ಅಗ್ರ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟ ಚೆನ್ನೈ

Posted by JAYAKIRANA Kirana on Friday, 4 May 2012 | 0 comments | Leave a comment...

ಮತ್ತೆ ಎಡವಿದ ಡೆಕ್ಕನ್; ವೈಟ್ ಅರ್ಧಶತಕ ವ್ಯರ್ಥ
ಚೆನ್ನೈ: ಗೆಲುವಿನ ಲಯದಲ್ಲಿದ್ದ ಡೆಕ್ಕನ್ ಚಾರ್ಜರ‍್ಸ್ ಮತ್ತೆ ಸೋಲಿನ ಕೂಪಕ್ಕೆ ತಳ್ಳಲ್ಪಟ್ಟರೆ ಅತ್ತ ಚೆನ್ನೈ ಮರಳಿ ಜಯದ ಟ್ರ್ಯಾಕ್‌ಗೆ ಮರಳಿದೆ. ನಿನ್ನೆ ಸುರೇಶ್ ರೈನಾ ಪ್ರದರ್ಶಿಸಿದ ಆಲ್‌ರೌಂಡಿಂಗ್ ಆಟದ ನೆರವಿನಿಂದ ಡೆಕ್ಕನ್ ವಿರುದ್ಧದ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ೧೦ ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಚೆನ್ನೈ ಅಗ್ರನಾಲ್ಕರ ಸ್ಥಾನವನ್ನು ಪಡೆದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ನಿಗದಿತ ೨೦ ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ೧೬೦ ರನ್ ಪೇರಿಸಿತು. ಗುರಿ ಬೆನ್ನತ್ತಿದ್ದ ಡೆಕ್ಕನ್‌ಗೆ ಒಂದು ಹಂತದಲ್ಲಿ ಎರಡನೇ ವಿಕೆಟ್‌ಗೆ ಶಿಖರ್ ಧವನ್ (೩೬) ಹಾಗೂ ಕ್ಯಾಮರೊನ್ ವೈಟ್ ೬೮ ರನ್‌ಗಳ ಉತ್ತಮ ಜೊತೆಯಾಟ ನಡೆಸಿದರೂ ನಂತರ ಬಂದ ಬ್ಯಾಟ್ಸ್‌ಮೆನ್‌ಗಳು ಉತ್ತಮ ಆಟ ಪ್ರದರ್ಶಿಸಿದ ಕಾರಣ ತಂಡ ನಿಗದಿತ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೫೦ ರನ್ ಗಳಿಸಲಷ್ಟೇ ಶಕ್ತವಾಯಿತು. ವೈಟ್ ೫೩ ಎಸೆತಗಳಲ್ಲಿ ಎರಡು ಸಿಕ್ಸ್ ಹಾಗೂ ಒಂಬತ್ತು ಬೌಂಡರಿಗಳ ನೆರವಿನಿಂದ ಗಳಿಸಿದ ೭೭ ರನ್ ಈ ವೇಳೆ ವ್ಯರ್ಥಗೊಂಡಿತು.
ಪಾರ್ಥಿವ್ ಪಟೇಲ್ (೧) ವಿಕೆಟನ್ನು ಡೆಕ್ಕನ್ ಬೇಗನೇ ಕಳಕೊಂಡಿತು. ಆದರೆ ಧವನ್ ಹಾಗೂ ವೈಟ್ ತಂಡಕ್ಕೆ ನಂತರ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ವೇಳೆ ತಂಡ ಗೆಲುವಿನ ಟ್ರ್ಯಾಕ್‌ನಲ್ಲಿತ್ತು. ಈ ಜೋಡಿ ಅರ್ಧಶತಕದ ಜೊತೆಯಾಟ ನಡೆಸಿಕೊಟ್ಟಿತು. ಈ ವೇಳೆ ದಾಳಿಗಿಳಿದ ಬ್ರಾವೊ ಎಸೆತವನ್ನು ವೈಟ್ ಸ್ಟ್ರೇಟ್‌ಡ್ರೈವ್ ಮಾಡಿದಾಗ ಅದು ಬೌಲರ್‌ನ ಕೈತಗುಲಿ ವಿಕೆಟ್‌ಗೆ ಬಡಿಯಿತು. ಆಗ ಕ್ರೀಸ್‌ನಿಂದ ಎದುರು ಬಂದಿದ್ದ ಧವನ್ ಅನಾವಶ್ಯಕ ಔಟ್‌ಗೆ ಬಲಿಯಾದರು. ಇದು ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದೇ ಹೇಳಬಹುದು. ನಂತರ ಬಂದ ನಾಯಕ ಸಂಗಾಕ್ಕರ (೧) ರೈನಾಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಅವಶ್ಯಕ ರನ್‌ಗತಿ ಏರತೊಡಗಿತು. ನಂತರ ಕ್ರಿಸ್ತಿಯಾನ್ (೨೭) ಜೊತೆ ವೈಟ್ ೫೦ ರನ್‌ಗಳ ಜೊತೆಯಾಟ ನಡೆಸಿದರು. ಈ ವೇಳೆ ವೈಟ್ ರನ್ ಗಳಿಸುವ ಆತುರದಲ್ಲಿ ವಿಕೆಟ್ ಕಳಕೊಂಡಾಗ ಅಲ್ಲಿಗೆ ಎಲ್ಲವೂ ಸಮಾಪ್ತಿಗೊಂಡಿತ್ತು. ಚೆನ್ನೈ ಪರ ಮೊರ್ಕೆಲ್ ಹಾಗೂ ರೈನಾ ತಲಾ ಒಂದು ವಿಕೆಟ್ ಪಡೆದರು. ಹಿಲ್ಫೆನಾಸ್‌ರ ಅಂತಿಮ ಓವರ್‌ನಲ್ಲಿ ಡೆಕ್ಕನ್‌ಗೆ ೨೦ ರನ್‌ಗಳ ಅವಶ್ಯಕತೆ ಇದ್ದರೂ ತಂಡ ಒಂಬತ್ತು ರನ್ ತೆಗೆಯುವಲ್ಲಿ ಮಾತ್ರ ಸಫಲವಾಯಿತು.
ಈ ಹಿಂದೆ ಬ್ಯಾಟಿಂಗ್ ನಡೆಸಿದ್ದ ಚೆನ್ನೈ ಪರ ಆರಂಭಿಕರಾಗಿ ಮುರಳಿ ವಿಜಯ್ (೧೪) ಹಾಗೂ ಡುಪ್ಲೆಸ್ಸಿಸ್ ಜೋಡಿ ಕಣಕ್ಕಿಳಿದಿದ್ದರೂ ಅದು ವಿಫಲಗೊಂಡಿತು. ವಿಜಯ್ ಗಳಿಕೆ ಕೇವಲ ೧೪ ರನ್ ಆಗಿತ್ತು. ನಂತರ ಎರಡನೇ ವಿಕೆಟ್‌ಗೆ ರೈನಾ (೩೨) ಹಾಗೂ ಡುಪ್ಲೆಸ್ಸಿಸ್ (೪೨) ಕೇವಲ ೭.೨ ಓವರ್‌ಗಳಲ್ಲಿ ೬೪ ರನ್‌ಗಳ ಜೊತೆಯಾಟ ನಡೆಸಿಕೊಟ್ಟರು. ರೈನಾ ನಂತರ ಮಿಶ್ರಾಗೆ ವಿಕೆಟ್ ಒಪ್ಪಿಸಿದರು. ನಂತರ ಧೋನಿ (೩೪) ಜೊತೆಗೂಡಿದ ಡುಪ್ಲೆಸ್ಸಿಸ್ ಮೂರನೇ ವಿಕೆಟ್‌ಗೆ ೩.೩ ಓವರ್‌ಗಳಲ್ಲಿ ೩೦ ರನ್‌ಗಳ ಜೊತೆಯಾಟ ನಡೆಸಿದ್ದು, ತಂಡಕ್ಕೆ ಹೆಚ್ಚು ನೆರವಾಯಿತು. ಅಂತಿಮ ಓವರ್‌ನಲ್ಲಿ ಬ್ರಾವೊ ಕೇವಲ ನಾಲ್ಕು ಎಸೆತಗಳಲ್ಲಿ ೧೨ ರನ್ ಪೇರಿಸಿ ಮೊತ್ತವನ್ನು ೧೬೦ರ ಗಡಿಯತ್ತ ಕೊಂಡೊಯ್ಯಲು ನೆರವಾದರು. ಡೆಕ್ಕನ್ ಪರ ಪ್ರತಾಪ್ ಎರಡು ವಿಕೆಟ್ ಪಡೆದರು.

ಸೆಮೀಸ್‌ಗೇರಿದ ಭಾರತದ ಪುರುಷ ಹಾಗೂ ಮಹಿಳಾ ತಂಡ

Posted by JAYAKIRANA Kirana on | 0 comments | Leave a comment...

ಏಶ್ಯನ್ ಸ್ಕ್ವಾಷ್ ಚಾಂಪಿಯನ್‌ಶಿಪ್
ಕುವೈತ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಶ್ಯನ್ ಸ್ಕ್ವಾಷ್ ಚಾಂಪಿ ಯನ್‌ಶಿಪ್‌ನಲ್ಲಿ ಭಾರತ ಅತ್ಯದ್ಭುತ ಪ್ರದರ್ಶನ ಕಾಯ್ದುಕೊಂಡಿದೆ. ಟೂರ್ನಿಯಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಉತ್ತಮ ಪ್ರದರ್ಶನ ನೀಡಿ ಕೂಟದ ಸೆಮಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
ಟೂರ್ನಿಯಲ್ಲಿ ಉತ್ತಮ ಶ್ರೇಣಿ ಹೊಂದಿರುವ ಮಲೇಶ್ಯಾ ವಿರುದ್ಧ ಮಹಿಳಾ ತಂಡ ೨-೦ಯ ಗೆಲುವು ಸಾಧಿಸಿ ಸೆಮೀಸ್‌ಗೆ ಪ್ರವೇಶಿಸಿದರೆ ಪುರುಷರ ತಂಡವು ಜಪಾನ್ ವಿರುದ್ಧ ೩-೦ಯ ಭರ್ಜರಿ ಗೆಲುವನ್ನು ದಾಖಲಿಸಿ ಮುನ್ನಡೆ ಪಡೆದುಕೊಂಡಿತು. ಸೆಮೀಸ್‌ನಲ್ಲಿ ಮಹಿಳಾ ತಂಡ ಐದನೇ ಶ್ರೇಯಾಂಕದ ಕೊರಿಯಾ ವಿರುದ್ಧ ಸೆಣೆಸಾಡಲಿದ್ದರೆ ಮಲೇಶ್ಯಾ ವಿರುದ್ಧ ಹಾಂಕ್‌ಕಾಂಗ್ ಕಾದಾಡಲಿದೆ. ಅತ್ತ ಪುರುಷರ ವಿಭಾಗದ ಸೆಮೀಸ್‌ನಲ್ಲಿ ಭಾರತೀಯ ತಂಡವು ಆತಿಥೇಯ ಕುವೈಟ್ ವಿರುದ್ಧ ಹೋರಾಟ ನಡೆಸಲಿದೆ.
ಮಹಿಳಾ ತಂಡದ ಕರ್ನಾಟಕ ಮೂಲದ ಜೋಶ್ನಾ ಚಿನ್ನಪ್ಪ ತನ್ನ ಮೊದಲ ಪಂದ್ಯವನ್ನು ಕಳಕೊಂಡರೂ ನಂತರದೆರಡು ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ತಂಡಕ್ಕೆ ನೆರವಾಗಿದ್ದರು.
ದೀಪಿಕಾ ಪಳ್ಳಿಕಲ್ ಹಾಗೂ ಅನಕಾ ಜಯ ಸಾಧಿಸಿದ ಇಬ್ಬರು ಇತರೆ ಆಟಗಾರ್ತಿಯರು. ಪುರುಷ ತಂಡದಲ್ಲಿ ಸೌರವ್ ಘೋಷ್, ಸಿದ್ದಾರ್ಥ್ ಸುಚ್ದೆ ಹಾಗೂ ಹರಿಂದರ್ ಪಾಲ್ ಸಿಂಗ್ ಸಾದು ತಮ್ಮ ಪಂದ್ಯ ಗಳನ್ನು ಗೆದ್ದುಕೊಂಡಿದ್ದರು.

ಹಾಕಿ: ಭಾರತಕ್ಕೆ ಸತತ ಎರಡನೇ ಸೋಲು

Posted by JAYAKIRANA Kirana on | 0 comments | Leave a comment...


ಲಂಡನ್: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಪರೀಕ್ಷಾ ಟೂರ್ನಿಯಲ್ಲಿ ಭಾರತ ಸತತ ಎರಡನೇ ಬಾರಿಗೆ ಸೋಲುಂಡ ತೀವ್ರ ಮುಖಭಂಗ ಕಂಡಿದೆ. ಇಂಗ್ಲೆಂಡ್ ವಿರುದ್ಧ ನಡೆದ ತನ್ನ ಎರಡನೇ ಪಂದ್ಯದಲ್ಲಿ ಭಾರತ ೨-೪ರ ಅಂತರದ ಸೋಲನ್ನು ಕಾಣುವ ಮೂಲಕ ನಿರಾಶೆ ಮೂಡಿಸಿತು. ವಿಶ್ವಚಾಂಪಿಯನ್ ಆಸೀಸ್ ವಿರುದ್ಧದ ಟೂರ್ನಿಯ ಪ್ರಥಮ ಪಂದ್ಯದಲ್ಲಿ ಭಾರತ ೩-೦ ಅಂತರದಲ್ಲಿ ಸೋತಿತ್ತು. ಪ್ರಥಮಾರ್ಧದ ಮೊದಲ ೧೧ ನಿಮಿಷಗಳ ಅವಧಿಯಲ್ಲೇ ಭಾರತ ಆಘಾತ ಕಂಡಿತ್ತು. ಈ ವೇಳೆ ಬ್ರಿಟನ್ ಸ್ಟ್ರೈಕರ್‌ಗಳಾದ ರಾಬ್ ಮೂರೆ ಹಾಗೂ ಸೈಮನ್ ಮಾಂಟೆಲ್ ತಲಾ ಒಂದೊಂದು ಗೋಲು ದಾಖಲಿಸಿದ್ದು, ಭಾರತಕ್ಕೆ ನುಂಗಲಾರದ ತುತ್ತಾಯಿತು. ಆದರೆ ಭಾರತದ ವಿ.ಆರ್. ರಘುನಾಥ್ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಮೂಲಕ ಮೊಲದ ಗೋಲು ತಂದರು. ಆದರೆ ಬ್ರಿಟನ್‌ನ ಆಶ್ಲೆ ಜ್ಯಾಕ್ಸನ್ ಮೂರು ನಿಮಿಷಗಳ ಅವಧಿಯಲ್ಲಿ ಎರಡು ಗೋಲು ದಾಖಲಿಸುವ ಮೂಲಕ ಭಾರತಕ್ಕೆ ಮರ್ಮಾಘಾತ ನೀಡಿದರು. ಸಂದೀಪ್ ಸಿಂಗ್ ಅಂತಿಮ ಹಂತದಲ್ಲಿ ದಾಖಲಿಸಿದ ಗೋಲು ಭಾರತದ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಜರ್ಮನಿ ವಿರುದ್ಧ ಕಾದಾಡಲಿದೆ.

ಎಸ್ಟೊರಿಲ್ ಓಪನ್: ಸೆಮೀಸ್‌ನಲ್ಲೇ ಮುಗ್ಗರಿಸಿದ ಸಾನಿಯಾ ಜೋಡಿ

Posted by JAYAKIRANA Kirana on | 0 comments | Leave a comment...

ಎಸ್ಟೊರಿಲ್ (ಪೊರ್ಚುಗಲ್): ಇಲ್ಲಿ ನಡೆಯುತ್ತಿರುವ ಎಸ್ಟೊರಿಲ್ ಓಪನ್ ಟೂರ್ನಿಯ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಹಾಗೂ ಅನಸ್ತೇಸಿಯಾ ರೊಡ್ವಿನೊವಾ ಜೋಡಿ ಆಘಾತ ಕಂಡಿದೆ. ಮಹಿಳಾ ಸೆಮೀಸ್‌ನಲ್ಲಿ ನೇರ ಅಂತರದ ಸೋಲನ್ನು ಕಾಣುವ ಮೂಲಕ ಇಂಡೋ-ಆಸೀಸ್ ಜೋಡಿಯ ಫೈನಲ್ ಆಸೆ ನುಚ್ಚುನೂರಾಗಿದೆ. ಕಜಕಿಸ್ತಾನದ ಯೆರೊಸ್ಲೊವಾ ಶ್ವೆಡೊವಾ ಹಾಗೂ ಗ್ಯಾಲಿನೊ ವೊಸ್ಕೊಬೊ ವಿರುದ್ಧ ೬-೩ ಹಾಗೂ ೭-೬ರ ನೇರ ಅಂತರದಲ್ಲಿ ಸೋಲನ್ನು ಕಂಡು ಇಂಡೋ-ಆಸೀಸ್ ಜೋಡಿ ಕೂಟದಿಂದ ಹೊರಬಿದ್ದರು. ಸಾನಿಯಾ-ರೊಡ್ವಿನೊವಾ ಜೋಡಿ ಎಂಟು ಬ್ರೇಕ್‌ಪಾಯಿಂಟ್‌ಗಳ ಪೈಕಿ ಐದನ್ನು ಉಳಿಸಿಕೊಂಡಿದ್ದರು. ಮೊದಲ ಸುತ್ತಿನಲ್ಲಿ ಹೀನಾಯ ಸೋಲುಂಡ ನಂತರ ದ್ವಿತೀಯ ಸುತ್ತಿನಲ್ಲಿ ಇಂಡೋ-ಆಸೀಸ್ ಜೋಡಿ ಎದುರಾಳಿಗೆ ಕಠಿಣ ಹೋರಾಟ ನೀಡಿತು. ಆದರೂ ಪಂದ್ಯವನ್ನು ಉಳಿಸಿಕೊಳ್ಳುವಲ್ಲಿ ಜೋಡಿ ವಿಫಲವಾಯಿತು.

ಶಿಬಿರಕ್ಕೆಂದು ತೆರಳಿದ್ದ ಯುವತಿ ನಿಗೂಢ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳೆದ ೨೫ ದಿನಗಳ ಹಿಂದೆ ಉದ್ಯೋಗದ ನಿಮಿತ್ತ ನಡೆಯುತ್ತಿದ್ದ ಶಿಬಿರಕ್ಕೆಂದು ತೆರಳಿದ್ದ ಉಳ್ಳಾಲ ಮೇಲಂಗಡಿಯ ಯುವತಿ ಯೋರ್ವಳು ನಾಪತ್ತೆಯಾಗಿದ್ದು ಅನುಮಾನಗಳಿಗೆ ಕಾರಣವಾಗಿದೆ.
ಜೆನೆಟ್ ಮೊಂತೆರೋ(೨೧) ಎಂಬವಳೇ ನಾಪತ್ತೆಯಾದವಳು. ಈಕೆ ಎ.೧೦ರಂದು ಉದ್ಯೋಗದ ನಿಮಿತ್ತ ಅತ್ತಾವರದಲ್ಲಿ ನಡೆಯುತ್ತಿದ್ದ ಏಳು ದಿನಗಳ ಶಿಬಿರಕ್ಕೆಂದು ಹೋಗಿದ್ದು ಆ ವೇಳೆ ಪುಸ್ತಕ ಹಾಗೂ ಉಡುಪುಗಳನ್ನೂ ಕೊಂಡೊಯ್ದಿದ್ದಳು.
ಎ.೧೭ ರಂದು ತಾಯಿ ಕ್ಲೇರ ಡಿ’ಸೋಜ ಅವರಿಗೆ ಮೊಬೈಲ್‌ನಲ್ಲಿ ಕರೆ ಮಾಡಿದ್ದ ಆಕೆ ಮನೆಗೆ ವಾಪಸ್ ಬರುತ್ತಿದ್ದೇನೆ ಎಂದು ತಿಳಿಸಿದ್ದಳು. ಮತ್ತೆ ಸ್ವಲ್ಪ ಸಮಯದ ಬಳಿಕ ತಂದೆಯ ಮೊಬೈಲ್‌ಗೆ ಮೆಸೇಜ್ ಕಳುಹಿಸಿ ತಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದಾಗಿ ತಿಳಿಸಿದ್ದಳು.
ಎ..೨೨ರಂದು ಚಿಕ್ಕಪ್ಪ ಪೀಟರ್ ಡಿ’ಸೋಜ ಅವರಿಗೆ ಕರೆ ಮಾಡಿ ತಾನು ಮನೆಗೆ ಬರುತ್ತಿದ್ದು ಈಗ ಉಡುಪಿಯಲ್ಲಿರುವುದಾಗಿ ತಿಳಿಸಿದ್ದಳು. ಇದಾದ ಬಳಿಕ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಆಕೆ ಮನೆಗೆ ಬಾರದೇ ಸಂಬಂಧಿಕರಲ್ಲಿಗೂ ಹೋಗದೆ ನಾಪತ್ತೆಯಾಗಿರುವುದಾಗಿ ಆಕೆಯ ತಾಯಿ ಕ್ಲಾರಾ ಡಿ’ಸೋಜ ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮಾವನಿಗೆ ಹಲ್ಲೆಗೈದ ಅಳಿಯ ನ್ಯಾಯಾಂಗ ಬಂಧನದಲ್ಲಿ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಇಲ್ಲಿಗೆ ಸಮೀಪದ ಮಿಯ್ಯಾರ್ ಎಂಬಲ್ಲಿ ಮಾವ ನನ್ನು ಹಿಗ್ಗಾ ಮುಗ್ಗಾ ಥಳಿಸಿ ಚರಂಡಿಯೊಂದರಲ್ಲಿ ಎಸೆದ ಹೋದ ಪ್ರಕರಣದ ಆರೋಪಿಯನ್ನು ನಗರ ಠಾಣಾ ಪೊಲೀಸರು ಬಂಧಿಸಿ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿ ಮಣಿ ಎಂಬಾತನಾಗಿದ್ದು, ಬುಧವಾರ ರಾತ್ರಿ ತನ್ನ ರೂಮಿನಲ್ಲಿ ಮಲಗಿದ್ದ ದೂರದ ಸಂಬಂಧಿಯಲ್ಲಿ ಮಾವನಾಗಿರುವ ಪರ್ಕಳದ ದೇವು ಎಂಬವರೊಂದಿಗೆ ಜಗಳಕ್ಕೆ ಮುಂದಾಗಿ ರಾಡ್‌ನಿಂದ ಹಿಗ್ಗಾಮುಗ್ಗಾ ಥಳಿಸಿದನೆಂದು ತಿಳಿದುಬಂದಿದೆ. ಪರಿಣಾಮವಾಗಿ ದೇವುವಿನ ಕಾಲಿನ ಮೂಳೆ ಮುರಿತಕ್ಕೊಳಗಾಗಿತ್ತು. ಕೋಮಾಸ್ಥಿತಿಯಲ್ಲಿ ಅವರನ್ನು ರಿಕ್ಷಾವೊಂದರಲ್ಲಿ ಕರೆದೊಯ್ಯು ಚರಂಡಿಯಲ್ಲಿ ಎಸೆದುಬಂದಿದ್ದ. ಪ್ರಕರಣದ ಸತ್ಯಾಂಶ ಹೊರಬಿದ್ದಾಗ ಮಣಿ ಆರೋಪಿ ಎಂದು ತಿಳಿದುಬಂದಿರುವುದರಿಂದ ಪೊಲೀಸರು ಆತನನ್ನು ಬಂಧಿಸಿದ್ದರು. ಬಂಧಿತ ಆರೋಪಿಗೆ ಕಾರ್ಕಳ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಕ್ರಿಕೆಟ್ ಬೆಟ್ಟಿಂಗ್: ಬಿಜೆಪಿ ಮುಖಂಡ ಪೊಲೀಸ್ ಬಲೆಗೆ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಐಪಿಎಲ್ ಕ್ರಿಕೆಟ್ ಮ್ಯಾಚ್ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಬಿಜೆಪಿ ಯುವ ಮುಖಂಡ ಸಹಿತ ಮೂವರನ್ನು ಕಾರ್ಕಳ ಡಿವೈಎಸ್ಪಿ ಜಯಂತ್ ಶೆಟ್ಟಿ ನೇತೃತ್ವದ ವಿಶೇಷ ಪತ್ತೆದಳ ನಿನ್ನೆ ರಾತ್ರಿ ಬಂಧಿಸಿದೆ. ಕಾರ್ಕಳದ ಬಸ್‌ಸ್ಟ್ಯಾಂಡ್ ಸಮೀಪ ನಿನ್ನೆ ರಾತ್ರಿ ಸರಿಸುಮಾರು ೧೦.೩೦ರ ಹೊತ್ತಿಗೆ ದಾಳಿ ನಡೆಸಿದ ಪೊಲೀಸರು ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ದಯಾನಂದ ಹೆಗ್ಡೆ ಸಹಿತ ಮೂವರನ್ನು ಬಂಧಿಸಿದೆ. ಬಂಧಿತರಲ್ಲಿ ರೋನಿ ಡಿ’ಸಿಲ್ವ ಮತ್ತು ಸುಜಿತ್ ಸಫಲಿಗ ಸೇರಿದ್ದಾರೆ. ಇದರಲ್ಲಿ ರೋನಿ ಡಿ’ಸಿಲ್ವ ಈ ಹಿಂದೆಯೂ ಬೆಟ್ಟಿಂಗ್ ನಡೆಸಿ ಪೊಲೀಸರ ಅತಿಥಿಯಾಗಿದ್ದ ಎಂದು ತಿಳಿದುಬಂದಿದೆ. ಆರೋಪಿಗಳು ದಯಾನಂದ ಹೆಗ್ಡೆಯ ಅಂಗಡಿಯಲ್ಲಿ ಕೂತು ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಕೆಲವು ದಿನಗಳಿಂದ ನಡೆಯುತ್ತಿದ್ದ ಈ ದಂಧೆಯಲ್ಲಿ ಕಾರ್ಕಳದ ಪ್ರತಿಷ್ಠಿತರೂ ಹಣ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ನಡೆದ ಕಾರ‍್ಯಾಚರಣೆಯಲ್ಲಿ ಆರೋಪಿಗಳಿಂದ ೫೦ಸಾವಿರ ನಗರು, ನಾಲ್ಕು ಮೊಬೈಲ್ ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ, ಪುತ್ರಿ ನಿಗೂಢ ನಾಪತ್ತೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಪತಿಯ ಮನೆ ಗೆಂದು ಹೇಳಿ ತವರು ಮನೆಯಿಂದ ತೆರಳಿದ ಮಹಿಳೆ ಹಾಗೂ ಮಗು ನಾಪತ್ತೆಯಾಗಿದ್ದಾರೆ. ಹೊಸಂಗಡಿ ಮುಗರುವಿನ ಆಯಿಷಾ (೩೧) ಹಾಗೂ ಪುತ್ರಿ ಆಮಿನಾ ಫಿರ್ದೊ (ನಾಲ್ಕೂವರೆ) ನಿಗೂಢ ಕಣ್ಮರೆಯಾದವರು.
ಆಯಿಷಾರು ತೆಂಕಣ ಕೇರಳದ ಎರ್ನಾಕುಳಂ ನಿವಾಸಿ ಅಶ್ರಫ್ ಎಂಬ ವರ ಪತ್ನಿಯಾಗಿದ್ದಾರೆ. ಕಳೆದ ಎ. ೩೦ರಂದು ಪತಿ ಮನೆಗೆಂದು ಹೇಳಿ ಮಗಳನ್ನೂ ಕೂಡಿಕೊಂಡು
ಆದರೆ, ಎರಡು ದಿನಗಳ ಬಳಿಕ ಪತಿ ಮನೆಗೆ ಫೋನಾಯಿಸಿದಾಗ ಇವರು ಅಲ್ಲಿಗೆ ತಲುಪಲಿಲ್ಲವೆಂಬ ವಿಷಯ ತಿಳಿಯಲಾಯಿತು. ಪುತ್ರಿ ಹಾಗೂ ಮೊಮ್ಮಗಳ ಕಣ್ಮರೆ ಬಗ್ಗೆ ಆಯಿಷಾಳ ತಂದೆ ಹೊಸಂಗಡಿಯ ಮುಹಮ್ಮದರು ಮಂಜೇಶ್ವರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.ತೆರಳಿದ್ದರು.

ಗೇರು ಬೀಜ ಕಳವು: ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ತಾಲೂ ಕಿನ ಕೊಳ್ತಿಗೆ ಗ್ರಾಮದ ಬಾಯಂಬಾಡಿ ಎಂಬಲ್ಲಿನ ಗೇರು ನಡುತೋಪಿನಿಂದ ಗೇರು ಬೀಜ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿ ದ್ದಾರೆ.
ಕೊಳ್ತಿಗೆ ಗ್ರಾಮದ ಅರೆಕ್ಕಿಲ ನಿವಾಸಿ ಬಾಬು ಗೌಡ ಎಂಬವರ ಪುತ್ರ ಹರೀಶ್ ಯಾನೆ ಹರಿಶ್ಚಂದ್ರ(೧೯) ಬಂಧಿತ ಆರೋಪಿ. ಈತನಿಂದ ಕೃತ್ಯಕ್ಕೆ ಬಳಸಲಾದ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಹರೀಶ್ ಇನ್ನೂ ಹಲವು ಸಣ್ಣಪುಟ್ಟ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿರುವುದಾಗಿ ತಿಳಿದು ಬಂದಿದೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಗೇರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸರು ಈ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಭೂ ನಕ್ಷೆಗೆ ಲಂಚ: ಆರೋಪಿಗಳಿಗೆ ಸಜೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳೆದ ೨೦೦೭ರಲ್ಲಿ ಭೂ ನಕ್ಷೆ ತಯಾರಿಸಲು ವ್ಯಕ್ತಿಯೊಬ್ಬರಿಂದ ಲಂಚ ಪಡೆದು ಲೋಕಾಯುಕ್ತ ಪೊಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಭೂಮಾಪಕ ಮತ್ತು ಸರ್ವೇ ಸೂಪರ್‌ವೈಸರ್‌ಗೆ ಉಡುಪಿ ನ್ಯಾಯಾಲಯ ಒಂದು ವರ್ಷ ಸಜೆ ಮತ್ತು ದಂಡ ವಿಧಿಸಿದೆ. ಪರವಾನಿಗೆ ಭೂಮಾಪಕ ಉದಯ ಕೆ.ಹೆಚ್. ಅವರಿಗೆ ಒಂದು ವರ್ಷ ಸಜೆ ಹಾಗೂ ಆರು ಸಾವಿರ ರೂ. ದಂಡ ಹಾಗೂ ಸರ್ವೇ ಸೂಪರ್‌ವೈಸರ್‌ಗೆ ಒಂದು ವರ್ಷ ಸಜೆ ಹಾಗೂ ಎರಡು ಸಾವಿರ ರೂ. ದಂಡ ವಿಧಿಸಲಾಗಿದೆ. ಕುಂದಾಪುರ ಸಮೀಪದ ವಡೇರಹೋಬಳಿ ನಿವಾಸಿ ರಾಘವೇಂದ್ರ ಶೆಟ್ಟಿಗಾರ್ ತಮ್ಮ ಜಾಗದ ನಕ್ಷೆ ತಯಾರಿಸಲು ೨೦೦೭ರ ಫೆಬ್ರವರಿಯಲ್ಲಿ ಭೂಮಾಪಕರಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ಎರಡು ಸಾವಿರ ಲಂಚ ಕೇಳಿದ್ದ ಬಗ್ಗೆ ಲೋಕಾಯುಕ್ತಕ್ಕೆ ದೂರಲಾಗಿತ್ತು.
ಚೆಕ್ ಕೊಟ್ಟು ವಂಚನೆ: ದೂರು: ಸಾಲದ ರೂಪದಲ್ಲಿ ಪಡೆದ ೨೦ ಲಕ್ಷ ರೂ.ಗೆ ಬದಲಾಗಿ ಚೆಕ್ ನೀಡಿ ತಮ್ಮನ್ನು ವಂಚಿಸಿದ್ದಾರೆ ಎಂದು ಅಜ್ಜರಕಾಡು ನಿವಾಸಿ ಕಿಶನ್‌ಕುಮಾರ್ ಹೆಗ್ಡೆ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ. ಶಿರಿಯಾರ ನಿವಾಸಿ ಮುದ್ದಣ್ಣ ಶೆಟ್ಟಿ ಹಾಗೂ ನಿತ್ಯಾನಂದ ಶೆಟ್ಟಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಆರೋಪಿಗಳು ಆರು ತಿಂಗಳಲ್ಲಿ ವಾಪಸ್ ನೀಡುವುದಾಗಿ ೨೦ ಲಕ್ಷ ರೂ. ಪಡೆದುಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಎ.೧೧ರಂದು ಚೆಕ್ ನೀಡಿದ್ದರು. ಇದು ಬೌನ್ಸ್ ಆಗಿತ್ತು. ಬಳಿಕ ಅದೇ ಚೆಕ್ ನಿತ್ಯಾನಂದ ಶೆಟ್ಟಿ ಖಾತೆಗೆ ಸೇರಿದ್ದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.

ಅಕ್ರಮ ಮರ ಸಾಗಾಟ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಅಕ್ರಮ ಮರ ಸಾಗಾಟವನ್ನು ಪತ್ತೆಹಚ್ಚಿದ ಪುಂಜಾಲಕಟ್ಟೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಲಾರಿ ಚಾಲಕ ಮಾಲಾಡಿ ನಿವಾಸಿ ಹರೀಶ್ ಎಂದು ಹೆಸರಿಸಲಾಗಿದೆ. ಪುಂಜಾಲಕಟ್ಟೆ ಠಾಣಾ ಎಸ್.ಐ. ಮಾಧವ ಕೂಡ್ಲು ಮತ್ತು ಸಿಬ್ಬಂದಿ ವಾಹನ ತಪಾಸಣೆ ನಿರತ ಸಂದರ್ಭ ಬೆಳ್ತಂಗಡಿ ಕಡೆಯಿಂದ ಮರದ ದಿಮ್ಮಿಗಳನ್ನು ಹೇರಿಕೊಂಡು ಬಂದ ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದ್ದು, ಲಾರಿ ಚಾಲಕ ಪೊಲೀ ಸರ ಸೂಚನೆಯನ್ನು ಧಿಕ್ಕರಿಸಿ ಮುಂದಕ್ಕೆ ಚಲಿಸಿದಾಗ ಪೊಲೀಸರು ಲಾರಿಯನ್ನು ಬೆನ್ನಟ್ಟಿ ಆರೋಗ್ಯ ಕೇಂದ್ರದ ಬಳಿ ತಡೆದು ಲಾರಿ ಚಾಲಕ ನನ್ನು ಲಾರಿ ಮತ್ತು ಮರದ ದಿಮ್ಮಿಗಳ ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

ಸರ್ಕಸ್‌ನ ಜೋಕರ್‌ಗೇ ಟಿಕೆಟ್ ಕೇಳಿ ಇಕ್ಕಿಸಿಕೊಂಡ ಕಲೆಕ್ಟರ್!

Posted by JAYAKIRANA Kirana on | 0 comments | Leave a comment...

ಮಣಿಪಾಲ: ಉಡುಪಿ ಕಲ್ಸಂಕದಲ್ಲಿ ನಿನ್ನೆಯಷ್ಟೇ ಉದ್ಘಾಟನೆಗೊಂಡ ಜಂಬೋ ಸರ್ಕಸ್‌ನಲ್ಲಿ ಕಲೆಕ್ಟರ್ ಓರ್ವ ತನ್ನ ದುರ್ವರ್ತನೆಯಿಂದ ಸರ್ಕಸ್ ವ್ಯವಸ್ಥಾಪಕನಿಂದ ಇಕ್ಕಿಸಿಕೊಂಡು ಸ್ಥಳ ಖಾಲಿ ಮಾಡಿರುವ ಪ್ರಸಂಗ ಜರಗಿದೆ.
ಸರ್ಕಸ್ ಟೆಂಟಿನೊಳಗೆ ಪ್ರವೇಶಿಸುತ್ತಿದ್ದ ಸರ್ಕಸ್‌ನ ಜೋಕರ್ ಬಳಿ ಗೇಟ್ ಕಲೆಕ್ಟರ್ ಟಿಕೆಟ್ ಕೇಳಿದ್ದಾನೆ. ತಾನು ಜೋಕರ್ ಎಂದು ಗೊತ್ತಿದ್ದರೂ ಟಿಕೆಟ್ ಕೊಡದೇ ಒಳಬಿಡಲು ಕೇಳದ ಕಲೆಕ್ಟರ್ ಜತೆ ಗಲಾಟೆ ನಡೆಸಿದ ಬಳಿಕ ಒಳಹೊಕ್ಕಿದ್ದಾನೆ. ನಂತರ ವ್ಯವಸ್ಥಾಪಕನಲ್ಲಿ ಕಲೆಕ್ಟರ್ ವಿರುದ್ಧ ಜೋಕರ್ ದೂರು ನೀಡಿದರು. ಆಕ್ರೋಶಗೊಂಡ ವ್ಯವಸ್ಥಾಪಕ ನೇರ ಕಲೆಕ್ಟರ್ ಬಳಿ ಆಗಮಿಸಿ ಎರಡೇಟು ಹೊಡೆದು ಆತನನ್ನು ಅಲ್ಲಿಂದಲೇ ಓಡಿಸಿದ ಪ್ರಸಂಗವೂ ನಡೆಯಿತು. ಒಟ್ಟಿನಲ್ಲಿ ಸರ್ಕಸ್‌ನ ಪ್ರಥಮ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಚಾತುರ‍್ಯವೇ ನಡೆದುಹೋಯಿತು.

ಸರಣಿ ಕಳ್ಳತನ: ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಪ್ರದೇಶದ ಸರಣಿ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯನ್ನು ವಿಟ್ಲ ಪೊಲೀಸರು ಬುಧವಾರ ರಾತ್ರಿ ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ಬಂಧಿಸಿದ್ದಾರೆ.
ಉಡುಪಿ ಮೂಲದ ಪಡುಬಿದ್ರೆ ನಿವಾಸಿ ಸಂಜೀವ ಮುಖಾರಿ(೫೦) ಬಂಧಿತ ಆರೋಪಿ. ಈತ ಬುಧವಾರ ರಾತ್ರಿ ಮಾಣಿ ಸಮೀಪದ ಸೂರಿಕುಮೇರು ಪ್ರದೇಶದಲ್ಲಿ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದುಕೊಂಡು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ. ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣಾಧಿಕಾರಿ ರಕ್ಷಿತ್ ಎ.ಕೆ ಹಾಗೂ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ. ಈತನ ಮೇಲೆ ೧೯೮೧ರಲ್ಲಿ ೨೭ ಪ್ರಕರಣ ಗಳಲ್ಲಿ ವಿವಿಧ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಪುತ್ತೂರಿನ ಜೈಲಿನಿಂದ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಮಾಣಿ ಪರಿಸರದ ರಾಜೇಶ್ ಅವರ ಅಂಗಡಿಯಿಂದ ಒಂದು ಮೊಬೈಲ್ ಸೆಟ್ ಹಾಗೂ ನಗದನ್ನು ಕಳವು ಮಾಡಿದ್ದ. ಈ ಬಗ್ಗೆ ರಾಜೇಶ್ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಮಾಣಿ ಪ್ರದೇಶದ ಕೆಲ ಅಂಗಡಿಗಳಿಗೆ ನುಗ್ಗಿ ಅಲ್ಲಿಯೂ ಕೂಡ ಕಳ್ಳತನಕ್ಕೆ ಯತ್ನಿಸಿದ್ದ. ಇನ್ನೂ ಕೆಲ ಅಂಗಡಿಗಳಿಗೆ ನುಗ್ಗಿ ಕೈಗೆ ಸಿಕ್ಕಿದ ಚಿಲ್ಲರೆ ಸ್ವತ್ತುಗಳನ್ನು ಕಳವುಗೈದಿದ್ದ ಎನ್ನಲಾಗಿದೆ. ಇತ್ತೀಚಿಗೆ ನಡೆದಂತಹ ಹಲವು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿದುಬಂದಿದೆ. ಮಾಣಿ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಟ್ಲ ಠಾಣಾಧಿಕಾರಿ ರಕ್ಷಿತ್ ಎ.ಕೆ ಅವರು ಕೇವಲ ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಯನ್ನು ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಾರಾಯಿ-ಕಾರು ವಶಕ್ಕೆ: ಆರೋಪಿಗಳು ಪರಾರಿ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಮಾರುತಿ ಜೆನ್ ಕಾರಿನಲ್ಲಿ ಸಾಗಿಸುತ್ತಿದ್ದ ೨೧೦೦ ಪ್ಯಾಕೆಟ್ ವಿದೇಶಿ ಮದ್ಯ ಸಹಿತ ಕಾರನ್ನು ವಶಪಡಿ ಸಲಾಗಿದೆ. ಆರೋಪಿಗಳಿಬ್ಬರು ಓಡಿ ಪರಾರಿಯಾಗಿದ್ದಾರೆ. ಕುಂಬಳೆ ಠಾಣಾಧಿ ಕಾರಿ ಪಿ. ನಾರಾಯಣನ್ ನೇತೃತ್ವದಲ್ಲಿ ನಿನ್ನೆ ಬೆಳಿಗ್ಗೆ ಕುಂಬಳೆ ಸಮೀಪ ಆರಿ ಕ್ಕಾಡಿ ರಾ. ಹೆದ್ದಾರಿಯಲ್ಲಿ ಕಾರ್ಯಾ ಚರಣೆ ನಡೆಸಲಾಗಿದೆ.
ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಮಂಗಳೂರು ಕಡೆ ಯಿಂದ ಬಂದ ಕೆ.ಎ. ೨೦-ಎಂ. ೯೯೮೮ ನಂಬ್ರದ ಕಾರನ್ನು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೆ ಪರಾರಿಯಾಯಿತು. ಪೊಲೀಸರು ಬೆನ್ನಟ್ಟಿದಾಗ ಕಾರನ್ನು ರಸ್ತೆ ಬದಿ ಬಿಟ್ಟು ಕಾರಿನಲ್ಲಿದ್ದವರು ಪರಾರಿಯಾಗಿದ್ದರು. ಕಾರನ್ನು ತಪಾಸಣೆ ನಡೆಸಿದಾಗ ಹಿಂಬದಿಯ ಸೀಟಿನಡಿಯಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ತುಂಬಿಸಿದ ಸ್ಥಿತಿಯಲ್ಲಿ ಶರಾಬು ಪ್ಯಾಕೆಟ್‌ಗಳಿದ್ದುವು. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಆಸ್ಪತ್ರೆ ಕಟ್ಟಡದಿಂದ ಬಿದ್ದು ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಆಸ್ಪತ್ರೆಗೆ ದಾಖ ಲಾಗಿದ್ದ ಪತ್ನಿಯನ್ನು ಕಾಣಲು ಬಂದಿದ್ದ ವ್ಯಕ್ತಿ ಆಸ್ಪತ್ರೆ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ನಿನ್ನೆ ಎಜೆ ಆಸ್ಪತ್ರೆಯಲ್ಲಿ ನಡೆದಿದೆ. ಮೂಲ್ಕಿ ಲಿಂಗಪ್ಪಯ್ಯಕಾಡು ನಿವಾಸಿ, ಬಾಗಲಕೋಟೆ ಮೂಲದ ವಿಠ್ಠಲ (೩೫) ಎಂಬವರೇ ಮೃತ ವ್ಯಕ್ತಿ.

ಮಹಿಳೆ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆರಿಯಾದಲ್ಲಿ ಗುರುವಾರ ನಡೆದಿದೆ.
ಇಲ್ಲಿನ ಗಂಡಿಬಾಗಿಲು ಕೆನಪಲ್ಲಿ ಮನೆಯ ಎಲ್ಸಿ ಎಂಬವರ ಸೊಸೆ ರೀನಾ ಯಾನೆ ಮರಿಯಮ್ಮ(೨೦) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಇವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು ತಮಿಳುನಾಡಿನಲ್ಲಿರುವ ತನ್ನ ತವರು ಮನೆಗೆ ಹೋಗುವ ಹಂಬಲ ವ್ಯಕ್ತಪಡಿಸಿ ದ್ದರು. ಆದರೆ ಕರೆದುಕೊಂಡು ಹೋಗಲು ತವರು ಮನೆಯವರು ಬಾರದೇ ಇರುವುದರಿಂದ ನೊಂದು ಯಾವುದೋ ಕೀಟನಾಶಕ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಬೆಳ್ತಂ ಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

೧೫ ಲಕ್ಷ ರೂ. ವಂಚನೆ: ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಹೂಡಿದ ಹಣ ವನ್ನು ದ್ವಿಗುಣಗೊಳಿಸುವುದಾಗಿ ೧೫ ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣದ ದೂರು ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಆಂಟೋನಿ ಮ್ಯಾನಿವೆಲ್ ಪಿಂಟೊ ವಂಚನೆ ಮಾಡಿದವರು. ಲೇಡಿಹಿಲ್ ಪೇರಿ ರಸ್ತೆ ನಿವಾಸಿ ಸ್ಟಾನಿ ಫಿಲೋಮಿನಾ ಡಿಸೋಜಾರವರು ವಂಚನೆಗೊಳಗಾ ದವರು ಎಂದು ದೂರಿನಲ್ಲಿ ತಿಳಿಸಲಾ ಗಿದೆ.
ನ್ಯಾನೋ ಫಾರೆಕ್ಸ್ ಎಂಬ ಅಂತಾರಾಷ್ಟ್ರೀಯ ಕಂಪೆನಿಯಲ್ಲಿ ಹಣ ತೊಡಗಿಸಿದರೆ ಮೂರು ತಿಂಗಳುಗಳಲ್ಲಿ ದ್ವಿಗುಣವಾಗುತ್ತದೆ ಎಂದು ಆಂಟೋನಿ ಭರವಸೆ ನೀಡಿದ್ದರೆನ್ನಲಾಗಿದೆ.
ಅದರಂತೆ ಸ್ಟಾನಿ ಫಿಲೋಮಿನಾ ಡಿಸೋಜಾರವರು ೨೦೧೦ರ ನವೆಂಬರ್ ನಿಂದ ೨೦೧೧ರ ಫೆಬ್ರವರಿ ಯವರೆಗೆ ಬೇರೆ ಬೇರೆ ದಿನಗಳಲ್ಲಿ ಆಂಟೋನಿ ರವರ ಕೆನರಾ ಬ್ಯಾಂಕ್ ಹಾಗೂ ಸೌತ್ ಇಂಡಿಯನ್ ಬ್ಯಾಂಕ್ ಗಳಲ್ಲಿರುವ ಖಾತೆಗಳಿಗೆ ೧೫ ಲಕ್ಷ ರೂ. ಜಮಾ ಮಾಡಿದ್ದರು.
ಈವರೆಗೆ ಮೂಲ ಧನವನ್ನೆ ಹಿಂದಿರುಗಿಸದೇ ವಂಚನೆ ಮಾಡಿದ್ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಉರ್ವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಜಾಗ ಮಾರಾಟ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಜಾಗ ಮಾಡಿ ಮೋಸ ಮಾಡಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕಾಶ್ ಶೆಟ್ಟಿ ದೂರು ನೀಡಿದವರು. ಇವರ ಸಂಬಂಧಿ ದಿನೇಶ್ ಶೆಟ್ಟಿ ಮೋಸ ಮಾಡಿದ್ದಾಗಿ ಆರೋಪಿಸಲಾಗಿದೆ.
ಕಿದಿಯೂರು ಗ್ರಾಮದ ದಿ.ಮೈರೆ ಶೆಡ್ತಿ ಅವರ ನಕಲಿ ವೀಲುನಾಮೆ ಹಾಗೂ ಮರಣಪತ್ರ ವನ್ನು ತಯಾರಿಸಿ ೪೪ ಸೆಂಟ್ಸ್, ೬೮ ಸೆಂಟ್ಸ್ ಹಾಗೂ ೨೨ ಸೆಂಟ್ಸ್ ಜಾಗವನ್ನು ಇಬ್ಬರಿಗೆ ಮಾರಾಟ ಮಾಡಿದ್ದಾಗಿ ದೂರಲಾಗಿದೆ.

ನಿಟ್ಟೂರು: ಸ್ಟೇಟ್‌ಹೋಂನಿಂದ ಮಹಿಳೆ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಉಡುಪಿ ಸಮೀಪದ ನಿಟ್ಟೂರು ಸ್ಟೇಟ್‌ಹೋಂನಿಂದ ಕಾರವಾರ ಮೂಲದ ಅಥಣಿಯ ಅಂಜಲಿ(೨೮) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
ಕೊಂಕಣಿ, ಮರಾಠಿ, ಕನ್ನಡ ಭಾಷೆ ಬಲ್ಲ ಈಕೆ ಬೆಳಗ್ಗೆ ಬಟ್ಟೆ ತೊಳೆಯಲೆಂದು ಹೊರಕ್ಕೆ ಹೋದ ಸಂದರ್ಭ ತಪ್ಪಿಸಿಕೊಂ ಡಿರುವುದಾಗಿ ಸ್ಟೇಟ್‌ಹೋಂ ಅಧೀಕ್ಷಕರು ದೂರಿದ್ದಾರೆ.

ಅಕ್ರಮ ಮರಳು ಸಾಗಾಟ: ಎರಡು ಲಾರಿಗಳ ವಶ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹರೇಕಳದಿಂದ ನಾಟೆಕಲ್ ಒಳರಸ್ತೆಯಾಗಿ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಕೆದುಂಬಾಡಿಯಲ್ಲಿ ಮಂಗಳೂರು ತಹಶೀಲ್ದಾರ್ ರವಿಚಂದ್ರ ನಾಯಕ್ ಅವರ ತಂಡ ವಶಕ್ಕೆ ತೆಗೆದುಕೊಂಡಿದೆ.
ಕೇರಳಕ್ಕೆ ಅಕ್ರಮ ಮರಳು ಸಾಗಾಟ ತಡೆಗೆ ಇಲಾಖೆ ಈಗಾಗಲೇ ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದು, ಲಾರಿಗಳಿಗೆ ಜೆಪಿಎಸ್ ಕಡ್ಡಾಯಗೊಳಿಸಿದೆ. ಆದರೂ ಯಮ ಉಲ್ಲಂಘಿಸಿದ ಲಾರಿ ಮಾಲೀಕರು ಮರಳು ಸಾಗಾಟ ಮುಂದುವರಿಸಿದ್ದಾರೆ. ಇದನ್ನು ತಡೆಯಲು ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಅಧಿಕಾರಿಗಳನ್ನು ಒಳಗೊಂಡ ತಂಡ ಮರಳು ಸಾಗಾಟ ಲಾರಿಯ ಮೇಲೆ ಕಟ್ಟುಟ್ಟಿನ ಕ್ರಮ ಕೈಗೊಂಡಿತ್ತು. ಅದರಂತೆಕೆಲವು ಲಾರಿಗಳನ್ನು ವಶಪಡಿಸಿಕೊಂಡು ದಂಡವನ್ನು ವಿಧಿಸಿ ಎಚ್ಚರಿಕೆ ನೀಡಿತ್ತು. ಆದರೂ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ನಿನ್ನೆ ಕೇರಳ ಗಡಿಭಾಗ ಕೆದುಂಬಾಡಿಯಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಹರೇಕಳದಿಂದ ಕೇರಳಕ್ಕೆ ನಾಟೆಕಲ್ ಒಳಮಾರ್ಗವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ದೂರು ದಾಖಲಿಸಿರುವ ಪೊಲೀಸರು ಪ್ರಕರಣದ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ನೀಡಿದ್ದಾರೆ.

ಚಾಕು ತೋರಿಸಿ ಸರ ಎಳೆದು ಪರಾರಿ

Posted by JAYAKIRANA Kirana on | 0 comments | Leave a comment...

ಬೆಳ್ತಂಗಡಿ: ದಂಪತಿಗೆ ಚಾಕು ಚೋರಿಸಿ ಚಿನ್ನದ ಸರ ಎಳೆದ ಘಟನೆ ಕುತ್ಲೂರು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಸನಿಹದ ಕುಕ್ಕುಜೆ ಕ್ರಾಸ್ ಎಂಬಲ್ಲಿ ಉಪ್ಪಿನಂಗಡಿಯಿಂದ ತನ್ನ ಮನೆಗೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ದಂಪತಿಯನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಚಾಕು ತೋರಿಸಿ ಗೃಹಿಣಿಯ ಕುತ್ತಿಗೆಯಲ್ಲಿದ್ದ ಚೈನನ್ನು ಅಪಹರಿಸಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರಪತಿ ಆಯ್ಕೆ ಬಗ್ಗೆ ಶೀಘ್ರವೇ ಒಮ್ಮತದ ನಿರ್ಧಾರ: ಆಸ್ಕರ್

Posted by JAYAKIRANA Kirana on | 0 comments | Leave a comment...


ಶಾಸಕ ವಸಂತ ಬಂಗೇರರು ಅನಾರೋಗ್ಯದಲ್ಲಿರುವ ಹಿನ್ನೆಲೆಯಲ್ಲಿ ಆಸ್ಕರ್ ಅವರು ಪತ್ನಿ ಬ್ಲೋಸಮ್ ಅವರ ಅಪೇಕ್ಷೆ ಮೆರೆಗೆ ಸುಖದುಃಖ ವಿಚಾರಿಸಿದಕ್ಕೋಸ್ಕರವೇ ಆಗಮಿಸಿದ್ದರು. ಪಕ್ಷದ ಕಾರ್ಯಕರ್ತರಿಗೆ ಆಸ್ಕರ್ ೧೦.೩೦ಕ್ಕೆ ಬರುತ್ತಾರೆಂದು ಸೂಚಿಸಲಾಗಿತ್ತು. ಆದರೆ ಮಾಜಿ ಸಚಿವರು ಶಾಸಕರ ಮನೆಗೆ ಬಂದಾಗ ೧೨.೫೫
ನನ್ನ ಕ್ಷೇತ್ರಕ್ಕೆ ಬಂದ ಎಲ್ಲಾ ಅನುದಾನಗಳನ್ನು ಯಡಿಯೂರಪ್ಪನವರು ಡೈವರ್ಟ್ ಮಾಡಿ ಬೇರೆಡೆಗೆ ಹಂಚಿದ್ದಾರೆ. ಇದರ ಬಗ್ಗೆ ನೀವು ಗಮನಹರಿಸಬೇಕು. ಅಲ್ಲದೆ ಕೇಂದ್ರದಲ್ಲಿನ ರಾಜ್ಯದ ಮಂತ್ರಿಗಳ ಬಗ್ಗೆ ನನಗೆ ಯಾವುದೇ ವಿಶ್ವಾಸವಿಲ್ಲ. ನನಗೆ ನಿಮ್ಮ ಮೇಲೆ ಮಾತ್ರ ವಿಶ್ವಾಸ. ಹೀಗಾಗಿ ತಾಲೂಕಿನ ಎಲ್ಲಾ ಕೆಲಸಗಳ ೧೦೦ ಕಾರ್ಯಕ್ರಮಗಳ ಪಟ್ಟಿ ನಿಮಗೆ ನೀಡುತ್ತೇನೆ. ಶೀಘ್ರವಾಗಿ ಮಾಡಿಕೊಡಬೇಕು ಎಂದು ಗರಂ ಆಗಿಯೇ ಶಾಸಕರು ಬೇಡಿಕೆ ಇಟ್ಟಾಗ ಆಸ್ಕರ್ ಅವರು ಸಮಾಧಾನವಾಗಿಯೇ ಶಾಸಕರ ಭಾವನೆಗಳನ್ನು ಅರ್ಥ ಮಾಡಿಕೊಂಡು ಆಶ್ವಾಸನೆ ನೀಡಿದರು. ಇದಕ್ಕೆ ಪ್ತತ್ಯುತ್ತರವಾಗಿ ಶಾಸಕರು ಮಾಜಿ ಸಚಿವರ ಕಾಲು ಹಿಡಿದು ಧನ್ಯವಾದ ಅರ್ಪಿಸಿದರು.
ಮಾಧ್ಯಮದವರೊಂದಿಗೆ ಸಂಭಾಷಿಸುವಾಗ ಹಣದುಬ್ಬರವ ವಿಚಾರದಲ್ಲಿ ಒಂದು ಹಂತದಲ್ಲಿ ಇಂದಿರಾಗಾಂಧಿಯವರ ೨೦ ಅಂಶದ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನವಾಗದೇ ಇರುವುದರಿಂದ ದೇಶದಲ್ಲಿ ಬಡವರಿಗೆ ಇವತ್ತೂ ಒಂದು ಹೊತ್ತು ಊಟ ಸಿಗುತ್ತದೆ ಎಂಬ ವಿಶ್ವಾಸವಿಲ್ಲ ಎಂದರು.
ಶಾಸಕರ ಆರೋಗ್ಯದ ಬಗ್ಗೆ ಚಿಂತಿತನಾಗಿದ್ದೇನೆ. ಅವರು ಮತ್ತೆ ಹಿಂದಿನಂತೆ ಆಗಲು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಬೆಳ್ತಂಗಡಿ: ರಾಷ್ಟ್ರಪತಿ ಆಯ್ಕೆ ಬಗ್ಗೆ ಕಾಂಗ್ರೆಸ್ ಮತ್ತು ಸಹಪಕ್ಷಗಳು ಅತಿ ಶೀಘ್ರವಾಗಿ ಒಮ್ಮತದ ನಿರ್ಧಾ ರಕ್ಕೆ ಬರಲಿವೆ ಎಂದು ಕಾಂಗ್ರೆಸ್ ಪಕ್ಷದ ಸಾಂಸ್ಥಿಕ ಚುನಾವಣೆಯ ರಾಷ್ಟ್ರೀಯ ಅಧ್ಯಕ್ಷ ಆಸ್ಕರ್ ಫೆರ್ನಾಂಡಿಸ್ ವಿಶ್ವಾಸ ವ್ಯಕ್ತಪಡಿಸಿ ದ್ದಾರೆ.
ಅವರು ಶುಕ್ರವಾರ ಮಧ್ಯಾಹ್ನ ಬೆಳ್ತಂಗಡಿಯ ಶಾಸಕ ವಸಂತ ಬಂಗೇರ ಅವರ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ದರು. ಎಲ್ಲಾ ಪಕ್ಷದ ಅಭ್ಯರ್ಥಿಯಾಗಿ ರಾಷ್ಟ್ರಪತಿ ಆಯ್ಕೆಯಾದರೆ ಉತ್ತಮವೇ. ಒಮ್ಮತದ ನಿರ್ಧಾರಕ್ಕೆ ಪಕ್ಷವೂ ಬದ್ದವಾಗಿದೆ. ಆ ಹಂತಕ್ಕೆ ಮುಟ್ಟಿದರೆ ಒಳ್ಳೆಯದು ಎಂದರು.
ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಆಸ್ಕರ್, ಇತರೇ ದೇಶಗಳಿಗೆ ಹೋಲಿಸಿದರೆ ನಮ್ಮದು ಅಂತಹ ಅಪಾಯಕಾರಿ ಸ್ಥಿತಿಯಲ್ಲಿ ಇಲ್ಲ. ಸಾಕಷ್ಟು ಜನರಿಗೆ ಉದ್ಯೋಗ ಗಳೂ ದೊರೆತಿವೆ. ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮ ಹಣದುಬ್ಬರ ಉಂಟಾಗುತ್ತದೆ. ಉತ್ಪಾದನೆ ಮತ್ತು ಬೇಡಿಕೆಯ ಮಧ್ಯೆ ಅಗಾಧ ಅಂತರ ಉಂಟಾದಾಗ ಬೆಲೆ ಏರಿಕೆ ಸಹಜ ಎಂದರು.
ಬೆಳ್ತಂಗಡಿ ಮೂಲಕ ಹಾದು ಹೋಗುವ ರಾ. ಹೆ. ಬಗ್ಗೆ ತುರ್ತು ಗಮನಹರಿಸಲಾಗುವುದು. ಬರ ಪರಿಸ್ಥಿತಿಯ ಬಗ್ಗೆ ಇನ್ನೊಮ್ಮೆ ಅಧ್ಯಯನ ಮಾಡಿ ಪ್ರಧಾನಮಂತ್ರಿಗಳಿಗೆ ತಿಳಿಸಲಾಗುವುದು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಪುನರಾರಂಭಿಸುವಂತೆ ಒತ್ತಡ ತರಲಾ ಗುವುದು ಎಂದ ಅವರು ರಾಜ್ಯದಲ್ಲಿನ ಬಿಜೆಪಿ ಜಗಳ ಕುರಿತು ಪ್ರಸ್ತಾಪಿಸಿ ದಾಗ ಅದು ಆ ಪಕ್ಷದ ವಿಚಾರ ಎಂದಷ್ಟೇ ಉತ್ತರಿಸಿದರು. ಪಕ್ಷದ ನಾಯಕರಾದ ಗಫೂರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹರೀಶ್ ಕುಮಾರ್, ಜಿ.ಪಂ.ಮಾಜಿ ಸದಸ್ಯ ಇ. ಸುಂದರ ಗೌಡ ಮತ್ತಿತರರು ಇದ್ದರು.

ಪುತ್ತೂರಿನಲ್ಲಿ ಭೂಮಿ ಹೋರಾಟ ಜಾಗೃತಿ ಜಾಥಾ

Posted by JAYAKIRANA Kirana on | 0 comments | Leave a comment...

ಪುತ್ತೂರು: ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿ ಮತ್ತು ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವ ಮೂಲಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವು ಬಡ ಜನತೆಯನ್ನು ಬೀದಿಪಾಲು ಮಾಡಿದೆ ಎಂದು ಸಿಐಟಿಯು ನೇತೃತ್ವದ ಕರ್ನಾಟಕ ಪ್ರಾಂತ ರೈತಸಂಘದ ಉಪಾಧ್ಯಕ್ಷ ಶಾಂತಾರಾಮ ನಾಯಕ್ ಆರೋಪಿಸಿದರು.
ಅಕ್ರಮ ಸಕ್ರಮ ಮತ್ತು ಮನೆ ನಿವೇಶನಕ್ಕಾಗಿ ಆಗ್ರಹಿಸಿ ಮೇ.೨೧ರಂದು ಬೆಂಗಳೂರಿನಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆಯ ಹಿನ್ನಲೆಯಲ್ಲಿ ಶುಕ್ರವಾರ ಪುತ್ತೂರಿನ ಬೊಳುವಾರಿನಲ್ಲಿ ನಡೆದ ಭೂಮಿ ಹೋರಾಟ ಕುರಿತ ಜನಜಾಗೃತಿ ಜಾಥಾ ವನ್ನು ಉದ್ದೇಶಿಸಿ ಅವರು ಮಾತನಾಡಿ ದರು. ಅಕ್ರಮ ಸಕ್ರಮ ಯೋಜನೆಯಲ್ಲಿ ಸಲ್ಲಿಸಲಾದ ಸುಮಾರು ೧.೨೦ ಲಕ್ಷ ವಿಲೇವಾರಿಗೆ ಇನ್ನೂ ಬಾಕಿಯಾಗಿದೆ. ಅರಣ್ಯ ಪ್ರದೇಶದಲ್ಲಿ ವಾಸ್ತ್ಯವಿರುವವರಿಗೆ ಹಕ್ಕುಪತ್ರ ನೀಡಬೇಕೆಂಬ ಆದೇಶ ವಿದ್ದರೂ ಈತನಕ ಈಬಗ್ಗೆ ಕ್ರಮ ಕೈಗೊ ಳ್ಳಲಾಗಿಲ್ಲ. ಪ್ರತೀ ತಾಲೂಕಿನಲ್ಲಿ ೨೦ ಸಾವಿರದಿಂದ ೪೦ ಸಾವಿರದಷ್ಟು ಕುಟುಂಬಗಳು ಸಮಸ್ಯೆಗೊಳಗಾಗಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಬಿ.ಎಂ. ಭಟ್, ಸಂಘಟನೆಯ ನೇತಾರ ರಾದ ಪಿ,ಕೆ. ಸತೀಶನ್ ಪುತ್ತೂರು, ದಾಮೋದರ ಭಟ್ ಬೆಳ್ತಂಗಡಿ, ಕೇಶವ ಗೌಡ, ಈಶ್ವರಿ ಉಪಸ್ಥಿತರಿದ್ದರು.

ಸರಕಾರಿ ಪ್ರಾಯೋಜಕತ್ವದಲ್ಲಿ ಮಲ ಹೊರುವ ಪದ್ಧತಿ!

Posted by JAYAKIRANA Kirana on | 0 comments | Leave a comment...

ಕಾರ್ಕಳ: ಸರಕಾರದ ಪ್ರಾಯೋಜ ಕತ್ವದಲ್ಲಿ ಮಲಹೊರುವ ಪದ್ಧತಿ ಜಾರಿಯಲ್ಲಿದೆ ಎಂಬ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿರು ವುದರಿಂದಲೇ ಪ್ರಕರಣದಲ್ಲಿ ತಪಿಸ್ಥರಾ ಗಿರುವ ಕಾರ್ಕಳ ಪುರಸಭಾ ಅಧಿಕಾರಿ ಗಳ ವಿರುದ್ಧ ಉಡುಪಿ ಜಿಲ್ಲಾಡಳಿತ ಇನ್ನೂ ಕ್ರಮಕೈಗೊಂಡಿಲ್ಲವೆಂದು ತಿಳಿದುಬಂದಿದೆ.
ಗುರುವಾರ ಬೆಳಿಗ್ಗೆ ಸುಮಾರು ೯.೩೦ರ ವೇಳೆಗೆ ಕಾರ್ಕಳ ಬಂಡಿಮಠ ಬಸ್‌ನಿಲ್ದಾಣ ಮುಂಭಾಗದ ರಸ್ತೆಯ ಮಧ್ಯೆ ಹಾದುಹೋದ ಒಳಚರಂಡಿ ಮ್ಯಾನ್‌ಹೋಲ್‌ಗೆ ಪೌರಕಾರ್ಮಿಕ ರನ್ನು ಇಳಿಸಲಾಗಿತ್ತು. ಪುರಸಭಾ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಇದರ ಬಗ್ಗೆ ದೃಶ್ಯಮಾಧ್ಯಮ ಮತ್ತು ಪತ್ರಿಕಾ ಮಾಧ್ಯ ಮಗಳು ಸಚಿತ್ರ ವರದಿ ಪ್ರಕಟಿಸಿತ್ತು.
ಮಲಹೊರುವ ಪದ್ಧತಿ ನಿಷೇಧ ಕಾನೂನು ರಾಜ್ಯದಲ್ಲಿ ಇನ್ನೂ ಅನುಷ್ಠಾ ನದಲ್ಲಿದ್ದು, ಮತ್ತೊಂದೆಡೆಯಲ್ಲಿ ಇಂತಹ ಕಾನೂನನ್ನು ಸರಕಾರಿ ಇಲಾಖಾಧಿಕಾರಿಗಳು ಉಲ್ಲಂಘಿಸಿ ಶಿಸ್ತುಕ್ರಮ ಜರುಗುವುದಿಲ್ಲ. ದುರಾವಸ್ಥೆಯಲ್ಲಿರುವ ಮ್ಯಾನ್‌ಹೋಲ್ ದುರಸ್ಥಿಗೆಂದು ಪೌರಕಾರ್ಮಿಕರನ್ನು ಅದರಲ್ಲಿ ಇಳಿಸಲಾಗಿತ್ತಲ್ಲದೇ ಅದರಲ್ಲಿ ಹುದುಗಿದ್ದ ಮಲ, ಮೂತ್ರ ತ್ಯಾಜ್ಯ ವಸ್ತುವನ್ನು ಬಕೇಟ್‌ನಲ್ಲಿ ತುಂಬಿಸಿ ಅದನ್ನು ವಾಸ ಮನೆಯ ಪರಿಸರದಲ್ಲಿ ಕೂಡಿಹಾಕಲಾಗಿತ್ತು.
ಪೌರಕಾರ್ಮಿಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಪುರಸಭೆಯ ಈ ಕ್ರಮವು ದಲಿತ ದೌರ್ಜನ್ಯ ಕಾಯಿದೆಯಾಗಿದೆ ಮಾತ್ರವಲ್ಲದೇ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಮಂಗಳೂರು ಲೇಡಿಗೋಶನ್ ಪರಿಸರದ ಮ್ಯಾನ್‌ಹೋಲ್‌ಗೆ ಸಫಾಯಿ ಕರ್ಮಚಾರಿಗಳಾದ ರಾಜನ್ ಹಾಗೂ ಪುಷ್ಪಠಾಕೂರ್ ಅವರನ್ನು ಇಳಿಸಿರುವ ಆರೋಪದಡಿಯಲ್ಲಿ ಸುಲಭ್ ಶೌಚಾಲಯದ ವ್ಯವಸ್ಥಾಪಕರಾಗಿರುವ ಸಂಜಯ್ ಮಿಶ್ರಾ ಮತ್ತು ರವೀಂದ್ರ ಕುಮಾರ್ ಮಿಶ್ರಾ ಇವರ ವಿರುದ್ಧ ಪಾಂಡೇಶ್ವರ ಪೊಲೀಸರು ಕೇಸು ದಾಖಲಿಸಿ ಬಂಧಿಸಿದ್ದರು. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ಕಾರ್ಕಳದಲ್ಲಿ ನಡೆದಿರುವ ಮಲಹೊರುವ ಪದ್ಧತಿ ನಿಷೇಧ ಕಾನೂನನ್ನು ಉಲ್ಲಂಘಿಸಿರುವುದು ಸರಕಾರಿ ಅಧಿಕಾರಿಗಳಾಗಿದ್ದಾರೆ.

ಬಂಟ್ವಾಳ: ಶಾಸಕರು ಗೂಂಡಾಗಿರಿ ಮಾಡಿಲ್ಲ: ಯುವ ಕಾಂಗ್ರೆಸ್ ಸ್ಪಷ್ಟನೆ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಮೂರು ದಿನಗಳಿಂದ ನಮ್ಮ ವಾರ್ಡಿಗೆ ನೀರು ಬಂದಿರಲಿಲ್ಲ. ಪುರಸಭೆ ಅಧಿಕಾರಿಗೆ ಹಲವು ದೂರು ನೀಡಿದ್ದೆವು. ಶಾಸಕರ ಮುಂದೆಯೂ ಸಮಸ್ಯೆ ತೋಡಿಕೊಂಡಿದ್ದೆವು. ನೀರು ನಮ್ಮ ಮೂಲಭೂತ ಹಕ್ಕು. ಅದಕ್ಕಾಗಿ ಪುರಸಭಾಧಿಕಾರಿಗಳೊಂದಿಗೆ ಚರ್ಚಿಸಿ ದ್ದೆವು. ಈ ಸಂದರ್ಭ ಅಧಿಕಾರಿಗಳು ಸೂಕ್ತ ಸ್ಪಂದನೆ ನೀಡದ ಕಾರಣ ಸ್ವಲ್ಪ ಗೊಂದಲ ಸೃಷ್ಟಿಯಾಗಿತ್ತು. ಇದನ್ನೇ ನೆಪವಾಗಿಸಿ ಗೂಂಡಾಗಿರಿ ವರ್ತನೆ ಎಂದರೆ ಹೇಗೆ? ನೀರಿಗಾಗಿ ನಾವು ಮಾತನಾಡಿದ್ದು, ಪ್ರಶ್ನಿಸಿದ್ದು ತಪ್ಪಾ... ಹೀಗೆಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲುಕ್ಮಾನ್ ಪುರಸಭಾ ಡಳಿತದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಪ್ರತಿಭಟನೆ ಜನರ ಹಕ್ಕು. ಜನರಿಗೆ ಕಾನೂನಿನ ಅರಿವಿರುವುದಿಲ್ಲ. ನಮ್ಮ ವೈಫಲ್ಯವನ್ನು ಮುಂದಿಟ್ಟು ಪುರಸಭಾಡಳಿತ ತಮ್ಮ ಅಧಿಕಾರ ದುರು ಪಯೋಗ ಗೊಳಿಸುತ್ತಿದೆ. ಶಾಸಕರ ಅಧ್ಯಕ್ಷತೆಯಲ್ಲಿರುವ ಟಾಸ್ಕ್‌ಫೋರ್ಸ್ ಸಮಿತಿ ಆಡಳಿತಾತ್ಮಕವಾಗಿ ಕುಡಿಯುವ ನೀರಿನ ಅವಶ್ಯಕತೆಯನ್ನು ಗುರುತಿಸಿತ್ತು. ಸಮಿತಿಯ ಪದನಿಮಿತ್ತ ಸದಸ್ಯರೂ, ತಾಂತ್ರಿಕ ಅಧಿಕಾರಿಯೂ ಆಗಿರುವ ಪುರಸಭೆಯ
ಮುಖ್ಯಾಧಿಕಾರಿ ಸಮಿತಿಯ ಕಲಾಪದಲ್ಲಿ ಪಾಲ್ಗೊಳ್ಳಬೇಕು. ಸಮಿತಿಯ ನಿರ್ದೇಶನವನ್ನು ಪಾಲಿಸಬೇಕು. ಆದರೂ ಅವರು ನಿಯಮ ಪಾಲಿಸಿರಲಿಲ್ಲ. ಇದರಿಂದ ಸಾರ್ವಜನಿಕವಾಗಿ ಗೊಂದಲ ಉಂಟಾಗಲು ಕಾರಣವಾಯಿತು ಎಂದವರು ಪುರಸಭಾಧಿಕಾರಿಯ ಬೇಜಾಬ್ದಾರಿತನವನ್ನು ಪ್ರಶ್ನಿಸಿದರು.
ಜನರ ಪ್ರತಿಭಟನೆಯನ್ನೇ ದೊಡ್ಡ ಸಂಗತಿ ಮಾಡಿದ ಅಧ್ಯಕ್ಷ ದಿನೇಶ ಭಂಡಾರಿ ಹಾಗೂ ಬುಡಾ ಅಧ್ಯಕ್ಷ ಗೋವಿಂದ ಪ್ರಭು ಕುಡಿಯುವ ನೀರು ಕೊಡಲಾಗದ ತಪ್ಪನ್ನು ಮುಚ್ಚಲು ಪತ್ರಿಕಾಗೋಷ್ಠಿ ಕರೆದು ಶಾಸಕರು ಗೂಂಡಾಗಿರಿ ವರ್ತನೆ ಮಾಡಿದ್ದಾರೆ ಎನ್ನುವುದು ಸರಿಯಾ? ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಅನಿಲ ಸ್ಪೋಟಕ ಉಂಟಾಗಿ ಜನ ತೊಂದರೆಗೀಡಾದಾಗ ಅಧ್ಯಕ್ಷರು ಯಾಕೆ ಸುದ್ದಿಗೋಷ್ಠಿ ಕರೆದಿಲ್ಲ ಎಂದು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಶ್ವನಾಥ್ ಗೌಡ ಪ್ರಶ್ನಿಸಿದರು. ಪುರಸಭಾಧ್ಯಕ್ಷ ಹಾಗೂ ಬುಡಾ ಅಧ್ಯಕ್ಷರ ವಿರುದ್ಧ ಕೆಲವು ಆರೋಪಗಳ ಪಟ್ಟಿಗಳನ್ನು ಸಲ್ಲಿಸಿದ ವಿಶ್ವನಾಥ್ ಗೌಡ ಆರೋಪಗಳಿಗೆ ಸಂಬಂಧಿಸಿ ದಾಖಲೆ ಸಹಿತ ಸ್ಪಷ್ಟನೆ ನೀಡಲು ತಡಕಾಡಿದರು. ಆದರೂ ತಾನು ಮಾಡಿರುವ ಆರೋಪಗಳಿಗೆ ದಾಖಲೆ ಪತ್ರಗಳನ್ನು ಒಪ್ಪಿಸುವುದಾಗಿ ಸಮರ್ಥಿಸಿದರು. ಶಾಸಕರೇನು ಗೂಂಡಾಗಿರಿ ಮಾಡಿಲ್ಲ. ಪುರಸಭೆ ಕಾರ್ಯಾಲಯದಲ್ಲಿ ಗೂಂಡಾಗಿರಿ ಮಾಡಿದವರು ಹಾಗೂ ಮಾಡುತ್ತಿರುವವರು ಯಾರೆಂಬುದು ಜನರಿಗೆ ಗೊತ್ತಿದೆ ಎಂದು ಶಾಸಕರ ಮೇಲಿನ ಆರೋಪಗಳನ್ನು ಅಲ್ಲಗಳೆದರು. ಸಜೀಪ ಮುನ್ನೂರು ಗ್ರಾ.ಪಂ.ಅಧ್ಯಕ್ಷ ಯುಸೂಫ್ ಕರಂದಾಡಿ, ಸದಸ್ಯ ಮಹಮ್ಮದ್ ನಂದಾವರ, ಮನೋಹರ ನೇರಂಬೋಳು, ರಹಿಮಾನ್ ಬಂಟ್ವಾಳ ಸುದ್ದಿಗೋಷ್ಠಿಯಲ್ಲಿದ್ದರು.

ಸಂಸತ್‌ನಲ್ಲಿ ವಿಠಲ ಬಂಧನದ ಕುರಿತು ಚರ್ಚೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಮಂಗಳೂರು ವಿ.ವಿ. ಸ್ನಾತಕೋತ್ತರ ಪದವಿ ವಿದ್ಯಾರ್ಥಿ ವಿಠಲ ಮಲೆಕುಡಿಯನ ಕುರಿತು ನಿನ್ನೆ ಸಂಸತ್‌ನಲ್ಲಿ ಚರ್ಚೆ ನಡೆದಿದೆ.
ವಿಠಲನ ಬಂಧನದ ಕುರಿತು ಪಾಲಕ್ಕಾಡ್‌ನ ಸಂಸದ ರಾಜೇಶ್ ಅವರು ಸಂಸತ್‌ನಲ್ಲಿ ಗಮನ ಸೆಳೆದಿದ್ದು, ‘ನಕ್ಸಲ್ ಆರೋಪದ ಮೇಲೆ ಸೂಕ್ತ ಆಧಾರಗಳಿಲ್ಲದೆ ಪೊಲೀಸ್ ಇಲಾಖೆ ವಿದ್ಯಾರ್ಥಿಯನ್ನು ಬಂಧಿಸುವ ಮೂಲಕ ಮಾನವ ಹಕ್ಕಿಗೆ ಚ್ಯುತಿ ಬಂದಿದೆ, ಈ ಬಗ್ಗೆ ಸೂಕ್ತ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ. ವಿಠಲ ಮಲೆಕುಡಿಯ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡುವುದಾಗಿ ರಾಜೇಶ್ ತಿಳಿಸಿದ್ದಾರೆ. ಇವರು ಇತ್ತೀಚೆಗೆ ಜಿಲ್ಲೆಗೆ ಆಗಮಿಸಿ ವಿಠಲನನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದನ್ನು ಸ್ಮರಿಸಬಹುದಾಗಿದೆ.
ಕಂಪೌಂಡ್ ಕಲ್ಲು ಕಳವು: ದೂರು: ಕುಂದಾಪುರ ಸಮೀಪದ ಕುಂಭಾಸಿ-ಕೊರವಡಿ ಗ್ರಾಮದ ವಿನೋದ ಶೆಡ್ತಿ ಎಂಬವರ ಮನೆಯ ಕಂಪೌಂಡ್ ಗೋಡೆಯ ಕಲ್ಲುಗಳನ್ನು ಕಳವುಗೈದಿರುವ ಬಗ್ಗೆ ಕುಂದಾಪುರ ಠಾಣೆಗೆ ದೂರಲಾಗಿದೆ. ರಾಮಕೃಷ್ಣ ಹೇರ್ಳೆ ಮತ್ತು ರಾಮಕೃಷ್ಣ ಆಚಾರ್ಯ ವಿರುದ್ಧ ದೂರಲಾಗಿದ್ದು, ಕಂಪೌಂಡ್ ಗೋಡೆ ಕಿತ್ತು ಅದರೊಳಗಿದ್ದ ಸುಮಾರು ಮೂರು ಲೋಡ್‌ನಷ್ಟು ಶಿಲೆಕಲ್ಲು ಕಳವುಗೈದಿರುವುದಾಗಿ ಹೇಳಲಾಗಿದೆ.
ಮಹಿಳೆ ಆತ್ಮಹತ್ಯೆ:ಉಡುಪಿಯ ಹೆರ್ಗಾ ಗ್ರಾಮದ ಪರ್ಕಳ ಎಂಬಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕೃಷ್ಣ ಕೇಕುಡ ಎಂಬವರ ಪುತ್ರಿ ಸವಿತಾ(೩೯) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸವಿತಾ ಅವರ ತಮ್ಮ ಧನಂಜಯ ಕೇಕುಡ ಮತ್ತು ಕುಟುಂಬದ ಇತರ ಸದಸ್ಯರು ಬೆಳ್ತಂಗಡಿಯಲ್ಲಿ ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಸಮಯದಲ್ಲಿ ಸವಿತಾ ಮನೆಯೊಳಗಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ಕುಟುಂಬ ಮನೆಯ ಬಾಗಿಲು ತೆಗೆಯೊ ಕಾರಣ ಬಲವಂತವಾಗಿ ಬಾಗಿಲು ಮುರಿದು ಒಳನುಗ್ಗಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಈಕೆಯ ತಿಂಗಳ ಸಂಪಾದನೆ ೫೦ ಲಕ್ಷ!

Posted by JAYAKIRANA Kirana on | 0 comments | Leave a comment...

ಟೀಂ ಇಂಡಿಯಾ ಗೆದ್ದಾಗಲೆಲ್ಲ ನಾನು ನಗ್ನಳಾಗುತ್ತೇನೆ, ನಗ್ನಳಾಗು ತ್ತೇನೆಂದು ಹೇಳಿಯೇ ಪಡ್ಡೆ ಹುಡು ಗರು ಬಾಯ್ಬಿಟ್ಟು ಕಾಯುವಂತೆ ಮಾಡುವ ರೂಪದರ್ಶಿ, ನಟಿ ಪೂನಂ ಪಾಂಡೆ ತಿಂಗಳ ಸಂಪಾದನೆ ಎಷ್ಟೆಂದು ಯಾರಿಗೂ ತಿಳಿದಿರಲಿಕ್ಕಿಲ್ಲ. ಆದರೆ ಈ ಸೆಕ್ಸಿ ನಟಿಯ ತಿಂಗಳ ಸಂಪಾದನೆ ೫೦ ಲಕ್ಷ ರೂ.!
ಇತ್ತೀಚೆಗೆ ಇಂಗ್ಲಿಷ್ ಪತ್ರಿಕೆ ಯೊಂದು ಈ ವಿಚಾರವನ್ನು ಬಹಿ ರಂಗಪಡಿಸಿದೆ. ಕಳೆದ ಒಂದು ವರ್ಷ ದಿಂದ ಯಾವುದೇ ಸಿನೆಮಾ, ಜಾಹೀ ರಾತು ಇಲ್ಲದೆ ಬರಗಾಲವನ್ನು ಎದು ರಿಸುತ್ತಿರುವ ಪೂನಂ ಪಾಂಡೆ ಒಂದು ತಿಂಗಳಿಗೆ ೫೦ ಲಕ್ಷ ರೂ. ಹೇಗೆ ಸಂಪಾದಿಸುತ್ತಿದ್ದಾಳೆಂದು ಅಚ್ಚರಿಯಾಗ ಬಹುದು. ಆದರೆ ಆಕೆಗೆ ಟ್ವಿಟ್ಟರ್‌ನಲ್ಲಿ ಗರಿಷ್ಠ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ, ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಲ್ಪಡುವ ಹತ್ತು ಮಂದಿ ಯಲ್ಲಿ ಪೂನಂ ಸ್ಥಾನ ಪಡೆದು ಕೊಂಡಿದ್ದಾಳೆ. ಆದರೆ ಇದೆಲ್ಲದ್ದರಿಂದ ಆಕೆಗೆ ಹಣ ಬರುವುದಿಲ್ಲ. ಆಕೆ ಮೊಬೈಲ್ ಕಂಪೆನಿಯೊಂದರ ವಾಯ್ಸ್ ಚಾಟ್‌ನಲ್ಲಿ ಮಾತನಾಡುತ್ತಿದ್ದು, ಇದಕ್ಕಾಗಿ ಆಕೆಗೆ ಮೊಬೈಲ್ ಕಂಪೆನಿ ೫೦ ಲಕ್ಷ ರೂ. ನೀಡುತ್ತಿದೆ. ವಾಯ್ಸ್ ಚಾಟ್‌ಗಾಗಿ ಇಷ್ಟು ದೊಡ್ಡ ಮೊತ್ತವನ್ನು ಪಡೆಯುತ್ತಿರುವ ಬಾಲಿವುಡ್‌ನ ಮೊದಲ ನಟಿ ಪೂನಂ ಪಾಂಡೆ ಎಂದು ಪತ್ರಿಕೆ ಹೇಳಿದೆ. ಯಾವುದೇ ಕಾರ‍್ಯಕ್ರಮದಲ್ಲಿ ಭಾಗವಹಿಸಲು ಪೂನಂ ಪಾಂಡೆ ಮೂರು ಲಕ್ಷ ರೂ. ಬೇಡಿಕೆಯನ್ನಿಡುತ್ತಾಳೆ. ಇದರೊಂದಿಗೆ ಆಕೆಯ ಬಳಿ ಮೂವರು ಬಿಸ್ನೆಸ್ ಮ್ಯಾನೇಜರ್, ಮೂವರು ಪಬ್ಲಿಕ್ ರಿಲೇಷನ್ ಎಕ್ಸಿಕ್ಯೂಟಿವ್, ಮತ್ತು ಮೂವರು ಆಕೆಯ ವೆಬ್‌ನ್ನು ನೋಡಿಕೊಳ್ಳಲು ನೇಮಕಗೊಂಡಿದ್ದಾರೆ. ಆಕೆ ತನ್ನದೇ ವೆಬ್‌ಗೆ ಪ್ರತ್ಯೇಕ ಸರ್ವರ್ ಖರೀದಿಸಲು ಬಯಸಿದ್ದು, ಇದಕ್ಕಾಗಿ ಆಕೆಗೆ ಒಂದೂವರೆ ಲಕ್ಷ ರೂ. ಖರ್ಚಾಗಲಿದೆ. ಆದರೆ ಪೂನಂಗೆ ಇದೆಲ್ಲ ದೊಡ್ಡ ಮೊತ್ತವೇನಲ್ಲ ಬಿಡಿ.

ಇಲಾಖೆ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದು: ಸಚಿವ ಸುರೇಶ್‌ಕುಮಾರ್

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂ ಡಿರುವ ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವ ಉದ್ದೇಶದಿಂದ ಇಲಾಖೆ ಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ಹತ್ತಿರವಾಗಿರುವ ಕಂದಾಯ, ಆರೋಗ್ಯ, ಶಿಕ್ಷಣ, ಕೃಷಿ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆ ಗಳಲ್ಲಿ ೧.೫೦ ಲಕ್ಷ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡುವ ಸಂಬಂಧ ನಿರ್ಧಾರ ಕೈಗೊಳ್ಳಲು ಸಂಪುಟದ ಮುಂದೆ ತರಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾತನಾಡು ತ್ತಿದ್ದ ಅವರು ಕೆಲವು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಜನಸಾಮಾನ್ಯರ ಯೋಜನೆಗಳನ್ನು ಸೂಕ್ತ ಕಾಲಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ ಸರ್ಕಾರ ಪ್ರತಿಷ್ಠಿತ ಸಕಾಲ ಯೋಜನೆಯನ್ನು ಜಾರಿಗೊಳಿಸಲು ಆಡಚಣೆಯಾಗುತ್ತಿದೆ.
ಸಂಪುಟದಲ್ಲಿ ಪ್ರಸ್ತಾಪಿಸಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಸಕಾಲ ಯೋಜನೆ ಅನು ಷ್ಠಾನಗೊಂಡ ಒಂದು ತಿಂಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾ ಗಿದ್ದು, ಅದರಲ್ಲಿ ೮.೫ ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಿ, ಶೇ ೯೯ ರಷ್ಟು ಪ್ರಗತಿ ಸಾಧಿಸಿದ್ದೇವೆ. ಕಂದಾಯ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರಿಗೆ ಸೇರಿದಂತೆ ೧೧ ಇಲಾಖೆಗಳ ೧೫೧ ಸೇವೆಗಳು ಸಕಾಲದಡಿ ಇದ್ದು, ಇದೀಗ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವ ೧೧ ಇಲಾಖೆಗಳನ್ನು ಸೇರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಕಾಲ ಯೋಜನೆಯನ್ನು ಸಾರ್ವ ಜನಿಕರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಯೋಜನೆಗೆ ಹೆಚ್ಚು ಹೆಚ್ಚು ಪ್ರಚಾರ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈಗಿನ ಮದುವೆ ಸಮಾರಂಭಗಳು ಶಬ್ದಮಾಲಿನ್ಯ ಮಾನಸಿಕ ಹಿಂಸೆಯೇ?

Posted by JAYAKIRANA Kirana on | 0 comments | Leave a comment...


ಈಗೀಗ ಮದುವೆ, ರಿಸೆಪ್ಷನ್ ಗಳಲ್ಲಿ ಶುರುವಾಗಿರುವ ಆರ್ಕೆಸ್ಟ್ರಾಗಳ ಕರ್ಣಕಠೋರ ಕರ್ಕಶ ಸಂಗೀತಗಳಿಂದಾಗಿ ಅತಿಥಿಗಳು ಒಬ್ಬರಿಗೊಬ್ಬರು ಕಿವಿಗೆ ಬಾಯಿಯಿಟ್ಟು ಮಾತನಾಡಿದರೂ ಕೇಳಿಸದು. ಈ ಆರ್ಕೆಸ್ಟ್ರಾಗಳ ಸಂಗೀತ ಎಷ್ಟೊಂದು ಭಯಂಕರವಾಗಿರುತ್ತದೆಂದರೆ ಹಸುಗೂಸುಗಳು ಅದುರಿಬಿದ್ದು ಅಳತೊಡಗುತ್ತವೆ. ಅವನ್ನು ಸಮಾಧಾನಪಡಿಸಲು ತಾಯಿ ಹೊರಗೆ ಓಡಿ ಹೋಗಿ ಅಲ್ಲೇ ಉಳಿಯಬೇಕಾಗುತ್ತದೆ.

ಪಿ.ಶಿವರಾಮ್ ಶೆಟ್ಟಿ, ಮಣ್ಣಗುಡ್ಡ-ಮಂಗಳೂರು
ನಾವೆಲ್ಲಾ ಮದುವೆ, ಆರತಕ್ಷತೆ ಹೋಗುವುದು ಕೇವಲ ವಧು-ವರರಿಗೆ ಶುಭ ಹಾರೈಸಿ ಊಟ ಮಾಡಿ ಬರಲು ಮಾತ್ರವಲ್ಲ, ಅಲ್ಲಿ ಅಪರೂಪಕ್ಕೆ ಸಿಗುವ ನಮ್ಮ ಬಂಧು-ಮಿತ್ರರನ್ನು ಭೇಟಿಯಾಗಿ ಸುಖಃದುಖ ಹಂಚಿ ಕೊಂಡು ಸ್ವಲ್ಪ ಹೊತ್ತು ಅವರೊಟ್ಟಿಗೆ ನಿರಾಳವಾಗಿ ಮಾತ ನಾಡಲು. ಆದರೆ ಈಗಿನ ಬ್ಯುಸಿ ಜೀವನದಲ್ಲಿ ಮದುವೆ, ಪೂಜೆಗಳಲ್ಲದೆ, ಇನ್ನಿತರ ಸಂದರ್ಭದಲ್ಲಿ ಸಂಬಂಧಿಕರು ಒಬ್ಬ ರಿಗೊಬ್ಬರು ಸಿಕ್ಕಿ ಮಾತನಾಡುವ ಸಂದರ್ಭಗಳು ವಿರಳವಾಗುತ್ತಿವೆ.
ಮದುವೆ, ರಿಸೆಪ್ಷನ್‌ಗಳಲ್ಲಿ ಶುರುವಾಗಿರುವ ಆರ್ಕೆಸ್ಟ್ರಾ ಗಳ ಕರ್ಣಕಠೋರ ಕರ್ಕಶ ಸಂಗೀತಗಳಿಂದಾಗಿ ಅತಿಥಿಗಳು ಒಬ್ಬರಿಗೊಬ್ಬರು ಕಿವಿಗೆ ಬಾಯಿ ಇಟ್ಟು ಮಾತನಾಡಿದರೂ ಕೇಳಿಸದು. ಈ ಆರ್ಕೆಸ್ಟ್ರಾಗಳ ಸಂಗೀತ ಎಷ್ಟೊಂದು ಭಯಂ ಕರವಾಗಿರುತ್ತದೆಂದರೆ ಹಸುಗೂಸುಗಳು ಅದುರಿಬಿದ್ದು ಅಳ ತೊಡಗುತ್ತವೆ. ಅವನ್ನು ಸಮಾಧಾನಪಡಿಸಲು ತಾಯಿ ಹೊರಗೆ ಓಡಿಹೋಗಿ ಅಲ್ಲೇ ಉಳಿಯಬೇಕಾಗುತ್ತದೆ. ಕೆಲವರಿಗೆ ತಮ್ಮ ಸೆಲ್‌ಫೋನ್‌ಗಳಲ್ಲಿ ಬಂದ ಕರೆ ಕೇಳಿಸುವುದೇ ಇಲ್ಲ. ಕೇಳಿಸಿ ದರೂ ಫೋನ್‌ನಲ್ಲಿ ಮಾತನಾಡಲು ಕರೆ ಕಟ್ ಆಗುವ ಮೊದಲು ಉಸಿರುಕಟ್ಟಿ ಹಾಲ್‌ನ ಹೊರಗೆ ಓಡಬೇಕಾಗು ತ್ತದೆ. ವೂಫರ್‌ಗಳನ್ನು ಜೋಡಿಸಿರುವ ಆ ಆರ್ಕೆಸ್ಟ್ರಾಗಳಿಂ ದಾಗುವ ಶಬ್ದಮಾಲಿನ್ಯವೆಷ್ಟು ನಡೆಯುತ್ತದೆ ಎಂದರೆ ಹಾಲ್‌ನ ಕಿಟಕಿ-ಬಾಗಿಲುಗಳು ವೈಬ್ರೇಶನ್‌ನಿಂದ ಕಟಕಟ ಸದ್ದು ಮಾಡುತ್ತಿರುತ್ತವೆ! ಈಗಿನ ವೇಗದ ಜೀವನದಲ್ಲಿ ಹಾಗೂ ಬೇರೆ-ಬೇರೆ ನಗರ ಅಥವಾ ಪರದೇಶಗಳಲ್ಲಿ ವಾಸಿಸುತ್ತಿ ರುವ ಅಕ್ಕ-ತಂಗಿ, ಅಣ್ಣ-ತಮ್ಮಂದಿರೂ ತಮ್ಮ ದೈನಂದಿನ ಜೀವನದಲ್ಲಿ ಒಬ್ಬರಿಗೊಬ್ಬರು ಮುಖತಃ ಭೇಟಿಯಾಗಲು ಪುರುಸೋತ್ತು ಆಗುವುದಿಲ್ಲ. ಹಾಗಾಗಿ ಮದುವೆ-ಸಮಾರಂಭ ಗಳು ಸಂಬಂಧಿಕರಿಗೆ ಆಯಾಚಿತವಾಗಿ ಭೇಟಿಯಾಗಲು ಸುಸಂದರ್ಭ ಒದಗಿಸಿಕೊಡುತ್ತದೆ. ಆದರೆ ಭಯಂಕರ ಆರ್ಕೆಸ್ಟ್ರಾಗಳು ಈ ಸುಸಂದರ್ಭವನ್ನು ಹಾಳು ಮಾಡಿಬಿಡುತ್ತವೆ. ಹದಿಹರೆಯದ ಹೆಣ್ಣುಮಕ್ಕಳಿಗೆ ಇಂತಹ ಸಮಾರಂಭಗಳ ಲ್ಲಿಯೇ ಎಷ್ಟೋ ಹೊಸ ಪ್ರಪೋಸಲ್‌ಗಳ ಬಗ್ಗೆ ಮಾಹಿತಿ ವಿನಿಮ ಯವಾಗುತ್ತದೆ. ಆರೋಗ್ಯ, ಶಿಕ್ಷಣ, ಉದ್ಯೋಗ, ವ್ಯಾಪಾರಗಳ ಬಗ್ಗೆಯೂ ಮಾಹಿತಿ ವಿನಿಮಯಕ್ಕೆ ಮದುವೆ ಸಮಾರಂಭಗಳು ವೇದಿಕೆ ಒದಗಿಸುತ್ತವೆ. ಆದರೆ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದಂಥ ಆರ್ಕೆಸ್ಟ್ರಾಗಳಿಂದಾಗಿ ಮೇಲಿನ ಸುಸಂದರ್ಭಗಳೆಲ್ಲಾ ಕೈ ಜಾರುತ್ತವೆ. ಕರ್ಕಶ ಸಂಗೀತದಿಂದ ತಪ್ಪಿಸಿಕೊಳ್ಳಲು ಮದುವೆ ಹಾಲ್‌ನಿಂದ ಆದಷ್ಟು ಬೇಗ ಹೊರಗೆ ಓಡಬೇಕೆಂದು ಎಲ್ಲರಿಗೂ ಅನ್ನಿಸುತ್ತಿರುತ್ತದೆ. ಆ ಆರ್ಕೆಸ್ಟ್ರಾಗಳಲ್ಲಿ ಹಾಡುವ ಹಾಡಾದರೂ ಎಂಥದ್ದು? ಅವೆಲ್ಲಾ ನಾವು ದಿನಾಲೂ ಟಿ.ವಿ.ಯಲ್ಲಿ ಅಥವಾ ಎಫ್.ಎಂ. ರೇಡಿಯೋದಲ್ಲಿ ದಿನದ ೨೪ ಗಂಟೆಯೂ ಕೇಳಿ ಕೇಳಿ ಬೇಸತ್ತ ಹಾಡುಗಳು. ಇವನ್ನು ಮತ್ತೆ ಕೇಳಲು ನಾವು ಮದುವೆ ಸಮಾರಂಭಗಳಿಗೆ ಹೋಗಬೇಕೇ? ಈಗ ಎಲ್ಲರ ಮೊಬೈಲ್ ಫೋನ್‌ನಲ್ಲಿ ಎಫ್‌ಎಂ ರೇಡಿಯೋ ಇರುವುದರಿಂದ ಈ ಹಾಡು ಗಳನ್ನು ಬೇಕಾದಲ್ಲಿ ಕೇಳಬಹುದು.
ಮದುವೆಗಳಲ್ಲಿ ವಾಲಗ, ನಾದಸ್ವರ, ಸ್ಯಾಕ್ಸೋಫೋನ್ ಇವುಗಳ ವಾದನ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಇದು ಮೃದುವಾಗಿ ಹಿನ್ನೆಲೆ ಸಂಗೀತದಂತೆ ಮದುವೆ ಸಮಾರಂಭಕ್ಕೆ ಒಂದು ಮೆರುಗು ಒದಗಿಸುತ್ತದೆ. ಆದರೆ ಈಗೀಗ ಈ ವಾಲಗ, ನಾದಸ್ವರಗಳಿಗೂ ವೂಫರ್ ತಾಗಿಸಿದ ಮೈಕ್ ಜೋಡಿಸುವುದರಿಂದ ಆರ್ಕೆಸ್ಟ್ರಾದಂತೆ ಇದೂ ಸಹಾ ಅತಿಥಿ ಗಳ ಕಿವಿ ಕೊರೆಯುತ್ತದೆ ಹಾಗೂ ಒಬ್ಬರು ಮಾತನಾಡಿದ್ದು, ಇನ್ನೊಬ್ಬರಿಗೆ ಕೇಳಿಸುವುದಿಲ್ಲ. ಯಾವಾಗಲೂ ಒಂದು ಮಿತಿ ಗಿಂತ ಜೋರಾದರೆ ಅದು ಸಂಗೀತವಲ್ಲ. ಅದು ಶಬ್ದ ಮಾಲಿನ್ಯ ಮತ್ತು ಮಾನಸಿಕ ಹಿಂಸೆ ಅಷ್ಟೇ. ಇದನ್ನು ಮನಗಾಣುವವರು ಯಾರು?

ವಿದ್ಯುತ್ ದರ ಹೆಚ್ಚಳ ಸರಿಯೇ?

Posted by JAYAKIRANA Kirana on | 0 comments | Leave a comment...

ರಾಜ್ಯ ಸರಕಾರ ವಿದ್ಯುತ್ ದರವನ್ನು ಏಕಾಏಕಿ ಯೂನಿಟ್‌ಗೆ ೧೩ ಪೈಸೆಯಷ್ಟು ಏರಿಸಿದೆ. ಮೊದಲೇ ವರ್ಷಪೂರ್ತಿ ಹೈವೋ ಲ್ಟೇಜ್ ವಿದ್ಯುತ್ ಕೊಡದೆ ಅನಿ ಯಮಿತ ಲೋಡ್‌ಶೆಡ್ಡಿಂಗ್ ಮಾಡುತ್ತಿರುವ ಸರಕಾರ ಈಗ ಜನರ ಮೇಲೆ ಹೆಚ್ಚುವರಿ ದರದ ಹೊರೆ ಹೊರಿಸಿರುವುದು ಖಂಡ ನೀಯ. ರಾಜ್ಯದ ನಗರ ಪ್ರದೇಶ ಗಳಲ್ಲಿ ಇರುವಷ್ಟು ಹೊತ್ತು ವಿದ್ಯುತ್ ಪೂರೈಕೆ ಗ್ರಾಮೀಣ ಭಾಗಗಳಲ್ಲಿ ಇರುವುದಿಲ್ಲ. ಇದ್ದರೂ ಸಿಂಗಲ್ ಫೇಸ್ ವಿದ್ಯುತ್ ಇರುತ್ತದೆ. ಇದರಲ್ಲಿ ನೀರಾವರಿ ಪಂಪ್ ತಿರುಗುವುದಿಲ್ಲ, ಕೃಷಿ ಕಾರ್ಯ ಗಳಿಗೆ ಹಿನ್ನಡೆಯಾಗುತ್ತಿದೆ. ಇದ ನ್ನೆಲ್ಲ ಗಮನಿಸಿ ವಿದ್ಯುತ್ ಪೂರೈ ಕೆಯ ಗುಣಮಟ್ಟದಲ್ಲಿ ಬದಲಾ ವಣೆ ತರಬೇಕಿದ್ದ ಸರಕಾರ ವಿದ್ಯುತ್ ಬೆಲೆ ಮತ್ತೆ ಏರಿಸಿರುವುದು ನ್ಯಾಯ ಸಮ್ಮತವಲ್ಲ. ಇದನ್ನು ರಾಜ್ಯದ ಸಾಮಾಜಿಕ ಕಾಳಜಿಯ ಸಂಘಟನೆ ಗಳು ಪ್ರತಿಭಟಿಸುವುದಿಲ್ಲವೇಕೆ? ರಾಜ್ಯ ಸರಕಾರ ಜನರಿಗೆ ಬೆಲೆಯೇ ರಿಕೆಯ ಕೊಡುಗೆ ನೀಡುತ್ತಾ ಬಂದಿ ದೆಯೇ ಹೊರತು ಬಜೆಟ್‌ನಲ್ಲಿ ರೈತರು, ಜನಸಾ ಮಾನ್ಯರಿಗೆ ಪೂರಕ ವಾತಾವರಣ ನಿರ್ಮಿಸದೇ ಇರುವುದು ದುರಂತವೇ ಸರಿ.
ರಘುಪತಿ ಕೆ, ಮುದ್ರಾಡಿ

ದೇವರ ಉತ್ಸವಗಳಿಗೆ ಕೋಟ್ಯಂತರ ಖರ್ಚು ಸರಿಯೇ?
ಕರಾವಳಿಯಲ್ಲಿ ಯಕ್ಷಗಾನ, ನಾಗ ಮಂಡಲ, ಬ್ರಹ್ಮಕಲಶೋತ್ಸವ ಕಾರ್ಯ ಕ್ರಮಗಳಿಗೆ ಕೋಟ್ಯಂತರ ರೂಪಾಯಿ ಹಣ ನೀರಿನಂತೆ ಪೋಲು ಮಾಡು ತ್ತಾರೆ. ಇಲ್ಲಿ ಪ್ರತಿಷ್ಠೆಯನ್ನು ಮೆರೆಯಿ ಸಲು ಒಬ್ಬರಿಗಿಂತ ಒಬ್ಬರು ಮಿಗಿಲು ಎನ್ನುವುದನ್ನು ತೋರಿಸಲು ಹಣ ವನ್ನು ಬೇಕಾಬಿಟ್ಟಿ ಖರ್ಚು ಮಾಡು ತ್ತಾರೆ. ಕೆಲವು ಕಡೆ ಇಂಥ ಕಾರ್ಯಕ್ರಮಗ ಳಿಗೆ ದೇಣಿಗೆ ಸಂಗ್ರಹಿಸುವುದೂ ನಡೆಯು ತ್ತದೆ. ಆದರೆ ಇಂಥ ಕಾರ್ಯಕ್ರಮಗಳಿಗೆ ಹಣ ವನ್ನು ದುಂದುವೆಚ್ಚ ಮಾಡುವವರು ಸಮಾ ಜದ ಪ್ರಗತಿಯ ಬಗ್ಗೆ ಚಿಂತಿಸುವುದಿಲ್ಲ. ಇದ ಕ್ಕಾಗಿ ವ್ಯಯಿಸುವ ಕೋಟ್ಯಂತರ ರೂಪಾಯಿ ಹಣದಲ್ಲಿ ಸಮಾಜದಲ್ಲಿನ ನೂರಾರು ಬಡವ ರಿಗೆ ವಸತಿ, ಆಹಾರಕ್ಕೆ ವ್ಯವಸ್ಥೆ ಮಾಡಬಹುದು. ಇದರಿಂದ ಪುಣ್ಯ ಸಂಪಾದನೆಯೂ ಆಗು ತ್ತದೆ. ಆದರೆ ಈ ಬಗ್ಗೆ ಶ್ರೀಮಂತ ವರ್ಗದ ಜನತೆ ಚಿಂತೆ ಮಾಡುವುದಿಲ್ಲ.
ಅವರಿಗೆ ಬೇಕಿರುವುದು ಸ್ವಪ್ರತಿಷ್ಠೆ ಮಾತ್ರ. ಬಡವರ ಕಷ್ಟಗಳಿಗೆ ಕೈಚಾಚಿದರೆ ಪ್ರತಿಷ್ಠೆ ಮೆರೆಯಲು ಆಗುವುದಿಲ್ಲ ಎಂಬ ಯೋಚನೆ ಅವರದ್ದು. ದೇವರ ಉತ್ಸವ ಗಳನ್ನು ಸಾಧ್ಯವಾದಷ್ಟು ಸಿಂಪಲ್ ಆಗಿ ಮಾಡಿದರೆ ಒಳ್ಳೆಯದು. ದೇವರಿಗಿಂತ ಸಮಾ ಜದ ಹಿತವನ್ನು ಗಮನಿಸಿದರೆ ದೇವರು ಪ್ರಸನ್ನ ನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕಿರಣ್ ರಾವ್, ಮಂಗಳೂರು

ಗುತ್ತಿಗೆ ಕೊಡಬೇಡಿ
ನಗರದಲ್ಲಿ ಪಾರ್ಕಿಂಗ್ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿರುವ ಬಗ್ಗೆ ಜಯಕಿರಣ ವರದಿ ಪ್ರಕಟಿಸಿ ಪಾಲಿಕೆಯನ್ನು ಎಚ್ಚರಿಸಿದೆ. ಇಂತಹ ದರೋಡೆ ಇನ್ನೂ ಅನೇಕ ಕಡೆಗಳಲ್ಲಿ ನಡೆಯು ತ್ತಿದೆ. ಹಾಗಾಗಿ ಪಾಲಿಕೆ ಇನ್ನು ಮುಂದೆ ಪಾರ್ಕಿಂಗ್ ಶುಲ್ಕ ವಸೂಲಾತಿಯನ್ನು ಗುತ್ತಿಗೆ ಆಧಾರದಲ್ಲಿ ನಡೆಸುವುದನ್ನು ನಿಲ್ಲಿಸಲಿ. ಉತ್ತಮ ಆದಾಯವಿ ರುವ ಈ ಯೋಜನೆಯನ್ನು ಸ್ವತಃ ಪಾಲಿಕೆಯ ಸಿಬ್ಬಂದಿಯನ್ನಿಟ್ಟು ನಡೆಸಲಿ. ಆಗ ಈ ರೀತಿಯ ಹಗಲು ದರೋಡೆಗೆ ಕಡಿವಾಣ ಬೀಳಬಹುದು. ಅಲ್ಲದೇ ಪಾಲಿಕೆಗೂ ಉತ್ತಮ ಆದಾಯ ಬರಬ ಹುದು. ಈ ಬಗ್ಗೆ ಇನ್ನಾದರೂ ಪಾಲಿಕೆ ಆಡಳಿತ ಚಿಂತನೆ ನಡೆಸಲಿ.
ಶಾಕೀರ್, ಬಂದರ್

ಕಾರ್ಕಳ ಪೇಟೆಯಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಲಿ
ಆನೆಕೆರೆಯಿಂದ ಕಾರ್ಕಳ ಪೇಟೆ ಪ್ರವೇಶಿಸುವ ರಸ್ತೆ, ಬಂಡಿಮಠದಿಂದ ಕಾರ್ಕಳಕ್ಕೆ ಬರುವ ರಸ್ತೆ ಹಾಗೂ ಅನಂತ ಪದ್ಮನಾಭ ದೇವಸ್ಥಾನ ರಸ್ತೆಯಲ್ಲಿ ವಾಹನಗಳ ಒತ್ತಡ ಜಾಸ್ತಿಯಿರುತ್ತದೆ. ಇಲ್ಲಿ ಪಾದಚಾರಿಗಳ ಸಂಚಾರಕ್ಕೆ ಸಾಕಷ್ಟು ಜಾಗವಿರುವುದಿಲ್ಲ.
ಇಲ್ಲಿನ ರಸ್ತೆಯ ಅಗಲ ಕಿರಿದಾಗಿರುವುದೇ ಮುಖ್ಯ ಸಮಸ್ಯೆಯಾಗಿದೆ. ರಸ್ತೆಯ ಅಗಲವನ್ನು ವಿಸ್ತರಿಸಿ ದ್ವಿಪಥ ವನ್ನಾಗಿ ಮಾಡಿದರೆ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬಂದೀತು. ಕಾರ್ಕಳ ಪೇಟೆಯಲ್ಲಿ ರಸ್ತೆ ಅಗಲೀಕರಣ ಕ್ಕಾಗಿ ಇಕ್ಕೆಲಗಳಲ್ಲಿನ ಅಂಗಡಿ ಮಳಿಗೆಗಳನ್ನು ಒಡೆದು ತೆಗೆಯಲಾಗಿದೆ. ಆದರೆ ರಸ್ತೆಯನ್ನು ವಿಸ್ತರಿಸಲಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಕಾರ್ಕಳ ಪುರಸಭೆ ಕೂಡಲೇ ಕ್ರಮ ಕೈಗೊಳ್ಳಬೇಕು. ಕಾರ್ಕಳ ಪೇಟೆಯ ರಸ್ತೆಯ ಅಭಿವೃದ್ಧಿ ಪಡಿಸುವಲ್ಲಿ ಕ್ಷೇತ್ರ ಶಾಸಕರು ಮುತುವರ್ಜಿ ವಹಿಸಬೇ ಕಾಗಿ ವಿನಂತಿ.
ಕಿಶೋರ್, ಆನೆಕೆರೆ

ಉಳ್ಳಾಲ ಬೀಚ್ ಅನೈತಿಕತೆಯ ಅಡ್ಡೆಯಾಗುತ್ತಿದೆಯೇ?
ಕರಾವಳಿಯ ಪ್ರವಾಸಿ ತಾಣಗಳಲ್ಲಿ ಬೀಚ್‌ಗಳು ಅತೀ ಮುಖ್ಯ ಸ್ಥಳ ಎನ್ನಬಹುದು. ಕರಾವಳಿಗೆ ಹೆಚ್ಚಿನ ಜನರನ್ನು ಆಕರ್ಷಿಸುವುದೇ ಈ ಬೀಚ್ ಗಳು. ಆದರೆ ಇತ್ತೀಚೆಗೆ ಈ ಬೀಚ್‌ಗಳು ಕೂಡ ಅನೈತಿಕತೆಯ ಅಡ್ಡೆಯಾ ಗುವ ಮೂಲಕ ಸುಸಂಸ್ಕೃತರು ವಿಹಾರ ನಡೆಸುವುದೇ ಕಷ್ಟಕರವಾಗಿದೆ. ತಣ್ಣೀರು ಬಾವಿ, ಪಣಂಬೂರು ಬೀಚ್‌ಗಳು ಈಗಾಗಲೇ ಈ ಹಣೆಪಟ್ಟಿ ಕಟ್ಟಿ ಕೊಂಡಿತ್ತು. ಆದರೆ ಉಳ್ಳಾಲ ಬೀಚ್ ಈ ರೀತಿಯ ಅನೈತಿಕತೆಯಲ್ಲಿ ಅಷ್ಟಾಗಿ ಕುಖ್ಯಾತಿ ಗಳಿಸಿರಲಿಲ್ಲ. ಮುಂದೆ ಉಳ್ಳಾಲ ಬೀಚ್‌ಗೂ ಈ ಹಣೆಪಟ್ಟಿ ಬಂದರೆ ಆಶ್ಚರ್ಯ ಪಡಬೇಕಿಲ್ಲ. ಇಷ್ಟು ಹೇಳಲು ಕಾರಣವಿದೆ. ಮೊನ್ನೆ ನಾನು ಮತ್ತು ನನ್ನ ಗೆಳೆಯರು ವಿಹಾರಕ್ಕೆಂದು ಸಂಜೆಯ ವೇಳೆಗೆ ಬೀಚ್‌ಗೆ ಹೋಗಿದ್ದೆವು. ಬೀಚ್‌ನಿಂದ ಇನ್ನೇನು ಹೊರಡೋಣ ಎನ್ನುವಾಗ ಕತ್ತಲು ಕವಿದಿತ್ತು. ಕರೆಂಟ್ ಹೋಗಿದ್ದ ಕಾರಣ ಸಮುದ್ರ ತೀರ ಸಂಪೂರ್ಣವಾಗಿ ಕಗ್ಗತ್ತಲಿನಿಂದ ಕೂಡಿತ್ತು. ಈ ವೇಳೆ ಪೊದೆಯ ಮಧ್ಯೆ ಎರಡು ಜೋಡಿ ಅನೈಕತೆಯಲ್ಲಿ ತೊಡಗಿರು ವುದು ನಮ್ಮ ಗಮನಕ್ಕೆ ಬಂತು. ಆಗ ನಾವು ಅಲ್ಲಿಗೆ ತೆರಳಿ ಅವರನ್ನು ಎಚ್ಚ ರಿಕೆ ನೀಡಿ ಕಳಿಸಿದೆವು. ರಾತ್ರೀ ಏಳರ ಸುಮಾರಿಗೆ ಪೊದೆಯ ಮಧ್ಯೆ ಹದಿ ಹರೆಯದ ಜೋಡಿ ಸಲ್ಲಾಪವಾಡುತ್ತಿದೆ ಎಂದರೆ ಉಳ್ಳಾಲ ಬೀಚ್ ಅನೈತಿಕ ತೆಯ ಅಡ್ಡೆಯಾಗುವುದರಲ್ಲಿ ಸಂಶಯವಿಲ್ಲ. ಸಂಜೆಯ ವೇಳೆಗೆ ಉಳ್ಳಾಲ ಪೊಲೀಸರು ಒಮ್ಮೆ ಇತ್ತ ಒಂದು ರೌಂಡ್ ಹೊಡೆದರೆ ಇಲ್ಲಿನ ಸಮಗ್ರ ಚಿತ್ರಣ ನಿಮಗೆ ಸಿಗಬಹುದು. ಸೋಮನಾಥ ಸ್ವಾಮಿಯ ಸನ್ನಿಧಾನವೂ ಇಲ್ಲೇ ಹತ್ತಿರದಲ್ಲಿರುವುದರಿಂದ ಇಂಥಹ ವ್ಯಭಿಚಾರ ದೇವಸ್ಥಾನದ ಪಾವಿತ್ರ್ಯ ತೆಗೂ ಧಕ್ಕೆ ತರಬಹುದು. ಇನ್ನಾದರೂ ಉಳ್ಳಾಲ ಪೊಲೀಸರು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಲಿ.
ಲೋಕೇಶ್, ಕೊಣಾಜೆ

ಅಂಚೆ ನೌಕರರು ಕಾರ್ಮಿಕರಲ್ಲವೇ?
ಮೊನ್ನೆ ಮೇ ಒಂದನೇ ತಾರೀಖು ಕಾರ್ಮಿಕರ ದಿನ ದಂದು ಎಲ್ಲ ಸರಕಾರಿ ಇಲಾಖೆಗಳ ನೌಕರರಿಗೂ ರಜೆ ನೀಡ ಲಾಗಿತ್ತು. ಆದರೆ ಅಂಚೆ ಇಲಾಖೆಗೆ ಮಾತ್ರ ಇದು ಅನ್ವಯವಾ ಗದೇ ಇದ್ದುದು ಅಚ್ಚರಿಗೆ ಕಾರಣವಾಗಿದೆ. ವರ್ಷಪೂರ್ತಿ ಕೆಲಸ ಮಾಡುವ ಅಂಚೆ ಇಲಾಖೆಯ ನೌಕರರು ಕಾರ್ಮಿಕರ ದಿನ ದಂದೂ ಎಂದಿನಂತೆ ಊರಿಡೀ ಸುತ್ತಾಡಿ ಕೆಲಸ ಮಾಡಿದ್ದಾರೆ. ಇವರೇನು ಕಾರ್ಮಿಕರಲ್ಲವೇ? ಸರಕಾರ ಈ ರೀತಿ ಇಬ್ಬಗೆಯ ನೀತಿ ಅನುಸರಿಸುವುದು ಎಲ್ಲಿಯ ನ್ಯಾಯ? ಅಂಚೆ ಇಲಾಖೆ ಈ ಬಗ್ಗೆ ಇನ್ನಾದರೂ ಸೂಕ್ತ ತಿದ್ದುಪಡಿ ತರಲಿ. ಕಾರ್ಮಿಕರ ದಿನದಂದು ಇಂಥ ತಾರತಮ್ಯ ತಪ್ಪುವಂತಾಗಲಿ.
ಸುಜಿತ್, ಮಣ್ಣಗುಡ್ಡ

ಗೋಹತ್ಯೆ ಮಹಾಪಾಪ
ಭೂಮಿಯಲ್ಲಿ ಗೋಹತ್ಯೆ ಹೆಚ್ಚುತ್ತಿದೆ. ಹಿಂದೆ ಮನುಜರು ದೇವತೆಯೆಂದು ಆರಾಧಿಸುತ್ತಿದ್ದ ಗೋವನ್ನು ಹಣದಾಸೆಗೆ ಕಟುಕರು ಬಲಿ ಕೊಡು ತ್ತಿದ್ದಾರೆ. ಗೋಹತ್ಯೆಯೆಂಬ ಮಹಾಪಾಪದ ಕೆಲ ಸಕ್ಕೆ ಜನರು ಕೈಹಾಕಿದ್ದರಿಂದ ಭೂಮಿಯಲ್ಲಿ ಬರ ಗಾಲ, ಭೂಕಂಪನ ಸಾಮಾನ್ಯವಾಗುತ್ತಿದೆ. ಹೀಗಾಗಿ ಗೋಹತ್ಯೆಯನ್ನು ತಡೆಯಲು ಜನರು ಜಾತಿ-ಧರ್ಮ ಮರೆತು ಒಂದಾಗಬೇಕು. ಗೋಹತ್ಯೆ ನಿಷೇಧ ವಿಧೇ ಯಕ ಜಾರಿಗೆ ಒತ್ತಾಯಿಸಬೇಕು. ಅಲ್ಲದೇ ರಾಜ್ಯ ಸರ್ಕಾರವೂ ಈ ಬಗ್ಗೆ ವಿಶೇಷ ಕಳಜಿ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ನಂದೀಶ್, ಸಕಲೇಶಪುರ

ದಲಿತ ಮಹಿಳೆಯ ಕೊಲೆ ಆರೋಪಿಗಳನ್ನು ಬಂಧಿಸಿ
ಇತ್ತೀಚೆಗೆ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಧರೆಗುಡ್ಡೆ ಎಂಬಲ್ಲಿ ದಲಿತ ಮಹಿಳೆಯ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಧರೆಗುಡ್ಡೆಯ ಸ್ಥಳೀಯ ಯುವಕ ಮಂಡಲದ ವಾರ್ಷಿಕೋತ್ಸವ ಸಂದರ್ಭ ನಡೆದಿರುವ ಈ ಘಟನೆಯು ಸ್ಥಳೀಯವಾಗಿ ಭಯ ವನ್ನು ಹುಟ್ಟುಹಾಕಿದೆ. ಪರಿಸರವನ್ನು ಚೆನ್ನಾಗಿ ಬಲ್ಲ ಸ್ಥಳೀಯ ಕಾಮುಕರೇ ಕೃತ್ಯವೆಸಗಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂದಿದೆಯಾದರೂ ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಿಲ್ಲ. ದಲಿತ ಮಹಿಳೆಯನ್ನು ಪರಿಚಯಸ್ಥರೇ ಅತ್ಯಾಚಾರ ವೆಸಗಿ ಕೊಲೆಗೈದಿರುವ ಶಂಕೆಯಿದ್ದು, ಪೊಲೀಸರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ದರೆ ಸತ್ಯಾಂತ ಬಯಲಾದೀತು. ಮೂಡಬಿದ್ರೆ ಠಾಣಾಧಿಕಾರಿ, ಹಿರಿಯ ಪೊಲೀಸ್ ಅಧಿಕಾರಿಗಳು ದಲಿತ ಮಹಿಳೆಯ ಹಂತಕರನ್ನು ಬಂಧಿಸಿ ಆಕೆಯ ಸಾವಿಗೆ ನ್ಯಾಯ ಒದಗಿಸಬೇಕಾಗಿ ವಿನಂತಿ.
ಕರುಣಾಕರ, ಶಿರ್ತಾಡಿ

ಜನರ ಕಷ್ಟಗಳಿಗೆ ಸ್ಪಂದಿಸದ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್
ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‌ಗೊ ಳಪಟ್ಟ ಹೆಚ್ಚಿನ ಎಲ್ಲಾ ರಸ್ತೆಗಳು ಸಂಪೂರ್ಣ ಹದಗೆಟ್ಟು ಜನರು ಕಷ್ಟಪಡುತ್ತಿದ್ದರೂ ಯಾವು ದನ್ನೂ ತಿರುಗಿ ನೋಡುವ ಪುರುಸೋತ್ತು ಅವರಿಗಿಲ್ಲವಾಗಿದೆ. ದೇರಾಜೆ ರಸ್ತೆಗೆ ಜಿ.ಪಂ. ನಿಂದ ಎರಡು ಲಕ್ಷ ರೂ. ಬಿಡುಗಡೆಯಾ ಗಿದ್ದರೂ ಹದಗೆಟ್ಟ ರಸ್ತೆಯ ಒಂದು ಭಾಗಕ್ಕೂ ಸಾಲದಾಗಿದೆ. ಈ ಭಾಗಕ್ಕೆ ಇನ್ನೂ ಮೂವರು ಸದಸ್ಯರು ಮೀಟಿಂಗ್‌ಗೂ ಹೋಗದೆ ಸಹಿ ಹಾಕಿ ಭತ್ಯೆ ಹಣವನ್ನು ಕಿಸೆಗೆ ಹಾಕುವುದು ಮಾತ್ರ ತಮ್ಮ ಜವಾ ಬ್ದಾರಿ ಎಂದು ತಿಳಿದಂತಿದೆ. ಯಾರಿಗೂ ಉಪ ಯೋಗವಿಲ್ಲದ ಈ ಪಂಚಾಯತ್ ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಜಿ.ಪಂ. ನಿಂದ ದೊರಕಿದ ಅನುದಾನವನ್ನು ಸಮರ್ಪಕವಾಗಿ ಬಳಸಲು ಮುಂದಾಗದ ಇವರು ಮುಂದೆ ಚುನಾವಣೆಗಳಲ್ಲಿ ನಿಂತರೆ ಜನರೇ ತಕ್ಕ ಉತ್ತರ ವನ್ನು ನೀಡಲಿದ್ದಾರೆ. ಅಕ್ರಮವಾಗಿ ಅಧಿಕಾರ ಪಡೆದ ಉಪಾಧ್ಯಕ್ಷರು ಚುನಾವಣೆಯ ಸಂದ ರ್ಭದಲ್ಲಿ ಮನೆ-ಮನೆಗೆ ಭೇಟಿ ಕೊಟ್ಟವರು ನಂತರ ನಾಪತ್ತೆಯಾಗಿದ್ದಾರೆ. ಜನರು ಓಟು ಪಡೆದು ಇನ್ನೊಂದು ಪಕ್ಷದವರ ಎಂಜಲು ಕಾಸಿಗೆ ಕೈಚಾಚಿ ಅಧಿಕಾರ ಸವಿಯುವ ವರಿಗೆ ಧಿಕ್ಕಾರ ವಿರಲಿ.
ಸಮಸ್ತ ನಾಗರಿಕರು, ದೇರಾಜೆ-ಬಲ್ಯ

ರೈಲ್ವೇ ಇಲಾಖೆಯ ಗಮನಕ್ಕೆ
ತುಳುನಾಡಿನ ಕುವರ ಭಾರತದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್‌ರ ಕನ ಸಿನ ಕೂಸಾದ ಕೊಂಕಣ ರೈಲ್ವೆ ಕರಾವಳಿಯ ಭಾಗದ ಜನರಿಗೆ ಬಹಳ ಪ್ರಯೋಜನಕಾರಿಯಾ ಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರೈಲು ಪ್ರಯಾಣ ಅಸಹ್ಯಕರವಾಗಿ ಪರಿಣಮಿಸಿದೆ. ರೈಲು ಬೋಗಿ ಗಳನ್ನು ಮಂಗಳಮುಖಿಯರು (ಲೈಂಗಿಕ ಕಾರ್ಯ ಕರ್ತೆಯರು) ತಮ್ಮ ವಾಸ್ತವ್ಯ ಕುಟೀರವಾಗಿಸಿ ಕೊಂಡಿದ್ದಾರೆ. ಹಣಕ್ಕಾಗಿ ಪೀಡಿಸುವುದು, ಅಶ್ಲೀ ಲವಾಗಿ ವರ್ತಿಸುವುದು ನಡೆಯುತ್ತಿದೆ. ಇವುಗ ಳೆಲ್ಲದರ ಪರಿಣಾಮ ಸಭ್ಯ ಪ್ರಯಾಣಿಕರು ಮುಜು ಗರದಿಂದ ತಲೆತಗ್ಗಿಸುವಂತಾಗಿದೆ. ರೈಲ್ವೇ ಇಲಾಖೆ, ಸಮಸ್ಯೆಯನ್ನು ಅವಲೋಕಿಸಿ ಅಸಭ್ಯತೆಗೆ ಕಡಿ ವಾಣ ಹಾಕಿ ಶಿಸ್ತುಕ್ರಮ ಕೈಗೊಂಡರೆ, ಪ್ರಯಾ ಣಿಕರಿಗೆ ಮುಜುಗರರಹಿತ ಪ್ರಯಾಣಕ್ಕೆ ದಾರಿ ಯಾದೀತು.
ತಾರನಾಥ ಜೆ. ಮೇಸ್ತಿ, ಶಿರೂರು

ಎಸ್‌ಕೋಡಿಗೆ ಹೈಮಾಸ್ಟ್ ದೀಪ ಅಗತ್ಯ
ಕಿನ್ನಿಗೋಳಿ ಬಳಿಯ ಎಸ್. ಕೋಡಿ ಸರ್ಕಲ್ ಬಳಿ ರಸ್ತೆ ಮೂರು ದಿಕ್ಕಿಗೆ ಕವಲಾಗಿ ಸಂಚರಿಸುತ್ತದೆ. ಇಲ್ಲಿ ರಾತ್ರಿಯ ವೇಳೆ ಕತ್ತಲೆ ತುಂಬಿರು ತ್ತದೆ. ವಾಹನಗಳ ಬೆಳಕು ಹೊರತು ಬೇರೇನೂ ಇರುವುದಿಲ್ಲ. ಇಲ್ಲಿ ಪಕ್ಷಿ ಕೆರೆಯಿಂದ ತಿರುವಿನಲ್ಲಿ ಸಾಗಿಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸಿದ ಅನೇಕ ಉದಾಹರಣೆ ಗಳಿವೆ. ಜನಪ್ರತಿನಿಧಿಗಳು ಇಲ್ಲಿನ ಸಮ ಸ್ಯೆಯನ್ನು ಕಣ್ಣಾರೆ ಕಂಡರೂ ಪರಿಹ ರಿಸುವ ಗೋಜಿಗೆ ಮುಂದಾಗಿಲ್ಲ. ಇಲ್ಲಿ ರಸ್ತೆ ಅಪಘಾತದ ಭಯವನ್ನು ಹೋಗಲಾಡಿಸಲು ಆದಷ್ಟು ಬೇಗನೆ ಹೈಮಾಸ್ಟ್ ದೀಪವನ್ನು ಅಳವಡಿಸುವ ಅವಶ್ಯಕತೆಯಿದೆ. ಇದರಿಂದ ರಾತ್ರಿಯ ವೇಳೆ ವಾಹನ ಸವಾರರು, ಪಾದ ಚಾರಿಗಳು ನಿಶ್ಚಿಂತೆ ಯಿಂದ ಸಂಚಾರ ನಡೆಸಲು ಸಾಧ್ಯ. ಸ್ಥಳೀಯ ಪಂಚಾ ಯತ್ ಆಡಳಿತ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಿ.
ರಂಜಿತ್, ಕಿನ್ನಿಗೋಳಿ

ರಾಜಕೀಯ ಪುಢಾರಿಯಾದ ಕ್ರಿಕೆಟ್ ದೇವರು

Posted by JAYAKIRANA Kirana on | 0 comments | Leave a comment...

ಶಿವಸೇನೆಯ ಸರ್ವೋಚ್ಛ ನಾಯಕ ಬಾಳಾ ಠಾಕ್ರೆಯ ಇತ್ತೀಚಿನ ಮಾತುಗಳು ಕೆಲವರಿಗೆ ಆಶ್ಚರ್ಯವನ್ನು ಉಂಟು ಮಾಡಿತಂತೆ. ಕ್ರಿಕೆಟ್ ದೇವರು ಎಂದು ಪರಿಗಣಿಸಲಾಗಿದ್ದ ಸಚಿನ್ ತೆಂಡುಲ್ಕರ್‌ರವರನ್ನು ರಾಜ್ಯಸಭೆಗೆ ಕಾಂಗ್ರೆಸ್ ಪಕ್ಷವು ನಾಮನಿರ್ದೇಶನ ಮಾಡಿರುವ ಬಗ್ಗೆ ಬಾಳಾ ಠಾಕ್ರೆ ‘ಇದೊಂದು ಕಾಂಗ್ರೆಸ್‌ನ ಕೆಟ್ಟ ಆಟ’ ಎಂದು ಜರೆದಿದ್ದರು. ಇದು ಮಹಾರಾಷ್ಟ್ರದ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಿಗೆ ಆಶ್ಚರ್ಯವನ್ನು ಉಂಟು ಮಾಡಿತಂತೆ. ಯಾಕೆಂದರೆ ಸಚಿನ್‌ರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿರುವುದರಿಂದ ಇಡೀ ದೇಶವೇ ಸಂತೋಷಗೊಂಡಿ ದ್ದರೆ ಬಾಳಾ ಠಾಕ್ರೆ ಯಾಕೆ ಅಸಂತೋಷ ಗೊಂಡಿದ್ದಾರೆ ಎಂಬ ಆಶ್ಚರ್ಯ ವಂತೆ ಅವರಿಗೆ.
ಠಾಕ್ರೆಯ ಇನ್ನೊಂದು ಮಾತು ಸಮಸ್ತ ಕನ್ನಡಿಗರೇ ಆಶ್ಚರ್ಯಪ ಡುವಂತಾದದ್ದೂ ಸುಳ್ಳಲ್ಲ. ಗಡಿ ವಿಚಾರದಲ್ಲಿ, ನೀರಿನ ವಿಚಾರದಲ್ಲಿ ಮಹಾ ರಾಷ್ಟ್ರದ ಪ್ರಾದೇಶಿಕವಾದದಲ್ಲಿ ಕನ್ನಡಿಗರನ್ನು ಶತ್ರುಗಳು ಎಂದು ಪರಿ ಗಣಿಸುತ್ತಿರುವ ಠಾಕ್ರೆ, ಕನ್ನಡಿಗರ ವಿರುದ್ಧ ಕಾರ್ಕೋಟಕ ವಿಷವನ್ನು ಕಕ್ಕು ತ್ತಿರುವ ಇದೇ ಠಾಕ್ರೆ ರಾಜ್ಯ ಸಭೆಗೆ ಸಚಿನ್ ತೆಂಡುಲ್ಕರ್ ಅವರಿಗಿಂತ ರಾಹುಲ್ ದ್ರಾವಿಡ್ ಸೂಕ್ತ ಎಂದು ಹೇಳಿರುವುದು ಸಮಸ್ತ ಕನ್ನಡಿಗರ ಮಾತ್ರವಲ್ಲ ಠಾಕ್ರೆ ಮತ್ತು ಕನ್ನಡಿಗರ ನಡುವೆ ಇರುವ ಭಿನ್ನಾಭಿಪ್ರಾಯದ ಬಗ್ಗೆ ತಿಳಿದವರೆಲ್ಲರೂ ಆಶ್ಚರ್ಯಗೊಂಡಿದ್ದಾರೆ.
ಒಂದು ಅರ್ಥದಲ್ಲಿ ಠಾಕ್ರೆ ಹೇಳಿದುದ್ದರಲ್ಲಿ ತಪ್ಪೇನೂ ಇಲ್ಲ ಎಂದನಿ ಸುತ್ತಿದೆ. ಈ ಅನಿಸಿಕೆಗೆ ಕನ್ನಡಿಗ ದ್ರಾವಿಡ್ ಬಗ್ಗೆ ಠಾಕ್ರೆ ಮೆಚ್ಚುಗೆಯ ಮಾತನ್ನಾಡಿದರು ಎಂಬುದು ಕಾರಣವಲ್ಲ. ಅಥವಾ ಇದು ಕಾಂಗ್ರೆಸ್ ವಿರುದ್ದ ಎಂದೂ ಅಲ್ಲ.
ನಿಜವಾಗಿ ನೋಡಿದರೆ ಸಚಿನ್ ತೆಂಡೂಲ್ಕರ್ ಕಾಂಗ್ರೆಸ್‌ನ ಇಂತಹಾ ಕೊಡುಗೆಯನ್ನು ಒಪ್ಪಿಕೊಂಡದ್ದು ಸರಿಯಲ್ಲ ಎಂಬುದು ಕ್ರಿಕೆಟ್ ಅಭಿ ಮಾನಿಗಳ ಅಭಿಪ್ರಾಯ. ಮಹಾರಾಷ್ಟ್ರದ ಪ್ರಾದೇಶಿಕ ಕಾಂಗ್ರೆಸ್‌ನ ಅಧ್ಯ ಕ್ಷರು ಹೇಳಿದಂತೆ ಸಚಿನ್‌ಗೆ ನೀಡಿದ ರಾಜ್ಯಸಭೆಯ ಕೊಡುಗೆಯಿಂದ ಸಮಸ್ತ ಭಾರತೀಯರು ಸಂತಸಗೊಂಡಿಲ್ಲ. ಬದಲಾಗಿ ಸ್ವಲ್ಪ ಮಟ್ಟಿನ ಕಸಿ ವಿಸಿಯನ್ನು ಹೊಂದಿದ್ದಾರೆ ಎಂದರೂ ಸುಳ್ಳಲ್ಲ. ದೇವರ ಸ್ಥಾನದಿಂದ ರಾಜಕಾರಣಿಯ ಸ್ಥಾನಕ್ಕೆ ಸಚಿನ್ ತೆಂಡೂಲ್ಕರ್ ಕುಸಿದುದರ ಬಗ್ಗೆ ಕೆಲ ವರಿಗೆ ತೀವ್ರ ವಿಷಾದವೂ ಇದೆ.
ಕ್ರಿಕೆಟ್ ಮತ್ತು ರಾಜಕಾರಣ ಇವೆರಡನ್ನು ಸಮಾನವಾಗಿ ಪರಿಗಣಿ ಸುತ್ತೇನೆ ಎಂದು ಸಚಿನ್ ಹೇಳಿರುವುದು ಕೇವಲ ಬೂಟಾಟಿಕೆ ಮಾತ್ರವಾ ಗಿರುತ್ತದೆ. ತನಗೆ ನೀಡಿದ ಕೊಡುಗೆಗೆ ಪ್ರತಿಯಾಗಿ ಸಚಿನ್ ಈ ಬೂಟಾ ಟಿಕೆಯನ್ನು ಪ್ರದರ್ಶಿಸಿದ್ದಾರೆ. ಎಲ್ಲಿಯಾದರೂ ರಾಜಕೀಯ ಮತ್ತು ಕ್ರೀಡೆ ಜತೆ ಜತೆಯಾಗಿ ಸಾಗುವುದು ಉಂಟೇ? ಸಚಿನ್‌ಗೆ ದೈವತ್ವವನ್ನು ನೀಡಿದ್ದು ಕ್ರಿಕೆಟ್. ಇಲ್ಲಿ ಎದುರಾಳಿಗಳು ಯಾರೆಂದರೆ ಬೌಲರ್, ಫೀಲ್ಡರ್‌ಗಳು ಮತ್ತು ಎದುರಾಳಿ ತಂಡದ ಅಭಿಮಾನಿಗಳು. ಅದೂ ಕೂಡಾ ನೇರಾತಿನೇರ. ಕ್ರಿಕೆಟ್ ವಲಯದಲ್ಲಿ ನಡೆಯುವ ಯಾವುದೇ ವಿವಾದ ವಾಗ್ವಾದಗಳಿಗೆ ತುಟಿ ಯನ್ನೇ ಬಿಚ್ಚದೆ ಕೇವಲ ಬ್ಯಾಟ್ ಮತ್ತು ಬಾಲ್ ಮೂಲಕ ಉತ್ತರವನ್ನು ಕೊಟ್ಟ ಸಚಿನ್ ಎದುರಾಳಿಗಳು ಮೆಚ್ಚುವಂತಹಾ ದೇವರಾಗಿ ಬಿಟ್ಟದ್ದು ಸುಳ್ಳೇ ನಲ್ಲ. ದೇವರು ಯಾವಾಗಲೂ ಮೌನವಾಗಿರಬೇಕು. ದೇವರೆಲ್ಲಿಯಾದರೂ ತುಟಿ ಬಿಚ್ಚಿ ಮಾತನಾಡ ತೊಡಗಿದರೆ ಒಂದೊಂದು ಶಬ್ದಕ್ಕೂ ಒಬ್ಬೊಬ್ಬ ಶತ್ರು ಹುಟ್ಟತೊಡಗುತ್ತಾನೆ. ಮೌನ ಸಾಧನೆಯ ಕ್ರಿಕೆಟ್ ಎಲ್ಲಿ ಮೂಟೆಗಟ್ಟಲೆ ಮಾತನ್ನೇ ಆಡಿ ಯಾವುದೇ ಕಾರ್ಯವನ್ನೇ ಮಾಡದ ರಾಜಕಾರಣ ಎಲ್ಲಿ? ಇವೆರಡನ್ನೂ ಸಮಾನವಾಗಿ ಪರಿಗಣಿಸುವುದು ಸಾಧ್ಯವೇ?
ಕಾಂಗ್ರೆಸ್ ಮನಸ್ಸು ಮಾಡಿದ್ದರೆ ಸಚಿನ್‌ರವರಿಗೆ ‘ಭಾರತ ರತ್ನ ನೀಡ ಬಹುದಿತ್ತು. ಹಾಗೊಂದು ವೇಳೆ ಆಗಿದ್ದರೆ ಅದು ಸಚಿನ್ ಕಿರೀಟಕ್ಕೆ ಇನ್ನೊಂದು ಚಿನ್ನದ ಗರಿಯಾಗುತ್ತಿತ್ತು. ಆದರೆ ಬಾಳಾ ಠಾಕ್ರೆ ಅಂದಂತೆ ಕಾಂಗ್ರೆಸ್ ‘ಡರ್ಟಿ ಪ್ಲೇ ಅಂದರೆ ಕೆಟ್ಟ ಆಟವನ್ನು ಆಡಲು ಸಚಿನ್‌ರನ್ನು ಉಪಯೋಗಿಸಿಕೊಳ್ಳು ತ್ತಿರುವಂತೆ ತೋರುತ್ತಿದೆ. ಅದು ಕೂಡಾ ಸಚಿನ್‌ರಿಗೆ ಕ್ರಿಕೆಟ್ ಜಗತ್ತಿನಲ್ಲಿ ಇನ್ನೂ ಸ್ಥಾನವಿರುವಾಗಲೇ. ಇದು ಕಾಂಗ್ರೆಸ್‌ನ ಸ್ವಾರ್ಥವಲ್ಲದೆ ಮತ್ತೇನೂ ಅಲ್ಲ. ಈ ನಿಟ್ಟಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾದ ರಾಹುಲ್ ದ್ರಾವಿಡ್‌ರ ನಾಮನಿರ್ದೇಶನ ಮಾಡಬಹುದಿತ್ತು ಎಂಬ ಠಾಕ್ರೆಯವರ ಮಾತಿನಲ್ಲಿ ಅಸಹಜವೇನೂ ಕಂಡು ಬರುವುದಿಲ್ಲ. ಕಾಂಗ್ರೆಸ್‌ನ ಕೊಡುಗೆಯಿಂದ ಸಚಿನ್ ತಲೆ ಮೇಲಿರುವ ದೇವರೆಂಬ ಕಿರೀಟ ಕಳಚಿ ಬೀಳುವುದಲ್ಲದೆ ಮತ್ತೇನೂ ಸಾಧನೆಯಾಗದು. ಅಗೋ ಚರವಾಗಿ ಕಾಂಗ್ರೆಸ್‌ನ ರಾಜಕೀಯ ವಿರೋಧಿಗಳು ಸಚಿನ್‌ರ ವಿರೋ ಧಿಗಳಾಗುತ್ತಾರೆ. ಗೊತ್ತುಗುರಿ ಇಲ್ಲದೆ ಕೆಸರೆರಚಾಟಕ್ಕೆ ಸಚಿನ್ ಗುರಿ ಯಾಗುವ ಸಾಧ್ಯತೆಗಳಿವೆ. ವೇದಿಕೆಗಳಲ್ಲಿ ಸಚಿನ್‌ರ ಕ್ರಿಕೆಟ್‌ನ ಸಾಧನೆ ಗಳು ಪ್ರಶಂಸೆಗೆ ಗುರಿಯಾಗುತ್ತಿದ್ದವು. ಮುಂದಿನ ದಿನಗಳಲ್ಲಿ ಸಚಿನ್ ಗಳಿಸಿದ ಸಂಪತ್ತು, ಅವುಗಳ ಹೂಡಿಕೆ, ಬಳಕೆ ಇವುಗಳ ಬಗ್ಗೆ ವ್ಯಾಪಕ ವಾದ ಚರ್ಚೆ ವಿರೋಧಿ ಪಕ್ಷದ ನೂರಾರು ವೇದಿಕೆಗಳಲ್ಲಿ ಚರ್ಚೆ ಯಾಗುತ್ತದೆ. ಇತ್ತೀಚಿನವರೆಗೂ ತಮ್ಮ ತಮ್ಮಲ್ಲೇ ಜನರು ಮಾತಾಡಿ ಕೊಳ್ಳುತ್ತಿದ್ದ ಸಚಿನ್‌ರ ದೋಷಗಳು ರೆಕ್ಕ ಪುಕ್ಕಗಳೊಂದಿಗೆ ವೇದಿಕೆ ಹತ್ತ ಲಿದೆ.
ಮುಂದಿನ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಸಚಿ ನ್‌ರ ಈ ನಾಮನಿರ್ದೇಶನವನ್ನು ಮಾಡಿದೆ ಎಂದು ಯಾರಾದರೂ ಭಾವಿಸಿದರೂ ಅದರಲ್ಲಿ ಯಾವುದೇ ತಪ್ಪಿಲ್ಲ. ಕ್ರಿಕೆಟ್ ದೇವರ ಕೋಟ್ಯಂತರ ಅಭಿಮಾನಿಗಳನ್ನು ಕಾಂಗ್ರೆಸ್ ಪರ ವಾಲಿಸುವ ಒಂದು ಪ್ರಯತ್ನ ಇದು ಎಂದೂ ಭಾವಿಸಬಹುದಾಗಿದೆ. ಕ್ರಿಕೆಟ್ ಪರವಾದ ಅಪಾರ ಅಭಿಮಾನವನ್ನು ರಾಜಕೀಯವಾಗಿ ನಗದೀಕರಿಸಿಕೊಳ್ಳಲು ಸಾಧ್ಯವೇ? ಕ್ರಿಕೆಟ್ ದೇವರ ಭಕ್ತವರ್ಗ ಸಚಿನ್‌ರನ್ನು ರಾಜಕೀಯ ಗುರುವನ್ನಾಗಿ ಸ್ವೀಕರಿಸೀತೇ? ಇದರಿಂದ ಕಾಂಗ್ರೆಸ್‌ಗೆ ಆಗುವ ಲಾಭ ವೇನು? ಸಚಿನ್‌ಗೆ ಆಗುವ ನಷ್ಟವೇನು ಎಂಬುದಕ್ಕೆ ಮುಂದಿನ ದಿನ ಗಳಲ್ಲಿ ಉತ್ತರ ಸಿಗಲಿದೆ.

ಸಂಕಟ ಬಂದಾಗ ವೆಂಕಟರಮಣ

Posted by JAYAKIRANA Kirana on | 0 comments | Leave a comment...


ಯಶಸ್ಸಿನ ತುತ್ತ ತುದಿಯಲ್ಲಿರುವಾಗ ಈ ರೀತಿ ತಮ್ಮ ಮನೆದೇವರ ಬಗ್ಗೆ ಗಮನಹರಿಸಬೇಕೆಂದು ವಿಜಯಮಲ್ಯರಿಗೆ ಅನಿಸಿರಲಿಲ್ಲ. ಮದ್ಯದ ಉದ್ಯಮದಲ್ಲಿ ಕೋಟಿ ಗಟ್ಟಲೆ ರೂಪಾಯಿ ಬಾಚಿದ ಹಣವನ್ನು ಕುದುರೆ ಬಾಲಕ್ಕೆ ಕಟ್ಟಿ ರೇಸ್ ಕೋರ್ಸ್‌ಗಳಲ್ಲಿ ಓಡಿಸುವಾಗ ಹಾಗೆ ಕಟ್ಟಿದ ಜೂಜಿನ ಒಂದಂಶವನ್ನಾದರೂ ದೇವರಿಗೆ ಅಥವಾ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ವಿಜಯ ಮಲ್ಯರಿಗೆ ಅನಿಸಲಿಲ್ಲ. ಎಫ್ ಟಿವಿ. ಪಾರ್ಟಿಗಳಲ್ಲಿ, ತಮ್ಮ ಮೊಮ್ಮಕ್ಲಳ ಪ್ರಾಯದ ಹುಡುಗಿಯರ ಜೊತೆ ನೃತ್ಯ ಮಾಡುವಾಗಲೂ ವಿಜಯ ಮಲ್ಯರ ಧರ್ಮಪ್ರಜ್ಞೆ ಜಾಗ್ರತವಾಗಿರಲಿಲ್ಲ.

ಧನುಷ್ ಬಂಟ್ವಾಳ
ದೇವರ ವಿಚಾರದಲ್ಲಿ ಯಾರು ಎಷ್ಟು ವಿರೋಧ ವ್ಯಕ್ತಪಡಿಸಿದರೂ ಒಂದಲ್ಲ ಒಂದು ಕಾಲದಲ್ಲಿ ದೇವರ ನೆನಪು ಆಗಿಯೇ ಆಗುತ್ತದೆ. ಅದಕ್ಕಾ ಗಿಯೇ ಸಂಕಟ ಬಂದಾಗ ವೆಂಕಟರಮಣ ಎಂಬ ಗಾದೆ ಹುಟ್ಟಿಕೊಂಡಿದೆ. ವಿಚಾರವಾದಿಗಳು, ಬುದ್ದಿಜೀವಿಗಳು ದೇವರ ಬಗ್ಗೆ ಜನರು ಮಾಡುವ ಹರಕೆ, ಜಾತ್ರೆ, ಕೋಲ, ಬಲಿಗಳನ್ನು ಮೂಢನಂಬಿಕೆ ಎಂದು ಜರೆಯುತ್ತಲೇ ಇರು ತ್ತಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಪುಟಗಟ್ಟಲೆ ಬರೆಯುವವರೂ ಒಂದಲ್ಲ ಒಂದು ದಿನ ದೇವರಿಗೆ ಶರಣು ಹೋಗುತ್ತಿರುವುದು ಕಂಡು ಬರುತ್ತದೆ. ದೇವರು ಇದ್ದಾನೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ದೇವರು ಎನ್ನುವುದು ಮನೋವೈಜ್ಞಾನಿಕವಾದ ಒಂದು ಸಿದ್ಧಾಂತ ಎನ್ನುವುದನ್ನು ನಾವು ಒಪ್ಪಿಕೊಳ್ಳ ಬೇಕಾಗಿದೆ. ಇಲ್ಲ ಸಲ್ಲದ ಅನಾಚಾರ ಮಾಡಿದವರಿಗೆ, ದುಂದುವೆಚ್ಚಗಾರರಿಗೆ, ಭೌತಿಕ ವಾದದಲ್ಲಿ ಮುಳುಗೇಳುತ್ತಾ ಸಾರ್ವಜನಿಕವಾಗಿ ಅಶ್ಲೀಲತೆಯನ್ನು ಪ್ರಚಾರ ಪಡಿಸುವವರೂ ಸಂಕಟ ಬಂದಾಗ ಮದ್ಯ, ಹೆಣ್ಣು, ಹೊಣ್ಣುಗಳ ಮೊರೆ ಹೋಗುವುದಿಲ್ಲ. ಎಲ್ಲರೂ ಅಗೋಚರನಾದ ಆ ದೇವರ ಮೊರೆ ಹೋಗುತ್ತಾರೆ.
ಇದಕ್ಕೆ ನಮ್ಮದೇ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಉದ್ಯಮಿ ವಿಜಯ ಮಲ್ಯ ಒಂದು ಸ್ಪಷ್ಟವಾದ ಉದಾಹರಣೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜನಿಸಿದ ವಿಜಯ ಮಲ್ಯ ಅವರಿಗೆ ಈಗ ಅವರ ಕುಟುಂಬದ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಬೇಕು. ದೇವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಎಂದು ಅನಿಸುತ್ತಿದೆಯಂತೆ. ಈ ಬಗ್ಗೆ ವಿಚಾರವನ್ನು ಯಾರೋ ಜ್ಯೋತಿಷ್ಯರು ಮಲ್ಯರ ಮನಸ್ಸಿಗೆ ತುರುಕಿಸಿರಲೂಬಹುದು. ಈ ಬಗ್ಗೆ ವಿಜಯ ಮಲ್ಯ ಈಗ ಕಾರ್ಯಪ್ರವೃತ್ತರಾಗುತ್ತಿರುವುದು ಕಂಡು ಬರು ತ್ತದೆ. ಯಶಸ್ಸಿನ ತುತ್ತ ತುದಿಯಲ್ಲಿರುವಾಗ ಈ ರೀತಿ ತಮ್ಮ ಮನೆದೇವರ ಬಗ್ಗೆ ಗಮನಹರಿಸಬೇಕೆಂದು ವಿಜಯಮಲ್ಯರಿಗೆ ಅನಿಸಿರಲಿಲ್ಲ. ಮದ್ಯದ ಉದ್ಯಮದಲ್ಲಿ ಕೋಟಿಗಟ್ಟಲೆ ರೂಪಾಯಿ ಬಾಚಿದ ಹಣವನ್ನು ಕುದುರೆ ಬಾಲಕ್ಕೆ ಕಟ್ಟಿ ರೇಸ್ ಕೋರ್ಸ್‌ಗಳಲ್ಲಿ ಓಡಿಸುವಾಗ ಹಾಗೆ ಕಟ್ಟಿದ ಜೂಜಿನ ಒಂದಂಶವ ನ್ನಾದರೂ ದೇವರಿಗೆ ಅಥವಾ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ವಿಜಯ ಮಲ್ಯರಿಗೆ ಅನಿಸಲಿಲ್ಲ. ಎಫ್. ಟಿ.ವಿ. ಪಾರ್ಟಿಗಳಲ್ಲಿ, ತಮ್ಮ ಮೊಮ್ಮಕ್ಲಳ ಪ್ರಾಯದ ಹುಡುಗಿಯರ ಜೊತೆ ನೃತ್ಯ ಮಾಡುವಾಗಲೂ ವಿಜಯ ಮಲ್ಯರ ಧರ್ಮಪ್ರಜ್ಞೆ ಜಾಗೃತವಾಗಿರಲಿಲ್ಲ. ಕ್ರಿಕೆಟ್ ಮೈದಾನಗಳಲ್ಲಿ ರಾಜಾರೋಷ ವಾಗಿ ಹರೆಯದ ಹೆಣ್ಣುಗಳಿಂದ ಸೇವೆ ಪಡೆಯುವಾಗ ಹೀಗೆ ಮಾಡುವುದು ಸರಿಯಲ್ಲ. ಇದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಮಲ್ಯ ಯೋಚಿಸಲೇ ಇಲ್ಲ. ತನ್ನ ಮಗನನ್ನೂ ಇವರು ಬೆಳೆಸಿದ ರೀತಿ ಕಂಡರೆ ನಮ್ಮ ದೇಶ ಬಿಡಿ ಜಗತ್ತಿನ ಯಾವುದೇ ಮೂಲೆಯ ದೇವರೂ ಮೆಚ್ಚುವಂತಿರಲಿಲ್ಲ. ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದ ಟಿವಿಯ ಮುಂದೆಯೇ ಇವರ ಮುದ್ದಿನ ಕುವರ ಹೆಣ್ಣೊಬ್ಬಳ ಜತೆ ಅಸಭ್ಯವಾಗಿ ವರ್ತಿಸುತ್ತಿರುವುದು ಪ್ರಸಾರವಾಗಿತ್ತು. ಇದೆಲ್ಲಾ ನಡೆದದ್ದು ದುಡ್ಡಿನ ಮದದಿಂದ. ಆದರೆ ದುಡ್ಡಿನ ಮದ ಎಷ್ಟರವರೆಗೆ ಇರುತ್ತದೆ ಎಂಬುದಕ್ಕೆ ವಿಜಯ ಮಲ್ಯ ಒಂದು ಪ್ರಮುಖ ಸಾಕ್ಷಿಯಾಗಿದ್ದಾರೆ. ದುಡ್ಡಿರುವಾಗ ಇವ ರಿಗೆ ದುಡ್ಡೇ ದೇವರಾಗಿ ಕಂಡು ಬಂದಿತ್ತು. ಅದರ ಮುಂದೆ ಬೇರೆ ಏನೂ ಇಲ್ಲ ಎಂದು ಭಾವಿಸಿದ್ದರು. ಆದರೆ ತಾನು ಸ್ಥಾಪಿಸಿದ ಉದ್ಯಮಗಳೆಲ್ಲ ನೆಲಕಚ್ಚ ತೊಡಗಿದಾಗ ಆಕಾಶದಲ್ಲಿ ಹಾರಾಡುತ್ತಿದ್ದ ಕಿಂಗ್‌ಫಿಶರ್ ನೆಲದಲ್ಲಿ ತೆವಳಲೂ ಅಸಾಧ್ಯವಾದಾಗ ಬಹುಶಃ ವಿಜಯ ಮಲ್ಯಗೆ ದುಡ್ಡೆಂಬ ದೇವರಲ್ಲಿರುವ ವಿಶ್ವಾಸ ಕಡಿಮೆಯಾಗ ತೊಡಗಿರಬೇಕು. ಅದಕ್ಕಾಗಿಯೇ ದುಡ್ಡಿಗಿಂತಲೂ ಮೇಲಾದ ತನ್ನ ಮನೆ ದೇವರ ಅಥವಾ ಮಾನಸಿಕ ಸಮಾಧಾನದ ಮೊರೆಯನ್ನು ಇವರು ಹೊಕ್ಕಿದ್ದಾರೆ ಎಂದರೂ ತಪ್ಪಾಗಲಾರದು.
ಹಿಂದುಗಳಲ್ಲಿ ಮನೆದೇವರ ಕಲ್ಪನೆ ಅಥವಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ದೈವಗಳ ಕಲ್ಪನೆಯಿಂದ ಆಯಾಯ ಕುಟುಂಬಗಳಿಗೆ ಒಂದು ಅಗೋ ಚರವಾದ ಸಮಾಧಾನವನ್ನು ನೀಡುತ್ತದೆ. ದೇವರು ಇದ್ದಾನೆಯೋ ಇಲ್ಲವೋ ಅದು ಬೇರೆ ಮಾತು. ಆದರೆ ಒಂದು ಕುಟುಂಬದವರೆಲ್ಲರೂ ಸೇರಿಕೊಂಡು ಒಂದು ದೇವರು ಮತ್ತು ದೈವವನ್ನು ಏಕ ಮನಸ್ಸಿನಿಂದ ಆರಾಧಿಸಿದಾಗ ಅಲ್ಲಿ ಒಂದು ಅಗೋಚರವಾದ ಶಕ್ತಿ ನಿರ್ಮಾಣವಾಗುತ್ತದೆ. ಈ ಶಕ್ತಿಯೇ ಆ ಕುಟುಂಬದ ಸದ ಸ್ಯರು ಮಾನಸಿಕವಾಗಿ ಸಧೃಡರಾಗುವಂತೆ ಪ್ರೇರೇಪಣೆ ನೀಡುತ್ತದೆ. ವೈಯುಕ್ತಿವಾಗಿ ತಮಗೆ ಒದಗಿ ಬಂದ ಕಷ್ಟ ಕಾರ್ಪಣ್ಯಗಳ ಚರ್ಚೆಯೂ ಮನೆದೇವರ ಮುಂದೆ ಪ್ರಸ್ತಾಪವಾಗುವುದುಂಟು. ಮನಸ್ಸನ್ನು ಕೊರೆಯುತ್ತಿರುವ ಸಮಸ್ಯೆಯೊಂದು ಇನ್ನೊ ಬ್ಬರ ಮುಂದೆ ಹೇಳಿಕೊಳ್ಳುವಂತಾದರೆ ಆ ಸಮಸ್ಯೆಯ ಒತ್ತಡ ಅರ್ಧದಷ್ಟು ಕಡಿತ ವಾಗಿಬಿಡುತ್ತದೆ ಎಂದು ಮನಶ್ಶಾಸ್ತ್ರ ಹೇಳುತ್ತದೆ. ಈ ನಿಟ್ಟಿನಲ್ಲಿ ಮನೆದೇವರ ಅಥವಾ ದೈವದ ಕಲ್ಪನೆ ವರ್ಷಕ್ಕೊಂದೆರಡು ಬಾರಿ ಕುಟುಂಬದ ಎಲ್ಲಾ ಸದಸ್ಯರು ಇಲ್ಲಿ ಒಟ್ಟು ಸೇರಿ ಸಾಮೂಹಿಕ ಪ್ರಾರ್ಥನೆ. ಒಟ್ಟಾಗಿ ಸಮಯ ಕಳೆಯುವುದರಿಂದ, ಊಟ, ಪ್ರಸಾದ ಸ್ವೀಕರಿಸುವುದರಿಂದ ಪ್ರತಿಯೊಬ್ಬರ ಮನಸ್ಸಿನ ಮೇಲೂ ಅತ್ಯುತ್ತಮವಾದ ಪರಿಣಾಮ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆದೇವರ, ದೈವದ ವಿಜೃಂ ಭಣೆ ಮಾಡುವ ಪರಿಪಾಠ ಉಂಟಾಗಿದ್ದರೂ ಸರಳವಾಗಿ ಮನೆದೇವರ ಮುಂದೆ ಸೇರಿ ದೇವರನ್ನು ಆರಾಧಿಸುವುದರಿಂದ ಬಹಳಷ್ಟು ಒಳ್ಳೆಯ ಪರಿಣಾಮಗಳು ಬೀರು ತ್ತವೆ. ಹಲವು ದಶಕಗಳಿಂದ ಮನೆ ಬಿಟ್ಟು ಹೋಗಿ, ಅಡ್ರಸ್ಸೇ ಇಲ್ಲದ ವ್ಯಕ್ತಿಗಳೂ ಒಂದಲ್ಲ ಒಂದು ದಿನ ಧುತ್ತನೆ ಮೂಲ ಮನೆಯಲ್ಲಿ ಪ್ರತ್ಯಕ್ಷರಾಗಿ ಮನೆದೇವರಿಗೆ ಪೂಜೆ ಸಲ್ಲಿಸುತ್ತಿರುವುದೂ ಕಂಡು ಬರುತ್ತದೆ. ಇದೆಲ್ಲಾ ದೈವ ಶಕ್ತಿ ಎಂದು ಆಸ್ತಿ ಕರು ಭಾವಿಸಿದರೆ ಖಂಡಿತವಾಗಿಯೂ ಇದೊಂದು ಮನೋವೈಜ್ಞಾನಿಕತೆ ಎಂದು ಹೇಳಬಹುದಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ವಿಜಯ ಮಲ್ಯರಿಗೂ ಇಂತಹ ದುಸ್ಥಿತಿ ಒದಗಿದೆ. ಇವರು ಕೋಟ್ಯಾನು ಕೋಟ್ಯಧಿಪತಿ ಎಂಬುದು ನಿಜ. ಇವರಲ್ಲಿದ್ದ ಸಂಪತ್ತು ಈ ಜನ್ಮದಲ್ಲಿ ಕರಗಲಾರದೂ ಎಂಬುದೂ ನಿಜ. ಆದರೆ ಕೆಲವು ಪ್ರಮುಖ ಉದ್ಯಮಗ ಳಲ್ಲಿ ಉಂಟಾದ ಸೋಲು ವಿಜಯ ಮಲ್ಯರನ್ನು ಆಲೋಚನೆಗೀಡು ಮಾಡಿದೆ ಎಂಬುದೂ ಅಷ್ಟೇ ಸತ್ಯ. ಈಗೀಗ ಮಲ್ಯರಿಗೆ ದುಡ್ಡಿಗಿಂತ ದೇವರೇ ಮಿಗಿಲು ಎಂದು ಅನಿಸುತ್ತಿದೆ. ಅದಕ್ಕಾಗಿ ನಮ್ಮ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಮಲ್ಯ ಸುತ್ತು ಬರುತ್ತಿದ್ದಾರೆ. ಸೇವೆ, ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಿದ್ದಾರೆ. ತಮ್ಮ ಬಂಟ್ವಾಳದ ಮನೆಯ ದೇವರ ಜತೆಗೆ ಪರಿವಾರ ದೇವತೆಗಳ ಜೀರ್ಣೋದ್ದಾರಕ್ಕೆ ಮನಸ್ಸು ಮಾಡುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಹಾಗಿರುವಾಗ ಸಂಕಟ ಬಂದಾಗ ವೆಂಕಟರಮಣ ಎಂಬ ಗಾದೆ ಸಾರ್ವಕಾಲಿಕ ಸತ್ಯ ಎಂದೂ ಸಾಬೀತಾಗುತ್ತಿದೆ.

ಆತ್ಮವಿಶ್ವಾಸದಿಂದ ಇರಿ, ಆಗಿರುವ ಕೆಟ್ಟ ಘಟನೆಯನ್ನು ಮರೆಯಿರಿ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನ್ನ ವಯಸ್ಸು ೨೫. ಡಿಗ್ರಿ ಕಲಿತಿದ್ದೇನೆ. ಒಬ್ಬ ಅಣ್ಣ ಮುಂಬೈನಲ್ಲಿದ್ದಾರೆ. ನನ್ನ ಹೆತ್ತವರು ತೀರಿಕೊಂಡಿದ್ದರಿಂದ ನಾನು ಚಿಕ್ಕಮ್ಮನ ಜೊತೆ ವಾಸವಿದ್ದೇನೆ. ನಾನು ಸ್ಥಳೀಯ ಫ್ಯಾಕ್ಟರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದೇನೆ. ನನ್ನ ಸಮಸ್ಯೆಯೇನೆಂದರೆ, ನಾನು ವರ್ಷದ ಹಿಂದೆ ಹಣಕಾಸಿನ ಅಗತ್ಯ ವಿದ್ದ ಸಂದರ್ಭದಲ್ಲಿ ನಮ್ಮ ಫ್ಯಾಕ್ಟರಿ ಮೆನೇಜರ್ ಬಳಿ ಸ್ವಲ್ಪ ಹಣ ವನ್ನು ಸಾಲ ಪಡೆದಿದ್ದೆ. ಅವರಿಗೆ ಮದುವೆಯಾಗಿ ದೊಡ್ಡ ಮಕ್ಕಳೂ ಇದ್ದಾರೆ. ಅವರಿಗೆ ಅಂದಾಜು ೫೦ ವಯಸ್ಸಾಗಿರಬಹುದು. ಅವರು ಹೇಳಿದ ಸಮಯಕ್ಕೆ ನನಗೆ ಹಣ ಹಿಂತಿರುಗಿಸಲು ಆಗಲಿಲ್ಲ, ಅವರು ಹಣವನ್ನು ಕೇಳಲೂ ಇಲ್ಲ. ನನಗೆ ಇದೇ ಚಿಂತೆಯಾ ಗಿತ್ತು. ಆದರೆ ಅವರು ನನ್ನಲ್ಲಿ ‘ಹಣ ಕೊಡುವುದು ಬೇಡ, ನನ್ನೊಂ ದಿಗೆ ಒಮ್ಮೆ ಮೈಸೂರಿಗೆ ತಿರುಗಾಡಲು ಬಾ ಎಂದು ಕರೆದರು. ನಾನು ಅವರ ಮನೆಯವರೂ ಇರುತ್ತಾರೆ ಎಂದು ಭಾವಿಸಿ ಅವರ ಜೊತೆ ಹೋಗಲು ಒಪ್ಪಿದೆ. ಆದರೆ ಅವರು ಒಬ್ಬರೇ ಹೋಗು ವುದು ಎಂದು ನನಗೆ ಕೊನೆಯಕ್ಷಣದಲ್ಲಿ ತಿಳಿಯಿತು. ನಾವು ಕಾರಿ ನಲ್ಲಿ ಮೈಸೂರಿಗೆ ಹೋದೆವು. ನಾನು ಬೇಡವೆಂದರೂ ಅವರು ಬಿಡಲಿಲ್ಲ. ನಾವು ಲಾಡ್ಜ್‌ನಲ್ಲಿ ಉಳಿದೆವು. ರಾತ್ರಿ ನನಗೆ ಕುಡಿ ಯಲು ಜ್ಯೂಸ್ ಕುಡಿಯಲು ಕೊಟ್ಟರು. ನನಗೆ ಅಮಲೇರಿದಂ ತಾಗಿತ್ತು. ನನಗೆ ಎಚ್ಚರವಾಗುವಾಗ ನಾನು ರೂಮಿನಲ್ಲಿ ಎಲ್ಲ ವನ್ನೂ ಕಳೆದುಕೊಂಡಿದ್ದೆ. ಮರುದಿನವೂ ನನ್ನನ್ನು ಬಳಸಿಕೊಂಡರು. ನನಗೆ ಮೊದಲ ಬಾರಿ ಇಂಥ ಅನುಭವವಾಗಿತ್ತು. ನಾನು ಈ ವಿಷಯವನ್ನು ಯಾರಲ್ಲೂ ಹೇಳಿರಲಿಲ್ಲ. ಮರುದಿನ ನನ್ನನ್ನು ಊರಿಗೆ ಕರೆದುಕೊಂಡು ಬಂದರು. ಆ ಬಳಿಕವೂ ನನ್ನನ್ನು ಕೆಲವು ಬಾರಿ ಮನೆಗೆ ಕರೆದು ಸೆಕ್ಸ್ ಮಾಡಿದ್ದಾರೆ. ಅವರು ಸೆಕ್ಸ್ ಮಾಡುವಾಗ ಕಾಂಡೋಂ ಬಳಸುತ್ತಾರೆ. ನನ್ನ ಸಮಸ್ಯೆಯೇನೆಂದರೆ ನನ್ನ ಮದುವೆಗೆ ಮನೆಯಲ್ಲಿ ಯೋಚನೆ ಮಾಡುತ್ತಿದ್ದಾರೆ. ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ಮನಸು ಸರಿಯಿಲ್ಲ, ಏನು ಮಾಡಲಿ?
ಸಲಹೆ: ನೀವು ಮಾಡಿರುವುದು ತಪ್ಪೆಂದು ನಿಮಗೆ ಈಗಲಾದರೂ ಅನಿಸಿ ತಲ್ಲ? ಮತ್ತೇಕೆ ತಡ, ಅಂತಹ ಕೆಲಸವನ್ನು ಬಿಟ್ಟು ಬಿಡಿ. ಕಷ್ಟಕಾಲಕ್ಕೆ ಸಹಾಯ ಮಾಡಿದರೆಂದು ಶೀಲ ಕಳೆದುಕೊಳ್ಳುವುದು ನ್ಯಾಯವಲ್ಲ. ನಿಮ್ಮ ಎಚ್ಚರದಲ್ಲಿ ನೀವಿ ದ್ದರೆ ಹೀಗಾಗುತ್ತಿರಲಿಲ್ಲ. ಈಗ ಮಾಡುತ್ತಿರುವ ಕೆಲಸ ಯಾವ ಹಾದರಕ್ಕೂ ಕಡಿಮೆ ಯಿಲ್ಲ ಎನ್ನುವುದನ್ನು ತಿಳಿಯಿರಿ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದಕ್ಕೆ ಪರಿ ಹಾರ ಎನ್ನುವುದು ಇದ್ದೇ ಇದೆ. ಹೀಗಿರುವಾಗ ಅನಿವಾರ್ಯತೆ ಸೃಷ್ಟಿಸಿಕೊಂಡು ಶೀಲವನ್ನು ಆ ವ್ಯಕ್ತಿಗೆ ಧಾರೆ ಎರೆದಿದ್ದೀರಿ. ಅವರಿಗೆ ವಯಸ್ಸಾಗಿದೆ, ಮದುವೆಯಾಗಿ ಹೆಂಡತಿ-ಮಕ್ಕಳು ಇದ್ದಾರೆ. ಮಾತ್ರವಲ್ಲದೆ, ವಯಸ್ಸೂ ನಿಮಗಿಂತ ದುಪ್ಪಟ್ಟಾಗಿದೆ. ಹೀಗಿದ್ದೂ ಅವರಿಗೆ ಮರುಳಾಗಿ, ಗುಟ್ಟಾಗಿ ಸಂಸಾರ ಮಾಡುತ್ತಿದ್ದೀರಿ. ಇದು ಮುಂದೆ ಸಮಸ್ಯೆಯಾಗಬಹುದು. ಕೂಡಲೇ ನಿಮ್ಮನ್ನು ನೀವು ತಿದ್ದಿಕೊಳ್ಳಿ. ಅಮಾಯಕ, ಮುಗ್ಧ ಹೆಣ್ಣು ಮಕ್ಕಳು ಸಿಕ್ಕಿದರೆ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಸರ್ವಸ್ವ ವನ್ನೂ ದೋಚುವ ಇಂಥ ಕಾಮುಕರು ಇದ್ದೇ ಇರುತ್ತಾರೆ. ಪರಿಚಯ ಯವಿಲ್ಲದವರ ಜತೆ ಲೈಂಗಿಕ ಸಂಬಂಧ ಅಪಾಯಕಾರಿ.
 ಆ ವ್ಯಕ್ತಿ ನಿಮ್ಮ ಜತೆ ಕಾಂಡೋಂ ಬಳಸಿ ಸೇರಿರುವುದರಿಂದ ಅಪಾಯ ಇಲ್ಲದಿದ್ದರೂ ಇದರಿಂದ ಆರೋಗ್ಯದಲ್ಲಿ ಸಮಸ್ಯೆಯೇ ಉಂಟಾ ಗದು ಎಂದು ಹೇಳಲು ಸಾಧ್ಯವಿಲ್ಲ. ಕಾಂಡೋಂ ಗರ್ಭ ತಡೆ ಗಟ್ಟಲು ಹಾಗೂ ಲೈಂಗಿಕ ವ್ಯಾಧಿಗಳಿಂದ ರಕ್ಷಿಸಿಕೊಳ್ಳಲು ಸಹಕಾರಿ ಎನ್ನಲಾ ಗುತ್ತಾದರೂ ಇದು ಲೈಂಗಿಕ ಸಂಪರ್ಕದ ವೇಳೆ ಪರಿಪೂರ್ಣ ಸುರಕ್ಷೆ ನೀಡುತ್ತದೆ ಎನ್ನಲಾಗದು. ಆದ್ದರಿಂದ ಚೆಲ್ಲಾಟ ಬೇಡ. ಮನ ಸ್ಸಿನ ಭಾವನೆ, ಕಾಮನೆಗಳಿಗೆ ಕಡಿವಾಣ ಹಾಕಿ. ಅವರ ಮನೆಗೆ ಹೋಗುವುದು, ಸೆಕ್ಸ್ ಮಾಡುವುದು ಬೇಡ. ಮನೆಮಂದಿ ಆರಿಸಿದ ಹುಡುಗನನ್ನು ಆದಷ್ಟು ಬೇಗನೆ ಮದುವೆಯಾಗಿ. ಹಾಗೇ ಆ ವ್ಯಕ್ತಿಗೆ ಇನ್ನು ನನ್ನ ವಿಚಾರಕ್ಕೆ ಬರಬೇಡಿ ಎಂದು ಹೇಳಿ. ಆತ ಕೇಳದೇ ಇದ್ದರೆ ಮನೆಯಲ್ಲಿ ಪತ್ನಿಗೆ ಹೇಳುವುದಾಗಿ ಹೇಳಿ, ಸಮಾಜದಲ್ಲಿ ಮರ್ಯಾದೆ ಉಳಿಸಿಕೊಂಡಿರುವ ಇಂಥವರು ಸುಮ್ಮನಾಗುತ್ತಾರೆ. ಆತ್ಮವಿಶ್ವಾಸ ದಿಂದ ಇರಿ, ಆಗಿಹೋಗಿದ್ದಕ್ಕೆ ಸುಮ್ಮನೆ ಚಿಂತಿಸಿದರೆ ಫಲವಿಲ್ಲ. ಮನಸು ಸರಿಯಿಲ್ಲ ಎಂದು ಒಬ್ಬರೇ ಇರದಿರಿ, ಮನೆಯಲ್ಲಿ ಎಲ್ಲರೊಂದಿಗೆ ಬೆರೆ ಯುತ್ತಿರಿ. ಆಗ ಬೇಸರವಿರುವುದಿಲ್ಲ.

05-05-2012

Posted by JAYAKIRANA Kirana on | 0 comments | Leave a comment...

ಮೇಷ : ಉದ್ಯೋಗ ರಂಗದಲ್ಲಿ ಸಮಸ್ಯೆಗಳು ಇರುತ್ತದೆ.
ವೃಷಭ : ವ್ಯಾಪಾರ ವ್ಯವಹಾರದಲ್ಲಿ ಲಾಭ ಕಡಿಮೆ.
ಮಿಥುನ : ಕುಟುಂಬದಲ್ಲಿ ಒಮ್ಮತ ಇರುತ್ತದೆ.
ಕರ್ಕಾಟಕ : ಶುಭ ಕೆಲಸ ಗಳನ್ನು ನಡೆಸುವ ಯೋಗ ಇದೆ.
ಸಿಂಹ : ಹಣಕಾಸಿನ ಸಮಸ್ಯೆ ದೂರವಾಗುತ್ತದೆ.
ಕನ್ಯಾ: ಮಕ್ಕಳಿಂದ ಸಹಕಾರ ದೊರೆಯುವುದು.
ತುಲಾ : ಭೂಮಿ ವ್ಯವಹಾರದಲ್ಲಿ ಪ್ರಗತಿ ಇರುವುದು.
ವೃಶ್ಚಿಕ : ಹಿರಿಯರ ಆರೋಗ್ಯದ ಸಮಸ್ಯೆ ಇರುತ್ತದೆ.
ಧನು : ಅನಾ ರೋಗ್ಯದಿಂದ ತೊಂದರೆಯನ್ನು ಅನುಭವಿಸುತ್ತೀರಿ.
ಮಕರ : ವ್ಯಾಪಾರ ವ್ಯವಹಾರದಲ್ಲಿ ಲಾಭ ಇರುತ್ತದೆ.
ಕುಂಭ : ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ.
ಮೀನ : ಹಣಕಾಸಿನ ತೊಂದರೆ ಇದೆ.

05-05-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೯೮೬೬೪೮೧೧೮.
ಸುರತ್ಕಲ್ : ಬಟ್ಟೆ ಅಂಗಡಿಗೆ ಲೇಡಿಸ್ ಕಟ್ಟಿಂಗ್ ಮಾಸ್ಟರ್ ಬೇಕು ೯೮೪೪೫೪೩೧೫೧.
ಉಡುಪಿ : ಎಲೆಕ್ಟ್ರಾನಿಕ್ಸ್ ಶಾಪಿಗೆ ಲೇಡಿಸ್ ಕ್ಯಾಶಿಯರ್ ಬೇಕು ೯೮೮೦೨೧೯೯೪೯.
ಮೂಡಬಿದ್ರೆ : ದೋಸೆ ಮಾಡುವ ಹೆಂಗಸರು ಬೇಕು. ೯೯೦೨೦೭೧೫೪೯.
ಕಂಕನಾಡಿ :ಟೈಲರಿಂಗ್ ಶಾಪಿಗೆ ಅಲ್ ಟ್ರೇಶನ್ ಮತ್ತು ಫಿನಿಶಿಂಗ್‌ಗೆ ಜನ ಬೇಕು ೯೮೮೬೪೪೩೯೬೧.
ಮಂಗಳೂರು : ಪ್ಲಂಬರ್ & ಎಲೆಕ್ಟ್ರಿಶಿಯನ್ ಬೇಕು. ೯೮೪೪೬೬೭೦೨೪
ತೊಕ್ಕೊಟ್ಟು : ಬಾರ್ & ರೆಸ್ಟೋರೆಂಟ್‌ಗೆ ಕಿಚನ್ ಹೆಲ್ಪರ್ ಮತ್ತು ವೇಟರ್ (ಪಾರ್ಟ್‌ಟೈಂ) ಬೇಕು. ೯೭೪೨೨೮೫೪೮೫.
ತೊಕ್ಕೊಟ್ಟು ವೆಜ್ ರೆಸ್ಟೋರೆಂಟಿಗೆ ಚೈನೀಸ್ ಕುಕ್ ಬೇಕಾಗಿದ್ದಾರೆ. ೯೯೦೧೧೪೩೦೮೯
ಮಂಗಳೂರು : ಬಟ್ಟೆ ಅಂಗಡಿಗೆ ಸೇಲ್ಸ್ ಗರ್ಲ್ಸ ಬೇಕು. ೯೮೪೫೫೯೬೯೬೦
ಉಡುಪಿ : ಬೇಕರಿಗೆ ಜನ ಬೇಕು ೯೭೪೩೪೯೨೯೧೨
ಕೈಕಂಬ : ಹೆಲ್ಪರ್ ಕೆಲಸಕ್ಕೆ ಹುಡುಗರು, ಹುಡುಗಿಯರು ಬೇಕು.೯೮೪೪೦೦೯೯೦೫
ಕೈಕಂಬ : ಕವಾಟು ಫ್ಯಾಕ್ಟರಿಗೆ ಕೆಲಸಕ್ಕೆ ಹೆಲ್ಪರ್ ಬೇಕು.೯೮೪೫೯೫೬೧೪೦
ಮಂಗಳೂರು :ಸೂಪರ್ ಮಾರ್ಕೆಟ್‌ಗೆ ಮ್ಯಾನೇಜರ್ ಬೇಕು. ೯೮೮೦೨೩೯೧೭೦
ಮಂಗಳೂರು :ಸ್ಪೇರ್ ಪಾರ್ಟ್ಸ್ ಅಂಗಡಿಗೆ ಕೆಲಸಕ್ಕೆ ಜನ ಬೇಕು. ೯೩೪೩೩೫೫೮೩೫
ಮಂಗಳೂರು : ಲೇಡಿಸ್ ಟೈಲರ್ ಬೇಕು ೮೦೫೦೧೬೩೨೭೮.
ಮಂಗಳೂರು : ಹೋಟೆಲ್‌ಗೆ ವೇಟರ್, ಕಿಚನ್ ಹೆಲ್ಪರ್ ಬೇಕು ೯೮೪೫೯೮೨೬೨೫.
ಕದ್ರಿ: ಲಾಂಡ್ರಿಗೆ ಜನ ಬೇಕು ೨೨೨೧೯೪೫.
ಕಾರ್ಕಳ : ಬಾರ್‌ಗೆ ವೇಟರ್, ಕ್ಲೀನ್ ಬೇಕು ೯೮೪೫೮೭೪೦೬೮
ಮಂಗಳೂರು : ಹೋಂ ಪ್ರೊಡಕ್ಟ್‌ಗೆ ಯುವಕ-ಯುವತಿಯರು ಬೇಕು ೯೦೬೦೯೩೨೩೫೧.
ಮಂಗಳೂರು : ಪ್ರೆಸ್‌ಗೆ ಬೈಂಡಿಂಗ್ ಕೆಲಸಕ್ಕೆ ಜನ ಬೇಕು ೨೨೧೧೦೫೦.
ಮಂಗಳೂರು : ಎಲೆಕ್ಟ್ರಾನಿಕ್ಸ್ ಅಂಗಡಿಗೆ ಯುವಕರು ಬೇಕು ೪೨೭೪೦೧೦.
ಮಂಗಳೂರು : ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೦೦೪೩೪೯೪೮.
ಕಂಕನಾಡಿ : ಬಟ್ಟೆ ಅಂಗಡಿಗೆ ಸೇಲ್ಸ್‌ಗೆ ಜನ ಬೇಕು ೯೯೪೫೯೯೬೭೮೭.
ಬಿಕರ್ನಕಟ್ಟೆ ಹೊಟೇಲಿಗೆ ತಿಂಡಿ ಮಾಡು ವವರು ಬೇಕು ೯೪೪೯೯೦೩೩೨೩.
ಮಂಗಳೂರು : ಅಫೀಸಿಗೆ ಕಂಪ್ಯೂಟರ್ ತಿಳಿದ ಲೇಡಿ ಸ್ಟಾಫ್ ಬೇಕು ೯೪೮೦೩೬೨೩೦೨.
ಮಂಗಳೂರು : ಬೇಕರಿಯಲ್ಲಿ ತಿಂಡಿ ತಯಾರಿಸಲು ಜನ ಬೇಕು ೯೯೦೧೩೫೦೪೩೧.
ಮಂಗಳೂರು : ಹೊಟೇಲ್‌ಗೆ ಅಡುಗೆ, ತಿಂಡಿ ಮಾಡುವವರು, ವೇಟರ್, ಕ್ಲೀನರ್, ಕೌಂಟರ್‌ಗೆ ಜನ ಬೇಕು ೯೮೮೦೯೦೫೨೫೩.
ಕಂಕನಾಡಿ: ಕಚೇರಿ ಕೆಲಸಕ್ಕೆ ಹಿಂದಿ, ಇಂಗ್ಲಿಷ್ ಮಾತಾಡಲು ಗೊತ್ತಿರುವ ಲೇಡಿ ಬೇಕು ೯೫೩೮೫೫೩೨೧೧.

ದರೋಡೆಗೆ ವಿಫಲಯತ್ನ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ತಣ್ಣೀರು ಪಂಥ ಎಂಬಲ್ಲಿ ಬ್ಯಾಂಕ್ ಒಂದರಲ್ಲಿ ದರೋಡೆ ಮಾಡಲು ತಂಡ ವೊಂದು ವಿಫಲಯತ್ನ ನಡೆಸಿದ ಬಗ್ಗೆ ಪೊಲೀಸರಿಗೆ ದೂರು ನೀಡ ಲಾಗಿದೆ.
ಇಲ್ಲಿನ ಸಹಕಾರಿ ಬ್ಯಾಂಕ್‌ನಲ್ಲಿ ಈ ದರೋಡೆ ಯತ್ನ ನಡೆದಿದ್ದು, ಕಳ್ಳರ ತಂಡ ಆಧುನಿಕ ವ್ಯವಸ್ಥೆ ಗಳೊಂದಿಗೆ ದರೋಡೆಗೆ ಯತ್ನಿಸಿತ್ತು ಎಂದು ತಿಳಿದುಬಂದಿದೆ.
ಸಹಕಾರಿ ಬ್ಯಾಂಕ್‌ನ ಗೇಟಿನಿಂದ ಗ್ಯಾಸ್ ಕಟ್ಟರ್ ಮೂಲಕ ಬೀಗ ಮುರಿಯಲು ಆರಂಭಿಸಿದ ಈ ತಂಡ ಬ್ಯಾಂಕ್ ಶೆಲ್ಟರ್‌ನ ಬೀಗ ಕತ್ತರಿಸಿ ಒಳ ನುಗ್ಗಿತ್ತು. ಇಲ್ಲಿದ್ದ ಸೈರನ್ ಕೇಬಲ್ ಕತ್ತರಿಸಿದ ನಂತರ ಒಳ ಕೋಣೆಯ ಕಿಟಕಿ ಒಂದರ ಸರಳನ್ನು ತುಂಡು ಮಾಡಿತ್ತು. ಲಾಕರ್‌ನ್ನು ನಾಲ್ಕು ಭಾಗ ದಲ್ಲಿ ಕತ್ತರಿಸಿದ ತಂಡ ಅದರ ಬೀಗ ಒಡೆಯುವಲ್ಲಿ ಮಾತ್ರ ವಿಫಲವಾಗಿತ್ತು.
ಗ್ಯಾಸ್ ಮುಗಿದದ್ದು ಕಾರಣ!
ಬ್ಯಾಂಕ್ ದರೋಡೆಗೆ ಯತ್ನಿಸಿದ ತಂಡದಲ್ಲಿ ಸ್ಥಳೀಯರ ನೆರವು ಇರುವ ಸಾಧ್ಯತೆ ಕಂಡು ಬಂದಿದ್ದು, ಲಾಕರ್ ಬೀಗ ಒಡೆಯದಿರಲು ಗ್ಯಾಸ್ ಮುಗಿ ದಿರುವುದೇ ಕಾರಣವೆನ್ನಲಾಗಿದೆ. ಯಾಕೆಂದರೆ ಗ್ಯಾಸ್ ಮುಗಿದಿರುವ ಈ ಸಿಲಿಂಡರನ್ನು ಸ್ಥಳದಲ್ಲಿ ಬಿಟ್ಟು ತಂಡ ಪಲಾಯನ ಮಾಡಿದೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ನಿರಂತರವಾಗಿ ಗ್ಯಾಸ್ ಕಟ್ಟರ್ ಬಳಸಿದ ತಂಡ ಕೊನೆ ಯ ಹೊತ್ತಲ್ಲಿ ಗ್ಯಾಸ್ ಮುಗಿದ ಪರಿ ಣಾಮ ದರೋಡೆ ಯತ್ನದಲ್ಲಿ ಯಶಸ್ಸು ಕಾಣುವಲ್ಲಿ ವಿಫಲವಾಗಿದೆ ಎಂದು ಶಂಕಿಸಲಾಗಿದೆ. ಇಲ್ಲದಿದ್ದರೆ ಲಕ್ಷಾಂತರ ನಗದು ಹಾಗೂ ಲಕ್ಷಗಟ್ಟಲೆ ಮೌಲ್ಯದ ಚಿನ್ನಾಭರಣ ದರೋಡೆಕೋರರ ಕೈಗೆ ಸುಲಭವಾಗಿ ಸಿಗುತ್ತಿತ್ತು ಎನ್ನಲಾಗಿದೆ. ಈ ಘಟನೆ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕ ಸುರೇಂದ್ರ ಕುಮಾರ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಘಟನೆಯಲ್ಲಿ ಸ್ಥಳೀಯರ ಸಹಕಾರ ಇರುವ ಬಗ್ಗೆ ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಈ ಬ್ಯಾಂಕಿನಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿ ವಿವಾದವೂ ಈ ಹಿಂದೆ ನಡೆದಿತ್ತು ಎಂದು ತಿಳಿದು ಬಂದಿದೆ.
ಏಳು ಪ್ರಕರಣಗಳಿಗೆ ಹಳ ತೋಡಿದ ಉಪ್ಪಿನಂಗಡಿ ಪೊಲೀಸರು!
ಕಳೆದ ಎರಡು ವರ್ಷಗಳಿಂದ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಏಳು ಪ್ರಕರಣಗಳು ಕಳ್ಳತನ ಹಾಗೂ ದರೋಡೆಗೆ ಸಂಬಂಧಿಸಿ ನಡೆದಿದ್ದು, ಇದರಲ್ಲಿ ಯಾವ ಪ್ರಕರಣಗಳಲ್ಲಿಯೂ ಆರೋಪಿಗಳನ್ನು ಹಿಡಿಯುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿಲ್ಲ. ನೆಲ್ಯಾಡಿ, ನೆಕ್ಕಿಲಾಡಿ, ಉಪ್ಪಿನಂಗಡಿ ಪೇಟೆ ಸೇರಿದಂತೆ ಠಾಣಾ ಸರಹದ್ದಿನಲ್ಲಿ ಈ ಘಟನೆಗಳು ನಡೆದಿವೆ. ಕೆಲವು ಪ್ರಕರಣಗಳಲ್ಲಿ ಗ್ಯಾಸ್ ಕಟ್ಟರ್‌ಗಳನ್ನು ಬಳಸಲಾಗಿತ್ತು. ಆದರೆ ಇದರ ಹಿಂದೆ ಪೊಲೀಸರ ತನಿಖಾ ಜಾಲದ ಪರಿಣಾಮ ಬೀರಿಲ್ಲ.

ಸಿಆರ್‌ಝೆಡ್ ಕಚೇರಿಗೆ ಕೂಳೂರು ನಾಗರಿಕರ ಮುತ್ತಿಗೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಫಲ್ಗುಣಿ ನದಿಗೆ ಹಾಕಿದ ಮಣ್ಣನ್ನು ತೆಗೆಯಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಕೂಳೂರು ನಾಗರಿಕರು ನಿನ್ನೆ ಲಾಲ್ ಬಾಗ್‌ನಲ್ಲಿರುವ ಸಿಆರ್‌ಝಡ್ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿ ಯನ್ನು ಸ್ಥಳಕ್ಕೆ ಕರೆದೊಯ್ದರು.
ಕಳೆದ ತಿಂಗಳು ಎಂಇಎಸ್ ಇಝೆಡ್ ಕಾಮಗಾರಿಗಾಗಿ ಫಲ್ಗುಣಿ ನದಿಗೆ ಮಣ್ಣು ಹಾಕಿ ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗಿತ್ತು. ಇದನ್ನು ವಿರೋಧಿಸಿ ಸ್ಥಳೀಯರು ಹೋರಾಟ ನಡೆಸುತ್ತಿದ್ದರೆ, ನಾಗರಿಕ ಹಿತರಕ್ಷಣಾ ವೇದಿಕೆ ನ್ಯಾಯಾಲಯದ ಮೊರೆ ಹೋಗಿದೆ. ಹಾಕಿದ ಮಣ್ಣನ್ನು ವಾಪಸ್ ತೆಗೆಯಬೇಕೆಂದು ನ್ಯಾಯಾಲಯ ಆದೇಶ ನೀಡಿದರೂ ಆ ಕೆಲಸ ಇದುವರೆಗೂ ಆಗಿಲ್ಲ.
ಇದರಿಂದ ಕೆರಳಿದ ಸ್ಥಳೀಯರು ಬುಧವಾರ ಮೂಡಾ ಕಚೇರಿಯೆದುರು ಪ್ರತಿಭಟನೆ ನಡೆಸಿದಾಗ ಗುರುವಾರ ಸಂಜೆಯೊಳಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಅವರು ನೀಡಿದ ಭರವಸೆ ಈಡೇರದಿದ್ದ ಕಾರಣ ಗುರುವಾರ ಸಂಜೆ ಸ್ಥಳೀಯರು ಮತ್ತೆ ಮೂಡಾಕ್ಕೆ ಮುತ್ತಿಗೆ ಹಾಕಿದಾಗ ಅಧಿಕಾರಿಗಳು ಇಲ್ಲದ ಕಾರಣ ಆಕ್ರೋಶಗೊಂಡು ಪ್ರತಿಕೃತಿ ಧಹಿಸಿದ್ದರು. ಅಲ್ಲಿಂದ ಜಿಲ್ಲಾ ಧಿಕಾರಿ ಕಚೇರಿ ಬಳಿ ತೆರಳಿ ಜಿಲ್ಲಾಧಿಕಾರಿಗೆ ಧಿಕ್ಕಾರ ಕೂಗಿದ್ದರು.
ನಿನ್ನೆ ಬೆಳಗ್ಗೆ ಸಿಆರ್‌ಝೆಡ್ ಕಚೇರಿಗೆ ಮುತ್ತಿಗೆ ಹಾಕಿ ನಿರ್ದೇಶಕ ಮಹೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆ ವೇಳೆ ಮಹೇಶ್ ಅವರು ನದಿಗೆ ಮಣ್ಣು ಹಾಕಿ ದ್ದರಿಂದ ಮಳೆಗಾಲದಲ್ಲಿ ತೊಂದರೆ ಯಾಗದು. ಹಾಗೇನಾದರೂ ಆದರೆ ನಾನೇ ಅಲ್ಲಿಗೆ ಬರುತ್ತೇನೆ ಎಂದು ಪುಸಲಾ ಯಿಸಲು ಮುಂದಾದರೂ ಸ್ಥಳೀಯರು ಕೇಳಲಿಲ್ಲ.
ಸೆಝ್ ಅಧಿಕಾರಿಗಳು ಕರೆದರೆ ರಾತ್ರಿಯೂ ಸ್ಥಳಕ್ಕೆ ಬರುತ್ತೀರಿ. ಅಲ್ಲದೆ ಪೊಲೀಸ್ ಬಂದೋಬಸ್ತ್ ಇರುತ್ತದೆ. ಆದರೆ ನಾವು ಕರೆದರೆ ಸಬೂಬು ನೀಡುತ್ತೀರಿ ಎಂದು ತಗಾದೆ ತೆಗೆದು ಸ್ಥಳಕ್ಕೆ ಬರದಿದ್ದರೆ ಇಲ್ಲಿಂದ ಹೋಗು ವುದಿಲ್ಲ ಎಂದು ಎಚ್ಚರಿಸಿದರು. ಇದರಿಂದ ದಿಕ್ಕು ಕಾಣದಂತಾದ ನಿರ್ದೇ ಶಕರು ಸ್ಥಳಕ್ಕೆ ತೆರಳುವ ಮುನ್ನ ಪೊಲೀಸರಲ್ಲಿ ಅಭಯ ಯಾಚಿಸಿದರು. ಆ ವೇಳೆ ಪ್ರತಿಭಟನಾಕಾರರು ನಾವು ಜೀವವಿರುವವರೆಗೆ ನಿಮ್ಮ ಮೇಲೆ ಯಾರನ್ನೂ ದಾಳಿ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದರೂ ಅದರಿಂದ ಧೈರ್ಯ ತಂದು ಕೊಳ್ಳದ ನಿರ್ದೇಶಕ ಕೂಳೂರಿನಲ್ಲಿ ಪೊಲೀಸರನ್ನು ನಿಯೋಜಿಸುವಂತೆ ಸ್ಥಳದಲ್ಲಿದ್ದ ಬರ್ಕೆ ಪೊಲೀಸರಲ್ಲಿ ಮನವಿ ಮಾಡಿದರು.
ಭೇಟಿ ನೀಡಿದ ಅಧಿಕಾರಿ
ಜನರ ಒತ್ತಾಯಕ್ಕೆ ಮಣೆದು ಪೊಲೀಸ್ ಭದ್ರತೆಯಲ್ಲಿ ಸ್ಥಳ ಪರಿಶೀಲನೆ ಮಾಡಿದ ಮಹೇಶ್ ಕುಮಾರ್ ನದಿ ತೀರ ಅತಿಕ್ರಮಣವಾದರೆ ಅದು ನಮಗೆ ಸಂಬಂಧಿ ಸಿದ ವಿಷಯವಲ್ಲ. ಇದು ಜಿಲ್ಲಾಧಿಕಾ ರಿಗೆ ಸಂಬಂಧಿಸಿದ ವಿಷಯ. ನದಿ ಪ್ರದೇಶದ ಮುನ್ನೂರು ಮೀಟರ್ ವ್ಯಾಪ್ತಿ ಯಲ್ಲಿ ಮಣ್ಣು ಹಾಕಿದ್ದು ಅದರ ತೆರವಿಗೆ ಆದೇಶಿಸಲಾಗುವುದು ಎಂದು ತಿಳಿಸಿ ದರು. ಸಿಆರ್‌ಝಡ್ ಅಧಿಕಾರಿ ಮಹೇಶ ಕುಮಾರ್ ಜವಾಬ್ದಾರಿಯಿಂದ ನುಸುಳಿ ಕೊಳ್ಳುತ್ತಿದ್ದಾರೆ ಎಂದು ಹೋರಾಟಗಾರ ಸಂತ್ರಸ್ತರು ಆರೋಪಿಸಿದ್ದಾರೆ.
ಹೋರಾಟಗಾರರ ವಿರುದ್ಧ ಸೆಜ್ ದೂರು
ಪ್ರತಿಭಟನೆ ನಡೆಸಿದ ಸಂತ್ರಸ್ತರ ವಿರುದ್ಧ ಸೆಜ್ ಅಧಿಕಾರಿಗಳು ಉರ್ವ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ದೂರು ದಾಖಲಿಸಿದ್ದಾರೆ. ವಿದ್ಯಾ ದಿನಕರ್, ಪಿಯೂಸ್ ಡಿಸೋಜಾ, ಗೊಡಫ್ರೀ ಡಿಸೋಜಾ, ದಿನೇಶ್ ಶೆಟ್ಟಿ, ಟಿ.ಆರ್.ಭಟ್ ಹಾಗೂ ಹೇಮಲತಾ ಭಟ್ ಎಂಬವರು ಉರ್ವದ ಮೂಡಾ ಕಟ್ಟಡದಲ್ಲಿರುವ ಎಸ್‌ಇಝಡ್‌ಎಲ್ ಸಂಸ್ಥೆಯ ಪ್ರವೇಶ ದ್ವಾರದ ಎದುರು ಪ್ರತಿಭಟನೆ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳದಲ್ಲಿ ಸಿಗದ ಕತ್ತಿ ಕೋರ್ಟ್‌ನಲ್ಲಿ

Posted by JAYAKIRANA Kirana on | 0 comments | Leave a comment...

ದೇವಲೋಕ ಜೋಡಿ ಕೊಲೆ
ಕುಂಬಳೆ: ಭಾರೀ ಕೋಲಾಹಲ ಸೃಷ್ಟಿಸಿದ್ದ ದೇವಲೋಕ ಜೋಡಿ ಕೊಲೆ ಪ್ರಕರಣದಲ್ಲಿ ಕ್ರೈಂಬ್ರಾಂಚಿನ ವಿಶೇಷ ತನಿಖಾ ತಂಡ ಅರಸುತ್ತಿರುವ ಕತ್ತಿ ನ್ಯಾಯಾಲಯದಲ್ಲಿರುವುದಾಗಿ ತಿಳಿದಿದೆ. ಕತ್ತಿಯ ಪತ್ತೆಗಾಗಿ ಹಂತಕನಾದ ಇಮಾಂ ಹುಸೇನ್‌ನನ್ನು ಹತ್ಯೆ ನಡೆದ ಪೆರ್ಲ ದೇವಲೋಕಕ್ಕೆ ಕಳೆದ ದಿನ ಕರೆ ತರಲಾಗಿತ್ತು. ೧೯ ವರ್ಷಗಳ ಹಿಂದೆ ನಡೆದ ಕೊಲೆ ಬಳಿಕ ಕತ್ತಿ ಉಪೇಕ್ಷಿಸಲಾಯಿತು ಎನ್ನುವ ಸ್ಥಳದಲ್ಲಿ ಶೋಧ ನಡೆಸಲಾಯಿತಾದರೂ ಪತ್ತೆ ಸಾಧ್ಯವಾಗಲಿಲ್ಲ.
ಇದು ತನಿಖಾಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು. ದೋಷಾರೋಪ ಪಟ್ಟಿ ವಸ್ತುನಿಷ್ಟವಾಗಲು ಕೊಲೆಗೆ ಬಳಸಿದ ಆಯುಧ ಅನಿವಾರ್ಯ. ಕತ್ತಿ ದೊರಕುವುದು ನಿರ್ಣಾಯಕವೆಂಬ ಹಿನ್ನೆಲೆಯಲ್ಲಿ ತನಿಖಾ ತಂಡ ತಲೆ ಕೊರೆಯತೊಡಗಿದಾಗ ಕತ್ತಿಯು ಕಾಸರಗೋಡು ನ್ಯಾಯಾಲಯದಲ್ಲಿ ಇರುವ ಮಾಹಿತಿ ದೊರೆಯಿತು. ಹೀಗೆ ಕಠಿಣ ಸವಾಲೊಂದು ಸುಲಭವಾಗೇ ದಾಟಲ್ಪಟ್ಟಿದೆ. ೧೯೯೩ರ ಅಕ್ಟೋಬರ್ ೯ರಂದು ದೇವಲೋಕದ ಶ್ರೀಕೃಷ್ಣ ಭಟ್ ಹಾಗೂ ಪತ್ನಿ ಶ್ರೀಮತಿ ಕಗ್ಗೊಲೆ ನಡೆದಿತ್ತು. ಮರುದಿನ ಪೊಲೀಸರು ಜೋಡಿ ಕೊಲೆ ನಡೆದ ಮನೆಯಲ್ಲಿ ಪರಿಶೋಧನೆ ನಡೆಸಿ ೨೦ರಷ್ಟು ಸಾಮಗ್ರಿಗಳನ್ನು ಕಸ್ಟಡಿಗೆ ತೆಗೆದಿದ್ದರು. ಆ ಪೈಕಿ ರಕ್ತ ಸಿಕ್ತವಾದ ಕತ್ತಿಯೂ ಸೇರಿತ್ತು. ೩೬ ಸೆಂ.ಮೀ ಉದ್ದ ಹಾಗೂ ಆರೂವರೆ ಸೆಂ.ಮೀ. ಅಗಲವಿರುವ ಈ ಕತ್ತಿಯಿಂದ ಅಂದು ಆರೋಪಿಯದ್ದೆಂದು ಶಂಕಿಸಲಾಗುವ ಬೆರಳಚ್ಚು ಕೂಡಾ ಲಭಿಸಿತ್ತು. ಕತ್ತಿ ಸಹಿತ ಸಾಮಗ್ರಿಗಳನ್ನೂ, ಕೊಲೆ ನಡೆದ ಮನೆಯಿಂದ ಜೀವಂತ ದೊರೆತ ಕೋಳಿಯನ್ನೂ ಅಂದು ತನಿಖಾಧಿಕಾರಿಗಳು ಕೋರ್ಟಿಗೆ ಹಾಜರುಪಡಿಸಿದ್ದರು. ಕೋಳಿಯನ್ನು ಬದಿಯಡ್ಕ ಪೊಲೀಸರಿಗೆ ಸಂರಕ್ಷಣೆಗಾಗಿ ಬಿಟ್ಟು ಕೊಟ್ಟರೆ, ಉಳಿದ ಸಾಮಗ್ರಿಗಳನ್ನು ನ್ಯಾಯಾಲಯದಲ್ಲಿ ಸಂಗ್ರಹಿಸಿಡಲಾಗಿತ್ತು.

ಉಡುಪಿ: ಜ್ಯೋತಿಷ್ಯನ ಬೆಂಗಾವಲು ವಾಹನ ಮಹಿಳೆಗೆ ಡಿಕ್ಕಿ

Posted by JAYAKIRANA Kirana on | 0 comments | Leave a comment...

ಆಕ್ರೋಶಿತರಿಂದ ರಸ್ತೆ ತಡೆ
ಮಣಿಪಾಲ: ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಜ್ಯೋತಿಷಿಯ ಪೊಲೀಸ್ ಬೆಂಗಾವಲು ವಾಹನ ಮಹಿಳೆಗೆ ಡಿಕ್ಕಿ ಹೊಡೆದಿರುವ ಘಟನೆ ಉಡುಪಿ ಸಮೀಪದ ಕಲ್ಸಂಕದಲ್ಲಿ ನಿನ್ನೆ ನಡೆದಿದ್ದು, ಘಟನೆಯನ್ನು ಖಂಡಿಸಿ ಸಾರ್ವಜನಿಕರು ಕೆಲ ಸಮಯದವರೆಗೆ ವಾಹನ ಸಂಚಾರಕ್ಕೆ ತಡೆಯೊಡ್ಡಿದ ಘಟನೆಯೂ ನಡೆಯಿತು. ಉಡುಪಿ ಕಲ್ಸಂಕದಿಂದ ಜ್ಯೋತಿಷಿ ಚಂದ್ರಶೇಖರ ಎಂಬವರು ಪೊಲೀಸ್ ಬೆಂಗಾವಲಿನಲ್ಲಿ ಮಣಿಪಾಲದಲ್ಲಿ ನಡೆಯಬೇಕಿದ್ದ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ಸಗ್ರಿ ನಿವಾಸಿ ಸರಸ್ವತಿ ಎಂಬವರಿಗೆ ಪೊಲೀಸ್ ಬೆಂಗಾವಲಿನ ವಾಹನ ಡಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಅದೇ ವಾಹನದಲ್ಲಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆ ನಡೆದ ಕೂಡಲೇ ಆಕ್ರೋಶಿತ ಸಾರ್ವಜನಿಕರು ಜ್ಯೋತಿಷಿ ವಾಹನ ವನ್ನು ನಿಲ್ಲಿಸಿ ತಡೆಯೊಡ್ಡಿದರು. ಇದರಿಂದ ಕೆಲ ಸಮಯಗಳವರೆಗೆ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಕಾರನ್ನು ನಿಲ್ಲಿಸಿದ ಕಾರಣಕ್ಕೆ ಜ್ಯೋತಿಷಿ ಕಾರಿನ ಚಾಲಕ ಗಿರೀಶ್ ಕಾಮತ್ ಅವರು ಕೃಷ್ಣ ಎನ್ .ರಾವ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ ವಿರುದ್ಧ ದೂರು ದಾಖಲಿಸಿದರು. ಯಕಶ್ಚಿತ್ ಸಾಮಾನ್ಯ ಜ್ಯೋತಿಷಿಯೊಬ್ಬ ಮಂತ್ರಿಗಳು ಉಪಯೋಗಿ ಸುವಂತಹ ನಿಯೋಲೈಟ್ ಕಾರು ಹಾಗೂ ಪೊಲೀಸ್ ಬೆಂಗಾವಲನ್ನು ಉಪ ಯೋಗಿಸುತ್ತಿರುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಯಡ್ಡಿ ಕುಟುಂಬ ವಿರುದ್ಧ ಸಿಬಿಐ ತನಿಖೆ ತೀರ್ಪು ಕಾಯ್ದಿರಿಸಿದ ಸು.ಕೋರ್ಟ್

Posted by JAYAKIRANA Kirana on | 0 comments | Leave a comment...

ಗಣಿ ಹಗರಣ
ಬೆಂಗಳೂರು: ಗಣಿ ಹಗರಣಕ್ಕೆ ಸಂಬಂ ಧಿಸಿದಂತೆ ಮಾಜಿ ಮುಖ್ಯ ಮಂತ್ರಿ ಯಡಿಯೂ ರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಸಿಇಸಿ ಸಲ್ಲಿಸಿರುವ ಶಿಫಾರಸ್ಸಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಹಸಿರು ಪೀಠ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಮುಖ್ಯ ನ್ಯಾಯಮೂರ್ತಿ ಕಪಾಡಿಯ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಈ ಕುರಿತು ನಿನ್ನೆ ಸಿಇಸಿ ಹಾಗೂ ಯಡಿಯೂರಪ್ಪ ಅವರ ಪರ ವಕೀಲರ ವಾದವನ್ನು ಸುದೀರ್ಘವಾಗಿ ಆಲಿಸಿ ದ್ದಲ್ಲದೇ ತೀರ್ಪನ್ನು ಕಾಯ್ದಿರಿಸಿತು.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲ ಯದ ಗಮನಕ್ಕೆ ತಂದ ವಿಷಯಗಳನ್ನು ಹೊರತುಪಡಿಸಿ ಬೇರೆ ಯಾವುದಾದರೂ ವಿಚಾರಗಳನ್ನು ಹೇಳುವುದಿದ್ದರೆ ಆ ವಾದಾಂಶ ವನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಉಭಯ ಬಣದ ವಕೀಲರಿಗೆ ನ್ಯಾಯಾಲಯ ಸೂಚಿಸಿತು.
ಇದಕ್ಕೂ ಮುನ್ನ ಸಿಇಸಿ ಪರ ವಾದ ಮಾಡಿದ ವಕೀಲರು, ರಾಚೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣವೂ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂ ಧಿಸಿದಂತೆ ಸಿಇಸಿ ಸಮಗ್ರ ಮಾಹಿತಿಗಳನ್ನು ಕಲೆ ಹಾಕಿದೆ.ಹೀಗೆ ಮಾಹಿತಿಗಳನ್ನು ಕಲೆ ಹಾಕುವ ಮುನ್ನ ದೂರುದಾರರು ಮತ್ತು ಆರೋಪ ಹೊತ್ತವರ ಬಳಿ ವಿವರ ಪಡೆದಿದೆ ಎಂದರು. ಹೀಗೆ ವಿವರ ಪಡೆದ ನಂತರ ಸಿಇಸಿ(ಕೇಂದ್ರೀಯ ಉನ್ನತಾಧಿಕಾರ ಸಮಿತಿ) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಲ್ಲವೇ ಸಿಬಿಐನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಶಿಫಾರಸು ಸಲ್ಲಿಸಿದೆ. ಆದ್ದರಿಂದ ಕೇಂದ್ರೀಯ ಉನ್ನತಾಧಿಕಾರ ಸಮಿತಿ ಸಲ್ಲಿಸಿದ ಶಿಫಾರಸು ಸರಿಯಾಗಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿ ದಂತೆ ಸಿಬಿಐ ಇಲ್ಲವೇ ಸಿಬಿಐ ನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸ ಬೇಕು ಎಂದವರು ವಾದ ಮಾಡಿದರು.
ಇದೇ ಸಂದರ್ಭದಲ್ಲಿ ಯಡಿ ಯೂರಪ್ಪ ಅವರ ಪರ ವಕೀಲರು, ತಮ್ಮ ಕಕ್ಷಿದಾರರ ವಿರುದ್ಧದ ಆರೋ ಪಗಳು ರಾಜಕೀಯ ಪ್ರೇರಿತವಾಗಿದ್ದು, ಈ ಆರೋಪಗಳ ಹಿಂದೆ ದುರು ದ್ದೇಶವಿದೆ.ಹೀಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಹೇಳಿದರು.
ವಾದ ವಿವಾದ ಆಲಿಸಿದ ಸುಪ್ರೀಂಕೋರ್ಟ್,ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧದ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸಬೇಕೇ ಬೇಡವೇ ಎಂಬ ಕುರಿತು ನೀಡಬೇಕಾದ ತೀರ್ಪನ್ನು ಕಾಯ್ದಿರಿಸಿತು.

ಬಂದರು ಪ್ರದೇಶದಲ್ಲಿ ರಸ್ತೆಯಲ್ಲೇ ಕೊಳಚೆ ನೀರು!

Posted by JAYAKIRANA Kirana on | 0 comments | Leave a comment...

ಮಂಗಳೂರು: ಸುಂದರ ಮಂಗಳೂರಿನ ಬಂದರು ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ರಸ್ತೆಯು ದ್ದಕ್ಕೂ ಕೊಳಚೆ ನೀರು ಹರಿಯು ತ್ತಿದ್ದು ಅಧಿಕಾರಿಗಳು ಎರಡೆರಡು ಬಾರಿ ಸ್ಥಳಕ್ಕೆ ಭೇಟಿ ನೀಡಿದರೂ ಸಮಸ್ಯೆ ಪರಿಹಾರಗೊಳ್ಳದಿರುವುದು ಅವರ ಬೇಜವಾಬ್ದಾರಿಗೆ ಒಂದು ನಿದರ್ಶನವಾಗಿದೆ.
ಇಲ್ಲಿನ ಕಚ್ಚೀ ಮೆಮನ್ ಮಸೀದಿ ಮತ್ತು ಬಂದರ್ ಠಾಣೆಯ ಎದುರು ಇರುವ ರಸ್ತೆಯ ಮಧ್ಯಭಾಗದಲ್ಲಿರುವ ಮ್ಯಾನ್‌ಹೋಲ್ ವಾರದ ಹಿಂದೆಯೇ ತುಂಬಿ ತುಳುಕಾಡಿತ್ತು. ಆಗ ಅಧಿಕಾರಿ ಗಳು ನಿದ್ದೆಯಲ್ಲಿದ್ದ ಕಾರಣ ಈ ಮಾಹಿತಿ ಅವರಿಗೆ ಸಿಕ್ಕಿದೆಯೋ ಇಲ್ಲವೋ ಎಂದು ಗೊತ್ತಿಲ್ಲ.
ಇದಾದ ಒಂದು ದಿನದ ಬಳಿಕ ಕೊಳಚೆ ನೀರು ರಸ್ತೆಯಲ್ಲಿ ಹರಿದಾಡಲು ಶುರುವಿಟ್ಟಿತು. ರಸ್ತೆಯುದ್ದಕ್ಕೂ ಹರಿದಾ ಡಿದಾಗ ಮಾಹಿತಿ ಮಹಾನಗರ ಪಾಲಿ ಕೆಯ ಮಹಾನ್ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ ಬಾರಿ ಸ್ಥಳಕ್ಕೆ ದೌಡಾ ಯಿಸಿದ ಅಧಿಕಾರಿಗಳು ಇಂದೇ ಸರಿಮಾಡುತ್ತೇವೆ ಎಂದು ನಾಟಕ ಮಾಡಿದರು. ಎರಡು ದಿನಗಳು ಕಳೆದು ಈಗ ವಾರವಾಗಿದ್ದೂ ಆಯಿತು. ಅಧಿಕಾರಿಗಳ ಪತ್ತೆಯೇ ಇಲ್ಲ.
ಇಲ್ಲಿನ ರಸ್ತೆಯುದ್ದಕ್ಕೂ ಇರುವ ಮ್ಯಾನ್‌ಹೋಲ್‌ಗಳು ಒಂದು ಕಡೆ ಬ್ಲಾಕ್ ಆಗಿದ್ದನ್ನು ತೆಗೆದರೆ ಇನ್ನೊಂದು ಕಡೆ ಬ್ಲಾಕ್ ಆಗುತ್ತದೆ. ಇದರ ಕೆಲಸ ಒಂದು ವಾರದಿಂದ ನಡೆಯುತ್ತಿದೆ. ಆದರೂ ಸಮಸ್ಯೆ ಸರಿಯಾಗುತ್ತಿ ಲ್ಲವಂತೆ. ಹಗಲು ವೇಳೆ ಕೆಲಸ ಮಾಡಿದರೆ ಪೌರ ಕಾರ್ಮಿಕರನ್ನು ದುರ್ಬಳಕೆ ಮಾಡಿದ ಬಗ್ಗೆ ಆರೋಪ ಕೇಳಿ ಬರುತ್ತದೆ ಎನ್ನುವ ಕಾರಣಕ್ಕೆ ಕೆಲಸ ನಿಧಾನವಾಗಿದೆ ಎನ್ನುವುದು ಕಾಂಗ್ರೆಸ್ ಬೆಂಬಲಿತ ಕಾರ್ಪೊರೇ ಟರ್‌ಗಳ ವಾದ.
ಯಾರು ಏನೇ ಹೇಳಲಿ, ಇಲ್ಲಿನ ರಸ್ತೆಯುದ್ದಕ್ಕೂ ಮಲ, ಮೂತ್ರ ಸಹಿತ ಕೊಳಚೆ ನೀರು ಹರಿದಾಡುತ್ತಿದ್ದು ಈಗ ಬೆಂಗರೆ ಜಟ್ಟಿಯವರೆಗೂ ನೀರು ಹರಿದಾಡುತ್ತಿರುವುದಂತೂ ಸತ್ಯ. ಇದರ ದುರ್ವಾಸನೆಯಿಂದಾಗಿ ಈ ಭಾಗ ದಲ್ಲೀಗ ಜನಸಂಖ್ಯೆಯೂ ಕಡಿಮೆ ಯಾಗಿದ್ದು ಹೋಟೆಲ್, ಅಂಗಡಿ ಮಾಲೀಕರು ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಭಾರತ ರತ್ನವಾಗಬೇಕಿದ್ದ ಸಚಿನ್‌ಗೆ ರಾಜಕೀಯ ಬೇಕಿತ್ತಾ?

Posted by JAYAKIRANA Kirana on | 0 comments | Leave a comment...


ತಾನು ಕ್ರಿಕೆಟ್ ಬಿಟ್ಟು ರಾಜಕೀಯಕ್ಕೆ ಸೇರುವುದೇ ಇಲ್ಲ ಎಂದು ಸಚಿನ್ ತೆಂಡೂಲ್ಕರ್ ಎಷ್ಟು ಹೇಳಿ ಕೊಂಡರೂ ಅವರ ಕೆಲವು ವರ್ತನೆ ಸಂದೇಹ ಮೂಡಿಸು ತ್ತದೆ. ಅವರ ನಡೆನುಡಿ ರಾಜಕೀಯೇತರವಾಗಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ. ಅವರು ಕಾಂಗ್ರೆಸ್‌ಗೆ ಹತ್ತಿರವಾಗುತ್ತಿದ್ದಾರೆ. ಇತರ ಪಕ್ಷಗಳಿಂದ ದೂರವಿರಲು ಬಯಸುತ್ತಿದ್ದಾರೆ ಎಂಬುದಕ್ಕೆ ಅವರ ಕೆಲವು ವರ್ತನೆಗಳು ಪುಷ್ಟಿ ನೀಡುತ್ತಿವೆ.

ಸುದ್ದಿ ವಿಶ್ಲೇಷಣೆ
 ಕ್ರಿಕೆಟ್ ದೇವರು ಎಂದೇ ಗೌರವಿಸಲ್ಪಡುತ್ತಿದ್ದ ಸಚಿನ್ ತೆಂಡೂಲ್ಕರ್‌ಗೆ ಭಾರತ ರತ್ನ ಸಿಗಬೇಕು ಎಂಬ ಬೇಡಿಕೆಯ ನಡುವೆ ಅಚಾನಕ್ ಆಗಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಕೇಂದ್ರದ ಯುಪಿಎ ಸರಕಾರ ಅವರಿಗೆ ರಾಜಕೀಯದ ಲೇಪನ ಹಚ್ಚಿದೆ. ಭಾರತ ರತ್ನ ಕೊಡಬೇಕು ಎಂಬುದಕ್ಕೆ ಸ್ಪಂದಿಸಿರದ ಕಾಂಗ್ರೆಸ್ ಇದ್ದಕ್ಕಿದ್ದಂತೆ ಅವರಿಗೆ ರಾಜ್ಯಸಭೆಯ ಸದಸ್ಯತ್ವ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಜತೆಗೆ ಈ ಸದಸ್ಯತ್ವವನ್ನು ಹಿಂದು ಮುಂದು ನೋಡದೆ ಸ್ವೀಕರಿಸಿಕೊಂಡಿರುವ ಸಚಿನ್ ವರ್ತನೆ ಮತ್ತಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ.
ತಾನು ಕ್ರಿಕೆಟ್ ಬಿಟ್ಟು ರಾಜಕೀಯಕ್ಕೆ ಸೇರುವುದೇ ಇಲ್ಲ ಎಂದು ಸಚಿನ್ ತೆಂಡೂಲ್ಕರ್ ಎಷ್ಟು ಹೇಳಿಕೊಂಡರೂ ಅವರ ಕೆಲವು ವರ್ತನೆ ಸಂದೇಹ ಮೂಡಿಸುತ್ತದೆ. ಅವರ ನಡೆನುಡಿ ರಾಜಕೀಯೇತರವಾಗಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ. ಅವರು ಕಾಂಗ್ರೆಸ್‌ಗೆ ಹತ್ತಿರವಾಗುತ್ತಿದ್ದಾರೆ. ಇತರ ಪಕ್ಷಗಳಿಂದ ದೂರವಿರಲು ಬಯಸುತ್ತಿದ್ದಾರೆ ಎಂಬು ದಕ್ಕೆ ಅವರ ಕೆಲವು ವರ್ತನೆಗಳು ಪುಷ್ಟಿ ನೀಡುತ್ತಿವೆ. ಕಿಂಚಿತ್ತೂ ಅಳುಕಿಲ್ಲದೆ, ವಿವೇಚಿಸದೆ ಅವರು ಕೇಂದ್ರ ಸರಕಾರ ಕೊಟ್ಟಿರುವ ರಾಜ್ಯಸಭೆಯ ಸದಸ್ಯತ್ವವನ್ನು ಸ್ವೀಕಮ ರಿಸಿಕೊಂಡಿರುವುದು ಅವರಲ್ಲಿ ಕ್ರಿಕೆಟ್‌ಗಿಂತ ಹೊರತಾದ ಬೇರೆಯೇ ಕೆಲವು ಆಕಾಂಕ್ಷೆಗಳಿವೆ ಎಂಬುದನ್ನು ತೋರಿ ಸುತ್ತದೆ.
ಸಚಿನ್ ಕಾಂಗ್ರೆಸ್ ಮೇಲೆ ಪ್ರೀತಿ ಹೊಂದಿದ್ದು, ಇತರ ಪಕ್ಷಗಳಿಂದ ದೂರವಿರಲು ಬಯಸುತ್ತಿದ್ದಾರೆ ಎಂಬುದಕ್ಕೆ ಒಂದು ಮುಖ್ಯ ಉದಾಹರಣೆ ಎಂದರೆ- ಅವರು ಬೃಹನ್ ಮುಂಬಯಿ ಮಹಾ ನಗರಪಾಲಿಕೆ (ಬಿಎಂಸಿ)ಯ ಸಮ್ಮಾನ ಆಹ್ವಾನವನ್ನು ತಿರಸ್ಕರಿಸಿರುವುದು. ಸಚಿನ್ ತಮ್ಮವ ಎಂಬ ಭಾವನೆ ಮಹಾ ರಾಷ್ಟ್ರೀಯನ್ನರಿಗೆ, ಅದರಲ್ಲೂ ಮುಂಬ ಯಿಗರಿಗೆ ತುಂಬಾ ಹೆಚ್ಚಿದೆ. ಸಚಿನ್ ಬಗ್ಗೆ ಅವರು ತುಂಬ ಅಭಿ ಮಾನ, ಗೌರವ, ಹೆಮ್ಮೆ ಹೊಂದಿದ್ದಾರೆ. ಇದೇ ಕಾರಣದಿಂದ ಭಾರತ ಕಳೆದ ಬಾರಿ ವಿಶ್ವಕಪ್ ಗೆದ್ದಾಗ ಆಗಿನ ಬಿಎಂಸಿ ಮೇಯರ್ ಶುಭಾ ರಾವುತ್ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಬಿಎಂಸಿ ಪರವಾಗಿ ಅಭಿನಂದಿಸಬೇಕು ಎಂದು ಬಯಸಿದ್ದರು. ತನ್ನ ಬಯಕೆಯನ್ನು ಸಚಿನ್‌ಗೆ ತಿಳಿಸಿದ್ದರು ಕೂಡ. ನಿಮಗೆ ಅನುಕೂಲವಾದ ಒಂದು ದಿನ ನೀವು ಬಿಎಂಸಿ ಪರವಾಗಿ ಸಮ್ಮಾನ ಸ್ವೀಕರಿಸಬೇಕು ಎಂದು ಕೇಳಿಕೊಂಡರು. ಆದರೆ ಸಚಿನ್ ಅದಕ್ಕೆ ಸ್ಪಂದಿಸಲೇ ಇಲ್ಲ. ಸಮ್ಮಾನ ಸ್ವೀಕರಿಸಲು ಮನಸ್ಸು ಮಾಡಲಿಲ್ಲ. ಇದು ಬಿಎಂಸಿಗೆ ಮಾಡಿದ ಅವಮಾನ ಎಂದು ಹೇಳ ಬಹುದು. ಬಹುಷಃ ಬಿಎಂಸಿ ಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಸಚಿನ್ ಆ ಸಮ್ಮಾನವನ್ನು ಸ್ವೀಕರಿಸುತ್ತಿದ್ದರೋ ಏನೋ. ಆದರೆ ಅಲ್ಲಿ ಅಧಿಕಾರ ದಲ್ಲಿದ್ದುದು ಶಿವಸೇನೆ-ಬಿಜೆಪಿ ಮೈತ್ರಿ ಕೂಟ! ಇದೇ ಕಾರಣಕ್ಕೆ ಸಚಿನ್ ತೆಂಡೂಲ್ಕರ್ ಅವರು ಬಿಎಂಸಿಯ ಸಮ್ಮಾನ ಆಹ್ವಾನವನ್ನು ತಿರಸ್ಕರಿಸಿ ರಬೇಕು.
 ಇದನ್ನು ಪುಷ್ಟೀಕರಿಸುವಂಥ ಮತ್ತೊಂದು ಘಟನೆಯೂ ಸಂಭವಿಸಿದೆ. ಸಚಿನ್ ತೆಂಡೂಲ್ಕರ್ ಅವರು ಶತ ಶತಕ ಬಾರಿಸಿದಾಗ ದೇಶವೇ ಹೆಮ್ಮೆ ಪಟ್ಟಿತ್ತು. ಆದರೆ ಮುಂಬಯಿಗರ ಹೆಮ್ಮೆ ಯಂತೂ ಶಬ್ದಕ್ಕೆ ನಿಲುಕುವಂತಿರಲಿಲ್ಲ. ಈ ಹೊತ್ತಿನಲ್ಲೂ ಬಿಎಂಸಿ ಸಚಿನ್‌ಗೆ ಅಭಿನಂದನೆ ಸಲ್ಲಿಸಲು ಆಲೋಚಿಸಿತ್ತು. ಆಗ ಮೇಯರ ಬದಲಾಗಿದ್ದರು. ಆದರೆ ಅಧಿಕಾರ ಅದೇ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟದಲ್ಲೇ ಇತ್ತು. ಮೇಯರ್ ಸುನಿ ಪ್ರಭು ಅವರು ಸಚಿನ್‌ಗೆ ಎರಡೆರಡು ಬಾರಿ ಮನವಿ ಮಾಡಿ ಸಮ್ಮಾನ ಸ್ವೀಕರಿಸುವಂತೆ ಮನವಿ ಮಾಡಿದ್ದರು. ಈ ಬಾರಿಯೂ ಸಚಿನ್‌ರಿಂದ ಸಿಕ್ಕಿದ್ದು ತಿರಸ್ಕಾರದ ಉತ್ತರವೇ. ಇನ್ನೆಂದೂ ಸಚಿನ್‌ಗೆ ಸಮ್ಮಾನ ಆಹ್ವಾನ ನೀಡದಿರಲು ಬಿಎಂಸಿ ನಿರ್ಧರಿಸಿದೆ.
ಈಗ ಎಲ್ಲರೂ ಹೇಳುವು ದೊಂದೇ- ಸಚಿನ್ ಕಾಂಗ್ರೆಸ್ಸಿಗರಾಗಿ ದ್ದಾರೆ. ಅವರೇನೇ ಹೇಳಲಿ-ಅವೆಲ್ಲವನ್ನೂ ನಂಬಲು ಸಾಧ್ಯವಾಗದು. ಅವರು ರಾಜಕೀಯೇತರ ವ್ಯಕ್ತಿ ಅಥವಾ ಮನೋಭಾವದವರಾಗಿದ್ದರೆ ಬಿಎಂಸಿ ಸಮ್ಮಾನ ಆಹ್ವಾನವನ್ನು ಯಾಕೆ ತಿರಸ್ಕರಿಸಿದರು? ಕಾಂಗ್ರೆಸ್ ಕೇಳಿಕೊಂ ಡಾಗೆಲ್ಲ ಪುರುಸೊತ್ತು ಮಾಡಿಕೊಳ್ಳುವ ಸಚಿನ್‌ಗೆ ಬಿಎಂಸಿಯ ಸಮ್ಮಾನ ಸ್ವೀಕರಿಸಲು ಯಾಕೆ ಪುರುಸೊತ್ತು, ಮನಸ್ಸು ಆಗಿಲ್ಲ ಎಂಬ ಪ್ರಶ್ನೆಗೆ ಸಚಿನೇ ಉತ್ತರಿಸಬೇಕಾಗುತ್ತದೆ.

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)