ವಕೀಲರಿಂದ ಪೊಲೀಸರ ಮೇಲೆ ಮತ್ತೆ ಹಲ್ಲೆ!

Posted by JAYAKIRANA Kirana on Tuesday, 27 March 2012 | 0 comments | Leave a comment...

ಬೆಂಗಳೂರು: ಮಹಿಳಾ ಪೊಲೀಸ್ ಪೇದೆ ಸೇರಿದಂತೆ ಇಬ್ಬರು ಕರ್ತವ್ಯನಿರತ ಪೊಲೀಸರ ಮೇಲೆ ವಕೀಲರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಮಂಗಳವಾರ ನಡೆದಿದೆ.
ಹಲಸೂರು ಗೇಟ್ ಮಹಿಳಾ ಪೊಲೀಸ್  ಠಾಣೆಯ ಬಸವರಾಜು ಮತ್ತು ರೂಪಾ ಎಂಬವರು ಹಲ್ಲೆಗೊಳಗಾಗಿದ್ದು, ಈ ಪೈಕಿ ಬಸವರಾಜು ಅವರು ತೀವ್ರವಾಗಿ ಗಾಯಗೊಂಡಿದ್ದಾರೆಂದು ಹೇಳಲಾಗಿದ್ದು, ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವರಾಜು ಅವರ ಮೂಗು ಒಡೆದು ರಕ್ತ ಒಸರಿದ್ದು, ಕೈ ಮತ್ತು ಕಾಲುಗಳ ಮೇಲೆಯೂ ಹಲ್ಲೆಗಳಾಗಿವೆ ಎಂದು ತಿಳಿದು ಬಂದಿದೆ.
ಆರೋಪಿಯೊಬ್ಬನನ್ನು ವಾಹನದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಬರುತ್ತಿದ್ದಾಗ, ಆವರಣದಲ್ಲಿದ್ದ ೨೦ರಿಂದ ೨೫ ವಕೀಲರ ಗುಂಪು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತ, ಏಕಾಏಕಿ ಹಲ್ಲೆ ಮಾಡಲು ಶುರುಮಾಡಿದರು ಎಂದು ಮಾಧ್ಯಮಕ್ಕೆ ಬಸವರಾಜು ತಿಳಿಸಿದ್ದಾರೆ.
ಮಾ. ೨ರಂದು ಸಿಟಿ ಸಿವಿಲ್ ಕೋರ್ಟ್ ಅವರಣದಲ್ಲಿ ನಡೆದ ಹಲ್ಲೆಗೆ ಪ್ರತೀಕಾರವಾಗಿ ವಕೀಲರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪತ್ರಕರ್ತರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಇದೇ ಬಸವರಾಜು ವಕೀಲರ ಮೇಲೆ ಹಲ್ಲೆ ಮಾಡಿದ್ದರು ಎಂದು ವಕೀಲರು ಆರೋಪಿಸಿದ್ದಾರೆ.
ಇದ್ದಕ್ಕಿದ್ದಂತೆ ದಾಳಿ ಮಾಡಿ ಬಸವರಾಜು ಮೇಲೆ ಹಲ್ಲೆ ಮಾಡಿದ್ದಾರೆ. ಅವರು ಕೆಳಗೆ ಬಿದ್ದರೂ ಅವರನ್ನು ಬಿಟ್ಟಿಲ್ಲ. ಅವರ ಅಂಗಿಯನ್ನು ಕಿತ್ತುಹಾಕಿ ಬೂಟುಗಾಲಿನಿಂದ ಬಸವರಾಜು ಅವರನ್ನು ವಕೀಲರು ಒದ್ದಿದ್ದಾರೆ. ಸಹೋದ್ಯೋಗಿಯ ಮೇಲೆ ಹಲ್ಲೆಯಾಗುವುದನ್ನು ತಪ್ಪಿಸಲು ಹೋದ ರೂಪಾ ಮೇಲೆ ಕೂಡ ಕೆಲ ವಕೀಲರು ಕೈ ಮಾಡಿದ್ದಾರೆ.
ಮಾ. ೨ರ ಹಲ್ಲೆಗೆ ಸಂಬಂಧಿಸಿ ಮಾಧ್ಯಮ ಮತ್ತು ವಕೀಲರ ನಡುವೆ ನಡೆಯುತ್ತಿರುವ ಸಂಧಾನ ಪ್ರಕ್ರಿಯೆ ಇನ್ನೂ ಜಾರಿಯಲ್ಲಿರುವಾಗಲೇ ಮತ್ತೆ ಹಲ್ಲೆ ನಡೆದಿದೆ. ಹಾಗೆಯೆ, ವಕೀಲರನ್ನು ಮಾಧ್ಯಮಗಳಲ್ಲಿ ಗೂಂಡಾಗಳು, ತಾಲಿಬಾನಿಗಳು, ರೌಡಿಗಳು ಎಂದು ಸಂಬೋಧಿಸಬಾರದು ಎಂದು ನ್ಯಾಯಾಲಯ ಆಜ್ಞೆ ಜಾರಿ ಮಾಡಿದೆ. ಕೆಲ ದಿನಗಳ ಹಿಂದೆ, ಪೊಲೀಸರ ಕುಟುಂಬದ ಸದಸ್ಯರು ಒಂದು ದಿನದ ಸತ್ಯಾಗ್ರಹ ಮಾಡಿ, ಪೊಲೀಸರನ್ನು ವಕೀಲರಿಂದ ರಕ್ಷಿಸಬೇಕೆಂದು ಆಗ್ರಹಿಸಿದ್ದನ್ನು ಇಲ್ಲಿ ನೆನಪಿಸಬಹುದು.

ಯಡ್ಡಿ ಬೆಂಬಲಿಗನಿಂದ ಡಿ.ವಿ.ಗೆ ಧಮ್ಕ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮತ್ತೆ ಅಧಿಕಾರ ಪಡೆಯಲು ಯಡಿಯೂರಪ್ಪ ರಾಜ್ಯಾ ದ್ಯಂತ ಪ್ರವಾಸ ಕೈಗೊಂಡು ಏಪ್ರಿಲ್ ನಲ್ಲಿ ಸಿಹಿ ಸುದ್ದಿ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಬೆನ್ನೆಲ್ಲೆ ಅವರ ಬೆಂಬಲಿಗ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಪ್ರತಿನಿ ಧಿಸುವ ಸುರೇಶ್‌ಗೌಡ, ಮುಖ್ಯಮಂತ್ರಿ ಸದಾನಂದಗೌಡರ ಜೊತೆ ಜಟಾಪಟಿ ನಡೆಸಿ, ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿ ಎಚ್ಚರಿಕೆ ನೀಡಿದ ಘಟನೆ ಜರುಗಿದೆ.
ವರ್ಗಾವಣೆಗೆ ಸಂಬಂಧಿಸಿದಂತೆ ವಿಧಾನಸೌಧದ ಕೊಠಡಿಯಲ್ಲಿ ಮೊನ್ನೆ ಸಂಜೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸುರೇಶ್‌ಗೌಡ ಅವರ ಮನವಿಗೆ ಮುಖ್ಯಮಂತ್ರಿ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಜಟಾಪಟಿ ನಡೆದಿದೆ. ಮುಖ್ಯಮಂತ್ರಿಯವರ ಅ ಸಹಕಾರದಿಂದ ಕೆರಳಿದ ಸುರೇಶ್ ಗೌಡ, ಇದೇನೂ ದೊಡ್ಡ ಕೆಲಸವಲ್ಲ, ಇಷ್ಟು ಸಣ್ಣ ಕೆಲಸವನ್ನೂ ಮಾಡಿಕೊಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಸುರೇಶ್‌ಗೌಡರ ಮಾತಿಗೆ ಕ್ಯಾರೇ ಎನ್ನದ ಮುಖ್ಯಮಂತ್ರಿ ಕೆಲಸ ಮಾಡಿಕೊಡಲು ಸಾಧ್ಯವಿಲ್ಲ ಎಂದರೆ ಸಾಧ್ಯವಿಲ್ಲ ಅಷ್ಟೇ. ಇದಕ್ಕಾಗಿ ಪದೇ ಪದೇ ತಲೆ ತಿನ್ನಬೇಡಿ ಎಂದಿದ್ದಾರೆ.
ಮುಖ್ಯಮಂತ್ರಿಯವರ ಮಾತಿನಿಂದ ಕೆರಳಿದ ಸುರೇಶ್‌ಗೌಡ,ರೀ ನೀವು ಸಿಎಂ ಆಗಿದ್ದೇ ನಮ್ಮಿಂದ. ಇಷ್ಟಿದ್ದರೂ ನಮಗೇ ಉಲ್ಟಾ ಹೊಡೆಯುತ್ತೀರಾ ನಾನೇನು ಮಾಡಲು ಸಾಧ್ಯವಾಗದ ಕೆಲಸ ಹೇಳಿದೆನಾ ಉದ್ದೇಶಪೂರ್ವಕವಾಗಿಯೇ ನೀವು ನಮ್ಮನ್ನು ನಿರ್ಲಕ್ಷಿಸುವ ಕೆಲಸ ಮಾಡುತ್ತಿದ್ದೀರಾ ಎಂದು ಜರಿದರು. ಮುಂದುವರಿದು ಮಾತನಾಡಿ, ನಿಮ್ಮನ್ನು ಮುಖ್ಯಮಂತ್ರಿ ಮಾಡಿ ನಾವು ತಪ್ಪು ಮಾಡಿದ್ದೇವೆ ನಿಜ. ಆದರೆ ನೀವು ಅದೆಷ್ಟು ದಿನ ಈ ಹುದ್ದೆಯಲ್ಲಿರುತ್ತೀರೋ ನಾನೂ ನೋಡುತ್ತೇನೆ ಎಂದು ಕಿಡಿಕಾರಿದ್ದಾರೆ. ಸುರೇಶ್‌ಗೌಡರ ಮಾತಿನಿಂದ ಅಪ್ರತಿಭರಾದ ಸದಾನಂದ ಗೌಡ, ನೀವು ಈ ರೀತಿ ಎಲ್ಲ ಮಾತನಾಡುವುದು ಸರಿಯಲ್ಲ. ಆಗುವ ಕೆಲಸವಾದರೆ ಮಾಡಿ ಕೊಡುತ್ತೇನೆ. ಆಗುವುದಿಲ್ಲ ಎಂದರೆ ಆಗುವುದಿಲ್ಲ ಎನ್ನುತ್ತೇನೆ. ಅದಕ್ಕಾಗಿ ನೀವು ಇಷ್ಟು ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಮುಖ್ಯಮಂತ್ರಿಯವರ ಮಾತಿನಿಂದ ಇನ್ನಷ್ಟು ಕೆರಳಿದ ಸುರೇಶ್‌ಗೌಡ, ನಿಮ್ಮನ್ನು ಹುದ್ದೆಯಿಂದ ಕೆಳಗಿಳಿಸಲು ನಾನು ಯಾವ ತ್ಯಾಗಕ್ಕಾದರೂ ಸಿದ್ಧ. ಬೇಕಿದ್ದರೆ ಈ ಶಾಸಕ ಸ್ಥಾನಕ್ಕೇ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಆದರೆ ನೀವು  ಮುಖ್ಯಮಂತ್ರಿ ಹುದ್ದೆಯಲ್ಲಿ ಎಷ್ಟು ದಿನ ಇರುತ್ತೀರೋ ನಾನೂ ನೋಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾರೆ.
ವಕ್ಫ್ ಆಸ್ತಿ ಕಬಳಿಕೆ: ಸದನದಲ್ಲಿ ಕೋಲಾಹಲ
ಬೆಂಗಳೂರು: ವಕ್ಫ್ ಮಂಡಳಿಗೆ ಸೇರಿದ ೨ ಲಕ್ಷ ಕೋಟಿ ರೂ. ಆಸ್ತಿ ಕಬಳಿಕೆ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ  ಬಾರೀ ಕೋಲಾಹಲ, ಧರಣಿಗೆ ಎಡೆಮಾಡಿಕೊಟ್ಟಿತು.
ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ಬಿಜೆಪಿಯ ಸಿ.ಟಿ. ರವಿ. ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ವಕ್ಫ್ ಮಂಡಳಿಯ ಆಸ್ತಿ ಕಬಳಿಕೆ ಬಗ್ಗೆ ತನಿಖಾ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು. ವರದಿ ಗಮನಿಸಿದರೆ ಆತಂಕ ಉಂಟಾ ಗುತ್ತದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.  ವರದಿಯನ್ನು ಮಂಡಿಸಿ ಎಲ್ಲರ ಮೇಲೂ ಕ್ರಮಕ್ಕೆಗೂಳ್ಳಲಾಗುವುದು ಎಂದರು. ಈ ಹಂತದಲ್ಲಿ ಜೆಡಿಎಸ್ ರೇವಣ್ಣ, ಜಮೀರ್ ಅಹಮದ್ ಮತ್ತಿತರರು ಎದ್ದು ನಿಂತ ವರದಿಯ ಮಂಡನೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಡ ಹೇರಿದಾಗ ಸದನದಲ್ಲಿ ಸ್ವಲ್ಪ ಹೊತ್ತು ಗದ್ದಲದ ವಾತಾವರಣ ಉಂಟಾಯಿತು. ಗದ್ದಲದ ನಡುವೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೊದಲು ವರದಿ ಮಂಡಿಸಲಿ ನಂತರ ಚರ್ಚೆ ಮಾಡೋಣ. ಉಪ್ಪು ತಿಂದಿರುವವರು ನೀರು ಕುಡಿಯುತ್ತಾರೆ ಎಂದು ಏರಿದ ಧ್ವನಿಯಲ್ಲಿ ಹೇಳಿದರು.
ಜೆಡಿಎಸ್‌ನ ಜಮೀರ್ ಅಹಮದ್, ಮಧ್ಯಮಗಳಲ್ಲಿ ಆಸ್ತಿ ನುಂಗಿದವರ ಪಟ್ಟಿಯಲ್ಲಿ ನನ್ನ ಹೆಸರೂ ಬಂದಿದೆ. ಇದರಿಂದ ತಮಗೆ ನೋವಾಗಿದೆ. ಕೂಡಲೇ ಯಾರು ಆಸ್ತಿ ಕಬಳಿಸಿದ್ದಾರೆ ಎಂಬುವರ ಹೆಸರನ್ನು ಬಹಿರಂಗಪಡಿಸಿ ತಪ್ಪಿತಸ್ಥರನ್ನು ಗಲ್ಲಿಗೆ ಹಾಕಿ. ಈ ಬಗ್ಗೆ ಸಿಬಿಐ ಇಲ್ಲವೆ ಲೋಕಾಯುಕ್ತ ತನಿಖೆ ಆಗಲಿ ಎಂದು ಒತ್ತಾಯಿಸಿದರು. ಕಾಂಗ್ರೆಸ್‌ನ ಕಮರ್‌ಉಲ್ಲಾ ಇಸ್ಲಾಂ, ಟಿ.ಬಿ. ಜಯಚಂದ್ರ ತನ್ವೀರ್‌ಸೇಠ್ ಇವರುಗಳು ಸಹ ವರದಿ ಮಂಡನೆಯಾಗಬೇಕೆಂದು ಒತ್ತಾಯಿಸಿದರು. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಸದನದಲ್ಲಿ ಕಾವೇರಿದ ವಾತಾವರಣ ಉಂಟಾಯಿತು. ವಕ್ಫ್ ಆಸ್ತಿ ಕಬಳಿಕೆ ಆಗಿದೆ ಎಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ನೀಡಿರುವ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಬೇಕು. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಅಗತ್ಯವೆನಿಸಿದರೆ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಒತ್ತಾಯಿಸಿದರು.
ವರದಿಯನ್ನು ಮೊದಲು ಸದನದಲ್ಲಿ ಮಂಡಿಸಬೇಕು. ಆ ವರದಿಯಲ್ಲಿ ಏನಿದೆ. ಯಾರ‍್ಯಾರು ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ, ಕಬಳಿಸಿದ್ದಾರೆ, ಎಂಬುದರ ಬಗ್ಗೆ ಚರ್ಚೆಯಾಗಬೇಕು. ಆರೋಪಗಳು ಸಾಬೀತಾಗುವಂತಹ ಅಂಶಗಳಿದ್ದರೆ ಸಿಬಿಐ ತನಿಖೆಗೆ ವಹಿಸಬಹುದು ಎಂದು ಅವರು ಒತ್ತಾಯಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕರಾದ ಟಿ.ಬಿ. ಜಯಚಂದ್ರ, ತನ್ವೀರ್‌ಸೇಠ್, ಹ್ಯಾರೀಸ್, ತಪ್ಪಿತಸ್ಥರು ಯಾರೇ ಇರಲಿ ಶಿಕ್ಷೆಯಾಗಬೇಕು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಮ್ಮ ಸಹಕಾರ ಇರುತ್ತದೆ ಎಂದರು. ಶಾಸಕ ಸೈಯದ್ ಯಾಸೀನ್ ನಮ್ಮ ಸಮುದಾಯದ ದೊಡ್ಡ ನಾಯಕರುಗಳ ಹೆಸರನ್ನು ವರದಿಯಲ್ಲಿ ಸೇರಿಸಲಾಗಿದೆ. ಈ ವರದಿ ಸುಳ್ಳಿನ ಕಂತೆಯಾಗಿದೆ ಎಂದರು.

ಹಣ ದ್ವಿಗುಣ ವಂಚನೆ: ಕದ್ರಿ ಪೊಲೀಸರಿಂದ ಪ್ರಕರಣ ಮುಚ್ಚಿ ಹಾಕಲು ಯತ್ನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಹಣವನ್ನು ದ್ವಿಗುಣ ಗೊಳಿಸುವುದಾಗಿ ಜನರಿಗೆ ಕೋಟ್ಯಂ ತರ ರೂ. ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪರ ನಿಂತಿ ರುವ ಕದ್ರಿ ಎಸ್.ಐ. ಅವರು ಈ ಕುರಿತು ದಾಖಲಾಗಿದ್ದ ಆರು ವಂಚನೆ ಪ್ರಕರಣಗಳನ್ನು ಸುಳ್ಳು ಎಂದು ಕೋರ್ಟ್‌ಗೆ ವರದಿ ಸಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ. ಗ್ಲೋಬಲ್ ಇಂಡೆಕ್ಸ್ ಎಂಬ ಸಂಸ್ಥೆ ಜಿಲ್ಲೆಯ ಜನರಿಗೆ ಅಂದಾಜು ೫೦ ಕೋಟಿಗೂ ಅಧಿಕ ವಂಚಿಸಿದ್ದು, ವಂಚನೆಗೊಳಗಾದವರಲ್ಲಿ ಬಡ-ಮಧ್ಯಮ ವರ್ಗದ ಜನರು, ಪೊಲೀಸರೂ ಸೇರಿದ್ದರು. ಕೇವಲ ಒಂದೇ ವರ್ಷದಲ್ಲಿ ಹಣವನ್ನು ದ್ವಿಗುಣ ಮಾಡಿಕೊಡುವುದಾಗಿ ಹೇಳಿದ್ದರಿಂದ ನೂರಾರು ಮಂದಿ ಗ್ಲೋಬಲ್ ಇಂಡೆಕ್ಸ್‌ಗೆ ಸೇರಿದ್ದರು.
ಕರಂಗಲ್ಪಾಡಿಯ ಮಹೇಂದ್ರ ಆರ್ಕೇಡ್‌ನಲ್ಲಿ ಸಂಸ್ಥೆ ಕಾರ್ಯಾಚರಿಸುತ್ತಿದ್ದ ಬಗ್ಗೆ ‘ಜಯಕಿರಣ ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಿತ್ತು. ಸಂಸ್ಥೆ ವಿರುದ್ಧ ೨೦೧೧ರ ಮಾರ್ಚ್‌ನಲ್ಲಿ ಒಟ್ಟು ೧೦ ವಂಚನೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ನಾಲ್ಕು ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಹಾಕಲಾಗಿತ್ತು. ಇದೀಗ ಈ ಕುರಿತು ದಾಖಲಾಗಿರುವ ಆರು ಪ್ರಕರಣಗಳು ಸುಳ್ಳು ಎಂದು ಕದ್ರಿ ಇನ್ಸ್‌ಪೆಕ್ಟರ್ ಬಿ ರಿಪೋರ್ಟ್ ಸಲ್ಲಿಸಿದ್ದು ಬಯಲಾಗಿದೆ. ಇದೀಗ ಕದ್ರಿ ಠಾಣಾ ಎಸ್.ಐ. ಕಾಂಡೋಂ ರೈಡ್ ಪ್ರಕರಣದಲ್ಲಿ ಅಮಾನತಾಗಿದ್ದು, ಅವರ ಮತ್ತೊಂದು ಹಗರಣ ಬೆಳಕಿಗೆ ಬಂದಂತಾಗಿದೆ. ಗ್ಲೋಬಲ್ ಇಂಡೆಕ್ಸ್ ಸಂಸ್ಥೆಯ ಮೇಲಿನ ಆರೋಪ ಕೈಬಿಡಲು ಎಸಿಪಿ ರವೀಂದ್ರ ಗಡಾದಿ ೨೦ ಲಕ್ಷ ಹಣ ಪಡೆದು ಕಮಿಷನರ್ ವಿಚಾರಣೆಯ ಬಳಿಕ ಹಣವನ್ನು ಮರಳಿಸಿದ್ದ ಬಗ್ಗೆಯೂ ಪತ್ರಿಕೆ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನೇಣು ಬಿಗಿದು ಆತ್ಮಹತ್ಯೆ : ನಗರದ ಕುಂಟಿಕಾನ ಕೆಎಸ್‌ಆರ್‌ಟಿಸಿ ಡಿಪೋ ಬಳಿಯ ನಿವಾಸಿ ನಾರ್ಬರ್ಟ್ ಕೊರೆಯಾ(೬೧) ಎಂಬವರು ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉರ್ವಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿಗೂ ಬೇಡವಾದರೇ ರಹೀಂ ಉಚ್ಚಿಲ್?

Posted by JAYAKIRANA Kirana on | 0 comments | Leave a comment...

ಮಂಗಳೂರು: ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್‌ರ ಕೊಲೆಯತ್ನ ನಡೆದು ನಾಳೆಗೆ ೧೫ ದಿನಗಳಾಗುತ್ತಿದೆ. ಆದರೂ ಇದುವರೆಗೆ ಕೃತ್ಯದ ಹಿಂದಿರುವ ಪ್ರಮುಖ ಆರೋಪಿಗಳನ್ನು ಬಂಧಿಸು ವಲ್ಲಿ ಇಲಾಖೆ ಎಡವಿದ್ದು, ಬಿಜೆಪಿ ಮುಖಂಡರು ಚಕಾರ ಎತ್ತದಿರು ವುದು ಸಾರ್ವಜನಿಕರಲ್ಲಿ ಅಚ್ಚರಿಗೆ ಕಾರಣವಾಗಿದೆ. ನಾಲ್ಕು ವರ್ಷಗಳ ಹಿಂದೆ ಬಿಜೆಪಿಗೆ ಸೇರಿದ್ದ ರಹೀಂ, ಸ್ವಂತ ಲಾಭಕ್ಕಾಗಿ ಆರ್‌ಎಸ್‌ಎಸ್ ಮುಖಂಡರನ್ನು ಸರ್ಮರ್ಥಿಸುವ ಕೆಲಸಕ್ಕೆ ಕೈಹಾಕುವ ಮೂಲಕ ಮುಸ್ಲಿಮರ ವಿರೋಧ ಕಟ್ಟಿಕೊಂಡಿದ್ದರು. ಎರಡು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆನ್ನುವ ಆರೋಪ ಕೇಳಿ ಬಂದಾಗ ಇಡೀ ಮುಸ್ಲಿಂ ಸಮುದಾಯವೇ ಭಟ್ ವಿರುದ್ಧ ನಿಂತಿತ್ತು. ಇದೇ ಸಂದರ್ಭದಲ್ಲಿ ಭಟ್ ಪರವಾಗಿ ನಿಂತ ಬಿಜೆಪಿ ಅಲ್ಪಸಂಖ್ಯಾತ ಮುಖಂಡರು ತಪ್ಪು ನಿವಾರಣಾ ಸಭೆಯನ್ನು ಆಯೋಜಿಸಿದಾಗ ರಹೀಂ ಉಚ್ಚಿಲ್ ಕಲ್ಲಡ್ಕ ಪರವಾಗಿ ಸಾಧ್ಯವಿರುವ ಮಟ್ಟಿಗೆ ಸಮರ್ಥನಾ ಭಾಷಣ ಮಾಡಿದ್ದು ಮುಸ್ಲಿಮರಲ್ಲಿ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಆಗಲೇ ಅವರಿಗೆ ಕೆಲವೊಂದು ಬೆದರಿಕೆ ಕರೆಗಳೂ ಬಂದಿದ್ದವು.
ಕಮೀಷನರ್‌ಗೆ ಮನವಿ ಕೊಟ್ಟ ಬಳಿಕ ಎಲ್ಲಾ ತೊಂದರೆ ನಿವಾರಣೆಯಾ ಯಿತು ಎನ್ನುವಷ್ಟರಲ್ಲಿ ೧೫ ದಿನಗಳ ಹಿಂದೆ (ಮಾ.೧೫) ರಹೀಂರನ್ನು ಅಕಾಡೆಮಿ ಕಚೇರಿಯಲ್ಲೇ ಕಡಿದು ಕೊಲೆ ಮಾಡುವ ಯತ್ನ ನಡೆದಿತ್ತು.  ಘಟನೆ ನಡೆದು ನಾಳೆಗೆ ೧೫ ದಿನಗಳು ಪೂರ್ತಿಯಾಗುತ್ತಿದ್ದು ಇದುವರೆಗೆ ಕೇವಲ ಓರ್ವ ಆರೋಪಿಯನ್ನು ಮಾತ್ರವೇ ಪೊಲೀಸರು ಬಂಧಿಸಿದ್ದಾರೆ.
ಸಂಘಪರಿವಾರ ಬೆಂಬಲಿತ ಸಂಘಟನೆಗಳು ಅಥವಾ ಬಿಜೆಪಿ ಮುಖಂಡರಿಗೆ ಸಣ್ಣ ಪ್ರಮಾಣದ ಅನ್ಯಾಯವಾದರೂ ಬೀದಿಗಿಳಿದು ಹೋರಾಟ, ಪ್ರತಿಭಟನೆ ನಡೆಸುವ ಹಾಗೂ ಪತ್ರಿಕಾಗೋಷ್ಟಿ ನಡೆಸಿ ಖಂಡನೆ ವ್ಯಕ್ತಪಡಿಸುವ ಮುಖಂಡರು ರಹೀಂ ವಿಷಯದಲ್ಲಿ ಮಾತ್ರ ಮೌನವಾಗಿದ್ದಾರೆ. ಇಷ್ಟಕ್ಕೂ ರಹೀಂ ಮೇಲೆ ನಡೆದ ದಾಳಿಯ ಹಿಂದೆ ವಿವಿಧ ಕಾರಣಗಳು ಇದೆಯೆನ್ನಲಾಗುತ್ತಿದ್ದರೂ ಅವರು ಬಿಜೆಪಿಗಾಗಿ ಇಡೀ ಮುಸ್ಲಿಂ ಸಮುದಾಯವನ್ನು ಎದುರು ಹಾಕಿಕೊಂಡಿರುವುದು ಘಟನೆ ನಡೆದ ಬಳಿಕ ಮೇಲ್ನೋಟಕ್ಕೆ ಸಾಬೀತಾಗಿದೆ.
ಘಟನೆಯ ಬಳಿಕ ಕೃಷ್ಣ ಪಾಲೆಮಾರ್, ಕಲ್ಲಡ್ಕ ಪ್ರಭಾಕರ್ ಭಟ್, ಯೋಗೀಶ್ ಭಟ್ ಸಹಿತ ಇನ್ನೂ ಕೆಲವು ಬಿಜೆಪಿ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದರಾದರೂ ನಾಮ್‌ಕೇವಾಸ್ತೆ ಎಂದು ಆ ಪಕ್ಷದಲ್ಲಿರುವ ಮುಸ್ಲಿಮರೇ ಹೇಳುತ್ತಿದ್ದಾರೆ. ಇದೇ ಮಾದರಿಯ ದಾಳಿಯು ಇನ್ಯಾವುದೇ ಪಕ್ಷದ ಮುಖಂಡರು ಮಾತ್ರವೇಕೆ ಕೇವಲ ಮುಸ್ಲಿಂ ಹೆಸರಿರುವವನ ಮೇಲೆ ನಡೆದಿದ್ದರೂ ವಿವಿಧ ಸಂಘಟನೆಗಳು ಬೀದಿಗಿಳಿಯುತ್ತಿದ್ದವು. ಅಷ್ಟೇ ಅಲ್ಲದೆ ಆತ ಗುಣಮುಖನಾಗಿ ಮನೆಗೆ ಹೋಗುವವರೆಗೂ ಆಸ್ಪತ್ರೆಯ ಬಾಗಿಲಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ರಹೀಂ ವಿಷಯದಲ್ಲಿ ಅದ್ಯಾವುದೂ ನಡೆದಿಲ್ಲ. ಅಷ್ಟೇ ಏಕೆ ಅವರನ್ನು ಬದುಕಿಸಿದ ರಿಯಾಝ್‌ರಿಗೂ ಕೆಲವೊಂದು ಕರೆಗಳು ಬಂದಿದೆ ಎನ್ನಲಾಗುತ್ತಿದೆ. ಬಿಜೆಪಿಯವರೂ ರಹೀಂರನ್ನು ಮರೆತೇ ಬಿಟ್ಟಿರುವುದನ್ನು ಗಮನಿಸಿದಾಗ ಅವರ ಮೇಲೆ ಮುಖಂಡರು ಮತ್ತು ಕಾರ್ಯಕರ್ತರು ಎಷ್ಟು ಅಭಿಮಾನ ಇಟ್ಟಿದ್ದಾರೆ ಎಂದು ತೋರಿಸುತ್ತದೆ ಎಂಬ  ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಅಲ್ಲದೆ ಬಿಜೆಪಿಯ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡುವುದಾದರೂ ಹೇಗೆ ಎನ್ನುವ ಪ್ರಶ್ನೆಯೂ ಬಿಜೆಪಿಯಲ್ಲಿರುವ ಅಲ್ಪಸಂಖ್ಯಾತರದ್ದಾಗಿದೆ.
ಖಾದರ್ ವಿರುದ್ಧ ವೇದಿಕೆ ಕಟ್ಟಿದ್ದರು!
ಸತತ ಎರಡು ಬಾರಿ ಮಂಗಳೂರು ಕ್ಷೇತ್ರದ ಶಾಸಕ ರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ವಿರುದ್ಧ ಬಿಜೆಪಿಗೆ ಒಂದು ಕಣ್ಣು ಇದ್ದೇ ಇದೆ. ಮುಂದಿನ ಚುನಾವಣೆ ಯಲ್ಲಾದರೂ ಅವರನ್ನು ಸೋಲಿಸಿ ಕ್ಷೇತ್ರವನ್ನು ವಶಕ್ಕೆ ತೆಗೆದುಕೊಳ್ಳಬೇಕು ಎನ್ನುವ ಕನಸನ್ನು ಬಿಜೆಪಿ ಮುಖಂ ಡರು ಕಾಣುತ್ತಿದ್ದಾರೆ. ಇವೆಲ್ಲವನ್ನೂ ಹತ್ತಿರದಿಂದ ತಿಳಿದಿ ರುವ ರಹೀಂ, ಉಳ್ಳಾಲ ಮತದಾರರ ಹಿತರಕ್ಷಣಾ ವೇದಿಕೆ ಎನ್ನುವ ಹೆಸರಿನ ಸಂಘಟನೆ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೆ ಹರೇಕಳ ಮೂಲದ ಉದ್ಯಮಿ ಯೋರ್ವರು ಹಣಕಾಸಿನ ನೆರವನ್ನು  ನೀಡಲು ಮುಂದಾಗಿದ್ದರೆ ರಹೀಂ, ಖಾದರ್ ವಿರೋಧಿಗಳನ್ನು ಸೆಳೆಯುವ ತಂತ್ರ ರೂಪಿಸಿದ್ದರು.  ಐಷಾರಾಮಿ ಹೋಟೆಲ್‌ನಲ್ಲಿ ಕೆಲವು ಸುತ್ತಿನ ಸಭೆಗಳೂ ನಡೆದಿದ್ದು ಮುಸ್ಲಿಂಲೀಗ್, ಜೆಡಿಎಸ್, ಬಿಜೆಪಿಯ ಕೆಲವು ಮುಖಗಳು ಸಂಘಟನೆಯಲ್ಲಿ ಕಾಣಿಸಿಕೊಂಡಿದ್ದವು. ೧೮ಕ್ಕೆ ಉಳ್ಳಾಲದಲ್ಲಿ ಸಭೆಯನ್ನೂ ನಿಗದಿಗೊಳಿಸಲಾಗಿದ್ದು ಅದಕ್ಕೂ ಮುನ್ನ ೧೪ರ ಬುಧವಾರದಂದು ರಾತ್ರಿ ರಹೀಂ ನೇತೃತ್ವದಲ್ಲಿ ನಗರದ ಐಷಾರಾಮಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಟಿಯನ್ನೂ ನಡೆಸಲಾಗಿತ್ತು. ಆದರೆ ಮರುದಿನವೇ ರಹೀಂ ಮೇಲೆ ದಾಳಿ ನಡೆದಿತ್ತು. ಅವರ ನಡೆ ಕಾಂಗ್ರೆಸ್ ಕಾರ್ಯ ಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತಲ್ಲದೆ ಬಹಿರಂಗ ಸಭೆಗೆ ಮೂರು ದಿನಗಳಿರುವಾಗಲೇ ದಾಳಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿತ್ತು. ಇದೆಲ್ಲಾ ನಡೆದ ಹಿನ್ನೆಲೆಯಲ್ಲಿ ವೇದಿಕೆಯ ಕಾರ್ಯಕ್ರಮಕ್ಕೂ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ವಿದ್ಯಾರ್ಥಿಗಳಿಂದ ಚೂರಿ ಇರಿತ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯನ್ನು ಅದೇ ಶಾಲೆಯ ಹಳೆ ವಿದ್ಯಾರ್ಥಿಗಳು ಗಂಭೀರವಾಗಿ ಇರಿದು ಗಾಯಗೊಳಿಸಿದ  ಘಟನೆ ನಗರದ ಹೈಸ್ಕೂಲಿನಲ್ಲಿ ಸಂಭವಿಸಿದೆ.
ಬೆನ್ನುಮೂಳೆಗೆ ಉಂಟಾದ ಆಳವಾದ ಇರಿತಕ್ಕೊಳಗಾದ ಎಸ್.ಎಸ್. ಎಲ್.ಸಿ ವಿದ್ಯಾರ್ಥಿಯನ್ನು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿಗೆ ಕೊಂಡೊ ಯ್ಯಲಾಗಿದೆ. ಕಾಸರಗೋಡು ನಗರ ಮಧ್ಯದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ಅಪರಾಹ್ನ ೨ ಗಂಟೆ ವೇಳೆಗೆ ಕೃತ್ಯ ಸಂಭವಿಸಿದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿ, ಉಳಿಯತ್ತಡ್ಕ ಭಿಲಾಲ್‌ನಗರದ ದಿ. ಅಬೂಬಕ್ಕರ್ ಅವರ ಪುತ್ರನೂ ಆದ ಮುನಾಫ್(೧೬) ಎಂಬಾತನೇ ಮಾರಣಾಂತಿಕ ಇರಿತಕ್ಕೊಳಗಾದ ನತದೃಷ್ಟ.
ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆ ಮೊನ್ನೆ ಸೋಮವಾರ ಕೊನೆಗೊಂಡಿತ್ತಾದರೂ ಅಗತ್ಯ ಕೆಲಸದಿಂದ ಮುನಾಫ್ ನಿನ್ನೆ ಶಾಲೆಗೆ ಬಂದಿದ್ದ. ಈ ವೇಳೆ ದಿಢೀರ್ ದಾಳಿ ನಡೆಸಿದ ಶಾಲೆಯ ಹಳೆ ವಿದ್ಯಾರ್ಥಿಗಳಾದ ಬಟ್ಟಂ ಪಾರೆಯ ಮಹೇಶ, ನುಳ್ಳಿಪ್ಪಾಡಿಯ ಅಭಿಜಿತ್, ವಿಷ್ಣು ಎಂಬವರ ನೇತೃತ್ವದ ಆರು ಮಂದಿ ಮುನಾಫ್‌ನ ಮೇಲೆರಗಿ ಶಾಲಾ ಸ್ಟಾಫ್ ರೂಮ್ ಎದುರಲ್ಲೇ ಚೂರಿಯಿಂದ ಬೆನ್ನಿಗೆ ಬಲವಾಗಿ ಇರಿದು ಪರಾರಿಯಾಗಿದ್ದರು. ಜನರಲ್ ಆಸ್ಪತ್ರೆಗೆ ಕೊಂಡೊಯ್ದ ಈತನ ಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿಗೆ ಸಾಗಿಸಲಾಯಿತು. ಆರೋಪಿಗಳ ಪೈಕಿ ವಿಷ್ಣು ಎಂಬಾತ ಮುನಾಫ್‌ನ ಸಹಪಾಠಿಯಾಗಿದ್ದು, ಇವರೀರ್ವರ ನಡುವೆ ಅದೇನೋ ದ್ವೇಷವಿತ್ತೆನ್ನಲಾಗುತ್ತಿದೆ. ಇದುವೇ ಇರಿತದಲ್ಲಿ ಕೊನೆಗೊಂಡಿದೆ.
ಘಟನಾ ಸ್ಥಳಕ್ಕೆ ಎ.ಎಸ್.ಪಿ. ಟಿ.ಕೆ. ಶಿಬು ನೇತೃತ್ವದಲ್ಲಿ ಪೊಲೀಸರು ಬಂದು ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಅವರ ಮನೆಗಳಿಗೆ ದಾಳಿ ನಡೆಸಲಾಯಿತಾದರೂ ಎಲ್ಲ ಆರೋಪಿಗಳೂ ತಲೆಮರೆಸಿ ಕೊಂಡಿದ್ದಾರೆ.

ಸುಳ್ಯ: ಬೆಂಕಿಗೆ ಮನೆ ಭಸ್ಮ

Posted by JAYAKIRANA Kirana on | 0 comments | Leave a comment...

ಸುಳ್ಯ: ಮನೆಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟುಹೋಗಿ ರುವ ಘಟನೆ ಸೋಮವಾರ ತಡರಾತ್ರಿ ಅಮರ ಪಡ್ನೂರು ಗ್ರಾಮದ ಜೋಗಿಯಡ್ಕ ಎಂಬಲ್ಲಿ ನಡೆದಿದ್ದು, ೧೧ ಲಕ್ಷ ರೂ. ನಷ್ಟ ಸಂಭವಿಸಿದೆ.
ಜೋಗಿಯಡ್ಕದಲ್ಲಿ ಕೆ.ಜಿ.ಆನಂದ ಗೌಡ ಎಂಬವರು ತಮ್ಮ ಮನೆಗೆ ಹೊಂದಿಕೊಂಡಂತೆ ಎದುರು ಭಾಗದಲ್ಲಿ ಸಣ್ಣ ಜೀನಸು, ತಂಪುಪಾನೀಯ ಅಂಗಡಿಯನ್ನು ನಡೆಸುತ್ತಿದ್ದರು. ಸೋಮವಾರ ರಾತ್ರಿ ೨ ಗಂಟೆ ವೇಳೆಗೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸಂಪೂರ್ಣ ಸುಟ್ಟುಹೋಗಿದೆ. ಟಿ.ವಿ., ಫ್ರಿಡ್ಜ್, ೨೦ ಗ್ರಾಂ ಚಿನ್ನಾಭರಣ, ೧೫ ಸಾವಿರ ನಗದು, ಬಟ್ಟೆ-ಬರೆ, ಪಾತ್ರೆ-ಪಗಡಿ, ೮ ಕ್ವಿಂಟಾಲ್ ಕಾಳುಮೆಣಸು, ೬೦ ಸಾವಿರ ರೂ. ಮೌಲ್ಯದ ಅಡಿಕೆ, ಅಂಗಡಿಯಲ್ಲಿದ್ದ ಸುಮಾರು ಒಂದೂವರೆ ಲಕ್ಷ ಮೌಲ್ಯದ ಜಿನಸು ಸಾಮಗ್ರಿ ಎಲ್ಲಾ ಸುಟ್ಟುಹೋಗಿದೆ. ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಕೂಡಾ ಸ್ಪೋಟಗೊಂಡಿದ್ದು, ಬೆಂಕಿ ಮತ್ತಷ್ಟು ಹಬ್ಬಲು ಕಾರಣವಾಯಿತು. ಮನೆಯ ಹಿಂಬದಿ ಇಳಿಸಿದ ಸಣ್ಣ ಕೋಣೆಯಲ್ಲಿ ಆನಂದ ಗೌಡ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮಲಗಿದ್ದರು. ಫ್ಯಾನ್ ತಿರುಗುತ್ತಿದ್ದುರಿಂದ ಅದರ ಶಬ್ದಕ್ಕೆ ಮನೆಯ ಎದುರು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅವರ ಗಮನಕ್ಕೆ ಬರಲಿಲ್ಲ ಎನ್ನಲಾಗಿದೆ. ರಾತ್ರಿ ಎರಡೂವರೆ ಗಂಟೆಗೆ ಹೆಂಚು ಒಡೆದು ಬೀಳುವ ಶಬ್ದ ಕೇಳಿ ಎಚ್ಚರವಾಗಿದೆ. ಕೂಡಲೇ ನೆರೆಮನೆಯವರಿಗೆ ಸುದ್ದಿ ತಿಳಿದು ಎಲ್ಲರೂ ಸೇರಿ ಬೆಂಕಿ ನಂದಿಸುವ ಯತ್ನ ನಡೆಸಿದ್ದಾರೆ. ಆದರೆ ವಿದ್ಯುತ್ ಕೈಕೊಟ್ಟ ಪರಿಣಾಮ ಪಂಪ್‌ನಲ್ಲಿ ನೀರು ಹಾಯಿಸಲು ಸಾಧ್ಯವಾಗಿಲ್ಲ. ಬಳಿಕ ಅಲ್ಲಿಗೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.

ಮಲ್ಪೆ ರೇವ್‌ಪಾರ್ಟಿ: ತನಿಖಾಧಿಕಾರಿ ಜಯಂತಿ ಇಂದು ಉಡುಪಿಗೆ

Posted by JAYAKIRANA Kirana on | 0 comments | Leave a comment...

ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಕಳೆದ ತಿಂಗಳು ನಡೆದ ರೇವ್ ಪಾರ್ಟಿಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸರಕಾರದಿಂದ ನಿಯುಕ್ತಿಗೊಂಡಿದ್ದ ಮೈಸೂರು ವಿಭಾಗದ ಆಯುಕ್ತರಾದ ಜಯಂತಿ ಅವರು ಇಂದು ಬೆಳಗ್ಗೆ (ಬುಧವಾರ) ಉಡುಪಿಗೆ ಆಗಮಿಸ ಲಿದ್ದು, ತನಿಖೆ ಆರಂಭಿಸಲಿದ್ದಾರೆ.
ಬೆಳಗ್ಗೆ ಐಲ್ಯಾಂಡ್‌ಗೆ ಭೇಟಿ ನೀಡಿ ಸ್ಥಳ ಪರಿಶೋಧನೆ ನಡೆಸಲಿರುವ ತನಿಖಾಧಿಕಾರಿ ಜಯಂತಿಯವರು, ಮಧ್ಯಾಹ್ನ ೩ ಗಂಟೆಗೆ ಮಣಿಪಾಲದ ಎಂಡ್‌ಪಾಯಿಂಟ್‌ನಲ್ಲಿರುವ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ಸಾರ್ವ ಜನಿಕರಿಂದ ದೂರುಗಳನ್ನು ಸ್ವೀಕರಿ ಸಲಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ಬೆಳಗ್ಗೆ ೧೧ ಗಂಟೆಗೆ ಮತ್ತೆ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿ ರೇವ್‌ಪಾರ್ಟಿಯ ಬಗ್ಗೆ ದೂರು ಕೊಡಲು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಆಸಕ್ತರಿಗೆ ಮೌಖಿಕವಾಗಿಯೂ ದೂರು ನೀಡಲು ಅವಕಾಶವಿದೆ ಎನ್ನಲಾಗಿದೆ.
ಮಲ್ಪೆ ರೇವ್‌ಪಾರ್ಟಿಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ ಅವರು ಸಮರ್ಥನೆ ಮಾಡಿಕೊಂಡಿ ದ್ದರು. ಈ ಬಗ್ಗೆ ಕಳೆದ ಸದನದಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರತಾಪ ಚಂದ್ರ ಶೆಟ್ಟಿ, ವಿಧಾನಸಭಾ ಸದಸ್ಯರಾದ ಗೋಪಾಲ ಭಂಡಾರಿ ಮೊದಲಾದವರು ವಿಷಯ ಪ್ರಸ್ತಾಪ ಮಾಡಿದ್ದರು. ಸಿದ್ದರಾಮಯ್ಯ, ಮೋಟಮ್ಮ, ಶ್ರೀ ರಾಮುಲು ಮುಂತಾದವರು ಸರಕಾರದ ಪ್ರವಾಸೋದ್ಯಮ ನೀತಿಯನ್ನು ತೀವ್ರವಾಗಿ ಟೀಕಿಸಿದ್ದರು. ವಿರೋಧ ಪಕ್ಷಗಳಿಂದ, ಸಾರ್ವಜನಿಕರ ಭಾರೀ ಪ್ರತಿಭಟನೆಯ ಬಳಿಕ ಸರಕಾರ ರೇವ್ ಪಾರ್ಟಿ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಮೈಸೂರು ವಿಭಾಗದ ಆಯುಕ್ತರಾದ ಜಯಂತಿ ಅವರನ್ನು ನೇಮಕ ಮಾಡಿ ಆದೇಶಿಸಿತ್ತು. ಫೆಬ್ರವರಿ ೩,೪ ಮತ್ತು ೫ರಂದು ಮೂರು ದಿನಗಳ ಕಾಲ ಹಗಲು-ರಾತ್ರಿ ಎನ್ನದೆ ಸೇಂಟ್ ಮೇರೀಸ್ ಐಲ್ಯಾಂಡ್‌ನಲ್ಲಿ ಅಂತಾರಾಷ್ಟ್ರೀಯ ಸಂಗೀತ ಮತ್ತು ಕಲಾ ಉತ್ಸವ (ಸ್ಪ್ರಿಂಗ್ ಝೂಕ್) ಎಂಬ ಹೆಸರಿನಲ್ಲಿ ಬಹಿರಂಗ ನಂಗಾನಾಚ್ ನಡೆದಿತ್ತು. ಮೊದಲ ದಿನವಾದ ಫೆ.೩ರಂದು ಬೆಳಗ್ಗೆ ಐಲ್ಯಾಂಡ್‌ಗೆ ಹೋಗುವ ಮೊದಲೇ ಮಲ್ಪೆಯ ಬೋಟ್ ನಿಲುಗಡೆಯ ಸ್ಥಳದಲ್ಲೇ ಅಮಲು ಪದಾರ್ಥಗಳನ್ನು ಸೇವಿಸಿದ ವಿದೇಶಿ ಜೋಡಿಗಳು ಅರೆ ಬೆತ್ತಲೆ ನೃತ್ಯ ಮಾಡಿದ್ದರು. ಮಲ್ಪೆಗೆ ಬರುವಾಗಲೇ ತಮ್ಮ ತಮ್ಮ ಬ್ಯಾಗ್‌ಗಳಲ್ಲಿ ತಂದಿದ್ದ ಗಾಂಜಾವನ್ನು ಕೆಲವರು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ಹಾಕಿ ಇತರರಿಗೆ ಮಾರಾಟ ಮಾಡಿದ್ದರು. ಇವುಗಳನ್ನೆಲ್ಲ ಖಾಸಗಿ ಟಿವಿ ಚಾನೆಲ್‌ಗಳು ಚಿತ್ರೀಕರಿಸಿದ್ದವು. ಪತ್ರಿಕಾ ಛಾಯಾಗ್ರಾಹಕರು ಛಾಯಾಚಿತ್ರ ತೆಗೆದಿದ್ದರು. ಈ ಬಗ್ಗೆ ವರದಿ ಕೂಡ ಪ್ರಕಟವಾಗಿತ್ತು.
 ಮಧ್ಯಾಹ್ನ ಐಲ್ಯಾಂಡ್ ಪ್ರವೇಶಿಸಿದ ಜೋಡಿಗಳು ಬಾಡಿಗೆ ಕೊಟ್ಟು ಟೆಂಟ್‌ಗಳಲ್ಲಿ ಉಳಕೊಂಡಿದ್ದರು ಮತ್ತು ರಾತ್ರಿ ಹೊತ್ತು ಮದ್ಯ ಸೇವಿಸಿದ್ದು ಅಲ್ಲದೆ, ಸಾಂಸ್ಕೃತಿಕ ಉತ್ಸವ ನಡೆಯುತ್ತಿದ್ದ ವೇದಿಕೆಯ ಮೇಲೆಯೇ ಎಲ್ಲರೆದುರೇ ನಾಚಿಕೆಯೇ ಇಲ್ಲದೆ ತೀರ ಅಶ್ಲೀಲವಾಗಿ ವರ್ತಿಸಿದ್ದರು. ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಶಾಸಕ ಕೆ.ರಘುಪತಿ ಭಟ್ ಹಾಗೂ ಶಾಸಕರ ಬೆಂಬಲಿಗರು ಈ ಉತ್ಸವದ ಸಂಪೂರ್ಣ ವ್ಯವಸ್ಥೆಯನ್ನು ನೋಡಿಕೊಂಡಿದ್ದರು.
 ಉಡುಪಿಯ ಕೆ.ಎಂ.ಮಾರ್ಗದ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ೩ ಡಬ್ಲ್ಯೂ ಕಾನ್ಸೆಪ್ಟ್ ಎಂಬ ಸಂಸ್ಥೆಯ ಗಿರೀಶ್ ಶೆಟ್ಟಿ ಎಂಬವರ ಹೆಸರಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರಿಂದ ನೇರವಾಗಿ ಈ ರೇವ್ ಪಾರ್ಟಿಗೆ ಪರವಾನಿಗೆ ಪಡೆಯಲಾಗಿತ್ತು. ಗಿರೀಶ್ ಶೆಟ್ಟಿ ಅವರು ಶಾಸಕ ಭಟ್ ಅವರ ಕ್ಲಾಸ್‌ಮೇಟ್ ಎನ್ನಲಾಗಿದೆ.
 ಉತ್ಸವ ಹೊರತುಪಡಿಸಿ ಇನ್ನಾವುದೇ ಕಾನೂನು ಬಾಹಿರ ಕಾರ್ಯ ಕ್ರಮದಲ್ಲಿಯೂ ಇಲಾಖಾ ಲೋಗೋವನ್ನು ಉಪಯೋಗಿಸಿ ಕೊಳ್ಳಬಾರದು ಎಂಬ ಷರತ್ತಿನೊಂದಿಗೆ ಕಳೆದ ವರ್ಷದ ಡಿಸೆಂಬರ್ ೨೩ರಂದು ರಾಜ್ಯ ಪ್ರವಾಸೋದ್ಯಮ ನಿರ್ದೇಶನಾಲಯದ ನಿರ್ದೇಶಕರು ಉತ್ಸವದಲ್ಲಿ ಪ್ರವಾಸೋದ್ಯಮ ಇಲಾಖೆಯ ಲೋಗೋವನ್ನು ಉಪಯೋಗಿಸಲು ಅನುಮತಿಯನ್ನು ನೀಡಿದ್ದರು. ಗಿರೀಶ್ ಶೆಟ್ಟಿಯವರು ಡಿ.೮ರಂದು ಉತ್ಸವದಲ್ಲಿ ಲೋಗೋವನ್ನು ಉಪಯೋಗಿ ಸಲು ಅನುಮತಿ ಕೋರಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಪತ್ರವನ್ನು ಬರೆದಿದ್ದರು.

ನಿಷ್ಪಕ್ಷಪಾತದ ವಿಮರ್ಶೆಗೂ ಬರ

Posted by JAYAKIRANA Kirana on | 0 comments | Leave a comment...


ಇತ್ತೀಚೆಗೆ ಕನ್ನಡದ ಖ್ಯಾತ ನಿರ್ದೇಶಕ, ಕಲಾ ಸಾಮ್ರಾಟ್ ಎಂಬ ಬಿರುದನ್ನು ತಾನೇ ಹೊತ್ತುಕೊಂಡಿ ರುವ ಎಸ್.ನಾರಾಯಣ್ ಸಿನಿಮಾ ರಂಗ ಬಿಡುವುದಾಗಿ ಹೇಳಿ ಜನರನ್ನು ಅಚ್ಚರಿಗೆ ದೂಡಿದ್ದಾರೆ. ಅವರು ಇತ್ತೀಚೆಗೆ ನಿರ್ದೇಶಿಸಿದ ‘ಶೈಲೂ’ ‘ಮುಂಜಾನೆ’ ಚಿತ್ರಗಳು ಹಣ ಮಾಡಿಲ್ಲ. ನನ್ನ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಿಲ್ಲ ಎಂದು ಪ್ರಾಮಾಣಿಕತೆಯಿಂದ ಹೇಳಿದ್ದಾರೆ. ಸದಾ ಆತ್ಮವಂಚನೆ ಯಿಂದ ಬದುಕುವ ಗಾಂಧಿನಗರದ ಮಂದಿಗೆ ನಾರಾ ಯಣ್ ಅವರ ಮಾತು ಇಷ್ಟವಾಗಲಿಕ್ಕಿಲ್ಲ. ಇರಲಿ ನಾನು ಹೇಳಲು ಹೊರಟಿರುವುದು ಬೇರೆ. ಕೆಲವು ವಾರಗಳ ಹಿಂದೆ ‘ಶೈಲೂ, ಮುಂಜಾನೆ’ ಚಿತ್ರಗಳ ಬಗ್ಗೆ ಕನ್ನಡದ ಸಿನಿಮಾ ಪತ್ರಿಕೆಗಳಲ್ಲಿ, ಶುಕ್ರವಾರದ ಸಿನಿ ಪುರವಣಿಗಳಲ್ಲಿ ಹೊಗಳಿ ವರದಿ ಬಂದದ್ದೇ ಬಂದದ್ದು. ಅದರಲ್ಲೂ ಗಣೇಶ್ ಅಭಿ ನಯದ ಸಿನಿಮಾ ಎಂದರೆ ಬಿಡು ಗಡೆಗೆ ಮೊದಲೇ ಸೂಪರ್ ಹಿಟ್ ಎಂದು ಬರೆಯಲಾಗುತ್ತದೆ. ಗಣೇಶ್ ನಿರ್ದೇಶಕನನ್ನು ಹೊರ ಗಟ್ಟಿ ತಾನೇ ಆ ಸೀಟಿನಲ್ಲಿ ಕೂತು ನಿರ್ದೇಶಿಸಿದ ‘ಕೂಲ್’ ಚಿತ್ರಕ್ಕೂ ಕನ್ನಡದ ಸಿನಿ ಪತ್ರಕರ್ತರು ನೂರಕ್ಕೆ ನೂರು ಅಂಕಗಳನ್ನು ಕೊಟ್ಟಿದ್ದರು ಎನ್ನುವುದನ್ನು ನೆನಪಿಸಲೇಬೇಕು. ಕನ್ನಡದಲ್ಲಿ ವಿಮರ್ಶೆ ಎಂದರೆ ಮುಜುಗರವಾಗುವಷ್ಟು ಹೊಗಳುವುದು ಎನ್ನುವುದೇ ಆಗಿಬಿಟ್ಟಿದೆ. ಹಾಗಿದ್ದರೆ ಎಸ್. ನಾರಾಯಣ್ ಹೇಳುತ್ತಿರುವುದೇನು? ಶೈಲೂ, ಮುಂಜಾನೆ ಹಣ ಮಾಡ ಲಿಲ್ಲ ಎಂದರೆ ಅದನ್ನು ಪ್ರೇಕ್ಷಕರು ಇಷ್ಟಪಟ್ಟಿಲ್ಲ ಎಂದು ಅರ್ಥ ತಾನೇ? ಪತ್ರಕರ್ತರು ಮುಲಾಜಿಗೆ ಒಳಗಾಗಿಯೋ, ಆಮಿಷಕ್ಕೊಳಗಾಗಿಯೋ ಸಿನಿಮಾವನ್ನು ವಸ್ತುನಿಷ್ಠವಾಗಿ ವಿಮರ್ಶಿಸುವುದನ್ನು ಬಿಟ್ಟು ತಮಗೆ ಬೇಕಾದ ಹಾಗೆ ವಿಮರ್ಶೆ ಮಾಡುತ್ತಾರೆ. ಇದರ ಫಲವಾಗಿಯೇ ನಿರ್ಮಾ ಪಕರು ಹಣ ಕಳೆದುಕೊಳ್ಳುತ್ತಾರೆ. ಸಿನಿಮಾಗಳ ಗುಣಮಟ್ಟ ಕಳಪೆಯಾಗುತ್ತಾ ಹೋಗುತ್ತವೆ. ಮಲಯಾಳಂನ ಸ್ಟಾರ್ ನಟ ಮಮ್ಮುಟಿ ನಟಿಸಿದ ಕನ್ನಡದ ಮೊದಲ ಚಿತ್ರ ‘ಶಿಕಾರಿ’ ಬಿಡುಗಡೆಯಾಗುತ್ತಿದೆ. ಮಲಯಾಳಂನಲ್ಲಿ ಇದೇ ಚಿತ್ರ ಬಿಡುಗಡೆಯಾಗಿ ಎರಡು ವಾರವಾಗುತ್ತಾ ಬಂತು. ಆದರೆ ಅಲ್ಲಿಯ ಪ್ರೇಕ್ಷಕ ಈ ಚಿತ್ರವನ್ನು ಒಪ್ಪಿಲ್ಲ ಎಂಬುದಾಗಿ ಅಲ್ಲಿಯ ಪತ್ರಿಕೆಗಳು ಬರೆಯುತ್ತವೆ. ಕನ್ನಡದ ಪತ್ರಿಕೆಗಳು ಶಿಕಾರಿ ಮಲಯಾಳಂನಲ್ಲಿ ಹಿಟ್ ಆಗುವತ್ತ ಸಾಗಿದೆ ಎನ್ನು ತ್ತಿವೆ. ಇಲ್ಲಿ ಯಾರದ್ದು ಸರಿ? ಕನ್ನಡ ಚಿತ್ರಗಳ ಬಗ್ಗೆ ನಿಷ್ಪಕ್ಷ ಪಾತವಾಗಿ ಬರೆಯುವುದನ್ನು ಸಿನಿ ಪತ್ರಕರ್ತರು ಯಾವಾಗ ರೂಢಿಸಿಕೊಳ್ಳುತ್ತಾರೆ?
ಸಿನಿಪ್ರಿಯ, ಮಂಗಳೂರು

ಎಚ್ಚರದಿಂದ ವ್ಯವಹರಿಸಿ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧ ಕಡೆ ಪ್ರತಿ ನಿತ್ಯವೆಂಬಂತೆ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಬಹು ತೇಕ ಪ್ರಕರಣಗಳಲ್ಲಿ ಹೊರಜಿಲ್ಲೆಯ ಕಾರ್ಮಿಕರೇ ಪಾಲ್ಗೊಂ ಡಿರುವುದು ಗಮನಕ್ಕೆ ಬರುತ್ತಿದೆ. ಇತ್ತೀಚೆಗೆ ಬಜ್ಪೆ ಬಳಿಯ ಮೊಬೈಲ್ ಅಂಗಡಿ ಲೂಟಿ ಪ್ರಕರಣದಲ್ಲೂ ಸ್ಥಳೀಯ ಕಂಪೆನಿಯೊಂದರ ಹೊರರಾಜ್ಯದ ಕಾರ್ಮಿಕ ಪಾಲ್ಗೊಂಡು ಪೊಲೀಸರಿಗೆ ಸೆರೆಸಿಕ್ಕಿದ್ದಾನೆ. ಹೀಗಿರುವಾಗ ಸ್ಥಳೀಯರು ಇಂಥ ಕಾರ್ಮಿಕರ ಬಗ್ಗೆ ಎಚ್ಚರಿಕೆಯಿಂದ ವ್ಯವಹರಿಸುವು ದೊಳ್ಳೆಯದು. ಇಲ್ಲಿ ಕಳ್ಳತನ ಮಾಡಿ ಊರಿಗೆ ಪರಾರಿ ಯಾಗುವ ಇವರನ್ನು ಹುಡುಕುವುದೂ ಕಷ್ಟ. ಜನರು ಆದಷ್ಟು ಜಾಗರೂಕತೆಯಿಂದ ಇರಬೇಕಿದೆ. ಸಂಶಯಕ್ಕೆ ಎಡೆಮಾಡಿ ಕೊಡುವಂತೆ ವರ್ತಿಸುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು.
ನಾಗೇಶ್, ಬೆಂಗ್ರೆ

ನೀರು ಒದಗಿಸಲು ಕ್ರಮ ಕೈಗೊಳ್ಳಿ
ಮಂಗಳೂರು ಮಹಾನಗರ ಪಾಲಿಕೆ ಈ ಬಾರಿಯ ಬೇಸಿಗೆಯಲ್ಲಿ ನಗರವಾಸಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದಾಗಿ ಹೇಳುತ್ತಿದೆ. ಇದಕ್ಕೆ ತುಂಬೆ ಡ್ಯಾಂನಲ್ಲಿ ನೀರು ಕಡಿಮೆಯಾಗಿದೆ ಎಂಬ ಕಾರಣವನ್ನೂ ನೀಡುತ್ತಿದೆ. ಇದು ಸತ್ಯವಾದರೂ ನಗರವಾಸಿಗಳಿಗೆ ನೀರು ಒದಗಿಸಲು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬೇರೆ ನೀರಿನ ಮೂಲಗಳಿಲ್ಲವೇ? ಜಿಲ್ಲೆಯ ನದಿಯಲ್ಲಿ ನೀರಿಲ್ಲವೆಂದಾದರೆ ಉಡುಪಿಯ ನದಿಮೂಲ ದಿಂದ ನೀರನ್ನು ಪಡೆದು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಿ. ನಗರಪಾಲಿಕೆಯನ್ನು ಜನರು ಆರಿಸಿದ್ದು ಬರ ಪರಿಸ್ಥಿತಿಯನ್ನು ಎದುರು ನೋಡುವುದಕ್ಕೇ?
ರಿತೇಶ್, ಬಂಗ್ರಕೂಳೂರು

ಶರಬತ್‌ಕಟ್ಟೆ ರಸ್ತೆಯಲ್ಲಿ ಕಾಮುಕರ ಹಾವಳಿ
ಯೆಯ್ಯಾಡಿ ಸಮೀಪದ ಶರಬತ್ ಕಟ್ಟೆಯಿಂದ ನಂತೂರಿಗೆ ಹೋಗುವ ಅಡ್ಡ ದಾರಿಯೊಂದಿದೆ. ಇಲ್ಲಿ ವಾಹನಗಳು ಮಾತ್ರವಲ್ಲದೆ ಪಾದಚಾರಿಗಳೂ ಸಂಚ ರಿಸುತ್ತಾರೆ. ಮುಖ್ಯ ಹೆದ್ದಾರಿಯನ್ನು ಬಳಸಿ ಸಾಗುವ ಬದಲು ಈ ರಸ್ತೆಯಲ್ಲಿ ಸಾಗಿ ದರೆ ಸಮಯದ ಉಳಿತಾಯವೂ ಆಗು ತ್ತದೆ. ಹೀಗಾಗಿ ಶಾಲೆ-ಕಾಲೇಜ್‌ಗೆ ತೆರ ಳುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ರಸ್ತೆಯನ್ನು ಬಳಸುತ್ತಾರೆ. ವಿದ್ಯಾರ್ಥಿಗ ಳಿಗೆ ವಾರ್ಷಿಕ ಪರೀಕ್ಷೆ ನಡೆಯುತ್ತಿರುವ ಕಾರಣ ಮಧ್ಯಾಹ್ನದ ವೇಳೆ ಈ ರಸ್ತೆಯಲ್ಲಿ ವಿದ್ಯಾರ್ಥಿನಿಯರು ಒಬ್ಬಂಟಿಯರಾಗಿ ಸಂಚರಿಸುವುದು ಅನಿವಾರ್ಯವಾಗುತ್ತದೆ. ಆದರೆ ಈ ವೇಳೆ ಬೈಕ್‌ಗಳಲ್ಲಿ ಕೆಲವು ಮಂದಿ ಯುವಕರು ಹಿಂಬಾಲಿಸುತ್ತಾ ಕೀಟಲೆ ಮಾಡುತ್ತಾರೆ. ಬೆಳಗ್ಗೆ, ಮಧ್ಯಾಹ್ನ, ಸಂಜೆಯ ವೇಳೆ ಇವರ ಉಪಟಳ ಇನ್ನೂ ಅಧಿಕವಾಗಿರುತ್ತದೆ. ಇನ್ನೂ ನೋಂದಣಿ ಯಾಗದ ಕಾರುಗಳನ್ನು ಹಿಡಿದು ಯುವ ಕರು ಇಲ್ಲಿ ರಸ್ತೆ ಕಾಯುತ್ತಿರುತ್ತಾರೆ. ವಿದ್ಯಾ ರ್ಥಿನಿಯರು ಬರುವುದನ್ನು ದೂರದಿಂ ದಲೇ ನಿಂತು ನೋಡುವ ಇವರು ಹತ್ತಿರ ಬಂದಂತೆ ಮಾತಾಡಿಸುವುದು, ಮೊಬೈಲ್ ನಂಬ್ರ ನೀಡುವುದು ಮಾಡುತ್ತಾರೆ. ಇವ ರಿಂದಾಗಿ ವಿದ್ಯಾರ್ಥಿನಿಯರು ಈ ರಸ್ತೆ ಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ಕದ್ರಿ ಠಾಣೆಯ ಪೊಲೀಸರು ಇಲ್ಲಿಗೆ ಭೇಟಿ ಕೊಟ್ಟು ಕಾಮುಕ ಯುವಕರನ್ನು ಹಿಡಿದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದರೆ ರಸ್ತೆಯಲ್ಲಿ ನೆಮ್ಮದಿಯಿಂದ ಸಂಚರಿಸುವಂ ತಾದೀತು. ಸಂಘಟನೆಗಳೂ ಇತ್ತ ಗಮನ ಹರಿಸಲಿ.
ಆಶಾಲತಾ, ಯೆಯ್ಯಾಡಿ

ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರದಿರಿ

Posted by JAYAKIRANA Kirana on | 0 comments | Leave a comment...


ಈಗ ಶಾಲಾ-ಕಾಲೇಜ್ ವಿದ್ಯಾರ್ಥಿ ಗಳಿಗೆ ಪರೀಕ್ಷಾ ಸಮಯ. ಮಕ್ಕಳು ಪರೀ ಕ್ಷೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊ ಳ್ಳುತ್ತಿದ್ದಾರೆ. ಅಷ್ಟರಲ್ಲಿ ಪಿಯುಸಿ ಪರೀ ಕ್ಷೆಯ ಪ್ರಶ್ನಾಪತ್ರಿಕೆ ಲೀಕ್ ಆಗಿರುವ ಕಾರಣ ಪರೀಕ್ಷೆಯನ್ನು ಮುಂದೂಡಿ ಸರ ಕಾರ ಆದೇಶ ಹೊರಡಿಸಿದೆ. ಇದರಿಂದ ಯಾರೋ ಮಾಡಿದ ತಪ್ಪಿಗೆ ಅಮಾಯಕ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ. ಒಮ್ಮೆ ಓದಿದ್ದನ್ನು ಮತ್ತೊಮ್ಮೆ ಓದಿ ಮನನ ಮಾಡಿಕೊಳ್ಳಲು ಮಕ್ಕಳು ಇನ್ನಿಲ್ಲದ ಪಾಡು ಪಡುತ್ತಾರೆ. ಈ ವೇಳೆ ಕೆಲವು ಮಕ್ಕಳ ಮನೆಮಂದಿ ಪರೀಕ್ಷೆಯಲ್ಲಿ ಇಂತಿಷ್ಟೇ ಮಾರ್ಕ್ಸ್ ಪಡೆಯಬೇಕೆಂದು ಒತ್ತಡ ಹೇರುವುದು, ಅನ್ನ-ನೀರು ಬಿಟ್ಟು ಓದು ಎಂದು ಹೇಳುವುದು ಮಾಡುತ್ತಾರೆ. ಇದರಿಂದ ಮಕ್ಕಳ ಮಾನಸಿಕ ಸ್ಥಿತಿಗತಿಯ ಮೇಲೆ ಗಾಢ ಪರಿಣಾಮ ಬೀರುತ್ತದೆ. ಮಾನಸಿಕ ಚಿಂತೆಯಿಂದ ಹೊರಬರಲಾರದೆ ಮಕ್ಕಳು ಸಾವಿಗೆ ಶರ ಣಾಗುವುದೂ ನಡೆಯುತ್ತದೆ. ಆದ್ದರಿಂದ ಮಕ್ಕಳನ್ನು ಸುಮ್ಮನೆ ಗದರಲು ಹೋಗದಿರಿ. ಅವರಿಗೆ ಉತ್ತಮ ಮಾರ್ಕ್ಸ್ ಪಡೆದು ಪ್ರತಿ ಭಾವಂತ ವಿದ್ಯಾರ್ಥಿಯಾಗಲು ಅವಶ್ಯ ಸಲಹೆ, ಸೂಚನೆಗಳನ್ನು ಕೊಡಿ. ಪರೀಕ್ಷೆಗೆ ಅವರಾಗಿಯೇ ಸಿದ್ಧತೆ ನಡೆಸಲಿ. ಬಲವಂತ ಮಾಡುವುದು ಬೇಡ.
ಗೀತಾ ಅಮೀನ್, ಕಾರ್ಕಳ

ನೀರಿನ ಅನಾವಶ್ಯಕ ಪೋಲು ತಡೆಗಟ್ಟಿ
ಇಡೀ ಮಂಗಳೂರು ನಗರಕ್ಕೆ ಕುಡಿಯುವ ನೀರು ವಿತರಿಸುವ ತುಂಬೆ ಡ್ಯಾಂನಲ್ಲಿ ನೀರಿನ ಅಭಾವ ಆರಂಭವಾಗಿದೆ. ಹಾಗಾಗಿ ಮುಂದಿನ ಒಂಭತ್ತು ದಿನಗಳಲ್ಲಿ ನೀರಿನ ಅಭಾವ ತಲೆದೋರಲಿದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಇಲ್ಲಿಯ ತನಕ ಕಂಡುಬರದ ನೀರಿನ ಕೊರತೆಗೆ ನಗರದಲ್ಲಿ ತಲೆಯೆತ್ತುತ್ತಿರುವ ಬಹುಮಹಡಿ ಕಟ್ಟಡಗಳ ಕಾಮಗಾರಿಯೇ ಕಾರಣ ಎಂದರೆ ತಪ್ಪಿಲ್ಲ. ಈ ಬಾರಿ ನಗರದಲ್ಲಿ ಅಲ್ಲಲ್ಲಿ ಬಹುಮಹಡಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಈ ಕಟ್ಟಡ ಕಾಮಗಾರಿಗಳಿಗೆ ಟ್ಯಾಂಕರ್ ನೀರನ್ನು ಬಳಸುವುದು ಕಾಣುತ್ತಿಲ್ಲ. ಹೀಗಿರುವಾಗ ಇವರ ನೀರಿನ ಮೂಲ ಪಾಲಿಕೆಯೇ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಒಂದೊಂದು ಕಟ್ಟಡ ಕಾಮಗಾರಿಗೆ ಬೇಕಾಗುವ ನೀರಿನ ಪ್ರಮಾಣವನ್ನು ಅಂದಾಜಿಸಿ ದರೆ ನೀರಿನ ಕೊರತೆಗೆ ಉತ್ತರ ಸಿಗಬಹುದು. ಪಾಲಿಕೆಯ ನೀರಿನ ಪೂರೈಕೆಯಲ್ಲೂ ಅವ್ಯವಹಾರ ಕಾಣುತ್ತಿದೆ. ಕಟ್ಟಡ ಕಾಮಗಾರಿಗಳಿಗೆ ಅನ ಧಿಕೃತವಾಗಿ ನೀರು ಸರಬರಾಜಾ ಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಅಲ್ಲದೇ ಕೆಲ ಕಟ್ಟಡ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ನೀರನ್ನು ಅನಾವಶ್ಯಕ ಪೋಲು ಮಾಡುವುದನ್ನು ಕಾಣುತ್ತೇವೆ. ಇಲ್ಲಿಯ ತನಕ ಕಾಡದ ನೀರಿನ ಸಮಸ್ಯೆ ಈಗ ಕಾಡಲು ಇದೇ ಮುಖ್ಯ ಕಾರಣ. ಹಾಗಾಗಿ ಇನ್ನಾದರೂ ಪಾಲಿಕೆ ಮತ್ತು ಜಿಲ್ಲಾಡಳಿತ ಇತ್ತ ಗಮನ ಹರಿಸಲಿ. ಕಟ್ಟಡ ಕಾಮಗಾರಿಗಳಿಗೆ ಕುಡಿಯುವ ನೀರನ್ನು ಪೂರೈಸುವುದು ಬೇಡ. ದೊಡ್ಡ ಯೋಜನೆ ರೂಪಿಸಿ ಕಟ್ಟಡ ನಿರ್ಮಿಸುವವರಿಗೆ ಬೇರೆ ನೀರಿನ ಮೂಲವನ್ನು ಹುಡುಕುವುದು ಕಷ್ಟದ ಕೆಲಸವೂ ಅಲ್ಲ. ಕೆಲವೊಂದು ಕಡೆಗಳಲ್ಲಿ ಸಣ್ಣ ಪುಟ್ಟ ನದಿಗಳು ಹರಿಯುತ್ತಿರುತ್ತವೆ. ಅವು ಕುಡಿಯಲು ಯೋಗ್ಯವಲ್ಲದಿದ್ದರೂ ಈ ರೀತಿಯ ಕೆಲಸಕ್ಕೆ ಉಪಯೋಗವಾಗಬಹುದು.
ಸಂಕೇತ್ ನಾಯಕ್, ಕಂಕನಾಡಿ

ಅಬ್ಬಕ್ಕ ಭವನ ತೊಕ್ಕೊಟ್ಟಿನಲ್ಲೇಕೆ?
ಇತ್ತೀಚೆಗೆ ಬಜೆಟ್‌ನಲ್ಲಿ ಅಬ್ಬಕ್ಕ ಭವನ ನಿರ್ಮಾ ಣಕ್ಕೆ ಮುಖ್ಯಮಂತ್ರಿ ಸದಾನಂದ ಗೌಡರು ಎರಡು ಕೋಟಿ ರುಪಾಯಿ ಮೀಸಲಿಟ್ಟಿದ್ದಾರೆ. ಇದು ಶ್ಲಾಘ ನೀಯ ವಿಚಾರ. ಆದರೆ ಅಬ್ಬಕ್ಕ ಭವನವನ್ನು ವೀರ ರಾಣಿ ಅಬ್ಬಕ್ಕ ಆಳಿದ ಉಳ್ಳಾಲ ಪ್ರದೇಶದಲ್ಲೇ ನಿರ್ಮಿ ಸಿದರೆ ಒಳ್ಳೆಯದು. ಅದು ಬಿಟ್ಟು ಈಗಾಗಲೇ ನಿರಂ ತರ ಜನಜಂಗುಳಿಯಿಂದ ಕೂಡಿರುವ ಹಾಗೂ ಬಸ್‌ನಿಲ್ದಾಣ ಇರುವ ತೊಕ್ಕೊಟ್ಟಿನಲ್ಲೇಕೆ ನಿರ್ಮಿಸ ಬೇಕು? ಉಳ್ಳಾಲದಲ್ಲಿ ನಿರ್ಮಿಸಿದರೆ ಅಬ್ಬಕ್ಕನ ಊರಿ ನಲ್ಲೇ ಭವನ ನಿರ್ಮಾಣ ಆದಂತಾಗುತ್ತದೆ. ಅದು ಬಿಟ್ಟು ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣ ಬೇಡ. ಅಲ್ಲದೇ ತೊಕ್ಕೊಟ್ಟಿನಲ್ಲಿ ಭವನ ನಿರ್ಮಿಸುವ ಉದ್ದೇಶದ ಹಿಂದೆ ವ್ಯವಹಾರದ ಹಿತಾಸಕ್ತಿಯೂ ಅಡಗಿದೆಯೇ ಎಂಬ ಅನುಮಾನ ಕಾಡುತ್ತದೆ. ಏಕೆಂ ದರೆ ಇಲ್ಲಿ ಅಬ್ಬಕ್ಕ ಭವನ ನಿರ್ಮಿಸಿ, ಅದನ್ನು ಇತರೆ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವ ಉದ್ದೇಶವೂ ಇದರ ಹಿಂದೆ ಇರಬಹುದು. ಮೊದಲೇ ತೊಕ್ಕೊಟ್ಟು ಜನನಿಬಿಡ ಪ್ರದೇಶ. ಹಾಗಾಗಿ ಇಂತಹ ಸಾಧ್ಯತೆಗ ಳನ್ನು ಅಲ್ಲಗೆಳೆಯುವಂತಿಲ್ಲ. ಅದೇ ಉಳ್ಳಾಲದಲ್ಲಿ ನಿರ್ಮಿಸಿದರೆ ಯಾವುದೇ ಪ್ರಯೋಜನ ಇಲ್ಲ ಎನ್ನು ವುದೂ ಇದರ ಹಿಂದಿನ ಉದ್ದೇಶ ಆಗಿರಬಹುದೇ? ಹಾಗಾಗಿ ಉಳ್ಳಾಲದಲ್ಲೇ ಅಬ್ಬಕ್ಕ ಭವನ ನಿರ್ಮಾ ಣವಾಗಲಿ.
ವಿಠಲ್ ಶೆಟ್ಟಿ, ಉಳ್ಳಾಲ

ಸುರತ್ಕಲ್ ಹೆದ್ದಾರಿಯಲ್ಲಿ ಲಾರಿಗಳ ಅನಧಿಕೃತ ಪಾರ್ಕಿಂಗ್
ರಾಷ್ಟ್ರೀಯ ಹೆದ್ದಾರಿ ೬೬ರ ಸುರತ್ಕಲ್ ಬಳಿ ಲಾರಿ, ಟ್ಯಾಂಕರ್ ಗಳ ಅನಧಿಕೃತ ಪಾರ್ಕಿಂಗ್‌ನಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹಳೇ ಪೊಲೀಸ್ ಠಾಣೆ, ಸೂರಜ್ ಹೋಟೆಲ್, ಗೋವಿಂದದಾಸ್ ಕಾಲೇಜ್ ಸಮೀಪ ಬೃಹತ್ ಗಾತ್ರದ ಲಾರಿ ಮತ್ತಿತರ ವಾಹನಗಳು ತಂಗಿರುತ್ತವೆ. ಇಲ್ಲಿ ರಸ್ತೆ ಸಂಚಾರದ ವೇಳೆ ಅನೇಕ ಅಡೆತಡೆ ಗಳು ಇರುವುದರಿಂದ ಲಾರಿಗಳ ಬೇಕಾ ಬಿಟ್ಟಿ ತಂಗುವಿಕೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ರಾತ್ರಿ ಹಾಗೂ ನಸುಕಿನ ವೇಳೆ ರಸ್ತೆಯನ್ನು ಆಕ್ರಮಿಸಿ ನಿಲ್ಲುವ ಲಾರಿಗಳು ಕಾಣಿಸದೆ ಅಪಘಾತ ಸಂಭವಿಸಿದ ಅದೆಷ್ಟೋ ಉದಾ ಹರಣೆಗಳಿವೆ. ಸುರತ್ಕಲ್ ಪೊಲೀಸರು ಈ ಬಗ್ಗೆ ಅಗತ್ಯ ಗಮನ ಹರಿಸಬೇಕು. ಹೆದ್ದಾರಿಯನ್ನು ಆಕ್ರಮಿಸಿ ಅನಧಿಕೃತವಾಗಿ ತಂಗುವ ಲಾರಿಗಳ ಚಾಲಕರಿಗೆ ದಂಡ ವಿಧಿಸಬೇಕು.
ಇಸ್ಮಾಯಿಲ್, ಜೋಕಟ್ಟೆ

ದೇವಸ್ಥಾನದಲ್ಲಿ ಅಶ್ಲೀಲ ಬಟ್ಟೆ ನಿಷೇಧಿಸಿ
ಇಂದಿನ ಕಾಲದ ಶಾಲೆ-ಕಾಲೇಜ್ ಹುಡುಗಿಯರು ಫ್ಯಾಶನ್ ಹೆಸರಿನಲ್ಲಿ ಅಶ್ಲೀಲ ಬಟ್ಟೆಯನ್ನು ಧರಿಸುತ್ತಾರೆ. ಕೆಲವು ಬಾರಿ ದೇವಸ್ಥಾನಗಳಿಗೆ ಭೇಟಿ ಕೊಡುವಾಗಲೂ ಇಂಥದ್ದೇ ಬಟ್ಟೆಯನ್ನು ತೊಟ್ಟುಕೊಳ್ಳುತ್ತಾರೆ. ಇದಕ್ಕೆ ಹೆತ್ತವರ, ಮನೆಮಂದಿಯ ಸಹಕಾರವೂ ಇರು ತ್ತದೆ. ಹೀಗಾಗಿ ದೈವಿಕ ಕ್ಷೇತ್ರಕ್ಕೂ ಅರೆ ಬರೆ ಬಟ್ಟೆಯನ್ನು ತೊಟ್ಟುಕೊಂಡು ಹೋಗಿ ಅಲ್ಲಿಯೂ ಭಕ್ತರ ಚಿತ್ತವನ್ನು ಚಂಚಲಗೊಳಿಸುವಲ್ಲಿ ಸಫಲರಾಗುತ್ತಾರೆ. ಆದ್ದರಿಂದ ಈ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕು. ಪಾಶ್ಚಾತ್ಯರ ಅನುಕರಣೆಯಲ್ಲಿ ನಮ್ಮ ಸಂಸ್ಕೃತಿಯನ್ನು ಮಾರಲು ಬಿಡಬಾರದು. ಸಂಸ್ಕೃತಿಯನ್ನು ಬಿಂಬಿಸುವ ಬಟ್ಟೆ ಧರಿಸದವರಿಗೆ ದೇವಸ್ಥಾನದಲ್ಲಿ ಪ್ರವೇಶ ವನ್ನು ನಿಷೇಧಿಸಬೇಕು.
ಪ್ರವೀಣ್ ಶೆಟ್ಟಿ, ಮಂಗಳೂರು

ದಲಿತ ಸಮುದಾಯ: ಅನಾಚಾರವನ್ನು ಸರಿಪಡಿಸಲಿ

Posted by JAYAKIRANA Kirana on | 0 comments | Leave a comment...


ನಾಗರಿಕರು, ಪೆರ್ಲ-ಬಿಯಪಾದೆ
ಮಾ.೨೦ ಮುಖಪುಟದಲ್ಲಿ ವರದಿಯಾದ ದಲಿತ ದೌರ್ಜನ್ಯ ಪ್ರಕರಣ:ಎಸ್ಪಿಗೆ ದೂರು ಎಂಬ ತಲೆ ಬರಹದಡಿ ಪ್ರಕಟವಾದ ವರದಿಗೆ ಮಾ.೨೫ರಂದು ಬಂದ ಪ್ರತಿಕ್ರಿಯೆ ನೂರಕ್ಕೆ ನೂರು ಸರಿಯಾದುದು.
ಇತ್ತೀಚೆಗೆ ಬಿಯಪಾದೆಯಲ್ಲಿ ಹುಟ್ಟಿಕೊಂಡ ಅಂಬೇಡ್ಕರ್ ಸಂಘದ ಸದಸ್ಯ ರಾಜು ಹಾಗೂ ದಸಂಸದ ಕೆಲವು ಸದಸ್ಯರ ಪ್ರಚೋದನೆಯ ಮೇರೆಗೆ ಇಲ್ಲಿ ವಾಸ್ತವ್ಯ ಇರುವ ದಲಿತರು ಒಂದು ದಿನ ತಾಲೂಕು ಕಚೇರಿಯ ಸರ್ವೇಯರ್‌ರವರನ್ನು ಕರೆತಂದು ಬಡ್ಲಂಬು ಗುತ್ತು ಮನೆತನದವರ ಸ್ವಾಧೀನವಿರುವ ಎಲ್ಲಾ ಗುಡ್ಡಗದ್ದೆಗಳನ್ನು ಗುಪ್ತವಾಗಿ ಸರ್ವೆ ಮಾಡಿಸುತ್ತಿರು ವಾಗ ಎಚ್ಚೆತ್ತುಕೊಂಡ ಸದ್ರಿ ಮನೆಯವರು ಹಾಗೂ ಊರಿನ ವರು ಇದಕ್ಕೆ ತಡೆಯೊಡ್ಡಿದರು. ಇಲ್ಲಿ ಕೂಡಾ ಸರ್ವೆ ನಂಬರ್ ಗಳಿಗಿಂತ ಹೆಚ್ಚಿರುವ ಭೂಮಿಗಳನ್ನು ತಮ್ಮ ವಶಕ್ಕೆ ಸರಕಾರ ದಿಂದ ಪಡೆಯುವುದೇ ಇದರ ದುರುದ್ದೇಶವಾಗಿತ್ತು. ಈ ಬಗ್ಗೆ ಕೂಡಾ ತಾವೇ ಅನ್ಯಾಯದ ದಾರಿಯಲ್ಲಿ ಮುಂದುವರಿದರೂ ಆಶ್ರಯ ನೀಡಿದವರ ಮೇಲೆಯೇ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲು ಮುಂದಾದ ದಲಿತರಿಗೆ ಬುದ್ಧಿ ಮಾತು ಹೇಳಿ ಕಳುಹಿಸಿದ ಠಾಣಾಧಿಕಾರಿ ಮಹೇಶ್ ಪ್ರಸಾದ್‌ರವರೇ ವೈರಿಯಂತೆ ಕಂಡುಬಂದರು.
ಕೆಲವು ದಿನಗಳ ಬಳಿಕ ಮತ್ತೊಮ್ಮೆ ನ್ಯಾಯವಾಗಿ ಇತ್ತಂ ಡಗಳ ಸಮ್ಮುಖದಲ್ಲಿ ಕಂದಾಯ ಅಧಿಕಾರಿಗಳು ಭೂಮಿಯನ್ನು ಸರ್ವೆ ಮಾಡಿದಾಗ ಸರ್ವೆ ನಂಬರ್‌ಗಳಿಗಿಂತ ಒಂದಿಂಚೂ ಭೂಮಿ ಹೆಚ್ಚು ಇಲ್ಲದ್ದನ್ನು ಕಂಡು ಇಲ್ಲಿನ ದಲಿತರು ಹಾಗೂ ಸಂಘಟನೆಯವರು ಕೈ-ಕೈ ಹಿಚುಕಿಕೊಂಡು ಮುಖಭಂಗಕ್ಕೆ ಒಳಗಾದರು. ಇತ್ತೀಚೆಗೆ ತಮ್ಮ ಪತ್ರಿಕೆಯಲ್ಲಿ ಬಂದ ವರದಿ ಕೂಡಾ ಸತ್ಯವನ್ನು ತಿರುಚಿದ ವಿಷಯವೇ ಆಗಿದೆ. ಬಿಯಪಾದೆ ಚಂದ್ರಹಾಸ ಪೂಜಾರಿ ಮತ್ತು ರಾಮಣ್ಣ ಪೂಜಾರಿ ಸಹೋದ ರರು, ರಾಮಣ್ಣ ಪೂಜಾರಿ ತನ್ನ ಹೆಂಡತಿಯ ಪ್ರಚೋದನೆ ಯಿಂದ ಕೆಲವು ವರ್ಷಗಳ ಹಿಂದೆ ನ್ಯೂಲೈಫ್ ಪಂಥಕ್ಕೆ ಮತಾಂತರ ಗೊಂಡವರಾಗಿದ್ದಾರೆ. ‘ನಮ್ಮದು ಗುತ್ತು ಮನೆತನ ಅಲ್ಲದೆ ಕುಟುಂಬದ ದೈವ-ದೇವರು ಇರುವ ಮನೆತನ. ಸಹೋದರನ ಈ ವರ್ತನೆಯಿಂದ ನಮಗೆಲ್ಲ ಅವಮಾನವಾಗಿದೆ’ ಎನ್ನುತ್ತಾ ಚಂದ್ರಹಾಸ ಪೂಜಾರಿ ಇದನ್ನು ಖಂಡಿಸುತ್ತಲೇ ಬಂದಿರುತ್ತಾರೆ. ಈ ಸಹೋದರರ ನಡುವೆ ಇದೇ ಕಾರಣಕ್ಕೆ ವೈಮನಸ್ಸು ಇತ್ತು ಎಂದರೆ ತಪ್ಪಾಗಲಾರದು.
ಇತ್ತೀಚೆಗೆ ಮತಾಂತರಗೊಂಡ ರಾಮಣ್ಣ ಪೂಜಾರಿಯವರ ಮನೆಯಲ್ಲಿ ಈ ಬಗ್ಗೆ ಚಟುವಟಿಕೆ ತುಂಬಾ ಬಿರುಸುಗೊಂಡವು. ಅಂಗಳದಲ್ಲಿ ಕ್ರೈಸ್ತರ ಕ್ರಾಸ್‌ಗಳ ಸ್ಥಾಪನೆ, ಬೆಳಿಗ್ಗೆ ಹಾಗೂ ಸಂಜೆ ಜೋರಾಗಿ ಚಪ್ಪಾಳೆ ತಟ್ಟುತ್ತಾ ಪ್ರಾರ್ಥನೆ ಮಾಡುವುದು. ದಿನಂ ಪ್ರತಿ ನಡೆಯುತ್ತಲೇ ಇತ್ತು. ಮಕ್ಕಳಿಗೆ ಇದೀಗ ಪರೀಕ್ಷೆ ಸಮಯ ಆಗಿರುವುದರಿಂದ ನಿಮ್ಮ ಪ್ರಾರ್ಥನೆಯಿಂದ ಪರಿಸರದ ಎಲ್ಲಾ ಮಕ್ಕಳಿಗೂ ಓದಲು ಆಗುವುದಿಲ್ಲ. ಹೊರಗೆ ಕೇಳದ ಹಾಗೆ ಪ್ರಾರ್ಥನೆ ಮಾಡಿ ಎಂದು ಚಂದ್ರಹಾಸ ಪೂಜಾರಿ ಸಾರಿ ಹೇಳು ತ್ತಲೇ ಬಂದಿರುತ್ತಾರೆ. ಅಲ್ಲದೆ ಇಲ್ಲಿನ ಕೆಲವು ದಲಿತರು ಕೂಡಾ ಇವರ ಮಾತಿನ ಮೋಡಿಗೆ ಬಲಿಯಾಗಿ ರಾಮಣ್ಣ ಪೂಜಾರಿಯ ವರ ಮನೆಯಲ್ಲಿ ಸಂಜೆ ಹೊತ್ತಿಗೆ ಸೇರಿಕೊಂಡು ಇವರ ಪ್ರಾರ್ಥನೆ ತಮ್ಮ ಹಳೇ ಚಾಳಿಯನ್ನು ಮತ್ತೆ ಮತ್ತೆ ಮುಂದುವರಿಸಿದಾಗ ಒಂದು ಸಂಜೆ ಚಂದ್ರಹಾಸ ಪೂಜಾರಿ ತನ್ನ ಸಹೋದರ ರಾಮಣ್ಣ ಪೂಜಾರಿಯವರ ಮಾಡಿಗೆ ಕಲ್ಲೆಸೆದು ಅಂಗಳದಲ್ಲಿ ಸ್ಥಾಪಿಸಿದ ಕ್ರಾಸನ್ನು ಕಿತ್ತು ಎಸೆದಿರುತ್ತಾರೆ.
ಇಲ್ಲಿ ಪ್ರಾರ್ಥನೆಗೆ ಮನೆಯೊಳಗೆ ಸೇರಿದ್ದ ದಲಿತರು ಓಡಿ ಹೋಗಿದ್ದಾರೆ. ಆ ದಿನ ಎಲ್ಲವೂ ಮುಗಿದಿದೆ. ಮರುದಿನ ಈ ಪ್ರಕರಣದಲ್ಲಿ ಕೆಲ ದಲಿತ ಸಂಘಟನೆಯವರೊಂದಿಗೆ ಸೇರಿ ಕೊಂಡು ದಲಿತರ ಮನೆಗೆ ಚಂದ್ರಹಾಸ ಪೂಜಾರಿ ಕಲ್ಲೆಸೆದಿ ದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ಕಿರುಕುಳ ದೌರ್ಜನ್ಯವೆಸ ಗಿದ್ದಾರೆ ಎಂದೆಲ್ಲಾ ಸುಳ್ಳು-ಸುಳ್ಳಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಠಾಣಾಧಿಕಾರಿ ಮಹೇಶ್ ಪ್ರಸಾದ್‌ರವರಲ್ಲಿ ಒತ್ತಡ ಹಾಕಿದ್ದಾರೆ. ಇವರ ಈ ಮೊದಲಿನ ಒಂದೆರಡು ಪ್ರಕರಣಗಳಲ್ಲಿ ಇವರ ಮೋಸ, ವಂಚನೆಯ ಸುಳಿವು ಅರಿತ ಠಾಣಾಧಿಕಾರಿ ಸತ್ಯಾಸತ್ಯತೆಯ ಬಗ್ಗೆ ವಿಚಾರಿಸಿಕೊಳ್ಳದೆ ತಾನು ಕೇಸ್ ದಾಖಲಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಈ ಪ್ರಕ ರಣದಲ್ಲಿ ಕೂಡಾ ನಮಗೆ ಸುಳ್ಳನ್ನು ಸತ್ಯ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತ ಇವರು ತಕ್ಷಣವೇ ಪೊಲೀಸ್ ಅಧೀಕ್ಷಕರಿಗೆ ಹಾಗೂ ಪತ್ರಿಕೆಗೆ ಸುಳ್ಳು ದೂರುಗಳನ್ನು ನೀಡಿ ತಮ್ಮ ಪರವಾಗಿ ಇರುವ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಅಲ್ಲದೆ ಹಂತ ಹಂತವಾಗಿ ಸಣ್ಣಪುಟ್ಟ ವಿಷಯಗ ಳಿಗೂ ಕಕ್ಯಪದವು, ಸರಪಾಡಿ, ಬಂಟ್ವಾಳಗಳ ಯುವಕರನ್ನು ಗುಂಪುಗೂಡಿಸಿ ಮೇಲ್ಜಾತಿಯವರನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸಿ ದಮನಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಅನುಕಂಪದ ನೆಲೆಯಲ್ಲಿ ಜಾಗ ಕೊಟ್ಟವರಿಗೆ ಇವರಿಂದು ಕಂಟಕಪ್ರಾಯರಾ ಗಿದ್ದಾರೆ. ಕಾನೂನುಗಳನ್ನು ದುರುಪಯೋಗ ಪಡಿಸಿಕೊಳ್ಳುವ ದಲಿತರಿಗೆ ಯಾವುದೇ ಕಾನೂನು ಇಲ್ಲವೇ? ಅಂದು ಮಹಾತ್ಮ ಗಾಂಧೀಜಿ, ಬಿ.ಆರ್.ಅಂಬೇಡ್ಕರ್, ನಾರಾಯಣ ಗುರುಗಳಂತೆ ಮಹಾನ್ ಚೇತನಗಳು ಈ ದಲಿತರ ಮುಗ್ಧತೆಯನ್ನು ಕಂಡು ಇವರಿಗೆ ವಿದ್ಯಾಭ್ಯಾಸವನ್ನು ಒದಗಿಸಿ ಮಾರ್ಗದರ್ಶನಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕೆಂದು ಕೆಲವೊಂದು ಸೂತ್ರಗಳನ್ನು ಕಾನೂನುಗಳನ್ನು ಅನುಷ್ಠಾನಕ್ಕೆ ತರುವಂತೆ ಸಲಹೆ ನೀಡಿದ್ದು ನಿಜ.
ಇಂದು ಅನುಕಂಪದ ನೆಲೆಯಲ್ಲಿ ನಮ್ಮ ಸರಕಾರಗಳೂ ಪ್ರಥಮವಾಗಿ ಎಲ್ಲಾ ಸವಲತ್ತುಗಳನ್ನು ದಲಿತರಿಗೆ ನೀಡುತ್ತಿವೆ. ಉಚಿತವಾಗಿ ಉನ್ನತ ಶಿಕ್ಷಣವನ್ನೂ ಒದಗಿಸುತ್ತಿದೆ. ಪ್ರಥಮವಾಗಿ ಮೀಸಲಾತಿ ನೆಪದಲ್ಲಿ ಉದ್ಯೋಗವನ್ನು ನೀಡುತ್ತಿದೆ. ನಮ್ಮ ಸರ ಕಾರಗಳು ಎಲ್ಲಾ ವಿಧದಲ್ಲಿಯೂ ಇವರಿಗೆ ಪ್ರಥಮ ಆದ್ಯತೆಯನ್ನು ನೀಡುತ್ತಾ ಬಂದಿದ್ದರೂ ಇಂದಿಗೂ ಸರಕಾರಗಳನ್ನು ದೂರುತ್ತಲೇ ಬಂದಿದ್ದಾರೆ. ಸಮಾಜದಲ್ಲಿ ಸಂಘಟನೆಗಳನ್ನು ಸ್ಥಾಪಿಸಿಕೊಂಡು ಆರೋಗ್ಯಕರವಾದ ಚಟುವಟಿಕೆಗಳನ್ನು ನಡೆಸುತ್ತಾ ಸಹಬಾಳ್ವೆ ಯಿಂದ ಪ್ರೀತಿ-ವಿಶ್ವಾಸದಿಂದ ಮುಂದುವರಿಯಬೇಕಾದ ದಲಿತ ಯುವಕರು ಇಂದು ಆಶ್ರಯದಾತರೊಡನೆಯೇ ವಿನಾ ಕಾರಣ ಕಾಲು ಕೆರೆದು ಸಂಘರ್ಷಕ್ಕೆ ಮುಂದಾಗುತ್ತಿರುವುದಲ್ಲದೆ ತಮ್ಮ ಪರವಾಗಿ ಕಠಿಣ ಕಾನೂನುಗಳಿವೆ ಎಂಬ ಅಹಂನಿಂದ ಮುಂದು ವರಿಯುತ್ತಿರುವುದು ದುರದೃಷ್ಟಕರ. ಈ ಯುವಕರು ಮೊದಲು ತಮ್ಮ ಸಮುದಾಯದ ಒಳಗೆಯೇ ನಡೆಯುತ್ತಿರುವ ಅನ್ಯಾಯಗಳನ್ನು ತಡೆಗಟ್ಟಲಿ.

28-03-2012

Posted by JAYAKIRANA Kirana on | 0 comments | Leave a comment...


ಲೋಫರ್!
ಸರ್ದಾರ್ ಫುಲ್ ಬಾಟಲ್ ನೈಂಟಿ ಕುಡಿದು ಕನ್ನಡಿಯ ಮುಂದೆ ನಿಂತು ಹೇಳ್ತಾನೆ ಇವನನ್ನು ಎಲ್ಲೋ ನೋಡಿದ್ದೇನೇ? ಅಯ್ಯೋ ನೆನಪಾಯ್ತು. ಮದುವೆ ಆಲ್ಬಾಂನಲ್ಲಿ ನನ್ನ ಹೆಂಡತಿ ಪಕ್ಕ ನಿಂತಿದ್ದಾನೆ ಲೋಫರ್!

ಮನಸು
ಕಣ್ಣು ಇಷ್ಟ ಪಡುವ ಜೀವದ ಜೊತೆ ನೂರು ವರ್ಷ ಬಾಳೋದಕ್ಕಿಂತ ಮನಸು ಇಷ್ಟ ಪಡುವ ಜೀವದ ಜೊತೆ ಮೂರು ನಿಮಿಷ ಬಾಳೋದು ಎಷ್ಟು ಒಳ್ಳೆಯದು ಅಲ್ವಾ.

ಬ್ಯಾಂಕ್
ಟೀಚರ್: ಬ್ಯಾಂಕ್ ಆಫ್ ಬರೋಡಾ, ಇದೇ ತರಹದ ಇನ್ನೊಂದು ಹೆಸರು ಹೇಳಿ?
ಗುಂಡ: ಬ್ಯಾಂಕ್ ಆಫ್ ಬರೋಡ್ಚಿ.

ಸಮಯ
ಸಮಯವೆಂಬುದು ನದಿಯ ನೀರಿನಂತೆ. ಒಂದು ಬಾರಿ ಸ್ಪರ್ಶಿಸಿದ ನಂತರ ಮತ್ತೊಮ್ಮೆ ಮುಟ್ಟಲು ಸಾಧ್ಯವಿಲ್ಲ. ಹಾಗೆಯೇ ಸಮಯ ಕೂಡ. ಒಂದು ಬಾರಿ ಅದು ಕಳೆದರೆ ಮರಳಿ ಪಡೆಯುವುದು ಅಸಾಧ್ಯ. ಹಾಗಾಗಿ ಪ್ರತಿಯೊಂದು ಸಮಯವನ್ನು ಎಚ್ಚರಿಕೆ ಹಾಗೂ ಸಂತೃಪ್ತಿಯಿಂದ ಕಳೆಯಿರಿ.

ಪರಿಶ್ರಮ
ಒಂದು ಪೇಪರ್ ಹಾಳೆ ಅದೃಷ್ಟದ ಕಾರಣ ಗಾಳಿಯಲ್ಲಿ ಹಾರಾಡುತ್ತಿರುತ್ತದೆ.
ಆದರೆ ಒಂದು ಪಕ್ಷಿ ತನ್ನ ಪರಿಶ್ರಮದಿಂದ ಮಾತ್ರ ಇದನ್ನು ಸಾಧಿಸುತ್ತದೆ. ಹಾಗೇನೆ ಪರಿಶ್ರಮವು ಯಾವಾಗಲೂ ನಿಮ್ಮ ಜೊತೆಯಿರುತ್ತದೆ. ಆದರೆ ಅದೃಷ್ಟವಲ್ಲ...

ಆಯ್ಕೆ
ಒಂದು ನೀರಿನ ಹನಿ ನದಿಯಲ್ಲಿ ಬಿದ್ದರೆ ಅದನ್ನು ಗುರುತು ಹಿಡಿಯುವುದು ಅಸಾಧ್ಯ
ಆದರೆ ಅದೇ ತಾವರೆ ಎಲೆಯ ಮೇಲೆ ಬಿದ್ದರೆ ಅದು ಪ್ರಕಾಶಿಸುತ್ತಿರುವುದರಿಂದ ಎಲ್ಲರೂ ಅದನ್ನು ಗುರುತಿಸುತ್ತಾರೆ. ಆದ್ದರಿಂದ ನೀವು ಮಿಂಚಬಹುದಾದ ಉತ್ತಮ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ...

ಫ್ರೆಶ್
ಫಸ್ಟ್ ನೈಟ್‌ಗೆ ಹುಡುಗ ತನ್ನ ಹೆಂಡತಿಗೆ ಕಿಸ್ ಕೊಟ್ಟು ಮಲಗಿದ. ಮರುದಿನ ಅತ್ತೆ ಸೊಸೆಯಲ್ಲಿ ಹೋಗಿ ಸ್ನಾನ ಮಾಡಿ ಬಾ, ದೇವಸ್ಥಾನಕ್ಕೆ ಹೋಗೋಣ ಅಂತಾಳೆ. ಅದಕ್ಕೆ ಸೊಸೆ ಸಿಟ್ಟಿನಿಂದ ಬ್ರಶ್ ಮಾಡಿದರೆ ಸಾಕು, ಉಳಿದದ್ದೆಲ್ಲ ಫ್ರೆಶ್ ಇದೆ!

ತುಳು ಪದ್ಧತಿಯ ಮದುವೆ

Posted by JAYAKIRANA Kirana on | 0 comments | Leave a comment...



ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ತುಳುವ ಮೂಲದ ಜನರಿಗೆ ಚಿನ್ನದ ಒಡವೆ ಧರಿಸುವುದು ನಿಷಿದ್ಧವಿತ್ತು. ಕರಿಮಣಿ ತೊಡುವ ಪರಿಕ್ರಮ ಈ ಸಮುದಾಯದಲ್ಲಿ ಪ್ರಾರಂಭಗೊಂಡ ಬಳಿಕವೂ ಮಾಂಗಲ್ಯದ ಸಂಕೇತವಾಗಿ ‘ಒಂಟಿ ಕರಿಯಮಣಿ, ‘ಕಕ್ಕೆ ಕಾಯಿದ ಕರಿಮಣಿ, ‘ಬೊಲ್ಲಿದ ಕಂಠಿಯನ್ನು ಉಪಯೋಗಿಸಲು ಪ್ರಾರಂಭಿಸಿದಂತೆ ತಿಳಿದುಬರುತ್ತದೆ.

ಮದುವೆಯು ಮಾನವ ಜೀವನದಲ್ಲೊಂದು ಅತ್ಯಂತ ಮಹತ್ವ ಪೂರ್ಣ ಪ್ರತಿಜ್ಞಾ ಸಂಸ್ಕಾರ. ಸ್ತ್ರೀ ಪುರುಷರ ದೇಹ ಧರ್ಮ ಮತ್ತು ಮನೋಧರ್ಮಗಳ ಸಂಗಮ, ಸಹಚರ‍್ಯೆ, ದಾಂಪತ್ಯದ ಮೂಲಧಾತು. ತುಳು ನಾಡಿನಲ್ಲಿ ಕೂಡು ಕುಟುಂಬದಲ್ಲಿ ಮಕ್ಕಳಾಟಿಕೆಯಲ್ಲಿ ಯಾವುದೇ ರೀತಿಯ ಘನತರ ಹೊಣೆಗಾರಿಕೆ ಇಲ್ಲದೆ ದುಡಿಯುವ, ಉಣ್ಣುವ ಸ್ವಾತಂತ್ರ್ಯದ ಕೌಮಾ ರ್ಯವನ್ನು ಕಳೆದು ಯೌವ್ವನದ ಹೊಸ್ತಿಲಲ್ಲಿ ವಿವಾಹ ಬಂಧನಕ್ಕೆ ಸಿಲುಕಿದ ಬಳಿಕ ಗಂಡು ಮತ್ತು ಹೆಣ್ಣು ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆಯನ್ನು ಹೊತ್ತು ನಡೆಯುವುದು, ಆಗ ತಮ್ಮ ಕಾಲ ಮೇಲೆ ನಿಂತು ಮುಂದಿನ ಭವಿ ಷ್ಯವನ್ನು ಸ್ವಲ್ಪ ಮಟ್ಟಿಗಾದರೂ ರೂಪಿಸಿಕೊಂಡು, ಜವಾಬ್ದಾರಿಯುತವಾಗಿ ಸಿಹಿ ಕಹಿಗಳ ಸಮ್ಮಿಶ್ರದಲ್ಲಿ ಬದುಕು ಸಾಗಿಸಬೇಕಾ ಗುತ್ತದೆ. ಮದುವೆಯಂತೂ ತನ್ನ ಎಂದಿನ ಸಂಭ್ರಮವನ್ನು ಉಳಿಸಿ, ಬೆಳೆಸಿ ಕೊಂಡು ಬಂದಿದೆ. ಇತ್ತೀಚೆಗಿನ ದಿನಗಳಲ್ಲಿ ಈ ಸಮಾರಂಭವು ವೈಭವೋ ಪೇತಗೊಂಡು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾ ಮತ್ತಷ್ಟು ಆಕರ್ಷಣೀ ಯವಾಗುತ್ತಿದೆ.
ಮದುವೆಯ ಧಾರ್ಮಿಕ ಪಾವಿತ್ರ್ಯತೆಯಿಂದ ಮೆರೆದು ಸಾಮಾಜಿಕ ಗೌರವವನ್ನು ಉಳಿಸಿಕೊಳ್ಳುವಲ್ಲಿ ಪೂರಕವಾಗುವಂತೆ ಅನೇಕ ವಿಧಿ ವಿಧಾ ನಗಳಿಂದ ಪೋಷಿತವಾಗಿರುವುದು ಲಾಗಾಯ್ತಿನಿಂದ ನಡೆದು ಬಂದ ಆಚ ರಣೆಗಳಿಂದ ವೇದ್ಯವಾಗುತ್ತದೆ. ೫೦ ವರ್ಷಗಳ ಮೊದಲು ತುಳುನಾಡಿನಲ್ಲಿ ನಡೆಯುತ್ತಿದ್ದ ಮನೆಮದುವೆಯು ಅಗಾಧ ಜಾನಪದ ಮೌಲ್ಯವನ್ನಾಧರಿ ಸಿದೆ. ಆ ಕಾಲ ಘಟ್ಟದಲ್ಲಿ ತುಳು ಸಂಸ್ಕೃತಿಯ ಮೇಲೆ ವೈದಿಕ ವಿಧಿ ವಿಧಾನ ಗಳ ಪ್ರಭಾವ ಅಷ್ಟಾಗಿ ಇರಲಿಲ್ಲ. ಇಲ್ಲಿ ವಿವೇಚಿಸ ತಕ್ಕ ವಿಚಾರಗಳು ಕೆಲವಿದೆ.
೧) ತುಳು ಪದ್ಧತಿಯ ಮದುವೆಗಳಲ್ಲಿ ಗಂಡು ಹೆಣ್ಣಿಗೆ ಕರಿಮಣಿ ಕಟ್ಟುವ ಮತ್ತು ಹೂ ಹಾರ ಹಾಕಿಕೊಳ್ಳುವ ಪದ್ಧತಿ ಇರಲಿಲ್ಲ. (ಉಡುಪಿ ತಾಲೂ ಕಿನ ನೆಯ್ಯಂಪಳ್ಳಿಯಲ್ಲಿರುವ ನಿವೃತ್ತ ಉಪಾಧ್ಯಾಯರಾದ ಮೆಣ್ಕ ಮಾಸ್ತ ರರ ಮದುವೆಯು ಇದೇ ಕ್ರಮದಲ್ಲಿ ನೆರವೇರಿತ್ತು. ಈಗ ಅವರು ೯೦ನೇ ವಯಸ್ಸಿನಲ್ಲಿ ನಿಧನರಾಗಿರುವರು)
ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ತುಳುವ ಮೂಲದ ಜನರಿಗೆ ಚಿನ್ನದ ಒಡವೆ ಧರಿಸುವುದು ನಿಷಿದ್ಧವಿತ್ತು. ಕರಿಮಣಿ ತೊಡುವ ಪರಿಕ್ರಮ ಈ ಸಮುದಾಯದಲ್ಲಿ ಪ್ರಾರಂಭಗೊಂಡ ಬಳಿಕವೂ ಮಾಂಗಲ್ಯದ ಸಂಕೇತ ವಾಗಿ ‘ಒಂಟಿ ಕರಿಯಮಣಿ, ‘ಕಕ್ಕೆ ಕಾಯಿದ ಕರಿಮಣಿ, ‘ಬೊಲ್ಲಿದ ಕಂಠಿ ಯನ್ನು ಉಪಯೋಗಿಸಲು ಪ್ರಾರಂಭಿಸಿದಂತೆ ತಿಳಿದುಬರುತ್ತದೆ.
(ಉಡುಪಿ ತಾಲೂಕು ಮೂಳೂರಿನವರಾದ ಶ್ರೀಮತಿ ಸೀತಾ ಚಂದು ಸಾಲ್ಯಾನ್‌ರವರ ಮದುವೆಯಲ್ಲಿ ಕರಿಮಣಿ ಕಟ್ಟಿರಲಿಲ್ಲ. ಹೂವಿನ ಹಾರ ಹಾಕಿದ್ದರು. ಈಗ ೮೦ ವರ್ಷ ವಯಸ್ಸಿನ ಇವರಿಗೆ ಹದಿನೈದನೇ ಪ್ರಾಯ ದಲ್ಲಿ ವಿವಾಹವಾಗಿತ್ತು)
೨) ಅಣ್ಣ-ತಂಗಿಯರ ಮದುವೆ ಮತ್ತು ಸೋದರ ಮಾವ ಮತ್ತು ಸೋದರಳಿಯನಿಗೆ ಒಂದೇ ದಿನ ಒಂದೇ ಮಂಟಪದಲ್ಲಿ ನಡೆಯುತ್ತಿರ ಲಿಲ್ಲ. ಅಂತಹ ಸಂದರ್ಭಗಳಲ್ಲಿ ಬೇರೆ ಬೇರೆ ಚಪ್ಪರಗಳಲ್ಲಿ ಲಗ್ನ ನೆರವೇರಿ ಸುತ್ತಿದ್ದರು. ಕ್ರಮೇಣ ಅಣ್ಣ ತಂಗಿಯರ ಮತ್ತು ಸೋದರ ಮಾವ, ಸೊಸೆ ಯರ ಮದುವೆ ಒಂದೇ ಮಂಟಪದಲ್ಲಿ ನಡೆಯಲು ಪ್ರಾರಂಭವಾಯಿತು.
೩) ಒಂದೇ ಲಗ್ನ ಮಂಟಪದಲ್ಲಿ ಸಾಮೂಹಿಕ ವಿವಾಹಗಳು ನಡೆ ಯುತ್ತಿದ್ದವು (ಸುಮಾರು ೧೯೧೦ನೇ ಇಸವಿಯಲ್ಲಿ ಉಡುಪಿ ತಾಲೂಕು ಪಡುತೋಟ ಬೊಗ್ಗು ಪೂಜಾರಿಯವರ ಸೋದರಳಿಯಂದಿರು ಮತ್ತು ಸೊಸೆಯಂದಿರಿಗೆ ಒಂಬತ್ತು ಜೋಡಿ ಧಾರೆಗಳು ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು)
ಉಡುಪಿ ತಾಲೂಕು ಕಡೆಕಾರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿದ್ದ ಅಣ್ಣಯ ಕುಂದರ್ ರವರ ಪ್ರಾಯ ೬೮. ಹಿರೆ ತಾಯಿ ಮಗಳು ಎಚ್ಚು ಮರಕಾಲ್ತಿ ದಂಪ ತಿಗಳು, ಕಪ್ಪೆಟ್ಟು ಮನೆಯಲ್ಲಿ ನಡೆದ ಹನ್ನೊಂದು ಜೋಡಿ ಧಾರೆಯಲ್ಲಿ ಒಂದು ಜೋಡಿಯಾಗಿದ್ದರು. ಇಂತಹ ಸಮೂಹ ವಿವಾಹಗಳನ್ನು ಅವಲೋಕಿಸಿದರೆ ಇಂದು ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುದ್ರೋಳಿ ಮೊದಲಾದೆಡೆ ಜರಗುತ್ತಿರುವ ಸಾಮೂಹಿಕ ವಿವಾಹಗಳೂ ತುಳುನಾಡಿನ ಮೂಲ ಆಚರಣೆಯಿಂದಲೇ ಪ್ರಾಯಶಃ ಪ್ರಚೋದಿತ ವಾಗಿರುವ ಸಾಧ್ಯತೆ ಇದೆ.
೪) ತುಳುನಾಡಿನ ಕೂಡು ಕಟ್ಟಿನ ನಡವಳಿಕೆಯಂತೆ ಮನೆಯ ಗಂಡು ಮಕ್ಕಳಿಗೆ ವಿವಾಹವಾಗುವುದಿದ್ದರೆ ಮನೆತನದವರು ನಂಬಿ ಕೊಂಡು ಬಂದಿರುವ ದೈವಗಳಿಗೆ ಕೋಲ ಕೊಟ್ಟು ಸಂತೃಪ್ತಿಪಡಿಸಿ ಅನುಗ್ರಹ ಪಡೆಯಬೇಕಿತ್ತು. ತುಳುವ ಮೂಲದ ಮನೆತನಗಳು ತಮ್ಮ ದೈನಂದಿನ ಬದುಕಿನಲ್ಲಿ ಗದ್ದೆ ತೋಟಗಳ, ಪೈರು- ಫಸಲುಗಳ, ಹಟ್ಟಿ - ಕೊಟ್ಟಿಗೆಗಳ ರಕ್ಷಣೆಗೆ ದೈವಗಳೆಂಬ ಅಗೋಚರ ಶಕ್ತಿಗಳನ್ನು ಆರಾ ಧಿಸಿ ಶರಣಾಗುತ್ತಿದ್ದರು. ವೈದಿಕ ಸಂಸ್ಕೃತಿಯಲ್ಲಿ ಗೆದ್ದವರು ಮಾತ್ರ ದೈವತ್ವಕ್ಕೇರಿ ಆರಾಧನಾ ಪಟ್ಟ ಪಡೆಯುತ್ತಿದ್ದರು. ಆದರೆ ತುಳುವ ಸಂಸ್ಕೃತಿಯಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ಒಂದು ಸಿದ್ದಾಂತವನ್ನು ಸಾಧಿಸಿ ಕೊಂಡು, ಗತಿಸಿದರೂ ಅಂತಹವರನ್ನು ಶಕ್ತಿರೂಪದಲ್ಲಿ ನಂಬಿಕೊಂಡು ಬರುತ್ತಿದ್ದರು. ದೈವಗಳು ಆ ವರ್ಗಕ್ಕೆ ಸೇರುತ್ತವೆ (ಉದಾ: ಜುಮಾದಿ, ಕಲ್ಕುಡ, ಪಂಜುರ್ಲಿ ಇತ್ಯಾದಿ) ಇಂತಹ ದೈವಗಳಿಗೆ ನಡೆಯುವ ವಾರ್ಷಿಕ ಉತ್ಸವವೇ ಕೋಲ. ಈ ಕೋಲಗಳಲ್ಲಿ ವೃತ್ತಿಪರ ಗುಂಪಿನ ಜನರು ವೇಷ ಕಟ್ಟಿ ಕುಣಿದು ಮನರಂಜನೆ ಒದಗಿಸುವರು. ಕೋಲವನ್ನು ಹರಕೆಯ ರೂಪದಲ್ಲಿ ಕೂಡಾ ಸಲ್ಲಿಸುತ್ತಿದ್ದರು. ಇಂತಹ ಸಂದರ್ಭಗಳಲ್ಲ್ಲಿ ಕೋಲ ಮದುವೆಗಳು ಗಂಡಿನ ಮನೆಯಲ್ಲಿ ನಡೆಯುತ್ತಿತ್ತು. ಗಂಡಿನ ಮನೆ ಯಲ್ಲಿ ಜರಗುವ ಕೋಲ ಮದುವೆಯನ್ನು ಇಲ್ಲಿ ಚರ್ಚಿಸಲಾಗಿದೆ.
ಮದಿಮೆಗ್ ಅಟ್ಟಣೆ (ಮದುವೆಗೆ ತಯಾರಿ)
ಊರಲ್ಲಿ ಒಂದು ಮದುವೆಯ ನಿಶ್ಚಯವಾಯಿತು ಎಂದರೆ ಊರ ಕೂಡುಕಟ್ಟಿನ ಸಮಾಜ ಬಾಂಧವರೆಲ್ಲರಿಗೂ ಗೌರವಪೂರ್ವಕ ಹೇಳಿಕೆ ನೀಡುತ್ತಿದ್ದರು. ಕುಟುಂಬದವರಿಗೆ ಅದರಲ್ಲೂ ನೆಂಟರಿಗೆ ವಿಶೇಷ ಮರ್ಯಾದೆ ನೀಡಲಾಗುತ್ತಿತ್ತು. ಜೊತೆಗೆ ಇತರ ಸಮಾಜದ ಪ್ರತಿಷ್ಠಿತರನ್ನು ಕೂಡಾ ಆಮಂತ್ರಿಸುತ್ತಿದ್ದರು. ಈಗಿನಂತೆ ಮುದ್ರಿತ ಆಮಂತ್ರಣ ಪತ್ರಿಕೆ ಆ ಕಾಲದಲ್ಲಿ ಚಾಲ್ತಿಗೆ ಬಂದಿರಲಿಲ್ಲ. ಏನಿದ್ದರೂ ವೀಳ್ಯ ಗೌರವದೊಂದಿಗೆ ಬಾಯ್ದೆರೆ ಆಮಂತ್ರಣ. ಮದುವೆ ನಡೆಯುವ ಮನೆಗಳಲ್ಲಿ ಒಂದೆರಡು ದಿನಗಳ ಮೊದಲು ಕಾಜಿಗಾರ‍್ತಿ (ಬಳೆಗಾರ್ತಿ)ಯನ್ನು ಮನೆಗೆ ಕರೆಸಿ ಮದುಮಗ ಳಿಗೆ, ಮನೆಯ ಮತ್ತು ನೆರೆಕರೆಯ ಹೆಣ್ಣು ಮಕ್ಕಳಿಗೆ ಬಳೆ ಇಡಿಸುವ ಕೆಲ ಸವನ್ನು ಮಾಡುವರು. ಹೆಣ್ಣಿಗೆ ಮದುವೆ ಮುತ್ತೈದೆ ಭಾಗ್ಯ ನೀಡುವುದ ರಿಂದ ಎಲ್ಲರಿಗೂ ಬಳೆ ತೊಡಿಸುವ ಕ್ರಮ ಮದುಮಗಳ ಮಾಂಗಲ್ಯಕ್ಕೆ ಆಶೀರ್ವಾದ ಕೋರುವ ಆಶಯವೂ ಆಗಿರಬಹುದು.
ಮನೆಯಲ್ಲಿ ಕೋಲ ಮತ್ತು ಧಾರೆ ಮದುವೆ ನಡೆಯಲು ಪೂರ್ವ ಭಾವಿ ವ್ಯವಸ್ಥೆ ಆಗುತ್ತದೆ. ಇವನ್ನೆಲ್ಲ ನಿರ್ವಹಿಸಲು ಊರು ಮನೆಗಳಲ್ಲಿ ನುರಿತ ಜನರಿರುವರು. ಮದುವೆಯ ಮೊದಲು ಸಮಾಜ ಬಾಂಧವರು ಮತ್ತು ಆಪ್ತೇಷ್ಟರು ಸೇರಿ ಮದುವೆಗೆ, ಅಡುಗೆಗೆ, ಊಟದ ವ್ಯವಸ್ಥೆಗೆ ಬೇರೆ ಬೇರೆ ಚಪ್ಪರಗಳನ್ನು ಅಚ್ಚುಕಟ್ಟಾಗಿ ಅಲಂಕರಿಸುವರು. ಇತರ ಎಲ್ಲಾ ಸಲ ಕರಣೆಗಳಾದ ಅಡುಗೆಯ ದವಸ, ಅಕ್ಕಿ, ಕಾಯಿ, ಬೆಲ್ಲ, ಕಾಯಪಲ್ಲೆ ಮೊದ ಲಾದವುಗಳನ್ನು ಅದಕ್ಕೆಂದೇ ಸಿದ್ದಪಡಿಸಿದ ಉಗ್ರಾಣದಲ್ಲಿ ಶೇಖರಿಸಿಡು ವರು. ಈ ಎಲ್ಲಾ ಕೆಲಸದಲ್ಲಿ ಊರವರು ಮನೆಮಕ್ಕಳಂತೆ ಶ್ರಮಿಸುವರು. ಈ ತೆರನ ಹೊಂದಾಣಿಕೆ ಅರ್ಥಪೂರ್ಣವಾಗಿರುವುದು. ಕೆಲಸದಲ್ಲಿ ಭಾಗ ವಹಿಸಿದವರಿಗೆ ಮೊದಲ ದಿನದ ‘ದೊಂಪದ ಉಣಸ್ (ಚಪ್ಪರ ಹಾಕಿ ದುದಕ್ಕೆ ಊಟ) ಕೊಡುವುದು ಒಂದು ಗೌರವಪೂರ್ಣ ಸಂಪ್ರದಾಯವಾ ಗಿದೆ.

ಜನಾದನ ಪೂಜಾರಿಯವರ ಸಾಧನೆ ಏನು?

Posted by JAYAKIRANA Kirana on | 0 comments | Leave a comment...


ಲೋಕನಾಥ, ಪುತ್ತೂರು
ಜಯಕಿರಣ ಚಾವಡಿ ವಿಭಾಗದಲ್ಲಿ ಅಶೋಕ ಹಲಾಯಿ ಎಂಬವರು ಜನಾರ್ದನ ಪೂಜಾರಿಯವರ ಬಗ್ಗೆ ಬರೆಯುತ್ತಾ ಅವರು ರಾಜಕಾರಣಿಯಾಗಿ ಮಂಗಳೂರಿಗೆ ಬಹಳಷ್ಟು ಸೇವೆ ಮಾಡಿದ್ದಾರೆ, ಜನರಿಗೆ ಅವರಿಂದ ತುಂಬಾ ಲಾಭವಾಗಿದೆ ಎಂಬ ಅರ್ಥದಲ್ಲಿ ಬರೆದಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಯಾರಲ್ಲಿ ವಿಚಾರಿಸಿದರೂ ಜನಾದನ ಪೂಜಾರಿಯವರು ಮಂಗಳೂರಿಗೆ ಏನು ಮಾಡಿದ್ದಾರೆ ಎಂದು ತಲೆ ಕೆರೆದುಕೊಳ್ಳುತ್ತಾರೆ. ಸಾಲ ಮೇಳ ಮತ್ತು ಕುದ್ರೋಳಿ ದೇವಸ್ಥಾನ ಇವೆರಡನ್ನು ಬಿಟ್ಟರೆ ಇನ್ನೇನು ಮಾಡಿದ್ದಾರೆ ಎಂದರೆ ಯಾರಿಗೂ ಏನೂ ಗೊತ್ತಿಲ್ಲ. ಇನ್ನೇನೂ ಕಣ್ಣಿಗೆ ಕಾಣಿಸುತ್ತಿಲ್ಲ. ಸಭೆ ಸಮಾ ರಂಭಗಳಲ್ಲಿ ಒಂದಷ್ಟು ತಲೆ ಬುಡವಿಲ್ಲದೆ ಮಾತನಾಡುವುದು. ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಮಲ್ಲಿಗೆ ಹಂಚುವುದು ಮತ್ತು ಚುನಾವಣೆ ಯಲ್ಲಿ ಸೋತದ್ದು ಇದನ್ನು ಮಾತ್ರ ಹೇಳುತ್ತಾರೆ. ಹಾಗಿರುವಾಗ ಜನಾರ್ದನ ಪೂಜಾರಿಯವರು ಮಾಡಿದ್ದು ಏನೂ ಇಲ್ಲ. ಮಂಗಳೂರಿನ ಮಟ್ಟಿಗೆ ಅವರ ಕೊಡುಗೆ ಶೇಕಡಾ ಇಪ್ಪತ್ತೈದೂ ಇಲ್ಲ ಎಂದು ಹೇಳಬಹುದಾಗಿದೆ.
ಜನಾರ್ದನ ಪೂಜಾರಿಯವರು ರಾಜಕೀಯವನ್ನು ಪ್ರವೇಶಿಸುವ ಮೊದಲು ನ್ಯಾಯವಾದಿಗಳಾಗಿ ಕೆಲವೊಂದು ಬಡವರಿಗೆ ಒಳ್ಳೆಯದು ಮಾಡಿದ್ದಾರೆ ಎಂಬುದನ್ನು ಕೆಲವರು ನೆನಪಿಸಿಕೊಳ್ಳುತ್ತಾರೆ. ಧರ್ಮಾರ್ಥವಾಗಿ ಬಡವರ ಪರವಾಗಿ ವಾದಿಸಿ ಅವರಿಗೆ ನ್ಯಾಯ ಒದಗಿಸಿಕೊಟ್ಟದ್ದನ್ನು ಇಂದಿಗೂ ಹಲವು ಮಂದಿ ನೆನಪಿಸಿಕೊಳ್ಳುತ್ತಾರೆ. ಇವರು ಕಾಂಗ್ರೆಸ್‌ನ ನಾಯಕರೂ ಆಗಿದ್ದರಿಂದ ಮತ್ತು ವಿದ್ಯೆ ಕಲಿತು ನ್ಯಾಯವಾದಿಗಳಾಗಿದ್ದರಿಂದ ಕಾಂಗ್ರೆಸ್‌ನಲ್ಲಿ ಇವರಿಗೆ ಸೀಟು ಸಿಕ್ಕಿತ್ತು. ಜನರು ಇವರ ಸಾಧನೆ ನೋಡಿ ವೋಟು ಕೊಟ್ಟದ್ದು ಅಲ್ಲ. ಯಾಕೆಂದರೆ ೧೯೫೭ರಲ್ಲಿ ಕೆ. ಆರ್. ಆಚಾರ್, ೧೯೬೨ ರಲ್ಲಿ ಎ. ಶಂಕರ ಆಳ್ವ, ೧೯೬೭ರಲ್ಲಿ ಸಿ.ಎಂ. ಪೂಣಚ್ಚ, ೧೯೭೧ರಲ್ಲಿ ಕೆ.ಕೆ. ಶೆಟ್ಟಿ ಮೊದಲಾದವರು ಕಾಂಗ್ರೆಸ್ ನಿಂದ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದರು. ಇವರಿಗೆ ಜನರು ಅವರ ಸಾಧನೆ ನೋಡಿ ವೋಟು ಕೊಟ್ಟದ್ದಲ್ಲ. ಕಾಂಗ್ರೆಸ್ ಎಂಬ ಕಾರಣಕ್ಕೆ ಕೊಟ್ಟದ್ದು. ಆ ಕಾಲದಲ್ಲಿ ಭಾರತದಾದ್ಯಂತ ಜನರು ಕಾಂಗ್ರೆಸ್ ಎಂಬ ಹೆಸರಿ ನಲ್ಲಿ ವೋಟು ಕೊಡುತ್ತಿದ್ದರು. ಇದೇ ರೀತಿಯಾಗಿ ೧೯೭೭ರಲ್ಲಿ ಜನಾದನ ಪೂಜಾರಿಯವರೂ ಗೆದ್ದರು. ಆನಂತರ ೧೯೮೯ರವರೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಜನಾರ್ದನ ಪೂಜಾರಿಯವರು ಕೆಲಸ ಮಾಡಿದ್ದರು. ಈ ಕಾಲದಲ್ಲಿ ಇವರು ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ನೋಡಬೇಕಾಗಿದೆ. ಹಾಗೆಂದು ಇವರು ಭ್ರಷ್ಟ, ಕೆಟ್ಟ, ರಾಜಕಾರಣಿಯೂ ಅಲ್ಲ.
ಸಾಲ ಮೇಳ, ಕುದ್ರೋಳಿ ದೇವಸ್ಥಾನ, ಕೆಲವು ಶಿಕ್ಷಣ ಸಂಸ್ಥೆಗಳ ನಿರ್ಮಾಣ ಇದು ಇವರ ಕಾಲದಲ್ಲಿ ಆಗಿದೆ ಎಂದರೆ ಅದನ್ನು ಒಪ್ಪಬಹುದಾಗಿದೆ. ಆದರೆ ಸಾಲ ಮೇಳದ ಹಣ ದುರುಪಯೋಗವಾದದ್ದೇ ಹೆಚ್ಚು. ಇದರಿಂದ ಬ್ಯಾಂಕಿಗೆ ತುಂಬಾ ತೊಂದರೆಯಾಗಿದೆ. ಮಂಗಳೂರಿಗೆ ಬಂದ ಬೃಹತ್ ಕೈಗಾರಿಕೆಗ ಳಲ್ಲಿ ಜನಾದನ ಪೂಜಾರಿಯವರ ಪಾತ್ರ ಇದೆ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಕಾಂಗ್ರೆಸ್ ಪಕ್ಷದವರೇ ಆದ ವೀರಪ್ಪ ಮೊಯ್ಲಿಯವರು ನಾನು ಕಾರಣ ಎಂದು ಹೇಳುತ್ತಿದ್ದಾರೆ. ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿಯವರನ್ನು ಅಭಿವೃದ್ಧಿಯ ವಿಚಾರದಲ್ಲಿ ಹೋಲಿಸಿದರೆ ವೀರಪ್ಪ ಮೊಯ್ಲಿ ಯವರು ಮುಂಚೂಣಿಯಲ್ಲಿದ್ದಾರೆ. ಮೊಯ್ಲಿಯವರು ಮಾಡಿದ ಹತ್ತು ಶೇಕಡಾ ಕೆಲಸವನ್ನೂ ಪೂಜಾರಿಯವರು ಮಾಡಿಲ್ಲ. ಇದಕ್ಕೆ ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಗಳಾಗಿದ್ದದ್ದೂ ಕಾರಣವಾಗಿರಬಹುದು. ಯಾರೋ ಮಾಡಿದ ಕೆಲಸಗಳನ್ನು ನಾನು ಮಾಡಿದ್ದು ಎಂದು ಪೂಜಾರಿಯವರು ಹೇಳುತ್ತಿದ್ದಾರೆಯೇ ಅಥವಾ ಅವರ ಹಿಂಬಾಲಕರು ಹೇಳುತ್ತಿದ್ದಾರೆಯೇ ಎಂಬ ಸಂಶಯ ಕಾಡುತ್ತಿದೆ.
ನಿಜವಾಗಿ ನೋಡಿದಲ್ಲಿ ಕೇಂದ್ರ ಮಂತ್ರಿಯಾಗಿ ಜನಾದನ ಪೂಜಾರಿ ಯವರಿಗೆ ಮಂಗಳೂರಿಗೆ ಸಾಕಷ್ಟು ಕೊಡುಗೆಗಳನ್ನು ನೀಡುವ ಅವಕಾಶ ಇತ್ತು. ಮಂಗಳೂರಲ್ಲಿ ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಇತ್ಯಾದಿಗಳ ಕೊಡುಗೆ ನೀಡುವಲ್ಲಿ ಕಾಂಗ್ರೆಸ್ಸಿಗರಾದ ಉಳ್ಳಾಲ ಶ್ರೀನಿವಾಸ ಮಲ್ಯರು ಕಾರಣೀಭೂತರಾಗಿದ್ದಾರೆ. ಇವರು ಕೊಡುಗೆಯಾಗಿ ಇತ್ತ ಮೂಲಭೂತ ಸೌಕರ್ಯಗಳಿಂದಾಗಿ ಮಂಗಳೂರಿಗೆ ದೊಡ್ಡ ದೊಡ್ಡ ಕೈಗಾರಿಕೆಗಳು ಬಂದವೇ ಹೊರತು ಆನಂತರದ ಕಾಂಗ್ರೆಸ್ ನಾಯ ಕರ ಪಾತ್ರ ಇದರಲ್ಲಿ ಏನೂ ಇಲ್ಲ. ಇವರು ಸಣ್ಣ ಪುಟ್ಟ ಕೆಲಸ ಮಾಡಿದ್ದರೂ ಕೈಗಾರಿ ಕೆಗಳು ಬರುವಲ್ಲಿ ಜನಾರ್ದನ ಪೂಜಾರಿ ಮತ್ತು ಮೊಯ್ಲಿಯವರೇ ಕಾರಣ ಎಂದು ಕಾಂಗ್ರೆಸ್ಸಿಗರು ಹೇಳುವುದಕ್ಕೆ ಯಾವುದೇ ಅರ್ಥವಿಲ್ಲ.
ಬಂದರು, ವಿಮಾನ ನಿಲ್ದಾಣದ ನಂತರ ದ.ಕ.ಕ್ಕೆ ವರದಾನವಾಗಿ ಬಂದದ್ದು ಕೊಂಕಣ ರೈಲು. ಆದರೆ ಈ ಕೊಂಕಣ ರೈಲು ಬರುವುದಕ್ಕೂ ಕಾಂಗ್ರೆಸ್ಸಿನ ನಾಯಕರು ಕಾರಣರಲ್ಲ. ಇದಕ್ಕೆ ಜಾರ್ಜ್ ಫೆರ್ನಾಂಡಿಸರು ಕಾರಣರಾಗಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಜನರು ಕಣ್ಣು ಮುಚ್ಚಿ ಮತ ನೀಡುತ್ತಿದ್ದುದರ ಅವಕಾಶ ವನ್ನು ಜನಾರ್ದನ ಪೂಜಾರಿಯವರು ಸದುಪಯೋಗ ಪಡಿಸಿಕೊಳ್ಳಬೇಕಾಗಿತ್ತು. ಗಾಂಧಿ ಕುಟುಂಬದ ನಿಕಟವರ್ತಿಗಳಾಗಿದ್ದ ಪೂಜಾರಿಯವರಿಗೆ ಮಂಗಳೂರಿಗೆ ಸಾಕಷ್ಟು ಕೊಡುಗೆಗಳನ್ನು ನೀಡುವ ಅವಕಾಶ ಹೇರಳವಾಗಿತ್ತು. ಕಾಂಗ್ರೆಸ್ ಬಿಟ್ಟು ಇತರ ಪಕ್ಷಗಳ ಕಡೆಗೆ ಮತದಾರರು ನೋಡುತ್ತಾ ಮತ ನೀಡುವಲ್ಲಿ ತನ್ನ ಪ್ರಬು ದ್ಧತೆಯನ್ನು ಪ್ರಕಟಿಸುವ ಹೊತ್ತಿಗೆ ಪೂಜಾರಿಯವರ ಸಾಧನೆ ಮೆಚ್ಚುಗೆಯಾಗುತ್ತಿ ದ್ದರೆ ಅವರು ಮತ್ತೆ ಜಯಶಾಲಿಯಾಗುತ್ತಿದ್ದರು. ಆದರೆ ದುರಾದೃಷ್ಟವಶಾತ್ ಪೂಜಾ ರಿಯವರೇ ಮಂಗಳೂರು ಲೋಕಸಭಾ ಕ್ಷೇತ್ರವನ್ನು ಚಿನ್ನದ ತಟ್ಟೆಯಲ್ಲಿಟ್ಟು ಬಿಜೆಪಿಯ ಧನಂಜಯ ಕುಮಾರ್‌ರವರ ಕೈಗೆ ಕೊಟ್ಟರು. ಆನಂತರ ಮರಳಿ ಕಾಂಗ್ರೆಸ್‌ಗೆ ಮಂಗಳೂರು ಒಲಿಯಲೇ ಇಲ್ಲ.
ಆದುದರಿಂದ ಪೂಜಾರಿಯವರು ಸಾಧನೆ ಮಾಡಿದ್ದಾರೆ ಎಂದು ಹೇಳು ವವರು ಅವರ ಸಾಧನೆಯ ಬಗ್ಗೆ ಹೇಳಲಿ. ೧೯೭೭ರಿಂದ ೧೯೮೯ರವರೆಗೆ ದೀರ್ಘ ಅವಧಿಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಅವರ ಪಕ್ಷವೇ ಸಂಪೂರ್ಣ ಬಹುಮತದಿಂದ ಆಳ್ವಿಕೆ ನಡೆಸುತ್ತಿದ್ದರೂ ಮಂಗಳೂರಿಗೆ ಹೇಳಿಕೊಳ್ಳುವಂತಹಾ ಕೆಲಸವನ್ನು ಪೂಜಾರಿಯವರು ಮಾಡಿಲ್ಲ ಎಂದು ಘಂಟಾಘೋಷವಾಗಿ ಹೇಳಬಹುದಾಗಿದೆ.
ಸಣ್ಣ ಪುಟ್ಟ ಕೆಲಸ ಮಾಡಿ ದ್ದಾರೆ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ ಆದರೆ ಇದನ್ನೆಲ್ಲಾ ಸಾಧನೆ ಎಂದು ಹೇಳುವಂತಿಲ್ಲ. ಯಾಕೆಂದರೆ ಇವರು ಲೋಕಸಭಾ ಸದಸ್ಯರಾದದ್ದು ಸುಮ್ಮನೆ ಕಾಲ ಕಳೆಯುವುದಕ್ಕೆ ಅಲ್ಲ. ಆದುದರಿಂದ ಜನಾರ್ದನ ಪೂಜಾರಿಯವರ ಸಾಧನೆ ಏನು ಎಂಬುದಕ್ಕೆ ಉತ್ತರವನ್ನು ಅವರ ಪರ ವಾದಿಸುವವರು ನೀಡಬೇಕಾಗಿದೆ.

ನಿಮ್ಮ ಮನಸ್ಸಿನಲ್ಲಿರುವುದು ಪ್ರೇಮವೋ, ಕಾಮವೋ?

Posted by JAYAKIRANA Kirana on | 0 comments | Leave a comment...


ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನನಗೆ ೩೨ ವರ್ಷ ವಯಸ್ಸು. ಸ್ವಂತ ಕೃಷಿ ಮಾಡಿ ಕೊಂಡಿದ್ದೇನೆ. ನನಗೆ ಉತ್ತಮ ಆದಾಯವಿದ್ದು, ಜೀವನ ನಿರ್ವಹ ಣೆಗೆ ಯಾವುದೇ ಸಮಸ್ಯೆಗಳಿಲ್ಲ. ಇನ್ನೆರಡು ತಿಂಗಳು ಕಳೆದು ಮದು ವೆಯಾಗಬೇಕೆಂದಿದ್ದೇನೆ. ನಾನು ನಾಲ್ಕು ವರ್ಷದ ಹಿಂದೆ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದೆ. ನಾವಿಬ್ಬರೂ ಮದುವೆ ಯಾಗಬೇಕೆಂದು ನಿಶ್ಚಯ ಮಾಡಿದ್ದೆವು. ಆದರೆ ನಮ್ಮ ಮನೆಯಲ್ಲಿ ಇದಕ್ಕೆ ಒಪ್ಪಿಗೆ ಕೊಡಲಿಲ್ಲ. ಆಗ ನನ್ನ ತಂಗಿಯ ಮದುವೆಯೂ ನಡೆ ದಿರಲಿಲ್ಲ. ಹೀಗಾಗಿ ಧೈರ್ಯ ಸಾಲದೆ ಸುಮ್ಮನಾದೆ. ಆಕೆಗೆ ಈ ನಡುವೆ ಅನೇಕ ಸಂಬಂಧಗಳು ಬಂದರೂ ಮದುವೆಯಾಗಿಲ್ಲ. ನಾನು ಆಕೆಯಲ್ಲಿ ಹಿಂದೆ ಮದುವೆಯಾಗಲು ಸಾಧ್ಯವಿಲ್ಲ ಅಂದಿದ್ದಕ್ಕೆ ಕೊನೆಯ ಬಾರಿ ನನ್ನನ್ನು ನಂಬಿಕೆ ದ್ರೋಹಿ ಎಂದು ಹೇಳಿದ್ದಳು. ನನಗೆ ಆಕೆ ಯನ್ನು ಮರೆಯಲು ಸಾಧ್ಯವಾಗಲೇ ಇಲ್ಲ. ಆಕೆ ಇಷ್ಟಪಟ್ಟು ನನ್ನ ಜತೆ ಅನೇಕ ಬಾರಿ ಲೈಂಗಿಕ ಕ್ರಿಯೆಯಲ್ಲಿ ಸಹಕರಿಸಿದ್ದಳು. ನಾನು ನನ್ನ ಕುಟುಂಬದ ಮರ್ಯಾದೆಗಾಗಿ ಆಕೆಯಿಂದ ದೂರವಾದೆ. ನನಗೆ ಈಗ ಪಶ್ಚಾತ್ತಾಪವಾಗುತ್ತಿದೆ. ಆಕೆಯ ಮೊಬೈಲ್ ನಂಬರ್ ನನ್ನ ಬಳಿಯಿದೆ. ನಾನು ಮೆಸೇಜ್ ಕಳುಹಿಸಿದರೂ ಆಕೆ ಪ್ರತಿಕ್ರಿಯೆ ನೀಡು ತ್ತಿಲ್ಲ. ಆಕೆಯನ್ನು ಭೇಟಿಯಾಗಿ ಕ್ಷಮೆಯಾಚಿಸಿ, ಮತ್ತೆ ಆಕೆಯನ್ನು ಪ್ರೀತಿಸುವುದಾಗಿ ಹೇಳಲೇ? ಏನು ಮಾಡಬೇಕೆಂದೇ ತೋಚುತ್ತಿಲ್ಲ. ಯಾವುದೇ ಕೆಲಸ ಮಾಡುವಾಗಲೂ ಆಕೆಯೇ ನೆನಪಾಗುತ್ತಾಳೆ, ಏನು ಮಾಡಲಿ? ನಾನು ಆಕೆಯನ್ನು ಕಾನೂನು ಪ್ರಕಾರ ಮದುವೆ ಯಾಗಲು ಸಮಸ್ಯೆಯಿದೆಯೇ? ಆಕೆಗೆ ಬೇರೆ ಸಂಬಂಧ ಇದೆಯೇ ಎಂದು ಭಯವಾಗುತ್ತದೆ. ದಯವಿಟ್ಟು ನನಗೆ ಸೂಕ್ತ ಸಲಹೆ ಕೊಡಿ.
ಸಲಹೆ: ನೀವು ಸಂಪ್ರದಾಯಸ್ಥ ಮನೆತನಕ್ಕೆ ಸೇರಿದವರು ಎಂದು ತಿಳಿಸಿ ದ್ದೀರಿ. ಹೀಗಿದ್ದೂ ಅನ್ಯಜಾತಿಯ ಹುಡುಗಿಯ ಜತೆ ಸ್ನೇಹ ಬೆಳೆಸಿ, ಆಕೆ ಯನ್ನು ಪ್ರೀತಿಸುವ ನೆಪದಲ್ಲಿ ಲೈಂಗಿಕ ಸುಖಕ್ಕೆ ಬಳಸಿಕೊಂಡಿದ್ದೀರಿ. ಆದರೆ ಆಕೆಯನ್ನು ಮದುವೆಯಾಗುವಲ್ಲಿ ಮಾತ್ರ ನಿಮ್ಮ ಸಂಪ್ರದಾಯ ಅಡ್ಡ ಬಂತು. ಮನೆಯವರ ಮರ್ಯಾದೆ ಹೋಗುತ್ತದೆ ಎಂದು ಆಕೆಯ ಮಾನ-ಮರ್ಯಾ ದೆಗೆ ಬೆಲೆ ಕೊಡದೆ ಆಕೆಯಿಂದ ದೂರವಾದಿರಿ. ಇದು ಎಲ್ಲಿಯ ನ್ಯಾಯ ಹೇಳಿ. ನಿಮ್ಮನ್ನು ನಂಬಿಕೆ ದ್ರೋಹಿ ಎಂದಿರುವುದು ತಪ್ಪೇ? ಆಕೆಗೆ ವಂಚಿಸಿರುವುದು ನಿಜ ತಾನೇ? ಆಕೆಯನ್ನು ಆಕೆಯ ಪಾಡಿಗೆ ಬಿಟ್ಟು ಬೇರೆ ಮದುವೆಯಾಗಿ. ಈಗ ಕಾಲ ಮಿಂಚಿ ಹೋಗಿದೆ. ಆಕೆಯೊಂದಿಗಿನ ಸ್ನೇಹ ಮುಗಿದ ಅಧ್ಯಾಯ. ನೀವು ಸಂಗಾತಿ ಸಿಗದೆ ಏಕಾಂತರಾಗಿರುವ ಕಾರಣ ನಿಮಗೆ ಆಕೆ ನೆನಪಾಗುತ್ತಿ ದ್ದಾಳೆ. ನೀವು ಈಗ ಮತ್ತೆ ಆಕೆಯನ್ನು ಪ್ರೀತಿಸುವುದಾಗಿ ಹೇಳಿ ಮತ್ತೆ ಮದುವೆಗೆ ನಿಮ್ಮ ಸಂಪ್ರದಾಯ ಅಡ್ಡ ಬಂದರೆ ಆಕೆ ಈ ನೋವನ್ನು ಸಹಿಸುವುದು ಅಸಾಧ್ಯ. ನಿಮಗೆ ನಿಜಕ್ಕೂ ಆಕೆಯನ್ನು ಮದುವೆಯಾಗುವ ಧೈರ್ಯ, ಎಲ್ಲರನ್ನೂ ಎದುರು ಹಾಕಿಕೊ ಳ್ಳುವ ತಾಕತ್ತು ಇದ್ದರೆ ಮಾತ್ರ ಆಕೆಯನ್ನು ಕಂಡು ಮಾತಾಡಿ ಕ್ಷಮಿಸುವಂತೆ ಕೇಳಿಕೊಳ್ಳಿ. ಆಕೆ ನಿಮ್ಮನ್ನು ಈಗಲೂ ಪ್ರೀತಿಸುತ್ತಿ ದ್ದರೆ ಒಪ್ಪುತ್ತಾಳೆ, ಇಲ್ಲವಾದರೆ ಇಲ್ಲ. ಇಲ್ಲಿ ಬಲವಂತ ಮಾಡಲು ಹೋಗದಿರಿ. ಇನ್ನು ನೀವೇ ಹೇಳುವಂತೆ ಆಕೆ ನಿಮ್ಮ ಸಂಬಂಧ ದಿಂದ ಬೇರ್ಪಟ್ಟು ಅನಿವಾರ್ಯವಾಗಿ ಬೇರೊಬ್ಬರ ಜೊತೆ ಸಂಬಂಧ ಹೊಂದಿರುವ ಸಾಧ್ಯತೆಯೂ ಇದೆ. ಹೀಗಿದ್ದರೆ ಆಕೆ ಯಿಂದ ನೀವು ಶಾಶ್ವತವಾಗಿ ಬೇರ್ಪಡುವುದು ಒಳ್ಳೆಯದು. ಆಕೆ ಯಾದರೂ ನೆಮ್ಮದಿಯಲ್ಲಿ ಇರಲಿ. ಈಗ ನಿಮ್ಮದು ಪ್ರೀತಿ ಆಗಿರದೆ ಕಾಮದ ಬಯಕೆಯೂ ಆಗಿರಬಹುದು. ಆದ್ದರಿಂದ ನೀವು ಮತ್ತೆ ಸಮಸ್ಯೆಗೆ ಗುರಿಯಾಗಲಿದ್ದೀರಿ. ಆಕೆ ಒಪ್ಪದಿದ್ದರೆ ಆಕೆಯನ್ನು ಮರೆತು ಕೂಡಲೇ ಬೇರೆ ಹುಡುಗಿಯನ್ನು ಮದುವೆಯಾಗಿ. ಮೂರ್ಖರಂತೆ ವರ್ತಿಸುವ ಬದಲು ಮುಂದಿನ ದಾರಿಯ ಬಗ್ಗೆ ಅರಿವಿರಲಿ.

28-03-2012

Posted by JAYAKIRANA Kirana on | 0 comments | Leave a comment...


ಮೇಷ : ಶುಭ ಕಾರ್ಯಗಳಿಗೆ ವಿಘ್ನ ಬರುತ್ತದೆ.
ವೃಷಭ : ಮಕ್ಕಳಿಂದ ಹೆಚ್ಚಿನ ಖರ್ಚು ಉಂಟಾಗಲಿದೆ.
ಮಿಥುನ : ಉದ್ಯೋಗದಲ್ಲಿ ಸಮಸ್ಯೆ ಇರುತ್ತದೆ.
ಕರ್ಕಾಟಕ : ವ್ಯಾಪಾರದಲ್ಲಿ ನಷ್ಟ ಉಂಟಾಗುವ ಸಂಭವ ಇದೆ.
ಸಿಂಹ : ಜಂಟಿ ವ್ಯವಹಾರದಲ್ಲಿ ಲಾಭ ಕಡಿಮೆ.
ಕನ್ಯಾ: ಕುಟುಂಬದಲ್ಲಿ ಶಾಂತಿ, ನೆಮ್ಮದಿ ಇರುತ್ತದೆ.
ತುಲಾ : ಆರ್ಥಿಕವಾಗಿ ತೊಂದರೆಯನ್ನು ಅನುಭವಿಸುತ್ತೀರಿ.
ವೃಶ್ಚಿಕ : ಪ್ರಯಾಣದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ.
ಧನು: ಕೆಲಸ ಕಾರ್ಯಗಳಲ್ಲಿ ಅಡೆತಡೆಯಾಗುತ್ತದೆ.
ಮಕರ : ಉದ್ಯೋಗದಲ್ಲಿ ಯಶಸ್ಸನ್ನು ಗಳಿಸುವಿರಿ.
ಕುಂಭ : ಆರ್ಥಿಕ ಸಮಸ್ಯೆ ಎದುರಾಗುತ್ತದೆ.
ಮೀನ : ವಾಹನ, ಯಂತ್ರಗಳಿಂದ ಲಾಭ ದೊರೆಯಲಿದೆ.

28-03-2012

Posted by JAYAKIRANA Kirana on | 0 comments | Leave a comment...


ಮಂಗಳೂರು : ಮೆಕ್ಯಾನಿಕ್, ಹೆಲ್ಪರ್ ಬೇಕು ೯೮೮೦೮೬೪೦೮೯.
ಕಾವೂರ್ ಮತ್ತು ಪಡುಬಿದ್ರೆ : ಕನ್ಸ್ಟ್ರಕ್ಷನ್ ಸೈಟ್‌ಗೆ ಸೂಪರ್‌ವೈಸರ್, ಕೂಲಿ ಕೆಲಸಕ್ಕೆ, ಸುಪರ್‌ವೈಸರ್ ಬೇಕು ೯೬೨೦೪೭೮೪೮೨.
ಉರ್ವಸ್ಟೋರ್ : ಶೋರೂಂಗೆ ಜನ ಬೇಕು ೯೯೮೦೩೪೧೦೩೪.
ಮಂಗಳೂರು : ಕಂಪ್ಯೂಟರ್‌ಬಲ್ಲ ಹುಡುಗಿಯರ ಬೆಕು ೯೦೩೬೪೮೯೦೪೦.
ಕಾರ್‌ಸ್ಟ್ರೀಟ್: ಹೊಟೇಲ್‌ಗೆ ಜನ ಬೆಕು ೯೪೮೨೯೬೯೫.
ಉರ್ವ ಮಾರ್ಕೆಟ್ : ಕಾರ್ ಡ್ರೈವರ್ ಬೇಕು ೯೬೨೦೪೧೩೧೦೯.
ಮಂಗಳೂರು : ಎರೇಂಜರ‍್ಸ್‌ಗೆ ಹೆಲ್ಪರ‍್ಸ್ ಬೇಕು ೯೮೪೪೦೦೯೯೦೫.
ಕಾರ್ಕಳ : ಬಾರ್‌ಗೆ ಕುಕ್ & ಕ್ಲೀನರ್ ಬೆಕು ೯೮೪೫೮೭೪೦೬೮.
ಬೈಕಂಪಾಡಿ : ಮಾಂಸಾಹಾರಿ ಅಡುಗೆ ಯವರು ಮತ್ತು ಹೆಲ್ಪರ‍್ಸ್ ಬೇಕು ೯೯೮೦೨೬೭೮೮೪.
ಮಂಗಳೂರು :ಟೈಲರಿಂಗ್ ಶಾಪ್‌ಗೆ ಲೇಡಿಸ್ ಟೈಲರ್, ಚೂಡಿದಾರ್ & ಬ್ಲೌಸ್ ಸ್ಟಿಚ್ಚಿಂಗ್ ತಿಳಿದವರು ಬೇಕು ೮೯೭೦೪೨೫೧೮೧.
ಹೂವಿನ ಬೊಕ್ಕೆ ಅಂಗಡಿಗೆ ಹುಡುಗಿಯರು ಬೇಕಾಗಿದ್ದಾರೆ. ೯೬೬೩೭೬೦೧೨೫
ಪಾಂಡೇಶ್ವರ: ಲೇಡಿಸ್ ಟೈಲರ್ ಬೇಕು ೯೮೪೫೦೭೭೮೭೮.
ಯೆಯ್ಯಾಡಿ :ಮಿನಿ ಆಫ್‌ಸೆಟ್ ಪ್ರಿಂಟರ‍್ಸ್‌ಗೆ ಪ್ರಿಂಟರ್ ಬೇಕು ೯೪೮೦೪೦೩೯೦೪.
ಪಣಂಬೂರು : ಗ್ಯಾರೇಜ್‌ಗೆ ಮೆಕಾನಿಕ್ ಬೇಕು ೯೮೮೦೮೬೪೦೮೯.
ಮಂಗಳೂರು: ಹಾಸ್ಟೆಲ್‌ಗೆ ಕ್ಲೀನಿಂಗ್‌ಗೆ ಜನ ಬೇಕು ೯೪೪೯೭೨೩೧೩೩.
ಮೇರಿಹಿಲ್: ಜೆಸಿಬಿಗೆ ಆಪರೇಟರ್ ಬೇಕು ೯೮೪೫೫೫೯೦೬೧.
ಕಂಕನಾಡಿ: ಸೇಲ್ಸ್‌ಗರ್ಲ್ಸ್, ಸೇಲ್ಸ್ ಬಾಯ್ ಮತ್ತು ಸ್ಟಿಚಿಂಗ್ ಗೊತ್ತಿದ್ದ ಹುಡುಗಿಯರು ಬೇಕು ೯೮೪೪೩೮೧೧೧೮.
ಕುಂಟಿಕಾನ :ಬೇಕರಿಗೆ ಹೆಲ್ಪರ್ ಕೆಲಸಕ್ಕೆ ಜನ ಬೇಕು ೯೪೮೦೧೧೭೮೫೪.
ಮಂಗಳೂರು: ಲಾರಿ ಚಾಲಕರು ಬೇಕು ೮೦೯೫೩೪೦೪೫೮.
ಕಾವೂರು :ಬಾರ್‌ಗೆ ವೇಟರ್, ಕಿಚನ್ ಹೆಲ್ಪರ್, ಕ್ಲೀನರ್ ಬೇಕು ೦೮೨೪ ೨೪೮೧೭೦೪.
ಕುತ್ತಾರಿನ ಪೆಟ್ರೋಲ್ ಪಂಪ್‌ಗೆ ಮಹಿಳಾ ಸಿಬ್ಬಂದಿ ಬೇಕಾಗಿದ್ದಾರೆ. ೯೬೮೬೩೬೧೫೩೫
ಕುದ್ರೋಳಿ: ಫೋಟೋಶಾಪ್, ಕೋರಲ್ ಡ್ರಾ ತಿಳಿದವರು ಬೇಕು ೯೨೪೨೮೮೭೪೩.
ವರ್ಕಾಡಿ: ಸಸ್ಯಾಹಾರಿ ಹೊಟೇಲಿಗೆ ವೇಟರ್ ಬೇಕು ೦೯೦೨೦೧೪೪೪೬೮.
ಮಂಗಳೂರು: ಲೇಡೀಸ್ ಸ್ಟಾಫ್ ಬೇಕು ೯೪೪೯೪೪೧೨೩೪.
ಮಂಗಳೂರು: ಆಫೀಸ್ ಕೆಲಸಕ್ಕೆ ಎಸೆಸೆಲ್ಸಿ ಪಾಸ್, ಫೈಲಾದವರು ಬೇಕು ೯೦೧೯೭೦೯೯೯೩.
ಮಲ್ಪೆ: ಹೊಟೇಲ್‌ಗೆ ಕುಕ್ ಬೇಕು ೭೮೯೯೧೨೦೯೯೮.
ಮಂಗಳೂರು: ಕಲರ್ ಲ್ಯಾಬ್‌ಗೆ ಗ್ರಾಫಿಕ್ ಡಿಸೈನರ್ ಮತ್ತು ಮ್ಯಾನೇಜರ್ ೨೪೪೦೮೦೩.
ಮಂಗಳೂರು: ಜೂಸ್‌ಮೇಕರ್, ಸಪ್ಲಾ ಯರ್ ಬೇಕು ೮೭೨೨೨೭೮೩೬೩.

ದಂಪತಿ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...



ಬೆಳ್ತಂಗಡಿ: ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ಧರ್ಮಸ್ಥಳದ ವಸತಿಗೃಹವೊಂದರಲ್ಲಿ ನಡೆದಿದೆ.
ಕಾಸರಗೋಡಿನ ಉದುಮದ ಚಾತಂಗೈ ನಿವಾಸಿ ಬಾಲಕೃಷ್ಣ(೪೫) ಹಾಗೂ ಚೆಂಗಳ ನಿವಾಸಿ ಶಾರದಾ(೩೮) ಎಂಬವರೇ ಆತ್ಯಹತ್ಯೆ ಮಾಡಿಕೊಂಡವರು. ಇವರು ಯಾತ್ರಾರ್ಥಿಗಳಾಗಿ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಅಲ್ಲಿನ ವಸತಿಗೃಹವೊಂದರಲ್ಲಿದ್ದ ಇವರು ಮಂಗಳವಾರ ಕೋಣೆಯಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇವರ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಇವರು ಪತಿ-ಪತ್ನಿ ಅಲ್ಲವೆಂದು ಹೇಳಲಾಗುತ್ತಿದೆ. ಈ ಬಗ್ಗೆ ಎರಡೂ ಕಡೆಯವರು ಅಸಮರ್ಪಕ ಉತ್ತರ ನೀಡುತ್ತಿದ್ದಾರೆ.
ಬಾಲಕೃಷ್ಣನಿಗೆ ಉಣ್ಣಿಕೃಷ್ಣನ್(೧೨) ಹಾಗು ಹರಿಕೃಷ್ಣ(೬) ಎಂಬ ಇಬ್ಬರು ಮಕ್ಕಳಿದ್ದು, ನಿತಿನ್(೯) ಎಂಬ ಮಗುವಿನ ತಾಯಿ ಶಾರದಾ ಆಗಿದ್ದಾರೆ ಎಂದು ಹೇಳಲಾಗಿದೆ. ಇವರು ತನ್ನ ಹೆಂಡತಿಯ ತಮ್ಮನ ಪತ್ನಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಮೂವರೂ ಮಕ್ಕಳನ್ನು ಕೋಣೆಯಿಂದ ಹೊರಗಿಟ್ಟಿದ್ದರು. ಮತ್ತು ಮಲಯಾಳಂ ಭಾಷೆಯಲ್ಲಿ ಪತ್ರವೊಂದನ್ನು ಬರೆದಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ಬಾಲಕೃಷ್ಣ ೨೨ ವರ್ಷ ದುಬೈಯಲ್ಲಿ ವೃತ್ತಿಮಾಡಿಕೊಂಡು ಬಂದವನಾಗಿದ್ದಾನೆ. ಬೆಳ್ತಂಗಡಿ ಠಾಣೆಯಲ್ಲಿ ದಂಪತಿ ಆತ್ಯಹತ್ಯೆ ಎಂದು ಪ್ರಕರಣ ದಾಖಲಾಗಿದೆ.

ಸ್ವಾಮೀಜಿಗೆ ಜೀವ ಬೆದರಿಕೆ

Posted by JAYAKIRANA Kirana on | 0 comments | Leave a comment...


ವಿಟ್ಲ: ಕನ್ಯಾನ ಗ್ರಾಮದ ಶ್ರೀಕಾಶೀಕಾಳಭೈರವೇಶ್ವರ ಕ್ಷೇತ್ರದ ಶಶೀಕಾಂತ ಮಣಿ ಸ್ವಾಮೀಜಿಯವರಿಗೆ ಬೇನಾಮಿ ವ್ಯಕ್ತಿಯೊಬ್ಬ ಕಳೆದ ಕೆಲ ದಿನಗಳಿಂದ ಹಣದ ಬೇಡಿಕೆಯನ್ನಿಟ್ಟು ಜೀವ ಬೆದರಿಕೆ ಹಾಗೂ ಮಾನಹಾನಿ ಬೆದರಿಕೆ ಪೋನ್ ಕರೆ ಮಾಡುತ್ತಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾ.೨೩ರಂದು ದೂರು ನೀಡಲಾಗಿದ್ದು, ಪೊಲೀಸ್ ಇಲಾಖೆ ಆರೋಪಿಗಳನ್ನು ಪತ್ತೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ದಲಿತ ಸಂಘಟನೆಗಳು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಾಗರಿಕ ಹಕ್ಕು ಜಾಗೃತ ಸಮಿತಿ, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಹಾಗೂ ದಲಿತ ಸಂಘಟನೆಗಳ ಮುಖಂಡರು ಸೋಮವಾರ ಕನ್ಯಾನ ಶ್ರೀಕ್ಷೇತ್ರದ ವಠಾರದಲ್ಲಿ ಶಶೀಕಾಂತ ಮಣಿ ಸ್ವಾಮೀಜಿ ನೇತೃತ್ವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಅಸ ಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಾಗರಿಕ ಹಕ್ಕು ಜಾಗೃತ ಸಮಿತಿ ಕಾರ್ಯದರ್ಶಿ ನ್ಯಾಯವಾದಿ ನಾರಾಯಣ ಕಡಲಕೆರೆ ಮಾತನಾಡಿ ದಲಿತ ಸಮುದಾಯದ ಆಧ್ಯಾತ್ಮಿಕ ಸಂತರೊಬ್ಬರಿಗೆ ಜೀವ ಬೆದರಿಕೆಯ ವಿಚಾರದ ಬಗ್ಗೆ ಪೊಲೀಸ್ ಇಲಾಖೆ ಹಗುರವಾಗಿ ಪರಿಗಣಿಸಿದೆ ಎಂದು ಅವರು ಆರೋಪಿಸಿದರು.
ಮಂಗಳವಾರ ವಿಟ್ಲ ಠಾಣೆಯಲ್ಲಿ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ರಕ್ಷಿತ್ ಎ.ಕೆ ಸ್ವಾಮೀಜಿ ಬಳಿ ತೆರಳಿ ಮಾತುಕತೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಾಗರಿಕ ಹಕ್ಕು ಜಾಗೃತ ಸಮಿತಿ ಅಧ್ಯಕ್ಷ ಜಿ.ಕೆ. ಸುಂದರ, ಸಂಘಟನಾ ಕಾರ್ಯದರ್ಶಿ ಶೇಖರ ಬೇಲಾಡಿ, ಜತೆ ಕಾರ್ಯದರ್ಶಿ ಹರಿಶ್ಚಂದ್ರ ಕೆರೆಕಾಡು, ಸದಸ್ಯ ಎಂ. ಬೂಬಕುಮಾರ್ ಪಡುಕೋಣಾಜೆ, ಜಿಲ್ಲಾ ಪಾಣಾರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಎಸ್.ಪಾಂಡ್ರು, ಶ್ರೀಕಾಶೀಕಾಳ ಭೈರವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಚೆನ್ನಪ್ಪ ಅಳಿಕೆ, ಕಾರ್ಯದರ್ಶಿ ಪೂವಪ್ಪ ಏಮಾಜೆ, ಮಾಜಿ ಅಧ್ಯಕ್ಷ ಜಯಪ್ರಸಾದ್ ಬಾಳೆಕೋಡಿ ಇದ್ದರು.

ಯುವತಿಯ ಕಟ್ಟಿಹಾಕಿ ೫೦ ಪವನ್ ಚಿನ್ನ ದರೋಡೆ

Posted by JAYAKIRANA Kirana on | 0 comments | Leave a comment...













ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪೆರಾರ ಗ್ರಾಮದ ಸುಂಕದಕಟ್ಟೆ-ನಿರಂಜನ ಸ್ವಾಮಿ ಶಿಕ್ಷಣ ಸಂಸ್ಥೆ ಬಳಿಯಿರುವ ಮನೆಯೊಂದಕ್ಕೆ ನಿನ್ನೆ ಬೆಳಿಗ್ಗೆ ಲಗ್ಗೆ ಹಾಕಿದ ದರೋಡೆಕೋರರು ಮನೆಯಲ್ಲಿದ್ದ ಯುವತಿಯ ಕೈ-ಕಾಲು ಕಟ್ಟಿ ಒಳಕೋಣೆಯ ಬಾಗಿಲು ಮುರಿದು ಕಪಾಟಿ ನಲ್ಲಿರಿಸಿದ್ದ ಸುಮಾರು ೫೦ ಪವನ್ ತೂಕದ ಚಿನ್ನಾಭರಣವನ್ನು ದರೋಡೆಗೈದಿದ್ದಾರೆ.
ನಿನ್ನೆ ಬೆಳಿಗ್ಗೆ ೧೧:೩೦ರ ಸುಮಾರಿಗೆ ಘಟನೆ ನಡೆದಿದ್ದು, ಮಧ್ಯಾಹ್ನವಷ್ಟೇ ಪ್ರಕರಣ ಹೊರ ಜಗತ್ತಿಗೆ ತಿಳಿದುಬಂದಿದೆ. ಪಡುಪೆರಾರ ನಿವಾಸಿ ಸರೋಜ ಎಂಬವರ ಮನೆಯಲ್ಲಿ ಅವರ ಸಂಬಂಧಿ ಅಲ್ಪ ಬುದ್ಧಿಮಾಂದ್ಯತೆಯನ್ನು ಹೊಂದಿರುವ ಗೀತಾ(೨೫) ಎಂಬಾಕೆ ಮನೆಯ ಮುಂಬಾಗಿಲನ್ನು ಮುಚ್ಚಿ ನೆಲ ಒರೆಸುತ್ತಿದ್ದ ವೇಳೆ ಹಿಂಬದಿ ಬಾಗಿಲಿನಿಂದ ಒಳಪ್ರವೇಶಿಸಿದ ನಾಲ್ವರು ಯುವಕರು ಗೀತಾರ ಕೈ-ಕಾಲನ್ನು ಗಮ್ ಟೇಪ್‌ನಿಂದ ಬಂಧಿಸಿ ಬಳಿಕ ಬಾಯಿ ಯನ್ನು ಗಮ್ ಟೇಪ್‌ನಿಂದ ಮುಚ್ಚಿ, ಕೋಣೆಯ ಒಳಗೆ ಎಳೆದೊಯ್ದು ಬಾಗಿಲಿನ ಚಿಲಕ ಹಾಕಿದ್ದಾರೆ. ಬಳಿಕ ಪಕ್ಕದಲ್ಲೇ ಇದ್ದ ಸರೋಜಾರ ರೂಮಿನ ಬಾಗಿಲನ್ನು ಒಡೆದು ಕಪಾಟಿನಲ್ಲಿರಿಸಿದ್ದ ಅಂದಾಜು ೧೦ ಲಕ್ಷ ರೂ. ಮೌಲ್ಯದ ಸುಮಾರು ೫೦ ಪವನ್ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಬಜ್ಪೆ ಪೊಲೀಸರಿಗೆ ದೂರಲಾಗಿದೆ.
ಗೀತಾ ಅವರು ಒಂದೂವರೆ ಗಂಟೆಯ ಬಳಿಕ ಬಾಯಿಗೆ ಹಾಕಿದ್ದ ಗಮ್ ಟೇಪ್ ಅನ್ನು ಬಿಚ್ಚಿ, ರೂಮಿನ ಕಿಟಕಿ ಬಾಗಿಲನ್ನು ತೆಗೆದು ಜೋರಾಗಿ ಬೊಬ್ಬೆ ಹೊಡೆದಿದ್ದು, ಇದನ್ನು ಕೇಳಿದ ಅಕ್ಕಪಕ್ಕದ ಮನೆಯವರು ಹಾಗೂ ಹಿಂಬದಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕಾರ್ಮಿಕರು ಓಡಿಬಂದು ಯುವತಿಯ ಕೈ-ಕಾಲನ್ನು ಬಿಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪಣಂಬೂರು ಎಸಿಪಿ ಪುಟ್ಟಮಾದಯ್ಯ, ಡಿಸಿಪಿ ಮುತ್ತುರಾಯ, ಬಜ್ಪೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ದಳ ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಬಜ್ಪೆ ಠಾಣಾಧಿಕಾರಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಹೊರರಾಜ್ಯದ ವೃತ್ತಿಪರ ಕಳ್ಳರ ಕೃತ್ಯ?
ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಸ್ಥಾಪನೆಗೊಂಡಿರುವ ಎಂಎಸ್‌ಇಝಡ್ ಹಾಗೂ ಎಂಆರ್‌ಪಿಎಲ್ ಕಂಪೆನಿಗಳಲ್ಲಿ ಸಾವಿರಾರು ಮಂದಿ ಹೊರರಾಜ್ಯದ ಕಾರ್ಮಿಕರು ದುಡಿಯುತ್ತಿದ್ದಾರೆ. ದರೋಡೆ ನಡೆಸಿರುವ ಆರೋಪಿಗಳು ಮಲಯಾಳಿ ಹಾಗೂ ಉತ್ತರ ಭಾರತದ ಭಾಷೆಯನ್ನು ಮಾತಾಡುತ್ತಿದ್ದು, ಹೊರರಾಜ್ಯದ ಕಾರ್ಮಿಕರ ಮೇಲೆ ಶಂಕೆ ಪಡಲು ಕಾರಣವಾಗಿದೆ. ಕೆಲವು ಸಮಯದ ಹಿಂದೆ ಬಜ್ಪೆ ಠಾಣಾ ವ್ಯಾಪ್ತಿಯ ಪೆಟ್ರೋಲ್ ಪಂಪ್ ಬಳಿಯ ಮೊಬೈಲ್ ಅಂಗಡಿಯನ್ನೂ ದೋಚಲಾಗಿತ್ತು. ಇದರಲ್ಲೂ ಸ್ಥಳೀಯ ಕಂಪೆನಿಯ ಕಾರ್ಮಿಕ ಪಾಲ್ಗೊಂಡಿದ್ದು ಮತ್ತು ಇತ್ತೀಚೆಗೆ ಮಾಲು ಸಮೇತ ಆತನ ಬಂಧನ ನಡೆದಿದ್ದನ್ನು ಸ್ಮರಿಸಬಹು ದಾಗಿದೆ. ಇಂದಿನ ಘಟನೆಯಲ್ಲೂ ಹೊರರಾಜ್ಯದ ವೃತ್ತಿಪರ ಕಳ್ಳರ ಕೈವಾಡವನ್ನು ಶಂಕಿಸಲಾಗಿದ್ದು, ಹಾಡಹಗಲೇ ನಡೆದ ದರೋಡೆ ಪ್ರಕರಣ ಸುತ್ತಲಿನ ಪರಿಸರದ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4054) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2508) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (149) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3682) lokayukta (3) madikeri (1) maleria (1) mangalore (588) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (416) omega (1) oscar (4) overdose (15) padilhomestay (32) padubidri (56) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (273) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (801) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (48) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)