ಗರ್ಭ ನಿರೋಧಕಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ

Posted by JAYAKIRANA Kirana on Monday, 19 March 2012 | 0 comments | Leave a comment...


ಹೆಸರು;ಬೇಡ: ಊರು:ಬೇಡ
ಸಮಸ್ಯೆ: ನಾನು ೨೩ರ ಹರೆಯದ ಯುವತಿ. ಪದವಿ ಮುಗಿಸಿ ದ್ದೇನೆ. ಕಳೆದ ಮೇ ತಿಂಗಳಲ್ಲಿ ನನ್ನ ಮದುವೆ ಆಯಿತು. ನನ್ನ ಪತಿಗೆ ಸೆಕ್ಸ್‌ನಲ್ಲಿ ಹೆಚ್ಚಿನ ಆಸಕ್ತಿಯಿದೆ. ಈಗ ನನ್ನ ಸೆಕ್ಸ್ ಲೈಫ್ ಚೆನ್ನಾಗಿದೆ. ನಾವು ಇನ್ನೂ ಒಂದು ವರ್ಷ ಮಗು ಬೇಡ ಎಂದು ತೀರ್ಮಾನಿಸಿ ದ್ದೇವೆ. ನನ್ನ ಪತಿಗೆ ಈಗ ೨೬ರ ಹರೆಯ. ನಾನು ಮುಂದೆ ಕಂಪ್ಯೂ ಟರ್ ತರಬೇತಿ ಪಡೆಯಲು ಇಚ್ಛಿಸಿದ್ದೇನೆ. ನಾವು ಯಾವ ಗರ್ಭ ನಿರೋಧಕವನ್ನು ಬಳಸುವುದೆಂದು ತಿಳಿಯುತ್ತಿಲ್ಲ. ಈಗ ಪ್ರತಿನಿತ್ಯ ಸಂಭೋಗದ ವೇಳೆ ನಿರೋಧ್ ಬಳಸುತ್ತೇವೆ. ನಮಗೆ ಇದರಿಂದ ಹೆಚ್ಚು ಖುಷಿ ಸಿಗುವುದಿಲ್ಲ. ನಾವು ಬೇರೆ ಯಾವ ಗರ್ಭನಿರೋಧಕ ಬಳಸಬಹುದು? ಹೆಣ್ಣು ಮಕ್ಕಳು ಧರಿಸುವ ಗರ್ಭ ನಿರೋಧಕದ ಬಗ್ಗೆ ಮಾಹಿತಿ ತಿಳಿದಿದ್ದೇನೆ. ಆದರೆ ಅದನ್ನು ಬಳಸುವ ಬಗ್ಗೆ ತಿಳಿ ದಿಲ್ಲ. ಅದು ಎಲ್ಲಿ ಸಿಗುತ್ತದೆ? ಅದನ್ನು ಬಳಸಿದಲ್ಲಿ ಸಮಸ್ಯೆಯಿ ದೆಯೇ? ನನಗೆ ಈ ಬಗ್ಗೆ ಮಾಹಿತಿ ಕೊಡಿ.
ಸಲಹೆ: ನಿಮಗೆ ಜಾಸ್ತಿ ವಯಸ್ಸಾಗದೇ ಇರುವುದರಿಂದ ಈಗಲೇ ಮಗು ಪಡೆಯುವುದು ಬೇಡ ಎಂದು ನಿರ್ಧರಿಸಿರುವುದು ಸಮಂ ಜಸವಾಗಿದೆ. ಗರ್ಭ ನಿರೋಧಕ ಬಳಸಿ ಸೇರಿದರೆ ಯಾವುದೇ ಸಮಸ್ಯೆಯಾಗದು. ಗರ್ಭ ನಿರೋಧಕಗಳ ಬಗ್ಗೆ ಅವರಿವರ ಬಾಯಿ ಮಾತಿನಿಂದ ತಿಳಿದಿದ್ದರೂ ಅದರ ಸಮರ್ಪಕ ಬಳಕೆಯ ಬಗ್ಗೆ ಹೆಚ್ಚಿ ನವರಿಗೆ ಅರಿವಿರುವುದಿಲ್ಲ. ಹೀಗಾಗಿ ಅದನ್ನು ಬಳಸಿದರೆ ಏನಾದರೂ ಆಗುತ್ತದೆಯೇ ಎಂಬ ಸಂಶಯ ತಾಳುತ್ತಾರೆ. ಈ ಕಾರಣದಿಂದ ಯಾವುದೇ ಗರ್ಭ ನಿರೋಧಕ ಬಳಸುವಾಗಲೂ ಸರಿಯಾದ ವೈದ್ಯರ ಸಲಹೆ ಪಡೆ ಯುವುದು ಅವಶ್ಯಕ. ನಿರೋಧ್ ಅಥವಾ ಕಾಂಡೋಂ ಬಳಕೆ ಗರ್ಭ ತಡೆಯುವ ಸುರಕ್ಷಿತ ಮತ್ತು ಸುಲಭ ವಿಧಾನವಾಗಿರುವ ಕಾರಣ ಹೆಚ್ಚಿನವರು ಇದನ್ನೇ ಬಳಸು ತ್ತಾರೆ. ಇದರಿಂದ ಹೇಳಿಕೊಳ್ಳುವಂತಹ ಅಡ್ಡಪರಿಣಾಮಗಳೇನೂ ಇಲ್ಲ.
ಆದರೆ ಇದರಿಂದ ಲೈಂಗಿಕ ಭಾವಪ್ರಾಪ್ತಿಗೆ ಕೆಲವೊಂದು ಅಡಚಣೆ ಆಗುವುದು ಸಹಜ. ಇನ್ನುಳಿದಂತೆ ಕಾಪರ್-ಟಿ ಬಳಕೆಯೂ ಮಾಡಬಹುದು. ಇದನ್ನು ಸುಲಭ ಚಿಕಿತ್ಸೆಯಿಂದ ಮಹಿಳಾ ವೈದ್ಯರುಗಳು ಅಳವಡಿಸುತ್ತಾರೆ. ಇದು ಒಮ್ಮೆ ಅಳವಡಿಸಿ ದರೆ ಮತ್ತೇನೂ ಮಾಡಬೇಕಿಲ್ಲ. ಆದರೆ ಇದರ ಬಗ್ಗೆ ಸಾಕಷ್ಟು ಎಚ್ಚ ರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ನೀವು ತಿಳಿಸಿ ರುವ ಮಹಿಳಾ ಕಾಂಡೋಂ(ವಪೆ)ಗಳು ಅಷ್ಟು ಪ್ರಚಾರವಾಗಿಲ್ಲ. ಪ್ರಮುಖ ಮೆಡಿಕಲ್ ಸ್ಟೋರ್‌ಗಳಲ್ಲಿ ಇದು ಸಿಗುತ್ತದೆ.
ಇದನ್ನು ಬಳಸಲು ಮಹಿಳಾ ವೈದ್ಯರ ಬಳಿ ಸಮಾಲೋಚಿಸು ವುದು ಅತ್ಯಗತ್ಯ. ಇದು ಮೇಲ್ಗಡೆ ರಿಂಗ್ ಆಕಾರವನ್ನು ಹೊಂದಿದ್ದು, ಹಿಂದಕ್ಕೆ ಉದ್ದವಾಗಿ ಸಾಮಾನ್ಯ ನಿರೋಧ್‌ನ ಆಕಾರವನ್ನೇ ಹೊಂದಿರುತ್ತದೆ. ಆದರೆ ಇದನ್ನು ಲೈಂಗಿಕ ಕ್ರಿಯೆ(ಸಂಭೋಗ)ಯ ಕೆಲವು ನಿಮಿಷದ ಮೊದಲು ಹೆಣ್ಣು ತನ್ನ ಲೈಂಗಿಕಾಂಗದಲ್ಲಿ ಅಳ ವಡಿಸಬೇಕು. ಲೈಂಗಿಕ ಕ್ರಿಯೆ ಮುಗಿದ ಬಳಿಕ ಕೂಡಲೇ ಇದನ್ನು ಹೊರಗಡೆ ತೆಗೆಯದೆ ಕೆಲವು ನಿಮಿಷಗಳ ನಂತರ ತೆಗೆಯಬಹು ದಾಗಿದೆ. ಇದರ ಬೆಲೆಯು ಪುರುಷ ಕಾಂಡೋಂಗಿಂತ ಹಲವು ಪಟ್ಟು ಹೆಚ್ಚಿರುತ್ತದೆ. ಉತ್ತಮ ಗುಣಮಟ್ಟದ ಮಹಿಳಾ ಕಾಂಡೋಂ (ವಪೆ)ಗಳನ್ನು ಅನೇಕ ಬಾರಿ ಬಳಸಲೂ ಸಾಧ್ಯವಿದೆ.
ಆದರೆ ಇದು ದುಬಾರಿ ಮತ್ತು ಬಳಸಲು ತುಸು ಕಷ್ಟ ಎಂಬ ಕಾರಣಕ್ಕೆ ಅಷ್ಟೊಂದು ಸುದ್ದಿಯಲ್ಲಿಲ್ಲ. ಯಾವುದಕ್ಕೂ ಒಮ್ಮೆ ಮಹಿಳಾ ತಜ್ಞ ವೈದ್ಯರ ಬಳಿ ಈ ಬಗ್ಗೆ ಮಾತಾಡಿ. ಅವರು ವಿಧಾನಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಲೈಂಗಿಕ ಕ್ರಿಯೆಯಲ್ಲಿ ಭಾವಪ್ರಾಪ್ತಿಯ ಹಂತವನ್ನು ತಲುಪಲು ಅನೇಕ ವಿಧಾನಗಳಿವೆ. ಅವುಗಳ ಬಗ್ಗೆ ತಿಳಿದುಕೊಂಡಲ್ಲಿ ಸೆಕ್ಸ್ ಲೈಫ್‌ನ್ನು ಇನ್ನಷ್ಟು ಆನಂದಮಯವನ್ನಾ ಗಿಸಬಹುದು.

ಅಶುದ್ಧ ಬಿಂಬಗಳನ್ನಿಟ್ಟು ಪ್ರತಿಷ್ಠೆ ಮಾಡಲಾಯಿತೇ?

Posted by JAYAKIRANA Kirana on | 0 comments | Leave a comment...



'ಬಿಂಬ ಶುದ್ದಿ' ಕಾರ್ಯಕ್ರಮದ ಬಗ್ಗೆ ವದಂತಿಗಳಿವೆ. ಅಶುದ್ಧ ಬಿಂಬಗಳನ್ನಿಟ್ಟುಕೊಂಡು ಮಂಗಳೂರಿನ ಪ್ರತಿಷ್ಠೆ ನೆರವೇರಿಸಲಾಯಿತೆ? ಸಮಾಜದ ಜನರಿಗೂ ಸಂಸ್ಥಾನದ ಯತಿಗಳಿಗೂ, ದೇವರಿಗೂ ಭಾವನಾತ್ಮಕ ಬೆಸುಗೆಗಳಿವೆ. ಈ ಬೆಸುಗೆಗಳನ್ನು ಕಡಿದು ಬರೀ ಕೋಟಿ ದೋಚುವ ಕಾರ್ಯಕ್ರಮಗಳು ಜರಗಿದರೆ ಮುಂದಿನ ತಲೆಮಾರಿನವರಲ್ಲಿ ಸಂಸ್ಥಾನದ ಬಗ್ಗೆ ಗೌರವ ಉಳಿಯಬಹುದೇ?

ಭಾಮಿ ಸುಧಾಕರ ಶೆಣೈ, ಬಂಟ್ವಾಳ
ಕಾರ್ಕಳದ ಅವರ ಭಾವ ಜಗದೀಶ ಮಲ್ಯರಿಗೆ ದೂರವಾಣಿ ಮಾಡಿ 'ಶ್ರೀರಾಘವೇಂದ್ರ ತೀರ್ಥರು ಎಲ್ಲವನ್ನು ನೀಡಿದರೆ ಅವರ ಮುಂದಿನ ಜೀವ ನದ ವ್ಯವಸ್ಥೆ ಮಾಡಲಾಗುವುದು' ಎಂದು ತಿಳಿಸಿದ್ದರು. ಕಡಪಾಕ್ಕೆ ತೆರಳಿದ ಯೋಗೀಶ್ ಭಟ್‌ರವರು ನೇರವಾಗಿ ಜೈಲಿನಲ್ಲಿದ್ದ ಶ್ರೀರಾಘವೇಂದ್ರ ತೀರ್ಥ ರಲ್ಲಿ ಈ ಪ್ರಸ್ತಾಪವನ್ನು ಇಡಬಹುದಿತ್ತು. ಅಲ್ಲೇ ಅವರಿಗೆ ಉತ್ತರ ಲಭಿಸುತ್ತಿತ್ತು. ರೂ. ೬೪ ಲಕ್ಷ ಸಂಗ್ರಹವಾಗಿದೆ. ದೇವರನ್ನು ಪಡೆಯಲು ಎಲ್ಲಾ ವ್ಯವಸ್ಥೆಯಾ ಗಿದೆ ಎಂದು ವದಂತಿಗಳ ಮೇಲೆ ವದಂತಿಗಳು ಹಬ್ಬಿತ್ತು. ಶ್ರೀಕಾಶೀ ಮಠದ ಕೊನೆಯ ದಿನಗಳು ಸಮೀಪಿಸಿತು ಎಂದು ಅನಿಸುತ್ತಿತ್ತು.
ಶ್ರೀವ್ಯಾಸ ರಘುಪತಿಯ ಪೂಜೆ ಪರಂಪರೆಯಂತೆ ಮತ್ತೆ ನಡೆಯುವಂ ತಾಗಲು ಸಮಾಜದ ಮನೆ ಮನೆಗಳಲ್ಲಿ ೨೫.೧೧.೨೦೧೧ರಂದು ತುಪ್ಪದ ದೀಪ ವನ್ನು ಉಪವಾಸವಿದ್ದು, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಚ್ಚಿ ಡಲು ಪತ್ರಿಕಾ ಪ್ರಕಟಣೆ ನೀಡಿದ್ದೆವು. ನಾವು ಬಂಟವಾಳದಲ್ಲಿ ೨೪.೧೧.೨೦೧೧ರಂದು ಸಂಜೆ ಶ್ರೀತಿರುಮಲ ವೆಂಕಟರಮಣ ದೇವರ ದೀಪನಮಸ್ಕಾರದ ಬಳಿಕ ಶ್ರೀದೇ ವರಲ್ಲಿ ಮತ್ತು ಶ್ರೀದೇವೇಂದ್ರ ತೀರ್ಥರ ವೃಂದಾವನದಲ್ಲಿ ಪ್ರಾರ್ಥಿಸಿ, ನದಿ ತೀರದ ಅಶ್ವತ್ಥಕಟ್ಟೆಯಲ್ಲಿ ಶ್ರೀದೇವೇಂದ್ರ ತೀರ್ಥರು ಧ್ಯಾನ ಮಗ್ನರಾಗುತ್ತಿದ್ದ ಸ್ಥಳದಲ್ಲಿ ಕೂತು ೨೫.೧೧.೨೦೧೧ರ ಸೂರ್ಯೋದಯದವರೆಗೆ ಉಪವಾಸವಿದ್ದು ಭಗವಂತನಲ್ಲಿ ಪ್ರಾರ್ಥಿಸಿದ್ದೆವು.
೨೫.೧೧.೨೦೧೧ರ ತೀರ್ಮಾನ ೨೮.೧೧.೨೦೧೧ಕ್ಕೆ ಮುಂದೂಡಲ್ಪಟ್ಟಿತ್ತು. ೩೦.೧೧. ೨೦೧೧ರಂದು ಸಂಸ್ಥಾನದ ದೇವರು ಕಡಪಾ ನ್ಯಾಯಾಲಯದಿಂದ ರೂ. ೧೨ ಲಕ್ಷದ ಠೇವಣಿಗೆ, ಕಾಲಲ್ಲಿ ಬೂಟು ಧರಿಸಿದವರ ತಲೆ ಮೇಲೆ ಕೂತು ೫೦೦ ವರುಷಗಳಿಂದ ಯತಿಗಳು ಬಿಟ್ಟು ಬೇರಾರೂ ಮುಟ್ಟದ ಆ ದೇವರು ತಳ್ಳುಗಾಡಿ ಯಲ್ಲಿ ಕೂತು ವಿಮಾನವೇರಿ ನಿಮ್ಮಲ್ಲಿಗೆ ತಲುಪಿದ್ದ. ಅವತ್ತು ಶ್ರೀಸುಕೃತೀಂದ್ರ ತೀರ್ಥರ ಅನುಗ್ರಹದಿಂದ ಪವಾಡ ನಡೆಯಿತು. ಸಂಸ್ಥಾನದ ದೇವರು ತನ್ನ ಚೈತನ್ಯವನ್ನು ಶ್ರೀರಾಘವೇಂದ್ರ ತೀರ್ಥರಿಗೆ ಅನುಗ್ರಹಿಸಿದ್ದ.
ದೇಹವೇ ಇಲ್ಲದ ಹಿರಿಯ ಯತಿಗಳು ಸಂಸ್ಥಾನವನ್ನು ಹೇಗೆ ರಕ್ಷಿಸಿ ಮುನ್ನಡೆಸುತ್ತಾರೆ ಎನ್ನುವ ಅನುಭವ ನಮಗೆಲ್ಲರಿಗೂ ಲಭಿಸಿತು. ಶ್ರೀದೇವರ ನಿರ್ಣಯವನ್ನು ಧಿಕ್ಕರಿಸಿ, ಶ್ರೀರಾಘವೇಂದ್ರ ತೀರ್ಥರನ್ನು ಬಂಧಿಸಿ ಅವರಲ್ಲಿ ರುವ ದೇವರ ಒಡವೆಗಳನ್ನು ಕಿತ್ತುಕೊಳ್ಳಲು ಪ್ರಯತ್ನಗಳಾಗುತ್ತಿವೆ. ೨೦ನೇ ಮಠಾಧಿಪತಿ ಯಾವತ್ತೂ ಯಾವ ನ್ಯಾಯಾಲಯದಲ್ಲೂ ೨೧ನೇ ಮಠಾಧಿ ಪತಿ ಯಾಗಲು ಸಾಧ್ಯವೇ ಇಲ್ಲ. ಶ್ರೀಕಾಶೀಮಠದ ಸಂಸ್ಥಾಪನೆಯಾದಾಗ ಶ್ರೀವಿಜಯೇಂದ್ರ ತೀರ್ಥರು ನಿರ್ಮಾಣ ಮಾಡಿದ ನಿಯಮ ನಿಬಂಧನೆಗಳನ್ನು ತಿರುಪತಿ ನ್ಯಾಯಾಲಯ ಅರ್ಥೈಸಿಕೊಳ್ಳಲು ಸೋತಿದೆ. ಈ ಬಗ್ಗೆ ಹೈದರಾಬಾದ್ ಉಚ್ಚ ನ್ಯಾಯಾಲಯದಲ್ಲಿ ದಾವೆ ಹಾಗೇ ಉಳಿದಿದೆ. ಅಲ್ಲಿ ತೀರ್ಮಾನವಾಗುವ ಮೊದಲು...
ಸಂಸ್ಥಾನದ ಶ್ರೀದೇವರಿಗೆ ತ್ರಿಕಾಲ ಪೂಜೆ ನೆರವೇರಿಸಲು ತಮ್ಮ ವಯಸ್ಸು, ಆರೋಗ್ಯ ಅನುಕೂಲವಾಗಿಲ್ಲ. ಇನ್ಯಾರಿಗೂ ಆ ವಿಗ್ರಹಗಳನ್ನು ನೀಡುವ ಅನು ಮತಿ ನ್ಯಾಯಾಲಯ ನೀಡಿಲ್ಲ. ಅಂತೂ ವಿಗ್ರಹಗಳಿಗೆ ಸಲ್ಲುತ್ತಿದ್ದ ಪೂಜೆ ೩.೧೧. ೨೦೧೧ರಿಂದ ನಿಂತು ಹೋಗಿದೆ. ವಿಗ್ರಹಗಳು ತಮ್ಮ ಕೈ ಸೇರಿ ೧೦೮ ದಿನಗಳು ಕಳೆದು ಹೋದವು.
ಮಂಗಳೂರಿನ ಶ್ರೀವೀರ ವೆಂಕಟೇಶನ ಪ್ರತಿಷ್ಠಾ ಸಮಯ ತಮ್ಮ ಪ್ರವಚನ ವನ್ನು ನೇರ ಪ್ರಸಾರ ಮಾಡಲಾಗಿತ್ತು. ತಮ್ಮ ಮಾತು ಮತ್ತು ಯೋಚನೆಯ ನಡುವೆ ಸಂಪರ್ಕ ಕಡಿಯುವುದನ್ನು ನಾನು ಗಮನಿಸಿದ್ದೇನೆ. ನೀವೀಗ ಶುಕ್ಲಗ್ರಂ ಥಿಯ ಸಂಪೂರ್ಣ ಗುಣಪಡಿಸಲು ಸಾಧ್ಯವಾಗದ ಆದರೂ ಜೀವಕ್ಕೆ ಅಪಾ ಯವಿಲ್ಲದ ತೊಂದರೆಗಳಿಂದ ಬಳಲುತ್ತಿದ್ದೀರಿ ಎಂದು ಜನರು ಆಡುತ್ತಿದ್ದಾರೆ. ಈ ಸ್ಥಿತಿಯಲ್ಲಿ ಜನಬಲ, ಧನಬಲ ಇದೆಯೆಂದು ಸಂಸ್ಥಾನದ ೨೧ನೇ ಮಠಾಧಿಪತಿ ಯನ್ನು ಬಂಧಿಸಲು ಪ್ರಯತ್ನಿಸುವುದು ಧರ್ಮ ಸಮ್ಮತವೇ? ೧೯೯೨ರ ತಮ್ಮ ಉನ್ನತ ಭಾವನೆಗಳು ಏನಾದವು?. ೫.೮.೨೦೧೨ರಂದು ಶ್ರೀಸುಕೃತೀಂದ್ರ ತೀರ್ಥರ ಸನ್ಯಾಸ ಸ್ವೀಕಾರದ ಬಗ್ಗೆ ಶತಮಾನೋತ್ಸವ ಜರಗಿಸುವ ಬಗ್ಗೆ ನಮ್ಮ ದೇವಳದಲ್ಲಿ ಹಾಕಿದ ಪ್ರಕಟಣೆಯನ್ನು ಓದಿದೆ.
'ಬಿಂಬ ಶುದ್ದಿ' ಕಾರ್ಯಕ್ರಮದ ಬಗ್ಗೆ ವದಂತಿಗಳಿವೆ. ಅಶುದ್ಧ ಬಿಂಬಗಳ ನ್ನಿಟ್ಟುಕೊಂಡು ಮಂಗಳೂರಿನ ಪ್ರತಿಷ್ಠೆ ನೆರವೇರಿಸಲಾಯಿತೆ? ಸಮಾಜದ ಜನ ರಿಗೂ ಸಂಸ್ಥಾನದ ಯತಿಗಳಿಗೂ, ದೇವರಿಗೂ ಭಾವನಾತ್ಮಕ ಬೆಸುಗೆಗಳಿವೆ. ಈ ಬೆಸುಗೆಗಳನ್ನು ಕಡಿದು ಬರೀ ಕೋಟಿ ದೋಚುವ ಕಾರ್ಯಕ್ರಮಗಳು ಜರಗಿದರೆ ಮುಂದಿನ ತಲೆಮಾರಿನವರಲ್ಲಿ ಸಂಸ್ಥಾನದ ಬಗ್ಗೆ ಗೌರವ ಉಳಿಯಬಹುದೇ? ಶ್ರೀವ್ಯಾಸ ರಘುಪತಿ ಹಾಗೂ ಶ್ರೀಸುಕೃತೀಂದ್ರ ತೀರ್ಥರು ಶ್ರೀರಾಘವೇಂದ್ರ ತೀರ್ಥ ರನ್ನು ಆಯ್ಕೆ ಮಾಡುವಾಗ ನಿಮ್ಮಲ್ಲಿ ಸುಳ್ಳು ಹೇಳಿರಲಿಲ್ಲ. ಧಾರ್ಮಿಕ ಮತ್ತು ಅಧಿ ಕಾರಿಕ ಎರಡೇ ವಿಷಯಗಳ ಮುಕ್ತಿಗಾಗಿ ಬರೆದ ಪತ್ರಕ್ಕೆ ತಪ್ಪಾಗಿ ಅರ್ಥೈಸಿ ತಾವು ೨೧ನೇ ಮಠಾಧಿಪತಿಯನ್ನು ಪರಿತ್ಯಾಗ ಮಾಡಿರಬಹುದು. ಶ್ರೀರಾಮಚಂದ್ರನೂ ಸೀತಾಮಾತೆಯನ್ನು ಪರಿತ್ಯಾಗ ಮಾಡಿದ್ದ. ಇಂದು ಸೀತಾಮಾತೆ ಇಲ್ಲದ ಶ್ರೀರಾ ಮಚಂದ್ರನ ದೇವಾಲಯಗಳೆಲ್ಲಿವೆ?
ಬಲ್ಲು ಮತ್ತು ರಮೇಶರ ನಿರ್ಣಯಕ್ಕಿಂತ ಶ್ರೀವ್ಯಾಸರಘುಪತಿ ಮತ್ತೂ ಶ್ರೀಸು ಕೃತೀಂದ್ರ ತೀರ್ಥರ ನಿರ್ಣಯಗಳು ಶ್ರೇಷ್ಠವಲ್ಲವೇ. ಯುಗಾದಿಯ ಪರ್ವ ಕಾಲ ದಲ್ಲಿ ಎಲ್ಲವನ್ನು ಮತ್ತೆ ಯೋಚಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸುತ್ತೇವೆ.

ಲಿಂಗಪೂಜೆಯ ವಿರೋಧಿಗಳು ದೇವಳದ ಆಡಳಿತಕ್ಕೆ

Posted by JAYAKIRANA Kirana on | 0 comments | Leave a comment...

ಧರ್ಮ ಭ್ರಷ್ಟಾಚಾರ
ಶ್ರೀಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಇದರ ಸಂಶೋಧನಾತ್ಮಕ ಐತಿಹಾಸಿಕ ಹಿನ್ನೆಲೆ ಮತ್ತು ಮರೆಯಾದ ಸಿದ್ದಿವಿನಾಯಕ ದೇವರು.
ಲೇಖಕ ಹಾಗೂ ಸಂಗ್ರಾಹಕ : ಡಾ. ಯಂ.ಯೆಸ್. ಅಚ್ಚುತ ಶರ್ಮಾ

ಈ ಸ್ವಾಮಿಗಳು ದೇವಸ್ಥಾನದ ಆಡಳಿತೆಯು ತಮ್ಮ ಪಾರಂ ಪರ್ಯ ಹಕ್ಕಿನದೆಂದು ಸ್ಥಿರಪಡಿಸಲು ಇಂಜಾಡಿಯಲ್ಲಿದ್ದ ತಮ್ಮ ಮುಂಚಿನ ವಾಸ್ತವ್ಯದ ಕುರುಹು ಕೂಡಾ ಸಿಕ್ಕದಂತೆ ಮಾಡಲು ಅಲ್ಲಿಯ ಬಾವಿ ಯನ್ನು ಸಹ ಮುಚ್ಚಿಸಿದರೆಂದು ತಿಳಿದು ಬರುತ್ತದೆ. ೧೮೨೮ರಲ್ಲಿ ಸೋಮೇ ಶ್ವರ ಭಟ್ಟರೆಂಬವರಿಂದ ಕುಮಾರ ಸೂಕ್ತ ಪಾರಾಯಣ ಉಪಾಧಿಯನ್ನು ಕೂಡ ಈ ಮಠದ ಸ್ವಾಮಿಗಳು ಅಡವಿಗೆ ಪಡಕೊಂಡು ತನ್ನ ಮುಂಚಿನ ಅಷ್ಟೋತ್ತರ ಉಪಾಧಿಯೊಂದಿಗೆ ಇದನ್ನು ಸೇರಿಸಿ ಅವುಗಳಿಗೆ ಸಿಕ್ಕುವ ಪಡಿ ಅಕ್ಕಿಯನ್ನು ದೇವಸ್ಥಾನದಲ್ಲಿ ಪಡೆಯುತ್ತಿದ್ದರೆಂದು ತಿಳಿದು ಬರುತ್ತದೆ.
೧೮೪೫ರಲ್ಲಿ ಸರಕಾರದ ಸನದಿನಿಂದ ದೇವಳದ ಆಡಳಿತೆ ಸ್ವಾಮಿಗ ಳಿಗೆ ಬಂದನಂತರ ಅವರು ಈಗ ವಾಸಿಸುವ ಮಠದ ಅಡಿಸ್ಥಳವನ್ನು ಹೆಬ್ಬಾರ ಸುಬ್ರಾಯರಿಂದ ಪಡಕೊಂಡು ಆಮೇಲೆ ಮಠವನ್ನು ಕಟ್ಟಿಸಿದ್ದಾ ಗಿದೆ. ಅದಕ್ಕೆ ಮುಂಚೆ ಆ ಸ್ಥಳವು ದೇವಳದಲ್ಲಿ ನಡೆಯುತ್ತಿದ್ದ ಸಮಾ ರಾಧನೆಯ ಊಟದ ಎಂಜಲೆಲೆಗಳನ್ನು ಬಿಸಾಡುವ ಸ್ಥಳವಾಗಿತ್ತಂತೆ. ಈ ಮಠಕ್ಕೆ ಈಗಿನ ಸುಬ್ರಹ್ಮಣ್ಯ ಗ್ರಾಮವೆಂದು ಕರೆಯಲ್ಪಡುವ ಮುಂಚಿನ ಕಸ್ಬಾ ಕುಕ್ಕೆ, ಸಂಕೇತ ಕುಕ್ಕೆ ಮತ್ತು ಕುಳುಕುಂದ ಗ್ರಾಮಗಳಲ್ಲಿಯೂ ಪೈಮಾಶಿಯಾದ ಯಾವ ಮೂಲಿ ವರ್ಗಗಳು ಇಲ್ಲದೇ ಇರುವುದರಿಂ ದಲೂ ಇಂಜಾಡಿ ಎಂಬಲ್ಲಿ ಮಾತ್ರ ಮಠದ ಮಾರಿಪತ್ತು (ಅಂದರೆ ಮಠ ಇರುವ ಸ್ಥಳ) ಎಂಬ ಸ್ವಲ್ಪ ಸ್ಥಳ ಮಾತ್ರ ಇದ್ದುದರಿಂದ ಈ ಮಠವು ಅನಾದಿಯಿಂದಲೂ ಇಲ್ಲಿ ಇದ್ದದ್ದಲ್ಲವೆಂದು ನಿಶ್ಚಯಿಸಬಹುದು.
ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೂ ಈ ಮಾಧ್ವ ಮಠಕ್ಕೂ ೧೮೪೫ರ ವರೆಗೆ ಏನೊಂದೂ ಸಂಬಂಧವಿರಲಿಲ್ಲ. ದೇವಳವು ಶೈವ ಸಂಬಂಧ ವಾಗಿದ್ದುದರಿಂದಲೂ ಈ ಸ್ವಾಮಿಗಳು ಮಾಧ್ವ ವೈಷ್ಣವ ತತ್ವವನ್ನು ಒಳ ಗೊಂಡದ್ದಾಗಿ ಇದ್ದುದರಿಂದಲೂ ದೇವಳಕ್ಕೆ ಅವರ ಸಂಬಂಧವಿರಲು ಕಾರಣವೂ ಇಲ್ಲ. ಈ ಸ್ವಾಮಿಗಳು ಶಿವ ವ ಶಿವಸಂಬಂಧವಾದ ಸುಬ್ರ ಹ್ಮಣ್ಯ, ಗಣಪತಿ ಇತ್ಯಾದಿ ದೇವರುಗಳ ಪೂಜೆ ಮಾಡುವುದಿಲ್ಲ. ಮತ್ತು ಆ ದೇವರುಗಳ ಪ್ರಸಾದ ತೀರ್ಥಗಳನ್ನು ಸೇವಿಸುವುದಿಲ್ಲ. ಲಿಂಗಪೂಜೆ ಇವರ ತತ್ವಕ್ಕೆ ವಿರೋಧ. ಅಲ್ಲದೆ ಶೈವಾಗಮ ವಿಚಾರವು ಇವರಿಗೆ ಗೊತ್ತಿಲ್ಲ. ಹೀಗಿರುತ್ತ ಈ ದೇವಳದ ಆಡಳಿತೆಗೆ ಇವರು ಏಕೆ ಬಂದರು ಎಂಬುದು ಪ್ರಶ್ನೆ. ಕಾರಣ - ಇವರಿಗೆ ಇಲ್ಲಿಯ ಪೂಜೆ ಮುಖ್ಯವಾಗಿರ ಲಿಲ್ಲವೆಂದು ತಿಳಿದು ಬರುತ್ತದೆ.
ಈ ಮಠದ ಸ್ವಾಮಿಗಳಲ್ಲಿ ಮೊದಲು ಈ ದೇವಳದ ಆಡಳಿತಕ್ಕೆ ಬಂದ ವಿದ್ಯಾರಾಜತೀರ್ಥ ಸ್ವಾಮಿಗಳೆಂಬವರು ದೇವಳಕ್ಕೆ ವರ್ಷಂಪ್ರತಿ ಬರುವ ಆದಾಯ ಮತ್ತು ಸರಕಾರದ ತಸದೀಕು ರೂಪಾ ೪೪೦೦ಗಳಿಗೆ ಆಶೆಪಟ್ಟು ತಮಗೆ ಆಡಳಿತೆ ಸಿಕ್ಕುವ ಕೆಲವು ವರ್ಷಗಳ ಹಿಂದೆಯೇ ದೇವಳದ ಆಡಳಿತೆಗಾಗಿ ಹೊಂಚುಹಾಕುತ್ತಾ ಇದ್ದರು. ಅವರು ದೇವ ಳದ ಪೌಳಿಯಲ್ಲಿ. ಉಪಾಧಿವಂತರಾಗಿ ವಾಸಿಸುತ್ತಿದ್ದುದರಿಂದ ದೇವ ಳದ ಎಲ್ಲಾ ವಿಷಯಗಳು ಆಗಿಂದಾಗ ಅವರಿಗೆ ಸಿಕ್ಕುತ್ತಿತ್ತು. ಆಡಳಿತೆ ಸಿಕ್ಕ ಬೇಕಾದರೆ ಊರಿನ ಖದಿಂ ಮೊಕ್ತೇಸರರಾದ ಅಲ್ಲಿಯ ಸ್ಮಾರ್ತ ಶಿವ ಬ್ರಾಹ್ಮಣ ಹೆಬ್ಬಾರರ ಒಪ್ಪಿಗೆ ವಿನಃ ಸಿಕ್ಕಲು ಸಾಧ್ಯವಿಲ್ಲವೆಂದೂ ಅವರು ಅರಿತಿದ್ದರು. ಆ ಸಮಯದಲ್ಲಿ ಮಹಾ ರಥೋತ್ಸವದ ವೇಳೆ ಒಬ್ಬ ಯಾತ್ರಿಕನು ರಥದ ಅಡಿಗೆ ಬಿದ್ದು ಮರಣಪಟ್ಟದ್ದರಿಂದ ಆಡಳಿತೆಯವ ರಾದ ಹೆಬ್ಬಾರರು ಸ್ವಲ್ಪ ಹೆದರಿದ ವಿಷಯವನ್ನು ತಿಳಿದು ಆಗಿನ ಸ್ವಾಮಿ ಗಳು ತನಗೂ ಪೂಜೆ ಮತ್ತು ತಂತ್ರ ಮಾಡುತ್ತಿರುವ ಅವರ ಮತದವರೇ ಆದ ಆಸ್ರಣ್ಣರುಗಳಿಗೂ ದೇವಳದ ಆಡಳಿತೆಯಲ್ಲಿ ಇವರೊಂದಿಗೆ ಸೇರಿಸಿ ಕೊಳ್ಳುವಂತೆ ಸರಕಾರದವರ ಮುಖಾಂತರ ಒಪ್ಪಿಗೆ ಕೊಟ್ಟಲ್ಲಿ ರಥದಡಿಗೆ ಬಿದ್ದು ಸತ್ತ ಯಾತ್ರಿಕನ ಮರಣದಿಂದ ಬರುವಂತಹ ಎಲ್ಲಾ ತೊಂದರೆಗ ಳನ್ನು ತಾನು ಪರಿಹರಿಸುವೆನೆಂದು ಆಗಿನ ಹೆಬ್ಬಾರರನ್ನು ನಂಬಿಸಿ ಅವರಿಂದ ಒಪ್ಪಿಗೆ ಪಡೆದುಕೊಂಡು ಹೆಬ್ಬಾರರೊಂದಿಗೆ ಆಡಳಿತೆಗೆ ಸೇರಿಕೊಂಡರು.
ಹಾಗೆ ಆಡಳಿತೆಗೆ ಪ್ರವೇಶಿಸಿದ ಸ್ವಾಮಿಗಳು, ಆಗ ಸುಬ್ರಹ್ಮಣ್ಯವು ಬಂಟ್ವಾಳ ತಾಲೂಕಿಗೆ ಸೇರಿದ್ದರಿಂದ ಆಗಿನ ಬಂಟ್ವಾಳ ತಹಶೀಲ್ದಾರ ರಂಗಪ್ಪ ಎಂಬವರನ್ನು ತಮ್ಮ ಕೈವಶ ಮಾಡಿಕೊಂಡು ಅವರ ಸಹಾಯದಿಂದ ಆಗಿನ ಜಿಲ್ಲಾ ಕಲೆಕ್ಟರ ಬ್ಲಾಯರ ದೊರೆಯವರನ್ನು ಸಮಜಾಯಿಸಿ ಏಳು ಜನ ಆಡ ಳಿತೆದಾರರ ಪೈಕಿ ಹೆಬ್ಬಾರರ ಕಡೆಯ ನಾಲ್ಕು ಜನರನ್ನು ಕೆಲವು ಕ್ಷುಲ್ಲಕ ಕಾರಣ ಕೊಟ್ಟು ಆಡಳಿತೆಯಿಂದ ವಿರಹಿತ ಪಡಿಸಿ ಸ್ವಾಮಿಗಳೂ ಮತ್ತು ಆಸ್ರ ಣ್ಣರುಗಳು ಮಾತ್ರ ಆಡಳಿತೆಯನ್ನು ವಹಿಸಿಕೊಂಡರೆಂದೂ ಆ ಮೂವ ರೊಳಗೆ ಸ್ವಾಮಿಗಳು ದೇವಳದ ಮುಖ್ಯಾಡಳಿತವನ್ನು ವಹಿಸಿಕೊಂಡರೆಂದು ತಿಳಿದು ಬರುತ್ತದೆ. ಆಗಿನ ಏಳು ಜನ ಆಡಳಿತೆದಾರರಲ್ಲಿ ೧) ಹೆಬ್ಬಾರ ನಾರ್ಣಪ್ಪ ೨) ಹೆಬ್ಬಾರ ನಾರಾಯಣ (ಇವರು ಊರ ಖದಿಂ ಮೊಕ್ತೇಸ ರರು) ೩) ಪಾಠಾಳಿ ರಾಮಪ್ಪ ೪) ಕೃಷ್ಣಾಚಾರ‍್ಯ (ಜತೆ ಮೊಕ್ತೇಸರರು) ೫)ವಿದ್ಯಾರಾಜತೀರ್ಥ ಸ್ವಾಮಿ ೬) ವೆಂಕಟಕೃಷ್ಣ ಆಸ್ರಣ್ಣ ೭) ಸುಬ್ರಾಯ ಆಸ್ರಣ್ಣ (ಈ ಮೂವರು ಸನದಿ ಮೊಕ್ತೇಸರರು) ಇವರಲ್ಲಿ ಮೊದಲಿನ ನಾಲ್ಕು ಜನರು ಸ್ಥಳೀಯ ಸ್ಮಾರ್ತ ಶಿವ ಬ್ರಾಹ್ಮಣರು. ಆ ಮೇಲಿನ ಮೂರು ಜನರು ಮಾಧ್ವ ಶಿವಳ್ಳಿಯವರು. ಈ ಮೂರು ಜನರಿಗೆ ಸನದು ಸಿಕ್ಕಿದ್ದು ೧೨೫೫ನೇ ಫಸಲಿ ಅಂದರೆ ೨೯-೧೧-೧೮೪೫ರಲ್ಲಿ ನೇಮಕವಾಗಿದ್ದಾಗಿರುತ್ತದೆ.
ಈ ಸನದಿ ಮೊಕ್ತೇಸರರ ನೇಮಕದ ವೇಳೆ ಸ್ಥಳದ ಸ್ಮಾರ್ತ ಶಿವ ಬ್ರಾಹ್ಮ ಣರಾದ ಅಲ್ಲಿಯ ಪಠೇಲ ಲಿಂಗಪ್ಪಯ್ಯ ಎಂಬವರು ಕೂಡ ಆಡಳಿತೆಗೆ ಅರ್ಜಿ ಸಲ್ಲಿಸಿದ್ದರು. ಊರಿನ ಯೋಗ್ಯರು ಯಾರೂ ಮುಂದೆ ಬಾರದೇ ಇದ್ದುದರಿಂದ ಸ್ವಾಮಿಗಳಿಗೂ ಪೂಜೆಯವರಿಗೂ ಸನದು ಕೊಟ್ಟಿದ್ದಾಗಿ ನೇಮ ಕದ ಹುಕುಂನಲ್ಲಿ ತಿಳಿದು ಬರುತ್ತದೆ. ಪಠೇ ಲಿಂಗಪ್ಪಯ್ಯನವರನ್ನು ಏಕೆ ನೇಮಕ ಮಾಡಲಿಲ್ಲ ಎಂಬ ವಿಷಯದಲ್ಲಿ ಸರಿಯಾದ ಕಾರಣ ಕೊಡಲು ಸಾಧ್ಯವಿಲ್ಲವೆಂದು ಕಲೆಕ್ಟರರ ಹುಕುಂನಲ್ಲಿ ತಿಳಿದು ಬರುವುದರಿಂದ ಅದರ ಕಾರಣವು ಆಗ ಜಿಲ್ಲೆಯಲ್ಲಿ ನಡೆದ ಕಲ್ಯಾಣಪ್ಪನ ಕಾಟುಕಾಯಿ ಎಂಬ ಬ್ರಿಟಿಷ್ ವಿರೋಧಿ ಸ್ವಾತಂತ್ರ ಸಮರದಲ್ಲಿ ಸ್ಥಳೀಯ ಸ್ಮಾರ್ತ ಶಿವ ಬ್ರಾಹ್ಮಣ ಸಮಾಜದವರು ಸೇರಿರುವ ಆಪಾದನೆಯು ಇದರಲ್ಲಿ ಕೂಡಿರಬಹುದೆಂದು ತಿಳಿಯಬೇಕಾಗುತ್ತದೆ.
ಆ ಸಮಯದಲ್ಲಿ ಸ್ಥಳದ ಸ್ಮಾರ್ತ ಶಿವ ಬ್ರಾಹ್ಮಣ ಸಂಕಪ್ಪ ಎಂಬವರು ದೇವಸ್ಥಾನದ ಮಣೆಗಾರರಾಗಿಯೂ, ಮಹದೇವ ಭಟ್ಟ ಮತ್ತು ಶೃಂಗೇರಿ ಶಾಖಾ ಮಠದ ಅರ್ಚಕ ಅಚ್ಚಣ್ಣ ಶಾಸ್ತ್ರಿ ಎಂಬವರು ದೇವಳದ ಉಪಾಧಿ ವಂತರಾಗಿದ್ದರು. ಮೊದಲಿನ ನಾಲ್ಕು ಜನ ಮೊಕ್ತೇಸರರು ವಜಾ ಆದೊ ಡನೆ ಮುಖ್ಯ ಆಡಳಿತೆದಾರರಾದ ಸ್ವಾಮಿಗಳು ತಮ್ಮ ಕರ್ತವ್ಯಕ್ಕೆ ವಿರೋಧ ಬಂದ ದೇವಳದ ಉಪಾಧಿವಂತರನ್ನೂ ಉದ್ಯೋಗಸ್ಥರನ್ನೂ ತೆಗೆದುಹಾಕಿ ಅವರಿಗೆ ಬೇಕಾದವರನ್ನೇ ದೇವಳದ ಕೆಲಸಗಳಿಗೆ ನೇಮಿಸಿಕೊಂಡರು. ಇದ ರಿಂದಾಗಿ ಅವರಿಗೆ ದೇವಳದ ಸರ್ವಾಧಿಕಾರವು ಬಂದಂತಾಯಿತು.
ಅವರ ಈ ರೀತಿಯ ಅಧಿಕಾರದಿಂದ ಅವರು ದೇವರಿಗೆ ಭಕ್ತಾದಿಗಳು ತಂದ ಕಾಣಿಕೆಗಳನ್ನು ಬಲಾತ್ಕಾರದಿಂದ ಎರಡು ಪಾಲು ಮಾಡಿಸಿ ಒಂದು ಭಾಗವನ್ನು ತಮ್ಮ ಮಠಕ್ಕೂ ಕೊಡಿಸುವಂತೆ ಮಾಡಿಸುತ್ತಿದ್ದರು. ಕೊಡಲು ಒಪ್ಪದಿದ್ದವರಿಗೆ ಮಾಡಿಸಲ್ಪಡುವ ಸುಬ್ರಹ್ಮಣ್ಯನ ಸೇವೆಯನ್ನು ಸರಿಯಾಗಿ ಮಾಡಿಸದೆ ಭಕ್ತಾದಿಗಳ ಮನಸ್ಸನ್ನು ನೋಯಿಸುತ್ತಿದ್ದರೆಂದು ತಿಳಿದು ಬರು ತ್ತದೆ. ಅಲ್ಲದೆ ದೇವಳದಲ್ಲಿ ತಯಾರಾಗುತ್ತಿದ್ದ ಪ್ರಸಾದ ಮತ್ತು ದೇವಳಕ್ಕೆ ಬರುತ್ತಿದ್ದ ಬಲಿಪಾಡು ಅಕ್ಕಿ ವಗೈರೆಗಳಲ್ಲಿನ ಹೆಚ್ಚಿನ ಅಂಶವನ್ನು ಮಠಕ್ಕೆ ಸಂಬಂಧಪಟ್ಟವರಿಗೆ ಕೊಟ್ಟು ಇತರರಿಗೆ ಅಲ್ಪಸ್ವಲ್ಪ ಕೊಡುತ್ತಾ ಬರಲು ಆರಂಭಿಸಿದರು.
ಈ ರೀತಿಯ ಸ್ವಾಮಿಗಳ ದುರಾಡಳಿತೆಯನ್ನು ಕಂಡು ಅವರ ಜತೆ ಮೊಕ್ತೇಸರರುಗಳಾದ ಆಸ್ರಣ್ಣರುಗಳು ಮತ್ತು ಆಗಿನ ದೇವಳದ ಮಣೆಗಾರ ಸಂಕಪ್ಪ ಎಂಬವರು ಇವರ ದುರಾಡಳಿತ ವಿಚಾರವನ್ನು ಸರಕಾರಕ್ಕೆ ತಿಳಿಸಿ ದ್ದರಿಂದ ಆಗಿನ ಕಲೆಕ್ಟರ್ ಥೋಮಸ್ ಲೋಬಿಯರ್ ಎಂಬವರು ದೇವ ಳಕ್ಕೆ ಸಲ್ಲುತ್ತಿದ್ದ ರೂ. ೪,೪೦೦ ತಸದೀಕು ಹಣವನ್ನು ಸ್ವಾಮಿಗಳಿಗೆ ಕೊಡಿ ಸುವುದನ್ನು ನಿಲ್ಲಿಸಿ ಬಹುಮತ ಪ್ರಕಾರ ಇತರ ಎರಡು ಜನ ಮೊಕ್ತೇಸರ ರಿಗೆ ಕೊಡುವಂತೆ ಹುಕುಂ ಕಳುಹಿಸಿ ವ್ಯವಸ್ಥೆ ಮಾಡಿಸಿದರು.
ಇದರಿಂದಾಗಿ ಸ್ವಾಮಿಗಳ ನಿರಂಕುಶ ಪ್ರಭುತ್ವಕ್ಕೆ ಸ್ವಲ್ಪ ಆತಂಕವುಂಟಾ ಯಿತು. ಇದು ೧೮೫೦ನೇ ಇಸವಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸ್ವಾಮಿಗಳು ಪುನಃ ಊರಿನ ಹೆಬ್ಬಾರರ ವಿಶ್ವಾಸವನ್ನು ಗಳಿಸಲು ಅವರಿಗೆ ಪುನಃ ಆಡಳಿತೆಯನ್ನು ಕೊಡಿಸುವುದು ಮಾತ್ರವಲ್ಲದೆ ಅವರ ಆರು ಉಪಾ ಧಿಗಳನ್ನು ಅವರಿಗೆ ಕೊಡಿಸಿ ದೇವಳದ ಮಣೆಗಾರತನವನ್ನು ಅವರ ಮತದವರಿಗೆ ಕೊಡಿಸಿ ಹೆಬ್ಬಾರರುಗಳನ್ನು ತಮ್ಮ ಸಹಾಯಕರನ್ನಾಗಿ ಮಾಡಿ ಕೊಂಡರು. ಆದರೆ ಹೆಬ್ಬಾರರ ಆಡಳಿತೆಯು ಸರಕಾರದವರ ಮುಖಾಂ ತರ ಹುಕುಂ ಪ್ರಕಾರ ಬಾರದೆ ಇದ್ದುದರಿಂದ ಅದು ಸಿಂಧುವಾಗಿ ಪರಿ ಗಣಿಸಲ್ಪಡಲಿಲ್ಲ. (ಗಿiಜe ಔ.S. ೨೭, ೧೮೮೬ ಇxibiಣs, ಗಿ, ಗಿI, ಗಿII) ಅಂತು ಸ್ವಾಮಿಗಳು ಸರಕಾರದವರ ಮನಸ್ಸನ್ನು ಸರಿಪಡಿಸಿ ಕೆಲವು ವರ್ಷ ಗಳ ನಂತರ ಪುನಃ ತಸದೀಕು ಹಣ ತನಗೆಯೇ ಸಿಕ್ಕುವ ಹಾಗೆ ಮಾಡಿ ಕೊಂಡರು.

20-03-2012

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಬಾರ್‌ಗೆ ಜನ ಬೇಕು ೯೮೪೫೮೪೭೯೯೧.
ಕದ್ರಿ: ೪೦೭ & ಪಿಕಪ್‌ಗೆ ಡ್ರೈವರ್ ಬೇಕು ೯೪೪೮೪೮೪೭೯೯.
ಕಟೀಲು: ಮನೆ ಕೆಲಸಕ್ಕೆ ಹೆಂಗಸರು ಬೇಕು ೮೭೪೮೦೩೪೬೦೯.
ತೊಕ್ಕೊಟ್ಟು: ಬಾರ್&ರೆಸ್ಟೋರೆಂಟ್‌ಗೆ ವೇಟರ್ ಬೇಕು ೯೭೪೨೨೮೫೪೮೫.
ಮಂಗಳೂರು: ಕೊಟ್ಟಾರದ ಪೆಟ್ರೋಲ್ ಬಂಕ್‌ಗೆ ಯುವತಿಯರು ಬೇಕು ೯೪೮೦೪೩೮೭೩೩.
ಕಂಕನಾಡಿ: ಡ್ರೈವರ್ ಬೇಕು ೯೧೪೧೫೮೨೦೧೯.
ಫಳ್ನೀರ್: ಸಂಸ್ಥೆಗೆ ಯುವತಿ ಬೇಕು ೯೧೪೧೮೫೦೬೩೨.
ಮಂಗಳೂರು: ಕ್ವಾಲಿಸ್‌ಗೆ ಚಾಲಕ ಬೇಕು ೯೪೪೮೦೫೨೨೯೧.
ಬಿಜೈ: ಲಾಡ್ಜ್‌ಗೆ ರೂಂ ಬಾಯ್ ಬೇಕು ೯೯೮೦೯೮೦೭೩೧.
ಮಂಗಳೂರು: ಆಫೀಸ್‌ಗೆ ಕ್ಲೀನಿಂಗ್ ಕೆಲಸಕ್ಕೆ ಜನ ಬೇಕು ೮೯೦೪೨೧೧೯೯೮.
ಮೂಡಬಿದ್ರೆ: ಟೈಲರ್ ಅಂಗಡಿಗೆ ಟೈಲರ್ ಬೇಕು ೯೭೪೧೧೩೧೩೭೧.
ಮಂಗಳೂರು: ಮಿಲಾಗ್ರೀಸ್‌ನ ಸ್ಟುಡಿಯೋಗೆ ಯುವತಿ ಬೇಕು ೯೮೪೫೨೦೩೩೪೮.
ಸುರತ್ಕಲ್: ಟಯರ್ ಪಂಕ್ಚರ್ ಅಂಗಡಿಗೆ ಜನ ಬೇಕು ೯೮೪೫೧೨೧೬೩೧.
ಮಂಗಳೂರು: ಟೈಲರಿಂಗ್ ಶಾಪ್‌ಗೆ ಸ್ಟಿಚ್ಚಿಂಗ್ ಗೊತ್ತಿರುವ ಲೇಡಿ ಟೈಲರ್ ಬೇಕು ೯೫೯೧೦೪೫೮೮೧.
ಕೊಟ್ಟಾರ: ಫರ್ನಿಚರ್ ಅಂಗಡಿಗೆ ಜನ ಬೇಕು ೯೩೪೨೨೫೬೪೯೪.
ಮಂಗಳೂರು: ಬಲ್ಮಠ ಬುಕ್‌ಸ್ಟಾಲ್‌ಗೆ ಜನ ಬೇಕು ೨೪೨೪೭೪೪.
ಮಂಗಳೂರು: ಅಟೋಮೊಬೈಲ್ ಸಂಸ್ಥೆಗೆ ಯುವಕರು ಬೇಕು ೯೪೪೮೧೫೯೧೩೦.
ಮಂಗಳೂರು: ಎಲೆಕ್ಟ್ರಿಕಲ್ ಶಾಪಿಗೆ ಜನ ಬೇಕು ೯೮೪೫೦೮೫೮೮೧.
ಉಡುಪಿ: ಫೋರ್‌ವೀಲರ್ ಸರ್ವಿಸ್ ಸ್ಟೇಶನ್‌ಗೆ ಜನ ಬೇಕು ೯೪೮೧೫೦೮೭೭೭
ಮಂಗಳೂರು: ರಿಯಲ್ ಎಸ್ಟೇಟ್ ಆಫೀಸ್‌ಗೆ ಲೇಡಿ ಸ್ಟಾಪ್ ಬೇಕು ೯೯೮೦೨೪೯೨೪೫.
ಮಂಗಳೂರು: ಮಿನಿ ಆಫ್‌ಸೆಟ್ ಪ್ರಿಂಟರ್ ಬೇಕು ೨೨೧೧೦೫೦.
ಅಳಕೆ: ಪೈಂಟ್ ಸಂಸ್ಥೆಗೆ ಕಂಪ್ಯೂಟರ್ ಎಕೌಂಟ್ಸ್ ಗೊತ್ತಿರುವ ಲೇಡಿ ಬೇಕು ೯೮೪೫೫೫೦೪೪೨.
ಬೈಕಂಪಾಡಿ: ಸ್ಕ್ರೀನ್‌ಪ್ರಿಂಟರ್, ಕಂಪೋಸಿಟರ್ ಬೇಕು ೯೯೬೪೦೨೩೮೭.
ಬಲ್ಮಠ: ಬುಕ್‌ಶಾಪ್‌ಗೆ ಡೆಲಿವರಿ ಬಾಯ್ಸ್ ಬೇಕು ೨೪೨೪೭೪೪
ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಪ್ಲೈವುಡ್ ಟ್ರಿಪ್ ಮಾಡುವ ಡ್ರೈವರ್ ಬೇಕು ೯೮೪೫೮೫೦೫೦೦
ಫಳ್ನೀರ್: ಬಟ್ಟೆ ಅಂಗಡಿಗೆ ಜನ ಬೇಕು ೯೧೪೧೮೫೦೬೩೨.
ಮಂಗಳೂರು: ೨ ವೀಲರ್ ಗೊತ್ತಿದ್ದವರು ಬೇಕು ೯೮೪೫೦೮೦೬೬೯.
ಕಟೀಲ್: ಸ್ಟುಡಿಯೋಗೆ ಜನ ಬೇಕು ೯೭೪೦೫೪೩೧೧೦.

20-03-2012

Posted by JAYAKIRANA Kirana on | 0 comments | Leave a comment...

ಮೇಷ : ವ್ಯಾಪಾರ ವ್ಯವಹಾರದಲ್ಲಿ ಪೈಪೋಟಿ ಇರುತ್ತದೆ.
ವೃಷಭ : ವಿರೋಧಿಗಳಿಗೆ ಹಿನ್ನಡೆಯಾಗುವುದು.
ಮಿಥುನ : ಆರ್ಥಿಕ ಪರಿಸ್ಥಿತಿಯು ತೃಪ್ತಿಕರವಾಗಿರುತ್ತದೆ.
ಕರ್ಕಾಟಕ : ಹಿರಿಯರಿಂದ ಸಂತೋಷ ದೊರೆಯತ್ತದೆ.
ಸಿಂಹ : ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ.
ಕನ್ಯಾ : ವಸ್ತ್ರಾಭರಣ ಖರೀದಿ ಮಾಡುತ್ತೀರಿ.
ತುಲಾ : ಪ್ರಯಾಣದಲ್ಲಿ ಬೇಸರದ ಘಟನೆ ನಡೆಯುತ್ತದೆ.
ವೃಶ್ಚಿಕ : ವಾಹನ ಖರೀದಿಯಿಂದ ಲಾಭ ಇರುತ್ತದೆ.
ಧನು: ಉದ್ಯೋಗದಲ್ಲಿ ರೀಕ್ಷಿಸಿದಂತೆ ಫಲ ದೊರೆಯದು.
ಮಕರ : ವಿರೋಧಿಗಳಿಂದ ತೊಂದರೆ ಇದೆ.
ಕುಂಭ : ವ್ಯಾಪಾರದಲ್ಲಿ ಲಾಭ ಕಡಿಮೆ ಇರುತ್ತದೆ.
ಮೀನ : ವಿರೋಧಿಗಳೊಡನೆ ಮಾತಿನ ಚಕಮಕಿ ನಡೆಯುತ್ತದೆ.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4042) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2496) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (262) ln (1) lnews (3669) lokayukta (3) madikeri (1) maleria (1) mangalore (579) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (411) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (271) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (797) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (949) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (46) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)