ಕೋಳಿ ಅಂಕವನ್ನು ಜೂಜಾಟ ಎನ್ನುವ ಕಾರಣಕ್ಕೆ ನಿಷೇಧಿಸಲಾಗಿದೆ. ಜನರು ದುಡಿದ ಲಕ್ಷಾಂತರ ಹಣ ವನ್ನು ಕೋಳಿಅಂಕದಲ್ಲಿ ತೊಡಗಿಸಿ ಕ್ಷಣಮಾತ್ರ ದಲ್ಲಿ ಕಳೆದುಕೊಳ್ಳುವುದನ್ನು ಸರಿಯೆಂದು ಒಪ್ಪಲು ಸಾಧ್ಯವಿಲ್ಲ. ಆದರೆ ಕೋಳಿ ಅಂಕ ಎನ್ನುವುದು ನಮ್ಮ ಜಾನಪದ ಕ್ರೀಡೆ. ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವೂ ಆಗಿದೆ. ಹೀಗಿ ರುವಾಗ ಏಕಾಏಕಿ ಕೋಳಿ ಅಂಕಕ್ಕೆ ನಿಷೇಧ ಹೇರುವುದು ಎಲ್ಲಿಯ ನ್ಯಾಯ? ಕೆಲವು ಕಡೆ ಪೊಲೀಸರಿಗೆ ಇಂತಿಷ್ಟು ಹಣ ಕೊಟ್ಟರೆ ಗುಟ್ಟಾಗಿ ಅಂಕ ನಡೆಸಲು ಅನುಮತಿ ನೀಡುತ್ತಾರೆ. ಆದರೆ ಮತ್ತೂ ಕೆಲವು ಕಡೆ ಕೋಳಿ ಅಂಕ ವನ್ನು ನಡೆಸುವುದಕ್ಕೆ ಅವ ಕಾಶ ನೀಡುವುದೇ ಇಲ್ಲ. ಪೊಲೀಸ್ ಇಲಾಖೆಯ ಈ ಎಡಬಿಡಂಗಿ ನೀತಿ ಯಾಕೆ? ನಿಷೇಧವೆಂ ದಾದರೆ ಎಲ್ಲಾ ಕಡೆ ನಿಷೇಧಿಸಿ, ಹಣ ಪಡೆದು ಕೊಂಡು ಎಲ್ಲಿಯೂ ನಡೆಸುವುದು ಬೇಡ. ಕೋಳಿ ಅಂಕವನ್ನು ನಿಷೇಧಿಸುವ ಮುನ್ನ ಮಟ್ಕಾ, ಜುಗಾರಿ, ಇಸ್ಪೀಟ್ ದಂಧೆಯನ್ನು ಸಂಪೂರ್ಣ ಮಟ್ಟಹಾಕಲು ಪೊಲೀಸ್ ಇಲಾಖೆ ಮುಂದಾಗಲಿ. ಸುರೇಶ್, ಬೆಳ್ತಂಗಡಿ
ಗುತ್ತಿಗೆ ಕಾರ್ಮಿಕರಿಗೆ ನೇರ ಉದ್ಯೋಗ ದೊರಕೀತೆ?
ನಮ್ಮ ಜಿಲ್ಲೆಯಲ್ಲಿ ಕೇಂದ್ರ ಸರಕಾರ ಸ್ವಾಮ್ಯದ ತನ್ನದೇ ಆಡಳಿತ ಹೊಂದಿರುವ ಅದಿರು ಕೈಗಾರಿಕೆ, ಬಂದರು, ಪೆಟ್ರೋ ಲಿಯಂ ಸಂಸ್ಥೆಗಳು ಸ್ಥಾಪನೆಯಾಗಿದೆ. ಈ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಸ್ಥಳೀಯರು ಗುತ್ತಿಗೆ ಕಾರ್ಮಿಕರಾಗಿ, ದಿನಗೂಲಿ ಕಾರ್ಮಿಕರಾಗಿ ಯಾವುದೇ ಉದ್ಯೋಗ ಭದ್ರತೆ ಯಿಲ್ಲದೆ ದುಡಿಯುತ್ತಿದ್ದಾರೆ. ಗುತ್ತಿಗೆ ಕಾರ್ಮಿಕರ ಕೇವಲ ಕನಿಷ್ಠ ವೇತನವೇ ಇವರ ಕುಟುಂಬ ನಿರ್ವಹಣೆಯ ಆಧಾರ ಸ್ತಂಭವಾಗಿದೆ.
ಕೆಲವೊಂದು ಕೇಂದ್ರ ಸರಕಾರಿ ಸಂಸ್ಥೆಗಳು ಪೀಸ್ವರ್ಕ್, ತುಂಡುಗುತ್ತಿಗೆ ಎಂಬ ಹೆಸರಿನ ಗುತ್ತಿಗೆಯನ್ನು ಜಾರಿಗೊಳಿ ಸಲು ಶತಪ್ರಯತ್ನ ನಡೆಸುತ್ತಿದೆ. ಇದರಿಂದಾಗಿ ಗುತ್ತಿಗೆ ಕಾರ್ಮಿ ಕರು ಉದ್ಯೋಗ ಕಳೆದುಕೊಳ್ಳುವ ಭೀತಿಯನ್ನು ಎದುರಿಸು ತ್ತಿದ್ದಾರೆ. ಕೆಲವರು ಈಗಾಗಲೇ ಉದ್ಯೋಗವನ್ನು ಕಳೆದು ಕೊಂಡಿದ್ದಾರೆ.
ಜಿಲ್ಲೆಯಲ್ಲಿರುವ ಗಣಿ ಕೈಗಾರಿಕೆ, ಸರ್ವಋತು ಬಂದರು, ಪೆಟ್ರೋಲಿಯಂ ರಿಫೈನರಿ ಸಂಸ್ಥೆಗಳು ಹಲವಾರು ವರ್ಷದಿಂದ ದುಡಿಯುತ್ತಿರುವ ಸ್ಥಳೀಯ ಗುತ್ತಿಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ನೇರ ಉದ್ಯೋಗ ನೀಡಲು ಹಿಂದೇಟು ಹಾಕುತ್ತಿದೆ.
ಇದು ಕಾರ್ಮಿಕರ ಭವಿಷ್ಯದ, ಕುಟುಂಬದ ಭದ್ರತೆಯ ಬಗ್ಗೆ ಯಾವುದೇ ಭರವಸೆಯನ್ನು ನೀಡುತ್ತಿಲ್ಲ. ಸ್ಥಳೀಯ ಸಂಸದರು ಇದರ ಬಗ್ಗೆ ಗಮನಹರಿಸಿ ಗುತ್ತಿಗೆ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.
ನೊಂದ ಗುತ್ತಿಗೆ ಕಾರ್ಮಿಕರು, ನವಮಂಗಳೂರು
ಪುನರೂರುರವರ ಕೈ ಬಲಪಡಿಸಿ
ದೇವಾಲಯದ ವ್ಯವಸ್ಥಾಪನಾ ಸಮಿತಿಯ ರಚನೆಯಲ್ಲಾದ ಕೇಸರೀಕರಣದ ವಿರುದ್ಧ ಧ್ವನಿಯೆತ್ತಿದ ಹರಿಕೃಷ್ಣ ಪುನರೂರು ರವರ ಹೋರಾಟಕ್ಕೆ ಎಲ್ಲಾ ಸಾರ್ವಜನಿಕ ಭಕ್ತರು ಕೈಜೋಡಿಸ ಬೇಕಾದ ಅಗತ್ಯವಿದೆ.
ಸಮಗ್ರ ದಕ್ಷಿಣ ಕನ್ನಡದ ಕೆಲವು ವಂಶಪಾರಂಪರ್ಯ ಸಾರ್ವಜನಿಕ ದೇವಾಲಯಗಳನ್ನು ಕಾನೂನಿನಿಂದ ಹೊರಗಿಟ್ಟು ಖಾಸಗೀಕರಣ ಮಾಡಲಾಗಿದೆ. ಇನ್ನೂ ಕೆಲವು ದೇವಾಲಯ ಗಳನ್ನು ಡಿನೋಟಿಫಿಕೇಶನ್ ಮಾಡುವ ಬೃಹತ್ ಹುನ್ನಾರ ನಡೆಯುತ್ತಿದೆ. ಶರವು, ಬೆಳ್ಮಣ್ಣು ದೇವಾಲಯಗಳನ್ನು ಪಂಗಡದ ದೇವಾಲಯಗಳು ಎಂದು ಕಾನೂನಿನಿಂದ ಹೊರಗಿಡಲಾಗಿದೆ. ಅಂತೆಯೇ ಕೋಟಿಗಟ್ಟಲೆ ಆದಾಯವಿರುವ ಸಾರ್ವಜನಿಕ ದೇವಾಲಯಗಳಾದ ಅಂಬಲಪಾಡಿ, ಆನೆಗುಡ್ಡೆ ದೇವಾಲಯ ಗಳನ್ನು ಹೊರಗಿಡುವ ಬಗ್ಗೆ ಧಾರ್ಮಿಕ ಪರಿಷತ್ತಿನ ಸದಸ್ಯರು ಹುನ್ನಾರ ನಡೆಸುತ್ತಿದ್ದಾರೆ. ಇಂತಹ ಮೇಲ್ವರ್ಗದವರೇ ನಡೆ ಸುವ ದೇವಾಲಯಗಳನ್ನು ಕಾನೂನಿನಿಂದ ಹೊರಗಿಡುವ ಉದ್ದೇಶವೇನು? ಅಲ್ಲಿಯೂ ಸಾರ್ವಜನಿಕ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸಬಹುದಲ್ಲವೇ? ಈ ಬಗ್ಗೆಯೂ ಪುನರೂ ರುರವರು ವಿಶೇಷ ಗಮನ ನೀಡಿ ಅದರ ವಿರುದ್ಧ ಹೋರಾಟ ಕೈಗೊಳ್ಳಬೇಕು.
ಸದಾನಂದ ಕೆ. ಅಮೀನ್, ಕಟಪಾಡಿ
ಕಾನೂನು ಕೈಗೆತ್ತಿಕೊಳ್ಳದಿರಿ
ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳು ಪದೇ ಪದೇ ಗೋಸಾಗಾಟ ತಡೆಯುವ ನೆಪದಲ್ಲಿ ಕಾನೂನನ್ನು ಕೈಗೆತ್ತಿ ಕೊಳ್ಳುವುದು ನಡೆಯುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಅನೇಕ ಬಾರಿ ಗಲಭೆ, ಘರ್ಷಣೆಯ ವಾತಾವರ ಣಕ್ಕೂ ಕಾರಣವಾಗಿದೆ. ಗೋಸಾಗಾಟ ಅಕ್ರಮವಾಗಿ ಮಾಡು ವುದು ಖಂಡಿತಾ ತಪ್ಪು. ಕದ್ದು ಗೋವುಗಳನ್ನು ಸಾಗಿಸುವುದು, ಸತ್ತ ಗೋವುಗಳ ಮಾಂಸ ಮಾರಾಟ ಮಾಡುವುದನ್ನು ಇಸ್ಲಾಂ ಕೂಡಾ ವಿರೋಧಿಸುತ್ತದೆ. ಹೀಗಿರುವಾಗ ಗೋಸಾಗಾಟ ತಡೆಯುವುದು ಸರಿ. ಆದರೆ ಆ ಕೆಲಸವನ್ನು ಪೊಲೀಸ್ ಇಲಾಖೆಯೇ ಮಾಡಲಿ. ರಾತ್ರಿ, ನಸುಕಿನಲ್ಲಿ ಬಜರಂಗಿಗಳು ಗೋಸಾಗಾಟ ತಡೆಯುತ್ತಾ ಹೋದರೆ ಪೊಲೀಸರು ಆರಾ ಮಾಗಿ ಠಾಣೆಯಲ್ಲಿ ನಿದ್ದೆ ಮಾಡುತ್ತಾರೆ. ಆದರೆ ಇದೇ ವಿಚಾರ ದಲ್ಲಿ ಘರ್ಷಣೆ ನಡೆದರೆ ಯಾರು ಹೊಣೆ? ಪೊಲೀಸ್ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಕಾನೂನು ಕೈಗೆತ್ತಿ ಕೊಳ್ಳುವವರು ಯಾರೇ ಆಗಿರಲಿ, ಅವರಿಗೆ ತಕ್ಕ ಶಿಕ್ಷೆ ನೀಡ ಲೇಬೇಕು.
ಇಂತಹ ಕೆಲಸಗಳಿಂದ ದೇಶದಲ್ಲಿನ ಮತೀಯ ಸಾಮ ರಸ್ಯಕ್ಕೆ ಧಕ್ಕೆ ಉಂಟಾಗುವುದಲ್ಲದೆ ಜನರು ಜಾತಿ-ಧರ್ಮದ ಹೆಸರಿನಲ್ಲಿ ವಿಘಟನೆ ಹೊಂದಲು ಅವಕಾಶ ಕೊಟ್ಟಂತಾಗುತ್ತದೆ. ಆದ್ದರಿಂದ ಬಜರಂಗಿಗಳು ಮಾಡುವ ಕೆಲಸವನ್ನು ಪೊಲೀ ಸರೇ ಮಾಡಿ ಶಾಂತಿ ಕಾಪಾಡಲಿ.
ಶಾಂತಿಪ್ರೇಮಿ, ಮಂಗಳೂರು
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ಕೊಡಿ
ಕರ್ನಾಟಕದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಕೆ.ರಘುಪತಿ ಭಟ್ ಶಾಸಕರಾದ ನಂತರವೇ ಉಡುಪಿ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಶಾಸಕರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಎಲ್ಲದರ ಕಡೆಗೂ ಬಹಳಷ್ಟು ಮಹತ್ವಕೊಟ್ಟು ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲ ಕಡೆ ಬಹಳಷ್ಟು ಪ್ರಗತಿಯ ಕೆಲಸ ಕಾರ್ಯಗಳನ್ನು ಮಾಡಿ ದೀನ-ದಲಿತರ, ಬಡಬಗ್ಗರ, ಕೂಲಿ ಕಾರ್ಮಿಕರ ಜಾತಿ, ಮತ ಭೇದವಿಲ್ಲದೆ ಎಲ್ಲಾ ವರ್ಗಗಳ ಜನರ ಪ್ರೀತಿಯನ್ನು ಗಳಿಸಿದ್ದಾರೆ.
ಹಳ್ಳಿ-ಹಳ್ಳಿಗಳಿಗೆ ಒಳರಸ್ತೆ ನಿರ್ಮಾಣ, ಹಳೆಯ ರಸ್ತೆ ಕಾಂಕ್ರೀ ಟೀಕರಣ, ಡಾಮರೀಕರಣ, ದೇವಸ್ಥಾನ, ದೈವಸ್ಥಾನ, ಗುಡಿಗೋಪು ರಗಳ ಜೀರ್ಣೋದ್ಧಾರ ಹೀಗೆ ಹತ್ತು-ಹಲವು ಪ್ರಗತಿ ಕಾರ್ಯಗಳು ಇವರಿಂದಾಗಿದೆಯಲ್ಲದೆ ಇನ್ನೂ ಕೂಡಾ ಕೆಲವು ಕೆಲಸ ಕಾರ್ಯಗಳು ಇವರಿಂದ ಆಗಬೇಕಾಗಿದೆ.
ಈಗ ಸಂಪುಟ ವಿಸ್ತರಣೆ ಮಾಡುವ ಸಮಯ ಹತ್ತಿರ ಬಂದಿದೆ. ಮಾನ್ಯ ಮುಖ್ಯಮಂತ್ರಿ ಸದಾನಂದ ಗೌಡರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್ರವರಿಗೆ ಸಚಿವ ಸ್ಥಾನ ನೀಡಿ ಉಡುಪಿ ಜಿಲ್ಲೆ ಇನ್ನಷ್ಟು ಪ್ರಗತಿ ಹೊಂದಲು ಸಹಕರಿಸಬೇಕು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಇದು ಸಹಕಾರಿಯಾಗುತ್ತದೆ.
ಯು.ವಿಠಲ್ ಮಾಸ್ತರ್, ಭದ್ರಗಿರಿ-ಬೈಕಾಡಿ
ಮೇಯರ್ ವಿದೇಶ ಪ್ರವಾಸ ಖಂಡನೀಯ
ರಾಜ್ಯದೆಲ್ಲೆಡೆ ಬರ ಪರಿಸ್ಥಿತಿ ತಾಂಡವವಾಡುತ್ತಿರುವ ಕಾರಣ ಮುಖ್ಯಮಂತ್ರಿ ಸಮೇತ ಸರಕಾರದ ಶಾಸಕ, ಸಚಿವರುಗಳು ವಿದೇಶ ಪ್ರವಾಸ ಕೈಗೊಳ್ಳದೆ ಬರ ಪರಿಸ್ಥಿತಿ ಅಧ್ಯಯನ, ಬರಪೀಡಿತ ಸ್ಥಳಗಳ ಭೇಟಿಗೆ ಮುಂದಾಗಿದ್ದಾರೆ. ಮಂಗಳೂ ರಿನಲ್ಲೂ ಕುಡಿಯುವ ನೀರಿಗೆ ಬರ ಎದುರಾಗಿದೆ. ಹೀಗಿರುವಾಗ ಇಂಥ ಸಮಯದಲ್ಲಿ ಮಂಗಳೂರಿನ ಮೇಯರ್ ಅವರು ಸನ್ಮಾನ ಸ್ವೀಕರಿ ಸಲು ವಿದೇಶಕ್ಕೆ ತೆರಳಿದ್ದು ಖಂಡನೀ ಯವೇ ಸರಿ. ಮೇಯರ್ ಆಗಿ ಆಯ್ಕೆ ಯಾಗಿ ತಿಂಗಳಾದರೂ ಇನ್ನೂ ಮೇಯರ್ ಅವರು ಸನ್ಮಾನ, ಅಭಿನಂ ದನೆಯ ಗುಂಗಿನಿಂದ ಹೊರಬಂ ದಿಲ್ಲ. ಮೇಯರ್ ವಿದೇಶ ಪ್ರವಾಸಕ್ಕೆ ಈ ಸಮಯ ಸೂಕ್ತವೂ ಆಗಿರಲಿಲ್ಲ. ಆದರೆ ಜನರ ಸಮಸ್ಯೆಯ ಮುಂದೆ ವೈಯಕ್ತಿಕ ಸ್ವಾರ್ಥವೇ ದೊಡ್ಡದಾಗಿ ರುವಾಗ ಮೇಯರ್ ಅವರು ವಿದೇಶಕ್ಕೆ ಹಾರಿದ್ದರಲ್ಲಿ ತಪ್ಪೇನೂ ಇಲ್ಲ ಅನ್ನಬಹುದಾಗಿದೆ.
ಕೆ.ಶ್ರೀಕಾಂತ್, ಮಂಗಳಪುರ
ಬಸ್ ಸಿಬ್ಬಂದಿ 'ಖಾಕಿ' ಏಕೆ ಧರಿಸುವುದಿಲ್ಲ?
ಖಾಕಿ ಬಟ್ಟೆ ಸೇವೆಯ ಪ್ರತೀಕ. ಹೀಗಾಗಿ ಸಮಾಜದಲ್ಲಿ ವಿವಿಧ ಸ್ತರಗಳ ಸೇವೆ ಸಲ್ಲಿಸು ವವರಿಗೆ ಖಾಕಿ ಬಟ್ಟೆಯನ್ನು ಯೂನಿಫಾರ್ಮ್ ಆಗಿ ಮಾಡಲಾಗಿದೆ. ಬಸ್ ಸಿಬ್ಬಂದಿಯೂ ಖಾಕಿ ಬಟ್ಟೆಯನ್ನು ಅವಶ್ಯವಾಗಿ ತೊಡಲೇಬೇಕು. ಆದರೆ ನಗರದ ಒಳಗೆ ಮತ್ತು ಹೊರಗೆ ಸಂಚರಿಸುವ ಬಹುತೇಕ ಸಿಟಿ-ಸರ್ವಿಸ್ ಬಸ್ಗಳ ಸಿಬ್ಬಂದಿ ಖಾಕಿ ಬಟ್ಟೆಯನ್ನು ಧರಿಸುವುದಿಲ್ಲ. ಬಣ್ಣಬಣ್ಣದ ಬಟ್ಟೆ ಧರಿಸುವ ಬಸ್ ಚಾಲಕ ಮತ್ತು ನಿರ್ವಾ ಹಕರು ದೂರದಲ್ಲಿ ಪೊಲೀಸರನ್ನು ಕಂಡಕೂ ಡಲೇ ಸೀಟಿನ ಹಿಂಬದಿ ನೇತುಹಾಕಿರುವ ಅಂಗಿ ಯನ್ನು ತೊಟ್ಟುಕೊಳ್ಳುವುದೂ ನಡೆಯುತ್ತದೆ. ಇದೇಕೆ ಹೀಗೆ? ಕೆಲವು ಬಸ್ ಸಿಬ್ಬಂದಿಯ ಆಟಾಟೋಪವನ್ನು ನೋಡಿದರಂತೂ ಅವರು ನಾಗರಿಕ ಸಮಾಜಕ್ಕೆ ಸೇವೆ ಸಲ್ಲಿಸುವವರು ಎನ್ನುವುದನ್ನು ಯಾರೂ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅವರಲ್ಲಿ ಸೇವಾ ಮನೋಭಾವ ನೆಗಿಂತ ಬೇಜವಾಬ್ದಾರಿಯೇ ಹೆಚ್ಚಿರುತ್ತದೆ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಅಗತ್ಯ ಗಮನಹರಿಸ ಬೇಕು.
ಖಾಕಿ ಬಟ್ಟೆ ತೊಡದೆ ಬಸ್ನಲ್ಲಿ ಬೇಕಾಬಿಟ್ಟಿ ವರ್ತಿಸುವ ಬಸ್ ಸಿಬ್ಬಂದಿಗೆ ಅವಶ್ಯವಾಗಿ ಮೂಗುದಾರ ಹಾಕಬೇಕಾದ ಅಗತ್ಯ ಸದ್ಯಕ್ಕಿದೆ.
ದಾಮೋದರ, ಜೆಪ್ಪು
ಮದ್ಯಪಾನಕ್ಕೆ ಬಲಿಯಾಗುವ ವಿದ್ಯಾರ್ಥಿಗಳು!
ಹಿಂದೆ ವಯಸ್ಕರು ಮಾತ್ರ ಮದ್ಯಪಾನ ಮಾಡುತ್ತಿದ್ದರೆ, ಇಂದು ಹೈಸ್ಕೂಲ್-ಕಾಲೇಜ್ ವಿದ್ಯಾರ್ಥಿಗಳೂ ಸಂಜೆಯ ವೇಳೆ ಬಾರ್, ವೈನ್ಶಾಪ್ಗಳಲ್ಲಿ ಕಂಡುಬರುತ್ತಿದ್ದಾರೆ. ಕೆಲವು ಬಾರಿ ಕಾಲೇಜ್ಗಳಲ್ಲಿ ವಿಶೇಷ ಕಾರ್ಯ ಕ್ರಮವಿದ್ದಾಗ ಕೇಳುವುದೇ ಬೇಡ, ಮಕ್ಕಳು ಬಾರ್ನಲ್ಲಿ ಕಂಠಪೂರ್ತಿ ಕುಡಿದೇ ಕಾಲೇಜ್ಗೆ ತೆರಳುತ್ತಾರೆ. ಇಲ್ಲಿ ಕಾಲೇಜ್ನ ಆಡ ಳಿತ ಮಂಡಳಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಿಲ್ಲ. ಮನೆ ಮಂದಿ ಯಂತೂ ಮಕ್ಕಳು ಏನು ಮಾಡು ತ್ತಾರೆ ಎಂದು ತಿಳಿಯುವ ಗೋಜಿಗೂ ಹೋಗುವುದಿಲ್ಲ. ಇದರಿಂದ ಮಕ್ಕಳು ಚಿಕ್ಕ ಪ್ರಾಯದಲ್ಲಿಯೇ ಹಿರಿಯರ ಅಂಕೆ ಮೀರಿ ಬೆಳೆಯುತ್ತಾರೆ. ಮದ್ಯಪಾನಕ್ಕೆ ಯುವ ಜನತೆ ಬಲಿಯಾಗುತ್ತಿರುವುದು ಅಪಾ ಯಕಾರಿ ಸಂಗತಿ. ಮದ್ಯಪಾನದಿಂದ ಅಪಘಾತಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬರುತ್ತಿದೆ. ಈ ಬಗ್ಗೆ ಸಮಾಜ ಮುಖಿ ಸಂಘಟನೆಗಳು ಚಿಂತಿಸುವುದೊಳಿತು.
ನಾಗೇಶ್, ಅಂಗರಗುಂಡಿ
ಜೀವವಿಲ್ಲದ ದ.ಕ. ಜಿಲ್ಲಾ ಜನತಾದಳ
ಇತ್ತೀಚಿನ ಕೆಲವು ದಿನಗಳಿಂದ ದ.ಕ. ಜಿಲ್ಲಾ ಜನತಾದಳದಲ್ಲಿ ಅವರನ್ನು ಉಚ್ಛಾಟಿಸ ಲಾಯಿತು, ಇವರನ್ನು ಉಚ್ಛಾಟಿಸಲಾಯಿತು ಎಂಬ ಹೇಳಿಕೆಯನ್ನು ನೀಡುತ್ತಿರುವ ಕೆಲವು ಸ್ವಯಂಘೋಷಿತ ನಾಯಕರು ದಳದಲ್ಲಿ ಹುದ್ದೆ ಅಲಂಕರಿಸಿಕೊಂಡು ಮಾಡಿರುವ ಘನಂದಾರಿ ಕೆಲಸವಾದರೂ ಏನು?
ರಾಜ್ಯ ಸರಕಾರದ ಬಹಳಷ್ಟು ಜನವಿರೋಧಿ ನೀತಿ, ಜಿಲ್ಲೆಯ ವಿವಿಧ ಸಮಸ್ಯೆಯ ಬಗ್ಗೆ ಪ್ರತಿಭಟಿಸಬೇಕಿದ್ದ ಜಿಲ್ಲಾ ಜನತಾದಳದ ನಾಯ ಕರು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿ ಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕುಪ್ಪೆಪದವಿನಂತಹ ಗ್ರಾಮಾಂತರ ಪ್ರದೇಶದಲ್ಲಿನ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ಹಾಗೂ ರಾಜ್ಯ ನಾಯಕರನ್ನು ಕಂಡು ದಂಗಾದ ಜಿಲ್ಲಾ ನಾಯಕರೆನಿಸಿ ಕೊಂಡವರು ರಾಜ್ಯ ನಾಯಕರಿಂದ ಛೀಮಾರಿ ಗೊಳಗಾಗಿ ತಮ್ಮ ಮುಖ ಉಳಿಸಿಕೊಳ್ಳಲು ಮೂಡಬಿದ್ರೆಯಲ್ಲಿ ಸಭೆ ನಡೆಸಿದ್ದು ಬಿಟ್ಟರೆ ಇವರು ಜಿಲ್ಲೆಯಲ್ಲಿ ಜನತಾದಳವನ್ನು ಸಂಘಟಿಸುವಲ್ಲಿ ವಿಫಲರಾ ಗಿದ್ದಾರೆ.
ನಾಲ್ಕು ಬಾರಿ ಹೊಟೇಲ್ನಲ್ಲಿ ಪತ್ರಿಕಾ ಗೋಷ್ಠಿ, ನಾಮ್ಕೇವಾಸ್ತೆ ಪದಾಧಿಕಾರಿಗಳ ನೇಮಕ ಮಾಡಿ ಜಿಲ್ಲೆಯಲ್ಲಿ ಗುಂಪುಗಾರಿಕೆ ಮಾಡಿರುವುದಷ್ಟೇ ಇವರ ಸಾಧನೆ. ಇನ್ನು ಉತ್ತರ ವಲಯದ ಅಧ್ಯಕ್ಷ ತಾನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಕಳೆದ ವರ್ಷದಿಂದಲೇ ನಾನು ಪಕ್ಷ ಸಂಘಟಿಸಿದ್ದೇನೆ ಎಂದು ಬೋಂಗು ಬಿಡು ತ್ತಿದ್ದು, ಇವರು ಯಾವ-ಯಾವ ಕಡೆ ಪಕ್ಷದ ಸಭೆ ನಡೆಸಿದ್ದಾರೆ, ಸಮಸ್ಯೆಯ ಬಗ್ಗೆ ಎಷ್ಟು ಪ್ರತಿಭಟನೆ ನಡೆಸಿದ್ದಾರೆ ಎಂದು ಕಾರ್ಯಕರ್ತ ರಿಗೆ ತಿಳಿಸಬೇಕಾಗಿದೆ. ಕನಿಷ್ಠ ಪಕ್ಷದ ಕಚೇರಿ ಯನ್ನೂ ಕೂಡಾ ಮಾಡಿಕೊಳ್ಳಲಾಗದವರು ಇನ್ನು ಪಕ್ಷ ಸಂಘಟಿಸುವುದಾದರೂ ಹೇಗೆ? ರಾಜ್ಯಾಧ್ಯಕ್ಷರು ದ.ಕ.ಜಿಲ್ಲೆಯ ಜನತಾದಳದ ಕಡೆ ಗಮನಹರಿಸಿ ಎಲ್ಲಾ ಕ್ಷೇತ್ರದ ಅಧ್ಯಕ್ಷರನ್ನು ಕೂಡಲೇ ಉಚ್ಛಾಟಿಸಿ ಪಕ್ಷ ಸಂಘಟಿಸಲು ಉತ್ಸುಕತೆ ತೋರುವ ಯುವ ನಾಯಕರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಜಿಲ್ಲೆಯಲ್ಲಿ ಜನತಾ ದಳವನ್ನು ಪುನರ್ ಸಂಘಟಿಸಬೇಕಾಗಿ ಕೇಳಿ ಕೊಳ್ಳುತ್ತಿದ್ದೇನೆ.
ಕೆ.ಹೆಚ್.ಹ್ಯಾರೀಸ್, ಬಂಗ್ಲೆಗುಡ್ಡೆ-ಗುರುಪುರ
ರಾತ್ರಿ ಕರೆಂಟ್ ನೀಡಿ
ಬೇಸಿಗೆ ಕಾಲಕ್ಕೆ ಸುಡುವ ಬೇಗೆಯ ಜೊತೆಗೆ ಮೆಸ್ಕಾಂನವರ ಅನಿಯಮಿತ ವಿದ್ಯುತ್ ಕಡಿತವು ಗಾಯದ ಮೇಲೆ ಬರೆ ಎಳೆದಂತಾ ಗಿದೆ. ಹಗಲು-ರಾತ್ರಿ ವಿದ್ಯುತ್ ಪೂರೈಕೆ ಸರಿಯಾಗಿರುವುದಿಲ್ಲ. ಹಗಲಾದರೆ ಜನರು ಹೇಗೋ ಪರಿಸ್ಥಿತಿಯನ್ನು ನಿಭಾಯಿಸಬಹುದು. ಆದರೆ ರಾತ್ರಿಯ ವೇಳೆ ಬಿಸಿಯಿಂದ ಮಲಗುವುದಾ ದರೂ ಹೇಗೆ? ಇಷ್ಟೇ ಅಲ್ಲದೆ ಸೊಳ್ಳೆ ಗಳಿಂದ ಕಡಿಸಿಕೊಳ್ಳುವುದೂ ಅನಿವಾ ರ್ಯವಾಗುತ್ತಿದೆ. ಸರಕಾರ ಬೃಹತ್ ಕೈಗಾರಿಕೆ, ನಗರ ಪ್ರದೇಶಕ್ಕೆ ದಿನದ ೨೪ ಗಂಟೆಯೂ ವಿದ್ಯುತ್ ಪೂರೈಕೆ ಮಾಡುತ್ತದೆ. ಆದರೆ ಗ್ರಾಮೀಣ, ಹಳ್ಳಿಗಾಡಿನ ಪ್ರದೇಶಗಳ ಜನರನ್ನು ಕತ್ತಲಲ್ಲಿಡುತ್ತಿದೆ. ಈ ಬಗ್ಗೆ ಮೆಸ್ಕಾಂ ಇಲಾಖೆ ಜಾಗೃತವಾಗಬೇಕು. ರಾತ್ರಿಯ ವೇಳೆ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡದಂತೆ ಕ್ರಮ ಕೈಗೊಂಡು ರಾಜ್ಯದ ಜನರನ್ನು ರಕ್ಷಿಸಿ.
ಬಶೀರ್, ಕಂಕನಾಡಿ