‌ನಲ್ಲಿ ಶವವನ್ನು ತಂದು ಮಣ್ಣು ಮಾಡಿದ್ದಾರೆ. ಸುಮಾರು ೭೦ ಜನರಿದ್ದರು ಎಂದು ಸುತ್ತಲಿನವರು ಹೇಳಿದ್ದಾರೆ. ಈ ಜಾಗವನ್ನು ದಫನ ಭೂಮಿಯನ್ನಾಗಿ ಕಾಯ್ದಿರಿಸಬಾರದು ಎಂದು ಸುತ್ತಲಿನ ನಾಗರಿಕರು ಕಳೆದೆರಡು ವರ್ಷಗಳಿಂದ ಆಗ್ರಹಿಸುತ್ತಾ ಬಂದಿದ್ದಾರೆ. ಪ್ರಸ್ತುತ ಜಾಗವು ತುಸು ಎತ್ತರದ ಜಾಗದಲ್ಲಿದೆ. ಅದರ ಕೆಳಗೆ ಸುಮಾರು ೫೦ಕ್ಕೂ ಹೆಚ್ಚು ಮನೆಗಳಿವೆ. ಬಹುತೇಕ ಮನೆಗಳು ಪರಿ ಶಿಷ್ಟ ಜಾತಿಗಳದ್ದವರಾಗಿವೆ. ಉಳಿದವರು ಜೈನ, ಕ್ರಿಶ್ಚಿಯನ್ ಮತೀಯರದ್ದಾಗಿವೆ. ಪ್ರಸ್ತುತ ಜಾಗವನ್ನು ದಫನ ಭೂಮಿ ಯನ್ನಾಗಿ ಪರಿವರ್ತಿಸಿದರೆ ಇದರಿಂದ ಕೆಳಗಿನ ಮನೆಗಳಿಗೆ ಹರಿದು ಬರುವ ನೀರು, ಬಾವಿಯ ನೀರು ಕಲುಷಿತಗೊಳ್ಳಲಿದೆ ಎಂಬ ಕಾರಣಕ್ಕಾಗಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಈ ಪರಿಸರದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲದಿದ್ದರೂ ಆ ಸಮುದಾಯಕ್ಕೆ ಜಾಗ ಕಾದಿರಿಸಿರುವುದು ಸರಿಯಲ್ಲ ಎಂಬ ನಿಲುವೂ ಜನರದ್ದು.
ಇಷ್ಟೆಲ್ಲ ಕಾರಣಗಳಿದ್ದೂ ಸೋಮವಾರ ಏಕಾಏಕಿ ದಫನ ಕಾರ್ಯ ನಡೆದಿದೆ. ಲಾಯಿಲ ಪಂ.ವ್ಯಾಪ್ತಿಗೆ ಸಂಬಂಧಪಟ್ಟಂತೆ ಈಗಾಗಲೇ ಉಜಿರೆ ಹಳೇಪೇಟೆ ಸನಿಹ ದಫನ ಭೂಮಿಯೊಂದಿದೆ. ಒಂದೇ ಗ್ರಾಮದಲ್ಲಿ ಎರಡು ದಫನ ಭೂಮಿ ನೀಡಿರುವುದು ಸರಿಯೇ ಎಂಬ ಪ್ರಶ್ನೆಯೂ ಇದೆ. ಇತ್ತ ಒಂದೂವರೆ ವರ್ಷದ ಹಿಂದೆ ಲಾಯಿಲ ಗ್ರಾ. ಪಂ. ಒಂದು ಎಕರೆ ಪ್ರಸ್ತುತ ಭೂಮಿಗೆ ನಿರಪೇಕ್ಷಣಾ ಪತ್ರ ಸಲ್ಲಿಸಿದೆ. ಇತ್ತ ಅರಣ್ಯ ಇಲಾಖೆ ಆ ಜಾಗ ತನ್ನದು ಎಂದು ವಾದಿಸುತ್ತಿದೆ. ಅಲ್ಲದೆ ಇದುವರೆಗೆ ಮುಸ್ಲಿಂ ಸಮುದಾಯಕ್ಕೆಂದೇ ಪ್ರಸ್ತುತ ಜಾಗವನ್ನು ಕಾದಿರಿಸಲಾಗಿಲ್ಲ. ಇಷ್ಟಿದ್ಯಾಗ್ಯೂ ಶವವೊಂದನ್ನು ಅಕ್ರಮವಾಗಿ ದಫನ ಮಾಡುವುದರ ಮೂಲಕ ಬೆರಿಕ್ಕೆಯ ಜಾಗವನ್ನು ಮುಸ್ಲಿಂ ಸಮುದಾಯದವರು ಸ್ವಾಧೀನಪಡಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಕೆಲ ರಾಜಕೀಯ ಕುಳಗಳೂ ಕುಮ್ಮಕ್ಕು ನೀಡಿವೆ ಎಂದೂ ಹೇಳಲಾಗುತ್ತಿದೆ. ಬೆಳ್ತಂಗಡಿ ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಗೃಹಿಣಿಯ ಖೆಡ್ಡಾಕ್ಕೆ ಬಿದ್ದ ನೈಸ್ ಉಸ್ತಾದ್

Posted by JAYAKIRANA Kirana on | 0 comments | Leave a comment...

ನೇರ ಮಂಚಕ್ಕೆ ಕರೆದು ಪೆಟ್ಟು ತಿಂದ
ಮಂಗಳೂರು: ಇಸ್ಲಾಮ್‌ನಲ್ಲಿ ಪರಿವರ್ತನೆ ತರುತ್ತೇನೆ ಎಂಬ ಭ್ರಮೆ ಹುಟ್ಟಿಸಿ ನೈಸ್ ಆದ ಸಂಘಟನೆ ಕಟ್ಟಿಕೊಂಡು ಭಾರೀ ವೇಗದಲ್ಲಿ ಸಾಗುತ್ತಿದ್ದ ಕುದ್ರೋಳಿ ನಾಮದ ಉಸ್ತಾದ್‌ನೋರ್ವ ಗೃಹಿಣಿಯ ಖೆಡ್ಡಾಕ್ಕೆ ಉರುಳಿಬಿದ್ದ ಘಟನೆ ವಾರದ ಹಿಂದೆ ಕಾಟಿಪಳ್ಳದಲ್ಲಿ ನಡೆದಿದ್ದು ದ.ಕ.ಜಿಲ್ಲೆಯ ಮುಸ್ಲಿಂ ವಲಯದಲ್ಲೇ ಭಾರೀ ಚರ್ಚೆಯ ವಿಷಯವಾಗಿದೆ.
ಲುಂಗಿ ಸುತ್ತುವ ಪೇಟಾಧಾರಿ ಉಸ್ತಾದ್‌ದರಿಗಿಂತ ತೀರಾ ಭಿನ್ನ, ಜೀನ್ಸ್, ಟೀ ಶರ್ಟ್‌ಧಾರಿಯಾಗಿ ವೈಭೋಗದ ಕಾರ್‌ಗಳಲ್ಲಿ ಜಮ್ ಎಂದು ತಿರಗಾಡುತ್ತಿದ್ದ ಕುದ್ರೋಳಿ ಉಸ್ತಾದ್‌ನಿಗೆ ಮಾತೇ ಬಂಡವಾಳ. ಮಾತಿನಲ್ಲೆ ಭ್ರಮಾ ಲೋಕ ಸೃಷ್ಟಿಸುವ ಈತನ ಚಾಕಚಕ್ಯತೆಗೆ ಕಾಟಿಪಳ್ಳದ ಗೃಹಿಣಿಯೋರ್ವಳು ಬಲಿ ಬಿದ್ದಿದ್ದಳು. ಪತಿ ವಿದೇಶದಲ್ಲಿದ್ದರೆ ಈಕೆ ಕುದ್ರೋಳಿ ಉಸ್ತಾದನೊಂದಿಗೆ ಚಕ್ಕಂದವಾಡುತ್ತಿ ದ್ದಳು ಎನ್ನುವ ಮಾತು ಚಾಲ್ತಿಯಲ್ಲಿತ್ತು. ಇದೇ ಮಹಿಳೆ ವಾರದ ಹಿಂದೆ ಉಸ್ತಾದನ ಬಣ್ಣ ಬಯಲು ಮಾಡಿ ದ್ದಾಳೆ. ಅದೂ ತನ್ನ ಪತಿಯೊಂದಿಗೆ ಸೇರಿಕೊಂಡು.
ಕಾಟಿಪಳ್ಳದ ಗೃಹಿಣಿಯ ಖೆಡ್ಡಾದಲ್ಲಿ ಉರುಳಿ ಬಿದ್ದು ಕುದ್ರೋಳಿ ಉಸ್ತಾದ್ ತಲೆ ಒಡೆದು ಹೋಗುವ ಹಾಗೆ ಪೆಟ್ಟು ತಿಂದ ವಿಷಯ ದ.ಕ. ಜಿಲ್ಲೆಯ ಮುಸ್ಲಿಂ ವಲಯದಲ್ಲಿ ಮುಗಿಯದ ಚರ್ಚೆಯಾಗಿ ಮುಂದುವರಿದಿದೆ.
ವಿದೇಶದಲ್ಲಿದ್ದ ಕಾಟಿಪಳ್ಳದ ಗೃಹಿಣಿಯ ಪತಿ ಇತ್ತೀಚೆಗಷ್ಟೇ ತವರಿಗೆ ಬಂದಿದ್ದ. ಆತನಿಗೆ ತನ್ನ ಪತ್ನಿಯ ವರ್ತನೆ ಸಂಶಯಕ್ಕೆಡೆ ಮಾಡಿತ್ತು. ಪೋನ್‌ನಲ್ಲಿ ಉಸ್ತಾದ್‌ನೊಂದಿಗಿನ ಚಕ್ಕಂದದ ಮಾತುಗಳು ಮುಂದುವರಿ ದಿದ್ದವು. ಪತಿ ಕೋಪ ತಾಪ ಪ್ರದರ್ಶಿ ಸದೆ ತಾಳ್ಮೆಯಿಂದ ಪತ್ನಿಗೆ ತಪ್ಪಿನ ಅರಿವು ಮಾಡಿ ಕೊಟ್ಟಿದ್ದಲ್ಲದೆ, ಧಾರ್ಮಿಕ ನಾಯಕನಾಗಿ ಜಿಲ್ಲೆಯಲ್ಲಿ ಸಾವಿರಾರು ಅಭಿಮಾನಿ ಬಳಗ ಹೊಂದಿರುವ, ಬೇರೆ ಯವರಿಗೆ ನೈತಿಕತೆಯ ಪಾಠ ಹೇಳಿ ಕೊಡುವ ಉಸ್ತಾದನ ನೈಜ ಮುಖ ಸಮಾಜದ ಎದುರು ಅನಾವರಣಗೊಳಿ ಸಲು ಪತ್ನಿಯ ಸಹಕಾರವನ್ನೇ ಕೋರಿದ. ಪತಿಯ ನಿರ್ದೇಶನದಂತೆ ಆಕೆ ಪೋನ್ ಚಕ್ಕಂದ ಮುಂದುವರಿಸಿ ದ್ದಳು. ಆತನ ಅಶ್ಲೀಲ ಪದಗಳಿಗೆ ಕಿವಿಯಾಗಿದ್ದಳು. ಇನ್ನೊಂದು ಕಡೆ ಈ ಕರೆಗಳು ರೆಕಾರ್ಡ್ ಆಗುತ್ತಿದ್ದವು. ಕುದ್ರೋಳಿ ಉಸ್ತಾದನಿಗೆ ಸಂಶಯ ಬಾರದ ರೀತಿಯಲ್ಲಿಯೇ ಇದು ಮುಂದುವರಿದಿತ್ತು. ಅಂತಿಮವಾಗಿ ವಾರದ ಹಿಂದೆ ಪ್ರಣಯದ ಪ್ರಸ್ತಾಪ ಆಕೆ ಇಟ್ಟಿದ್ದಳು. ಅದೂ ಪತಿಯ ಆದೇಶದಂತೆಯೇ!
ಕುದ್ರೋಳಿ ಉಸ್ತಾದನ ಉಸ್ತುವಾರಿ ಯಲ್ಲಿಯೇ ಇರುವ ಕಾಟಿಪಳ್ಳದ ಮನೆ ಯೊಂದರಲ್ಲಿ ಸೇರುವ ಮಾತುಕತೆ ಆಗಿದ್ದು ಅದರಂತೆ ಸಿದ್ಧನಾಗಿ ಬಂದಿದ್ದ ಉಸ್ತಾದ್ ಮನೆ ಒಳಗೆ ಸೇರಿ ಗೃಹಿಣಿ ಯೊಂದಿಗೆ ಕೆಲ ಸಮಯ ಕಳೆಯುತ್ತಿ ದ್ದಾಗಲೇ ಗೃಹಿಣಿಯ ಪತಿ ತನ್ನ ಬಳಗದ ಕೆಲವರೊಂದಿಗೆ ದಾಳಿ ನಡೆಸಿದ್ದ. ಸಿಕ್ಕಿ ಬಿದ್ದ ಉಸ್ತಾದನಿಗೆ ಹಣ್ಣುಗಾಯಿ ನೀರು ಗಾಯಿ ಆಗುವಂತೆ ಬಡಿದಿದ್ದರು. ಉಸ್ತಾದನ ಬಗ್ಗೆ ಅಪಾರ ಗೌರವ ಹೊಂದಿದ್ದ ಕೆಲವರು ಆತನ ರಕ್ಷಣೆಗೆ ಬಂದಿದ್ದರಾದರೂ ಸತ್ಯ ವಿಷಯ ತಿಳಿದು ಮುಖ ತಿರುಗಿಸಿ ಹೊರಟಿದ್ದರು. ಎಂಟು ಹತ್ತು ಮಂದಿ ಸೇರಿ ತಲೆ ಒಡೆದು ಹೋಗುವಂತೆ ಹೊಡೆದಿದ್ದರೂ, ಉಸ್ತಾದ್ ಪೊಲೀಸರಿಗೆ ದೂರು ಸಲ್ಲಿ ಸಲು ಹೋಗಿಲ್ಲ ಏಕೆ ಎಂಬ ಪ್ರಶ್ನೆ ಯೊಂದಿಗೆ ಮುಸ್ಲಿಂ ವಲಯ ಉಸ್ತಾ ದನ ಪ್ರತಿಕ್ರಿಯೆಗಾಗಿ ಕಾದಿದೆ. ಆದರೆ ಉಸ್ತಾದ್ ದೇಶವನ್ನೇ ಬಿಡುವ ಸಿದ್ಧತೆ ಯಲ್ಲಿದ್ದಾನೆ.
ದ.ಕ. ಜಿಲ್ಲೆಯ ಮುಸ್ಲಿಂ ಕೋಟ್ಯ ಧಿಪತಿಗಳನ್ನೆಲ್ಲ ತನ್ನ ತೆಕ್ಕೆಗಳೆದು ಕೊಂಡಿದ್ದ ಉಸ್ತಾದ್ ಅವರಿಂದಲೇ ಪೀಕಿಸಿದ ಹಣದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದ. ಉಸ್ತಾ ದ್‌ಗಳಲ್ಲಿ ಅಪರೂಪವಾಗಿರುವ ಇಂಗ್ಲಿಷ್ ಭಾಷೆಯ eನ ಈತನ ಇನ್ನೊಂದು ಬಂಡವಾಳವಾಗಿತ್ತು.
ಆರಂಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನಲ್ಲಿ ಗುರುತಿಸಿಕೊಂ ಡವನು ಅಲ್ಲಿ ಸ್ಥಾನಮಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ತನ್ನದೆ ಪ್ರತ್ಯೇಕ ಪಂಥ ಸ್ಥಾಪನೆಯತ್ತ ಸಾಗಿದ್ದ. ಸುನ್ನಿಗ ಳನ್ನೂ, ಸಲಫಿಗಳನ್ನೂ ಸಮಾನವಾಗಿ ಟೀಕಿಸುತ್ತ. ತನ್ನ ನೈಸ್ ಕಾರ್ಯಕ್ರಮಗ ಳಿಂದ ಅಭಿಮಾನಿ ಬಳಗ ಸೃಷ್ಟಿಸಿಕೊಂ ಡಿದ್ದ ಮನುಷ್ಯ ಈಗ ಇಂಗು ತಿಂದ ಮಂಗನಂತಾಗಿ ಮನೆಯಿಂದ ಹೊರಬೀ ಳಲಾಗದ ಸ್ಥಿತಿಗೆ ತಲುಪಿದ್ದಾನೆ.

ಕೆಮ್ಮಾರ ಬಳಿ ಒಮ್ನಿ ಪಲ್ಟಿ: ೫ ಮಂದಿ ಗಾಯ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಉಪ್ಪಿನಂಗಡಿ ಕಡಬ ರಸ್ತೆಯ ಕೆಮ್ಮಾರ ಎಂಬಲ್ಲಿ ಒಮ್ನಿ ಕಾರೊಂದು ಹೊಂಡಕ್ಕೆ ಬಿದ್ದು ೫ ಮಂದಿ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ. ಇದರಲ್ಲಿ ೩ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದ ಯುವತಿಯೊಬ್ಬಳನ್ನು ಕಡಬದ ಮೌಲವಿಯೊಬ್ಬರ ಬಳಿಗೆ ಕರೆದುಕೊಂಡು ಹೋಗಿ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಪಾಣೆಮಂಗಳೂರಿನ ನೆಹರು ನಗರದ ಒಂದೇ ಕುಟುಂಬದ ನಿವಾಸಿಗಳಾದ ಖತೀಜಮ್ಮ(೫೦), ರಝೀನಾ(೨೨), ಸಯೀದಾ(೨೦),ಫೌಝಿಯಾಬಾನು(೧೮), ಆಫ್ರಿನ್(೧೨) ಎಂಬವರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಕೆಮ್ಮಾರದ ಬಳಿ ತಿರುವೊಂದರಲ್ಲಿ ಚಾಲಕನ ಹತೋಟಿ ತಪ್ಪಿ ಕಾರು ಪಲ್ಟಿಹೊಡೆದು ಹೊಂಡಕ್ಕೆ ಬಿದ್ದಿದ್ದು, ಕಾರು ಚಾಲಕನಿಗೂ ಅಲ್ಪ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಬ್ಯಾಂಕ್‌ಗೆ ವಂಚನೆ: ನ.ಪಂ. ಸದಸ್ಯೆಯ ವಿರುದ್ಧ ದೂರು

Posted by JAYAKIRANA Kirana on | 0 comments | Leave a comment...

ಸುಳ್ಯ: ಸುಳ್ಯ ನಗರ ಪಂಚಾಯತ್ ಸದಸ್ಯೆ ಜುಲಿಯಾ ಕ್ರಾಸ್ತ ಎಂಬವರು ಮನೆ ಕಟ್ಟುವ ಸಲುವಾಗಿ ಬ್ಯಾಂಕಿನಿಂದ ೬ ಲಕ್ಷ ರೂ. ಸಾಲ ಪಡೆದು, ನಕಲಿ ದಾಖಲೆ ಸೃಷ್ಠಿಸಿ, ಮನೆಯನ್ನೂ ಕಟ್ಟದೆ, ಸಾಲದ ಕಂತನ್ನೂ ತುಂಬದೆ ವಂಚಿ ಸಿದ್ದಾರೆ ಎಂದು ಸಿಂಡಿಕೇಟ್ ಬ್ಯಾಂಕಿನ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಬೀರಮಂಗಲ ಎಂಬಲ್ಲಿ ಸರ್ವೆ ನಂಬ್ರ ೧೮೪-೨ಎ/ಪಿ-೬ ಎಂಬಲ್ಲಿ ೨೦೦೬ರ ಸೆಪ್ಟಂಬರ್ ೫ರಂದು ಮನೆ ನಿರ್ಮಿಸುತ್ತಿರುವುದಾಗಿ ಪಂಚಾಯತ್ ನಿಂದ ಕಟ್ಟಡ ಪರವಾನಿಗೆ ಪಡೆದಿದ್ದಾರೆ. ಆದರೆ ಬ್ಯಾಂಕ್ ಅಧಿಕಾರಿ ಬರುವಾಗ ಅದೇ ಜಮೀನಿನ ಪಕ್ಕದಲ್ಲಿರುವ ಇನ್ನೊಬ್ಬರಿಗೆ ಸೇರಿದ ಮನೆಯನ್ನು ತೋರಿಸಿ ಅದರ ಫೋಟೋ ತೆಗೆದು ವಂಚಿಸಿದ್ದಾರೆ. ೬ ಲಕ್ಷ ಸಾಲ ಪಡೆದು ಇದುವರೆಗೂ ನಯಾ ಪೈಸೆಯನ್ನೂ ಪಾವತಿಸಿರುವುದಿಲ್ಲ. ಸಾಲದ ಷರತ್ತನ್ನು ಉಲ್ಲಂಘಿಸಲಾಗಿದೆ. ಹಾಗಾಗಿ ಪೂರ್ಣ ಮೊತ್ತವನ್ನು ಕಟ್ಟುವಂತೆ ತಿಳಿಸಿದ್ದರೂ ಕಟ್ಟಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದಾಖಲೆಯಲ್ಲಿ ನೀಡಿರುವ ಜಮೀನಿನಲ್ಲಿ ಜುಲಿಯಾ ಕ್ರಾಸ್ತರ ತಂದೆ ಬಜಿಲ ಕ್ರಾಸ್ತ ಎಂಬವರು ಅವರ ಇನ್ನೊಬ್ಬ ಮಗಳಿಗೆ ಮನೆಯನ್ನು ಕಟ್ಟಿಸಿದ್ದಾರೆ. ಹಾಗಾಗಿ ಅವರನ್ನು ಎರಡನೇ ಆರೋಪಿಯನ್ನಾಗಿ ದೂರಿನಲ್ಲಿ ತೋರಿಸಲಾಗಿದೆ.
ಸ್ವರ್ಣ ಜಯಂತಿ ಶಹರಿ ರೋಜ್‌ಗಾರ್ ಯೋಜನೆಯಡಿ ಮಹಿಳಾ ಗುಂಪುಗಳು ರಚಿಸಿಕೊಂಡಿರುವ ಸಹಕಾರಿ ಸಂಘದ ಅಧ್ಯಕ್ಷೆಯೂ ಆಗಿರುವ ಜುಲಿಯಾ ಅಲ್ಲೂ ಸಾಕಷ್ಟು ಠೇವಣಿ ಪಡೆದು ಅದನ್ನು ಮರಳಿಸದೇ ಇರುವ ಬಗ್ಗೆಯೂ ಅವರ ಮೇಲೆ ಆರೋಪಗಳಿವೆ. ಇದೀಗ ಆ ಸಹಕಾರಿ ಸಂಘವೂ ಮುಚ್ಚುವ ಹಂತಕ್ಕೆ ಬಂದಿದೆ ಎನ್ನಲಾಗಿದೆ.

ಬಡತನ ಕಳೆಯಲು ಬಂದು ಬಾಡಿ ಹೋದ ಜೀವಗಳು

Posted by JAYAKIRANA Kirana on | 0 comments | Leave a comment...

ಅಪಘಾತದ ನೆರಳ ಹಿಂದಿನ ನೋವು
ಮಂಗಳೂರು: ಜೀವನದ ಪಯಣ ಆರಂಭದಲ್ಲೇ ಎಡವಿ ಬಿಟ್ಟಿದೆ. ನೂರಾರು ಕನಸ್ಸನ್ನು ಹೊತ್ತು ಬಡತನದ ಬೇಗೆ ನೀಗಲೆಂದು ದೂರದ ಊರಿನಿಂದ ಉದ್ಯೋಗ ಅರಸಿ ಬಂದಿರುವ ಎಂಟು ಜೀವ ಮತ್ತೇ ಕಾಣದ ಲೋಕಕ್ಕೆ ಪಯಣ ಬೆಳೆಸಿದೆ. ಆ ಅಪಘಾತಕ್ಕೆ ಮಂಗಳೂರೇ ಬೆಚ್ಚಿ ಬಿದ್ದಿದ್ದರೂ ಸಾವಿನ ಸುಳಿವೂ ಇಲ್ಲದ ಕಾರ್ಮಿಕರ ಮನೆ ಮಂದಿ ತಮ್ಮ ಮಕ್ಕಳ ಬಗ್ಗೆ ಕನಸ್ಸು ಕಾಣುತ್ತಿದ್ದಾರೆ.
ಅದನ್ನು ನಿರ್ಲಕ್ಷ್ಯ ಎನ್ನುವುದೋ, ದುರಾದೃಷ್ಟ ಎನ್ನುವುದೋ ಅಥವಾ ದುರಂತ ಎನ್ನುವುದೋ ತಿಳಿಯುತ್ತಿಲ್ಲ. ಕಣ್ಣು ಮುಚ್ಚಿ ತೆರೆಯುವುದರೊಳಗೆ ಯಾರ ಊಹೆಗೂ ನಿಲುಕದಷ್ಟು ವೇಗ ವಾಗಿ ಅಪಘಾತ ನಡೆದಿದ್ದು, ಯಾವುದೇ ನೋವು, ಅರಚಾಟ ಕಿರುಚಾಟಕ್ಕೆ ಆಸ್ಪದ ಇಲ್ಲದಂತೆ ಆರು ಜೀವಗಳು ತಣ್ಣನೆ ಮಲಗಿ ಬಿಟ್ಟಿದ್ದರೆ ಎರಡು ಜೀವಗಳು ರಕ್ತದ ಮಡುವಿನಲ್ಲಿ ವಿಲವಿಲನೇ ಒದ್ದಾಡಿ ಪ್ರಾಣ ಬಿಟ್ಟಿದೆ.
ಒರಿಸ್ಸಾ ನಿವಾಸಿಗಳಾದ ಚಂದ್ರ ಮೋಹನ್, ಕೆಟ್ಟೋ ಪತ್ರ ತನಿಯ, ಚಂದನ್ ಪತ್ರಾ, ಜಾರ್ಖಾಂಡ್ ನಿವಾಸಿಗಳಾದ ಚತ್ರಸೇನ್ ಗಿರಿ, ಎಂ.ಡಿ ಇರ್ಫಾನ್, ಸಲ್ಮಾನ್ ಖಾನ್, ಪ್ರಕಾಶ್ ಚಂದ್ರ ನಾಯರ್, ಮುಕ್ಸುದ್ ಖಾನ್ ಮಂಗಳೂರ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ಕಳೆದ ಭಾನುವಾರ ಜೋಕಟ್ಟೆಯಲ್ಲಿ ನಡೆದ ಅಪಘಾತದಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ. ಯಾರದ್ದೋ ತಪ್ಪಿಗೆ ಇನ್ನಾರೋ ಜೀವ ತೆತ್ತಿದ್ದಾರೆ.
ಮಂಗಳೂರಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಸೆಝ್‌ಗೆ ಸಾಲು ಸಾಲು ಪ್ರಾಣಗಳು ಆಹುತಿಯಾಗುತ್ತಿದೆ. ವರ್ಷದ ಹಿಂದೆ ವಲಸೆ ಕಾರ್ಮಿಕರ ತಾತ್ಕ್ಕಾಲಿಕ ಶೆಡ್ ಬಳಿ ನೀರಿನ ಟ್ಯಾಂಕ್ ಒಡೆದು ಇಬ್ಬರು ಮೃತಪಟ್ಟ ಘಟನೆ ಯಿಂದ ಹಿಡಿದು ಇಲ್ಲಿವರೆಗೆ ಸೆಝ್‌ನಲ್ಲಿ ಪ್ರಾಣ ಕಳೆದುಕೊಂಡವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ, ದುರಂತ ಎಂದರೆ ಇವರ‍್ಯಾರ ಪ್ರಾಣಕ್ಕೂ ಸೆಝ್ ಆಗಲಿ, ಗುತ್ತಿಗೆದಾರರಾಗಲಿ ಬೆಲೆ ಕಟ್ಟಲೇ ಇಲ್ಲ, ಅದಕ್ಕಿಂತಲೂ ಮುಖ್ಯವಾದು ದೆಂದರೆ ಈ ಕಾರ್ಮಿಕರ ಶವ ಅವರ ಗ್ರಾಮ ಸೇರದೆ ಈ ಮಣ್ಣಲ್ಲೇ ಶಾಶ್ವತ ಸ್ಥಾನ ಪಡೆಯುತ್ತಿದೆ. ಬಡತನದ ಬೇಗೆಯಿಂದ ಬಸವಳಿದು ಹೆಚ್ಚು ದುಡಿಮೆಯ ಆಸೆಯಿಂದ ಗುತ್ತಿಗೆದಾರರ ಮೋಹದ ಮಾತಿಗೆ ಬಲಿಯಾಗಿ ಮಂಗಳೂರು ಸೇರುತ್ತಿರುವ ವಲಸೆ ಕಾರ್ಮಿಕರ ಬದುಕಿಗೆ ಇಲ್ಲಿ ಬೆಲೆಯೇ ಸಿಗುತ್ತಿಲ್ಲ. ಊರಿನಿಂದ ಕರೆ ತರುವಾಗ ಅವರಿಗೆ ನೀಡುವ ಭರವಸೆ ಇಲ್ಲಿ ಯಾವುದೂ ಈಡೇರುತ್ತಿಲ್ಲ. ಭಾನುವಾರ ನಡೆದ ದುರಂತದಲ್ಲಿ ಸತ್ತವರು ಮತ್ತು ಗಾಯಗೊಂಡವರು ಒರಿಸ್ಸಾ ಮತ್ತು ಜಾರ್ಖಂಡ್ ಮೂಲದ ಕಾರ್ಮಿಕರು ಇವರನ್ನು ಅಲ್ಲಿನ ಗುತ್ತಿಗೆದಾರನೊಬ್ಬ ಒಪ್ಪಂದವೊಂದರ ಮೂಲಕ ಅಬ್ರಾಹಂ ಎನ್ನುವವರಿಗೆ ಒದಗಿಸಿದ್ದ. ಇಲ್ಲಿ ಅಬ್ರಾಹಂ ಮತ್ತು ಮ್ಯಾಥ್ಯೂ ಸಿಸಿಸಿಎಲ್ ಕಂಪೆನಿಗೆ ಈ ಕಾರ್ಮಿಕರನ್ನು ದುಡಿಮೆಗಾಗಿ ನೀಡಿದ್ದ. ಇದಕ್ಕಾಗಿ ಗುತ್ತಿಗೆದಾರ ಕಮಿಷನ್ ಪಡೆಯುತ್ತಾನೆ. ಆದರೆ ಈ ಕಮಿಷನ್‌ಗೆ ಗುತ್ತಿಗೆದಾರ ಕಾರ್ಮಿಕರಿಗೆ ನೀಡ ಬೇಕಾದ ಕನಿಷ್ಠ ಭದ್ರತೆಯನ್ನು ಒದಗಿಸಲೇ ಬೇಕು. ಇದು ನಿಯಮವಾಗಿದ್ದರೂ ಹೆಚ್ಚಿನ ಗುತ್ತಿಗೆದಾರರು ಇದನ್ನು ಪಾಲಿಸುತ್ತಿಲ್ಲ. ಪರಿಣಾಮ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಭಾನುವಾರದ ದುರಂತದಲ್ಲೂ ಸರಕು ಸಾಗಟ ಪಿಕಪ್ ವಾಹನವನ್ನು ಕಾರ್ಮಿಕರನ್ನು ಕರೆದೊಯ್ಯಲು ಬಳಸಲಾಗಿತ್ತು. ಅದರಲ್ಲೂ ಒಂದು ಪಿಕಪ್‌ನಲ್ಲಿ ಬರೊಬ್ಬರಿ ೨೧ ಜನ, ಇದರ ಮೇಲೆ ಅತೀ ವೇಗದ ಚಾಲನೆ. ಇವೆಲ್ಲ ನಿರ್ಲಕ್ಷ್ಯತನಕ್ಕೆ ಸಾಕ್ಷಿ. ಒಂದು ವೇಳೆ ಪಿಕಪ್ ನಿಯಮಿತ ವೇಗದಲ್ಲಿ ಸಾಗುತ್ತಿದ್ದರೆ ಸ್ಟೇರಿಂಗ್ ಎಂಡ್ ತುಂಡಾದರೂ ಗಾಡಿ ಚಾಲಕನ ಯಂತ್ರಣಕ್ಕೆ ಬರುವ ಸಾಧ್ಯತೆ ಇತ್ತು. ಇದಲ್ಲದೆ ಅಪಘಾತವೇ ಆಗಿರುತ್ತಿದ್ದರೂ ಸಾವು ಸಂಭವಿಸುತ್ತಿರಲಿಲ್ಲ ಎಂದು ವಾಹನ ಚಾಲಕರೇ ಹೇಳುತ್ತಾರೆ. ಇನ್ನೊಂದು ವಿಶೇಷ ಎಂದರೆ ಇಷ್ಟೆಲ್ಲ ದುರಂತ ನಡೆದಿದ್ದರೂ ಇದರ ಹೊಣೆ ಹೊತ್ತುಕೊಳ್ಳ ಬೇಕಾಗಿದ್ದ ಗುತ್ತಿಗೆದಾರ ಮಾತ್ರ ನಾಪತ್ತೆ. ಅಪಘಾತದ ಸುದ್ದಿಗೆ ಒಮ್ಮೆಗೆ ಮಂಗಳೂರಿಗೆ ನಡುಗಿ ಹೋಗಿ ಜೋಕಟ್ಟೆಗೆ ದೌಡಾಯಿಸಿದ್ದರೆ ಸಾವು ಕಂಡ ಕಾರ್ಮಿಕರ ಗುತ್ತಿಗೆದಾರನ ಸುಳಿವೇ ಇಲ್ಲ. ಈತನಿಲ್ಲದ ಕಾರಣ ಸತ್ತವರು ಯಾರು? ವಾಹನದಲ್ಲಿ ಎಷ್ಟು ಜನರಿದ್ದರು? ಯಾವ ಗ್ರಾಮದವರು? ಅವರ ಮನೆಮಂದಿಗೆ ಮಾಹಿತಿ ನೀಡುವ ಯಾವ ಕೆಲಸವೂ ನಡೆದಿಲ್ಲ. ಪೊಲೀಸರಿಗಂತೂ ಗುತ್ತಿಗೆದಾರನನ್ನು ಹುಡುಕುವುದೇ ಕೆಲಸವಾಗಿದೆ. ಶವಗಳ ಮರಣೋತ್ತರ ಪರೀಕ್ಷೆ ನಡೆಸಬೇಕಾದರೂ ಗುತ್ತಿಗೆದಾರ ಅಗತ್ಯವಾಗಿ ಬೇಕಾಗಿದ್ದ ಆದರೆ ಆತನ ಸುಳಿವೇ ಇಲ್ಲ ಇದರಿಂದಾಗಿ ನಿನ್ನೆ ಸಂಜೆಯವರೆಗೆ ಶವಗಳನ್ನು ಗುರುತಿಸುವುದೂ ಪೊಲೀಸರಿಂದ ಸಾಧ್ಯವಾಗಿಲ್ಲ, ಹೀಗಾಗಿ ಪೊಲೀಸರು ಗುತ್ತಿಗೆದಾರನ ಮೇಲೆ ಕೇಸು ಜಡಿದಿದ್ದಾರೆ.
ಸೆಝ್‌ನೊಳಗೆ ಆರು ಕಂಪೆನಿ ಕಾರ್ಯಾರಂಭ ಮಾಡಿದೆ ಇನ್ನೆರಡು ಸಿದ್ದತೆಯಲ್ಲಿದೆ ಇದಕ್ಕೆ ಸಂಬಂಧಿಸಿದ ಕಟ್ಟಡ, ಯಂತ್ರೋಪಕರಣ, ವೆಲ್ಡಿಂಗ್, ಬಂಡೆ ಸ್ಪೋಟ, ಹಾಗೂ ಇನ್ನಿತರ ಕೆಲಸಕ್ಕೆ ಉತ್ತರ ಭಾರತ ಮೂಲದ ಕಾರ್ಮಿಕರನ್ನು ಬಳಸಲಾಗುತ್ತಿದೆ. ಸೆಝ್ ಆವರಣದೊಳಗೆ ೧೮ ರಿಂದ ೨೧ ಸಾವಿರದಷ್ಟು ವಲಸೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕೇವಲ ಕಳವಾರು ಒಂದೇ ಪ್ರದೇಶದಲ್ಲಿ ನಾಲ್ಕು ಸಾವಿರ ಮಂದಿ ಕಾರ್ಮಿಕರಿದ್ದಾರೆ. ಇವರೆಲ್ಲ ಬಿಹಾರ, ಪಶ್ಚಿಮ ಬಂಗಾಳ, ಒರಿಸ್ಸಾ, ಜೋದ್‌ಪುರಾ, ಅಸ್ಸಾಂ ಜಾರ್ಖಂಡ್ ಮುಂತಾದ ಕಡೆಯವರು. ಅಲ್ಲಿ ಇಪ್ಪತ್ತು ಮೂವತ್ತು ರೂಪಾಯಿಯ ದುಡಿಮೆಯನ್ನು ತ್ಯಜಿಸಿ ಹೆಚ್ಚು ದುಡಿದು ಮನೆ ಮಂದಿಯನ್ನು ಸಾಕುವ ಜವಬ್ದಾರಿ ಹೊತ್ತು ಬಂದ ಬಡ ಯುವಕರೇ ಇಲ್ಲಿ ಅತೀಯಾಗಿದ್ದಾರೆ. ಇವರೆಲ್ಲ ೧೮ ರಿಂದ ೨೮ ವರುಷದೊಳಗಿನವರೇ ಅಧಿಕ ಎನ್ನುವುದು ಗಮನಾರ್ಹ. ಭಾನುವಾರ ನಡೆದ ದುರಂತದಲ್ಲೂ ಮಡಿದವರಾಗಲಿ ಗಾಯಗೊಂಡವರಾಗಿ ಇನ್ನು ೨೮ರ ಹರೆಯ ದಾಟದವರೇ ಅಧಿಕ ಮಂದಿ ಇದ್ದಾರೆ, ಈ ಸಾವು ನ್ಯಾಯವೇ? ಇದಕ್ಕಿಲ್ಲವೇ ಕೊನೆ ಇದು ಕಾರ್ಮಿಕರ ಮನದೊಳಗಿನ ಸದ್ಯದ ಪ್ರಶ್ನೆ

ಸರ್ವಿಸ್ ಬಸ್ ಮುಷ್ಕರ ಯಶಸ್ವಿ

Posted by JAYAKIRANA Kirana on | 0 comments | Leave a comment...

ಆರೋಪಿಗಳ ಬಂಧನಕ್ಕೆ ಇನ್ನೊಂದು ಗಡುವು
ಮಂಗಳೂರು: ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳ ಲಾಗಿದ್ದ ಸರ್ವಿಸ್ ಬಸ್ ಮುಷ್ಕರ ಯಶಸ್ವಿಯಾಗಿದೆ. ಇದೇ ವೇಳೆ ಆರೋಪಿಗಳನ್ನು ಬಂಧಿಸಲು ಇನ್ನೊಂದು ಗಡುವು ನೀಡಲಾಗಿದೆ.
ಕಳೆದ ತಿಂಗಳು ೩೦ರಂದು ಪಜೀರು ಗ್ರಾಮ ಪಂಚಾ ಯಿತಿ ಅಧ್ಯಕ್ಷ ನಝೀರ್ ಮೊದ್ದೀನ್, ನಝರ್ ಮತ್ತು ಅರಾಫತ್ ಮಿತ್ತಕೋಡಿಯಲ್ಲಿ ಸರ್ವಿಸ್ ಬಸ್‌ನ್ನು ತಡೆದು ಚಾಲಕ ಚಾರ್ಲಿ ಪಿಂಟೋ ಎಂಬವರ ಮೇಲೆ ಹಲ್ಲೆ ನಡೆಸಿದ್ದರು. ಮೇ ೧ರಂದು ಬಸ್ ಮುಷ್ಕರ ನಡೆಸಿದ್ದ ನೌಕರರು ಶನಿವಾರ ಅಪರ ಜಿಲ್ಲಾಧಿಕಾರಿ ದಯಾನಂದ ಅವರಿಗೆ ಮನವಿ ಮಾಡಿ ಆರೋಪಿಗಳ ಬಂಧನಕ್ಕಾಗಿ ಒತ್ತಾತಿಸಿದ್ದರಲ್ಲದೆ, ಪೊಲೀಸರು ವಿಫಲರಾದಲ್ಲಿ ಸೋಮವಾರ ಸರ್ವಿಸ್ ಬಸ್ ಬಂದ್ ನಡೆಸುವ ಎಚ್ಚರಿಕೆ ನೀಡಿದ್ದರು.
ಆದರೆ ಆರೋಪಿಗಳ ಬಂಧನವಾಗದಿದ್ದ ಹಿನ್ನೆಲೆಯಲ್ಲಿ ಪೂರ್ವ ನಿರ್ಧಾರದಂತೆ ನೌಕರರು ನಿನ್ನೆ ಬೆಳಗ್ಗೆಯೇ ಮುಡಿಪುವಿನಲ್ಲಿ ಬಸ್‌ಗಳನ್ನು ನಿಲ್ಲಿಸಿ ಸಂಜೆಯವರೆಗೂ ಮುಷ್ಕರ ನಡೆಸಿದರು. ಇದೇ ಸಂದರ್ಭ ಸಭೆ ನಡೆಸಿದ ನೌಕರರು ನಿನ್ನೆಯ ಮುಷ್ಕರ ಒಂದೇ ದಿನಕ್ಕೆ ಸೀಮಿತ ಗೊಳಿಸಲು ತೀರ್ಮಾನಿಸಿ, ಮುಂದಿನ ಸೋಮವಾರ ದೊಳಗೆ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಇನ್ನೊಂದು ಗಡುವು ನೀಡಿದ್ದಾರೆ. ಇದರಲ್ಲೂ ವಿಫಲರಾದಲ್ಲಿ ಮಂಗಳವಾರದಿಂದ ಜಿಲ್ಲಾದ್ಯಂತ ಅನಿರ್ದಿಷ್ಠಾವಧಿ ಬಸ್ ಬಂದ್ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಂದ್‌ಗೆ ಸಿಟಿ ಬಸ್ ನೌಕರರ ಸಂಘವೂ ಬೆಂಬಲ ಘೋಷಿಸಿದೆ ಎಂದು ತಿಳಿದು ಬಂದಿದೆ. ನಿನ್ನೆಯ ಬಂದ್ ಪೂರ್ವನಿರ್ಧಾರ ದಂತೆ ನಡೆದಿದ್ದ ಕಾರಣ ನಿಗದಿತ ಪ್ರದೇಶಗಳ ಜನರು ಬೆಳಗ್ಗೆಯೇ ಪರ್ಯಾಯ ವ್ಯವಸ್ಥೆಗೆ ಮೊರೆ ಹೋಗಿದ್ದರು.

ಪಂಚಾಯತ್ ಎದುರಿನ ಪ್ರತಿಭಟನೆ ಕ್ಯಾನ್ಸಲ್
ಚಾಲಕನ ಮೇಲೆ ಗ್ರಾ.ಪಂ. ಅಧ್ಯಕ್ಷನೇ ಹಲ್ಲೆ ನಡೆಸಿದ್ದ ಕಾರಣ ನಿನ್ನೆ ಪಜೀರು ಪಂಚಾಯತ್ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅದನ್ನು ಕೈಬಿಟ್ಟ ಬಸ್ ನೌಕರ ಸಂಘ ಮನವಿ ನೀಡಲು ತೀರ್ಮಾನಿಸಿತು. ಆದರೆ ಕೊನೆಯ ಘಳಿಗೆಯಲ್ಲಿ ಆ ಕಾರ್ಯಕ್ರಮವನ್ನೂ ಕೈಬಿಟ್ಟಿತ್ತು. ಈ ಬಗ್ಗೆ ಬಸ್ ನೌಕರರ ಸಂಘದ ಮುಖಂಡ ಪ್ರವೀಣ್ ಆಳ್ವ ಅವರಲ್ಲಿ ಕೇಳಿದಾಗ ಪೊಲೀಸರ ಮನವಿಯಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಬೂಬು ನೀಡಿದರು.

ಕಾರ್ಕಳ: ಒಳಚರಂಡಿ ದುಸ್ಥಿತಿಯಿಂದ ೪೦ಕ್ಕೂ ಮಿಕ್ಕಿ ಬಾವಿಗಳ ನೀರು ಕಲುಷಿತ

Posted by JAYAKIRANA Kirana on | 0 comments | Leave a comment...

ಕಾರ್ಕಳ: ದುಸ್ಥಿತಿಯಲ್ಲಿರುವ ಒಳಚರಂಡಿಯಿಂದಾಗಿ ನಗರದ ಆನೆಕೆರೆ ಮತ್ತು ಕಾಮತ್‌ಓಣಿಯ ಪರಿ ಸರದಲ್ಲಿರುವ ೪೦ಕ್ಕೂ ಮಿಕ್ಕಿ ಬಾವಿಗಳ ನೀರು ಕೆಟ್ಟು ಹೋಗಿರುವುದರಿಂದ ಸ್ಥಳೀಯ ನಾಗರಿಕರಿಗೆ ಬಾವಿ ತುಂಬ ನೀರಿದ್ದರೂ, ಕುಡಿಯುವ ಭಾಗ್ಯವಿಲ್ಲ ದಂತಾಗಿದೆ.
ಮುಂಡ್ಲಿ ಡ್ಯಾಮ್‌ನ ಅನತಿ ದೂರದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಕಾನೂನನ್ನು ಗಾಳಿಗೆ ತೂರಿ ಸ್ಫೋಟಕಗಳನ್ನು ಸ್ಫೋಟಿ ಸುತ್ತಿರುವುದರಿಂದ ಅಂತರ್‌ಜಲವು ಕಡು ಬೇಸಿಗೆಗೆ ಮುನ್ನಾ ಬತ್ತಿಹೋಗಿ ನೀರಿನ ತಾತ್ವಾರ ಇದೀಗ ಎದುರಾಗಿದೆ. ಮತ್ತೊಂದೆಡೆಯಲ್ಲಿ ರಾಮಸಮುದ್ರ ದಿಂದ ಬೃಹತ್ ಟ್ಯಾಂಕ್‌ಗೆ ಅಳವಡಿ ಸಲಾಗಿದ್ದ ಭಾರೀ ಗಾತ್ರದ ನೀರಿನ ಪೈಪ್‌ನ್ನು ಕಿತ್ತುಹಾಕಿ ಅದನ್ನೇ ಮುಂಡ್ಲಿ ಯಿಂದ ರಾಮಸಮುದ್ರಕ್ಕೆ ಬರುವಂತಹ ನೀರಿನ ಪೈಪಾಗಿ ಪರಿವರ್ತಿಸಿದ್ದಲ್ಲದೇ ಹೊಸಪೈಪ್ ಲೈನ್ ಎಂದು ನಮೂದಿಸಿ ಬಿಲ್ ತಯಾರಿಸಿ ಪುರಸಭೆಯ ಖಜಾನೆಗೆ ನಷ್ಟ ಉಂಟಾಗಿದೆ. ಇಂತಹ ಕನ್ನಹಾಕುವ ಕಾರ್ಯಕ್ಕೆ ಪುರಸಭೆಯ ಆಡಳಿತ ವಗ ಮುಂದಾಗಿರುವುದರಿಂ ದಲೇ ನಗರದಲ್ಲಿ ನೀರಿನ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ.
ಆನೆಕೆರೆ ಮತ್ತು ಕಾಮತ್ ಓಣಿಯಂತಹ ತಗ್ಗು ಪ್ರದೇಶವು ನೀರಿನ ಸಂಪತ್ತಿನಿಂದ ಕೂಡಿದೆ. ಇಲ್ಲಿರುವ ಸುಮಾರು ೪೦ಕ್ಕೂ ಮಿಕ್ಕಿ ಬಾವಿಗಳಲ್ಲಿನ ನೀರು ಕುಡಿಯಲು ಯೋಗ್ಯವಲ್ಲ ವೆಂದು ಪರೀಕ್ಷಾರ್ಥ ಮೂಲಗಳಿಂದ ರುಜುವಾಗಿದೆ. ಗಬ್ಬುನಾತದಿಂದ ಕೂಡಿರುವ ಈ ಬಾವಿಗಳ ನೀರು ಹಳದಿ ಬಣ್ಣಕ್ಕೆ ತಿರುಗಿದೆ. ಇಂತಹ ಪರಿಸ್ಥಿತಿಯ ನಡುವೆ ಸ್ಥಳೀಯ ನಾಗರಿಕರು ಪುರಸಭಾ ಕಚೇರಿಗೆ ತೆರಳಿ ದೂರು ಸಲ್ಲಿಸಿದರೂ ಅಲ್ಲಿನ ಅಧಿಕಾರಿಗಳು ಮೂಕಪ್ರೇಕ್ಷಕರಂತಿದ್ದು, ಯಾವುದೇ ಕ್ರಮ ಕೈಗೊಳ್ಳದ ಸ್ಥಿತಿಯಲ್ಲಿದ್ದಾರೆ. ಇದಕ್ಕೆಲ್ಲ ಕಾರಣ ಒಳಚರಂಡಿ ಸೋರಿಕೆ! ೧೯೭೨ರಲ್ಲಿ ರೂಪುಗೊಂಡ ಕಾರ್ಕಳ ಪುರಸಭೆಗೆ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀಡಿದ ಮೊದಲ ಹಾಗೂ ಕೊನೆಯ ಬಹುದೊಡ್ಡ ಕೊಡುಗೆ ಎಂದರೆ ಅದು ಒಳಚರಂಡಿ ಯೋಜನೆ. ೨೩.೦೬ ಚ.ಕಿ.ಮೀ ವಿಸ್ತೀರ್ಣದ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿಯ ಪೈಪ್‌ಗಳು ಕಂಡುಬಂತು. ಪ್ರಸ್ತುತ ದಿನಗಳಲ್ಲಿರುವ ಈ ಒಳಚರಂಡಿ ಪೈಪ್ ಮತ್ತು ಮ್ಯಾನ್‌ಹೋಲ್‌ಗಳು ದುಸ್ಥಿತಿ ಮಟ್ಟಕ್ಕೆ ತಲುಪಿದೆ. ತ್ಯಾಜ್ಯ ನೀರು ಇದರ ಮೂಲಕ ಸೋರಿಕೆಯಾಗಿ ಭೂಗರ್ಭದಿಂದ ಬಾವಿಯ ನೀರಿನೊಂದಿಗೆ ಲೀನವಾಗತೊಡಗಿದೆ. ಇಂತಹ ಬಾವಿಗಳ ನೀರು ಇಂದು ಕುಡಿಯಲು ಯೋಗ್ಯವಲ್ಲದಂತಾಗಿದೆ. ದುಸ್ಥಿತಿಯಲ್ಲಿರುವ ಒಳಚರಂಡಿ ಪೈಪ್‌ನ್ನು ಕೂಡಲೇ ಬದಲಾಯಿಸಿ ಬಾವಿಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಸ್ಥಳೀಯ ಪುರಸಭೆಯದ್ದಾಗಿದೆ. ಇದನ್ನು ನಿರ್ಲಕ್ಷಿಸಿದಲ್ಲಿ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕೆಂಬುವುದು ನಾಗರಿಕರ ಒತ್ತಾಯವಾಗಿದೆ.

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


ಕೊಲೆ ಬೆದರಿಕೆ: ಕೋರ್ಟ್ ರಕ್ಷಣೆ ಕೋರಿದ ನವದಂಪತಿ

Posted by JAYAKIRANA Kirana on | 0 comments | Leave a comment...

ಗುರ್‌ಗಾಂವ್: ಕುಟುಂಬ ಸದಸ್ಯರ ಬೆದರಿಕೆಗೆ ಮಣಿದ ನವ ದಂಪತಿ ರಕ್ಷಣೆ ಕೋರಿ ಸಿಟಿ ಕೋರ್ಟಿನ ಮೊರೆ ಹೋದ ಘಟನೆ ನಡೆದಿದೆ. ನವ ದಂಪತಿ ಅನ್ಯ ಜಾತಿಯವರಾಗಿದ್ದು, ಮದುವೆಗೆ ಕುಟುಂಬ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು.
ದಂಪತಿಯ ಆಲಿಕೆಯನ್ನು ಸ್ವೀಕರಿಸಿದ ವಕೀಲ ದುರ್ಗೇಶ್ ಬೋಕನ್, ನ್ಯಾಯಾಲಯ ಕುಟುಂಬದ ವಿರುದ್ಧ ಆದೇಶ ನೀಡಲಿದ್ದು, ದಂಪತಿಗೆ ಸೂಕ್ತ ರಕ್ಷಣೆ ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂದು ತೀರ್ಪು ಹೊರಬೀಳಲಿದೆ.
ಕುಂತಿ ಒದಿಶಾದವಳಾಗಿದ್ದು, ಕಳೆದ ೧೦ ವರ್ಷಗಳಿಂದ ತನ್ನ ಪಾಲಕರ ಜೊತೆ ಗರ‍್ಹಿ ಹರ್‌ಸರು ಹಳ್ಳಿಯಲ್ಲಿ ವಾಸವಾಗಿದ್ದರು. ತೌರೋದ ಝಾಮೂ ಹಳ್ಳಿಯ ಜಿತೇಂದ್ರ ಎಂಬಾತನ ಜೊತೆ ಪ್ರೇಮಾಂಕುರವಾಯಿತು. ನಂತರ, ಮೇ ೪ರಂದು ಗಂಟೇಶ್ವರ ಮಂದಿರದಲ್ಲಿ ಮದುವೆ ಕೂಡಾ ಆದರು ಎಂದು ವಕೀಲ ಬೋಕನ್ ವಿವರಿಸಿದ್ದಾರೆ.
ಕುಂತಿ ಹಾಗು ಜಿತೇಂದ್ರ ಇಬ್ಬರೂ ಅನ್ಯ ಜಾತಿಯವರಾಗಿದ್ದ ಹಿನ್ನೆಲೆಯಲ್ಲಿ ಇಬ್ಬರ ಕುಟುಂಬ ವರ್ಗ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು. ಮದುವೆಯ ಬಳಿಕ ದಂಪತಿ ಬಾದ್‌ಶಾಪುರದಲ್ಲಿ ವಾಸಿಸುತ್ತಿದ್ದು, ಇಬ್ಬರ ಕುಟುಂಬ ವರ್ಗದವರೂ ಹಲ್ಲೆ ನಡೆಸಿದ್ದರು. ಕೊಲೆ ಬೆದರಿಕೆ ನೀಡಿದ ಹಿನ್ನೆಲೆಯಲ್ಲಿ ಇದೀಗ ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗುವುದು ದಂಪತಿಗೆ ಅನಿವಾರ್ಯವಾಗಿದೆ.

Posted by JAYAKIRANA Kirana on | 0 comments | Leave a comment...

Know the mantra to appease Lord Shiva
 
 
On Monday morning, offer milk to a Shivling. Then offer flowers, akshat, incense sticks and sweets.
Sit after lighting diya and incense sticks. Then chant the following mantra 12 times:
ॐ महादेवाय नम:, ॐ हरये नम:, ॐ हराय नम:
ॐ महेश्वराय नम:, ॐ शंङ्कराय नम:, ॐ अम्बिकानाथाय नम:
ॐ गंगाधराय नम:, ॐ जटाधराय नम:, ॐ त्रिमूर्तये नम:
ॐ सदाशिवाय नम:, ॐ मृत्युञ्जयाय नम:, ॐ रुद्राय नम:
Om Mahadevay namah, Om Haraye namah, On Haray namah
Om Maheshvaray namah, Om Shankaray namah, Om Ambikanathay namah
Om Gangadharay namah, Om Jatadharay namah, Om Trimurtey namah
Om Sadashivay namah, Om Mrutyunjayay namah, Om rudray namah

ಕೈದಿಗಳಿಗೆ ಮೊಬೈಲ್ ರವಾನೆ: ಜೈಲ್ ವಾರ್ಡನ್ ಬಂಧನ

Posted by JAYAKIRANA Kirana on | 0 comments | Leave a comment...

ಗುರ್‌ಗಾಂವ್: ಕೈದಿಗಳಿಗೆ ಕಾನೂನು ಬಾಹಿರವಾಗಿ ಮೊಬೈಲ್ ಸರಬರಾಜು ಮಾಡುತ್ತಿದ್ದ ಜೈಲ್ ವಾರ್ಡನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಪಾಲಿಥಿನ್ ಕವರ್‌ನಲ್ಲಿ ಸುತ್ತಿದ ಮೂರು ಮೊಬೈಲ್‌ಗಳನ್ನು ಬಟ್ಟೆ ಒಗೆಯುವ ನೀರಿನ ಪೈಪ್ ಮೂಲಕ ಕೈದಿಗೆ ರವಾನಿಸುತ್ತಿದ್ದ ಎನ್ನಲಾಗಿದೆ. ವಾರ್ಡನ್ ಪವನ್ ಕುಮಾರ್, ಬೊಂಡ್ಸಿ ಜೈಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಪದೇ ಪದೇ ಕೈದಿಗಳಿಗೆ ಮೊಬೈಲ್ ರವಾನಿಸಿರುವ ಬಗ್ಗೆ ಉಪ ಜೈಲರ್ ಶಾಹಿದ್ ಹುಸೇನ್ ನೀಡಿದ ಮಾಹಿತಿ ಆಧಾರದಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶನಿವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪವನ್ ಕುಮಾರ್, ಬಟ್ಟೆ ಒಗೆಯುವ ಕೋಣೆಯಿಂದ ನೀರು ಹಾದು ಹೋಗುವ ಪೈಪ್‌ನ ಮುಖಾಂತರ ಮೂರು ಮೊಬೈಲ್‌ಗಳನ್ನು ಪಾಲಿಥಿನ್ ಕವರ್‌ನಲ್ಲಿ ಸುತ್ತಿ ರವಾನಿಸಿದ್ದ. ಆತನ ನಡವಳಿಕೆಯಿಂದ ಸಂಶಯಗೊಂಡ ಕರ್ತವ್ಯ ನಿರತ ಸಿಬ್ಬಂದಿಗಳು ಹಿರಿಯ ಜೈಲ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬಚ್ಚಿಡಲಾಗಿದ್ದ ಮೊಬೈಲ್‌ಗಳನ್ನು ಬಳಿಕ ಚರಂಡಿಯಿಂದ ವಶಪಡಿಸಿಕೊಳ್ಳಲಾಗಿದೆ.
ಘಟನೆಯ ಬಳಿಕ ಹುಡುಕಾಟ ಪ್ರಾರಂಭಿಸಿದ ಪೊಲೀಸರು, ಮೂವರು ಕೈದಿಗಳಿಂದ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಈಗಾಗಲೇ ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿರುತ್ತಾರೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4075) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2522) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (39) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (151) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (93) kyandi (1) lekhana (262) ln (1) lnews (3693) lokayukta (3) madikeri (1) maleria (1) mangalore (599) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (421) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (808) srinivaspoojary (1) srinivasshetty (1) sslc (2) suicide (2) sulia (4) sullia (209) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (954) tpchandrashekaran (1) traffic (1) train (1) udu (1) udupi (487) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)