ಬುದ್ಧಿಹೀನ ಮನುಷ್ಯನ ಸೊಕ್ಕಿನ ಫಲವೇ?

Posted by JAYAKIRANA Kirana on Tuesday, 10 April 2012 | 0 comments | Leave a comment...

ಪೊ.ಮಧೂರು ಮೋಹನ ಕಲ್ಲೂರಾಯ, ಬೆಳ್ತಂಗಡಿ
ಅತಿಯಾದ ಬುದ್ಧಿವಂತ ಎಂದು ಹೇಳಿ ಕೊಳ್ಳುವ ಮನುಷ್ಯನು ತನ್ನ ಸ್ವಾರ್ಥದಿಂದ ಪ್ರಕೃತಿ ಮಾತೆಯನ್ನು ಬಗಿದು ತಿನ್ನುವುದರಿಂದ ಇಂದು ನಾವು ಕುಡಿಯುವ ನೀರಿನ ಸಮಸ್ಯೆಯನ್ನು ಎದು ರಿಸುತ್ತಿದ್ದೇವೆ. ಬಾಯಿಯ ಮಾತಿಗೆ ಮಾತ್ರ ಪ್ರಕೃತಿ ನಮ್ಮ ತಾಯಿ, ಭೂಮಿ ನಮ್ಮ ತಾಯಿ ಎಂದು ತಾಯಿಗೆ ಹೋಲಿಸುತ್ತೇವೆಯೇ ಹೊರತು ತಾಯಿ ಎಂಬ ಭಾವನೆಯಿಂದ ನಾವು ಇಷ್ಟರ ತನಕ ಕಂಡಿಲ್ಲವೆಂದರೆ ತಪ್ಪಾಗಲಾರದು. ಪ್ರಕೃತಿಯು ಹಾಗೆಯೇ, ಅವಳು ಎಂದೂ ಮಾತೆಯಾಗಲಿಲ್ಲ. ನಾವು ಮಾತ್ರ ಕುಪುತ್ರರಾಗಿದ್ದೇವೆ.
ಆಧುನಿಕತೆಯ ದೃಷ್ಟಿಯಿಂದ ದಿನದಿಂದ ದಿನಕ್ಕೆ ಪ್ರಕೃತಿಯನ್ನು ನಾಶ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ಸುರಿವ ನೀರನ್ನು ಕ್ಲೀನ್ ಆಗಿ ಹರಿದು ಹೋಗುವಂತೆ ಚರಂಡಿ ಮಾಡಿ ಬಿಡು ತ್ತೇವೆ. ಬಂಡೆಕಲ್ಲಿನ ಮೇಲೆ ನೀರು ಬಿದ್ದ ಹಾಗೆ ಇಂದು ಭೂಮಿಯ ಮೇಲೆ ನೀರು ಬಿದ್ದು ಹರಿದು ಹೋಗುತ್ತದೆ. ತೋಟ ಇಲ್ಲ, ರಬ್ಬರ್ ತೋಟಕ್ಕೆ ನೀರು ಬಿಡುವ ಪ್ರಶ್ನೆ ಇಲ್ಲ. ಹಿಂದಿನ ಕಾಲದಲ್ಲಿ ಭತ್ತದ ಬೆಳೆಯಲ್ಲಿ ಮೂರು ಬೆಳೆಗಳನ್ನು ಬೆಳೆಸಲಾಗುತ್ತಿತ್ತು. ಗದ್ದೆಯಲ್ಲಿ ದಿನದ ೨೪ ಗಂಟೆ ನೀರು ನಿಲ್ಲುತ್ತಿತ್ತು. ನಿಲ್ಲ ಬೇಕಿತ್ತು. ಈಗ ಗದ್ದೆ, ಪಚ್ಚೆ ಪೈರಿನ ತೋಟ ಎಲ್ಲಾದರೂ ಪ್ರದರ್ಶನ ಇದ್ದರೆ ಭಾಗ್ಯ. ವರ್ಷ ಮೂರು ಬೆಳೆ ಬಿಡಿ ಒಂದು ಬೆಳೆ ಮಾಡುವುದೇ ಕಷ್ಟಕರವಾಗಿದೆ. ಈಗ ಎಲ್ಲಿ ನೋಡಿದರೂ ಬೋರ್‌ವೆಲ್, ವರ್ಷದಿಂದ ವರ್ಷಕ್ಕೆ ಅದರ ಜಲ ಮಟ್ಟವೂ ಕುಸಿಯುತ್ತಿದೆ. ಬಾವಿಯ ಜಲ ಪಾತಾ ಳಕ್ಕೆ ಹೋಗುತ್ತದೆ. ಜನಸಂಖ್ಯೆ ಹೆಚ್ಚುತ್ತಿದೆ. ಜನಸಂಖ್ಯೆ ಹೆಚ್ಚಾ ದಂತೆ ಮನೆಗಳು ಹೆಚ್ಚುತ್ತಿವೆ. ಅವಿಭಕ್ತ ಕುಟುಂಬ ಇಲ್ಲ. ಕೃಷಿಯ ಭೂಮಿ, ಗುಡ್ಡಗಾಡು ಪ್ರದೇಶದಲ್ಲಿ ದಿನ ಬೆಳಗಾಗುವುದರೊಳಗೆ ಕಟ್ಟಡಗಳು ತಲೆ ಎತ್ತುತ್ತಿವೆ. ಇದರಿಂದ ಬಿದ್ದ ಮಳೆ ಭೂಮಿಗೆ ಇಂಗಲು ಅವಕಾಶವಾದರೂ ಇವೆಯೇ ಎಂದು ನೀವೇ ಊಹಿಸಿ ಕೊಳ್ಳಿ. ನೀರು ಪೋಲಾಗುವುದಕ್ಕೆ ಲೆಕ್ಕವೇ ಇಲ್ಲ. ಒಂದು ಚೆಂಬು ನೀರಿನಲ್ಲಿ ಕೈ ತೊಳೆಯುವವ, ನಳ್ಳಿ ತಿರುಗಿಸಿ ನೀರು ಬಿಟ್ಟು ಕೈ ತೊಳೆಯಲು ಒಂದು ಕೊಡ ನೀರು ಚೆಲ್ಲುತ್ತಾನೆ, ಬಿಡುತ್ತಾನೆ. ನಳ್ಳಿ ಯನ್ನು ಎಷ್ಟು ಸಾಧ್ಯವೋ ಅಷ್ಟು ತಿರುಗಿಸುತ್ತಾನೆ. ಪೋಲಾಗುವ ನೀರಿನ ರೀತಿ ತಿಳಿಯುವುದೇ ಇಲ್ಲ. ಎಲ್ಲದಕ್ಕೂ ನಮ್ಮಲ್ಲಿ ಪರಿಹಾರ ವಿದೆ. ಗೊತ್ತಿದೆ. ಅನುಸರಣೆಯಲ್ಲಿ ಮಾತ್ರ ಇಲ್ಲ. ಪ್ರತಿಯೊಬ್ಬರ ಮನೆಯಲ್ಲಿ ಇಂಗುಗುಂಡಿ ಇರಬೇಕು. ಕೃಷಿ ಇರುವ ಜಾಗದಲ್ಲಿ ಬೇಕೇ ಬೇಕು. ಸರಕಾರ ಬಡವರು ಇರುವಲ್ಲಿ ಕೊಳವೆ ಬಾವಿಯನ್ನು ತೋಡಿಸುತ್ತದೆ. ಆದರೆ ಇದೇ ವ್ಯವಸ್ಥೆ ಕೊಳವೆ ಬಾವಿಗೆ ಪೂರಕವಾಗಿ ಇಂಗು ಗುಂಡಿ ತೋಡುವ, ಕೆಲಸಕ್ಕೆ ಕೈ ಹಾಕು ವುದಿಲ್ಲ. ಪಂಚಾಯತ್‌ಗಳು ದೊಡ್ಡ ಖರ್ಚಿಲ್ಲದೆ ಈ ಕೆಲಸವನ್ನು ಮಾಡಬಹುದು. ಇನ್ನು ಕುಡಿ ಯುವ ನೀರಿನ ವಿತರಣೆಯಲ್ಲೂ ತುಂಬಾ ಅನ್ಯಾ ಯಗಳು ನಡೆಯುತ್ತದೆ. ಅದಕ್ಕೆ ಸಂಬಂಧಿಸಿದ ವರ ಕೈ ಬಿಸಿ ಮಾಡಿದರೆ, ರಾತ್ರಿ ತೋಟಕ್ಕೆ ಬೇಕಾದಷ್ಟು ನೀರು(ಕುಡಿಯುವ ನೀರು) ಹರಿ ದಿರುತ್ತದೆ. ಅದೇ ನೀರಿಗಾಗಿ ಇನ್ನೊಂದು ಕಡೆ ಜನ ಗಂಟೆಗಟ್ಟಲೆ ನಿಂತು ನಳ್ಳಿಯ ಹತ್ತಿರ ಜಗಳ ಮಾಡುತ್ತಿರುತ್ತಾರೆ. ಹೂವಿನ ತೋಟಕ್ಕೆ ಕುಡಿ ಯುವ ನೀರಿನದ್ದೇ ಟ್ಯಾಂಕ್. ಇವತ್ತಿನ ಹಾಗೆ ಪರಿಸ್ಥಿತಿ ಸಾಗಿದರೆ ಮುಂದೆ ಕುಡಿಯುವ ನೀರಿ ಗಾಗಿ ಮನುಷ್ಯ ಮನುಷ್ಯನದ್ದೇ ರಕ್ತ ಕುಡಿಯುವ ಕಾಲ ಬಂದೀತು.
ಆದುದರಿಂದ ಈಗಾಗಲೇ ನಶಿಸಿ ಹೋಗುತ್ತಿರುವ ಕೆರೆ, ಕಾಲುವೆ, ಕೊಳ, ಗುಂಡಿಗಳ ಹೂಳೆತ್ತಿಸಿ, ನೀರು ನಿಲ್ಲಿ ಸುವ ಇಂಗುವ, ಎಕರೆಗಟ್ಟಲೆ ಪ್ರದೇಶಗಳು ಇಂದು ಮಣ್ಣು ಮುಚ್ಚಿಸಿ ಕೊಂಡು, ತಮ್ಮ ಮೇಲೆ ಕೈಗಾರಿಕಾ ಪ್ರದೇಶವನ್ನು ವ್ಯಾಪಾರ ಮಳಿಗೆಗಳನ್ನು ಹೇರಿಕೊಂಡು, ನೀರಿಲ್ಲದೆ ಪರಿತಪಿಸುವ ಮನು ಷ್ಯನನ್ನು ಕಂಡು ವ್ಯಂಗ್ಯ ನಗು ನಗುತ್ತಿದೆ. ಒಟ್ಟಿನಲ್ಲಿ ನನ್ನ ಮನೆ, ನನ್ನ ಬಾವಿ ಅಥವಾ ಸರಕಾರ ಕೊಡುತ್ತಿದೆ ಎಂದು ನೀರು ಪೋಲು ಮಾಡದೆ, ಅದು ಜೀವ ಜಲ, ಪ್ರಕೃತಿ ಮಾತೆಯ ರಸಾಮೃತ ಎಂದು ತಿಳಿದು ವ್ಯವಹರಿಸಿದರೆ ಜನರು ಹಸಿರಾಗಿ ಮರೆದಾರು, ಪ್ರಕೃತಿ ನಲಿದಾಳು.

ಮದುಮಗಳನ್ನು ಸಿಂಗರಿಸುವುದು

Posted by JAYAKIRANA Kirana on | 0 comments | Leave a comment...

ಆಗ ಊರ ಗುರಿಕಾರರು ‘ಬಾರ್ಕೂರು, ಮಂಗ್ಲೂರು, ಸಾರಾಲು, ಸಾರಬಲಿ, ಪೊದ್ದೆ, ಇಷ್ಟೆ, ಸರ್ವೆರ‍್ಲ ಕೇಣೋಡು, ಪೊಸ ಮದಿಮಲೆನ್ ಮೂರ್ತ ಸೇಸೆಗ್ ಕುಲ್ಲಪ್ಪವುಂಡ್ ಪನ್ಪೆರ್‌ಯಾ... ಎನ್ನುವರು (ಬಾರ‍್ಕೂರು, ಮಂಗಳೂರು, ಸಾವಿರಾಳು, ಸಾವಿರ ಬಲಿ, ನೆಂಟ, ಇಷ್ಟ, ಸರ್ವರೂ ಕೇಳಬೇಕು. ಹೊಸ ಮದುಮಗಳನ್ನು ಮುಹೂರ್ತ ಸೇಸೆಗೆ ಕುಳ್ಳಿರು ಸುತ್ತೇವೆಂದು ಹೇಳುತ್ತಾರೆ) ಆಗ ಸೇರಿದವರು ‘ಆಂಪೆರೋ (ಆಗಬ ಹುದು) ಎನ್ನುತ್ತಾರೆ.
(ಬಾರ್ಕೂರು ಮತ್ತು ಮಂಗಳೂರು ತುಳು ರಾಜ್ಯದ ರಾಜಧಾನಿಗ ಳಾಗಿದ್ದು, ತುಳು ನೆಲದಲ್ಲಾಗುವ ಎಲ್ಲಾ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಈ ಎರಡು ಕೇಂದ್ರಗಳಿಗೆ ಗೌರವ ನೀಡುವ ಸಂಪ್ರ ದಾಯವಿದ್ದಂತೆ ತೋರುವುದು)
ಈಗ ಮದುಮಗಳನ್ನು ಮುಹೂರ್ತದ ‘ಮುಕ್ಕಲಿಗೆಯ ಮೇಲೆ ಕುಳ್ಳಿರಿಸುವರು.
ಮೊಗವೀರ ಸಮಾಜದಲ್ಲಿ ವಧುವಿನ ನಾದಿನಿಯಾಗುವ ಹುಡುಗಿ ಯನ್ನು ಅಂದದ ಉಡುಗೆ ತೊಡಿಸಿ, ಮದುಮಗಳ ಜೊತೆಗೆ ಮುಹೂರ್ತ ಸೇಸೆಗೆ ಕುಳ್ಳಿರಿಸುವರು. ಈ ಹುಡುಗಿಯನ್ನು ‘ಮೂರ್ತದ ಬಾಲೆ ಎಂದು ಕರೆಯುವರು. ಈ ‘ಮೂರ್ತದ ಬಾಲೆಯ ಕ್ರಮ ಪೂರ್ವದಲ್ಲಿ ಪ್ರಾಯಶಃ ಬಿಲ್ಲವ, ಬಂಟ, ಮೂಲ್ಯ, ಮಡಿವಾಳ ಮೊದಲಾದ ಎಲ್ಲಾ ವರ್ಗಗಳಲ್ಲಿಯೂ ಇದ್ದಿರಬಹುದು. ಇಂದಿಗೂ ಬಿಲ್ಲವರಲ್ಲಿ ಮದುಮ ಗನ ಬಾವನೆಂಟನಾಗುವ ಎಳೆಯ ಬಾಲಕನನ್ನು ಅಲಂಕರಿಸಿ ಮದು ಮಗನ ಜೊತೆಯಲ್ಲಿ ಮೂರ್ತದ ಬಾಲೆಯಾಗಿ ಕುಳ್ಳಿರಿಸುವರು. ಆ ಹುಡುಗನಿಗೆ ಕರಿಮಣಿ ತೊಡಿಸುವರು. ಅದು ಹೆಂಡತಿಯ ಕಲ್ಪನೆ ಗಾಗಿ. ಇದೇ ನೆಂಟತನದ ಕಲ್ಪನೆ ಮದುಮಗಳ ಜೊತೆ ಇರುವ ಹೆಣ್ಣು ಮಗಳು, ಮದುಮಗ ಯಾ ಮದುಮಗಳನ್ನು ಒಂಟಿಯಾಗಿ ಮುಹೂ ರ್ತಕ್ಕೆ ಕುಳ್ಳಿರಿಸುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುವುದು.
ಮದುಮಗಳ ಸೋದರತ್ತೆಯು ‘ಸಲಿಗೆಯನ್ನು ತಂದು ಮುಕ್ಕಲಿ ಗೆಯ ಇದಿರು ಚಾಪೆಯಲ್ಲಿ ಮಣೆಯ ಮೇಲೆ ಇರಿಸುವಳು. ಇಲ್ಲಿ ಗುರಿ ಕಾರನು ಸಭೆ ಮೊದಲಿನಂತೆ ತಿಳಿಸಿ ‘ಸಲಿಗೆ ಇಡುವ ಕ್ರಮ ಮಾಡು ವನು. ಈಗ ವಧುವಿಗೆ ಸೋದರತ್ತೆಯು ಕಾಲುಂಗುರ ಇಡುವಳು. ಅವಳು ಮೂರು ಸಲ ವಧು ಮತ್ತು ‘ಮೂರ್ತದ ಬಾಲೆಗೆ ಸೇಸೆ ತಳಿದು, ಹರಸಿ ತುಳಸಿಯ ಇದಿರು ಕಾಲ್ದೀಪದಲ್ಲಿ ಹಚ್ಚಿಟ್ಟ ದೀಪಕ್ಕೆ ವಂದಿಸುವಳು. ಬಳಿಕ ವಧುವಿಗೆ ಕಾಲುಂಗುರ ಇಡುವಳು. ನಾಲ್ಕು ಜನ ಮುತ್ತೈದೆಯರು ಸೇಸೆ ಹಾಕಿದ ಬಳಿಕ ಉಳಿದವರೆಲ್ಲ ಸೇಸೆ ಹಾಕು ವರು. ಮದುಮಗಳನ್ನು ಸೋದರತ್ತೆಯು ಪುನಃ ಸೇಸೆ ಹಾಕಿ ‘ಸಲಿಗೆ ತೆಗೆಯುವಳು. ಗುರಿಕಾರ ಮೊದಲಿನಂತೆ ಸಭೆಗೆ ತಿಳಿಸಿ ಅವರನ್ನು ಮುಕ್ಕಲಿಗೆಯಿಂದ ಎಬ್ಬಿಸುವರು.
ಟಿಪ್ಪಣಿ : ಈಗ ಮನೆಯವರೆಲ್ಲರೂ ಸೇಸೆ ಹಾಕುವ ಪದ್ಧತಿ ಪ್ರಾರಂ ಭವಾಗಿದೆ. ಸೇಸೆಯ ಅಕ್ಕಿಯನ್ನು ಚಪ್ಪರದಲ್ಲಿರುವ ಕೊಡಿಗೆ ತಾಗು ವಂತೆ ಹಾರಿಸುವುದು ತುಳುವರ ಕ್ರಮ. ಹೀಗೆ ಹಾರಿಸಿದ ಸೇಸೆಯ ಅಕ್ಕಿ ಕೊಡಿಗೆ ತಾಗಿ ಮದುಮಕ್ಕಳ ತಲೆಗೆ ಬೀಳುವಂತಾಗಬೇಕು. ಹಿಂದಿನ ಕಾಲದಲ್ಲಿ ಸೇಸೆಗೆ ಕನಿಷ್ಠ ಒಂದೆರಡು ಕಳಸಿಗೆ ಕುಚ್ಚಿಗೆ ಅಕ್ಕಿ ಉಪಯೋ ಗವಾಗುತ್ತಿತ್ತೆನ್ನುವುದು ಹಿರಿಯರ ಅನುಭವದ ಮಾತು.
ಮೊಗವೀರ ಸಮಾಜದ ಆಚರಣೆಯಂತೆ ಸೇಸೆ ಆದ ಬಳಿಕ ಊರಿನ ಗುರಿಕಾರ‍್ತಿಯನ್ನು ಮುಂದಿರಿಸಿ ನಾಲ್ಕು ಜನ ಮುತ್ತೈದೆಯರು ‘ಮಣ್ಣಿನ ಮುಗಯಿಯಲ್ಲಿ ನೀರು ತಂದು ವಧುವಿಗೆ ಎರೆಯುವರು. ಇದರ ಬಳಿಕ ಅಗತ್ಯವನ್ನು ಹೊಂದಿಕೊಂಡು ‘ನಂಬುಗೆ ಮಾಡುವರು. ಇತ್ತೀ ಚೆಗೆ ಮುಹೂರ್ತ ಸೇಸೆ ಮತ್ತು ನಂಬುಗೆ (ಸಂಕಲ್ಪ - ಪ್ರಾರ್ಥನೆ) ಮದುವೆಯ ದಿನವೇ ನಡೆಯುವುದು. ನಿಶ್ಚಯದ ಕ್ರಮ ಕ್ರಮೇಣ ಕಡಿಮೆಯಾಗುತ್ತಾ ಬಂದಿದೆ. ಒಂದು ವೇಳೆ ನಿಶ್ಚಯದ ದಿನ ನಂಬುಗೆ ನಡೆದಿದ್ದರೂ, ಮದುವೆಯ ದಿನ ಪ್ರಾತಃಕಾಲ ಪುನಃ ನಂಬುಗೆ, ಸಂಕಲ್ಪ ಪ್ರಾರ್ಥನೆ ಮಾಡಿ ಬಳಿಕ ಮುಹೂರ್ತ ನಡೆಸುವುದು ಈಗಿನ ದಿನಗ ಳಲ್ಲಿ ಸರ್ವೇಸಾಮಾನ್ಯ.
ಊರವರು ಅದಾಗಲೇ ದಿಬ್ಬಣ ಹೊರಡಲು ಬಂದು ಸೇರುವರು. ಮದುಮಗಳಿಗೆ ‘ಮೆತ್ತೆಗಂಜಿ ಊಟ ಬಡಿಸುವರು. ಮದುವೆ ಮನೆ ಯಲ್ಲಿ ಮೊದಲ ದಿನ ‘ದೊಂಪದ ಉನಸ್ ಆದಂತೆ ಈಗ ಸೇರಿದ ಎಲ್ಲ ಜನರಿಗೆ ‘ಮೂರ್ತದ ವನಸ್ ನಡೆಯುವುದು. ಮಧ್ಯೆ ಮಧ್ಯೆ ವಾದ್ಯದವರು ವಾಲಗ ಊದುತ್ತಿದ್ದರೆ, ಗರ್ನಾಲ್ ಸಿಡಿಸಿ ದಿಬ್ಬಣ ಹೊರಡಲು ಸಿದ್ಧವಾಗುತ್ತಿರುವುದನ್ನು ಊರವರಿಗೆ ತಿಳಿಸುತ್ತಿದ್ದರು.
ಮದ್ಮಲ್ ಐತ (ಮದುಮಗಳನ್ನು ಸಿಂಗರಿಸುವುದು)
ಈಗ ಮದುಮಗಳನ್ನು ಪೂರ್ಣ ಪ್ರಮಾಣದಲ್ಲಿ ಶೃಂಗರಿಸುವ ಕೆಲಸ ನಡೆಯುವುದು. ಊರ ಹೆಂಗೆಳೆಯರು ಸುತ್ತ ಸೇರಿ ಲವಲವಿಕೆ ಯಿಂದ ಕೆಲಸ ಕಾರ್ಯಗಳಲ್ಲಿ ಸಹಕರಿಸುವವರು ಮಲ್ಲಿಗೆ ಹೂವಿನ ತವರೂರಾದ ತುಳುನಾಡಿನಲ್ಲಿ ಎಲ್ಲ ಮಂಗಳ ಕಾರ್ಯಗಳಿಗೂ ಮಲ್ಲಿಗೆ ಮತ್ತು ಪಿಂಗಾರ ಅವಶ್ಯವಾಗಿ ಬೇಕು. ತುಳು ಜನರು ಹೋದೆಡೆಯಲ್ಲಿ ಮಲ್ಲಿಗೆ ರವಾನಿಸಲ್ಪಡುತ್ತದೆ. ಮುಂಬಯಿಯಲ್ಲಿ ನಮ್ಮ ಜನರು ಎಲ್ಲ ಸಮಾರಂಭಗಳಲ್ಲಿ ಮಲ್ಲಿಗೆಯ ಕಂಪನ್ನು ಸವಿಯುವುದನ್ನು ನೆನಪಿಸಬ ಹುದು.
ಮದುಮಗಳಿಗೆ ದಿಬ್ಬನ ಹೊರಡುವ ಸಮಯ ‘ಮೂರ್ತದ ಸೀರೆ ಯನ್ನು ಬದಲಿಸಿ ಮತ್ತೊಂದು ಹೊಸ ಸೀರೆ ಉಡಿಸುವರು. ಪಟ್ಟೆ ಸೀರೆ, ಪಚ್ಚೆ ರವಿಕೆ, ತಲೆ ತಂಬು ಮಲ್ಲಿಗೆಯ ‘ಪೂ ಜಲ್ಲಿ ಐತ ಮಾಡು ವರು. ಮಧ್ಯಕಾಲದಲ್ಲಿ ತುಳುವರಲ್ಲಿ ಬಂಗಾರದ ಒಡವೆಗಳು ಬಳಕೆ ಯಾದರೆ ಬಳಿಕ ವಿಶಿಷ್ಟ ತರದ ಕಲಾಕುಸುರಿಯಿಂದ ತಯಾರಿಸಿದ ಆಭ ರಣಗಳನ್ನು ಉಪಯೋಗಿಸಲು ಪ್ರಾರಂಭಿಸಿದರು.
ಪದ್ದೆಯಿ ಬಂಗಾರ್ (ಚಿನ್ನದ ಒಡವೆಗಳು)
ಒಡ್ಯಾಣ : ಚಿನ್ನದ ಸೋಂಟ ಪಟ್ಟಿ (ಡಾಬು)
ಗೆಜ್ಜೆದಿಕ್/ಗೆಜ್ಜೆತ್ತಿ/ತಿಕ್ : ನೆಕ್ಲೆಸ್ ತರ ಕುತ್ತಿಗೆಗೆ ಧರಿಸುವ ಮೂರು ಎಳೆಗ ಳಿರುವ ಚಿನ್ನದ ಒಡವೆ (ಮಧ್ಯೆ ಮುತ್ತುಗಳನ್ನು ಪೋಣಿಸಿರುವುದು)
ಬೊಟ್ಟು ಮಲಕ್ : ಗೆಜ್ಜೆದಿಕ್ ಮೇಲ್ಭಾಗದಲ್ಲಿ ಕುತ್ತಿಗೆಗೆ ಅಂಟಿಕೊಳ್ಳು ವಂತೆ ಹಾಕುವ ಬಂಗಾರದ ಆಭರಣ.
ಮಿಸೆರ್ ಸರ : ಚಿನ್ನದ ನಾಲ್ಕಾಣೆ ಪಾವಲಿಯಂತೆ ಚಕ್ರಗಳನ್ನು ಪೋಣಿಸಿ ಮಾಡುವ ಚಕ್ರ ಸರ.
ಸಕ್ಕಡ್ ಸರ : ಎರಡು, ಮೂರು, ಐದು ಎಳೆಗಳ ಉದ್ದವಾದ ಚಿನ್ನದ ಸರ. ಈ ಸರವನ್ನು ಕೆಲವು ಸಮಾಜಗಳಲ್ಲಿ ಊರ ಗುರಿಕಾರ ಬಂದು ದೈವ ಪ್ರಾರ್ಥನೆ ಮಾಡಿ ಮದುಮಗಳ ಕೊರಳಿಗೆ ಹಾಕುವರು.
ಕಾಲ್ಕಡಗ : ಕಾಲಿಗೆ ಧರಿಸುವ ಬೆಳ್ಳಿಯ ಆಭರಣ.
ನೆತ್ತಿ ಬೈತಲೆ : ನೆತ್ತಿಯಿಂದ ತಲೆಯ ಹಿಂಭಾಗದ ತನಕ ಚೈನಿನ ಎಳೆಯಂ ತಿರುವ ಚಿನ್ನದ ಆಭರಣ.
ಜಡೆಕೊಂಡೆ : ಬಂಗಾರದ ಹೂವಿನ ಗೊಂಡೆಯಂತ ಕೂದಲಿನ ಜತೆಗೆ ಸಾಲಾಗಿ ಪೋಣಿಸುವ ಒಡವೆ.
ಕೊಪ್ಪು, ಕೊಪ್ಪು ಸರಪಳಿ : ಕಿವಿಗೆ ಧರಿಸುವ ಚಿನ್ನದ ವಿನ್ಯಾಸಭರಿತ ‘ಮುಗುಳು ಕಿವಿಯ ಮೇಲ್ಭಾಗಕ್ಕೆ ಕೊಪ್ಪು ಧರಿಸಿ ಅದಕ್ಕೆ ಜೋಡಿಸಿದ ಕೊಪ್ಪು ಸರಪಳಿಯನ್ನು ಕೂದಲಿಗೆ ಕಟ್ಟುವರು.
ಲವಂಗದ ಕಡ್ಡಿ : ಚಿನ್ನದ ಸಂಜೆಮಲ್ಲಿಗೆ ಮೊಗ್ಗೆಯಂತಿರುವ ಉರುಟಾದ ಲವಂಗದ ಕಡ್ಡಿಯನ್ನು ಕಿವಿಯ ಮೇಲ್ಭಾಗದ ತೂಗಿಗೆ ಕೊಪ್ಪಿನ ಕೆಳಗೆ ಜೋಡಿ ಸುಸವರು.
ಎಸಳು ಬುಗುಡಿ : ರೆಂಜೆ ಹೂವಿನ ತರದ ಆಭರಣ. ಮಧ್ಯೆ ಕೆಂಪು ಕಲ್ಲು ಪೋಣಿಸಿದ್ದು ಇದನ್ನು ಕೊಪ್ಪಿನ ಕೆಳಗೆ ಧರಿಸುವರು.
ಎಣ್ಣೆ ಓಲೆ : ಮುತ್ತು ಪೋಣಿಸಿದ ಚಿನ್ನದ ಕರ್ಣಾಭರಣ.
ಕೈರಟ್ಟೆಗೆ ಒಂಕೆ : ತೋಳಿಗೆ ಕಟ್ಟುವ ಚಿನ್ನದ ಆಭರಣ.
ಕರಿಯ ಬಳೆಗಳು : ಮಣ್ಣಿನ ಕರಿ ಬಳೆಗಳು ಮಾಂಗಲ್ಯ ಸೂಚಕ.
ಮುತ್ತಿನ ಬಳೆಗಳು : ಚಿನ್ನದ ಬಳೆಗಳಿಗೆ ಸಣ್ಣ ಮುತ್ತುಗಳನ್ನು ಪೋಣಿಸಿರುವರು.
ಮುತ್ತಿನ ಮೂಗುತಿ : ಕೆಂಪು ಕಲ್ಲು ಮತ್ತು ಮುತ್ತು ಜೋಡಿಸಿದ ನತ್ತು.

‘ಗಂಜಿಯೊಳಗಣ ಹಲ್ಲಿ’ ಅವೈಜ್ಞಾನಿಕ ವಿವರಣೆ

Posted by JAYAKIRANA Kirana on | 0 comments | Leave a comment...

ಗಾಂಧಿ ಬಂದ ವಿವಾದ
ಸದಾಶಿವ ಇಡ್ಯ
ಗಾಂಧಿ ಬಂದದ ಕೃತಿಯ ಒಳಗಣ ೫೪ನೇ ಪುಟದಲ್ಲಿಯ ವ್ಯಾಖ್ಯಾನ ಓದಿ. ಇದಲ್ಲದೆ ಇಡೀ ಪಠ್ಯ ಪುಸ್ತಕದಲ್ಲಿ ಇಂಥ ಅಶ್ಲೀಲ ಅವಾಚ್ಯ ಶಬ್ದಗಳು ತುಂಬಿರುವುದನ್ನು ತಾವು ಎಷ್ಟು ತಿಳಿದಿದ್ದೀರಾ ಗೊತ್ತಿಲ್ಲ. ಕೃತಿಕರ್ತರ ಕೃತಿಯಲ್ಲಿ ‘ನಿನ್ನಲ್ಲಿ ಮಾತನಾಡು ವುದಕ್ಕಿಂತ ಬಟ್ಟೆ ಎತ್ತಿ ಅದರಲ್ಲಿ ಮಾತನಾಡಿದರೆ ಲೇಸು’ ಎಂದು ಬರೆದಿದ್ದಾರೆ. ಬಹುಶಃ ಅದು ನಿಮಗೇ ಆಗಬಹುದೇನೋ?
ಕನ್ನಡ ಸಾಹಿತ್ಯರಂಗ ಅದು ಎಂದೂ ಬರಡಲ್ಲ. ಕನ್ನಡ ಸಾಹಿತ್ಯ ಪ್ರಪಂಚ ಅಮೋಘವಾದುದು, ವಿಶಾಲವಾದುದು. ನಮ್ಮ ಹಿಂದಿನ ಪೂರ್ವಜರು ಕನ್ನಡ ಭಾಷೆಯನ್ನು ಕಂಡು ಹಿಡಿದು ಅದಕ್ಕೆ ಸುಂದರವಾದ ಲಿಪಿಯನ್ನು ತಯಾರಿಸಿ ಬಳಿಕ ಸುಂದರ ಸಾಹಿತ್ಯ, ಕಾವ್ಯ, ವ್ಯಾಕರಣ, ಛಂದಸ್ಸು, ಅಲಂಕಾರ (ಉತ್ಪ್ರೇ ಕ್ಷಾಲಂಕಾರ, ನೀಚೋಪಮಾಲಂಕಾರ) ತತ್ಸಮ, ತದ್ಭವ, ಸಂಧಿ, ಸಮಾಸ ಗಳು, ಮಾತ್ರಾಗಣ ಪ್ರಯೋಗಗಳು ಇಂಥವುಗಳನ್ನು ಸಂಶೋಧಿಸಿ ಕನ್ನಡ ಸಾಹಿತ್ಯವು ಇತರೇ ಭಾಷಾ ಸಾಹಿತ್ಯದಲ್ಲಿ ಅಗ್ರಮಾನ್ಯವಾಗಿರುವುದು ತಿಳಿಯಿರಿ. ಕುಮಾರ ವ್ಯಾಸನ ಷಟ್ಪದಿ, ರಾಘವಾಂಕನ ಚತುಷ್ಪದಿ, ಹರಿಹರನ ರಗಳೆ ಕಾವ್ಯ ಗಳು ಅದ್ವಿತೀಯ. ವಚನ ಸಾಹಿತ್ಯದಲ್ಲಿ ಬಸವಣ್ಣನ ವಚನಗಳು, ಸರ್ವಜ್ಞನ ವಚನಗಳು, ತಿಂಥಿಣಿ ಮೌನೇಶ್ವರ ಸ್ವಾಮೀಜಿಯವರ ವಚನಗಳು ಹಾಗೆಯೇ ಜಾನಪದ ಸಾಹಿತ್ಯಗಳು, ಪುರಂದರದಾಸರ ಕನಕದಾಸರಂತಹ ಕೀರ್ತನಕಾ ರರ ಕೀರ್ತನೆಗಳು ಅಲ್ಲದೆ ಮಂಕುತಿಮ್ಮನ ಕಗ್ಗ, ರನ್ನನ ಗಧಾಯುದ್ಧ, ಜನ್ನನ ಸಾಹಿತ್ಯ ಕೃತಿಗಳು ಜಗದ್ವಿಖ್ಯಾತ.
ಈ ಮಹಾಜ್ಞಾನಿಗಳ ಬಳಿಕ ಬೇರೆ ಬೇರೆ ಕನ್ನಡ ಸಾಹಿತ್ಯರಂಗದಲ್ಲಿ ನವ ಸಂಶೋಧನೆಗಳೇ ಆಗಿಲ್ಲ ಎಂದರೆ ತಪ್ಪಾಗಲಾರದು. ಇನ್ನು ಮುಂದೆಯೂ ಕನ್ನಡ ಕಾವ್ಯ, ಸಾಹಿತ್ಯ ರಂಗಗಳ ಹೊಸ ಸಂಶೋಧನೆಗಳು ಮೂಡಿ ಬರುವ ಅವಶ್ಯ ಇದ್ದೇ ಇದೆ. ಬದಲು ಇಂಥ ಕೃತಿಯಿಂದ ಯಾವ ಸಂಶೋಧನಾತ್ಮಕ ಕೆಲಸಗಳಿಗೂ ಈ ಗಾಂಧಿಬಂದ ಕೃತಿ ಬಳಕೆಯಾಗಲು ಸಾಧ್ಯವಿಲ್ಲ. ಈ ಕೃತಿ ಯಿಂದ ವಿದ್ಯಾರ್ಥಿಗಳ ಮೇಲೆ ಓದುಗರ ಮೇಲೆ ದುಷ್ಪರಿಣಾಮಗಳು ಜಾಸ್ತಿ ಯಾದೀತು. ಈ ಬಂಡು ಸಾಹಿತ್ಯಗಳಿಂದ ವಿದ್ಯಾರ್ಥಿಗಳ ಜೀವನ ಬರಡಾ ದೀತು. ಸಾಹಿತ್ಯ ಕೃತಿಗಳು ಹೇಗಿರಬೇಕೆಂದು ಈ ಹಿಂದೆ ಶ್ಲೋಕ ಸಹಿತವಾಗಿ ವಿವರಿಸಿದ್ದೇವೆ. ಆದುದರಿಂದ ಇನ್ನೊಬ್ಬರದ್ದು ಅಹಂಕಾರ ಎನ್ನುವುದು ಸರಿ ಯಲ್ಲ. ಬೇರೆ ಬೇರೆ ಸಮಾಜಗಳನ್ನು ಇಚ್ಚಾನುವರ್ತಿಯಾಗಿ ಬರೆಯುವುದು ಎಷ್ಟಕ್ಕೂ ಸರಿಯಲ್ಲ. ಈ ಕೃತಿಯಿಂದ ಎಲ್ಲಾ ಸಮಾಜದ ಜನರಿಗೆ ನೋವಾ ಗಿದೆ ಎಂಬುದನ್ನು ಮರೆಯಬೇಡಿ. ಪರಿಪೂರ್ಣ ಜ್ಞಾನ ಇದ್ದವರು ಇನ್ನೊಬ್ಬ ರನ್ನು ದೂಷಿಸುವುದಿಲ್ಲ. ಇನ್ನೊಬ್ಬರನ್ನು ಹಳಿಯುವ ಸ್ವಭಾವವಿರುವುದಿಲ್ಲ. ಅದಕ್ಕೆ ಬಸವಣ್ಣ ಸರ್ವಜ್ಞರ ವಚನಗಳನ್ನು ಓದಿ ತಿಳಿಯಿರಿ. ಕನ್ನಡ ಸಾಹಿತ್ಯ ಪ್ರಪಂಚವು ‘ಧ್ರುವ ತಾರೆಯಂತೆ’
ಸಾಹಿತ್ಯ ಅದು ಹೇಗಿರಬೇಕೆಂದು ಹಿಂದೆ ವಿವರಿಸಿದ್ದೇವೆ. ಯೋಗ್ಯ ಸಾಹಿ ತ್ಯಗಳು ಮಾತ್ರ ಸಮಾಜದ ಪ್ರತಿಬಿಂಬವಾಗಬೇಕು. ಇಡೀ ಕೃತಿಯಲ್ಲಿ ‘ಯೋಗ್ಯ ಶಬ್ದ’ ಬಳಸಬಹುದಾದರೂ ಹೆಚ್ಚಿನ ಸಮಾಜವನ್ನು ವಿನಾ ಕಾರಣ ನಿಂದಿಸಿ ಅವಾಚ್ಯ ಶಬ್ಧ, ಅಶ್ಲೀಲ ವಾಕ್ಯಗಳನ್ನು ಬಳಸಿ ಬರೆದು ಹಾಗೂ ಬಂಡು ಶಬ್ದ ಗಳನ್ನು ಬಳಸಿರುವುದು ಸಾಹಿತ್ಯ ಕೃತಿಗೆ ಯೋಗ್ಯವಲ್ಲ. ಮರ್ಯಾದಸ್ಥ ಸಮಾಜ, ಸಂಪ್ರದಾಯವೇ ದೇವರೆಂದು ಕೈಮುಗಿಯುತ್ತಿದ್ದ ಬ್ರಾಹ್ಮಣ ಮನೆತನದ ದ್ರೌಪ ದಿಯು ಅನ್ಯಕೋಮಿನ ಯುವಕನೊಂದಿಗೆ ಓಡಿ ಹೋದಳು. ಜಗತ್ತಿಗೆ ಉಪ ಯೋಗವಾಗುವ ಕಾರ್ಯಗಳನ್ನು ಮಾಡಿರುವ, ಮಾಡುವ ವಿಶ್ವಕರ್ಮ ಬ್ರಾಹ್ಮಣ ಸಮುದಾಯವನ್ನು ವಿನಾ ಕಾರಣ ಗಾಂಧಿ ಬಂದ ಎನ್ನುವ ಕಾದಂಬರಿಗೆ ಅವಶ್ಯವೇ ಇಲ್ಲದೆ ಇದ್ದರೂ ಸುಮ್ಮನೆ ಅವಹೇಳನ ಕಾರಿಯಾಗಿ ಬರೆದಿರುವುದು. ಹೆಬ್ಬಾರರ ಬಗ್ಗೆ ಹೀನಾ ಯವಾಗಿ ಬರೆದಿರುವುದು ನಾಯರ್ ಹೆಂಗಸಿನ ಬಗ್ಗೆ ಬರೆದಿರುವುದು, ಬಿಲ್ಲವರನ್ನು ನಿಂದಿಸಿರುವುದು ಹಾಗೂ ಎಲ್ಲಾ ಸಮಾಜ ವನ್ನು ಈ ಕಾದಂಬರಿಯಲ್ಲಿ ಕೃತಿಯಾಗಿ ಮುಡಿಸಿ ಹೆಸರು ಜಾತಿ ಹೇಳಿ ನಿಂದಿಸಿ ರುವುದು ಇನ್ನು ನೂರು ವರ್ಷ ಕಳೆದರೂ ಇದೇ ಮನೋಪ್ರವೃತ್ತಿಯ ಜನರು ಇದ್ದುಕೊಂಡು ಅವರು ಈ ಕಾದಂಬರಿಯಲ್ಲಿ ಎಲ್ಲಾ ಸಮಾಜವನ್ನು ಗಾಂಧಿ ಬಂದ ದಲ್ಲಿ ನಿಂದಿಸಿ ಬರೆದಿರುವ ಉದಾಹರಣೆಗಳನ್ನು ಎತ್ತಿ ಹಿಡಿದು ಇಂತಹ ಸಮಾಜ ವನ್ನು ಶತ ಶತಮಾನಗಳ ತನಕ ಹೀನಾಯವಾಗಿ ನಿಂದಿಸಿ ಅವಾಚ್ಯ ಆಶ್ಲೀಲ ಬಂಡು ಶಬ್ದಗಳನ್ನು ಬಳಸುವ ಇನ್ನೊಬ್ಬರ ಕಾದಂಬರಿ, ಲೇಖನಗಳಲ್ಲಿ ಪುನಃ ಬರುವಂತೆ ಮಾಡುವ ಹಠ ಬೇಡ. ಇದಕ್ಕೆ ಇಲ್ಲಿಯೇ ಪೂರ್ಣ ವಿರಾಮವಾಗಲಿ ಎಂಬುದು ನಿಂದನೆಗೊಳಗಾದವರ ಮನಸ್ಥಿತಿ. ಇದನ್ನು ತಿಳಿಯಿರಿ. ನಿಂದಿಸಲ್ಪಟ್ಟ ಸಮಾಜಗಳು ಕೃತಿಕರ್ತರ ಅಲ್ಪಾವಧಿ ಪೊಳ್ಳು ಅನುಭವದ ಹಿಂದೆ ಈ ಸಮಾಜ ಗಳು ರಾಜರ ಕಾಲದಲ್ಲಿ ಆ ಮೇಲಿನ, ಈಗಿನ ವರ್ತಮಾನ ಕಾಲಸ್ಥಿತಿಯಲ್ಲಿ ಹೇಗಿ ದ್ದರು, ಹೇಗಿದ್ದಾರೆ ಎಂದು ಅರಿಯದೆ ವ್ಯಾಖ್ಯಾನಿಸಿದ್ದಾರೆ.
ಸಾಮಾಜಿಕ ಕಟ್ಟುಪಾಡುಗಳು, ರೀತಿ, ನೀತಿಗಳು ಆಗಾಗ ಕಾಲಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಖಂಡಿಗೆಯವರೇ ‘ಇದಮಿತ್ತಂ’ ಎನ್ನುವುದು ಯಾವತ್ತೂ ಸರಿ ಯಲ್ಲ. ನಡೆಯದ್ದನ್ನು ನಡೆದಿದೆ ಎನ್ನುವುದೂ ಸರಿಯಲ್ಲ! ಈ ರೀತಿ ವ್ಯಾಖ್ಯಾನ ಮಾಡುವುದು ಸೃಜನ ಶೀಲತೆಯೇ?
ಇನ್ನೊಂದು ಸರ್‌ನೇಮ್ ಹೆಸರಿನ ಸಹಿತ ಬರುತ್ತದೆ ಎಂದಿದ್ದೀರಿ. ಸರ್‌ನೇಮ್ ಬರುವ ಅವಶ್ಯ ಇದ್ದಲ್ಲಿ ಮಾತ್ರ ಬಳಸುವುದು, ಬರುವುದು. ಸಾಹಿತ್ಯ ರಂಗಕ್ಕೆ ಸರ್‌ನೇಮ್ ಎಂದರೆ ಕನ್ನಡ ಅರ್ಥ ಗೊತ್ತಿದೆಯೇ? ಇಂಗ್ಲಿಷ್ ಕನ್ನಡ ಅರ್ಥ ಕೋಶ ನೋಡಿ. ಅದನ್ನು ನೋಡಿಲ್ಲ ನೀವು. ಸರ್‌ನೇಮ್ ಎಂದರೆ ಅಡ್ಡ ಹೆಸರು. ಅಡ್ಡ ಹೆಸರಿನಲ್ಲಿ ಯಾರನ್ನೂ ಕರೆಯುವ ಅಗತ್ಯ ಇಲ್ಲ. ಯಾರಿಗೂ ಇಲ್ಲ. ಶೋಡಷ ಸಂಸ್ಕಾರ ಪೂರ್ವಕ ನಾಮಕರಣ ಒಂದು ಕರ್ಮಾಂಗ. ಅದರಲ್ಲಿ ಮಗುವಿನ ತಂದೆ, ತಾಯಿ, ಪುರೋಹಿತರು, ಬಂಧುಗಳು ಸೇರಿ ನಕ್ಷತ್ರಾನುಕರಣಪೂರ್ವಕ ವಾಗಿ ನಾಮಕರಣ ಮಾಡುವ ಸಂಪ್ರದಾಯದಲ್ಲಿ ಅಡ್ಡ ಹೆಸರಿಗೆ ಅವಕಾಶ ಇಲ್ಲವಾ ಗಿರುವಾಗ ಹೆಸರಿನ ಜತೆ ಸ್ಥಾನಮಾನಕ್ಕೆ ಸೇರಿಸುವ ಅವಶ್ಯ ಏನಿದೆ. ಅದು ನೀವೇ ಸೇರಿಸಿಕೊಳ್ಳಿ. ನಾವು ಯಾರನ್ನೂ ಅಡ್ಡ ಹೆಸರಿನಿಂದ ಕರೆಯುವುದಿಲ್ಲ. ತಂದೆ ತಾಯಿ ಇಟ್ಟ ಹೆಸರಿನಲ್ಲಿ ಕರೆಯುತ್ತೇವೆ. ಅದನ್ನು ಸಂಸ್ಕೃತಿ ಎಂದು ಹೇಳುತ್ತೇವೆ. ನಿಮ್ಮ ಹೆಸರು ಯಾವುದು?, ಸರ್‌ನೇಮ್ (ಅಡ್ಡ ಹೆಸರು) ಏನಿರಬಹುದು?
ಟಿಎಎನ್ ಖಂಡಿಗೆಯವರೇ, ಜಾತಿ ನಿಂದನೆ ಮಾಡುವುದು ಸಂವಿಧಾನಾತ್ಮಕ ವಾಗಿ ತಪ್ಪು. ಶಿಕ್ಷಾರ್ಹ ಎನ್ನುವುದು ತಿಳಿಯಬೇಕಾದದ್ದೇ. ಸೃಜನಶೀಲತೆ ಎಂದು ಜಾತಿ ನಿಂದನೆ ಮಾಡುವುದು ಸರಿಯಲ್ಲ. ಇನ್ನೊಂದೆಡೆ ಸಾಹಿತ್ಯ ಸೃಜನ ಶೀಲತೆ ಯೆಂದು ಪೂತನಿಯಾಗಬೇಡಿ. ಅವಳ ಸ್ತನದ ಹಾಲು ಬೇರೆಯವರಿಗೆ ಉಣಿಸಲು ಹೋಗಬೇಡಿ. ಉಣಿಸಲು ಹೋದ ಪೂತನಿಯ ಅವಸಾನವಾಗಿರುವುದು ಗಮ ನಾರ್ಹ. ನಿಜವಾಗಿ ಕಾದಂಬರಿಕಾರರಿಗೆ ಉತ್ತಮ ಜ್ಞಾನವಿರಬಹುದು. ಅವರಿಗೆ ಸರಿ ಯಾದ ಜ್ಞಾನಮಾರ್ಗದಲ್ಲಿ ವಿವರಿಸಿದರೆ ಅವರಿಂದ ದೋಷಮುಕ್ತ ನವ್ಯ ಸಾಹಿತ್ಯ ಕಾದಂಬರಿಗಳು ಹೊರಬರಬಹುದು. ಅವರನ್ನು ಸರಿಯಾದ ದಾರಿಯಲ್ಲಿ ಸಾಹಿತ್ಯ ರಚನೆಗೆ ಪ್ರಚೋದಿಸಿ. ಶ್ರೇಷ್ಠ ಗುಣಮಟ್ಟದ ಕಾದಂಬರಿಗಳು ಲೋಕಕಲ್ಯಾಣಾರ್ಥ ವಾಗಿ ಹೊರ ಬರುವಂತೆ ಮಾಡಿ. ಅದರಿಂದ ಜನಜಾಗೃತಿಯಾಗಿ ಎಲ್ಲಾ ಸಮಾಜ ಗಳು ಮಾನವತೆಯ, ಮೌಲ್ಯಾಧಾರಿತವಾಗಿ, ಎಲ್ಲ ಮತ ಧರ್ಮಗಳನ್ನು ಸಮಾನ ಮನಸ್ಸಿನಿಂದ ನೋಡಿ ರಾಜ್ಯದ, ದೇಶದ ಉನ್ನತಿಗಾಗಿ ಶ್ರಮಿಸುವಂತೆ ತಮ್ಮ ಪ್ರಯ ತ್ನವಾಗಲಿ.

ಸೆಕ್ಸ್ ಬಗ್ಗೆ ವಿಪರೀತ ಯೋಚನೆ ಸರಿಯಲ್ಲ

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು:ಬೇಡ
ಸಮಸ್ಯೆ: ನನ್ನ ವಯಸ್ಸು ೨೪. ಕೆಲಸ ಮಾಡುತ್ತಿದ್ದೇನೆ. ನಾನು ಏಳನೇ ತರಗತಿಯಲ್ಲಿದ್ದಾಗ ಸ್ನೇಹಿತನೊಬ್ಬ ನನಗೆ ಹಸ್ತಮೈಥುನ ಮಾಡುವುದನ್ನು ಕಲಿಸಿದ. ನನಗೆ ಮೊದಲು ಅದರ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಅವನು ನನಗೆ ಕೆಲವೊಂದು ಸೆಕ್ಸ್ ಪುಸ್ತಕಗ ಳನ್ನು ತೋರಿಸಿ ನನ್ನನ್ನು ಹಾಗೆ ಮಾಡುವಂತೆ ಹೇಳಿದ. ನಾನು ಆತ ಹೇಳಿದಂತೆ ಮನೆಯಲ್ಲಿ ಮಾಡಿ ನೋಡಿದೆ. ನನಗೆ ಇದರಿಂದ ತುಂಬಾ ಖುಷಿ ಸಿಕ್ಕಿತು. ಬಳಿಕ ನಾನು ಪ್ರತಿನಿತ್ಯ ಅದನ್ನು ಮಾಡಿ ಖುಷಿ ಪಡುತ್ತಿದ್ದೆ. ಆದರೆ ನನ್ನ ಸಮಸ್ಯೆಯೇನೆಂದರೆ ನನ್ನ ಜನ ನಾಂಗ ಎಲ್ಲರಂತೆ ಸಾಮಾನ್ಯವಾಗಿರದೆ ಎಡಗಡೆಗೆ ವಾಲಿದೆ ಮತ್ತು ತುಂಬಾ ದೊಡ್ಡದಿದೆ. ನನ್ನ ಗೆಳೆಯನೊಬ್ಬ ಇದನ್ನು ನೋಡಿ ನಿನ್ನದು ತುಂಬಾ ದೊಡ್ಡದಿದೆ, ಹೆಣ್ಣಿನ ಜೊತೆ ಸೆಕ್ಸ್ ಮಾಡುವಾಗ ಅವಳು ನಿನ್ನನ್ನು ಮಾಡಲು ಬಿಡುವುದಿಲ್ಲ ಎಂದಿದ್ದಾನೆ. ಇದನ್ನು ಕೇಳಿ ನನಗೆ ಬೇಸರವಾಗಿದೆ. ಇದಕ್ಕೆ ಹಸ್ತಮೈಥುನ ಕಾರಣವೆಂದು ನನಗೆ ಭಯ ವಾಗ ತೊಡಗಿದೆ. ಸಾಮಾನ್ಯವಾಗಿ ಹುಡುಗರ ಜನನಾಂಗ ಎಷ್ಟು ಉದ್ದವಿರಬೇಕು? ನನ್ನ ಮುಖದ ತುಂಬಾ ಮೊಡವೆಗಳು ಮೂಡಿವೆ. ನಾನು ಈಗ ಪ್ರತಿನಿತ್ಯ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ನನಗೆ ಸರಿಯಾದ ಸಲಹೆ ಕೊಡಿ.
ಸಲಹೆ: ಮೊಡವೆ ಎನ್ನುವುದು ಹದಿಹರೆಯದ ಹುಡುಗ-ಹುಡು ಗಿಯರ ಸಾಮಾನ್ಯ ಸಮಸ್ಯೆ. ನಿಮ್ಮದು ಮೊಡವೆ ಬೀಳುವ ವಯಸ್ಸು. ಇದಕ್ಕೆ ನೀವಿರುವ ಸ್ಥಳದಲ್ಲಿ ಹೆಚ್ಚು ಉಷ್ಣಾಂಶ ಇದ್ದರೆ, ಉಷ್ಣಾಂಶ ಭರಿತ ಆಹಾರ ಪದಾರ್ಥಗಳನ್ನು ಸೇವಿಸಿದರೆ ಮೊಡವೆ ಸಾಮಾನ್ಯವಾಗಿ ಬರುತ್ತದೆ. ಮುಖದ ಆರೋಗ್ಯದ ಕಡೆಗೆ ಗಮನ ಕೊಡಬೇಕಾದ್ದು ಅತ್ಯಗತ್ಯ. ಇನ್ನು ಹಸ್ತಮೈಥುನ ಸಾಮಾನ್ಯ ಲೈಂಗಿಕ ಚಟುವಟಿಕೆ. ಇದರಿಂದ ಯಾವುದೇ ತೊಂದರೆಯಿಲ್ಲ. ನೀವು ನಿಮ್ಮ ಜನನಾಂಗದ ಗಾತ್ರದ ಬಗ್ಗೆ ಚಿಂತೆ ಪಡುವುದನ್ನು ಬಿಟ್ಟುಬಿಡಿ. ಜನನಾಂಗ ಸಣ್ಣದೇ ಇರಲಿ, ದೊಡ್ಡದೇ ಇರಲಿ. ಇಲ್ಲಿ ಗಂಡು-ಹೆಣ್ಣಿನ ಮಿಲನಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಲೈಂಗಿಕ ಕ್ರಿಯೆಯ ವೇಳೆ ಹೆಣ್ಣು ಸಂಪೂರ್ಣವಾಗಿ ತಯಾ ರಾದರೆ ಮಿಲನದ ವೇಳೆ ನೋವು, ಆತಂಕ ಪಡುವ ಸಮಸ್ಯೆ ಇರುವುದಿಲ್ಲ. ನೀವು ಸುಮ್ಮನೆ ಯಾರೋ ಹೇಳಿದ ಮಾತನ್ನು ಕೇಳದಿರಿ. ಜನನಾಂಗದ ಗಾತ್ರ ಎಷ್ಟೇ ಇದ್ದರೂ ಲೈಂಗಿಕ ಕ್ರಿಯೆ ಯಲ್ಲಿ ತೊಡಗಲು ಯಾವುದೇ ಅಡಚಣೆಯಿಲ್ಲ. ಅದೇ ರೀತಿ ಜನನಾಂಗ ಎಲ್ಲರಲ್ಲೂ ಇಂತಿಷ್ಟೇ ಗಾತ್ರವನ್ನು ಹೊಂದಿರುತ್ತದೆ ಎನ್ನಲಾಗದು.
ಕೆಲವರಲ್ಲಿ ಕೆಲವು ವಿಧ ಇರಬಹುದು. ಇಲ್ಲಿ ಸುಖ ಕೊಡುವ ಮತ್ತು ಪಡೆಯುವ ವಿಧಾನ ತಿಳಿದಿದ್ದರೆ ಸಾಕು. ಕೆಲವರಲ್ಲಿ ಜನ ನಾಂಗ ಎಡಭಾಗಕ್ಕೆ ವಾಲಿರುವುದೂ ಇದೆ. ಇನ್ನು ದಿನಕ್ಕೆ ಒಂದು ಬಾರಿ ಹಸ್ತಮೈಥುನ ಮಾಡುವುದು ಸರಿಯಲ್ಲ. ಇದರಿಂದ ನಿಮ್ಮ ಗಮನವೆಲ್ಲಾ ಆ ಕಡೆಯೇ ಹೋಗಿ ನೀವು ನಿಮ್ಮ ಸಾಧನೆಯಲ್ಲಿ ಹಿಂದಕ್ಕೆ ಬೀಳುವ ಸಾಧ್ಯತೆಯಿದೆ. ವಾರಕ್ಕೆ ಒಂದೆರಡು ಬಾರಿ ಅದೂ ಲೈಂಗಿಕ ಆಸಕ್ತಿ ಹೆಚ್ಚಾದರೆ ಮಾತ್ರ ಹಸ್ತಮೈಥುನ ಮಾಡಿ ಕೊಳ್ಳಿ. ಈ ಬಗ್ಗೆ ಮಾಡುತ್ತಿರುವುದು ತಪ್ಪು, ಸರಿಯಲ್ಲ ಎಂದು ಕೊರಗುತ್ತಾ ಕುಳಿತುಕೊಳ್ಳದಿರಿ.
ಇದರಿಂದ ನಿಮ್ಮ ಮೇಲೆ ನಿಮಗೆ ಕೀಳರಿಮೆ ಬೆಳೆಯಬ ಹುದು. ಸಾಧ್ಯವಾದಷ್ಟು ಒಳ್ಳೆಯ ಗೆಳೆಯರ ಸಹವಾಸ, ಒಡ ನಾಟ ಇಟ್ಟುಕೊಳ್ಳಿ. ಇದರಿಂದ ನಿಮ್ಮ ಅಭಿರುಚಿ, ಆಸಕ್ತಿ ಬದಲಾ ಗುತ್ತದೆ. ಅದನ್ನು ಬಿಟ್ಟು ದಿನದ ಹೆಚ್ಚಿನ ಅವಧಿಯಲ್ಲಿ ಆ ಬಗ್ಗೆಯೇ ಚಿಂತೆ ಮಾಡುತ್ತಿದ್ದರೆ ನೀವು ಉಳಿದೆಲ್ಲಾ ಕೆಲಸಗಳಲ್ಲಿನ ಆಸಕ್ತಿ ಕಳೆದುಕೊಳ್ಳಬಹುದು. ಆಸಕ್ತಿ ಹೆಚ್ಚು ಎಂದು ಗುರುತು-ಪರಿಚ ಯವಿಲ್ಲದ ಹೆಣ್ಣುಮಕ್ಕಳ ಜೊತೆ ಸಂಗ ಬೆಳೆಸದಿರಿ.

11-4-2012

Posted by JAYAKIRANA Kirana on | 0 comments | Leave a comment...

ಮೇಷ : ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ.
ವೃಷಭ : ವ್ಯಾಪಾರದಲ್ಲಿ ಲಾಭ ಕಡಿಮೆ ಇರುತ್ತದೆ.
ಮಿಥುನ : ಭೂಮಿ, ವಾಹನ ಖರೀದಿಸುವ ಯೋಗ ಇದೆ.
ಕರ್ಕಾಟಕ : ಶುಭ ಕೆಲಸಗಳಿಗಾಗಿ ಹಣ ಖರ್ಚಾಗುತ್ತದೆ.
ಸಿಂಹ: ಪತಿ ಪತ್ನಿಯರಲ್ಲಿ ಕಲಹ ಇರುತ್ತದೆ.
ಕನ್ಯಾ: ಹಿರಿಯ ಬಂಧುಗಳಿಂದ ಒತ್ತಡ ಇದೆ.
ತುಲಾ: ಸಂಘ ಸಂಸ್ಥೆಗಳಿಂದ ಸನ್ಮಾನ ದೊರೆಯಲಿದೆ.
ವೃಶ್ಚಿಕ : ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತದೆ.
ಧನು : ವ್ಯಾಪಾರ ವ್ಯವಹಾರದಲ್ಲಿ ಲಾಭ ಇರುತ್ತದೆ.
ಮಕರ : ಆರೋಗ್ಯದ ಸಮಸ್ಯೆ ಎದುರಾಗುವುದು.
ಕುಂಭ : ಗಣ್ಯ ವ್ಯಕ್ತಿಗಳ ಸಹಾಯ ದೊರೆಯುತ್ತದೆ.
ಮೀನ : ಮಕ್ಕಳಿಂದ ಸಂತೋಷವನ್ನು ಅನುಭವಿಸುತ್ತೀರಿ.

11-4-2012

Posted by JAYAKIRANA Kirana on | 0 comments | Leave a comment...

ಉರ್ವಸ್ಟೋರಿನ ಗ್ಯಾರೇಜಿಗೆ ಫೋರ್‌ವ್ಹೀಲರ್ ಮೆಕ್ಯಾನಿಕ್ ಬೇಕಾಗಿದ್ದಾರೆ. ೯೮೪೫೧೨೩೮೫೭
ಲೇಡಿಸ್ ಟೈಲರ್ ಬೇಕು.೯೪೪೮೩೨೮೮೩೩.
ಮಲ್ಲಿಕಟ್ಟೆ : ಪಿಯುಸಿ ಕಲಿತ ಕಂಪ್ಯೂಟರ್ ಅನುಭವಿರುವವರು ಬೇಕು ೯೮೮೦೯೯೬೩೧೨.
ತೊಕ್ಕೊಟ್ಟು : ಬಾರ್‌ಗೆ ವೇಟರ‍್ಸ್ ಬೇಕು ೯೭೪೨೨೮೫೪೮೫.
ಕಾವೂರು : ಟಿವಿ ರಿಪೇರಿ ಮಾಡಲು ತಿಳಿ ದವರು ಬೇಕು ೭೨೦೪೩೭೭೯೮೧.
ಯೆಯ್ಯಾಡಿ : ಇಂಡಸ್ಟ್ರಿಯಲ್ ಏರಿಯಾಗೆ ರಾತ್ರಿ ಪಾಳಿಗೆ ಪ್ಯಾಕಿಂಗ್ ಕೆಲಸಕ್ಕೆ ಜನ ಬೇಕು ೯೭೩೮೯೯೧೨೫೫.
ಮಂಗಳೂರು : ಕ್ಲೀನರ‍್ಸ್ ಮತ್ತು ವೇಟರ‍್ಸ್ ಬೇಕು ೯೪೪೮೬೨೫೩೭೭.
ಮಂಗಳೂರು : ಕ್ಲಿನಿಕ್‌ಗೆ ಹೆಂಗಸರು ಬೇಕು ೯೮೮೦೮೦೯೮೦೩
ಮಂಗಳೂರು : ಪೆಟ್ರೋಲ್ ಹಾಕುವವರು, ಎಕೌಂಟೆಂಟ್, ಗನ್‌ಮ್ಯಾನ್ ಬೇಕು ೯೯೪೫೦೯೫೧೨೩.
ನುರಿತ ಚೈನೀಸ್ ಮತ್ತು ಎಲ್ಲಾ ತರದ ಅಡುಗೆ ಗೊತ್ತಿದ್ದವರು ಬೇಕಾಗಿದ್ದಾರೆ. ೯೮೮೦೩೭೮೮೦೬
ಮಂಗಳೂರು : ಸ್ಕ್ರೀನ್ ಪ್ರಿಂಟಿಂಗ್ ಕೆಲಸಕ್ಕೆ ಜನ ಬೇಕು ೯೮೪೫೨೯೮೦೪೮.
ಬಂದರ್ : ಕಚೇರಿ ಕೆಲಸಕ್ಕೆ ಯುವಕರು ಬೇಕು ೯೪೪೮೮೪೩೪೯೯.
ಮಂಗಳೂರು : ಬಟ್ಟೆ ಅಂಗಡಿಗೆ ಜನ ಬೇಕು ೯೧೪೧೮೫೦೬೩೨.
ಮಂಗಳೂರು : ಹೌಸ್‌ಕೀಪಿಂಗ್‌ಗೆ ಜನ ಬೇಕು ೮೯೦೯೨೧೧೯೯೮.
ಕಂಕನಾಡಿ : ಲೇಡಿಸ್ ಟೈಲರ್ ಬೇಕು ೯೮೮೦೯೦೫೫೦೩.
ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಮೆಡಿಕಲ್‌ಗೆ ಜನ ಬೇಕಾಗಿದ್ದಾರೆ. ಸ್ಥಳೀಯರಿಗೆ ಆದ್ಯತೆ. ೯೯೦೧೩೩೧೩೧೪
ಮಂಗಳೂರು: ಮಾರ್ಕೆಟ್ ರೋಡ್‌ನ ಫ್ಯಾನ್ಸಿ ಗೆ ಜನ ಬೇಕು. ೯೮೮೦೭೨೪೫೯೨
ಮಂಗಳೂರಿನ ವಸತಿ ನಿಲಯಕ್ಕೆ ಅಡುಗೆಯವರು, ಹೆಲ್ಪರ‍್ಸ್, ಸರ್ವಿಸ್ ಹುಡುಗರು ಬೇಕಾಗಿದ್ದಾರೆ. ೯೪೪೮೫೦೬೩೫೦
ಕಾವೂರ್: ಗಾಂಧಿ ನಗರದಲ್ಲಿರುವ ಸಂಸ್ಥೆಗೆ ಯುವತಿ ಬೇಕು ೯೪೪೮೧೬೪೭೩೯.
ಕೊಡಿಯಾಲ್‌ಬೈಲ್: ಕಾಲ್ ಸೆಂಟರ್‌ಗೆ ಸೆಕ್ಯೂರಿಟಿ ಆಫೀಸರ್ ಬೇಕು ೯೫೩೮೮ ೮೯೫೧೪.
ಕದ್ರಿ: ಮಲ್ಲಿಕಟ್ಟೆಗೆ ಟೈಪಿಂಗ್, ಕಂಪ್ಯೂಟರ್ ತಿಳಿದವರು ಬೇಕು ೯೮೮೦೮೧೪೧೪೦.
ಯೆಯ್ಯಾಡಿ: ಟೈಲರಿಂಗ್ ಶಾಪ್‌ಗೆ ಟೈಲರ್ ಬೇಕು ೮೭೧೦೯೪೩೮೩೮.
ಮಂಗಳೂರು: ಎಲೆಕ್ಟ್ರಿಕಲ್, ಪ್ಲಂಬಿಂಗ್ ಕೆಲಸಕ್ಕೆ ಜನ ಬೇಕು ೮೦೮೮೧೬೦೭೭೭
ಬಜ್ಪೆ: ಪೆರಾರ್ ವರ್ಕ್‌ಶಾಪ್‌ಗೆ ಗ್ರಿಲ್ ಮತ್ತು ವೆಲ್ಡಿಂಗ್ ತಿಳಿದವರು ಬೇಕು. ೮೯೭೦೪೪೦೭೬೧
ಮಂಗಳೂರು: ಹೌಸ್‌ಕೀಪಿಂಗ್‌ಗೆ ಬಾಯ್ಸ್ ಬೇಕು ೮೯೦೯೨೧೧೯೯೮.
ಕೊಡಿಯಾಲ್‌ಬೈಲ್: ಟೈಲರಿಂಗ್ ಶಾಪ್‌ಗೆ ಲೇಡಿಸ್ ಟೈಲರ್, ಚೂಡಿದಾರ್, ಬ್ಲೌಸ್ ಪೀಸ್ ಸ್ಟಿಚ್ಚಿಂಗ್ ತಿಳಿದವರು ಬೇಕು ೯೯೭೨೭೨೫೪೪೪.
ಪಡುಬಿದ್ರೆಯ: ಅಂಗಡಿಗೆ ಯುವಕ ಯುವತಿಯರು ಬೇಕು ೯೩೪೨೯೪೧೨೮೬.

ಅಸಲ್ ಚಿತ್ರಕ್ಕೂ ಮನ್ನಣೆ ಸಿಗಲಿ

Posted by JAYAKIRANA Kirana on | 0 comments | Leave a comment...

ಇತ್ತೀಚೆಗೆ ತುಳು ಚಿತ್ರ ಕಂಚಿಲ್ದ ಬಾಲೆಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಪ್ರಶಸ್ತಿ ಪಡೆ ಯುವ ಸಾಲಿನಲ್ಲಿ ದೇವೆರ್ ನಂಥ ಉತ್ತಮ ಸಾಮಾಜಿಕ ಸಂದೇಶವುಳ್ಳ ಚಿತ್ರವಿದ್ದರೂ ಪ್ರಶಸ್ತಿಯಿಂದ ವಂಚಿತವಾ ಯಿತು. ಕಂಚಿಲ್ದ ಬಾಲೆ ಸಿನಿ ಮಾಕ್ಕೆ ಪ್ರಶಸ್ತಿ ಸಿಕ್ಕಿರುವುದು ಖುಷಿಯ ವಿಚಾರವೇ.
ಆದರೆ ತುಳುವಿನಲ್ಲಿ ಒರಿಯರ್ದೊರಿ ಅಸಲ್‌ನಂಥ ಸಿನಿಮಾ ಈಗಾಗಲೇ ದಾಖಲೆ ಬರೆದಿದೆ. ಈ ಸಿನಿ ಮಾಕ್ಕೂ ಮನ್ನಣೆ ಸಿಗಬೇಕಿದೆ. ೨೫ ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡಿ ರುವ ಅಸಲ್ ಚಿತ್ರವನ್ನು ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮಾತ್ರವಲ್ಲದೆದೂರದ ಬೆಂಗಳೂರು, ಮುಂಬೈಯ ತುಳು ಪ್ರೇಕ್ಷಕರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ ದ್ದಾರೆ. ಕಳೆದ ವರ್ಷ ತೆರೆಕಂಡ ಅದೆಷ್ಟೋ ಕನ್ನಡ ಚಿತ್ರಗಳೂ ಅಸಲ್‌ನಷ್ಟು ಪ್ರದರ್ಶನ ಕಾಣಲಿಲ್ಲ ಎನ್ನುವುದೂ ಗಮ ನಾರ್ಹ. ಹೀಗಿ ರುವಾಗ ಅಸಲ್ ಚಿತ್ರವನ್ನೂ ರಾಜ್ಯ ಸರ ಕಾರ ಗುರುತಿಸಬೇಕಾದ ಅಗತ್ಯ ವಿದೆ. ತುಳು ಭಾಷೆ ಯಲ್ಲಿ ಸಾರ್ವ ತ್ರಿಕ ದಾಖಲೆ ನಿರ್ಮಿಸಿರುವ ಅಸಲ್ ಚಿತ್ರಕ್ಕೂ ಸೂಕ್ತ ಸ್ಥಾನಮಾನ ಸಿಗು ವಂತಾಗಲಿ.
ಸುರೇಶ್, ಕಂಕನಾಡಿ

ವಿನಾಶಕಾಲ ಸಮೀಪಿಸುತ್ತಿದೆಯೇ?
ಡಿಸೆಂಬರ್ ತಿಂಗಳಲ್ಲಿ ಭೂಪ್ರಳಯ ಆಗಿಯೇ ಆಗುತ್ತದೆ ಎಂದು ಕೆಲವು ಪತ್ರಿಕೆ, ಚಾನೆಲ್‌ಗಳು ಬೊಬ್ಬೆ ಹಾಕುತ್ತಿವೆ. ಭೂಮಿಯ ಉಷ್ಣಾಂಶವೂ ದಿನೇ ದಿನೇ ಏರುತ್ತಿದ್ದು, ಈಗಾಗಲೇ ಬೇಸಿಗೆ ಬೆಂಕಿ ಯಂತೆ ಸುಡಲಾರಂಭಿಸಿದೆ.
ಎಲ್ಲಕ್ಕೂ ವಿನಾಶವಿದ್ದೇ ಇದೆ. ಹಾಗೆಂದು ಭೂಮಿ ಇಷ್ಟು ಬೇಗನೆ ವಿನಾಶ ಹೊಂದುತ್ತದೆ ಎಂದರೆ ನಂಬಲಸಾಧ್ಯ. ಆದರೆ ಸದ್ಯದ ಸ್ಥಿತಿಯನ್ನು ಅವಲೋ ಕಿಸಿದರೆ ಭೂಮಿ ಕೆಲವೇ ಸಮಯದಲ್ಲಿ ವಿನಾಶ ಕಂಡುಕೊಳ್ಳುತ್ತದೆಯೇ ಎಂಬ ಭಯವೂ ಜನರಲ್ಲಿದೆ. ಪಾಶ್ಚಿಮಾತ್ಯ ರಾಷ್ಟ್ರ ಗಳಲ್ಲಿ ಈಗಾಗಲೇ ಅನೇಕ ಕಡೆ ಭೂಕಂಪ, ಸುನಾಮಿ, ಭೂಕುಸಿತ, ಚಂಡಮಾರುತ ಜನಜೀವನದ ಮೇಲೆ ಪ್ರಹಾರಗೈಯು ತ್ತಲೇ ಇದೆ.
ಹಲವು ತಿಂಗಳ ಕಾಲ ಬಿಡದೆ ಮಳೆ ಸುರಿದರೂ ಅವಧಿಗೂ ಮುನ್ನವೇ ನೀರು ಬರಿದಾಗಿ ಬರ ಪರಿಸ್ಥಿತಿ ಸಾಮಾನ್ಯವಾ ಗಿದೆ. ದೇಶದ ವಿವಿಧ ಭಾಗಗಳಲ್ಲಿ ಜನರು ರಿನ ಹಾಹಾಕಾರದಿಂದಾಗಿ ಗುಳೇ ಹೋಗುವ ಪರಿಸ್ಥಿತಿ ಎದುರಾಗಿದೆ. ಇದೆಲ್ಲ ಭೂಮಿ ಸರ್ವನಾಶದ ಅಂಚಿಗೆ ತಲುಪಿ ರುವುದಕ್ಕೆ ಸೂಚನೆಯೇ ತಿಳಿಯುತ್ತಿಲ್ಲ. ಆದರೂ ಜೀವಜಲ ಬತ್ತಿದಾಗ ಜನರ ಬದುಕು ಸಮಸ್ಯೆಗೆ ತುತ್ತಾಗುತ್ತದೆ.
ಜನರು ಜೀವನವಶ್ಯಕ ರಿಗಾಗಿ ಅಲೆಯುವ ಸವೇಶ ರ್ಮಾಣವಾಗು ತ್ತದೆ. ಮುಂದೆ ಹ ರೂ ಸಿಗದೇ ಇದ್ದಾಗ ಜನರ ಸಾವಿನ ಸರಣಿಯೇ ಸಂಭ ವಿಸಲಿದೆ.
ದೀಪಕ್ ಶೆಟ್ಟಿ, ಮಂಗಳೂರು

ನೀರಿನ ಸಮಸ್ಯೆ ಬಗೆಹರಿಸಿ
ಕಾರ್ಕಳ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕುಡಿ-ಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಜನರು ನೀರಿ ಗಾಗಿ ಕೆಲವು ಕಿ.ಮೀ.ಗಟ್ಟಲೆ ಅಲೆಯುವಂತಾಗಿದೆ. ಒಂದು ಕೊಡ ನೀರು ಸಿಗುವುದೇ ಪುಣ್ಯ. ಹೀಗಿರುವಾಗ ಸಂಬಂಧ ಪಟ್ಟ ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿ ದ್ದರೆ ಪರಿಸ್ಥಿತಿ ತೀರಾ ಹದಗೆಡುತ್ತದೆ. ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಜನರು ರಸ್ತೆಗಿಳಿದು ಹೋರಾಟ ನಡೆಸಬಹುದು. ಕಾರ್ಕಳ ಪುರಸಭೆ, ಗ್ರಾಮ ಪಂಚಾಯತ್ ಮನೆ-ಮನೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಿ. ನಿತಿನ್, ಬೈಲೂರು

ಕೈರಂಗಳ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ್ ಬೇಕು
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದಲ್ಲಿ ಇಂಜಿ ನಿಯರಿಂಗ್ ಕಾಲೇಜು ಮತ್ತು ಇನ್ಫೋ ಸಿಸ್‌ನಂತಹ ಸಾಫ್ಟ್‌ವೇರ್ ಕಂಪೆನಿಗಳು ಇದ್ದರೂ ಈ ಗ್ರಾಮ ಅಭಿವೃದ್ಧಿಯಾಗಿಲ್ಲ. ಕೈರಂಗಳ ಗ್ರಾಮವನ್ನು ಪಕ್ಕದ ಬಾಳೆಪುಣಿ ಗ್ರಾಮ ಪಂಚಾಯತ್‌ನೊಂದಿಗೆ ಸೇರಿಸ ಲಾಗಿದೆ.
ಇದರಿಂದಾಗಿ ಗ್ರಾಮದ ಆದಾಯದ ಸಿಂಹಪಾಲು ಬಾಳೆಪುಣಿ ಗ್ರಾಮ ಪಂಚಾ ಯತ್‌ಗೆ ಲಭಿಸುತ್ತಿದೆ. ಇನ್ನು ಇಲ್ಲಿನ ಜನ ಪ್ರತಿನಿಧಿಗಳ ಕಥೆಯೇ ಬೇರೆ. ಕೆಲವು ಪಂಚಾಯತ್ ಸದಸ್ಯರು ಊರಿನಲ್ಲಿ ಇದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಗ್ರಾಮದ ದುಗ್ಗಜ್ಜರಕಟ್ಟೆ ಮತ್ತು ಧರ್ಮ ಕ್ಕಿಯಲ್ಲಿ ನೀರಿನ ಸಮಸ್ಯೆ ಇದೆ. ಹೊಸ ದಾಗಿ ಬೋರ್‌ವೆಲ್ ಹಾಕಿಸಿದ್ದರೂ ಅದಕ್ಕೆ ಪಂಪ್ ಅಳವಡಿಸಲು ಇನ್ನೂ ಕಾಲ ಕೂಡಿ ಬಂದಿಲ್ಲ. ದುಗ್ಗಜ್ಜರಕಟ್ಟೆಯಲ್ಲಿ ಇರುವ ಸರ ಕಾರಿ ಬಾವಿಯು ಪಕ್ಕದ ಕೋಳಿ ಫಾರಂ ಮತ್ತು ಅಂಗಡಿಯ ತ್ಯಾಜ್ಯದಿಂದ ಕೊಳೆತು ವಾಸನೆ ಬರುತ್ತಿದೆ. ಪಂಚಾಯತ್ ಸದ ಸ್ಯರಿಗೆ ಈ ವಿಷಯ ಗೊತ್ತಿದ್ದರೂ ಅದರ ಮಾಲಕನ ಮೇಲೆ ಕ್ರಮ ಕೈಗೊಂಡರೆ ಓಟು ಸಿಗುವುದು ತಪ್ಪುತ್ತದೆ ಎಂಬ ಭೀತಿ ಯಿಂದ ಯಾವುದೇ ಕ್ರಮವನ್ನು ಕೈಗೊಂ ಡಿಲ್ಲ. ಪಂಚಾಯತ್ ಸದಸ್ಯರೊಬ್ಬರು ತಮ್ಮ ಮನೆಗೆ ಶಾಸಕರ ನಿಧಿಯಿಂದ ಡಾಮರು ರಸ್ತೆ ಮಾಡಿಸಿ ಉಳಿದ ಜಾಗಕ್ಕೆ ಸಾವಿರಾರು ರೂ. ಖರ್ಚು ಮಾಡಿ ಕಾಂಕ್ರೀಟ್ ಹಾಕಿಸಿದ್ದಾರೆ. ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರ ಮನೆಯ ಪಕ್ಕದ ಬೀದಿ ದೀಪ ಉರಿಯದೆ ಕೆಲವು ತಿಂಗ ಳುಗಳಾದರೂ ಅವರಿಗೆ ಈ ವಿಷಯ ಗೊತ್ತಾಗಿಲ್ಲ. ಗ್ರಾಮದ ಮೋಂಟುಗೋಳಿ ಎಂಬಲ್ಲಿಯ ಸ್ಥಿತಿ ಯಾರಿಗೂ ಬೇಡ. ೫ ದಿನಕ್ಕೊಮ್ಮೆ ನೀರು ಬರುತ್ತಿದೆ. ಗ್ರಾಮದ ಪ್ರeವಂತ ನಾಗರಿಕರು ಇನ್ನಾದರೂ ಎದ್ದೇಳಬೇಕಾಗಿದೆ. ಕೈರಂಗಳ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ್ ಬೇಕು ಎಂಬ ಬೇಡಿಕೆಯನ್ನು ಸರಕಾರದ ಮುಂದಿ ಡಬೇಕಾಗಿದೆ. ಉಲ್ಲಾಸ್, ಕೈರಂಗಳ

ಹಿಂದೂ ದೇಗುಲಗಳಲ್ಲಿ ನಡೆಯುತ್ತಿರುವ ಹಗರಣಗಳು
ಜಯಕಿರಣ ಪತ್ರಿಕೆಯ ಎ.೨ ಮತ್ತು ೩ರ ಚಾವಡಿ ಅಂಕಣದಲ್ಲಿ ಪ್ರಕಟವಾದ ಹಿಂದೂ ದೇಗುಲಗಳ ಹಗರಣ ಲೇಖನವು ಅತ್ಯಂತ ಗಂಭೀರವಾದುದು. ಹಿಂದೂ ಗಳ ದೇಗುಲಗಳಲ್ಲಿ ನಡೆಯುವ ಅವ್ಯವಹಾರವನ್ನು ಸಂಪೂರ್ಣವಾಗಿ ತನಿಖೆ ಗೊಳಪಡಿಸಬೇಕು. ಕರಾವಳಿಯ ಶ್ರೀಮಂತ ದೇವಾಲಯಗಳಲ್ಲಿ ಉಡುಪಿ ಅಂಬ ಲಪಾಡಿಯ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಮತ್ತು ಆನೆಗು ಡ್ಡೆಯ ಶ್ರೀಮಹಾಗಣಪತಿ ದೇವಸ್ಥಾನ ಅತ್ಯಂತ ಪ್ರಮುಖವಾದುದು. ಈ ಎರಡೂ ದೇವಸ್ಥಾನಗಳಲ್ಲಿ ಅನುವಂಶಿಕ ಆಡಳಿತ ನಡೆದುಕೊಂಡು ಬರುತ್ತಿದೆ. ಅಲ್ಲಿ ಭಕ್ತ ರಿಂದ ಸಂಗ್ರಹವಾಗುವ ಲಕ್ಷಾಂತರ ರೂಪಾಯಿ ಹಣವನ್ನು ಅಲ್ಲಿಯ ಧರ್ಮ ದರ್ಶಿಗಳೆಂದು ಹೇಳಿಕೊಳ್ಳುವ ಬಕಾಸುರರು ತಿಂದು ತೇಗುತ್ತಿರುವುದು ವಿಪ ರ್ಯಾಸವೇ ಸರಿ. ಈ ಎರಡೂ ಪ್ರಮುಖ ದೇಗುಲಗಳ ಲೆಕ್ಕಪತ್ರವನ್ನು ಇಲಾ ಖಾಧಿಕಾರಿಗಳಿಂದ ತನಿಖೆಗೊಳಪಡಿಸಬೇಕು. ಅಲ್ಲಿ ನಡೆಯುತ್ತಿರುವ ಅವ್ಯವ ಹಾರಗಳನ್ನು ಬಯಲುಗೊಳಿಸಬೇಕು. ಸರಕಾರ ಕೂಡಲೇ ಈ ಎರಡೂ ದೇವ ಸ್ಥಾನಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಇಲ್ಲಿ ನಡೆಯುತ್ತಿರುವ ನಿರಂ ಕುಶ ಆಡಳಿತ ಕೊನೆಗೊಳ್ಳಬೇಕು. ಇನ್ನಾದರೂ ಕ್ರಮ ಕೈಗೊಳ್ಳುವಿರಾ?
ನಾರಾಯಣ, ಉಡುಪಿ

ರಾಜ್ಯ ಸರಕಾರ ಶಾಶ್ವತ ಪರಿಹಾರ ರೂಪಿಸಲಿ
ರಾಜ್ಯದಲ್ಲಿ ನೀರಿನ ಬರಗಾಲ ಅನುಭ ವಿಸುತ್ತಿದ್ದೇವೆ. ಇದರಿಂದ ರಾಜ್ಯದ ಜನರು ನೀರಿಗಾಗಿ ಅನೇಕ ಸಮಸ್ಯೆಗಳನ್ನು ಎದುರಿ ಸುತ್ತಿದ್ದಾರೆ. ಸನ್ಮಾನ್ಯ ರಾಜ್ಯದ ಮುಖ್ಯಮಂ ತ್ರಿಯವರಾದ ಡಿ.ವಿ.ಸದಾನಂದ ಗೌಡರು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿ ಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ. ಬೇಸಿಗೆ ಕಾಲ ಬಂದಾಗ ನೀರಿನ ಸಮಸ್ಯೆಯೇ ಜನರಲ್ಲಿ ಭಯ ಹುಟ್ಟಿಸುತ್ತದೆ. ಇದರಿಂದ ಯಾವುದೋ ಪಟ್ಟಣ ಪ್ರದೇಶದಿಂದ ನೀರು ತರುವ ಸಮಸ್ಯೆಗಳು ಎದುರಾಗಿದೆ. ತಕ್ಷಣ ಒಳ್ಳೆಯ ಆಡಳಿತಗಾರರು ಎಂದೇ ಹೆಸರು ಗಳಿಸಿರುವ ಡಿ.ವಿ.ಸದಾನಂದ ಗೌಡರು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು.
ಜಿ.ಎಂ.ಶಂಸುದ್ದೀನ್, ಅಜ್ಜಿನಡ್ಕ

ಇಖರ ಶಿಕ್ಷಣದ ಅಂಕಣ ಉತ್ತಮವಾಗಿತ್ತು
ಕಳೆದ ಶುಕ್ರವಾರ ಪ್ರಕಟಗೊಂಡ ಫರಿಯಾದ್ ಅಂಕಣ ಉತ್ತಮವಾಗಿತ್ತು. ತಮ್ಮ ಎರಡು ಸಂಚಿಕೆಯಲ್ಲೂ ಶಿಕ್ಷಣದ ಮಹತ್ವದ ಬಗ್ಗೆ ಉತ್ತಮವಾಗಿ ಬರೆದಿದ್ದಾರೆ. ಅರ್ಧದಲ್ಲಿ ಶಾಲೆ ಬಿಟ್ಟವರು, ಕಲಿಕೆಯಲ್ಲಿ ಉದಾಸೀನ ತೋರುವವರು ಶಿಕ್ಷಣದಿಂದ ವಂಚಿತರಾಗಿದ್ದೇವೆ ಎಂದು ನೊಂದುಕೊಳ್ಳದಿ ರಲಿ ಎಂಬ ಕಾರಣಕ್ಕೆ ಕೆಲವರು ಸ್ಟೀವ್ ಜಾಬ್ಸ್, ಅಂಬಾನಿ ಮುಂತಾದವರ ಉದಾಹರಣೆ ನೀಡುತ್ತಾರೆ. ಇವರು ಕಲಿ ಯದೆ ಸಾಧಿಸಿದವರು ಎಂದು ಶಿಕ್ಷಣ ವಂಚಿತರನ್ನು ಹುರಿ ದುಂಬಿಸುತ್ತಾರೆ. ಆದರೆ ಯಾರೊಬ್ಬರೂ ಈಗಲೂ ನಿಮಗೆ ಕಲಿಯಬಹುದು ಎಂದು ಸ್ಪೂರ್ತಿ ತುಂಬುವುದೇ ಇಲ್ಲ. ಆದರೆ ಇಖರವರು ತನ್ನ ಹಿಂದಿನ ಸಂಚಿಕೆಯಲ್ಲಿ ಎಲ್ಲ ರಂತೆ ಸ್ಟೀವ್ ಜಾಬ್ಸ್, ಅಂಬಾನಿಯನ್ನು ಉದಾಹರಿಸಿದರೂ ಕಳೆದ ಸಂಚಿಕೆಯಲ್ಲಿ ಶಿಕ್ಷಣದ ಮಹತ್ವ ಏನು ಎನ್ನುವ ಬಗ್ಗೆ ಬರೆದಿದ್ದಾರೆ. ಒಟ್ಟಿನಲ್ಲಿ ಇಖರವರ ಕಳೆದ ಎರಡು ಅಂಕಣ ಗಳು ಉತ್ತಮವಾಗಿತ್ತು. ಇಂತಹ ಅಂಕಣಗಳು ಮೂಡಿ ಬರಲಿ ಎನ್ನುವುದೇ ಓದುಗರ ಆಶಯ.
ವಿನ್ಯಾಸ್.ಆರ್ ಶೆಟ್ಟಿ, ಜೆಪ್ಪು

ಅಜೆಕಾರು ರಸ್ತೆ ಸರಿಪಡಿಸಿ
ಕಾರ್ಕಳ ತಾಲೂಕಿನ ಅಜೆಕಾರು ರಾಜ್ಯ ಹೆದ್ದಾರಿ ಸಂಚಾ ರಕ್ಕೆ ಅಯೋಗ್ಯವಾಗಿದೆ. ಈ ರಸ್ತೆ ಸಂಪೂರ್ಣ ಹದಗೆಟ್ಟಿ ದ್ದರೂ ಡಾಮರೀಕರಣ ಮಾಡದೆ ಕೇವಲ ತೇಪೆ ಮಾತ್ರ ಹಾಕ ಲಾಗಿದೆ. ರಸ್ತೆಯ ಮೇಲೆ ದೊಡ್ಡ ಗಾತ್ರದ ಕಲ್ಲುಗಳು ರಾಶಿ ಬಿದ್ದು ದ್ವಿಚಕ್ರ ಸವಾರರಿಗೆ ಕಂಟಕವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಹೆದ್ದಾರಿ ಪ್ರಾಧಿಕಾರ ಏನು ಮಾಡು ತ್ತಿದೆ? ರಸ್ತೆಯಲ್ಲಿ ಸುಗಮ ಸಂಚಾರ ಸಾಧ್ಯವಾಗದೆ ವಿಳಂಬ ವಾಗಿ ಸಂಚಾರ ನಡೆಸುವಂತಾಗಿದೆ. ಇನ್ನಾದರೂ ಗಮನಿಸಲಿ.      ಹರೀಶ್ ನಾಯ್ಕ, ಹೆಬ್ರಿ

ವೈದ್ಯರನ್ನು ನೇಮಕ ಮಾಡಿ
ಸುಳ್ಯದ ಆರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಕಂಡುಬರುತ್ತಿದೆ. ಇಲ್ಲಿ ಹಿಂದೆ ಇದ್ದ ವೈದ್ಯರು ವರ್ಗಾವಣೆಯಾಗಿ ಹೋದ ಬಳಿಕ ಸಮಸ್ಯೆ ತಲೆದೋರಿದೆ. ಇಲ್ಲಿ ಸುತ್ತಲಿನ ಭಾಗಗಳ ಬಡಜನರು ಅನಾರೋಗ್ಯ ಕಾಡಿದಾಗ ಈ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಇಲ್ಲಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ವೈದ್ಯರ ಸಮರ್ಪಕ ಸೇವೆ ಸಿಗುವಂತಾಗಬೇಕು. ಮಾನ್ಯ ಶಾಸಕರು ಇತ್ತ ಗಮನಿಸಿ ವೈದ್ಯರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕಾಗಿ ವಿನಂತಿ. ವೆಂಕಟೇಶ್ ಎನ್. ಸುಳ್ಯ

ತೋಡು ಅತಿಕ್ರಮಿಸಿರುವವರ ವಿರುದ್ದ ಕ್ರಮ ಕೈಗೊಳ್ಳಿ
ಪಲ್ಗುಣಿ ನದಿಯ ಪಂಜಿಮೊಗರು ಗ್ರಾಮದ ಪೋರಂ ಬೋಕು ಸರ್ಕಾರಿ ಸ್ಥಳ(ತೋಡು) ಸ.ನಂ ೨೬-೧ ವಿಸ್ತೀರ್ಣ ೪.೦೬ ಎಕ್ರೆ ಸ್ಥಳವಿದ್ದು, ಇದರಲ್ಲಿ ನದಿಯ ನೀರು ಹರಿದು ಕೊಂಡು ಹೋಗುತ್ತದೆ. ಈ ತೋಡಿನಲ್ಲಿ ಸ್ಥಳೀ ಯರು ಮೀನು ಹಿಡಿಯುತ್ತಿದ್ದು, ಹಿರಿಯರ ಕಾಲದಿಂದಲೂ ಕಸುಬು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಕುಟುಂಬವೊಂದು ನೀರು ಹೋಗುವ ತೋಡನ್ನು ಸುಮಾರು ೪೦ ಮೀಟರ್ ಅಗಲದಲ್ಲಿ ಮಣ್ಣು ತುಂಬಿಸಿ ಒಬ್ಬರ ಸ್ಥಳಕ್ಕೆ ರಸ್ತೆ ನಿರ್ಮಿಸಿರುತ್ತಾರೆ. ಇವರು ನಿರ್ಮಿಸಿರುವ ರಸ್ತೆಯಿಂ ದಾಗಿ ಮೀನು ಹಿಡಿಯುವ ಮೀನುಗಾರರಿಗೆ ದೋಣಿ ಕೊಂಡು ಹೋಗಲು ಸಾಧ್ಯವಿಲ್ಲ. ಮತ್ತು ಮೀನು ಹಿಡಿ ಯಲು ಅಸಾಧ್ಯವಾಗಿದೆ. ಅಲ್ಲದೆ ಇಲ್ಲಿ ಪಟ್ಲ ಗದ್ದೆಗಳು ತಗ್ಗು ಪ್ರದೇಶದಲ್ಲಿರುವುದರಿಂದ ನೀರು ಹಾದು ಹೋಗಲು ಅಸಾ ಧ್ಯವಾಗಿದೆ. ಮಳೆಗಾಲದಲ್ಲಿ ನೆರೆಬಂದಾಗ ಗ್ರಾಮಸ್ಥರ ಮನೆ ಗಳಿಗೆ ಹಾಗೂ ಶಾಲೆಗೆ ಹೋಗುವ ಮಕ್ಕಳಿಗೆ ಮತ್ತು ಸಾರ್ವ ಜನಿಕರು ಅಪಾಯ ಉಂಟಾಗುವ ಸ್ಥಿತಿಯಲ್ಲಿರುತ್ತದೆ. ಇವರು ನಿರ್ಮಿಸಿರುವ ಈ ರಸ್ತೆಯು ಪ್ರತಿವಾದಿಯ ಸ್ಥಳಕ್ಕೆ ಮಾತ್ರ ಸೀಮಿತವಾಗಿದ್ದು, ನೆರೆ ಬಂದಾಗ ನೀರು ಹರಿದು ಹೋಗದೆ ಗ್ರಾಮಸ್ಥರ ಆಸ್ತಿ ಪಾಸ್ತಿಗಳಿಗೆ ತುಂಬಾ ಕಷ್ಟ-ನಷ್ಟ ಉಂಟಾ ಗುವ ಸಂಭವವಿರುತ್ತದೆ. ಪ್ರತಿವಾದಿಗಳು ತುಂಬಾ ಶ್ರೀಮಂ ತರಾಗಿದ್ದು, ಹಣ ಬಲ ಹಾಗೂ ರಾಜಕೀಯ ವ್ಯಕ್ತಿಗಳ ಕೈವಾಡ ಮಾಡಿ ಗ್ರಾಮಸ್ಥರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯವರಿಗೂ ಯಾವುದೇ ಮರ್ಯಾದೆ ಕೊಡದೇ ತಿರಸ್ಕರಿಸುತ್ತಾರೆ. ಪ್ರತಿವಾದಿಯವರು ಸರ್ಕಾರಿ ಪೊರಂಬೋಕು ಸ್ಥಳದಲ್ಲಿ ಕಾನೂನು ಬಾಹಿರ ವಾಗಿ ಅನಧಿಕೃತವಾಗಿ ನಿರ್ಮಿಸಿರುವ ಈ ರಸ್ತೆಯ ಬಗ್ಗೆ ಸಂಬಂಧಪಟ್ಟವರು ಸ್ಥಳ ತನಿಖೆ ಮಾಡಿ ರಸ್ತೆಯನ್ನು ಕೂಡಲೇ ತೆರವುಗೊಳಿಸುವಂತೆ ಮಾಡಿ ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ವಿನಂತಿ.
ಗ್ರಾಮಸ್ಥರು, ಪಂಜಿಮೊಗರು ಪಡುಕೋಡಿ

11-4-2012

Posted by JAYAKIRANA Kirana on | 0 comments | Leave a comment...

ಇಂಗ್ಲಿಷ್‌ನಲ್ಲಿ
ಈ ಮೂರು ಪದಗಳಿಗೆ
ಇಂಗ್ಲಿಷ್‌ನಲ್ಲಿ ಏನ್ ಹೇಳ್ತಾರೆ?
ಹಾಕು, ಹೋಗು, ನೋಡು, ಗೊತ್ತಾಗಿಲ್ವ ‘ಪುಟ್ಗೋಸಿ’....
ಪುಟ್, ಗೋ, ಸೀ!

ಪುಂಡಿ ಬೈಪಾವುನ!
ಟವಿ ೧೦ ಕಾರ‍್ಯಕ್ರಮಗಳು
ಬೆಳಗ್ಗೆ ೬ ಗಂಟೆಗೆ ಚಿಂಟಾಟ
೭ ಗಂಟೆಗೆ ಲಕ್ಯಾನ
೮ ಗಂಟೆಗೆ ಕೂಲಿ ದೆಕ್ಯಾನ
೯ ಗಂಟೆಗೆ ಚಾ ಪರಿಯಾನ
೧೦ ಗಂಟೆಗೆ ಬೇಲೆಗ್ ಪಿದಡ್ಯಾನ
೧೧ ಗಂಟೆಗೆ ಕಲೆಂಗಿ ಹಾಕ್ಯಾನ
೧೨ ಗಂಟೆಗೆ ಪುಂಡಿ ಬೈಪಾವುನ (ನೇರ ಫೋನಿನ್ ಕಾರ‍್ಯಕ್ರಮ)
೧ ಗಂಟೆಗೆ ಒನಸ್ ಮಲ್ತನ
ರಿಂದ ೫ರವರೆಗೆ ಕಲೆಂಗಿ ಹಾಕ್ಯಾನ (ಮರುಪ್ರಸಾರ) ಸಂಜೆ ೬ ಗಂಟೆಗೆ ಇಲ್ಲಗ್ ಬತ್ತನ ೭ ಗಂಟೆಗೆ ಮೀಯನ, ೮ ರಿಂದ ೧೦ರವರೆಗೆ ಪುಂಡಿ ಬೈಪಯಾನ (ಮರುಪ್ರಸಾರ) ೧೧ ಗಂಟೆಗೆ ಒರ ಮನಿಪಂದೆ ಜೆಪ್ಪುಯ ನಾಟಕ..!

ಟೂ ಲೋ
ನಾನು ನಿಮಗೆ ಕಾಲ್ ಮಾಡಿ ಪ್ರೀತಿಯಿಂದ ನಾಲ್ಕು ಮಾತು ಮಾತನಾಡಬೇಕು ಅಂತಾ ಇದ್ದೆ ಆದರೆ ಶೂರ್ಪನಖಿ ಮಧ್ಯೆ ಬಂದು ಏನಂದಳು ಗೊತ್ತಾ?
ಯುವರ್ ಬ್ಯಾಲೆನ್ಸ್ ಈಸ್ ಟೂ ಲೋ ಎಂದು!

ಸಾಧ್ಯತೆಗಳಿವೆ
ನೀನೇನು ಕಳೆದುಕೊಂಡಿದ್ದೀಯಾ ಎನ್ನುವುದನ್ನು ಎಣಿಸಬೇಡ. ಈಗ ನಿನ್ನಲ್ಲಿ ಏನಿದೆ ಎನ್ನುವುದನ್ನು ಮಾತ್ರ ಎಣಿಸು. ಯಾಕೆಂದರೆ ಕಳೆದು ಹೋದದ್ದು ಮತ್ತೆ ಬರುವುದಿಲ್ಲ. ಆದರೆ ಭವಿಷ್ಯದಲ್ಲಿ ಕಳೆದುಕೊಂಡದ್ದನ್ನು ಪಡೆಯುವ ಸಾಧ್ಯತೆಗಳಿವೆ.

ಇದು ಸತ್ಯ
ಜೀವನದಲ್ಲಿ ಅತೀ ಹೆಚ್ಚು ಪ್ರಾಮಾಣಿಕವಾಗಿರಬೇಡಿ. ಯಾಕೆಂದರೆ ನೇರವಾಗಿರುವ ಮರಗಳನ್ನೇ ಮೊದಲು ತುಂಡರಿಸಿ ಉಪಯೋಗಿಸು ವುದು. ಸತ್ಯ ಸ್ವಲ್ಪ ಕಹಿಯಾ ದರೂ ಇದು ನಿಜ.

ಕಷ್ಟ
ಬೇರೆಯವರ ಜೊತೆ ತಮ್ಮನ್ನು
ಹೋಲಿಸಿ ತಮ್ಮ ಲೈಫನ್ನು
ದರ್ಬಾರ್ ಮಾಡಬೇಡಿ
ಯಾಕೆಂದರೆ ದೂರದ ಬೆಟ್ಟ
ಕಣ್ಣಿಗೆ ನುಣ್ಣಗೆ ಕಾಣುತ್ತೆ.
ಆದರೆ ಅದರ ಹತ್ತಿರ ಹೋದಾಗಲೇ ಗೊತ್ತಾಗೋದು ಅಲ್ಲಿ ಹತ್ತಲು ಎಷ್ಟು
ಕಷ್ಟ ಇದೆಯಂತ.

ಸುಬ್ರಹ್ಮಣ್ಯ: ಅಣಬೆ ಬೆಳೆಗಾರರ ಸಂಘಕ್ಕೆ ಮುತ್ತಿಗೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಲ್ಕು ತಿಂಗಳಿನಿಂದ ಕಾರ್ಯಾಚರಿಸುತ್ತಿರುವ ಅಣಬೆ ಬೆಳೆಗಾರರ ಸಹಕಾರಿ ಸಂಘವು ಸಾರ್ವಜನಿಕರಿಂದ ಲಕ್ಷಾಂತರ ರೂ. ಹಣ ಸಂಗ್ರಹಿಸಿ ಸಂಘದ ಸದಸ್ಯರಿಗೆ ಸಾಲ ನೀಡುವುದಾಗಿ ಸುಳ್ಳು ನುಡಿದಿದೆ ಎಂದು ಆರೋಪಿಸಿದ ಠೇವಣಿದಾರರು ನಿನ್ನೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸುಮಾರು ೨೫೦ಕ್ಕೂ ಹೆಚ್ಚು ಸದಸ್ಯರು ಮುತ್ತಿಗೆ ಹಾಕಿ ಬಳಿಕ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದರು. ಸಂಘದ ಸದಸ್ಯರಿಗೆ ನಿಗದಿತ ಸಮಯದೊಳಗೆ ೨೫ ಸಾವಿರ ರೂ.ನಿಂದ ೫ ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು ಎಂದು ಆರಂಭದ ದಿನಗಳಲ್ಲಿ ಸಂಸ್ಥೆ ಹೇಳಿತ್ತು. ಸಹಕಾರಿ ಸಂಘದ ಸ್ಥಾಪಕ ಪ್ರವರ್ತಕ ವೆಂಕಟೇಶ್ ಎಸ್., ಪ್ರವರ್ತಕ ಕೇಶವ ಗೌಡ, ಕಾನೂನು ಸಲಹೆಗಾರ ಶೇಷಾದ್ರಿ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಸೂಕ್ತ ದಾಖಲೆಪತ್ರವನ್ನು ತೋರಿಸಲು ವಿಫಲರಾದರು ಎನ್ನಲಾಗಿದೆ. ಸಂಸ್ಥೆಯು ಈ ವಾರದ ಅಂತ್ಯದೊಳಗೆ ೨೫ ಜನರಿಗೆ ತಲಾ ೫೦ ಸಾವಿರ ರೂ. ಸಾಲ ನೀಡುವುದಾಗಿ ಹೇಳಿಕೊಂಡಿದೆ.

ಗ್ರಾ.ಪಂ. ಅಧಿಕಾರಿಗಳ ಅಮಾನತಿಗೆ ಒತ್ತಾಯ

Posted by JAYAKIRANA Kirana on | 0 comments | Leave a comment...

ಉಡುಪಿ: ಹಂದಾಡಿ ಗ್ರಾ. ಪಂ. ವ್ಯಾಪ್ತಿ ಯ ಬೇಳೂರು ಜಡ್ಡುನಿನ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ೭೦ ಮನೆಗಳಿಗೆ ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿನ ಸೌಲಭ್ಯ ಮತ್ತು ೩೦ ಮನೆಗಳಿಗೆ ಶೌಚಾಲಯ ಸೌಕರ್ಯ ಒದಗಿಸದೆ ಗ್ರಾ.ಪಂ. ಅಧ್ಯಕ್ಷರು, ಪಿಡಿಓ, ಕಾರ್ಯದರ್ಶಿ, ತಾ.ಪಂ. ಸದಸ್ಯರು ಹಾಗೂ ಶಾಸಕರಾದ ಕೆ. ರಘುಪತಿ ಭಟ್ ಅವರು ವಂಚಿಸಿದ್ದು, ಶೇ.೨೦ರ ನಿಧಿಯಲ್ಲಿ ೧೫ ಲಕ್ಷ ರೂ. ಅವ್ಯವಹಾರ ನಡೆಸಿದ ಪಿಡಿಓ ವಿಶ್ವನಾಥ ಕೋಟ್ಯಾನ್ ಅವರ ವಿರುದ್ದ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸಿ, ಹುದ್ದೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಿಸಿ ಸಮತಾ ಸೈನಿಕ ದಳದ ಉಡುಪಿ ಜಿಲ್ಲಾ ಸಮಿತಿಯು ಹಂದಾಡಿ ಗ್ರಾ.ಪಂ. ಮುಂದೆ ಪ್ರತಿಭಟನಾ ಧರಣಿ ನಡೆಸಿತು.
ಈ ಸಂಬಂಧವಾಗಿ ತಿಂಗಳುಗಳ ಹಿಂದೆಯೇ ಸಂಬಂಧಪಟ್ಟವರಿಗೆ ಲಿಖಿತ ದೂರು ಸಲ್ಲಿಸಲಾಗಿದೆ. ಪಿಡಿಓ ವಿಶ್ವನಾಥ ಕೋಟ್ಯಾನ್ ಅವರು ಅವ್ಯವಹಾರ ನಡೆಸಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಸಾಬೀತಾಗಿದೆ. ಆದರೆ ಯಾವ ಅಧಿಕಾರಿಗಳೂ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಎಸ್‌ಎಸ್‌ಡಿ ಪ್ರ,ಮುಖರು ಆರೋಪಿಸಿದರು. ಕರ್ತವ್ಯ ಲೋಪವೆಸಗಿದ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಂಜುನಾಥಯ್ಯನವರನ್ನು ವರ್ಗಾವಣೆ ಮಾಡಬೇಕೆಂದು ದಳ ಒತ್ತಾಯಿಸಿದೆ. ೭೦ ಮನೆಗಳಿಗೆ ಕೂಡಲೇ ವೈಯುಕ್ತಿಕ ಕುಡಿಯುವ ನೀರಿನ ಸೌಲಭ್ಯ ನೀಡುವಂತೆಯೂ, ೩೦ ಮನೆಗಳಿಗೂ ಶೌಚಾಲಯ ನಿರ್ಮಿಸಲು ತಲಾ ೧೦ ಸಾವಿರ ರೂ. ನೀಡುವಂತೆಯೂ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಸರಕಾರವನ್ನು ಒತ್ತಾಯಿಸಿದರು. ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ, ಇತರ ಪದಾಧಿಕಾರಿಗಳಾದ ಟಿ.ಕೇಶವ್, ಗಣೇಶ್ ರಾಣೆ, ವಿಜಯಲಕ್ಷ್ಮಿ ಹಂದಾಡಿ, ಕೃಷ್ಣ ಮುಂಡಾಡಿ, ಪ್ರದೀಪ್ ಹಂದಾಡಿ ಮೊದಲಾದವರು ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿದ್ದರು.

ರಾಜ್ಯದಲ್ಲಿ ಹಂದಿ ಜ್ವರ ಭೀತಿ!

Posted by JAYAKIRANA Kirana on | 0 comments | Leave a comment...

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಏರುತ್ತಿರುವ ಬೆನ್ನೆಲ್ಲೆ ಸಾಂಕ್ರಾಮಿಕ ರೋಗಗಳ ತೀವ್ರತೆ ಹೆಚ್ಚಿದೆ. ಕುಡಿಯುವ ನೀರಿನ ಅಭಾವ, ಕಲುಷಿತ ನೀರಿನ ಸೇವನೆಯಿಂದ ಸಾಂಕ್ರಾಮಿಕ ರೋಗಗಳಿಗೆ ಎಲ್ಲೆಡೆ ಹಬ್ಬುತ್ತಿವೆ. ಇದರ ಜೊತೆಗೆ ಎಚ್೧ ಎನ್೧ ಸದ್ದಿಲ್ಲದೆ ರಾಜ್ಯಾದ್ಯಂತ ಹಬ್ಬುತ್ತಿದ್ದು, ಇನ್ನು ಆ ಮಾರಕ ರೋಗಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಈ ರೋಗಕ್ಕೆ ನೂರಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಸಿಲಿನ ಜೊತೆ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಜನತೆಯನ್ನು ಕಂಗಾಲು ಮಾಡಿದೆ. ಒಂದೆಡೆ ಕಾಲರಾ, ಡೆಂಗ್ಯೂ ರೋಗಕ್ಕೆ ಬಲಿಯಾಗು ತ್ತಿದ್ದರೆ ಮತ್ತೊಂದಡೆ ಎಚ್೧ ಎನ್೧ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಈ ಮಾರಕ ರೋಗ ಮುಂಬೈ ಕರ್ನಾಟಕ ಅಲ್ಲದೆ, ಬೆಂಗಳೂರು ಹಾಗೂ ಕೋಲಾರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಇದುವರೆಗೂ ಐದು ಮಂದಿ ಸತ್ತಿದ್ದಾರೆ. ಬರಗಾಲದ ವೀಕ್ಷಣೆಯಲ್ಲಿರುವ ಸರ್ಕಾರ ಸಾಂಕ್ರಾಮಿಕ ರೋಗಗಳ ಕಡೆ ಗಮನ ಹರಿಸಿಲ್ಲ. ಈ ಬಗ್ಗೆ ಮುನ್ನೆಚ್ಚರಿಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೊಣೆಗಾರಿಕೆ ಮುಖ್ಯಮಂತ್ರಿಯವರ ಮೇಲಿದೆ.

ಕೋಶಾಧಿಕಾರಿಗೆ ಒತ್ತಡ ಹೇರಿ ಖಾಲಿ ಚೆಕ್‌ಗೆ ಸಹಿ

Posted by JAYAKIRANA Kirana on | 0 comments | Leave a comment...



ಕಲ್ಕೂರ ದುರಾಡಳಿತದ ಇನ್ನೊಂದು ಮುಖ ಬಹಿರಂಗ
ಮಂಗಳೂರು: ಕಳೆದ ಮೂರು ಅವಧಿಯಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅಧಿಕಾರ ನಡೆಸಿರುವ ಪ್ರದೀಪ್ ಕುಮಾರ್ ಕಲ್ಕೂರರ ದುರಾಡಳಿತದ ವಿರುದ್ಧ ಪುನರೂರು ಬಣ ಸೆಟೆದು ನಿಂತಿದ್ದು, ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕೋಶಾಧಿಕಾರಿಯ ಮೇಲೆ ಒತ್ತಡ ಹೇರಿ ೨೦ ಖಾಲಿ ಚೆಕ್‌ಗೆ ಸಹಿ ಹಾಕಿಸಿ ಪಡೆದಿರುವು ದಾಗಿ ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ದಾಖಲೆ ಸಮೇತ ಬಹಿರಂಗಪಡಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಹೇಶ್ ಆರ್.ನಾಯಕ್, ಮೂರು ಅವಧಿಗೆ ಕಸಪಾ ಆಧ್ಯಕ್ಷರಾಗಿದ್ದ ಕಲ್ಕೂರ, ಇದುವರೆಗೂ ಲೆಕ್ಕ ಪತ್ರ ನೀಡಿಲ್ಲ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿದಾಗ ಸಾಹಿತ್ಯ ಪರಿಷತ್ತಿನ ಲೆಕ್ಕಪತ್ರದ ಬದಲು ಕೇವಲ ೧೧ ತಿಂಗಳ ಸಮ್ಮೇಳನದ ಲೆಕ್ಕವನ್ನು ಮಾತ್ರ ನೀಡಿದ್ದಾರೆ. ಇದೇ ವೇಳೆ ಕೋಶಾಧಿಕಾರಿಗೆ ಒತ್ತಡ ಹೇರಿ ೨೦ ಖಾಲಿ ಚೆಕ್‌ಗಳಿಗೆ ಸಹಿ ಹಾಕಿ ತಮ್ಮ ವಶದಲ್ಲಿಟ್ಟಿರುವುದನ್ನು ಗಮನಿಸಿದಾಗ ಅವರ ಅಧಿಕಾರದ ಬಗ್ಗೆ ತಿಳಿಯಬಹುದಾಗಿದೆ. ತಾವು ಪರಿಷತ್‌ಗೆ ಒಂಬತ್ತು ಲಕ್ಷ ಸ್ವಂತ ಹಣ ಹಾಕಿರುವು ದಾಗಿ ತಿಳಿಸಿರುವ ಕಲ್ಕೂರ ಅದನ್ನು ಪುರಾವೆ ಸಮೇತ ಸಾಬೀತುಪಡಿಸಿದಲ್ಲಿ ಹಂಪನಕಟ್ಟೆಯಲ್ಲಿ ಡಬ್ಬ ಇಟ್ಟು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕೊಡುತ್ತೇವೆ ಎಂದು ಸವಾಲು ಹಾಕಿದರು.
ಇದೇ ವೇಳೆ ಮಾತನಾಡಿದ ಎಂ.ಜಿ.ಹೆಗ್ಡೆ, ಸಭೆ-ಸಮಾರಂಭಗಳಲ್ಲಿ ದೊಡ್ಡ ಭಾಷಣ ಬಿಗಿಯುವ ಕಲ್ಕೂರ ಅವರು ಅದನ್ನು ತಮ್ಮ ಜೀವನದಲ್ಲಿ ಪಾಲಿಸಿದ್ದರೆ, ಈಗಾಗಲೇ ಕಸಪಾ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುತ್ತಿದ್ದರು. ಆದರೆ ಅವರು ಹಾಗೆ ಮಾಡದೆ ಕುರ್ಚಿಗೆ ಅಂಟಿಕೊಂಡಿದ್ದನ್ನು ನೋಡುವಾಗ ಅವರಿಗೆ ಅಂಟು ರೋಗ ಬಂದಿರುವುದು ಸಾಬೀತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಸದಸ್ಯತನ ನಾಡಿನಲ್ಲಿರುವ ಎಲ್ಲಾ ಜಾತಿ, ಧರ್ಮ, ಜನಾಂಗಕ್ಕೂ ನೀಡಬೇಕಿತ್ತಾದರೂ ಕಲ್ಕೂರ ಅವರು ತಮ್ಮ ಆಡಳಿತದ ಅವಧಿಯಲ್ಲಿ ಕೇವಲ ತಮ್ಮ ಗುಂಪಿಗೆ ಮಾತ್ರವೇ ಸದಸ್ಯತನ ನೀಡಿದ್ದಾರೆ. ಈ ಕಾರಣದಿಂದಾಗಿಯೇ ಅವರ ವಿರುದ್ಧ ಸರ್ವೋತ್ತಮ ಅಂಚನ್‌ರನ್ನು ಕಣಕ್ಕಿಳಿಸಿದ್ದು ಇದರ ಬಗ್ಗೆ ಪ್ರಶ್ನಿಸಿರುವವರು ಕಲ್ಕೂರ ಅವರಿಗೆ ಕಸಾಪ ಅಧ್ಯಕ್ಷ ಸ್ಥಾನವನ್ನು ಎಷ್ಟು ವರ್ಷ ಗುತ್ತಿಗೆಗೆ ನೀಡಬೇಕು? ಕಸಾಪದಿಂದಾಗಿ ಅವರ ಸಂಸ್ಥೆಗೆ ಆಗಿರುವ ಲಾಭವೆಷ್ಟು? ಲೆಕ್ಕ ಪತ್ರ ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಏಕೆ ನೀಡಿಲ್ಲ ಎಂದು ಉತ್ತರಿಸಲಿ ಎಂದು ಸವಾಲು ಹಾಕಿದರು.
ಅಣ್ಣಯ್ಯ ಕುಲಾಲ್ ಮಾತನಾಡಿ, ಕಸಾಪ ಎಂದರೆ ಯಾರ ಮನೆಯ ಆಸ್ತಿಯೂ ಅಲ್ಲ. ಕಲ್ಕೂರ ಅವಧಿಯಲ್ಲಿ ಹೊಸ ಸದಸ್ಯರಿಗೆ ಅವಕಾಶವನ್ನೇ ನೀಡಿಲ್ಲ. ಈ ಕಾರಣದಿಂದಾಗಿ ಜಿಲ್ಲೆಯಲ್ಲಿ ಈಗಲೂ ಕೇವಲ ೧೮೦೦ ಸದಸ್ಯರು ಮಾತ್ರವೇ ಇದ್ದು, ಉತ್ತರ ಭಾಗಗಳಲ್ಲಿ ಒಂದೇ ತಾಲೂಕಿನಲ್ಲಿ ಇದಕ್ಕಿಂತಲೂ ಹೆಚ್ಚಿನ ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ ಕಸಾಪ ಸಮಾವೇಶ, ಹಾರ, ತುರಾಯಿ, ಊಟ, ಕೂಟಕ್ಕೆ ಮಾತ್ರವೇ ಸೀಮಿತವಾಗಿದೆ. ಇದರಿಂದಾಗಿ ಕಸಪಾಕ್ಕೆ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು. ಪತ್ರಿಕಾಗೋಷ್ಟಿಯಲ್ಲಿ ಸಾಹಿತಿಗಳಾದ ಬೋಳ ಚಿತ್ತರಂಜನ್ ದಾಸ್, ನಾಗೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

ರಸ್ತೆಯಲ್ಲಿ ಬಿದ್ದಿದ್ದ ಕುಡುಕನನ್ನು ಶವ ಮಾಡಿದರು!

Posted by JAYAKIRANA Kirana on | 1 comments | Leave a comment...

ಮೂಡಬಿದ್ರೆ: ಸತ್ತವರ ಮೇಲೆ ಯಾವ ರೀತಿಯ ವ್ಯವಸ್ಥೆ ಮಾಡ್ತಾರೆ, ಅದೇ ರೀತಿಯ ವ್ಯವಸ್ಥೆ ಇಲ್ಲೂ ಮಾಡಲಾಗಿತ್ತು. ಮಲಗಿದ್ದವನ ಮೇಲೆ ಬಿಳಿ ವಸ್ತ್ರ ಹಾಕಿ ಅದರ ಮೇಲೆ ಹೂವಿನ ಹಾರ ಹಾಕಿ, ಕಾಲ ಬುಡದಲ್ಲಿ ಅಗರಬತ್ತಿ ಹೊತ್ತಿಸಿಡಲಾಗಿತ್ತು. ನೂರಾರು ಮಂದಿ ಈ ದೃಶ್ಯವನ್ನು ನೋಡಿದ್ದಾರೆ. ಆದರೆ ಆತ ಮಾತ್ರ ಸತ್ತು ಮಲಗಿದವನಲ್ಲ, ಕುಡಿದು ಮಲಗಿದವ! ಈ ಅಪರೂಪದ ದೃಶ್ಯ ಕಂಡು ಬಂದದ್ದು ಮಂಗಳವಾರ ಮೂಡ ಬಿದ್ರೆಯ ಬಸ್ ನಿಲ್ದಾಣದಲ್ಲಿ. ಬೆಳ್ತಂಗಡಿ ಕಡೆ ಹೋಗುವ ಬಸ್ ನಿಲ್ಲುವ ಪ್ರದೇಶದಲ್ಲಿ ಯುವಕನೊಬ್ಬ ಬೆಳಗ್ಗಿನಿಂದಲೇ ಕುಡಿದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು, ಕೊನೆಗೆ ನಿಲ್ಲಲೂ ಬಲ ಇಲ್ಲದೆ ಅಲ್ಲೇ ಅಂಗಡಿ ಯೊಂದರ ಪಕ್ಕದಲ್ಲಿ ಬಿದ್ದಿದ್ದ. ಅದ್ಹೇಗೆ ಬಿದ್ದಿದ್ದನೆಂದರೆ ಆತನ ಪ್ಯಾಂಟು ಜಾರಿ ಹೋಗಿ ನಗ್ನನಾದರೂ ಎಚ್ಚರವಿಲ್ಲದೆ ಬಿದ್ದಿದ್ದ.
ಇದು ಪ್ರಯಾಣಿಕರಿಗೆ ಮತ್ತಷ್ಟು ಕಿರಿಕಿರಿ ಉಂಟು ಮಾಡಿತ್ತು. ಇದರಿಂದ ರೋಸಿ ಹೋದ ಕೆಲವರು ಈತನಿಗೊಂದು ಪಾಠ ಕಲಿಸಬೇಕೆಂದು ತೀರ್ಮಾನಿಸಿ ಬಿಳಿವಸ್ತ್ರ ತಂದು ಮೈ ಮೇಲೆ ಹಾಕಿ, ಅದರ ಮೇಲೆ ಹೂವಿನ ಹಾರ ಹಾಕಿ, ಕಾಲಿನ ಬುಡದಲ್ಲಿ ಅಗರಬತ್ತಿ ಹಚ್ಚಿಟ್ಟಿದ್ದರು. ಇದನ್ನು ಕಂಡ ಹಲವಾರು ಮಂದಿ ಸತ್ತಿರುವವನಿಗೇ ಇದನ್ನು ಮಾಡಲಾಗಿದೆ ಅಂತ ಭಾವಿಸಿದ್ದರು. ಒಬ್ಬರು ಅಜ್ಜಿಯಂತೂ ಏಜೆಂಟರೊಬ್ಬರಲ್ಲಿ ಇವನಿಗೆ ಏನಾಯ್ತು? ಅಂತ ಕೇಳಿದ್ದಕ್ಕೆ ಏನಿಲ್ಲಜ್ಜಿ, ವಿಷ ಕುಡಿದು ಸತ್ತ ಅಂದಿದ್ದರಂತೆ ಇವನಿಗೆ ಯಾರೂ ಇಲ್ಲವಾ? ಅಂತ ಕೇಳಿದಾಗ ಕುಡುಕ ಕಾಲು ಅಲುಗಾಡಿಸಿದ ಇದನ್ನು ನೋಡಿದ ಅಜ್ಜಿ ಉಂದು ಜೀವ ಉಂಡು ಅಂತ ಅಲ್ಲಿಂದ ಕಾಲ್ಕಿತ್ತರೆನ್ನಲಾಗಿದೆ.

ಯಡ್ಡಿಗೆ ಅಧಿಕಾರ ತಡೆಯಲು ಸದಾನಂದಗೌಡ ದೆಹಲಿಗೆ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಯಡಿಯೂರ ರವರಿಗೆ ಅಧಿಕಾರ ಡಲು ಹೊರಟಿರುವ ಪಕ್ಷದ ವರಿಷ್ಠರನ್ನು ತಡೆಯಲು ಮುಖ್ಯಮಂತ್ರಿ ಸದಾನಂದಗೌಡ ಇಂದು ದೆಹಲಿಗೆ ತೆರಳಿದ್ದಾರೆ. ಯೋಜನಾ ಅಯೋಗದ ಸಭೆಯಲ್ಲಿ ಬಾಗವಹಿಸುವ ಉದ್ದೇಶದಿಂದ ಮುಖ್ಯಮಂತ್ರಿ ದೆಹಲಿಗೆ ತೆರಳುತ್ತಿದ್ದರಾದರೂ ಇದೇ ಸಂದರ್ಭದಲ್ಲಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಗಣಿಹಗರಣದಲ್ಲಿ ಸಿಇಸಿ ವರದಿಯಲ್ಲಿ ಯಡಿಯೂರಪ್ಪ ಪಾರಾದರೆ ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಖಚಿತ ಎನ್ನುವುದನ್ನು ಧರ್ಮೇದ್ರ ಪ್ರದಾನ್ ರಾಜ್ಯ ನಾಯಕರಿಗೆ ಸಂದೇಶ ಡಿದ್ದಾರೆ. ಮುಖ್ಯಮಂತ್ರಿ ಸದಾನಂದಗೌಡರಿಗೂ ಸಂದೇಶ ರವಾನೆ ಮಾಡಿರುವುದಲ್ಲದೇ ಅಂತಹ ಸಂದರ್ಭ ಬಂದರೆ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಸದಾನಂದಗೌಡ ಕೆಲವು ನಾಯಕರನ್ನು ಗೌಪ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಜತೆಗೆ ಯಡಿಯೂರಪ್ಪ ನಡೆಸುತ್ತಿರುವ ಪಕ್ಷ ವಿರೋಧಿ ಚಟುವಟಿಕೆಗಳನ್ನು ವರಿಷ್ಠರ ಗಮನಕ್ಕೆ ತರುವುದಲ್ಲದೇ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ವಿವರಿಸಲಿದ್ದಾರೆ. ಪಕ್ಷ ಮತ್ತು ಸರಕಾರ ಕಳೆದುಕೊಂಡಿದ್ದ ವರ್ಚಸ್ಸನ್ನು ಮತ್ತೆ ವೃದ್ಧಿಸಲು ನಾವು ನಡೆಸಿರುವ ಪ್ರಯತ್ನ ಫಲಪ್ರದವಾಗಿದೆ. ಒಳ್ಳೆಯ ಆಡಳಿತ ಡುತ್ತಿದಾರೆ ಎಂಬ ಭಾವನೆ ಜನರಲ್ಲಿ ಬಂದಿದೆ. ಇಂತಹ ಸಂದರ್ಭದಲ್ಲಿ ಬದಲಾವಣೆ ಮಾಡಿದರೆ ಪಕ್ಷಕ್ಕೆ ದಕ್ಕೆಯಾಗುತ್ತದೆ ಎಂಬ ಸಂದೇಶ ರವಾನೆ ಮಾಡಲಿದ್ದಾರೆ.
ಯಡಿಯೂರಪ್ಪ ಅಧಿಕಾರ ಕಳೆದುಕೊಂಡ ನಂತರ ಮತ್ತೆ ಅಧಿಕಾರ ಪಡೆಯಲು ಪಕ್ಷ ವಿರೋಧಿ ಚಟುವಟಿಕೆಗಳಲ್ಲೇ ರತರಾಗಿದ್ದಾರೆ. ಕಳೆದ ಏಳು ತಿಂಗಳಿಂದ ಅವರು ಮಾಡಿರುವ ಎಲ್ಲಾ ಅಂಶಗಳನ್ನು ವರಿಷ್ಠರ ಗಮನಕ್ಕೆ ತರಲಿದ್ದಾರೆ. ಇಷ್ಟರ ನಡುವೆಯೂ ಅವರಿಗೆ ಅಧಿಕಾರ ಡಲೇಬೇಕೆಂದರೆ ತನ್ನ ಅಭ್ಯಂತರವಿಲ್ಲ ಎಂದಿದ್ದಾರೆ.

ಸಿಇಸಿ ವರದಿ ಮೇಲೆ ತಮ್ಮ ಭವಿಷ್ಯ: ಯಡ್ಡಿ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಇಸಿ ವರದಿಯ ಆಧಾರದ ಮೇಲೆ ತಮ್ಮ ಭವಿಷ್ಯ ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯುರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತಮ್ಮ ವಿರುದ್ಧ ಹಿರೇಮಠ್ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅವರ ಆರೋಪಕ್ಕೆ ಉರುಳಿಲ್ಲ. ಸಿಇಸಿ ವರದಿ ವರದಿಗೆ ಸಂಬಂಧಿಸಿದಂತೆ ನಮ್ಮ ವಕೀಲರು ದೆಹಲಿಯಲ್ಲಿ ಉತ್ತರ ನೀಡಿದ್ದಾರೆ. ನಾಯಕತ್ವದ ವಿಚಾರ ಸಂಬಂಧಿಸಿದಂತೆ ವರಿಷ್ಠರು ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ. ತಾವು ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ವಾರಾಂತ್ಯಕ್ಕೆ ಒಳ್ಳೆಯ ಸುದ್ದಿ ಬರಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ಕಾದು ನೋಡೋಣ ಎಂದು ತಿಳಿಸಿದರು.

ಶಂಸುಲ್ ಉಲೆಮಾ ಸಮ್ಮೇಳನದಲ್ಲಿ ಹಣ ದುರುಪಯೋಗ

Posted by JAYAKIRANA Kirana on | 0 comments | Leave a comment...

ಮೂಡಬಿದ್ರೆ: ಜಮಾತ್ ಕಮಿಟಿ ಆರೋಪ
ಮೂಡಬಿದ್ರೆ: ಇದೇ ತಿಂಗಳ ೧೪ ಮತ್ತು ೧೫ರಂದು ತೋಡಾರಿನಲ್ಲಿ ನಡೆಯಲಿರುವ ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ದ್ವಿತೀಯ ವಾರ್ಷಿ ಕೋತ್ಸವ ಮತ್ತು ಸಮ್ಮೇಳನಕ್ಕೆ ಸಂಬಂ ಧಿಸಿ ಸಂಗ್ರಹಿಸಿದ ಹಣ ದುರುಪ ಯೋಗಪಡಿಸಲಾಗಿದೆ. ಈ ಕಾಲೇಜಿಗೆ ಸಂಬಂಧಿಸಿದ ಟ್ರಸ್ಟಿನವರು ಜನರಿಗೆ ವಂಚನೆ ಮಾಡಿದ್ದಾರೆ ಎಂದು ತೋಡಾರು ಬದ್ರಿಯಾ ಸುನ್ನಿ ಜುಮ್ಮಾ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷ ಡಿ.ಎ. ಉಸ್ಮಾನ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಶಂಸುಲ್ ಉಲೆಮಾ ಎಂಬ ಶ್ರೇಷ್ಠ ಗುರುಗಳ ಹೆಸರನ್ನಿಟ್ಟು ಈ ಟ್ರಸ್ಟ್‌ನವರು ವಿದ್ಯಾರ್ಥಿಗಳಿಗೆ ಸಹಾಯ ಅರೆಬಿಕ್ ಕಾಲೇಜು ಅಂತೆಲ್ಲಾ ನಂಬಿಸಿ ಜನರಿಂದ ಹಣ ಸಂಗ್ರಹಿಸಿ ಜಮಾತ್ ನವರಿಗೆ ಈವರೆಗೆ ಯಾವುದೇ ಲೆಕ್ಕಪತ್ರ ತೋರಿಸಿಲ್ಲವೆಂದು ಆರೋಪಿಸಿರುವ ಅವರು ನಮ್ಮ ಜಮಾತಿನ ಬೈಲಾವನ್ನು ಗಣನೆಗೆ ತೆಗೆದುಕೊಳ್ಳದೆ ಅದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಅಲ್ಲದೆ ಈ ಟ್ರಸ್ಟಿನ ಲ್ಲಿರುವರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಜಮಾತ್‌ನ ಯಾವೊಬ್ಬ ಸದಸ್ಯನೂ ಇದರಲ್ಲಿಲ್ಲ ವೆಂಬುದಾಗಿಯೂ ಅವರು ಸ್ಪಷ್ಟಪಡಿಸಿದರು.
ಮೂಲತಃ ಪುತ್ತೂರಿನವರಾದ ಉಸ್ಮಾನ್ ಫೈಝಿ ಎಂಬವರು ಈ ಟ್ರಸ್ಟಿನ ಅಧ್ಯಕ್ಷರಾಗಿದ್ದು, ಇವರು ಈ ಹಿಂದೆ ಇದೇ ಮಸೀದಿಯ ಗುರುಗಳಾಗಿ ಕಾರ್ಯನಿರ್ವಹಿಸಿ ಕೊನೆಗೆ ಜಮಾ ತನ್ನು ಇಬ್ಭಾಗ ಮಾಡಿದವರು ಎಂದು ಆಪಾದಿಸಿದ ಅವರು ಇವರ ನೇತೃ ತ್ವದಲ್ಲೇ ಇಂತಹ ವಂಚನೆ,ಅನ್ಯಾಯ ನಡೆಯುತ್ತಿದೆ ಎಂದರು.
ಕಳೆದೆರಡು ವರ್ಷಗಳಿಂದ ಜಮಾ ತ್‌ನೊಳಗೆ ಎರಡು ವಿಭಾಗಗಳಾಗಿ ಭಿನ್ನಾಭಿಪ್ರಾಯಗಳು ನಡೆಯುತ್ತಿದ್ದು, ಎರಡೆರಡು ಬಾರಿ ಅವರನ್ನು ಈ ಭಿನ್ನಾಭಿಪ್ರಾಯಗಳನ್ನೂ ಮುಕ್ತವಾಗಿ ಪರಿಹರಿಸಿಕೊಳ್ಳೋಣ ಅಂತ ಸಭೆಗೆ ಜಮಾತ್‌ನವರು ಕರೆದರೂ ಅವರು ಭಾಗವಹಿಸದೆ, ಜಮಾತ್ ಕಮಿಟಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ, ಜಮಾತ್‌ನ ಅನುಮತಿ ಇಲ್ಲದೆ ಯಾವ ಕಾರ್ಯಕ್ರಮವನ್ನು ನಡೆಸುವಂತಿಲ. ಆದರೆ ಅವರು ಅದನ್ನು ಮಾಡುತ್ತಿದ್ದಾರೆ ಎಂದರಲ್ಲದೆ, ಈ ರೀತಿ ಹಣ ಸಂಗ್ರಹಿಸಿ ಅದನ್ನು ತಮ್ಮ ಸ್ವಂತಕ್ಕೆ ಉಪಯೋಗಿಸುತ್ತಿದ್ದಾರೆ ಎಂದೂ ಆರೋಪಿಸಿದರು. ಒಂದಾ ಶಂಸುಲ್ ಉಲೆಮಾರ ಸಹ ಶ್ರೇಷ್ಠರ ಹೆಸರನ್ನೂ ತೆಗೆಯಬೇಕು ಅಥವಾ ಜಮಾತ್‌ನ ನಾಲ್ಕು ಮಂದಿ ಸದಸ್ಯರನ್ನಾದರೂ ಟ್ರಸ್ಟಿನಲ್ಲಿ ಸೇರಿಸಿಕೊ ಳ್ಳಬೇಕು ಎಂದು ತಮ್ಮ ಅಭಿಪ್ರಾಯ ವನ್ನೂ ಹೇಳಿದ ಅವರು, ಇದ್ಯಾವು ದಕ್ಕೂ ಅವರು ತಯಾರಿಲ್ಲವೆಂದೂ ಹೇಳಿದರು. ಸರಕಾರಿ ಜಾಗವನ್ನು ಆಕ್ರಮಿಸಿಕೊಂಡು ಅವರ ಅರೆಬಿಕ್ ಕಾಲೇಜಿಗೆ ಶಂಕು ಸ್ಥಾಪನೆ ಇತ್ಯಾದಿ ನಡೆಸುತ್ತಿದ್ದಾರೆ. ಇವರ ಹಣ ದುರುಪಯೋಗದ ಕುರಿತು ನಾವು ಹಲವರಿಗೆ ಮನವರಿಕೆ ಮಾಡಿದ್ದು, ೧೪ಮತ್ತು ೧೫ರಂದು ನಡೆಯುವ ಸಮ್ಮೇಳನದಲ್ಲಿ ಭಾಗವಹಿಸುವ ಮುಖಂಡರುಗಳಿಗೂ ನಮ್ಮ ಜಮಾತಿನ ಆಕ್ಷೇಪ ಪತ್ರ ಸಲ್ಲಿಸಿದ್ದೇವೆ ಎಂದ ಉಸ್ಮಾನ್ ಈ ಬೋಗಸ್ ಟ್ರಸ್ಟಿಗೆ ಯಾರೂ ಹಣ ಸಹಾಯ ಮಾಡ ಬಾರದು ಮತ್ತು ಇವರ ಕಾರ್ಯ ಕ್ರಮದಲ್ಲಿ ಭಾಗವಹಿಸಬಾರದೆಂದೂ ಮನವಿ ಮಾಡಿದ್ದಾರೆ.
ಕಮಿಟಿಯ ಕಾರ್ಯದರ್ಶಿ ಮೊದಿನ್ ಉಪಾಧ್ಯಕ್ಷ ಶರೀಫ್, ಮಾಜಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

ವಿಠಲ ಮಲೆಕುಡಿಯ ಜಾಮೀನು ತೀರ್ಪು ಇಂದು

Posted by JAYAKIRANA Kirana on | 0 comments | Leave a comment...

ಪುತ್ತೂರು: ನಕ್ಸಲ್ ಬೆಂಬಲಿಗ ಮತ್ತು ಮಾಹಿತಿದಾರನೆಂದು ಆರೋ ಪಿಸಿ ಬಂಧನಕ್ಕೊಳಗಾಗಿರುವ ಬೆಳ್ತಂಗಡಿ ತಾಲೂಕಿನ ಕುದ್ಲೂರು ನಿವಾಸಿ ಪತ್ರಿಕೋದ್ಯಮ ವಿದ್ಯಾರ್ಥಿ ವಿಠಲ ಮಲೆಕುಡಿಯ ಅವರ ಜಾಮೀನು ತೀರ್ಪು ಬುಧವಾರ ಹೊರ ಬೀಳಲಿದೆ. ನಕ್ಷಲ್‌ಗೆ ಬೆಂಬಲ ನೀಡಿದ ಆರೋಪದಲ್ಲಿ ಮಾ. ೪ರಂದು ನಕ್ಸಲ್ ನಿಗ್ರಹ ಪಡೆ ಪೊಲೀಸರು ವಿಠಲ ಮಲೆಕುಡಿಯ ಮತ್ತು ಆತನ ತಂದೆ ಲಿಂಗಪ್ಪ ಮಲೆ ಕುಡಿಯ ಅವರನ್ನು ಬಂಧಿಸಿದ್ದರು. ಆದರೆ ವಿದ್ಯಾರ್ಥಿ ಯಾಗಿರುವ ವಿಠಲ ಮಲೆಕುಡಿಯ ಅವರು ವಾರ್ಷಿಕ ಪರೀಕ್ಷೆಗೆ ಬರೆಯಲಿ ರುವ ಕಾರಣ ಜಾಮೀನು ನೀಡುವಂತೆ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ನೀಡಲಾಗಿತ್ತು.

ಅಂಬೇಡ್ಕರ್ ಜಯಂತಿಗೆ ದಲಿತರ ಬಹಿಷ್ಕಾರ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಎ.೧೪ರಂದು ಬಂಟ್ವಾಳ ತಾ. ಪಂ. ಸಭಾಂಗಣದಲ್ಲಿ ತಾಲೂಕಾ ಡಳಿತ ಏರ್ಪಡಿಸಲಿರುವ ಭಾರತ ರತ್ನ ಡಾ. ಅಂಬೇಡ್ಕರ್ ದಿನಾಚರಣೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಂಘಟನೆಗಳು ಬಹಿಷ್ಕಾರ ಹಾಕಲಿದೆ ಎಂದು ಅಂಬೇಡ್ಕರ್ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ಹೇಳಿದ್ದಾರೆ.
ನಿನ್ನೆ ಬಿ.ಸಿ.ರೋಡಿನ ಡಾ. ಶ್ರೀನಿವಾಸ್ ರಾವ್ ಸಂಕೀರ್ಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತರ ಕಲ್ಯಾಣ ಕೇವಲ ಬೂಟಾಟಿಕೆ ಮಾತ್ರ. ಯಾವ ಸರ್ಕಾರಗಳು ಈ ಕುರಿತು ಪರಿಣಾಮ ಕಾರಿಯಾಗಿ ಚಿಂತನೆ ರೂಪಿಸಿಲ್ಲ. ಇದೀಗ ರಾಜ್ಯ ಸರ್ಕಾರ ಭೂ ಮಂಜೂರಾತಿ ಕಾಯ್ದೆಗಳ ಮುಖೇನ ಸಮುದಾಯವನ್ನು ಮತ್ತೊಮ್ಮೆ ಶೋಷಣೆಯ ಕೂಪಕ್ಕೆ ತಳ್ಳುತ್ತಿದೆ ಎಂದವರು ಆರೋಪಿಸಿದರು.
 ಭೂ ಮಂಜೂರಾತಿ ಕಾಯ್ದೆ ತಿದ್ದುಪಡಿ ಪ್ರಸ್ತಾವನೆ ಕುರಿತು ದಲಿತ ಸಂಘಟನೆಗಳು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ, ಸರ್ಕಾರಗಳಿಗೆ ಒತ್ತಡಗ ಳನ್ನು ಹಾಕಿತ್ತು. ಈ ಕುರಿತು ಶಾಸಕರಾದ ಬಿ.ರಮಾನಾಥ ರೈ ಅವರು ವಿಧಾನ ಸಭೆ ಅಧಿವೇಶನ ಸಂದರ್ಭ ಸರ್ಕಾರದ ಗಮನ ಸೆಳೆದಿದ್ದರು. ಆದರೆ ನಮ್ಮ ಮನವಿಯನ್ನು ಗಮನಿಸಿದ ಮುಖ್ಯ ಮಂತ್ರಿಗಳು ತೀರಾ ಬಾಲಿಶವಾಗಿ ಉತ್ತರ ನೀಡಿದ್ದರು ಎಂದು ಪ್ರತಿಕ್ರಿಯಿ ಸಿದ ಅವರು, ಕರ್ನಾಟಕ ಭೂ ಮಂಜೂರಾತಿ ನಿಯಮ ೧೯೬೯ರಂತೆ ನಿಗದಿಗೊಳಿಸಲಾದ ರೂ.೮೦೦೦ ಆದಾಯ ಮಿತಿಯನ್ನು ೫೦ ಸಾವಿರ ರೂ.ಗಳಿಗೆ ವಿಸ್ತರಿಸಬೇಕೆಂದು ಆಗ್ರಹಿಸಿ ದರು. ಅಂಬೇಡ್ಕರ್ ದಿನಾಚರಣೆ ಹೆಸರಿ ನಲ್ಲಿ ಲಕ್ಷ ಕೋಟ್ಯಂತರ ಅನುದಾನ ಗಳನ್ನು ದುರುಪಯೋಗ ಮಾಡುತ್ತಿ ರುವ ಸರ್ಕಾರವನ್ನು ಗಮನ ಸೆಳೆಯಲು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಗಳಿಗೆ ಸಾಮಾಜಿಕ ನ್ಯಾಯ, ಸಂವಿಧಾನಿಕ ಹಕ್ಕುಗಳನ್ನು ಹಂಚಿಕೆಗಾಗಿ ಅಂಬೇಡ್ಕರ್ ಜಯಂತಿಯನ್ನು ಬಹಿಷ್ಕರಿಸಲಿದ್ದೇವೆ. ಈ ಆಂದೋಲನ ಎಲ್ಲಾ ತಾಲೂಕು, ಜಿಲ್ಲೆಗಳನ್ನು ಸಂಘಟಿಸಬೇಕಾಗಿದೆ. ಈ ನಿಟ್ಟಿನಲ್ಲಿ ದಲಿತ ಸಂಘಟನೆಗಳು ಸಿದ್ಧತೆಗಳನ್ನು ನಡೆಸಬೇಕಾಗಿವೆ ಎಂದವರು ಕರೆ ನೀಡಿದ್ದಾರೆ. ದಲಿತ ಸಮಾಜದವರು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಾಯ್ದೆಗಳನ್ನು ದುರುಪಯೋಗ ಪಡಿಸುತ್ತಿದ್ದಾರೆ ಎನ್ನುವುದು ಕೆಲವು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಆರೋಪಗಳಿಗೆ ವಾಸ್ತವಾಂಶ ಇಲ್ಲ. ಕಾಯ್ದೆಗಳ ಉಲ್ಲಂಘನೆ ಹಾಗೂ ದುರುಪಯೋಗ ಪೊಲೀಸ್ ಹಾಗೂ ಇತರ ಕೆಲವು ಇಲಾಖೆಗಳನ್ನು ನಡೆಯುತ್ತಿದೆ. ಅವುಗಳನ್ನು ತಡೆಗೆ ಸರ್ಕಾರ ವಿಶೇಷ ಕ್ರಮ ಜರುಗಿಸಬೇಕೆಂದು ದ.ಕ. ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ಹೊನ್ನಪ್ಪ ಕುಂದರ್ ಆರೋಪಿಸಿದರು. ದಲಿತ ಸಂಘಟಕರಾದ ಜನಾರ್ದನ್ ಚೆಂಡ್ತಿಮಾರ್, ಕೇಶವ ನಾಕ್, ಬಿ.ಕೆ.ಸೇಸಪ್ಪ ಬೆದ್ರಕ್ಕಾಡು, ಚಂದ್ರಶೇಖರ್, ಜನಾರ್ದನ್ ಬೋಳಂತೂರು, ಮೋಹನ್ ಬಡಗಬೆಳ್ಳೂರು ಸುದ್ದಿಗೋಷ್ಠಿಯಲ್ಲಿದ್ದರು.

ದೃಷ್ಟಿ ಕಳೆದುಕೊಂಡಿರುವ ಪುಟ್ಟ ಬಾಲಕನಿಗೆ ಬೇಕಿದೆ ಸಹಾಯಹಸ್ತ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಇನ್ನೂ ಬಾಳಿ ಬದುಕಬೇಕಾಗಿರುವ ಬಾಲಕನ ದೃಷ್ಟಿಗೆ ಆಕಸ್ಮಿಕವಾಗಿ ನಡೆದ ಘಟನೆಯೊಂ ದರಿಂದ ಹಾನಿಯಾಗಿ ಕಳೆದ ಒಂದು ವರ್ಷದಿಂದ ದೃಷ್ಟಿ ಹೀನನಾಗಿದ್ದು ಶಾಲೆ ಯನ್ನು ತೊರೆಯುವಂತೆ ಮಾಡಿದೆ. ಆದರೆ ಇತ್ತೀಚೆಗೆ ಖ್ಯಾತ ವೈದ್ಯರೊಬ್ಬರ ಸಲಹೆಯಂತೆ ದುಬಾರಿ ವೆಚ್ಚದ ಚಿಕಿತ್ಸೆ ನೀಡಿದಲ್ಲಿ ದೃಷ್ಟಿ ಮರುಕಳಿಸುವ ಸಾಧ್ಯತೆ ಇರುವುದರಿಂದ ಬಡ ಕುಟುಂಬ ದಾನಿಗಳ ನೆರವು ಕೋರಿದೆ.
ಕಾಂತಾವರ ನಿವಾಸಿ ಪ್ರಭಾಕರ ಪರಿಯಾಲ-ಸುಜಾತಾ ದಂಪತಿ ಪುತ್ರ ಕಿರಣ್ ಕುಮಾರ್ (೯) ಎಂಬ ನತದೃಷ್ಟ ಬಾಲಕ ಶಾಲೆಗೆ ಸೇರಿ ಎರಡೇ ದಿನಗ ಳಾಗಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದ ಸಮಯದಲ್ಲಿ ಸುಣ್ಣದ ಹುಡಿಯಲ್ಲಿ ಆಟವಾಡುತ್ತಿದ್ದ ಸಂದರ್ಭ ಹುಡಿ ಕಣ್ಣಿಗೆ ತಾಗಿದ ಪರಿಣಾಮ ದೃಷ್ಟಿಗೆ ಹಾನಿಯಾಯಿತು. ಇದರಿಂದ ಕಿರಣ್‌ನ ಹೆತ್ತವರು ಬಾಲಕನ ದೃಷ್ಟಿಗಾಗಿ ಹಲವೆಡೆ ಸುತ್ತಾಡಿ ಸಾವಿರಾರು ರೂ ಹಣ ವ್ಯಯಿಸಿದರೂ ಏನೂ ಫಲ ಸಿಗ ಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು. ಇತ್ತೀಚೆಗೆ ಉಡುಪಿ ಪ್ರಸಿದ್ಧ ನೇತ್ರ ವೈದ್ಯರಾದ ಕೃಷ್ಣಪ್ರಸಾದ್ ಅವರನ್ನು ಕಿರಣ್ ಹೆತ್ತವರು ಸಂಪ ರ್ಕಿಸಿದಾಗ ದೃಷ್ಟಿ ಸರಿಪಡಿಸಬಹುದು, ಆದರೆ ಚಿಕಿತ್ಸೆಗೆ ಒಂದು ಲಕ್ಷ ಹತ್ತು ಸಾವಿರ ರೂ. ಬೇಕಾದೀತು ಎಂಬ ಸಲಹೆ ನೀಡಿದ್ದರು. ಇದರಿಂದಾಗಿ ದಿಕ್ಕು ತೋಚದಂತಾಗಿರುವ ಕ್ಷೌರಿಕ ವೃತ್ತಿ ನಡೆಸುತ್ತಿರುವ ಕಿರಣನ ತಂದೆ ಪ್ರಭಾಕರ ಹಾಗೂ ಬೀಡಿ ಕಟ್ಟಿ ಜೀವನ ನಿರ್ವಹಿಸುತ್ತಿರುವ ತಾಯಿ ಸುಜಾತಾ ದಾನಿಗಳ ನೆರವು ಕೋರಿದ್ದಾರೆ.
ಸಹಾಯ ಮಾಡಲಿಚ್ಛಿಸುವವರು ಕಾರ್ಕಳ ಸಾಣೂರು ವಿಜಯಬ್ಯಾಂಕ್ ಅಕೌಂಟ್ ನಂ. ೧೧೯೦೦೧೧೧೧೦೦೦೩೯೧ ಗೆ ಹಣ ಪಾವತಿಸಬಹುದಾಗಿದೆ.
ಜಯಕಿರಣ ಮನವಿ
ದೃಷ್ಟಿ ಕಳೆದುಕೊಂಡಿರುವ ಕಿರಣ್ ಕುಮಾರ್‌ಗೆ ನೆರವು ನೀಡುವಂತೆ ಸಹೃದಯ ಓದುಗರಲ್ಲಿ ಜಯಕಿರಣ ಕಳಕಳಿಯ ಮನವಿ ಮಾಡುತ್ತಿದೆ.

ನೀರು ಮಾಫಿಯಾದಿಂದಾಗಿ ಅಂತರ್ಜಲ ಕುಸಿತ

Posted by JAYAKIRANA Kirana on | 0 comments | Leave a comment...


ಹಿತರಕ್ಷಣಾ ಸಮಿತಿ ಆತಂಕ
ಮಂಗಳೂರು: ನೀರು ಮಾಫಿ ಯಾದಿಂದಾಗಿ ಪಜೀರು ಹಾಗೂ ಕೈರಂಗಳ ಗ್ರಾಮದಲ್ಲಿ ಅಂತರ್ಜಲ ಮಟ್ಟ ಕುಸಿತಗೊಂಡಿದ್ದು ಇದರ ಪರಿಣಾಮವಾಗಿ ಗ್ರಾಮದಲ್ಲಿ ನೀರಿನ ಕ್ಷಾಮ ಉಂಟಾಗಿದೆ ಎಂದು ಪಜೀರು ಕೈರಂಗಳ ಗ್ರಾಮ ಹಿತ ರಕ್ಷಣಾ ವೇದಿಕೆ ಆತಂಕ ವ್ಯಕ್ತಪಡಿಸಿದೆ.
ನಿನ್ನೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಡಾ.ಬಿ.ಶಿವರಾಮ ಶೆಟ್ಟಿ, ಇವೆರಡೂ ಗ್ರಾಮಗಳು ಹಸಿರು ವಲಯಗಳಾಗಿವೆ. ಆದರೆ ಕಳೆದ ಮೂರ‍್ನಾಲ್ಕು ವರ್ಷಗಳಿಂದ ಗದ್ದೆ-ತೋಟಗಳಿರುವ ಕೆಲವು ಮನೆಯವರು ಒಂದರ ಮೇಲೊಂದರಂತೆ ಕೊಳವೆ ಬಾವಿಗಳನ್ನು ತೋಡಿಸಿ ಐಟಿ, ಬಿಟಿ ಕಂಪೆನಿ ಕಾಮಗಾರಿ, ಉದ್ಯಾನವನಕ್ಕೆ ನೀರು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ನೀರಿನ ಕೊರತೆ ಉಂಟಾ ಗಿದ್ದು ಪೊನ್ನುರಾಜ್ ಜಿಲ್ಲಾಧಿಕಾರಿ ಯಾಗಿದ್ದ ಸಂದರ್ಭ ಅವರಿಗೆ ದೂರು ನೀಡಲಾಗಿತ್ತು.
ಆ ವೇಳೆ ಗಣಿ ಇಲಾಖೆಯವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ನೀರು ಮಾರಾಟದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವ ಬಗ್ಗೆ ನೀಡಿದ ವರದಿಯನ್ನಾಧರಿಸಿ ಜಿಲ್ಲಾಧಿಕಾರಿ ಯವರು ನೀರು ಮಾರಾಟಕ್ಕೆ ನಿಶೇಧ ಹೇರಿದ್ದಲ್ಲದೆ ನೀರು ಸಾಗಾಟದ ಟ್ಯಾಂಕರ್‌ಗಳನ್ನು ಜಫ್ತಿ ಮಾಡುವಂತೆ ಕೊಣಾಜೆ ಪೊಲೀಸರಿಗೆ ಆದೇಶ ವನ್ನೂ ನೀಡಿದ್ದರು. ಆದರೆ ನೀರು ಮಾರಾಟಗಾರರು ಮತ್ತು ಟ್ಯಾಂಕರ್ ಮಾ ಲೀಕರು ಮಧ್ಯವರ್ತಿ ಗಳನ್ನೇ ಪ್ರತಿವಾದಿಗಳನ್ನಾಗಿಸಿ ಟ್ಯಾಂಕರ್ ಗಳನ್ನು ಬಿಡಿಸಿದ್ದ ಪರಿಣಾಮವಾಗಿ ಮತ್ತೆ ನೀರು ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಪ್ರತೀದಿನ ಲಕ್ಷಾಂತರ ಲೀಟರ್ ನೀರು ಸರಬರಾಜು ಆಗುತ್ತಿದ್ದು ಇದರ ಪರಿಣಾಮವಾಗಿ ಗ್ರಾಮದ ಬಾವಿಗಳೆಲ್ಲವೂ ಬತ್ತಿ ಹೋಗಿದೆ. ಈ ಬಗ್ಗೆ ಇನ್ಸ್‌ಪೆಕ್ಟರ್‌ಗೆ ಮಾಹಿತಿ ನೀಡಿದರೂ ಪ್ರಯೋಜನ ವಾಗಿಲ್ಲ. ಜಿಲ್ಲಾಡಳಿತಕ್ಕೆ ದೂರು ನೀಡಿದರೆ, ಪ್ರಕರಣ ನ್ಯಾಯಾಲಯ ದಲ್ಲಿರುವ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಅಲ್ಲದೆ ನೀರು ದಂಧೆಕೋರರು ಕಾನೂನನ್ನು ತಿರುಚಿ ಸ್ಥಳೀಯರಿಗೆ ಬೆದರಿಸಿ, ರೌಡಿಯಿಸಂ ಮೂಲಕ ತಮ್ಮ ವ್ಯವಹಾರ ಮುಂದು ವರಿಸುತ್ತಿದ್ದಾರೆ. ಇದನ್ನು ವಿರೋಧಿಸಿ ನೀರು ಉಳಿಸಿ, ಊರು ಉಳಿಸಿ, ಅಂತರ್ಜಲ ಕಾಪಾಡಿ ಎನ್ನುವ ಬೇಡಿಕೆ ಯನ್ನು ಜಿಲ್ಲಾಡಳಿತದ ಮುಂದಿಡುವ ಸಲುವಾಗಿ ಇದೇ ತಿಂಗಳ ೧೬ರಂದು ೧೧ ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಯೆದುರು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಎಂ.ಬಾಸ್ಕರ, ಜಯರಾಮ್ ಶೆಟ್ಟಿ, ಅಮೀರ್ ಅಲಿ ಮತ್ತು ಕೆ.ಗಂಗಾಧರ್ ಉಪಸ್ಥಿತರಿದ್ದರು.

ವರ್ಷದಲ್ಲಿ ೯ ದಿನ ಮಾಂಸ ಮಾರಾಟ ನಿಷೇಧ ಸುತ್ತೋಲೆ

Posted by JAYAKIRANA Kirana on | 0 comments | Leave a comment...

ಹಿಂಪಡೆಯಲು ಹಿಂದುಳಿದ ವರ್ಗಗಳ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ವರ್ಷ ದಲ್ಲಿ ಒಂಬತ್ತು ದಿನಗಳು ಮಾಂಸ ಮಾರಾಟ ನಿಷೇಧ ಹೇರಬೇಕು ಎಂಬ ಬಿಬಿಎಂಪಿಯ ಪಶುಸಂಗೋಪನೆ ಇಲಾಖೆ ಹೊರಡಿಸಿರುವ ಸುತ್ತೋಲೆ ಯನ್ನು ತಕ್ಷಣ ಹಿಂಪಡೆಯಬೇಕು ಎಂದು ಹಿಂದುಳಿದ ವರ್ಗಗಳ ಆಯೋಗ ಹಾಗೂ ಸಮತಾ ಸೈನಿಕ ದಳ ಸರ್ಕಾರವನ್ನು ಒತ್ತಾಯಿಸಿದೆ.
ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪೊ.ರವಿವರ್ಮ, ಸರ್ವೋದಯ ದಿನ, ಮಹಾಶಿವರಾತ್ರಿ, ಶ್ರೀರಾಮ ನವಮಿ, ಮಹಾವೀರ ಜಯಂತಿ, ಅಂಬೇಡ್ಕರ ಜಯಂತಿ, ಬುದ್ದ ಪೂರ್ಣಿಮಾ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ದಿನಗಳಂದು ಮಾಂಸ ಮಾರಾಟ ನಿಷೇಧ ಮಾಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸರಿಯಿಲ್ಲ.
ಅಲ್ಪಸಂಖ್ಯಾತರ ಮತ್ತು ದಲಿತರ ಆಹಾರದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಇಂತಹ ಕಾನೂ ನುಗಳನ್ನು ಜಾರಿಗೆ ತರುವುದರಿಂದ ಪ್ರತಿ ದಿನ ಮಾಂಸ ಮಾರಾಟ ಮಾರಿ ಜೀವನ ನಡೆಸುತ್ತಿರುವ ಹಲವು ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿದರು.
ಒಂದು ನಿಗದಿತ ದಿನದಂದು ಮಾಂಸಹಾರ ನಿಷೇಧಿಸಿರುವ ಸರ್ಕಾರ ಅದೇ ರೀತಿ ವರ್ಷದಲ್ಲಿ ಒಂದು ದಿನ ರಾಜ್ಯಾದ್ಯಂತ ಎಲ್ಲ ಧರ್ಮದವರು ಮಾಂಸವನ್ನು ಸೇವಿಸುವಂತೆ ಘೋಷಿಸಬೇಕು ಎಂದು ಒತ್ತಾಯಿ ಸಿದರು.
ರಾಜ್ಯದಲ್ಲಿರುವ ಶೇ. ೨ರಷ್ಟು ಜೈನ ಧರ್ಮ ಜನಾಂಗದ ಹಿತ ಕಾಪಾಡಲು ಬಹುಸಂಖ್ಯಾತರ ಅಹಾರ ಕ್ರಮವನ್ನು ವಿರೋಧಿಸುವುದು ಜಾತ್ಯತೀತ ಧರ್ಮಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದರು.

ಮತ್ತೆ ಜೆಡಿಎಸ್‌ನಲ್ಲಿ ಧನರಾಜ್

Posted by JAYAKIRANA Kirana on | 0 comments | Leave a comment...

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಅಳಿದ ಊರಿಗೆ ಉಳಿದವನೇ ಗೌಡ ಎಂಬಂತಹ ಸ್ಥಿತಿಯ ಲ್ಲಿರುವ ಜೆಡಿಎಸ್‌ನಲ್ಲಿ ಕಳೆದ ವಾರ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನರಾಜ್‌ರನ್ನು ಉಚ್ಚಾಟಿಸಿ ದ್ದರೆ, ಈಗ ಅವರನ್ನೇ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ನೇಮಿಸುವ ಆದೇಶವೂ ಬಂದಿದೆ.
ದ.ಕ. ಜಿಲ್ಲೆಯಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸ್ಥಿತಿಯಲ್ಲಿಯೇ ಸಾಗುತ್ತಿರುವ ಜೆಡಿಎಸ್‌ನಲ್ಲಿ ಕಳೆದ ವರ್ಷ ಕಾಂಗ್ರೆಸ್‌ನ ಎಂ.ಜಿ. ಹೆಗಡೆ ಮತ್ತವರ ಬಳಗ ಸೇರಿಕೊಂಡಿತ್ತು. ಪಕ್ಷದ ಸಂಘಟನೆಗೆ ಎಂ.ಜಿ. ಹೆಗಡೆ ಶಕಿ ಯಾಗಿ ಬರಬಹುದು ಎಂಬ ನಿರೀಕ್ಷೆ ಹುಸಿಗೊಳಿಸಿದ್ದು ಮಾತ್ರವಲ್ಲದೇ, ಬಂದ ಕೆಲವೇ ಅವಧಿಯಲ್ಲಿ ಪಕ್ಷದಲ್ಲಿ ಕಾಂಗ್ರೆಸ್ ಸಂಸ್ಕೃತಿಯನ್ನೂ ತುರುಕಿ ಬಿಟ್ಟಿದ್ದರು. ಪಕ್ಷದಲ್ಲೀಗ ಎಂ.ಜಿ. ಹೆಗಡೆಯವರದೇ ಒಂದು ಗುಂಪಾದರೆ ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವರದ್ದೇ ಒಂದು ಗುಂಪು ಎಂಬಂತಹ ಸ್ಥಿತಿ ಇದೆ. ಧನರಾಜ್‌ರ ಉಚ್ಚಾಟನೆಯ ಪ್ರಹಸನ ನಡೆದುದು ಕೂಡ ಇಂತಹ ಗುಂಪು ರಾಜಕೀಯದ ಪ್ರಭಾವದಿಂದಲೇ ಎಂದೂ ಹೇಳಲಾಗುತ್ತಿದೆ. ಎಂ.ಜಿ. ಹೆಗಡೆ ಗುಂಪು ರಾಜಕೀಯದಲ್ಲಿ ತೊಡಗಿದ್ದರೆ ಇದರ ವಿರುದ್ಧ ಧ್ವನಿ ಎತ್ತಿ ಎಂ.ಬಿ. ಸದಾಶಿವರ ಪರವಾಗಿ ನಿಂತಿದ್ದವರಲ್ಲಿ ಧನರಾಜ್ ಕೂಡ ಓರ್ವರು. ಅವರನ್ನೇ ಎಂ.ಬಿ. ಉಚ್ಚಾಟಿಸಿದ್ದೇನೆ ಎಂದು ಹೇಳುವ ಹಂತದ ರಾಜಕೀಯ ಬೆಳವಣಿಗೆ ನಡೆದುದು ವಿಪರ್ಯಾಸ. ಕಳೆದ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಅಶಿಸ್ತು, ದುರ್ವರ್ತನೆ ಎಂದೂ ಪ್ರದರ್ಶಿಸಿಲ್ಲ. ಕೆಲವರು ನನ್ನ ಬಗ್ಗೆ ಪಕ್ಷದ ಅಧ್ಯಕ್ಷರಲ್ಲಿ ತಪ್ಪು ಕಲ್ಪನೆ ಮೂಡಿಸಿದ್ದರು. ಪಕ್ಷದ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯ ಮದ್ಯಸ್ಥಿಕೆಯಲ್ಲಿ ಎಲ್ಲ ಸರಿಯಾಗಿದೆ. ಪಕ್ಷದ ಸಂಘಟನೆಗೆ ತಾನು ದುಡಿಯು ವುದಾಗಿ ಜಿಲ್ಲಾಧ್ಯಕ್ಷರಿಗೆ ತಿಳಿಸಿದ್ದೇನೆ ಎನ್ನುತ್ತಾರೆ ಧನರಾಜ್.
ಎಂ.ಬಿ. ಸದಾಶಿವ ಹಾಗೂ ಮುಹಮ್ಮದ್ ಕುಂಞಿಯವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಲು ಸಿದ್ಧರಾಗಿದ್ದರು ಎಂಬುದು ಧನರಾಜ್ ವಿರುದ್ಧ ಕೇಳಿ ಬಂದ ಆರೋಪ. ಆದರೆ ಇದನ್ನು ನಿರಾಕರಿಸುವ ಧನರಾಜ್ ತಾನು ಪತ್ರಿಕಾಗೋಷ್ಠಿ ಕರೆದಿರಲೇ ಇಲ್ಲ ಎಂದು ತಿಳಿಸುತ್ತಾರೆ.
ಪಕ್ಷದಲ್ಲಿ ಅಶಿಸ್ತು ಮೂಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಕ್ಷದ ವರಿಷ್ಠರು ತನಗೆ ಅಧಿಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದುರ್ವರ್ತನೆ ತೋರುವವರ ವಿರುದ್ಧ ಕ್ರಮ ಕೈಗೊ ಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಧನರಾಜ್ ತಮ್ಮ ತಪ್ಪನ್ನು ಒಪ್ಪಿಕೊಂಡಿ ದ್ದಾರೆ. ಆದುದರಿಂದ ಅವರನ್ನು ಮತ್ತೆ ಪಕ್ಷದಲ್ಲಿ ಸಕ್ರಿಯರಾಗುವ ಅವಕಾಶ ಒದಗಿಸಲಾಗಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರನ್ನಾಗಿ ನೇಮಿಸುವಂತೆ ನನಗೆ ಸೂಚಿಸಲಾಗಿದೆ. ಈ ನೇಮಕದ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಎಂ.ಬಿ. ಸದಾಶಿವ ತಿಳಿಸಿದ್ದಾರೆ.

ಮೋಹನನ ಇನ್ನಷ್ಟು ಪ್ರಕರಣಗಳು ಮಂಗಳೂರು ನ್ಯಾಯಾಲಯಕ್ಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸೈನೆಡ್ ಮೋಹನ ನಡೆಸಿದ್ದ ಎನ್ನಲಾದ ಕೊಲೆ ಪ್ರಕರಣಗಳ ವಿಚಾರಣೆ ವಿವಿಧೆಡೆಗಳಲ್ಲಿ ಬಾಕಿಯಿದ್ದು,
ಈ ಎಲ್ಲಾ ಪ್ರಕರಣಗಳ ವಿಚಾರಣೆ ಯನ್ನು ಮಂಗಳೂರಿನ ತ್ವರಿತಗತಿ ನ್ಯಾಯಾಲಯದಲ್ಲಿಯೇ ಮುಂದು ವರಿಸಲು ರಾಜ್ಯ ಹೈಕೋರ್ಟ್ ಅನು ಮತಿ ನೀಡಿದೆ.
ಶಿಕ್ಷಕನಾಗಿದ್ದ ಮೋಹನ್ ೨೦ ಮಹಿಳೆಯರನ್ನು ಸೈನೈಡ್ ನೀಡಿ ಕೊಲೆ ಮಾಡಿದ್ದಾನೆ ಎಂದು ಪ್ರಕರಣ ದಾಖ ಲಾಗಿದೆ. ೧೩ ಪ್ರಕರಣಗಳ ವಿಚಾರಣೆ ಮಂಗಳೂರು ತ್ವರಿತಗತಿ ನ್ಯಾಯಾಲ ಯದಲ್ಲಿ ನಡೆಯುತ್ತಿದೆ. ಇನ್ನುಳಿದ ಏಳು ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಮಡಿಕೇರಿ, ಎರಡು ಬೆಂಗಳೂರು, ಮೈಸೂರು ಹಾಗೂ ಕುಂದಾಪುರಗಳಲ್ಲಿ ತಲಾ ಒಂದೊಂದು ಪ್ರಕರಣಗಳು ಇವೆ. ಪ್ರಕರಣಗಳ ವಿಚಾರಣೆ ಮಂಗ ಳೂರು ತ್ವರಿತಗತಿ ನ್ಯಾಯಾಲಯದಲ್ಲಿಯೇ ಪೂರೈಸಲು ಅನುಮತಿ ನೀಡು ವಂತೆ ಕೋರಿ ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ನ್ಯಾಯಾಧೀಶರಾದ ಆನಂದ್‌ರವರು ಆರೋಪಿ ಹಾಗೂ ಸರಕಾರಿ ಅಭಿಯೋಜಕರಿಗೆ ಅನುಕೂಲವಾಗುವುದರಿಂದ ಎಲ್ಲ ಪ್ರಕರಣಗಳನ್ನೂ ದ.ಕ. ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲು ಅನುಮತಿ ನೀಡಿ ಆದೇಶ ಹೊರಡಿಸಿ ದ್ದಾರೆ.

ದುಬೈಯಲ್ಲಿ ಪರಿಹಾರ ಕೋರಲು ನಿರ್ಧಾರ

Posted by JAYAKIRANA Kirana on | 0 comments | Leave a comment...

ಮಂಗಳೂರು ವಿಮಾನ ದುರಂತ:
ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಕನಿಷ್ಠ ಹತ್ತು ಭಾರತೀಯ ಕುಟುಂಬಗಳು ಮಂಗಳೂರು ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಪರಿಹಾರ ಕೋರಲು ನಿರ್ಧರಿಸಿವೆ. ಮಾಂಟ್ರಿಯಲ್ ಒಪ್ಪಂದದಂತೆ ದುರಂತ ಸಂಭವಿಸಿದ ಎರಡು ವರ್ಷಗಳ ಒಳಗೆ ಪರಿಹಾರ ಕೋರಲು ಅವಕಾಶ ಇದೆ. ಈ ಅವಧಿ ಮುಂದಿನ ತಿಂಗಳ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿರುವುದರಿಂದ ಮುಂದಿನ ಎರಡು ವಾರಗಳಲ್ಲಿ ದುರಂತದ ಸಂತೃಸ್ತ ಕುಟುಂಬದವರು ಪರಿಹಾರ ಕೋರುವ ಅರ್ಜಿ ಸಲ್ಲಿಸಲಿವೆ ಎಂದು ದಿ ನ್ಯಾಶನಲ್ ನ್ಯೂಸ್ ಪೇಪರ ವರದಿ ಮಾಡಿದೆ. ಆದಷ್ಟು ಶೀಘ್ರದಲ್ಲಿ ಪರಿಹಾರ ಅರ್ಜಿ ಸಲ್ಲಿಸುವಂತೆ ಮಂಗಳೂರು ವಿಮಾನ ದುರಂತದಲ್ಲಿ ಬಲಿಯಾದವರ ಕುಂಟುಂಬಗಳ ಸಂಘಟನೆ ಸಂಯುಕ್ತ ಸಂಸ್ಥಾನದಲ್ಲಿರುವ ಕುಟುಂಬದವರನ್ನು ಒತ್ತಾಯಿಸಿದೆ.

ಬೋರ್‌ವೆಲ್ ತಡೆದು ಪ್ರತಿಭಟಿಸಿದ ಗ್ರಾಮಸ್ಥರು

Posted by JAYAKIRANA Kirana on | 0 comments | Leave a comment...

ಮಂಗಳೂರು: ಗ್ರಾಮಸ್ಥರ ಬೇಡಿಕೆಯನ್ನು ಕಡೆಗಣಿಸಿ ಬೋರ್‌ವೆಲ್ ಸ್ವಚ್ಛಗೊಳಿಸಲು ನಿರಾಕರಿಸಿದ ಬೋರ್‌ವೆಲ್ ಏಜೆಂಟನಿಗೆ ದಿಗ್ಬಂಧನ ವಿಧಿಸಿದ ಗ್ರಾಮಸ್ಥರು ಸ್ಥಳದಲ್ಲೇ ತಮ್ಮ ಕೆಲಸ ಮಾಡಿಸಿಕೊಂಡ ಘಟನೆ ಕಡಬ ಸಮೀಪದ ಅಲಂಕಾರು ಪೇಟೆಯಲ್ಲಿ ನಿನ್ನೆ ನಡೆದಿದೆ.
ಅಲಂಕಾರು ಪೇಟೆಯಲ್ಲಿನ ಬೋರ್‌ವೆಲ್‌ನಲ್ಲಿ ವಾರದಿಂದ ಸರಿಯಾಗಿ ನೀರು ಬರುತ್ತಿರಲಿಲ್ಲ. ಬೋರ್‌ವೆಲ್ ಸ್ವಚ್ಛಗೊಳಿಸಿದರೆ ನೀರು ಬರುತ್ತದೆ ಎಂದು ಗ್ರಾ.ಪಂ. ಆಡಳಿತ ಬೋರ್‌ವೆಲ್ ಏಜೆಂಟನನ್ನು ಕೆಲವ ಮಾಡುವಂತೆ ವಿನಂತಿಸಿತ್ತು. ಆದರೆ ಆತ ಕೆಲಸ ಮಾಡಲು ನಿರಾಕರಿಸಿದ್ದ. ನಿನ್ನೆ ಆತ ಖಾಸಗಿ ವ್ಯಕ್ತಿಯೊಬ್ಬರ ಮನೆಗೆ ಬೋರ್‌ವೆಲ್ ತೋಡಲು ಹೋಗುತ್ತಿದ್ದ ವೇಳೆ ತಡೆದ ಗ್ರಾಮಸ್ಥರು ಕೆಲಸ ಮಾಡಿಸಿಕೊಂಡಿದ್ದಾರೆ.
ಅಪಘಾತ: ಚಾಲಕ ಖುಲಾಸೆ: ಕಳೆದ ೨೦೦೭ರ ಆ.೧೪ರಂದು ಕುಂದಾಪುರ ಸಮೀಪದ ಮೂಡಹಡು ಗ್ರಾಮದ ಚೇಂಪಿ ಎಂಬಲ್ಲಿ ಬಸ್ ಚಲಾಯಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಆರೋಪಿ ಬಸ್ ಚಾಲಕ ರಘು ಯಾನೆ ರಾಘವೇಂದ್ರ ಎಂಬಾತನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಬಾಲಾಜಿ ಹೊಳ್ಳ ಎಂಬವರು ಮೃತಪಟ್ಟಿದ್ದರು. ಕೋಟ ಠಾಣಾ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಲೂಕು ಪಂಚಾಯತ್ ಮುಂಭಾಗದ ಗುಡ್ಡೆಗೆ ಬೆಂಕಿ

Posted by JAYAKIRANA Kirana on | 0 comments | Leave a comment...

ಕಾರ್ಕಳ: ತಾ. ಪಂ. ಮುಂಭಾಗದ ಗುಡ್ಡೆಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಸಕಾಲದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿರುವುದರಿಂದ ಭಾರೀ ಅನಾಹುತವೊಂದು ತಪ್ಪಿದೆ. ತಾ. ಪಂ.ನಲ್ಲಿ ಕೆಡಿಪಿ ಸಭೆ ನಡೆಯುತ್ತಿದ್ದ ಅವಧಿಯಲ್ಲಿ ಈ ಅನಾಹುತ ಸಂಭವಿ ಸಿದೆ. ಸಭೆಗೆ ಅಗಮಿಸಿದ ಜನಪ್ರತಿನಿಧಿಗಳು ತಮಗೆ ಸೇರಿದ ಕಾರುಗಳನ್ನು ಇದೇ ಪರಿಸರದಲ್ಲಿ ನಿಲ್ಲಿಸಿದ್ದರು. ಬೆಂಕಿಯ ಕಿಡಿ ಕಾಣಿಸಿ ಕೊಂಡಿದೆ ಎಂಬ ಮಾಹಿತಿ ಬೆಳಕಿಗೆ ಬರುತ್ತಿದ್ದಂತೆ ಕಾರನ್ನು ಅಲ್ಲಿಂದ ಸ್ಥಳಾಂತರಿಸಿದರೆ, ಹೊರತು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿರಲಿಲ್ಲ. ಪತ್ರಕರ್ತರೊಬ್ಬರು ನೀಡಿದ ಮಾಹಿತಿಯಂತೆ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಸ್ಥಳಕ್ಕೆ ಬಂದಿದೆ.

ಮುಸ್ಲಿಮರೇ ನಕಲಿ ಕೇಶದ ಬಗ್ಗೆ ಎಚ್ಚೆತ್ತುಕೊಳ್ಳಿ

Posted by JAYAKIRANA Kirana on | 0 comments | Leave a comment...

ಮಲಯಮ್ಮ ಸಖಾಫಿ ಕರೆ
ಮಂಗಳೂರು: ನಕಲಿ ಕೇಶವನ್ನೇ ಬಳಸಿ ಅದನ್ನು ಪ್ರವಾದಿ (ಸ.ಅ) ಯವರು ಕೇಶವೆಂದು ನಂಬಿಸಿ ದಂಧೆ ನಡೆಸುತ್ತಿರುವವರ ಬಗ್ಗೆ ಮುಸ್ಲಿಮರು ಎಚ್ಚೆತ್ತುಕೊಳ್ಳಬೇಕು ಎಂದು ಎಪಿ ವಿಭಾಗದಿಂದ ಎಸ್‌ಕೆಎಸ್‌ಎಸ್‌ಫ್‌ಗೆ ಮರಳಿದ ಮಲಯಮ್ಮ ಮಹಮ್ಮದ್ ಸಖಾಫಿ ಕರೆ ನೀಡಿದ್ದಾರೆ.
ಮೊನ್ನೆ ಶನಿವಾರ ಪುತ್ತೂರಿನಲ್ಲಿ ನಡೆದ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ಘಟಿಕೋತ್ಸವ ಪ್ರಚಾರ ಸಮ್ಮೇ ಳನದಲ್ಲಿ ಅವರು ಮಾತನಾಡಿದರು. ನಕಲಿ ಕೇಶಕ್ಕೆ ಸನದು (ಕೇಶದ ಪರಂಪರೆ) ಬೇಕೆಂದು ಆ ಸಂಘಟ ನೆಯ ನೇತಾರರು ಕೇಳಿಕೊಂಡ ಕಾರಣ ಸಂಘಟನೆಯ ನಿಷ್ಠಾವಂತ ಕಾರ್ಯಕರ್ತನಾಗಿದ್ದ ನಾನು ಆ ಕೆಲಸ ಮಾಡಿದ್ದೆ. ಈ ರೀತಿಯ ಸುಳ್ಳು ಪ್ರಚಾರ ದಿಂದ ಪರಲೋಕದಲ್ಲಿ ಪ್ರವಾದಿ(ಸ.ಅ) ಅನುಗ್ರಹ ಸಿಗಲಾರದು. ಅವರ ಹೆಸರಲ್ಲಿ ನಿರಾಧಾರ ವಿಷಯಗಳನ್ನೇರಿ ಜನರನ್ನು ವಂಚಿಸುವವರಿಗೆ ನರಕಾಗ್ನಿ ಕಾದಿದೆ ಎಂಬ ಪುಣ್ಯ ವಚನದಲ್ಲಿ ನಂಬಿಕೆ ಯಿರಿಸಬೇಕು ಎಂದು ಎಚ್ಚರಿಸಿದ ಅವರು ನಾನೂ ಕೂಡ ಸತ್ಯ ಅರಿತು ಸಮಸ್ತ ಸೇರಿದ್ದೇನೆ ಎಂದರು. ಸಮಾ ವೇಶದಲ್ಲಿ ಮಿತ್ತಬೈಲು ಉಸ್ತಾದ್, ಪುತ್ತೂರು ತಂಙಳ್, ಶಮೀರ್ ಅರ್ಶದಿ, ಅಬ್ದುಲ್ಲಾ ಅರ್ಶದಿ ಮತ್ತಿ ತರರು ಉಪಸ್ಥಿತರಿದ್ದರು.

ಪಿಎಫ್‌ಐ-ಬಿಜೆಪಿ ಕಾರ್ಯಕರ್ತರ ಹೊಡೆದಾಟ

Posted by JAYAKIRANA Kirana on | 0 comments | Leave a comment...


ಬಂಟ್ವಾಳ: ಹಳೆ ದ್ವೇಷವನ್ನು ಮುಂದಿಟ್ಟು ಪಿಎಫ್‌ಐ ಹಾಗೂ ಬಿಜೆಪಿ ಕಾರ್ಯಕರ್ತ ರಿಬ್ಬರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಿನ್ನೆ ಫರಂಗಿಪೇಟೆಯಲ್ಲಿ ಸಂಭವಿಸಿದೆ.
ಘಟನೆಗೆ ಕಾರಣ ಹಳೆಯ ದ್ವೇಷದ ಹಿನ್ನೆಲೆಯಾಗಿದ್ದರೂ, ಕೌಟುಂಬಿಕ ಕಾರಣ ಗಳೂ ಇವೆ ಎನ್ನಲಾಗುತ್ತಿದೆ. ಘಟನೆಯಿಂ ದಾಗಿ ಗಾಯಗೊಂಡ ಕುಂಪನಮಜಲು ನಿವಾಸಿ ಶರೀಫ್ ಹಾಗೂ ಫರಂಗಿಪೇಟೆ ನಿವಾಸಿ ಅಶ್ರಫ್ ಎಂಬವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶರೀಫ್ ಮತ್ತು ಅಶ್ರಫ್ ಇಬ್ಬರೂ ಸಂಬಂಧಿಕರು. ಆದರೆ ಅವರಿಬ್ಬರ ಮಧ್ಯೆ ಪರಸ್ಪರ ದ್ವೇಷ ಇತ್ತೆನ್ನಲಾಗಿದೆ. ಶರೀಫ್ ಪಿಎಫ್‌ಐಯಲ್ಲಿ ಸಕ್ರಿಯವಾಗಿದ್ದರೆ, ಅಶ್ರಫ್ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಆಗಾಗಿ ಇಬ್ಬರ ನಡುವೆ ರಾಜಕೀಯ ಹಿನ್ನೆಲೆಯ ವೈಷಮ್ಯ ಕಾಣಿಸಿತ್ತು. ಶರೀಫ್ ತನ್ನ ಅತ್ತಿಗೆ ಮನೆಗೆ ಹೋಗಿರುವುದನ್ನು ಆಕ್ಷೇಪಿಸಿದ್ದ ಅಶ್ರಫ್ ಪ್ರಶ್ನಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದರು.
ಚಿಕ್ಕಮ್ಮನ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಿರುವುದಾಗಿ ಅಶ್ರಫ್ ಆರೋಪಿಸಿದ್ದು, ಠಾಣೆಗೆ ದೂರು ನೀಡಿದ್ದಾರೆ. ಈ ಮಧ್ಯೆ ಫರಂಗಿಪೇಟೆಯ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಬಿಜೆಪಿ ಮುಖಂಡ ಓರ್ವರು ಪ್ರಕರಣವನ್ನು ಬಗೆಹರಿಸಲು ಮುಂದಾಗಿದ್ದಾರೆ. ಗ್ರಾಮಾಂತರ ಪೊಲೀಸರು ಎರಡೂ ಕಡೆಯವರನ್ನು ಕರೆಯಿಸಿ ಮಾತುಕತೆ ನಡೆಸುತ್ತಿದ್ದಾರೆ. ಆದರೆ ಘಟನೆ ಯನ್ನು ಕೆಲವು ರಾಜಕೀಯ ವ್ಯಕ್ತಿಗಳು ಇತ್ಯರ್ಥಗೊಳಿಸಲು ಬಿಡದೇ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಪತಿಯರಸಿ ಬಂದ ಪತ್ನಿಯ ಮೇಲೆ ಹಲ್ಲೆ

Posted by JAYAKIRANA Kirana on | 0 comments | Leave a comment...





ಕುಂದಾಪುರ: ತನ್ನ ಮಗುವಿನೊಂದಿಗೆ ಎರಡನೇ ಪತಿಯ ಮನೆಗೆ ಬಂದ ಪತ್ನಿಯನ್ನು ಆಕೆಯ ಪತಿ, ಎರಡನೇ ಹೆಂಡತಿ ಸಹಿತ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸಮೀಪದ ಉಳ್ಳೂರು ಗ್ರಾಮದ ಹಲ್ಸೂರು ಎಂಬಲ್ಲಿ ಜರುಗಿದ್ದು, ಹಲ್ಲೆಗೊಳಗಾದ ಮಹಿಳೆ ಮೈನಾ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮೂಲತ: ಮೈಸೂರಿನವಳಾದ ಮೈನಾಳಿಗೆ ಮೊದಲು ಒಂದು ಮದುವೆಯಾಗಿ ಪುಟ್ಟ ಗಂಡು ಮಗುವನ್ನು ಹೊಂದಿದ್ದಳು. ಆದರೆ ಸಂಸಾರ ನೆಟ್ಟಗೆ ಸಾಗದೇ ಗಂಡ ತ್ಯಜಿಸಿದ ನಂತರ ಸ್ನೇಹಿತೆಯೋರ್ವಳ ಮೂಲಕ ಮೊಬೈಲ್ ಕರೆಯಿಂದ ಪರಿಚಿತನಾ ದವನು ಹಲ್ತೂರಿನ ಚಂದ್ರ ಪೂಜಾರಿ ಎನ್ನಲಾಗಿದೆ. ಮೊಬೈಲ್‌ನಲ್ಲಿ ಸಾಗಿದ ಪ್ರಣಯ ಸುಮಾರು ಐದು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಪರಿಣಯವಾಗಿ ತಾವಿಬ್ಬರು ದಂಪತಿಗಳಾದೆವೆಂದು ಮೈನಾ ಹೇಳಿದ್ದಾಳೆ. ಆರಂಭದಲ್ಲಿ ಅವಳನ್ನು ತೆಕ್ಕಟ್ಟೆಯ ಬಾಡಿಗೆ ಮನೆಯಲ್ಲಿರಿಸಿದ ಚಂದ್ರ ತನ್ನನ್ನು ಚೆನ್ನಾಗಿ ನೋಡಿಕೊಂಡಿದ್ದು, ಆದರೆ ತನಗೆ ಗೊತ್ತಿಲ್ಲದಂತೆ ಉಡುಪಿ ಮಲ್ಪೆಯ ಉಷಾ ಎಂಬವಳನ್ನು ಮದುವೆಯಾಗಿದ್ದ ನಂತರ ಉಪಟಳ ಆರಂಭವಾಗಿತ್ತೆಂದಿದ್ದಾಳೆ. ಹೊತ್ತಲ್ಲದ ಹೊತ್ತಿನಲ್ಲಿ ತೆಕ್ಕಟ್ಟೆಯ ಬಾಡಿಗೆ ಮನೆಗೆ ಬಂದು ಕದನಕ್ಕೆ ನಿಲ್ಲುತ್ತಿದ್ದ ಉಷಾಳಿಂದ ಅಕ್ಕಪಕ್ಕದವರೂ ರೋಸಿ ಹೋಗಿದ್ದು, ಪೊಲೀಸು ಫಿರ್ಯಾದಿ, ಪ್ರಕರಣಗಳೂ ನಡೆದಿದ್ದರಿಂದ ಕೊನೆಗೊಮ್ಮೆ ಗಂಡ ಚಂದ್ರ ತನಗೆ ಮೈಸೂರಿನಲ್ಲಿ ಬಾಡಿಗೆ ಮನೆಯೊಂದನ್ನು ಒದಗಿಸಿಕೊಟ್ಟಿದ್ದು, ಆಗಾಗ್ಗೆ ಬಂದು ಖರ್ಚು ವೆಚ್ಚವೆಲ್ಲವನ್ನೂ ನೋಡಿಕೊಳ್ಳುತ್ತಿದ್ದನಂತೆ. ಆದರೆ ಕೆಲವು ಸಮಯದಿಂದೀಚೆಗೆ ಏಕಾಏಕಿ ಪತಿ ಚಂದ್ರ ನಾಪತ್ತೆಯಾಗಿದ್ದು, ಮೊಬೈಲ್ ಕರೆಗಳನ್ನೂ ರಿಸೀವ್ ಮಾಡದಿದ್ದರಿಂದ ಅಧೀರಳಾದ ಮೈನಾ ತನ್ನ ಮಗ ಹರೀಶ್‌ನೊಂದಿಗೆ ಬೆಳ್ಳಂಬೆಳಗ್ಗೆ ಮೈಸೂರಿ ನಿಂದ ಹಲ್ತೂರಿಗೆ ಬಂದು ಕದ ತಟ್ಟಿದ್ದಾಳೆ. ಪತಿ ಮನೆಯವರು, ಸವತಿ ಉಷಾ ಜರೆದರೂ ಸಂಜೆಯ ತನಕ ಅಲ್ಲೇ ಪಟ್ಟು ಹಿಡಿದವಳಂತೆ ಕುಳಿತು ಬಿಟ್ಟಿದ್ದಾಳೆ. ಸಂಜೆಯ ನಂತರ ಪತಿ ಚಂದ್ರ ಮನೆಗೆ ಬಂದ ನಂತರ ಮತ್ತೆ ಎರಡನೇ ಸುತ್ತಿನ ಕಲಹ ಆರಂಭವಾಗಿದೆ. ನಡುರಾತ್ರಿಯ ತನಕ ಜರಗಿದ ಮಾತಿನ ಸಮರ ಕೊನೆಗೊಮ್ಮೆ ಮೈನಾಳ ಮೇಲೆ ಭೀಕರ ಹಲ್ಲೆಯಿಂದ ತಾತ್ಕಾಲಿಕ ತಟಸ್ಥಗೊಂಡಿದೆ. ಪತಿ ಚಂದ್ರ, ಮಾವ ಕೋಟಿ ಪೂಜಾರಿ, ಸವತಿ ಉಷಾ, ಅತ್ತೆ ಕಮಲ ಪೂಜಾರ‍್ತಿ ಸೇರಿದಂತೆ ಕೆಲವರ ಮೇಲೆ ಮೈನಾ ದೂರು ದಾಖಲಿಸಿದ್ದಾಳೆ.

ಐವರ್ನಾಡು: ಹೊಡೆದಾಟ

Posted by JAYAKIRANA Kirana on | 0 comments | Leave a comment...

ಸುಳ್ಯ: ನೀರು ಬಿಡುವ ವಿಚಾರವಾಗಿ ಹೊಡೆದಾಟ ನಡೆದು ಆಸ್ಪತ್ರೆ ಸೇರಿದ ಘಟನೆ ಐವರ್ನಾಡಿನಲ್ಲಿ ಮಂಗಳವಾರ ನಡೆದಿದೆ.
ಐವರ್ನಾಡು ಗ್ರಾ. ಪಂ.ನಲ್ಲಿ ಕುಡಿ ಯುವ ನೀರು ಪೂರೈಕೆಗೆ ಚೋಮ ಎಂಬವರು ಅಧಿಕೃತವಾಗಿ ನೇಮಕ ಗೊಂಡವರು. ಆದರೆ ಅವರ ಬದಲು ರಾಮಣ್ಣ ಅಜಿಲ ಹಾಗೂ ಕೇಶವ ಎಂಬವರು ನೀರು ಬಿಡುವ ಕೆಲಸ ಮಾಡು ತ್ತಿದ್ದರು. ಮಂಗಳವಾರ ನೀರು ಬಿಡುವ ವಿಚಾರವಾಗಿ ಇವರೊಳಗೆ ಮಾತಿಗೆ ಮಾತು ಬೆಳೆದು ಹೊಡೆದಾಟ ಸಂಭವಿಸಿದೆ. ಇವರ ಹೊಡೆದಾಟ ಬಿಡಿಸಲು ಚೋಮ ಆಗಮಿಸಿದ್ದು, ಬಳಿಕ ಇಬ್ಬರೂ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಪರಸ್ಪರರ ವಿರುದ್ಧ ದೂರು ನೀಡಿದ್ದಾರೆ.

ಹಳೇ ವೈಷಮ್ಯಕ್ಕೆ ಕಾರ್ಮಿಕನ ಕೊಲೆ: ಇಬ್ಬರು ವಶಕ್ಕೆ

Posted by JAYAKIRANA Kirana on | 0 comments | Leave a comment...

ಮಣಿಪಾಲ: ಲಾರಿಯಲ್ಲಿ ಲೋಡರ್ ಆಗಿ ಕರ್ತವ್ಯ ನಿರ್ವಹಿ ಸುತ್ತಿದ್ದ ಬಾದಾಮಿ ಮೂಲದ ಬಸವಂತಪ್ಪ ಕೊಲೆಪ್ರಕರಣಕ್ಕೆ ಸಂಬಂಧಿಸಿ ಹತ್ಯೆಗೈದ ಆರೋಪಿಗಳಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹಣದ ವಿಚಾರವಾಗಿ ಇದ್ದ ಹಳೇ ವೈಷಮ್ಯಕ್ಕೆ ಸಂಬಂಧಿಸಿ ಕೊಲೆ ನಡೆಸಿರುವ ಮಾಹಿತಿ ಬಂಧಿತರಿಂದ ತಿಳಿದುಬಂದಿದೆ.
ಜಾರ್ಖಂಡ್ ಮೂಲದ ಪ್ರಬೀನ್ ತೋಪೊ ಹಾಗೂ ಪ್ರಭು ಬಂಧಿತ ಆರೋಪಿಗಳು. ಪ್ರಬೀನ್ ಹಾಗೂ ಹತ್ಯೆಗೊಳಗಾದ ಬಸವಂತಪ್ಪನಿಗೆ ಹಣದ ವಿಚಾರವಾಗಿ ಹಳೇ ವೈಷಮ್ಯವಿತ್ತು. ಒಂದೇ ರೂಮಿನಲ್ಲಿದ್ದ ಮೂವರು ಭಾನುವಾರ ಕಂಠಪೂರ್ತಿ ಕುಡಿದ ಬಳಿಕ ಪ್ರಬೀನ್ ಹಾಗೂ ಬಸವಂತಪ್ಪ ಜಗಳಕ್ಕಿಳಿದಿದ್ದರು. ಇಬ್ಬರ ಜಗಳ ತಾರಕಕ್ಕೇರಿ ಪ್ರಬೀನ್ ಸ್ಕ್ರೂಡ್ರೈವರ್‌ನಿಂದ ಬಸವಂತಪ್ಪನ ಎದೆ ಭಾಗಕ್ಕೆ ಚುಚ್ಚಿದ್ದನು. ಬಳಿಕ ಕಾಲಿಗೆ ಚುಚ್ಚಿ ಹತ್ಯೆಗೈದಿದ್ದನು. ಅಷ್ಟು ಘಟನೆಯಾಗುತ್ತಿದ್ದರೂ ಇನ್ನೋರ್ವ ಪ್ರಭು ಸೋಫಾದಲ್ಲಿ ಕುಳಿತು ಇಬ್ಬರ ಜಗಳವನ್ನು ನೋಡುತ್ತಲೇ ಇದ್ದನು. ಆದರೆ ಜಗಳ ಕೊಲೆಯಾಗುವವರೆಗೂ ನಡೆಯುತ್ತದೆ ಎಂದು ಆತನಿಗೆ ತಿಳಿದಿರಲಿ ಲ್ಲವೆಂದು ತಿಳಿದುಬಂದಿದೆ. ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್ ನೇತೃತ್ವದ ಪೊಲೀಸರು ಆರೋಪಿಗಳಿಬ್ಬರನ್ನು ಉಡುಪಿಯಿಂದ ಬಂಧಿಸಿದ್ದಾರೆ.

ಕೃಷ್ಣಾಪುರ: ಜನರನ್ನು ಬೋಳಿಸಿ ಪರಾರಿಯಾದ ಬ್ಲೇಡ್ ಶಂಕರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಇಲೆಕ್ಟ್ರಾನಿಕ್ ವಸ್ತುಗಳನ್ನು ಅರ್ಧ ಹಣಕ್ಕೆ ನೀಡುತ್ತೇನೆಂದು ಜನರನ್ನು ನಂಬಿಸಿದ ಭೂಪನೊಬ್ಬ ಲಕ್ಷಾಂತರ ರುಪಾಯಿ sssssssssssssಸಂಗ್ರಹಿಸಿ ಜನರಿಗೆ ಮೂರು ನಾಮ ಹಾಕಿ ಪರಾರಿಯಾಗಿರುವ ಘಟನೆ ಕೃಷ್ಣಾಪುರದಲ್ಲಿ ನಡೆದಿದೆ.ಈ ಬಗ್ಗೆ ವಂಚನೆಗೊಳಗಾದವರು ದೂರು ನೀಡಿದರೂ ವಂಚಕನ ಚಾಲಾಕಿತನದಿಂದಾಗಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಸಾಧ್ಯವಾಗಿಲ್ಲ.
ಮೂಲತಃ ತಮಿಳುನಾಡು ನಿವಾಸಿಯಾಗಿರುವ ರವಿಶಂಕರ್ ಎಂಬಾತ ಒಂದು ತಿಂಗಳ ಹಿಂದೆ ಕೃಷ್ಣಾಪುರ ಐದನೇ ಬ್ಲಾಕ್‌ನಲ್ಲಿ ಮಂಜು ಏಜೆನ್ಸಿ ಎಂಬ ಅಂಗಡಿಯನ್ನು ತೆರೆದಿದ್ದ. ಇಲ್ಲಿ ಯಾವುದೇ ಇಲೆಕ್ಟ್ರಾನಿಕ್ಸ್ ವಸ್ತುಗಳು ಬೇಕಾದರೂ ಅರ್ಧಹಣವನ್ನು ಮೊದಲೇ ಪಾವತಿಸಿ ಹತ್ತು ದಿನಗಳ ಬಳಿಕ ವಸ್ತುಗಳನ್ನು ಪಡೆದುಕೊಳ್ಳ ಬಹುದು ಎಂದು ಪ್ರಚಾರ ನಡೆಸಿದ್ದ. ನಮಗೆ ಬೇಕಾಗಿರುವ ವಸ್ತುವಿನ ಮೂಲ ಬೆಲೆಯ ಅರ್ಧ ಮೊತ್ತವನ್ನು ಪಾವತಿಸಿದರೆ ಒಂದು ರಶೀದಿಯನ್ನು ನೀಡಲಾಗುತ್ತಿದ್ದು. ಅದರಲ್ಲಿ ನಮೂ ದಿಸಿದ ದಿನಾಂಕದಂದು ಬಂದು ವಸ್ತುವನ್ನು ಪಡೆದುಕೊಳ್ಳ ಬಹುದಾಗಿತ್ತು. ಆರಂಭದಲ್ಲಿ ಈತ ಕೆಲ ಮಂದಿಗೆ ತನ್ನ ಮಾತಿನಂತೆ ಅರ್ಧ ಬೆಲೆಗೆ ವಸ್ತುಗಳನ್ನು ನೀಡಿದ್ದ ಇದನ್ನು ನಂಬಿದ ಹಲವಾರು ಮಂದಿ ಈತನ ಅಂಗಡಿಗೆ ಬಂದು ಅರ್ಧ ಹಣವನ್ನು ನೀಡಿ ವಸ್ತುಗಳನ್ನು ಕಾಯ್ದಿರಿಸುತ್ತಿದ್ದರು. ಇದರಿಂದಾಗಿ ಒಂದೇ ವಾರದಲ್ಲಿ ಸಕತ್ ಹಣ ಮಾಡಿದ್ದ ಈತ ಮತ್ತೊಂದು ಅಂಗಡಿಯನ್ನೂ ತೆರೆದಿದ್ದ. ಅಲ್ಲದೆ ಕೃಷ್ಣಾಪುರ ಐದನೇ ಬ್ಲಾಕ್‌ನಲ್ಲಿಯೇ ಬಾಡಿಗೆ ಮನೆ ಮಾಡಿ ಕೊಂಡಿದ್ದ ಇದು ಈತನ ಮೇಲೆ ಜನರಿಗೆ ಮತ್ತಷ್ಟು ನಂಬಿಕೆ ಬರಲು ಕಾರಣವಾಗಿತ್ತು. ಹೀಗಾಗಿ ಇತ್ತೀಚಿನ ದಿನದಲ್ಲಿ ಈತನ ಬಳಿ ಹಲವಾರು ಮಂದಿ ಬಂದು ಬೆಲೆ ಬಾಳುವ ವಸ್ತುಗಳಿಗೆ ಅರ್ಧ ಹಣ ಪಾವತಿಸಿದ್ದರು. ಇವರಿಗೆಲ್ಲ ಹತ್ತು ದಿನದ ಬಳಿಕ ವಸ್ತುಗಳನ್ನು ನೀಡುವ ಭರವಸೆಯನ್ನು ರವಿಶಂಕರ್ ನೀಡಿದ್ದ. ಇದನ್ನು ಜನರೂ ನಂಬಿದ್ದರು ಆದರೆ ಈತ ಮಾತ್ರ ಭಾನುವಾರ ರಾತ್ರಿ ಯಾರಿಗೂ ಸುಳಿವನ್ನೂ ನೀಡದೆ ಲಕ್ಷಾಂತರ ಹಣದೊಂದಿಗೆ ನಾಪತ್ತೆಯಾಗಿ ಬಿಟ್ಟಿದ್ದಾನೆ. ಈತನ ಎರಡು ಶಾಪ್ ಮತ್ತು ಮನೆಗೆ ಬೀಗ ಜಡಿಯಲಾಗಿದೆ. ತಾವು ವಂಚನೆಗೊಳಗಾಗಿದ್ದೇವೆ ಎಂದು ತಿಳಿಯುತ್ತಲೇ ಜನ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ದೂರು ದಾಖಲುಗೊಳಿಸಲು ಮಾತ್ರ ಪೊಲೀಸರಿಂದ ಸಾಧ್ಯವಾಗು ತ್ತಿಲ್ಲ. ಆರೋಪಿ ಹೆಚ್ಚಿನವರಿಗೆ ಎಪ್ರಿಲ್ ೧೩ ರಂದು ಮತ್ತು ಇನ್ನು ಕೆಲವರಿಗೆ ಎಪ್ರಿಲ್ ೨೦ ರಂದು ವಸ್ತುಗಳನ್ನು ನೀಡು ವುದಾಗಿ ರಶೀದಿ ನೀಡಿದ್ದ ಹೀಗಾಗಿ ಆತ ನೀಡಿದ ದಿನಾಂಕ ಕ್ಕಿಂತ ಮೊದಲೇ ಈತನ ವಿರುದ್ಧ ವಂಚನೆ ದೂರು ದಾಖ ಲಿಸಿಕೊಳ್ಳಲು ಪೊಲೀಸರಿಗೆ ಕಾನೂನು ತೊಡಕಾಗುತ್ತಿದೆ ಎಂದು ಸುರತ್ಕಲ್ ಎಸ್.ಐ ರಮೇಶ್ ತಿಳಿಸಿದ್ದಾರೆ.

ಕಾಸರಗೋಡು: ಕೊಲೆ ಪ್ರಕರಣದ ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ತಲೆಗೆ ಬಡಿದು ಕೊಲೆಗೈದ ಪ್ರಕರಣದ ಆರೋಪಿಯನ್ನು ಬಂಧಿ ಸಲಾಗಿದೆ.
ಇಲ್ಲಿನ ಕರಿಚ್ಚೇರಿ ಪೊಯಿನಾಚಿಯ ಪಕ್ಕೀರನ್‌ರವರ ಪುತ್ರ ಬಾಲಕೃಷ್ಣ ನಾಯರ್(೫೨) ಎಂಬವರನ್ನು ತಲೆಗೆ ಕಲ್ಲಿನಿಂದ ಜಜ್ಜಿ ಹತ್ಯೆ ನಡೆಸಿದ ಪ್ರಕರಣ ದಲ್ಲಿ, ಕರಿಚ್ಚೇರಿ ಕುಞಿರಾಮನ್‌ರ ಪುತ್ರ ಬಾಲಕೃಷ್ಣ ನಂಬ್ಯಾರ್(೪೫) ಎಂಬಾತ ನನ್ನು ಹೊಸದುರ್ಗ ಇನ್‌ಸ್ಪೆಕ್ಟರ್ ಕೆ.ವಿ. ವೇಣುಗೋಪಾಲ್ ನಿನ್ನೆ ಬಂಧಿಸಿದ್ದಾರೆ.
ಮೊನ್ನೆ ಬೆಳಿಗ್ಗೆ ಪೊಯಿನಾಚಿ ಶಾಸ್ತಾಂಕೋಟ ಕುನ್ನುಮ್ಮಲ್ ಎಂಬಲ್ಲಿ ತಾನು ಹೊಸತಾಗಿ ನಿರ್ಮಿಸುತ್ತಿದ್ದ ಮನೆಯ ಜಗಲಿಯಲ್ಲಿ ಬಾಲಕೃಷ್ಣ ನಾಯರ್‌ರವರ ಶವ ಪತ್ತೆಯಾಗಿತ್ತು. ಮುಖವು ಜಜ್ಜಿದ ಸ್ಥಿತಿಯಲ್ಲಿತ್ತು. ಕೊಲೆಯೆಂದು ಬಾಲಕೃಷ್ಣ ನಾಯರ್ ಹಾಗೂ ಹಂತಕನು ಘಟನೆಯ ಹಿಂದಿನ ದಿನ ಜತೆಯಾಗಿ ಮದ್ಯ ಸೇವಿಸಿದ್ದರು. ಬಳಿಕ ಅಂಗಡಿಯೊಂದರ ಮುಂದೆ ನಿಂತು ಇವರಿಬ್ಬರು ವಾಗ್ವಾದದ ಲ್ಲೇರ್ಪಟ್ಟಿರುವುದನ್ನು ಕಂಡವರಿದ್ದಾರೆ. ಬಾಲಕೃಷ್ಣ ನಾಯರ್ ಆರೋಪಿಯ ಕೈಯ್ಯಿಂದ ೫೦೦ ರೂ. ಸಾಲ ಪಡೆದಿ ದ್ದರು. ಈ ಪೈಕಿ ೩೦೦ ರೂ. ಹಿಂದೆಯೇ ಮರುಪಾವತಿಸಲಾಗಿತ್ತು. ಉಳಿದ ೨೦೦ ರೂ.ಯನ್ನು ಆರೋಪಿ ಕೇಳಿದಾಗ ತಕ್ಷಣ ಹಣ ನೀಡಿದ ನಾಯರ್ ಅವರು, ಆದರೆ ನಾನು ನಿನಗೆ ಹಿಂದೆ ೧೦೦೦ ರೂ. ನೀಡಿದ್ದುದನ್ನು ಮರೆಯಬಾರ ದಿತ್ತು ಎಂದಿದ್ದರು. ಇದುವೇ ಪರಸ್ಪರ ವಾಗ್ವಾದಕ್ಕೆ ಕಾರಣವಾಗಿತ್ತು.
ಘಟನೆ ಬಳಿಕ ಬಾಲಕೃಷ್ಣ ನಾಯರ್ ಮನೆಗೆ ಹೋಗಿ ವರಾಂಡದಲ್ಲೇ ಮಲಗಿದ್ದರು. ಈ ವೇಳೆ ಆ ದಾರಿಯಾಗಿ ಬಂದ ಆರೋಪಿಯು ಮಲಗಿ ನಿದ್ರಿಸಿದ್ದ ನಾಯರ್‌ರ ತಲೆಗೆ ಭಾರೀ ಗಾತ್ರದ ಕಲ್ಲೊಂದನ್ನು ಹಾಕಿ ಪರಾರಿಯಾಗಿದ್ದ.

ಬಾಗಿಲು ಮುರಿದು ಚಿನ್ನಾಭರಣ ದರೋಡೆ

Posted by JAYAKIRANA Kirana on | 0 comments | Leave a comment...

ಕುಂದಾಪುರ: ಹಿಂಬದಿ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ನಗನಗದು ದೋಚಿರುವ ಘಟನೆ ಇಲ್ಲಿನ ತಲ್ಲೂರಿನ ಮನೆಯೊಂದರಲ್ಲಿ ಜರಗಿದೆ.
ತಲ್ಲೂರಿನಲ್ಲಿರುವ ಅರುಣ್ ಜೆ. ಮೆಂಡೋನ್ಸಾ (೪೨) ಎನ್ನುವವರ ಫ್ರೇಡ್ ಐರಿನ್ ವಿಲ್ಲಾ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ಸುಮಾರು ೨ ಲಕ್ಷ ರೂ ಮೌಲ್ಯದ ೧೦೦ ಗ್ರಾಂ ಚಿನ್ನಾಭರಣಗಳನ್ನು ಹಾಗೂ ಮನೆಯಲ್ಲಿದ್ದ ೩೦೦೦ರೂ.ಗಳನ್ನು ದೋಚಿ ಪರಾರಿಯಾಗಿದ್ದಾರೆ. ಅರುಣ್ ಕುಟುಂಬ ಸಮೇತ ಶನಿವಾರದಂದು ಮುಂಬೈಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದು, ನಿನ್ನೆ ಬೆಳಿಗ್ಗೆ ಮನಗೆ ಬಂದು ನೋಡಿದಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರು ವುದು ಕಂಡು ಬಂದಿದ್ದು, ಮನೆ ದರೋಡೆಯಾದ ವಿಚಾರ ತಿಳಿದು ಬಂದಿದೆ.ಸ್ಥಳಕ್ಕೆ, ಎಡಿಷನಲ್ ಎಸ್.ಪಿ. ಕುಂದಾಪುರದ ಡಿವೈಎಸ್‌ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಭೇಟಿ ಕೊಟ್ಟಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರು ಪರಿಶೀಲಿ ಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಸುರತ್ಕಲ್ ಬೈಕ್ ಕಳವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಸುರತ್ಕಲ್‌ನಲ್ಲಿರುವ ಚತುಷ್ಪಥ ಪ್ಲೈ ಓವರ್ ಅಡಿಬಾಗದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಎ.೭ರಂದು ಮಧ್ಯಾಹ್ನ ೩:೩೦ಕ್ಕೆ ನಿಲ್ಲಿಸಿದ್ದ ಮುಕ್ಕ ಮಿತ್ರಪಟ್ಣ ನಿವಾಸಿ ಯಜ್ಞೇಶ್ ಎಂಬವರಿಗೆ ಸೇರಿದ ಬಜಾಜ್ ಪಲ್ಸರ್ ಬೈಕ್ ಕಳವಾದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಬೈಕ್ ಕಳವು ಪ್ರಕರಣಗಳು ಹೆಚ್ಚಾಗಿದ್ದು, ದ್ವಿಚಕ್ರ ವಾಹನ ಮಾಲಕರು ಜಾಗೃತಿ ವಹಿಸಬೇಕು. ಹ್ಯಾಂಡ್ಲ್ ಲಾಕ್ ಮಾಡಿ ಬೈಕ್ ಪಾರ್ಕ್ ಮಾಡಬೇಕು ಎಂದು ಪೊಲೀಸರು ವಿನಂತಿಸಿದ್ದಾರೆ.

ಯುವತಿ ಕಾಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಕ್ಕದ ಮುಹಮ್ಮದ್ ಸಿದ್ದೀಕ್ ಎಂಬವರ ಪುತ್ರಿ ಸುಮುಯ್ಯಬಾನು (೧೭) ಎಂಬಾಕೆ ಕಳೆದ ಎ.೮ರಿಂದ ಕಾಣೆಯಾದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎ.೭ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಈಕೆ ಎಂಟರಂದು ಮುಂಜಾನೆ ನಾಲ್ಕು ಗಂಟೆಯ ಹೊತ್ತಿಗೆ ಹಾಸಿಗೆಯಿಂದ ಎದ್ದು ಹೋಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೊಡೆದಾಡುತ್ತಿದ್ದವರ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ತಾಲೂಕಿನ ಮಯೂರ ಬಾರ್ ಬಳಿ ಪರಸ್ಪರ ಹೊಡೆದಾಡುತ್ತಿದ್ದ ಕೊಲ್ಲೂರು ಹೆಗ್ಡೆ ಹಕ್ಲು ನಿವಾಸಿ ರಾಜು ಹಾಗೂ ಉಡುಪಿ ಅಂಬಲಪಾಡಿಯ ದಯಾನಂದ ಎಂಬವರನ್ನು ಕೊಲ್ಲೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಉಂಟು ಮಾಡಿದ ಕೇಸ್ ದಾಖಲಿಸಿದ್ದಾರೆ.

ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...





ಕಾಲೇಜ್, ಹಾಸ್ಟೆಲ್ ಗಾಜುಗಳು ಪುಡಿ
ಮಂಗಳೂರು: ಕೊಣಾಜೆ ಸಮೀಪದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜು ಹಾಗೂ ಹಾಸ್ಟೆಲ್‌ಗೆ ಮುತ್ತಿಗೆ ಹಾಕಿ ಗಾಜುಗಳನ್ನು ಪುಡಿಗಟ್ಟಿದ್ದಾರೆ.
ಕೂಳೂರು ನಿವಾಸಿ ಮೆಹನಾಝ್ ಬಾನು(೨೦) ಎಂಬಾಕೆಯೇ ಆತ್ಮಹತ್ಯೆ ಮಾಡಿ ಕೊಂಡವಳು. ಈಕೆ ನಡುಪದವಿನಲ್ಲಿರುವ ಪಿ.ಎ.ಕಾಲೇಜಿನಲ್ಲಿ ದ್ವಿತೀಯ ಇಂಜಿನಿ ಯರಿಂಗ್ ವಿಭಾಗದ ವಿದ್ಯಾರ್ಥಿನಿಯಾ ಗಿದ್ದಳು. ಹಾಸ್ಟೆಲ್‌ನಲ್ಲಿ ವಾಸವಿದ್ದು ಮಂಗಳವಾರ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಈಕೆಯ ಮೃತದೇಹ ವಾಸವಿದ್ದ ಕೋಣೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆಗೆ ಕಾರಣ ನಿಗೂಢವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕಳೆದ ನಾಲ್ಕು ದಿನದಿಂದ ಕಾಲೇಜಿಗೆ ರಜೆ ಯಿದ್ದು ಆ ಸಮಯದಲ್ಲಿ ಆಕೆ ತಾನು ಹಿಂದೆ ಕಲಿಯುತ್ತಿದ್ದ ಮಂಗಳೂರಿನ ಕಾಲೇಜು ಸಹಪಾಠಿಗಳ ಜೊತೆ ಗೋವಾಕ್ಕೆ ಪ್ರವಾಸ ಹೋಗಿದ್ದಳು ಎನ್ನಲಾಗಿದೆ. ಮೊನ್ನೆ ಹಾಸ್ಟೆಲ್‌ಗೆ ವಾಪಾಸ್ಸಾಗಿದ್ದು ಆ ಸಂದರ್ಭ ಕ್ಯಾಂಪಸ್ ನಿರ್ದೇಶಕ ಮೇಜರ್ ಉದಯನ್ ಎಂಬವರು ಆಕೆಯನ್ನು ವಿಚಾರಿಸಿದ್ದಲ್ಲದೆ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದಿದ್ದ ಆಕೆ ನಿನ್ನೆ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಹಪಾಠಿಗಳು ಆರೋಪಿಸಿದ್ದಾರೆ. ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಿಸ ಲಾಗಿದ್ದು ತನಿಖೆ ಮುಂದುವರಿದಿದೆ.
ಕಿಟಕಿ, ಬಾಗಿಲು ಪುಡಿಪುಡಿ
ಮೆಹನಾಝ್ ಆತ್ಮಹತ್ಯೆ ಮಾಡಿಕೊಂಡ ಕಾರಣ ಆಕ್ರೋಶಗೊಂಡ ಸುಮಾರು ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳು ಕಾಲೇಜ್ ಹಾಗೂ ಹಾಸ್ಟೆಲ್ ಬಳಿ ಸೇರಿ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿಗೈದರು. ವಿಷಯ ಅರಿತ ಕೊಣಾಜೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸುವ ಮೂಲಕ ಮುಂದೆ ಆಗಲಿದ್ದ ಇನ್ನಷ್ಟು ಅನಾಹುತಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಆದರೂ ವಿದ್ಯಾರ್ಥಿನಿಯ ಸಾವಿಗೆ ಕಾರಣನಾದ ಕ್ಯಾಂಪಸ್ ನಿರ್ದೇಶಕ ಉದಯನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ಮುಂದಿಟ್ಟಿದ್ದ ಬಲವಾದ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ. ಬೇಡಿಕೆ ಈಡೇರದಿದ್ದರೆ ಇನ್ನಷ್ಟು ಅನಾಹುತ ಗ್ಯಾರಂಟಿ ಎಂದರಿತ ಆಡಳಿತ ಮಂಡಳಿ ಕೊನೆಗೂ ಉದಯನ್‌ರನ್ನು ಅಮಾನತುಗೊಳಿಸಿದ ನಿರ್ಧಾರವನ್ನು ಪ್ರಕಟಿಸಿದ ಕಾರಣ ವಿದ್ಯಾರ್ಥಿಗಳು ಸ್ಥಳದಿಂದ ಚದುರಿದರು.

ಮಾರುಕಟ್ಟೆ ವ್ಯಾಪಾರಸ್ಥರ ಸಭೆಯಲ್ಲಿ ಹೊಕೈ

Posted by JAYAKIRANA Kirana on | 0 comments | Leave a comment...


ಮಂಗಳೂರು: ಲಾರಿ ಪಾರ್ಕಿಂಗ್ ವಿಚಾರದಲ್ಲಿ ಎರಡು ತಂಡಗಳ ನಡುವೆ ಹುಟ್ಟಿಕೊಂಡ ಭಿನ್ನಾಭಿಪ್ರಾಯ ಮಾತಿನ ಚಕಮಕಿಗೆ ಕಾರಣವಾಗಿ ಹೊಕೈ ಹಂತಕ್ಕೆ ತಲುಪಿರುವ ಘಟನೆ ನಿನ್ನೆ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ವಾರ್ಷಿಕೋತ್ಸವದಲ್ಲಿ ನಡೆದಿದೆ. ಇದಕ್ಕೆ ಮನಪಾ ಉಪಮೇಯರ್ ಸಾಕ್ಷಿಯಾಗಿದ್ದರು.
ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಬಳಿ ಸಮಸ್ಯೆಯನ್ನು ವಿವರಿ ಸಲು ಹೋದ ಸಂಘದ ಸದಸ್ಯ ಬಾಳಿಗ ಎಂಬವರು ಆರಂಭದಲ್ಲೇ ಧರ್ಮದ ಹೆಸರನ್ನು ಉಲ್ಲೇಖಿಸಿ ಆರೋಪ ಮಾಡಿದರಲ್ಲದೆ, ನಮ್ಮವರೇ ತಪ್ಪು ಮಾಡುತ್ತಿದ್ದಾರೆ ಎಂದು ಉಪ ಮೇಯರ್ ಬಳಿ ದೂರಿದರು. ಇದನ್ನು ಕೇಳಿದ ಮುಸ್ಲಿಂ ವರ್ತಕರು ಇದರ ವಿರುದ್ಧ ತಿರುಗಿಬಿದ್ದಿದ್ದರು. ಧರ್ಮದ ಹೆಸರನ್ನು ಹೇಳಿ ಯಾರೂ ವ್ಯಾಪಾರ ಮಾಡುವುದಿಲ್ಲ, ಹೀಗಿರುವಾಗ ಸದಸ್ಯರಾಗಿರುವ ನೀವು ಧರ್ಮವನ್ನು ಹಿಡಿದು ನಮ್ಮ ವಿರುದ್ಧವೇ ಮಾತನಾಡುವುದು ಸರಿಯಲ್ಲ ಎಂದು ಬಾಳಿಗರವರನ್ನು ತರಾಟೆಗೆ ತೆಗೆದುಕೊಂಡರು. ಈ ವಿಚಾರ ಮಾತಿನ ಚಕಮಕಿಗೆ ಕಾರಣವಾಯಿತಲ್ಲದೆ ಸಂಘದ ಸದಸ್ಯರ ನಡುವಿನ ಭಿನ್ನಾಭಿಪ್ರಾಯವೂ ಬೆಳಕಿಗೆ ಬಂದಿತ್ತು.
ಈ ಹಿಂದೆ ಜಿಲ್ಲಾಧಿಕಾರಿ ಪೊನ್ನುರಾಜ್ ಅವರನ್ನು ನಾವು ಚೆನ್ನಾಗಿ ನೋಡಿಕೊಂಡಿಲ್ಲ. ಹೀಗಾಗಿ ನಮಗೆ ಸಮಸ್ಯೆ ಉಂಟಾಯಿತು ಎನ್ನುವ ಹೇಳಿಕೆಯನ್ನು ಬಾಳಿಗ ಅವರು ನೀಡಿದಾಗ ಮತ್ತೊಮ್ಮೆ ಸಭೆಯಲ್ಲಿ ಗೊಂದಲ ಉಂಟಾಯಿತು. ಸಭೆಯು ಒಂದು ತಾಸು ವಿಳಂಬವಾಗಿ ಆರಂಭವಾಗಿದ್ದು ಆರಂಭದಲ್ಲೇ ನಮ್ಮ ಸಭೆ ವಿಳಂಬವಾಗಲು ನಮ್ಮೊಳಗಿನ ಭಿನ್ನಾಭಿಪ್ರಾಯವೇ ಕಾರಣ, ನಮ್ಮ ನಡುವಿನ ವಿಚಾರವನ್ನು ಸಭೆಯಲ್ಲಿ ಚರ್ಚಿಸುವ ಬದಲು ಹೊರಗೆ ಮಾತನಾಡುತ್ತಿದ್ದಾರೆ. ಸಭೆಗಳಿಗೆ ಗೈರು ಹಾಜರಾಗುತ್ತಿದ್ದಾರೆ ಎಂದು ಕಾರ್ಯದರ್ಶಿ ತಿಳಿಸಿದ್ದರು. ಹೀಗಾಗಿ ಭಿನ್ನಾಭಿಪ್ರಾಯ ಇರುವುದು ಸತ್ಯ ಎಂದಂತಾಗಿತ್ತು.
ಸರಕು ಹೊತ್ತು ಬರುವ ಲಾರಿಗಳನ್ನು ಏಳು ಗಂಟೆಯೊಳಗೆ ಮಾರ್ಕೆಟ್‌ನಿಂದ ಕಳುಹಿಸಿ ಕೊಡಬೇಕು ಎಂದು ಬಾಳಿಗರವರೇ ಹೇಳಿದಾಗ ಮತ್ತೆ ಗಲಾಟೆ ಆರಂಭವಾಯಿತು. ಇದು ನಮ್ಮ ಉಪಕಾರಕ್ಕೆ ನೀವು ಹೇಳುತ್ತಿಲ್ಲ ಬದಲಾಗಿ ನಿಮ್ಮ ಲಾಭವನ್ನು ಮಾತ್ರ ನೋಡುತ್ತಿದ್ದೀರಿ ಎಂದು ಒಂದು ಬಣ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸ ಬೇಕಾಗಿದ್ದ ಸಭೆಯಲ್ಲಿ ಸದಸ್ಯರು ತಮ್ಮ ತಮ್ಮೊಳಗೆ ಕದನ ನಡೆಸುವಂತಾಯಿತು.
ಒಂದು ಹಂತದಲ್ಲಿ ಜಗಳ ತಣ್ಣಗಾಗಿ ಸದಸ್ಯರ ಕೋಪ ಬೀದಿಬದಿ ವ್ಯಾಪಾರಸ್ಥರ ಕಡೆ ತಿರುಗಿತು. ಬೀದಿಬದಿ ವ್ಯಾಪಾರಸ್ಥರಿಂದಾಗಿ ನಮ್ಮ ವ್ಯವಹಾರ ಕುಂಠಿತವಾಗಿದೆ ಹೀಗಾದರೆ ನಾವು ಬೀದಿಗೆ ಬರುವಂತಾಗುತ್ತದೆ ಎಂದ ಸದಸ್ಯರು ಇದಕ್ಕೆ ಪರಿಹಾರ ನೀಡಬೇಕು ಎಂದು ಅಧ್ಯಕ್ಷರಲ್ಲಿ ಒತ್ತಾಯಿಸಿದಾಗ ಅಸಹನೆಗೊಂಡ ಅಧ್ಯಕ್ಷರು ಕೇವಲ ಒಂದು ಸಭೆಗೆ ಬಂದು ಮಾತನಾಡುವುದಲ್ಲ ಪ್ರತಿ ಸಭೆಗೆ ಬಂದು ಮಾತನಾಡಿ, ಕೂಡಿ ಕೆಲಸ ಮಾಡೋಣ, ಇದು ಒಬ್ಬೊಬ್ಬರೇ ಮಾಡುವ ಕೆಲಸ ಅಲ್ಲ ಎಂದರು. ಹೀಗಾಗಿ ತಣ್ಣಗಾದ ಸದಸ್ಯರು ಮುಂದೆ ಕೂಡಿ ಕೆಲಸ ಮಾಡುವ ಭರವಸೆ ನೀಡಿದರು. ರಿಕ್ಷಾದವರು ಬಾಡಿಗೆಗೆ ಬಾರದೆ ಇರುವುದರಿಂದ ಪ್ರಾಯದವರಿಗೆ ಕಷ್ಟವಾಗುತ್ತಿದೆ ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲು ಸಭೆಯು ತೀರ್ಮಾನಿಸಿತು. ಅದೇರೀತಿ ಅಕ್ರಮ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರ ಬಗ್ಗೆಯೂ ಕ್ರಮಕ್ಕೆ ಆಗ್ರಹಿಸಲು ಒತ್ತಾಯಿಸಿಲಾ ಯಿತು. ಇಲ್ಲವಾದರೆ ನಾವೇ ಬೀದಿ ಬದಿ ವ್ಯಾಪರ ಮಾಡುವ ಎಚ್ಚರಿಕೆ ನೀಡಲೂ ತೀರ್ಮಾನಿಸಲಾಯಿತು.
ಪೊಲೀಸರಿಗೆ ಮಾಸಿಕ ೫೦೦೦ ರೂ.ನೀಡುತ್ತಿದ್ದೇವೆ: ಸಮಿತಿ
ಮಾರುಕಟ್ಟೆಯಿಂದ ಲಾರಿಗಳು ಬೆಳಗ್ಗೆ ಎಂಟು ಗಂಟೆಯೊಳಗೆ ನಿರ್ಗಮಿಸಬೇಕು ಎನ್ನುವ ನಿಯಮವಿದೆ. ಆದರೆ ಅದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಪೊಲೀಸರ ಜೊತೆ ಒಪ್ಪಂದ ಮಾಡಿಕೊಂಡು ಅವರಿಗೆ ಮಾಸಿಕ ಐದು ಸಾವಿರ ಲಂಚ ನೀಡುತ್ತಿದ್ದೇವೆ. ಇದಕ್ಕೆ ಎಲ್ಲಾ ಸದಸ್ಯರು ಸಹ ಕಾರ ನೀಡಬೇಕು. ನಮ್ಮ ಕೆಲಸವಾಗಬೇ ಕಾದರೆ ನಾವು ಹಣ ನೀಡಲೇಬೇಕು. ಈ ಕಾರಣದಿಂದ ನಮಗೆ ಇದುವರೆಗೆ ಪೊಲೀಸರಿಂದ ತೊಂದರೆ ಆಗಿಲ್ಲ ಎಂದು ಬಹಿರಂಗವಾಗಿ ಅಧ್ಯಕ್ಷರು ಹೇಳಿಕೆ ನೀಡಿ ದ್ದರು. ಇದು ಪೊಲೀಸರ ಲಂಚಾವತಾರಕ್ಕೆ ಕೈಗನ್ನಡಿಯೇ ಎಂದು ಸದಸ್ಯರು ತಮ್ಮಷ್ಟಕ್ಕೆ ಮಾತನಾಡಿಕೊಂಡರು, ಆದರೂ ಇದು ಸತ್ಯ.

ಗ್ಯಾಸ್ ಸೋರಿಕೆ: ಕ್ಯಾಂಟೀನ್ ಬೆಂಕಿಗಾಹುತಿ

Posted by JAYAKIRANA Kirana on | 0 comments | Leave a comment...



ಮಂಜೇಶ್ವರ: ಗ್ಯಾಸ್ ಸೋರಿಕೆಯಿಂದಾಗಿ ಕ್ಯಾಂಟೀನ್ ಅಂಗಡಿಯೊಂದು ಬೆಂಕಿಗಾಹುತಿಯಾಗಿರುವ ಘಟನೆ ಉಪ್ಪಳ ಬಸ್‌ಸ್ಟಾಂಡ್ ಬಳಿಯ ಕಾಂಪ್ಲೆಕ್ಸ್‌ನಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ.
ಮಜಲು ನಿವಾಸಿ ನಾರಾಯಣ ಶೆಟ್ಟಿ ಮಾಲಕತ್ವದ ಶ್ರೀದುರ್ಗಾ ಕ್ಯಾಂಟೀನಿನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಘಟನೆಯಿಂದಾಗಿ ರೂ.ಒಂದೂವರೆ ಲಕ್ಷ ನಷ್ಟ ಸಂಭವಿಸಿದೆ. ಗ್ಯಾಸ್ ಸ್ಟವ್‌ನಲ್ಲಿ ಚಹಾ ಕುದಿಯುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯುಂಟಾಗಿ ಬೆಂಕಿ ಅನಾಹುತ ಸಂಭವಿಸಿದೆ. ಈ ವೇಳೆ ಕ್ಯಾಂಟೀನಿನೊಳಗಿದ್ದ ಹಲವು ಮಂದಿ ಗ್ರಾಹಕರು ಘಟನಾ ಸ್ಥಳದಿಂದ ಓಡಿ ಪಾರಾಗಿದ್ದಾರೆ. ಈ ಕುರಿತು ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ
ಬೆಂಕಿ ಅನಾಹುತ ಸಂಭವಿಸುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿಗೆ ಸ್ಥಳೀಯರು ತಕ್ಷಣ ಮಾಹಿತಿ ನೀಡಿದ್ದರು. ಸಕಾಲಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಕರ್ತವ್ಯ ನಿಷ್ಠೆ ಮೆರೆದಿದ್ದರಿಂದಾಗಿ ಸ್ಥಳೀಯ ಅಂಗಡಿಗಳು ಬೆಂಕಿಗಾಹುತಿಯಾಗುವುದರಿಂದ ತಪ್ಪಿಸುವಂತಾಯಿತು.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


ತವರಿಗೆ ಮರಳಿದ ವಿಶ್ವಕಪ್ ಹೀರೋ ಯುವಿ

Posted by JAYAKIRANA Kirana on | 0 comments | Leave a comment...

ದೆಹಲಿ: ಕ್ಯಾನ್ಸರ್‌ಗಾಗಿ ಅಮೆರಿಕಾದಲ್ಲಿ ಮೂರು ಹಂತದ ಕೀಮೊಥೆರಪಿ ಚಿಕಿತ್ಸೆ ಪಡೆದಿದ್ದ ಟೀಮ್ ಇಂಡಿಯಾ ಪ್ರಮುಖ ಆಲ್ ರೌಂಡರ್ ಹಾಗೂ ವಿಶ್ವ ಕಪ್‌ನಲ್ಲಿ ಹೀರೋ ಆಗಿ ಹೊರಹೊಮ್ಮಿದ್ದ ಯುವ ರಾಜ್ ಸಿಂಗ್ ನಿನ್ನೆ ಭಾರ ತಕ್ಕೆ ಮರಳಿದ್ದಾರೆ. ದೆಹ ಲಿಯ ವಿಮಾನ ನಿಲ್ದಾಣಕ್ಕೆ ಯುವಿ ಆಗಮಿಸಿದ ವೇಳೆ ಅವರ ಈ ಅಸಂಖ್ಯಾತ ಅಭಿಮಾನಿಗಳು ಜಮಾ ಯಿಸಿದ್ದರು. ಈ ವೇಳೆ ಯುವಿ ತಾಯಿ ಶಬ್ನಮ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಹಾಜರಿದ್ದು, ಮಗನನ್ನು ಸಂತಸದಿಂದ ಸ್ವಾಗತಿಸಿದರು.
ಸಂಪೂರ್ಣ ಗುಣಮುಖರಾಗಿ ಮಗ ಆಗಮಿಸಿರುವುದು ಸಂತಸ ತಂದಿದ್ದು, ಇದು ವಿಶ್ವಕಪ್ ಕೂಟವನ್ನು ಎರಡನೇ ಬಾರಿಗೆ ಗೆದ್ದ ಖುಷಿಗೆ ಸಮವಾಗಿದೆ. ಆಸ್ಪತ್ರೆಯಲ್ಲಿರುವಾಗ ಯುವಿಗಾಗಿ ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇನ್ನು ಯುವಿ ಮನೆಯಲ್ಲೇ ಸುಮಾರು ಹತ್ತರಿಂದ ಹದಿನೈದು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ನಾನು ಅವನಿಗೆ ಗೋಬಿಯ ಪರೋಟಾ ಮಾಡಿ ಬಡಿಸಲಿದ್ದೇನೆ ಎಂದು ತಾಯಿ ಶಬ್ನಮ್ ಸಿಂಗ್ ತಿಳಿಸಿದ್ದಾರೆ. ಮನೆಗೆ ಆಗಮಿಸಿದ ನಂತರ ಯುವಿ ನೇರವಾಗಿ ಮನೆಯ ಟಾರೇಸ್‌ಗೆ ಹೋಗಿ ಅಲ್ಲಿ ಮಾಧ್ಯಮದೊಂದಿಗೆ ಮಾತುಕತೆ ನಡೆಸಿದರು. ನಾಳೆ ಪತ್ರಿಕಾಗೋಷ್ಠಿಯನ್ನು ಕರೆದು ಮಾತನಾಡಲಿದ್ದೇನೆ ಎಂದು ಯುವಿ ಈ ವೇಳೆ ತಿಳಿಸಿದರು.

ದ್ವಿಪಕ್ಷೀಯ ಸಂಬಂಧದಲ್ಲಿ ಎಲ್ಲವೂ ನಿಂತಿದೆ: ಶುಕ್ಲಾ

Posted by JAYAKIRANA Kirana on | 0 comments | Leave a comment...

ಐಪಿಎಲ್‌ನಲ್ಲಿ ಪಾಕ್ ಆಟಗಾರರ ವಿಚಾರ
ಗೋವಾ: ಭಾರತ ಹಾಗೂ ಪಾಕಿ ಸ್ತಾನದ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಮಾತುಕತೆಯಲ್ಲಿ ಇಂಡಿಯನ್ ಪ್ರೀಮಿ ಯರ್ ಲೀಗ್‌ನಲ್ಲಿ ಪಾಕ್ ಆಟಗಾರರ ಭಾಗವಹಿಸುವಿಕೆಯ ವಿಚಾರ ಅಡಗಿದೆ ಎಂದು ಐಪಿಎಲ್ ಅಧ್ಯಕ್ಷ ಹಾಗೂ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಐಪಿಎಲ್‌ನಲ್ಲಿ ಪಾಕ್ ಆಟಗಾರರು ಭಾಗವಹಿಸುವುದಕ್ಕೆ ಭಾರತದ ಅಥವಾ ಬಿಸಿಸಿಐನ ಅಭ್ಯಂತರವೇನೂ ಇಲ್ಲ. ಅಲ್ಲದೆ ಆ ದೇಶದ ಅಂಪಾಯರ್ ಹಾಗೂ ವೀಕ್ಷಕ ವಿವರಣೆಗಾರರು ಕೂಟ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರ ಭಾಗವಹಿಸುವಿಕೆಯ ವಿಚಾರವು ಇಂಡೋ-ಪಾಕ್ ದ್ವಿಪಕ್ಷೀಯ ಕ್ರಿಕೆಟ್ ನೆಲೆಯ ಮೇಲೆ ನಿಂತಿದ್ದು, ಒಂದು ವೇಳೆ ಹಾಗಾದರೆ ಎಲ್ಲವೂ ಸರಿಯಾ ಗಲಿದೆ. ಎರಡೂ ಕ್ರಿಕೆಟ್ ಬೋರ್ಡ್‌ಗಳು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಆದರೆ ಇದಕ್ಕಿಂತ ಮಿಗಿಲಾದ ಸಂಗತಿಗಳು ನಡೆದರೆ ಎಲ್ಲವೂ ಸರಿಯಾಗಿ ನಡೆಯಲಿದೆ ಎಂದು ಶುಕ್ಲಾ ತಿಳಿಸಿದ್ದಾರೆ. ಮುಂದಿನ ನವೆಂಬರ್‌ನಲ್ಲಿ ಭಾರತ ಪ್ರಧಾನಿ ಮನ್‌ಮೋಹನ್ ಸಿಂಗ್ ಬಹುತೇಕ ಪಾಕ್ ಪ್ರವಾಸ ಮಾಡುವ ಸಾಧ್ಯತೆ ಯಿದ್ದು, ಅಲ್ಲಿ ಎರಡೂ ದೇಶಗಳ ಕ್ರಿಕೆಟ್ ಸಂಬಂಧ ಸುಧಾರಣೆ ಯಾಗಲಿದೆ ಎಂದು 'ದಿ ಟೆಲಿಗ್ರಾಫ್ ವರದಿ ಮಾಡಿದೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4042) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2496) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (262) ln (1) lnews (3669) lokayukta (3) madikeri (1) maleria (1) mangalore (579) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (411) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (271) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (797) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (949) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (46) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)