ವೆನ್ಲಾಕ್ ಹಗರಣ ಸಮಗ್ರ ತನಿಖೆಯಾಗಲಿ
Posted by JAYAKIRANA Kirana on Sunday, 29 April 2012 | 0 comments | Leave a comment...
ಸರಕಾರ, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತೇವೆ ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಲದು. ಖುದ್ದಾಗಿ ಇಲ್ಲಿಗೊಮ್ಮೆ ಭೇಟಿಕೊಟ್ಟು ಪರಿಶೀಲನೆ ನಡೆಸ ಬೇಕು. ಇಲ್ಲಿಂದ ಔಷಧಿ ಕಳ್ಳದಾರಿಯಲ್ಲಿ ಮೆಡಿಕಲ್ ಸೆಂಟರ್ ಸೇರುವುದನ್ನು ತಪ್ಪಿಸಬೇಕು. ಬಡರೋಗಿಗಳ ಆಶಾಕಿರಣವಾಗಬೇಕಿದ್ದ ಆಸ್ಪತ್ರೆಯೊಂದು ಇಂಥ ದಂಧೆಯಲ್ಲಿ ತೊಡಗಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ಸೂಕ್ತ ತನಿಖೆ ನಡೆಯಲಿ.
ಚಿತ್ರಾ ನಾಯಕ್, ರಥಬೀದಿ
ಸಂಘಟನೆಗಳಿಗೆ ಮಾದರಿ
ಹಿಂದೂ ಸಂಘಟನೆಗಳು ಕೇವಲ ದನ ಹಿಡಿಯಲು, ಮುಸ್ಲಿಮ್ ಹುಡುಗರ ಜೊತೆ ಹಿಂದೂ ಹುಡುಗಿಯರು ಇದ್ದರೆ ಅವರಿಗೆ ಹಲ್ಲೆ ಮಾಡಲು ಮಾತ್ರ ಇರುವುದು ಎಂದು ಹೆಚ್ಚಿನ ಹಿಂದೂಗಳು, ಅನ್ಯ ಧರ್ಮೀಯರು ಹೇಳುತ್ತಾರೆ. ಊರ್ವಾ ಸ್ಟೋರ್ನ ಶ್ರೀರಾಮ ಸೇನೆ ಸಂಘಟನೆ ಮಾತ್ರ ದನಗಳ ಹಿಂದೆ ಹೋಗದೆ ಹಿಂದೂ ಸಂಘಟನೆಯೊಂದು ಮಾಡಲೇ ಬೇಕಾದ ಕೆಲಸ ಮಾಡುತ್ತಿದೆ. ಬಡ ಹಿಂದೂ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉಚಿತ ಪುಸ್ತಕ ವಿತರಿಸಿ ಅವರ ಶಿಕ್ಷಣಕ್ಕೆ ನೆರವಾಗುತ್ತಿದೆ. ಸೇನೆ ಇಲ್ಲಿ ಮಾಡು ತ್ತಿರುವುದು ಅಲ್ಪವಾಗಿರಬಹುದು. ಆದರೆ ಹಿಂದೂಗಳಿಗೆ ಅದರಲ್ಲೂ ತೀರಾ ಹಿಂದುಳಿದ ಹಿಂದೂಗಳಿಗೆ ತಮ್ಮವರು ಇದ್ದಾರಲ್ಲ ಎನ್ನುವ ಆತ್ಮವಿಶ್ವಾಸ ಹುಟ್ಟುತ್ತದೆ. ಹಿಂದೂ ಸಂಘಟನೆಗಳು ಸತ್ಯನಾರಾಯಣ ಪೂಜೆ, ಶನಿಪೂಜೆ, ಚಂಡಿಕಾಯಾಗಗಳಿಗೆ ಹಣ ಸುರಿಯುವುದಕ್ಕಿಂತ ಬಡ ಹಿಂದೂ ಹೆಣ್ಣು ಮಕ್ಕಳ ಮದುವೆಯ ಖರ್ಚನ್ನು ವಹಿಸುವುದರ ಮೂಲಕ, ಹಿಂದೂ ಸಂಘಟನೆ ಸದಸ್ಯರು ಸರಳ ವಿವಾಹ ಆಗುವುದರ ಮೂಲಕ ಹಿಂದೂ ಸಂಘಟನೆಯ ಹುಡುಗರು ಪೋಲಿಗಳು ಎನ್ನುವ ಕಳಂಕವನ್ನು ತೊಡೆದು ಹಾಕಲು ಯತ್ನಿಸಬೇಕಿದೆ. ಕಲ್ಲೇಶ್ ಶೆಟ್ಟಿ, ಅಶೋಕ್ನಗರ
ಆರೋಗ್ಯ ವಿಮೆ ಎಲ್ಲರಿಗಿರಲಿ
ಆರೋಗ್ಯ ಪ್ರತಿಯೊಬ್ಬರಿಗೂ ಎಷ್ಟೊಂದು ಮಹತ್ವದ್ದು ಎಂದು ತಿಳಿದಿರುವಂಥದ್ದೇ. ಇತ್ತೀಚೆಗೆ ಖಾಸಗಿ ವಿಮಾ ಕಂಪೆನಿಗಳ ಆರೋಗ್ಯ ವಿಮೆ ದುಬಾರಿಯದ್ದಾಗಿದೆ. ದುಬಾರಿ ಹಣ ಕಟ್ಟಿದರೂ ಅದು ತುರ್ತು ಸಂದರ್ಭದಲ್ಲಿ ಸಿಗುತ್ತದೆ ಎನ್ನುವುದಕ್ಕೆ ಗ್ಯಾರಂಟಿಯಿಲ್ಲ. ಶ್ರೀಮಂತರು ಆಸ್ಪತ್ರೆಗೆ ಹೋದರೆ ದುಬಾರಿ ಬಿಲ್ ಭರಿಸಬಹುದು.
ಆದರೆ ಬಡವರು ಏನು ಮಾಡಬೇಕು? ಇತ್ತೀಚೆ ಗಂತೂ ಖಾಸಗಿ ಕಂಪೆನಿ ಗಳಲ್ಲಿ ಕೆಲಸ ಮಾಡು ವರಿಗೂ ಇಎಸ್ಐ, ಪಿ.ಎಫ್ ಸಿಗುತ್ತದೆ ಯಾದರೂ ಇದು ದಾಖಲೆಗಳಲ್ಲಿ ಮಾತ್ರ ವಿರುತ್ತದೆ. ಇಎಸ್ಐ ಆಸ್ಪತ್ರೆಯಂತೂ ಯಾವುದಕ್ಕೂ ಪ್ರಯೋಜ ನವಿಲ್ಲದಂತಾಗಿದೆ. ಸರಕಾರಕ್ಕೆ ಮಣ್ಣೆರಚಲು ಖಾಸಗಿ ಸಂಸ್ಥೆಗಳಿಗೆ ಹಲವು ದಾರಿಗಳಿವೆ. ಯಾವ ದಾರಿ ಇಲ್ಲದಿದ್ದರೂ ಪಿ.ಎಫ್ ಸಂಸ್ಥೆಯ ಸಿಬ್ಬಂದಿಯೇ ಲಂಚ ಪಡೆದುಕೊಂಡು ಇದಕ್ಕೆಲ್ಲ ವ್ಯವಸ್ಥೆ ಮಾಡಿ ಕೊಡು ವವರು ಇದ್ದಾರೆ. ಹೀಗಿರುವಾಗ ಇಎಸ್ಐ ಸುಲಭವಾಗಿ ಬಡವರಿಗೆ ಸಿಗುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಆದುದರಿಂದ ಸರಕಾರವೇ ಕಡಿಮೆ ದರದಲ್ಲಿ ಪ್ರತಿ ಯೊಬ್ಬರಿಗೂ ಆರೋಗ್ಯ ವಿಮೆ ಕಲ್ಪಿಸಿದರೆ ಬಡವರು ನೆಮ್ಮದಿಯ ಉಸಿರು ಬಿಡಬಹುದು.
ಶುಕೂರ್ ಅಹಮ್ಮದ್ ಜೋಕಟ್ಟೆ
ಬುರ್ಖಾಕ್ಕೆ ಅನುಮತಿ ಇರುವ ಶಾಲೆಗಳಿಗೆ ಕಳಿಸಿ!
ನಗರದ ಖ್ಯಾತ ಶಿಕ್ಷಣ ಸಂಸ್ಥೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಬುರ್ಖಾ ಧರಿಸಬಾರದೆಂದು ಫರ್ಮಾನು ಹೊರಡಿಸಲಾಗಿದೆ. ಇಲ್ಲಿ ಕಾಲೇಜಿನಲ್ಲಿ ಎನ್ನುವುದಕ್ಕಿಂತಲೂ ಕ್ಲಾಸಿನಲ್ಲಿ ಎನ್ನುವುದನ್ನು ಕಾಲೇಜಿನ ಆಡಳಿತ ಮಂಡಳಿ ಒತ್ತಿ ಹೇಳಿದೆ.
ಈ ಹಿಂದೆ ಮಹಾವೀರ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿ ನಿಗೆ ಬುರ್ಖಾ ಧರಿಸಲು ಅನುಮತಿ ಕೊಡದ ಕಾರಣಕ್ಕೆ ಮುಸ್ಲಿಂ ಸಂಘಟನೆಗಳು ಬೀದಿ ಗಿಳಿದಿದ್ದವು. ಬಂಟ್ವಾಳದ ಎಸ್ವಿಎಸ್ ಕಾಲೇಜು, ಉಪ್ಪಿನಂಗಡಿಯ ಸರಕಾರಿ ಕಾಲೇಜಿನಲ್ಲಿ ಬುರ್ಖಾ ಧರಿಸಲು ಅನಿಮತಿ ನೀಡದ ಹಿನ್ನೆಲೆಯಲ್ಲಿ ಭಾರೀ ವಿವಾದವೇ ಉಂಟಾಗಿತ್ತು. ಮೊನ್ನೆ ಮುಖಕ್ಕೆ ಸೆಗಣಿ ಮೆತ್ತಿಸಿಕೊಂಡ ಉಪನ್ಯಾಸಕ ಸೋಮಯಾಜಿ ಬುರ್ಖಾ ಪರವಾಗಿ ಮಾತನಾಡಿದ್ದರು. ಆದರೆ ಈಗ ಗಮನಿಸಬೇಕಾದ ಅಂಶವೆಂದರೆ ಮಹಾವೀರ ಕಾಲೇಜು, ಸಂತ ಅಲೋಶಿಯಸ್ ಕಾಲೇಜು ಅಲ್ಪಸಂಖ್ಯಾತರಿಗೆ ಸೇರಿದ್ದು. ಅದರಲ್ಲೂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಸ್ಲಿಮರು ಹೆಚ್ಚಿಸ ಸಂಖ್ಯೆಯಲ್ಲಿ ಬರುತ್ತಾರೆ. ಇದೀಗ ಇಲ್ಲಿಯೇ ಬುರ್ಖಾಕ್ಕೆ ನಿಷೇಧ ಹೇರಲಾಗಿದೆ. ಅದೂ ಸಕಾರಣವಾಗಿ. ಈ ಹಿಂದೆ ಬುರ್ಖಾದ ಬಗ್ಗೆ ವಿವಾದ ಉಂಟಾದಾಗಲೆಲ್ಲಾ ಮುಸ್ಲಿಮರು ಮೊದಲೇ ಕಾಲೇಜಿನ ನೀತಿ ನಿಯಾಮಾವಳಿ ತಿಳಿದುಕೊಂಡು ಪ್ರವೇಶ ಪಡೆಯಲಿ. ಆಗ ಇಂಥ ಸಮಸ್ಯೆಯೇ ಉದ್ಭವವಾಗುವುದಿಲ್ಲ ಎಂದು ಕೆಲ ಹಿರಿಯರು ಬುದ್ಧಿ ಹೇಳಿದ್ದರು. ಮುಸ್ಲಿಮ್ ಹೆಣ್ಣು ಮಕ್ಕಳು ಕಲಿಯುವುದೇ ದೊಡ್ಡದು. ಅವರನ್ನು ನಾಲ್ಕು ಗೋಡೆಯಿಂದ ಆಚೆಗೆ ಕಳಿಸಿ ಸಮಾಜದಲ್ಲಿ ಸತ್ಪ್ರಜೆಗಳನ್ನಾಗಿ ಮಾಡುವ ಅವರ ಹಿರಿಯರು, ಮುಸ್ಲಿಂ ಸಮುದಾಯದ ಬಗ್ಗೆ ಯಾವಾತ್ತೂ ಅನುಮಾನ ಪಡಬಾರದು.
ಹಾಗಂತ ಕಾಲೇಜಿನ ನೀತಿ ನಿಯಾಮಾವಳಿಗಳನ್ನು ಮುರಿಯಲೂ ಬಾರದು. ಇಂದು ಒಬ್ಬರಿಗಾಗಿ ರಿಯಾಯತಿ ತೋರಿಸಿದರೆ ನಾಳೆ ದೊಡ್ಡ ಸಮಸ್ಯೆಯೇ ಎದುರಾಗಬಹುದು. ಈ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಂ ಉದ್ಯಮಿಗಳು ಅಥವಾ ಸರಕಾರವೇ ಮುಸ್ಲಿಮ್ ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕ ಕಾಲೇಜುಗಳನ್ನು ತತ್ಕ್ಷಣವೇ ಆರಂಭಿಸಬೇಕು. ಅವರ ಶಿಕ್ಷಣಕ್ಕೆ ಯಾವುದೇ ತೊಡಕು ಉಂಟಾಗಬಾರದು. ಹಿಂದೂ ಹೆಣ್ಣು ಮಕ್ಕಳು ಕ್ರೈಸ್ತ ಶಾಲೆಗಳಿಗೆ ಹೋಗುವಾಗ ಹೆಣೆಯಲ್ಲಿ ಬಿಂದಿ, ಕುಂಕುಮ, ತಲೆಗೆ ಹೂವು ಇಡಬಾರದು ಎನ್ನುವ ನಿಯಮವನ್ನು ಕಡ್ಡಾಯವಾಗಿ ಹೇರಲಾಗುತಿತ್ತು. ಅಲ್ಲದೆ ಕ್ರೈಸ್ತನತ್ತ ಆಸಕ್ತಿ ಹೊರಳಲಿ ಎಂದು ತರಗತಿಯ ಕೆಲ ಗಂಟೆ ಗಳನ್ನು ಬೈಬಲ್ ಪಠಣಕ್ಕೆ, ತರಗತಿಯಲ್ಲಿ ದೊಡ್ಡ ಯೇಸುವಿನ ಮೂರ್ತಿಯನ್ನು ಇಡು ವುದನ್ನು ಮಾಡುತ್ತಿದ್ದರು. ಆಗ ಹಿಂದೂಗಳಿಗೆ ಬೇರೆ ಅವಕಾಶಗಳಿರಲಿಲ್ಲ. ಹಿಂದೂಗಳ ಶಾಲಾ ಕಾಲೇಜುಗಳ ಸಂಖ್ಯೆ ಕಡಿಮೆಯಿತ್ತು. ಮಾತ್ರವಲ್ಲ ತಮ್ಮ ಧರ್ಮಕ್ಕೆ ಅವಮಾನ ವಾದರೂ ಮೌನವಾಗಿ ಅದನ್ನೆಲ್ಲಾ ಸಹಿಸುತ್ತಿದ್ದರು.
ಆದರೆ ಮುಸ್ಲಿಮರು ಇದನ್ನೆಲ್ಲಾ ಸಹಿಸಿಕೊಳ್ಳುವಷ್ಟು ಧರ್ಮಸಹಿಷ್ಣುಗಳೇ? ಅವರು ತಮ್ಮ ಧರ್ಮಕ್ಕೆ ತೊಂದರೆ ಎದುರಾಗಾದ ಬೀದಿಗಿಳಿಯುತ್ತಾರೆ. ಆದರೆ ಹಿಂದೂಗಳು? ಹಿಂದೂಗಳು ಅಲೋಚಿಸಬೇಕಿದೆ.
ರಾಜೇಶ್ ಸಿ.ಎನ್, ಬಳ್ಳಾಲ್ಭಾಗ್
ಅರಣ್ಯ ಇಲಾಖೆ ಎನ್ನುವ ಭ್ರಷ್ಟರ ಸ್ವರ್ಗ
ರಾಜ್ಯದಲ್ಲಿ ಅರಣ್ಯ ಇಲಾಖೆಯೊಂದಿದೆ ಎನ್ನುವುದೇ ಸೋಜಿಗದ ವಿಷಯ. ಇತ್ತೀಚೆಗೆ ನಾವು ಚಾರ್ಮಾಡಿ ಘಾಟಿಗೆ ಚಾರಣಕ್ಕೆಂದು ಹೋದಾಗ ಅರಣ್ಯ ಇಲಾಖೆ ಸತ್ತು ಹೋಗಿರುವುದು ಖಚಿತವಾಯಿತು. ಅರಣ್ಯದ ಅಲ್ಲಲ್ಲಿ ಪ್ರಾಕೃತಿಕ ಸಂಪತ್ತು ಲೂಟಿಯಾಗಿ ಹೋಗಿದೆ. ಅಲ್ಲಿನ ಸ್ಥಳೀಯರು ಹೇಳುವಂತೆ ಖಾಸಗಿ ಶ್ರೀಮಂತ ವ್ಯಕ್ತಿಗಳು ಇಲ್ಲಿನ ಕಾಡನ್ನು ತಮ್ಮ ಆಸ್ತಿ ಎಂಬಂತೆ ನೋಡುತ್ತಿದ್ದಾರೆ. ಕೆಲವೆಡೆ ರೆಸಾರ್ಟ್ ಮಾಡಲು ಸಿದ್ದತೆ ನಡೆಯುತ್ತಿದೆ. ಕಾಡಿನ ಹೆಚ್ಚಿನ ಭಾಗದಲ್ಲಿ ಮರಗಿಡಗಳು ನಾಶವಾಗಿದೆ. ಕೊಟ್ಟಿಗೆಹಾರ ಎಂಬಲ್ಲಿ ಅರಣ್ಯ ಇಲಾಖೆಯ ಚೆಕ್ಪೋಸ್ಟ್ ಇದ್ದರೂ ಇಲ್ಲಿರುವವರು ಪರಮ ಭ್ರಷ್ಟರು. ಇವರಿಗೆ ಹಣ ಕೊಟ್ಟರೆ ಏನೂ ನಡೆಯುತ್ತದೆ ಎಂಬಂತಾಗಿದೆ. ದೂರಲ್ಲಿ ನೋಡಿದರೂ ಸಾಕು, ಚಾರ್ಮಾಡಿ ಘಾಟಿಯ ನೆತ್ತಿ ಬೋಳು ಬೋಳು. ಅಲ್ಲಲ್ಲಿ ಕತ್ತಿಯಿಂದ ಗೀರಿದಂತೆ ಭಾಸವಾಗುತ್ತದೆ ಅರಣ್ಯ ಇಲಾಖೆ ಇಲ್ಲಿ ಮರಗಿಡ ಬೆಳೆಸುವ ಸಾಹಸವನ್ನೂ ಮಾಡಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಿಂದ ಕೊಬ್ಬಿ ಹೋಗಿದ್ದಾರೆ. ಹಿಂದೆ ಅ.ನ ಯಲ್ಲಪ್ಪ ರೆಡ್ಡಿ, ಕೆ.ಎಂ. ಚಿಣ್ಣಪ್ಪ ಅವರಂತಹ ಪರಿಸರಪ್ರೇಮಿ, ಪ್ರಾಮಾಣಿಕ ಅಧಿಕಾರಿಗಳು ಅರಣ್ಯ ಇಲಾಖೆಯಲ್ಲಿದ್ದರು. ಇಲಾಖೆಗೆ ಇದೊಂದು ಘನತೆಯ ವಿಷಯವಾಗಿತ್ತು. ಆದರೆ ಈಗ ಕಳ್ಳರೇ ತುಂಬಿ ಹೋಗಿರುವ ಅರಣ್ಯ ಇಲಾಖೆಯಿಂದ ಮುಂದಿನ ಪೀಳಿಗೆಯಿಂದ ನಮ್ಮ ಅರಣ್ಯವನ್ನು ರಕ್ಷಿಸುವುದು ಹೇಗೆ?
ತ್ಯಾಗು ಸುರತ್ಕಲ್
ರಾಷ್ಟ್ರೀಕೃತ ಬ್ಯಾಂಕ್ ಬೇಕು
ರಾಷ್ಟ್ರೀಯ ಹೆದ್ದಾರಿ೬೬ರಲ್ಲಿರುವ ಹಳೆಯಂಗಡಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವಾಗಿದೆ. ಇದೇ ಮೊದಲ ಬಾರಿ ಇಲ್ಲಿ ಅಪಾರ್ಟ್ಮೆಂಟ್ ನಿರ್ಮಾಣವಾಗುತ್ತಿದೆ. ಆಸುಪಾಸು ಹಳ್ಳಿಗಳು ಬೆಳವಣಿಗೆ ಕಾಣುತ್ತಿವೆ. ಇಷ್ಟೆಲ್ಲಾ ಆದರೂ ಇಲ್ಲಿರುವುದು ಒಂದೇ ಒಂದು ರಾಷ್ಟ್ರೀಕೃತ ಬ್ಯಾಂಕು. ಅದು ಕೆನರಾ ಬ್ಯಾಂಕು. ಹಳೆಯಂಗಡಿ ಆಸುಪಾಸಿನ ನಾಲ್ಕೈದು ಗ್ರಾಮಗಳು ಇದೇ ಬ್ಯಾಂಕನ್ನು ಅವಲಂಬಿಸಬೇಕಿದೆ. ತೀರಾ ಇಕ್ಕಟ್ಟಾದ ಈ ಬ್ಯಾಂಕಿನಲ್ಲಿ ಸಿಬ್ಬಂದಿ ಸೇವೆಗಳ ಬಗ್ಗೆ ಎರಡು ಮಾತಿಲ್ಲ. ಉತ್ತಮ ಸೇವೆ ಗ್ರಾಹಕರಿಗೆ ಸಿಗುತ್ತಿದೆ. ಎಟಿಎಂ ಬಗ್ಗೆ ವಿಚಾರಿಸಿದರೆ ಬ್ಯಾಂಕ್ ಸಿಬ್ಬಂದಿ ತಮ್ಮ ಅಸಹಾಯಕತೆಯನ್ನು ವ್ಯಕ್ತ ಪಡಿಸುತ್ತಾರೆ. ಕೆನರಾ ಬ್ಯಾಂಕ್ನ ಮುಖ್ಯ ಕಚೇರಿಯವರಿಗೆ ಇಲ್ಲಿನ ಗ್ರಾಹಕರ ಬವಣೆ ಅರ್ಥವಾಗಬೇಕಿತ್ತು. ಆದರೆ ಅವರು ಕಿವುಡರಂತೆ ನಮ್ಮ ದೂರುಗಳನ್ನು ಆಲಿಸುತ್ತಿಲ್ಲ. ಹಾಗಾಗಿ ಇಲ್ಲಿನ ಬ್ಯಾಂಕಿನ ಸಿಬ್ಬಂದಿ ವರ್ಗದವರನ್ನು ದೂರಿ ಪ್ರಯೋ ಜನವಿಲ್ಲ. ಇದಕ್ಕೆ ಪರಿಹಾರ ಎಂಬಂತೆ ಇಲ್ಲಿ ಇನ್ನೊಂದು ರಾಷ್ಟ್ರೀಕೃತ ಬ್ಯಾಂಕು ತನ್ನ ಶಾಖಾ ಕಚೇರಿಯನ್ನು ತೆರೆದು ಉತ್ತಮ ಸೇವೆ ಕೊಡಲಿ. ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್ ಆದರೂ ಸರಿ. ಕೂಡಲೇ ಹಳೆಯಂಗಡಿಯಲ್ಲಿ ಎಟಿಎಂ ಸಮೇತ ಕಾರ್ಯಾಚರಿಸುವಂತೆ ಮನಸ್ಸು ಮಾಡಲಿ. ಸಂಬಂಧಪಟ್ಟ ಬ್ಯಾಂಕಿನ ಮುಖ್ಯಸ್ಥರು ಇದನ್ನು ಗಮನಿಸುವರೇ?
ಗ್ರಾಹಕ, ಪಡುಪಣಂಬೂರು
ಸರಗಳ್ಳರ ಹಾವಳಿ
ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರುತ್ತಿದ್ದಂತೆಯೇ ಸರಗಳ್ಳರ ಹಾವ ಳಿಯೂ ಹೆಚ್ಚಾಗುತ್ತಿವೆ. ಇದರಿಂದ ಜನ ಸಾಮಾನ್ಯರು ಆತಂಕಕ್ಕೀಡಾಗಿದ್ದಾರೆ. ಎಲ್ಲಿ ಯಾವಾಗ ಸರ ಎಳೆದು ಪರಾರಿ ಯಾಗು ತ್ತಾರೋ, ಅಥವಾ ಮೋಸ ಮಾಡಿ ಸರ ಲಪಟಾಯಿಸುತ್ತಾರೋ ಎಂಬ ಆತಂಕ ಜನರಲ್ಲಿ ಉಂಟಾಗಿದೆ. ಪೊಲೀಸರು ಈ ಬಗ್ಗೆ ಯಾಕೆ ನಿರ್ಲಕ್ಷ್ಯ ವಹಿಸುತ್ತಾರೆಂದೇ ತಿಳಿಯುತ್ತಿಲ್ಲ. ಆದ್ದರಿಂದ ಒಂಟಿಯಾಗಿ ಹೋಗುವ ಮಹಿಳೆ ಯರು ತುಂಬಾ ಜಾಗ್ರತೆ ವಹಿಸಬೇಕು. ಹೆಚ್ಚು ಬಂಗಾ ರವನ್ನು ಮೈಮೇಲೆ ಧರಿಸಿಕೊಂಡು ಸುತ್ತಾ ಡುವುದನ್ನು ಕಡಿಮೆ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ನಾವೇ ಮುನ್ನೆ ಚ್ಚರಿಕೆ ವಹಿಸಿದರೆ ಸರಗಳ್ಳತನ ಪ್ರಕರಣಕ್ಕೆ ಕಡಿ ವಾಣ ಹಾಕಬಹುದು. ಮಾಲ್ಗಳಲ್ಲಿ, ಜನ ನಿಬಿಡ ಸ್ಥಳಗಳಲ್ಲಿ ಸಿ.ಸಿ ಕ್ಯಾಮರಾ ಇರಿ ಸುವ ಮೂಲಕವೂ ಕ್ರಮಕೈಗೊಳ್ಳ ಬಹುದು.
ಪವಿ, ಮಂಗಳೂರು
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ?
ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಒಳಪಟ್ಟ ನಂತರ ಕಾನೂನು ಸುವ್ಯವಸ್ಥೆ ಹದ ಗೆಟ್ಟಿದೆಯೇ? ಹಾಗೊಂದು ಶಂಕೆ ಜನರನ್ನು ಕಾಡುತ್ತಿದೆ. ಯಾಕೆಂದರೆ ಹಿಂದೆ ರಾತ್ರಿಯಲ್ಲಿ ಗಲಭೆ ನಡೆದು ಹೆಣಗಳು ಉರುಳಿದ್ದರೆ, ಇತ್ತೀಚಿನ ದಿನಗಳಲ್ಲಿ ಹಾಡಹಗಲೇ ಕೊಲೆ, ದರೋಡೆ ಪ್ರಕರಣ ಮಾಮೂಲಾಗಿ ಹೋಗಿದೆ. ದುಷ್ಕರ್ಮಿಗಳು ಯಾರ ಭಯವೂ ಇಲ್ಲದೆ ಹಗಲು ಹೊತ್ತಿನಲ್ಲೇ ತಮಗಾದವರನ್ನು ಕೊಂದು ದ್ವೇಷ ತೀರಿಸಿ ಕೊಳ್ಳುತ್ತಿದ್ದಾರೆ.
ಕೆಲವು ತಿಂಗಳ ಹಿಂದೆ ನಡೆದಿದ್ದ ಟೆಕ್ಸ್ಟೈಲ್ಸ್ ಮೆನೇ ಜರ್ ಕೊಲೆ ಪ್ರಕರಣ ಮತ್ತು ಕೆಲದಿನಗಳ ಹಿಂದೆ ನಡೆದ ರೌಡಿ ಗುರುಪ್ರಸಾದ್ ಹತ್ಯೆ ಒಂದೇ ರೀತಿ ನಡೆ ದಿದೆ. ಟೆಕ್ಸ್ಟೈಲ್ಸ್ ಮೆನೇಜರ್ ಹಂತಕರು ಸಿಕ್ಕಿಬಿದ್ದಿದ್ದರೂ ಪೊಲೀಸರು ಕೊಲೆಗೆ ಕಾರಣವನ್ನು ಹೇಳಿಲ್ಲ. ಮಂಗಳೂರಿನ ಸ್ಟೇಟ್ಬ್ಯಾಂಕ್, ಹಂಪನ ಕಟ್ಟೆ, ಬಂದರಿನಲ್ಲಿ ನಡೆದಾಡು ವವರು ಯಾವಾಗ, ಏನಾಗುತ್ತದೆ ಎನ್ನುವುದನ್ನು ಅರಿಯದೆ ಭಯದಿಂದಲೇ ಸಂಚರಿ ಸುವಂತಾಗಿದೆ. ಪೊಲೀಸ್ ಕಮಿಷನರ್ ಅವರು ಈ ಬಗ್ಗೆ ಗಮನ ಕೊಡಬೇಕು.
ನಿರಂಜನ್ ಶಾಸ್ತ್ರಿ, ಮಂಗಳೂರು
ಇನ್ನೂ ದಲಿತರ ಪರಿಸ್ಥಿತಿ ಸುಧಾರಣೆಯಾಗಿಲ್ಲ!
ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ಇನ್ನೂ ದೇಶದ ದಲಿತರ ಸ್ಥಿತಿ ಸುಧಾರಣೆಯಾಗಿಲ್ಲ ಎಂದರೆ ನಾಚಿಕೆಗೇಡು. ಈಗಲೂ ಕೆಲವೊಂದು ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ದಲಿತರು ತೀರಾ ಕೆಳಮಟ್ಟದ ಜೀವನ ಸಾಗಿ ಸುತ್ತಿದ್ದಾರೆ. ಅವರ ಕಾಲೊನಿಗೆ ನೀರು, ವಿದ್ಯುತ್ ಹಾಗೂ ಇನ್ನಿತರ ಸವಲತ್ತು ಈಗಲೂ ಲಭ್ಯವಾಗಿಲ್ಲ. ಇದಕ್ಕೆ ನಮ್ಮ ಆಡಳಿತವೇ ಕಾರಣ ಹೊರತು ಬೇರಾರೂ ಅಲ್ಲ. ದಲಿತರು ಸಂಘಟನೆ ಮಾಡಿಕೊಂಡು ನಡೆಸುತ್ತಿರುವ ಹೋರಾ ಟವೂ ಪ್ರಯೋಜನಕ್ಕೆ ಬರುತ್ತಿಲ್ಲ. ಇದಕ್ಕೆ ಸಂಘಟನೆಯೊಳಗಿನ ಭಿನ್ನಾಭಿಪ್ರಾಯವೇ ಕಾರಣ. ದಲಿತರ ಸ್ಥಿತಿಯನ್ನು ಉಪಯೋಗಿಸಿಕೊಂಡು ವಂಚಿಸುವ ಕೆಲಸ ಮಾಡಲಾಗುತ್ತಿದೆ. ದಲಿತರು ಇಂದು ಸರಕಾರದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರೂ ಅವರಗೆ ಸೂಕ್ತ ಮರ್ಯಾದೆ ಸಿಗುತ್ತಿಲ್ಲ. ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರಿಗೆ ಯೋಗ್ಯ ವ್ಯವಸ್ಥೆ ಮಾಡಿಕೊಡಬೇಕಾದ ಅನಿವಾರ್ಯತೆ ಸದ್ಯಕ್ಕಿದೆ. ಇದನ್ನು ಜನಪ್ರತಿನಿಧಿಗಳು ಅರಿಯುವುದು ಉತ್ತಮ.
ರಮೇಶ್ ನಾಯ್ಕ, ವರಂಗ
ಮುಲ್ಕಿ ಠಾಣಾಧಿಕಾರಿಯವರೇ ಗಮನಿಸಿ
ಮುಲ್ಕಿಗೆ ನೂತನ ಠಾಣಾಧಿಕಾರಿಯಾಗಿ ಬಂದಿರುವ ಸುನೀಲ್ ಪಾಟೀಲ್ ಅವರ ಮೇಲೆ ಜನರಿಗೆ ಹೆಚ್ಚಿನ ಭರವಸೆಯಿದೆ. ಯಾಕೆಂದರೆ ಹಿಂದೆ ಕೊಣಾಜೆಯಲ್ಲಿ ಕರ್ತವ್ಯ ದಲ್ಲಿದ್ದ ವೇಳೆ ಅಕ್ರಮ ಮರಳು ದಂಧೆಕೋರರ ಹೆಡೆಮುರಿ ಕಟ್ಟಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಹೀಗಾಗಿ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿನ ಅಕ್ರಮ ದಂಧೆಗಳು ನಿಯಂತ್ರಣಕ್ಕೆ ಬರಬಹುದು ಎನ್ನುವುದು ಜನರ ನಂಬಿಕೆ.
ಲಿಂಗಪ್ಪಯ್ಯಕಾಡು, ಕಾರ್ನಾಡು, ಕೆರೆಕಾಡು ಪರಿಸರದಲ್ಲಿ ಅಕ್ರಮ ಜುಗಾರಿ, ಮಟ್ಕಾ, ಕೋಳಿಅಂಕ ಇತ್ಯಾದಿ ನಿರ್ಭೀತಿಯಿಂದ ನಡೆಯುತ್ತಿದೆ, ಇದಕ್ಕೆ ಹಿಂದೆ ಠಾಣೆ ಯಲ್ಲಿದ್ದ ಕೆಲವು ಮಂದಿ ಪೊಲೀಸರು ಸಹಕಾರ ನೀಡುತ್ತಿದ್ದುದೂ ಗುಟ್ಟಾಗಿ ಉಳಿದಿಲ್ಲ. ಲಿಂಗಪ್ಪಯ್ಯಕಾಡಿನಲ್ಲಿ ಇತ್ತೀಚಿನ ವರ್ಷದಲ್ಲಿ ಗಲಾಟೆ, ಘರ್ಷಣೆಯ ವಾತಾವರಣ ಸೃಷ್ಟಿಯಾಗಿದೆ. ಸ್ಥಳೀಯ ಮರಿಪುಡಾರಿಗಳ ಸಹಕಾರದಿಂದ ಇವರು ಇಡೀ ಊರನ್ನೇ ಕೊಳ್ಳೆ ಹೊಡೆಯುತ್ತಿದ್ದಾರೆ. ಅಕ್ರಮ ಮದ್ಯ ದಂಧೆಯ ಜೊತೆ ಇನ್ನಿತರ ದಂಧೆಗಳೂ ನಡೆಯುತ್ತಿವೆ. ಇದು ಪೊಲೀ ಸರಿಗೆ ತಿಳಿದಿಲ್ಲವೆಂದೇನಲ್ಲ. ಊರಿನ ನೇಮೋತ್ಸವ, ಜಾತ್ರೆಯ ದಿನವಂತೂ ದಂಧೆ ನಡೆ ಸುವವರ ಮನೆ ಯಲ್ಲಿ ಪೊಲೀಸರು ಹಾಜರಿರುವುದೂ ಊರಿನ ಜನರಿಗೆ ತಿಳಿದಿದೆ. ಹೀಗಾಗಿ ಖದೀಮರು ತಮ್ಮನ್ನು ಯಾರೂ ಏನೂ ಮಾಡಲಾರರು ಎಂದು ಊರಿನ ಶಾಂತಿ ಹಾಳು ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತ ಹೊಂದಿರುವ ಕೆಲವರು ಈ ದಂಧೆಯಲ್ಲಿ ಪಾಲು ದಾರರು. ಆದ್ದರಿಂದ ಮಾನ್ಯ ಠಾಣಾಧಿ ಕಾರಿಗಳೇ, ಎಲ್ಲವನ್ನೂ ನೋಡುತ್ತಾ ಸುಮ್ಮನಿರಬೇಡಿ. ನಮ್ಮ ಊರಿನಲ್ಲಿ ಶಾಂತಿ ಕದಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ.
ನೊಂದವರು, ಲಿಂಗಪ್ಪಯ್ಯಕಾಡು

































You can subscribe by e-mail to receive news updates and breaking stories.