ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕಟೀಲಿಗೆ ಭೇಟಿ ನೀಡುವ ಭಕ್ತರು ಸರ್ವಿಸ್ ಬಸ್ಗಳನ್ನೇ ಸಂಚಾರಕ್ಕೆ ಅವಲಂಬಿಸಬೇಕಾಗಿದೆ. ಈ ರೂಟ್ ನಲ್ಲಿ ಸಂಚರಿಸುವ ಬಹುತೇಕ ಬಸ್ ಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುತ್ತವೆ. ನಿರ್ವಾಹಕ ಬಸ್ನೊ ಳಗಡೆ ಕಾಲಿಡಲು ಜಾಗ ಸಿಗದಷ್ಟು ಒತ್ತಾಗಿ ಪ್ರಯಾಣಿಕರನ್ನು ಕುರಿಮಂ ದೆಯಂತೆ ತುಂಬಿಸುತ್ತಾನೆ. ಇದ ರಿಂದ ಸುಗಮ ಸಂಚಾರ ಸಾಧ್ಯವಾ ಗುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಗಮನಿಸಿ ಮಂಗಳೂರಿ ನಿಂದ ಕಟೀಲಿಗೆ ಸರಕಾರಿ ಬಸ್ ಸೇವೆಯನ್ನು ಒದಗಿಸಲು ಕ್ರಮ ಕೈಗೊ ಳ್ಳಬೇಕು. ದಿನಕ್ಕೆ ಕೆಲವು ಟ್ರಿಪ್ಗಳ ನ್ನಾದರೂ ಸರಕಾರಿ ಬಸ್ಗಳನ್ನು ಓಡಿಸಿದಲ್ಲಿ ಪ್ರಯಾಣಿಕರ ಒತ್ತಡವೂ ಕಡಿಮೆಯಾಗುತ್ತದೆ. ಭಕ್ತರು ನಿರಾ ತಂಕವಾಗಿ ಸಂಚಾರ ಮಾಡಬಹು ದಾಗಿದೆ.
ಸುಚಿತ್ರಾ, ವಾಮಂಜೂರು
ರಸ್ತೆಯಲ್ಲೇ ಸಂತೆ
ಪ್ರತೀ ಗುರುವಾರ ಕಿನ್ನಿಗೋಳಿ ಯಲ್ಲಿ ವಾರದ ಸಂತೆ ಭಾರೀ ಗೌಜಿ ಯಿಂದ ನಡೆಯುತ್ತದೆ. ಸಂತೆ ಮಾರು ಕಟ್ಟೆ ಪ್ರಾಂಗಣದ ಒಳಗಿನ ಜಾಗ ಇಕ್ಕ ಟ್ಟಾದ ಕಾರಣ ಬಹುತೇಕ ವ್ಯಾಪಾ ರಿಗಳು ರಸ್ತೆಯ ಬದಿ ಪಾದಚಾರಿ ಗಳು ನಡೆದಾಡುವ ಸ್ಥಳವನ್ನೂ ಆಕ್ರ ಮಿಸಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ ಮಾರುಕಟ್ಟೆಯ ಒಳಭಾಗಕ್ಕೆ ಹೋಗು ವಂತೆಯೇ ಇಲ್ಲ. ದಾರಿಯ ಇಕ್ಕೆಲ ಗಳಲ್ಲಿ ವ್ಯಾಪಾರಿಗಳು ಕುಳಿತು ಕೊಳ್ಳುತ್ತಾರೆ. ಇವರಿಗೆ ಸೂಕ್ತ ವ್ಯವಸ್ಥೆ ಯನ್ನೂ ಮಾಡಲಾಗಿಲ್ಲ. ಸಂತೆ ಮಾರುಕಟ್ಟೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಕಾಮಗಾರಿ ಮುಗಿ ದಿಲ್ಲ. ಸಂಬಂಧಪಟ್ಟವರು ಇನ್ನಾ ದರೂ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿ ವಿನಂತಿ.
ಪಾಯಸ್, ಕಿನ್ನಿಗೋಳಿ
ಮದುವೆ ಬ್ರೋಕರ್ಗಳ ಬಗ್ಗೆ ಎಚ್ಚರವಿರಲಿ!
ಜೀವನದಲ್ಲಿ ಮದುವೆ ಎನ್ನುವುದು ಒಂದು ಬಾರಿ ಮಾತ್ರ ನಡೆಯುತ್ತದೆ ಎನ್ನು ವುದು ಹಳೆಯ ಮಾತು. ಯಾಕೆಂದರೆ ಈಗ ಒಂದಲ್ಲ, ಎರಡಲ್ಲ, ಅನೇಕ ಬಾರಿ ಮದುವೆಯಾದವರೂ ನಮ್ಮ ಸಮಾಜದಲ್ಲಿದ್ದಾರೆ. ಎಲ್ಲೋ ಒಂದೆರಡು ಕಡೆ ಗುಟ್ಟು ರಟ್ಟಾಗಿ ಚಾನೆಲ್, ಪತ್ರಿ ಕೆಗಳಲ್ಲಿ ಸುದ್ದಿಯಾದರೂ ವಾಸ್ತವವಾಗಿ ಇದೇನೂ ದೊಡ್ಡ ಸಂಗತಿ ಎಂದೆನಿಸುವುದಿಲ್ಲ. ಹೀಗಾಗಿ ಮದುವೆ ಎನ್ನುವುದು ತನ್ನ ನಿಜಾರ್ಥ ಕಳೆದು ಕೊಳ್ಳುತ್ತಿದೆ. ಹಣದ ಆಸೆಗಾಗಿ ಮದುವೆ ಬ್ರೋಕ ರ್ಗಳು ಹಾಗೂ ಕೆಲವು ಮದುವೆ ಮಾಡಿಸುವ ಕೇಂದ್ರಗಳು ಗಂಡು-ಹೆಣ್ಣಿನ ಪೂರ್ವಾಪರ ಅರಿಯದೆ ಮದುವೆ ಮಾಡಿಸು ತ್ತವೆ. ಇದರಿಂದ ಬಡಕುಟುಂಬ ಗಳು ಪಡುವ ಯಾತನೆ ಅಷ್ಟಿ ಷ್ಟಲ್ಲ. ಮದುವೆ ಗಂಡಿನ ಬಗ್ಗೆ ತಿಳಿಯದೆ ಅವಸರಕ್ಕೆ ಕಟ್ಟುಬಿದ್ದು ಹೆಣ್ಣು ಕೊಟ್ಟವರ ಪಾಡು ಕೇಳುವುದೇ ಬೇಡ. ಸಾಲ ಮಾಡಿ ಮದುವೆ ಮಾಡಿರುತ್ತಾರೆ, ಕೊನೆ ಗೊಂದು ದಿನ ಮದುವೆ ಗಂಡಿನ ಅಪರಾವತಾರ ಅರಿವಾದ ಮೇಲೆ ಸಾವೇ ಒಳ್ಳೆಯದು ಅನ್ನಿಸಿ ಬಿಡುತ್ತದೆ. ಇಲ್ಲಿ ಜನರು ಮೂರ್ಖರಂತೆ ವರ್ತಿಸು ವುದೂ ಒಂದು ಕಾರಣ. ಇಂದು ಮಂಗಳೂರು ಮಹಾನಗರದಲ್ಲಿ ಹತ್ತಾರು ಮದುವೆ ಮಾಡಿಸುವ ಕೇಂದ್ರಗಳು, ಸಾವಿರಾರು ಮಂದಿ ಬ್ರೋಕರ್ಗಳು ಇದ್ದಾರೆ.
ಆಯಾ ಧರ್ಮಕ್ಕೆ ಪ್ರತ್ಯೇಕ-ಪ್ರತ್ಯೇಕ ಮದುವೆ ಮಾಡಿಸುವವರೂ ಇರುತ್ತಾರೆ. ಇವರೆಲ್ಲ ಒಂದು ಪ್ರೊಫೈಲ್ಗೆ ಇಂತಿಷ್ಟು ಶೇ. ದುಡ್ಡು ಕಮಾಯಿಸು ತ್ತಾರೆಯೇ ಹೊರತು ಯೋಗ್ಯ ಬಾಳಸಂಗಾತಿ ಯನ್ನು ಹುಡುಕಿಕೊಡುವುದಿಲ್ಲ. ಇಲ್ಲಿಗೆ ಹೋಗುವ ಮುನ್ನ ಸಾಕಷ್ಟು ಬಾರಿ ಚಿಂತಿಸಬೇಕು. ಯಾಕೆಂ ದರೆ ಜೀವನ ಎನ್ನುವುದು ನಾಲ್ಕು ದಿನದಲ್ಲಿ ಮುಗಿದು ಹೋಗುವಂಥದ್ದಲ್ಲ, ನೆನಪಿರಲಿ.
ಕೆ.ಹರೀಶ್ ಕುಲಾಲ್, ಮುಂಡ್ಕೂರು
ಸುಳ್ಳೇ ಸುಳ್ಳು...ಎಲ್ಲಾ ಸುಳ್ಳು!
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಜನತಾದಳ(ಜಾ) ಪಕ್ಷದ ಅಧ್ಯಕ್ಷನಾಗಿ ನಾನು ಸುಮಾರು ಎರಡು ವರ್ಷದಿಂದ ಈ ತನಕ ಪಕ್ಷ ಸಂಘಟಿಸಿರುತ್ತೇನೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪಕ್ಷದ ಧನರಾಜ ಎಂಬವರು ಪಕ್ಷದ ನಾಯಕರ ವಿರುದ್ಧ ವಿನಾ ಕಾರಣ ಪತ್ರಿಕಾ ಹೇಳಿಕೆ ನೀಡಿ ಕಾರ್ಯಕರ್ತರನ್ನು ಮುಜುಗರಕ್ಕೊಳಪಡಿಸಿದ್ದು ಈ ವಿಚಾರ ಪಕ್ಷದ ನಾಯಕರ ಗಮನಕ್ಕೆ ಬಂದಿರುವುದರಿಂದ ಜಿಲ್ಲಾಧ್ಯಕ್ಷರು ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಗಮನಕ್ಕೆ ತಂದ ಪರಿಣಾಮ ಧನರಾಜರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದರು.
ಇದರಿಂದ ಸದ್ರಿ ವ್ಯಕ್ತಿ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡು ಪತ್ರಿಕೆಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ತಾನೇ ಎಂದು ಸ್ವಯಂ ಆಗಿ ಘೋಷಿಸಿಕೊಂಡಿರುತ್ತಾರೆ. ಸದ್ರಿ ವ್ಯಕ್ತಿ ನೀಡುವ ಹೇಳಿ ಕೆಗೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಇದರಿಂದ ಪಕ್ಷದ ಸಕ್ರಿಯ ಕಾರ್ಯಕರ್ತರು ವಿಚಲಿತರಾಗಬೇಕಿಲ್ಲ. ಕಾರ್ಯಕರ್ತರು ಪಕ್ಷದ ವಿಚಾರದಲ್ಲಿ ಧನರಾಜ ಜೊತೆ ವ್ಯವಹರಿಸಲು ಅವಕಾಶವಿಲ್ಲ. ಪಕ್ಷದ ವಿಷಯದಲ್ಲಿ ಯಾರಾದರೂ ಅವರನ್ನು ಸಂಪರ್ಕಿಸಿದರೆ ಅಂಥವರ ವಿರುದ್ದ ಶಿಸ್ತು ಕ್ರಮಕ್ಕಾಗಿ ಶಿಫಾರಸ್ಸು ಮಾಡಲಾಗುವುದು.
ಎಂ.ಸುಧಾಕರ್ ಭಟ್, ಅಧ್ಯಕ್ಷರು, ಜನತಾದಳ(ಜಾತ್ಯತೀತ), ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ
ಮಟ್ಕಾ ದಂಧೆಯನ್ನು ಮಟ್ಟಹಾಕುವಿರಾ?
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ದಂಧೆ ಯಾರ ಭಯವೂ ಇಲ್ಲದೆ ನಡೆಯುತ್ತಿದೆ. ದಂಧೆಕೋರರು ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಈ ದಂಧೆಯನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳ ಬೇಕಿದೆ. ಠಾಣಾ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡು, ಕೆರೆಕಾಡು, ಎಸ್ಕೋಡಿ, ಕಿನ್ನಿಗೋಳಿ ಪರಿಸರದಲ್ಲಿ ಈ ದಂಧೆ ಆಳವಾಗಿ ಬೇರೂರಿದ್ದು, ಮುಲ್ಕಿ ಠಾಣಾ ನೂತನ ಎಸ್.ಐ. ಅವರ ಬಗ್ಗೆ ಇಲ್ಲಿನ ನಾಗರಿಕರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ನಿರೀಕ್ಷೆಯನ್ನು ಅವರು ಹುಸಿ ಮಾಡದೆ ಇಲ್ಲಿರುವ ಸಮಾಜಬಾಹಿರ ಶಕ್ತಿಗಳನ್ನು, ಇಲ್ಲಿ ಹಗಲು ಹೊತ್ತಲ್ಲೇ ನಡೆಯುವ ಕಳ್ಳತನಗಳನ್ನು ತಡೆಯಲಿ.
ನಾಗರಿಕರು, ಲಿಂಗಪ್ಪಯ್ಯಕಾಡು
ಪಬ್ಲಿಕ್ ಟಾಯ್ಲ್ಲೆಟ್ಗೆ ನೈಜ ದರವೆಷ್ಟು?
ಸರ್ಕಾರ ಸಾರ್ವಜನಿಕರ ಅನು ಕೂಲಕ್ಕಾಗಿ ನಿರ್ಮಿಸಿದ ಸಾರ್ವಜ ನಿಕ ಶೌಚಾಲಯಗಳಲ್ಲಿ ನಿಗದಿಗಿಂತ ಹೆಚ್ಚಿನ ದರವನ್ನು ವಸೂಲಿ ಮಾಡು ತ್ತಿದ್ದು, ನೈಜ ದರ ಯಾವುದೆಂಬ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ವುಂಟಾಗಿದೆ. ನಗರದ ಕೆಎಸ್ಆರ್ ಟಿಸಿಯಲ್ಲಿರುವ ಸಾರ್ವಜನಿಕ ಶೌಚಾ ಲಯವೊಂದನ್ನು ಬಿಟ್ಟು ನಗರದ ಬಹುತೇಕ ಕಡೆಗಳಲ್ಲಿ ದುಬಾರಿ ಶುಲ್ಕ ಪಡೆಯುತ್ತಿದ್ದಾರೆ. ನಿಜವಾಗಿ ಎರಡು ರೂಪಾಯಿಯಾದರೂ ಕೆಲವೊಂದು ಕಡೆಗಳಲ್ಲಿ ಮೂರು, ನಾಲ್ಕು, ಐದು ರುಪಾಯಿ ಹೀಗೆ ಮನಸ್ಸಿಗೆ ಬಂದಂತೆ ದರ ವಸೂಲಿ ಮಾಡುತ್ತಿದ್ದಾರೆ. ಇನ್ನಾ ದರೂ ನಗರ ಪಾಲಿಕೆ ಸಾರ್ವಜನಿಕ ಶೌಚಾಲಯವನ್ನು ಬಳಕೆ ಮಾಡಲು ನೈಜ ದರ ಎಷ್ಟೆಂದು ತಿಳಿಸಲಿ.
ವಿನ್ಯಾಸ್ ಶೆಟ್ಟಿ, ಜೆಪ್ಪು
ವೃದ್ದಾಪ್ಯ ವೇತನದಲ್ಲೂ ಸರ್ಕಾರದಿಂದ ವಂಚನೆ
ಕಳೆದ ಭಾನುವಾರದ ಪತ್ರಿಕೆಯ ವಾರಾಂತ್ಯ ವಿಭಾಗದಲ್ಲಿ ಪುತ್ತಬ್ಬ ಮಾಸ್ಟರ್ ಎಂಬ ಶಿಕ್ಷಕರ ಬಗೆಗಿನ ಒಂದು ಲೇಖನ ಪ್ರಕಟವಾ ಗಿತ್ತು. ಈ ಲೇಖನ ಸರ್ಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಒಂದು ಸಣ್ಣ ಉದಾಹರಣೆಯಷ್ಟೇ ಎನ್ನಬಹುದು. ಇಂದಿಗೂ ಅದೆಷ್ಟೋ ಸರ್ಕಾರಿ ನೌಕರರು ತಾವು ದುಡಿದ ಪಿಂಚಣಿ, ಪಿಎಫ್ಗಾಗಿ ಕಚೇ ರಿಗೆ ಅಲೆಯುತ್ತಿದ್ದಾರೆ. ಕೆಲ ಅನಗತ್ಯ ದಾಖಲೆಗಳನ್ನು ಕೇಳಿ, ಅದು ಇಲ್ಲವೆಂದರೆ ಸಿಗಬೇಕಾದ ಹಣವನ್ನೇ ತಮ್ಮ ಜೀಬಿಗೆ ಇಳಿಸಿಕೊ ಳ್ಳುವ ಅದೆಷ್ಟೋ ದೊಡ್ಡ ದೊಡ್ಡ ಭ್ರಷ್ಟ ಕುಳಗಳು ನಮ್ಮ ಇಲಾಖೆಯ ಲ್ಲಿವೆ. ಟೇಬಲ್ನಡಿಗೆ ಕೈ ಹಾಕಿ ಲಂಚ ಪಡೆದರೆ ಸಿಕ್ಕಿ ಬೀಳುತ್ತಾರೆ. ಆದರೆ ಈ ರೀತಿ ನೇರವಾಗಿ ತಮ್ಮ ಅಕೌಂಟಿಗೆ ಇಳಿಸಿದರೆ ಸಿಕ್ಕಿ ಬೀಳುವ ಸಾಧ್ಯತೆಗಳು ಕಡಿಮೆ. ಅಷ್ಟೇ ಯಾಕೆ ಪುತ್ತಬ್ಬರಂತೆ ಇಲಾಖೆಯೊಂದಿಗೆ ಗುದ್ದಾಡಿ ತೀರಿಹೋದ ಮೇಲೆ ಈ ಹಣ ಕ್ಕಾಗಿ ಮನೆಯರಿಂದ ಹೋರಾಡಲು ಎಷ್ಟು ಸಾಧ್ಯ? ಇದು ಪಿಂಚಣಿ, ಪಿಎಫ್ನಲ್ಲಾದರೆ ಇತ್ತೀಚೆಗೆ ವಿಧವಾ ವೇತನ, ವೃದ್ದಾಪ್ಯ ವೇತನ ದಲ್ಲೂ ಈ ರೀತಿಯ ಅವ್ಯವಹಾರ ನಡೆಯುತ್ತಿದೆ. ತಿಂಗಳೂಗಳೇ ಕಳೆದರೂ ಇದು ಫಲಾನುಭವಿಗಳ ಕೈ ಸೇರುತ್ತಿಲ್ಲ. ಮೂರ್ನಾಲ್ಕು ತಿಂಗಳು ಕಳೆದು ಹಣ ಬಂದರೂ ಅದರಲ್ಲಿ ಮೂರು ತಿಂಗಳ ಹಣವೇ ಇರುವುದಿಲ್ಲ. ಯಾವ ‘ಸಕಾಲ ಯೋಜನೆ ಬಂದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಅಷ್ಟರಲ್ಲೇ ಇದೆ. ಒಂದೆ ರೆಡು ಸುದ್ದಿಮಾಧ್ಯಮಗಳು ಭ್ರಷ್ಟಾಚಾರದ ವಿರುದ್ದ ಸಮರ ಸಾರಿ ದ್ದೇವೆ ಎಂದರೂ ಅದು ಒಂದೆರೆಡು ದಿನಗಳಿಗೆ ಮಾತ್ರ ಸೀಮಿತ ವಾಗಿದೆ. ಸರ್ಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕೊನೆಯೆಂದು?
ಇಸ್ಮಾಯಿಲ್, ತೊಕ್ಕೊಟ್ಟು
ಉಳ್ಳಾಲ ಪುರಸಭೆಯಿಂದ ಟ್ಯಾಂಕರ್ ನೀರಿನಲ್ಲೂ ರಾಜಕೀಯ
ಜಿಲ್ಲೆಯಾದ್ಯಂತ ಈ ಬಾರಿ ನೀರಿಗೆ ಬರ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಸಮಸ್ಯೆಗೆ ಉಳ್ಳಾಲ ಪುರಸಭಾ ವ್ಯಾಪ್ತಿಯ ಜನರೂ ಹೊರತಾಗಿಲ್ಲ. ಹಿಂದಿನಿಂದಲೂ ಈ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇತ್ತು. ನೀರಿನ ಸಮಸ್ಯೆ ಬಂದಾಗ ಲೆಲ್ಲಾ ಇಲ್ಲಿನ ಜನರಿಗೆ ಅಪಧ್ಬಾಂದವನಾಗುವುದು ಉಳ್ಳಾಲ ದರ್ಗಾದ ಟ್ಯಾಂಕರ್ ನೀರು ಪೂರೈಕೆ ಯೋಜನೆ. ಆದರೆ ಇತ್ತೀಚೆಗೆ ಉಳ್ಳಾಲ ಪುರಸಭೆ ಇಲ್ಲೂ ತನ್ನ ರಾಜಕೀಯ ತೋರಿಸುತ್ತಿದೆ. ಟ್ಯಾಂಕರ್ನಲ್ಲಿ ನೀರು ಪೂರೈಸಲು ಈ ಹಿಂದೆ ಓರ್ವ ವ್ಯಕ್ತಿಗೆ ಟೆಂಡರ್ ನೀಡಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಆತನ ಟೆಂಡರ್ ಅವಧಿ ಮುಗಿದ ಕಾರಣ ಇನ್ನೊಬ್ಬರಿಗೆ ಟೆಂಡರ್ ನೀಡಲಾಗಿದೆ. ಆದರೆ ಈ ವ್ಯಕ್ತಿಗೆ ಟೆಂಡರ್ ನೀಡಿದ ನಂತರ ಈ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ನೀರು ಪೂರೈಕೆ ಆಗಿಲ್ಲ. ಅಲ್ಲದೇ ನೀರು ಪೂರೈಕೆಯಲ್ಲೂ ರಾಜಕೀಯ ನಡೆಸಲಾಗುತ್ತಿದ್ದು, ಊರಿನ ನಾಗರಿ ಕರು ನೀರಿಗಾಗಿ ಪರಿತಪಿಸುವಂತಾಗಿದೆ.
‘ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ಉಳ್ಳಾಲ ದರ್ಗಾ ಆಡಳಿತ ಯಾವುದೇ ಬೇಧಬಾವವಿಲ್ಲದೆ ನೀರು ಕೊಟ್ಟರೂ ಉಳ್ಳಾಲ ಪುರಸಭೆ ಇಲ್ಲೂ ತನ್ನ ರಾಜಕೀಯ ಮಾಡುತ್ತಿದೆ. ಪುರಸಭೆಯ ಅಧ್ಯಕ್ಷರು ದೂರು ಕೊಟ್ಟರೆ ಸ್ಥಳಕ್ಕೆ ಭೇಟಿ ಕೊಟ್ಟು ಬೇಕಾದಷ್ಟು ನೀರು ಕೊಡಿ ಎಂದು ತೋರಿಕೆಯ ಸೂಚನೆ ನೀಡಿ ಹೋಗು ತ್ತಾರೆ. ಮತ್ತೆ ಈ ವ್ಯಕ್ತಿಯ ಸುಳಿವೇ ಇರುವುದಿಲ್ಲ. ಕೆಲವೊಮ್ಮೆ ನಾಗರಿಕರು ಲಾರಿ ಚಾಲಕರೊಂದಿಗೆ ಕಾದಾಟಕ್ಕೆ ಇಳಿದ ಘಟನೆಗಳೂ ನಡೆದಿದೆ. ಇನ್ನು ಇದರ ಗುತ್ತಿಗೆ ಪಡೆದವರು ಲಾರಿಗಳಲ್ಲಿ ನೀರು ತುಂಬಿಸಿಕೊಂಡು ಬಂದು ತೊಕ್ಕೊಟ್ಟಿನಲ್ಲಿ ಕೆಲ ಹೊಟೇಲ್ಗಳಿಗೆ ಮಾರಾಟ ಮಾಡುತ್ತಿದ್ದಾರೆ. ನೀರು ಬಂದಿಲ್ಲವೆಂದು ಸಂಬಂಧಪ ಟ್ಟವರಿಗೆ ಫೋನಾಯಿಸಿದರೆ ಈಗಾಗಲೇ ಎರಡು ಟ್ಯಾಂಕರ್ ಕಳಿಸಿದ್ದೇವೆ ಎನ್ನು ತ್ತಾರೆ. ಆದರೆ ಅದು ಜನರ ಬಳಿ ಬಾರದೆ ಹೋಟೇಲ್ನ ಟ್ಯಾಂಕ್ ತುಂಬಿಸುತ್ತಿದೆ. ಇನ್ನಾದರೂ ಉಳ್ಳಾಲದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಪುರಸಭೆಯ ಗೋಲ್ಮಾಲ್ ರಾಜಕೀಯಕ್ಕೆ ಬ್ರೇಕ್ ಹಾಕಲಿ.
ನೊಂದ ನಾಗರಿಕ, ಉಳ್ಳಾಲ
ಹಾರ್ನ್ ಹೊಡೆದು ರಸ್ತೆ ಸರಿಯಾಯಿತೇ?
ತಿಂಗಳ ಹಿಂದೆ ಸಂಘಟನೆಯೊಂದು ಹದಗೆಟ್ಟ ಜಿಲ್ಲೆಯ ರಸ್ತೆಗಳ ವಿರುದ್ಧ ಹಾರ್ನ್ ಹೊಡೆದು ವಿನೂತನ ರೀತಿಯ ಪ್ರತಿಭಟನೆ ಹಮ್ಮಿ ಕೊಂಡಿತ್ತು. ಮಂಗಳೂರು ಹಾಗೂ ಸುತ್ತಲಿನ ಕೆಲವು ಸ್ಥಳಗಳಲ್ಲಿ ವಾಹನ ಸವಾರ ರನ್ನು ತಡೆದು ಹಾರ್ನ್ ಹಾಕಿಸಿದ್ದೂ ಆಯಿತು. ಆದರೆ ರಸ್ತೆಗಳ ಪರಿಸ್ಥಿತಿ ಮಾತ್ರ ಹಿಂದಿನದಕ್ಕಿಂತ ತೀರಾ ಕಡೆಯಾ ಗಿದೆ.
ಜನಪ್ರತಿನಿಧಿಗಳು ಇವರ ಹಾರ್ನ್ ಕೇಳಿಸಿ ಕೊಳ್ಳಲು ತಯಾರಿಲ್ಲ. ಪ್ರಚಾರಪ್ರಿಯ ಸಂಘಟನೆ ಗಳು ಇಂಥ ಪ್ರತಿಭಟನೆಯನ್ನು ವೈಯಕ್ತಿಕ ಪ್ರಚಾ ರದ ತೆವಲಿಗಾಗಿ ಮಾಡುತ್ತವೆಯೇ ಹೊರತು ಬೇರೇನೂ ಅಲ್ಲ. ಯಾಕೆಂದರೆ ಹಾರ್ನ್ ಹೊಡೆದ ಮರು ದಿನವೇ ಸಂಘಟನೆಗೆ ಮರೆತುಹೋಗಿರು ತ್ತದೆ. ಇದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿ ಯುತ್ತದೆ. ಆದ್ದರಿಂದ ಜನತೆಯ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂಧಪಟ್ಟವರನ್ನು ಎಚ್ಚರಿಸಲು ಹಾರ್ನ್ ಹೊಡೆದರೆ ಮಾತ್ರ ಸಾಲದು, ಅಧಿಕಾರಿ ವರ್ಗವನ್ನು ಎಚ್ಚರಿಸಿ ಕೆಲಸ ಮಾಡಿಸಿಕೊಳ್ಳುವುದು ತಿಳಿದಿರಬೇಕು.
ರಿತೇಶ್, ಕೈಕಂಬ