14-4-2012

Posted by JAYAKIRANA Kirana on Friday, 13 April 2012 | 0 comments | Leave a comment...

ಸ್ನೇಹ
ಹೃದಯದಿಂದ ಹುಟ್ಟಿದ ಮಾತು ಸುಳ್ಳಲ್ಲ, ಸೌಂದರ್ಯಕ್ಕೆ ಹುಟ್ಟಿದ ಪ್ರೀತಿ ಎಂದೂ ನಿಜವಲ್ಲ, ಆದರೆ ಪ್ರೀತಿ ನಂಬಿಕೆಯಿಂದ ಹುಟ್ಟಿದ ಸ್ನೇಹ ಎಂದೂ ಸುಳ್ಳಲ್ಲ.

ಜೀವನ
ಬದುಕು ಅನ್ನೋ ಮೋಡದಲ್ಲಿ, ಜೀವನ ಅನ್ನೋ ಮಳೆ ಹನಿಯಾಗಿ, ಪ್ರೀತಿ ಎಂಬ ನದಿಯಾಗಿ ಹರಿದು, ಸ್ನೇಹ ಎಂಬ ಸಾಗರವನ್ನು ಸೇರಿ, ಮುತ್ತಿನಂಥ ಗೆಳೆಯರಾಗಿರುವ.

ನೆನಪು
ನೆನಪು ಅನ್ನೋ ನೆಪ ಮಾಡಿ, ಮನಸಿನಲ್ಲಿ ಮನೆ ಮಾಡಿ, ನಕ್ಕಾಗ ತಲೆ ನೇವರಿಸಿ, ಅಳುವಾಗ ಕಣ್ಣೀರೊರೆಸುವ, ಈ ನನ್ನ ನಿಮ್ಮ ಪ್ರೀತಿಯ ಸ್ನೇಹ ಹೀಗೆ ಇರಲಿ.

ಡಾಗ್
ಗುಂಡ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಪ್ಪಾದ ಒಂದು ವಸ್ತುವನ್ನು ನೋಡುತ್ತಾನೆ. ಅದರ ಹತ್ತಿರ ಹೋಗಿ ಕೈಯಲ್ಲಿ ಮುಟ್ಟಿ ನೆಕ್ಕಿ ನೋಡಿ ಹೇಳುತ್ತಾನೆ ಛೀ, ನಾಯಿಯ ಮಲ, ಸದ್ಯ ಮೆಟ್ಟಲಿಲ್ಲ!

ಧೈರ್ಯ
ಒಂದು ಊರಿನಲ್ಲಿ ಒಂದು ಮಗು ಬಾವಿಗೆ ಬಿತ್ತು. ಆಗ ಒಬ್ಬ ಬಾವಿಗೆ ಹಾರಿ ಆ ಮಗುವನ್ನು ರಕ್ಷಿಸಿದ. ಆಗ ಪತ್ರಿಕೆಯವರು ಅವ ನಲ್ಲಿ ಕೇಳಿದರು ನಿಮಗೆ ಬಾವಿಗೆ ಹಾರಲಿಕ್ಕೆ ಹೇಗೆ ಧೈರ್ಯ ಬಂತು? ಆಗ ಅವನು ಹೇಳಿದ ಅವು ಸೈಯಡ್, ಎನನ್ ನೂಕುದ್ ಪಾಡಿನ ಮೂಜಿಕಾಸ್ದಾಯೇ ಏರ್ ಪನ್ಲೆ?

ಫಸ್ಟ್‌ನೈಟ್
ಮೊದಲನೇ ರಾತ್ರಿ ಗಂಡ ಹೆಂಡತಿಯಲ್ಲಿ ಹೇಳ್ತಾನೆ ನಾನು ತುಂಬಾ ಹೆಂಗಸರ ಜೊತೆ ಸಂಬಂಧ ಮಾಡಿದ್ದೇನೆ ಆಗ ಹೆಂಡತಿ ಹೇಳ್ತಾಳೆ ಅದೇ ನಾನು ಕೂಡ ನಿಮ್ಮನ್ನು ಎಲ್ಲೋ ನೋಡಿದೀನಿ! ವಿಪರ್ಯಾಸ ಅಂದ್ರೆ ಇದೇನಾ?

ನೈಜ ದೇಶ ರಕ್ಷಕರನ್ನು ಸನ್ಮಾನಿಸಿ

Posted by JAYAKIRANA Kirana on | 0 comments | Leave a comment...

ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ವಿಷಯ ಓದಿದೆ. ಏನೆಂದರೆ ಶತಕಗಳ ಶತಕ ಬಾರಿಸಿರುವ ಸಚಿನ್‌ಗೆ ಸನ್ಮಾನ. ಗೌರ ವಾನ್ವಿತ ಕೇರಳದ ಮುಖ್ಯಮಂತ್ರಿಗಳಲ್ಲಿ ನನ್ನದೊಂದು ವಿನಂತಿ. ಸಚಿನ್‌ರವರ ಸಾಧನೆ ಅಭಿನಂದನಾರ್ಹವೆ. ಆದರೆ ಸನ್ಮಾನ ಮಾಡುವುದಕ್ಕೆ ಮೊದಲು ಸ್ವಲ್ಪ ಯೋಚಿಸಬೇಕಿತ್ತು.
ನಮ್ಮ ದೇಶದ ರಕ್ಷಣೆಗಾಗಿ ಎದೆಯೊಡ್ಡಿ ನಿಂತು ದೇಶ ರಕ್ಷಣೆಯೇ ನಮ್ಮ ಗುರಿ ಎಂದು ಯುದ್ಧದಲ್ಲಿ ಪ್ರಾಣತೆತ್ತ ಸೈನಿಕರ ಬಗ್ಗೆ ಒಂದು ಸಮಾರಂಭ ಏರ್ಪಡಿಸಿದ್ದರೆ ಅದಕ್ಕೊಂದು ಅರ್ಥವಿತ್ತು. ಇವತ್ತು ನಾವು ನೀವು ಈ ನೆಲದಲ್ಲಿ ಉಸಿರಾಡುತ್ತಿರುವುದು ನಮ್ಮ ದೇಶದ ಹೆಮ್ಮೆಯ ಸೈನಿಕರು ದುರ್ಗಮ ಪ್ರದೇಶದಲ್ಲಿ ಕಷ್ಟಪಟ್ಟು ಹೋರಾಟ ನಡೆಸುತ್ತಿರುವುದರ ಫಲದಿಂದ.
ನಮ್ಮ ರಾಷ್ಟ್ರ ರಕ್ಷಣೆಗೆ ತಮ್ಮ ಮಕ್ಕಳ ಬೆನ್ನುತಟ್ಟಿ ಅವರನ್ನು ಹರಸಿ ಕಳುಹಿಸುತ್ತಿ ರುವ ತಂದೆ ತಾಯಿಯರನ್ನು ಸನ್ಮಾನಿ ಸುವ, ಗೌರವಿಸುವ ಕೆಲಸ ಆಗಬೇಕು. ಕೇವಲ ಕ್ರಿಕೆಟಿಗರಿಂದ ನಮ್ಮ ದೇಶಕ್ಕೇನೂ ಲಾಭವಿಲ್ಲ.
ಪ್ರಶಾಂತ್ ಸಾಲಿಯಾನ್, ಕರಿಯಕಲ್ಲು

ಆನಗಳ್ಳಿ ಸೇತುವೆ ಯಾವಾಗ?
ಆನಗಳ್ಳಿಗೆ ಸೇತುವೆ ಮಂಜೂರಾಗಿದೆ ಎಂದು ಹೇಳಿ ಸುಮಾರು ೨೦ ವರ್ಷ ಆಗಿದೆ. ಆದರೆ ಕೆಲಸ ಯಾಕೆ ಪ್ರಾರಂ ಭವಾಗಿಲ್ಲ? ಕುಂದಾಪುರ ಪುರಸಭೆಯಿಂದ ೨೦೦ ಮೀಟರ್ ಹತ್ತಿರದಲ್ಲಿರುವ ಗ್ರಾಮ ಆನಗಳ್ಳಿ. ಇಲ್ಲಿನ ಗ್ರಾಮಸ್ಥರು ಸೇತುವೆ ನಿರ್ಮಾಣಕ್ಕಾಗಿ ಕೆಲವು ಚುನಾವಣೆಗಳಲ್ಲಿ ಮತದಾನ ಬಹಿ ಷ್ಕಾರ ಮಾಡಿದರೂ ಸೇತುವೆ ಆಗಲಿಲ್ಲ. ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಅದು ಮಾಡುತ್ತೇವೆ, ಇದು ಮಾಡು ತ್ತೇವೆ ಎಂದು ಬೊಗಳೆ ಬೇರೆ ಬಿಡುತ್ತಾರೆ. ಈ ಸೇತುವೆ ಬಗ್ಗೆ ಕೂಡಾ ಆಶ್ವಾಸನೆ ನೀಡಿ ಇದೀಗ ಸುಮ್ಮನಿದ್ದಾರೆ. ಈ ರೀತಿಯ ಸುಳ್ಳು ಆಶ್ವಾಸನೆ ಯಾಕೆ ನೀಡಬೇಕು? ಸಂಬಂಧಪಟ್ಟವರು ಅತೀ ಶೀಘ್ರದಲ್ಲಿ ಇಲ್ಲಿನ ಆನಗಳ್ಳಿ ಸೇತುವೆ ನಿರ್ಮಿಸಿ ಕೊಡ ಬೇಕಾಗಿ ವಿನಂತಿ.
ಆನಗಳ್ಳಿ ಗ್ರಾಮಸ್ಥರು, ಕುಂದಾಪುರ

ಹಾಲಾಡಿಗೆ ಮಂತ್ರಿ ಪದವಿ ನೀಡಿ
ಕುಂದಾಪುರದ ಜನಪ್ರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಸ್ಥಾನ ನೀಡಬೇಕು. ಕುಂದಾಪುರದ ವಾಜಪೇಯಿ ಎಂದು ಕರೆಸಿಕೊಳ್ಳುವ ಹಾಲಾಡಿ ಸತತ ಮೂರು ಬಾರಿ ಗೆಲುವು ಸಾಧಿಸಿ ಕುಂದಾ ಪುರದಲ್ಲಿ ಬಿಜೆಪಿಯನ್ನು ತಳಮಟ್ಟ ದಿಂದ ಕಟ್ಟಿ ಬೆಳೆಸಿದವರು. ಈ ಬಾರಿ ಯಾದರೂ ಸದಾನಂದ ಗೌಡರು ಇವ ರಿಗೆ ಮಂತ್ರಿ ಸ್ಥಾನ ನೀಡಬೇಕು. ಅವ ರಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ನಡೆಯಬೇಕು. ಕುಂದಾಪುರ ಕ್ಷೇತ್ರವನ್ನು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಶಕ್ತಿ ಶ್ರೀನಿವಾಸ ಶೆಟ್ಟರಿಗಿದೆ. ಹೀಗಾಗಿ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮಂತ್ರಿ ಪದವಿ ನೀಡಿ ಕುಂದಾಪುರ ಅಭಿವೃದ್ಧಿ ಹೊಂದಲಿ ಎಂದು ನಮ್ಮ ಹಾರೈಕೆ
ಹಾಲಾಡಿ ಅಭಿಮಾನಿ, ಕುಂದಾಪುರ

ಕಾಟಿಪಳ್ಳದಲ್ಲಿ ಗಾಂಜಾ ಗ್ಯಾಂಗ್
ಕಾಟಿಪಳ್ಳ ಪ್ರದೇಶದಲ್ಲಿ ಗಾಂಜಾ ವ್ಯವಹಾರ ನಿರಂತರ ವಾಗಿ ನಡೆಯುತ್ತಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇದು ಅಕ್ಷರಶಃ ನಿಜ. ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಸ್ವಲ್ಪ ಸಮಯ ನೇಪಥ್ಯಕ್ಕೆ ಸರಿದ ಈ ಗಾಂಜಾ ಗ್ಯಾಂಗ್ ಮತ್ತೆ ಪ್ರತ್ಯಕ್ಷವಾಗಿದೆ. ಕಾಟಿಪಳ್ಳ ಹೊಲಿಗೆ ತರಬೇತಿ ಕೇಂದ್ರದ ಜಗ ಲಿಯಲ್ಲಿ ಈ ಗ್ಯಾಂಗ್ ರಾತ್ರಿಯ ನಂತರ ಬೆಳಗ್ಗಿನ ತನಕ ಸಕ್ರಿ ಯವಾಗಿದೆ. ಇದಲ್ಲದೆ ಈದ್ಗಾ ಕಂಪೌಂಡ್, ಸರಕಾರಿ ಪ್ರಾಥ ಮಿಕ ಶಾಲೆ ಕೂಡಾ ಇವರ ಅಡ್ಡೆಯಾಗಿ ಪರಿವರ್ತನೆಗೊಂ ಡಿದೆ. ಗಾಂಜಾ ಸೇವಿಸಿ ಬುದ್ಧಿ ಸ್ಥಿಮತೆಯನ್ನು ಕಳೆದು ಕೊಳ್ಳುವ ಈ ಪುಂಡರಿಂದಾಗಿ ಸುತ್ತಮುತ್ತಲಿನ ಮನೆಯವರಿಗೆ ತೊಂದ ರೆಯಾಗುತ್ತಿದೆ.
ಈ ಗಾಂಜಾ ವ್ಯವಹಾರದಲ್ಲಿ ಮಾಜಿ ಗಂಧಕಳ್ಳನೊಬ್ಬನ ಕೈವಾಡವಿದೆ. ಈತ ಗಾಂಜಾ ಸರಬರಾಜು ಜಾಲದ ಪ್ರಮುಖ ವ್ಯಕ್ತಿಯಾಗಿದ್ದಾನೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಈ ಗಾಂಜಾ ಗ್ಯಾಂಗನ್ನು ಮಟ್ಟಹಾಕಿ ಸಾಮಾಜಿಕ ಆರೋಗ್ಯ ವನ್ನು ಕಾಪಾಡಬೇಕಾಗಿ ವಿನಂತಿ.
ನಾಗರಿಕ, ಕಾಟಿಪಳ್ಳ

ಅಪಾಯಕಾರಿ ಹೊಂಡವನ್ನು ದುರಸ್ತಿ ಪಡಿಸುವಿರಾ?
ತೊಕ್ಕೊಟ್ಟುವಿನಿಂದ ಮಂಜನಾಡಿಯಾಗಿ ಹಾದು ಹೋಗಿರುವ ರಸ್ತೆ ಡಾಮರೀಕರಣಗೊಂಡಿರುವುದು ಸ್ವಾಗತಾರ್ಹ. ಆದರೆ ರಸ್ತೆಯ ಬದಿಯ ತೋಡಿಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆ ಕುಸಿದು ಬೀಳುತ್ತಿದೆ. ಮಂಜ ನಾಡಿ ಕಲ್ಕಟ್ಟ ಎಂಬಲ್ಲಿ ರಸ್ತೆಯ ಬದಿ ಇತ್ತೀಚೆಗೆ ತಡೆಗೋಡೆಯೊಂದು ನಿರ್ಮಿಸಲಾಗಿದೆ. ಆದರೆ ಆ ತಡೆಗೋಡೆ ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿದ್ದಿದ್ದು ಅಪಾಯವನ್ನು ಆಹ್ವಾನಿಸುತ್ತಿವೆ. ಇತ್ತೀಚೆಗೆ ಇದೇ ಹೊಂಡಕ್ಕೆ ಟೆಂಪೊ ವೊಂದು ಬಿದ್ದು ಟೆಂಪೊದಲ್ಲಿದ್ದವರು ಅಪಾಯದಿಂದ ಪಾರಾಗಿದ್ದರು. ವಾಹ ನಗಳಿಗೆ ಸೈಡ್ ಕೊಡಲು ಜಾಗವಿಲ್ಲದ ಈ ಸ್ಥಳದಲ್ಲಿ ಹಲವಾರು ಮಂದಿ ಜನ ಪ್ರತಿನಿಧಿಗಳು ಸಂಚರಿಸುತ್ತಾರೆ. ಆದರೆ ಅವರು ಈ ಅಪಾಯಕಾರಿ ಹೊಂಡ ವನ್ನು ದುರಸ್ತಿಪಡಿಸುವ ಬಗ್ಗೆ ಗಮನಹರಿಸುವುದಿಲ್ಲ. ಎಲ್ಲಿಯಾದರೊಮ್ಮೆ ಈ ಹೊಂಡಕ್ಕೆ ದ್ವಿಚಕ್ರ ವಾಹನ ಬಿದ್ದು ಜೀವವೊಂದು ಹೋದರೆ ಮತ್ತೆ ಅದರ ದುರಸ್ತಿ ಕಾರ‍್ಯ ನಡೆಯಬಹುದೋ ಏನೊ? ಕಾನೂನು ಮತ್ತು ಸುಭದ್ರ ಆಡಳಿತದ ಬಗ್ಗೆ ಡಂಗುರ ಸಾರುವವರು ಈ ಕುಸಿದು ಬಿದ್ದಿರುವ ತಡೆಗೋಡೆ ದುರಸ್ತಿ ಮಾಡುತ್ತಿಲ್ಲ. ಪಂಚಾಯತ್‌ನಲ್ಲಿ ಕೇಳಿದರೆ ಅದು ಪಿಡಬ್ಲ್ಯೂಡಿ ಅವರು ಮಾಡಿದ್ದು, ಅವರೇ ದುರಸ್ತಿ ಮಾಡಲಿ ಎನ್ನುತ್ತಾರೆ. ನಾವು ಬೇಕಾದ ಸೌಕ ರ್ಯಗಳನ್ನು ಮಾಡಿಕೊಡುತ್ತೇವೆ ಎನ್ನುವ ಪಂಚಾಯತ್ ಇಂತಹ ದೊಡ್ಡ ಸಮಸ್ಯೆಗಳನ್ನು ಯಾಕೆ ಪರಿಹರಿಸುವುದಿಲ್ಲ?
ಬಶೀರ್, ಕಲ್ಕಟ್ಟ

ವಿದೇಶಿ ಉದ್ಯೋಗಕ್ಕೆ ಬಲಿಯಾಗದಿರಿ
ವಿದೇಶಕ್ಕೆಂದು ತೆರಳುವ ಬಹಳಷ್ಟು ಮಂದಿ ವೀಸಾ ಏಜೆಂಟರ ಮಾತಿಗೆ ಬಲಿ ಯಾಗುತ್ತಿರುವುದು ಇತ್ತೀಚೆಗೆ ಸಾಮಾನ್ಯವಾ ಗಿಬಿಟ್ಟಿದೆ.
ಹಲವು ಮಂದಿ ಯುವಕರಿಗೆ ವೀಸಾ ಏಜೆಂಟರು ವಿದೇಶದಲ್ಲಿ ಒಳ್ಳೆಯ ಕೆಲಸವಿ ರುವ ವೀಸಾ ಕೊಡುವುದಾಗಿ ನಂಬಿಸಿ ಅವ ರಿಂದ ಸಾವಿರಗಟ್ಟಲೆ ರೂ. ಹಣ ಪಡೆದು ವಂಚಿಸುತ್ತಿರುವ ಕಾರ್ಯ ನಡೆಯುತ್ತಿದೆ. ವಿದೇ ಶಕ್ಕೆ ತೆರಳಿದ ನಂತರ ಇವರ ನಿಜವಾದ ಬಣ್ಣ ಬಯಲಾಗುತ್ತದೆ. ಇಂಜಿನಿಯರ್, ಕಂಪ್ಯೂ ಟರ್ ಕೆಲಸ ಎಂದು ಹೇಳಿ ಹೋದವರನ್ನು ಅಲ್ಲಿ ಮನೆ ಕೆಲಸಕ್ಕೆ ನೇಮಿಸಿಕೊಂಡು ಜೀತ ದಂತೆ ದುಡಿಸುತ್ತಾರೆ. ಅಲ್ಲದೆ ತಿಂಗಳ ಸಂಬಳ ಕೇಳಿದರೆ ಅದನ್ನು ಏಜೆಂಟರಲ್ಲಿ ಕೇಳಿ ಎಂದು ದಬಾಯಿಸುತ್ತಿದ್ದು. ಇತ್ತ ಸಂಬಳವೂ ಇಲ್ಲದೆ, ಊರಿಗೂ ಬಾರಲು ಆಗದೇ ನರಕ ಸದೃಶ ಜೀವನವನ್ನು ಸಾಗಿಸಬೇಕಾಗಿದೆ. ಆದ್ದರಿಂದ ಏಜೆಂಟರ ಮಾತಿಗೆ ಬಲಿಯಾಗದೆ ಉದ್ಯೋ ಗದ ಆಸೆಯಲ್ಲಿ ಹಣ ಕಳಕೊಂಡು ಮೋಸ ಹೋಗದೆ ಎಚ್ಚರಿಕೆಯಿಂದಿರಿ.
ಓರ್ವ ನಾಗರಿಕ, ಕಂಕನಾಡಿ

ಕಮಿಷನರ್ ಮೌನವೇಕೆ?
ಮೊನೆಯಷ್ಟೇ ನಡೆದ ಮಾರು ಕಟ್ಟೆ ವ್ಯಾಪಾರಸ್ಥರ ಸಭೆಯಲ್ಲಿ ಪೊಲೀ ಸರಿಗೆ ಮಾಸಿಕ ಐದು ಸಾವಿರ ರುಪಾಯಿ ನೀಡುತ್ತಿದ್ದೇವೆ ಎಂದು ವ್ಯಾಪಾರಸ್ಥರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಬಗ್ಗೆ ಜಯಕಿರಣ ಪತ್ರಿಕೆ ವರದಿ ಮಾಡಿತ್ತು. ಪೊಲೀಸರ ಹಫ್ತಾ ವ್ಯವಹಾರದ ಬಗ್ಗೆ ವ್ಯಾಪಾ ರಸ್ಥರೇ ಬಹಿರಂಗವಾಗಿ ಹೇಳುತ್ತಿರು ವಾಗ ಕಮಿಷನರ್ ಮಾತ್ರ ಈ ಬಗ್ಗೆ ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿರುವುದೇಕೇ? ಕೇಂದ್ರ ಮಾರುಕಟ್ಟೆಗೆ ಬೆಳಿಗ್ಗಿನ ಜಾವ ಭೇಟಿ ಕೊಟ್ಟರೆ ಪೊಲೀಸರ ಹಫ್ತಾ ಪುರಾಣ ಇನ್ನೂ ಬಯಲಿಗೆ ಬರಬಹುದು. ಅಲ್ಲದೇ ನಗರದ ಅನೇಕ ಲಾಡ್ಜ್‌ಗ ಳಲ್ಲಿ ಇಂದಿಗೂ ವೇಶ್ಯಾವಾಟಿಕೆ ಎಗ್ಗಿ ಲ್ಲದೆ ನಡೆಯುತ್ತಿದೆ. ಪೊಲೀಸರಿಗೆ ಈ ವಿಚಾರ ತಿಳಿದಿದ್ದರೂ ಸುಮ್ಮ ನಿದ್ದಾರೆ. ಕಾರಣ ಇಷ್ಟೇ. ತಿಂಗಳಾದರೆ ಇವರ ಖಾತೆಗೆ ನಗರದ ಪ್ರತೀ ಲಾಡ್ಜ್ ನಿಂದ ಇಂತಿಷ್ಟು ವಂತಿಗೆ ಜಮೆಯಾ ಗುತ್ತದೆ. ಇದೆಲ್ಲಾ ನಗರ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ರವರಿಗೆ ಗೊತ್ತಿಲ್ಲವೇ? ಮಾರುಕಟ್ಟೆ ವ್ಯಾಪಾರಸ್ಥರು ಹಫ್ತಾದ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿ ದ್ದರೂ ಕಮಿಷನರ್ ಯಾಕೆ ತನಿಖೆ ನಡೆಸುವ ಗೋಜಿಗೆ ಕೈಹಾಕಿಲ್ಲ? ಇತ್ತೀಚೆಗೆ ಇಲಾಖೆಯ ಅಧಿಕಾರಿ ಯೊಬ್ಬರು ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಹಣ ಪಡೆದು ಸಿಕ್ಕಿ ಬಿದ್ದಾಗಲೇ ಆಯುಕ್ತರು ಇತ್ತ ಗಮನ ಹರಿಸ ಬೇಕಿತ್ತು. ಇಲಾಖೆಯಲ್ಲಿ ನಡೆ ಯುತ್ತಿರುವ ಕಾಂಚಾಣದ ಆಟ ವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇ ಕಿತ್ತು. ಆದರೆ ಇಂತಹ ಕೆಲಸ ನಡೆ ದಿಲ್ಲ. ಇನ್ನಾದರೂ ನಗರ ಪೊಲೀಸ್ ಆಯುಕ್ತರು ಇತ್ತ ಗಮನ ಹರಿಸಿ. ಇಲಾಖೆಯ ಮಾನ ಇನ್ನಷ್ಟು ಹರಾ ಜಾಗುವ ಮುನ್ನ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಿ.
ಸಂಕೇತ್ ನಾಯಕ್, ಕಂಕನಾಡಿ

ಟಿವಿ ಮಾಧ್ಯಮದಲ್ಲೂ ಕೆಸರೆರಚಾಟವೇ?
ಅತಿಯಾದರೆ ಅಮೃತವೂ ವಿಷ ಎನ್ನುವುದು ಬಹುಶಃ ಇದಕ್ಕೇ ಇರಬೇಕು. ವೈಯಕ್ತಿಕ ಹಿತಾಸಕ್ತಿಯಿಂದ ಜನ ಏನೆಲ್ಲಾ ಮಾಡುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ಮಾಧ್ಯಮ ಲೋಕವೂ ಹೊರತಾಗಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಭೀಮಾ ತೀರದ ಹಂತಕರು ಚಿತ್ರದ ವಿವಾದ. ಇತ್ತೀಚೆಗೆ ಸಿನಿಮಾ ರಂಗದಲ್ಲಿ ವಿವಾದಗಳು ಸಾಮಾನ್ಯ. ಚಿತ್ರ ಹಿಟ್ ಆಗಲು ಇದೊಂದು ಗಿಮಿಕ್ ಕೂಡ ಹೌದು. ಇದೇ ಸಾಲಿಗೆ ಸೇರಿ ಒಂದೆರೆಡು ದಿನಗಳಲ್ಲಿ ತಣ್ಣಗಾಗಬೇಕಿದ್ದ ‘ಭೀಮಾ ತೀರದ ಹಂತಕರು ಚಿತ್ರದ ವಿವಾದ ದಿನಕಳೆದಂತೆ ವೈಯಕ್ತಿಕ ಪ್ರತಿಷ್ಠೆಯ ಹುಚ್ಚು ಅಲೆಯಲ್ಲಿ ಮುಳುಗಿ ತೇಲುತ್ತಿದೆ. ಸುದ್ದಿ ಮಾಧ್ಯಮಗಳಿಗಂತೂ ಒಂದೆರೆಡು ಘಂಟೆಗಳ ವ್ಯರ್ಥ ಚರ್ಚೆಗಳಿಗೆ ಈ ಸಣ್ಣ ವಿಚಾರ ವೇದಿಕೆಯಾಗಿದೆ. ಇತ್ತೀಚೆಗೆ ಈ ವಿವಾದವೇ ತನ್ನ ದಿಕ್ಕು ಬದಲಾಯಿಸಿದಂತೆ ತೋರುತ್ತಿದೆ.
ಈ ಹಿಂದೆ ಪತ್ರಿಕಾ ಮಾಧ್ಯಮಗಳು ಪರಸ್ಪರ ಕೆಸರೆರೆಚಾಟ ನಡೆಸುತ್ತಿದ್ದದ್ದು ಸಾಮಾ ನ್ಯವಾಗಿತ್ತು. ಆದರೆ ಈ ತನಕ ಇಲೆಕ್ಟ್ರಾನಿಕ್ ಮೀಡಿಯಾಗಳು ಈ ತಕರಾರಿಗೆ ಕೈ ಹಾಕಿರ ಲಿಲ್ಲ. ಆದರೆ ಮೊನ್ನೆಯ ವಿವಾದಲ್ಲಿ ಅದೂ ನಡೆದು ಹೋಗಿದೆ. ಭೀಮಾ ತೀರದ ವಿವಾ ದದಲ್ಲಿ ಆರಂಭವಾದ ಸಣ್ಣ ಚರ್ಚೆ ಈಗ ಒಬ್ಬ ವ್ಯಕ್ತಿಯ ಮಾನ ಹರಣದಲ್ಲಿ ಬಂದು ನಿಂತಿದೆ. ಈ ಹಿಂದೆ ತನ್ನ ಮೇಲೆ ಬಂದ ಅದೆಷ್ಟೋ ಆರೋಪಗಳಿಗೆ ಉತ್ತರಿಸಲಾಗದೇ ತಪ್ಪಿಸಿಕೊಂಡಿದ್ದ ಪತ್ರಿಕಾ ಆಂಕಣಕಾರರೊಬ್ಬರು ಮತ್ತೊಬ್ಬರ ಮಾನ ಹರಣಕ್ಕೆ ಮುಂದಾ ಗಿದ್ದಾರೆ. ಕೋಟ್ಯಂತರ ಜನತೆ ವೀಕ್ಷಿಸುವ ಟಿವಿ ಮಾಧ್ಯಮದಲ್ಲಿ ಈ ರೀತಿಯ ಕೆಸರೆರೆಚಾ ಟದ ಅಗತ್ಯವಿದೆಯೇ? ಟಿವಿ ಮಾಧ್ಯಮದ ಘನತೆಗೆ ಇದು ತಕ್ಕುದಲ್ಲ.
ನೊಂದ ವೀಕ್ಷಕ, ಮಂಗಳೂರು

ರಾಜ್ಯದ ರಾಜಕೀಯ ಒಡೆದ ಮನೆ
ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆಡ ಳಿತ ನಡೆಸುತ್ತಿದ್ದು ಅದರೊಳಗಡೆಯೇ ಎರಡು ಬಣಗಳ ನಿರ್ಮಾಣವಾಗಿ ಕಚ್ಚಾಟ ನಡೆಸು ತ್ತಿದೆ. ಯಡಿಯೂರಪ್ಪ ತಮ್ಮನ್ನು ಮುಖ್ಯ ಮಂತ್ರಿಯಾಗಿ ಮಾಡಬೇಕು ಎಂದು ಪಟ್ಟು ಹಿಡಿದಿರುವುದು ದುರದೃಷ್ಟಕರ.
ಸದಾನಂದ ಗೌಡ ಮತ್ತವರ ಬಣದ ಸದಸ್ಯರು ಇದನ್ನು ವಿರೋಧಿಸುತ್ತಾ ಕಚ್ಚಾಟ ನಡೆಸುತ್ತಿರುವುದರಿಂದ ರಾಜ್ಯದ ಜನತೆ ಬಿಜೆಪಿ ಬಗ್ಗೆ ಭ್ರಮ ನಿರಸನ ಹೊಂದುವಂತೆ ಮಾಡಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯ ಕೂಡಾ ಕುಂಠಿತಗೊಂಡಿದೆ.
ರಾಜಕೀಯ ನಾಯಕರು ಅಧಿಕಾರಕ್ಕಾಗಿ ಕಚ್ಚಾಟ ನಡೆಸದೆ ಜನರ ಸಮಸ್ಯೆಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಗಮನ ಹರಿಸಿದರೆ ರಾಜ್ಯ ನೆಮ್ಮದಿ ಕಾಣಬಹುದು. ಇಲ್ಲವಾದಲ್ಲಿ ಬಿಜೆಪಿ ಕುಸಿಯುವುದು ಖಂಡಿತಾ.
ಸುರೇಶ, ಬಿ.ಸಿ.ರೋಡ್

ಕುಡುಪುವಿನಲ್ಲಿ ವೇಗ ತಡೆ ನಿರ್ಮಾಣವಾಗಲಿ
ನಗರದ ಪ್ರಸಿದ್ಧ ಕುಡುಪು ದೇವಸ್ಥಾನದ ಎದುರು ರಸ್ತೆಯಲ್ಲಿ ವೇಗ ತಡೆ ನಿರ್ಮಾಣದ ಅಗತ್ಯತೆ ಇತ್ತೀಚೆಗಂತೂ ತುಂಬಾ ಕಂಡುಬಂದಿದೆ. ಮಂಗ ಳೂರು ಕಡೆಯಿಂದ ಧಾವಿಸುವ ಬಸ್ಸುಗಳು ಹಾಗೂ ವಾಮಂಜೂರು ಕಡೆ ಯಿಂದ ಯಮದೂತರಂತೆ ಧಾವಿಸುವ ಬಸ್ಸುಗಳು ಕುಡುಪು ರಸ್ತೆಯಾಗಿ ಧಾವಿಸುವುದರಿಂದ ದಾರಿಹೋಕರಿಗೂ ಮಾತ್ರವಲ್ಲದೆ ಭಕ್ತಾಧಿಗಳಿಗೂ ರಸ್ತೆ ದಾಟಲು ತುಂಬಾ ಕಷ್ಟವಾಗಿದೆ.
ಶಾಲಾ ವಿದ್ಯಾರ್ಥಿಗಳಂತೂ ತಮ್ಮ ಜೀವವನ್ನು ಒತ್ತೆ ಇಟ್ಟು ರಸ್ತೆ ದಾಟ ಬೇಕಾಗಿದೆ. ಕುಡುಪು ಜಂಕ್ಷನ್‌ನಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿದಲ್ಲಿ ಜನ ಸಾಮಾನ್ಯರು ಮಾತ್ರವಲ್ಲದೆ ಭಕ್ತಾಧಿಗಳಿಗೂ ಇದರಿಂದ ನೆಮ್ಮದಿ ಉಂಟಾ ಗುತ್ತದೆ. ಕೆಲವೊಮ್ಮೆ ವಾಮಂಜೂರು ಕಡೆಯಿಂದ ಬರುವ ಬಸ್ಸುಗಳು ರಸ್ತೆ ಬದಿಯಲ್ಲಿ ನಿಲ್ಲಿಸುವ ಬದಲು ಮಾರ್ಗ ಮಧ್ಯದಲ್ಲೇ ನಿಲ್ಲಿಸುವುದರಿಂದ ಹಿಂದಿನಿಂದ ಬರುವ ವಾಹನಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಇದು ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ.
ಸ್ಥಳೀಯ ಮಹಾನಗರಪಾಲಿಕೆಯ ಸದಸ್ಯರು, ಅಧಿಕಾರಿಗಳು ಜನರ ಸಮಸ್ಯೆಯನ್ನು ಅರಿತುಕೊಂಡು ಇಲ್ಲಿ ರಸ್ತೆ ಉಬ್ಬು ನಿರ್ಮಿಸಿ ಜನರ ಜೀವ ವನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.
ವಿನ್ಸೆಂಟ್ ಮೊರಾಸ್, ಕುಡುಪು

ವಕ್ಫ್ ಆಸ್ತಿ ಬಗ್ಗೆ ಪಿಎಫ್‌ಐ ಹೋರಾಡಲಿ
ಇತ್ತೀಚೆಗೆ ಬೆಳಕಿಗೆ ಬಂದ ೨೫೦೦ ಲಕ್ಷ ಕೋಟಿ ರೂ.ಗಳ ವಕ್ಫ್ ಹಗರ ಣದ ಬಗ್ಗೆ, ವಕ್ಫ್ ಆಸ್ತಿಗಳ ಬಗ್ಗೆ ನೈಜ ವಾರೀಸುದಾರರ ಬಗ್ಗೆ ಮುಸ್ಲಿಂ ಸಮು ದಾಯಕ್ಕೆ ಪ್ರಜ್ಞೆ ಮತ್ತು ಜನಜಾಗೃತಿ ಯನ್ನು ಮೂಡಿಸುವ ಕಾರ್ಯಗಳನ್ನು ರಾಜ್ಯಾದ್ಯಂತ ಹಮ್ಮಿಕೊಂಡು ಸದ್ರಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಹೋರಾಟ ಅಗತ್ಯವಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಗ್ಗೆ ಮುಸ್ಲಿ ಮರು ವಿಶ್ವಾಸವಿಟ್ಟಿದ್ದು, ವಕ್ಫ್ ಆಸ್ತಿ ಬಗ್ಗೆ ಪಿಎಫ್‌ಐ ಹೋರಾಟ ನಡೆಸಿ ಅಕ್ರಮ ಹಗರಣವನ್ನು ಬಯಲಿಗೆಳೆಯ ಬೇಕು. ಈ ಮೂಲಕ ಸಂಘಟನೆ ಯಿಂದ ಉತ್ತಮ ಕೆಲಸವಾಗಲಿ.
ಬಿ. ಮುಹಮ್ಮದ್ ಸಿನಾಬ್, ಉಪ್ಪಿನಂಗಡಿ

ಮಿತ್ರಾ ಹೆಗ್ಡೆ ವಿವಾದದಿಂದ ಜನಸಾಮಾನ್ಯ ಕಂಡುಕೊಂಡದ್ದೇನು?

Posted by JAYAKIRANA Kirana on | 0 comments | Leave a comment...

ಧ್ವನಿ, ಮಂಗಳೂರು
ಮೊನ್ನೆಯಷ್ಟೇ ಮಂಗಳೂರಿನ ದಂತ ವೈದ್ಯೆ ಮಿತ್ರಾ ಹೆಗ್ಡೆಯವರಿಗೆ ಸಂಬಂಧಿಸಿ ವಿವಾದವೊಂದು ಸೃಷ್ಟಿಯಾಗಿತ್ತು. ಈ ಸಂಬಂಧ ಮಿತ್ರಾ ಹೆಗ್ಡೆಯವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಮೇಲೂ ಹಲ್ಲೆ ನಡೆಸಲಾಯಿತು. ಮಿತ್ರಾ ಹೆಗ್ಡೆಯವರು ತಾನು ರಾಷ್ಟ್ರಪತಿಯ ದಂತ ವೈದ್ಯೆ ಅಂತ ಅವರೊಂದಿಗೆ ಫೋಟೋ ಕ್ಕಿಕ್ಕಿಸಿದ್ದನ್ನೆ ದೊಡ್ಡ ಘನಂದಾರಿ ಕಾರ್ಯ ಅಂದುಕೊಂಡು ಪ್ರಶಸ್ತಿ ಕೊಡುವ ನಮ್ಮ ಸರ್ಕಾರಕ್ಕೆ ಇದು ಒಂದು ಉತ್ತಮ ಪಾಠವಾಗಿರುವುದಂತೂ ಸುಳ್ಳಲ್ಲ. ಮಹಾನ್ ವ್ಯಕ್ತಿಗಳೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡ ತಕ್ಷಣ ಅವರಿಗೆ ಪ್ರಶಸ್ತಿ ಕೊಟ್ಟು ಗೌರವಿಸುವ ಸರ್ಕಾರ ಇನ್ನಾದರೂ ಎಚ್ಚೆತ್ತಕೊಳ್ಳಲಿ.
ಈ ರೀತಿ ಪ್ರಶಸ್ತಿ ಕೊಡುವುದೇ ಆದರೆ ಫೇಸ್‌ಬುಕ್‌ನಂತಹ ಸಾಮಾಜಿಕ ತಾಣದಲ್ಲಿ ಅದೆಷ್ಟೋ ಮಂದಿ ಸಾಧಕರು ಸಿಗಬಹುದು! ಕೆಲವರಿಗೆ ಚಿತ್ರನಟರೊಂದಿಗೆ, ರಾಜಕಾರಣಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದೇ ಒಂದು ದೊಡ್ಡ ಗೀಳು. ಇದಕ್ಕೆ ಉದಾಹರಣೆ ಬೇಕೇಂದರೆ ಒಮ್ಮೆ ಫೇಸ್ ಬುಕ್‌ನಂತಹ ಸಾಮಾಜಿಕ ತಾಣವನ್ನು ಜಾಲಾಡಿದರೆ ಸಾಕು. ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಸಮಾಜದಲ್ಲಿ ಒಂದು ಹಂತಕ್ಕೆ ಖ್ಯಾತಿ ಗಳಿಸಿರುವ ವ್ಯಕ್ತಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅದನ್ನು ಫೇಸ್‌ಬುಕ್‌ನಂತಹ ಸಾಮಾಜಿಕ ತಾಣದಲ್ಲಿ ಹಾಕಿ ಇನ್ನಿಲ್ಲದ ಕಾಮೆಂಟ್ಸ್ ಗಿಟ್ಟಿಸಿಕೊಳ್ಳುತ್ತಾರೆ. ಮಿತ್ರಾ ಹೆಗ್ಡೆಯವರು ಯಾವುದೋ ಕಾರಣದಿಂದ ರಾಷ್ಟ್ರಪತಿಯವರನ್ನು ಭೇಟಿಯಾಗಿರಬಹುದು. ಆದರೆ ಅಲ್ಲೊಂದು ಫೋಟೋ ಕ್ಲಿಕ್ಕಿಸಿ ಮಂಗಳೂರಿಗರನ್ನು ಕುರಿ ಮಾಡುವುದು ಸಲುಭ ಎನ್ನುವ ಮನಸ್ಥಿತಿ ಅವರನ್ನು ಈ ವಿವಾದದ ಕೇಂದ್ರ ಬಿಂದುವಾಗಿಸಿದೆ ಎಂದರೆ ಖಂಡಿತಾ ತಪ್ಪಿಲ್ಲ. ನಾಳೆ ರಜನೀಕಾಂತ್ ಬಂದು ನಮ್ಮ ಪಕ್ಕದ ಸಣ್ಣ ಕ್ಯಾಂಟೀನ್‌ನಲ್ಲಿ ಟೀ ಕುಡಿದರೆ ಮರುದಿನದಿಂದ ಈ ಕ್ಯಾಂಟೀನ್ ಫೈವ್‌ಸ್ಟಾರ್ ಹೋಟೇಲನ್ನು ಹಿಂದಿಕ್ಕಿದರೂ ಆಶ್ಚರ್ಯ ಪಡಬೇಕಿಲ್ಲ. ಅಷ್ಟೇ ಯಾಕೆ ನಮ್ಮ ಸರ್ಕಾರ ಆ ಕ್ಯಾಂಟೀನ್ ಮಾಲಕನಿಗೆ ಪ್ರಶಸ್ತಿ ಕೊಟ್ಟರೂ ಅತಿಶಯೋಕ್ತಿಯಲ್ಲ.
ಒಬ್ಬ ಸಾಧಕನ ಜೀವನ ನಮಗೆ ಮಾದರಿಯೆನ್ನುವುದೇನೋ ನಿಜ. ಆದರೆ ಆತನೊಂದಿಗೆ ನಿಂತು ಒಂದು ಪೋಟೋ ಕ್ಲಿಕ್ಕಿಸಿಕೊಂಡರೆ ಮಾತ್ರ ಆತ ನಮಗೆ ಮಾದರಿಯಾಗುವುದಿಲ್ಲ. ಆತನ ಜೀವನ ವಿಧಾನ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಮೊನ್ನೆಯ ಘಟನೆಯನ್ನೇ ನೋಡಿ, ಮಿತ್ರಾ ಹೆಗ್ಡೆಯವರು ಯಾವ ದೃಷ್ಟಿಯಿಂದ ಈ ರೀತಿ ಸುಳ್ಳು ಹೇಳಿದರೋ ಗೊತ್ತಿಲ್ಲ. ಬಹುಶಃ ಅದು ಈ ಮಟ್ಟಕ್ಕೆ ವಿವಾದ ಸೃಷ್ಟಿಸುತ್ತದೆ ಎಂಬ ಸಣ್ಣ ಸುಳಿವು ಕೂಡ ಅವರಿಗೆ ಇರಲಿಕ್ಕಿಲ್ಲ. ಆದರೆ ತನ್ನ ಲಾಭಕ್ಕೆ ರಾಷ್ಟ್ರಪತಿಯವರ ಹೆಸರನ್ನು ದುರುಪಯೋಗ ಪಡಿಸಿ ತಕ್ಕ ಬೆಲೆ ತೆತ್ತಿದ್ದಾರೆ. ಇನ್ನು ಈ ವಿವಾದವನ್ನು ಕೆದಕಿ, ಮಿತ್ರಾರ ಸುಳ್ಳನ್ನು ಜಗಜ್ಜಾಹೀರುಗೊಳಿಸಿದವರನ್ನು ನಾವು ಶಹಬ್ಬಾಸ್ ಎಂದು ಬೆನ್ನು ತಟ್ಟಬೇಕಿಲ್ಲ. ಯಾಕೆಂದರೆ ಮಿತ್ರಾ ಹೆಗ್ಡೆಯವರು ದೇಶವನ್ನೇ ನಡುಗಿಸುವ ೨ಜಿ ಹಗರಣವಾಗಲಿ, ಗಣಿ ಹಗರಣವನ್ನಾಗಲಿ ಮಾಡಿಲ್ಲ. ತನ್ನ ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ಸುಳ್ಳು ಹೇಳಿದ್ದಾರಷ್ಟೇ.
ಈ ವಿವಾದವನ್ನು ಬಹಿರಂಗಗೊಳಿಸಿದವರಿಗೆ ನಮ್ಮ ಜಿಲ್ಲೆಯಲ್ಲಿ ಅಥವಾ ಈ ರಾಜ್ಯದಲ್ಲಿ ಇದೊಂದೇ ದೊಡ್ಡ ಸಮಸ್ಯೆಯಲ್ಲ ಎನ್ನುವುದು ನೆನಪಿರಲಿ. ನಮ್ಮಲ್ಲಿ ಈಗಾಗಲೇ ಅದೆಷ್ಟೋ ಸಮಸ್ಯೆಗಳಿವೆ. ನಮ್ಮ ಜಿಲ್ಲೆಯ ಸರ್ಕಾರಿ ಕಛೇರಿಗಳಲ್ಲಿ ಇನ್ನಿಲ್ಲದಂತೆ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದುಕೊಂಡು ಜಿಲ್ಲೆಯಲ್ಲಿ ನಡೆಯುತ್ತಿರುವ ಹಗರಣಗಳನ್ನು ಬಯಲಿಗೆಳೆಯಬಹುದಲ್ಲವೇ? ಅದು ಬಿಟ್ಟು ವೈಯಕ್ತಿಕ ಹಿತಾಸಕ್ತಿಯಿಂದ ಮಿತ್ರಾ ಹೆಗ್ಡೆಯುವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ಏನಿತ್ತು? ಹಾಗಂತ ನಾನು ಮಿತ್ರಾರ ತಪ್ಪನ್ನು ಸಮರ್ಥಿಸುತ್ತಿಲ್ಲ. ಬದಲಾಗಿ ಈ ಸಣ್ಣ ವಿವಾದವನ್ನು ದೇಶದ ದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸುವ ಕೆಲ ವ್ಯಕ್ತಿಗಳ ಸಣ್ಣ ತನವನ್ನು ಪ್ರಶ್ನಿಸುತ್ತಿದ್ದೇನೆ. ನಮ್ಮಲ್ಲಿ ಇನ್ನೂ ಅನೇಕ ವೈದ್ಯರು ನಗರದಲ್ಲಿ ಕ್ಲೀನಿಕ್ ನಡೆಸಿಕೊಂಡು ರೋಗಿಗಳಿಂದ ಬೇಕಾಬಿಟ್ಟಿ ಹಣ ಕೀಳುತ್ತಿದ್ದಾರೆ. ಅದು ಇವರ ಕಣ್ಣಿಗೆ ಬಿದ್ದಿಲ್ಲವೇ? ನಕಲಿ ಡಾಕ್ಟರ್‌ಗಳು ಎಂಬಿಬಿಎಸ್ ಬೋರ್ಡ್ ನೇತು ಹಾಕಿ ಜನರಿಗೆ ವಂಚಿಸುತ್ತಿದ್ದಾರೆ. ಈ ಬಗ್ಗೆ ಯಾಕೆ ಸೊಳ್ಳೆತ್ತುತ್ತಿಲ್ಲ?
ಅಷ್ಟೇ ಯಾಕೆ ನಗರದ ಬಹುತೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ರೋಗಿಗಳ ಪಾಲಿಗೆ ನರಕಸದೃಶವಾಗಿದೆ. ಇದು ಇವರಿಗೆ ಸಮಸ್ಯೆಯೇ ಅಲ್ಲವೇ? ಒಂದು ಸಣ್ಣ ಸಮಸ್ಯೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಚಾರ ಪಡಿಸುವ ಅಗತ್ಯತೆ ಏನಿತ್ತು? ಮಿತ್ರಾ ಹೆಗ್ಡೆ ಸುಳ್ಳು ಹೇಳಿ ಜನರನ್ನು ವಂಚಿಸಿದ್ದೇ ಆದರೆ ಈ ಬಗ್ಗೆ ವೈದ್ಯಕೀಯ ವಿ.ವಿ ಕ್ರಮ ಕೈಗೊಳ್ಳಲಿ. ವೈಯಕ್ತಿಕ ನೆಲೆಯಲ್ಲಿ ಇವರ ವಿರುದ್ದ ಕೇಸು ಹಾಕಿ ನ್ಯಾಯಾಲಯಕ್ಕೆ ಹೋಗಿ. ಅದು ಬಿಟ್ಟು ಒಂದು ಸಣ್ಣ ವಿವಾದವನ್ನು ತಿಂಗಳುಗಟ್ಟಲೇ ಎಳೆದು ಜನಸಾಮಾನ್ಯರಿಗೆ ಮೂಡಿಸುವ ಜಾಗೃತಿಯಾದರೂ ಏನು? ಇನ್ನು ಮಿತ್ರಾ ಹಗ್ಡೆಯವರಿಗೆ ಸಿಕ್ಕಿದ ಪ್ರಶಸ್ತಿಯೇ ಇವರ ಹೋರಾಟದ ಕೇಂದ್ರ ಬಿಂದುವಾ ಗಿದ್ದರೆ, ನಮ್ಮಲ್ಲಿ ಸಾಧನೆಗಾಗಿ ಪ್ರಶಸ್ತಿ ಪಡೆಯದವರ ದಂಡೇ ಇದೆ. ಇವರೆಲ್ಲರ ಪಟ್ಟಿ ಮಾಡಿ ಹೋದರೆ ಅರ್ಧಕ್ಕರ್ಧ ಜನರಿಗೆ ಸರ್ಕಾರ ಪ್ರಶಸ್ತಿ ಕೊಟ್ಟದ್ದಲ್ಲ, ಮಾರಾಟ ಮಾಡಿದ್ದು ಎಂಬ ಸತ್ಯ ತಿಳಿಯುತ್ತದೆ.

ರಸ್ತೆ ಬದಿಯಲ್ಲಿ ಬಿದ್ದಿದ್ದ ಮಾಜಿ ಸೈನಿಕ

Posted by JAYAKIRANA Kirana on | 0 comments | Leave a comment...

ಸುಳ್ಯ: ಮಾಜಿ ಸೈನಿಕರೊಬ್ಬರು ಆಸ್ವಸ್ಥರಾಗಿ ಜಾಲ್ಸೂರಿನಲ್ಲಿ ರಸ್ತೆ ಬದಿ ಬಿದ್ದಿದ್ದು, ಅವರನ್ನು ಗೃಹ ರಕ್ಷಕ ದಳ ಕಾರ್ಯಕರ್ತ, ರಿಕ್ಷಾ ಚಾಲಕ ಅಡ್ಕಾರಿನ ಲೋಕೇಶ್ ಹಾಗೂ ಜಾಲ್ಸೂರು ಗ್ರಾ. ಪಂ. ಮಾಜಿ ಅಧ್ಯಕ್ಷ ಕೆ.ಎಂ.ಬಾಬು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುಳ್ಯದಿಂದ ಮಂಗಳೂರಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದ ಭಾಗಮಂಡಲದ ಅಚ್ಚಯ್ಯ ಎಂಬವರ ಪುತ್ರ ಬಿ.ಮೋಹನ್ ಜಾಲ್ಸೂರಿನಲ್ಲಿ ಬಸ್ ಇಳಿಯುತ್ತಿದ್ದಂತೆ ತೀವ್ರ ಅಸ್ವಸ್ಥರಾದರು. ಬಸ್‌ನಿಂದ ಇಳಿದ ಕೂಡಲೇ ರಸ್ತೆ ಬದಿ ಕುಸಿದು ಬಿದ್ದರು. ಇದನ್ನು ಗಮನಿಸಿದ ರಿಕ್ಷಾ ಚಾಲಕ ಲೋಕೇಶ್, ಮಾತನಾಡಿಸಲು ಪ್ರಯತ್ನಿಸಿದಾಗ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇದೇ ಸಂದರ್ಭ ಅಲ್ಲಿಗೆ ಆಗಮಿಸಿದ ಜಾಲ್ಸೂರು ಕೆ.ಎಂ.ಬಾಬು ಸೇರಿ ಮೋಹನ್‌ರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದರು. ಅಲ್ಲೀಗ ಅವರು ಚೇತರಿಸಿಕೊಂಡಿದ್ದಾರೆ. ಅವರ ಬಳಿಯಿದ್ದ ಬ್ಯಾಗ್‌ನಲ್ಲಿ ೫೮,೫೮೦ ರೂ. ನಗದು, ೩ ಉಂಗುರ, ೧ ಚಿನ್ನದ ಚೈನು ಇತ್ತು. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೋಹನ್ ಮೂಲತಃ ಸುಬ್ರಹ್ಮಣ್ಯ ಸಮೀಪದ ನೂಚಿಲದವರು ಎಂದು ಅವರ ಬ್ಯಾಗ್‌ನಲ್ಲಿದ್ದ ಬ್ಯಾಂಕ್ ಪಾಸ್ ಪುಸ್ತಕದಲ್ಲಿ ದಾಖಲೆ ಇದೆ. ಅವರಿಗೆ ಮದುವೆಯಾಗಿದ್ದು, ೨ ಹೆಣ್ಣು ಮತ್ತು ೧ ಗಂಡು ಮಗುವಿದೆ. ಆದರೆ ಅವರಿಗೆ ಈಗ ವಿಚ್ಛೇದನವಾಗಿದೆ. ಹಾಗಾಗಿ ಅವರು ಮನೆಯನ್ನು ತೊರೆದಿದ್ದರು ಎನ್ನಲಾಗಿದೆ. ಅವರ ಸಹೋದರರಿಗೆ ವಿಷಯವನ್ನು ತಿಳಿಸಲಾಗಿದೆ ಎಂದು ಲೋಕೇಶ್ ತಿಳಿಸಿದ್ದಾರೆ.

ನಕಲು ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿ ನೇಣಿಗೆ ಶರಣು

Posted by JAYAKIRANA Kirana on | 1 comments | Leave a comment...

ಉಡುಪಿ: ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದ ಕಾರಣಕ್ಕೆ ಅಪಮಾನಿತಳಾದ ಮಣಿಪಾಲ ಕಾಲೇಜಿನ ಎರಡನೇ ವರ್ಷದ ಬಿಬಿಎಂ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗುರುವಾರ ರಾತ್ರಿ ಮಣಿಪಾಲದ ಈಶ್ವರ ನಗರದಲ್ಲಿ ನಡೆದಿದೆ.
 ಮೃತ ವಿದ್ಯಾರ್ಥಿನಿಯನ್ನು ಬ್ಲಾಂಚ್ ಡಿ’ಸೋಜಾ(೨೦) ಎಂದು ಗುರುತಿಸಲಾಗಿದೆ. ಬ್ಲ್ಲಾಂಚ್ ಪರೀಕ್ಷೆ ನಡೆಯುತ್ತಿದ್ದಾಗ ನಕಲು ಮಾಡಲು ಹೋಗಿ ಪ್ರೊಫೆಸರ್ ಕೈಗೆ ಸಿಕ್ಕಿಬಿದ್ದಿದ್ದಳು ಎನ್ನಲಾಗಿದೆ. ಇದೇ ಬೇಸರದಲ್ಲಿ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು ಶುಕ್ರವಾರ ಬೆಳಗ್ಗೆ ಗಮನಕ್ಕೆ ಬಂತು ಎನ್ನಲಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ದೆವ್ವ ಬಾಧೆ ಮೌಢ್ಯತೆ: ಗೃಹಿಣಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ದೆವ್ವ ಬಾಧೆ ಮೌಢ್ಯತೆ ಯಿಂದ ಮಾನಸಿಕಳಂತೆ ವರ್ತಿಸುತ್ತಿದ್ದ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಎಂಬಲ್ಲಿ ನಡೆದಿದೆ.
ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ನಿವಾಸಿ ಲಿಂಗಪ್ಪ ಆಚಾರಿ ಎಂಬವರ ಪುತ್ರಿ, ಹರೀಶ್ ಆಚಾರಿಯವರ ಪತ್ನಿ ಪ್ರಿಯದರ್ಶಿನಿ(೨೮) ಆತ್ಮಹತ್ಯೆ ಮಾಡಿ ಕೊಂಡವರು. ಪ್ರಿಯದರ್ಶಿನಿ ಅವರು ರಾತ್ರಿ ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಮೈಲುತುತ್ತು ಸೇವಿ ಸಿದ್ದರು. ವಿಷಯ ತಿಳಿದ ಮನೆಯವರು ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಚಿಕಿತ್ಸೆಗೆಂದು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಅವರು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿರು ವುದಾಗಿ ತಿಳಿದುಬಂದಿದೆ.
ದೆವ್ವಬಾಧೆ ಮೌಢ್ಯತೆಯಿಂದ ಮಾನಸಿಕಳಂತೆ ವರ್ತಿಸುತ್ತಿದ್ದ ಪ್ರಿಯದರ್ಶಿನಿ ಅವರು ಇದೇ ಕಾರಣ ದಿಂದಾಗಿ ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆ ಮಾಡಿಕೊಂಡಿ ರಬಹುದೆಂದು ಶಂಕಿಸಲಾಗಿದೆ.
ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾನಹಾನಿಯ ಬೆದರಿಕೆ

Posted by JAYAKIRANA Kirana on | 0 comments | Leave a comment...

ಉಡುಪಿ: ಮಣಿಪಾಲ ಎಂಐಟಿ ಹಾಸ್ಟೆಲ್‌ನಲ್ಲಿ ವಾಸವಾಗಿರುವ ವಿದ್ಯಾರ್ಥಿಯೊಬ್ಬನ ಮುಖಕ್ಕೆ ಬೇರೊಂದು ಅಶ್ಲೀಲ ದೇಹದ ಭಾವ ಚಿತ್ರವನ್ನು ಜೋಡಿಸಿ ಇದನ್ನು ವಿದ್ಯಾರ್ಥಿಯ ಇಮೇಲ್ ಐಡಿಗೆ ಕಳುಹಿಸಿದ್ದೂ ಅಲ್ಲದೇ, ಇದೇ ಫೋಟೋವನ್ನು ಫೇಸ್‌ಬುಕ್‌ಗೆ ಹಾಕಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣ ನಡೆದಿದೆ.
ಎ.೧೦ರಂದು ಸಂಜೆ ೫ ಗಂಟೆಗೆ ಈ ಪ್ರಕರಣ ನಡೆದಿದೆ. ಈ ಬಗ್ಗೆ ಪ್ರಚಿ ಮಿತ್ತಲ್(೧೯) ನೀಡಿದ ದೂರಿನ ಪ್ರಕಾರ ಮಣಿಪಾಲ ಠಾಣೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಚಿಲ್ಲರೆ ವಿಷಯದಲ್ಲಿ ಬಸ್ ನಿರ್ವಾಹಕನಿಗೆ ಬೆದರಿಕೆ

Posted by JAYAKIRANA Kirana on | 0 comments | Leave a comment...

ಪ್ರಯಾಣಿಕನಿಗೆ ನ್ಯಾಯಾಂಗ ಬಂಧನ
ಪುತ್ತೂರು: 'ಚಿಲ್ಲರೆ ವಿಷಯಕ್ಕೆ ಸಂಬಂಧಿಸಿ ಪ್ರಯಾಣಿಕರಿಬ್ಬರು ಸೇರಿಕೊಂಡು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕರೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣ ಸಂಪ್ಯ ಠಾಣೆಯಲ್ಲಿ ದಾಖ ಲಾಗಿದ್ದು, ಪೊಲೀಸರು ಆರೋಪಿ ಯೊಬ್ಬನನ್ನು ಬಂಧಿಸಿದ್ದಾರೆ.
ಪುತ್ತೂರಿನ ಒಳ ಮೊಗ್ರು ಗ್ರಾಮದ ಕುಟ್ಟಿನೋಪಿನಡ್ಕ ನಿವಾಸಿ ನಾಸೀರ್(೨೧) ಬಂಧಿತ ಆರೋಪಿ. ಬಶೀರ್ ಎಂಬಾತನ ಮೇಲೆಯೂ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಆರೋಪಿಗಳು ಎ.೧೧ರಂದು ಬೆಳಗ್ಗೆ ಪುತ್ತೂರಿನಿಂದ ಸುಳ್ಯವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (ಕೆಎ೧೯-ಎಫ್.೨೨೦೧)ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಿಲ್ಲರೆ ಹಣದ ವಿಷಯದಲ್ಲಿ ತನಗೆ ಅವಾಚ್ಯವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯೊ ಡ್ಡಿರುವುದಾಗಿ ಬಸ್ ನಿರ್ವಾಹಕ ವಿಶ್ವನಾಥ ಶೆಟ್ಟಿ ಬಂಬಿಲ ಎಂಬವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪೈಕಿ ಓರ್ವನಾದ ನಾಸೀರ್‌ನನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪೋಸ್ಟ್ ಸಿಬ್ಬಂದಿಗೆ ರೈಲು ಢಿಕ್ಕಿ

Posted by JAYAKIRANA Kirana on | 0 comments | Leave a comment...

ಓರ್ವ ಮೃತ್ಯು, ಮತ್ತೋರ್ವ ಗಂಭೀರ
ಮಂಗಳೂರು: ಇಂದು ಬೆಳಗಿನ ಜಾವ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಭವಿಸಿದ ಅಪಘಾ ತದಲ್ಲಿ ಪೋಸ್ಟ್ ಸಾಗಿಸುತ್ತಿದ್ದ ಓರ್ವ ಸಿಬ್ಬಂದಿ ಮೃತಪಟ್ಟಿದ್ದರೆ ಮತ್ತೋರ್ವ ತನ್ನೆರಡೂ ಕಾಲುಗಳನ್ನು ಕಳೆದು ಕೊಂಡು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ ಮೂಲದ ಪೊಫೆಸರ್ ಎಂ.ಪಿ.(೨೫)ಮೃತ ವ್ಯಕ್ತಿ, ಇವರು ೨೫ದಿನಗಳ ಹಿಂದಷ್ಟೇ ರೈಲ್ವೆ ಪೋಸ್ಟ್‌ಗೆ ದಿನಗೂಲಿ ನೌಕರರಾಗಿ ಸೇರಿದ್ದರು ಎಂದು ಹೇಳಲಾಗಿದೆ.
ಇವರೊಂದಿಗೆ ಪೋಸ್ಟ್ ಬಂಡಲ್ ಗಳನ್ನು ಹೊತ್ತು ಸಾಗಿಸುತ್ತಿದ್ದ ಇನ್ನೋರ್ವ ಸಿಬ್ಬಂದಿ ಕದ್ರಿ ಕಂಬಳ ನಿವಾಸಿ ಸಂತೋಷ ದೇವಾಡಿಗ ಎಂಬ ವರು ಎರಡೂ ಕಾಲುಗಳನ್ನು ಕಳೆದು ಕೊಂಡಿದ್ದಾರೆ.
ಇಂದು ಮುಂಜಾನೆ ೪:೩೦ರ ಸುಮಾರಿಗೆ ಸೆಂಟ್ರಲ್ ರೈಲು ನಿಲ್ದಾಣದ ಎರಡನೆ ಪ್ಲ್ಯಾಟ್ ಫಾರ್ಮ್‌ನಿಂದ ಒಂದನೆಪ್ಲ್ಯಾಟ್ ಫಾರ್ಮ್‌ಗೆ ಪೋಸ್ಟ್ ಬಂಡಲ್‌ಗಳನ್ನು ಹೊತ್ತು ಸಾಗಿಸುತ್ತಿ ದ್ದಾಗ ಒಂದನೆ ಪ್ಲ್ಯಾಟ್‌ಫಾರ್ಮ್‌ನಲ್ಲಿದ್ದ ರೈಲು ಹಿಂದಕ್ಕೆ ಚಲಿಸಿದ್ದು, ಈ ಸಂದರ್ಭದಲ್ಲಿ ರೈಲ್ವೆ ಟ್ರ್ಯಾಕ್‌ನಲ್ಲಿಯೇ ಇದ್ದಇಬ್ಬರು ಸಿಬ್ಬಂದಿಯ ಮೇಲೆ ರೈಲು ಹರಿಯಿತೆನ್ನಲಾಗಿದೆ. ಸಂತೋಷ ದೇವಾಡಿಗ ಟ್ರ್ಯಾಕ್‌ನ ಹೊರಗೆ ಬಿದ್ದಿದ್ದರಿಂದ ರೈಲು ಅವರ ಕಾಲುಗಳ ಮೇಲೆ ಹರಿದು ಹೋಯಿತು. ಟ್ರ್ಯಾಕ್‌ನ ಮಧ್ಯೆ ಸಿಕ್ಕಿಬಿದ್ದ ಪೊ.ಎಂ.ಪಿ. ಪ್ರಾಣ ಕಳೆದುಕೊಂಡರು.
ರೈಲುಗಳಲ್ಲಿ ಬರುವ ಪೋಸ್ಟ್ ಪಾರ್ಸಲ್‌ಗಳನ್ನು ಟ್ರ್ಯಾಲಿಗಳ ಮೂಲಕ ದೂಡಿಕೊಂಡು ಬರಬೇಕು ಎಂಬ ನಿಯಮ ಇದ್ದರೂ ಅಧಿಕಾರಿಗಳು ಪಾರ್ಸಲ್‌ಗಳನ್ನು ಬೇಗ ಸಾಗಿಸಲು ಒತ್ತಡ ಹೇರುತ್ತಿದ್ದುದರಿಂದ ಅವರು ಪಾರ್ಸಲ್‌ಗಳನ್ನು ಹೊತ್ತುಕೊಂಡೆ ರೈಲಿನ ಟ್ರ್ಯಾಕ್‌ಗಳನ್ನು ದಾಟುತ್ತಿದ್ದರು ಎನ್ನಲಾಗಿದೆ. ಅಧಿಕಾರಿಗಳ ಅವಸರಕ್ಕೆ ಸಿಬ್ಬಂದಿ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ರೈಲಿನ ಸಿಬ್ಬಂದಿ ಆರೋಪಿಸಿದ್ದಾರೆ.

ಪ್ರೀತಿಸಿ ವಿವಾಹವಾದಾತನಿಂದ ಪತ್ನಿಗೆ ವರದಕ್ಷಿಣೆ ಹಿಂಸೆ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಪ್ರೀತಿಸಿ ವಿವಾಹವಾದ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ವರದಕ್ಷಿಣೆಯ ಆಸೆಯಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವ ಬಗ್ಗೆ ಮಹಿಳೆಯೊಬ್ಬಳು ಇದೀಗ ಕಾನೂನಿನ ಮೊರೆ ಹೋಗಿದ್ದು, ತನ್ನ ಗಂಡ, ಅತ್ತೆ, ಮಾವ ಹಾಗೂ ನಾದಿನಿ ವಿರುದ್ಧ ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಪೆರ್ನೆಯ ಹಸನಬ್ಬ ಎಂಬವರ ಮಗಳು ನಸೀಮಾ(೨೦) ೯ ತಿಂಗಳ ಹಿಂದೆ ಕಬಕ ಗ್ರಾಮದ ಶಾಂತಿನಗರ ಎಂಬಲ್ಲಿನ ಅಬ್ದುಲ್ ರಹಿ ಮಾನ್ ಯಾನೆ ರಹೀಂ ಎಂಬಾತನನ್ನು ವಿವಾಹವಾಗಿದ್ದು, ಬಳಿಕ ನಿರಂತರವಾಗಿ ವರದಕ್ಷಿಣೆ ಹಿಂಸೆಗೆ ಒಳಗಾಗಿರುವುದಾಗಿ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
ಬೊಳುವಾರಿನ ತನ್ನ ಅಜ್ಜಿ ಮನೆಗೆ ಬರುತ್ತಿದ್ದ ರಹೀಮ್, ತನ್ನ ಅಕ್ಕನ ಮನೆಗೆ ಬರುತ್ತಿದ್ದ ನಸೀಮಾಳನ್ನು ಕಳೆದ ೭ ವರ್ಷಗಳಿಂದ ಪ್ರೀತಿಸುತ್ತಿದ್ದ. ಈಕೆಯನ್ನು ಬೇರೆ ಯಾರಿಗೂ ಮದುವೆ ಮಾಡಿಕೊಡದಂತೆ ಮನೆ ಮಂದಿಗೆ ಬೆದರಿಕೆಯನ್ನೂ ಹಾಕಿದ್ದ ಎಂದು ತಿಳಿದುಬಂದಿದೆ. ವೃತ್ತಿಯಲ್ಲಿ ಚಾಲಕನಾಗಿರುವ ಈತ ಪ್ರೀತಿಸಿ ವಿವಾಹವಾದ ಬಳಿಕ ಹಿಂಸೆ ನೀಡಲು ಆರಂಭಿಸಿದ್ದಾಗಿ ಈಕೆ ತಿಳಿಸಿದ್ದಾಳೆ. ಮನೆಯಲ್ಲಿ ನೀಡುವ ಹಿಂಸೆ ತಡೆಯಲಾರದೆ ಈಕೆ ಆತ್ಮಹತ್ಯೆಗೂ ಪ್ರಯತ್ನಿಸಿದ್ದು, ಈಕೆಯನ್ನು ಉಳಿಸಿಕೊಳ್ಳುವಲ್ಲಿ ಈಕೆಯ ತಂದೆ-ತಾಯಿ ಯಶಸ್ವಿಯಾಗಿದ್ದಾರೆ.
ಮಾವ ಅಬ್ದುಲ್ ಕುಂಞ, ಅತ್ತೆ ಮೈಮೂನಾ, ನಾದಿನಿ ಮುಮ್ತಾಝ್ ಹಾಗೂ ಗಂಡ ರಹೀಂ sಸೇರಿಕೊಂಡು ತನ್ನ ಅಬಾರ್ಷನ್‌ಗೂ ಕಾರಣವಾಗಿ ದ್ದಾರೆ. ಮದುವೆಯಾಗಿ ೩ ತಿಂಗಳಲ್ಲಿ ತನಗೆ ವಿಷ ಬೆರೆಸಿದ ಆಹಾರ ಹಾಗೂ ಅಧಿಕ ಪ್ರಮಾಣದಲ್ಲಿ ಮಾತ್ರೆಗಳನ್ನು ಬಲವಂತವಾಗಿ ನೀಡಿ ಕೊಲ್ಲಲು ಯತ್ನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವ ಇವರು ಈ ವಿಚಾರವನ್ನು ಬೇರೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾರೆ. ಇವರ ಹಿಂಸೆಯಿಂದ ಮಂಗಳೂರಿನ ಫಾ.ಮುಲ್ಲರ‍್ಸ್ ಆಸ್ಪತ್ರೆಯಲ್ಲಿ ದೀರ್ಘ ಕಾಲದ ಚಿಕಿತ್ಸೆಯನ್ನೂ ಪಡೆದಿದ್ದೇನೆ. ಇವರ ಹಿಂಸೆ ಬಗ್ಗೆ ವಿಚಾರಿಸಲು ಬಂದ ನನ್ನ ತಂದೆ ತಾಯಿ ಹಾಗೂ ಬಂಧುಗಳನ್ನು ಮಚ್ಚು ಹಿಡಿದು ಬೆದರಿಸಿದ್ದಾರೆ ಎಂದು ದೂರಿನಲ್ಲಿ ಈಕೆ ತಿಳಿಸಿದ್ದಾರೆ. ತನ್ನನ್ನು ಪ್ರೀತಿಸಿ ವಿವಾಹವಾದ ಗಂಡ ಹಾಗೂ ಇವರ ಮನೆಯವರು ಸೇರಿಕೊಂಡು ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದು, ತನಗೆ ನ್ಯಾಯ ಒದಗಿಸಿ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಕಾರುಗಳ ಮುಖಾಮುಖಿ: ಓರ್ವ ಗಂಭೀರ

Posted by JAYAKIRANA Kirana on | 0 comments | Leave a comment...


ಪಡುಬಿದ್ರಿ: ಉಚ್ಚಿಲ ಶ್ರೀ ಮಹಾ ಲಕ್ಷ್ಮೀ ದೇವಸ್ಥಾನದ ಎದುರು ಎರಡು ಕಾರುಗಳ ಮಧ್ಯೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಕಾರು ಚಾಲಕನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಉಡುಪಿಯಿಂದ ಮೂಲ್ಕಿ ಕಡೆಗೆ ಸಾಗುತ್ತಿದ್ದ ಇನೋವಾ ಕಾರು ಹಾಗೂ ಉಡುಪಿ ಕಡೆಗೆ ಸಾಗುತ್ತಿದ್ದ ಶಿಪ್ಟ್ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಸಂದರ್ಭ ಶಿಫ್ಟ್ ಕಾರಿನ ಚಾಲಕ ಪುನರೂರಿನ ಪ್ರದೀಪ್ ಎಂಬಾತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಡುಬಿದ್ರಿ ಪೊಲೀ ಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರಕರಣ ರಾಜಿಯಲ್ಲಿ ಇತ್ಯರ್ಥ ಆಗಿದೆ ಎಂದು ತಿಳಿದುಬಂದಿದೆ.

ರಬ್ಬರ್ ತೋಟಕ್ಕೆ ಬೆಂಕಿ

Posted by JAYAKIRANA Kirana on | 0 comments | Leave a comment...

ವಿಟ್ಲ: ರಬ್ಬರ್ ತೋಟವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಅಂದಾಜು ಮೂರು ಲಕ್ಷ ರೂ. ನಷ್ಟ ಸಂಭವಿಸಿದ ಘಟನೆ ಕೊಳ್ನಾಡು ಗ್ರಾಮದ ಮಾದಕಟ್ಟೆ ಎಂಬಲ್ಲಿ ಶುಕ್ರವಾರ ನಡೆದಿದೆ. ವಿಟ್ಲ ಕೊಳ್ನಾಡು ಗ್ರಾಮದ ಮಾದಕಟ್ಟೆ ಸವಿತ ಭಟ್ ಎಂಬವರಿಗೆ ಸೇರಿದ ಸುಮಾರು ಎರಡು ಎಕರೆ ರಬ್ಬರ್ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿತು.
 ಘಟನೆ ಬಗ್ಗೆ ಸ್ಥಳೀಯರು ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅವರು ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದ್ದಾರೆ.

ಅಪಘಾತ: ಮಹಿಳೆಯರಿಗೆ ಗಾಯ

Posted by JAYAKIRANA Kirana on | 0 comments | Leave a comment...

ಉಡುಪಿ: ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆಯ ಪರಿಣಾಮವಾಗಿ ಸಂಚರಿಸುತ್ತಿದ್ದ ಟಿವಿಎಸ್ ಸ್ಕೂಟಿ ಅಪಘಾತಕ್ಕೀಡಾಗಿ ಇದರಲ್ಲಿದ್ದ ಮಹಿಳೆಯರಿಬ್ಬರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಇಂದ್ರಾಳಿ ರೈಲ್ವೆ ಸೇತುವೆ ಪಕ್ಕ ಸಂಭವಿಸಿದೆ.
ಸ್ಕೂಟಿ ದೊಡ್ಡಣಗುಡ್ಡೆಯಿಂದ ಮಣಿಪಾಲ ಕಡೆಗೆ ಸಂಚರಿಸುತ್ತಿತ್ತು. ಅಪಘಾತದಿಂದಾಗಿ ಸ್ಕೂಟಿಯಲ್ಲಿದ್ದ ಗೀತಾ ರವಿ ಹಾಗೂ ಇವರ ತಾಯಿ ಸೀತಾ ಎಂಬವರು ಗಾಯಗೊಂ ಡಿದ್ದಾರೆ.
ಈ ಬಗ್ಗೆ ಗಾಯಾಳುಗಳ ಸಂಬಂಧಿ ಕುಂಜಿಬೆಟ್ಟು ನಿವಾಸಿ ರಮೇಶ್ ಕೆ. ಎಂಬವರು ನೀಡಿದ ದೂರಿನ ಆಧಾರದಲ್ಲಿ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕಲಾವಿದ ಮಹೇಶ್ ಶಕ್ತಿನಗರ ನಿಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ತುಳುರಂಗ ಭೂಮಿಯ ಖ್ಯಾತ ಕಲಾವಿದ ಮಹೇಶ್ ಶಕ್ತಿನಗರ ಮೊನ್ನೆ ತನ್ನ ಸ್ವಗೃಹದಲ್ಲಿ ನಿಧನಹೊಂದಿದರು.
ಮಹೇಶ್ ಶಕ್ತಿನಗರ ರಂಗಭೂಮಿ ಯಲ್ಲಿ ೩೫ ವರ್ಷಕ್ಕೂ ಮಿಕ್ಕಿ ಕಲಾಸೇವೆಗೈದಿದ್ದರು. ವೃತ್ತಿಪರ ಕಲಾವಿದರಾಗಿದ್ದ ಅವರು ದೇವದಾಸ್ ಕಾಪಿಕಾಡ್‌ರವರ 'ಬಲೇ ಚಾ ಪರ‍್ಕ' ತಂಡದಲ್ಲಿ ೨೬ ವರ್ಷ ಸೇವೆಗೈದಿದ್ದರು. ಅವರ ನಿಧನಕ್ಕೆ ತುಳುರಂಗಭೂಮಿಯ ನಿರ್ದೇಶಕರು, ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.

ಯುವಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಕೊಲೆ ಶಂಕೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಮಂಜೇಶ್ವರ ಠಾಣಾ ವ್ಯಾಪ್ತಿಯ ಕೊಡ್ಲಮೊಗರು ತುಪ್ಪೆಬೆದ್ರಡಿಯ ಸದಾನಂದ ಎಂಬವರ ಮನೆಯಲ್ಲಿ ಅವರ ಅಳಿಯ ಅಶೋಕ(೨೬) ಎಂಬವರ ಶವ ತೀರ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.
ಈ ಮನೆಯವರು ಕಳೆದ ೨ ವಾರಗಳ ಹಿಂದೆ ಹತ್ತಿರದ ಸಂಬಂಧಿ ಕರ ವಿವಾಹದಲ್ಲಿ ಪಾಲ್ಗೊಳ್ಳಲು ತೆರಳಿದವರು ಬಂದಿರಲಿಲ್ಲ. ಮೊನ್ನೆ ಸಂಜೆ ಈ ಹಿತ್ತಿಲಿಗೆ ತೆಂಗಿನ ಕಾಯಿ ಕೀಳಲು ಬಂದಿದ್ದ ಕಾರ್ಮಿಕನು ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿ ರುವುದನ್ನು ಕಂಡು ಒಳಹೊಕ್ಕು ನೋಡಿದಾಗ ಮೃತದೇಹ ನೇತಾಡು ತ್ತಿರುವುದು ಕಂಡುಬಂದಿತ್ತು.
ಮಂಜೇಶ್ವರ ಪೊಲೀಸರು ತಲುಪಿ ಪಂಚನಾಮೆ ನಡೆಸಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು. ಅಂಬಾಡಿ ಅವರ ಪುತ್ರನಾದ ಅಶೋಕ ಅವಿ ವಾಹಿತ. ಆತ್ಮಹತ್ಯೆಯೆಂದು ನಂಬಲಾಗಿ ದ್ದರೂ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರಿದಿದೆ.

ಚಲಿಸುತ್ತಿದ್ದ ಲಾರಿಯಿಂದ ಚೆಲ್ಲಿದ ರಾಸಾಯನಿಕ: ಯುವಕ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೆಲಸದ ನಿಮಿತ್ತ ಹುಬ್ಬಳ್ಳಿಗೆ ತೆರಳಿದ್ದ ಮುಡಿಪು ಸಮೀಪ ಕೈರಂಗಳ ಮೂಲದ ಯುವಕ ಊರಿಗೆ ವಾಪಸ್ಸಾಗಲು ಬಸ್ ಕಾಯುತ್ತಿದ್ದ ಸಂದರ್ಭ ಲಾರಿಯೊಂದರಿಂದ ಈತನ ಮೈಮೇಲೆ ಚೆಲ್ಲಿದ ರಾಸಾಯನಿಕದಿಂದ ಗಂಭೀರ ಗಾಯಗೊಂಡು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೈರಂಗಳ ಗ್ರಾಮದ ದುಗ್ಗಜ್ಜರ ಕಟ್ಟೆ ನಿವಾಸಿ ಮಣಿಕಂಠ(೩೦) ಮೃತ ಯುವಕ. ಎರಡು ವಾರಗಳ ಹಿಂದೆ ಬಾವನೊಂದಿಗೆ ಹುಬ್ಬಳ್ಳಿಗೆ ಕೆಲಸದ ನಿಮಿತ್ತ ತೆರಳಿದ್ದ ಮಣಿಕಂಠ ವಾರದ ಹಿಂದೆ ಊರಿಗೆ ವಾಪಸ್ಸಾಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ಸಂದರ್ಭ ಅತಿವೇಗವಾಗಿ ಚಲಿಸಿದ ಲಾರಿಯೊಂದರಿಂದ ಚೆಲ್ಲಿದ ರಾಸಾಯನಿಕ ಮಣಿಕಂಠನ ಮೈಮೇಲೆ ಬಿದ್ದು ಭಾಗಶ: ಬೆಂದು ಹೋಗಿದ್ದರು. ಮೂರು ದಿನಗಳ ಕಾಲ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಬಳಿಕ ದೇರಳಕಟ್ಟೆ ಆಸ್ಪತ್ರೆಯಲ್ಲಿ ಮೂರು ದಿನಗಳ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಭಾಗಶ: ಬೆಂದ ದೇಹದಲ್ಲಿ ಕಿಡ್ನಿಗೂ ಹಾನಿಯಾಗಿದ್ದರಿಂದಾಗಿ ಕಿಡ್ನಿ ವೈಫಲ್ಯದಿಂದ ನಿನ್ನೆ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಪೊಲೀಸರು ಬಂದ ಬಳಿಕ ತನಿಖೆ ನಡೆಯಲಿದೆ.
ಕುಟುಂಬಕ್ಕೆ ಆಸರೆಯಾಗಿದ್ದ
ಕುಟುಂಬಕ್ಕೆ ಆಸರೆಯಾಗಿದ್ದ ಮಣಿಕಂಠ ಅವಿವಾಹಿತನಾಗಿದ್ದು ಬಹಳ ಕಷ್ಟುಪಟ್ಟು ತಾಯಿ, ಇಬ್ಬರು ಅಕ್ಕಂದಿರು ಹಾಗೂ ಇಬ್ಬರು ತಮ್ಮಂದಿರನ್ನು ಸಾಕುತ್ತಿದ್ದ. ಅದಕ್ಕಾಗಿ ಕಾಲೇಜಿನಲ್ಲಿ ಅಟೆಂಡರ್ ಕೆಲಸವನ್ನೂ ಮಾಡುತ್ತಿದ್ದ. ಬಸ್‌ನಲ್ಲಿ ಕ್ಲೀನರ್ ಕೆಲಸವನ್ನೂ ಮಾಡಿದ್ದ. ಜಾತ್ರೆ ಮೊದಲಾದ ಸಮಾರಂಭಗಳಲ್ಲಿ ಐಸ್ ಐಸ್ ಕ್ರೀಂ ಪಾರ್ಲರ್, ಹೊಟೇಲ್‌ಗಳಲ್ಲಿ ದುಡಿಯುತ್ತಿದ್ದ. ಮೂಲತ: ತಮಿಳುನಾಡಿನವರಾದ ಮಣಿಕಂಠನ ಕುಟುಂಬ ಕಳೆದ ಕೆಲವು ದಶಕಗಳಿಂದ ಕೈರಂಗಳದಲ್ಲಿ ವಾಸಿಸುತ್ತಿದೆ. ದುಡಿಯುತ್ತಿದ್ದ ಒಬ್ಬ ಮಗ ಮಣಿಕಂಠನನ್ನು ಕಳೆದುಕೊಂಡ ಕುಟುಂಬಕ್ಕೆ ಆಸರೆ ಇಲ್ಲದಾಗಿದೆ.

ಫೈನಾನ್ಸ್‌ನಿಂದ ದರೋಡೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಫೈನಾನ್ಸ್ ಒಂದರ ಎರಡು ಲಕ್ಷ ರೂ. ದರೋಡೆ ಮಾಡಿದ ಘಟನೆ ನಿನ್ನೆ ರಾತ್ರಿ ನಗರದ ಹಂಪನ ಕಟ್ಟೆಯ ಬಳಿ ನಡೆದಿದೆ.
ಹಂಪನಕಟ್ಟೆಯ ಸಮಾ ಸೆಂಟರ್ ನಲ್ಲಿರುವ ಲಕ್ಷ್ಮಿ ಫೈನಾನ್ಸ್‌ನ ವ್ಯವಸ್ಥಾಪಕ ಕಂರಗಪ್ಪ ಶೇಣವ ಎಂಬವರು ಸಂಸ್ಥೆಯ ಬಾಗಿಲು ಮುಚ್ಚಿ ಪ್ಲಾಸ್ಟಿಕ್ ಚೀಲದಲ್ಲಿ ದಿನದ ಹಣದೊಂದಿಗೆ ಮಹಡಿಯಿಂದ ಇಳಿದು ಬರುತ್ತಿ ರುವಾಗ ಅಪರಿಚಿತರಿಬ್ಬರು ಪ್ಲಾಸ್ಟಿಕ್ ಚೀಲ ಎಳೆದುಕೊಂಡು ಪರಾರಿ ಯಾದರೆನ್ನಲಾಗಿದೆ.

ರತ್ನಗಿರಿ ಮೀನು ಶೇಖರಣಾ ಘಟಕದಲ್ಲಿ ಮಂಗಳೂರಿನ ಇಬ್ಬರು ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೀನು ಶೇಖರಣಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅದರ ತೊಟ್ಟಿಗೆ ಬಿದ್ದು ಮಂಗಳೂರಿನ ಇಬ್ಬರು ಯುವಕರು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರತ್ನಗಿರಿ ಬಂದರಿನಲ್ಲಿ ನಿನ್ನೆ ನಡೆದಿದೆ.
ಮೃತರನ್ನು ತುಂಬೆ ಅಡ್ಯಾರ್ ಪದವು ನಿವಾಸಿ ಹಸೈನಾರ್ ಅವರ ಪುತ್ರ ನವಾಝ್(೨೫), ಉಳ್ಳಾಲ ಅಳೇಕಲ ಕಟ್ಟತ್ತಲ ನಿವಾಸಿ ಉಮ್ಮರಬ್ಬ ಅವರ ಪುತ್ರ ಶಾಕಿರ್(೨೨) ಎಂದು ತಿಳಿದು ಬಂದಿದೆ. ಹಾಗೆಯೇ ಗಾಯಗೊಂಡವರನ್ನು ಕುತ್ತಾರು ಪದವು ಮುಂಡೋಳಿಯ ರಶೀದ್ ಹಾಗೂ ಮಲಾರ್‌ನ ಅಬ್ದುಲ್ ರವೂಫ್ ಎನ್ನಲಾಗಿದೆ. ಮೃತದೇಹಗಳನ್ನು ನಿನ್ನೆ ಮನೆಮಂದಿಗೆ ಬಿಟ್ಟುಕೊಡಲಾಗಿದೆ.

ಮೊದಲ ಪತ್ನಿಗೆ ಹಲ್ಲೆಗೈದ ದ್ವಿಪತ್ನಿವಲ್ಲಭ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಬಹುಪತ್ನಿ ವಲ್ಲಭ ನೊಬ್ಬ ತನ್ನ ಮೊದಲನೆಯ ಪತ್ನಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿರುವ ಬಗ್ಗೆ ಅಜೆಕಾರು ಠಾಣೆ ಯಲ್ಲಿ ಕೇಸು ದಾಖಲಾಗಿದೆ.
ಶಿರ್ಲಾಲು ಕೊಡಂಗೆಯ ಸುರೇಶ್ ಪೂಜಾರಿ(೪೫) ಎಂಬಾತ ಪ್ರಕರಣದ ಆರೋಪಿಯಾಗಿದ್ದಾನೆ. ೨೦೦೦ ಮೇ ೭ರಂದು ದೇವಕಿ(೪೦) ಎಂಬಾಕೆಯೊಂದಿಗೆ ವಿವಾಹವಾಗಿದ್ದ ಈತ ತಿಂಗಳು ಕಳೆಯುತ್ತಿದ್ದಂತೆ ಪತ್ನಿಗೆ ವಿನಾಕಾರಣ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುತ್ತಿದ್ದನೆಂದು ತಿಳಿದುಬಂದಿದೆ. ನಂತರದ ದಿನಗಳಲ್ಲಿ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ ವೆಂದು ತಿಳಿದುಬಂದಿದೆ.
ಸುರತ್ಕಲ್ ಸಮೀಪದ ನಿವಾಸಿ ಸವಿತಾ ಅಲಿಯಾಸ್ ಸಬಿತಾ ಎಂಬಾಕೆ ಯನ್ನು ಎರಡನೇಯ ವಿವಾಹ ಮಾಡಿಕೊಂಡಿದ್ದ ಸುರೇಶ್ ಪೂಜಾರಿ ಏಪ್ರಿಲ್ ೧೨ರಂದು ಶಿರ್ಲಾಲು ಕೊಡಂಗೆ ಮನೆಗೆ ಬಂದು ವಿನಾ ಕಾರಣದಿಂದ ದೇವಕಿಗೆ ಹಲ್ಲೆಗೈದು ಜೀವಬೆರಿಕೆಯೊಡ್ಡಿದ್ದಾನೆ.
ಈ ಬಗ್ಗೆ ಆರೋಪಿಯ ವಿರುದ್ಧ ಅಜೆಕಾರು ಠಾಣೆಯಲ್ಲಿ ಕೇಸು ದಾಖಲಾಗಿದೆ.

ತೆಂಗಿನ ಮರದಿಂದ ಬಿದ್ದು ಮೃತ್ಯು

Posted by JAYAKIRANA Kirana on | 0 comments | Leave a comment...

ಪುತ್ತೂರು: ಕೂಲಿ ಕಾರ್ಮಿಕ ರೊಬ್ಬರು ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಬಾವ ಎಂಬಲ್ಲಿಂದ ವರದಿಯಾಗಿದೆ.
ಸುಳ್ಯ ತಾಲೂಕಿನ ಕನಕಮಜಲು ನಿವಾಸಿಯಾಗಿದ್ದು, ಪ್ರಸ್ತುತ ನೆಟ್ಟಣಿಗೆ ಮುಡ್ನೂರು ಗ್ರಾಮದ ಮೈರೋಳು ಎಂಬಲ್ಲಿ ತನ್ನ ಪತ್ನಿಯ ತವರು ಮನೆಯಲ್ಲಿ ವಾಸ್ತವ್ಯ ಹೊಂದಿದ್ದ ಸೋಮಪ್ಪ ಯಾನೆ ಮಾಂಕು(೩೫) ಮೃತಪಟ್ಟವರು.
ಕರ್ನೂರು ಪರಿಸರದಲ್ಲಿ ಅಡಿಕೆ ಮತ್ತು ತೆಂಗಿನಕಾಯಿ ಕೀಳುವ ವೃತ್ತಿ ಮಾಡುತ್ತಿದ್ದ ಅವರು ಎಂದಿನಂತೆ ಕರ್ನೂರು ಬಾವ ಎಂಬಲ್ಲಿನ ವ್ಯಕ್ತಿಯೊಬ್ಬರ ತೋಟದಲ್ಲಿ ತೆಂಗಿನ ಕಾಯಿ ಕೀಳುತ್ತಿದ್ದ ಸಂಧರ್ಭದಲ್ಲಿ ಆಕಸ್ಮಿವಾಗಿ ಕಾಲುಜಾರಿ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮಾಂಕು ಅವರ ಪತ್ನಿ ಕುಸುಮ ನೀಡಿದ ದೂರಿನ ಮೇರೆಗೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಅಪಘಾತ: ಗಾಯ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಇಲ್ಲಿಗೆ ಸಮೀಪದ ಕುಕ್ಕುಂದೂರು ಜೋಡುರಸ್ತೆ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಪ್ರಯಾಣಿಕರು ಗಾಯಗೊಂಡ ಘಟನೆ ಸಂಭವಿಸಿದೆ.
ರಾಮಸಮುದ್ರ ಬಳಿಯ ನಿವಾಸಿಗಳಾದ ಸಿರಿಲ್ ಡಿಸೋಜಾ, ಪತ್ನಿ ಸವಿತಾ ಡಿಸೋಜಾ, ತಾಯಿ ಸಿರಿಲ್ ಡಿಸೋಜಾ ಎಂಬವರು ಟಾಟಾ ಐರಿಸ್ ಕಾರಿನಲ್ಲಿ ಜೋಡುರಸ್ತೆಯಾಗಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಎಸ್ಟೀಮ್ ಕಾರು ಡಿಕ್ಕಿ ಹೊಡೆದಿರುವುದೇ ಘಟನೆಗೆ ಕಾರಣವಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬಸ್ ಚಾಲಕನಿಂದ ಗಾಂಜಾ ಮಾರಾಟ: ಸೆರೆ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಭಟ್ಕಳದಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಚಾಲಕ ೪೦೦ ಗ್ರಾಂ ಗಾಂಜಾವನ್ನು ತಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣ ಬಳಿ ಗಿರಾಕಿಗಳಿಗೆ ನೀಡುತ್ತಿದ್ದ ಸಂದರ್ಭ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಾರ್ಕಳ ನಿವಾಸಿ ಶಬ್ಬೀರ್ ಹುಸೈನ್ (೩೫) ಯಾನೆ ಝಾಕಿರ್ ಬಂಧಿತ. ಈತ ಭಟ್ಕಳದಿಂದ ಉಡುಪಿಗೆ ಬರುತ್ತಿದ್ದ ಹೆಚ್‌ಎಂಟಿ ಪೊನ್ನಿ ಬಸ್‌ನ ಚಾಲಕನಾಗಿದ್ದು, ಉಡುಪಿಗೆ ೪೦೦ ಗ್ರಾಂ ಗಾಂಜಾ ತಂದು ಬಸ್‌ನಿಂದ ಪ್ರಯಾಣಿಕರು ಇಳಿದ ಮೇಲೆ ಅದನ್ನು ಗಿರಾಕಿಗಳಿಗೆ ನೀಡುತ್ತಿದ್ದ ಸಂದರ್ಭ ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಅಪರಾಧ ಪತ್ತೆದಳದ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಉಡುಪಿ ನಿಲ್ದಾಣದಲ್ಲಿ ಅವ್ಯಾಹತವಾಗಿ ಗಾಂಜಾ ವ್ಯಾಪಾರ ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು.

ಬೆಳ್ಳಾರೆ ಗಲಭೆ: ಆರೋಪಿ ಬಂಧನ

Posted by JAYAKIRANA Kirana on | 0 comments | Leave a comment...

ಸುಳ್ಯ: ಬೆಳ್ಳಾರೆಯಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಗಲಭೆಗೆ ಸಂಬಂಧಿಸಿ ಹಲ್ಲೆ ಮಾಡಿದ ಜಮಾಲುದ್ದೀನ್ ಎಂಬಾತನನ್ನು ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಪೊಲೀಸರು ಬಂಧಿಸಿದ್ದಾರೆ.

ವೃದ್ಧೆಯ ಚಿನ್ನಾಭರಣ ದರೋಡೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ವೃದ್ಧೆಯ ಮೇಲೆ ಹಲ್ಲೆ ನಡೆಸಿ ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಗೈದ ಘಟನೆ ಬಿಜೈ ಆನೆಗುಂಡಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಆನೆಗುಂಡಿಯ ಮನೆಯಲ್ಲಿ ಏಕಾಂಗಿ ಯಾಗಿ ವಾಸಿಸುತ್ತಿದ್ದ ಮನೋ ರಮಾ (೮೬)ಎಂದಿನಂತೆ ಚಾವಡಿಯಲ್ಲಿ ಮಲಗಿರುವಾಗ ಮನೆಯ ಹೆಂಚು ತೆಗೆದು ಒಳ ನುಗ್ಗಿದ ಕಳ್ಳ ಮನೋರ ಮಾರ ಕುತ್ತಿಗೆಯನ್ನು ಅದುಮಿ ಹಿಡಿದು ಕೈಯಲ್ಲಿದ್ದ ನಾಲ್ಕು ಚಿನ್ನದ ಬಳೆ ಹಾಗೂ ಕಿವಿಯಲ್ಲಿದ್ದ ಬೆಂಡೋಲೆಗಳನ್ನು ಎಳೆದುಕೊಂಡು ಮನೆಯ ಹಿಂಬಾಗಿಲ ಮೂಲಕ ಪರಾರಿಯಾಗಿದ್ದಾನೆ. ಬೆಂಡೊ ಲೆಗಳನ್ನು ಎಳೆಯುವಾಗ ಮನೋರ ಮಾರ ಕಿವಿಗೆ ಗಾಯವಾಗಿದೆ. ಬಳಿಕ ಎದ್ದು ಪಕ್ಕದಲ್ಲಿಯೇ ಇರುವ ಮಗಳ ಮನೆಗೆ ತೆರಳಿದ ಅವರು ವಿಷಯ ತಿಳಿಸಿ ದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳ್ಳಭಟ್ಟಿ: ಆರೋಪಿಗೆ ಸಜೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಸೆರೆ ಸಿಕ್ಕಿದ್ದ ಬಂಗ್ರಕೂಳೂರು ನಿವಾಸಿ ಪ್ಲಾಸಿಡ್ ಡಿಸೋಜಾ(೪೨)ರಿಗೆ ನಗರ ಜೆಎಂಎಫ್‌ಸಿ ಮೂರನೆ ನ್ಯಾಯಾಲಯ ಒಂದು ವರ್ಷ ಕಠಿಣ ಸಜೆ ಹಾಗೂ ಹತ್ತು ಸಾವಿರ ರೂ. ದಂಡ ವಿಧಿಸಿದೆ.
ಆರೋಪಿಯು ೨೦೦೯ರ ಡಿಸೆಂಬರ್ ೫ರಂದು ಬಂಗ್ರಕಳೂರಿನ ಪಡ್ಪುವಿನಲ್ಲಿರುವ ತನ್ನ ನಿವಾಸದ ಬಳಿ ಕಳ್ಳ ಬಟ್ಟಿ ಸಾರಾಯಿಯ ಮಾರಟದಲ್ಲಿ ತೊಡಗಿದ್ದಾಗ ಅಬಕಾರಿ ಉಪನಿರೀಕ್ಷಕ ಕುಶಾಲಪ್ಪ ಗೌಡ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ೧೦ಲೀಟರ್ ಕಳ್ಳಭಟ್ಟಿ ಸಾರಾಯಿ ಸಹಿತ ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರೇಣುಕಾ ರಾಯ್ಕರ್ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯುಶನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಬಿ. ಶೇಖರ ಶೆಟ್ಟಿ ವಾದಿಸಿದ್ದರು.

ವರದಕ್ಷಿಣೆ ಕಿರುಕುಳ: ಆರು ಮಂದಿ ವಿರುದ್ಧ ಕೇಸು

Posted by JAYAKIRANA Kirana on | 0 comments | Leave a comment...

ಕಾರ್ಕಳ: ಇಲ್ಲಿಗೆ ಸಮೀಪದ ಎರ್ಲಪ್ಪಾಡಿ ಎಂಬಲ್ಲಿ ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಪ್ರಕರಣದಲ್ಲಿ ಗಂಡ ಹಾಗೂ ಆತನ ಮನೆ ಮಂದಿಯ ವಿರುದ್ಧ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ನಲ್ಲೂರು ಗ್ರಾಮದ ಹಮೀದ್ ಎಂಬವರ ಮಗಳು ಸಾಯಿರಾ ಭಾನು(೨೭) ಎಂಬಾಕೆ ಪ್ರಕರಣದ ದೂರುದಾರಳಾಗಿದ್ದಾಳೆ. ಬೈಲೂರು ಎರ್ಲಪ್ಪಾಡಿಯ ಚಯ್ಯಬ್ಬ ಎಂಬವರ ಮಗ ಉಸ್ಮಾನ್(೩೬) ಎಂಬಾತ ನೊಂದಿಗೆ ೨೦೧೦ ಜೂನ್ ೬ರಂದು ವಿವಾಹ ನಡೆದಿತ್ತು. ವರದಕ್ಷಿಣೆಯಾಗಿ ೨ಲಕ್ಷ ರೂಪಾಯಿ, ೨ ಪವನ್ ಚಿನ್ನಾ ಭರಣವನ್ನು ಉಡುಗೊರೆಯಾಗಿ ನೀಡಲಾಗಿತ್ತೆಂದು ದೂರಿನಲ್ಲಿ ತಿಳಿಸ ಲಾಗಿದೆ. ವಿದೇಶದಲ್ಲಿ ಉತ್ತಮ ಸಂಬಳ ಪಡೆಯುತ್ತಿದ್ದಾನೆಂಬ ಒಂದೇ ಕಾರಣ ಕ್ಕಾಗಿ ಉಸ್ಮಾನ್‌ಗೆ ವಿವಾಹ ಮಾಡಿಕೊಡಲಾಗಿತ್ತೆಂದು ಹೇಳಲಾಗಿದೆ.
ವಿವಾಹದ ಬಳಿಕ ಸಾಯಿರಾ ಭಾನುಳನ್ನು ವಿದೇಶಕ್ಕೆ ಕರೆದುಕೊಂಡು ಹೋಗುವ ಭರವಸೆ ಡಿದ ಉಸ್ಮಾನ್ ನಂತರ ಏಕಾಂಗಿಯಾಗಿ ಹೊರಟು ಹೋಗಿದ್ದನು. ಪತ್ನಿಯನ್ನು ಮನೆಯಲ್ಲಿ ಬಿಟ್ಟುಹೋಗಿದನೆಂದು ತಿಳಿದುಬಂದಿದೆ. ಆ ಸಂದರ್ಭದಲ್ಲಿ ಪತಿಯ ಮನೆ ಮಂದಿಗಳಾದ ಫಾತಿಮಾ, ಚಯ್ಯಬ್ಬ, ಅಬ್ದುಲ್ ರೆಹಮಾನ್, ಶಬಾನಾ, ಬಬ್ಬರ್ ಎಂಬವರು ಸಾಹಿರಾ ಭಾನುವಿಗೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ಡುತ್ತಿದ್ದರೆಂದು ತಿಳಿದುಬಂದಿದೆ. ಇದಕ್ಕೆಲ್ಲ ಗಂಡ ಉಸ್ಮಾನ್‌ನ ಪ್ರಚೋದನೆ ಕಾರಣವೆನ್ನಲಾಗಿದೆ. ವರದಕ್ಷಿಣೆಯಾಗಿ ನಗ-ನಗದನ್ನು ತಮ್ಮಲ್ಲೇ ಇರಿಸಿಕೊಂಡ ಆರೋಪಿಗಳು ಅವಾಚ್ಯ ಶಬ್ದಗಳಿಂದ ಂದಿಸಿ ಸಾಹಿರಾ ಭಾನುಗೆ ಜೀವಬೆದರಿಕೆ ಯೊಡ್ಡಿದ್ದಾರೆಂದು ತಿಳಿದುಬಂದಿದೆ. ದೂರಿನನ್ವಯ ಆರೋಪಿಗಳ ವಿರುದ್ಧ ನಗರ ಠಾಣಾ ಪೊಲೀಸರು ಕೇಸು ದಾಖಲಿಸಿದ್ದಾರೆ.

ವಿಟ್ಲ: ಜುಗಾರಿ ಅಡ್ಡೆಗೆ ದಾಳಿ

Posted by JAYAKIRANA Kirana on | 0 comments | Leave a comment...

ವಿಟ್ಲ: ಇಲ್ಲಿಯ ಕುಳ ಗ್ರಾಮದ ಪಾಂಡೇಲು ಎಂಬಲ್ಲಿ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವಿಟ್ಲ ಪ್ರೊಬೆಷನರಿ ಎ.ಎಸ್.ಪಿ ತಂಡ ೧೨೦೦ ರೂ. ನಗದು ಹಾಗೂ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ಮುರ ನಿವಾಸಿ ತುಕಾರಾಮ, ಉರಿ ಮಜಲು ನಿವಾಸಿ ಸುಲೈಮಾನ್, ಪಾಂಡೇಲು ನಿವಾಸಿ ಕೃಷ್ಣಪ್ಪ ಗೌಡ ಹಾಗೂ ಕಂಬಳಬೆಟ್ಟು ನಿವಾಸಿ ಪದ್ಮ ನಾಭ ಪೂಜಾರಿ ಬಂಧಿತ ಆರೋಪಿ ಗಳು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ದಾಸ್ತಾನು: ಆರೋಪಿ ಬಿಡುಗಡೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ತಾಲೂಕಿನ ಜಡ್ಕಲ್ ಗ್ರಾಮದ ಸಾರ್ಕೊಡು ಹುಲಿಪಾದೆ ಬಸ್ಸುನಿಲ್ದಾಣದ ಸಮೀಪದ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ವಿಸ್ಕಿ ಬಾಟಲಿಗಳನ್ನು ಮಾರಾಟಮಾಡುವ ಉದ್ದೇಶದಿಂದ ಸಂಗ್ರಹಿಸಿದ್ದ ಆರೋಪಗಳಿಂದ ರಘುರಾಮ ಶೆಟ್ಟಿ ದೋಷಮುಕ್ತರಾಗಿದ್ದಾರೆ.

ನೈಟ್‌ರೈಡರ‍್ಸ್ ಸ್ಪಿನ್‌ಗೆ ತತ್ತರಿಸಿದ ರಾಯಲ್ಸ್

Posted by JAYAKIRANA Kirana on | 0 comments | Leave a comment...

ಕೊಲ್ಕತ್ತಾ: ಇದು ಖಂಡಿತವಾಗಿಯೂ ೨೦-೨೦ಗೆ ಮಾಡಿಸಿದಂತಹ ಪಿಚ್ ಆಗಿರಲಿಲ್ಲ. ಬ್ಯಾಟ್ಸ್‌ಮೆನ್‌ಗಳಿಗೆ ಇಲ್ಲಿ ಸ್ಪಿನ್ನರ್‌ಗಳ ವಿರುದ್ಧ ಆಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಅಂತಹ ತಿರುವು ನೀಡುತ್ತಿದ್ದ ಪಿಚ್‌ನಲ್ಲಿ ಕೊಲ್ಕತ್ತಾ ನೈಟ್‌ರೈಡರ‍್ಸ್ ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಐದು ವಿಕೆಟ್‌ಗಳ ಗೆಲುವು ದಾಖಲಿಸಿಕೊಂಡಿದೆ.
ಮೊದಲೆರಡು ಪಂದ್ಯಗಳನ್ನು ಕಳ ಕೊಂಡಿದ್ದ ಕೊಲ್ಕತ್ತಾ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಮೊದಲೆರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದ ರಾಜಸ್ಥಾನ ಬಳಿಕದ ಎರಡು ಪಂದ್ಯಗಳಲ್ಲಿ ಸೋಲುಂಡಿದೆ. ೧೩೨ ರನ್‌ಗಳ ಗೆಲುವಿನ ಗುರಿಯನ್ನು ಬೆನ್ನ ಟ್ಟುತ್ತಿದ್ದ ಕೊಲ್ಕತ್ತಾ ಸ್ವಲ್ಪ ಆತಂಕವನ್ನು ಎದುರಿಸಿದರೂ ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆ ಗೆಲುವು ತನ್ನದಾಗಿಸಿಕೊಂಡಿತು. ಮನೋಜ್ ತಿವಾರಿ ೨೪ ಮತ್ತು ಶಕಿಬ್ ಉಲ್ ಹಸನ್ ೧೬ ರನ್ ಮಾಡಿ ತಂಡದ ಗೆಲುವನ್ನು ಖಚಿತಪಡಿಸಿದರು.
ಕೊಲ್ಕತ್ತಾದ ಸ್ಪಿನ್ನರ್‌ಗಳ ನೆರವಿನಿಂದ ರಾಜಸ್ಥಾನವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿತು. ಶಕಿಬ್ ಮೂರು ಮತ್ತು ಸುನಿಲ್ ನರೈನ್ ಒಂದು ವಿಕೆಟ್ ಕಬಳಿಸಿ ರಾಯಲ್ಸ್‌ನ್ನು ೧೩೧ ರನ್‌ಗೆ ಕಟ್ಟಿಹಾಕಲು ನೆರವಾದರು. ಒಂದು ಹಂತದಲ್ಲಿ ರಾಯಲ್ಸ್ ಆರು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೪೫ ರನ್ ಮಾಡಿತ್ತು.
ಈ ವೇಳೆ ಬೌಲಿಂಗ್‌ಗೆ ಇಳಿದ ಶಕಿಬ್, ತನ್ನ ಮೊದಲ ಎಸೆತದಲ್ಲಿ ರಹಾನೆ ವಿಕೆಟ್ ಕಬಳಿಸಿದರು. ಬಳಿಕ ದ್ರಾವಿಡ್ ಮತ್ತು ಗೋಸ್ವಾಮಿ ವಿಕೆಟ್ ಉರುಳಿಸಿ ರಾಯಲ್ಸ್‌ಗೆ ಆಘಾತವಿಕ್ಕಿದರು.

ಧೋನಿ ಜಾಣ್ಮೆಯ ಕಪ್ತಾನನಲ್ಲ: ಅಜರ್

Posted by JAYAKIRANA Kirana on | 0 comments | Leave a comment...

ಧರ್ಮಶಾಲಾ: ಟೆಸ್ಟ್ ಕ್ರಿಕೆಟಿನಲ್ಲಿ ಮಹೇಂದ್ರ ಸಿಂಗ್ ಧೋನಿ ಜಾಣ್ಮೆ ಕಡಿಮೆಯಿದ್ದು, ಮೂರು ಮಟ್ಟದ ಕ್ರಿಕೆಟಿಗೆ ಮೂವರು ಭಿನ್ನ ಕಪ್ತಾನರನ್ನು ನೇಮಕ ಮಾಡಬೇಕೆಂದು ಭಾರತದ ಮಾಜಿ ಕಪ್ತಾನ ಮೊಹಮ್ಮದ್ ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ಏಕದಿನ ಹಾಗೂ ೨೦-೨೦ಯಲ್ಲಿ ಅತ್ಯುತ್ತಮ ಕಪ್ತಾನ. ಟೆಸ್ಟ್ ಕ್ರಿಕೆಟಿಗೆ ಬಂದರೆ ಅವರು ಸ್ವಲ್ಪ ಮಟ್ಟಿನ ಜಾಣ್ಮೆಯ ಕೊರತೆ ಅನುಭವಿಸುತ್ತಿ ದ್ದಾರೆ. ಮೈದಾನದಲ್ಲಿ ಕೆಲವು ನಿರ್ಧಾರ ಗಳನ್ನು ತೆಗೆದುಕೊ ಳ್ಳುವಾಗ ಇದು ಸ್ಪಷ್ಟ ವಾಗಿ ಕಾಣಿಸುತ್ತದೆ ಎನ್ನುವುದು ಅಜರ್ ವಿವರಣೆ.
ಧೋನಿ ಅತ್ಯು ತ್ತಮ ಆಟಗಾರ. ನಾಯಕತ್ವದ ಜವಾ ಬ್ದಾರಿ ಇಲ್ಲ ದಾಗ ಅವರು ಅಮೋಘ ಪ್ರದರ್ಶನ ನೀಡಿ ದ್ದಾರೆ. ಟೆಸ್ಟ್ ತಂಡದಲ್ಲಿ ಅವರು ತನ್ನ ಸ್ಥಾನಕ್ಕೆ ನ್ಯಾಯ ಒದಗಿಸಿದ್ದಾರೆಯಾ ಇಲ್ಲವಾ ಎಂದು ಹೇಳುವುದು ತುಂಬಾ ಕಠಿಣ. ಅವರು ಕಪ್ತಾನನಾಗಿರುವ ಕಾರಣ ನಾವು ಗೌರವ ನೀಡಲೇಬೇಕಾ ಗುತ್ತದೆ ಎಂದ ಅಜರ್, ಪರೋಕ್ಷವಾಗಿ ಧೋನಿ ಟೆಸ್ಟ್ ತಂಡಕ್ಕೆ ಯೋಗ್ಯ ಕಪ್ತಾನನಲ್ಲ ಎಂದು ಹೇಳಿದಂತಿತ್ತು.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ದಲ್ಲಿ ಟೆಸ್ಟ್ ಸರಣಿ ಕಳಕೊಂಡಿರುವ ಬಗ್ಗೆ ಮಾತನಾಡಿದ ಹೈದರಾಬಾದ್ ಆಟಗಾರ, ಆತ್ಮವಿಶ್ವಾಸ ಹಾಗೂ ತಯಾರಿಯ ಕೊರತೆ ಇದಕ್ಕೆ ಪ್ರಮುಖ ಕಾರಣ. ಅಲ್ಲಿನ ಪಿಚ್‌ಗಳಲ್ಲಿ ಚೆಂಡು ಹೆಚ್ಚು ಸ್ವಿಂಗ್ ಪಡೆಯುತ್ತಿದ್ದರೂ ನಾವು ಅದಕ್ಕೆ ಹೊಂದಿಕೊಂಡು ಆಡಲಿಲ್ಲ ಎಂದರು. ಸಚಿನ್‌ಗೆ ಭಾರತ ರತ್ನ ಕೊಡುವ ಬಗ್ಗೆ ಮಾತನಾಡಿದ ಅಜರ್, ಸಚಿನ್‌ಗಿಂತ ಮೊದಲು ಹಾಕಿ ಆಟಗಾರ ಧ್ಯಾನ್ ಚಂದ್ ಅವರಿಗೆ ಈ ಗೌರವ ಸಲ್ಲ ಬೇಕಾಗಿದೆ.
ಸಚಿನ್‌ಗೆ ಇದನ್ನು ನೀಡ ಬಾರದೆಂದು ನಾನು ಹೇಳುತ್ತಿಲ್ಲ. ಆದರೆ ಮೊದಲು ಈ ಗೌರವ ಸಿಗಬೇಕಾ ಗಿರುವುದು ಧ್ಯಾನ್‌ಚಂದ್ ಅವರಿಗೆ ಎಂದು ಅವರು ಹೇಳಿದರು.

ಕಡಂಬು ಕಲುಷಿತ ನೀರು ಸರಬರಾಜು

Posted by JAYAKIRANA Kirana on | 0 comments | Leave a comment...

ರಣರಂಗಕ್ಕೆ ಸಿದ್ಧವಾದ ಕಾಂಗ್ರೆಸ್-ಎಸ್.ಡಿ.ಪಿ.ಐ
ವಿಟ್ಲ: ವಿಟ್ಲ ಪಡ್ನೂರು ಗ್ರಾ. ಪಂ. ಕಡಂಬು ಪರಿಸರದ ಮನೆಗಳಿಗೆ ಕಲುಷಿತ ನೀರು ಸರಬರಾಜು ಮಾಡು ತ್ತಿದ್ದಾರೆ ಎಂಬ ಹೇಳಿಕೆ ಪಡ್ನೂರು ಗ್ರಾ.ಪಂ. ವಿರುದ್ಧ ಸಂಘಟನೆ ಯೊಂದರ ಅಪಪ್ರಚಾರ ಎಂದು ಕಾಂಗ್ರೆಸ್ ಬೆಂಬಲಿತ ಜಿ.ಪಂ. ಸದಸ್ಯ ರೊಬ್ಬರ ಹೇಳಿಕೆಯನ್ನು ಕಡಂಬು ಘಟಕ ಎಸ್.ಡಿ.ಪಿ.ಐ ತೀವ್ರವಾಗಿ ಖಂಡಿಸಿದ್ದು, ಅವರು ಕಾಂಗ್ರೆಸ್ ಕಚೇರಿಯಲ್ಲಿ ಕುಳಿತುಕೊಂಡು ಪತ್ರಿಕಾ ಗೋಷ್ಠಿ ನಡೆಸಿ ಈ ನೀರನ್ನು ಎಲ್ಲ್ಲರೂ ಕುಡಿಯಬಹುದೆಂದು ಹೇಳಿದರೆ ಅದನ್ನು ಕುಡಿಯಲು ನಾವು ಮೂರ್ಖರಲ್ಲ ಎಂದು ಕಡಂಬು ಘಟಕ ಎಸ್.ಡಿ.ಪಿ.ಐ ಹೇಳಿದೆ.
ವಿಟ್ಲದಲ್ಲಿ ನಿನ್ನೆ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಕಲುಷಿತ ನೀರನ್ನು ಬಾಟ್ಲಿಯೊಂದರಲ್ಲಿ ಪ್ರದರ್ಶಿಸಿ ಮಾತನಾ ಡಿದ ಕಡಂಬು ಘಟಕ ಎಸ್.ಡಿ.ಪಿ.ಐ ಪದಾಧಿಕಾರಿಗಳು ವಿಟ್ಲ ಪಡ್ನೂರು ಗ್ರಾ. ಪಂ. ಕಡಂಬು ಪರಿಸರದ ಮನೆಗಳಿಗೆ ಕಲುಷಿತ ನೀರು ಸರಬರಾಜು ಮಾಡುವುದರ ಬಗ್ಗೆ ಈ ಹಿಂದೆ ನಾವು ಪತ್ರಿಕಾ ಹೇಳಿಕೆ ನೀಡಿದ್ದೆವು. ಈ ಬಗ್ಗೆ ಎಲ್ಲಾ ಪತ್ರಿಕೆಗಳಲ್ಲಿ ವರದಿ ಕೂಡ ಪ್ರಕಟವಾಗಿದ್ದವು. ಇದರಿಂದ ಪೇಚಿಗೀಡಾದ ಗ್ರಾ. ಪಂ. ಇಲ್ಲಿಗೆ ಸಂಬಂಧಪಡದಂತಹ ವ್ಯಕ್ತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಕುಳ್ಳಿರಿಸಿ ಕಡಂಬು ಪರಿಸರದ ತೆರೆದ ಬಾವಿಯ ನೀರನ್ನು ಮಂಗಳೂರು ಎಂಜಿನಿಯರ್ ಬಳಿ ಪರೀಕ್ಷೆಗೊಳಪಡಿಸಿದಾಗ ಅದನ್ನು ಎಲ್ಲ್ಲರೂ ಕುಡಿಯಬಹುದು ಎಂಬ ವರದಿ ಬಂದಿದೆ. ಎಲ್ಲರೂ ಆ ನೀರನ್ನು ಕುಡಿಯಬಹುದೆಂದು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿಂದ ಯಾವುದೇ ರೀತಿಯ ನೀರನ್ನು ಪಡೆದುಕೊಂಡು ಹೋಗಿಲ್ಲ ಹಾಗೂ ಪರೀಕ್ಷೆಗೊಳಪಡಿಸಿದ್ದು ತೆರೆದ ಬಾವಿಯ ನೀರು ಅಲ್ಲವಾಗಿದ್ದು ಅದು ಬೋರ್ ವೆಲ್‌ನ ನೀರಾಗಿದೆ ಎಂದು ಅವರು ಆರೋಪಿಸಿದ್ದಾರೆ. ಆರೋಗ್ಯ ಇಲಾಖೆಯ ಸಹಾಯಕಿ ಪೊನ್ನಮ್ಮ ಅವರು ಎಲ್ಲ್ಲರ ಮನೆಗಳಿಗೆ ತೆರಳಿ ಆರೋಗ್ಯ ಪರೀಕ್ಷಿಸಿದ್ದಾರೆ ಎಂದು ಅವರು ಹೇಳಿದ್ದು, ಅವರು ಕೇವಲ ಒಂದೇ ಒಂದು ಮನೆಗೆ ಮಾತ್ರ ಭೇಟಿ ನೀಡಿದರೆ ಹೊರತು ಬೇರೆ ಯಾರ ಮನೆಗಳಿಗೆ ಹೋಗಿಲ್ಲ ಎಂದು ಎಸ್.ಡಿ.ಪಿ.ಐ ಖಾರವಾಗಿ ಹೇಳಿಕೆ ನೀಡಿದೆ.
ವಿಟ್ಲ ಪಡ್ನೂರು ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ಆರೋಪ-ಪ್ರತ್ಯಾರೋಪಗಳು ರಣರಂಗವನ್ನೇ ಸೃಷ್ಟಿಸಿದ್ದಂತೂ ಸತ್ಯ.
ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ಕಡಂಬು ವಲಯಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಕಾರ್ಯದರ್ಶಿ ಅಬ್ದುಲ್ ಕಾದರ್ ಕಡಂಬು, ಕಡಂಬು ಘಟಕ ಅಧ್ಯಕ್ಷ ಅಬ್ದುಲ್ ಕುಂಞ್ಞ, ಉಪಾಧ್ಯಕ್ಷ ಮುಹಮ್ಮದ್ ಕಡಂಬು, ಜುಬೈರ್ ಕಡಂಬು, ಕಾರ್ಯದರ್ಶಿ ನವಾಜ್ ಕಡಂಬು, ಮೇಲುಸ್ತುವಾರಿ ಹೈದರಾಲಿ ಕಡಂಬು, ಸದಸ್ಯರಾದ ಉಬೈದುಲ್ಲಾ ಕಡಂಬು ಉಪಸ್ಥಿತರಿದ್ದರು.

ಪಿಯುಸಿ ಮೌಲ್ಯಮಾಪನಕ್ಕೆ ಉಪನ್ಯಾಸಕರ ಬಹಿಷ್ಕಾರ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಉಪನ್ಯಾಸಕರು ನಿನ್ನೆಯಿಂದ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯದಿಂದ ಹಿಂದೆ ಸರಿದಿದ್ದಾರೆ. ರಾಜ್ಯದ ೩೭ ಮೌಲ್ಯ ಮಾಪನ ಕೇಂದ್ರಗಳಲ್ಲೂ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಿ, ಆಯಾ ಕೇಂದ್ರ ಸ್ಥಾನದಲ್ಲೇ ಅನಿರ್ಧಿಷ್ಟ ಧರಣಿಗೆ ಮುಂದಾಗದ್ದಾರೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮೌಲ್ಯಮಾಪನ ಕಾರ್ಯನಿರ್ವಹಣೆ ಮಾಡಿದ ಉಪನ್ಯಾಸಕರು ನಿನ್ನೆ ನೀಡಿದ್ದ ಗಡುವಿನಲ್ಲಿ ತಮ್ಮ ಬೇಡಿಕೆ ಈಡೇರದ ಕಾರಣ ಮೌಲ್ಯಮಾಪನ ಕಾರ್ಯಕ್ಕೆ ಮುಂದಾಗಲಿಲ್ಲ.
ಈ ಮಧ್ಯೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮುಷ್ಕರ ನಿರತ ಉಪನ್ಯಾಸಕರ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ್ದು, ಏಪ್ರಿಲ್ ೧೯ಕ್ಕೆ ಮಾತುಕತೆಗೆ ಬನ್ನಿ ಎಂದಿದ್ದಾರೆ. ಅಲ್ಲದೆ ತಕ್ಷಣವೇ ಮುಷ್ಕರದಿಂದ ಹಿಂದೆ ಸರಿದು, ಮೌಲ್ಯ ಮಾಪನದಲ್ಲಿ ತೊಡಗಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಉಪನ್ಯಾಸಕರು ಮೌಲ್ಯ ಮಾಪನ ಕೇಂದ್ರಗಳಿಗೆ ಹಾಜರಾಗಿ ಮೌಲ್ಯ ಮಾಪನ ಮಾಡಲು ಮುಂದಾದ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಉಪನ್ಯಾಸಕರು ಕೇಂದ್ರಗಳಿಗೆ ತೆರಳದಂತೆ ಅಡ್ಡಿಪಡಿಸಿದರು. ಅಲ್ಲದೇ ನಗರದ ಬನ್ನಪ್ಪ ಪಾರ್ಕಿನಲ್ಲಿ ಸಾವಿರಾರು ಉಪನ್ಯಾಸಕರು ಸಭೆ ಸೇರಿ, ತಮ್ಮ ಬೇಡಿಕೆ ಈಡೇರುವವರೆಗೂ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂದ ಶಪತ ಮಾಡಿದ್ದಲ್ಲದೆ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು.

ಗೋವುಗಳಿಗೆ ಶ್ರದ್ಧಾಂಜಲಿ, ಸತ್ಯಾಗ್ರಹ

Posted by JAYAKIRANA Kirana on | 0 comments | Leave a comment...

ಮಂಗಳೂರು: ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಕಸಾಯಿಖಾನೆಗಳಲ್ಲಿ ವಧಿಸಲ್ಪಟ್ಟಿರುವ ಗೋವು ಗಳಿಗೆ ಶ್ರದ್ಧಾಂಜಲಿ ಹಾಗೂ ದಿನವಿಡೀ ಉಪವಾಸ ಸತ್ಯಾಗ್ರಹ ನಡೆಸಲು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ತೀರ್ಮಾನಿಸಿದೆ.
ಈಗಾಗಲೇ ಅಕ್ರಮ ಗೋ ಸಾಗಾಟ ತಡೆಗಟ್ಟುವ ಬಗ್ಗೆ ಹಾಗೂ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚು ವಂತೆ ಜಿಲ್ಲಾಡಳಿತ, ಮನಪಾ ಹಾಗೂ ಪೊಲೀಸ್ ಇಲಾಖೆಗೆ ಹಲವು ಬಾರಿ ಮನವಿ ಮಾಡಲಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳು ವಲ್ಲಿ ವಿಫಲರಾಗಿದ್ದಾರೆ. ಇದನ್ನು ವಿರೋಧಿಸಿ ಹಾಗೂ ಅಕ್ರಮವಾಗಿ ವಧಿಸಲ್ಪಟ್ಟಿರುವ ಗೋವುಗಳಿಗಾಗಿ ಸೋಮವಾರ ಬೆಳಗ್ಗೆ ನಗರ ಪಾಲಿಕೆ ಕಚೇರಿಯೆದುರು ಶ್ರದ್ಧಾಂ ಜಲಿ ಹಾಗೂ ಬಳಿಕ ಸಂಜೆಯವರೆಗೆ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಬಜರಂಗದಳ ತಿಳಿಸಿದೆ.

ವರದಕ್ಷಿಣೆ ವಿರುದ್ಧ ಸಹಿ ಸಂಗ್ರಹ ಆರಂಭ

Posted by JAYAKIRANA Kirana on | 1 comments | Leave a comment...

ಮಂಗಳೂರು: ವರದಕ್ಷಿಣೆ ವಿರುದ್ಧ ಯುವಜನತೆ ಎನ್ನುವ ಹೆಸರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ವರದಕ್ಷಿಣೆ ವಿರೋಧಿ ಸಹಿ ಸಂಗ್ರಹ ಅಭಿಯಾನವು ನಿನ್ನೆಯಿಂದ ಆರಂಭ ಗೊಂಡಿದೆ.
ವರದಕ್ಷಿಣೆ ಎನ್ನುವ ಮಹಾಪಿಡುಗಿಗೆ ಬಡ ಹಾಗೂ ಮಧ್ಯಮ ವರ್ಗದ ಹೆಣ್ಣು ಹೆತ್ತವರು ತತ್ತರಿಸಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೂ ವರದಕ್ಷಿಣೆ ಪಡೆಯುವುದನ್ನು ಪ್ರತಿಷ್ಠೆಯೆಂದು ಭಾವಿಸಿ ಭಾರೀ ಮೊತ್ತ ಹಾಗೂ ಬಂಗಾರವನ್ನು ಕೇಳುವ ಮೂಲಕ ಹೆಣ್ಣು ಹೆತ್ತವರನ್ನು ಕಂಗಾಲುಗೊಳಿಸುತ್ತಿದ್ದಾರೆ.
ಈ ಕಾರಣದಿಂದಾಗಿ ಅದೆಷ್ಟೋ ಬಡ ಹೆಣ್ಮಕ್ಕಳು ವಯಸ್ಸಿಗೆ ಬಂದರೂ ಮದುವೆಯಾಗದೆ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇದರಿಂದ ಕಂಗೆಟ್ಟಿರುವ ಬಡವರು ತಮ್ಮ ಮಗಳು ಒಮ್ಮೆ ಮನೆಯಿಂದ ಹೊರಹೋದರೆ ಸಾಕು ಎನ್ನುವ ಭಾವನೆಯಿಂದ ಉತ್ತರ ಕನ್ನಡ, ಮುಂಬೈ, ಗುಜರಾತ್ ಸಹಿತ ಇತರ ಜಿಲ್ಲೆ, ರಾಜ್ಯಗಳ ಗೊತ್ತು ಗುರಿಯಿಲ್ಲದ ಯುವಕರಿಗೆ ಮದುವೆ ಮಾಡಿ ಕೊಡುತ್ತಿದ್ದಾರೆ.
ಹೀಗೆ ಮದುವೆಯಾಗಿ ಹೋಗುವ ಹುಡುಗಿ ಕೆಲವೇ ತಿಂಗಳಲ್ಲಿ ತವರು ಮನೆ ಸೇರುವುದು ಮಾಮೂಲಿಯಗಿದೆ. ಈ ಹಿನ್ನೆಲೆಯಲ್ಲಿ ವರದಕ್ಷಿಣೆ ವಿರುದ್ಧ ಯುವಜನತೆಯ ವತಿಯಿಂದ ವರದಕ್ಷಿಣೆ ವಿರೋಧಿ ಅಭಿಯಾನ ಅರಂಭಗೊಂಡಿದ್ದು ಮೊದಲ ದಿನವೇ ಭಾರೀ ಬೆಂಬಲ ದೊರೆತಿದೆ. ಇಂತಹ ಕಾರ್ಯಕ್ರಮವನ್ನು ಪ್ರತೀ ವಾರ ಪ್ರತೀ ಮೊಹಲ್ಲಾಗಳಲ್ಲಿ ಅಯೋಜಿಸುವ ಮೂಲಕ ವರದಕ್ಷಿಣೆ ಮುಕ್ತ ಜಮಾತ್ ನಿರ್ಮಿಸಲಾಗುವುದೆಂದು ಸಂಘಟಕರು ತಿಳಿಸಿದ್ದಾರೆ.

ವಿದೇಶಿ ಉದ್ಯೋಗದಲ್ಲಿ ವಂಚನೆ

Posted by JAYAKIRANA Kirana on | 0 comments | Leave a comment...

ಹೋಗಿದ್ದು ಕೆಲಸಕ್ಕೆ ಬದುಕುವುದು ಜೀತಕ್ಕೆ

ದಿನಕ್ಕೆ ಎಂಟು ಗಂಟೆಯ ದುಡಿಮೆ, ಓವರ್ ಟೈಮ್ ಸೌಲಭ್ಯ ಎಂದೆಲ್ಲ ಹೇಳಲಾಗಿತ್ತು ಆದರಿಲ್ಲಿ ದಿನಕ್ಕೆ ೧೨ರಿಂದ ೧೪ಗಂಟೆಗಳ ಕಾಲ ದುಡಿಸಲಾಗುತ್ತಿದೆ. ಅದೂ ಊಟವೂ ಕೊಡದಂತೆ ದುಡಿಸಲಾ ಗುತ್ತಿದೆ. ಸಂಬಳವಂತೂ ಇನ್ನೂ ಕೈ ಸೇರಿಲ್ಲ. ರಿಯಾಝ್‌ನಿಗೆ ಎಪ್ಪತ್ತು ಸಾವಿರ ಕೊಡಲು ಮಾಡಿದ ಸಾಲಗಾರರು ಊರಲ್ಲಿ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಅವರಿಗೆ ನಮ್ಮ ಸಂಕಟ ಹೇಳುವುದಾದರೂ ಹೇಗೆ?

ಮಂಗಳೂರು: ಅಪಾರ ಹಣ ಗಳಿಸುವ, ಬೇಗ ಶ್ರೀಮಂತರಾಗುವ ಆಸೆಯಿಂದ ವಿದೇಶಿ ಉದ್ಯೋಗವನ್ನ ರಸುವವರ ಸಂಖ್ಯೆ ಹೆಚ್ಚಾಗಿರುವಂ ತೆಯೇ ವಿದೇಶಿ ಉದ್ಯೋಗದ ಆಸೆ ತೋರಿಸಿ ವಂಚಿಸುವವರ ಸಂಖ್ಯೆ ಯೂ ಹೆಚ್ಚಾಗಿದೆ. ಮಂಗಳೂರು ನಗರದಲ್ಲಿ ದಿನಕ್ಕೊಂದಾದರೂ ಇಂತಹ ವಂಚನೆಯ ಪ್ರಕರಣಗಳು ನಡೆಯುತ್ತಲೇ ಇರುತ್ತದೆ.
ಭಾರೀ ಸಂಬಳದ ಆಸೆಯೊಂ ದಿಗೆ ಫಿಝಾ ಹಟ್‌ನಲ್ಲಿ ವೇಟರ್ ಕೆಲಸಕ್ಕೆ ಸೌದಿ ಅರೇಬಿಯಾದ ರಿಯಾದ್‌ಗೆ ಹೋದ ಬಂಟ್ವಾಳ ಮೂಲದ ಯುವಕರು ಅಲ್ಲಿ ಊಟ ಕ್ಕೂ ಗತಿ ಇಲ್ಲದಂತೆ ಸಂಕಷ್ಟ ಪಡು ತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಕಷ್ಟಪಡುತ್ತಿರುವ ಯುವಕರೇ ಸೌದಿ ಅರೇಬಿಯಾದ ರಿಯಾದ್‌ನಿಂದ ಜಯಕಿರಣಕ್ಕೆ ದೂರವಾಣಿ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಝುಬೈರ್ ಬಂಟ್ವಾಳ್, ಹಾರಿಫ್ ಬೆಂಗ್ರೆ, ಶೌಕತ್ ಅಲಿ, ಅಬ್ದುಲ್ ಸಮದ್ ಎಂಬವರು ಸೇರಿದಂತೆ ಬಂಟ್ವಾಳ ಸಜೀಪ ಸುತ್ತಮುತ್ತಲಿನ ಏಳು ಯುವಕರನ್ನು ಮಂಗಳೂರಿನ ಶ್ರೀಗಳ ಇಂಟರ್‌ನ್ಯಾಷನಲ್ ಸಂಸ್ಥೆಯ ರಿಯಾಝ್ ಎಂಬಾತ ಫಿಝಾ ಹಟ್‌ನಲ್ಲಿ ವೇಟ್‌ರ್ ಆಗಿ ಕೆಲಸ ಮಾಡಲು ರಿಯಾದ್‌ಗೆ ಕಳುಹಿಸಿದ್ದ. ಕಳುಹಿಸುವ ಪೂರ್ವದಲ್ಲಿ ಪ್ರತಿಯೋ ರ್ವರಿಂದ ತಲಾ ೭೦ಸಾವಿರ ರೂ. ಪೀಕಿಸಿದ್ದಾನೆ. ರಿಯಾದ್‌ನಲ್ಲಿ ವಸತಿ ಸೌಲಭ್ಯವೂ ಸೇರಿ ೨೦ಸಾವಿರ ರೂ. ಸಂಬಳ. ಓವರ್ ಡ್ಯೂಟಿಗೆ ಹೆಚ್ಚಿನ ಸಂಬಳ ಸಿಗುತ್ತದೆ ಎಂಬುದು ರಿಯಾಝ್ ನೀಡಿದ್ದ ಭರವಸೆ. ಇವನು ತೋರಿಸಿದ ಆಸೆಗೆ ಬಿದ್ದು ರಿಯಾದ್‌ಗೆ ಹೋದ ಏಳೂ ಯುವಕರು ಕಳೆದ ಮೂರು ತಿಂಗಳುಗಳಿಂದ ಅಲ್ಲಿ ಸಂಬಳವಿಲ್ಲದೆ ಊಟಕ್ಕೂ ಹಣವಿಲ್ಲ ದಂತೆ ಸಂಕಷ್ಟದ ಪರಿಸ್ಥಿತಿಯಲ್ಲಿ ದಿನ ದೂಡುವಂತಾಗಿದೆ. ಅಲ್ಲೀಗ ಎಂಟು ಸಾವಿರ ರೂ. ಸಂಬಳ ನೀಡುವುದಾಗಿ ಹೇಳಿದ್ದಾರೆ. ಅದೂ ಕೂಡ ಮೂರು ತಿಂಗಳುಗಳಿಂದ ಕೊಟ್ಟಿಲ್ಲ. ಕೇಳಿದರೆ ನೀವು ಗುತ್ತಿಗೆದಾರರ ಮೂಲಕ ಕೆಲಸಕ್ಕೆ ಬಂದಿದ್ದೀರಿ. ನಿಮಗೆ ಸಂಬಳ ಕೊಡುವ ಜವಾಬ್ದಾರಿ ಗುತ್ತಿಗೆ ಸಂಸ್ಥೆ ಯದು. ಹೇಳಿದಷ್ಟು ಕೆಲಸ ಮಾಡಿ ಕೊಂಡು ಬಿದ್ದೀರಿ ಎಂದು ಮುಲಾಜಿ ಲ್ಲದಂತಹ ಪ್ರತಿಕ್ರಿಯೆಗಳು ಫಿಝಾ ಹಟ್‌ನ ಆಡಳಿತಗಾರದಿಂದ ಬರುತ್ತಿವೆ. ಹೇಳಿದಂತೆ ಕೇಳಿ ಬಿದ್ದಿರುವುದಲ್ಲದೆ ಬೇರೆ ದಾರಿಯೇ ಇಲ್ಲ. ಏಕೆಂದರೆ ಅದು ಸೌದಿ ಅರೇಬಿಯ. ಅಲ್ಲಿ ನಮ್ಮವರ ಸಹಾಯಕ್ಕೆ ಯಾವ ಕಾನೂನು ಬರುವುದಿಲ್ಲ. ಪ್ರತಿಭಟಿಸುವ ಅವಕಾಶವಂತೂ ಇಲ್ಲವೇ ಇಲ್ಲ.
ನಮ್ಮನ್ನು ಕಳುಹಿಸಿದ ಸಂಸ್ಥೆ ಎರಡು ವರ್ಷಗಳು ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಎರಡು ವರ್ಷಗಳವರೆಗೆ ಸಂಬಳ ಸಿಗಲಿ ಸಿಗದಿರಲಿ ಅಲ್ಲಿ ಜೀತ ಆಳುಗಳಂತೆ ದುಡಿಯಲೇ ಬೇಕಾಗಿದೆ ಎಂದು ಕಣ್ಣೀರಿಡುತ್ತಿದ್ದಾರೆ ಯುವಕರು.
ಸಣ್ಣ ಫ್ಲ್ಯಾಟ್‌ನಲ್ಲಿ ತಂಗಿರುವ ಬಂಟ್ವಾಳದ ಯುವಕರ ಸಂಕಷ್ಟವನ್ನು ನೋಡಲಾಗದೆ ಅಲ್ಲಿರುವ ಇಲ್ಲಿನವರು ಇವರಿಗೆ ಊಟದ ವ್ಯವಸ್ಥೆ ಮಾಡಿ ಕೊಡುತ್ತಿದ್ದಾರೆ. ಅದಕ್ಕಿಂತ ಹೆಚ್ಚಿನ ಸಹಾಯ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಳಿದವರದೂ ಆಗಿರುತ್ತದೆ.
ಯುವಕರಿಗೆ ಬರಬೇಕಾದ ಸಂಬಳವೆಲ್ಲ ಬೇರೆಯದೇ ಸಂಸ್ಥೆಯ ಪಾಲಾಗುತ್ತಿದೆ. ಸೀಗಲ್ ಇಂಟರ್ ನ್ಯಾಷನಲ್ ಸಂಸ್ಥೆಯ ರಿಯಾಝ್ ಈ ಗುತ್ತಿಗೆ ಸಂಸ್ಥೆಯ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ನಗರದ ಹೈಲ್ಯಾಂಡ್ ಬಳಿಯ ಎಸ್.ಎಂ.ಆರ್ ಬಿಲ್ಡಿಂಗ್‌ನಲ್ಲಿ ಕಚೇರಿ ಹೊಂದಿ ದ್ದಾನೆ. ಇಲ್ಲಿಂದ ಇನ್ನೆಷ್ಟು ವಂಚನೆಗಳು ನಡೆ ಯುತ್ತಿವೆ ಎಂಬುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಾಗಿದೆ. ರಿಯಾಝ್‌ನಿಂ ದಾಗಿ ವಿದೇಶದಲ್ಲಿ ಸಂಬಳವಿಲ್ಲದೆ ದುಡಿಯುತ್ತಿರುವವರ ಸಂಖ್ಯೆ ನೂರಕ್ಕೂ ಹೆಚ್ಚಿರಬಹುದು ಎಂದು ವಂಚನೆಗೊಳಗಾ ಗಿರುವ ಯುವಕರು ಮಾಹಿತಿ ನೀಡಿದ್ದಾರೆ.
ದಿನಕ್ಕೆ ಎಂಟು ಗಂಟೆಯ ದುಡಿಮೆ, ಓವರ್ ಟೈಮ್ ಸೌಲಭ್ಯ ಎಂದೆಲ್ಲ ಹೇಳಲಾಗಿತ್ತು ಆದರಿಲ್ಲಿ ದಿನಕ್ಕೆ ೧೨ರಿಂದ ೧೪ ಗಂಟೆಗಳ ಕಾಲ ದುಡಿಸಲಾಗುತ್ತಿದೆ. ಅದೂ ಊಟವೂ ಕೊಡದೆ ದುಡಿಸಲಾಗುತ್ತಿದೆ. ಸಂಬಳ ವಂತೂ ಇನ್ನೂ ಕೈ ಸೇರಿಲ್ಲ. ರಿಯಾಝ್‌ನಿಗೆ ಎಪ್ಪತ್ತು ಸಾವಿರ ಕೊಡಲು ಮಾಡಿದ ಸಾಲಗಾರರು ಊರಲ್ಲಿ ಮನೆ ಬಾಗಿಲಿಗೆ ಬರುತ್ತಿ ದ್ದಾರೆ. ಅವರಿಗೆ ನಮ್ಮ ಸಂಕಟ ಹೇಳುವು ದಾದರೂ ಹೇಗೆ? ಇಲ್ಲೀಗ ನೀಡುತ್ತಿ ರುವ ಸಂಬಳದಲ್ಲಿ ಇಲ್ಲಿಯ ಜೀವನ ನಿರ್ವಹಣೆಯೇ ಆಗುವುದಿಲ್ಲ ಎಂದಾ ದರೆ ಸಾಲ ತೀರಿಸು ವುದು ಯಾವಾಗ. ವಿದೇಶಿ ಉದ್ಯೋಗ ನಮ್ಮ ಜೀವನ ವನ್ನೇ ಹಾಳು ಮಾಡಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವಂಚನೆಗೊಳ ಗಾಗಿರುವ ಯುವಕರು.
ನಮಗೆ ನ್ಯಾಯ ದೊರಕಿಸುವಂತೆ ಕೋರಿ ರಿಯಾಝ್ ನಿಗೆ ಕರೆ ಮಾಡೋಣ ಎಂದರೆ ಅವನ ಮೊಬೈಲ್ (೯೦೩೫೦೪೧೯೩೬)ಸ್ವಿಚ್ ಆಫ್ ಆಗಿದೆ. ಅವನ ಕಚೇರಿಯ ಮೊಬೈಲ್ (೯೩೪೨೩೧೭೬೫೧)ಗೆ ಕರೆ ಮಾಡಿದರೆ ಅವನಂತೂ ಸಿಗುವುದಿಲ್ಲ. ಪೋನ್ ರಿಸೀವ್ ಮಾಡಿದವರೂ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಹೇಳುವ ಯುವಕರು, ಇನ್ನಷ್ಟು ಜನರು ರಿಯಾಝ್ ನಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಿ ಎಂದು ಜಯಕಿರಣಕ್ಕೆ ಕೋರಿದ್ದಾರೆ. ತಮ್ಮನ್ನು ಈ ಸಂಕಟದಿಂದ ಪಾರು ಮಾಡುವ ಆಪತ್ಬಾಂಧವರನ್ನು ಹುಡುಕಿ ಕೊಡಿ ಎಂಬುದೂ ಕೂಡ ಅವರ ಕೋರಿಕೆಯಾಗಿದೆ. ಬಂಟ್ವಾಳದ ಜುಬೈರ್ ಎಂಬವರು ರಿಯಾದ್‌ನಿಂದ ೯೬೬೫೬೧೭೦೯೦೮೨ ಮೊಬೈಲ್‌ನಿಂದ ಪತ್ರಿಕೆಯನ್ನು ಸಂಪರ್ಕಿಸಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ
ವಂಚಕರ ಜಾಲ: ವಿದೇಶಿ ಉದ್ಯೋಗ ಬಯಸುವವರನ್ನು ವಂಚಿಸುವ ಜಾಲವೇ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ಚೆಂದದ ಆಫಿಸ್ ಮಾಡಿ. ಒಂದಿಷ್ಟು ಹುಡುಗಿಯರನ್ನು ಕಚೇರಿಯಲ್ಲಿಟ್ಟುಕೊಂಡು ವ್ಯವಹರಿಸುವ ಇವರು ಸಿಕ್ಕಿ ಬೀಳು ತ್ತೇವೆ ಎಂದಾಗು ವಾಗ ಇಲ್ಲಿಂದ ಜಾಗ ಖಾಲಿ ಮಾಡು ತ್ತಾರೆ. ಆರು ತಿಂಗಳ ಹಿಂದೆ ಬಿಜೈಯಲ್ಲಿ ಎಸ್.ಎಸ್ ಅಸೋಸಿಯೇಟ್ಸ್ ಎಂಬ ಸಂಸ್ಥೆ ಇಂತಹದ್ದೇ ವಂಚನಾ ಜಾಲದ ಭಾಗವಾಗಿ ಕಾರ್ಯನಿರ್ವಹಿಸಿತ್ತು. ಅದೀಗ ಬಾಗಿಲು ಮುಚ್ಚಿದೆ.

ನೀರಿಗಾಗಿ ಆರಂಭವಾದ ಗದ್ದಲ ಬಸ್ ನಿಲ್ದಾಣದ ತನಕ..

Posted by JAYAKIRANA Kirana on | 0 comments | Leave a comment...

ಕಾರ್ಕಳ: ತಲೆದೋರಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಿಶೆಯಲ್ಲಿ ಕರೆಯಬೇಕಾಗಿದ್ದ ವಿಶೇಷಸಭೆಯಲ್ಲಿ ಒಳಚರಂಡಿ ಯೋಜನೆಯ ಮಾಹಿತಿ ನೀಡುತ್ತಿದ್ದ ಬಗ್ಗೆ ಆಡಳಿತ ಪಕ್ಷದ ಹಿರಿಯ ಸದಸ್ಯ ಅಶ್ಪಕ್‌ಅಹಮ್ಮದ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಕಾರ್ಕಳ ಪುರಸಭೆಯಲ್ಲಿ ನಡೆದಿದೆ.
ಪ್ರತಿಪಕ್ಷ ಸದಸ್ಯ ನವೀನ್ಚಂದ್ರ ಹೆಗ್ಡೆ ಅವರು ಇದಕ್ಕೆ ಧ್ವನಿಗೂಡಿಸಿ ನಗರಕ್ಕೆ ನೀರು ಸರಬರಾಜುವಾಗುವ ಮುಂಡ್ಲಿ ಅಣೆಕಟ್ಟಿನ ಪಕ್ಕದಲ್ಲಿಯೇ ಜಲವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ ಪ್ರಬಲ ಸ್ಪೋಟಕಗಳನ್ನು ಉಪಯೋಗಿಸಿ ಬಂಡೆಗಳನ್ನು ಸಿಡಿಸಲಾಗುತ್ತಿದೆ. ಇದು ಕಾನೂನಿನ ವಿರುದ್ಧವಾಗಿದೆ. ಇತಂಹ ಸನ್ನಿವೇಶಗಳು ಕಣ್ಣಾರೆಯಾಗಿ ವಿಕ್ಷೀಸಿದ್ದೇವೆ. ಮಾತ್ರವಲ್ಲದೇ ಅಂತರ್ಜಲ ಕುಸಿದಿರಲು ಕಾರಣವಾಗಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು ಜಿಲ್ಲಾಡಳಿತಕ್ಕೆ ಮಾಹಿತಿ ಕಳುಹಿಸಬೇಕೆಂದು ಒತ್ತಾಯಿಸಿದರು. ಆನೆಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ಅದನ್ನು ಶುದ್ದೀಕರಿಸಿ ದೈನಂದಿನ ಕೆಲಸಕ್ಕೆ ಮಾತ್ರ ನೀರನ್ನು ಉಪಯೋಗಿಸ ಬಹುದು ಎಂದು ಆಡಳಿತ ಪಕ್ಷದ ಶುಭದರಾವ್ ಸಲಹೆ ನೀಡಿದರು.
ರಾಮಸಮುದ್ರದಿಂದ ಟ್ಯಾಂಕ್‌ಗೆ ಅಳವಡಿಸಿದ ಪೈಪ್‌ಗಳನ್ನು ಮುಂಡ್ಲಿ ಅಣೆಕಟ್ಟಿನಿಂದ ರಾಮಸಮುದ್ರ ಸಮೀಪದಲ್ಲಿರುವ ಟ್ಯಾಂಕ್‌ಗೆ ಅಳವಡಿಸಿ ಹೊಸ ಪೈಪ್ ಜೋಡಣೆ ಎಂದು ದಾಖಲೆ ಪತ್ರದಲ್ಲಿ ನಮೂದಿಸಿ ಟೆಂಡರ್‌ದಾರರಿಗೆ ಬಿಲ್‌ಪಾವತಿಸಿರುವ ಹಗರಣವನ್ನು ಆಡಳಿತ ಪಕ್ಷದ ಸದಸ್ಯ ಮಹಮ್ಮದ್ ಶರೀಫ್ ಬಯಲುಗೊಳಿಸಿದರು. ಇದರಲ್ಲಿ ಅಧಿಕಾರಿಗಳ ಪಾತ್ರವಿದೆ ಎಂದು ಆರೋಪಿಸಿ ದರು. ಈ ನಡುವೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು ಸಭೆಯಲ್ಲಿ ಮಾತಾನಾಡುತ್ತಾ ಕುದುರೆಮುಖ ಲಕ್ಯಾ ಡ್ಯಾಮ್ ಮೂಲಕ ಮಂಗಳೂರು ನಗರ ಪಾಲಿಕೆಯು ಕುಡಿಯುವ ನೀರು ಸಂಗ್ರಹಿಸುವ ಯೋಜನೆಗೆ ಮುಂದಾಗಿದೆ. ಕುದುರೆಮುಖದಿಂದ ಮಂಗಳೂರಿಗೆ ಸಂಪರ್ಕಿಸುವ ಪೈಪ್ ಕಾರ್ಕಳ ಮೂಲಕ ಹಾದು ಹೋಗಲಿದ್ದು, ತನ್ಮೂಲಕ ಕಾರ್ಕಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಗೊಳಿಸುವ ಬಗ್ಗೆ ಸಂಬಂಧ ಪಟ್ಟವರೊಂದಿಗೆ ಚರ್ಚಿಸೋಣವೆಂದು ತಿಳಿಸಿರುವುದರೊಂದಿಗೆ ವಿವಾದ ತಣ್ಣಗಾಗ ತೊಡಗಿತ್ತು.
ಬಸ್ ನಿಲ್ದಾಣ ಹಾಗೂ ಬದಲಾವಣೆಯ ಮಾರ್ಗ ಸೂಚಿ ವಿಚಾರವು ಕಲಾಪದಲ್ಲಿ ಪ್ರಸ್ತಾಪಕ್ಕೆ ಬರುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರೊಳಗೆ ಆರೋಪ-ಪ್ರತ್ಯಾರೋಪ ಕೇಳಿಬರಲು ಶುರುವಾಗಿತ್ತು.
ಅಧಿಕೃತ ಬಸ್ ನಿಲ್ದಾಣ ಬಂಡೀಮಠವೆಂದು ೧೯೯೪ರಲ್ಲಿಯೇ ಅಂದಿನ ಪುರಸಭಾ ಆಡಳಿತ ವರ್ಗ ಘೋಷಿಷಿದೆ. ಇದರ ಬಗ್ಗೆ ಅಗತ್ಯ ಮಾಹಿತಿಗಳು ಕಂದಾಯ ಇಲಾಖೆ ಮತ್ತು ಪುರಸಭಾ ಕಚೇರಿಯಲ್ಲಿದೆ. ಇದಕ್ಕೆ ಪರ‍್ಯಾಯವಾಗಿ ಅಂದು ಕೆಲ ಉದ್ಯಮಿಗಳ ಸಹಕಾರದಿಂದ ನಗರದೊಳಗೆ ವಿಸ್ತೃತ ಬಸ್‌ಸ್ನಿಲ್ದಾಣವನ್ನು ನಿರ್ಮಿಸಲಾಗಿದೆ. ಇದೇ ಕಾರಣದಿಂದಾಗಿ ತಿಂಗಳುಗಳ ಹಿಂದೆ ೧.೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಾಂಕೀಟ್‌ಕರಣ ಕಾಮಗಾರಿ ನಡೆಸಿ, ಮುಖ್ಯಮಂತ್ರಿ ಸದಾನಂದಗೌಡರಿಂದ ಬಂಡೀಮಠ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗಿದೆ. ಅಂದು ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷರು ಉಪಸ್ಥಿತರಿದ್ದರು. ಹೀಗಿರುವಾಗ ಇಂದು ಅವರೇ ಬಂಡೀಮಠ ಬಸ್ ನಿಲ್ದಾಣವು ತಾತ್ಕಾಲಿಕ ಬಸ್ ನಿಲ್ದಾಣವಾಗಿದೆ ಅಂತ ಸಭೆಯಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಅಷ್ಟೊಂದು ಮೊತ್ತದಲ್ಲಿ ಖರ್ಚು ನಡೆಸುವ ಹಾಗೂ ಮುಖ್ಯಮಂತ್ರಿಯಿಂದ ಉದ್ಘಾಟಿಸುವ ಅಗತ್ಯ ಏನಿತ್ತೆಂದು ಅವರು ಪ್ರಶ್ನಿಸಿದರು. ಪುರಸಭಾ ನಿರ್ಣಯದಲ್ಲಿ ಯಾವುದೇ ನಿರ್ಣಯವಿಲ್ಲದಿರುವಾಗ ತಾತ್ಕಾಲಿಕವಾಗಿ ಬಸ್ ನಿಲ್ದಾಣವನ್ನು ಬಂಡೀಮಠಕ್ಕೆ ಸ್ಥಳಾಂತರಿಸಿರುವ ಜಿಲ್ಲಾಡಳಿತದ ಕ್ರಮ ಸರಿಯಲ್ಲ. ಆದುದರಿಂದ ಈ ಹಿಂದೆ ಇದ್ದ ಕಡೆಯಲ್ಲಿ ಬಸ್ ನಿಲ್ದಾಣ ಮರುಸ್ಥಾಪಿಸಬೇಕೆಂದು ಆಡಳಿತ ಪಕ್ಷದ ಸದಸ್ಯ ಶುಭದರಾವ್ ಒತ್ತಾಯಿಸಿದರು.
ಬಸ್ ನಿಲ್ದಾಣ ಎಲ್ಲಿರಬೇಕು. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಅಧ್ಯಕ್ಷರು ಸಭೆಯಲ್ಲಿ ಸೂಚಿಸಿದಾಗ ಬಹುತೇಕ ಸದಸ್ಯರು ವಿಸ್ತೃತ ಬಸ್ ನಿಲ್ದಾಣವೇ ಅಂತಿಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದನ್ನೇ ನಿರ್ಣಯವೆಂದು ಷೋಷಿಸಿದರೆ ಅದು ಸಂವಿಧಾನದ ವಿರೋಧವಾಗುತ್ತದೆ. ನಿರ್ಣಯವೆಂದು ಕಡತದಲ್ಲಿ ದಾಖಲಾದರೆ ಮತ ಚಲಾಯಿಸಲು ಅಧ್ಯಕ್ಷರಿಗೆ ಹಕ್ಕು ಇರುವುದಿಲ್ಲ. ಇಲ್ಲಿ ಅಧ್ಯಕ್ಷರು ಮತ ಚಲಾಯಿಸುವ ಮೂಲಕ ದಾರಿ ತಪ್ಪಿದ್ದಾರೆಂದು ಅಶ್ಪಕ್ ಅಹಮ್ಮದ್ ಬಹಿರಂಗಪಡಿಸಿದರು.

ಡ್ರೈನೇಜ್ ನೀರು ರಸ್ತೆಯಲ್ಲೇ ಹರಿಯಿತು!

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಡ್ರೈನೇಜ್ ಬ್ಲಾಕ್ ಆಗುವುದು, ತುಂಬಿ ಲೀಕೇಜ್ ಅಗುವುದು ಇದೆಲ್ಲಾ ಮಾಮೂಲಿ ವಿಷಯ. ಆದರೆ ನಿನ್ನೆಯ ಲೀಕೇಜ್ ಆದ ನೀರು ನರದೆಲ್ಲೆಡೆ ಹರಿದಾಡಿ ಸಾರ್ವಜನಿಕರಿಗೆ ಅಸಹ್ಯವನ್ನುಂಟುಮಾಡಿತು.
ನಿನ್ನೆ ಮಧ್ಯಾಹ್ನದ ವೇಳೆ ಬಳ್ಳಾಲ್‌ಬಾಗ್ ಬಳಿ ರಸ್ತೆ ಮಧ್ಯೆಯಿರುವ ಡ್ರೈನೇಜ್ ತುಂಬಿ ತುಳುಕಾಡತೊಡಗಿತ್ತು. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಇದರ ಪರಿಣಾಮ ಕೆಲವೇ ಕ್ಷಣದಲ್ಲಿ ಮ್ಯಾನ್‌ಹೋಲ್ ಮುಚ್ಚಳ ತೆರೆಯಲ್ಪಟ್ಟು ಕೊಳಕು ನೀರು ಒಂದು ಕಿ.ಮೀ.ದೂರದವರೆಗೆ ರಸ್ತೆಯಲ್ಲೆಲ್ಲಾ ಹರಿದಾಡಿತು. ಈ ಸಂದರ್ಭದಲ್ಲಿ ವಾಹನ ಸಂಚಾರದಿಂದ ಪಾದಚಾರಿಗಳ ಮೇಲೂ ನೀರು ಸಿಂಚನವಾಗಿ ಅಸಹ್ಯವನ್ನುಂಟು ಮಾಡಿತು. ಅಂತೂ ಮಾಹಿತಿಯರಿತ ಪಾಲಿಕೆ ಅಧಿಕಾರಿಗಳು ಪೌರಕಾರ್ಮಿಕರನ್ನು ಕಳುಹಿಸಿ ಕೊಳಕು ನೀರು ಹರಿದಾಟಕ್ಕೆ ಕಡಿವಾಣ ಹಾಕುವಲ್ಲಿ ಸಫಲವಾದರು.

ಆರೋಪ ಮಾಡಿದ್ದ ಜಮಾತ್ ಆಡಳಿತದಿಂದಲೇ ಕಾರ‍್ಯಕ್ರಮಕ್ಕೆ ಬೆಂಬಲ!

Posted by JAYAKIRANA Kirana on | 0 comments | Leave a comment...

ಮಂಗಳೂರು: ಇಂದಿನಿಂದ ಮೂಡಬಿದ್ರೆ ಸಮಿಪದ ತೋಡಾರಿನಲ್ಲಿ ನಡೆಯಲಿರುವ ಶಂಸುಲ್ ಉಲಮಾ ಅರೆಬಿಕ್ ಕಾಲೇಜು ವಾರ್ಷಿಕೋತ್ಸವ ಮತ್ತು ಶಿಲಾನ್ಯಾಸ ಸಮಾರಂಭದ ಬಗ್ಗೆ ಟ್ರಸ್ಟ್ ವಿರುದ್ಧ ಆರೋಪ ಮಾಡಿದ್ದ ಜಮಾತ್ ಆಡಳಿತ ಕಮಿಟಿಯವರಿಗೆ ಖ್ಯಾತ ಮುಸ್ಲಿಯಾರ್ ಓರ್ವರು ಎಚ್ಚರಿಕೆ ಹಾಗೂ ಬುದ್ಧಿ ಹೇಳಿರುವುದರಿಂದ ತಪ್ಪೊಪ್ಪಿಕೊಂಡ ಜಮಾಅತ್‌ನವರು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದು, ಈ ವಿವಾದ ಸೃಷ್ಟಸಿದ ಜಮಾತ್ ಕಮಿಟಿಯವರಿಗೆ ತೀರಾ ಮುಖಭಂಗ ಉಂಟಾಗಿದೆ ಎಂದು ತಿಳಿದುಬಂದಿದೆ.
ಶಂಸುಲ್ ಉಲಮಾ ಟ್ರಸ್ಟ್‌ನ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಜಮಾತ್‌ನ ಅಧ್ಯಕ್ಷರು ಹಾಗೂ ಇತರ ಕೆಲ ಪದಾಧಿ ಕಾರಿಗಳೂ ಟ್ರಸ್ಟ್‌ನವರು ಸಂಗ್ರಹಿಸಿದ್ದ ಹಣ ದುರುಪಯೋಗವಾಗುತ್ತಿದೆ, ಊರಿನವರೆಲ್ಲದವರು ಈ ಟ್ರಸ್ಟ್‌ನಲ್ಲಿ ದ್ದಾರೆ, ಜಮಾತ್‌ನವರನ್ನು ಸೇರಿಸಿ ಕೊಳ್ಳದೆ ಟ್ರಸ್ಟ್ ರಚನೆಯಾಗಿದ್ದು, ಜಮಾತ್‌ನ ನೀತಿ-ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡು ಈ ಕಾರ್ಯಕ್ರಮ ಮಾಡುತ್ತಿದ್ದಾರೆಂದು ಆರೋಪಿಸಿದ್ದರು.
ಮರುದಿನ ಟ್ರಸ್ಟ್‌ನವರೂ ಪತ್ರಿಕಾಗೋಷ್ಠಿನಡೆಸಿ ಇದಕ್ಕೆ ತದ್ವಿರುದ್ಧ ಹೇಳಿಕೆ ನಿಡಿ, ದಾಖಲೆಗಳ ಸಮೇತ ಸ್ವಷ್ಟೀಕರಣ ನೀಡಿದ್ದರು. ಈ ವಿವಾದ ಉಂಟುಮಾಡಿದ ವಿಷಯ ಪಟ್ಟಕಾಡ್‌ನ ಆಲಿಕುಟ್ಟಿ ಮುಸ್ಲಿಯಾರ್‌ರವರಿಗೆ ತಿಳಿದು, ಅವರು ಜಮಾತ್‌ನ ಆಡಳಿತ ಕಮಿಟಿಯವರನ್ನು ಪಟ್ಟಕಾಡ್‌ಗೆ ಕರೆಸಿ ಈ ವಿವಾದ ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದಲ್ಲದೆ, ಮಾಡಿದ ತಪ್ಪನ್ನು ತಿದ್ದಿಕೊಳ್ಳುವಂತೆ ಹೇಳಿದ್ದಾರೆನ್ನಲಾಗಿದೆ. ಇದರಿಂದ ಮುಖಭಂಗಕ್ಕೊಳಗಾಗಿ ಕಾರ್ಯಕ್ರಮಕ್ಕೆ ನಮ್ಮ ಬೆಂಬಲವಿದೆ ಅಂತ ಹೊಸ ಹೇಳಿಕೆ ನೀಡುತ್ತಿದ್ದಾ ರೆಂದೂ ಇಲ್ಲಿನ ಕೆಲವರು ಆರೋಪಿಸಿದ್ದಾರೆ.
ಅಲ್ಲದೆ ನಿನ್ನೆ ನಡೆದ ಶುಕ್ರವಾರದ ನಮಾಝ್ ಬಳಿಕ ತೋಡಾರು ಜಮಾ ತ್‌ನ ಹೆಚ್ಚಿನವರು ಆಡಳಿತ ಕಮಿಟಿ ಯವರ ವಿರುದ್ಧ ತಿರುಗಿ ಬಿದ್ದು, ರಾಜೀ ನಾಮೆಗೆ ಒತ್ತಾಯಿಸಿದ ಪ್ರಸಂಗವೂ ನಡೆದಿದೆ ಎಂದೂ ತಿಳಿದು ಬಂದಿದೆ.

ನಿಗಮ ಮಂಡಳಿಗಳ ಅಧ್ಯಕ್ಷರ ರಾಜೀನಾಮೆಗೆ ಸರಕಾರದ ನಿರ್ಧಾರ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ನಿಗಮ ಮಂಡಳಿಗಳಿಗೆ ನೇಮಕಗೊಂಡಿರುವ ಅಧ್ಯಕ್ಷರ ರಾಜೀನಾಮೆ ಪಡೆಯಲು ಸರಕಾರ ನಿರ್ಧರಿಸಿದೆ. ಯಡಿಯೂರಪ್ಪರ ಅಧಿಕಾರ ಆಡಳಿತಾವಧಿಯಲ್ಲಿ ನಡೆದ ೯೬ ನಿಗಮಮಂಡಳಿಗಳ ಅಧ್ಯಕ್ಷರ ರಾಜೀನಾಮೆ ಪಡೆದು ತೆರವಾದ ಸ್ಥಾನಗಳಿಗೆ ಹೊಸಬರನ್ನು ನೇಮಿಸಲು ನಿರ್ಧರಿಸಲಾಗಿದೆ.
ಸತತವಾಗಿ ಐದು ವರ್ಷಗಳ ಕಾಲ ಒಬ್ಬರೇ ನಿಗಮದ ಅಧ್ಯಕ್ಷರಾಗಿ ಮುಂದುವರಿಯುವುದನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ. ಪಕ್ಷದ ಕಾರ್ಯಕರ್ತರಿಗೂ ನೀಡುವ ಉದ್ದೇಶ ಇದಾಗಿದೆ. ಸ್ಥಳೀಯ ಜಿಲ್ಲಾ ಘಟಕದ ಶಿಫಾರಸ್ಸಿನ ಆಧಾರದ ಮೇಲೆ ಹೊಸ ನಿಗಮ ಮಂಡಳಿಗಳ ಅಧ್ಯಕ್ಷರುಗಳ ನೇಮಕಾತಿಗೆ ಪಟ್ಟಿ ಸಿದ್ದಗೊಂಡಿದೆ. ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರೇ ಪಟ್ಟಿ ಸಿದ್ದಪಡಿಸಿ ಮುಖ್ಯಮಂತ್ರಿಯವರಿಗೆ ನೀಡಿದ್ದು, ಯಾವುದೇ ಕ್ಷಣದಲ್ಲಿ ಹೊಸಬರ ನೇಮಕಾತಿ ಆದೇಶ ಹೊರಬೀಳಲಿದೆ. ಇದರಲ್ಲಿ ಕೆಲವು ಶಾಸಕರನ್ನು ಪ್ರಮುಖ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುವುದು.
ಯಡಿಯೂರಪ್ಪರ ಆಡಳಿತದಲ್ಲಿ ನೇಮಕಗೊಂಡ ನಿಗಮಗಳಿಗೆ ಒಂದೇ ಜನಾಂಗದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿದ್ಯ ನೀಡುವುದಲ್ಲದೆ ಎಇ ಜನಾಂಗದವರಿಗೂ ಅವಕಾಶ ಮಾಡಿಕೊಡಲಾಗುತ್ತದೆ.
ಈ ತಿಂಗಳಾಂತ್ಯಕ್ಕೆ ತಮ್ಮ ಸಂಪುಟವನ್ನು ಪುನರ್‌ರಚಿಸುತ್ತಿರುವ ಸದಾನಂದ ಗೌಡರು ಅದಕ್ಕೂ ಮುನ್ನವೇ ಈ ನೇಮಕಾತಿ ಆದೇಶ ಹೊರಬೀಳಲಿದೆ.

ಕುಡಿಯುವ ನೀರಿನ ಯೋಜನೆ ಅರ್ಧದಲ್ಲಿ ಸ್ಥಗಿತ

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರು ತಾಲೂಕಿನ ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಿಗೋಡು ಗ್ರಾಮದ ಖಂಡಿಗ, ಕೇಮಾರು, ಪುಂಡಿಕಿಲಡ್ಕ, ಕಾಯರ್‌ಮುಗೇರು ಪರಿಸರದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಈ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಆರಂಭಿಸಲಾದ ಕುಡಿಯುವ ನೀರಿನ ಯೋಜನೆ ಅರ್ಧದಲ್ಲಿ ಸ್ಥಗಿತಗೊಂಡಿದೆ.
ಈ ಪ್ರದೇಶದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಜಿಲ್ಲಾ ಪಂಚಾಯತ್ ವತಿಯಿಂದ ಲಕ್ಷಾಂತರ ರೂಪಾಯಿ ಮೊತ್ತದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಆರಂಭಿಸಲಾ ಗಿತ್ತು. ಕಾಮಗಾರಿ ನಾಲ್ಕು ತಿಂಗಳ ಹಿಂದೆಯೇ ಆರಂಭಗೊಂಡಿದ್ದರೂ ಮತ್ತೆ ಮುಂದುವರಿಯದೆ ಅರ್ಧದಲ್ಲಿ ಸ್ಥಗಿತಗೊಂಡಿದೆ.
ಕೊಳವೆ ಬಾವಿಯನ್ನು ಕೊರೆದು ಪೈಪ್‌ಲೈನ್ ಅಳವಡಿಸಲಾಗಿದ್ದರೂ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ಅರಂಭ ಹಂತದಲ್ಲಿಯೇ ಇದ್ದು ಟ್ಯಾಂಕ್ ನಿರ್ಮಾಣಕ್ಕೆಂದು ಸ್ಪಲ್ಪ ಮಣ್ಣು ಅಗೆದು ಅಲ್ಲಿಯೇ ನಿಲ್ಲಿಸಲಾಗಿದೆ. ಕೊಳವೆ ಬಾವಿಗೆ ಪಂಪು ಅಳವಡಿಸುವ ಕೆಲಸವೂ ಬಾಕಿಯಾಗಿದೆ. ಈ ಎಲ್ಲಾ ಅಪೂರ್ಣ ಕಾಮಗಾರಿಯಿಂದಾಗಿ ಈ ಯೋಜನೆ ಮಂಜೂರಾಗಿದ್ದರೂ ಜನರಿಗೆ ಊಟ ಕ್ಕಿಲ್ಲದ ಉಪ್ಪಿನಕಾಯಿ ಎಂಬಂತಾಗಿದೆ
ಈ ಪ್ರದೇಶದ ಜನರು ನೀರಿಗಾಗಿ ಪರದಾಡುತ್ತಿದ್ದು, ಇವರು ಬಹು ದೂರದಲ್ಲಿರುವ ನದಿ ನೀರನ್ನು ಅನಿವಾ ರ್ಯವಾಗಿ ಅವಲಂಬಿಸಬೇಕಾಗಿದೆ.
ಪ್ರತಿಭಟನೆಯ ಎಚ್ಚರಿಕೆ: ನೀರಿನ ಭವಣೆ ಎದುರಿಸುತ್ತಿರುವ ಈ ಭಾಗದ ಜನರು ಸ್ಥಳಿಯಾಡಳಿತ ಮತ್ತು ಜನಪ್ರತಿನಿಧಿಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪೂರ್ಣಗೊಂಡಿರುವ ಕುಡಿಯುವ ನೀರಿನ ಯೋಜನೆಯನ್ನು ತಕ್ಷಣವೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ಎಂಬವರು ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಕಾಮಗಾರಿಯನ್ನು ಪೂರ್ಣಗೊ ಳಿಸುವಲ್ಲಿ ವಿಳಂಬ ನೀತಿ ನುಸರಿಸಿದರೆ ನಾಗರಿಕರ ಸಹಕಾರದಲ್ಲಿ ನರಿಮೊಗರು ಗ್ರಾಮ ಪಂಚಾಯತ್ ಮುಂಬಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಕೋಟಿನಾಮಾರ್ಚನೆ ಅಪೂರ್ವ ಅವಕಾಶ:ಎಂ.ಎನ್.

Posted by JAYAKIRANA Kirana on | 0 comments | Leave a comment...

ಮಂಗಳೂರು: ಕೋಟಿ ತುಳಸೀ ದಳಗಳಿಂದ ಶ್ರೀ ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ಕೋಟಿ ನಾಮಾರ್ಚನೆ ಕಾರ‍್ಯಕ್ರಮ ಅಪೂರ್ವ ವಾದುದು. ಓರ್ವ ವ್ಯಕ್ತಿಯ ಜೀವನ ದಲ್ಲಿ ಒಮ್ಮೆ ಮಾತ್ರ ಲಭಿಸುವ ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸಕಲ ಪಾಪಗಳನ್ನು ಕಳೆದುಕೊಂಡು ಪುಣ್ಯ ಸಂಪಾದನೆ ಮಾಡಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ. ಭಕ್ತರೆಲ್ಲರೂ ಸಕ್ರಿಯವಾಗಿ ತೊಡಗಿಸಿ ಕೊಳ್ಳುವ ಮೂಲಕ ಕೋಟಿನಾಮಾರ್ಚನೆಯನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಟ್ರಸ್ಟ್‌ನ ಆಡಳಿತ ನಿರ್ದೇಶಕರು ಆಗಿರುವ ಅವರು ವಿವರಿಸಿದ್ದಾರೆ.
ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಎ.೨೦ರಿಂದ ೨೯ರವರೆಗೆ ನಡೆಯಲಿರುವ ಕೋಟಿ ನಾಮಾರ್ಚನೆ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸಿದ ಅವರು ಎರಡೂ ಸಂಘ ಟನೆಗಳ ವತಿಯಿಂದ ತಲಾ ಒಂದು ಲಕ್ಷ ರೂಪಾಯಿಗಳ ದೇಣಿಗೆ ಯನ್ನು ಚೆಕ್ ಮೂಲಕ ನೀಡಿದರು. ದೇವಸ್ಥಾ ನದ ಸ್ವರೂಪ ಮತ್ತು ಕೋಟಿ ನಾಮಾರ್ಚನೆ ಹಿನ್ನೆಲೆಯಲ್ಲಿ ನಡೆ ಯುತ್ತಿರುವ ೭೫ ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ದೇಗುಲ ನವೀಕರಣದ ಕಾಮಗರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಯ್ಕ್ ಕೋಟಿನಾಮಾರ್ಚನ ಸಮಿತಿ ಪರವಾಗಿ ಚೆಕ್ ಸ್ವೀಕರಿಸಿದರು. ಉದ್ಯಮಿಗಳಾದ ಪುಷ್ಪರಾಜ್ ಜೈನ್, ಸುಧೀರ್ ಹೆಗ್ಡೆ ಮೇಘರಾಜ್, ಸುನೀಲ್ ಕುಮಾರ್ ಮತ್ತು ರೈ ಬಿಲ್ಡ್‌ರ‍್ಸ್‌ನ ಅಶೋಕ್ ರೈ ಭಾಗವಹಿಸಿದ್ದರು. ಆಡಳಿತಾಧಿಕಾರಿ ಕೃಷ್ಣಕುಮಾರ್, ಕೋಟಿನಾಮಾರ್ಚನ ಸಮಿತಿಯ ಸಾಂಸ್ಕೃತಿಕ ವಿಭಾಗ ಪ್ರಮುಖ ಕೆ.ವಿ.ರಮಣ್ ಉಪಸ್ಥಿತರಿ ದ್ದರು. ಪ್ರಧಾನ ಅರ್ಚಕ ವೆಂಕಟರಮಣ ಭಟ್ಟರು ಪ್ರಾರ್ಥನೆ ನೆರವೇರಿಸಿದರು.

ಬಜಪೆ: ಮಾರುಕಟ್ಟೆ ವರಿ ವಸೂಲಿ ಏಲಂ ಪ್ರಕ್ರಿಯೆಯಲ್ಲಿ ಪಕ್ಷಪಾತ: ಆರೋಪ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಜಪೆ ಗ್ರಾ.ಪಂ. ವ್ಯಾಪ್ತಿಯ ಸ್ಟಾಲ್‌ಗಳು ಹಾಗೂ ಮಾರು ಕಟ್ಟೆ ವರಿ ವಸೂಲಿಯ ಏಲಂ ಪ್ರಕ್ರಿಯೆ ಯ ವೇಳೆ ಗ್ರಾ.ಪಂ. ಅಧ್ಯಕ್ಷರು ಸ್ವಜನ ಪಕ್ಷಪಾತವೆಸಗಿದ್ದಾರೆ ಎಂದು ಸಾರ್ವಜ ನಿಕರು ಆರೋಪಿಸಿದ್ದಾರೆ.
ಬಜಪೆ ಪೇಟೆಯಲ್ಲಿರುವ ಪಂಚಾ ಯತ್‌ಗೆ ಸೇರಿದ ಸ್ಟಾಲ್‌ಗಳು ಹಾಗೂ ಮಾರುಕಟ್ಟೆಯೊಳಗಿರುವ ಸ್ಟಾಲ್‌ಗಳು ಹಾಗೂ ವರಿ ವಸೂಲಿಯನ್ನು ಏಲಂ ಪ್ರಕ್ರಿಯೆಯ ಮೂಲಕ ವಿತರಿಸಬೇಕಾ ಗಿತ್ತು. ಈ ಬಗ್ಗೆ ಗ್ರಾ.ಪಂ. ಸಭೆಯಲ್ಲಿ ಟೆಂಡರ್ ಕರೆಯುವ ಬಗ್ಗೆ ನಿರ್ಣಯ ವನ್ನು ಮಾಡಲಾಗಿತ್ತು. ಆದರೆ ಈ ಟೆಂಡರ್ ಪ್ರಕ್ರಿಯೆಯನ್ನು ವರಿ ವಸೂ ಲಿಗೆ ಮಾತ್ರ ಸೀಮಿತವಾಗಿರಿಸಿ ಸ್ಟಾಲ್ ಗಳಿಗೆ ೨೦% ಬಾಡಿಗೆಯನ್ನು ಏರಿಸಿ ಅವರವರಿಗೇ ನೀಡುವುದಾಗಿ ತೀರ್ಮಾ ನಿಸಲಾಗಿತ್ತು. ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೂ ಇದು ನ್ಯಾಯ ಬದ್ಧವಲ್ಲ ಎನ್ನುವುದಾಗಿ ಷರಾ ಬರೆ ದಿದ್ದರು. ಈ ರೀತಿಯಾಗಿ ಒಂದು ಬಾರಿ ನಿಯಮ ಮೀರಿ ನಡೆದ ಬಳಿಕ ಕೆಲವೇ ದಿನಗಳಲ್ಲಿ ಇನ್ನೊಂದು ಅಪಸವ್ಯ ಎಸಗಲಾಗಿದೆ. ಮಾರ್ಕೆಟ್ ವರಿ ವಸೂಲಿಯನ್ನು ಕೂಡಾ ಶೇಕಡಾ ವಾರು ಹೆಚ್ಚಿಸುವಂತೆ ನಿರ್ಣಯವನ್ನು ಮಾರ್ಪಾಡು ಮಾಡುವ ಸಲುವಾಗಿ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಹಿಂದಿನ ಸಭೆಯಲ್ಲಿ ಸ್ಟಾಲ್‌ಗಳಿಗೆ ೨೦% ಶೇಕಡಾ ಏರಿಸಿ ಮೊದಲಿದ್ದವ ರಿಗೇ ನೀಡಿದ್ದರೆ, ಮಾರ್ಕೆಟ್ ವರಿ ವಸೂಲಿಯನ್ನು ಕೇವಲ ೧% ಏರಿಸಿ ಈ ಹಿಂದಿನ ವ್ಯಕ್ತಿಗೆ ನೀಡಲಾಗಿದ್ದು ವಿವಾದಕ್ಕೆ ಕಾರಣವಾಗಿದೆ.
ವರಿ ವಸೂಲಿಯಲ್ಲಿ ಶೇಕಡಾವಾರು ಏರಿಕೆಯ ಲಾಭ ಪಡೆದ ವ್ಯಕ್ತಿ ಗ್ರಾ.ಪಂ. ಅಧ್ಯಕ್ಷರ ತಮ್ಮನೇ ಆಗಿರುವುದು ಈ ವಿವಾದವನ್ನು ಇನ್ನೂ ಹೆಚ್ಚಿಸಿದೆ. ಕಳೆದ ಬಾರಿಗಿಂತ ಮೊದಲು ಹಲವಾರು ವರ್ಷಗಳ ಕಾಲ ಏಲಂ ಪದ್ಧತಿಯನ್ನು ಕಡೆಗಣಿಸಿ ಅಕ್ರಮ ಎಸಗಲಾಗಿತ್ತು. ಈ ಅಕ್ರಮಕ್ಕೆ ನ್ಯಾಯಾಲಯದ ಮೂಲಕ ಸಡ್ಡು ಹೊಡೆದ ಈಗಿನ ಅಧ್ಯಕ್ಷರು ಮತ್ತೆ ಏಲಂ ಪ್ರಕ್ರಿಯೆಯನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ತನ್ನ ಸ್ವಂತ ತಮ್ಮನ ವಿಷಯಕ್ಕೆ ಬಂದಾಗ ಇತರ ಸದಸ್ಯರ ಹಾಗೂ ಪಿಡಿಓರವರ ವಿರೋಧದ ನಡುವೆಯೂ ನಿಯಮವನ್ನು ಗಾಳಿಗೆ ತೂರಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಕಷ್ಟ ಬಂದಾಗ ಭಾರತದ ನೆನಪು...!

Posted by JAYAKIRANA Kirana on | 0 comments | Leave a comment...

ರಾಜಕೀಯ ಅಂದರೆ ಏನು? ಎಂಬ ಪ್ರಶ್ನೆಗೆ ನನ್ನ ಮಿತ್ರರೊಬ್ಬರು ಬಹಳ ತಮಾಷೆಯ ಉತ್ತರವನ್ನು ನೀಡುತ್ತಿದ್ದರು. ಅವರ ಪ್ರಕಾರ ರಾಜಕೀಯವೆಂದರೆ ಎರಡು ಪದಗಳ ಸೇರುವಿಕೆಯಂತೆ. ಅದೆಂದರೆ 'ರಾಜ+ಕೀಯ' ಅಂದರೆ ರಾಜನು ಏನು ಮಾಡುತ್ತಾನೋ (ಹಿಂದಿಯ ಕಿಯಾ) ಅದು ರಾಜಕೀಯ. ಅಂದರೆ ರಾಜನು ಮಾಡು ವುದರಲ್ಲಿ ಪ್ರಜೆಗಳ ಹಿತಾಸಕ್ತಿ ಅಡಗಿರಬೇಕು ಎಂದೇನೂ ಇಲ್ಲ. ರಾಜನು ತನ್ನ ಮನ ಸ್ಸಿಗೆ ತೋಚಿದಂತೆ ಮಾಡುವುದೇ ರಾಜ ಕೀಯವಂತೆ.
ಆ ನನ್ನ ಮಿತ್ರರು ಇಂದಿನ ರಾಜಕಾ ರಣಿಗಳ ಪ್ರಜಾಹಿತಾಸಕ್ತಿ ಮರೆತ ಡೊಂಬ ರಾಟಗಳನ್ನು ಅಣಕವಾಡುತ್ತಾ ಈ ಮಾತನ್ನು ಹೇಳುತ್ತಿದ್ದರು. ಇದರಲ್ಲಿ ಸತ್ಯಾಂಶವೂ ಇಲ್ಲ ದಿಲ್ಲ. ನಾವು ಮತ ಕೊಟ್ಟು ರಾಜರನ್ನಾಗಿ ಮಾಡಿದ ವ್ಯಕ್ತಿಗಳು ಏನು ಮಾಡುತ್ತಾರೋ ಅದನ್ನು ನಾವು ಒಪ್ಪಿಕೊ ಳ್ಳಲೇ ಬೇಕು. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ಅನ್ವಯವಾಗುತ್ತದೆ ಎಂದು ನನಗನಿಸುತ್ತಿದೆ. ಪ್ರಜಾಪ್ರಭುತ್ವ, ಸರ್ವಾಧಿಕಾರವನ್ನು ಹೊಂದಿದ ಪ್ರತಿಯೊಂದು ದೇಶದಲ್ಲೂ 'ರಾಜ+ಕಿ ಯಾ'ದ ಆಟಗಳು ನಡೆಯುತ್ತಲೇ ಇರುತ್ತವೆ.
ಇತ್ತೀಚೆಗೆ ನಮ್ಮ ದೇಶದಲ್ಲಿ ಇದ್ದಕ್ಕಿದ್ದಂತೆ ಘಟನೆಯೊಂದು ನಡೆ ಯಿತು. ನಾವೆಲ್ಲಾ ಶತ್ರುರಾಷ್ಟ್ರ ಎಂದು ಪರಿಗಣಿಸಿರುವ ಪಾಕಿಸ್ಥಾನದ ಅಧ್ಯಕ್ಷ ಅಸೀಫ್ ಆಲಿ ಜರ್ದಾರಿಯವರು ಭಾರತಕ್ಕೆ ಹಠಾತ್ ಭೇಟಿ ನೀಡಿದರು. ಅಷ್ಟೇ ಹಠಾತ್ ಆಗಿ ನಿರ್ಗಮಿಸಿದರೂ ಕೂಡಾ. ನಮ್ಮ ದೇಶದ ಜನರಿಗೆ ಇದೇನು ನಡೆಯುತ್ತಿದೆ ಎಂದು ಯೋಚಿಸುವುದಕ್ಕೆ ಸಮಯ ಸಿಗುವುದರ ಮೊದಲೇ ಎಲ್ಲವೂ ಮುಗಿದು ಹೋಯಿತು. ಇದೊಂದು ರಾಜಕೀಯ ಭೇಟಿಯೇ, ವೈಯುಕ್ತಿಕ ಭೇಟಿಯೇ, ಪವಿತ್ರ ಕ್ಷೇತ್ರದ ಸಂದರ್ಶನವೇ ಏನೆಂದು ಜನರಿಗೆ ಅರ್ಥವಾಗಲೇ ಇಲ್ಲ.
ಅಸೀಫ್ ಆಲಿಯವರು ಭಾರತಕ್ಕೆ ಆಗಮಿಸಿದ್ದರ ಮುಖ್ಯ ಉದ್ದೇಶ ಅಜ್ಮೀರ್‌ನ ಖ್ವಾಜಾ ಮೈನುದ್ದೀನ್ ದರ್ಗಾದಲ್ಲಿ ಸೇವೆ ಸಲ್ಲಿಸುವುದು. ಶತ್ರು ರಾಷ್ಟ್ರದ ಅಧ್ಯಕ್ಷನೋರ್ವ ಅಷ್ಟು ಸುಲಭವಾಗಿ ನಮ್ಮ ದೇಶಕ್ಕೆ ಬಂದು ಪವಿತ್ರ ಕ್ಷೇತ್ರವನ್ನು ಸಂದರ್ಶಿಸುವುದು ಸಾಧ್ಯವೇ? ಯಾವುದೇ ಪವಿತ್ರ ಕ್ಷೇತ್ರಗಳಿಗೆ ಶತ್ರುತ್ವ ಇಲ್ಲ ಎಂಬುದು ನಿಜವಾದರೂ ಶತ್ರು ದೇಶದ ಅಧ್ಯಕ್ಷ ಸಾರಾಸಗಾಟಾಗಿ ನಿರಾತಂಕವಾಗಿ ಬಂದು ಹೋಗುವುದನ್ನು ಯಾರಾ ದರೂ ಸಹಿಸಿಯಾರೇ? ಈ ರೀತಿ ಆದರೆ ನಮ್ಮ ದೇಶದಲ್ಲಿರುವ ದೇಶ ಭಕ್ತರು ಏನೆನ್ನಬಹುದು? ಯಾವ ರೀತಿಯಲ್ಲಿ ಗುಲ್ಲೆಬ್ಬಿಸಬಹುದು. ಸರ ಕಾರವನ್ನು ದೇಶಭಕ್ತರು ಎನಿಸಿಕೊಂಡ ಜನರ ಪಕ್ಷಗಳು ಯಾವೆಲ್ಲಾ ರೀತಿ ತರಾಟೆಗೆ ಎತ್ತಿಕೊಳ್ಳಬಹುದು. ಇವೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡೇ ಅಸೀಫ್ ಆಲಿ ಜರ್ದಾರಿಯವರ ಭೇಟಿಯನ್ನು ಒಂದು ರಾಜಕೀಯ ಅಥವಾ ರಾಜತಾಂತ್ರಿಕ ಭೇಟಿ ಎಂದು ಬಣ್ಣಿಸಿ ಅವರಿಗೆ ತೀರ್ಥ ಯಾತ್ರೆ ಮಾಡಲು ಭಾರತ ಸರಕಾರದ ವಕ್ತಾರರು ಅನುವು ಮಾಡಿಕೊ ಟ್ಟರು ಎಂದು ಹೇಳಬಹುದೇ?
ಭಾರತೀಯ ಉಪಖಂಡದ ಪ್ರಮುಖ ರಾಷ್ಟ್ರಗಳಾದ ಒಂದು ಕಾಲದಲ್ಲಿ ಗಡಿರೇಖೆ ಇಲ್ಲದ ಭಾರತ ಪಾಕಿಸ್ಥಾನದ ಜನರ ಮನಸ್ಸು ಹೇಗಿದೆ ಎಂಬುದನ್ನು ಈ ಪ್ರಕರಣ ಸಾರಿ ಹೇಳುತ್ತಿದೆ ಎಂದು ಇಲ್ಲಿ ಹೇಳಬಹುದಾಗಿದೆ. ಪಾಕಿಸ್ಥಾನದ ಬಹುಸಂಖ್ಯಾತ, ಧರ್ಮಬೀರು ಮಂದಿಗಳು ಭಾರತದ ಬಗ್ಗೆ ಯಾವ ದೃಷ್ಟಿಕೋನ ಇಟ್ಟುಕೊಂಡಿ ದ್ದಾರೆ ಎಂಬುದಕ್ಕೂ ಜರ್ದಾರಿ ಭೇಟಿ ಒಂದು ಉದಾಹರಣೆಯಾಗ ಬಹುದು. ಇಲ್ಲಿನ ಜನರಿಗೆ ಮಾನಸಿಕ ನೆಮ್ಮದಿ ಸಿಗಬೇಕಾದರೆ ಅದಕ್ಕೆ ಭಾರತವೂ ಒಂದು ಕಾರಣ ಎಂದು ಊಹಿಸಲೂ ಸಾಧ್ಯವಿದೆ. ತಮ್ಮ ಅತ್ಯಂತ ಸಂಕಷ್ಟಮಯ ಸಂದರ್ಭಗಳಲ್ಲಿ ಇಲ್ಲಿನ ವ್ಯಕ್ತಿಗಳಿಗೆ ಭಾರತದ ಅಂದರೆ ಭಾರತದ ಪವಿತ್ರ ಕ್ಷೇತ್ರಗಳ ನೆನಪಾಗುತ್ತದೆ. ಭಾರತವೆಂಬ ಪುಣ್ಯ ಭೂಮಿಗೆ ಹೋಗಿ ಅಲ್ಲಿನ ಕ್ಷೇತ್ರದಲ್ಲಿ 'ಜಿಯಾರತ್' ಮಾಡಿದರೆ ತಮ್ಮ ಸಂಕಷ್ಟಗಳು ದೂರವಾದಾವೋ ಏನೋ ಎಂಬ ಭಾವನೆ ಇದೆ. ಬಹುಶಃ ನಮ್ಮ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇ ಯಿಯವರು ಈ ಭಾವನೆಗಳನ್ನು ಅರ್ಥಮಾಡಿಕೊಂಡು ಭಾರತ ಪಾಕಿ ಸ್ಥಾನಕ್ಕೆ ಬಸ್ಸು ಸಂಚಾರದ ವ್ಯವಸ್ಥೆಯನ್ನು ಮಾಡಿದ್ದರೋ ಏನೋ? ಆದರೆ ಏನಾಗಿ ಹೋಯಿತು. ಧರ್ಮಬೀರುಗಳ ಎಲ್ಲಾ ಪ್ರಯತ್ನಗ ಳನ್ನು ಧರ್ಮದ್ರೋಹಿಗಳು ವಿಫಲವಾಗಿಸಿದರು. ಭಾರತ ಮತ್ತು ಪಾಕಿ ಸ್ತಾನ ಎಂಬ ಎರಡು ದೇಶಗಳು ಎಂದೆಂದಿಗೂ ಶತ್ರುದೇಶಗಳಾಗಿಯೇ ಉಳಿಯಬೇಕು ಎಂಬ ಹಠತೊಟ್ಟ ಕೆಲವೇ ಕೆಲವು ಉಗ್ರವಾದಿಗಳ ಕೈ ಮೇಲಾಗುತ್ತಿರುವುದು ವಿಷಾದನೀಯ.
ಭಾರತದಲ್ಲಿ ನಡೆಯುವ ಕೆಲವೊಂದು ಘಟನೆಗಳು ನೆರೆ ಪಾಕಿ ಸ್ಥಾನದಲ್ಲಿ ಪ್ರಭಾವ ಬೀರುವುದು ನಮಗೆಲ್ಲಾ ಮೊದಲೇ ತಿಳಿದಿದೆ. ಭಾರತವೂ ಪೋಖ್ರಾನ್ ಅಣು ಪರೀಕ್ಷೆ ನಡೆಸಿದ ಸುದ್ದಿ ಕೇಳಿ ವಿಮಾನ ನಿಲ್ದಾಣದಲ್ಲಿದ್ದ ನವಾಜ್ ಷರೀಪ್ ನಖಶಿಖಾಂತ ಬೆವರಿ ಹೋಗಿದ್ದ ರಂತೆ. ಭಾರತ ಅಣುಪರೀಕ್ಷೆ ಮಾಡಿತು ಎಂಬುದಕ್ಕಿಂತಲೂ ತಮ್ಮ ದೇಶಕ್ಕೆ ಈ ಬಗ್ಗೆ ಏನು ಉತ್ತರ ಕೊಡುವುದು ಎಂಬ ಸಂಕಟ ಅವರಿಗೆ. ಭಾರತದಲ್ಲಿ ತಯಾರಾಗುವ ಬಾಲಿವುಡ್ ಚಿತ್ರಗಳಿಗೆ ಪಾಕಿಸ್ಥಾನದಲ್ಲಿ ಭಾರೀ ಬೇಡಿಕೆ. ಇದು ಅಪಾಯ ಎಂದು ಮನಗಂಡ ಅಲ್ಲಿನ ಸರ ಕಾರಿ ಭಾರತದ ಚಿತ್ರಗಳನ್ನು ನಿಷೇಧಿಸಿದಾಗ ಬಾಲಿವುಡ್ ಚಿತ್ರಗಳ ಸಿಡಿ. ಕಳ್ಳ ಸಾಗಾಣಿಕೆ ಪಾಕಿಸ್ಥಾನದಲ್ಲಿ ಒಂದು ಪ್ರಮುಖ ದಂಧೆಯಾಗಿಯೇ ಬಿಟ್ಟಿತ್ತು. ಪಾಕಿಸ್ಥಾನದ ಕಲಾವಿದರು, ಚಿತ್ರನಟರು ಭಾರತಕ್ಕೆ ಬಂದರೆ ಅವರಿಗೆ ಹಿಂತಿರುಗಿ ಹೋಗಲು ಮನಸ್ಸೇ ಬಾರದ ಪರಿಸ್ಥಿತಿ. ಭಾರತ ಪಾಕಿಸ್ಥಾನದ ನಡುವೆ ವಿರಸವಿದ್ದರೂ ಮದುವೆ ಸಂಬಂಧಗಳು ಸರಾಗವಾಗಿ ನಡೆಯುತ್ತಿರುವುದೂ ಕಂಡು ಬರುತ್ತವೆ. ಇಲ್ಲಿನ ಜೀವ ಗಳು ಅಲ್ಲಿಯವರಿಗಾಗಿ, ಅಲ್ಲಿನ ಜೀವ ಇಲ್ಲಿಯವರಿಗಾಗಿ ಹಂಬಲಿ ಸುತ್ತಿರುವುದನ್ನೂ ಕಾಣಬಹುದು. ಇಂತಹಾ ಅನೇಕ ಉದಾಹರಣೆ ಗಳು ನಮ್ಮ ಮುಂದಿದ್ದರೂ ಬಹಿರಂಗವಾಗಿ ಭಾರತ ಮತ್ತು ಪಾಕಿ ಸ್ಥಾನ ಪರಸ್ಪರ ಕತ್ತಿಮಸೆಯುತ್ತಾ ಹಲ್ಲು ಕಡಿಯುತ್ತಾ ಇರುತ್ತವೆ.
ಇಷ್ಟೆಲ್ಲಾ ಇದ್ದರೂ ರಾಜಕೀಯ ನಾಯಕರುಗಳು ತಮ್ಮ ಇಷ್ಟಾರ್ಥ ಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ವೈಯುಕ್ತಿವಾಗಿ ಮೊರೆ ಹೊಕ್ಕು ಅದಕ್ಕೊಂದು ರಾಜಕೀಯ ಬಣ್ಣವನ್ನು ಲೇಪಿಸಿ ಪರಸ್ಪರ ಸಹಾಯ ಮಾಡಿಕೊಳ್ಳುವುದು ಕಂಡು ಬರುತ್ತದೆ. ಅಸಿಫ್ ಆಲಿ ಜರ್ದಾರಿಯ ಭಾರತ ಭೇಟಿ ಪಾಕಿಸ್ಥಾನದಲ್ಲಿ ತೀರ್ಥ ಯಾತ್ರೆಯಂತೆ ಕಂಡು ಬಂದರೆ ಭಾರತದಲ್ಲಿ ಅದೊಂದು ರಾಜಕೀಯ ಭೇಟಿಯಾಗಿ ಕಂಡು ಬರು ತ್ತದೆ. ಭಾರತದಿಂದ ಪಾಕಿಸ್ಥಾನ ಒಡೆದು ಹೋದದ್ದೂ ಇಂತಹಾ 'ರಾಜ+ಕಿಯಾ' ದಿಂದಾಗಿಯೇ ಎಂಬುದನ್ನು ನಾವು ಇಲ್ಲಿ ನೆನಪಿಸಿ ಕೊಳ್ಳಬಹುದಾಗಿದೆ.
ಭಾರತ ಮತ್ತು ಪಾಕಿಸ್ಥಾನ ಎರಡು ದೇಶವಾಗಬೇಕು ಎಂಬ ಭಾವನೆ ಜನರಿಗೆ ಅಂದು ಇದ್ದಂತೆ ಕಾಣುವುದಿಲ್ಲ. ಹಾಗೊಂದು ವೇಳೆ ಇದ್ದಿದ್ದರೆ ಇಂದು ಭಾರತದಲ್ಲಿ ನಡೆಯುವ ಕೆಲವು ಭಾವನಾತ್ಮಕ ಘಟನೆಗಳು ಪಾಕಿಸ್ಥಾನದ ಜನತೆಯನ್ನು ಪ್ರಭಾವಿಸುತ್ತಿರಲಿಲ್ಲ. ಆದರೆ ಅಂದು ಅಖಂಡ ಭಾರತದ ನಾಯಕರುಗಳಲ್ಲಿ ಇದ್ದ ಸ್ವಾರ್ಥ ಮನೋ ಭಾವವೇ ಇದಕ್ಕೆಲ್ಲಾ ಕಾರಣ. ಹಾಗಿರುವಾಗ ಎಲ್ಲಾ ಅನಾಹುತಗ ಳಿಗೂ 'ರಾಜ+ಕೀಯ'ವೇ ಕಾರಣ ಎಂದು ಹೇಳಬಹುದೋ ಏನೋ?

ತಾಳಿ ಇದ್ದೂ, ಇಲ್ಲದೆಯೂ ಮದುವೆ ನಡೆಯುತ್ತಿತ್ತು

Posted by JAYAKIRANA Kirana on | 0 comments | Leave a comment...


ತಾಳಿ, ಪೂಜೆ, ಹೋಮ, ಹವನ, ವೈದಿಕತೆಯನ್ನು ಪೂಜಾರಿಯವರು ಎಲ್ಲಿ ವಿಜೃಂಭಿಸಿದ್ದಾರೆ ಹೇಳಿ. ಪೂಜೆ, ಹೋಮ, ಯಾಗ ಶೂದ್ರರು ಮಾಡಬಹುದೆಂದು ಕ್ಷೇತ್ರದಲ್ಲಿಯೇ ಕಾಣಬಹುದಲ್ಲವೇ?

ಅಶೋಕ್ ಹಲಾಯಿ ಬಂಟ್ವಾಳ
ಎ. ೭ ರ ಚಾವಡಿ ವಿಭಾಗದಲ್ಲಿ ತಾಳಿ ಇಲ್ಲದೆಯೂ ಮದುವೆಯಾಗು ತ್ತಿತ್ತು ಅಂದರೇನು? ಎಂಬ ಪ್ರಶ್ನೆ ಎತ್ತಿದ ಜಯರಾಮರ ಪತ್ರ ಪ್ರಕಟವಾ ಗಿತ್ತು. ನೀವು ಬರೆದ 'ವೈದಿಕರ 'ತಾಳಿ' ಶೂದ್ರರ ಕಿತ್ತಾಟ ಪತ್ರ ನೋಡಿ. ಅದರಲ್ಲಿನ ೫ನೇ ಪ್ಯಾರಾ ಓದಿ ಏನು ಹೇಳಿದ್ದೀರೆಂದು ಯೋಚಿಸಿ. ಬ್ರಾಹ್ಮಣರ ಪುರೋಹಿತರ ಪ್ರವೇಶ ಆಗಬಾರದು ಎಂಬ ತಿಳುವಳಿಕೆಯನ್ನು ಪೂಜಾರಿ ಯವರು ನೀಡಬೇಕೆಂದು ಇದರ ಅರ್ಥ. ಬಿಲ್ಲವ, ಬಂಟ, ಮೊಗವೀರ ಮತ್ತಿ ತರ ಜನಾಂಗಗಳ ವಿವಾಹಗಳಲ್ಲಿ ಬ್ರಾಹ್ಮಣ ಪುರೋಹಿತರ ಪ್ರವೇಶ ಆಗಬಾ ರದು ಎಂಬುದನ್ನು ಹೇಳಿ ನಂತರ ನಾನು ಹೇಳಿಲ್ಲ ಅಂತ ಹೇಳುತ್ತಿದ್ದೀರಿ. ತಾಳಿ ಬಗ್ಗೆ ಬರೆದ ಎಲ್ಲಾ ಪತ್ರಗಳು ನನ್ನಲ್ಲಿ ಇವೆ. ರೂಪಕಲಾ, ಭುಜಂಗ ಶೆಟ್ಟಿ, ಸುರೇಶ್, ಪೆರ್ಮುದೆ ಎಂಬವರು ಬರೆದ ಪತ್ರಗಳೂ ನನ್ನಲ್ಲಿದೆ. ಹೇಳಿದ ನಂತರ ಹೇಳಲಿಲ್ಲ ಅಂತ ಜಾರಿಕೊಳ್ಳುವುದಕ್ಕೆ ಆಗುವುದಿಲ್ಲ. ನೀವು ಹೇಳಿ ಇಲ್ಲ ಎಂದರೂ ಚಾವಡಿ ಓದುಗರು ಗಮನಿಸುತ್ತಾರೆ.
'ಅಧ್ಯಯನಗಾರ' ಎಂದರೆ ಅಭ್ಯಾಸ ಮಾಡುವ ನಿಮ್ಮ ೨೭ರ ಪತ್ರದಲ್ಲಿ ೩ನೇ ಪ್ಯಾರ ಓದಿ. ನನ್ನದೇನಿದ್ದರೂ ಪ್ರಾಚೀನ ಜನಪದ ಅಧ್ಯಯನ ಎಂದಿ ದ್ದೀರಿ. ಎ. ೪ ರ ಪತ್ರದಲ್ಲಿ ನಾನು ಅಧ್ಯಯನಗಾರನೆಂದು ಎಲ್ಲೂ ಹೇಳಿಲ್ಲ ಎಂಬುದು ನಿಮ್ಮ ೫ನೇ ಪ್ಯಾರಾದಲ್ಲಿದೆ. ಯಾಕೆ ಗಡಿ ಬಿಡಿ, ಅವಸರ ಜಯ ರಾಮರೇ. ಬರಹದಲ್ಲಿ ದಾಖಲಾದದ್ದು ದಾಖಲೆಯೇ. ಅದನ್ನು ಅಲ್ಲಗಳೆ ಯುವ ಕಾರ್ಯ ಮಾಡಬೇಡಿ. ಹೇಳಿದ್ದಕ್ಕೆ ಬದ್ದವಾಗಿರಬೇಕು.
ಬನ್ನಂಜೆಯವರ ಪುಸ್ತಕದಲ್ಲಿ ೫೦ವರ್ಷದ ಮೊದಲು ತುಳುನಾಡಿನಲ್ಲಿ ನಡೆಯುತ್ತಿದ್ದ ಮನೆ ಮದುವೆ ಅಗಾಧ ಜಾನಪದ ಮೌಲ್ಯವನ್ನಾಧರಿಸಿದೆ. ವೈದಿಕ ವಿಧಿ ವಿಧಾನಗಳ ಪ್ರಭಾವ ಅಷ್ಟಾಗಿ ಇರಲಿಲ್ಲ. ವಿವೇಚನೆ ವಿಚಾರ ಉಲ್ಲೇಖಿಸಿದ್ದಾರೆ. ಅವರು ನೀಡಿದ ಇಸವಿಯಲ್ಲೇ ೯೫ ವರ್ಷದ ಶೂದ್ರ ಜಾತಿ ಯವರು ತಾಳಿಕಟ್ಟಿಯೇ ವರನ ಮನೆಯಲ್ಲಿಯೇ ಗುರಿಕಾರರು ಮದುವೆ ನಡೆಸಿದ ಜೀವಂತ ಉದಾಹರಣೆ ಇರುವುದರಿಂದ ಇಂಥ ಸುಮಾರು ಉದಾ ಹರಣೆಗಳು ಇರುವ ಕಾರಣದಿಂದ ತಾಳಿ ಇಲ್ಲದೆ ನಡೆದ ಮದುವೆ ಮಾತ್ರ ಅಲ್ಲ. ತಾಳಿಕಟ್ಟಿಯೂ ಮದುವೆ ಆದ ಜೀವಂತ ಉದಾಹರಣೆಗಳು ಇರುವ ಕಾರಣದಿಂದ ಪ್ರಾಚೀನ ಕಾಲದಲ್ಲಿ ಶೂದ್ರರಲ್ಲಿಯೂ ತಾಳಿ ಕಟ್ಟಿ ಮದುವೆ ಆದದ್ದು ಇದೆ. ಬನ್ನಂಜೆಯವರು ಉದಾಹರಿಸಿದಂತೆ ಕೆಲವು ಕಡೆ ಶೂದ್ರ ರಲ್ಲಿ ತಾಳಿ ಕಟ್ಟದೆ ಮದುವೆಯಾದ ಕಾರಣದಿಂದ ನಾನು ಹೇಳಿದ್ದು. ಕೆಲವು ಕಡೆ ತಾಳಿ ಇಲ್ಲದೆಯೂ ತಾಳಿ ಇದ್ದೂ ಮದುವೆ ಆಗಿದ್ದು ಸತ್ಯವೆಂಬುದು, ನಿಮ್ಮ ಅಂದರೇನು? ಎಂಬ ಪ್ರಶ್ನೆಗೆ ಉತ್ತರ.
ಜನಾದನ ಪೂಜಾರಿಯವರಿಗೂ ಗೊತ್ತಿದೆ. ಪ್ರಾಚೀನ ಕಾಲದಲ್ಲಿ ಮದುವೆ ನಡೆಯುವ ರೀತಿ ನೀತಿಗಳು ಕೆಲ ಜಾತಿಯಲ್ಲಿಯೂ ತಾಳಿ ಕಟ್ಟಿ ವಿವಾಹ ವಾದ ಸಂದರ್ಭಗಳ ಚಿತ್ರಣಗಳನ್ನು ಅವರೂ ನೆನಪಿಸುತ್ತಾರೆ. ನೀವು ಈ ಬಗ್ಗೆ ನೇರವಾಗಿ ಪೂಜಾರಿಯವರಿಗೇ ಪತ್ರ ಬರೆಯಿರಿ.
ತಾಳಿ, ಪೂಜೆ, ಹೋಮ, ಹವನ, ವೈದಿಕತೆಯನ್ನು ಪೂಜಾರಿಯವರು ಎಲ್ಲಿ ವಿಜೃಂಭಿಸಿದ್ದಾರೆ ಹೇಳಿ. ಪೂಜೆ, ಹೋಮ, ಯಾಗ ಶೂದ್ರರು ಮಾಡ ಬಹುದೆಂದು ಕ್ಷೇತ್ರದಲ್ಲಿಯೇ ಕಾಣಬಹುದಲ್ಲವೇ? ನಿಮಗೆ ಇನ್ನೂ ಅನು ಮಾನಗಳಿದ್ದರೆ ನೇರವಾಗಿ ಪೂಜಾರಿಯವರಿಗೆ ಪತ್ರ ಬರೆಯಿರಿ. ಶೋಧನೆ ಮಾಡಿ, ವಾದ ಬಿಟ್ಟು ಶೋಧಿಸಿ ತಿಳಿಯಿರಿ.
ಈಗ ನಮ್ಮ ಮನೆಯ ಕಾರ್ಯಕ್ರಮಕ್ಕೆ ನಾವೇ ಗುರ್ಕಾರರು ಎಂಬ ಸ್ಥಿತಿಗೆ ಬಂದಿದೆ. ದೈವದ ಕಾರ್ಯ ಮಾಡಿದರೆ ಜೀಟಿಗೆ ಗೌರವಕ್ಕೆ ಮಾತ್ರ ಎದುರು ನಿಲ್ಲುವ ಕೆಲವು ಗುರ್ಕಾರರು ಇನ್ನು ಕೆಲವು ಮದುವೆಗಳಲ್ಲಿ ಗಂಡಿಗೆ ಹೆಣ್ಣು ಗೊತ್ತುಪಡಿಸಿ, ವರದಕ್ಷಿಣೆ ದುಡ್ಡಿನಿಂದ ಕಮಿಷನ್ ಪಡೆಯುವ ಗುರ್ಕಾ ರರೂ ಇದ್ದಾರೆ. ಹೆಣ್ಣಿನ ಕಡೆಯಿಂದಲು ದುಡ್ಡು ಪಡೆಯುವವರು ದಲ್ಲಾಳಿಗಳಂತೆ ಗುರ್ಕಾರರು ಇದ್ದಾರೆ. ಆ ಕಾರಣದಿಂದ ಈ ಕೆಲವು ಗುರ್ಕಾರರ ಕರ್ಮಕಾಂಡ ದಿಂದಾಗಿ ಹಲವು ಗುರ್ಕಾರರು ಮಾಯ ಆಗಿದ್ದು ಜಯರಾಮರೇ.
ತುಳುನಾಡಿನ ಎಲ್ಲಾ ಬಿಲ್ಲವರ ಯುವಕ - ಯುವತಿಯರ ಮದುವೆಯಲ್ಲಿ ಪೂಜಾರಿಯವರು ಗುರ್ಕಾರ‍್ಮೆ ಮಾಡಲಾಗುತ್ತದೆಯೇ? ಮದುವೆಗೆ ಆಹ್ವಾನಿಸಿದರೂ ಕೆಲವು ಕಡೆ ಕೆಲಸ ಕಾರ್ಯದಿಂದ ಬರಲಿಕ್ಕೆ ಆಗದೆ ಸಂದೇಶಗಳನ್ನು ಕಳುಹಿಸಿದ್ದು ಇದೆ. ಇದಕ್ಕೆ ನಾನು ಉತ್ತರಿಸುವುದಕ್ಕೆ ಆಗದು. ನಿಮ್ಮ ಆಗ್ರಹ ಪೂಜಾರಿಯವರಿಗೆ ಸರಿಯಲ್ಲವೆಂಬುದು ನನ್ನ ಅಭಿಪ್ರಾಯ. ವೈದಿಕತೆ ವಿಜೃಂಭಣೆ ಪೂಜಾರಿಯವರು ಖಂಡಿತವಾಗಿ ಮಾಡಿಲ್ಲ ಎಂಬುದನ್ನು ಖಡಾಖಂಡಿತಾಗಿ ಹೇಳಬಲ್ಲೆ. ನಿಮ್ಮ ಪತ್ರದ ಕೊನೆಯ ಸಾಲು ನಿಧಾನಗತಿ, ಪರಿಣಾಮಕಾರಿ ಮತ್ತು ಪ್ರಭಾವ ಈ ಮೂರು ವಿಷ ಯಗಳನ್ನು ವಿಶೇಷವಾಗಿ ಚಿಂತಿಸಿದರೆ ವಿಧವೆ ಶೋಷಣೆಗೆ ಒಳಪಡುವ ವಿಚಾರ ನಿಧಾನವಾಗಿ ಕಡಿಮೆಯಾಗುತ್ತದೆ. ಸಮಾಜದಲ್ಲಿ ಶೋಷಣೆ ವಿರುದ್ಧ ಪರಿಣಾಮ ಕಾರಿ ಬದಲಾವಣೆಗಳಾಗುತ್ತವೆ. ಇವೆಲ್ಲದರ ಮೂಲಕ ಕ್ಷೇತ್ರದ ಕಾರ್ಯ ಪ್ರಭಾವಕ್ಕೆ ಒಳಪಡುತ್ತದೆ.
ತುಳುನಾಡಿನಲ್ಲಿ ತಾಳಿ ಶೂದ್ರರಲ್ಲಿ ಪ್ರಾಚೀನ ಕಾಲದಲ್ಲಿ ಇರಲಿಲ್ಲವೆಂದು ಸಂಪೂರ್ಣವಾಗಿ ಹೇಳುವುದು ತಪ್ಪಾಗುತ್ತದೆ. ಸಮಗ್ರ ದೃಷ್ಟಿ ಮತ್ತು ಸೂಕ್ಷ್ಮ ದೃಷ್ಟಿ ಇವೆರಡನ್ನೂ ಅವಲೋಕಿಸಿದರೆ ದೊರೆತ ಪುಸ್ತಕಗಳ ಮಾಹಿತಿ ಮತ್ತು ತುಳುನಾ ಡಿನ ದೈವಿಶಕ್ತಿಗಳಲ್ಲಿ ತಾಳಿಯ ಕುರುಹುಗಳು ಇರುವ ಕಾರಣದಿಂದ 'ತಾಳಿ' ಅಲ್ಲಲ್ಲಿ ಬಳಸಲ್ಪಡುತ್ತಿತ್ತು. ಇವಿಷ್ಟನ್ನು ಹೇಳಬಹುದು. ಅದಕ್ಕೆ ಬೇಕಾದ ದಾಖಲೆಗಳನ್ನು ನೀಡಬಹುದು. ಶೂದ್ರರಲ್ಲಿ ತಾಳಿ ಶ್ರೇಷ್ಠ ಅಲ್ಲವೆಂಬುದು ತಪ್ಪಾಗುತ್ತದೆ. ೯೦ ವರ್ಷದ ಹಿಂದೆ ಶೂದ್ರರಲ್ಲಿ ತಾಳಿ ಕಟ್ಟಿ ವಿವಾಹವಾದ, ಹಾಗೂ ಶೂದ್ರರು ನಂಬಿದ ದೈವಗ ಳಿಗೆ ತಾಳಿ ಹರಕೆ ನೀಡಿದ ಜೀವಂತ ಉದಾಹರಣೆಗಳು ಕಾಣುವಾಗ ಜಯರಾ ಮರು ಇಲ್ಲ ಅಂತ ಹೇಳುವಾಗ ನಾನು ಕಂಡದ್ದು ಸುಳ್ಳೇ? ಅಥವಾ ಶೂದ್ರರಲ್ಲಿ ತಾಳಿಯೇ ಇರಲಿಲ್ಲವೆಂದು ವಾದ ಮಾಡುವವರದು ಸತ್ಯವೇ? ತುಳುನಾಡಿನ ಇತಿಹಾಸದ ಬಗ್ಗೆ ಅಧ್ಯಯನ ಏನು ಹೇಳುತ್ತದೆ?, ಜಯರಾಮರು ಏನು ಹೇಳುತ್ತಾರೆ?

ಮನಸ್ಸನ್ನು ನಿಯಂತ್ರಿಸಿ ಚಿಂತನೆ ಮಾಡಿ

Posted by JAYAKIRANA Kirana on | 0 comments | Leave a comment...

ಹೆಸರು; ಬೇಡ: ಊರು;ಬೇಡ
ಸಮಸ್ಯೆ: ನಾನು ೨೬ ವರ್ಷದ ಯುವಕ. ಕೆಲಸ ಮಾಡುತ್ತಿ ದ್ದೇನೆ. ನನ್ನ ಸಮಸ್ಯೆಯೇನೆಂದರೆ ನಾನು ಪಿಯುಸಿ ಕಲಿಯುತ್ತಿ ದ್ದಾಗ ನನ್ನ ಕ್ಲಾಸ್‌ಮೇಟ್ ಒಬ್ಬಳನ್ನು ಇಷ್ಟಪಟ್ಟಿದ್ದೆ. ಆದರೆ ಆಕೆ ಯಲ್ಲಿ ನನ್ನ ಪ್ರೀತಿಯನ್ನು ಹೇಳಲು ಧೈರ್ಯವಿರಲಿಲ್ಲ. ಆಕೆ ನನ್ನ ಜೊತೆ ಕಾಲೇಜಿನಲ್ಲಿ ತುಂಬಾ ಕ್ಲೋಸ್ ಆಗಿ ಮಾತಾಡುತ್ತಿದ್ದಳು. ಆದರೆ ನನಗೆ ಆಕೆಯಲ್ಲಿ ಹೇಗೆ ನನ್ನ ಲವ್ ಬಗ್ಗೆ ಹೇಳುವುದೆಂದು ಗೊತ್ತಾಗಲಿಲ್ಲ. ಆನಂತರ ಆಕೆ ಡಿಗ್ರಿ ಕಲಿಯಲು ಬೇರೆ ಕಾಲೇ ಜಿಗೆ ಸೇರಿದಳು. ಇದರಿಂದ ಆಕೆ ನನಗೆ ಸಿಗುತ್ತಿರಲಿಲ್ಲ.
ಮತ್ತೆ ನಾನು ಆಕೆಯ ಹಿಂದೆ ಬಿದ್ದು ಹುಡುಕುವ ಪ್ರಯತ್ನ ಮಾಡಿರಲಿಲ್ಲ. ಆದರೆ ಕಳೆದ ಎರಡು ತಿಂಗಳ ಹಿಂದೆ ಆಕೆ ನನಗೆ ಮತ್ತೆ ಸಿಕ್ಕಿದ್ದಾಳೆ. ಆಕೆ ಕಂಪ್ಯೂಟರ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಒಮ್ಮೆ ನನಗೆ ಸಿಕ್ಕಿದವಳು ಮಾತನಾಡಿ ಒಟ್ಟಿಗೇ ಜ್ಯೂಸ್ ಕುಡಿದಿದ್ದೇವೆ. ಆಗ ಆಕೆಯೇ ನನಗೆ ಮೊಬೈಲ್ ನಂಬರ್ ಕೊಟ್ಟಿದ್ದಾಳೆ. ನಾನು ಆಕೆಯೊಂದಿಗೆ ಈಗ ಫೋನ್ ಮಾಡಿ ಮಾತಾ ಡುತ್ತೇನೆ. ಆಕೆ ನನಗೆ ಆಗಾಗ ಮೆಸೇಜ್, ಚಾಟಿಂಗ್ ಮಾಡು ತ್ತಾಳೆ. ನಾನೂ ಆಕೆಗೆ ಮೆಸೇಜ್ ಮಾಡುತ್ತೇನೆ. ಈಗ ನನಗೆ ಆಕೆ ಯನ್ನು ಮತ್ತೆ ಪ್ರೀತಿಸಲು ಮನಸ್ಸಿದೆ. ಆದರೆ ಆಕೆಗೆ ಬೇರೆ 'ಲವ್' ಇರಬಹುದೇ ಎಂದು ಸಂದೇಹವಾಗುತ್ತಿದೆ.
ಆಕೆಯನ್ನು ನೋಡಿದರೆ ಹಾಗೆ ಅನಿಸುವುದಿಲ್ಲ. ಆಕೆ ಬೇರೆ ಯವಕನನ್ನು ಪ್ರೀತಿಸುತ್ತಿದ್ದು, ನಾನು ಆಕೆಯನ್ನು ಪ್ರೀತಿಸುವುದಾಗಿ ಹೇಳಿದರೆ ಸ್ನೇಹಕ್ಕೆ ಧಕ್ಕೆಯಾಗುವುದಿಲ್ಲವೇ? ನನಗೆ ಆಕೆಯ ಪ್ರೀತಿಯನ್ನು ಹೇಗಾದರೂ ಪಡೆಯಬೇಕೆಂದು ಆಸೆ, ನಾನೇನು ಮಾಡಲಿ? ನನಗೆ ಸರಿಯಾದ ಸಲಹೆ ಕೊಡಿ.
ಸಲಹೆ: ಮೊದಲು ನಿಮ್ಮ ದ್ವಂದ್ವ ಮನೋಸ್ಥಿತಿಯನ್ನು ನಿಯಂತ್ರಣದ ಲ್ಲಿಡಿ. ಆಕೆ ನಿಮ್ಮ ಹಿಂದಿನ ಕಾಲೇಜು ಗೆಳತಿ. ಆದರೆ ಈಗ ಆಕೆ ಕೆಲಸ ಮಾಡು ತ್ತಿದ್ದಾಳೆ, ನೀವೂ ಸಣ್ಣ ಹುಡುಗನಲ್ಲ. ನಿಮಗೂ ಸಾಕಷ್ಟು ಜವಾಬ್ದಾರಿಗಳಿವೆ. ಆಕೆ ನಿಮ್ಮನ್ನು ಕಾಲೇಜು ಸ್ನೇಹಿತ ಎಂಬ ನೆಲೆಯಲ್ಲಿ ನಂಬರ್ ಕೊಟ್ಟು ಮಾತಾಡುತ್ತಿರಬಹುದು. ಆಕೆಯ ವೈಯಕ್ತಿಕ ಬದುಕು ಬೇರೆಯೇ ಇರಬಹುದು. ನೀವು ಆಕೆಯ ಗೆಳೆತನ ಮುಖ್ಯವೇ ಅಥವಾ ಆಕೆಯ ಪ್ರೀತಿ ಮುಖ್ಯವೇ, ಎಂದು ತೀರ್ಮಾನಿಸಿ. ಗೆಳೆತನ ಮುಖ್ಯವಾದರೆ ಆಕೆಯೇ ಸ್ವತ: ಆಕೆಯ ಸ್ವಂತ ವಿಚಾರ ಅಂದರೆ ಪ್ರೀತಿ-ಪ್ರೇಮ ಈ ಬಗ್ಗೆ ಹೇಳುವ ತನಕ ಸುಮ್ಮನಿರಿ. ಪ್ರೀತಿ ಮುಖ್ಯ ವಾದರೆ ಆಕೆಯನ್ನು ಆದಷ್ಟು ಬೇಗನೇ ಕೇಳಿಬಿಡಿ. ಆಕೆಗೆ ಆಸಕ್ತಿ ಇರದಿದ್ದರೆ ಅಥವಾ ಬೇರೆ 'ಲವ್' ಇದ್ದರೆ, ಸ್ನೇಹಿತರಂತೆಯೇ ಇರೋಣ ಎಂದು ಹೇಳಿಬಿಡಿ. ಆಕೆಗೆ ಯಾವುದಕ್ಕೂ ಒತ್ತಡ ಹೇರುವುದು ಬೇಡ. ಪ್ರೀತಿ ಎನ್ನುವುದು ಎಲ್ಲಾ ಬಂಧನಗಳಿಂದ ಮುಕ್ತವಾಗಿರ ಬೇಕು. ನಿಮ್ಮೊಳಗಿನ ಸಂಶಯವನ್ನು ಆಕೆಯ ಜತೆ ನೇರವಾಗಿ ನಿವಾರಿಸಿಕೊಳ್ಳಿ.
ಇದಕ್ಕಾಗಿ ಯಾವುದೇ ರೀತಿಯ ಒತ್ತಾಯ, ಒತ್ತಡ, ಆಮಿಷ ತಂತ್ರವನ್ನು ಬಳಸುವುದು ಬೇಡ. ಇದರಿಂದ ಆಕೆಗೆ ನಿಮ್ಮ ಮೇಲಿ ರುವ ಒಳ್ಳೆಯ ಭಾವನೆಗಳೆಲ್ಲಾ ಕಡಿಮೆಯಾಗಬಹುದು. ಆಕೆ ಒಂದು ವೇಳೆ ಫ್ರೆಂಡ್ಸ್‌ಗಳಾಗಿಯೇ ಇರೋಣ ಎಂದು ಹೇಳಿದರೆ ನಿಮ್ಮ ಮನಸ್ಸಿನಲ್ಲಿನ ಪ್ರೀತಿ-ಪ್ರೇಮ ಬದಿಗಿಟ್ಟು ಒಳ್ಳೆಯ ಫ್ರೆಂಡ್ಸ್ ಆಗಿರಿ. ಗೆಳೆತನವನ್ನು ಪ್ರೀತಿಯನ್ನಾಗಿ ಪರಿವರ್ತಿಸಲು ಆದಷ್ಟು ಸಂಯಮ ದಿಂದ ವರ್ತಿಸಬೇಕಾದ್ದು ಅಗತ್ಯ ಎನ್ನುವುದನ್ನು ಮರೆಯದಿರಿ. ಇಲ್ಲಿ ನೀವು ಸ್ವಲ್ಪವೇ ಎಚ್ಚರ ತಪ್ಪಿದರೂ ಸಮಸ್ಯೆ ಎದುರಿಸಬೇಕಾ ದೀತು.

14-4-2012

Posted by JAYAKIRANA Kirana on | 0 comments | Leave a comment...

ಮೇಷ : ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ವೃಷಭ : ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಇದೆ.
ಮಿಥುನ: ಮನೆಯಲ್ಲಿ ಶಾಂತಿ, ನೆಮ್ಮದಿ ಇರುತ್ತದೆ.
ಕರ್ಕಾಟಕ : ಹಣದ ವಿಚಾರದಲ್ಲಿ ಸಮಾಧನ ಇರುತ್ತದೆ.
ಸಿಂಹ : ಹಣಕಾಸಿನ ಬಗ್ಗೆ ಚಿಂತೆ ಇರುತ್ತದೆ.
ಕನ್ಯಾ : ಹೆಂಡತಿಯಿಂದ ಕಿರಿಕಿರಿ ಇರುತ್ತದೆ.
ತುಲಾ : ಪುಣ್ಯ ಸ್ಥಳಕ್ಕೆ ಭೇಟಿ ಡುತ್ತೀರಿ.
ವೃಶ್ಚಿಕ : ಶುಭ ಕೆಲಸಗಳಿಗೆ ಹಣ ಖರ್ಚಾಗಲಿದೆ.
ಧನು : ಮನೆ ರ್ಮಾಣದ ಕೆಲಸವು ಪ್ರಗತಿಯಲ್ಲಿರುತ್ತದೆ.
ಮಕರ : ಮನೆಯಲ್ಲಿ ಶುಭ ಕೆಲಸಗಳನ್ನು ನಡೆಸುತ್ತೀರಿ.
ಕುಂಭ : ಮೇಲಾಧಿಕಾರಿಯಿಂದ ತೊಂದರೆ ಇರುತ್ತದೆ.
ಮೀನ : ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ.

14-4-2012

Posted by JAYAKIRANA Kirana on | 0 comments | Leave a comment...

ಕಿಚನ್ ಹೆಲ್ಪರ‍್ಸ್ ಬೇಕಾಗಿದ್ದಾರೆ. ೯೯೦೨೭೬೮೪೩೫
ಮೂಡುಬಿದ್ರೆ : ಫ್ಯಾನ್ಸಿ ಮತ್ತು ಜನರಲ್ ಗೂಡ್ಸ್ ಪ್ಯಾಕಿಂಗ್ ಪಾರ್ಸೆಲ್‌ಗೆ ಯುವಕರು ಬೆಕು ೯೬೬೩೯೫೦೪೦೪.
ಮಂಗಳೂರು : ಸ್ಕ್ರೀನ್‌ಪ್ರಿಂಟಿಂಗ್ ಹೆಲ್ಪರ್ ಯುವತಿಯರು ಬೆಕು ೯೮೪೪೫೯೨೧೮೨
ಮಂಗಳೂರು : ಆಫೀಸ್ ಬಾಯ್ ಬೇಕು ೪೨೭೪೦೧೦.
ಮಂಗಳೂರು : ಬ್ಯಾಟರಿ ಕೆಲಸಕ್ಕೆ ಜನ ಬೇಕು ೯೮೪೫೧೪೨೪೨೨.
ಮಂಗಳೂರು : ಜೂಸ್‌ಮೇಕರ್ ಬೇಕು ೯೮೪೫೦೦೮೫೨೬.
ಮಂಗಳೂರು : ಆಫೀಸ್ ಕೆಲಸಕ್ಕೆ ಯುವಕ ಯುವತಿಯರು ಬೇಕು ೯೪೮೨೧೭೭೬೫೦.
ಮಂಗಳೂರು : ದ್ವಿಚಕ್ರ ವಾಹನ ಗೊತ್ತಿರುವ ಯುವಕರು ಬೇಕಾಗಿದ್ದಾರೆ. ಭೇಟಿ ಸಮಯ: ಬೆಳಿಗ್ಗೆ ೧೧.೩೦ರಿಂದ ೧೨.೩೦ರವರೆಗೆ.ಜಯಕಿರಣ ದೈನಿಕ, ಸರ್ಕ್ಯೂಟ್ ಹೌಸ್ ಕೆಳಗಿನ ರಸ್ತೆ, ಬಟ್ಟಗುಡ್ಡ, ಬಿಜೈ. ಮಂಗಳೂರು
ಮಂಗಳೂರು: ಫ್ಯಾನ್ಸಿ ಮತ್ತು ಜನರಲ್ ಗೂಡ್ಸ್ ಪ್ಯಾಕಿಂಗ್‌ಗೆ, ಪಾರ್ಸೆಲ್ ಹುಡುಗರು ಬೇಕು ೯೬೬೩೯೫೦೪೦೪.
ಮಂಗಳೂರು: ಹೊಟೇಲ್‌ಗೆ ಹೆಲ್ಪರ್, ಕುಕ್, ವೇಟರ್ ಬೇಕು. ೯೯೮೬೬೪೮೧೧೮.
ಮಂಗಳೂರು : ಸ್ಕ್ರೀನ್ ಪ್ರಿಂಟರ್ ಹೆಲ್ಪರ್ ಯುವತಿ ಬೇಕು ೯೮೪೪೫೯೨೧೮೨.
ಮಂಗಳೂರು : ಆಫೀಸ್ ಬಾಯ್ ಬೇಕು ೪೨೭೪೦೧೦.
ಮಂಗಳೂರು : ಬ್ಯಾಟರಿ ಕೆಲಸಕ್ಕೆ ಜನ ಬೇಕು ೯೮೪೫೧೪೨೪೨೨.
ಮಂಗಳೂರು :ಮಂಗಳೂರು ಲೇಡಿ ಸ್ಟಾಫ್ ಬೇಕು ೯೮೪೫೬೦೭೫೫೯೧.
ಮಂಗಳೂರು : ಡೆಲಿವರಿ ಬಾಯ್ ಬೇಕು ೯೮೪೫೦೦೮೫೨೬.
ಮಂಗಳೂರು :ಹುಡುಗರ ಹಾಸ್ಟೆಲ್‌ಗೆ ವಾರ್ಡನ್ ಬೇಕು ೯೪೪೯೭೨೩೧೩೩.
ಬೆಂದೂರ್‌ವೆಲ್ : ಶೋರೂಂಗೆ ಜನ ಬೇಕು ೯೬೨೦೧೪೮೮೪೦.
ಮಂಗಳೂರು :ಬೇಕರಿಗೆ ಸೇಲ್ಸ್ ಗರ್ಲ್ಸ್ ಬೇಕು ೯೧೬೪೧೭೩೮೮.
ಮಂಗಳೂರು : ಮಂಗಳಾದೇವಿ ಹೊಟೇ ಲ್‌ಗೆ ರುಬ್ಬುವವರು, ಅಡುಗೆ, ತಿಂಡಿಯವರು, ಚಹಾ ಕೌಂಟರಿಗೆ ಬೇಕು ೯೪೪೯೨೬೮೯೯೭.
ಜಪ್ಪಿನ ಮೊಗರು : ಡ್ರೈವರ್ ಬೇಕು ೯೪೮೧೭೫೯೬೧೪.
ಮಂಗಳೂರು : ಕಲರ್ ಲ್ಯಾಬ್‌ಗೆ ಸೇಲ್ಸ್ ಬಾಯ್ಸ್ ಬೇಕು ೨೪೪೦೮೦೩.
ಮಂಗಳೂರು : ಮನೆ ಕೆಲಸಕ್ಕೆ ಜನಬೇಕು ೯೪೪೮೬೨೫೭೪೫.
ಮಂಗಳೂರು : ಬಾರಿಗೆ ವೇಟರ್ ಬೇಕು ೯೫೩೮೫೦೨೨೩೨.
ಮಂಗಳೂರು :ಇನೋವಾ ಕಾರಿಗೆ ಡ್ರೈವರ್ ಬೇಕು ೯೮೪೫೧೪೩೯೯೫.
ಮಂಗಳೂರು : ಕಂಪ್ಯೂಟರ್ ಟೈಪಿಂಗ್ ಗೊತ್ತಿದ್ದ ಯುವತಿ ಬೇಕು ೯೮೪೫೧೪೩೯೯೫.
ಮಂಗಳೂರು :ಸೇಲ್ಸ್ ಎಕ್ಸಿಕ್ಯೂಟಿವ್ ಬೇಕು ೯೧೪೧೦೨೯೬೮೮.
ಕೈಕಂಬ : ಬ್ಯೂಟಿಪಾರ್ಲರಿಗೆ ಜನ ಬೇಕು ೯೯೮೦೪೧೪೩೮೨.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


ಎಂಎಸ್‌ಎಫ್ ಕಾರ‍್ಯಕರ್ತಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಇಲ್ಲಿನ ಬೋವಿಕ್ಕಾನ ಸಮೀಪ ಪೊವ್ವಲ್‌ನಲ್ಲಿರುವ ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಎಸ್‌ಎಫ್ ಕಾರ್ಯಕರ್ತ ನಾದ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
೪ನೇ ವರ್ಷ ಇಂಜಿನಿಯರಿಂಗ್ ವಿದ್ಯಾರ್ಥಿ, ಎಂ. ಎಸ್. ಎಫ್ ವಿದ್ಯಾರ್ಥಿ ಸಂಘಟನೆಯ ಸಕ್ರಿಯ ಕಾರ್ಯಕರ್ತನಾದ ನಾಯಮ್ಮಾರ ಮೂಲೆಯ ಅಬ್ದುಲ್ ಜಸೀಮ್(೨೦) ಇರಿತಕ್ಕೊಳಗಾದ ಯುವಕ. ಈತನಿಗೆ ಕ್ಷಿಪ್ರ ಶಸ್ತ್ರಕ್ರಿಯೆ ನೀಡಲಾಗಿದೆ. ಕಾಲೇಜಿನಲ್ಲಿ ನಿನ್ನೆ ಹಲ್ಲೆ ನಡೆದಿತ್ತು. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ಥಿಕ ಅವ್ಯವಹಾರದ ಬಗ್ಗೆ ಸೂಚಿಸಿದ ದ್ವೇಷಕ್ಕೆ ಎಸ್‌ಎಫ್‌ಐ ಸಂಘಟನೆಯ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

ದನದ ಮಾಂಸ ಸಾಗಾಟ: ಮಾಲು ಸಹಿತ ಓರ್ವ ಸೆರೆ

Posted by JAYAKIRANA Kirana on | 2 comments | Leave a comment...

ಪಡುಬಿದ್ರಿ: ಬೆಳಪು ಗ್ರಾಮದ ಮನೆಯೊಂದರಲ್ಲಿ ಪರವಾನಿಗೆ ಇಲ್ಲದೆ ದನವನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಿ ಸುಮಾರು ೨೦ಕಿಲೋ ಮಾಂಸ ಹಾಗೂ ಅದಕ್ಕಾಗಿ ಉಪಯೋಗಿಸಿದ ಪರಿಕರಗಳನ್ನು ಶಿರ್ವ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶಿರ್ವ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬೆಳಪು ಗ್ರಾಮದ ಶಾಂತಿಮಜಲು ದರ್ಗಾ ಸಮೀಪದ ನಿವಾಸಿ ರಫೀಕ್ ಎಂಬಾತನ ಮನೆಗೆ ದಾಳಿ ನಡೆಸಿದಾಗ, ಅಲ್ಲಿ ದನದ ಮಾಂಸ, ದನದ ಚರ್ಮ, ಉಪಯೋ ಗಿಸಿದ ಕತ್ತಿ, ಎರಡು ಚೂರು, ಎರಡು ತೂಕದ ತಕ್ಕಡಿ ಹಾಗೂ ದನದ ಮಾಂಸ ಸಾಗಿಸಲು ಉಪಯೋಗಿ ಸುತ್ತಿದ್ದ ಮಾರುತಿ ಓಮ್ನಿ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲಾ ಸೊತ್ತುಗಳ ಮೌಲ್ಯ ಸುಮಾರು ೧,೦೨,೭೫೦ ರೂ. ಎಂದು ಅಂದಾಜಿ ಸಲಾಗಿದೆ. ದಾಳಿಯ ಸಂದರ್ಭ ಪ್ರಮುಖ ಆರೋಪಿ ರಫೀಕ್ ಪರಾರಿ ಆಗಿದ್ದು, ಆತನ ಸಹಚರ ಇಕ್ಬಾಲ್ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಶಿರ್ವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಅವಸರ ತಂದ ಅಪಘಾತ

Posted by JAYAKIRANA Kirana on | 0 comments | Leave a comment...

ಕುಂದಾಪುರ: ತಲ್ಲೂರು ಸಮೀ ಪದ ಹಟ್ಟಿಯಂಗಡಿ ಕ್ರಾಸ್ ಬಳಿ ಮೂರು ವಾಹನಗಳು ಪರಸ್ಪರ ಡಿಕ್ಕಿ ಯಾಗಿ ತೀವ್ರ ಜಖಂಗೊಂಡ ಘಟನೆ ನಡೆದಿದೆ.
ನಿನ್ನೆ ಸಂಜೆ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಹಟ್ಟಿಯಂಗಡಿ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ಸಂಬಂ ಧಿಕರ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವರ ದರ್ಶನವನ್ನು ಪಡೆದು ಬೆಂಗಳೂರಿಗೆ ಹೊರಡುವ ಗಡಿಬಿಡಿಯಲ್ಲಿ ಹಿಂತಿರುಗುತ್ತಿದ್ದ ಮಾರುತಿ ಓಮ್ನಿಯೊಂದು ನೇರಳಕಟ್ಟೆ ರಸ್ತೆಯಲ್ಲಿ ಬರುತ್ತಿದ್ದಾಗ ಜಡ್ಕಲ್ ಕಡೆಯಿಂದ ಜಾಡಿ ರಸ್ತೆಯಲ್ಲಿ ವೇಗವಾಗಿ ಬಂದ ಪಲ್ಸರ್ ಬೈಕೊಂದು ಡಿಕ್ಕಿ ಹೊಡೆಯಿತು. ಗಾಬರಿಗೊಂಡ ಓಮ್ನಿಯ ಚಾಲಕ ನಾಗರಾಜ್ ಎನ್ನುವವರು ತಕ್ಷಣ ಓಮ್ನಿಯನ್ನು ಬಲಕ್ಕೆ ತಿರುಗಿಸಿದ ರಭಸಕ್ಕೆ ಕಾರು ಅಲ್ಲಿಯೇ ಪಲ್ಟಿ ಹೊಡೆದಿದ್ದು, ಹಿಂದಿನಿಂದ ಬಂದ ಹಾಸನ ಮೂಲದ ಲೇಲ್ಯಾಂಡ್ ಲಾರಿಯೊಂದು ಬಿದ್ದ ಓಮ್ನಿಗೆ ಡಿಕ್ಕಿ ಹೊಡೆಯಿತು. ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು. ದೊಡ್ಡವರಿಗೆ ಗಾಯಗಳಾಗಿದ್ದು ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಿಗೆ ಯಾವುದೇ ಗಾಯಗಳಾಗಿಲ್ಲ. ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿ ಸಮೀಪದ ಗ್ರೀನ್ ಲ್ಯಾಂಡ್ ಟೈಲ್ಸ್‌ನಿಂದ ಹೆಂಚು ತರಲು ಖಾಲಿ ಚಲಿಸುತ್ತಿತ್ತು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4047) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2502) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3677) lokayukta (3) madikeri (1) maleria (1) mangalore (585) mangaloreairport (1) manglore (7) manipal (29) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (415) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (272) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (799) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (485) udyoga (60) ullal (7) upcl (2) upi (152) uppinangadi (47) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)