ತಾ. ೨೬-೪-೨೦೧೨ರ 'ಜಯ ಕಿರಣ' ಪತ್ರಿಕೆಯ ನಿಮ್ಮಿಂದ ವಿಭಾ ಗದಲ್ಲಿ ರಂಜಿತ್ ಸುವರ್ಣ ಅಂಗಡಿ ಗುಡ್ಡೆಯವರ ಬರಹಕ್ಕೆ ಪ್ರತಿಕ್ರಿಯೆ. ನಾವು ಯಾವ ಆಹಾರವನ್ನು ಸೇವಿ ಸಬೇಕು? ಯಾವ ಆಹಾರವನ್ನು ಸೇವಿಸಬಾರದು ಎಂಬುದು ಆಹಾರ ಸೇವಿಸುವವರ ಮೇಲೆ ಅವಲಂಬಿ ತವಾಗಿದೆ. ಇದಕ್ಕೆ ಯಾವ ದೊಣ್ಣೆ ನಾಯಕರ ಅಪ್ಪಣೆಯೂ ಬೇಕಾಗಿಲ್ಲ.
ಈ ಭೂಮಿಯಲ್ಲಿ ಹಲವಾರು ಜಾತಿ-ಮತ ಗಳಿಗೆ ಸೇರಿದ ಜನರಿದ್ದಾರೆ. ಆದರೆ ಅವರೆಲ್ಲರೂ ಮೊದಲು ತಂತಮ್ಮ ಜಾತಿ-ಮತವನ್ನು ನೋಡದೆ ನಾವೆಲ್ಲರೂ ಮಾನವ ಜಾತಿಯೆಂಬುದನ್ನು ತಿಳಿದು ಕೊಳ್ಳಬೇಕು. ಮಾನವ ಜಾತಿಯಲ್ಲಿ ಹಲವರು ಮಾಂಸಹಾರಿಗಳಾಗಿ ರಬಹುದು. ಇನ್ನು ಹಲವರು ಸಸ್ಯಾಹಾರಿಗಳಾಗಿರಬಹುದು. ಈ ಪ್ರಪಂಚದಲ್ಲಿನ ಯಾವುದೇ ಮತ ದವರಲ್ಲಿ ವಿಚಾರಿಸಿದರೂ ಅವ ರೆಲ್ಲರ ಅಭಿಪ್ರಾಯ ಒಂದೇ. 'ದೇವರು ಒಬ್ಬನೇ, ಆತ ಬಡವ-ಬಲ್ಲಿದ, ಮೇಲು-ಕೀಳು ಎಂಬ ಭೇದ-ಭಾವವಿ ಲ್ಲದೆ ಎಲ್ಲರನ್ನೂ ಸಮಾನ ಭಾವದಿಂದ ನೋಡು ತ್ತಾನೆ' ಎಂದು ಹೇಳುತ್ತಾರೆ. ಅಂತಹ ದೇವರು ತನ್ನ ಸೃಷ್ಟಿಯ ಜನರಲ್ಲಿ, 'ನೀವು ಮಾಂಸಾಹಾರ ಸೇವಿಸಿ ನೀವು ಸಸ್ಯಾಹಾರ ಸೇವಿಸಿ' ಎಂದು ಎಂದಿಗೂ ಹೇಳಲಾರ. ಇಂತಹ ಭೇದ-ಭಾವವನ್ನು ಮಾನವರೇ ತಮ್ಮ-ತಮ್ಮ ಸ್ವಪ್ರತಿಷ್ಠೆಗಳಿಗಾಗಿ ತಾವೇ ನಿರ್ಮಿಸಿಕೊಂಡಿರುವುದಾಗಿದೆ. ಆದುದ ರಿಂದ ಬೀಫ್ ಮಾರುವ ಹೊಟೇಲ್ಗಳನ್ನು ಮುಚ್ಚಿಸಿ ಎಂದು ಹೇಳುವುದು ಸರಿಯಲ್ಲ. ಅಕ್ರಮವಾಗಿ ಜಾನುವಾರು ಗಳನ್ನು ಕದ್ದುಕೊಂಡು ಹೋಗಿ ಹತ್ಯೆ ಮಾಡುವುದನ್ನು ನಾವೆಲ್ಲರೂ ವಿರೋಧಿಸುತ್ತೇವೆ. ವಿರೋಧಿಸಲೇ ಬೇಕು. ಅದನ್ನು ಬಿಟ್ಟು ಬೀಫ್ ತಿನ್ನುವವರನ್ನು ತಿನ್ನಬೇಡಿ ಎಂದು ಹೇಳುವುದು ಸರಿಯಲ್ಲ. ಅದೇ ರೀತಿ ಮಾಂಸಹಾರಿಗಳು ಇತರರನ್ನು ಸಸ್ಯಾಹಾರ ಸೇವಿಸಬಾರದೆಂದು ಹೇಳಿದರೆ ಜನರು ಕೇಳುತ್ತಾ ರೆಯೇ? ಸಸ್ಯಾಹಾರಿಗಳು ಸಸ್ಯಾಹಾರವನ್ನು ಸೇವಿಸದಿ ರುವರೇ? ಆದ್ದರಿಂದ ಸೇವಿ ಸುವ ಆಹಾರದ ಮೇಲೆ ನಿಷೇಧ ಹೇರುವುದು ಎಷ್ಟು ಸರಿ? ರಮೇಶ್.ಕೆ., ಯೆಯ್ಯಾಡಿ
ಬಸ್ ಮಾಲಕರೇಕೆ ಪ್ರತಿಭಟಿಸುತ್ತಿಲ್ಲ?
ಇತ್ತೀಚೆಗೆ ಮುಡಿಪುವಿನಲ್ಲಿ ಬಸ್ ಚಾಲಕನ ಮೇಲೆ ಪಂಚಾಯತ್ ಅಧ್ಯಕ್ಷನೋರ್ವ ನಡೆಸಿದ ಹಲ್ಲೆಯು ಖಂಡನೀಯವಾಗಿದೆ. ಇದನ್ನು ಒಬ್ಬ ಬಸ್ ಚಾಲಕನಾಗಿ ನಾನು ಖಂಡಿಸುತ್ತೇನೆ. ಇಷ್ಟೆಲ್ಲಾ ಆದರೂ ಬಸ್ ಮಾಲಕರು ಚಾಲಕರ ಪರವಾಗಿ ಒಂದೇ ಒಂದು ಮಾತೆತ್ತದಿರುವುದು ಮಾತ್ರ ದುರಂತ. ಬಸ್ ಮಾಲ ಕರು ಬಸ್ಗಳನ್ನು ಖರೀದಿಸಿ ರಸ್ತೆಗಿಳಿಸುವವರೆಗೆ ಮಾತ್ರ ಇರುತ್ತಾರೆ. ನಂತರ ಪ್ರತೀ ದಿನ ಸಂಜೆ ಬಸ್ಸು ಗಳ ಕಲೆಕ್ಷನ್ ಪಡೆಯುವುದೊಂದೇ ಇವರ ಕೆಲಸ ಎಂಬಂತಾಗಿದೆ. ಅದರ ಮಧ್ಯೆ ಬಸ್ಸಲ್ಲಿ ಏನಾದರೂ ಆದರೆ ಅದು ಇವರಿಗೆ ಬೇಡ.
ಪ್ರತೀ ದಿನ ಬಸ್ಸಿನಲ್ಲಿ ಏನೇ ಸಮಸ್ಯೆ ಇದ್ದರೂ ಪ್ರಯಾಣಿಕರಿಂದ ಉಗಿಸಿಕೊಳ್ಳುವುದು ಚಾಲಕರೇ ಹೊರತು ಮಾಲಕರಲ್ಲ. ಇನ್ನು ಎಷ್ಟೇ ಜಾಗರೂಕ ರಾಗಿ ಸಂಚರಿಸಿದರೂ ಕೆಲ ವಾಹನ ಸವಾರರಿಗೆ ಬಸ್ ಚಾಲಕರನ್ನು ಕಂಡರೆ ಅದೇನೋ ಆವೇಶ. ಇವರ ಈ ಆವೇಶಗಳಿಗೆ ಬಲಿಯಾಗುವುದು ಮಾತ್ರ ನಮ್ಮಂಥ ಬಡಪಾಯಿ ಚಾಲಕರು ಎನ್ನುವುದು ವಿಪರ್ಯಾಸ. ಮೊನ್ನೆಯ ಘಟನೆಯಲ್ಲೂ ನಡೆದದ್ದು ಇದೆ. ಇಲ್ಲಿ ಯಾರ ತಪ್ಪು ಎನ್ನುವುದಕ್ಕಿಂತ ಚಾಲಕನ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಈ ಬಗ್ಗೆ ಬಸ್ಸಿನ ಮಾಲಕರು ಪೊಲೀಸರಿಗೆ ಸೂಕ್ತ ರೀತಿಯಲ್ಲಿ ಒತ್ತಡ ಹಾಕಿದ್ದರೆ ಆರೋಪಿಗಳ ಬಂಧನ ಕಷ್ಟದ ಕೆಲಸವಲ್ಲ. ಆದರೆ ಬಸ್ ಮಾಲಕರಿಗೆ ಚಾಲಕರ, ಕಂಡಕ್ಟರ್ಗಳ ಸುರಕ್ಷತೆಗಿಂತ ಅವರ ವ್ಯವಹಾರವೇ ಹೆಚ್ಚಾಗಿದೆ. ಹೀಗಿರುವಾಗ ನಮ್ಮ ಪರವಾಗಿ ನಿಂತು ಇವರು ಹೇಗೆ ತಾನೆ ಮಾತನಾಡುತ್ತಾರೆ?
ಬಸ್ ಚಾಲಕರಲ್ಲಿ ಕೆಟ್ಟವರೂ ಇದ್ದಾರೆ, ಒಳ್ಳೆ ಯವರೂ ಇದ್ದಾರೆ. ಹಾಗೆಂದು ಎಲ್ಲರನ್ನೂ ಒಂದೇ ದೃಷ್ಟಿ ಕೋನದಿಂದ ನೋಡುವುದು ಸರಿಯಲ್ಲ. ಬಸ್ ಚಾಲಕರ ಮೇಲೆ ದೂರುಗಳು ಬಂದಾಗ ಮಾತ್ರ ಚಾಲಕರನ್ನು ಪ್ರಶ್ನಿಸುವ ಮಾಲಕರು ಇತರೆ ಸಮ ಯಗಳಲ್ಲಿ ಬಸ್ನಲ್ಲಿ ನಡೆಯುವ ದಿನದ ಆಗು ಹೋಗುಗಳನ್ನು ಯಾಕೆ ಕೇಳುವುದಿಲ್ಲ? ನಾಲ್ಕೈದು ಬಸ್ ಇರುವ ಮಾಲಕರು ಈ ರೀತಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇನ್ನಾದರೂ ಚಾಲಕರ ಮೇಲಿನ ಹಲ್ಲೆಯನ್ನು ಬಸ್ ಮಾಲಕರು ಖಂಡಿಸಿ, ತಪ್ಪಿತ ಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಲಿ. ಅದೇ ರೀತಿ ತಮ್ಮ ಬಸ್ಗಳತ್ತ ಗಮನ ಹರಿಸಲಿ.
ನೊಂದ ಬಸ್ ಚಾಲಕ, ಮಂಗಳೂರು
ಸಿಮ್ಕಾರ್ಡ್ಗಳ ಕಾನೂನು ಬಾಹಿರ ಮಾರಾಟವನ್ನು ಕೇಳುವವರಿಲ್ಲ
ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಓದಿದೆ. ಒಬ್ಬ ವ್ಯಕ್ತಿ ಅಮೆರಿಕ ಅಧ್ಯಕ್ಷ ಒಬಾಮರ ಫೋಟೋ ಕೊಟ್ಟು ತನ್ನ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ ಕೊನೆಗೆ ಸಿಕ್ಕಿ ಬಿದ್ದಿದ್ದಾನೆ. ಬಹುಶಃ ಇಂತಹ ಅದೆಷ್ಟೋ ಘಟನೆಗಳು ನಮ್ಮ ರಾಜ್ಯ ದಲ್ಲಿ, ಅಷ್ಟೇ ಯಾಕೆ ನಮ್ಮದೇ ಜಿಲ್ಲೆಯಲ್ಲಿ ಹುಡುಕಿದರೆ ಸಾಕಷ್ಟಿರಬಹುದು. ನಗರದ ಅಲ್ಲಲ್ಲಿ ಸಣ್ಣ ಸಣ್ಣ ಟೆಂಟ್ ಹಾಕಿಕೊಂಡು ಸಿಮ್ ಕಾರ್ಡ್ಗಳನ್ನು ತರಕಾರಿಯಂತೆ ಮಾರಾಟ ಮಾಡುವ ದೃಶ್ಯ ಅಲ್ಲಲ್ಲಿ ಸಾಮಾನ್ಯವಾಗಿದೆ. ಇವರಿಗೆ ಬೇಕಾಗಿರುವುದು ಒಂದು ಫೋಟೋ ಮತ್ತು ಐಡಿ ಪ್ರೂಫ್ ಮಾತ್ರ. ಹಾಗಂತ ನಮ್ಮದೇ ಫೋಟೋ, ಐಡಿ ಪ್ರೂಫ್ ಕೊಡಬೇಕೆನ್ನುವ ಕಡ್ಡಾಯ ನಿಯಮವೂ ಇವರಲ್ಲಿಲ್ಲ. ಫೊಟೋ ಯಾರದ್ದೂ ಆಗಬಹುದು.
ಈ ರೀತಿ ಬೇಕಾಬಿಟ್ಟಿ ನಿಯಮಗಳನ್ನು ಗಾಳಿಗೆ ತೂರಿ ಸಿಮ್ ಕಾರ್ಡ್ ಮಾರಾಟ ಮಾಡುವವರ ವಿರುದ್ದ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಮೊಬೈಲ್ ನೆಟ್ ವರ್ಕ್ ಕಂಪೆನಿಗಳ ಹುಚ್ಚು ಪೈಪೋಟಿಯ ಮಧ್ಯೆ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಗಾಳಿಗೆ ತೂರಲಾಗುತ್ತಿದೆ. ಇಂದಿನ ಯುವಕರಲ್ಲೇ ಹೆಚ್ಚೆಂದರೂ ಹತ್ತಿ ಪ್ಪತ್ತು ಸಿಮ್ ಕಾರ್ಡ್ಗಳು ಇರುತ್ತವೆ. ಇವರು ಈ ಸಿಮ್ ಕಾರ್ಡ್ ಬಳಸಿ ಏನು ಮಾಡಿದರೂ ಪೊಲೀಸ್ ಇಲಾಖೆಗೆ ವಿಳಾಸ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಇಲ್ಲಿರುವ ವಿಳಾಸಗಳೇ ಬೋಗಸ್ ಆಗಿರುತ್ತದೆ. ಇನ್ನು ನಮ್ಮ ಪೊಲೀ ಸರಿಗೆ ಇದು ತಿಳಿದರೂ ಮಾತೆತ್ತುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕಾನೂನು ಬಾಹಿರ ಮಾರಾಟದ ವಿರುದ್ದ ಕ್ರಮ ಕೈಗೊಳ್ಳುವರೇ?
ಸಂಕೇತ್ ನಾಯಕ್, ಕಂಕನಾಡಿ
ಪಾರ್ಕಿಂಗ್ ಶುಲ್ಕದಲ್ಲಿ ಹೆಚ್ಚುವರಿ ವಸೂಲಿ ಮಾಡುವಂತಿಲ್ಲ
ಪಾರ್ಕಿಂಗ್ ಜಾಗದಲ್ಲಿ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಗ ಳಿಗೆ ಮೊದಲ ಎರಡು ಘಂಟೆಗೆ ೩ರೂ. ಮತ್ತು ಪ್ರತೀ ಹೆಚ್ಚುವರಿ ಘಂಟೆಗೆ ಒಂದು ರೂ., ನಾಲ್ಕು ಚಕ್ರದ ವಾಹನಗಳಿಗೆ ಮೊದಲ ಎರಡು ಘಂಟೆಗೆ ೬ ರೂ. ಮತ್ತು ಹೆಚ್ಚುವರಿ ಪ್ರತೀ ಘಂಟೆಗೆ ೨ ರೂ. ಶುಲ್ಕವನ್ನು ಮಾತ್ರ ವಸೂಲಿ ಮಾಡತಕ್ಕದ್ದು. ಈ ನಿಗದಿತ ಶುಲ್ಕಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡಿದಲ್ಲಿ ಅಥವಾ ನಿಗದಿತ ಜಾಗಕ್ಕಿಂತ ಹೊರಗಡೆ ಶುಲ್ಕ ವಸೂಲಿ ಮಾಡಿದಲ್ಲಿ ಗುತ್ತಿಗೆಯನ್ನು ಯಾವುದೇ ನೋಟಿಸು ನೀಡದೆ ರದ್ದು ಪಡಿ ಸುವ ಅಧಿಕಾರವನ್ನು ಮಂಗಳೂರು ನಗರ ಪಾಲಿಕೆಯ ಆಯುಕ್ತರು ಹೊಂದಿರುತ್ತಾರೆ. ಮಂಗಳೂರು ಮಹಾನಗರ ಪಾಲಿಕೆ
ಬಾಲ ಭಿಕ್ಷುಕರಿಗೆ ವ್ಯವಸ್ಥೆ ಕಲ್ಪಿಸಿ
ಉಡುಪಿ ಜಿಲ್ಲೆಯಲ್ಲಿ ಬಾಲ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿದೆ. ಉಡುಪಿಯ ಪ್ರಧಾನ ರಸ್ತೆ, ಬಸ್ ನಿಲ್ದಾಣ, ಥಿಯೇಟರ್ಗಳ ಎದುರು ಇವರ ಸಂಖ್ಯೆ ಹೆಚ್ಚಿರುತ್ತದೆ. ಇವ ರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡ ಳಿತ, ಸಂಬಂಧಪಟ್ಟ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇನ್ನೂ ಮುಂದಾಗಿಲ್ಲ.
ಬಸ್ ನಿಲ್ದಾಣಕ್ಕೆ ಹೋಗಿ-ಬರುವ ವರ ಹಿಂದೆಯೇ ಬೀಳುವ ಈ ಮಕ್ಕಳಲ್ಲಿ ಹೆಚ್ಚಿನವರು ಹೊರಜಿಲ್ಲೆಯವರು. ಉಡು ಪಿಯ ಬೀಡಿನಗುಡ್ಡೆ, ಅಂಬಲಪಾಡಿ ಬಳಿ ನೆಲೆಸಿರುವ ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳನ್ನು ಭಿಕ್ಷಾಟನೆಗೆ ಇಳಿಸುತ್ತಿದ್ದಾರೆ. ಭಿಕ್ಷೆ ಬೇಡಿ ಸಂಪಾದಿಸಿದ ಹಣವನ್ನು ಹೆತ್ತ ವರೇ ಮದ್ಯ ಸೇವನೆಗೆ ಬಳಸುವ ಸ್ಥಿತಿಯೂ ಇಲ್ಲಿದೆ. ಈ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಉಡುಪಿ ಅಷ್ಟಮಠ ಗಳ ಆಡಳಿತ ಪ್ರಯತ್ನಿಸಿದರೆ ಒಳ್ಳೆಯದು.
ಸುರೇಖಾ, ಮಣಿಪಾಲ
ರಹೀಂ ಉಚ್ಚಿಲ ಅನಾಥರಾದರೇ?
ದ.ಕ. ಜಿಲ್ಲಾ ಬ್ಯಾರಿ ಪರಿಷತ್ ಅಧ್ಯಕ್ಷರಾದ ರಹೀಂ ಉಚ್ಚಿಲ್ ಅವರ ಹತ್ಯಾಯತ್ನ ಇತ್ತೀಚೆಗೆ ಅವರ ಕಚೇರಿ ಯಲ್ಲೇ ನಡೆಯಿತು. ಜಿಲ್ಲೆಯ ಜನ ರನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರ ಣದ ಬಗ್ಗೆ ಸೂಕ್ತ ತನಿಖೆ ನಡೆಸ ಬೇಕೆಂದು ಕನಿಷ್ಠ ಪಕ್ಷ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಖಂಡನಾ ಹೇಳಿಕೆ ಕೊಡುವುದಕ್ಕೂ ಬಿಜೆಪಿ ಮತ್ತದರ ಅಂಗಸಂಸ್ಥೆ ಬಜ ರಂಗದಳ ಮುಂದಾಗಿಲ್ಲ ಎನ್ನುವುದೇ ವಿಪರ್ಯಾಸ. ಕೆ.ಹೆಚ್.ಹಾರೀಸ್, ಗುರುಪುರ
ಜಿಲ್ಲಾಡಳಿತದ ಇಬ್ಬಗೆ ನೀತಿ ಖಂಡನೀಯ
ಮಂಗಳೂರು ನಗರಕ್ಕೆ ಕುಡಿಯುವ ನೀರಿಲ್ಲ ಎಂಬ ನೆಪವೊಡ್ಡಿ ಕಡಬ ಸಮೀಪದ ಹೊಸ್ಮಠ ಎಂಬಲ್ಲಿ ಈ ಭಾಗದ ಜನತೆಯ ಜೀವನಾಡಿಯಾದ ಹೊಳೆಯೊಂದರ ನೀರನ್ನು ಮಂಗಳೂರಿಗೆ ಸರಬರಾಜು ಮಾಡಲಾಗುತ್ತದೆ ಎಂದು ದಿನನಿತ್ಯ ಹೊಳೆಯಲ್ಲಿ ವಾಹನ ತೊಳೆಯುತ್ತಿದ್ದ ವರು ತಮ್ಮ ಕೆಲಸವನ್ನು ನಿಲ್ಲಿಸಿರುತ್ತಾರೆ.
ಇಷ್ಟೇ ಅಲ್ಲದೆ ಸ್ಥಳೀಯ ಪಂಚಾಯತ್ ಕೂಡ ಅಲ್ಲಲ್ಲಿ ಹೊಂಡ ತೆಗೆದು ವಾಹನಗಳ ಪ್ರವೇಶವನ್ನು ನಿಷೇಧಿಸಿ ರುತ್ತಾರೆ. ಆದರೆ ಇದೇ ಹೊಳೆಯ ಪಕ್ಕದಲ್ಲಿರುವ ಪಾಲೆ ಚ್ಚಾರ್ ಎಂಬ ಪ್ರದೇಶದಲ್ಲಿ ಸರಕಾರದ ಉಚಿತ ವಿದ್ಯುತ್ ಅನ್ನು ಬಹಳ ತಂತ್ರದಿಂದ ಬಳಸಿಕೊಂಡು ಹತ್ತಿಪ್ಪತ್ತು ಪಂಪ್ ಹಾಕಿ ಅದರ ನೀರನ್ನು ಭೂಗತವಾಗಿ ಟ್ಯಾಂಕ್ ನಿರ್ಮಿಸಿ ತಮ್ಮ ತೋಟಗಳಿಗೆ ಅವ್ಯಾಹತವಾಗಿ ನೀರು ಬಿಡುತ್ತಿರುವ ಅಣ್ಣ-ತಮ್ಮಂದಿರನ್ನು ಯಾಕೆ ತಾವು ಪ್ರಶ್ನಿಸು ವುದಿಲ್ಲ? ಹತ್ತು ಹೆಚ್ಪಿಯಿಂದ ಜಾಸ್ತಿ ಉಪಯೋಗ ಮಾಡುವ ಪಂಪ್ಗೆ ಉಚಿತ ವಿದ್ಯುತ್ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಎಂಟು ಹೆಚ್ಪಿಗಳ ಇಪತ್ತಕ್ಕೂ ಹೆಚ್ಚು ಪಂಪ್ ಬಳಸಿ ಸಾರ್ವಜನಿಕರ ನೀರು ಮತ್ತು ವಿದ್ಯುತ್ ಅನ್ನು ಬಹಳ ಕುತಂತ್ರದಿಂದ ಉಪಯೋಗಿಸುತ್ತಿರುವಾಗ ಸಂಬಂಧಪಟ್ಟವರಿಗೆ ಅದೇಕೆ ಕಾಣಿಸುತ್ತಿಲ್ಲ? ಇವರೇನು ಸಂಘ ಪರಿವಾರಕ್ಕೆ ನಿಷ್ಠರು ಎಂದು ಸುಮ್ಮನಿದ್ದಾರೆಯೇ? ವಿದ್ಯುತ್ ಇಲಾಖೆ ಹಾಗೂ ಸ್ಥಳೀಯ ಪಂಚಾಯತ್ನವರು ಚಿಲ್ಲರೆ ಕಾಸಿಗಾಗಿ ಈ ರೀತಿ ಅಕ್ರಮಗಳನ್ನು ಕಂಡೂ ಕಾಣದಂತೆ ವರ್ತಿಸುವುದೇಕೆ? ಕೇವಲ ಜೀಪ್, ಕಾರು ತೊಳೆಯುವ ಬಡಪಾಯಿಗಳ ವಿರುದ್ಧ ಕ್ರಮ ತೆಗೆದುಕೊಳ್ಳು ವುದು ಮಾತ್ರ ನಿಮ್ಮ ಕೆಲಸವೇ? ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಎಚ್ಚರಿಕೆ! ವಾಹನ ಚಾಲಕರು, ಕಡಬ
ಇದು ನ್ಯಾಯವೇ?
ಫರಂಗಿಪೇಟೆಯ ಕೆನರಾ ಬ್ಯಾಂಕ್ ಎದುರು ತರಕಾರಿ ಮಾರು ತ್ತಿದ್ದವನನ್ನು ಬಲವಂತವಾಗಿ ಬಂಟ್ವಾಳ ಆರಕ್ಷಕ ಠಾಣೆಯ ಪೊಲೀ ಸರು ಹಾಗೂ ಫರಂಗಿಪೇಟೆಯಲ್ಲಿ ಸಮಾಜ ಸೇವಕರೆಂದು ಕೊಂಡ ವರು ತೆರವುಗೊಳಿಸಿದ್ದಾರೆ. ಇದು ಸ್ವಾಗತಾರ್ಹ. ಆದರೆ ಈಗ ಇದೇ ಸ್ಥಳದಲ್ಲಿ ಟೆಂಪೋದಲ್ಲಿ ಗ್ಯಾಸ್ ಸಿಲಿಂ ಡರ್ ಇಟ್ಟು ಫಾಸ್ಟ್ಫುಡ್ ವ್ಯಾಪಾರ ಮಾಡುತ್ತಿದ್ದಾರೆ. ಇದಕ್ಕೆ ವ್ಯವಸ್ಥೆ ಕಲ್ಪಿ ಸಲು ಮೊದಲು ತರಕಾರಿ ಮಾರು ವುದನ್ನು ಯಾರು ವಿರೋಧಿಸಿ ದ್ದರೋ ಅವರೇ ಲಾಬಿ ನಡೆಸಿದ್ದಾರೆ. ಈ ತಾರತಮ್ಯದ ವಿರುದ್ಧ ಸಾರ್ವ ಜನಿಕರು ಕೋಮುಬಣ್ಣ ಬಳಿದು ಪರಸ್ಪರ ಚರ್ಚೆ ನಡೆಸುತ್ತಿದ್ದಾರೆ. ಪರಿ ಸ್ಥಿತಿ ಕೈ ಮೀರುವುದಕ್ಕೆ ಮೊದಲು ಪೊಲೀಸ್ ಅಧಿಕಾರಿಗಳು ಈ ಫಾಸ್ಟ್ ಫುಡ್ ಟೆಂಪೋವನ್ನು ಇಲ್ಲಿಂದ ತೆರ ವುಗೊಳಿಸುವುದು ಉತ್ತಮವಾಗಿರು ತ್ತದೆ. ಕೋಮು ಸಾಮರಸ್ಯದಲ್ಲಿರುವ ಫರಂಗಿಪೇಟೆ ನಾಗರಿಕರಿಗೆ ಈ ಅಕ್ರಮ ಗೂಡಂಗಡಿ ಮುಳ್ಳಾಗುವುದು ಬೇಡ ವೆಂಬುವುದೇ ನನ್ನ ಅಭಿಪ್ರಾಯವಾ ಗಿದೆ. ಆದ್ದರಿಂದ ತಕ್ಷಣ ಪೊಲೀಸ್ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪ್ರಕ ರಣಕ್ಕೆ ನಾಂದಿ ಹಾಡಬೇಕಾಗಿದೆ. ಇಲ್ಲವಾದಲ್ಲಿ ಸದ್ಯ ಯಾವುದೇ ಗಲಭೆ ಗಳಿಲ್ಲದೆ ಫರಂಗಿಪೇಟೆ ಮತ್ತೆ ಉದ್ವಿ ಗ್ನಗೊಳ್ಳಬಹುದು.
ಸಂತು, ಫರಂಗಿಪೇಟೆ