ತೆಲಿಕೆದ ಬೊಳ್ಳಿಸಿನಿಮಾಕ್ಕೆ ಮಾ.೨೮ರಂದು ಮುಹೂರ್ತ
Posted by JAYAKIRANA Kirana on Wednesday, 21 March 2012 | 0 comments | Leave a comment...
Posted by JAYAKIRANA Kirana on Wednesday, 21 March 2012 | 0 comments | Leave a comment...
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with bahiranga
Posted by JAYAKIRANA Kirana on | 0 comments | Leave a comment...
Posted by JAYAKIRANA Kirana on | 0 comments | Leave a comment...
Posted by JAYAKIRANA Kirana on | 0 comments | Leave a comment...
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Tagged with lnews
Posted by JAYAKIRANA Kirana on | 0 comments | Leave a comment...
Tagged with lnews
Posted by JAYAKIRANA Kirana on | 0 comments | Leave a comment...
Tagged with lnews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Tagged with snews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Tagged with snews
Posted by JAYAKIRANA Kirana on | 0 comments | Leave a comment...
Tagged with snews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
Tagged with snews
Posted by JAYAKIRANA Kirana on | 0 comments | Leave a comment...
Tagged with snews
Posted by JAYAKIRANA Kirana on | 0 comments | Leave a comment...
Tagged with death
Posted by JAYAKIRANA Kirana on | 0 comments | Leave a comment...
ಬೆಳ್ತಂಗಡಿ: ತಾಲೂಕಿನ ಗುರು ವಾಯನಕೆರೆ ಸಮೀಪದ ಮನೆ ಯೊಂದರಿಂದ ಚಿನ್ನಾಭರಣ ಕಳವು ಗೈದಿದ್ದ ದಂಪತಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿಯ ಪರಮೇಶ್ವರ ಎಂಬವರ ಮನೆಯಿಂದ ಮಾ. ಎಂಟರಂದು ಸುಮಾರು ನಾಲ್ಕು ಪವನ್ ತೂಕದ ಸರ ಹಾಗೂ ಒಂದು ಪವನ್ ತೂಕದ ಸರವನ್ನು ಕಳವುಗೈಯ್ಯಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದಾಗ ಅವರ ಮನೆಗೆ ಕೆಲಸಕ್ಕೆ ಬಂದಿದ್ದ ಮೂಲತಃ ತಮಿಳುನಾಡಿನ ನಿವಾಸಿ ಪ್ರಸ್ತುತ ಹಾಸ ನದ ಚನ್ನಪಟ್ಟಣದಲ್ಲಿ ವಾಸವಾಗಿರುವ ರಾಜಾ ಅಲಿಯಾಸ್ ನಾಗರಾಜ ಗೌಡ (೩೪) ಹಾಗೂ ಆತನ ಪತ್ನಿ ಅಂಬಿಕಾ ಅಲಿಯಾಸ್ ಪುಷ್ಪಾ (೨೪) ಎಂಬವರನ್ನು ವಿಚಾರಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಆರೋಪಿಗಳು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಹಾಸನದ ಬ್ಯಾಂಕ್ವೊಂದರಲ್ಲಿ ಅಡವಿಟ್ಟಿದ್ದರು.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Tagged with cnews
Posted by JAYAKIRANA Kirana on | 0 comments | Leave a comment...
ಮಂಗಳೂರು: ತಂದೆ -ತಾಯಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬೆದರಿಸಲು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿ ಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಚೇತನ್ (೨೩) ಚಿಕಿತ್ಸೆ ಫಲಕಾರಿಯಾ ಗದೆ ಮೃತಪಟ್ಟ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾ. ೧೪ರಂದು ಈತ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ
Tagged with cnews
Posted by JAYAKIRANA Kirana on | 0 comments | Leave a comment...
ಮಂಗಳೂರು: ಕುಂದಾಪುರ ತಾಲೂಕಿನ ಬ್ರಹ್ಮಾವರ ಸಮೀಪದ ಹಾರ್ದಳ್ಳಿ ಮಂಡಳ್ಳಿ ಬಿದ್ಕಲ್ಕಟ್ಟೆಯ ಸುಮತಿ ಎಂಬವರ ಪುತ್ರಿ ರಮ್ಯಾ (೧೮) ಹಾಗೂ ಮೊಳಹಳ್ಳಿ ಗ್ರಾಮದ ಇಂದ್ರಜಯ ಎಂಬವರ ಪುತ್ರಿ ಗೌತಮಿ(೧೮) ಕಾಣೆಯಾದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾ.೧೫ರಂದು ಬೆಳಗ್ಗೆ ಜನಗಣತಿ ಕೆಲಸಕ್ಕೆ ಕುಂದಾಪುರಕ್ಕೆ ಹೊಗುತ್ತೇವೆ ಎಂದು ತೆರಳಿದವರು ರಾತ್ರಿ ಹತ್ತು ಗಂಟೆಗೆ ಪೋನ್ಮಾಡಿ ಬೆಂಗ ಳೂರಿನಲ್ಲಿ ಇರುವುದಾಗಿ ಸುಮತಿಗೆ ತಿಳಿಸಿದ್ದರು. ಅದರ ಬಳಿಕ ಇವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Posted by JAYAKIRANA Kirana on | 0 comments | Leave a comment...
ಮಂಗಳೂರು: ಬೈಕಂಪಾಡಿ ಬಳಿ ಟ್ಯಾಂಕರೊಂದು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 'ಬಯ್ಯ' ಎಂದು ಕರೆಯಲ್ಪಡುತ್ತಿದ್ದ ಈ ಮೃತ ವ್ಯಕ್ತಿಯ ವಾರೀಸುದಾರರು ಇದ್ದಲ್ಲಿ ಪಣಂಬೂರು ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
Tagged with cnews
Posted by JAYAKIRANA Kirana on | 0 comments | Leave a comment...
ಹರೇಕಳ ಪಂಚಾಯತ್ಗೆ ಡಿಫಿ ಮುತ್ತಿಗೆ
ಬೆಳಿಗ್ಗೆ ಪ್ರತಿಭಟನೆ ಆರಂಭಿಸಿದಾಗಲೇ ಪೊಲೀಸರು ಪಿಡಿಓ ವಿವೇಕಾನಂದ ರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆ ವೇಳೆ ಪ್ರತಿಕ್ರಿಯೆ ನೀಡಿದ್ದ ಪಿಡಿಓ, ತಾನು ಸಭೆಯಲ್ಲಿದ್ದು ಕೆಲವೇ ನಿಮಿಷಗಳಲ್ಲಿ ಬರುವುದಾಗಿ ತಿಳಿಸಿದ್ದರು. ಅವರನ್ನು ೧.೩೦ರವರೆಗೆ ಕಾದರೂ ಬರಲಿಲ್ಲ. ಪ್ರತಿಬಾರಿ ಕರೆ ಮಾಡಿದಾಗಲೂ ಬರುತ್ತ ಇರುವುದಾಗಿ ರೀಲು ಬಿಡುತ್ತಿದ್ದರು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಸಮಸ್ಯೆಯ ಬಗ್ಗೆ ಚರ್ಚೆ ಮುಗಿದ ಬಳಿಕ ಆಕ್ರೋಶದಿಂದಲೇ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ಇಂದೇ ಜಿಲ್ಲಾಧಿಕಾರಿಯವರಿಗೆ ದೂರು ನೀಡುವುದಾಗಿ ಹೇಳಿದರು. ಮುಂದುವರಿಸಿದ ಅವರು ಪ್ರತಿಯೊಬ್ಬರಿಗೂ ಕುಡಿಯುವ ನೀರು ನೀಡಬೇಕಾಗಿದ್ದು ಆಡಳಿತಗಾರರ ಕರ್ತವ್ಯವಾಗಿದೆ. ತಾಲೂಕು ಅಧಿಕಾರಿಗಳು ಹರೇಕಳದಲ್ಲಿ ನೀರಿನ ಸಮಸ್ಯೆ ಇಲ್ಲ ಎಂದು ಹೇಳುತ್ತಾರೆ. ಪ್ರತೀ ಕಾರ್ಯಕ್ರಮದಲ್ಲೂ ಭಾಗವಹಿಸುವ ಶಾಸಕರು ಹರೇಕಳದಲ್ಲಿರುವ ನೀರಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಜಿ.ಪಂ. ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಸಿಲ್ಲ ಎಂದು ಕಿಡಿಕಾರಿದರು.
ಮಂಗಳೂರು: ಹರೇಕಳದಲ್ಲಿ ಕಳೆದ ಕೆಲವು ದಿನಗಳಿಂದ ಕಾಡುತ್ತಿ ರುವ ನೀರಿನ ಸಮಸ್ಯೆಯನ್ನು ಕಡೆಗಣಿ ಸಿದ್ದ ಆಡಳಿತಗಾರರು ಮತ್ತು ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ನಿನ್ನೆ ಪಂಚಾಯತ್ ಕಾರ್ಯದರ್ಶಿಗೆ ದಿಗ್ಬಂಧನ ಹಾಕಿದರು.
ಕಳೆದ ಒಂದು ತಿಂಗಳಿಂದ ಹರೇಕಳ ಗ್ರಾಮ ನ್ಯೂಪಡ್ಪು, ಬಾವಲಿ ಗುರಿ, ಮಲಾರ್ ಕೋಡಿ, ಕೊಜ ಪಾಡಿ ಸೈಟ್, ನಾಗಮೂಲೆ ದಲಿತ ಕಾಲನಿ, ಬೈತಾರ್, ಮಲೆಕೆದು ಮುಂತಾದ ಕಡೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಇದೇ ವೇಳೆ ನೀರು ಸರಬರಾಜು ಮಾಡುವವರು ತಮಗೆ ಬೇಕಾದವರಿಗೆ ನೀರು ಪೂರೈಕೆ ಮಾಡುತ್ತಿದ್ದು ತೋಟಕ್ಕೂ ನೀಡು ತ್ತಿದ್ದಾರೆ ಎನ್ನಲಾಗುತ್ತಿದೆ. ಗ್ರಾಮಸಭೆ ಮತ್ತು ಪಂಚಾಯತ್ಗೆ ಸಂಬಂಧ ಪಟ್ಟ ಕಾರ್ಯಕ್ರಮ ಇದ್ದರೆ ಆ ದಿನ ನೀರು ಪೂರೈಕೆ ಸಮರ್ಥವಾಗಿ ರುತ್ತದೆ. ಇದರ ಬಗ್ಗೆ ಸಂಬಂಧ ಪಟ್ಟವರಿಗೆ ದೂರು ನೀಡಿದ್ದು ಪ್ರಯೋ ಜನವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿನ್ನೆ ಡಿವೈಎಫ್ಐ ನೇತೃತ್ವ ದಲ್ಲಿ ಪಂಚಾಯತ್ಗೆ ಮುತ್ತಿಗೆ ಹಾಕಿದರು. ಸ್ಥಳಕ್ಕೆ ಪಿಡಿಓ ಮತ್ತು ಅಧ್ಯಕ್ಷರು ಬಾರದೆ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಆರಂ ಭದಲ್ಲೇ ಎಚ್ಚರಿಸಿದ್ದರು. ಈ ಹಿನ್ನೆಲೆ ಯಲ್ಲಿ ಪೊಲೀಸರು ಅಧ್ಯಕ್ಷರು ಮತ್ತು ಪಿಡಿಓಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅರ್ಧ ಗಂಟೆ ಕಳೆದರೂ ಸಂಬಂಧಪಟ್ಟವರು ಬಾರದ ಕಾರಣ ಡಿಫಿ ಮುಖಂಡ ರಫೀಕ್ ಮತ್ತು ಇತರರು ಕಾರ್ಯದರ್ಶಿ ಅಬೂಬ ಕ್ಕರ್ ಅವರನ್ನು ಸಂಪರ್ಕಿಸಿ ಸಂಬಂ ಧಪಟ್ಟವರಿಗೆ ಕರೆ ಮಾಡಿ ಬರಲು ತಿಳಿಸುವಂತೆ ಮನವಿ ಮಾಡಿದರು.
ಆ ವೇಳೆ ಅಬೂಬಕ್ಕರ್ ಕರೆ ಮಾಡುವ ಬದಲು ಅಧ್ಯಕ್ಷರ ಪರವಾ ಗಿಯೇ ಮಾತನಾಡಿದರು. ಇದರಿಂದ ಆಕ್ರೋಶಗೊಂಡ ಮುಖಂಡರು ಗ್ರಾಮಸ್ಥರ ಜೊತೆ ಸೇರಿ ಪಂಚಾ ಯತ್ ಕಚೇರಿಯ ಬಾಗಿಲ ಬಳಿ ಕುಳಿತು ಕಾರ್ಯದರ್ಶಿಗೆ ದಿಗ್ಬಂಧನ ಹಾಕಿ ಧಿಕ್ಕಾರ ಘೋಷಣೆ ಕೂಗಿ ದರು. ಈ ಸಂದರ್ಭ ಪರಿಸ್ಥಿತಿ ಕೈತ ಪ್ಪುವ ಲಕ್ಷಣ ಕಂಡು ಬಂದ ಕಾರಣ ಪೊಲೀಸರು ಮಧ್ಯೆ ಪ್ರವೇಶಿಸಿ ಮುಖಂ ಡರ ಮನವೊಲಿಸುವ ಯತ್ನ ಮಾಡಿ ದ್ದಲ್ಲದೆ ಗ್ರಾಮಸ್ಥರು ಪಂಚಾಯತ್ ನೊಳಗೆ ಪ್ರವೇಶಿಸದಂತೆ ತಡೆದರು.
೧೨.೩೦ರ ವೇಳೆಗೆ ಆಡಳಿತ ಪಕ್ಷದ ಮೂವರು ಸದಸ್ಯರು ಸ್ಥಳಕ್ಕೆ ಆಗಮಿಸಿ ರೀಲು ಬಿಡಲು ಆರಂಭಿಸಿದಾಗ ಗ್ರಾಮ ಸ್ಥರು ಅವರ ವಿರುದ್ಧವೇ ಹರಿಹಾ ಯ್ದರು. ೧.೧೫ರ ವೇಳೆಗೆ ಅಧ್ಯಕ್ಷರು ಆಗಮಿಸಿದಾಗ ಪ್ರತಿಭಟನಾಕಾರರು ಅವರ ವಿರುದ್ದವೂ ಧಿಕ್ಕಾರ ಕೂಗಿದರು. ಬಳಿಕ ಡಿಫಿ ಮುಖಂಡರು ಅವರ ಜೊತೆ ಮಾತುಕತೆ ನಡೆಸಿದಾಗ ರಾಜ ಕೀಯ ಮೇಳೈಸಿ ಮಾತಿನ ಚಕಮ ಕಿಯೂ ನಡೆಯಿತು. ಕೊನೆಗೆ ಪೊಲೀ ಸರು ಮತ್ತು ಡಿಫಿ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಎಲ್ಲರನ್ನೂ ಸಮಾಧಾನ ಪಡಿಸಿ ಸಮಸ್ಯೆ ಪರಿಹಾರದ ಬಗ್ಗೆ ಚರ್ಚಿಸಿದರು. ಈ ಸಂದರ್ಭ ಉತ್ತರಿ ಸಿದ ಅಧ್ಯಕ್ಷರು ನಾಳೆ ತುರ್ತು ಸಭೆ ಕರೆಯುವುದು ಹಾಗೂ ಅದಕ್ಕೂ ಮೊದಲು ಇರುವ ನೀರಲ್ಲೇ ಗ್ರಾಮಸ್ಥರಿಗೆ ಸಮಾನವಾಗಿ ಹಂಚುವ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಮುಖಂಡರು ಮುಂದಿನ ಮಂಗಳ ವಾರದೊಳಗೆ ನೀರು ಸಮಸ್ಯೆ ಬಗೆಹರಿ ಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವು ದಾಗಿ, ಆ ವೇಳೆ ಅನಾಹುತ ನಡೆದರೆ ಪಂಚಾಯತ್ ಮತ್ತು ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಗ್ರಾಮಸ್ಥರು ಒಪ್ಪಿದ್ದರಿಂದ ಪ್ರತಿಭಟನೆಯನ್ನು ನಿಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡರಾದ ಇಸ್ಮಾಯಿಲ್, ರಫೀಕ್, ಇಮ್ರಾನ್, ಗ್ರಾಮಸ್ಥರಾದ ಸುಂದರ ಪೂಜಾರಿ, ನೇಮು ಮುಖಾರಿ, ಆನಂದ ಸಾಲ್ಯಾನ್, ರುಕಿಯಾ, ಸಕೀನಾ, ಸುಮತಿ, ಯಮುನಾ ಉಪಸ್ಥಿತರಿದ್ದರು.
Tagged with cnews
Posted by JAYAKIRANA Kirana on | 0 comments | Leave a comment...
Tagged with cnews
Posted by JAYAKIRANA Kirana on | 0 comments | Leave a comment...
ಮಂಗಳೂರು: ನಗರದ ನಾಗುರಿ ಯಲ್ಲಿ ವಾಸವಾಗಿದ್ದ ಹನುಮಂತ ಎಂಬವರ ಪತ್ನಿ ನಾಗರತ್ನಮ್ಮ ಯಾನೆ ಸುಮಿತ್ರಾ(೨೧)ಎಂಬಾಕೆ ಒಂದೂವರೇ ವರ್ಷದ ಮಗು ಶಿವಕುಮಾರ್ ನಾಪತ್ತೆ ಯಾಗಿರುವುದಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರು ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಸರಿಹಾಳ ದವರಾಗಿದ್ದಾರೆ. ಮಾ.೪ರಂದು ಮಧ್ಯಾಹ್ನ ಮನೆಗೆ ದಿನಬಳಕೆಯ ವಸ್ತುಗಳನ್ನು ತರಲು ಸ್ಟೇಟ್ ಬ್ಯಾಂಕ್ ಬಳಿಯ ಮಾರುಕಟ್ಟೆಗೆ ತೆರಳಿದ್ದು ಮರಳಿ ಬಂದಾಗ ಪತ್ನಿ ಹಾಗೂ ಮಗು ಕಾಣೆಯಾಗಿದ್ದರು. ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ಅವರಿಬ್ಬರು ಸುರತ್ಕಲ್ ಕೃಷ್ಣಾಪುರದಲ್ಲಿ ವಾಸವಾಗಿದ್ದ ಬೆಳಗಾವಿ ಮೂಲದ ಶಿವು ಎಂಬಾತನೊಂದಿಗೆ ಹೋಗಿದ್ದನ್ನು ಶಿವಪ್ಪ ಎಂಬವರು ನೋಡಿದ್ದಾರೆ ಎಂಬುದು ತಿಳಿಯಿತು. ಬೆಳಗಾವಿಯಲ್ಲಿ ಹುಡುಕಿದರೂ ಅವರು ಸಿಕ್ಕಿಲ್ಲ ಎಂದು ಹನುಮಂತ ದೂರಿನಲ್ಲಿ ತಿಳಿಸಿದ್ದಾರೆ.
Posted by JAYAKIRANA Kirana on | 0 comments | Leave a comment...
Tagged with lnews
Posted by JAYAKIRANA Kirana on | 0 comments | Leave a comment...
ಕುಂದಾಪುರ: ಸಮಾಜಸೇವಕಿ ಜೆಡಿಎಸ್ ಪಕ್ಷದ ಕಾರ್ಯಕರ್ತೆ ಕುಂಭಾ ಶಿಯ ರಾಧಾದಾಸ್ ಮೇಲೆ ಚುನಾ ವಣಾ ದಿನ ರಾತ್ರಿ ಮನೆಯ ಸಮೀಪ ಹಲ್ಲೆ ನಡೆಸಲಾಗಿದೆ ಎಂದು ನಿನ್ನೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಜರಗಿದ್ದು ಪ್ರಕರಣದ ಹಿಂದೆ ಹಲವು ಊಹಾ ಪೋಹಗಳು ಸದ್ದು ಮಾಡುತ್ತಿವೆ.
ಹಲ್ಲೆಗೊಳಗಾಗಿ ಆಸ್ಪತ್ರೆಯ ಮಂಚದ ಮೇಲೆ ಮಲಗಿರುವ ರಾಧಾ ದಾಸ್ ಪೊಲೀಸರಲ್ಲಿ ದೂರಿಕೊಂಡ ಪ್ರಕಾರ ಚುನಾವಣಾ ದಿನ ತಾನು ಜೆಡಿಎಸ್ ಪರ ಚುನಾವಣಾ ಪ್ರಕ್ರಿಯೆ ಗಳಲ್ಲಿ ಪಾಲ್ಗೊಂಡಿದ್ದು, ಸಂಜೆ ೭ರ ಸುಮಾರಿಗೆ ಮನೆಗೆ ಬಂದಾಗ ಫ್ರಿಡ್ಜ್ ಹಾಳಾಗಿದ್ದು, ಅದನ್ನು ರಿಪೇರಿ ಮಾಡು ವವನನ್ನು ಸಂಪರ್ಕಿಸಲು ಮನೆಯ ಅನತಿ ದೂರದಲ್ಲಿರುವ ರಸ್ತೆಯಲ್ಲಿ ಸಾಗುತ್ತಿದ್ದೆ. ಆ ಸಂದರ್ಭದಲ್ಲಿ ಮಾರುತಿ ಕಾರೊಂದು ೨-೩ ರೌಂಡ್ ಹಾಕಿ ತನ್ನ ಬಳಿಗೆ ಬಂದು ನಿಂತಿತ್ತು. ಅದ ರಿಂದ ಇಳಿದ ಸಂತೋಷ್ ದೇವಾ ಡಿಗ, ಸುನಿಲ್ ಹಾಗೂ ಸುಮಂತ್ ಎಂಬವರು 'ಎನೇ ರಂ ... ನೀನು ರಾಮಕೃಷ್ಣ ಹೇರ್ಳಾರ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಡುತ್ತೀಯಾ ಎಂದು ತೀರಾ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದರಲ್ಲದೆ ಕೈಯಲ್ಲಿ ದೊಣ್ಣೆಯಿಂದ ಒಂದೇ ಸಮನೆ ಹಲ್ಲೆ ಮಾಡಿ ನಿನ್ನ ಮಗನನ್ನು ನೋಡಿ ಕೊಳ್ಳುತ್ತೇವೆ ಎಂದೆನ್ನುತ್ತಾ ಮತ್ತೆ ಮತ್ತೆ ಹಲ್ಲೆ ಮಾಡಿ ತಾನು ಜ್ಞಾನ ತಪ್ಪಿ ಉರುಳಿದಾಗ ಸತ್ತು ಹೋದೆನೆಂದು ಭಾವಿಸಿ ಜಾಗ ಖಾಲಿ ಮಾಡಿದರು. ತುಂಬಾ ಸಮಯದ ನಂತರ ಆ ದಾರಿಯಾಗಿ ಕಾರಿನಲ್ಲಿ ಸಾಗುತ್ತಿದ್ದ ಜಗನ್ನಾಥ ಹಾಗೂ ಪದ್ಮಿನಿ ಎನ್ನು ವವರು ತನ್ನ ನರಳಾಟ ಕೇಳಿ ಮನೆಗೆ ತಲುಪಿಸಿ ಹೋಗಿದ್ದಾರೆ ಎನ್ನುವುದು ರಾಧಾ ದಾಸ್ ದೂರಿನ ಸಾರಾಂಶ. ರಾಧಾದಾಸ್ ಹಾಗೂ ರಾಮಕೃಷ್ಣ ಹೇರ್ಳೆ ಯವರ ನಡುವಿನ ಶೀತಲ ಸಮರ ಇಂದು ನಿನ್ನೆಯದಲ್ಲ. ಒಬ್ಬರನ್ನೊಬ್ಬರು ಹಣಿಯಲೆತ್ನಿಸುವ ಅವರ ಮಹಾಭಾರತ ಸಮರ ಇಡೀ ಕುಂಭಾಶಿ ಪರಿಸರ ದಲ್ಲಿಯೇ ಕುಖ್ಯಾತಿ ಗಳಿಸಿದೆ. ಈ ಮಹಾಭಾರತ ಸಮರದ ಮುಂದಿನ ಅಂಗವಾಗಿ ನಿನ್ನೆ ನರಳಾಡುತ್ತಾ ಸರ್ಕಾರಿ ಆಸ್ಪತ್ರೆಯ ಮೇಲೆ ಮಲಗಿರುವ ರಾಧಾದಾಸ್ ಬೇಕೆಂದೇ ಹೇರ್ಳೆಯವರ ಹೆಸರನ್ನು ಬಳಸಿದ್ದಾರೆಂದು ಆರೋಪಿಸಲಾ ಗುತ್ತಿದೆ. ವಿಚಿತ್ರವೆಂದರೆ ತನ್ನ ಮೇಲೆ ಭಾನುವಾರ ರಾತ್ರಿ ಭೀಕರ, ಮಾರ ಣಾಂತಿಕ ಹಲ್ಲೆಯಾಗಿದೆಯೆಂದು ಬಣ್ಣಿಸಿ ಹೇಳುವ ರಾಧಾದಾಸ್ರ ಜಾಗದಲ್ಲಿ ಬೇರೆ ಯಾವ ಗಾಯಾಳು ಆಗಿದ್ದರೂ ತಕ್ಷಣ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುತ್ತಿದ್ದರು. ಆದರೆ ಎರಡು ದಿನದ ತನಕ ಅಷ್ಟೂ ನೋವನ್ನು ಸಹಿಸಿ ಕೊಂಡ ರಾಧಾದಾಸ್ ನಿನ್ನೆ ತಾನೇ ಆಸ್ಪತ್ರೆಗೆ ಬಂದು ಮಲಗಿರುವುದರ ಹಿಂದೆ ಯಾರನ್ನೋ ಹಣಿ ಯುವ ಷಡ್ಯಂತ್ರವಿದೆಯೆಂದು ಪಿಸು ಗುಡಲಾಗುತ್ತಿದೆ.
ಸಭಾಪತಿ ಭೇಟಿ:
ತನ್ನ ಪಕ್ಷದ ಕಾರ್ಯಕರ್ತೆಯೆಂಬ ನೆಲೆಯಲ್ಲಿ ನಿನ್ನೆ ಕುಂದಾಪುರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಭಾಪತಿ ಸಾಂತ್ವನ ಹೇಳಿದರಲ್ಲದೆ ಧನಸಹಾಯವನ್ನು ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದರು. ಒಂದೊಮ್ಮೆ ಕಾಂಗ್ರೆಸ್ ಅಂಗಳದಲ್ಲಿ ಚಿಮ್ಮುತ್ತಿದ್ದ ರಾಧಾದಾಸ್ರ ಮೇಲೆ ಜರಗಿದ ಹಲ್ಲೆ ಪ್ರಕರಣದ ಹಿಂದೆ ಹಲವು ಪ್ರಶ್ನೆಗಳು ಉದ್ಭವಿ ಸಿದ್ದು ಪೊಲೀಸರ ಸಮರ್ಪಕ ತನಿಖೆಯಿಂದಷ್ಟೇ ಸತ್ಯ ಬೆಳಕಿಗೆ ಬರಬಹುದೆನ್ನಲಾಗುತ್ತಿದೆ.
Tagged with cnews
Posted by JAYAKIRANA Kirana on | 0 comments | Leave a comment...
Tagged with lnews
Posted by JAYAKIRANA Kirana on | 0 comments | Leave a comment...
ನವದೆಹಲಿ: ಮಾನವರಹಿತ ರೈಲ್ವೆ ಕ್ರಾಸಿಂಗ್ ಬಳಿ ಮಥುರಾ-ಕಾಸ್ಗಂಜ್ ಎಕ್ಸ್ಪ್ರೆಸ್ ರೈಲು ವ್ಯಾನ್ಗೆ ಡಿಕ್ಕಿ ಹೊಡೆದ ಪರಿಣಾಮ ೧೫ ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ಬೆಳಿಗ್ಗೆ ಸಂಭವಿಸಿದೆ.
ಮದು ರೈಲ್ವೆ ಸ್ಟೇಶನ್ ಬಳಿಯಿರುವ ಮಾನವರಹಿತ ರೈಲ್ವೆ ಕ್ರಾಸಿಂಗ್ ಬಳಿ ರೈಲು ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ವ್ಯಾನ್ನಲ್ಲಿ ೧೭ ಮಂದಿ ಪ್ರಯಾಣಿಕರು ಪ್ರಯಾಣಿಸು ತ್ತಿದ್ದರು ಎಂದು ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರ ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ೧೫ಮಂದಿ ಸ್ಥಳದಲ್ಲಿ ಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
ಮಾನವರಹಿತ ಕ್ರಾಸಿಂಗ್ ಬಳಿ ರೈಲು ಸಾಗುತ್ತಿರುವುದನ್ನು ನೋಡಿ ಯೂ ವ್ಯಾನ್ ಚಾಲಕ ನಿರ್ಲಕ್ಷ್ಯ ತೋರಿ ರೈಲು ಹಳಿ ದಾಟಲು ಪ್ರಯತ್ನಿಸಿದಾಗ ಅಪಘಾತ ಸಂಭವಿಸಿದೆ ಎಂದು ದೆಹಲಿ ರೈಲ್ವೆ ಮೂಲಗಳು ತಿಳಿಸಿವೆ.
Tagged with cnews
Posted by JAYAKIRANA Kirana on | 0 comments | Leave a comment...
ಪುಣೆ: ಕಾಲ್ಸೆಂಟರ್ ಉದ್ಯೋಗಿ ಯೊಬ್ಬಳ ಸಾಮೂಹಿಕ ಅತ್ಯಾಚಾರ ಗೈದು ಕೊಲೆ ಮಾಡಿದ್ದ ಆರೋಪಿಗಳಿ ಬ್ಬರಿಗೆ ಇಲ್ಲಿನ ಸೆಷನ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
೨೦೦೭ರಲ್ಲಿ ನವಂಬರ್ ಒಂದ ರಂದು ವಿಪ್ರೋ ಬಿಪಿಓದ ಉದ್ಯೋಗಿ ಯಾಗಿದ್ದ ೨೬ ವರ್ಷದ ಮಹಿಳೆಯನ್ನು ಅತ್ಯಾಚಾರ ಮಾಡಿ ಬಳಿಕ ಹತ್ಯೆಗೈದಿ ದ್ದರು. ವಿಪ್ರೋದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದ ಪುರುಷೋತ್ತಮ್ ಬೊರಾಟೆ (೨೮) ಮತ್ತು ಆತನ ಸಹಚರ ಪ್ರದೀಪ್ ಕೊಕಟೆ(೨೬) ಮಹಿಳೆಯನ್ನು ಬಿಪಿಓಗೆ ಕರೆತರುವ ನೆಪದಲ್ಲಿ ಅತ್ಯಾಚಾರವೆಸಗಿ ಹತ್ಯೆಗೈದಿದ್ದರು. ಆದರೆ ೨೯ ಸಾಕ್ಷಿಗಳ ವಿಚಾರಣೆ ಹಾಗೂ ಹತ್ತಿರದ ಸಾಕ್ಷಿಗ ಳನ್ನು ಪರಿಗಣಿಸಿ ಇವರಿಬ್ಬರು ಅಪರಾಧಿಗಳೆಂದು ಕೋರ್ಟ್ ಶನಿವಾರ ತೀರ್ಪು ನೀಡಿತ್ತು. ಗೋರಕಾಪುರ ದಿಂದ ಬಂದಿದ್ದ ಮಹಿಳೆ ತನ್ನ ಸೋದರಿ ಹಾಗೂ ಬಾವನೊಂದಿಗೆ ಪುಣೆಯಲ್ಲಿ ವಾಸವಾಗಿದ್ದಳು. ೨೦೦೬ ರಲ್ಲಿ ಆಕೆ ವಿಪ್ರೋದ ಕಾಲ್ಸೆಂಟರ್ಗೆ ಉದ್ಯೋಗಕ್ಕೆ ಸೇರಿದ್ದಳು. ಪುಣೆಯ ಸ್ಥಳಗಳ ಸರಿಯಾದ ಪರಿಚಯವಿಲ್ಲದ ಆಕೆಯನ್ನು ಟ್ಯಾಕ್ಸಿ ಚಾಲಕ ಬಿಪಿಓಗೆಂದು ಬೇರೆಡೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆತನ ಸಹಚರನೊಂದಿಗೆ ಸೇರಿ ಅತ್ಯಾಚಾರ ಮಾಡಿ ಆಕೆಯ ಶಾಲ್ ನಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದರು.
Tagged with cnews
Posted by JAYAKIRANA Kirana on | 0 comments | Leave a comment...
ವಿಟ್ಲ: ಸ್ಥಳೀಯ ಕಾಲೇಜೊಂ ದರ ವಿದ್ಯಾರ್ಥಿನಿ ಯೊಬ್ಬಳ ಕೈ ಎಳೆದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯೊಬ್ಬನನ್ನು ವಿಟ್ಲ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪುಣಚ ಗ್ರಾಮದ ನಿವಾಸಿ ಪ್ರಕಾಶ್ ಪಾಠಾಳಿ(೨೮) ಬಂಧಿತ ಆರೋಪಿ.
Tagged with cnews
Posted by JAYAKIRANA Kirana on | 0 comments | Leave a comment...
ಮಂಗಳೂರು: ಗಾಂಜಾ ದಂಧೆ ಯ ಕೊಂಡಿ ಚೆರಿಯ ಪುತ್ತ ಯಾನೆ ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿ ಗಳನ್ನು ಕಂಕನಾಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇಸ್ಮಾಯಿಲ್, ಝಾಕಿರ್ ಮತ್ತು ಇಮ್ರಾನ್ ಎಂಬವರೇ ಬಂಧಿತ ಆರೋಪಿಗಳಾಗಿದ್ದು ಎಲ್ಲರೂ ಕಣ್ಣೂರು ನಿವಾಸಿಗಳಾಗಿದ್ದಾರೆ. ಇದೇ ತಿಂಗಳ ೧೩ರಂದು ರಾತ್ರಿ ಚೆರಿಯ ಪುತ್ತನನ್ನು ಕಣ್ಣೂರು ಚೆಕ್ಪೋಸ್ಟ್ ಸಮೀಪದ ಐಸಂ ಸ್ಟೀಲ್ ಬಳಿ ತಲ್ವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು. ಅದಕ್ಕೂ ಮುನ್ನ ಕ್ರಿಕೆಟ್ ಆಡುತ್ತಿದ್ದ ಪುತ್ತನನ್ನು ಆತನ ಸ್ನೇಹಿತರೇ ಮೊಬೈಲ್ಗೆ ಕರೆ ಮಾಡಿ ನಿಗದಿತ ಸ್ಥಳಕ್ಕೆ ಕರೆಸಿಕೊಂ ಡಿದ್ದರು. ಇದನ್ನು ಗಮನಿಸಿದಾಗ ಕೃತ್ಯದ ಹಿಂದೆ ಸ್ನೇಹಿತರೇ ಇರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಕೊಲೆ ಗೂ ಮುನ್ನ ಬಂದ ಕರೆಯ ಬಗ್ಗೆ ತನಿಖೆ ನಡೆಸಿದ್ದ ಕಂಕನಾಡಿ ಇನ್ಸ್ಪೆಕ್ಟರ್ ರವೀಶ್ ನೇತೃತ್ವದ ತಂಡ ಕೊಲೆಗೆ ಸಂಚು ರೂಪಿಸಿದ್ದ ಮೂವರು ಆರೋಪಿಗಳನ್ನು ಫರಂಗಿಪೇಟೆಯಲ್ಲಿ ಬಂಧಿಸಿದ್ದರು. ಆರೋಪಿಗಳ ಪೈಕಿ ಇಸ್ಮಾಯಿಲ್ ಇಜಾಝ್ನ ತಂದೆಯಾಗಿ ದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಆಪ್ತ ಸ್ನೇಹಿತನಾಗಿದ್ದ ಇಜಾಝ್ ತನ್ನ ಮೇಲೆ ಕೈ ಮಾಡಿದ ಎನ್ನುವ ಕಾರಣಕ್ಕಾಗಿ ಎರಡು ತಿಂಗಳ ಹಿಂದೆ ಇದೇ ಪುತ್ತ, ಇಜಾಝ್ನನ್ನು ಕಡಿದು ಕೊಲೆಗೆ ಯತ್ನಿಸಿದ್ದನು. ಒಂದು ತಿಂಗಳು ಆಸ್ಪತ್ರೆಯಲ್ಲಿದ್ದ ಇಜಾಝ್ ಈಗಲೂ ನಡೆದಾಡಲು ಆಗದ ಸ್ಥಿತಿಯಲ್ಲಿದ್ದಾನೆ. ಈ ಕಾರಣದಿಂದಾಗಿ ಪುತ್ತನನ್ನು ಮುಗಿಸಲು ಆತನ ತಂದೆ ಇಸ್ಮಾಯಿಲ್ ಒಳಸಂಚು ರೂಪಿಸಿದ್ದು ಅದಕ್ಕಾಗಿ ಆತನ ಜೊತೆ ದ್ವೇಷ ಹೊಂದಿದ್ದ ಸ್ನೇಹಿತರನ್ನೇ ಬಳಸಿದ್ದರು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ರಾಗಿರುವ ಮೂವರೂ ಕೊಲೆಗೆ ಸಂಚು ರೂಪಿಸಿದವರಾಗಿದ್ದು ಕೊಲೆ ಯಲ್ಲಿ ನೇರವಾಗಿ ಶಾಮೀಲಾದವ ರಿಗಾಗಿ ಪೊಲೀಸರು ಬಲೆ ಬೀಸಿದ್ದು ಒಂದೆರಡು ದಿನಗಳಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸುವ ವಿಶ್ವಾಸ ದಲ್ಲಿದ್ದಾರೆ. ಬಂಧಿತರನ್ನು ನಿನ್ನೆ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು ೧೪ ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Tagged with cnews
Posted by JAYAKIRANA Kirana on | 0 comments | Leave a comment...
ಮಂಗಳೂರು: ಸೈನೈಡ್ ನೀಡಿ ಯುವತಿಯರನ್ನು ಹತ್ಯೆ ನಡೆಸಿದ ಪ್ರಕರ ಣದ ಆರೋಪಿ ಮೋಹನ್ಕುಮಾರ್ನ ಮತ್ತೊಂದು ಸುತ್ತಿನ ವಿಚಾರಣೆ ಮಂಗ ಳೂರು ತ್ವರಿತಗತಿ ನ್ಯಾಯಾಲಯದಲ್ಲಿ ನಿನ್ನೆಯಿಂದ ಆರಂಭಗೊಂಡಿದೆ.
ಈಗಾಗಲೇ ಮೂರು ಪ್ರಕರಣಗಳ ಸಾಕ್ಷಿ ದಾಖಲಿಸಿಕೊಂಡಿರುವ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರು ನಿನ್ನೆಯಿಂದ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಹೇಮಾ ಯಾನೆ ಹೇಮಾವತಿ ಸಾವಿನ ಪ್ರಕರಣದ ಕುರಿತಂತೆ ವಿಚಾರಣೆ ಆರಂಭಿಸಿದರು. ಘಟನೆಗೆ ಸಂಬಂಧಿಸಿದಂತೆ ೪೨ಮಂದಿ ಸಾಕ್ಷ್ಯ ನುಡಿಯಲಿದ್ದು, ನಿನ್ನೆ ನಾಲ್ವ ರು ಸಾಕ್ಷ್ಯ ಹೇಳಿದರು.
೨೦೦೯ರ ಎ.೨೨ರಂದು ಮೈಸೂ ರಿನ ಕೀರ್ತಿ ಲಾಡ್ಜ್ನಲ್ಲಿ ಸುಧಾಕರ ಗೌಡ ಎಂಬ ಹೆಸರಿನಲ್ಲಿ ತಂಗಿದ್ದ ಮೋಹನ್ಕುಮಾರ್ ಹೇಮಾಳನ್ನು ತನ್ನ ಪತ್ನಿ ಎಂದು ಪರಿಚಯಿಸಿದ್ದ. ಇವರಿಬ್ಬರೂ ರೂಂ ನಿಂದ ಹೊರಗೆ ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ಮೋಹನ್ಕುಮಾರ್ ಒಬ್ಬನೆ ರೂಂಗೆ ಹಿಂದಿರುಗಿದ್ದ ಎಂದು ಕೀರ್ತಿ ಲಾಡ್ಜ್ನ ಕ್ಯಾಶಿಯರ್ ಮಹೇಶ ವಿವರ ನೀಡಿದರು.
ಇದಕ್ಕೆ ಪಾಟಿ ಸವಾಲು ಹಾಕಿದ ಮೋಹನ್ಕುಮಾರ್ ಇದೇ ಮಹಿಳೆ ನಿಮ್ಮ ಲಾಡ್ಜ್ಗೆ ಬಂದಿದ್ದಲು ಎಂದು ಪೊಲೀಸರು ಪೊಟೊ ತೋರಿಸಿದ್ದಾ ರೆಯೇ ಎಂದು ಪ್ರಶ್ನಿಸಿದ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾ ಣದ ಸ್ವಚ್ಛತಾ ಸಿಬ್ಬಂದಿ ಸಣ್ಣಲಿಂಗ, ಮೈಸೂರು ಮಹಾನಗರ ಪಾಲಿಕೆಯ ಶ್ಮಶಾನದಲ್ಲಿ ಶವ ದಫನ ಮಾಡುವ ವೆಂಕಟರಮಣ ಸಂತೋಷ್ ಇಂದು ಸಾಕ್ಷ್ಯ ನುಡಿದರು.
Tagged with cnews
Posted by JAYAKIRANA Kirana on | 0 comments | Leave a comment...
ಮಂಗಳೂರು: ಕಾಲೇಜು ಬಿಟ್ಟು ಮನೆಗೆ ತೆರಳಲೆಂದು ರಸ್ತೆ ಬದಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಯರಿಗೆ ಲಾರಿ ಡಿಕ್ಕಿ ಹೊಡೆದಿದ್ದು ಇಬ್ಬರು ಗಂಭೀರವಾಗಿ ಗಾಯ ಗೊಂಡಿದ್ದಾರೆ.
ನಿನ್ನೆ ಸಂಜೆ ಅಡ್ಯಾರು ಸಹ್ಯಾದ್ರಿ ಕಾಲೇಜು ಬಿಟ್ಟ ಬಳಿಕ ಐವರು ವಿದ್ಯಾರ್ಥಿನಿಯರು ಬಸ್ಸಿಗಾಗಿ ಕಾಯುತ್ತಿದ್ದರು. ಅದೇ ವೇಳೆ ಚಾಲಕನ ನಿಯಂತ್ರಣ ಇಲ್ಲದೆ ಬಂದ ಲಾರಿಯೊಂದು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮವಾಗಿ ನಾಗಲಕ್ಷ್ಮಿ ಮತ್ತು ಜೆನಿಫರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Tagged with cnews
Posted by JAYAKIRANA Kirana on | 0 comments | Leave a comment...
ಪುತ್ತೂರು: ಕೆಮ್ಮಿಂಜೆ ಗ್ರಾಮದ ಮರೀಲ್ ಎಂಬಲ್ಲಿ ೬ ವರ್ಷದ ಹಿಂದೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದ ಮೂವರು ಆರೋಪಿಗಳನ್ನು ಪುತ್ತೂರು ನ್ಯಾಯಾಲಯ ದೋಷ ಮುಕ್ತಗೊಳಿಸಿ ಬಿಡುಗಡೆ ಮಾಡಿದೆ.
ಕೆಮ್ಮಿಂಜೆಯ ಮರೀಲು ನಿವಾಸಿ ಲೂಯಿಸ್ ಡಿಸೋಜಾ, ಮರಿಯಾ ಡಿಸೋಜಾ, ಸಿಸಿಲಿಯಾ ಡಿಸೋಜಾ ಆರೋಪದಿಂದ ಮುಕ್ತಗೊಂಡವರು.
ಆರೋಪಿಗಳು ಸ್ಥಳೀಯ ನಿವಾಸಿ ಆಂತೋನಿ ಡಿಸೋಜಾ ಎಂಬವರಿಗೆ ೨೦೦೫ರಂದು ಹಲ್ಲೆ ನಡೆಸಿದ್ದರೆಂಬ ಆರೋಪವಿತ್ತು. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು
ಆರೋಪಿಯ ಪರವಾಗಿ ನ್ಯಾಯ ವಾದಿಗಳಾದ ಮನೋಹರ್ ಕೆ.ವಿ., ಮಂಜುನಾಥ್ ಎನ್.ಎಸ್., ಅನೂಪ್ ಮಾಡಾವು, ದೀಪಕ್ ಬೊಳುವಾರು ವಾದಿಸಿದ್ದರು.
Tagged with cnews
Posted by JAYAKIRANA Kirana on | 0 comments | Leave a comment...
ಉಪ್ಪಿನಂಗಡಿ: ಇಲ್ಲಿನ ಪೃಥ್ವಿ ಶಾಪಿಂಗ್ ಮಾಲ್ ನಲ್ಲಿರುವ ಚಿಕನ್ ಸೆಂಟರಿಗೆ ದಾಳಿ ನಡೆಸಿರುವ ಉಪ್ಪಿನಂಗಡಿ ಪೊಲೀಸರು ಇಬ್ಬರನ್ನು ಬಂಧಿಸಿ, ದನದ ಮಾಂಸ ಹಾಗೂ ಫ್ರೀಜರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಬ್ಬಾಸ್ ಮತ್ತು ಮುಸ್ತಾಫ ಎಂಬಿಬ್ಬರನ್ನು ಬಂಧಿಸಿದ ಪೊಲೀಸರು ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
Tagged with cnews
Posted by JAYAKIRANA Kirana on | 0 comments | Leave a comment...
ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪದ ಸುಳಿಗೆ ಸಿಕ್ಕಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಗೊಳಿಸಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಕೀಲ ಸಿರಾಜಿನ್ ಬಾಷಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಯಡಿಯೂರಪ್ಪನವರ ಯಾವುದೇ ಪಾತ್ರವಿಲ್ಲ. ರಾಜಕೀಯ ದುರುದ್ದೇ ಶದಿಂದ ಆರೋಪ ಹೊರಿಸಲಾಗಿದೆ. ಅಲ್ಲದೇ ಅವರ ಮೇಲಿನ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿತ್ತು.
ಹೈಕೋರ್ಟ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದು ಸರಿಯಲ್ಲ, ಯಡಿಯೂರಪ್ಪ ವಿರುದ್ಧ ಸಾಕಷ್ಟು ಸಾಕ್ಷಿಗಳು ಲಭ್ಯವಿದ್ದು, ಸಿಇಸಿ ತನಿಖೆ ವರದಿ ಜಾರಿಯಲ್ಲಿದೆ ಎಂದು ಬಾಷಾ ಸುಪ್ರೀಂ ಕೋರ್ಟ್ಗೆ ನೀಡಿದ ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸದೆ ಮೇಲ್ನೋಟಕ್ಕೆ ಯಡಿಯೂರಪ್ಪ ಅವರ ಮೇಲಿನ ಆರೋಪಗಳು ಸುಳ್ಳು ಎನ್ನುವುದು ಎಷ್ಟರ ಮಟ್ಟಿಗೆ ಸರಿ. ನ್ಯಾಯಮೂರ್ತಿಗಳಿಗೆ ಸಾಕಷ್ಟು ಆಧಾರ ಸಿಕ್ಕಿಲ್ಲದ ಕಾರಣ ಹೈಕೋರ್ಟ್ ಆದೇಶ ಈ ರೀತಿ ಬಂದಿರುವ ಸಾಧ್ಯತೆ ಇದೆ ಬಾಷಾ ವಾದಿಸಿದ್ದಾರೆ.
Tagged with snews
Posted by JAYAKIRANA Kirana on | 0 comments | Leave a comment...
Tagged with sms
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with nimminda
Posted by JAYAKIRANA Kirana on | 0 comments | Leave a comment...
Tagged with bahiranga
Posted by JAYAKIRANA Kirana on | 0 comments | Leave a comment...
Tagged with lekhana
You can subscribe by e-mail to receive news updates and breaking stories.