ಅಕ್ರಮ ಸಾಗಾಟದ ಮರ ಪತ್ತೆ

Posted by JAYAKIRANA Kirana on Friday, 27 April 2012 | 0 comments | Leave a comment...

ಪುತ್ತೂರು : ಪರವಾನಿಗೆ ಇಲ್ಲದೆ ನಡೆಯುತ್ತಿದ್ದ ಅಕ್ರಮ ಮರಸಾಗಾಟ ಪ್ರಕರಣವೊಂದನ್ನು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ತ್ಯಾಗರಾಜ ರಸ್ತೆಯ ರಬ್ಬರ್ ತೋಟ ಎಂಬಲ್ಲಿ ಪತ್ತೆ ಮಾಡಿರುವ ಸಂಪ್ಯ ಪೊಲೀಸರು ಸಾಗಾಟದ ಮರವನ್ನು ಸಾಗಾಟಕ್ಕೆ ಬಳಸಿದ ಸ್ವರಾಜ್ ಮಜ್ದಾ ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.
ಸಂಪ್ಯ ಠಾಣಾಧಿಕಾರಿ ನಂದ ಕುಮಾರ್ ಅವರು ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಅಕ್ರಮ ಪ್ರಕರಣವನ್ನು ಪತ್ತೆ ಮಾಡಿದ್ದು, ಪೊಲೀಸ್ ಕಾರ್ಯಾಚರಣೆಯ ವೇಳೆ ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿ ಪರಾರಿ ಯಾಗಿರುವುದಾಗಿ ತಿಳಿದು ಬಂದಿದೆ.
ಪೊಲೀಸರು ೬ ಹಲಸಿನ ಮರದ ದಿಮ್ಮಿ ಮತ್ತು ೯ ಅಕೇಶಿಯಾ ಮರಗ ದಿಮ್ಮಿಗಳನ್ನು ಲಾರಿ ಸಮೇತ ವಶಪಡಿ ಸಿಕೊಂಡಿದ್ದು , ವಶಪಡಿಸಿ ಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ ರೂ. ೧.೨೦ಲಕ್ಷ ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಸಂಪ್ಯ ಠಾಣೆಯ ಸಿಬ್ಬಂದಿಯಾದ ಶಿವಪ್ಪ ಮತ್ತು ಹರೀಶ್ ಪಾಲ್ಗೊಂಡಿದ್ದರು.

ಯುವಕನ ವಿರುದ್ಧ ದೂರು ದಾಖಲಿಸಿದ ಯುವತಿ

Posted by JAYAKIRANA Kirana on | 0 comments | Leave a comment...

ಚಕ್ಕಂದಕ್ಕೆ ಬಳಸಿದ ಕಾರ್‌ಗೆ ಬೆಂಕಿ
ಮಂಗಳೂರು: ಯುವತಿಯನ್ನು ಕರೆದೊಯ್ಯು ತ್ತಿದ್ದ ಯುವಕನೋರ್ವನ ಕಾರ್ ಪಲ್ಟಿಯಾಗಿದ್ದ ಘಟನೆ ಗುರುವಾರ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ವ್ಯಾಪ್ತಿಯ ಪುಳಿಕುಕ್ಕು ಎಂಬಲ್ಲಿಯ ಕೂಟೇಲು ಎಂಬಲ್ಲಿ ಸಂಭವಿಸಿತ್ತು. ಶುಕ್ರವಾರ ಬೆಳಗ್ಗೆ ನೋಡುವಾಗ ಕಾರ್ ಬೆಂಕಿಗೆ ಆಹುತಿಯಾಗಿದೆ.
ಕಡಬ ಪೊಲೀಸ್ ಠಾಣೆಯ ಬಳಿಯ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸಕ್ಕಿರುವ ರೆಂಜಲಾಡಿಯ ಯುವತಿಯೋರ್ವಳನ್ನು ಗುರುವಾರ ಸಂಜೆ ಕಡಬ ಸಮೀಪದ ಕೋರಂದೂರು ನಿವಾಸಿ ತಾಝುದ್ದೀನ್ ಎಂಬಾತ ಕಾರ್‌ನಲ್ಲಿ ಕರೆದುಕೊಂಡು ಹೊಗುತ್ತಿದ್ದ ಇದನ್ನು ಗಮನಿಸಿದ ಸಂಘಟನೆಯೊಂದರ ಕಾರ್ಯಕರ್ತರು ಕಡಬದಲ್ಲಿ ಕಾರ್ ತಡೆಯುವ ಪ್ರಯತ್ನ ನಡೆಸಿದ್ದರು. ಕಾರ್ಯಕರ್ತರ ಕೈಗೆ ಸಿಗದಂತೆ ತಪ್ಪಿಸಿಕೊಂಡು ಹೋಗುವಾಗ ಕೊಟೇಲು ಎಂಬಲ್ಲಿ ಕಾರ್ ಪಲ್ಟಿಯಾಗಿತ್ತು. ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದ ತಾಝುದ್ದೀನ್‌ನನ್ನು ಕಾರ್ಯಕರ್ತರು ಸರಿಯಾಗಿ ಬುದ್ದಿ ಕಲಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಯುವತಿಯನ್ನು ಆಕೆಯ ಮನೆಗೆ ಕಳುಹಿಸಲಾಗಿತ್ತು. ರಾತ್ರಿ ಎರಡು ಗಂಟೆಯ ತನಕ ಪೊಲೀಸರು ಕಾರ್‌ಗೆ ಕಾವಲು ಕಾದಿದ್ದರು. ಎರಡು ಗಂಟೆಯ ಬಳಿಕ ಸುಟ್ಟು ಕರಕಲಾಗಿತ್ತು. ಕಾರ್‌ನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ತೆಗೆದು ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ.
ಯುವತಿಯ ದೂರು:ಪಲ್ಟಿಯಾದ ಕಾರ್‌ನಲ್ಲಿ ಪ್ರಯಾಣಿಸಿದ್ದ ಯುವತಿ ಈಗ ತಾಝುದ್ದೀನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನಾನು ಗುತ್ತಿಗಾರ್‌ನಲ್ಲಿರುವ ಸಂಬಂಧಿಕರ ಮನೆಗೆ ಹೋಗಲು ಕಡಬದಲ್ಲಿ ನಿಂತಿದ್ದಾಗ ತಾಝುದ್ದೀನ್ ಈ ದಾರಿಯಲ್ಲಿ ಬಂದು ನಾನು ಪಂಜಕ್ಕೆ ಹೊಗುತ್ತಿದ್ದೇನೆ ಡ್ರಾಪ್ ಕೊಡುತ್ತೇನೆ ಎಂದು ಹೇಳಿ ಕಾರ್‌ನಲ್ಲಿ ಕುಳ್ಳರಿಸಿಕೊಂಡ ಕಾರ್ ಪುಳಿಕುಕ್ಕು ಸಮೀಪ ಬಂದಾಗ ಲೈಂಗಿಕ ಕಿರುಕುಳ ಕೊಡಲು ಆರಂಭಿದ್ದ. ಇದನ್ನು ಪ್ರತಿಭಟಿಸಿದಾಗ ಕಾರ್ ಈತನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ನಾನು ಪಾರಾಗಿ ಕಡಬ ಕಡೆಗೆ ಬರುತ್ತಿದ್ದ ಆಟೋದಲ್ಲಿ ಬಂದೆ. ಕಡಬದ ಪರಿಚಯಯಸ್ಥರು ನನ್ನನ್ನು ಸುರಕ್ಷಿತವಾಗಿ ಮನೆಗೆ ತಲಪಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಜ್ವರದಿಂದ ಮಗು ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಗದಗ ಜಿಲ್ಲೆಯಿಂದ ಮಂಗಳೂರಿಗೆ ಕೂಲಿ ಕೆಲಸಕ್ಕೆ ಬಂದಿರುವ ರಾಜು ಅವರ ನಾಲ್ಕು ವರ್ಷದ ಮಗು ಕಿಶೋರ್ ಜ್ವರದಿಂದ ಬಳಲಿ ಮೃತಪಟ್ಟಿದ್ದಾರೆ. ಏಕಾಏಕಿ ಮಗು ಕಿಶೋರ್‌ಗೆ ತೀವ್ರ ಜ್ವರ ಕಾಣಿಸಿ ಮೃತನಾಗಿದ್ಧಾನೆ ಎಂದು ತಿಳಿದು ಬಂದಿದೆ.
ಕಳವು: ಉಡುಪಿ ಇಂದ್ರಾಳಿಯ ಹಿರೇನ್ ವೈನ್ಸ್‌ನಲ್ಲಿ ಮದ್ಯದ ಬಾಟಲಿ ಮತ್ತು ನಗದನ್ನು ಕಳ್ಳರು ಕಳವುಗೈದ ಘಟನೆ ವರದಿಯಾಗಿದೆ.
ಮಧ್ಯರಾತ್ರಿ ವೇಳೆ ವೈನ್ಸ್‌ಶಾಪ್‌ಗೆ ನುಗ್ಗಿದ ಕಳ್ಳರು ಎರಡು ಮದ್ಯದ ಬಾಟಲಿ ಮತ್ತು ೨೮ ಸಾವಿರ ರೂ. ನಗದನ್ನು ಕಳ್ಳರು ದೋಚಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಕ್‌ಗೆ ಪಿಕ್‌ಅಪ್ ಡಿಕ್ಕಿ: ಬೈಕ್‌ಗೆ ಪಿಕ್‌ಅಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ವರದಿಯಾಗಿದೆ.
ಗಾಯಗೊಂಡವರನ್ನು ಬೈಕ್ ಸವಾರ ದೊಂಡೆರಂಗಡಿಯ ನಿವಾಸಿ ಸುಕೇಶ ಎಂದು ಹೆಸರಿಸಲಾಗಿದೆ.
ತಾಮ್ರ ಕಳವು: ನಗರದ ಬಂದರ್ ಬೀಬಿ ಅಲಾಬಿ ರಸ್ತೆಯಲ್ಲಿರುವ ಗುಜರಿ ಅಂಗಡಿಯಿಂದ ಐದು ಬಂಡಲ್ ತಾಮ್ರ ಕಳವಾದ ಘಟನೆ ವರದಿಯಾಗಿದೆ. ಸಿ.ಎ. ಅಬ್ದುಲ್ಲ ಅವರಿಗೆ ಸೇರಿದ ಅಂಗಡಿಯಿಂದ ಐದು ಬಂಡಲ್ ತಾಮ್ರ ಕಳವಾಗಿದ್ದು, ಕಳವಾದ ಸೊತ್ತಿನ ಮೌಲ್ಯ ೧.೬೦ ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ರೈಲು ಡಿಕ್ಕಿ: ಗಾಯಾಳು ಸಾವು

Posted by JAYAKIRANA Kirana on | 0 comments | Leave a comment...

ಪುತ್ತೂರು : ಪುತ್ತೂರು ರೈಲ್ವೇ ಸ್ಟೇಷನ್ ಸಮೀಪದ ಹಾರಾಡಿ ರೈಲ್ವೇ ಮೇಲ್ಸೇತುವೆ ಬಳಿ ಪ್ಯಾಸೆಂಜರ್ ರೈಲಿನಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮಂಗಳವಾರ ರಾತ್ರಿ ಪ್ಯಾಸೆಂಜರ್ ರೈಲಿನಡಿಗೆ ಬಿದ್ದು ಎರಡು ಕಾಲುಗಳು ತುಂಡರಿಸಲ್ಪಟ್ಟಿತ್ತು. ಹಾಗೂ ತಲೆಯ ಭಾಗಕ್ಕೆ ತೀವ್ರಸ್ವರೂಪದ ಗಾಯವಾಗಿ ಪ್ರಜ್ಷಾಹೀನ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜೀವ ಬೆದರಿಕೆ:ದೂರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮನೆಯ ಆವರಣವಕ್ಕೆ ಆಕ್ರಮ ಪ್ರವೇಶ ಮಾಡಿ ಚೂರಿ ಹಾಗೂ ಬಂದೂಕು ತೋರಿಸಿ ಕೊಲೆ ಬೆದರಿಕೆ ಒಡ್ಡಲಾಗಿದೆ ಎಂದು ಮೇಲ್‌ಗಂಗೊಳ್ಳಿಯ ರೆಹಮಾನ್ ಚೌಗುಳ ಎಂಬವರು ಸ್ಥಳೀಯ ನಿವಾಸಿ ಶಹಬದ್ದೀನ್ ಎಂಬವರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪುತ್ತೂರು:ಮಹಿಳೆ ನಾಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸುಳ್ಯ ತಾಲೂಕಿನ ಪಂಜ ನಿವಾಸಿ ಚೋಮು(೬೦)ಎಂಬವರು ಎ.೨೬ರಂದು ಪೂತ್ತೂರು ಬಸ್ ನಿಲ್ದಾಣದ ಬಳಿ ಬಂದು ನಾಪತ್ತೆಯಾಗಿದ್ದಾರೆ. ಚೋಮುರವರು ಪತಿ ಹುಕ್ರರ ಜೊತೆ ವಿಟ್ಲ ಕಡಂಬುವಿನಲ್ಲಿರುವ ಮಗಳ ಮನೆಗೆ ತೆರಳಿ ಪಂಜಕ್ಕೆ ಮರಳುವಾಗ ಪುತ್ತೂರು ಬಸ್ ನಿಲ್ದಾಣದಿಂದ ಕಾಣೆಯಾಗಿದ್ದಾರೆ. ಹುಕ್ರ ನೀಡಿದ ದೂರಿನಂತೆ ಪೊತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಸ್ ಡಿಕ್ಕಿ- ಪಾದಚಾರಿ ಗಾಯ

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ಸೊಂದು ಡಿಕ್ಕಿ ಹೊಡೆದು ಪಾದಾಚಾರಿಯೊಬ್ಬರು ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ
ಪಾಚುವಡಿ ನಿವಾಸಿ ವೆಂಕಟೇಶ ಪೈ(೬೮) ಗಾಯಗೊಂಡವರು. ಗಾಯಾಳುವನ್ನು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರುಗಳ ಡಿಕ್ಕಿ: ಗಾಯ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪಡುಬಿದ್ರಿ ಸಮೀಪದ ಫಲಿಮಾರು ಇನ್ನಾ ಗ್ರಾಮಾಂತರ ರಸ್ತೆಯಲ್ಲಿ ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಮೂವರು
ಗಾಯಗೊಂಡ ಘಟನೆ ವರದಿಯಾಗಿದೆ. ಗಾಯಗೊಂಡವರನ್ನು ಅನ್ವ್ವಿತಾ(೪), ಆಯುಷ್(೬), ಹಾಗೂ ಮೋಹಿನಿ (೬೩) ಎಂದು ಹೆಸರಿಸಲಾಗಿದೆ.
ಗುಡಿಯಿಂದ ಕಳವು: ನಗರದ ಕೊಂಚಾಡಿಯ ಕೊರಗಜ್ಜನ ಗುಡಿಯಿಂದ ಬೆಳ್ಳಿಯ ಮತ್ತು ಪೂಜಾ ಸಾಮಗ್ರಿಗಳು ರಾತ್ರಿ ಕಳವಾದ ಘಟನೆ ವರದಿಯಾಗಿದೆ. ಕಳವಾದ ಸೊತ್ತಿನ ಮೌಲ್ಯವನ್ನು ಅಂದಾಜಿಸಿಲ್ಲ.

ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಯು. ರಾಮಕೃಷ್ಣ(೫೨)ಎಂಬವರನ್ನು ಕೊಲೆಗೈದ ಆರೋಪಿ ಅದೇ ಬ್ಯಾಂಕಿನ ಸಶಸ್ತ್ರ ಕಾವಲುಗಾರ ಸುಧಾಕರ(೫೦) ಎಂಬಾತನಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.
ಕರ್ನಾಟಕ ಬ್ಯಾಂಕ್‌ನಲ್ಲಿ ಸ್ಪೆಷಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯು. ರಾಮಕೃಷ್ಣ ಬ್ಯಾಂಕಿನ ನೌಕರರ ಸಂಘದ ಅಧ್ಯಕ್ಷರೂ ಆಗಿದ್ದ ಅವರನ್ನು ೨೦೦೧ ಎ..೨ ರಂದು ಬೆಳಿಗ್ಗೆ ಅವರನ್ನು ಕೊಡಿಯಾಲ್ ಬೈಲ್ ಶಾಖೆಯಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶ ಜಿ.ಡಿ. ನರಸಿಂಹ ಮೂರ್ತಿ ಆರೋಪಿಗೆ ಜೀವಾವಧಿ ಸಜೆ, ಮತ್ತು ಐದು ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಆರು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ತೀರ್ಪು ಡಿದೆ.

ಸ್ವಾಮೀಜಿ ವಿಧಿವಶ

Posted by JAYAKIRANA Kirana on | 0 comments | Leave a comment...

ಜ್ಯೋತಿಷ್ಯ ಶಾಸ್ತ್ರ ನಿಜವಾಯಿತೇ?
ಕಾರ್ಕಳ: ಜೋತಿಷ್ಯ ಶಾಸ್ತ್ರಕ್ಕೂ, ಸ್ವಾಮೀಜಿಯ ವಿಧಿವಶಕ್ಕೂ ಎತ್ತಣ ಸಂಬಂಧವಯ್ಯ? ಇಂಥದೊಂದು ಪ್ರಶ್ನೆ ಸಹಜವಾಗಿ ಕಂಡುಬರುತ್ತದೆ ಯಾದ ರೂ ಅದು ಇದೀಗ ನಿಜವಾ ಗಿರುವುದು ಗುರುಪುರ ಜಂಗಮ ಸಂಸ್ಥಾನದ ಗುರುಮಠಾಧೀಶ ಶಿವ ಪ್ರಸಾದ್ ಸ್ವಾಮೀಜಿಯವರ ವಿಧಿ ವಶರಾದಾಗ.
ವೀರಶೈವ ಪರಂಪರೆಗೆ ಹೆಸರಾ ಗಿದ್ದು, ಗುರುಪೀಠ ಎಂದೇ ಖ್ಯಾತಿ ಪಡೆದಿರುವ ಜಂಗಮ ಗುರುಪೀಠ ಸಂಸ್ಥಾನ ಸ್ಥಾಪನೆಗೊಂಡಿರುವುದಿಂದ ಆ ಊರಿಗೆ ಗುರುಪುರ ಎಂಬ ಹೆಸರು ಚಾಲ್ತಿಗೆ ಬಂದಿತ್ತು.
೧೯೮೦ರಲ್ಲಿ ಕನಕಪುರ ಮಠಾಧೀ ಶರಾಗಿದ್ದ ಮಹಾಲಿಂಗಸ್ವಾಮೀಜಿ ಯವರ ಆಶೀರ್ವಾದದೊಂದಿಗೆ ಪಟ್ಟಾ ಭಿಷೇಕಕ್ಕೇರಿದ ಶಿವಪ್ರಸಾದ್ ಸ್ವಾಮೀ ಜಿಯ ಉಸ್ತುವಾರಿಯಲ್ಲಿ ಮಂಗಳೂರು, ಮೂಡಬಿದ್ರಿ, ಸಾಣೂರು, ಉಪ್ಪೂರು, ಗೋಣಿಕೊಪ್ಲ ಮೊದಲಾದೆಡೆಗಳಲ್ಲಿ ಬೆಲೆಬಾಳುವ ಸೊತ್ತುಗಳು ಇದೆ. ನಿರ್ವಹಣೆಯಿಲ್ಲದೇ ಇರುವುದರಿಂದ ಹಲವು ಸೊತ್ತುಗಳು ಮಠದಿಂದ ಕೈಜಾರಿದೆ.
ಇದ್ದ ಸೊತ್ತಿನಲ್ಲಿ ಪಾಳುಬಿದ್ದ ಶಿವಾಲಯಗಳು, ಮಠಗಳು ಮತ್ತು ತುಳು ನಾಡಿನ ಹಲವು ದೈವಗಳು, ನಾಗಬನಗಳು ಮೂಲೆಗುಂಪಾಗತೊಡಗಿವೆ. ನೆಲೆ ಇಲ್ಲದ ದೈವದ ಮುನಿಸಿಗೊಳಗಾಗಿ ಹಲವು ಅವಘಡಗಳು ನಡೆದಿರುವುದಕ್ಕೆ ಕೆಲವೊಂದು ಪುರಾವೆಗಳು ಲಭ್ಯವಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಳೆದ ಕೆಲ ವರ್ಷಗಳಲ್ಲಿ ಬೆಳುವಾಯಿ-ಸಾಣೂರು ನಡುವಿನ ರಾ.ಹೆ.೧೩ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಮಾರು ೧೦ಕ್ಕೂ ಮಿಕ್ಕಿ ಮಂದಿ ಸಾವನ್ನ ಪ್ಪಿದ್ದರು. ಕೇವಲ ಎರಡು ಕಿ.ಮೀ ಅಂತರದಲ್ಲಿ ನಡೆಯುತ್ತಿರುವ ಈ ಅಪಘಾತದ ದೃಶ್ಯಾವಳಿಯನ್ನು ಕಂಡು ಸ್ಥಳೀಯ ನಾಗರಿಕರು ಭಯಭೀತರಾಗತೊಡಗಿದರು. ಈ ಎಲ್ಲಾ ಬೆಳವಣಿಗೆಯ ನಡುವೆ ಸ್ಥಳೀಯ ನಿವಾಸಿಯಾದ ನಿವೃತ್ತ ಅರಣ್ಯಧಿಕಾರಿ ಸದಾಶಿವಯ್ಯರವರ ನೇತೃತ್ವದಲ್ಲಿ ಸ್ಥಳೀಯ ಕಾರಣಿಕಯುಳ್ಳ ಜಾಗವೊಂದರಲ್ಲಿ ಪ್ರಸಿದ್ಧ ಜೋತಿಷ್ಯರೊಬ್ಬರನ್ನು ಕರೆತಂದು ಆರೂಢ ಪ್ರಶ್ನೆಯನ್ನು ಕೇಳಿಸಲಾಗಿತ್ತು.
ಆರೂಢ ಪ್ರಶ್ನೆಯನ್ನು ಇಟ್ಟ ಜೋತಿಷ್ಯರು ಶಾಸ್ತ್ರದ ಪ್ರಕಾರ ಮರಣ ಸಂಭವವಿದೆ. ಆದುದರಿಂದ ಮೃತ್ಯುಂಜಯ ಹೋಮವನ್ನು ಕೂಡಲೇ ನಡೆಸ ಬೇಕು. ನಂತರವಷ್ಟೇ ಆರೂಢ ಪ್ರಶ್ನೆಯನ್ನು ಮುಂದುವರಿಸುತ್ತೇನೆಂದು ಅಲ್ಲಿಗೆ ನಿಲ್ಲಿಸಿದರೆಂದು ತಿಳಿದುಬಂದಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆರೂಢ ಪ್ರಶ್ನೆ ಇಡುವಂತಹ ಜಾಗದ ಮಾಲೀಕರು, ದೈವಸ್ಥಾನ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂದಾಗುವ ಪ್ರಮುಖರಿಗೆ ಸಂಬಂಧಿಸಿದಂತೆ ಜೋತಿಷ್ಯರು ಇಲ್ಲಿ ಮೊದಲಿಗೆ ಉತ್ತರಿಸಲಿದ್ದಾರೆ. ಆರೂಢ ಪ್ರಶ್ನೆ ಇಟ್ಟದಂತಹ ಸ್ಥಳ ಗುರುಪುರ ಜಂಗಮ ಮಠಕ್ಕೆ ಸೇರಿದ್ದಾಗಿದೆ. ಸುಮಾರು ೬೦೦ ವರ್ಷಗಳ ಇತಿಹಾಸವಿದೆ. ಪಾಳುಬಿದ್ದ ಶಿವನ ದೇಗುಲ, ರಾಜದೈವನಾದ ಕುಕ್ಕಿಂನತಾಯ, ಕಲ್ಕುಡ, ಪಂಜುರ್ಲಿ, ರಕ್ತೇಶ್ವರಿ ದೈವಗಳ ಪಾಳುಬಿದ್ದ ಗುಡಿಗಳು, ನಾಗಬನ, ಕೆರೆಯೊಂದಿದೆ. ಇದರ ಉಸ್ತುವಾರಿಯನ್ನು ಶಿವಪ್ರಕಾಶ್ ಸ್ವಾಮೀಜಿ ಅವರು ವಹಿಸಿದ್ದರು.
ಅದೇ ದಿನ ರಾತಿ ವೇಳೆಗೆ ಸ್ವಾಮೀಜಿಯವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯ ಲಾಗಿ ತ್ತಾದರೂ ಅದಾಗಲೇ ಅವರು ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದಾರೆ.
ಮೂಡಬಿದ್ರಿ ಪೊನ್ನಚೇರಿ ಜಂಗಮಮಠದ ಸಿದ್ಧಲಿಂಗಯ್ಯ ಯಾನೆ ಪುಟ್ಟಯ್ಯ ಹಾಗೂ ಗಿರಿಜಮ್ಮ ದಂಪತಿಯ ಗಂಡು ಮಕ್ಕಳಲ್ಲಿ ಶಿವಪ್ರಕಾಶ ಸ್ವಾಮೀಜಿಯವರು ಮೂರನೆಯವರು. ಇವರಿಗೆ ಮೂವರು ಸಹೋದರಿಯರು ಮತ್ತು ಮೂವರು ಸಹೋದರರು.
ಗುರುಮಠದ ಸ್ವಾಮೀಜಿಯಾಗಿದ್ದ ಚೆನ್ನಬಸಪ್ಪ ಸ್ವಾಮೀಜಿಯ ಉತ್ತರಾಧಿ ಕಾರಿಯಾಗಿ ೧೯೭೫ರಲ್ಲಿ ಶಿವಪ್ರಕಾಶ್ ಸ್ವಾಮೀಜಿಯವರು ನಿಯುಕ್ತಿಗೊಂಡಿದ್ದರು. ಪ್ರೌಢಶಾಲೆಯನ್ನು ಗುರುಪುರದಲ್ಲಿ, ಮೂಡಬಿದ್ರಿ ಜೈನ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು, ಮೈಸೂರು ಕಾಲೇಜಿನಲ್ಲಿ ಪದವಿ ಯನ್ನು ಪಡೆದಿದ್ದರು. ೧೯೮೦ರಲ್ಲಿ ಗುರುಮಠ ಸಂಸ್ಥಾನದ ಮಹಾಗುರುಗಳಾಗಿ ಪಟ್ಟಾಭಿಷೇಕಕ್ಕೇರಿದರು. ೫೩ರ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.

ಕಲ್ಲು ಹೊಡೆದು ಓಡುವುದು ಬಜರಂಗಿಗಳ ಜಾಯಮಾನ

Posted by JAYAKIRANA Kirana on | 0 comments | Leave a comment...


ಮಂಗಳೂರು: ಬಜರಂಗದಳದ ವರಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಿ ಗೊತ್ತಿಲ್ಲ. ಅವ ರದ್ದು ಏನಿದ್ದರೂ ಕಲ್ಲು ಹೊಡೆದು ಓಡಿಹೋಗುವ ಜಾಯಮಾನ. ಇದು ಪಟ್ಟಾಭಿರಾಮ ಸೋಮಯಾಜಿ ಅವರಿಗೆ ಸೆಗಣಿ ಮೆತ್ತಿದ ವಿಚಾರದಲ್ಲಿ ಸಾಬೀತಾಗಿದೆ ಎಂದು ಪಿಯುಸಿಎಲ್ ಅಧ್ಯಕ್ಷ ಪಿ.ಬಿ.ಡೇಸಾ ವ್ಯಂಗ್ಯವಾಡಿ ದ್ದಾರೆ.
ನಿನ್ನೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಇದರ ವತಿ ಯಿಂದ ನಗರದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡಿದರು.
ಬಜರಂಗದಳದ ಪುಂಡಾಟ ಹಿಂದಿನಿಂದಲೂ ನಡೆಯುತ್ತಿದ್ದು, ಅದರ ನಾಯಕರಿಗೆ ಮುಂದೆ ಬರಲು ಧೈರ್ಯ ಇಲ್ಲದ ಕಾರಣ ಕಲ್ಲಡ್ಕದಲ್ಲಿರುವವರು ಸಲಹೆ ನೀಡುತ್ತಾರಲ್ಲದೆ ಕೂಲಿ ನೀಡಿ ಪುಂಡಾಟದ ಕೆಲಸ ಮಾಡಿಸುತ್ತಾರೆ ಎಂದು ಕಿಡಿಕಾರಿದರು.
ಇಂದು ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆಯೆಂದ ಮಾತ್ರಕ್ಕೆ ಅದು ಶಾಶ್ವತ ಅಲ್ಲ. ಇಷ್ಟಕ್ಕೂ ಪಟ್ಟಾಭಿ ಅವರ ಮುಖಕ್ಕೆ ಸೆಗಣಿ ಮೆತ್ತಿದರೆನ್ನುವ ಕಾರಣಕ್ಕೆ ನಮ್ಮ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ. ಜಿಲ್ಲೆಯ ಪೊಲೀಸರು ರಾಜಕಾರಣಿಗಳ ಜೊತೆ ಶಾಮೀಲಾಗಿರುವ ಕಾರಣ ಘಟನೆಯ ಹಿಂದೆ ಇರುವವರ ಬಂಧನವಾಗಿಲ್ಲ. ಇಲ್ಲಿನ ಐಎಎಸ್, ಐಪಿಎಸ್ ತುಕ್ಕು ಹಿಡಿದಿದ್ದು, ನಾಲಾಯಕ್ ಮಂದಿ ಇಲಾಖೆಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಡೇಸಾ, ಇಂದಲ್ಲದಿದ್ದರೆ ಹತ್ತು ವರ್ಷಗಳ ಬಳಿಕವಾದರೂ ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಬೀರ್ ಉಳ್ಳಾಲ್, ಕೊಟ್ಟಾರದಲ್ಲಿ ಬಜರಂಗದಳದವರು ಗೋವು ಸಾಗಾಟದ ವಾಹನ ಬೆನ್ನಟ್ಟಿ ಬರುವಾಗ ಎಲ್ಲರ ಬಳಿಯೂ ತಲ್ವಾರು ಇತ್ತು. ಆದರೆ ಅವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸುರೇಶ್ ಭಟ್ ಬಾಕ್ರಬೈಲ್, ಆಲಿ ಹಸನ್, ಆಲ್ವಿನ್ ಕುಲಾಸೋ ಉಪಸ್ಥಿತರಿದ್ದರು.

ನದಿಗೆ ಮಣ್ಣು ಹಾಕಿದರೆ ಅನಾಹುತ ಗ್ಯಾರಂಟಿ

Posted by JAYAKIRANA Kirana on | 0 comments | Leave a comment...




ಮಂಗಳೂರು: ಎಂಎಸ್‌ಇ ಝೆಡ್ ಕಂಪೆನಿಗಾಗಿ ಗುರುಪುರ ಫಲ್ಗುಣಿ ನದಿಗೆ ಮಣ್ಣು ಹಾಕುವ ಕೆಲಸಕ್ಕೆ ಮುಂದಾಗಿದ್ದು ಇದನ್ನು ನಿಲ್ಲಿಸಿ ಹಾಕಿದ ಮಣ್ಣನ್ನು ತೆಗೆಯ ದಿದ್ದರೆ ಮುಂದೆ ಭಾರೀ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಕರಾವಳಿ ಕರ್ನಾಟಕ ಅಭಿವೃದ್ಧಿ ವೇದಿಕೆಯ ವಕ್ತಾರ ಟಿ.ಆರ್.ಭಟ್ ಆತಂಕ ವ್ಯಕ್ತಪಡಿಸಿದ್ದಾರೆ.
ನಿನ್ನೆ ಜಿಲ್ಲಾಧಿಕಾರಿ ಕಚೇರಿ ಬಳಿ ಕೂಳೂರು ನಾಗರಿಕರು ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಜಿಲ್ಲೆ ಅಭಿವೃದ್ಧಿ ಆಗಬೇಕಿದೆಯಾದರೂ ಜನರ ಹಕ್ಕು ಕಸಿಯುವ ಅಭಿವೃದ್ಧಿ ಅಗತ್ಯವಿಲ್ಲ. ಈಗಾಗಲೇ ಅಭಿವೃದ್ಧಿಯ ಸೋಗು ಹಾಕಿ ಬಂದಿರುವ ಎಂಆರ್‌ಪಿಎಲ್, ಎಂಎಸ್‌ಇಒಝೆಡ್ ಸ್ಥಳೀಯರಿಗೆ ನೀಡಿದ ಉದ್ಯೋಗವಾದರೂ ಎಷ್ಟು ಎಂದು ಅವರು ಪ್ರಶ್ನಿಸಿದರು.
೨೦೦೫ರಲ್ಲಿ ಮುಂಬಯಿಯ ವಿ.ಟಿ.ನದಿಗೆ ಕೈಗಾರಿಕಾ ಕಂಪೆನಿ ಯೊಂದು ಮಣ್ಣು ಹಾಕಿದ ಪರಿಣಾ ಮವಾಗಿ ಮಳೆಗಾಲದಲ್ಲಿ ಸಣ್ಣಪುಟ್ಟ ಮನೆಗಳಿಗೆ ನೀರು ನುಗ್ಗಿ ಭಾರೀ ಅನಾ ಹುತ ಸಂಭವಿಸಿತು. ನದಿಗೆ ಹಾಕಿದ ಮಣ್ಣು ತೆಗೆಯುವಂತೆ ನ್ಯಾಯಾಲಯ ನೀಡಿದ ಆದೇಶ ಇದುವರೆಗೂ ಪಾಲನೆಯಾಗಿಲ್ಲ. ಕಂಪೆನಿ ಮಾಡಿದ ಅನಾಹುತಕ್ಕೆ ಸರಕಾರ ಪರಿಹಾರ ನೀಡಬೇಕಾಯಿತು ಎಂದು ಘಟನೆ ಯನ್ನು ವಿವರಿಸಿದ ಭಟ್, ಕೂಳೂರಿ ನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾ ಗಲಿದ್ದು ಅದಕ್ಕೂ ಮುನ್ನ ಜನರು ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾ ಡಿದ ಮುನೀರ್ ಕಾಟಿಪಳ್ಳ, ಚುನಾ ವಣೆಯ ವೇಳೆ ಮತಯಾಚನೆಗೆ ಬರುವ ರಾಜಕಾರಣಿಗಳು ಗೆದ್ದ ಬಳಿಕ ಜನರ ಸಮಸ್ಯೆಗಳನ್ನೇ ಮರೆತುಬಿಡು ತ್ತಾರೆ. ಇದರಿಂದಾಗಿ ನಮ್ಮ ಮತದಿಂದ ರಾಜಕಾರಣಿಗಳು ಮಜಾ ಮಾಡು ವಂತಾಗಿದೆ. ಇಂತಹ ನಾಲಾಯಕ್ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಇಡದೆ ಕಾರ್ಯಸಾಧನೆಯಾ ಗುವವರೆಗೆ ಹೋರಾಡಬೇಕು ಎಂದು ಸಲಹೆ ನೀಡಿದರು.

ಪೊಲೀಸ್ ಕಾವಲಿನಲ್ಲಿ ಜುಮ್ಮಾ ನಮಾಝ್

Posted by JAYAKIRANA Kirana on | 0 comments | Leave a comment...

ಮೂಡುಬಿದ್ರೆ : ಎರಡು ಬಣಗಳ ನಡುವಿನ ತಲವಾರು ಕಾಳಗದ ಪರಿಣಾಮ ತೋಡಾರು ಜುಮ್ಮಾ ಮಸೀದಿಯಲ್ಲಿ ನಿನ್ನೆಯ ಶುಕ್ರವಾರದ ಜುಮ್ಮಾ ನಮಾಝ್ ಪೊಲೀಸ್ ಕಾವಲಿನಲ್ಲಿ ನಡೆದಿದೆ.
ಇಲ್ಲಿನ ಆಡಳಿತ ಕಮಿಟಿ ಮತ್ತು ಶಂಸುಲ್ ಉಲಮಾ ಟ್ರಸ್ಟ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಕಲೆದ ಶುಕ್ರವಾರ ಮಸೀದಿಯಲ್ಲಿ ಎರಡೂ ತಂಡಗಳ ನಡುವೆ ತಲವಾರು ಕಾಳಗ ನಡೆದಿತ್ತು.
ಇದರಲ್ಲಿ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷ ಡಿ.ಎ. ಉಸ್ಮಾನ್ ಎರಡೂ ಬಣಗಳ ಹಲವಾರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಎರಡೂ ಬಣಗಳ ವಿರುದ್ಧ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿನ್ನೆಯ ಶುಕ್ರವಾರದ ಜುಮ್ಮಾ ನಮಾಝ್‌ಗೆ ಎರಡೂ ಕಡೆಯವರು ಬರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮೂಡಬಿದ್ರೆ ಪೊಲೀಸರು ಸಾಕಷ್ಟು ಪೊಲೀಸರನ್ನು ತೋಡಾರಿಗೆ ಕರೆಸಿಕೊಂಡಿದ್ದರು.
ಪೊಲೀಸ್ ಕಾವಲಿನಲ್ಲೇ ಜುಮ್ಮಾ ನಮಾಝ್ ನಡೆದಿದ್ದು ಯಾವುದೇ ವಿವಾದ ಉಲ್ಬಣಿಸದೆ ಶಾಂತ ರೀತಿಯಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ.

ಸಂಪುಟ ವಿಸ್ತರಣೆಗೆ ವರಿಷ್ಠರ ಸಲಹೆ ಕೇಳಲಿರುವ ಡಿವಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಬರ ನಿರ್ವಹಣೆ ಪರಿಹಾರಕ್ಕೆ ಅನುದಾನ ಕೇಳಲು ಸರ್ವಪಕ್ಷದ ನಿಯೋಗದ ಜೊತೆ ಮೇ ೨ರಂದು ದೆಹಲಿಗೆ ತೆರಳಲಿರುವ ಡಿ.ವಿ. ಸದಾನಂದ ಗೌಡರು ಇದೇ ಸಂದರ್ಭದಲ್ಲಿ ಪಕ್ಷದ ವರಿಷ್ಠರ ಜೊತೆಯಲ್ಲೂ ಸಮಾಲೋಚನೆ ನಡೆಸಲಿದ್ದಾರೆ.
ಸಂಪುಟ ವಿಸ್ತರಣೆ ಇಲ್ಲವೆ ಪುನಾರಚನೆಗೆ ಪಕ್ಷದ ಶಾಸಕರಿಂದ ಬೇಡಿಕೆ ಬಂದಿದೆ. ಇದನ್ನು ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ನಿತಿನ್ ಗಡ್ಕರಿ ಮತ್ತು ರಾಜ್ಯದ ಉಸ್ತುವಾರಿ ಹೊತ್ತ ಅರುಣ್ ಜೆಟ್ಲಿ ಜೊತೆ ಸಮಾಲೋಚನೆ ನಡೆಸಿ ತಿಳಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಕೂಡ ಈ ಸಂದರ್ಭದಲ್ಲಿ ಹಾಜರಿದ್ದು ಸಂಪುಟ ವಿಸ್ತರಣೆಯ ಅಗತ್ಯದ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಒಂದು ವೇಳೆ ಸಂಪುಟ ಪುನಾರಚನೆ ಅನುಮತಿ ನೀಡಿದರೆ ದೇಹಲಿಯಲ್ಲಿಯೇ ಪಟ್ಟಿ ಅಂತಿಮಗೊಳಿಸಲಿದ್ದಾರೆ.
ಡಿ.ವಿ. ಸದಾನಂದ ಗೌಡರು ದೆಹಲಿಯಿಂದ ಮರಳುತ್ತಿದ್ದಂತೆಯೇ ಸಚಿವ ಪಟ್ಟದ ಆಕಾಂಕ್ಷಿಗಳ ೩೦ಶಾಸಕರ ತಂಡ ದೆಹಲಿಗೆ ತೆರಳುವ ಸಿದ್ಧತೆಯಲ್ಲಿದೆ. ಸಿ.ಟಿ.ರವಿ, ಅಪ್ಪಚ್ಚು ರಂಜನ್, ಸೊಗಡು ಶಿವಣ್ಣರಿರುವ
ತಂಡ ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲಿದೆ.

ಇಂದು ಆತೂರಿನಲ್ಲಿ ಸುನ್ನಿ ಸಮಾವೇಶ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಭಾರತದ ಇತಿಹಾಸ ದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳಂತಹ ಉಲಮಾ ಪರಂಪರೆಯ, ದಕ್ಷಿಣ ಭಾರತದ ಮುಸಲ್ಮಾನರ ನೆಚ್ಚಿನ ಸಂಘ ಟನೆಯ ಸಮಸ್ತ ಕೇರಳ ಜಂಇ ಯ್ಯತುಲ್ ಉಲಮಾ ಇದರ ಆತೂರು ಘಟಕದ ವತಿಯಿಂದ ದಿನಾಂಕ ೨೭.೦೪.೨೦೧೨ ಮತ್ತು ೨೮.೦೪.೨೦೧೨ ರಂದು ನಡೆಯುವ ಎರಡು ದಿನದ ಸಮ್ಮೇಳನವು ಇಂದು ಶುಕ್ರವಾರ ಮಧ್ಯ್ಯಾಹ್ನ ಜುಮಾ ನಮಾಜಿನ ಬಳಿಕ ಆತೂರು ಬದ್ರಿಯಾ ಜುಮ್ಮಾ ಮಸೀದಿಯ ವಠಾರದ ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ಮುಹ್ಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಪುತ್ತು ಮೋನು ಆತೂರು ಇವರು ದ್ವಜಾರೋ ಹಣಗೈದರು. ಎಂಜೆಎಂನ ಖತೀಬ್ ಹನೀಫ್ ಫೈಝಿ ಫಜೀರ್ ರವರು ದುವಾಃ ನೆರವೇರಿಸಿದರು. ಫಲೂಲು ದ್ದೀನ್, ಬದ್ರುದ್ದೀನ್ ಹೆಂತಾರ್, ಬಿ.ಆರ್.ಮೋನು, ಅಬ್ದುಲ್ಲಾ ಹಾಜಿ, ಖಾದರ್ ಬಿ.ಎಸ್. ಮುಂತಾದವರು ಹಾಜರಿದ್ದರು. ಇಂದು ಸಂಜೆ ೫ ಗಂಟೆಗೆ ಸುನ್ನಿ ಸಮಾವೇಶ ನಡೆಯಲಿದ್ದು ಜಾಮಿಆ ನೂರಿಯ್ಯಾ ಅರಬಿಯಾ ಶರೀಅತ್ ಕಾಲೇಜು ಪಟ್ಟಿಕ್ಕಾಡ್ ಪ್ರೊಫೆಸರ್ ಸಮೀರ್ ಇರ್ಫಾನಿ ಫೈಝೀ ಅಲ್ ಅಝ್‌ಹರಿ ಭಾಗವಹಿಸಲಿದ್ದಾರೆ.

ಇಂದು ಆತೂರಿನಲ್ಲಿ ಸುನ್ನಿ ಸಮಾವೇಶ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಭಾರತದ ಇತಿಹಾಸ ದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳಂತಹ ಉಲಮಾ ಪರಂಪರೆಯ, ದಕ್ಷಿಣ ಭಾರತದ ಮುಸಲ್ಮಾನರ ನೆಚ್ಚಿನ ಸಂಘ ಟನೆಯ ಸಮಸ್ತ ಕೇರಳ ಜಂಇ ಯ್ಯತುಲ್ ಉಲಮಾ ಇದರ ಆತೂರು ಘಟಕದ ವತಿಯಿಂದ ದಿನಾಂಕ ೨೭.೦೪.೨೦೧೨ ಮತ್ತು ೨೮.೦೪.೨೦೧೨ ರಂದು ನಡೆಯುವ ಎರಡು ದಿನದ ಸಮ್ಮೇಳನವು ಇಂದು ಶುಕ್ರವಾರ ಮಧ್ಯ್ಯಾಹ್ನ ಜುಮಾ ನಮಾಜಿನ ಬಳಿಕ ಆತೂರು ಬದ್ರಿಯಾ ಜುಮ್ಮಾ ಮಸೀದಿಯ ವಠಾರದ ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ಮುಹ್ಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಪುತ್ತು ಮೋನು ಆತೂರು ಇವರು ದ್ವಜಾರೋ ಹಣಗೈದರು. ಎಂಜೆಎಂನ ಖತೀಬ್ ಹನೀಫ್ ಫೈಝಿ ಫಜೀರ್ ರವರು ದುವಾಃ ನೆರವೇರಿಸಿದರು. ಫಲೂಲು ದ್ದೀನ್, ಬದ್ರುದ್ದೀನ್ ಹೆಂತಾರ್, ಬಿ.ಆರ್.ಮೋನು, ಅಬ್ದುಲ್ಲಾ ಹಾಜಿ, ಖಾದರ್ ಬಿ.ಎಸ್. ಮುಂತಾದವರು ಹಾಜರಿದ್ದರು. ಇಂದು ಸಂಜೆ ೫ ಗಂಟೆಗೆ ಸುನ್ನಿ ಸಮಾವೇಶ ನಡೆಯಲಿದ್ದು ಜಾಮಿಆ ನೂರಿಯ್ಯಾ ಅರಬಿಯಾ ಶರೀಅತ್ ಕಾಲೇಜು ಪಟ್ಟಿಕ್ಕಾಡ್ ಪ್ರೊಫೆಸರ್ ಸಮೀರ್ ಇರ್ಫಾನಿ ಫೈಝೀ ಅಲ್ ಅಝ್‌ಹರಿ ಭಾಗವಹಿಸಲಿದ್ದಾರೆ.

ಉಳ್ಳಾಯ, ಪರಿವಾರ ದೈವಗಳ ಧರ್ಮನೇಮ ನಾಳೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಐತಿಹಾಸಿಕವಾಗಿ ಮೀನು ಹಿಡಿಯುವ ಜಾತ್ರೆ ಎಂದೇ ಉಭಯ ಜಿಲ್ಲೆಗಳಲ್ಲಿ ಪ್ರಸಿದ್ಧಿಯಾಗಿ ರುವ ಖಂಡಿಗೆ ಧರ್ಮರಸು ಉಳ್ಳಾಯ ಕ್ಷೇತ್ರದ ಇತಿಹಾಸಕ್ಕೆ ಭಾನು ವಾರ ಹೊಸ ಮೈಲುಗಲ್ಲು ಸೇರ್ಪq ಯಾಗಲಿದೆ. ಉಳ್ಳಾಯ ಕ್ಷೇತ್ರಗಳಲ್ಲೇ ಪ್ರಥಮ ಬಾರಿಗೆ ಖಂಡಿಗೆಯಲ್ಲಿ ಉಳ್ಳಾಯ ದೈವಕ್ಕೆ ಧರ್ಮನೇಮ ನಡೆಯುವ ಮೂಲಕ ಈ ಮಹತ್ವದ ವಿದ್ಯಮಾನ ನಡೆಯುತ್ತಿದೆ.
ಕ್ಷೇತ್ರದ ಇತಿಹಾಸ ಮಾತ್ರವಲ್ಲ, ಉಭಯ ಜಿಲ್ಲೆಗಳ ಇತರ ಉಳ್ಳಾಯ ದೈವದ ಕ್ಷೇತ್ರದಲ್ಲಿ ಇದುವರೆಗೆ ಉಳ್ಳಾಯ ದೈವಕ್ಕೆ ಧರ್ಮನೇಮ ನಡೆದಿಲ್ಲ. ಖಂಡಿಗೆ ಈ ನಿಟ್ಟಿನಲ್ಲಿ ಹೊಸ ಇತಿಹಾಸ ಬರೆಯಲಿದೆ.
ವೃಷಭ ಸಂಕ್ರಮಣಕ್ಕೆ ಇಲ್ಲಿ ನಡೆಯುವ ಮೀನು ಹಿಡಿಯುವ ಜಾತ್ರೆಗೆ ಉಭಯ ಜಿಲ್ಲೆಗಳ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ನಂದಿನಿ ನದಿಯಲ್ಲಿ ಮೀನು ಹಿಡಿದು ಸಂಭ್ರಮಿಸುತ್ತಾರೆ. ಅಂದು ಈ ಕ್ಷೇತ್ರದ ಭಕ್ತರು ಇಲ್ಲಿ ಹಿಡಿದ ಮೀನನ್ನೇ ಪದಾರ್ಥ ಮಾಡಿ ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾರೆ. ಈ ವೈಶಿಷ್ಟ್ಯವೇ ಖಂಡಿಗೆಯ ಈವರೆಗಿನ ಇತಿಹಾಸ ಪ್ರಮುಖ ಘಟ್ಟವಾಗಿತ್ತು ಎಂದು ದೆಶಿಷ್ಟತೆಯನ್ನು ನೀಡಲಿದೆ ಎಂದು ಕ್ಷೇತ್ರದ ದೈವಾರಾಧಕರಾದ ಆದಿತ್ಯಮುಕಾಲ್ದಿ ಹೇಳುತ್ತಾರೆ.
ದೈವಗಳ ಆರಾಧನೆ ಮಾತ್ರವಲ್ಲ ತುಳುನಾಡಿನ ಸತ್ಯಗಳೆಂದು ಪ್ರಸಿದ್ಧಿಯಾಗಿರುವ ಸಿರಿಗಳ ಆರಾಧನೆಯೂ ಈ ಕ್ಷೇತ್ರದಲ್ಲಿ ನಡೆಯುತ್ತದೆ. ಕ್ಷೇತ್ರದಲ್ಲಿ ಭಾನುವಾರ ನಡೆಯುವ ಧರ್ಮನೇಮದ ಅಂಗವಾಗಿ ಬೆಳಿಗ್ಗೆ ೯ಕ್ಕೆ ಕುಮಾರದರ್ಶನ, ಧರ್ಮದೈವಗಳ ದರ್ಶನ ಮದ್ಯಾಹ್ನ ಒಂದಕ್ಕೆ ಪಲ್ಲಪೂಜೆ ಹಾಗೂ ಮಹಾಅನ್ನಸಂತರ್ಪಣೆ ನಡೆದು ರಾತ್ರಿ ೮.೩೦ಕ್ಕೆ ಉಳ್ಳಾಯ ಹಾಗೂ ಪರಿವಾರ ದೈವಗಳಿಗೆ ಧರ್ಮನೇಮೋತ್ಸವ ನಡೆಯಲಿದೆ.

ಮುಂಬೈ ವಿರುದ್ಧ ಡೆಲ್ಲಿಗೆ ೩೭ ರನ್ ಜಯ

Posted by JAYAKIRANA Kirana on | 0 comments | Leave a comment...

ವೀರೂ ವೀರಾವೇಶ; ಪೀಟರ್ಸನ್ ಸ್ಫೋಟಕ ಬ್ಯಾಟಿಂಗ್
ದೆಹಲಿ: ಐಪಿಎಲ್ ಗೆಲ್ಲುವ ಫೆವರೇಟ್ ತಂಡ ವೆಂದೇ ಬಿಂಬಿಸಲಾಗಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ತನ್ನ ಭರ್ಜರಿ ಆಟ ಮುಂದುವರೆಸಿದೆ. ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಹಾಗೂ ಕೆವಿನ್ ಪೀಟರ್ಸನ್ ನಡೆಸಿದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಇಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಡೆಲ್ಲಿ ೩೭ ರನ್‌ಗಳಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದ ಮುಂಬೈ ಬೌಲಿಂಗ್ ಆರಿಸಿದ್ದು, ತಂಡಕ್ಕೆ ಹಿನ್ನೆಡೆಯಾಯಿತು. ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಆರಂಭದಿಂದಲೇ ಮುಂಬೈ ಮೇಲೆ ದಾಳಿ ನಡೆಸಲು ಆರಂಭಿಸಿತು. ಜಯವರ್ಧನೆ (೫೫) ಅರ್ಧಶತಕ ಸಿಡಿಸಿದರು. ಅದರಲ್ಲೂ ಸೆಹ್ವಾಗ್ ೩೯ ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸ್‌ಗಳ ನೆರವಿನಿಂದ ೭೩ ರನ್ ಗಳಿಸಿದರೆ ಅಂತಿಮ ಹಂತದಲ್ಲಿ ಪೀಟರ್ಸನ್ ಕೇವಲ ೨೬ ಎಸೆತಗಳಲ್ಲಿ ಮೂರು ಸಿಕ್ಸ್ ಹಾಗೂ ಆರು ಬೌಂಡರಿ ನೆರವಿನಿಂದ ೫೦ ರನ್ ಗಳಿಸಿ ಅಜೇಯರಾಗುಳಿದರು. ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೨೦೭ ರನ್ ಗಳಿಸಿತು. ಮೊತ್ತ ಬೆನ್ನತ್ತಿದ್ದ ಮುಂಬೈ ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಳಕೊಂಡು ಸಂಕಷ್ಟದಲ್ಲಿತ್ತು. ಆದರೂ ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು (೬೨) ಹಾಗೂ ದಿನೇಶ್ ಕಾರ್ತಿಕ್ (೪೦) ಕ್ರೀಸ್‌ನಲ್ಲಿದ್ದಾಗ ತಂಡ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಇವರ ನಿರ್ಗಮನದ ನಂತರ ಅದು ಹುಸಿಯಾಯಿತು. ಹಾಗಾಗಿ ತಂಡ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ೧೭೦ ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ನದೀಮ್ ಹಾಗೂ ಉಮೇಶ್ ತಲಾ ಎರಡು ವಿಕೆಟ್ ಪಡೆದರು.
ಬ್ಲಿಝಾರ್ಡ್ (೦), ಸಚಿನ್ (೭) ಹಾಗೂ ರೋಹಿತ್ (೧೨) ವಿಕೆಟ್‌ನ್ನು ತಂಡ ಆರಂಭದಲ್ಲೇ ಕಳಕೊಂಡಾಗ ತಂಡಕ್ಕೆ ಆಘಾತ. ಈ ವೇಳೆ ತಂಡ ೧೯ ರನ್ ಗಳಿಸಿತ್ತು. ಆದರೆ ಈ ವೇಳೆ ಜೊತೆಸೇರಿದ ಕಾರ್ತಿಕ್ ಹಾಗೂ ಅಂಬಟಿ ಜೋಡಿ ನಾಲ್ಕನೇ ವಿಕೆಟ್‌ಗೆ ೯.೪ ಓವರ್‌ಗಳಲ್ಲಿ ೯೪ ರನ್ ಗಳಿಸಿದಾಗ ತಂಡಕ್ಕೆ ಗೆಲುವಿನ ವಿಶ್ವಾಸದಲ್ಲಿತ್ತು. ಈ ವೇಳೆ ೪೦ ರನ್ ಗಳಿಸಿದ್ದ ಕಾರ್ತಿಕ್ ವಿಕೆಟ್ ಪಡೆಯುವ ಮೂಲಕ ಅಗರ್ಕರ್ ಪಡೆದು ದೆಹಲಿಗೆ ಮುನ್ನಡೆ ನೀಡಿದರು. ಆದರೆ ನಂತರ ನದೀಮ್ ಎಸೆತದಲ್ಲಿ ಸ್ಫೋಟಕ ಅಂಬಟಿ ವಿಕೆಟ್ ಕಳಕೊಂಡರು. ಆದರೆ ಅದರ ಮುಂದಿನ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಕೈಹಾಕಿ ಪೊಲಾರ್ಡ್ ವಿಕೆಟ್ ಕಳಕೊಂಡಾಗ ದೆಹಲಿ ಸಂಪೂರ್ಣ ಮೇಲುಗೈ ಸಾಧಿಸಿತು. ರಾಯುಡು ಆಕರ್ಷಕ ೬೨ ರನ್ ಗಳಿಸಿದರು. ಈ ಹಿಂದೆ ದೆಹಲಿ ಪರ ಸೆಹ್ವಾಗ್ ಹಾಗೂ ಜಯವರ್ಧನೆ ಮೊದಲ ವಿಕೆಟ್‌ಗೆ ಸ್ಫೋಟಕ ೧೩೫ ರನ್ ಗಳಿಸಿದ್ದರು. ನಾಲ್ಕನೇ ವಿಕೆಟ್‌ಗೆ ಪೀಟರ್ಸನ್ ಹಾಗೂ ಟೇಲರ್ (೧೫) ಕೇವಲ ೨.೪ ಓವರ್‌ಗಳಲ್ಲಿ ೪೧ ರನ್ ಪೇರಿಸಿದ್ದು, ತಂಡ ಮೊತ್ತ ೨೦೦ರ ದಾಟುವಂತಾಯಿತು.

ಸಾರ್ವಜನಿಕ ವಿಷಯಗಳ ಬಗ್ಗೆ ಸಚಿನ್ ಚರ್ಚಿಸಲಾರರು: ಮಾಂಜ್ರೆಕರ್

Posted by JAYAKIRANA Kirana on | 0 comments | Leave a comment...

ಮುಂಬೈ: ಸಂಸತ್‌ನ ಮೇಲ್ಮನೆ ಸದಸ್ಯತ್ವವನ್ನು ಸಚಿನ್ ತೆಂಡೂಲ್ಕರ್ ಸ್ವೀಕರಿಸಿದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಸದ್ಯ ವಿಶ್ಲೇಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಜಯ್ ಮಾಂಜ್ರೇಕರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ ಸಚಿನ್ ಹೆಸರನ್ನು ಸರಕಾರ ಮೇಲ್ಮನೆ ಸದಸ್ಯತ್ವಕ್ಕೆ ಸೂಚಿ ಸಿತ್ತು. ನಂತರ ಸಚಿನ್ ಇದಕ್ಕೆ ಸಮ್ಮತಿ ಯನ್ನು ಕೂಡ ಸೂಚಿಸಿದ್ದು, ಹಾಗಾಗಿ ರಾಷ್ಟ್ರಪತಿ ಇದಕ್ಕೆ ಅಂಕಿತವನ್ನು ಹಾಕಿದ್ದರು.
ಸಾರ್ವಜನಿಕ ವಿಷಯಗಳ ಬಗ್ಗೆ ಮಾತನಾಡುವಲ್ಲಿ ಸಚಿನ್ ಹೆಚ್ಚು ನಿಪುಣತೆಯನ್ನು ಹೊಂದಿಲ್ಲ. ಈ ಎಲ್ಲಾ ವಿಷಯಗಳು ಅಚ್ಚರಿದಾಯಕ ವಾಗಿದೆ. ಮೊದಲು ಯಾವುದೇ ಮುನ್ಸೂಚನೆ ಇಲ್ಲದೆ ನಾಮಪತ್ರ ಬಂದಿದ್ದು, ಕೊಂಚ ಅಚ್ಚರಿಯನ್ನು ತಂದಿದ್ದರೆ ಸಚಿನ್ ಸಮ್ಮತಿ ನನ್ನನ್ನು ಇನ್ನಷ್ಟು ಅಚ್ಚರಿಗೆ ಸಿಲುಕಿಸಿತು. ನಿವೃ ತ್ತಿಯ ನಂತರ ಸಚಿನ್ ಕೋಚಿಂಗ್ ಅಥವಾ ಕ್ರಿಕೆಟ್‌ಗೆ ಹೊಂದಿಕೊಂಡೇ ಇರುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಈಗ ರಾಜ್ಯಸಭೆಗೆ ಸದಸ್ಯನಾ ಗಿರುವುದರಿಂದ ನಿವೃತ್ತಿಯ ನಂತರ ಕ್ರಿಕೆಟ್‌ನಿಂದ ದೂರಸರಿಯುವ ಪ್ರಸಂಗವನ್ನು ತಂದಿದೆ. ಅಲ್ಲದೆ ಸದ್ಯ ಸಚಿನ್ ಕ್ರಿಕೆಟ್‌ನಲ್ಲಿ ವ್ಯಸ್ಥವಾಗಿರ ವುದರಿಂದ ಈ ನಿರ್ಧಾರವು ನನ್ನ ಆಲೋಚನೆಯನ್ನು ಮೀರಿದೆ ಎಂದು ಮಾಂಜ್ರೆಕರ್ ತಿಳಿಸಿದ್ದಾರೆ.

ಹೀನಾಯ ಸೋಲುಂಡ ಸೈನಾ

Posted by JAYAKIRANA Kirana on | 0 comments | Leave a comment...

ಇಂಡಿಯನ್ ಓಪನ್: ಸಿಂಧು, ಕಶ್ಯಪ್ ಕ್ವಾರ್ಟರ‍್ಸ್‌ಗೆ
ದೆಹಲಿ: ಇಲ್ಲಿ ನಡೆಯುತ್ತಿರುವ ಮೂರನೇ ದಿನದ ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿ ಅಚ್ಚರಿಯ ಫಲಿತಾಂಶವೊಂದು ಹೊರಬಿದ್ದಿದೆ. ಪ್ರಶಸ್ತಿ ಜಯಿಸುವ ಫೆವರೇಟ್ ಎಂದೇ ಬಣ್ಣಿಸಲಾಗಿದ್ದ ಭಾರತದ ಅಗ್ರಕ್ರಮಾಂ ಕದ ಆಟಗಾರ್ತಿ ಸೈನಾ ನೆಹ್ವಾಲ್ ದಕ್ಷಿಣ ಕೊರಿಯಾದ ಆಟಗಾರ್ತಿಯ ವಿರುದ್ಧ ಹೀನಾಯ ಸೋಲುಂಡು ಕೂಟದಿಂದ ಹೊರಬಿದ್ದಿದ್ದಾರೆ. ಆದರೆ ಭಾರತದ ಮತ್ತಿಬ್ಬರು ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಪಿ. ಕಶ್ಯಪ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದು ಕೊಂಡಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ೧೨ನೇ ಶ್ರೇಯಾಂಕದ ಯೊನ್ ಜೊ ಬೇ ವಿರುದ್ಧ ಐದನೇ ಶ್ರೇಯಾಂಕದ ಸೈನಾ ೧೯-೨೧ ಹಾಗೂ ೧೦-೨೧ರ ಹೀನಾಯ ಸೋಲುಂಡು ಹೊರಬಿದ್ದು, ಭಾರತೀಯ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದ್ದಾರೆ. ಸೈನಾ ಮೊದಲ ಸೆಟ್‌ನಲ್ಲಿ ೧೯-೧೬ರ ಮುನ್ನಡೆಯನ್ನು ಕಂಡಿದ್ದರೂ ನಂತರ ಬೇ ಉತ್ತಮ ಪೈಪೋಟಿ ನೀಡಿ ಪಂದ್ಯವನ್ನು ತನ್ನದಾಗಿ ಸಿಕೊಂಡರು. ಆದರೆ ೨೭ನೇ ಶ್ರೇಯಾಂ ಕದ ಆಟಗಾರ್ತಿ ಪಿ.ವಿ. ಸಿಂಧು ಅಚ್ಚರಿ ಮೂಡಿಸಿದ್ದಾರೆ. ವಿಶ್ವದ ಎಂಟನೇ ಶ್ರೇಯಾಂಕದ ಕೊರಿಯಾದ ಜೀ ಯುಂಗ್ ಸಂಗ್ ವಿರುದ್ಧ ೨೧-೧೭, ೨೨-೨೦ರ ಅಂತರದಲ್ಲಿ ಗೆಲ್ಲುವ ಮೂಲಕ ಸಿಂಧು ಕ್ವಾರ್ಟರ‍್ಸ್ ಪ್ರವೇಶಿಸಿ ದ್ದಾರೆ. ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಥ್ಯಾಲ್ಯಾಂಡ್‌ನ ಬೊನ್ಸಕ್ ಪೊನ್ಸನಾ ವಿರುದ್ಧ ೧೫-೨೧, ೨೧-೧೪ ಹಾಗೂ ೨೨-೨೦ರ ಅಂತರದಲ್ಲಿ ಗೆದ್ದ ಪಿ. ಕಶ್ಯಪ್ ಕೂಡ ಮುನ್ನಡೆದಿದ್ದಾರೆ. ಈ ಮೂಲಕ ಕಶ್ಯಪ್ ತನ್ನ ಒಲಿಂಪಿಕ್ಸ್ ಅರ್ಹತೆಯನ್ನು ಗಿಟ್ಟಿಸುವ ಕನಸನ್ನು ಜೀವಂತವಾಗಿರಿ ಸಿದ್ದಾರೆ.

ಲಂಡನ್‌ಗೆ ತೆರಳಿದ ಭಾರತೀಯ ಹಾಕಿ ತಂಡ

Posted by JAYAKIRANA Kirana on | 0 comments | Leave a comment...

ದೆಹಲಿ: ನಾಲ್ಕು ದೇಶಗಳ ಒಲಿಂ ಪಿಕ್ಸ್ ಪರೀಕ್ಷಾ ಕೂಟದಲ್ಲಿ ಪಾಲ್ಗೊ ಳ್ಳಲು ಭಾರತೀಯ ಹಾಕಿ ತಂಡ ನಿನ್ನೆ ಲಂಡನ್‌ಗೆ ಪ್ರಯಾಣ ಬೆಳೆಸಿದೆ. ಮುಂಬರುವ ಪ್ರತಿಷ್ಟಿತ ಲಂಡನ್ ಒಲಿಂಪಿಕ್ಸ್‌ನ ಪೂರ್ವಭಾವಿಯಾಗಿ ಈ ಕೂಟ ನಡೆಯಲಿದ್ದು, ಇದರಲ್ಲಿ ಆತಿಥೇಯ ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಜರ್ಮನಿ ಭಾಗವಹಿಸುವ ಇತರೆ ರಾಷ್ಟ್ರಗಳಾಗಿವೆ.
ಗೋಲ್‌ಕೀಪರ್ ಭರತ್ ಛೇತ್ರಿ ನಾಯಕತ್ವದ ೧೮ ಆಟಗಾರರ ತಂಡ ನಿನ್ನೆ ಪ್ರಯಾಣ ಬೆಳೆಸಿದ್ದು, ಮಿಡ್‌ಫೀಲ್ಡರ್ ಹಾಗೂ ಉಪಕಪ್ತಾನ ಸರ್ದಾರ್ ಸಿಂಗ್ ಕೂಡ ಒಳಗೊಂಡಿ ದ್ದಾರೆ. ಮೇ ೨ರಿಂದ ಆರರವರೆಗೆ ನಡೆಯಲಿರುವ ಕೂಟದಲ್ಲಿ ಭಾರತಕ್ಕೆ ಮೊದಲ ಎದುರಾಳಿ ಆಸ್ಟ್ರೇಲಿಯಾ ಆಗಲಿದೆ. ಪಂದ್ಯವು ನೀಲಿ ಟರ್ಫ್‌ನಲ್ಲಿ ನಡೆಯಲಿದ್ದು, ಹಳದಿ ಬಣ್ಣದ ಚೆಂಡು ಇಲ್ಲಿ ಉಪಯೋಗವಾಗಲಿದೆ.

ಜನರಿಗೆ ಆಪ್ತವಾದ ವೊಲ್ವೋ ಬಸ್ ಸೇವೆ

Posted by JAYAKIRANA Kirana on | 0 comments | Leave a comment...

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗ ಳೂರು-ಮಣಿಪಾಲ ನಡುವೆ ಆರಂಭಿಸಿ ರುವ ವೊಲ್ವೋ ಬಸ್ ಸೇವೆ ಅತೀ ಕಡಿಮೆ ಅವಧಿಯಲ್ಲೇ ಜನರ ಮನ ಗೆದ್ದಿದೆ. ಅವಳಿ ಜಿಲ್ಲೆಗಳ ಜನರಿಗೆ ಆಪ್ತವಾಗಿರುವ ವೊಲ್ವೋ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಸಾರಿಗೆ ಸಚಿವರು ಕ್ರಮ ಕೈಗೊಳ್ಳ ಬೇಕು. ಈಗ ಸಂಚರಿಸುತ್ತಿರುವ ಬೆರಳೆಣಿಕೆಯ ವೊಲ್ವೋ ಬಸ್‌ಗಳಲ್ಲಿ ಪ್ರಯಾ ಣಿಕರು ತುಂಬಿ ತುಳುಕುತ್ತಿರುತ್ತಾರೆ. ಕುಳಿತುಕೊಳ್ಳಲು ಸೀಟ್‌ಗಳು ಖಾಲಿ ಯಿರು ವುದಿಲ್ಲ. ಕೆಲವು ಸಂದರ್ಭಗಳಲ್ಲಿ ಮಂಗಳೂರಿನಿಂದ ಮಣಿಪಾಲದವರೆಗೂ ನಿಂತು ಕೊಂಡೇ ಪ್ರಯಾಣಿಸ ಬೇಕಾ ಗುತ್ತದೆ. ಆದ್ದರಿಂದ ಜನರ ಸಮಸ್ಯೆಯನ್ನು ಮನಗಂಡು ಈ ರೂಟ್‌ನಲ್ಲಿ ಹೆಚ್ಚುವರಿ ವೊಲ್ವೋ ಬಸ್ ಸೇವೆಯನ್ನು ಶೀಘ್ರವೇ ಆರಂಭಿ ಸಬೇಕು. ಜಿಲ್ಲೆಯಲ್ಲಿ ಸರ ಕಾರಿ ಸಿಟಿ ಬಸ್‌ಗಳನ್ನು ರಸ್ತೆಗಿಳಿಸುವ ಮೂಲಕ ಖಾಸಗಿ ಬಸ್ ಮಾಲಕರ ಹಾರಾಟವನ್ನು ನಿಯಂತ್ರಿಸಬೇಕಾಗಿ ವಿನಂತಿ.
ಆರ್.ಎಸ್, ಸುರತ್ಕಲ್

ಬೆಟ್ ಕಟ್ಟಿ ಸಾವು ಆಹ್ವಾನಿಸದಿರಿ
ಕ್ರಿಕೆಟ್ ಮ್ಯಾಚ್ ಎಂದಾಕ್ಷಣ ಯುವಕರಿಗೆ ನೆನಪಾಗುವುದು ಬೆಟ್ಟಿಂಗ್. ಯಾರೋ ಕೋಟ್ಯಂತರ ರೂ. ಹಣ ಪಡೆದು ಆಡುತ್ತಾರೆ, ಅದನ್ನು ನೋಡಿ ಆನಂದ ಪಡುವುದನ್ನು ಬಿಟ್ಟು ಎರಡು ತಂಡಗಳಲ್ಲಿ ಒಂದನ್ನು ಆಯ್ದು ಬೆಟ್ ಕಟ್ಟುವ ಹುಚ್ಚು ಜನರಿಗೆ ಯಾಕೆ ಬಂತೋ ತಿಳಿಯುತ್ತಿಲ್ಲ. ಯಾಕೆಂದರೆ ಇಂಥ ಕೆಟ್ಟ ಅಭ್ಯಾಸದಿಂದ ಅವೆಷ್ಟೋ ಮಂದಿ ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಬೆಟ್ಟಿಂಗ್‌ಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆಗೂ ಶರಣಾಗಿದ್ದಾರೆ. ಬೆಟ್ಟಿಂಗ್ ದಂಧೆ ಜುಗಾರಿ ದಂಧೆಗಿಂತಲೂ ಹೊಲಸಾಗಿದೆ. ಇಲ್ಲಿ ಹಣವೇ ಪ್ರಧಾನ. ಸಾಕಷ್ಟು ಹಣ ಇದ್ದರೂ ಅದನ್ನು ಬೆಟ್ಟಿಂಗ್‌ನಲ್ಲಿ ಕಳೆದು ಕೊಳ್ಳುವುದು ಮೂರ್ಖತನವೇ ಸರಿ. ಹೀಗಾಗಿ ಯುವಜನರೇ, ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸಿ ಸಾವನ್ನು ಆಹ್ವಾನಿಸದಿರಿ.
ಭರತೇಶ್, ಗಂಜಿಮಠ

ಕಟೀಲಿನಲ್ಲಿ ಟೂರಿಸ್ಟ್ ವಾಹನಕ್ಕೆ ಪ್ರತ್ಯೇಕ ಜಾಗ ಅಗತ್ಯ
ಇತಿಹಾಸ ಪ್ರಸಿದ್ಧ ಕಟೀಲು ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಭೇಟಿ ಕೊಡುತ್ತಾರೆ. ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಇಲ್ಲಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇಲ್ಲಿನ ಮುಖ್ಯ ಸಮಸ್ಯೆಯೇನೆಂದರೆ ಪ್ರವಾಸಿ ಗರ ವಾಹನಗಳನ್ನು ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶ ಇಲ್ಲ. ಹೊಸದಾಗಿ ನಿರ್ಮಾಣವಾಗಿರುವ ಬಸ್ ತಂಗು ದಾಣಗಳಲ್ಲೇ ಇವು ಬೀಡು ಬಿಟ್ಟಿರುತ್ತವೆ. ಇದರಿಂದ ಮಂಗಳೂರು ಮತ್ತು ಕಿನ್ನಿಗೋಳಿ ಕಡೆ ಸಾಗುವ ಬಸ್‌ಗಳು ಬಸ್ ತಂಗುದಾಣದೊಳಕ್ಕೆ ಪ್ರವೇಶಿಸದೆ ರಸ್ತೆ ಬದಿಯಲ್ಲೇ ನಿಂತು ಪ್ರಯಾ ಣಿಕರನ್ನು ತುಂಬಿಸಿಕೊಂಡು ಮುಂದು ವರಿಯುತ್ತವೆ. ಬಸ್ ಪ್ರಯಾಣಿಕರು ಸುಸಜ್ಜಿತ ಬಸ್ ತಂಗುದಾಣವಿದ್ದರೂ ಬಿಸಿಲು-ಮಳೆಗೆ ರಸ್ತೆ ಬದಿ ನಿಂತು ಬಸ್ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕು. ಕಟೀಲಿಗೆ ಭೇಟಿ ಕೊಡುವ ಭಕ್ತರು ಮಕ್ಕಳನ್ನೆತ್ತಿಕೊಂಡು ರಸ್ತೆಯಲ್ಲಿ ಬಸ್ ಕಾಯುವುದನ್ನು ತಪ್ಪಿಸಬೇಕಾಗಿ ವಿನಂತಿ.
ರಾಮಕೃಷ್ಣ, ಕಿನ್ನಿಗೋಳಿ

ರಸ್ತೆಗಳ ಅಭಿವೃದ್ಧಿ ಯಾವಾಗ?
ಪ್ರಪಂಚದ ಯಾವ ದೇಶದಲ್ಲಿಯೂ ಇಲ್ಲಿಯಷ್ಟು ಕೆಟ್ಟ ರಸ್ತೆಗಳು ಇರಲಿಕ್ಕಿಲ್ಲ. ಬುದ್ಧಿವಂತರ ಜಿಲ್ಲೆಯ ಮುಖ್ಯಮಂತ್ರಿ ಸದಾನಂದ ಗೌಡರು ಒಮ್ಮೆ ಬೆಳ್ತಂಗಡಿ-ಚಾರ್ಮಾಡಿ ರಸ್ತೆಯಾಗಿ ಪ್ರಯಾಣ ಮಾಡಬೇಕು. ಇಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ತಿಳಿಯಬೇಕು. ನಿಜಕ್ಕೂ ಹೆದ್ದಾರಿ ಇಲಾಖೆ ಸೋಮಾರಿ, ಪುಂಡರ ಅಡ್ಡೆಯೇನೋ ಎಂಬಂತೆ ಭಾಸವಾಗುತ್ತಿದೆ. ಚಾರ್ಮಡಿಯಂತಹ ದುರ್ಗಮ ರಸ್ತೆಗಳಲ್ಲಿ ಪ್ರಯಾಣ ಮಾಡುವುದೆಂದರೆ ಜೀವ ಕೈಯ್ಯಲ್ಲಿ ಬರುತ್ತದೆ. ಇದಕ್ಕೆ ಕಾರಣ ಇನ್ನೂ ಬ್ರಿಟಿಷರ ಕಾಲದಲ್ಲೇ ಇರುವ ರಸ್ತೆಗಳು. ಬ್ರಿಟಿಷರು ಬಿಟ್ಟು ಹೋಗಿ ನಮ್ಮನ್ನು ಇಷ್ಟು ವರ್ಷಗಳಾದರೂ ನಮ್ಮ ಆಡಳಿತಗಾರರಿಗೆ ನೆಟ್ಟಗೆ ರಸ್ತೆ ಮಾಡಲೂ ಇನ್ನೂ ಸಾಧ್ಯವಾಗಿಲ್ಲ ಎಂದರೆ ನಾಚಿಕೆ ಪಡಬೇಕು. ಚಾರ್ಮಾಡಿಯ ರಸಗತೆಹಳನ್ನೇ ಗಮನಿಸಿ, ಅಲ್ಲಲ್ಲಿ ತೇಪೆ ಹಾಕಿದ್ದು ಮಳೆಗಾಲ ಆರಂಭವಾಗುವ ಮೊದಲೇ ಎದ್ದು ಹೋಗುತ್ತಿದೆ. ಚಾರ್ಮಾಡಿಯಾಗಿ ಧರ್ಮಸ್ಥಳಕ್ಕೆ ಬರುವ ಯಾತ್ರಿಗಳ ಸಂಖ್ಯೆ ಅನೇಕ. ಧರ್ಮಸ್ಥಳದ ಧರ್ಮಾಧಿಕಾರಿಗಳು ಆಸಕ್ತಿ ವಹಿಸಿದ್ದರೆ ರಸ್ತೆ ಸರಿಯಾಗಬಹುದಿತ್ತು. ಆದರೆ ಅವರು ಈ ಬಗ್ಗೆ ಯಾವುದೇ ಆಸಕ್ತಿ ತೋರಿಸದಿರುವುದು ವಿಷಾದನೀಯ. ಇಕ್ಕಟ್ಟಾದ ರಸ್ತೆಯನ್ನು ಅಗಲ ಗೊಳಿಸಿ ಕಂದರಗಳಿಗೆ ಬೇಲಿ ಹಾಕುವ ಮೂಲಕ ಇಲ್ಲಿ ಸುರಕ್ಷಿತ ಪ್ರಯಾಣಕ್ಕೆ ಕ್ರಮ ಕೈಗೊಳ್ಳಬೇಕು. ಚಾರ್ಮಾಡಿ ಘಾಟಿ ರಸ್ತೆಯನ್ನು ಅಗಲಗೊಳಿಸುವ ಮೂಲಕ ಇಲ್ಲಿ ವಾಹನಗಳ ಜನದಟ್ಟಣೆಯನ್ನು ನಿವಾರಿಸಬೇಕು. ಸರಕಾರ ಕೂಡಲೇ ಇದಕ್ಕೆ ಮುಂದಾಗಲಿ. ಜಿಲ್ಲೆಯವರೇ ಆದ ಸದಾನಂದ ಗೌಡರು ಕೂಡಲೇ ಚಾರ್ಮಾಡಿ ಘಾಟಿ ರಸ್ತೆಯ ಬಗ್ಗೆ ಆಸಕ್ತಿ ವಹಿಸಿದರೆ ಈ ಭಾಗದಲ್ಲಿ ಸಂಚರಿಸುವ ಜನರು ಸದಾ ಕಾಲ ನೆನಪಿಟ್ಟುಕೊಂಡಾರು.
ಚಂದ್ರ ಚಾರ್ಮಾಡಿ

ಸರಳ ಮದುವೆ ಒಳ್ಳೆಯ ಬೆಳವಣಿಗೆ
ಅಕ್ಷಯ ತದಿಗೆಯ ಶುಭ ಸಂದರ್ಭದಲ್ಲಿ ಕಟೀಲು ದೇವಸ್ಥಾನ ಹಾಗೂ ಇತರೆಡೆಗಳಲ್ಲಿ ಸರಳ ಮದುವೆ ಕಾರ್ಯಕ್ರಮಗಳು ನಡೆದವು. ನೂರಾರು ಮಂದಿ ಜಾತಿ ಬೇಧವಿಲ್ಲದೆ ದೈವೀಶಕ್ತಿಯ ಸನ್ನಿಧಾನದಲ್ಲಿ ವಿವಾಹ ಬಂಧನಕ್ಕೊಳಗಾದರು. ಇಂದಿನ ಆಧು ನಿಕ ಜಗತ್ತಿನಲ್ಲಿ ಇದೊಂದು ಒಳ್ಳೆಯ ಬೆಳವಣಿಗೆ. ಯಾಕೆಂದರೆ ಇಂದಿನ ಮದುವೆ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಾರೆ. ಒಬ್ಬರು ಇನ್ನೊ ಬ್ಬರಿಗಿಂತ ಅದ್ಧೂರಿಯಾಗಿ ಮದುವೆ ನಡೆಯಬೇಕು ಎಂಬ ಉದ್ದೇಶದಿಂದ ಹಣದ ಬಗ್ಗೆ ಚಿಂತಿಸದೆ ಧಾರಾಳತನ ತೋರಿಸುತ್ತಾರೆ. ಆದರೆ ಸಮಾಜಕ್ಕೆ ಏನಾದರೂ ಒಳಿತು ಮಾಡುವಲ್ಲಿ ಮಾತ್ರ ಹಿಂದೆ-ಮುಂದೆ ನೋಡು ತ್ತಾರೆ. ಹೀಗಿರುವಾಗ ಜನರು ಮತ್ತೆ ಸರಳ ಮದುವೆಯತ್ತ ಮುಖ ಮಾಡಿ ರುವುದು ಒಳ್ಳೆಯ ಬೆಳವಣಿಗೆಯಾ ಗಿದೆ. ಸಾಮಾಜಿಕ ಸಂಘಟನೆಗಳು ಸರಳ ಮದುವೆಗೆ ಹೆಚ್ಚಿನ ಒತ್ತು ಕೊಡಲಿ.
ಲಕ್ಷ್ಮೀಶ, ಕಲ್ಲಾಪು

ಹೆದ್ದಾರಿ ಸಂಚಾರ ಪ್ರಾಣಕ್ಕೆ ಸಂಚಕಾರ
ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ವಾಹನ ಸವಾರರು ಸಂಚರಿಸಲು ಭಯಪಡುವಂತಾಗಿದೆ. ಇದಕ್ಕೆ ಕಾರಣ ರಸ್ತೆ ನಿರ್ಮಾಣ ಕಾರ್ಯ ಇನ್ನೂ ಪೂರ್ತಿಗೊಳ್ಳದೇ ಇರುವುದು. ಸುರತ್ಕಲ್, ಕೂಳೂರಿನಲ್ಲಿ ಹಲವು ವರ್ಷಗಳ ಕಾಲ ನೆನೆಗು ದಿಗೆ ಬಿದ್ದಿದ್ದ ಫ್ಲೈ ಓವರ್ ಕೊನೆಗೂ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಲ್ಲಿ ಗಲಿಬಿಲಿ ಸೃಷ್ಟಿಸುತ್ತಿದೆ. ಜನರು ಹೆದ್ದಾರಿ ಚತುಷ್ಪಥವಾದರೆ ನೆಮ್ಮದಿಯಿಂದ ಸಂಚಾರ ನಡೆಸಬಹುದು ಎಂದು ನಂಬಿ ದ್ದರು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಜಿಲ್ಲೆಯ ಸಚಿವರು, ಶಾಸಕರು ಜನರ ಸಮಸ್ಯೆಯ ಕಡೆ ಗಮನ ಕೊಡುತ್ತಿಲ್ಲ. ರಸ್ತೆ ಅಪಘಾ ತಗಳಿಗೆ ತಡೆಯೇ ಇಲ್ಲದಂತಾಗಿದೆ. ಹೆದ್ದಾರಿಯನ್ನು ಮಳೆಗಾ ಲಕ್ಕೂ ಮುನ್ನ ವ್ಯವಸ್ಥೆ ಮಾಡದಿದ್ದಲ್ಲಿ ಅನಾಹುತಗಳ ಸರ ಮಾಲೆಯೇ ಹೆಚ್ಚುವ ಭೀತಿಯಿದೆ.
ರಾಜೇಶ್, ಕೂಳೂರು

ಹಿಂದೂ ಸಂಸ್ಕೃತಿಯನ್ನು ಉಳಿಸುವವರಾರು?
ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ಹಿಂದೂ ಹೆಣ್ಮಕ್ಕಳಿಗೆ ಜಡೆ ಕಟ್ಟುವಂತಿಲ್ಲ, ಕೈಗೆ ಬಳೆ ಧರಿಸುವಂತಿಲ್ಲ, ಹೂವು ಮುಡಿಯುವಂತಿಲ್ಲ, ಹಣೆಗೆ ಕುಂಕುಮ ಧರಿಸುವಂತಿಲ್ಲ. ಇದು ಅಲ್ಲಿನ ನಿಯಮಾವಳಿಗಳಲ್ಲಿ ಒಂದು. ಇದನ್ನು ತಪ್ಪಲ್ಲ ಎಂದು ಒಪ್ಪಿಕೊಳ್ಳಬಹುದು. ಆದರೆ ಇದೇ ನಿಯಮಗಳು ಬೆಳೆಯುತ್ತಾ ಮಕ್ಕಳ ಮೇಲೆ ಗಾಢ ಪರಿಣಾಮವನ್ನು ಬೀರುತ್ತವೆ. ಹೆಣ್ಮಕ್ಕಳು ನಮ್ಮ ಸಂಪ್ರದಾಯಬದ್ಧ ಆಚರಣೆ, ನಂಬಿಕೆಗಳನ್ನು ಮರೆಯುತ್ತಾ ಸಾಗುತ್ತಾರೆ.
ಹಣೆಗೆ ತಿಲಕ, ಜಡೆಗೆ ಹೂವು, ಬಳೆ ಇವೆಲ್ಲ ಹಿಂದೂ ಸಂಸ್ಕೃತಿಯ ಚಿಹ್ನೆಗಳು. ಹಾಗಿದ್ದೂ ಇವೆಲ್ಲವನ್ನು ಧರಿಸಲು ಅವಕಾಶ ಕೊಡಿ ಎಂದು ಹಿಂದೂ ಬಾಂಧವರು ಎಲ್ಲೂ ಹೋರಾಟ ಮಾಡಿಲ್ಲ. ಇದು ನಮ್ಮ ಧಾರ್ಮಿಕ ವ್ಯವಸ್ಥೆ ಎಷ್ಟು ಶಿಥಿಲವಾಗಿದೆ ಎನ್ನುವುದರ ಸಂಕೇತವಲ್ಲವೇ? ಸಂಸ್ಕೃತಿ ರಕ್ಷಣೆ ಎಂದು ಹಿಂದೂ ಸಂಘಟನೆಗಳು ಬೊಬ್ಬೆ ಹೊಡೆದರೆ ಸಾಲದು. ನಿಜವಾದ ಸಂಸ್ಕೃತಿಯನ್ನು ರಕ್ಷಿಸಬೇಕಾದವರು ಹೆಣ್ಮಕ್ಕಳೇ ಆಗಿದ್ದಾರೆ. ಅವರನ್ನು ಈ ನಿಟ್ಟಿಲ್ಲಿ ಕಾಲಕಾಲಕ್ಕೆ ಎಚ್ಚರಿಸುವುದು ಅತ್ಯವಶ್ಯ.
ಕಿರಣ್‌ಕುಮಾರ್, ಪುತ್ತೂರು

ಕೋಡಿಕಲ್ ಕ್ರಾಸ್‌ನಲ್ಲಿ ಅಪಘಾತ ಭಯ ನಿವಾರಿಸಿ
ರಾಷ್ಟ್ರೀಯ ಹೆದ್ದಾರಿಯ ಕೊಟ್ಟಾರ ಚೌಕಿಯಿಂದ ಮುಂದಕ್ಕೆ ಕೋಡಿಕಲ್ ಕ್ರಾಸ್‌ನಲ್ಲಿ ವಾಹನಗಳು ಬೇಕಾಬಿಟ್ಟಿ ತಿರುವು ಪಡೆದು ಸಾಗುವುದರಿಂದ ಅಪಘಾತ ಭಯ ಸಾಮಾನ್ಯವಾಗಿದೆ. ಕೊಟ್ಟಾರ ಮತ್ತು ಕುಂಟಿಕಾನ ಎರಡೂ ಕಡೆಯಿಂದ ಸಾಗಿಬರುವ ವಾಹನಗಳು ಚೌಕಿ ಯಿಂದ ಮುಂದುವರಿದು ಕೋಡಿ ಕಲ್ ಬಳಿ ಪಥವನ್ನು ಬದಲಿಸಿ ಮುಂದುವರಿಯುತ್ತದೆ. ಈ ವೇಳೆ ಇಲ್ಲಿ ಪ್ರಯಾಣಿಕರನ್ನು ಹತ್ತಿಸಲು ಸಿಟಿ, ಸರ್ವಿಸ್ ಬಸ್‌ಗಳು ರಸ್ತೆ ಮಧ್ಯೆಯೇ ನಿಲ್ಲುತ್ತವೆ. ಪ್ರಯಾಣಿ ಕರು ಇಳಿದು ರಸ್ತೆಯ ಮಧ್ಯದಲ್ಲೇ ಬಾಕಿಯಾಗ ಬೇಕಾಗುತ್ತದೆ. ಯಾಕೆಂದರೆ ಕುಂಟಿಕಾನ ಕಡೆಯಿಂದ ಆರಂಭಗೊಳ್ಳುವ ಫ್ಲೈ ಓವರ್‌ನಲ್ಲಿ ವಾಹನಗಳು ಸಾಗಿ ಬಂದು ಇಲ್ಲಿಯೇ ಕೆಳಕ್ಕೆ ಇಳಿಯುತ್ತದೆ.
ಈ ಎಲ್ಲಾ ಕಾರಣಗಳಿಂದ ಕೋಡಿಕಲ್ ಕ್ರಾಸ್ ಅಪಘಾತ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ತಿರುವು ಪಡೆಯುವಾಗ ಸ್ವಲ್ಪವೇ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಅವೈeನಿಕವಾಗಿ ನಿರ್ಮಾಣ ಗೊಂಡಿರುವ ಹೆದ್ದಾರಿ ಕಾಮಗಾರಿ, ಫ್ಲೈ ಓವರ್‌ಗಳಿಂದ ಹೆದ್ದಾರಿಯಲ್ಲಿ ಸಂಚರಿಸುವ ಸವಾರರು ಭಯದಿಂದಲೇ ಸಂಚರಿಸ ಬೇಕಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಅಲ್ಲಲ್ಲಿ ಟ್ರಾಫಿಕ್ ಪೊಲೀಸರನ್ನು ಇಲ್ಲವೇ ಸೂಕ್ತ ಚೂಚನಾಫಲಕಗಳನ್ನು ಮತ್ತು ಸಿ.ಸಿ. ಕ್ಯಾಮರಾವನ್ನು ಇರಿಸುವುದರಿಂದ ಇಲ್ಲಿ ಸಂಚರಿಸುವವರು ಒಂದಿಷ್ಟು ಎಚ್ಚರಿಕೆ ವಹಿಸಬಹುದೇನೋ.
ಸುಮಾ, ಕೋಡಿಕಲ್

ಗೋವನ್ನು ಮಾರುವಿರೇಕೆ?
ಗೋವನ್ನು ಸಾಕಿ, ಸಲಹಿ ಅದರಿಂದ ಎಲ್ಲ ಪ್ರಯೋಜನಗಳನ್ನು ಪಡೆದಾದ ಬಳಿಕ ಕಟುಕರಿಗೆ ಮಾರಾಟ ಮಾಡುತ್ತಾರೆ. ಕೃಷಿ ಕುಟುಂಬಗಳು ತಮ್ಮ ಅವಶ್ಯ ಕತೆಗಳಿ ಗಾಗಿ ಸಾಕಿದ ಜಾನು ವಾರುಗಳನ್ನು ಬೇಸಿಗೆ ಸಮಯದಲ್ಲಿ ಸಾಕಲು ಕಷ್ಟ ವಾಗಿ ಮಾರಾಟ ಮಾಡುತ್ತಾರೆ. ಅದರ ಬದಲು ಗೋವುಗಳನ್ನು ಸಾಕಿ ಅದರ ಸೆಗಣಿ, ಗೋಮೂ ತ್ರವನ್ನು ಬಳಕೆ ಮಾಡಿ ವಿವಿಧ ಉತ್ಪನ್ನಗಳನ್ನು ತಯಾರಿಸಬಹುದು. ಇದನ್ನು ಕೃಷಿಕರಿಗೆ ತಿಳಿಸಲು ಮಾಹಿತಿ ಶಿಬಿರಗಳನ್ನು ಹಮ್ಮಿಕೊಳ್ಳು ವುದು ಉತ್ತಮ. ಗೋವನ್ನು ಪ್ರೀತಿ ಯಿಂದ ಸಾಕಿ ಕೊನೆಗೆ ಮಾಂಸದ ಉದ್ದೇಶಕ್ಕಾಗಿ ಮಾರು ವುದು ಪಾಪದ ಕೆಲಸವಲ್ಲವೇ? ಈ ಬಗ್ಗೆ ಹಿಂದೂ ಸಂಘಟನೆಗಳು ಜನಾಂ ದೋಲನ ನಡೆಸಲಿ.
ರಾಘವೇಂದ್ರ, ಕಾವೂರು

ಹೋರಾಟಕ್ಕೆ ಜಯ
ಜನ ಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಳ ಗಾಗಿದ್ದ ಕಾಲೇಜು ರಸ್ತೆಯ ಸಮಸ್ಯೆಗೆ ಪ್ರತಿಭಟನೆ, ರ‍್ಯಾಲಿ ಹಾಗೂ ಕಾರ್ಡ್ ಚಳವಳಿ ನಡೆಸಿ ಇಲಾಖೆಯ ಪ್ರತಿ ಯೊಬ್ಬ ಅಧಿಕಾರಿಗೂ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಬಿಸಿ ಮುಟ್ಟಿ ಸುವಲ್ಲಿ ಯಶಸ್ವಿಯಾದ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಕಡಬ ಗ್ರಾಮ ಸಮಿತಿಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಎಲ್ಲ ಸಂಘ ಟನೆಗಳ ಹಾಗೆ ಹೆಸರಿಗಾಗಿ ಪ್ರತಿಭಟನೆ ನಡೆಸಲಿಲ್ಲ. ಇನ್ನು ಉಳಿದ ಭಾಗವನ್ನು ಡಾಮರೀಕರಣ ಗೊಳಿಸಲು ಅನುದಾನ ಇರಿಸಿಲ್ಲ. ಜಿ.ಪಂ. ಸದಸ್ಯರು ಮೂಲ ಭೂತ ಸೌಕರ್ಯ ಒದಗಿಸುವ ಬಗ್ಗೆ ಹೆಚ್ಚಿನ ಗಮನ ಹರಿಸ ಬೇಕು.
ಕಾರ್ಯಕರ್ತರು, ಎಸ್‌ಡಿಪಿಐ, ಕಡಬ

ಕಿವುಡುತನದಿಂದ ಮುಕ್ತಿಗೊಳಿಸಿ
ಸುರತ್ಕಲ್ ಸಮೀಪದ ಮಂಗಳಪೇಟೆ ಮಸೀದಿಯಲ್ಲಿ ದಿನಂಪ್ರತೀ ನಡೆಯುವ ಪ್ರಾರ್ಥನೆಯಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ. ದೇವರು ಎಲ್ಲರಿಗೆ ಒಂದೇ ದೇವನೊಬ್ಬನೇ ನಾಮ ಹಲವು ಎಂಬ ನಾಣ್ಣುಡಿ ಇದೆ. ಆದರೆ ಇಲ್ಲಿನ ಮಸೀದಿಯಲ್ಲಿ ಬೆಳಿಗ್ಗೆ ರಾತ್ರಿಯ ವೇಳೆ ಜೋರಾಗಿ ಇಡು ವಂತಹ ಸೌಂಡ್ ಬಾಕ್ಸ್‌ನಿಂದಾಗಿ ಪರೀಕ್ಷೆಗೆ ಓದಲು ದಿನಂಪ್ರತಿ ತೊಂದರೆ ಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿನ ಪ್ರಾರ್ಥನೆಯ ಸ್ವರಭಾರ ತುಂಬಾ ಹೆಚ್ಚಳವಾಗಿದ್ದು ಈ ಮಸೀ ದಿಯ ಆಸುಪಾಸಿನ ನಿವಾಸಿಗಳು ತೊಂದರೆ ಅನುಭವಿ ಸುತ್ತಿದ್ದಾರೆ. ನಿಮ್ಮಲ್ಲಿ ವಿನಂತಿಸುವುದೇನೆಂದರೆ ನಮಗಾ ಗುತ್ತಿರುವ ತೊಂದರೆಯಿಂದ ಮುಕ್ತಿಗೊಳಿಸಿ ಪರೀಕ್ಷೆಗೆ ಓದಲು ಸಹಕರಿಸಿ. ಮೌನದಲ್ಲಿ, ಪ್ರೀತಿಯಲ್ಲಿ ಪ್ರಾರ್ಥನೆಯನ್ನು ಮಾಡಿ ದರೆ ದೇವರು ನಮ್ಮ ಮನಸ್ಸನ್ನು ಸೇರುವನು.
ನೊಂದ ಗ್ರಾಮಸ್ಥರು, ಮಂಗಳಪೇಟೆ

ದಲಿತ ಪ್ರಜ್ಞೆಯನ್ನು ಎಚ್ಚರಿಸಿದ ಪ್ರಜಾವಾಣಿ

Posted by JAYAKIRANA Kirana on | 0 comments | Leave a comment...

ದೊಡ್ಡಯ್ಯ ಪೆರ್ಮುದೆ
ಅಂಬೇಡ್ಕರ್ ಜಯಂತಿ ದಿನ ‘ಪ್ರಜಾವಾಣಿ ಎನ್ನುವ ಕನ್ನಡದ ಮೌಲ್ಯಯುತ ಪತ್ರಿಕೆ ದೇವನೂರ ಮಹಾದೇವರನ್ನು ಅತಿಥಿ ಸಂಪಾದಕರನ್ನಾಗಿ ಕರೆಸಿ ದಲಿತ ಪ್ರಜ್ಞೆಯನ್ನು ಎಚ್ಚರಿಸುವ ಕೆಲಸ ಮಾಡಿರುವುದಕ್ಕೆ ಅಭಿನಂದಿಸಲೇ ಬೇಕಿದೆ.
ಇಂದು ಕನ್ನಡ ಪತ್ರಿಕೋದ್ಯಮ ಮಾತ್ರವಲ್ಲ ಆಂಗ್ಲ ಪತ್ರಿಕೋದ್ಯಮದಲ್ಲೂ ದಲಿತರ ಸಂಖ್ಯೆ ತುಂಬಾ ಕಡಿಮೆ. (ಮೊನ್ನೆ ಮೊನ್ನೆ ಮಲೆಕುಡಿಯರ ಹುಡುಗ ವಿಠಲನನ್ನು ನಕ್ಸಲ್ ಎಂದು ಆರೋಪಿಸಿ ಪೊಲೀಸರು ಸೆರೆ ಹಿಡಿದಿದ್ದಾರೆ. ಇವತ್ತಿನವರೆಗೂ ಆತನ ವಿರುದ್ಧ ಗಟ್ಟಿ ಸಾಕ್ಷ್ಯವನ್ನು ಸಂಗ್ರಹಿಸಲು ಪೊಲೀಸರಿಗೆ ಆಗಿಲ್ಲ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ವಿಠಲನ ಸಾಧನೆಯನ್ನು ಸರಕಾರವೇ ಪ್ರಶಂಸಿಸಬೇಕಿತ್ತು. ಅದರೆ ಸರಕಾರಕ್ಕೆ ಈ ಸೌಜನ್ಯ ಎಲ್ಲಿದೆ?
ಪ್ರಜಾಪ್ರಭುತ್ವ ಕೆಲವೊಮ್ಮೆ ಸರ್ವಾಧಿಕಾರದ ಆಡಳಿತಕ್ಕಿಂತಲೂ ಆತಂಕದಿಂದ ಕೂಡಿರುತ್ತವೆ. ನಾವೇ ಆರಿಸಿದ ಜನಪ್ರತಿನಿಧಿಗಳು ನಮ್ಮನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಸಾರ್ವಜನಿಕರ ಸೇವಕರಾ ಗಬೇಕಾದ ಪೊಲೀಸರು ಜನಪೀಡಕರಾಗುತ್ತಾರೆ. ಅಧಿಕಾರದಲ್ಲಿರುವವರ, ಸರಕಾರಿ ಯಂತ್ರಾಂಗ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಾಗ ವಿಠಲ ಮಲೆಕುಡಿಯನಂಥವರು ಬಲಿ ಪಶುಗಳಾ ಗುತ್ತಾರೆ. ಬೆಳ್ತಂಗಡಿ, ಧರ್ಮಸ್ಥಳ ಬಿಟ್ಟು ಆಚೆಗಿನ ಜಗತ್ತು ಗೊತ್ತಿಲ್ಲದ ನಿಂಗಣ್ಣ ಮಲೆಕುಡಿಯ ನಕ್ಸಲ್‌ನಂತೆ ಕಾಣುತ್ತಾರೆ.
ಪತ್ರಿಕೋದ್ಯಮ ವಿದ್ಯಾರ್ಥಿ ನಿತ್ಯ ತರಗತಿಗೆ ಹಾಜರಾಗುತ್ತಿದ್ದವ ನಕ್ಸಲ್ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದ, ಆತನಿಗೆ ನಕ್ಸಲ್ ಸಂಬಂಧ ಆರೋಪ ಹೊರಿಸುವ ಪೊಲೀಸರಿಗೆ ವಿಠಲ ನಕ್ಸಲ್ ಎನ್ನುವುದಕ್ಕೆ ಸಲ್ಲಿಸಬೇಕಾದ ಎವಿಡೆನ್ಸು ಇನ್ನೂ ಹುಡುಕಬೇಕಿದೆ. ಭಗತ್ ಸಿಂಗ್, ಕಾರ್ಲ್ಸ್ ಮಾರ್ಕ್ಸ್ ಬೇಕಿದ್ದರೆ ಸಾಕೇತ್ ರಾಜನ್ ಬರೆದ ಕರ್ನಾಟಕದ ಇತಿಹಾಸವೋ, ಬಿಟರ್ ಕಾಫಿಯಂತಹ ಪುಸ್ತಕ ಇಟ್ಟುಕೊಂಡ ವರು ಅಥವಾ ಓದಿದವರು ನಕ್ಸಲೀಯರು ಎನ್ನುವ ಸಿದ್ಧ ಸೂತ್ರಕ್ಕೆ ಪೊಲೀಸರು ಜೋತು ಬಿದ್ದರೆ ಪೊಲೀಸ್ ಇಲಾಖೆಯ ಬಗ್ಗೇ ಅನುಕಂಪ ತೋರಿಸದೆ ವಿಧಿಯಿಲ್ಲ.
ವಿಠಲ ಹೇಳಿಕೇಳಿ ಆದಿವಾಸಿ ಯುವಕ. ನಮ್ಮ ಘನ ಸರಕಾರ ಆದಿವಾಸಿಗಳ ಅಭಿವೃದ್ಧಿಗಾಗಿ ಕೋಟ್ಯಂತರ ರುಪಾಯಿಗಳ ಪ್ಯಾಕೇಜುಗಳನ್ನು ಘೋಷಿಸುತ್ತದೆ. ಇದರಿಂದ ಆದಿವಾಸಿಗಳು, ಗಿರಿಜನರು ಉದ್ದಾರವಾದದ್ದು ಅಷ್ಟರಲ್ಲೇ ಇದೆ. ಸರಕಾರಕ್ಕೆ ಒಬ್ಬ ವಿಠಲನನ್ನು ಸೃಷ್ಟಿಸಲಾಗಲಿಲ್ಲ. ಆತನನ್ನು ಸಮಾಜದ ಮುಖ್ಯವಾಹಿನಿಗೆ ತಂದು ವಿಶ್ವವಿದ್ಯಾನಿಲಯದ ದಾರಿ ತೋರಿಸಿದವರು ಪ್ರಗತಿ ಪರ ಮನೋಭಾವನೆಯ ಮಾಧ್ಯಮ ಮಿತ್ರರು. (ನೆನಪಿಡಿ ಇವರ‍್ಯಾರೂ ಚಿತ್ರನಟಿಯೊಬ್ಬಳು ಬಂದರೆ ಆಕೆಯ ಭುಜಕ್ಕೆ ಭುಜ ಜೋಡಿಸಿ ನಿಂತು ಅದನ್ನು ಫೇಸ್‌ಬುಕ್ಕಿನಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವ ವಂಶದವರಲ್ಲ, ಬಜರಂಗಿಗಳ ಸಖ್ಯ ಇಟ್ಟುಕೊಂಡು ನ್ಯೂಸ್‌ಗಾಗಿ ಹಪಹಪಿಸುವ ಮನೋ ಭಾವನೆಯವರಲ್ಲ, ಕುಣಿದರೆ, ಹಾಡಿದರೆ, ಕೊನೆಗೊಂದು ಬೈಲೈನಿನಲ್ಲಿ ಇಂಟರ್‌ನೆಟ್‌ನಿಂದ ಕದ್ದು ವರದಿ ಬರೆದರೂ ಅದಕ್ಕೆ ಅಪ್ಪ ತಾನೆಂದು ಹೇಳಿಕೊಳ್ಳುವ ಪತ್ರಕರ್ತ ಸಂಕುಲದ ನಡುವೆ ವಿಭಿನ್ನವಾಗಿ ಕಾಣಿಸಿಕೊಂಡು ತಮ್ಮ ವೃತ್ತಿಗೆ ನ್ಯಾಯ ಸಲ್ಲಿಸುವವರು)
ಇಂಥ ಹುಡುಗನೊಬ್ಬ ಮಲೆಕುಡಿಯ ಸಮುದಾಯದಿಂದ ಬಂದ ಕಾರಣಕ್ಕೆ ಆತನನ್ನು ಅಭಿನಂದಿ ಸಬೇಕಿತ್ತು. ಆತನ ಸಾಧನೆಗೊಂದು ಸಲಾಂ ಹೇಳಬೇಕಿತ್ತು. ಆದರೆ ಸರಕಾರಕ್ಕೆ ಇದನ್ನೆಲ್ಲ ಗಮ ನಿಸುವಷ್ಟು ವ್ಯವಧಾನ ಎಲ್ಲಿದೆ?
ಹಿಂದೊಮ್ಮೆ ಟೈಮ್ಸ್ ಅಫ್ ಇಂಡಿಯಾದ ಸಂಪಾದಕರಾಗಿದ್ದ ದಿಲೀಪ್ ಪಡ್‌ಗಾಂವ್‌ಸ್ಕರ್ ಅವರು ಪತ್ರಿಕೋದ್ಯದಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರ ಸಂಖ್ಯೆ ಕಡಿಮೆಯಾ ಗುತ್ತಿರುವುದರಿಂದ ಸಮುದಾಯದ ನೋವು, ಕಾಳಜಿಗಳು ಪತ್ರಿಕೆಯಲ್ಲಿ ಬರುತ್ತಿಲ್ಲ. ಪತ್ರಿಕೋ ದ್ಯದಮದಲ್ಲಿ ಆಸಕ್ತಿಯುಳ್ಳ ಮುಸ್ಲಿಮ್ ಯುವಕರಿಗೆ ಅವಕಾಶ ಕೊಡುವುದಾಗಿ ಹೇಳಿದ್ದು ಓದಿರುವ ನೆನಪು. ಈ ದೇಶದಲ್ಲಿ ಮುಸ್ಲಿಮರ ಬಗ್ಗೆ, ಕ್ರೈಸ್ತರ ಬಗ್ಗೆ ವ್ಯಕ್ತವಾಗುವಷ್ಟು ಕಾಳಜಿ ದಲಿತ ಸಮುದಾಯಕ್ಕೆ ಇಲ್ಲದಿರುವುದು ಕೂಡಾ ದುರಂತ.
ಪ್ರತೀ ವರ್ಷ ಅಂಬೇಡ್ಕರ್ ಬುದ್ಧನನ್ನು ಆಲಂಗಿಸಿಕೊಂಡ ದಿನದಂದು ಲಕ್ಷಾಂತರ ದಲಿತರು ಬೌದ್ಧರಾಗುತ್ತಿದ್ದಾರೆ. ಭಾಗಶ: ತಮ್ಮನ್ನು ಶತಶತಮಾನಗಳ ಕಾಲ ಹಿಂದೂ ಸಮಾಜ ನಡೆಸಿಕೊಂಡ ರೀತಿಗೆ ಪ್ರತಿಭಟನೆಯಾಗಿ ದಲಿತ ವರ್ಗ ಆರಿಸಿಕೊಳ್ಳುತ್ತಿರುವುದು ಮತಾಂತರದ ಮಾರ್ಗವನ್ನು ಎಂದರೂ ತಪ್ಪಾಗಲಾರದೇನೋ?
ಉಡುಪಿಯ ದೇವಸ್ಥಾನವೊಂದರಲ್ಲಿ ಜಿಎಸ್‌ಬಿ ಸಮುದಾಯದ ಮಹಿಳೆಯನ್ನು ಊಟದ ಪಂಕ್ತಿಯ ನಡುವೆಯೇ ಆಕೆ ಬ್ರಾಹ್ಮಣರಲ್ಲ ಎಂಬ ಕಾರಣಕ್ಕೆ ಪಂಕ್ತಿಯಿಂದಲೇ ಹೊರಗಟ್ಟಿದ್ದ ಬ್ರಾಹ್ಮಣ ಸಮುದಾಯ ಆನಂತರ ಜಿಎಸ್‌ಬಿ ಸಮುದಾಯದ ಪ್ರತಿಭಟನೆ ಎದುರಿಸಿದ್ದು ಗೊತ್ತಿರಬ ಹುದು. ಕೇವಲ ಒಂದು ದಿನ ಇಂಥ ಅವಮಾನವನ್ನು ಜಿಎಸ್‌ಬಿ ಸಮುದಾಯಕ್ಕೆ ಎದುರಿಸಲು ಸಾಧ್ಯವಾಗಲಿಲ್ಲ. ಪ್ರತೀ ದಿನ ಮೇಲ್ವರ್ಗದ ಜನರಿಂದ ಕಿರುಕುಳ ಎದುರಿಸುತ್ತಿರುವ ದಲಿತ ಸಮು ದಾಯ ಏನು ಮಾಡಬೇಕಿತ್ತು ಹೇಳಿ?
ಇಂದು ದಲಿತರಿಗೆ ಮೀಸಲಾತಿ ಇರಬಹುದು. ಆದರೆ ಅದರ ಬಗ್ಗೆಯೂ ಕೊಂಕು ನುಡಿಗಳನ್ನು ಕೇಳಬೇಕಾಗಿ ಬಂದಿದೆ.
ಇದಕ್ಕೆ ಕೇವಲ ಮೇಲ್ವರ್ಗದವರತ್ತ ಕೈ ತೋರಿಸುತ್ತಿಲ್ಲ ನಾನು. ಇದರಲ್ಲಿ ದಲಿತರದ್ದೂ ತಪ್ಪಿದೆ. ಅಟ್ರಾಸಿಟಿ ಕೇಸನ್ನೇ ದುರುಪಯೋಗಪಡಿಸಿಕೊಳ್ಳುವವರು ಇದರಿಂದಲೇ ಮೇಲ್ವರ್ಗದವರನ್ನು ಬೆದರಿಸುವ ಅಸ್ತ್ರವಾಗಿ ಬಳಸಿಕೊಳ್ಳುವ ಜಾಣತನವೂ ದಲಿತ ಸಮುದಾಯಕ್ಕಿದೆ. ಈ ಕಾರಣ ಕೂಡಾ ದಲಿತ ಸಮುದಾಯವನ್ನು ಇತರ ಸಮುದಾಯದಿಂದ ಇನ್ನಷ್ಟು ದೂರ ನಿಲ್ಲಿಸಿದೆ. ದಲಿತ ಸಂಘಟನೆಗಳ ಮುಖಂಡರು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಇತರೆ ಹಿಂದುಳಿದ ವರ್ಗಗಳ ಜೊತೆ ವಿಶ್ವಾಸ ತೋರಿದರೆ ಪ್ರಗತಿ ಸಾಧ್ಯವೋ ಏನೋ. ಹಾಗೆಯೆ ಹಿಂದುಳಿದ ಸಮುದಾಯಗಳು ಕೂಡಾ ತಮ್ಮನ್ನು ತಾವು ಮೇಲ್ವರ್ಗದವರೆಂದು ಬಿಂಬಿಸಿಕೊಳ್ಳಲು ಹವಣಿಸುತ್ತಿದೆ. ಇಲ್ಲಿ ಯಾರೂ ದೊಡ್ಡವರಲ್ಲ, ಸಣ್ಣವರೂ ಅಲ್ಲ. ಪ್ರತಿಯೊಬ್ಬರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅಂಬೇಡ್ಕರ್, ನಾರಾಯಣಗುರು, ಸರ್ವಜ್ಞ ಯಾವುದೇ ವರ್ಗಕ್ಕೆ ಸೀಮಿತರಲ್ಲ. ಅವರೆಲ್ಲರೂ ಶೋಷಿತರ ಸ್ವಾಭಿಮಾನದ ಪ್ರತೀಕ ಎಂದು ತಿಳಿದುಕೊಳ್ಳಲಿ.

ಗುಜರಾತ್‌ನಲ್ಲಿ ‘ಮೋದಿ ಮಾದರಿ’

Posted by JAYAKIRANA Kirana on | 0 comments | Leave a comment...


ಇದು ಒಂದು ನಿಟ್ಟಿನ ಸಾಧನೆಯಾದರೆ ಇನ್ನೂ ಹಲವು ನಿಟ್ಟಿನಲ್ಲಿ ಸಾಧನೆಯನ್ನು ಮಾಡಬೇಕಾದ ಇಚ್ಛಾಶಕ್ತಿ ನಮ್ಮ ರಾಜಕಾರಣಿಗಳಿಗೆ ಬರಬೇಕಾದುದು ಅತೀ ಅಗತ್ಯವಾಗಿದೆ. ನಮ್ಮ ದೇಶವನ್ನು ಕಾಡುವ ಪೆಟ್ರೋಲಿಯಂ ಇಂಧನದ ಸಮಸ್ಯೆಯನ್ನು ದೂರಗೊಳಿಸುವ ಕಾರ್ಯವೂ ಆಗಬೇಕಾಗಿದೆ. ಪೆಟ್ರೋಲಿಯಂ ಇಂಧನಕ್ಕೆ ಪರ‍್ಯಾಯವಾಗಿ ಜೈವಿಕ ಇಂಧನಗಳನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವ ಕೆಲಸ ವ್ಯಾಪಕವಾಗಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿರುವ ಲಭ್ಯವಿರುವ ಅಗಾಧವಾದ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಾವಲಂಬನೆಯನ್ನು ಸಾಧಿಸುವುದು ಅತೀ ಅವಶ್ಯಕವಾಗಿದೆ.

ನಾಲ್ಕೈದು ವಾರಗಳ ಹಿಂದೆ ಇದೇ ಅಂಕಣದಲ್ಲಿ ಪರ‍್ಯಾಯ ಇಂಧನಗಳನ್ನು ಅಭಿವೃದ್ಧಿ ಪಡಿಸುವ ಇಚ್ಛಾಶಕ್ತಿಯ ಕೊರತೆಯ ಬಗ್ಗೆ ಬರೆದಿದ್ದೆ. ದಿನೇ ದಿನೇ ಮುಗಿಯುತ್ತಾ ಬರುತ್ತಿರುವ ಪೆಟ್ರೋ ಲಿಯಂ ಇಂಧನದ ಮೇಲೆ ಭಾರತವೂ ಸೇರಿದಂತೆ ಜಗತ್ತು ಅವಲಂಬಿಸಿರುವುದು ತುಂಬಾ ಅಪಾಯಕಾರಿ ಜಗತ್ತಿನ ಇತರ ರಾಷ್ಟ್ರಗಳು ಇದನ್ನು ಅರಿತುಕೊಂಡು ಪೆಟ್ರೋಲಿಯಂ ಇಂಧನಕ್ಕೆ ಪರ‍್ಯಾಯವಾಗಿ ಇತರ ಇಂಧನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ಭಾರತ ಮಾತ್ರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಪೆಟ್ರೋಲಿಯಂ ಇಂಧನಕ್ಕೇ ಜೋತು ಬಿದ್ದಿದೆ. ಇಲ್ಲಿ ಸಾಕಷ್ಟು ಪರ‍್ಯಾಯ ಇಂಧನವನ್ನು ಅಭಿವೃದ್ಧಿಪಡಿಸುವ ಅವಕಾಶ ಇದ್ದರೂ ಕೆಲವೊಂದು ಕಾರಣಗಳಿಂದ ಆ ಕಡೆಗೆ ಗಮನ ಹರಿಸದೆ ಕೇವಲ ತೋರಿಕೆಗೆ ಮಾತ್ರ, ಪರ‍್ಯಾಯ ಇಂಧನ ಬಳಸುವ ಬಗೆಗೆಗಿನ ಘೋಷಣೆಗ ಳಿಗೆ ಮಾತ್ರ ಸೀಮಿತವಾಗಿದೆ.
ಈಗ ಈ ನಿಟ್ಟಿನಲ್ಲಿ ಆಶಾದಾಯಕವಾದ ಬೆಳವಣಿಗೆಯೊಂದು ಭಾರತದಲ್ಲಿ ನಡೆದಿರುವುದು ಸ್ವಾಗತಾರ್ಹ. ಹೇರಳವಾಗಿ ದೊರೆಯುವ ಸೌರಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಅತೀ ಕಡಿಮೆ ದರದಲ್ಲಿ ಪರಿಣಾಮಕಾರಿ ಇಂಧನವೊಂದನ್ನು ಅಭಿವೃದ್ಧಿಪಡಿಸಬಹುದು ಎಂಬುದನ್ನು ಗುಜರಾತ್ ತೋರಿಸಿಕೊಟ್ಟಿದೆ. ಈ ಇಚ್ಛಾಶಕ್ತಿಯ ಹಿಂದೆ ಇರುವ ವ್ಯಕ್ತಿ ನರೇಂದ್ರ ಮೋದಿ.
ಸೂರ್ಯನ ಬೆಳಕು ಎಲ್ಲೆಂದರಲ್ಲಿ ಬೀಳುತ್ತದೆ. ಬಿಸಿಲಿನಿಂದ ತಪ್ಪಿಸಿ ಕೊಳ್ಳುವುದಕ್ಕಾಗಿಯೇ ನಾವು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಮನೆ, ಮಠ, ಚಪ್ಪರ ಇತ್ಯಾದಿಗಳನ್ನು ಕಟ್ಟಿಕೊಳ್ಳುತ್ತೇವೆ. ಇವೆಲ್ಲ ವುಗಳನ್ನು ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕಾಗಿ ಅನಿವಾರ‍್ಯವಾಗಿ ನಿರ್ಮಿ ಸಲೇ ಬೇಕಾಗುತ್ತದೆ. ಇಂತಹಾ ರಚನೆಗಳನ್ನೇ ನಾವು ವಿದ್ಯುತ್ ನಿರ್ಮಾ ಣವಾಗುವ ಕೇಂದ್ರಗಳನ್ನಾಗಿ ಪರಿವರ್ತಿಸಿಕೊಂಡರೆ ಮನೆ ಮನೆಗಳನ್ನು ಬೆಳಗಿಸುವುದಕ್ಕೆ, ಯಂತ್ರೋಪಕರಣಗಳನ್ನು ಚಲಾಯಿಸುವುದಕ್ಕೆ ಬೇರೆ ಇಂಧನದ ಅವಶ್ಯಕತೆ ಇದೆಯೇ?
ಗುಜರಾತಿನ ಗಾಂಧಿನಗರದಲ್ಲಿ ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದಿ ಸುವ ಯೋಜನೆ ತಯಾರಾಗಿ ಕಾರ್ಯರೂಪಕ್ಕೆ ಬರಲು ಸಜ್ಜಾಗಿ ನಿಂತಿದೆ. ಇಲ್ಲಿನ ಜನರು ತಮ್ಮ ಮನೆಗಳ ತಾರಸಿಯ ಮೇಲೆ ತಮಗೆ ಬೇಕಾಗುವ ಮತ್ತು ಬಳಸಿ ಉಳಿದ ವಿದ್ಯುತ್‌ಶಕ್ತಿಯನ್ನು ಮಾರಾಟ ಮಾಡುವ ಯೋಜನೆಯನ್ನು ಮುಕ್ತವಾಗಿ ಸ್ವಾಗತಿಸಿದ್ದಾರೆ. ಸುದ್ದಿ ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಚದರ ಅಡಿಯ ಟೇರೇಸ್‌ನ್ನು ಹೊಂದಿದವರು ವರ್ಷದಲ್ಲಿ ಸುಮಾರು ಹದಿನಾರು ಸಾವಿರ ರೂಪಾ ಯಿಗಳನ್ನು ವಿದ್ಯುತ್ ಮಾರಾಟ ಮಾಡಿ ಗಳಿಸಬಹುದಂತೆ. ಇದರ ಜತೆಗೆ ತಮ್ಮ ಮನೆಗೆ ವರ್ಷವಿಡೀ ಉಚಿತ ವಿದ್ಯುತ್ತನ್ನು ಬೇಕಾ ಬಿಟ್ಟಿ ಬಳ ಸಿಕೊಳ್ಳಬಹುದಾಗಿದೆ. ತಮ್ಮ ತಮ್ಮ ಮನೆ ಮಹಡಿಯಲ್ಲೇ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆ ಇದು.
ಸೌರವಿದ್ಯುತ್ ಉತ್ಪಾದಿಸುವ ಸಂಸ್ಥೆಗಳಿಗೆ ೨೫ ವರ್ಷಗಳ ಮಟ್ಟಿಗೆ ತಮ್ಮ ಮನೆಯ ಟೆರೇಸನ್ನೇ ಗುತ್ತಿಗೆಯಾಗಿ ನೀಡಿ ಹೇರಳವಾಗಿ ದುಡ್ಡನ್ನೂ ಸಂಪಾದಿಸಲೂ ಅವಕಾಶವಿದೆ. ಈ ಮೂಲಕ ವರ್ಷಕ್ಕೆ ಸುಮಾರು ೫ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಗುಜರಾತ್ ಸರಕಾರ ಅನುಮೋದನೆ ನೀಡಿದೆ. ಇದಕ್ಕೆ ಸುಮಾರು ೫೦ ಕೋಟಿಗೂ ಹೆಚ್ಚಿನ ಬಂಡ ವಾಳವನ್ನು ಹೂಡಿಕೆ ಮಾಡಲಾಗಿದೆ ಎಂದು ಸುದ್ದಿಯಾಗಿದೆ. ರಾಜ್ಯದ ಸರ ಕಾರಿ ಕಟ್ಟಡಗಳ ಛಾವಣಿಯೂ ಸೌರ ವಿದ್ಯುತ್ ತಯಾರಿಸುವ ಘಟಕಗ ಳಾಗಲಿವೆ.
ಗುಜರಾತ್ ಸರ್ದಾರ್ ಸರೋವರ್ ಸುನಂದ್ ಕಾಲುವೆಯುದ್ದಕ್ಕೂ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ಸಾಕಷ್ಟು ಪ್ರಮಾಣದ ವಿದ್ಯುತ್ ಉತ್ಪಾದನೆಯೊಂದಿಗೆ ನೀರನ್ನು ಸಂರಕ್ಷಿಸುವ ಬಹು ಮುಖಿ ಯೋಜನೆಯೂ ಗುಜರಾತ್‌ನಲ್ಲಿ ಸಿದ್ಧಗೊಂಡಿದೆ. ಈ ಎಲ್ಲಾ ಯೋಜನೆಗಳ ಹಿಂದಿರುವ ಮಾಸ್ಟರ್ ಮೈಂಡ್ ನರೇಂದ್ರ ಮೋದಿಯವರದ್ದು.
ಭಾರತದ ಇಂದಿನ ಸ್ಥಿತಿ ಮತ್ತು ಮುಂದಿನ ಭವಿಷ್ಯದ ಯೋಚನೆಗಳಿಗೆ ಗುಜರಾತ್‌ನಲ್ಲಿ ಅಳವಡಿಸಲಾಗುತ್ತಿರುವ ಈ ರೀತಿಯ ಯೋಜನೆಗಳು ಅತೀ ಅವಶ್ಯಕವಾಗಿದೆ. ಬೇಸಿಗೆಯ ಸುಡುಬಿಸಿಲಲ್ಲಿ ವಿದ್ಯುತ್ ಕೈಕೊಡುವಾಗ ಸೆಖೆ ಯಿಂದ ಬಸವಳಿಯು ಜನರಿಗೆ ನಮ್ಮ ನದಿಗಳಲ್ಲಿ ನೀರಿಲ್ಲ ಆದುದರಿಂದ ದಿನದಲ್ಲಿ ಇಂತಿಷ್ಟು ಗಂಟೆ ವಿದ್ಯುತ್ ಕಡಿತ ಅನಿವಾರ‍್ಯ ದಯವಿಟ್ಟು ಎಲ್ಲರೂ ಸಹಕರಿಸಿ ಎಂದು ಸಮಾಧಾನ ಹೇಳುವ ಪರಿಸ್ಥಿತಿ ಎಷ್ಟು ಸಮಯದವರೆಗೆ ಮುಂದುವರಿಯಬೇಕು. ನದಿಯ ನೀರಿಗೂ ವಿದ್ಯುತ್‌ಗೂ ಇರುವ ಓಬಿ ರಾಯನ ಕಾಲದ ಸಂಪ್ರದಾಯವನ್ನು ಮುರಿಯುವುದು ಇಂದಿನ ಅಗತ್ಯ ತೆಯಾಗಿದೆ. ಇಂತಹಾ ಅನೇಕ ಹಳೆಯ ಕಾಲದ ಸಂಪ್ರದಾಯಗಳಿಗೆ ತಿಲಾಂಜಲಿಯನ್ನು ನೀಡದೇ ಇದ್ದಲ್ಲಿ ಪ್ರಗತಿಯ ಕಡೆಗೆ ಸಾಗುವುದಾದರೂ ಹೇಗೆ?
ಅತೀ ಅಗ್ಗದ ದರದಲ್ಲಿ ಅಥವಾ ಪುಗಸಟ್ಟೆ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ನಮ್ಮ ದೇಶದ ಒಂದು ರಾಜ್ಯವಾದರೂ ತ್ರಿವಿಕ್ರಮ ಹೆಜ್ಜೆ ಇಟ್ಟದ್ದು ಸಮಾಧಾನಕರವಾದ ಅಂಶವಾಗಿದೆ. ಇದನ್ನು ಎಲ್ಲಾ ರಾಜ್ಯಗಳೂ ಅನುಷ್ಠಾನ ಗೊಳಿಸಿದರೆ ನಮ್ಮ ದೇಶದಲ್ಲಿ ವಿದ್ಯುತ್ತಿನ ಸಮಸ್ಯೆಯೇ ಇರಲಾರದು.
ಇದು ಒಂದು ನಿಟ್ಟಿನ ಸಾಧನೆಯಾದರೆ ಇನ್ನೂ ಹಲವು ನಿಟ್ಟಿನಲ್ಲಿ ಸಾಧನೆಯನ್ನು ಮಾಡಬೇಕಾದ ಇಚ್ಛಾಶಕ್ತಿ ನಮ್ಮ ರಾಜಕಾರಣಿಗಳಿಗೆ ಬರಬೇಕಾದುದು ಅತೀ ಅಗತ್ಯವಾಗಿದೆ. ನಮ್ಮ ದೇಶವನ್ನು ಕಾಡುವ ಪೆಟ್ರೋಲಿಯಂ ಇಂಧನದ ಸಮಸ್ಯೆಯನ್ನು ದೂರಗೊಳಿಸುವ ಕಾರ್ಯವೂ ಆಗಬೇಕಾಗಿದೆ. ಪೆಟ್ರೋಲಿಯಂ ಇಂಧನಕ್ಕೆ ಪರ‍್ಯಾಯವಾಗಿ ಜೈವಿಕ ಇಂಧನಗಳನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವ ಕೆಲಸ ವ್ಯಾಪಕವಾಗಿ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿರುವ ಲಭ್ಯವಿರುವ ಅಗಾಧವಾದ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಾವಲಂಬನೆಯನ್ನು ಸಾಧಿಸುವುದು ಅತೀ ಅವಶ್ಯಕವಾಗಿದೆ.
ಸ್ವಾವಲಂಬನೆಯ ದಾರಿಯಲ್ಲಿ ನರೇಂದ್ರ ಮೋದಿಯವರ ಇಚ್ಛಾಶಕ್ತಿ ಭಾರತದ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಇದ್ದರೆ ಭಾರತವನ್ನು ಬಲಾಢ್ಯ ದೇಶವನ್ನಾಗಿ ರೂಪುಗೊಳಿಸುವಲ್ಲಿ ಯಾವುದೇ ಅಡತಡೆಗಳು ಬರಲಾರದು.

ನಕ್ಸಲರೇ ಬಂದೂಕು ತ್ಯಜಿಸಿ ಮಾತುಕತೆ ನಡೆಸಿ

Posted by JAYAKIRANA Kirana on | 0 comments | Leave a comment...

ಉಮಾನಾಥ್ ಕುಮಾರ್, ಕೋಡಿಕಲ್
ಭಾರತವು ಪ್ರಜಾಪ್ರಭುತ್ವ ವಿಶಾಲ ರಾಷ್ಟ್ರವಾಗಿದ್ದು ಹೋರಾಟದ ಮೂಲಕವೇ ಪರಕೀಯ ದಾಸ್ಯ ಮುಕ್ತಿಗೊಂಡು ಫೀನಿಕ್ಸ್‌ನಂತೆ ಮೈ ಕೊಡವಿ ಶ್ರೀಮಂತ ರಾಷ್ಟ್ರವಾಗುತ್ತಿದೆ. ಆದರೆ ದಶಕಗಳು ಉರುಳಿ ಹೋದರೂ ರಾಷ್ಟ್ರಪಿತನ ಕನಸು ರಾಮರಾಜ್ಯ ಸಾಧ್ಯವಾಗದಿರುವುದು ಖೇದಕರ ವಿಚಾರ. ರಾಜಕಾರಣದ ವರ್ಚಸ್ಸು ಕುಸಿಯುತ್ತಿದ್ದೆಯೇ ಇತ್ತ ರಾಷ್ಟ್ರದ ಅರ್ಧದಷ್ಟು ರಾಜ್ಯಗಳು ನಕ್ಸಲರ ಅಟ್ಟಹಾಸಕ್ಕೆ ಗುರಿಯಗಿರುವುದು ಕಳವಳಕಾರಿಯಾಗಿದೆ. ಸಾಮಾಜಿಕ ಕಾಳಜಿ ಇದೆ ಎಂದಾದರೆ ಅದರ ನಾಯಕರು ಕೇಂದ್ರದೊಂದಿಗೆ ಮಾತುಕತೆಗೆ ಬರಲೇ ಬೇಕು. ಜನರ ಸುರಕ್ಷತೆಗೆ ಕಾನೂನು ವೈಖರಿ ಕುರುಡಾಗಿರಲು ಸಾಧ್ಯವಿಲ್ಲ. ಅದರ ರೂವಾರಿಗಳು ಅರ್ಥೈಸಿಕೊಳ್ಳುವುದೊಳಿತು. ಯಾರೋ ಮಾಡಿದ ತಪ್ಪಿಗೆ ಗ್ರಾಮಾಂತರ ಅಮಾಯಕರಿಗೆ ಕಿರುಕುಳ ಸರಿಯಲ್ಲ. ನಿಮ್ಮ ಜೀವಕ್ಕೆ ಬೆಲೆ ಇರುವುದಾದರೆ. ಅವರ ಜೀವಕ್ಕೆ ಬೆಲೆ ಇಲ್ಲವೇ ನೀವ್ಯಾಕೆ ತಲೆಕೆಡಿಸುತ್ತಿಲ್ಲ?
ಭೂಮಿ ಮತ್ತು ಅರಣ್ಯ ಸಂಪತ್ತು ಹೇರಳವಾಗಿ ನಮ್ಮಲ್ಲಿದೆ. ಪ್ರಾಯಶಃ ಇಲ್ಲಿಯ ನೆಲದ ಮೇಲೆ ಕಣ್ಣಿಟ್ಟು ಹೊರ ಜಗತ್ತಿನ ಕಾರ್ಪರೇಟ್‌ಗಳು ಲಗ್ಗೆ ಇಟ್ಟಿರುವುದೇ ಸಾಮಾಜಿಕ ಗೊಂದಲದ ಘಟನೆಗೆ ಕಾರಣ ಎಂಬುದನ್ನು ಮೂಲಗಳು ವ್ಯಕ್ತಪಡಿಸಿದೆ. ನಾಡಲ್ಲಿ ಇಂದಿಗೂ ಶೇ ೬೨ ರಷ್ಟು ನೆಲದಲ್ಲಿ ಬುಡಕಟ್ಟು ಆದಿವಾಸಿಗಳು ಕಾಡುಮೇಡು ಗುಡ್ಡ ಪರ್ವತದಲ್ಲಿ ಪ್ರಾಚೀನ ನಾಗರಿಕತೆ ಬದುಕಲ್ಲಿದ್ದಾರೆ. ೧೯೪೭ರಂದು ಸ್ವಾತಂತ್ರ್ಯ ಕೈಗೆ ಸಿಕ್ಕಾಗಲೇ ಸಮಪಾಲು - ಸಮಬಾಳು ಘೋಷಣೆ ಆಗಿದ್ದರೂ ಇಷ್ಟು ವರ್ಷ ಕಾಲ ಮೇರು ಘಟ್ಟಕ್ಕೇರಲು ಯಾವ್ಯಾವ ಜಾತಿಗಳಿಗೆ ಸಾಧ್ಯವಾಗಿದೆ? ಶೇ ೮೦ ರಷ್ಟು ಜಮೀನು ಯಾರ‍್ಯಾರ ವಶವಿದೆ? ಭೂ ನ್ಯಾಯ ಮಂಡಳಿಗಳು ಎಷ್ಟು ಹಿಂದುಳಿದವರಿಗೆ ನ್ಯಾಯ ದೊರಕಿಸಿದೆ? ತಿದ್ದುಪಡಿಯಿಲ್ಲದ ಶತಮಾನಗಳಿಂದ ಮೂಲಗೇಣಿ ಒಕ್ಕಲುಗಳು ಆದಿವಾಸಿಗಳ ಅರಣ್ಯ ರೋಧನಕ್ಕೆ ಸ್ಪಂದಿಸುವವರಾರು? ಪ್ರಜಾಪ್ರಭುತ್ವ ಬಲವಾಗಿ ನೆಲೆ ನಿಲ್ಲಲು ಸ್ವಾತಂತ್ರ್ಯ ಪೂರ್ವ ಪ್ರಬಲ ಹೋರಾಟಗಳು ನಡೆದಿದೆ. ಯಾರನ್ನು ಸಮಾಜದ್ರೋಹಿಗಳು, ಉಗ್ರರು ಎಂದು ಬಿಂಬಿಸಲು ಸಾಧ್ಯವಿಲ್ಲ. ಪ್ರತಿಸಲ ಹುತಾತ್ಮರನ್ನು ಸ್ಮರಣೆ ಮಾಡುತ್ತಿದ್ದೇವೆ. ವಿಪರ್ಯಾಸವೆಂದರೆ ಪ್ರಸಕ್ತ ಹೋರಾಟದ ಮಾರ್ಗಗಳು ಅದಕ್ಕಿಂತ ಭಿನ್ನ ಭಿನ್ನ ಸ್ವರೂಪದ ಅವಾಂತರ ಒಂದು ದುರಂತಮಯ ಎನ್ನಲಾಗುತ್ತಿದೆ. ಸಮಸ್ಯೆಯ ಹುಟ್ಟು ಹುಡುಕುತ್ತಾ ಹೊರಟರೆ ಕೊನೆಗೆ ಸಿಗುವುದು ಜನಪ್ರತಿನಿಧಿಗಳು ಎನ್ನುವುದು ಸ್ಪಷ್ಟ ಎನ್ನುವಂತಿದೆ. ಸಾಕಷ್ಟು ಹೋರಾಟ ನಡೆದಿದೆ ಅದಕ್ಕವರು ಸೊಪ್ಪು ಹಾಕದಿರುವ ಮಾತು ನಿಜವಲ್ಲ. ಸಾಧನೆಯಾಗಿದೆ. ಅಭಿವೃದ್ಧಿ ಪಥದಲ್ಲಿ ಸಮಾಜ ಸಾಗುತ್ತಿದೆ. ಆದರೆ ಆಡಳಿತಕ್ಕೆ ಅಡ್ಡಿಯೂ ಹಲವಡೆ ಇದೆ. ಒಂದು ಕಾಲದಲ್ಲಿ ಉತ್ತರದ ರಾಜ್ಯಗಳು ಅಗರ್ಭ. ಕೆಲವೇ ಉನ್ನತರು ಭೂಮಾಲಿಕರು, ತನ್ನ ಖಾಸಗಿ ಗೂಂಡಾ ಪಡೆ ಬಳಸಿ ಸರ್ಕಾರಿ ಜಮೀನು ಆಕ್ರಮಿಸಿ ಅದಿವಾಸಿಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳಂತಹ ರಾಜ್ಯದಲ್ಲಿ ನಡೆದಿದೆ. ಅದರ ವಿರುದ್ಧ ಕಾಡು ಜನರ ಗೆರಿಲ್ಲಾ ದಾಳಿ ನಡೆದಿದೆಯೆಂಬುದನ್ನು ಮೂಲಗಳು ತಿಳಿಸಿದೆ. ಅದಕ್ಕೊಂದು ನಿದರ್ಶನವಾಗಿ ಠಾಕೂರ್, ಬನಿಯಾ ಗಳಿಂದ ಸಾಕಷ್ಟು ಅತ್ಯಾಚಾರಕ್ಕೊಳಗಾಗಿ ನೋವುಂಡು ಚಂಬಲ್ ಕಣಿವೆಯ ಪೂಲನ್ ದೇವಿ ಕೊನೆಗೂ ಗಂಡು ಕಚ್ಚೆ ಬಿಗಿದು ಕುದುರೆಯೇರಿ ಬಂದೂಕು ಎತ್ತಿ ಅನ್ಯಾಯದ ವಿರುದ್ಧ ಹೋರಾಡಿದ್ದಾಳೆ. ಚುನಾವಣೆ ಗೆದ್ದು ಕುಗ್ರಾಮಗಳ ಅಭಿವೃದ್ಧಿ ನಡೆಸಿದ್ದಳು. ಆದರೆ ಆಕೆಗೆ ಸಿಕ್ಕಿದ ಪ್ರೋತ್ಸಾಹವಾದರೂ ಏನು?
ನಾಡಿನ ಪ್ರಗತಿ ಬಗ್ಗೆ ಜಂಬ ಕೊಚ್ಚಿಕೊಂಡು ದರ್ಬಾರು ನಡೆಸಿದವರು ಎತ್ತ ಕಡೆ ಏನು ಮಾಡಿದ್ದಾರೆ? ಜಯಲಲಿತ, ರಾಬ್ರಿದೇವಿ, ಮಮತಾ ಬ್ಯಾನರ್ಜಿ, ಮಾಯಾವತಿ ಅಂತಹವರನ್ನು ಪೂಲನ್ ದೇವಿಗೆ ಹೋಲಿಸಲು ಸಾಧ್ಯನಾ? ಸಮಾಜದ ಕುರಿತು ಯಾಕೆ ನೇತಾಗಳು ಚಿಂತನ - ಮಂಥನ ನಡೆಸುತ್ತಿಲ್ಲ? ಹದಿನೆಂಟರ ಶತಮಾನದ ಹಿಂದ ಅತ್ಯಂತ ದುರ್ಬಲ ಸ್ಥಿತಿಯಲ್ಲಿದ್ದ ಅಮೇರಿಕಾದಲ್ಲಿ ಜಾರ್ಜ್ ವಾಷಿಂಗ್ಟನ್ನರು ಕ್ಷಿಪ್ರ ಸಾಮಾಜಿಕ ಕ್ರಾಂತಿ ನಡೆಸಿದ್ದರು. ಹತ್ತೊಂಬತ್ತರ ಶತಮಾನದಲ್ಲಿ ಮಾವೋತ್ಸುಂಗ ಚೀನಾದಲ್ಲಿ ನಡೆಸಿದ್ದರು. ಅಲ್ಲೆಲ್ಲ ಜಾತಿ ಅಡ್ಡಗೋಡೆಗಳು ಇರುತ್ತಿರಲಿಲ್ಲ. ಶ್ರದ್ದೆ ನಿಷ್ಠೆ ರಾಷ್ಟ್ರದ ಮೇಲೆ ಇದ್ದುದರಿಂದ ಸುಲಭವಾಗಿತ್ತು. ಒಂದು ವೇಳೆ ಹೋರಾಟ ನಡೆಯದಿರುತ್ತಿದ್ದರೆ ಇಷ್ಟು ಪ್ರಬಲವಾಗಿ ಅವುಗಳು ಬೆಳೆಯುತ್ತಿರಲಿಲ್ಲ ಎಂಬುದನ್ನು ಚರಿತ್ರೆ ಪುಟದಲ್ಲಿ ವಿಶ್ಲೇಷಕರು ಬರೆದಿದ್ದಾರೆ. ಅವರಲ್ಲೀಗ ಆಂತರಿಕ ಸಮಸ್ಯೆ ಅಷ್ಟೊಂದಿಲ್ಲ. ಅಂತಾರಾಷ್ಟ್ರೀಯ ಭೂಗಡಿ ಬಾಹ್ಯ ಅತಿಕ್ರಮಣ ಶಕ್ತಿಗಳು ತಲೆ ಹಾಕದಂತೆ ಪ್ರಸಕ್ತ ಬಲಿಷ್ಠ ಭದ್ರತಾ ಪಡೆ ನಿಯೋಜನೆ, ಕಾವಲು ಇಟ್ಟಿದ್ದಾರೆ. ಹಾಗಾಗಿ ಕಾರ್ಯ ಪಡೆ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವಂತಹ ಘಟನೆ ಅಲ್ಲಿರುವುದು ವಿರಳ ಎನ್ನಲಾಗುತ್ತಿದೆ. ನಮ್ಮಲ್ಲಿ ಹೋರಾಟವು ಅಷ್ಟೊಂದು ಹಿಂದೆ ಬಿದ್ದಿಲ್ಲ ಬಹುತೇಕ ರಾಜ್ಯದಲ್ಲಿ ನಡೆದಿದೆ. ಅಡ್ಡಿಮಾಡಿದರೆ ಭ್ರಷ್ಟತೆಯಿಂದ ಇನ್ನಷ್ಟು ಸಮಸ್ಯೆಗಳು ಹುಟ್ಟುವ ಸಾಧ್ಯತೆ ಇದೆ. ಅಭಿವೃದ್ಧಿ ಬಹಳಷ್ಟು ಆಗಿದೆ. ಆದರೆ ಬಹುತೇಕ ವರ್ಗಗಳು ಒಂದಿಷ್ಟು ಚೇತರಿಸಿಕೊಳ್ಳುತ್ತಿದೆ. ಆದರೆ ಏನೂ ಆಗಿಲ್ಲ ಎಂದು ಬೊಬ್ಬೆ ಹಾಕುವುದು ಸರಿಯಲ್ಲ.
ದೇಶದಲ್ಲೇ ಅತ್ಯಂತ ಹಿಂದುಳಿದಿದ್ದ ಕೊಳಚೆ ಕೊಂಪೆ ಪಶ್ಚಿಮ ಬಂಗಾಳದಲ್ಲಿ ಕಿತ್ತು ತಿನ್ನುವಂತಹ ಬಡತನದ ಆಗರವಾಗಿತ್ತು. ನಕ್ಸಲ್‌ಬಾರಿ ಎಂಬಲ್ಲಿ ಮೊಟ್ಟ ಮೊದಲು ಹತ್ತೊಂಬತ್ತರ ಶತಮಾನದ ಅಂತ್ಯ ಭಾಗದಲ್ಲಿ ನಕ್ಸಲ್ ಸಂಘಟನೆ ಹುಟ್ಟಿದ್ದು. ನಿವೇಶನ ಹಕ್ಕಿಗೆ, ಮೂಲಭೂತ ಸವಲತ್ತಿಗೆ ಕುಟುಂಬಗಳು ಒಗ್ಗೂಡಿ ಸ್ಥಳೀಯಾಡಳಿತದ ವಿರುದ್ಧ ಹೋರಾಡಿ ಕೊಂಚ ಯಶಸ್ಸನ್ನು ಕಂಡಿತು. ಆದರೆ ಇತ್ತೀಚಿನ ದಶಕಗಳಲ್ಲಿ ಅದು ಹೇಗೋ ಮಹಾರಾಷ್ಟ್ರ, ಮಧ್ಯಪ್ರದೇಶ, ದಕ್ಷಿಣ ರಾಜ್ಯಗಳನ್ನು ನುಸುಳಿಕೊಂಡಿದ್ದು ಅದು ನಡೆಸುವ ಅವಾಂತರಗಳು ದಿನಾ ಮಾಧ್ಯಮದಲ್ಲಿ ಕಂಡು ಬರುತ್ತಿದೆ. ಗ್ರಾಮಾಂತರ ಉದ್ದಾರ ಮತ್ತು ರಾಷ್ಟ್ರದ ಪ್ರಗತಿ ಮೊದಲು ಅವರು ಆಡಳಿತದ ಮುಂದಿಟ್ಟ ಹೇಳಿಕೆಗಳು. ಅದು ನಿಜವಾಗಿದ್ದರೆ ಕೇಂದ್ರ ಸರ್ಕಾರದ ಆಹ್ವಾನವಿದ್ದರೂ ಮಾತುಕತೆಗೆ ಅದರ ನಾಯಕರು ಯಾಕೆ ಹಿಂದೇಟು ಹಾಕುತ್ತಾರೆ?
ನ್ಯಾಯಕ್ಕಾಗಿ ಹೋರಾಟ ಎಂಬುದ ನಕ್ಸಲರ ಬಳಿ ಉಳಿದಿದೆಯೇ? ಹಿಂಸಾಚಾರ ಅರಣ್ಯದೊಳಗೆ ಪಲಾಯನ ಅಮಾಯಕರ ಅಪಹರಣ, ನೆಲಬಾಂಬ್ ಇಡುವುದು, ರೈಲು ಹಳಿ ತಪ್ಪಿಸುವುದು, ಸೇತುವೆಗೆ ಕಿಚ್ಚಿಡುವುದು, ಪ್ರಾಣ ಬಲಿ ತೆಗೆಯುದು. ಇದೆಲ್ಲಾ ಹೋರಾಟವಲ್ಲ ಸಮಾಜ ದ್ರೋಹವೇ ಆಗಿದೆ. ಗುಪ್ತಾಚಾರ ಇಲಾಖೆಯವರ ಪ್ರಕಾರ ಅಂತಾರಾಷ್ಟ್ರೀಯ ಗಡಿಯಲ್ಲಿ ನಿಯಂತ್ರಣ ನಡೆಸುವ ಅದರ ರೂವಾರಿಗಳು. ಈ ರೀತಿಯ ರಾಕ್ಷಸ ಪ್ರವೃತ್ತಿಗಳನ್ನು ಬಿಡುವುದೊಳಿತು.
ಅಹಿಂಸಾ ಮೂರ್ತಿ ರಾಷ್ಟ್ರಪಿತ ಗಾಂಧಿ ಬ್ರಿಟಿಷ್ ಸೇನಾ ಪಡೆಯನ್ನೂ ಗೆದ್ದಿದ್ದರು. ಅದೇ ಮಾರ್ಗದಲ್ಲಿ ನ್ಯಾಯ ಸಮ್ಮತವಾಗಿ ಆಡಳಿತವನ್ನು ಗೆಲ್ಲುವ ವಿಶ್ವಾಸ ನಿಮ್ಮಲ್ಲಿ ಯಾಕಿಲ್ಲ? ಮೂಲಗಳು ಹೇಳುವ ಪ್ರಕಾರ ಅರಣ್ಯ ಭಾಗಗಳಿಗೆ ಗಣಿ ಭೂ ಮಾಫಿಯಾಗಳ ಬೆದರಿಕೆ ಇದೆಯಂತೆ. ಯಾಕೆಂದರೆ ವಾಸ್ತವ್ಯವಿದ್ದರೆ ವಿವಿಧ ಗ್ರಾನೈಟ್ ಅರಣ್ಯ ಸಂಪತ್ತು ಲೂಟಿಗೈಯಲು ಭೂಮಿ ವಿದೇಶೀ ಕಂಪೆನಿಗೆ ಪರಭಾರೆ ಅಸಾಧ್ಯವಂತೆ. ಅದಕ್ಕಾಗಿ ಒಕ್ಕಲೆಬ್ಬಿಸುವ ಹುನ್ನರವಿದೆಯಂತೆ. ಇದನ್ನೆಲ್ಲ ನಮ್ಮ ನಾಯಕರು ಅರ್ಥೈಸಿ ಕೊಳ್ಳುವಂತದ್ಧು. ನಮ್ಮ ರಾಜ್ಯದ ನಗರಗಳು ಅಭಿವೃದ್ಧಿಗೊಂಡರೂ ಗ್ರಾಮಾಂತರ ಹಳ್ಳಿಗಳು ಬಹಳಷ್ಟು ಹಿಂದುಳಿದೆ. ಹೋರಾಟಕ್ಕೆ ಪ್ರಗತಿಪರ ಸಂಘಟನೆಗಳು ಇರುವಾಗ ನಕ್ಸಲರಿಗೆ ಇಲ್ಲೇನು ಕೆಲಸವಿದೆ? ನಿಮಗೆ ಸಾಮಾಜಿಕ ಕಳಕಳಿ ಇದ್ದರೆ ಗ್ರಾಮಸ್ಥರನ್ನು ಕೊಲ್ಲುವುದು ಯಾಕೆ? ಅದಕ್ಕಾಗಿ ನಿಗ್ರಹ ಪಡೆಯ ಕೂಂಬಿಂಗ್ ಮೆಚ್ಚುವಂತದ್ದೆ. ಅಭಿವೃದ್ಧಿ ಪರ ಆಡಳಿತದ ಆಹ್ವಾನವಿದ್ದು ಹಿಂಸೆ ತ್ಯಜಿಸಿ ನಕ್ಸಲರು ಮಾತುಕತೆಗೆ ಬರಬೇಕು.

ಸುಖಮಯ ದಾಂಪತ್ಯದಲ್ಲಿ ಚುಂಬನಕ್ಕೆ ವಿಶೇಷ ಮಹತ್ವವಿದೆ

Posted by JAYAKIRANA Kirana on | 0 comments | Leave a comment...

ಪ್ರತಿಯೊಬ್ಬ ಗಂಡು-ಹೆಣ್ಣಿನ ಮನಸ್ಸಿನಲ್ಲೂ ಸೆಕ್ಸ್ ಬಗ್ಗೆ ನಾನಾ ರೀತಿಯ ಭಯ, ಆತಂಕಗಳು ಇರುವುದು ಸಹಜವೇ ಆಗಿದೆ. ಸಂತಾನೋತ್ಪತ್ತಿಗಾಗಿ ಪ್ರಕೃತಿಯೇ ರೂಪಿಸಿದ ನಿಯಮವಾಗಿದ್ದರೂ ಸೆಕ್ಸ್ ಕ್ರಿಯೆಯಲ್ಲಿ ಪರಿಪೂರ್ಣ ಆನಂದವನ್ನು ಪಡೆಯಲು ಗಂಡು-ಹೆಣ್ಣು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ್ದು ಅವಶ್ಯ. ಪ್ರಥಮ ಬಾರಿ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವಾಗ ವಿಫಲರಾಗುವವರು ಮುಂದೆ ಸೆಕ್ಸ್ ಬಗ್ಗೆಯೇ ನಿರಾಸಕ್ತಿ ತಾಳುವವರೂ ಇದ್ದಾರೆ. ಆದರೆ ಸೆಕ್ಸ್ ಎನ್ನುವುದು ಒಂದು ಆಟವಿದ್ದಂತೆ. ಇದರಲ್ಲಿ ಗೆದ್ದಷ್ಟೇ ಸುಖ ಸೋಲುವುದರಲ್ಲೇ ಇರುತ್ತದೆ ಎನ್ನುತ್ತಾರೆ ಪಂಡಿತರು. ಇದನ್ನು ಯಾವ ರೀತಿ, ಹೇಗೆ ಆಡಬೇಕು, ಮತ್ತು ಅದರಿಂದ ಹೇಗೆ ಆನಂದವನ್ನು ಪಡೆಯಬೇಕು ಎನ್ನುವುದನ್ನು ಗಂಡು-ಹೆಣ್ಣು ಜತೆಯಾಗಿ ನಿರ್ಧರಿಸಬೇಕು. ಇಬ್ಬರ ನಡುವೆ ಒಮ್ಮತದ ಅಭಿಪ್ರಾಯವಿರದೇ ಇದ್ದರೆ ಸೆಕ್ಸ್ ಪರಿಪೂರ್ಣ ಎಂದೆನಿಸುವುದಿಲ್ಲ. ವಾತ್ಸಾಯನನ ಕಾಮಸೂತ್ರದಲ್ಲಿ ಕಾಮ ಎನ್ನುವುದನ್ನು ‘ಕಲೆ ಎಂತಲೂ ವಿವರಿಸಿದ್ದಾನೆ. ಸೆಕ್ಸ್ ಅಂದರೆ ಕೆಲವು ಮಂದಿ ದಂಪತಿ ಬರೇ ಸಂಭೋಗ ಕ್ರಿಯೆ ಎಂದು ತಿಳಿದಿದ್ದಾರೆ. ಇದು ತಪ್ಪೆನ್ನುತ್ತಾನೆ ವಾತ್ಸಾಯನ. ಯಾಕೆಂದರೆ ಸೆಕ್ಸ್‌ನಲ್ಲಿ ಕೊನೆಯ ಅಂಗಾವಾಗಿರುವ ಸಂಭೋಗ ಕ್ರಿಯೆಗೂ ಮುನ್ನ ಸರಸ-ಸಲ್ಲಾಪದಲ್ಲಿ ಹೆಚ್ಚು ಹೊತ್ತು ಕಳೆದರೆ ದಾಂಪತ್ಯ ಸುಖ ಮಧುರಾನುಭೂತಿ ನೀಡುತ್ತದೆ ಎಂದು ವಿವರಿಸಲಾಗಿದೆ. ಚುಂಬನ ಎನ್ನುವುದು ಸೆಕ್ಸ್‌ನ ಪ್ರಾರಂಭದ ಹಂತ. ಇದರಿಂದ ಗಂಡು-ಹೆಣ್ಣಿನ ನಡುವಿನ ಭಾವನೆಗಳು ವ್ಯಕ್ತವಾಗುತ್ತವೆ. ಕೋಮಲತೆ, ಮಾಧುರ್ಯ, ಪ್ರೇಮ, ಅಪೇಕ್ಷೆ, ಆಸಕ್ತಿ, ಉದ್ರೇಕ, ಕಾಮೋದ್ರೇಕ ಹಾಗೂ ಅರ್ಪಣಾಭಾವವನ್ನು ದೀರ್ಘವಾದ ಚುಂಬನ ಒಳಗೊಂಡಿರುತ್ತದೆ ಎನ್ನಲಾಗಿದೆ.
ಲೈಂಗಿಕ ಕ್ರಿಯೆಯಲ್ಲಿ ಪ್ರಧಾನ ಭಾಗವಾಗಿರುವ ಚುಂಬನವನ್ನು ದಂಪತಿ ಆನಂದಿಸಿ ಅನುಭವಿಸಬೇಕು. ಪರಸ್ಪರ ತುಟಿಗೆ ತುಟಿ ಬೆಸೆದು ಕೊಟ್ಟುಕೊಳ್ಳುವ ಚುಂಬನ ದಂಪತಿಯಲ್ಲಿ ಹೊಸ ಉತ್ಸಾಹವನ್ನು ಉಂಟುಮಾಡುತ್ತದೆ. ಚುಂಬನ ಎಂದರೆ ಕೇವಲ ತುಟಿ, ಗಲ್ಲ, ಕೆನ್ನೆಯ ಭಾಗಕ್ಕೆ ಮಾತ್ರ ಎಂದು ತಿಳಿಯುವವರೂ ಇದ್ದಾರೆ. ಆದರೆ ಚುಂಬಿಸುವ ಪ್ರದೇಶಗಳು ಸ್ತ್ರೀ ಅಥವಾ ಪುರುಷನ ದೇಹದಲ್ಲಿ ಇನ್ನೂ ಹಲವಾರು ಇವೆ. ಇದನ್ನು ದಂಪತಿ ಅರಿತುಕೊಳ್ಳಬೇಕು ಎಂದು ವಾತ್ಸಾಯನ ತಿಳಿಸಿದೆ. ಹಣೆ, ಮುಂಗುರುಳು, ಕೆನ್ನೆ, ಕಣ್ಣು, ಸ್ತನ, ಎದೆ, ಸ್ತನದ ತೊಟ್ಟು, ತುಟಿ, ನಾಲಗೆ, ತೋಳು, ಕಂಕುಳ, ಹೊಕ್ಕಳು, ತೊಡೆ, ಸೊಂಟ ಮಾತ್ರವಲ್ಲದೆ ಸ್ತ್ರೀ-ಪುರುಷನ ಜನನಾಂಗದ ಭಾಗವನ್ನು ಚುಂಬನಕ್ಕೆ ಅತೀಸೂಕ್ತ ಎಂದು ವರ್ಗೀಕರಿಸಲಾಗಿದೆ. ದಂಪತಿ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವ ಮುನ್ನ ಸಾಧ್ಯವಾದಷ್ಟು ಸಮಯವನ್ನು ಇದಕ್ಕಾಗಿ ಮೀಸಲಿಡಬೇಕು. ಯಾಕೆಂದರೆ ಪುರುಷನಲ್ಲಿ ಲೈಂಗಿಕ ಉದ್ರೇಕ, ಸ್ಖಲನ ಎರಡೂ ಸ್ತ್ರೀಗಿಂತ ಬೇಗನೆ ಆಗುತ್ತದೆ. ಪುರುಷನು ಅವಸರದಲ್ಲಿ ಎಲ್ಲವನ್ನೂ ಮಾಡಿ ಮುಗಿಸಿದರೂ ಸ್ತ್ರೀ ಸುಖ ಪಡೆಯದೆ ಹಾಗೆ ಇರಲೂಬಹುದು. ಈ ಸಮಯವನ್ನು ದಂಪತಿ ಅರಿತಾಗ ಪರಿಪೂರ್ಣ ಲೈಂಗಿಕಾನಂದ ಪಡೆಯಬಹುದು ಎನ್ನುತ್ತಾರೆ ತಜ್ಞರು. ಆದ್ದರಿಂದ ಸಂಭೋಗ ಕ್ರಿಯೆಗೂ ಮುನ್ನ ಹೆಣ್ಣನ್ನು ತಯಾರು ಮಾಡಿ ಆಕೆಯನ್ನು ಸುಖದ ತುತ್ತತುದಿಗೆ ಕೊಂಡೊಯ್ಯಬೇಕಾದ ಜಾಣ್ಮೆ ಪುರುಷನಲ್ಲಿರಬೇಕು. ಆಕೆ ಅಪ್ಪಣೆ ಕೊಟ್ಟ ಬಳಿಕವಷ್ಟೇ ಮುಂದಿನ ಹಂತಕ್ಕೆ ಹೋಗಬೇಕು. ಇದರಿಂದ ಪರಿಪೂರ್ಣ ಭಾವಪ್ರಾಪ್ತಿ ಸಾಧ್ಯವಾಗುತ್ತದೆ. ಸೆಕ್ಸ್ ಸುಖವನ್ನು ಹೇಗೆ ಬೇಕಾದರೂ ಅನುಭವಿಸಬಹುದು. ಇದರಲ್ಲಿ ನಾಚಿಕೆ, ಸಂಕೋಚ ಇರಕೂಡದು. ಇಷ್ಟೇ ಅಲ್ಲದೆ ದಂಪತಿ ಸೆಕ್ಸ್ ವೇಳೆ ಒಂದೇ ಬಗೆಯ ಆಸನಕ್ಕೆ ಒತ್ತುಕೊಡದೆ ಪ್ರತಿನಿತ್ಯ ಹೊಸ ಭಂಗಿಗಳನ್ನು ಅನ್ವೇಷಿಸಬೇಕು ಮತ್ತು ಅದನ್ನು ಪರಸ್ಪರ ಒಮ್ಮತದ ಅಭಿಪ್ರಾಯದಿಂದ ಅನುಸರಿಸಿದರೆ ದಾಂಪತ್ಯದಲ್ಲಿನ ಆನಂದ ನೂರ್ಮಡಿಕೊಳ್ಳುವುರಲ್ಲಿ ಯಾವುದೇ ಸಂದೇಹವಿರದು. ಸೆಕ್ಸ್‌ಗೆ ಗುರು ಬೇಕಾಗಿಲ್ಲ, ಗಂಡು-ಹೆಣ್ಣು ಏಕಾಂತದಲ್ಲಿ ಪರಸ್ಪರ ತಮ್ಮ ಬೇಕು, ಬೇಡಗಳ ಕಡೆ ಗಮನಹರಿಸಿ ಮುಂದುವರಿಯುತ್ತಾ ಹೋದಂತೆ ತನ್ನಿಂತಾನೇ ತಿಳಿಯುತ್ತದೆ. ಹೀಗಾಗಿ ಅನುಭವದ ಕೊರತೆ ಎಂಬ ಕಾರಣಕ್ಕೆ ಲೈಂಗಿಕ ಸುಖದಿಂದ ವಂಚಿತರಾಗುವುದು ಸರಿಯಲ್ಲ.

28-4-2012

Posted by JAYAKIRANA Kirana on | 0 comments | Leave a comment...

ಮೇಷ : ಉದ್ಯೋಗದಲ್ಲಿ ಬದಲಾವಣೆಯಾಗುತ್ತದೆ.
ವೃಷಭ : ಪತಿ ಪತ್ನಿಯರಲ್ಲಿ ವಿರಸ ಇದೆ.
ಮಿಥುನ : ಅಧಿಕಾರಿ ವರ್ಗದವರಿಂದ ನೆರವು ಇರುತ್ತದೆ.
ಕರ್ಕಾಟಕ : ವಿರೋಧಿಗಳಿಂದ ತೊಂದರೆ ಇರುತ್ತದೆ.
ಸಿಂಹ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ಕನ್ಯಾ: ಉದ್ಯೋಗದಲ್ಲಿ ನೆಮ್ಮದಿ ಇರುತ್ತದೆ.
ತುಲಾ : ನಿರ್ದಿಷ್ಟ ಸಮಯದಲ್ಲಿ ಕೆಲಸ ಮಾಡಿ ಮುಗಿಸುತ್ತೀರಿ.
ವೃಶ್ಚಿಕ : ಮನಸ್ಸಿಗೆ ತುಂಬಾ ಭಯ ಇರುತ್ತದೆ.
ಧನು: ಕೆಲಸ ಕಾರ್ಯಗಳಿಗೆ ಅಡ್ಡಿ, ಆತಂಕ ಇರುತ್ತದೆ.
ಮಕರ : ಕಚೇರಿ ಕೆಲಸಗಳಲ್ಲಿ ಕಿರಿಕಿರಿ ಇರುತ್ತದೆ.
ಕುಂಭ : ಮನೆಯಲ್ಲಿ ಶುಭ ಕೆಲಸದ ಬಗ್ಗೆ ಚಿಂತೆ ಇರುತ್ತದೆ.
ಮೀನ : ಕೆಲಸ ಕಾರ್ಯಗಳು ಅರ್ಧದಲ್ಲಿ ನಿಲ್ಲುತ್ತದೆ.

28-4-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ಹೋಂ ಪ್ರೊಡಕ್ಟ್‌ಗೆ ಯುವಕ - ಯುವತಿಯರು ಬೇಕು ೯೦೬೦೯೩೨೩೫೧.
ಸ್ಟೇಟ್‌ಬ್ಯಾಂಕ್ : ಕೆಲಸಕ್ಕೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಪ್ರೆಸ್‌ಗೆ ಬೈಂಡಿಂಗ್ ಕೆಲಸಕ್ಕೆ ಜನ ಬೇಕು ೨೨೧೧೦೫೦.
ಮಂಗಳೂರು : ಎಲೆಕ್ಟ್ರಾನಿಕ್ಸ್ ಅಂಗಡಿಗೆ ಯುವಕರು ಬೇಕು ೪೨೭೪೦೧೦.
ಮಂಗಳೂರು : ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೦೦೪೩೪೯೪೮.
ಕಂಕನಾಡಿ : ಬಟ್ಟೆ ಅಂಗಡಿಗೆ ಸೇಲ್ಸ್‌ಗೆ ಜನ ಬೇಕು ೯೯೪೫೯೯೬೭೮೭.
ಬಿಕರ್ನಕಟ್ಟೆ ಹೊಟೇಲಿಗೆ ತಿಂಡಿ ಮಾಡುವವರು ಬೇಕು ೯೪೪೯೯೦೩೩೨೩.
ಮಂಗಳೂರು : ಅಫೀಸಿಗೆ ಕಂಪ್ಯೂಟರ್ ತಿಳಿದ ಲೇಡಿ ಸ್ಟಾಫ್ ಬೇಕು ೯೪೮೦೩೬೨೩೦೨.
ಮಂಗಳೂರು : ಬೇಕರಿಯಲ್ಲಿ ತಿಂಡಿ ತಿನಿಸು ಮಾಡಲು ಜನ ಬೇಕು ೯೯೦೧೩೫೦೪೩೧.
ಮಂಗಳೂರು : ಹೊಟೇಲ್‌ಗೆ ಅಡುಗೆ, ತಿಂಡಿ ಮಾಡುವವರು, ವೇಟರ್, ಕ್ಲೀನರ್, ಕೌಂಟರ್‌ಗೆ ಜನ ಬೇಕು ೯೮೮೦೯೦೫೨೫೩.
ಕಂಕನಾಡಿ : ಕಚೇರಿ ಕೆಲಸಕ್ಕೆ ಹಿಂದಿ, ಇಂಗ್ಲಿಷ್ ಮಾತಾಡಲು ಗೊತ್ತಿರುವ ಲೇಡಿ ಬೇಕು ೯೫೩೮೫೫೩೨೧೧.
ಮಂಗಳೂರು : ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಬೇಕು. ೯೬೮೬೭೧೬೭೦೧.
ಮಂಗಳೂರು : ಇಲೆಕ್ಟ್ರಿಕಲ್ಸ್‌ಗೆ ಲೈಟಿಂಗ್‌ಗೆ ಜನ ಮತ್ತು ಹೆಲ್ಪರ್ ಬೇಕು ೯೮೪೫೦೯೮೨೫೪.
ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೮೪೪೫೭೩೬೧೫.
ಮಂಗಳೂರು : ಮರೋಳಿಯಲ್ಲಿ ಲೈನ್ ಸೇಲ್‌ಗೆ ಚಾಲಕ ಬೇಕು ೯೩೪೧೭೫೮೫೦೦.
ಕುಲಶೇಖರ: ಕ್ರೈಸ್ತರ ಮನೆಗೆ ಕೆಲಸಕ್ಕೆ ಜನ ಯುವತಿ ಬೇಕು ೮೪೫೩೯೭೨೯೯೪.
ಮಂಗಳೂರು : ಮನೆಕೆಲಸಕ್ಕೆ ಜನ ಬೇಕು ೯೪೪೯೭೨೩೧೩೩.
ಕಾವೂರು : ಸಿವಿಲ್ ಕಂಟ್ರಾಕ್ಟರ್‌ಗೆ ಸೈಟ್ ಸೂಪರ್‌ವೈಸರ್ ಬೇಕು ೯೪೮೦೭೬೧೬೮೬.
ಹೊಟೇಲ್‌ಗೆ ಅಡುಗೆ ಮಾಡುವವರು ಬೇಕಾಗಿದ್ದಾರೆ: ೯೮೮೦೩೭೮೮೦೬
ಮಂಗಳೂರು: ಲೇಡಿಸ್ ಟೈಲರ್ ಶಾಪ್‌ಗೆ ಲೇಡಿಸ್ ಟೈಲರ್ ಬೇಕು. ೯೫೯೧೦೪೫೮೮೧
ಮೂಡುಬಿದ್ರೆ: ಕೊರಿಯರ್ ಸಂಸ್ಥೆಗೆ ಜನ ಬೇಕು ೯೯೮೬೪೨೯೩೪೭.
ಮಾಲೆಮಾರ್: ಹೋಂ ಪ್ರೊಡಕ್ಟ್‌ಗೆ ಲೇಡೀಸ್ ಬೇಕು ೯೪೮೦೧೧೭೮೫೪.
ಮಂಗಳೂರು: ಉರ್ವಾಸ್ಟೋರ್ ವರ್ಕ್ ಶಾಪ್‌ಗೆ ವೆಲ್ಟರ್ ಬೇಕು ೯೨೪೨೪೭೪೧೦೦.
ಮಂಗಳೂರು: ಬ್ಯೂಟೀಷಿಯನ್ ಕೆಲಸಕ್ಕೆ ಜನ ಬೇಕು ೯೪೪೯೫೯೦೯೦೦.
ಮಂಗಳೂರು: ಟೈಲರ್ ಕೆಲಸಕ್ಕೆ ಜನ ಬೇಕು ೯೮೮೦೩೧೪೧೦೫.
ಮಂಗಳೂರು: ಸ್ಕ್ರೀನ್‌ಪ್ರಿಂಟರ್ ಬೇಕು ೯೦೧೯೭೦೯೯೯೩.
ತೊಕ್ಕೊಟ್ಟು: ಕಚೇರಿಗೆ ಕಂಪ್ಯೂಟ್ ಗೊತ್ತಿರುವ ಯುವತಿ ಬೇಕು ೭೨೫೯೩೯೪೭೮೧.
ಕಾರ್ಕಳ: ರೆಸ್ಟೋರೆಂಟ್‌ಗೆ ಸಪ್ಲಾಯರ್, ಕಿಚನ್‌ಗೆ, ಆಲ್‌ರೌಂಡರ್ ಬೇಕು. ೯೯೦೧೮೨೮೩೯೩.

ಕೆಥೊಲಿಕ್ ಕ್ರೈಸ್ತರಿಂದ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...







ಏಸುವಿನ ಹೆಸರಲ್ಲಿ ಅಮಾಯಕರಿಗೆ ವಂಚನೆ ಆರೋಪ
ಮಂಗಳೂರು: ಕ್ರೈಸ್ತ ವ್ಯಕ್ತಿ ಯೊಬ್ಬರು ಏಸುಕ್ರಿಸ್ತನ ಸುವಾರ್ತೆ ನೀಡುವ ಹೆಸರಲ್ಲಿ ಮುಗ್ದ ಜನ ರಿಂದ ಹಣ ಒಡವೆಗಳನ್ನು ಪಡೆದು ಮತಾಂತರ ಮಾಡುವ ಮೂಲಕ ಕ್ರೈಸ್ತರ ಹೆಸರಿಗೆ ಕಳಂಕ ತರುತ್ತಿ ದ್ದಾರೆ ಎಂದು ಆರೋಪಿಸಿ ನಿನ್ನೆ ಕೆಥೋಲಿಕ್ ಕ್ರೈಸ್ತರು ಪ್ರಾರ್ಥನೆ ನಡೆಯುತ್ತಿದ್ದ ಸಭಾಂಗಣದ ಬಳಿ ಪ್ರತಿಭಟನೆ ನಡೆಸಿದರು.
ಮೂಲತಃ ತಮಿಳುನಾಡಿನ ಆಂಡ್ರೂ ರಿಚರ್ಡ್ ಎನ್ನುವ ವ್ಯಕ್ತಿ ಗ್ರೇಸ್ ಮಿನಿಸ್ಟ್ರಿ ಎನ್ನುವ ಹೆಸರಲ್ಲಿ ಕಳೆದ ಮೂರು ವರ್ಷಗಳಿಂದ ವಾಸ್‌ಲೇನ್‌ನಲ್ಲಿರುವ ತಮ್ಮ ಮನೆ ಯಲ್ಲಿ ಪ್ರಾರ್ಥನಾ ಕೂಟ ನಡೆಸುತ್ತಾ ಬಂದಿದ್ದರು. ಕಳೆದ ವರ್ಷ ಕಂಕನಾಡಿ ಠಾಣಾ ವ್ಯಾಪ್ತಿಯ ಕಪಿತಾನಿತಾ ಯೋದಲ್ಲಿರುವ ಸಮೃದ್ಧಿ ಲಾಡ್ಜ್‌ನ ನಾಲ್ಕನೇ ಮಹಡಿಯ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಇಲ್ಲಿ ಪ್ರತೀ ಶುಕ್ರವಾರ ಬೆಳಗ್ಗೆ ೧೦ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಏಸುವಿನ ಹೆಸರಲ್ಲಿ ಪ್ರಾರ್ಥನೆ ನಡೆಸ ಲಾಗುತ್ತಿದ್ದು ಇದರಲ್ಲಿ ೪೦೦ಕ್ಕೂ ಅಧಿಕ ಜನ ಭಾಗವಹಿಸುತ್ತಿದ್ದು ಇವರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕವಾ ಗಿದೆ.
ನಿನ್ನೆ ಮಧ್ಯಾಹ್ನ ೧೨ ಗಂಟೆಯ ವೇಳೆಗೆ ೪೦ ಮಂದಿ ಕೆಥೊಲಿಕ್ ಕ್ರೈಸ್ತರು ರಿಚರ್ಡ್ ಪ್ರಾರ್ಥನೆ ನಡೆಸು ತ್ತಿದ್ದ ಸಭಾಂಗಣದ ಎದುರು ಧಾವಿಸಿ ಧಿಕ್ಕಾರ ಕೂಗಿದರಲ್ಲದೆ ಅವರನ್ನು ಮಂಗಳೂರಿನಿಂದ ಗಡಿಪಾರು ಮಾಡ ಬೇಕೆಂದು ಆಗ್ರಹಿಸಿದರು. ರಿಚರ್ಡ್ ಮುಗ್ದ ಜನರನ್ನು ಮೋಸ ಗೊಳಿಸು ತ್ತಿದ್ದಾರೆ ಎಂದು ಆರೋಪಿ ಸಿದ ಪ್ರತಿಭಟನಾಕಾರರು ಧಿಕ್ಕಾರ ಮುಂದುವರಿಸು ತ್ತಿದ್ದಂತೆಯೇ ಪ್ರಾರ್ಥನೆಯಲ್ಲಿ ನಿರತರಾಗಿದ್ದ ನೂರಕ್ಕೂ ಅಧಿಕ ಮಹಿಳೆಯರು ಪ್ರತಿಭಟನಾಕಾರರತ್ತ ಧಾವಿಸಿ ಪ್ರಾರ್ಥನೆಯಿಂದ ಮನಸ್ಸಿಗೆ ಶಾಂತಿ, ಸಮಾಧಾನ ಸಿಗುವ ಕಾರಣ ಸ್ವಇಚ್ಛೆಯಿಂದ ಬರುತ್ತಿದ್ದು ಯಾವುದೇ ಕಾರಣಕ್ಕೂ ತಡೆಯೊಡ್ಡಬಾರದು ಎಂದು ಪೊಲೀಸರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಪ್ರತಿಭಟನಾಕಾರರು ಹಾಗೂ ಪ್ರಾರ್ಥನೆ ನಿರತರ ನಡುವೆ ಮಾತಿನ ಚಕಮಕಿಯೂ ನಡೆದಿದ್ದು, ಕಂಕನಾಡಿ ಇನ್ಸ್‌ಪೆಕ್ಟರ್ ರವೀಶ್ ನಾಯಕ್ ಮತ್ತು ಸಬ್‌ಇನ್ಸ್‌ಪೆಕ್ಟರ್ ಮುನಿಸ್ವಾಮಿ ಅವರು ಮಧ್ಯೆ ಪ್ರವೇಶಿಸಿ ಸಮಾ ಧಾನಪಡಿಸಿದರು.
ಗ್ರೇಸ್ ಮಿನಿಸ್ಟ್ರಿಯಲ್ಲಿ ಮುಸ್ಲಿಂ, ಹಿಂದೂ ಮಹಿಳೆಯರು!
ನಿನ್ನೆ ಕೆಥೋಲಿಕ್ ಕ್ರೈಸ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪತ್ರಕರ್ತರು ಪ್ರಾರ್ಥನೆ ನಡೆಯುತ್ತಿದ್ದ ಸಭಾಂಗಣಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭ ಸಭೆಯಲ್ಲಿ ೩೦೦ರಿಂದ ೪೦೦ರಷ್ಟು ಜನರಿದ್ದ ಇದರಲ್ಲಿ ಮಹಿಳೆಯರೇ ಅಧಿಕವಾಗಿದ್ದರು. ಅವರ ಪೈಕಿ ಓರ್ವ ಬಡ ಮುಸ್ಲಿಂ ಮಹಿಳೆ ಹಾಗೂ ಆರೇಳು ಹಿಂದೂ ಹೆಂಗಸರೂ ಇದ್ದರು. ಈ ಬಗ್ಗೆ ರಿಚಾರ್ಡ್ ಅವರಲ್ಲಿ ಪ್ರಶ್ನಿಸಿದಾಗ ಭಿನ್ನಕೋಮಿನ ಮಹಿಳೆಯರು ನಿನ್ನೆ ಪ್ರಥಮ ಬಾರಿಗೆ ಬಂದಿದ್ದಾರೆ. ಅವರು ಇತರರ ಜೊತೆ ಸ್ವಇಚ್ಛೆಯಿಂದ ಬಂದಿದ್ದಾರೆಯೇ ಹೊರತು ಬಲ ವಂತದಿಂದ ಆಗಲೀ, ಅಮಿಷ ನೀಡಿಯಾಗಲೀ ಕರೆ ತಂದಿಲ್ಲ ಎಂದು ಸಬೂಬು ನೀಡಿದರು.
ಸಂಸ್ಥೆ ತೊರೆದವರಿಂದ ಷಡ್ಯಂತ್ರ
ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಆಂಡ್ರೂ ರಿಚರ್ಡ್, ನಮ್ಮದು ಗ್ರೇಸ್ ಮಿನಿಸ್ಟ್ರಿ ಎಂಬುದು ಕೌನ್ಸಿಲಿಂಗ್ ಸಂಸ್ಥೆಯಾಗಿದೆ. ಕಷ್ಟದಿಂದ ಬರುವ ಜನರಿಗೆ ಇಲ್ಲಿ ಸಹಾಯ ಮಾಡಲಾಗುತ್ತಿದೆ. ಮನೆಯಲ್ಲಿ ಸ್ಥಳದ ಅಭಾವವಿದ್ದ ಕಾರಣ ಸಭಾಂಗಣದಲ್ಲಿ ಕೌನ್ಸಿಲಿಂಗ್ ಮಾಡಲಾಗುತ್ತಿದ್ದು ೧೨ ಸಾವಿರ ಬಾಡಿಗೆ ಹಾಗೂ ಇತರ ಖರ್ಚಿಗಾಗಿ ತಿಂಗಳಿಗೆ ೧೭ ಸಾವಿರ ಹಣ ಬೇಕಾಗುತ್ತದೆ. ಇದನ್ನು ಅರಿತ ಭಕ್ತರು ಸ್ವಂತ ಇಚ್ಛೆಯಿಂದ ದೇಣಿಗೆ ನೀಡುತ್ತಿದ್ದಾರೆಯೇ ಹೊರತು ನಾವಾಗಿ ಹಣ ಸಂಗ್ರಹಿಸುವುದಿಲ್ಲ ಎಂದು ಆರೋಪಗಳನ್ನು ಅಲ್ಲಗಳೆದಿದ್ದಾರೆ. ಇನ್ನು ಪ್ರತೀ ಶುಕ್ರವಾರ ೧೦೦ಜನ ಬಡವರಿಗೆ ಸಂಸ್ಥೆಯ ವತಿಯಿಂದ ಅನ್ನದಾನ ಹಾಗೂ ೨೫೦ರೂ. ನೀಡಲಾಗುತ್ತಿದೆ. ಈ ಕಾರ್ಯಕ್ಕಾಗಿ ನಮ್ಮಲ್ಲಿಗೆ ಬರುವ ಭಕ್ತರಿಂದ ೨,೪೦೦ರೂ. ಪಡೆಯಲಾಗುತ್ತದೆ . ನಮ್ಮಲ್ಲಿದ್ದ ಏಳು ಮಹಿಳೆಯರು ಬಿಟ್ಟು ಹೋಗಿದ್ದು ಈಗ ಸಂಸ್ಥೆಗೆ ಕಳಂಕ ತರುವ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಪೈಕಿ ಹೇಝಿಲ್ ಎಂಬವರು ಸಂಸ್ಥೆಯ ರೊನಾಲ್ಡ್ ಎಂಬವರಿಗೆ ಆರು ಲಕ್ಷ ನೀಡುವಂತೆ ಮೆಸೇಜ್ ಕಳುಹಿಸಿದ್ದಾರೆ ಎಂದು ರಿಚರ್ಡ್ ಆರೋಪಿಸಿದ್ದಾರೆ. ಅಲ್ಲದೆ ಪ್ರಾರ್ಥನೆಗಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ಪಡೆಯಲಾಗಿದ್ದು, ಪೊಲೀಸ್ ಇಲಾಖೆಯ ಅನುಮತಿ ಅಗತ್ಯ ಬಿದ್ದಿರಲಿಲ್ಲ ಎಂದಿದ್ದಾರೆ. ಇದೇ ವೇಳೆ ಅವರ ಅನುಯಾಯಿಯೊಬ್ಬರು ರಿಚರ್ಡ್ ಅವರ ಬಳಿ ಬಂದರೆ ಎಲ್ಲಾ ಬೇಸರಗಳು ದೂರವಾಗುತ್ತದೆ. ಆ ಕಾರಣದಂದ ನಾವಿಲ್ಲಿಗೆ ಬರುತ್ತಿದ್ದು ಅವರು ಯಾವುದೇ ಶುಲ್ಕ ಪಡೆಯುತ್ತಿಲ್ಲ. ನಾವಾಗಿಯೇ ನೀಡುತ್ತೇವೆ ಎಂದು ರಿಚರ್ಡ್ ಅವರಿಗೆ ಬೆಂಬಲ ನೀಡಿದ್ದಾರೆ.
ಅನ್ನದಾನದ ಹೆಸರಲ್ಲಿ ಕೋಟ್ಯಂತರ ಗಳಿಕೆ
ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಗ್ರೇಸಿ, ರಿಚರ್ಡ್ ಅವರು ತನಗೆ ಏಸುಕ್ರಿಸ್ತನು ಕನಸಲ್ಲಿ ಬಂದು ಮಂಗಳೂರಿನ ಜನರು ಕಷ್ಟದಲ್ಲಿದ್ದು ಅವರಿಗೆ ಸಹಾಯ ಮಾಡುವಂತೆ ತಿಳಿಸಿದ ಕಾರಣ ಇಲ್ಲಿಗೆ ಬಂದಿದ್ದು ಎಲ್ಲಾ ಸಂಕಷ್ಟಗಳನ್ನು ದೂರ ಮಾಡುತ್ತೇನೆ ಎಂದು ಹೇಳಿ ಮಾಟ, ಮಂತ್ರ ಮಾಡಿ ಬಡವರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ಬಳಿಕ ಜನರಿಗೆ ಸುಳ್ಳು ಮಾತಿನ ಮೂಲಕ ಹೆದರಿಸಿ ಕಷ್ಟ ದೂರವಾಗಬೇಕಾದರೆ ಏಳು ಶುಕ್ರವಾರ ಅನ್ನದಾನ ಮಾಡಬೇಕೆಂದು ಹೇಳಿ ಒಂದು ದಿವಸಕ್ಕೆ ೨,೪೦೦ರೂ. ವಸೂಲಿ ಮಾಡುತ್ತಾರೆ ಎಂದು ಆರೋಪಿಸಿ ದರು. ಇದೇ ವೇಳೆ ಮಾತನಾಡಿದ ಅನಿತಾ, ರಿಚರ್ಡ್ ಅವರು ವಾಮಂಜೂರಿನಲ್ಲಿ ಚರ್ಚ್ ಕಟ್ಟುವುದಾಗಿ ನಂಬಿಸಿ ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದಾರೆ. ಅವರ ಮಾತನ್ನು ನಂಬಿದ ಮಹಿಳೆಯರು ತಮ್ಮ ಕರಿಮಣಿ ಯನ್ನೂ ತೆಗೆದುಕೊಟ್ಟಿದ್ದಾರೆ. ಆ ಹಣದಿಂದ ಅವರು ಮೇರ್ಲಪದವಿನಲ್ಲಿ ಕೋಟಿ ಬೆಲೆಬಾಳುವ ಆಸ್ತಿ ಮಾಡಿದ್ದು, ಪಾಂಡೇಶ್ವರದಲ್ಲಿ ೫೦ ಲಕ್ಷದ ಫ್ಲ್ಯಾಟ್ ಖರೀದಿಸಿದ್ದಾರೆ. ನಾನು ಹಾಗೂ ಇತರ ಏಳು ಮಹಿಳೆಯರು ಅವರ ಸಂಸ್ಥೆಯಲ್ಲಿ ಎರಡು ವರ್ಷ ಕೆಲಸ ಮಾಡಿದ್ದು ಅವರ ಮುಖವಾಡ ತಿಳಿದು ಹೊರಬಂದಿದ್ದೇವೆ. ಈಗ ನಮ್ಮ ಭಾವಚಿತ್ರವನ್ನು ಜನರಿಗೆ ತೋರಿಸಿ ಕೆಟ್ಟಭಾವನೆ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಂಟ್ವಾಳ ಪುರಸಭೆಗೆ ಮುತ್ತಿಗೆ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಪುರಸಭಾ ವಾರ್ಡಿನ ಬಹುತೇಕ ವಾರ್ಡುಗಳಲ್ಲಿ ಉಂಟಾದ ಕುಡಿಯುವ ನೀರಿನ ಸಮಸ್ಯೆಯನ್ನು ಮುಂದಿಟ್ಟು ಬಂಟ್ವಾಳ ಶಾಸಕ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ನಿನ್ನೆ ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದರು.
ಬಂಟ್ವಾಳ ಪುರಸಭೆಯ ಬೊಂಡಾಲ, ಬೋಳಂಗಡಿ, ಬೋಗೋಡಿ, ಕುಪ್ಪಿಲ, ಪರ್ಲಿಯಾ, ಬಾರೆಕ್ಕಾಡು ಸೇರಿದಂತೆ ಹೆಚ್ಚಿನ ವಾರ್ಡುಗಳಲ್ಲಿ ಕುಡಿಯುವ ನೀರಿಗೆ ಸಾರ್ವಜನಿಕರು ಪರದಾಟ ನಡೆಸುತ್ತಿ ದ್ದಾರೆ. ಕಚೇರಿಯ ಮುಖ್ಯಾಧಿಕಾರಿ ಸಹಿತ ಇತರ ಅಧಿಕಾರಿಗಳಿಗೆ ದೂರು ನೀಡಲಾಗಿದ್ದರೂ, ಕ್ರಮ ಜರುಗಿಸಿ ರಲಿಲ್ಲ. ಅಧ್ಯಕ್ಷ ಬಿ.ದಿನೇಶ್ ಭಂಡಾರಿ ಹಾಗೂ ಮುಖ್ಯಾಧಿಕಾರಿ ಆರ್.ವಿ.ಜತನ್ನ ಮೇಲೆ ಆರೋಪಿಸಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರು ದಿಢೀರ್ ಮುತ್ತಿಗೆ ಹಾಕಿದರು.
ನಾಗರಿಕರ ಸೇವೆಗಳ ಅತ್ಯವಶ್ಯ ಕತೆಯಲ್ಲಿ ಒಂದಾದ ಕುಡಿಯುವ ನೀರನ್ನು ಸರಬರಾಜು ಮಾಡಲು ಪುರಸಭಾಡಳಿತ ವಿಫಲವಾಗಿದೆ. ಕೆಲವು ವಾರ್ಡುಗಳಿಗೆ ಇನ್ನೂ ಕುಡಿಯುವ ನೀರಿನ ಸಂಪರ್ಕ ಒದಗಿಸಿಲ್ಲ ಎಂದು ಆರೋಪಿಸಿರುವ ಶಾಸಕ ಬಿ. ರಮಾನಾಥ ರೈ ಅವರು ಪುರಸಭೆ ಆಡಳಿತ ಜನರ ಪಾಲಿಗೆ ತನ್ನ ಅಸ್ತಿತ್ವ ವನ್ನು ಮರೆತಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಕಾರ್ಯಾಲಯಕ್ಕೆ ಭೇಟಿ ನೀಡಿದ ಮುಖಂಡರು ಹಾಗೂ ಕಾರ್ಯ ಕರ್ತರು ಮುಖ್ಯಾಧಿಕಾರಿ ಕಚೇರಿಗೆ ದಾಳಿ ನಡೆಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗಳನ್ನು ಮುಂದಿಟ್ಟು ಅಧಿಕಾರಿ ಯನ್ನು ತರಾಟೆಗೆ ತೆಗೆದರು. ಪಕ್ಷದ ಕಾರ್ಯಕರ್ತರ ಅಳಲನ್ನು ಆಲಿಸಿದ ಶಾಸಕರು ಮುಖ್ಯಾಧಿಕಾರಿ ಮೇಲೆ ಗರಂ ಆದರು. ಅಧಿಕಾರಿಗಳು ನೀರಿನ ಸಮಸ್ಯೆಗೆ ಸ್ಪಂದಿಸದಿದ್ದರೆ, ಮುಂದಿನ ಸಾಮಾನ್ಯ ಸಭೆಯನ್ನು ಬಹಿಷ್ಕರಿ ಸುವುದಾಗಿ ವಿಪಕ್ಷ sಸದಸ್ಯರು ಎಚ್ಚರಿಸಿದರು.
ನೀರೂ ಇಲ್ಲ: ರಸ್ತೆಯೂ ಇಲ್ಲ!
ಮೆಲ್ಕಾರ್, ಬೋಗೋಡಿ ಜನ ವಸತಿ ಪ್ರದೇಶದಲ್ಲಿ ಇನ್ನೂ ಕುಡಿಯುವ ನೀರಿನ ನಳ್ಳಿಗಳನ್ನು ಅಳವಡಿಸಿಲ್ಲ. ಕಳೆದ ಮೂರು-ನಾಲ್ಕು ವರ್ಷಗಳಿಂದ ಮುಖ್ಯಾಧಿಕಾರಿ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಮನವಿ ಗಳನ್ನು ಸಲ್ಲಿಸುತ್ತಿದ್ದಾರೆ. ಆದರೂ ನೀರು ಸಂಪರ್ಕವಾಗಿಲ್ಲ ಎಂದು ವಾರ್ಡಿ ನ ನಾಗರಿಕರು ಆರೋಪಿಸಿದರು. ಬಿ.ಕಸ್ಬಾ ಗ್ರಾಮದ ಹೊಳ್ಳರ ಬೈಲು-ಮಯ್ಯರ ಬೈಲು ವಸತಿ ಪ್ರದೇಶಕ್ಕೆ ಸಂರ್ಪಕ ರಸ್ತೆ ಕಲ್ಪಿಸಬೇಕೆಂದು ಆಗ್ರಹಿ ಸಿದ್ದರೂ, ಅಧಿಕಾರಿಗಳು ಯಾವುದೇ ಸ್ಪಂದನೆ ಕೊಡುತ್ತಿಲ್ಲ. ಇದಕ್ಕೆಲ್ಲಾ ರಾಜಕೀಯ ಪ್ರಭಾವವೇ ಕಾರಣ ಎಂದು ವಿಪಕ್ಷ ಸದಸ್ಯರು ಆರೋಪಿಸಿದರು. ಶಾಸಕ ಬಿ.ರಮಾನಾಥ ರೈ ಅವರೊಂದಿಗೆ ವಿಪಕ್ಷ ಸದಸ್ಯರಾದ ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶೆರೀಫ್, ರಿಯಾಝ್ ಹುಸೇನ್, ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ಮಾಣಿ ಮತ್ತಿತರರು ಹಾಜರಿದ್ದರು.

ಪುರಸಭಾಧ್ಯಕ್ಷರಿಗೆ ಕೊಲೆ ಬೆದರಿಕೆ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ನೀರಿಗಾಗಿ ನಿನ್ನೆ ಬಂಟ್ವಾಳ ಶಾಸಕರ ನೇತೃತ್ವದಲ್ಲಿ ಪುರ ಸಭೆಗೆ ಮುತ್ತಿಗೆ ಹಾಕಿ ತಂಡ ತೆರಳಿದ ಬಳಿಕ ಪ್ರಕರಣ ಮತ್ತೆ ಮುಂದು ವರಿದು ಪುರಸಭಾಧ್ಯಕ್ಷರಿಗೆ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.
ಪ್ರತಿಭಟನೆ ಸಂದರ್ಭ ಮುಖ್ಯಾ ಧಿಕಾರಿ ಜತ್ತನ್ನ ಹಾಗೂ ಶಾಸಕ ರಮಾ ನಾಥ ರೈ ನೇತೃತ್ವ ಕಾಂಗ್ರೆಸ್ ಕಾರ್ಯ ಕರ್ತರ ಗುಂಪು ನಡುವೆ ಬಿರುಸಿನ ಮಾತುಕತೆ ನಡೆದಿತ್ತು. ಕೆಲವರಂತೂ ಆಕ್ರೋಶಭರಿತವಾಗಿ ಅಧಿಕಾರಿಗೆ ಛೀಮಾರಿ ಹಾಕಲು ಮುಂದಾ ಗಿದ್ದರು. ಕಾರ್ಯಕರ್ತರ ವರ್ತನೆ ಮುಖ್ಯಾಧಿಕಾರಿ ಸಹಿತ ಇತರ ಅಧಿಕಾರಿಗಳನ್ನು ರೋಸಿ ಹೋಗು ವಂತೆ ಮಾಡಿತ್ತು. ಶಾಸಕರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಜನರ ಕುಡಿ ಯುವ ನೀರಿನ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿರತ ಕಾರ್ಯಕರ್ತರ ಗುಂಪು ಕಚೇರಿಯಿಂದ ಹೊರ ನಡೆದಿತ್ತು.
ಸಂಜೆ ಬಳಿಕ ಪ್ರಕರಣ ಮುಂದುವರಿದಿದ್ದು, ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ ಅವರ ಮೊಬೈಲ್‌ಗೆ ಕರೆಗಳು ಬಂದಿದ್ದವು. ಜನರ ಸಮಸ್ಯೆಯನ್ನು ಮುಂದಿಟ್ಟು ಅಸಭ್ಯವಾಗಿ ಮಾತನಾಡಿದ್ದಾರೆ. ಜಾತಿ ನಿಂದಿಸಲಾಗಿದೆ. ಅಲ್ಲದೇ ಕೊಲೆ ಬೆದರಿಕೆಯನ್ನೂ ಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ನಂತರ ಪ್ರಕರಣ ನಗರ ಪೊಲೀಸ್ ಠಾಣೆಗೆ ತಲುಪಿದ್ದು, ಬೆದರಿಕೆ ಕರೆ ಮಾಡಿರುವ ತುಂಬೆ ನಿವಾಸಿ ಕಾಂಗ್ರೆಸ್‌ನ ಸ್ಥಳೀಯ ಮುಖಂಡ ಲೋಲಾಕ್ಷ ಎಂಬವರ ವಿರುದ್ಧ ಅಧ್ಯಕ್ಷ ದಿನೇಶ್ ಭಂಡಾರಿ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಬೆದರಿಕೆ ಕರೆ ಒಡ್ಡಿದ ಆರೋಪಿತ ವ್ಯಕ್ತಿಗಳನ್ನು ಬಂಧಿಸ ಬೇಕಾಗಿ ಬುಡಾ ಅಧ್ಯಕ್ಷ ಎ. ಗೋವಿಂದ ಪ್ರಭು ಸಹಿತ ಬಿಜೆಪಿ ಮುಖಂಡರು ಪೊಲೀಸ್ ಹಿರಿಯಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ನಗರ ಠಾಣೆಗೆ ಜಮಾಯಿಸಿದ ಬಿಜೆಪಿಯ ಪುರಸಭಾ ಸದಸ್ಯರ ಗುಂಪು ನಿನ್ನೆ ರಾತ್ರಿಯ ತನಕವೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಅಧ್ಯಕ್ಷ ದಿನೇಶ್‌ಗೆ ಕೊಲೆ ಬೆದರಿಕೆ ಒಡ್ಡಿದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಪುರಸಭಾ ಸದಸ್ಯರು ಪ್ರಕರಣದಲ್ಲಿ ಶಾಸಕ ರಮಾನಾಥ ರೈ ಅವರ ನೇರ ಕೈವಾಡ ಇರುವುದಾಗಿ ಆರೋಪಿಸಿದ್ದಾರೆ.

ಕಾಂಪ್ಲೆಕ್ಸ್‌ಗಳಲ್ಲಿ ಅಕ್ರಮ ಪೈಪ್‌ಲೈನ್ ಸಂಪರ್ಕ, ಮೋಟಾರು ಪತ್ತೆ

Posted by JAYAKIRANA Kirana on | 0 comments | Leave a comment...






ಮಂಗಳೂರು: ನಗರ ಪಾಲಿಕೆ ಯಲ್ಲಿ ನೀರಿಗೆ ಬರ ಬಂದಿದೆ. ಇದೇ ವೇಳೆ ದೊಡ್ಡ ಕಟ್ಟಡಗಳಿಗೆ ಅಕ್ರಮ ವಾಗಿ ನೀರಿನ ಸಂಪರ್ಕದ ಜೊತೆಗೆ ಮೋಟಾರುಗಳನ್ನೂ ಅಳವಡಿಸಲಾ ಗಿದೆ ಎನ್ನುವ ದೂರನ್ನು ಆಧರಿಸಿದ ಪಾಲಿಕೆ ಅಧಿಕಾರಿಗಳು ನಿನ್ನೆಯಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬೆಂದೂರ್‌ನಿಂದ ಕಲ್ಪನಾ ರಸ್ತೆಯಾಗಿ ಫಳ್ನೀರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಮನೆಗಳಿಗೆ ಕಳೆದ ಹಲವಾರು ದಿನಗಳಿಂದ ಪೈಪ್ ಲೈನ್‌ನಲ್ಲಿ ನೀರು ಪೂರೈಕೆಯಾಗುತ್ತಿ ರಲಿಲ್ಲ. ಇಲ್ಲಿನ ನಿವಾಸಿಗಳು ಪಾಲಿಕೆಗೆ ನೀಡಿದ ದೂರನ್ನು ಆಧರಿಸಿ ನಿನ್ನೆ ಕಾರ್ಯಪಾಲಕ ಅಭಿಯಂತರ ಲಿಂಗೇಗೌಡ ಹಾಗೂ ತಂಡ ಪರಿಶೀ ಲನೆ ಆರಂಭಿಸಿತ್ತು. ಆ ವೇಳೆ ಬೆಂದೂರ್‌ನಲ್ಲಿರುವ ಪ್ಲಾಝಾ ಕಾಂಪ್ಲೆಕ್ಸ್‌ಗೆ ಮುಕ್ಕಾಲು ಇಂಚಿನ ಪೈಪ್‌ಲೈನ್ ಅಳವಡಿಸಲಾಗಿದ್ದು, ಅದರ ಜೊತೆ ನೀರು ಕಟ್ಟಡಕ್ಕೇರಲು ನಾಲ್ಕು ಮೋಟಾರುಗಳನ್ನು ಅಳವಡಿಸಲಾಗಿದ್ದು ಕಂಡು ಬಂದಿದ್ದು ಯಾರೂ ಸ್ಪಂದಿಸದ ಕಾರಣ ಅದನ್ನು ಕಡಿತಗೊಳಿಸಲಾ ಯಿತು.
ಇನ್ನು ಶಾ ಕಾಂಪ್ಲೆಕ್ಸ್‌ನಲ್ಲೂ ಅಕ್ರಮ ಪೈಪ್‌ಲೈನ್, ಮೋಟಾರು ಅಳವಡಿ ಸಿದ್ದು ಪತ್ತೆಯಾಗಿದ್ದು, ಈ ಕಟ್ಟಡ ದಲ್ಲಿರುವ ಮೈತ್ರಿ ಹಾರ್ಡ್‌ವೇರ್‌ನೊಳಗೆ ಅಕ್ರಮವಾಗಿ ಪೈಪ್‌ಲೈನ್ ಅಳವಡಿಸಿ ಮೋಟಾರು ಹಾಕಿದ್ದು ಪತ್ತೆಯಾಯಿತು. ಭೂಮಿಕಾ ಕಾಂಪ್ಲೆಕ್ಸ್‌ನಲ್ಲಿ ಮುಕ್ಕಾಲು ಇಂಚಿನ ಆರು ಪೈಪ್‌ಲೈನ್‌ಗಳು ಹಾಗೂ ಮೋಟಾರುಗಳು ಪತ್ತೆಯಾದವು.
ಪಾಲಿಕೆ ಬೈಲಾ ಪ್ರಕಾರ ಅರ್ಧ ಇಂಚು ಪೈಪ್ ಮಾತ್ರವೇ ಅಳವಡಿಸ ಬೇಕಾಗಿದ್ದು ಆರು ಅಡಿ ಅಂತರದಲ್ಲೇ ಮೀಟರ್ ಇರಬೇಕು. ಮೋಟಾರು ಅಳವಡಿಸುವುದು ಅಕ್ಷ್ಯಮ್ಯವಾಗಿದೆ. ಆದರೆ ಇಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಸಂಪರ್ಕಗಳೂ ಅಕ್ರಮವಾಗಿರುವ ಕಾರಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಅಭಿಯಂತರ ಲಿಂಗೇಗೌಡ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ಪರಿಹಾರಕ್ಕೆ ಶರಣಾದ ಮೊಗವೀರರು ಕೆಲಸ ಆರಂಭಿಸಿದ ಬಾರ್ಜ್

Posted by JAYAKIRANA Kirana on | 0 comments | Leave a comment...

ಮಂಗಳೂರು : ಎಂಎಸ್‌ಇ ಝಡ್ ನೀಡುವ ಪರಿಹಾರಕ್ಕೆ ಮೊಗ ವೀರರು ಶರಣಾದ ಪರಿಣಾಮ ಇನ್ನು ಸಮುದ್ರಕ್ಕೆ ಎಂಎಸ್‌ಇಝಡ್ ತ್ಯಾಜ್ಯ ಸೇರುವುದು ನಿಶ್ಚಿತವಾಗಿದೆ. ತ್ಯಾಜ್ಯ ವಿಲೇವಾರಿ ಪೈಪ್ ಅಳವಡಿಕೆ ಕಾಮ ಗಾರಿ ಆರಂಭಗೊಂಡಿದೆ.
ಮೀನುಗಾರರ ಪ್ರತಿಭಟನೆಗೆ ಹೆದರಿ ಸಮುದ್ರದಲ್ಲಿ ಮಾರುದೂರ ಹೋಗಿ ಲಂಗರು ಹಾಕಿದ್ದ ಬಾರ್ಜ್ ಕೊನೆಗೂ ತೀರಕ್ಕೆ ಬಂದಿದ್ದು. ಡ್ರೆಜ್ಜಿಂಗ್ ಕೆಲಸ ಆರಂಭಿಸಿದೆ. ಈಗಾ ಗಲೇ ಎಂಆರ್‌ಪಿಎಲ್, ಎಂಸಿಎಫ್, ಬಿಎಎಸ್‌ಎಫ್, ಕೆಐಒಸಿಎಲ್ ಕಂಪೆ ನಿಯ ತ್ಯಾಜ್ಯ ಸಮುದ್ರ ಸೇರುತ್ತಿದ್ದು, ಇದರಿಂದಾಗಿ ಮೀನಿನ ಸಂತತಿ ನಾಶ ವಾಗಿದೆ ಎಂದು ಆತಂಕ ವ್ಯಕ್ತ ಪಡಿ ಸಿದ್ದ ಮೀನುಗಾರರು ಎಂಎಸ್ ಇಝಡ್ ತ್ಯಾಜ್ಯವನ್ನು ಸಮುದ್ರಕ್ಕೆ ವಿಸ ರ್ಜಿಸುವುದಕ್ಕೆ ಆಕ್ಷೇಪ ವ್ಯಕ್ತ ಪಡಿ ಸಿದ್ದರು. ಹೀಗಾಗಿ ವರುಷದ ಹಿಂದೆ ಡ್ರೆಜ್ಜಿಂಗ್ ಕೆಲಸಕ್ಕೆಂದು ಮುಕ್ಕ ಸಮುದ್ರ ತೀರಕ್ಕೆ ಬಂದಿದ್ದ ಬಾರ್ಜನ್ನು ಮೀನುಗಾರರು ಹಿಮ್ಮೆಟ್ಟಿಸಿದ್ದರು. ಹೀಗಾಗಿ ಕೆಲಸ ಮಾಡಲಾಗದೆ ಸಮುದ್ರದಲ್ಲೇ ಉಳಿದಿದ್ದ ಬಾರ್ಜ್ ಗಾಳಿಯ ಸುಳಿಗೆ ಸಿಲುಕಿ ನೀರು ಪಾಲಾಗಿತ್ತು. ಇದಾದ ಬಳಿಕ ಮೀನುಗಾರರ ಮನವೊಲಿಸಲು ಮುಂದಾದ ಕಂಪನಿ ಮಾತುಕತೆಗೆ ಮುಂದಾಗಿತ್ತು. ಕೇವಲ ಒಂದು ಭಾಗದ ಮೀನುಗಾರರನ್ನು ಸೇರಿಸಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಮಾತುಕತೆ ನಡೆಸಲಾಗಿತ್ತು. ಇದರ ಲಾಭವನ್ನು ಪಡೆದುಕೊಂಡ ಒಂದು ಭಾಗದ ಮೀನುಗಾರರು ತಮಗೆ ಪರಿಹಾರ ಮೊತ್ತ ಪಡೆಯುವುದಕ್ಕೆ ಒಪ್ಪಿಕೊಂಡರಲ್ಲದೆ ಸ್ಥಳೀಯ ಸಂಸ್ಥೆಗಳೂ ತಮಗೆ ಪರಿಹಾರ ನೀಡುವಂತೆ ಒತ್ತಾಯಿಸಿತ್ತು. ಹೀಗಾಗಿ ಕಂಪನಿ ಸ್ಥಳೀಯ ಧಾರ್ಮಿಕ ಕೇಂದ್ರಗಳಿಗೆ, ಸ್ಥಳೀಯ ಮೀನುಗಾರ ಮುಖಂಡರಿಗೆ, ಮತ್ತು ಮೀನುಗಾರ ಕುಟುಂಬಗಳಿಗೆ ಪರಿಹಾರ ಧನವನ್ನು ವಿತರಿಸಿ ಕೈ ತೊಳೆದುಕೊಂಡಿತ್ತು. ಇನ್ನೇನು ಎಲ್ಲಾ ಸುಗಮ ಆಯಿತು ಎಂದು ಕೊಂಡ ಕಂಪನಿ ಮತ್ತೆ ಬಾರ್ಜ್‌ನ್ನು ಕರೆಸಿಕೊಂಡು ಕೆಲಸ ಆರಂಭಿಸ ಬೇಕು ಎಂದುಕೊಂಡಾಗ ಪಣಂಬೂರು, ಬೈಕಂಪಾಡಿ, ಸುರತ್ಕಲ್ ಭಾಗದ ಮೀನುಗಾರರು ಆಕ್ಷೇಪ ವ್ಯಕ್ತ ಪಡಿಸಿದ್ದರು. ೨೦ದೋಣಿಯಲ್ಲಿ ಬಾರ್ಜನ್ನು ಸುತ್ತುವರಿದ ಮೀನುಗಾರರು ಅದನ್ನು ಮಾರು ದೂರ ಓಡಿಸಿ ಸೂಕ್ತ ಪರಿಹಾರ ನೀಡುವವರೆಗೆ ಕೆಲಸ ಆರಂಭಿಸಲು ಬಿಡೆವು ಎಂದಿದ್ದರು. ಹೀಗಾಗಿ ಕಂಪನಿ ಮತ್ತೊಮ್ಮೆ ಜಿಲ್ಲಾಧಿಕಾರಿಯವರ ಮೊರೆ ಹೋಗಿತ್ತು. ಇಲ್ಲಿ ನಡೆದ ಮೊದಲನೇ ಸಭೆಯಲ್ಲಿ ೧೦ ಮೀನುಗಾರರಿಗೆ ಒಂದು ಯಾಂತ್ರೀಕೃತ ದೋಣಿ ನೀಡಬೇಕು ಇಲ್ಲವೆ ಎಂಎಸ್‌ಇಝಡ್‌ನಲ್ಲಿ ಉದ್ಯೋಗ ನೀಡ ಬೇಕು ಎಂದು ಒತ್ತಾಯಿಸಿದ್ದರು. ಈ ಬೇಡಿಕೆಗೆ ಕಂಪನಿ ಸ್ಪಂದಿಸಲಿಲ್ಲ. ಇತ್ತ ಮೀನುಗಾರರೂ ಬಿಗಿ ನಿಲುವು ಸಡಿಲಿಸಿರಲಿಲ್ಲ. ಹೀಗಾಗಿ ಅಂದಿನ ರಾಜಿ ಸೂತ್ರ ಮುರಿದು ಬಿದ್ದಿತ್ತು. ಬಳಿಕ ಎರಡನೇ ಹಂತದ ಮಾತುಕತೆ ನಡೆದಿದ್ದು ಈ ವೇಳೆ ಕಂಪನಿ ಯಾಂತ್ರೀಕೃತ ಮೀನುಗಾರಿಕೆಗೆ ನೆರವು ನೀಡುವ ಭರವಸೆ ನೀಡಿದ ಕಾರಣ ಪೈಪ್‌ಲೈನ್ ಕಾಮಗಾರಿಗೆ ಮೀನುಗಾರರು ಹಸಿರು ನಿಶಾನೆ ತೋರಿದ್ದಾರೆ.
ಮೀನುಗಾರರ ಯಾಂತ್ರೀಕೃತ ಮೀನುಗಾರಿಕೆಗೆ ಬೇಕಾದ ಅನುದಾನವನ್ನು ಜಿಲ್ಲಾಡಳಿತದ ಮತ್ತು ಮೀನುಗಾರರ ಸಂಘದ ಜಂಟಿ ಖಾತೆಗೆ ಜಮೆ ಮಾಡಿ ಅಲ್ಲಿಂದ ಮುಂದೆ ಅಗತ್ಯತೆ ಪರಿಗಣಿಸಿ ಪರಿಹಾರ ನೀಡುವ ಬಗ್ಗೆ ಒಪ್ಪಂದ ನಡೆದಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಸಮುದ್ರದಲ್ಲಿ ಲಂಗರು ಹಾಕಿದ್ದ ಬಾರ್ಜ್ ಮತ್ತೆ ತೀರ ಸೇರಿದ್ದು ಕೆಲಸ ಆರಂಭಗೊಂಡಿದೆ.
ಒಡೆದು ಹೋದ ಮೊಗವೀರರು: ಅಸ್ತಿತ್ವಕ್ಕೆ ಬರಲಿದೆ ಮತ್ತೊಂದು ಬಣ
ಎಂಎಸ್‌ಇಝಡ್ ತ್ಯಾಜ್ಯ ಸಮುದ್ರಕ್ಕೆ ವಿಲೇವಾರಿ ಮಾಡುವುದರ ವಿರುದ್ಧ ಆರಂಭದಲ್ಲಿ ಎಲ್ಲಾ ಮೀನುಗಾರರು ಒಂದಾಗಿ ಹೋರಾಟ ಮಾಡಿದ್ದರೆ. ಆ ಬಳಿಕ ನಡೆದ ಮಾತುಕತೆಯಲ್ಲ್ಲಿ ಮೀನುಗಾರರ ಒಂದು ತಂಡ ಗುಪ್ತವಾಗಿ ಭಾಗವಹಿಸಿ ಗುಪ್ತ ವ್ಯವಹಾರ ಮಾಡಿತ್ತು. ಇದು ಮೊಗವೀರರ ಇನ್ನೊಂದು ಬಣವನ್ನು ಕೆರಳಿಸಿತ್ತು. ಪರಿಣಾಮ ಕಾಮಗಾರಿ ನಡೆಸಲೆಂದು ಎರಡನೇ ಬಾರಿ ಬಂದ ಬಾರ್ಜ್‌ಗೆ ಬೈಕಂಪಾಡಿ, ಪಣಂಬೂರು ಈ ಭಾಗದ ಮೀನು ಗಾರರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಎಲ್ಲಾ ಮೀನುಗಾರರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪರಿಹಾರ ನೀಡಬೆಕೆಂದು ಅವರು ಒತ್ತಾಯಿಸಿದರು. ಕಂಪನಿ ಇದಕ್ಕೂ ಅಸ್ತು ಎಂದಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತುಕತೆಯೂ ನಡೆದು ಪರಿಹಾರ ಸೂತ್ರವನ್ನೂ ರೂಪಿ ಸಲಾಯಿತು. ಆದರೆ ಇದೀಗ ಮೊಗವೀರರ ಮತ್ತೊಂದು ಬಣ ಎದ್ದು ನಿಂತಿದೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ನಾಡದೋಣಿ ಮೀನುಗಾರರ ಸಂಘ ದವರಿಗೆ ಮಾತ್ರ ಈ ಬಾರಿ ಪರಿಹಾರ ದೊರೆತ್ತಿದೆ ನಮ್ಮನ್ನು ಕಡೆಗಣಿಸಲಾಗಿದೆ ಎಂದು ದೂರಿದ್ದಾರೆ. ನಮಗೆ ಸೂಕ್ತ ಪರಿಹಾರ ನೀಡದೆ ಹೋದರೆ ನಾವು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಮೀನುಗಾರರ ಹೆಸರಲ್ಲಿ ವೈಯಕ್ತಿಕ ಲಾಭ ಸಲ್ಲದು ಎಂದಿದ್ದಾರೆ. ಹೀಗಾಗಿ ಒಂದು ವಿಷಯವಾಗಿ ಮೊಗವೀರರು ಮೂರು ಬಣಗಳಾಗಿ ಒಡೆದು ಹೋದಂತಾಗಿದೆ.

ಪಾಲೇಮಾರ್ ವಿರುದ್ಧ ಸುದ್ದಿ ಪ್ರಕಟಿಸದಂತೆ ಕೋರ್ಟ್ ತಡೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಾಜಿ ಸಚಿವ ಹಾಗೂ ಶಾಸಕ ಕೃಷ್ಣ .ಜೆ.ಪಾಲೇಮಾರ್ ಬಗ್ಗೆ ಯಾವುದೇ ರೀತಿಯ ಅವಮಾ ನಕಾರಿ ಹಾಗೂ ಮಾನಹಾನಿ ಸುದ್ದಿ ಗಳನ್ನು ಪ್ರಸಾರ ಮಾಡದಂತೆ ಸುವರ್ಣ ಸುದ್ದಿವಾಹಿನಿಯ ಮಾಲ ಕರು ಮತ್ತು ಸಂಪಾದಕ ಮಂಡಳಿಯ ವಿರುದ್ಧ ಮಂಗಳೂರಿನ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ಹೊರ ಡಿಸಿ ಮಧ್ಯಂತರ ಆದೇಶ ಹೊರಡಿಸಿದೆ.
ವಿಧಾನಸಭೆಯಲ್ಲಿ ಲಕ್ಷ್ಮಣ ಸವದಿ ನೋಡಿದರೆನ್ನಲಾದ ಮೊಬೈಲ್ ಅಶ್ಲೀಲ ಚಿತ್ರಗಳಿಗೂ ಮತ್ತು ಪಾಲೇ ಮಾರ್‌ರವರಿಗೂ ಯಾವುದೇ ರೀತಿ ಸಂಬಂಧವಿಲ್ಲದಿದ್ದರೂ ಕೂಡಾ ಪಾಲೇಮಾರ್‌ರವರೇ ಈ ಚಿತ್ರಗಳನ್ನು ಮೊಬೈಲಿನಲ್ಲಿ ರವಾನಿಸಿದ್ದಾರೆಂಬ ಸುಳ್ಳು ಸುದ್ದಿಯನ್ನು ಸುವರ್ಣವಾಹಿನಿ ಪ್ರಕಟಿಸಿತ್ತು.
ಇದರ ವಿರುದ್ಧ ಪಾಲೇಮಾರ್ ರವರು ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ೨೫ ಕೋಟಿ ರೂ. ಪರಿಹಾರ ಕೋರಿ ದಾವೆ ದಾಖ ಲಿಸಿದ್ದರು ಹಾಗೂ ತನ್ನ ವಿರುದ್ಧ ಯಾವುದೇ ರೀತಿಯ ನಿಂದನಾತ್ಮಕ ಅಥವಾ ಮಾನಹಾನಿ ಸುದ್ದಿಗಳನ್ನು ಪ್ರಕಟಿಸದಂತೆ ಖಾಯಂ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದರು.
ಕೃಷ್ಣ ಪಾಲೇಮಾರ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ನ್ಯಾಯ ವಾದಿ ಪಿ.ಪಿ ಹೆಗ್ಡೆಯವರ ವಾದವನ್ನು ಆಲಿಸಿದ ನ್ಯಾಯಾಲಯವು, ಪ್ರತಿವಾದಿ ಸುವರ್ಣ ಸುದ್ದಿವಾಹಿನಿ ಯಾವುದೇ ಆಧಾರವಿಲ್ಲದೇ ಪಾಲೇಮಾರ್‌ರವರ ವಿರುದ್ಧ ನಿರಂತರ ಸುಳ್ಳು ಮತ್ತು ಮಾನಹಾನಿಕರ ವರದಿಗಳನ್ನು ಪ್ರಕಟಿಸಿ ತೇಜೋವಧೆ ಮಾಡಿ ರುವುದು ಮೇಲ್ನೋಟಕ್ಕೆ ಸ್ಪಷ್ಟ ವಾಗಿದೆ. ಮಾಧ್ಯಮಗಳಿಗೆ ಸುಳ್ಳು ವರದಿಯನ್ನು ಪ್ರಕಟಿಸಲು ಹಾಗೂ ಗೌರವಾನ್ವಿತರ ಮಾನಹಾನಿಗೈಯ್ಯಲು ಯಾವುದೇ ರೀತಿಯ ಸ್ವಾತಂತ್ರ್ಯವಿಲ್ಲ ಎಂದು ಆದೇಶದಲ್ಲಿ ಹೇಳಿದೆ.

ತ.ನಾಡಿಗೆ ಒಂದು ಹನಿ ಕಾವೇರಿ ನೀರನ್ನೂ ಬಿಟ್ಟಿಲ್ಲ: ಮುಖ್ಯಮಂತ್ರಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಕೃಷ್ಣರಾಜಸಾಗರ ಆಣೆಕಟ್ಟಿನಿಂದ ತಮಿಳುನಾಡಿಗೆ ಒಂದು ಹನಿ ಕಾವೇರಿ ನೀರನ್ನೂ ಬಿಟ್ಟಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಕುಡಿಯುವ ನೀರು ಹಾಗೂ ಇತರೆ ಸೌಕರ್ಯಗಳಿಗಾಗಿ ಅಲ್ಪ ನೀರು ಬಿಡು ಗಡೆ ಮಾಡಿದ್ದು, ಅದು ರಾಜ್ಯದ ಜನತೆ ಮತ್ತು ರೈತರಿಗಾಗಿಯೇ ಹೊರತು ತಮಿಳುನಾಡಿಗಾಗಿ ಅಲ್ಲ ಎಂದು ತಿಳಿಸಿ ದ್ದಾರೆ. ಸುದ್ದಿಗಾರರೊಂದಿಗೆ ಮಾತನಾ ಡುತ್ತಿದ್ದ ಅವರು ನಮ್ಮಲ್ಲಿ ಉತ್ತಮ ಮಳೆಯಾಗಿ ಕಾವೇರಿ ಜಲಾನಯನದ ಆಣೆಕಟ್ಟುಗಳು ಭರ್ತಿಗೊಂಡು ತಮ್ಮ ರೈತರಿಗೆ ಸಾಕಾಗುವಷ್ಟು ನೀರು ಶೇಖ ರಣೆಯಾದ ನಂತರ ಹೆಚ್ಚುವರಿ ನೀರನ್ನು ಹೊರಗೆಡುವ ಬಗ್ಗೆ ಮುಂದೆ ತೀರ್ಮಾನ ಕೈಗೊಳ್ಳಲಾಗುವುದು.
ಯಾವುದೇ ಒತ್ತಡಕ್ಕೆ ಮಣಿದು, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ಅವರು ಅನಗತ್ಯವಾದ ವದಂತಿಗಳಿಗೆ ರೈತರು ಮತ್ತು ಆ ಭಾಗದ ಜನರು ಕಿವಿಗೊಡ ದಿರುವಂತೆ ಮನವಿ ಮಾಡಿದರು.
ನ್ಯಾಯಾಲಯದ ಆದೇಶದಂತೆ ಕಳೆದ ಎರಡು ದಿನಗಳಿಂದ ಕೆ.ಆರ್. ಎಸ್. ಆಣೆಕಟ್ಟಿನಿಂದ ತಮಿಳುನಾಡಿಗೆ ನೀರನ್ನು ಹರಿಸಲಾಗುತ್ತಿದೆ ಎಂದು ಕೇಳಿಬಂದಿತು.
ರೈತಪರ ಸಂಘಟನೆ ಗಳು ಸರ್ಕಾರದ ನಿಲುವುನ್ನು ವಿರೋ ಧಿಸಿ, ಮೈಸೂರು, ಮಂಡ್ಯ, ಚಾಮ ರಾಜ ನಗರ ಜಿಲ್ಲೆಗಳಲ್ಲಿ ಪ್ರತಿಭಟನೆ ಹಮ್ಮಿ ಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Page 1

Posted by JAYAKIRANA Kirana on | 0 comments | Leave a comment...


Page 2

Posted by JAYAKIRANA Kirana on | 0 comments | Leave a comment...


Page 3

Posted by JAYAKIRANA Kirana on | 0 comments | Leave a comment...


Page 4

Posted by JAYAKIRANA Kirana on | 0 comments | Leave a comment...


Page 5

Posted by JAYAKIRANA Kirana on | 0 comments | Leave a comment...


Page 6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)