ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾಲು-ಸಾಲು ಅಪಘಾತ ಗಳು ಸಂಭವಿಸುತ್ತಿವೆ. ಹೆಚ್ಚಿನ ಸಂಖ್ಯೆ ಯಲ್ಲಿ ಯುವಕರೇ ಸಾವಿಗೀಡಾಗು ತ್ತಿರುವುದು ಕಂಡುಬರುತ್ತಿದೆ. ಇದಕ್ಕೆಲ್ಲ ಮುಖ್ಯ ಕಾರಣವೆಂದರೆ ಯುವಕರ ಮಿತಿಮೀರಿದ ವೇಗ. ರಸ್ತೆಯಲ್ಲಿ ತಾವೊ ಬ್ಬರೇ ಸಂಚರಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಸಾಗುವ ಯುವಕರು ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಮೊಬೈಲ್, ಇಯರ್ಫೋನ್ ಇಟ್ಟುಕೊಂಡು ಅತೀ ವೇಗವಾಗಿ ಸಾಗುವ ಯುವಕರು ಅಪಘಾತಕ್ಕೆ ತುತ್ತಾಗಿ ಬಲಿಯಾಗುತ್ತಿರುವುದು ವಿಪರ್ಯಾ ಸವೇ ಸರಿ. ಅಪಘಾತವನ್ನು ತಡೆಯಲು ಟ್ರಾಫಿಕ್ ಪೊಲೀಸರು ಎಷ್ಟು ಪ್ರಯತ್ನ ಪಟ್ಟರೂ ಸಾಲದು. ನೂತನ ತಂತ್ರeನ ಬಳಸಿ ಕೊಂಡರೂ ಅತೀವೇಗವನ್ನು ನಿಯಂತ್ರಿಸಲು ಆಗುತ್ತಿಲ್ಲ. ಆದ್ದರಿಂದ ಯುವ ಕರಿಗೆ ಅವರ ಮನೆಮಂದಿಯೇ ವೇಗವನ್ನು ನಿಯಂತ್ರಿಸಿ ಸಂಚಾರ ನಡೆಸುವಂತೆ ಮನವೊಲಿಸುವ ಕಾರ್ಯ ನಡೆಸಬೇಕು. ಅತೀವೇಗ ಯಾವತ್ತೂ ಅಪಘಾತವನ್ನು ಆಹ್ವಾನಿಸಿದಂತೆ ಎನ್ನುವುದನ್ನು ಮನವರಿಕೆ ಮಾಡಬೇಕು. ಈ ಮೂಲಕ ಅಪಘಾತವನ್ನು ನಿಯಂತ್ರಿಸಬೇಕು.
ಸುಧೀರ್ ಹೆಚ್., ಜಾರ್ಕಳ
ನಿತ್ಯ ಪ್ರಯಾಣಿಕರಿಗೆ ಕೈಕೊಡುವ ‘ರಾಜರಾಜೇಶ್ವರಿ’
ಕಿನ್ನಿಗೋಳಿಯಿಂದ ಮಂಗಳೂರಿಗೆ ನಸುಕಿನ ಐದೂ ವರೆ ಗಂಟೆಯ ಸುಮಾರಿಗೆ ಸಂಚರಿಸುವ ‘ರಾಜರಾಜೇ ಶ್ವರಿ’ ಸರ್ವಿಸ್ ಬಸ್ ಆಗಾಗ ಪ್ರಯಾಣಿಕರಿಗೆ ಕೈಕೊಡುವ ಕೆಟ್ಟ ಚಾಳಿಯನ್ನು ರೂಢಿಸಿಕೊಂಡಿದೆ. ಕಳೆದ ಸುಮಾರು ೧೫ ವರ್ಷಗಳಿಂದ ಇದೇ ಸಮಯದಲ್ಲಿ ಬೇರೆ-ಬೇರೆ ಬಸ್ಗಳು ಓಡಾಟ ನಡೆಸುತ್ತಿದ್ದು, ನಿತ್ಯ ಪ್ರಯಾಣಿಕರು ಯಾವುದೇ ಸಮಸ್ಯೆಯಿಲ್ಲದೆ ಸಂಚಾರ ನಡೆಸುತ್ತಿದ್ದರು. ಈ ಹಿಂದೆ ‘ನಂದಿನಿ’ ಬಸ್ ಇದ್ದಾಗಲೂ ಇಂಥ ಸಮಸ್ಯೆ ಎದುರಾಗಿರಲಿಲ್ಲ.
ಬಸ್ ಚಾಲಕರೂ ಅಷ್ಟೇ, ಬದಲಿಗೆ ಬೇರೆ ಚಾಲಕ ರಿದ್ದರೂ ಬಸ್ ಬರುವುದು ತಪ್ಪುತ್ತಿರಲಿಲ್ಲ. ಸರಿಯಾದ ಸಮಯಕ್ಕೆ ಓಡುತ್ತಿದ್ದುದರಿಂದ ಬೈಕಂಪಾಡಿ, ಪಣಂಬೂರು, ಎಂಸಿಎಫ್ ಕಾರ್ಮಿಕರು ಈ ಬಸ್ಸನ್ನು ಅವಲಂಬಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಸ್ ಸಮಯಕ್ಕೆ ಸರಿ ಯಾಗಿ ಸಂಚರಿಸುವುದು ಬಿಡಿ, ಕೆಲವು ದಿನ ಎಷ್ಟು ಕಾದರೂ ಬರುವುದೇ ಇಲ್ಲ. ಮರುದಿನ ವಿಚಾರಿಸಿದರೆ ಬದಲಿ ಡ್ರೈವರ್ ಬರಲಿಲ್ಲ, ನಿರ್ವಾಹಕ ಏಳುವಾಗ ಲೇಟ್ ಆಯಿತು, ಕ್ಲೀನರ್ ರಜೆ ಇತ್ಯಾದಿ ನಂಬಲು ಅಸಾಧ್ಯವಾದ ಕಾರಣ ನೀಡುತ್ತಾರೆ. ಇದು ಬಸ್ ಸಿಬ್ಬಂದಿಗೆ ಅಭ್ಯಾಸ ವಾಗಿ ಹೋಗಿದೆ. ಪ್ರಯಾಣಿಕರು ಬಸ್ ಸಿಬ್ಬಂದಿಯ ಆಟಾಟೋಪದಿಂದ ಬೇಸರಪಟ್ಟು ಹಳೆಯಂಗಡಿಯವ ರೆಗೆ ಸಾಗಿ ಹೆದ್ದಾರಿಯಲ್ಲಿ ಸಂಚರಿಸುವ ಬಸ್ ಇಲ್ಲವೇ ಲಾರಿಗಳನ್ನು ಹತ್ತಿಕೊಂಡು ತಮ್ಮ ಕೆಲಸ-ಕಾರ್ಯಗಳಿಗೆ ಸಾಗುತ್ತಾರೆ. ಹೀಗಾಗಿ ನಂದಿನಿ ಸಂಚರಿಸುವಾಗ ಇದ್ದ ಪ್ರಯಾಣಿಕರ ಅರ್ಧದಷ್ಟು ಮಂದಿಯೂ ಈಗ ಬಸ್ ನಲ್ಲಿ ಸಂಚರಿಸುತ್ತಿಲ್ಲ. ನಿತ್ಯ ಪ್ರಯಾಣಿಕರು ದಿನಕ್ಕೊಂದು ಸಮಯಕ್ಕೆ ಬರುವ ಬಸ್ಸಿನ ಮಾಲಕರಿಗೆ ಶಾಪ ಹಾಕುತ್ತಾ ಬೇರೆ ವಾಹನ ಅವಲಂಬಿಸುತ್ತಿದ್ದಾರೆ. ಸಾಧ್ಯವಾದರೆ ರಾಜ ರಾಜೇಶ್ವರಿ ಬಸ್ಸಿನ ಮಾಲಕರು ಗಮನಿಸಲಿ.
ಬಸ್ ಸಿಬ್ಬಂದಿಯೂ ಅಷ್ಟೇ, ಹಿಂದೆ ನಂದಿನಿ ಬಸ್ ಸಂಚರಿಸುತ್ತಿದ್ದಂತೆ ಪ್ರತಿನಿತ್ಯ ಒಂದೇ ಸಮಯಕ್ಕೆ ಸಂಚ ರಿಸಲು ಸಾಧ್ಯವಾದರೆ ಮಾತ್ರ ಬಸ್ ರಸ್ತೆಗಿಳಿಸಬೇಕು. ಡ್ರೈವರ್, ಕಂಡಕ್ಟರ್ ದಿನಕ್ಕೊಬ್ಬರಂತೆ ಬದಲಾಗುತ್ತಿದ್ದರೆ ಪ್ರಯಾಣಿಕರು ಅನಿವಾರ್ಯವಾಗಿ ಬೇರೆ ಬಸ್ಸನ್ನು ಸಂಚಾ ರಕ್ಕೆ ಬಳಸ ಬೇಕಾದೀತು. ಸಂಬಂಧಪಟ್ಟ ಆರ್ಟಿಒ ಅಧಿ ಕಾರಿಗಳು ಇನ್ನಾದರೂ ಸಮಸ್ಯೆಯತ್ತ ಕಣ್ತೆರೆದು ಈ ಬಸ್ಸಿನ ಪರ್ಮಿಟ್ ರದ್ದುಗೊಳಿಸಿ ಬೇರೆ ಬಸ್ಸಿಗೆ ನೀಡುವತ್ತ ಚಿಂತಿ ಸುವುದೊಳಿತು. ನೊಂದ ನಿತ್ಯ ಪ್ರಯಾಣಿಕರು, ಪಕ್ಷಿಕೆರೆ
ಬೀಫ್ ಮಾರುವ ಹೊಟೇಲ್ ಮುಚ್ಚಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಗೋವುಗಳ ಅಕ್ರಮ ಸಾಗಾಟ ಸಂಬಂಧವಾಗಿ ಘರ್ಷಣೆ ನಡೆಯುತ್ತದೆ. ಇದನ್ನು ತಪ್ಪಿಸಲು ಪೊಲೀಸ್ ಇಲಾಖೆ ಯಾವುದೇ ಕ್ರಮಗಳನ್ನು ಜರುಗಿಸುವುದು ಕಾಣಿಸುತ್ತಿಲ್ಲ. ಗೋವು ಸಾಗಾಟಗಾ ರರ ಮೇಲೆ ಕೇಸ್ ದಾಖಲಾಗುತ್ತದೆ. ಎರಡು ದಿನಗಳಲ್ಲಿ ಬಿಡುಗಡೆಯೂ ಆಗುತ್ತದೆ. ಜೈಲಿನಿಂದ ಹೊರಬಂದ ದಂಧೆಕೋರರು ಮತ್ತೆ ಮಾಮೂಲಿ ದಂಧೆಯಲ್ಲಿ ತೊಡಗಿಕೊಳ್ಳುತ್ತಾರೆ. ಇವರಿಗೆ ಕಾನೂನು, ಪೊಲೀಸರ ಯಾವುದೇ ಭಯವಿರುವುದಿಲ್ಲ. ಹಿಂದೂ ಸಂಘಟನೆಗಳು ಆಗೊಮ್ಮೆ, ಈಗೊಮ್ಮೆ ಗೋಸಾ ಗಾಟವನ್ನು ತಡೆದು ಸುದ್ದಿಯಲ್ಲಿರುತ್ತವೆ. ಆದರೆ ಇದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯ ಹೊರತು ಬೇರೇನೂ ಲಾಭವಿಲ್ಲ. ಸರಕಾರ, ಜನಪ್ರತಿನಿ ಧಿಗಳೂ ಅಷ್ಟೇ, ಗೋಹತ್ಯೆ, ಮತಾಂತರವನ್ನು ಕೇವಲ ಚುನಾವಣೆ ಪ್ರಣಾಳಿ ಕೆಗೋಸ್ಕರ ಮಾತ್ರ ಮೀಸಲಿಟ್ಟಿವೆ. ಚುನಾವಣೆಯಲ್ಲಿ ಗೆದ್ದ ಬಳಿಕ ಎಲ್ಲವನ್ನೂ ಮರೆಯುತ್ತಾರೆ. ನಗರ ಪ್ರದೇಶದ ಬಹುತೇಕ ರೆಸ್ಟೋರೆಂಟ್, ನಾನ್ವೆಜ್ ಹೋಟೆಲ್ಗಳಲ್ಲಿ ಬೀಫ್ ಮಾಂಸ ಬಹಿರಂಗವಾಗಿಯೇ ಮಾರಾಟವಾಗು ತ್ತಿದೆ. ಸಾಧ್ಯವಾದರೆ ಇದನ್ನು ತಡೆಯಲು ಸಂಬಂಧಪಟ್ಟವರು ಮುಂದಾಗಲಿ. ಬೀಫ್ ಮಾಂಸದ ಖಾದ್ಯವನ್ನು ಮಾರಾಟ ಮಾಡುವಲ್ಲಿ ಹೋಗಿ ನೋಡಿ ದರೆ ನೈಜ ಸ್ಥಿತಿ ಅರಿವಾಗುತ್ತದೆ. ಅಲ್ಲಿ ಮುಸ್ಲಿಮರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅನ್ಯಧರ್ಮೀಯರೂ ಮಾಂಸಾಹಾರ ಸೇವನೆ ಮಾಡುತ್ತಾರೆ.
ರಂಜಿತ್ ಸುವರ್ಣ, ಅಂಗಡಿಗುಡ್ಡೆ
ಪೊಲೀಸ್ ಔಟ್ಪೋಸ್ಟ್ಗಳು ಯಾವ ಪುರುಷಾರ್ಥಕ್ಕಾಗಿ?
ಮಂಗಳೂರಿನಲ್ಲಿ ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಬಂದ ನಂತರ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬೀದಿ ಬೀದಿ ತಿರುಗುವ ಪಿಸಿಆರ್ಗಳಿಂದ ಹಿಡಿದು ನಗರವನ್ನು ಚಿತ್ರೀಕರಿಸುವ ಕ್ಯಾಮರಾಗಳು ಕೂಡ ಬಂದಿವೆ. ಇತ್ತೀಚೆಗಷ್ಟೇ ಇಲಾಖೆ ನಗರದ ಕೆಲವೊಂದು ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಔಟ್ಪೋಸ್ಟ್ಗ ಳನ್ನು ನಿರ್ಮಿಸಿ, ಪೂಜೆ ಮಾಡಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿ ಸಿತ್ತು. ಆದರೆ ಇದೀಗ ಕೆಲವೊಂದು ಪ್ರದೇಶಗಳಲ್ಲಿ ಇವುಗಳು ತುಕ್ಕು ಹಿಡಿಯುತ್ತಿವೆ ಎಂದರೆ ತಪ್ಪಿಲ್ಲ.
ಕೆಲವೊಂದು ಕಡೆಗಳಲ್ಲಿ ಈ ಔಟ್ಪೋಸ್ಟ್ಗಳು ಇದ್ದರೂ ಪೊಲೀ ಸರಿಗೆ ಪಕ್ಕದ ಅಂಗಡಿಗಳೇ ವಾಸಸ್ಥಾನವಾಗಿದೆ. ಈ ಔಟ್ಪೋ ಸ್ಟನ್ನು ಕೇಳುವವರೇ ಇಲ್ಲವಾಗಿದೆ. ಇಲಾಖೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಆರಂಭಿಸುವ ಈ ಸೇವೆಗಳು ಒಂದೆರೆಡು ದಿನ ಉಪಯೋಗಕ್ಕೆ ಬರುವುದನ್ನು ಬಿಟ್ಟರೆ ಮತ್ತೆ ಇದರ ಸುಳಿವೇ ಇರುವುದಿಲ್ಲ. ಉದಾಹರಣೆಗೆ ಪಿಸಿಆರ್ ವಾಹನ ತನ್ನ ನೈಜ ಉದ್ದೇಶಕ್ಕೆ ಬಳಕೆಯಾಗುತ್ತಿಲ್ಲ. ಇದು ಎಲ್ಲೋ ಮರದ ಅಡಿಯಲ್ಲಿ ಸಮಯ ಕಳೆಯುತ್ತಿರುತ್ತದೆ. ಇನ್ನು ನಗರದಲ್ಲಿ ಅಳವಡಿಸಲಾದ ಕ್ಯಾಮರಾಗಳು ಕೆಲಸ ನಿರ್ವಹಿಸು ತ್ತಿರುವ ಬಗ್ಗೆಯೂ ಅನುಮಾನಗಳಿವೆ. ನಮ್ಮಲ್ಲಿ ವ್ಯವಸ್ಥೆಗಳು ಹಳ್ಳ ಹಿಡಿಯುತ್ತವೆ ಎನ್ನುವುದಕ್ಕೆ ಇದೊಂದು ಉದಾಹರ ಣೆಯಷ್ಟೇ ಎನ್ನಬಹುದು. ಇನ್ನಾದರೂ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ರವರು ಇತ್ತ ಗಮನ ಹರಿಸುವರೇ? ಸಂಕೇತ್ ನಾಯಕ್, ಕಂಕನಾಡಿ
ಸರಳ ವಿವಾಹಕ್ಕೆ ಸರಕಾರ ಪ್ರೋತ್ಸಾಹ ಕೊಡಲಿ
ದುಂದುವೆಚ್ಚದ ಮದುವೆ ಎಲ್ಲೆಲ್ಲೂ ನಡೆಯುತ್ತದೆ. ಆದರೆ ಅದರ ನಡುವೆ ಎಲ್ಲೋ ಒಂದೆರಡು ಕಡೆ ಸಾಮಾಜಿಕ ಸಂಘಟನೆಗಳು, ದೇವಾಲ ಯಗಳು ಸರಳ ಮದುವೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಿವೆ. ಇದು ಒಳ್ಳೆಯ ಬೆಳವಣಿಗೆಯೇ ಸರಿ. ಯಾಕೆಂ ದರೆ ಆಡಂಬರದ ಮದುವೆಗೆ ಖರ್ಚು ಮಾಡುವ ಹಣವನ್ನು ಸಮಾಜದ ಲ್ಲಿನ ಬಡವರಿಗೆ ದಾನ ಮಾಡಿದರೆ ಇದರಿಂದ ಹತ್ತಾರು ಕುಟುಂಬಗಳು ವರ್ಷಪೂರ್ತಿ ಒಂದು ಹೊತ್ತಿನ ಅನ್ನ ಉಣ್ಣಬಹುದು. ಆದರೆ ಸರಳ ವಿವಾ ಹವಾದಲ್ಲಿ ತಮ್ಮ ಪ್ರತಿಷ್ಠೆಗೆ ಕುಂದುಂಟಾಗುತ್ತದೆ ಎಂದೇ ಶ್ರೀಮಂತರು ನಂಬಿ ರುವ ಕಾರಣ ಸರಳ ವಿವಾಹಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ. ಆದ್ದರಿಂದ ರಾಜ್ಯ ಸರಕಾರ ಸರಳ ಮದುವೆಯನ್ನು ಪ್ರೋತ್ಸಾಹಿಸಲು ವಿಶೇಷ ಯೋಜನೆಯನ್ನು ರೂಪಿಸಬೇಕು. ಸರಳ ಮದುವೆಯಾಗುವವರಿಗೆ ಹಣಕಾಸಿನ ನೆರವನ್ನು ಪ್ರಕ ಟಿಸಬೇಕು. ಇದರಿಂದ ಸರಳ ಮದುವೆಯಾಗಲು ಹೆಚ್ಚೆಚ್ಚು ಮಂದಿ ಮುಂದೆ ಬರುವುದರಲ್ಲಿ ಸಂಶಯವಿಲ್ಲ. ಸುಪ್ರಿಯಾ ಎಸ್., ನಾರಾವಿ
ಕಟ್ಟಡ ಕಾರ್ಮಿಕರಿಗೆ ಭದ್ರತೆ ಒದಗಿಸಿ
ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯದ ವೇಳೆ ತಡೆಗೋಡೆ ಕುಸಿದು ಕಾರ್ಮಿಕನೊಬ್ಬ ಏಳು ಘಂಟೆ ಅದರೊಳಗೆ ಸಿಲು ಕಿದ್ದ. ನಂತರ ಆತನನ್ನು ರಕ್ಷಿಸಲಾ ಯಿತಾದರೂ ಇಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಯ ಮತ್ತು ಗುತ್ತಿಗೆದಾರರ ಬೇಜ ವಾಬ್ದಾರಿ ಎದ್ದು ಕಾಣುತ್ತಿತ್ತು. ನಾನು ಅಲ್ಲೇ ಇದ್ದು ಸಂಪೂರ್ಣ ರಕ್ಷಣಾ ಕಾರ್ಯವನ್ನು ವೀಕ್ಷಿಸಿದ್ದೇನೆ. ಈ ವೇಳೆ ಅನೇಕ ಲೋಪ ದೋಷಗಳು ನನಗೆ ಕಂಡುಬಂದವು. ಇದೊಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದ ಕಾರಣ ಸಂಸ್ಥೆ ಯಾವುದೇ ಮುನ್ನೆ ಚ್ಚರಿಕೆ ಕ್ರಮವನ್ನು ತೆಗೆದುಕೊಂಡಿ ರಲಿಲ್ಲ. ತಗ್ಗು ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ನಡೆಸುವ ವೇಳೆ ಮಳೆಯ ನೀರು ನಿಲ್ಲುವುದು ಸಾಮಾನ್ಯ. ಇಲ್ಲೂ ಅದೇ ರೀತಿ ನೀರು ನಿಂತಿತ್ತು. ಆದರೆ ಇದನ್ನು ಪಂಪ್ ಮಾಡಿ ಹೊರಹಾಕುವ ಯಾವುದೇ ವ್ಯವಸ್ಥೆಯನ್ನು ಸಂಸ್ಥೆ ಮಾಡಿರಲಿಲ್ಲ. ಇದರಿಂದಾಗಿ ತಳಭಾ ಗದಲ್ಲಿ ನೀರು ನಿಂತ ಪರಿಣಾಮ ಮಣ್ಣು ಇನ್ನಷ್ಟು ಕುಸಿಯಲು ಕಾರಣ ವಾಗಿರಬಹುದು. ಅಷ್ಟೇ ಅಲ್ಲದೇ ಕಾರ್ಮಿಕರಿಗೂ ಸೂಕ್ತ ಭದ್ರತೆ ಒದಗಿ ಸಿರಲಿಲ್ಲ.
ಮುಖ್ಯವಾಗಿ ಕಾರ್ಮಿಕರಿಗೆ ಒದಗಿಸಬೇಕಾದ ತಲೆಯ ರಕ್ಷಣಾ ಕವಚವನ್ನೂ ಒದಗಿಸಿರಲಿಲ್ಲ. ಅಲ್ಲದೇ ಆದಿತ್ಯವಾರವೂ ಕಾರ್ಮಿಕರನ್ನು ಗುತ್ತಿಗೆದಾರ ದುಡಿಸಿಕೊಳ್ಳುತ್ತಿದ್ದ. ಮಳೆ-ಗಾಳಿಗೆ ದುಡಿಯುವ ಕಾರ್ಮಿ ಕರಿಗೆ ಯಾವುದೇ ರಕ್ಷಣೆಯಿರಲಿಲ್ಲ. ಇದು ಕೇವಲ ಇಲ್ಲಿಯ ಪರಿಸ್ಥಿತಿ ಯಲ್ಲ. ಇಂದು ನಗರದಲ್ಲಿ ನಡೆ ಯುತ್ತಿರುವ ಬಹುತೇಕ ಕಟ್ಟಡ ಕಾಮ ಗಾರಿಗಳಲ್ಲಿ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.
ವಾಲ್ಟರ್ ಡಿಸೋಜಾ, ತೊಕ್ಕೊಟ್ಟು
ಪಾರ್ಕಿಂಗ್ ಶುಲ್ಕ ವಸೂಲಾತಿಗೆ ಮುನ್ನ ಸ್ವಚ್ಚತೆ ಕಾಪಾಡಿ
ನಗರದ ಕೆಲವೊಂದು ಕಡೆಗಳಲ್ಲಿ ಪಾಲಿಕೆಯ ಅಭಯ ಹಸ್ತದೊಂದಿಗೆ ಕೆಲ ಗುತ್ತಿಗೆದಾರರು ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ. ಅದೇ ರೀತಿ ನಗರದ ಹೃದಯ ಭಾಗವಾದ ಸರ್ಕಾರಿ ಕಾಲೇಜಿನ ಮುಂಭಾಗ ಅಂದರೆ ಕುನಿಲ್ ಸೆಂಟರ್ನ ಪಕ್ಕದಲ್ಲೂ ಪಾರ್ಕಿಂಗ್ ಶುಲ್ಕ ಪಡೆಯುತ್ತಾರೆ. ಆದರೆ ಇಲ್ಲಿ ಸ್ವಚ್ಚತೆ ಎನ್ನುವುದೇ ಮರೀಚಿಕೆಯಾಗಿದೆ. ಪಕ್ಕದಲ್ಲೇ ಒಂದು ಶೌಚಾಲಯ ವಿದ್ದು, ಅಲ್ಲಿನ ನೀರು ಮತ್ತು ಕಸದ ತೊಟ್ಟಿಯ ಕೊಳಚೆ ತ್ಯಾಜ್ಯ ನೇರವಾಗಿ ವಾಹನ ನಿಲ್ಲಿಸಿದ ಸ್ಥಳಕ್ಕೆ ಹರಿದು ಬರುತ್ತದೆ. ವಾಹನ ನಿಲ್ಲಿಸಿದ್ದಕ್ಕೆ ಇಂತಿಷ್ಟೇ ಎಂದು ಶುಲ್ಕ ವಸೂಲಿ ಮಾಡುವ ಪಾಲಿಕೆ ಇಲ್ಲಿನ ಸ್ವಚ್ಚತೆಯ ಕಡೆಗೆ ಯಾಕೆ ಗಮನ ಹರಿಸುತ್ತಿಲ್ಲ? ಇಲ್ಲಿ ಗುತ್ತಿಗೆದಾರರನ್ನು ದೂರಿ ಪ್ರಯೋಜನವಿಲ್ಲ. ಯಾಕೆಂ ದರೆ ಅವರು ಟೆಂಡರ್ ಪಡೆದು ತಮ್ಮ ಕೆಲಸ ನಿರ್ವಹಿಸುತ್ತಾರೆ. ಆದರೆ ಗುತ್ತಿಗೆ ಕೊಟ್ಟು ತನ್ನ ಬೊಕ್ಕಸ ತುಂಬಿಸುವ ಪಾಲಿಕೆ ಇದನ್ನೆಲ್ಲಾ ಗಮನಿಸಬೇಕಲ್ಲವೇ? ಕೇವಲ ವಾಹನ ನಿಲ್ಲಿಸಿದ್ದಕ್ಕೆ ಶುಲ್ಕ ವಸೂಲಿ ಮಾಡುವ ಪಾಲಿಕೆ ಅದೇ ಹಣದ ಸ್ವಲ್ಪ ಭಾಗವನ್ನು ಉಪಯೋಗಿಸಿದರೂ ಇಲ್ಲಿನ ಸ್ವಚ್ಚತೆ ಕಷ್ಟವೇನಲ್ಲ. ಆದರೆ ನಮ್ಮ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಬೇಕಷ್ಟೇ.
ಮಹಮ್ಮದ್ ಹುನೈಸ್, ಬಂದರ್
ಹರಿದು ಹೋಗಿರುವ ಧ್ವಜ
ಮಂಗಳೂರು ಹಳೇ ಬಂದರಿನಲ್ಲಿ ಸಾಲಾಗಿ ನಿಂತಿರುವ ದೋಣಿ ಗಳಲ್ಲಿ ಹಲವು ದೋಣಿಗಳಲ್ಲಿ ನಮ್ಮ ರಾಷ್ಟ್ರಧ್ವಜ ಇದೆ. ಆದರೆ ಬಹುತೇಕ ಧ್ವಜಗಳು ಹರಿದು ಹೋಗಿದ್ದು, ಇದನ್ನು ಯಾರೂ ಗಮನಿಸುತ್ತಿಲ್ಲವೇಕೆ? ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಧ್ವಜಕ್ಕಾಗುವ ಅವ ಮಾನವನ್ನು ತಡೆಗಟ್ಟಬೇಕೆಂದು ಆಶಿಸುತ್ತೇನೆ.
ರೋಡ್ನಿ ಡಿಮೆಲ್ಲೋ, ಬಿಜೈಕಾಪಿಕಾಡ್
ದೇಶದ್ರೋಹಿ ಆರೋಪ ಸರಿಯಲ್ಲ
ನಕ್ಸಲ್ ಬೆಂಬಲಿಗನೆಂದು ಹಣೆಪಟ್ಟಿ ಕಟ್ಟಲಾಗಿರುವ ವಿಠಲ ಮಲೆ ಕುಡಿಯನ ಮೇಲೆ ದೇಶ ದ್ರೋಹದ ಆರೋಪ ಹೊರಿಸಲಾಗಿದೆ. ಆದರೆ ೧೯ ವರ್ಷ ಪ್ರಾಯದ ಪತ್ರಿಕೋದ್ಯಮ ವಿದ್ಯಾರ್ಥಿಯ ಮೇಲೆ ಗುರುತರ ಆರೋಪ ಹೊರಿಸುವ ಮುನ್ನ ನಮ್ಮ ಪೊಲೀಸ್ ಇಲಾಖೆ, ಸರಕಾರ ಗಂಭೀರವಾಗಿ ಚಿಂತಿಸಬೇಕಿತ್ತು. ಯಾಕೆಂದರೆ ವಿಠಲನದ್ದು ಬೆಳೆಯುವ ಮನಸ್ಸು. ಆತ ತಿಳಿದೋ, ತಿಳಿಯದೆಯೋ ನಕ್ಸಲರಿಗೆ ತನ್ನ ಬೆಂಬಲ ನೀಡಿರ ಬಹುದು. ಆದರೆ ಹಾಗೆಂದ ಮಾತ್ರಕ್ಕೆ ಆತ ದೇಶದ್ರೋಹದ ಯಾವುದೇ ಕೃತ್ಯವೆಸಗಿಲ್ಲ. ಎಲ್ಲೂ ಬಾಂಬ್ಸ್ಫೋಟ ನಡೆಸಿಲ್ಲ. ಹೀಗಿದ್ದರೂ ದೇಶದ್ರೋಹಕ್ಕೆ ಹೊಂಚು ಹಾಕಿದ್ದ ಎಂದು ಗಂಭೀರ ಆರೋಪ ಮಾಡುವುದು ಸರಿಯೇ?
ರಮೇಶ್ ನಾಯ್ಕ, ವರಂಗ
ಊಟ ಮಾಡಿ ಪ್ರಚಾರ ಬಯಸಬೇಡಿ
ಇತ್ತೀಚೆಗೆ ಬಿಜೆಪಿಯ ದ.ಕ. ಜಿಲ್ಲೆಯ ಸಂಸ ದರು ಮತ್ತು ಇವರ ಬಳಗ ಎಪ್ರಿಲ್ ೧೪ರಂದು ಉಪ್ಪಿನಂಗಡಿಯ ಕಜೆಕ್ಕಾರು ನಿವಾಸಿಯವರ ಮನೆ ಯಲ್ಲಿ ಊಟ ಮಾಡಿ ಮಾಧ್ಯಮಗಳಲ್ಲಿ ಭರ್ಜರಿ ಪ್ರಚಾರಗಿಟ್ಟಿಸಿಕೊಂಡರು. ಇದರಿಂದ ಈ ಪಕ್ಷದವ ರಿಗೆ ಮಾತ್ರ ಲಾಭವಾಗಿದೆ ಹೊರತು ಅಲ್ಲಿನ ದಲಿತ ನಿವಾಸಿಗಳಿಗಲ್ಲ. ದಲಿತರಿಗೆ ಬೇಕಾಗಿರುವುದು ಇಂಥ ಜಾತಿವಾದಿಗಳು ತಮ್ಮ ಮನೆಯಲ್ಲಿ ಊಟ ಮಾಡು ವುದು ಅಲ್ಲ. ಬದಲಾಗಿ ಸರಕಾರದಿಂದ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿರಿಸಿದ ಹಲವು ಸವಲ ತ್ತುಗಳನ್ನು ಈ ಜನಾಂಗದವರಿಗೆ ಪ್ರಾಮಾಣಿಕವಾಗಿ ತಲುಪಿಸುವುದಾಗಿದೆ. ಈ ಧುರೀಣರು ಮಾಡಿರುವ ಈ ಕೃತ್ಯದಿಂದ ಎಲ್ಲ ದಲಿತ ವರ್ಗದವರು ತಲೆತಗ್ಗಿ ಸುವಂತಾಗಿದೆ.
ಜನಪ್ರತಿನಿಧಿಗಳು ಕೆಲವು ವಿಚಾರಗಳನ್ನು ತಿಳಿ ದುಕೊಳ್ಳಬೇಕಿದೆ. ಈ ಹಿಂದೆ ಇದ್ದಂತೆ ದಲಿತ ವರ್ಗ ದಲ್ಲಿ ಅನಕ್ಷರಸ್ಥರು ಯಾರೂ ಇಲ್ಲ. ಎಲ್ಲಾ ಮನೆ ಗಳಲ್ಲೂ ವಿದ್ಯಾವಂತರಿದ್ದಾರೆ. ಇವರು ಮಾಡಿರುವ ಈ ಕೃತ್ಯದಿಂದಾಗಿ ಅದೆಷ್ಟೋ ಬಡ ಹೃದಯಗ ಳಿಗೆ ನೋವಾಗಿದೆ ಎಂದು ಇವರಿಗೆ ತಿಳಿದಿದಿಯೇ? ಈಗ ಎಲ್ಲ ಕಾಲೋನಿಗಳಲ್ಲಿ ಎಲ್ಲಾ ವರ್ಗದವರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಸನ್ನಿವೇಶವನ್ನು ನೋಡಲಾಗದ ಈ ರಾಜಕೀಯ ಜಾತಿವಾದಿಗಳು ಅಲ್ಲಿಗೆ ತೆರಳಿ ಪ್ರಚಾರಕ್ಕೋಸ್ಕರ ಜಾತಿ ವಿಷ ಬೀಜವನ್ನು ಭಿತ್ತಿ ಸಮಾಜವನ್ನು ಒಡೆ ಯುತ್ತಿದ್ದಾರೆ. ಈ ಸಂಸದರು ಚುನಾವಣೆಯಲ್ಲಿ ಗೆದ್ದು ಐದು ವರ್ಷವಾಗುತ್ತಾ ಬಂದಿದೆ. ಇಷ್ಟು ವರ್ಷ ಬಡವರ ಮೇಲೆ ಪ್ರೀತಿ ಗೌರವ ಇಲ್ಲದ ಇವರಿಗೆ ಈಗ ಯಾಕೆ ಬಡವರ ಮೇಲೆ ಕರುಣೆ?
ಇದು ನಿಜವಾಗಿ ಇವರಿಗೆ ಅಗತ್ಯವಿತ್ತೇ? ಅದೆಷ್ಟೋ ದಲಿತ ವರ್ಗದ ಯೋಜನೆಗಳು ಹಳ್ಳ ಹಿಡಿಯುತ್ತಾ ಇದೆ. ಇದಕ್ಕೆ ಚಾಲನೆ ನೀಡಿ ಫಲಾನು ಭವಿಗಳಿಗೆ ಯೋಜನೆಗಳ ಸವಲತ್ತುಗಳನ್ನು ದೊರ ಕಿಸಿ ಕೊಟ್ಟು ಈ ರೀತಿಯಲ್ಲಿಯಾದರೂ ಪ್ರಚಾರ ಪಡೆಯ ಬಹುದಲ್ಲವೇ? ದಲಿತ ವರ್ಗದವರು ಸ್ವಾಭಿ ಮಾನದತ್ತ ಹೆಜ್ಜೆ ಇಡುತ್ತಾ ಬಂದಿದ್ದಾರೆ. ಕಪಟ ರಾಜಕಾರಣದಿಂದ ದಲಿತ ಸಮುದಾಯವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಬೇಡಿ. ಊಟ ಮಾಡಿ ಪ್ರಚಾರ ಪಡೆಯುವ ಬದಲು, ಈ ವರ್ಗದ ಜನರಿಗೆ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾ ಜಿಕವಾಗಿ ಹಲವು ಯೋಜನೆಗಳನ್ನು ರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿ ದರೆ ಸಂಸದರಿಗೆ ಶೋಭೆ ತರುತ್ತದೆ.
ಆಹಾರವನ್ನು ಈ ಭೂಮಿಯಲ್ಲಿರುವ ಪ್ರತಿ ಯೊಂದು ಜೀವಿಯೂ ಸೇವಿಸುತ್ತದೆ. ತಿನ್ನುವ ಅನ್ನದಲ್ಲಿ ಯಾಕೆ ಮೇಲು ಕೀಳು ಎಂದು ಭಾವಿ ಸುತ್ತೀರಿ. ಎಲ್ಲರು ಹೊಟ್ಟೆಗೆ ಸೇವಿಸುವುದು ಅನ್ನವೇ ಎಂಬುದನ್ನು ರಾಜಕಾರಣಿಗಳು ತಿಳಿದು ಕೊಂಡರೆ ಒಳ್ಳೆಯದು. ರಾಜಕೀಯ ನಾಯಕರ ಇಂತಹ ಕೃತ್ಯಗಳನ್ನು ದಲಿತ ಮುಖಂಡರು ನೇರವಾಗಿ ಖಂಡಿ ಸಬೇಕಾಗಿದೆ. ಪ್ರವೀಣ್, ನೆಕ್ಕಿಲಾಡಿ, ಪುತ್ತೂರು