16-03-2012

Posted by JAYAKIRANA Kirana on Thursday, 15 March 2012 | 0 comments | Leave a comment...

  • ಮಂಗಳೂರು: ಅಟೋಮೊಬೈಲ್ ಸಂಸ್ಥೆಗೆ ಯುವಕರು ಬೇಕು ೯೪೪೮೧೫೯೧೩೦.
  • ಮಂಗಳೂರು: ಎಲೆಕ್ಟ್ರಿಕಲ್ ಶಾಪಿಗೆ ಜನ ಬಏಕು ೯೮೪೫೦೮೫೮೮೧.
  • ಉಡುಪಿ: ಫೋರ್‌ವೀಲರ್ ಸರ್ವಿಸ್ ಸ್ಟೇಶನ್‌ಗೆ ಜನ ಬೇಕು ೯೪೮೧೫೦೮೭೭೭
  • ಮಂಗಳೂರು: ರಿಯಲ್ ಎಸ್ಟೇಟ್ ಆಫೀಸ್‌ಗೆ ಲೇಡಿ ಸ್ಟಾಪ್ ಬೇಕು ೯೯೮೦೨೪೯೨೪೫.
  • ಮಂಗಳೂರು: ಮಿನಿ ಆಫ್‌ಸೆಟ್ ಪ್ರಿಂಟರ್ ಬೇಕು ೨೨೧೧೦೫೦.
  • ಅಳಕೆ: ಪೈಂಟ್ ಸಂಸ್ಥೆಗೆ ಕಂಪ್ಯೂಟರ್ ಎಕೌಂಟ್ಸ್ ಗೊತ್ತಿರುವ ಲೇಡಿ ಬೇಕು ೯೮೪೫೫೫೦೪೪೨.
  • ಬೈಕಂಪಾಡಿ: ಸ್ಕ್ರೀನ್‌ಪ್ರಿಂಟರ್, ಕಂಪೋಸಿಟರ್ ಬೇಕು ೯೯೬೪೦೨೩೮೭.
  • ಬಲ್ಮಠ: ಬುಕ್‌ಶಾಪ್‌ಗೆ ಡೆಲಿವರಿ ಬಾಯ್ಸ್ ಬೇಕು ೨೪೨೪೭೧೧೪
  • ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಪ್ಲೈವುಡ್ ಟ್ರಿಪ್ ಮಾಡುವ ಡ್ರೈವರ್ ಬೇಕು ೯೮೪೫೮೫೦೫೦೦
  • ಫಳ್ನೀರ್: ಬಟ್ಟೆ ಅಂಗಡಿಗೆ ಜನ ಬೇಕು ೯೧೪೧೮೫೦೬೩೨.
  • ಮಂಗಳೂರು: ೨ ವೀಲರ್ ಗೊತ್ತಿದ್ದವರು ಬೇಕು ೯೮೪೫೦೮೦೬೬೯.
  • ಕಟೀಲ್: ಸ್ಟುಡಿಯೋಗೆ ಜನ ಬಏಕು ೯೭೪೦೫೪೩೧೧೦.
  • ಕುತ್ತಾರ್‌ಪದವು: ಟೈಲರ್ ಶಾಪ್‌ಗೆ ಲೇಡೀಸ್ ಟೈಲರ್ ಮತ್ತು ಫಿನಿಶಿಂಗ್‌ಗೆ ಯುವತಿಯರು ಬೇಕು ೯೪೮೦೩೪೭೬೯೯.
  • ಮಂಗಳೂರು: ಕಾರು ಚಾಲಕ ಬೇಕು ೯೩೪೨೫೧೯೧೫೮.
  • ಬೈಕಂಪಾಡಿ: ಕಂಪೋಸಿಟರ್ ಬೇಕು ೭೪೧೧೦೯೦೩೧೩.
  • ಮಂಗಳೂರು: ಕಂಪೆನಿಗೆ ಪಿಯುಸಿ ಆದವರು ಬೇಕು ೯೭೪೩೩೯೦೭೯೭.
  • ಮಂಗಳೂರು: ಸ್ಟುಡಿಯೋಗೆ ಡಿಟಿಪಿ ಗೊತ್ತಿರುವ ಯುವಕರು ಬೇಕು ೯೮೪೫೨೦೩೩೪೮.
  • ಮಂಗಳೂರು: ಬೇಕರಿಗೆ ಸೇಲ್ಸ್‌ಬಾಯ್ಸ್ & ಗರ್ಲ್ಸ್ ಬೇಕು ೯೪೪೮೨೩೯೯೨೯.
  • ಮೂಡಬಿದ್ರೆ: ಹೊಟೇಲಿಗೆ ದೋಸೆವಾಲಾ ಹೆಲ್ಪರ್ ಬೇಕು ೯೮೪೫೯೮೨೬೨೫.
  • ಕಾರ್ಕಳ : ಬಾರ್&ರೆಸ್ಟೋರೆಂಟ್‌ಗೆ ವೇಟರ್ & ಕಿಚನ್ ಹೆಲ್ಪರ್ ಬೇಕು ೯೬೩೨೦೦೬೯೨೩.
  • ಮಂಗಳೂರು: ಹೊಟೇಲಿನ ಎಲ್ಲಾ ಕೆಲಸ ತಿಳಿದಿರುವ ಜನ ಬೇಕು ೯೪೮೨೯೬೯೫೩೧.
  • ಮಂಗಳೂರು: ಹರ್ಬಲ್ ಲೈಫ್ ಡಿಸ್ಟ್ರಿ ಬ್ಯೂಟರ್‌ಗೆ ಜನ ಬೇಕು ೯೯೦೨೧೯೨೬೨೩.
  • ಮಂಗಳೂರು: ಅಕ್ಕಿ ರೊಟ್ಟಿ ಕೆಲಸ ಗೊತ್ತಿರು ವವರು ಬೇಕು ೯೮೪೪೪೩೨೪೦೯.
  • ಮಂಗಳೂರು: ಗ್ಯಾಸ್ ಶಾಪ್‌ಗೆ ಲೇಡಿ ಸ್ಟಾಫ್ ಬೇಕು ೨೪೩೮೭೪೭
  • ಮಂಗಳೂರು: ರೈಲ್ವೆಯಲ್ಲಿ ಕೆಲಸಕ್ಕೆ ಜನ ಬೇಕು ೯೬೮೬೫೧೮೬೧೦.
  • ತಲಪಾಡಿ: ರಬ್ಬರ್ ಫ್ಯಾಕ್ಟರಿಗೆ ಎಕೌಂಟೆಂಟ್ ಬೇಕು ೯೩೪೨೦೪೫೧೪೦.
  • ಮಂಗಳೂರು: ಕ್ಯಾಂಟಿನ್‌ಗೆ ಹೆಲ್ಪರ್ ಬೇಕು ೯೯೭೨೯೩೧೦೬೭.

16-03-2012

Posted by JAYAKIRANA Kirana on | 0 comments | Leave a comment...

  • ಮೇಷ : ಪ್ರಯತ್ನಿಸಿದ ಶುಭ ಕಾರ್ಯಗಳು ಯಶಸ್ವಿಯಾಗುವುದು.
  • ವೃಷಭ : ಉದ್ಯೋಗ ವ್ಯವಹಾರದಲ್ಲಿ ಲಾಭ ಕಡಿಮೆ ಇರುತ್ತದೆ.
  • ಮಿಥುನ : ಅಗ್ನಿಯಿಂದ ಅಪಾಯವಾಗುವ ಸಾಧ್ಯತೆ ಇದೆ.
  • ಕರ್ಕಾಟಕ : ಸಾಲ ಪಡೆಯುವ ಯತ್ನ ಮಾಡುತ್ತೀರಿ.
  • ಸಿಂಹ : ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ.
  • ಕನ್ಯಾ : ಹಿರಿಯ ಬಂಧುಗಳಿಂದ ಶುಭ ಸುದ್ದಿಯನ್ನು ಕೇಳುವಿರಿ.
  • ತುಲಾ : ಗೆಳೆಯರ ಆಗಮನದಿಂದ ಸಂತಸ ಉಂಟಾಗಲಿದೆ.
  • ವೃಶ್ಚಿಕ : ಶುಭ ಕೆಲಸಗಳನ್ನು ಮುಂದುವರಿಸಬಹುದು.
  • ಧನು : ಉದ್ಯೋಗದಲ್ಲಿ ನೆಮ್ಮದಿ ಇರುತ್ತದೆ.
  • ಮಕರ: ಕೆಲಸಗಳು ಸರಾಗವಾಗಿ ನಡೆಯುತ್ತದೆ.
  • ಕುಂಭ : ಪ್ರಯಾಣದಲ್ಲಿ ನಷ್ಟ ಉಂಟಾಗುವ ಸಂಭವ ಇದೆ.
  • ಮೀನ : ಮನೆಯಲ್ಲಿ ಆಗಾಗ ಜಗಳವಾಗಲಿದೆ.

ಜೀಪ್‌ಗೆ ಕಾರ್ ಡಿಕ್ಕಿ: ವಿದ್ಯಾರ್ಥಿಗಳ ಸಹಿತ ಹನ್ನೊಂದು ಮಂದಿ ಗಾಯ

Posted by JAYAKIRANA Kirana on | 0 comments | Leave a comment...


ಮಂಜೇಶ್ವರ: ಶಾಲಾ ವಿದ್ಯಾರ್ಥಿ ಗಳ ಜೀಪಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಸೇರಿ ಒಟ್ಟು ಹನ್ನೊಂದು ಮಂದಿ ಗಾಯಗೊಂಡ ಘಟನೆ ರಾ. ಹೆ.ಯ ಉಪ್ಪಳದಿಂದ ವರದಿಯಾಗಿದೆ. ಗಾಯಾಳು ವಿದ್ಯಾರ್ಥಿಗಳು ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಮಂಗಳೂರಿನ ಕಾಲೇಜು ವಿದ್ಯಾರ್ಥಿನಿಯರಾದ ಉಪ್ಪಳ ನಿವಾಸಿಗಳಾದ ಸೋಯಾ, ಹೀನಾ, ಅರ್ತಿ ಹಾಗೂ ಶಾಲಾ ವಿದ್ಯಾರ್ಥಿ ಗಳಾದ ಅಯಿಷಾ, ಅಮ್ನ, ದ್ವಿತೀಯ ಪಿಯುಸಿ ವಿದ್ಯಾರ್ಥಿ ಅತಿಕಾ, ಜೀಪು ಚಾಲಕ ಉಪ್ಪಳ ನಿವಾಸಿ ಅಷ್ಬಾಕ್ ಗಾಯಗೊಂಡಿದ್ದು ಇವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೀಗ ಚೇತರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಕಾರಿನಲ್ಲಿದ್ದ ಯುಸುಫ್, ಅಬ್ದುಲ್ ಖಾದರ್, ಶಾಹುಲ್ ಹಮೀದ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾ ಗಿದ್ದಾರೆ. ನಿನ್ನೆ ಬೆಳಿಗ್ಗೆ ಶಾಲಾ ವಿದ್ಯಾ ರ್ಥಿನಿಯರನ್ನು ಕರೆದುಕೊಂಡು ಹೋಗುತ್ತಿದ್ದಾಗ ಕಾಸರಗೋಡು ಕಡೆಯಿಂದ ಬಂದ ಕಾರು ಉಪ್ಪಳ ಶಾಲೆ ಬಳಿ ಜೀಪಿಗೆ ಡಿಕ್ಕಿ ಹೊಡೆದಿದ್ದು ಈ ರಭಸಕ್ಕೆ ಜೀಪು ರಸ್ತೆ ಬದಿಗೆ ಮಗುಚಿ ಬಿದ್ದಿದೆ. ತಕ್ಷಣ ಸ್ಥಳಕ್ಕಾಗಮಿಸಿದ ನಾಗರಿಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ವಿಟ್ಲ: ಮರ ಸಾಗಾಟ; ಓರ್ವ ಪೊಲೀಸ್ ವಶಕ್ಕೆ

Posted by JAYAKIRANA Kirana on | 0 comments | Leave a comment...


ವಿಟ್ಲ: ಇಲ್ಲಿಯ ಚಂದಳಿಕೆ ಎಂಬಲ್ಲಿ ಅಕ್ರಮವಾಗಿ ಕೇರಳಕ್ಕೆ ಮರದ ದಿಮ್ಮಿ ಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಪತ್ತೆ ಹಚ್ಚಿದ ವಿಟ್ಲ ಪೊಲೀಸರು ಮಾಲು ಸಮೇತ ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಸಾಲೆತ್ತೂರು ಸಮೀಪದ ಪಾತೂರು ನಿವಾಸಿ ಇಬ್ರಾಹಿಂ ಅವರ ಪುತ್ರ ಅಬ್ದುಲ್ ಬಶೀರ್(೩೩) ಬಂಧಿತ ಆರೋಪಿ. ಈತ ಕುಂಡಡ್ಕ ಕಡೆಯಿಂದ ವಿಟ್ಲ ಮಾರ್ಗವಾಗಿ ಕೇರಳಕ್ಕೆ ೮ ತುಂಡು ಮಾವಿನ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ವಿಟ್ಲ ಠಾಣಾಧಿಕಾರಿ ರಕ್ಷಿತ್ ಎ.ಕೆ ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ಪ, ಜನಾರ್ದನ ಎಂಬವರು ಪತ್ತೆ ಹಚ್ಚಿ ಆರೋಪಿ ಹಾಗೂ ಲಾರಿ ಸಹಿತ ಮರದ ದಿಮ್ಮಿ ಗಳನ್ನು ವಶಕ್ಕೆ ಪಡೆದುಕೊಂಡಿ ದ್ದಾರೆ.
ಮರದ ಒಟ್ಟು ಮೌಲ್ಯ ೪೦ ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಳಿತೊಟ್ಟು ಪಂಚಾಯತ್ ಸದಸ್ಯನ ಕೊಲೆ: ಪುತ್ರನಿಂದಲೇ ಕೃತ್ಯ

Posted by JAYAKIRANA Kirana on | 0 comments | Leave a comment...

ಉಪ್ಪಿನಂಗಡಿ: ಕುಟುಂಬ ಕಲಹಕ್ಕೆ ಸಂಬಂಧಿಸಿ ಗೋಳಿತೊಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಸದಸ್ಯರನ್ನು ಅವರ ಪುತ್ರನೇ ರೀಪಿನಿಂದ ಬಡಿದು ಕೊಲೆಗೈದಿರುವ ಘಟನೆ ಗೋಳಿತೊಟ್ಟುವಿನಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.
ಸಂಜೀವ ಗೌಡ(೫೫) ಹತ್ಯೆಯಾ ದವರು. ಇವರು ಗೋಳಿತೊಟ್ಟು ಗ್ರಾ.ಪಂನ ಸದಸ್ಯರಾಗಿದ್ದು ಹಾಗೂ ಮಾಜಿ ಅಧ್ಯಕ್ಷರೂ ಆಗಿದ್ದರು. ಸಮಾಜಸೇವೆಯಲ್ಲಿ ತನ್ನನ್ನು ಸದಾ ತೊಡಗಿಸಿಕೊಂಡಿದ್ದ ಇವರು ಮನೆ ಮಂದಿಯೊಂದಿಗೆ ಸರಿಯಾಗಿ ವರ್ತಿ ಸುತ್ತಿರಲಿಲ್ಲ. ಇದರಿಂದ ತಾಯಿ ಹಾಗೂ ಮೂವರು ಗಂಡು ಮಕ್ಕಳು ಮನೆಯಲ್ಲಿ ತಂದೆ ವಿರುದ್ಧವಾಗಿಯೇ ಇದ್ದರು. ದಿನನಿತ್ಯ ಕುಡಿದು ಬಂದು ಸಂಜೀವ ಗೌಡರು ಜಗಳ ನಡೆಸು ತ್ತಿದ್ದರು. ಅಲ್ಲದೆ ಆಸ್ತಿ ವಿಚಾರಕ್ಕೂ ಸಂಬಂಧಿಸಿ ಮೂವರು ಮಕ್ಕಳು ತಂದೆ ಯಲ್ಲಿ ಅಸಮಾಧಾನಗೊಂಡಿದ್ದರು. ನಿನ್ನೆ ತಡರಾತ್ರಿ ಕುಡಿದು ಬಂದ ಸಂಜೀವ ಗೌಡ ಜಗಳವಾಡಲು ಶುರು ಹಚ್ಚಿದ್ದರು. ಇದರಿಂದ ಆಕ್ರೋಶ ಗೊಂಡ ಮಗ ಗಂಗಾಧರ ಗೌಡ ಕೈಗೆ ಸಿಕ್ಕ ರೀಪಿನಿಂದ ತಲೆಗೆ ಬಡಿದು ಹತ್ಯೆ ನಡೆಸಿದ್ದಾನೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡ ಸಂಜೀವ ಗೌಡ ಸ್ಥಳದಲ್ಲೇ ಸಾವನ್ನಪ್ಪಿದರು. ಆರೋಪಿ ಪುತ್ರ ನನ್ನು ಸ್ಥಳೀಯರು ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಿಂದೆಯೂ ಹಲ್ಲೆ ನಡೆಸಿದ್ದರು
ದಿನನಿತ್ಯ ಜಗಳವಾಡುತ್ತಿದ್ದ ಸಂಜೀವ ಗೌಡರಿಗೆ ಈ ಹಿಂದೆಯೂ ಮನೆಮಂದಿ ಸೇರಿ ಹಲ್ಲೆ ನಡೆಸಿದ್ದರೆಂದು ತಿಳಿದುಬಂದಿದೆ. ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿವಾಹಿತ ಮಹಿಳೆಯ ಕತ್ತು ಸೀಳಿ ಪ್ರಿಯಕರನಿಂದ ಕೊಲೆ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ವಿವಾಹಿತ ಮಹಿಳೆಯನ್ನು ಪ್ರಿಯಕರನೋರ್ವ ಕತ್ತುಕುಯ್ದು ಹತ್ಯೆಗೈದಿರುವ ಘಟನೆ ಕಲ್ಲೂರು-ಕಡಲಂದ್ರ ರಸ್ತೆಯಲ್ಲಿ ನಿನ್ನೆ ಸಂಜೆ ವೇಳೆ ನಡೆದಿದ್ದು, ಆರೋಪಿ ಯನ್ನು ಪೊಲೀಸರು ಕೆಲವೇ ಗಂಟೆ ಗಳಲ್ಲಿ ಬಂಧಿಸಿದ್ದಾರೆ. ಕಾಸರಗೋಡು ಮೂಲದ ಶ್ರೀಲತಾ (೩೮) ಹತ್ಯೆಯಾದ ಮಹಿಳೆ.
ಘಟನೆ ವಿವರ: ಕಾಸರಗೋಡು ಮೂಲದ ಶ್ರೀಲತಾ ಎಂಟು ವರ್ಷಗಳ ಹಿಂದೆ ಪತಿಯಿಂದ ದೂರವಾಗಿ ಕಲ್ಲೂರು ಎಂಬಲ್ಲಿ ಬಾಡಿಗೆ ಮನೆ ಯಲ್ಲಿ ತನ್ನ ಆರೂವರೆ ವರ್ಷದ ಮಗುವಿನೊಂದಿಗೆ ವಾಸವಿದ್ದಳು. ಅಲ್ಲಿ ಬ್ಯೂಟಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಲತಾಳಿಗೆ ರಿಂಶಾದ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು. ದ್ವಿಚಕ್ರ ವಾಹನವನ್ನು ಹೊಂದಿರುವ ಶ್ರೀಲತಾ ಕೆಲಸ ಮುಗಿಸಿ ದಿನಾ ರಿಂಶಾದ್ ನೊಂದಿಗೆ ಮನೆಗೆ ತೆರಳುತ್ತಿದ್ದಳು. ಕಳೆದ ಕೆಲ ದಿನಗಳಿಂದ ಇಬ್ಬರ ನಡುವೆ ವಿರಸವುಂಟಾಗಿತ್ತು.
ಕಾರಣ ಶ್ರೀಲತಾ ಬೇರೊಬ್ಬನೊಂದಿಗೆ ಸಂಪರ್ಕವಿರಿಸಿಕೊಂಡಿದ್ದಳು ಎಂದು ಇಬ್ಬರ ನಡುವೆ ಜಗಳವಾಗಿತ್ತು. ನಿನ್ನೆ ಸಂಜೆ ಮನೆ ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ರಿಂಶಾದ್ ನೊಂದಿಗೆ ಮನೆ ಕಡೆಗೆ ತೆರಳುತ್ತಿದ್ದಳು. ಈ ಸಂದರ್ಭ ಹಿಂದಿನಿಂದ ಕುಳಿತಿದ್ದ ರಿಂಶಾದ್ ಚೂರಿಯಿಂದ ಶ್ರೀಲತಾ ಕೊರಳನ್ನು ಕೊಯ್ದು ಜನನಿಬಿಡ ಪ್ರದೇಶವಾದ ಕಲ್ಲೂರು-ಕಡಲಂದ್ರ ನಡುರಸ್ತೆಯಲ್ಲೇ ಎಸೆದು ಅದೇ ವಾಹನದಲ್ಲಿ ಪರಾರಿಯಾಗಿದ್ದನು. ಈ ಬಗ್ಗೆ ಮಾಹಿತಿಯರಿತ ಸ್ಥಳೀಯ ಠಾಣಾ ಪೊಲೀಸರು ಕೂಡಲೇ ನಾಕಾಬಂಧಿ ನಡೆಸಿ ಆರೋಪಿ ರಿಂಶಾದ್ ನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಹತ್ಯೆಯಾದ ಶ್ರೀಲತಾ ಹಲವು ಮಲಯಾಳಿ ಚಿತ್ರಗಳಲ್ಲಿಯೂ ಬ್ಯೂಟಿಷಿಯನ್ ಕೆಲಸ ನಿರ್ವಹಿಸಿದ್ದರು.

ಜೇನುನೊಣ ಕಡಿತಕ್ಕೆ ಮೃತ್ಯು

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಜೇನುನೊಣ ಕಡಿತಕ್ಕೊಳಗಾಗಿ ಮದ್ರಸಾ ಶಿಕ್ಷಕ ದಾರುಣ ವಾಗಿ ಮೃತಪಟ್ಟಿರುವ ಘಟನೆ ಇಲ್ಲಿ ನಡೆದಿದೆ.
ನಿನ್ನೆ ಬೆಳಿಗ್ಗೆ ಸುಮಾರಿಗೆ ಇಲ್ಲಿನ ಚೀಮೇನಿ ಎಂಬಲ್ಲಿ ಈ ಘಟನೆ ಸಂಭ ವಿಸಿದ್ದು, ಚೀಮೇನಿ ಅತ್ತೋಟಿಯ ಲ್ಲಿರುವ ದರ್ಸೌ ಶಾಲಾ ಅಧ್ಯಾಪಕ ಶಾಹುದ್ ಹಮೀದ್ ಮೌಲವಿ(೬೦) ಕಡಂದೇಲು ಜಾತಿಯ ಜೇನುನೊಣದ ಕಡಿತಕ್ಕೊಳಗಾಗಿ ಮೃತಪಟ್ಟವರು.
ಮದ್ರಸಾದಿಂದ ಬೆಳಿಗ್ಗೆ ತನ್ನ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ರಸ್ತೆ ಬದಿಯ ಮರದಲ್ಲಿ ಬೃಹದಾಕಾರವಾಗಿ ಗೂಡುಕಟ್ಟಿದ್ದ ಕಡಂದೇಲು ಎಂಬ ಜೇನುನೊಣ ಒಂದೇ ಸವನೆ ಹಾರಾಡಿ ಶಾಹುಲ್ ಹಮೀದ್ ಮೇಲೆ ಕಚ್ಚಲಾರಂಭಿಸಿದವು. ಓಡಲೆತ್ನಿಸಿದರೂ ಬೆನ್ನತ್ತಿ ಕಚ್ಚಿದ ಪರಿಣಾಮ ರಸ್ತೆಯಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಕಡಿತಕ್ಕೊಳಗಾದ ಇತರ ಐವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತ ಕೊಲೆ: ನಾಲ್ವರು ವಶಕ್ಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಣ್ಣೂರು ಬೋರು ಗುಡ್ಡೆ ನಿವಾಸಿ ರೆಹಮಾನ್ ಯಾನೇ ಸಣ್ಣ ಪುತ್ತ ಎಂಬಾತನನ್ನು ತಲವಾರಿನಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀ ಸರು ನಾಲ್ವರನ್ನು ವಶಕ್ಕೆ ತೆಗೆದು ಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಗಾಂಜಾ ವ್ಯವಹಾರಕ್ಕೆ ಸಂಬಂ ಧಿಸಿ ಸ್ನೇಹಿತರ ನಡುವೆ ಉದ್ಭವಿಸಿರುವ ವೈಷಮ್ಯವೇ ಕೊಲೆಗೆ ಕಾರಣ ಎನ್ನ ಲಾಗಿದೆ. ಈ ಸಂಬಂಧ ಇರ್ಫಾನ್, ಇಮ್ರಾನ್, ಅಶ್ರಫ್ ಮತ್ತು ಸದ್ದು ಎಂಬವರನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಸಿಸಿಬಿ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕೊಲೆ ಯಾಗಿರುವ ಸಣ್ಣ ಪುತ್ತನ ಮೊಬೈಲ್ ಕರೆಯನ್ನು ಆಧರಿಸಿ ಪ್ರಾಥಮಿಕ ತನಿಖೆಯನ್ನು ಕೈಗೆತ್ತಿ ಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಲಭ್ಯವಾಗಿರುವ ಮಾಹಿತಿಯನ್ನು ಮುಂದಿರಿಸಿಕೊಂಡು ವಿಚಾರಣೆ ಮುಂದುವರಿದಿದೆ.
ಪುತ್ತನ ಕೊಲೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಶಂಕೆ ಇದೆಯಾದರೂ ಇದರ ಹಿಂದೆ ಒಂದು ಗ್ಯಾಂಗ್ ಕೆಲಸ ಮಾಡಿರುವ ಬಗ್ಗೆ ನಿಖರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಇತ್ತೀಚಿನ ದಿನದಲ್ಲಿ ಪುತ್ತ ಕೆಲವೊಂದು ಮಂದಿಯ ಜೊತೆ ವೈಷಮ್ಯವನ್ನು ಹೊಂದಿದ್ದು ಇದರ ಲಾಭವನ್ನು ಪಡೆದುಕೊಂಡು ಆತನನ್ನು ಗ್ಯಾಂಗೊಂದು ಮುಗಿಸಿದೆ ಎನ್ನುತ್ತಿದೆ ಪೊಲೀಸ್ ಮೂಲಗಳು. ಹೀಗಾಗಿ ಈಗ ವಶಕ್ಕೆ ತೆಗೆದುಕೊಂಡಿರುವವರು ಈ ಪ್ರಕರಣದ ಸೂತ್ರಧಾರಿಗಳು ಅಲ್ಲ ಎನ್ನುವ ಮಾತೂ ಕೇಳಿ ಬರುತ್ತಿದೆ.
ಗಾಂಜಾ ವ್ಯವಹಾರದಿಂದಲೇ ಕುಖ್ಯಾತಿಯನ್ನು ಗಳಿಸಿಕೊಂಡಿದ್ದ ಪುತ್ತ ಅದೇ ಗಾಂಜಾದಿಂದ ಬದುಕು ಸಾಗಿಸುತ್ತಿದ್ದು ಕೊನೆಗೆ ಅದೇ ಗಾಂಜಾ ವಿಷಯವಾಗಿಯೇ ಬದುಕು ಕಳೆದುಕೊಂಡ ಎನ್ನುತ್ತಾರೆ ಸ್ಥಳೀಯರು.

ಕಳವು ಆರೋಪಿ ಸೆರೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಪುತ್ತೂರಿನ ಅಟೋಗ್ಯಾಸ್ ಏಜೆನ್ಸಿ ಸಂಸ್ಥೆಯಿಂದ ಕೆಲ ದಿನಗಳ ಹಿಂದೆ ನಡೆಸಲಾಗಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯೊಬ್ಬನನ್ನು ಪುತ್ತೂರು ನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಾಸರಗೋಡಿನ ರಾಜೇಶ್ ಬಂಧಿತ ಆರೋಪಿ. ಈತ ಕೆಲದಿನಗಳ ಹಿಂದೆ ಅಟೋಗ್ಯಾಸ್ ಏಜೆನ್ಸಿ ಅಂಗಡಿ ಯಿಂದ ತಾಮ್ರದ ವಸ್ತುಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಇಲ್ಲಿ ಅಳವಡಿಸಲಾ ಗಿದ್ದ ಸಿಸಿ ಕ್ಯಾಮರಾ ಸೆರೆಹಿಡಿದಿತ್ತು ಇದು ಕಳ್ಳನ ಪತ್ತೆಗೆ ಸಹಕಾರಿಯಾಯಿತು ಎಂದು ತಿಳಿದು ಬಂದಿದೆ.

ಮೋಹನನ ‘ಸೈನೆಡ್ ವಿಚಾರಣೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮೋಹನ ಕುಮಾರ ನಡೆದಿರುವ ಸರಣಿ ಕೊಲೆ ಪ್ರಕರಣದ ತನಿಖೆ ನಡೆಸಿದ ಪುತ್ತೂರು ಉಪವಿ ಭಾಗದ ಆಗಿನ ಎಎಸ್ಪಿ ಚಂದ್ರಗುಪ್ತ ನಿನ್ನೆ ಹಾಗೂ ಇಂದು ಬಂಟ್ವಾಳ ಪರಿಮಾರಿನ ಅನಿತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ತ್ವರಿತಗತಿ ನ್ಯಾಯಾಲಯದಲ್ಲಿ ಸಾಕ್ಷ ನುಡಿದಿದ್ದು, ಚಂದ್ರಗುಪ್ತರ ಹೇಳಿಕೆಗಳಿಗೆ ಮೋನಕುಮಾರ ಪಾಟಿ ಸವಾಲುಗಳ ಸುರಿಮಳೆಯನ್ನೇ ಹರಿಸಿದ ಘಟನೆ ನಿನ್ನೆ ನ್ಯಾಯಾಲಯದಲ್ಲಿ ನಡೆದಿದೆ.
೨೦೦೯ರ ಅ.೧೦ರಂದು ಬಿ.ಸಿ. ರೋಡ್ ಬಸ್ ನಿಲ್ದಾಣದಿಂದ ಮೋಹನಕುಮಾರ ಅನಿತಾಳನ್ನು ಕರೆದುಕೊಂಡು ಹೋಗಿದ್ದಾನೆ ಎಂಬು ದನನ್ನು ಕಂಡಿರುವುದಾಗಿ ಹೇಳಿಕೆ ನೀಡುವ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ದ್ದೀರಿ ಎಂಬುದೂ ಸೇರಿದಂತೆ ಪೊಲೀ ಸರು ತನಿಖೆಯೇ ನಡೆಸಿಲ್ಲ ಎಂಬ ರ್ಥದ ೨೫ಕ್ಕೂ ಹೆಚ್ಚು ಪ್ರಶ್ನೆಗಳನ್ನು ಮೋಹನಕುಮಾರ ಚಂದ್ರಗುಪ್ತರನ್ನು ಪ್ರಶ್ನಿಸಿದ. ತನ್ನ ಬಂಧನದ ಬಳಿಕ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶ ನೀಡಿಲ್ಲ, ತಂದ ೨೦೦೯ರ ಅ.೧೭ರಂದು ವಶಪಡಿಸಿಕೊಳ್ಳಲಾದ ಮೊಬೈಲ್ ಅ.೩೦ರ ಬಳಿಕ ಸ್ವಚ್ಛ ಮಾಡಲಾಗಿದೆ ಎಂದು ಮೋಹನ ಕುಮಾರ ಆರೋಪಿಸಿದ್ದಾನೆ. ಸೈನೆಡ್ ಬಳಕೆಯ ವಿಷಯದಲ್ಲಿ ತಾನು ತಪ್ಪಿತಸ್ಥನಲ್ಲ ಎಂಬುದು ಸಾಬೀತು ಪಡಿಸುವ ಮುಂದಾಲೋಚನೆಯೊಂ ದಿಗೆ ಮೋಹನಕುಮಾರ ಪೂರಕ ಪ್ರಶ್ನೆಗಳನ್ನು ಕೇಳಿದ್ದಾನೆ.
 ಮುಹಮ್ಮದ್‌ನ ಕೆಮಿಕಲ್ ಮಾರಾಟದ ಲೈಸೆನ್ಸ್ ೨೦೦೦ರ ಇಸವಿ ಯಲ್ಲಿ ಅವಧಿ ಮೀರಿತ್ತು. ಚಿನ್ನಾಭರಣಕ್ಕೆ ಪಾಲಿಶ್ ಮಾಡುವ ರಸಾಯನಿಕ ಮಾರಾಟ ಮಾಡುವ ಲೈಸೆನ್ಸ್ ಮಾತ್ರ ಅವರಲ್ಲಿ ಇತ್ತು ಇದನ್ನು ನೀವು ಪರಿಶಿಲನೆ ಮಾಡಿದ್ದೀರಾ ಎಂದು ಪ್ರಶ್ನಿಸಿದಾಗ ಚಂದ್ರಗುಪ್ತ ತಬ್ಬಿಬ್ಬಾದ ಘಟನೆಯೂ ಜರುಗಿತು.
ಬಂಟ್ವಾಳ ಪರಿಮಾರಿನ ಅನಿತಾ ಮೃತದೇಹ ಹಾಸನ ಬಸ್ ನಿಲ್ದಾಣದ ಬಳಿಯ ಶೌಚಾಲಯದಲ್ಲಿ ಮೊದಲ ಬಾರಿ ನೋಡಿದ್ದ ಶೌಚಾಲಯ ಶುಚಿಗೊಳಿಸುವ ರಾಧಾ ಎಂಬಾಕೆ ನಿನ್ನೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದಳು. ಅನಿತಾ ಕಾಣೆ ಪ್ರಕರಣದ ತನಿಖೆ ನಡೆಸಿ ವಿಷಯ ಬೆಳಕಿಗೆ ಬರಲು ಪ್ರಮುಖ ಕಾರಣರಾದ ಬಂಟ್ವಾಳ ಪೊಲೀಸ್ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ನಂಜುಂಡೇ ಗೌಡರು ಸಾಕ್ಷಿ ನುಡಿದರು.

ಮಲಗಿದ್ದಲ್ಲೇ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಿಕರ್ನಕಟ್ಟೆ-ಕೈಕಂಬದಲ್ಲಿ ಯುವಕನೋರ್ವ ಮಲಗಿದ್ದಲ್ಲೇ ಸಾವನ್ನಪ್ಪಿದ್ದು, ವಿಷಾಹಾರ ಸೇವನೆಯಿಂದ ಸಾವು ಸಂಭವಿಸಿರಬೇಕೆಂದು ಶಂಕಿಸಲಾಗಿದೆ.
ಸಕಲೇಶಪುರದ ನಿವಾಸಿ ಸಂಕೇತ್(೧೮) ಮೃತಪಟ್ಟವನು. ಈತನ ಜೊತೆ ಸೂರಜ್ ಹಾಗೂ ಬಾಸಿಲ್ ಎಂಬವರೂ ಇದ್ದು, ಅಸ್ವಸ್ಥಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಬೈಂದೂರಿನ ವಿಠಲ ಆಚಾರ್(೫೮) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಬಿಜೂರು ಗ್ರಾಮದ ಮುರುಗೋಳಿ ಹಕ್ಲು ಎಂಬಲ್ಲಿನ ಕೊಂಕಣ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಅವರು ೧೦ ವರ್ಷಗಳಿಂದ ಕಾಲುನೋವಿನಿಂದ ಬಳಲುತ್ತಿದ್ದುದರಿಂದ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ರೈಲು ಡಿಕ್ಕಿ: ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು: ಪಾಂಡೇಶ್ವರದ ಗೂಡ್ಸ್ ರೈಲು ಮಾರ್ಗದಲ್ಲಿ ನಿನ್ನೆ ಅಂದಾಜು ೫೦ ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಗೂಡ್ಸ್ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಮೃತರ ವಿವರ ಲಭ್ಯವಾಗಿಲ್ಲ. ರೈಲ್ವೇ ಪೊಲೀ ಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಮದ್ಯ ವಶ: ಓರ್ವ ಸೆರೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಅರಂತೋಡಿನ ಕಬ್ಬಿನಡ್ಕ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಜಯರಾಮ ಮಡಿವಾ (೫೭) ಎಂಬಾತನನ್ನು ಗುರುವಾರ ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲ ಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಯೊಂದಿಗೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಪುಟ್ಟಣ್ಣ ಗೌಡ ಎಂಬವರು ದಾಳಿ ವೇಳೆ ಪರಾರಿಯಾಗಿದ್ದಾರೆ.

ಅನ್ಯಮತೀಯರ ಮನೆಯಲ್ಲಿ ಪರಿಶಿಷ್ಟ ಯುವತಿ: ದೂರು

Posted by JAYAKIRANA Kirana on | 0 comments | Leave a comment...

ಸುಳ್ಯ: ಐವರ್ನಾಡು ಗ್ರಾಮದ ಖಂಡಿಗಮೂಲೆ ಎಂಬಲ್ಲಿ ಮುಸ್ಲಿಂ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವತಿಯೊಬ್ಬಳು ರಾತ್ರಿಯೂ ಅಲ್ಲೇ ಉಳಿಯುತ್ತಿದ್ದಾಳೆ ಎಂದು ಬಜರಂಗದಳದವರು ಪೊಲೀ ಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ವಿಚಾರಣೆ ನಡೆಸಿ ಯುವತಿಯನ್ನು ಆಕೆಯ ಮನೆಗೆ ತೆರಳುವಂತೆ ಸೂಚಿಸಿದ್ದಾರೆ.
ಮನೆಯಲ್ಲಿ ಹಿರಿಯರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ಆರೈಕೆಗೆ ಪೆರಾಜೆ ಗ್ರಾಮದ ಯುವತಿಯನ್ನು ಕೆಲಸಕ್ಕೆ ನಿಲ್ಲಿಸಲಾ ಗಿತ್ತು ಎಂದು ಮನೆಯವರು ಹೇಳಿದ್ದಾರೆ.

ಪುಡಿ ರೌಡಿ ಕೊಲೆಯತ್ನ: ಆರೋಪಿಗೆ ನ್ಯಾಯಾಂಗ ಬಂಧನ

Posted by JAYAKIRANA Kirana on | 0 comments | Leave a comment...

ವಿಟ್ಲ: ಇಲ್ಲಿನ ಕಂಬಳಬೆಟ್ಟು ನಿವಾಸಿ ಪುಡಿ ರೌಡಿ ಅಶ್ರಫ್ ಎಂಬಾತನ ಕೊಲೆಗೆ ಯತ್ನಿಸಿ ಬಂಧಿತನಾಗಿರುವ ಆರೋಪಿ ಸಾದಿಕ್ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
 ಹಣದ ವಿಚಾರಕ್ಕೆ ಸಂಬಂಧಿಸಿ ಬುಧವಾರದ ಅಶ್ರಫ್ ಎಂಬಾತನಿಗೆ ಸಾದಿಕ್ ಚೂರಿ ಇರಿದು ಗಂಭೀರವಾಗಿ ಗಾಯಗೊಳಿಸಿದ್ದ. ವಿಟ್ಲ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು, ನಿನ್ನೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿದ್ಯಾರ್ಥಿಗೆ ತಂಡದಿಂದ ಹಲ್ಲೆ

Posted by JAYAKIRANA Kirana on | 0 comments | Leave a comment...

ಪುತ್ತೂರು: ಕಾಲೇಜು ವಿದ್ಯಾರ್ಥಿ ಯೊಬ್ಬನಿಗೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುಕ್ಕಾಜೆ ಎಂಬಲ್ಲಿ ಗುರುವಾರ ನಡೆದಿದೆ.
ಪಡುವನ್ನೂರು ಗ್ರಾಮದ ಕುಕ್ಕಾಜೆ ನಿವಾಸಿ ಶಫೀಕ್(೨೦) ಹಲ್ಲೆಗೊಳಗಾದ ವಿದ್ಯಾರ್ಥಿ. ಈತನಿಗೆ ಸ್ಥಳೀಯರಾದ ಇಬ್ರಾಹಿಂ, ಪಾರೆ ಹಮೀದ್, ಅಬ್ದುಲ್ಲಾ ಮೌಲವಿ ಮತ್ತು ಅಬ್ದುಲ್ ರಹಿಮಾನ್ ಸೇರಿಕೊಂಡು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಸಂಪ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಏಶ್ಯಾಕಪ್: ಇಂದು ಬಾಂಗ್ಲಾ ಹುಲಿಗಳ ಜೊತೆ ಭಾರತ ಸೆಣೆಸಾಟ

Posted by JAYAKIRANA Kirana on | 0 comments | Leave a comment...

ಢಾಕಾ: ಏಶ್ಯಾ ಕಪ್‌ನಲ್ಲಿ ಇಂದು ಬಲಿಷ್ಠ ಭಾರತ ಹಾಗೂ ಯುವ ಆಟಗಾರರಿಂದ ಕೂಡಿರುವ ಬಾಂಗ್ಲಾದೇಶ ನಡುವೆ ಹಣಾಹಣಿ ಅಹರ್ನಿಶಿಯಾಗಿ ನಡೆಯಲಿದೆ. ಅತ್ತ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಭಾರತ ವಿರುದ್ಧ ಸೋಲುಂಡಿರುವ ಬಾಂಗ್ಲಾ ಈಗ ಅದರ ಹಗೆ ಸಾಧಿಸಲು ಪಣೊಟ್ಟಿದ್ದರೆ ಪಂದ್ಯವನ್ನು ಗೆದ್ದು ಫೈನಲ್‌ನತ್ತ ಮುಖಮಾಡುವ ಇರಾದೆ ಧೋನಿ ಪಡೆಯದ್ದು.
ಈಗಾಗಲೇ ಶ್ರೀಲಂಕಾ ವಿರುದ್ಧದ ಆರಂಭಿಕ ಪಂದ್ಯವನ್ನು ಗೆದ್ದುಕೊಂಡಿರುವ ಭಾರತ ಇಂದಿನ ಪಂದ್ಯದಲ್ಲಿ ಕೂಡ ವಿಜಯಿಯಾದರೆ ಆಗ ಫೈನಲ್ ಪ್ರವೇಶಿಸುವುದು ಖಚಿತವಾಗಲಿದೆ. ಅದ್ಭುತ ಫಾರ್ಮ್‌ನಲ್ಲಿರುವ ಭಾರತಕ್ಕೆ ಪಂದ್ಯ ಕಠಿಣವಾಗದೆ ಇದ್ದರೂ ಅತ್ತ ತಿರುಗೇಟು ನೀಡಲು ಬಾಂಗ್ಲಾ ಹರಸಾಹಸ ಪಡುತ್ತಿದೆ. ಕೊಹ್ಲಿ ಹಾಗೂ ವಿನಯ್ ಕುಮಾರ್ ಪಂದ್ಯದ ಟ್ರಂಪ್ ಕಾರ್ಡ್‌ಗಳು ಎಂದೇ ಹೇಳಬಹುದು. ಸಚಿನ್ ಈ ಪಂದ್ಯದಲ್ಲಾದರೂ ದಾಖಲೆಯ ಶತಕ ಸಿಡಿಸುವರೇ ಎಂಬುದು ಮಾತ್ರ ಚಿದಂಬರ ರಹಸ್ಯವೇ ಸರಿ. ಬಾಂಗ್ಲಾ ಕೂಡ ಧೋನಿ ಪಡೆಗೆ ತಕ್ಕ ಎದಿರೇಟು ನೀಡಲು ತಯಾರಿ ನಡೆಸಿದ್ದು, ಒಟ್ಟಿನಲ್ಲಿ ಪಂದ್ಯ ಕುತೂಹಲ ಕೆರಳಿಸಿದೆ.

ಇಂಡಿಯನ್ ವೇಲ್ಸ್: ಡಬಲ್ಸ್‌ನಿಂದ ಹೊರಬಿದ್ದ ಪೇಸ್-ಸ್ಟೆಪ್ನೆಕ್

Posted by JAYAKIRANA Kirana on | 0 comments | Leave a comment...

ಕ್ಯಾಲಿಫೋರ್ನಿಯಾ: ಇಲ್ಲಿ ನಡೆಯುತ್ತಿರುವ ಇಂಡಿ ಯನ್ ವೇಲ್ಸ್ ಟೆನಿಸ್ ಕೂಟದ ಡಬಲ್ಸ್‌ನಲ್ಲಿ ಲಿಯಾಂ ಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರ‍್ಯಾಡೆಕ್ ಸ್ಟೆಪ್ನೆಕ್ ಜೋಡಿಯ ಸವಾಲು ಅಂತ್ಯಗೊಂಡಿದೆ. ಸ್ಪೇಯ್ನ್ ನ ರಫೆಲ್ ನಡಾಲ್ ಹಾಗೂ ಮಾರ್ಕ್ ಲೊಪೆಜ್ ವಿರುದ್ಧ ೬-೩, ೭-೬(೫)ರ ನೇರ ಸುತ್ತಿನ ಸೋಲನ್ನು ಕಾಣುವ ಮೂಲಕ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದರು.
ಜುವಾನ್ ಮೊನಾಕೊ ಹಾಗೂ ನಿಶಿಕೊರಿ ವಿರುದ್ಧ ಬುಧವಾರ ನಡೆದಿದ್ದ ಹಣಾಹಣಿಯಲ್ಲಿ ಗೆಲುವು ಸಾಧಿಸುವ ಮೂಲಕ ಪೇಸ್ ಜೋಡಿ ಈ ಹಂತಕ್ಕೆ ಬಂದಿತ್ತು. ಈಗ ನೇರ ಅಂತರದ ಸೋಲನ್ನು ಕಾಣುವ ಮೂಲಕ ಹೊರಬಿದ್ದಿ ದ್ದಾರೆ. ರೋಹನ್ ಬೋಪಣ್ಣ ಹಾಗೂ ಭೂಪತಿ ಜೋಡಿ ಈಗಾಗಲೇ ಕೂಟದಿಂದ ಹೊರಬಿದ್ದಿದ್ದಾರೆ.

ಮಿಸ್ಬಾ-ಉಮರ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ

Posted by JAYAKIRANA Kirana on | 0 comments | Leave a comment...

ಬೋನಸ್ ಅಂಕದೊಂದಿಗೆ ಪಾಕ್ ಫೈನಲ್‌ಗೆ
ಮಿರ‍್ಪುರ್: ಏಶ್ಯಾ ಕಪ್‌ನಲ್ಲಿ ಪಾಕಿಸ್ತಾನದ ಮುಂದಿನ ಹಾದಿ ಸುಗಮಗೊಂಡಿದೆ. ಐಜಾಸ್ ಚೀಮಾ ನಡೆಸಿದ ಮಾರಕ ಬೌಲಿಂಗ್ ಪ್ರದರ್ಶ ನದ ಜೊತೆ ನಾಯಕ ಮಿಸ್ಬಾ ಉಲ್ ಹಕ್ ಹಾಗೂ ಉಮರ್ ಅಕ್ಮಲ್ ಪ್ರದರ್ಶಿಸಿದ ದಿಟ್ಟ ಬ್ಯಾಟಿಂಗ್ ಹೋರಾ ಟವು ಪಾಕ್‌ಗೆ ಆರು ವಿಕೆಟ್‌ಗಳ ಜಯದೊಂದಿಗೆ ಬೋನಸ್ ಅಂಕ ತಂದುಕೊಟ್ಟಿದ್ದು, ಈ ಮೂಲಕ ಕೂಟದ ಅಂತಿಮ ಹಂತಕ್ಕೆ ಪ್ರವೇಶಿಸಿದೆ. ಅತ್ತ ಸತತ ಎರಡು ಸೋಲಿನೊಂದಿಗೆ ಲಂಕಾ ತವರಿಗೆ ಮರಳುವ ಹಾದಿ ಯಲ್ಲಿದೆ.
ನಿನ್ನೆಯ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡಿತು. ಆದರೆ ವೇಗಿ ಚೀಮಾ ಹಾಗೂ ಸ್ಪಿನ್ನರ್ ಸೈಯೀದ್ ಅಜ್ಮಲ್ ಬೌಲಿಂಗ್ ಹೋರಾಟಕ್ಕೆ ಸಮರ್ಥ ಉತ್ತರ ನೀಡು ವಲ್ಲಿ ಲಂಕಾ ಎಡವಿತು. ಒಂದು ಹಂತದಲ್ಲಿ ಅಲ್ಪ ಮೊತ್ತಕ್ಕೆ ಆಲೌಟಾಗುವ ಲಕ್ಷಣ ತೋರಿದರೂ ಐದನೇ ವಿಕೆಟ್‌ಗೆ ೯೬ ರನ್‌ಗಳ ಜೊತೆಯಾಟ ನಡೆಸಿದ ತರಂಗಾ (೫೭) ಹಾಗೂ ಸಂಗಾಕ್ಕರ (೭೧) ಹೋರಾಟಯುತ ಮೊತ್ತವನ್ನು ಪೇರಿಸಲು ನೆರವಾದರು. ಅಂತಿಮ ವಾಗಿ ಲಂಕಾ ೪೫.೪ ಓವರ್‌ಗಳಲ್ಲೇ ೧೮೮ ರನ್‌ಗಳಿಗೆ ಆಲೌಟಾಯಿತು. ಚೀಮಾ ಹಾಗೂ ಅಜ್ಮಲ್ ಕ್ರಮಾವಾಗಿ ನಾಲ್ಕು ಹಾಗೂ ಮೂರು ವಿಕೆಟ್ ಪಡೆದರು. ಗುರಿ ಬೆನ್ನತ್ತಿದ್ದ ಪಾಕ್ ಕೇವಲ ೩೯.೫ ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೧೮೯ ರನ್ ಪೇರಿಸಿ ಜಯಸಾಧಿಸಿತು. ಆರಂಭಿಕ ಆಘಾತ ಕಂಡರೂ ಮಿಸ್ಬಾ (೭೨) ಹಾಗೂ ಉಮರ್ (೭೭) ನಾಲ್ಕನೇ ವಿಕೆಟ್‌ಗೆ ೧೫೨ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಸಿ.ಎಂ.ರಿಂದ ಸಾರ್ವಜನಿಕ ರಸ್ತೆ ಕಬಳಿಕೆ: ಲೋಕಾಯುಕ್ತಕ್ಕೆ ದೂರಲು ನಿರ್ಧಾರ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಕೊಟ್ಟಾರ ಚೌಕಿಯಲ್ಲಿ ತಲೆಯೆತ್ತಿರುವ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಮಾಲ ಕತ್ವದ ಕಟ್ಟಡದ ಪಾರ್ಕಿಂಗ್ ಸ್ಥಳಾವ ಕಾಶಕ್ಕಾಗಿ ಸಾರ್ವಜನಿಕ ರಸ್ತೆಯನ್ನೇ ಕಬಳಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದ ಜಿಲ್ಲಾ ಕಾಂಗ್ರೆಸ್, ಮಾಜಿ ಎಂಎಲ್‌ಎ ವಿಜಯಕುಮಾರ್ ಶೆಟ್ಟರ ನೇತೃತ್ವದಲ್ಲಿ ಪ್ರಕರಣವನ್ನು ಲೋಕಾಯುಕ್ತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.
ಬಂಗ್ರ ಕೂಳೂರು ಗ್ರಾಮದ ಕೊಟ್ಟಾರ ಚೌಕಿಯಲ್ಲಿ ರಾ.ಹೆ.೬೬ಕ್ಕೆ ತಾಗಿಕೊಂಡಿರುವ ಸ.ನಂ.೧೪/೭ಸಿ(ಪಿ೧)ರ ಪೈಕಿ ೧೪ ಸೆಂಟ್ಸ್ ಮತ್ತು ೧೪/೭ಸಿ(ಪಿ೨)ರ ಪೈಕಿ ೨ ಸೆಂಟ್ಸ್ ಜಾಗವನ್ನು ಎರಡು ವರ್ಷಗಳ ಹಿಂದೆ ಖರೀದಿಸಿರುವ ಮುಖ್ಯಮಂತ್ರಿ ಸದಾನಂದ ಗೌಡರು, ಅಲ್ಲಿ ಆರು ಮಹಡಿಗಳ ಸಂಕೀರ್ಣ ಕಟ್ಟಿಸಿ ಬಜಾಜ್ ಶೋರೂಂ ತೆರೆಯಲು ಗುತ್ತಿಗೆ ನೀಡಿದ್ದರು. ಶೋರೂಂನಲ್ಲಿ ವಾಹನಗಳನ್ನು ಪಾರ್ಕ್ ಮಾಡುವ ಉದ್ದೇಶಕ್ಕಾಗಿ ಪಕ್ಕದಲ್ಲೇ ಇರುವ ಆರು ಮೀ. ಅಗಲದ ಆಕಾಶಭವನ ಸಂಪರ್ಕ ರಸ್ತೆಯನ್ನು ಕಬಳಿಸಿದ್ದಾರೆ ಎನ್ನುವ ಆರೋಪವನ್ನು ಕಾಂಗ್ರೆಸ್ ಮಾಡಿದೆ.
ಭೂ ಪರಿವರ್ತನೆ ಆದೇಶ ಸಂಖ್ಯೆ ಸಿಡಿಎಸ್ ಎಲ್‌ಎನ್(೩) ಸಿಆರ್ ೧೭೫/೨೦೦೯-೧೦ ದಿ.೧೪.೭.೨೦೦೯ರ ನಕ್ಷೆಯಲ್ಲೂ ಸಾರ್ವಜನಿಕ ರಸ್ತೆಯನ್ನು ತೋರಿಸಲಾಗಿದೆ. ಹೀಗಾಗಿ ಮುಖ್ಯಮಂತ್ರಿ ರಸ್ತೆಯನ್ನು ಕಬಳಿಸಿರುವುದು ಸ್ಪಷ್ಟ. ಹೀಗಾಗಿ ರಸ್ತೆ ಕಬಳಿಕೆಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಪತ್ರಿಕೆಗೆ ಪ್ರತಿಕ್ರಿಯಿಸಿರುವ ವಿಜಯಕುಮಾರ್ ಶೆಟ್ಟರು, ಸದ್ರಿ ಸ್ಥಳದಲ್ಲಿ ಬಜಾಜ್ ಶೋರೂಂ ನಿರ್ಮಿಸಿ ಸೆಕ್ಯುರಿಟಿ ಗಾರ್ಡ್‌ಗಳ ರೂಂ ಕಟ್ಟಿಸಿದ್ದು, ಇಲ್ಲಿ ಸಂಚರಿಸುವ ಜನರನ್ನು ಬೆದರಿಸುವ ಪ್ರಯತ್ನವೂ ನಡೆಯುತ್ತಿದೆ. ಮೂಡಾ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ವಿಜಯಕುಮಾರ್ ಶೆಟ್ಟರು ತಿಳಿಸಿದ್ದಾರೆ.

ಎಂಐಟಿ ನಿರ್ದೇಶಕಿ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...


ಉಡುಪಿ: ಮಣಿಪಾಲದ ಎಂಐಟಿ ನಿರ್ದೇಶಕಿ ಡಾ.ಕುಂಕುಮ್ ಘರ್ಗ್ ಅವರ ರಾಜೀನಾಮೆಗೆ ಒತ್ತಾಯಿಸಿ ಎಂಐಟಿ ಕಟ್ಟಡಕ್ಕೆ ಕಲ್ಲೆಸೆದು ನಷ್ಟ ಉಂಟುಮಾಡಿದ ವಿದ್ಯಾರ್ಥಿಗಳು ಬಳಿಕ ಮಣಿಪಾಲ ವಿಶ್ವವಿದ್ಯಾನಿಲಯದ ಆಡಳಿತ ಕಚೇರಿ ಎದುರು ಭಾರೀ ಪ್ರತಿಭಟನಾ ಪ್ರದರ್ಶನ ನಡೆಸಿದ ಘಟನೆ ಗುರುವಾರ ಸಂಜೆ ಮಣಿಪಾಲದಲ್ಲಿ ನಡೆದಿದೆ.
ಮಾರ್ಚ್ ೧೦ ರಂದು ಎಂಐಟಿ ಕಾಲೇಜು ಬಸ್‌ನಿಂದ ಬಿದ್ದು ಕಾಲೇಜಿನ ಎರಡನೇ ವರ್ಷದ ಇಲೆಕ್ಟ್ರಿಕಲ್ಸ್ ಮತ್ತು ಇಲೆಕ್ಟ್ರೋನಿಕ್ಸ್ ವಿಭಾಗದ ವಿದ್ಯಾರ್ಥಿ ರಾಜಸ್ಥಾನದ ನಿಶಾಂತ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದನು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ನಿಶಾಂತ್ ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು.
 ಕಾಲೇಜು ಬಸ್‌ನಲ್ಲಿ ಲೆಕ್ಕಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಸಾಗಿಸುತ್ತಿರುವ ಕಾರಣ ವಿದ್ಯಾರ್ಥಿಗಳು ಮೆಟ್ಟಿಲಲ್ಲಿ ನಿಂತುಕೊಂಡು ಪ್ರಯಾಣಿಸುವ ಪರಿಸ್ಥಿತಿ ಉದ್ಭವಿಸಿತ್ತು. ಶನಿವಾರ ಇದೇ ರೀತಿಯಾಗಿ ಬಸ್‌ನ ಮೆಟ್ಟಿಲಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದಾಗ ಬಸ್‌ನಿಂದ ಬಿದ್ದು ವಿದ್ಯಾರ್ಥಿ ನಿಶಾಂತ್ ಗಾಯಗೊಂಡಿದ್ದ ಎಂದು ಹೇಳಲಾಗಿದೆ.
 ಈ ಘಟನೆಗೆ ಕಾಲೇಜು ನಿರ್ದೇಶಕಿ ಡಾ.ಕುಂಕುಮ್ ಘರ್ಗ್ ಅವರ ಬೇಜವಾಬ್ದಾರಿಯೇ ಕಾರಣ ಎಂಬ ಅಭಿಪ್ರಾಯಕ್ಕೆ ಬಂದ ವಿದ್ಯಾರ್ಥಿಗಳು ಗುರುವಾರ ಮಧ್ಯಾಹ್ನ ಘರ್ಗ್ ಅವರನ್ನು ಭೇಟಿಯಾಗಿ ವಿದ್ಯಾರ್ಥಿಗಳ ನೆಮ್ಮದಿಯ ಪ್ರಯಾಣಕ್ಕೆ ಹೆಚ್ಚುವರಿ ಬಸ್ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಘರ್ಗ್ ಅವರು ವಿದ್ಯಾರ್ಥಿಗಳ ಮನವಿಯನ್ನು ನಿರ್ಲಕ್ಷಿಸಿದ್ದೂ ಅಲ್ಲದೇ, ಬೈಯ್ದು ಕಳಿಸಿದ್ದರು ಎನ್ನಲಾಗಿದೆ.
ವಿದ್ಯಾರ್ಥಿಗಳ ಮನವಿಯನ್ನು ಅಲಕ್ಷಿಸಿದ್ದೂ ಅಲ್ಲದೇ, ಅವಮಾನ ಮಾಡಿ ದ್ದನ್ನು ಸಹಿಸದ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಎಂಐಟಿ ಎದುರು ಜಮಾಯಿಸಿ ಕಟ್ಟಡಕ್ಕೆ ಕಲ್ಲೆಸೆದು ಲಕ್ಷಾಂತರ ರು. ಮೌಲ್ಯದ ಗಾಜುಗಳನ್ನು ಮತ್ತು ಹೂಕುಂಡಗಳನ್ನು ನಾಶ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
 ಬಳಿಕ ಐದು ಸಾವಿರಕ್ಕೂ ಅಧಿಕ ಮಂದಿ ಇದ್ದ ವಿದ್ಯಾರ್ಥಿಗಳ ಸಮೂಹ ಮಣಿಪಾಲ ವಿವಿ ಆಡಳಿತ ಕಚೇರಿ ಮುಂದೆ ಜಮಾಯಿಸಿ ನಿರ್ದೇಶಕಿ ಕುಂಕುಮ್ ಘರ್ಗ್ ರಾಜೀನಾಮೆಗೆ ಆಗ್ರಹಿಸಿದರು. ಘೋಷಣೆಗಳನ್ನು ಕೂಗಿದರು. ಅಹಿತಕರ ಘಟನೆಗಳು ನಡೆದರೆ ವಿದ್ಯಾರ್ಥಿಗಳನ್ನು ಸ್ಥಳದಿಂದ ಚದುರಿಸಿ, ಮಣಿಪಾಲ ವಿವಿ ಹಾಗೂ ಸಂಬಂಧಿಸಿದವರಿಗೆ ರಕ್ಷಣೆ ನೀಡಲು ಮಣಿಪಾಲ ಠಾಣೆಯ ಪೊಲೀಸರು ಹಾಗೂ ಡಿಎಆರ್ ಪೋಲೀಸರು ವಿವಿ ಆವರಣದ ಹೊರಗಡೆ ಬಂದೋಬಸ್ತ್ ಏರ್ಪಡಿಸಿದ್ದರು.

ನಕ್ಸಲ್ ಆರೋಪದಡಿ ಬಂಧಿತ ವಿದ್ಯಾರ್ಥಿ ಬಿಡುಗಡೆಗೆ ಆಗ್ರಹ

Posted by JAYAKIRANA Kirana on | 0 comments | Leave a comment...

ಮಂಗಳೂರು: ಅಮಾಯಕ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ನಕ್ಸಲೀಯರ ಹೆಸರಲ್ಲಿ ಬಂಧಿಸಿದ ಆದಿವಾಸಿ ವಿದ್ಯಾರ್ಥಿ ವಿಠಲ ಮಲೆಕುಡಿಯರ ಬಿಡುಗಡೆಗೆ ಆಗ್ರಹಿಸಿ ನಿನ್ನೆ ನಗರದ ಡಿ.ಸಿ ಕಚೇರಿಯೆದುರು ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಸಿಪಿಐಎಂನ ರಾಜ್ಯ ಕಾರ‍್ಯದರ್ಶಿ ಬಿ.ಮಾಧವ ಮಾತನಾಡಿ ಪತ್ರಿಕೋ ದ್ಯಮ ವಿದ್ಯಾರ್ಥಿಯಾಗಿರುವ ವಿಠಲನ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿ ಸಿದರು. ಅಲ್ಲದೆ ವಿಠಲನನ್ನು ಬಂಧಿಸಿ ರುವ ಎಎನ್‌ಎಫ್ ಪೊಲೀಸರು ಶೀಘ್ರದಲ್ಲಿ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ಸಿಪಿಐಎಂ ನಾಯಕರಾದ ವಸಂತ್ ಆಚಾರಿ, ಬಿ.ಎಂ.ಭಟ್, ಸುನಿಲ್‌ಕುಮಾರ್ ಬಜಾಲ್, ಡಿ ವೈ ಎಫ್ ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತು ದಲಿತ ಸಂಘರ್ಷ ಸಮಿತಿಯ ನಾಯಕ ಲಿಂಗಪ್ಪ ನಂತೂರು ಉಪಸ್ಥಿತರಿದ್ದರು.

‘ಮೊಲಿಯ ಸ್ವಾರ್ಥ ರಾಜಕೀಯ’

Posted by JAYAKIRANA Kirana on | 0 comments | Leave a comment...

ಕಾರ್ಕಳ: ಮಾಜಿ ಮಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಯತ್ನಿಸಿ ವಿಫಲ ರಾಗಿದ್ದಾರೆಂದು ಮಧುಬಂಗಾರಪ್ಪ ಅವರು ಆರೊಪಿಸಿದ್ದಾರೆ.
ಉಪಚುನಾವಣೆಯ ಪ್ರಯುಕ್ತ ಕಾರ್ಕಳಕ್ಕೆ ಅಗಮಿಸಿದ ಮಧು ಬಂಗಾರಪ್ಪ ಅವರು ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಮಾಧ್ಯಮ ದವರೊಂದಿಗೆ ಮಾತಾನಾಡುತ್ತಾ, ಬಂಗಾರಪ್ಪ ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುಷ್ಠಾನಕ್ಕೆ ತಂದಿದ್ದ ಜನಪರ ಕಾರ್ಯಕ್ರಮಗಳನ್ನು ಬಿಜೆಪಿ ಸರಕಾರ ತನ್ನದೆಂದು ಬಿಂಬಿಸಲು ಹೊರಟಿದೆ. ಕುರ್ಚಿಗಾಗಿ ಹೋರಾಟವೇ ಆ ಪಕ್ಷದ ಸಾಧನೆ ಎಂದವರು ವ್ಯಂಗ್ಯವಾಡಿದರು.
ಬಂಗಾರಪ್ಪ ಅವರ ಕಂಡಿದ್ದ ಕನಸು ಇದೀಗ ಉತ್ತರಪ್ರದೇಶದಲ್ಲಿ ಅಧಿಕಾರ ಕ್ಕೇರಿದ ಯುವ ಮುಖ್ಯಮಂತ್ರಿ ಅಖಿ ಲೇಶ್ ಯಾದವ್ ಅವರು ಅನುಷ್ಠಾನಕ್ಕೆ ತರುವ ಭರವಸೆ ವ್ಯಕ್ತಪಡಿಸಿದರೆಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿ ದರು. ಡಿ.ಆರ್ ರಾಜು ಉಪಸ್ಥಿತರಿದ್ದರು.

ಮೇಲ್ಮನವಿ ಲೋಕಾಯುಕ್ತಕ್ಕೆ ಬಿಟ್ಟ ವಿಚಾರ: ಭಾರದ್ವಾಜ್

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯ ಮಂತ್ರಿ ಯಡಿ ಯೂರಪ್ಪ ವಿರುದ್ಧ ಎಫ್‌ಐಆರ್‌ನ್ನು ನ್ಯಾಯಾಲಯ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆ ಬಗ್ಗೆ ನಿರ್ಧಾರ ಮಾಡುವುದು ಲೋಕಾಯುಕ್ತ ಸಂಸ್ಥೆಗೆ ಬಿಟ್ಟಿದ್ದು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಈ ವಿಚಾರದಲ್ಲಿ ತಾವು ಹಸ್ತಕ್ಷೇಪ ನಡೆಸುವುದಾಗಲೀ, ಮಧ್ಯೆ ಪ್ರವೇಶಿಸುವ ಪ್ರಶ್ನೆಯೇ ಬರುವುದಿಲ್ಲ. ಎಲ್ಲವೂ ಲೋಕಾಯುಕ್ತ ಸಂಸ್ಥೆಗೆ ಸೇರಿದ್ದು. ಕಾನೂನಿನಂತೆ ಈ ಪ್ರಕರಣದ ಸಂಬಂಧ ಪ್ರಕ್ರಿಯೆಗಳು ನಡೆಯುತ್ತವೆ. ತಾವು ಇದರಲ್ಲಿ ಮಧ್ಯೆ ಪ್ರವೇಶಿಸುತ್ತೇವೆ ಎನ್ನುವ ವರದಿಗಳನ್ನು ಅವರು ಅಲ್ಲಗಳೆದರು.
ಇದಕ್ಕೂ ಮೊದಲು ಪೌಷ್ಠಿಕಾಂಶ ಆಹಾರಗಳಿಗೆ ಸಂಬಂಧಿಸಿದ ನ್ಯೂಟ್ರಾ ಸಮ್ಮೇಳನವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಭಾರತದಲ್ಲಿ ಆಯುರ್ವೇದ ಬಹು ಹಿಂದಿನಿಂದಲೂ ಇತ್ತು. ಆಗಿನ ಆರೋಗ್ಯ ವೈಭವ ಈಗ ಇಲ್ಲ. ಆರೋಗ್ಯಕ್ಕಾಗಿ ವೇದಗಳ ಕಾಲಕ್ಕೆ ಮರಳುವ ಅನಿವಾರ್ಯತೆ ಇದೆ. ಎಂದರು.

ಬೈಪಾಸ್ ಕಾಮಗಾರಿಗೆ ಸ್ಥಳೀಯರಿಂದ ತಡೆ

Posted by JAYAKIRANA Kirana on | 0 comments | Leave a comment...


ಪಡುಬಿದ್ರಿ: ವಿವಾದಿತ ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಬೈಪಾಸ್ ಕಾಮಗಾರಿಗೆ ಸ್ಥಳೀಯರು ತಡೆಯೊ ಡ್ದಿದ ಘಟನೆ ಬುಧವಾರ ಪಡುಬಿದ್ರಿ ಎರ್ಮಾಳು ಕಲ್ಸಂಕ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ೬೬ರ ಚತುಷ್ಪಥ ಕಾಮಗಾರಿಯ ವೇಳೆ ಪಡುಬಿದ್ರಿಯಲ್ಲಿ ಬೈಪಾಸ್ ಕಾಮ ಗಾರಿಗಾಗಿ ಸೇತುವೆ ನಿರ್ಮಾಣ ಕಾರ್ಯವನ್ನು ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ್ ಕನ್‌ಸ್ಟ್ರಕ್ಷನ್ ಸಂಸ್ಥೆ ಖಾಸಗಿ ವ್ಯಕ್ತಿ ಯೊಬ್ಬರಿಗೆ ಸೇರಿದ ಜಾಗದಲ್ಲಿ ಕಳೆದ ೧೦ ದಿನಗಳಿಂದ ಕಾಮಗಾರಿ ನಡೆಸು ತ್ತಿದೆ. ಕಾಮಗಾರಿ ನಡೆಸುವ ಸ್ಥಳ ತಮ್ಮ ಖಾಸಗಿ ಜಾಗದಲ್ಲಿ ನಡೆಸುತ್ತಿರುವುದನ್ನು ಅರಿತ ಜಾಗದ ಮಾಲೀಕರು ಹಾಗೂ ಸ್ಥಳೀಯರು, ಯಾವುದೇ ನೋಟಿಸ್ ನೀಡದೆ ಅಥವಾ ಪರಿಹಾರ ಧನವನ್ನೂ ವಿತರಿಸದೆ ಕಾಮಗಾರಿ ನಡೆಸುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಬೈಪಾಸ್ ವಿರೋಧಿ ಹೋರಾಟ ಸಮಿತಿ ಕಾಮಗಾರಿಗೆ ತಡೆಯೊಡ್ದಿದರು.
ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಡಾ.ಎಮ್.ಟಿ.ರೇಜು ಅವರು ಒಂದು ವಾರಗಳ ಕಾಲ ಕಾಮಗಾರಿಗೆ ತಾತ್ಕಾಲಿಕ ಸ್ಥಗಿತ ಗೊಳಿಸಬೇಕು ಎಂದು ಆದೇಶಿಸಿದರು. ಸ್ಥಳದಲ್ಲಿ ಹೋರಾಟ ಸಮಿತಿಯ ನವೀನ್‌ಚಂದ್ರ ಶೆಟ್ಟಿ, ನವೀನ್ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಶೇಖರ್ ಹೆಜ್ಮಾಡಿ, ದಿವಾಕರ ಭಟ್, ರಫೀಕ್ ದೀನ್‌ಸ್ಟ್ರೀಟ್, ಅಬ್ದುಲ್ ಖಾದರ್ ಹುಸೇನ್, ಸುರೇಶ್ ಶೆಟ್ಟಿ, ಮೋಹನ್ ಇದ್ದರು.

ಸುನಿಲ್ ಗೆಲುವಿಗಾಗಿ ಬಿಜೆಪಿಯಿಂದ ವಾಮಾಚಾರ, ಪೋಲಿಸ್ ಜೀಪಲ್ಲಿ ಹಣ ಸಾಗಾಟ: ಪೂಜಾರಿ ಆರೋಪ

Posted by JAYAKIRANA Kirana on | 0 comments | Leave a comment...


ಉಡುಪಿ: ಉಡುಪಿ- ಚಿಕ್ಕಮಗ ಳೂರು ಲೋಕಸಭಾ ಕ್ಷೇತ್ರಕ್ಕೆ ನಡೆಯು ತ್ತಿರುವ ಮರುಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಗೆಲುವಿಗಾಗಿ ಬಿಜೆಪಿ ಪಕ್ಷವು ಮಧ್ಯರಾತ್ರಿ ವಾಮಾಚಾರ ನಡೆಸಿದೆ. ಮತದಾರರಿಗೆ ವಿತರಿಸುವ ಉದ್ದೇಶದಿಂದ ಹಣವನ್ನು ಪೋಲಿಸ್ ಜೀಪಿನಲ್ಲಿ ಅಕ್ರಮವಾಗಿ ಸಾಗಿ ಸುವ ಮೂಲಕ ಪೋಲಿಸ್ ಇಲಾಖೆ ಯನ್ನು ದುರ್ಬಳಕೆ ಮಾಡಿದೆ. ಇದೇ ರೀತಿ ಮುಂದುವರಿದರೆ ನಿಷ್ಪಕ್ಷಪಾತ ಚುನಾವಣೆ ನಡೆಯುವುದು ಕಷ್ಟ ಎಂದು ಗಂಭೀರ ಆರೋಪ ಮಾಡಿರುವ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಯವರು, ಬಿಜೆಪಿಯವರು ನಡೆಸುತ್ತಿರುವ ಅಕ್ರಮಗಳನ್ನು ಪತ್ತೆಹಚ್ಚುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಲ್ಲಿ ಬಹಿರಂಗ ಮನವಿ ಮಾಡಿಕೊಂಡಿದ್ದಾರೆ.
ಉಡುಪಿಯ ಖಾಸಗಿ ಹೋಟೆಲಿ ನಲ್ಲಿ ಗುರುವಾರ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡು ತ್ತಿದ್ದರು.
ಕರ್ನಾಟಕದ ಬಿಜೆಪಿ ಎರಡು ಹೋಳಾಗಿದೆ. ಒಂದು ಗುಂಪು ಮಾಜಿ ಮುಖ್ಯಮಂತ್ರಿ ಯಡಿಯೂ ರಪ್ಪನವರದ್ದು. ಇನ್ನೊಂದು ಗುಂಪು ಮುಖ್ಯಮಂತ್ರಿ ಸದಾನಂದ ಗೌಡರದ್ದು. ಇದರಿಂದಾಗಿ ಬಿಜೆಪಿ ಗೊಂದಲದ ಸಾಗರದಲ್ಲಿ ಮುಳುಗಿದೆ. ಮಾರ್ಚ್ ೧೬ರ ಸಂಜೆಯೊಳಗೆ ಯಡಿಯೂರಪ್ಪ ನವರು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಮರು ಚುನಾವಣೆಯ ಪ್ರಚಾರಕ್ಕೆ ಬಾರದೇ ಇದ್ದಲ್ಲಿ, ಸದಾನಂದ ಗೌಡರ ಪದಚ್ಯುತಿಗೆ ಕ್ಷಣಗಣನೆ ಆರಂಭಗೊ ಲಿದೆ. ಗೌಡರ ಪದಚ್ಯುತಿ ಆಗುವವರೆಗೂ ಯಡಿಯೂರಪ್ಪನವರಿಗೆ ನಿದ್ದೆ ಇಲ್ಲ. ಮುಖ್ಯಮಂತ್ರಿ ಹುದ್ದೆ ತನ್ನ ಜನ್ಮಸಿದ್ದ ಹಕ್ಕು ಎಂದು ಯಡಿಯೂ ರಪ್ಪ ತಿಳಿದುಕೊಂಡಿರುವುದೇ ಇದಕ್ಕೆ ಕಾರಣವೆಂದು ಪೂಜಾರಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ವಿ.ಎಸ್.ಉಗ್ರಪ್ಪ, ಹರಿಕೃಷ್ಣ ಬಂಟ್ವಾಳ್, ಪಿ.ವಿ.ಮೋಹನ್ ಹಾಗೂ ಸದಾಶಿವ ಉಳ್ಳಾಲ್ ಉಪಸ್ಥಿತರಿದ್ದರು.

ಪುತ್ತೂರಿನಲ್ಲಿ ಸುನ್ನಿ ಸಂಘಟನೆಯ ಪ್ರಾಬಲ್ಯ ‘ಎಕ್ಸ್‌ಬಿಷನ್ ಕಾರ‍್ಯಕ್ರಮದಲ್ಲಿ ಬಹಿರಂಗ

Posted by JAYAKIRANA Kirana on | 0 comments | Leave a comment...

ಪುತ್ತೂರು: ಸುನ್ನಿ ಸಂಘಟನೆಯ ಪ್ರಾಬಲ್ಯ ಹೊಂದಿರುವ ಪುತ್ತೂರಿನಲ್ಲಿ ಸೌತ್‌ಕರ್ನಾಟಕ ಸಲಫಿ ಮೂವ್‌ಮೆಂಟ್ ಪುತ್ತೂರು ಘಟಕದ ವತಿಯಿಂದ ಇಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದ್ದ ಜಿ ಲೈಟ್ ಎಕ್ಸ್‌ಬಿಷನ್ ಆಫ್ ಇಸ್ಲಾಂ ಉದ್ಘಾಟನಾ ಸಮಾರಂಭ ಸಭಿಕರಿಲ್ಲದೆ ಸೊರಗಿತ್ತು.
ಸಂಜೆ ೪.೩೦ಕ್ಕೆ ಉದ್ಘಾಟನೆಗೊಂಡ ಕಾರ‍್ಯಕ್ರಮದಲ್ಲಿ ಮೊದಲಿಗೆ ಅಲ್ಪ ಸಂಖ್ಯೆಯಲ್ಲಿದ್ದ ಸಭಿಕರು ನಂತರ ಸ್ವಲ್ಪ ಮಟ್ಟಿಗೆ ಏರಿಕೆಯಾದರೂ ಉದ್ಘಾಟನಾ ಸಮಾರಂಭದಲ್ಲಿ ಖಾಲಿ ಕುರ್ಚಿಗಳೇ ರಾರಾಜಿಸುತ್ತಿದ್ದವು.
ಕಾರ‍್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ಉದ್ದೇಶದಿಂದ ಪುತ್ತೂರಿನಾ ದ್ಯಂತ ವ್ಯಾಪಕ ಪ್ರಚಾರ ನೀಡಲಾಗಿತ್ತಲ್ಲದೆ ಅಲ್ಲಲ್ಲಿ ಕಟೌಟ್ ಹಾಗೂ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಆದರೂ ಈ ಉದ್ಘಾಟನಾ ಕಾರ‍್ಯಕ್ರಮದಲ್ಲಿ ನಿರೀಕ್ಷಿತ ಸಭಿಕರು ಇಲ್ಲದೆ ಕುರ್ಚಿಗಳು ಖಾಲಿಯಾಗಿದ್ದು, ಇದು ಪುತ್ತೂರಿನಲ್ಲಿನ ಸುನ್ನಿ ಸಂಘಟನೆಯ ಪ್ರಾಬಲ್ಯಕ್ಕೆ ಸಾಕ್ಷಿಯಾಯಿತು.

ನೀಲಿ ಚಿತ್ರ ವೀಕ್ಷಣೆ: ಮಾ. ೨೦ರಂದು ವರದಿ

Posted by JAYAKIRANA Kirana on | 0 comments | Leave a comment...


ಬೆಂಗಳೂರು: ಸದನದಲ್ಲಿ ಬ್ಲೂ ಫಿಲಂ ವಿಕ್ಷೀಸಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಸದನ ಸಮಿತಿಯು ಮಾರ್ಚ್ ೨೦ರಂದು ವಿಧಾನ ಸಭಾಧ್ಯಕ್ಷರಿಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಕಳಂಕಿತ ಶಾಸಕರಿಗೆ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್ ಕೆ.ಜಿ,ಬೋಪಯ್ಯ ಸ್ಪಷ್ಟಪಡಿಸಿದ್ದಾರೆ. ಕಾನೂನು ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿದ ಸಮಿತಿಯು ಮೂವರು ಮಾಜಿ ಸಚಿವರ ವಿರುದ್ಧ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕಾನೂನಿನ ಹಿತಿಮಿತಿಯಡಿ ಯಾವ ಕ್ರಮ ಕೈಗೊಳ್ಳಲು ಸಾಧ್ಯ ಎಂಬುದರ ಬಗ್ಗೆ ಪರಿಶೀಲನೆ ನಡೆಸಿತು. ಸಭೆಯ ನಂತರ ಸಮಿತಿಯ ಅಧ್ಯಕ್ಷ ಶ್ರೀ ಶೈಲಪ್ಪ ಬಿದರೂರ ಸುದ್ದಿಗಾರರೊಂದಿಗೆ ಮಾತನಾಡಿ, ಮೂವರು ಮಾಜಿ ಸಚಿವರಲ್ಲದೆ ಇನ್ಯಾವುದೇ ಸದಸ್ಯರ ವಿರುದ್ಧ ಸಮಿತಿ ತನಿಖೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ತನಿಖೆ ಅಂತಿಮ ಹಂತದಲ್ಲಿದ್ದು, ಸದನ ನಮಗೆ ವಹಿಸಿರುವ ಹಿತಿಮಿತಿಯೊಳಗೆ ತನಿಖೆ ನಡೆಸಿ, ವರದಿ ಸಲ್ಲಿಸುವುದಾಗಿ ತಿಳಿಸಿದರು.

ರೈಲ್ವೆ ಬಜೆಟ್: ಮಮತಾ ಬ್ಯಾನರ್ಜಿ ಅಪಸ್ವರ ರಾಜಕೀಯ ಪ್ರೇರಿತ

Posted by JAYAKIRANA Kirana on | 0 comments | Leave a comment...




ಮಮತಾ ಬ್ಯಾನರ್ಜಿಗೆ ನಿಜವಾಗಿಯೂ ಬೆಲೆಯೇರಿಕೆ ಬಗ್ಗೆ ಅಸಮಾಧಾನವಿದ್ದಿದ್ದರೆ, ಅವರು ಹಿಂದಿನಂತೆಯೂ ಈಗಲೂ ಬಡವರ ಪರವಾಗಿದ್ದರೆ ಕೇಂದ್ರದ ಯುಪಿಎ ಸರಕಾರಕ್ಕೆ ತಾನು ನೀಡಿದ್ದ ಬೆಂಬಲವನ್ನು ಯಾವತ್ತೋ ವಾಪಸ್ ತೆಗೆದುಕೊಳ್ಳುತ್ತಿದ್ದರು. ಹಲವು ಬಾರಿ ಪೆಟ್ರೋಲಿಯಂ ಬೆಲೆಯೇರಿಕೆಯಾದಾಗಲೂ ಮೌನವಾಗಿದ್ದ ಮಮತಾಳಿಗೆ ಬಡವರ ನೋವು ಯಾಕೆ ತಿಳಿಯಲಿಲ್ಲ. ಪೆಟ್ರೋಲಿಯಂ ಬೆಲೆ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮುಂದೆ ರೈಲ್ವೆ ದರ ಏರಿಕೆ ಏನೇನೂ ಅಲ್ಲ. ಇದಕ್ಕೆ ಈ ರೀತಿ ಪ್ರತಿರೋಧ ಒಡ್ಡು ವವರು ಕೇಂದ್ರಕ್ಕೆ ಈವರೆಗೆ ಯಾಕಾಗಿ ಬೆಂಬಲ ನೀಡಿದ್ದರು ಎಂದು ಪ್ರಶ್ನಿಸಲೇಬೇಕಾಗುತ್ತದೆ.
 
ತನ್ನ ಪಕ್ಷದ ಸಚಿವರೇ ಮಂಡಿಸಿರುವ ರೈಲ್ವೆ ಬಜೆಟ್‌ಗೆ ತೃಣಮೂಲ ಕಾಂಗ್ರೆಸ್ ಅಧಿನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಕ್ಷೇಪಿಸಿ ರುವುದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂದು ಹೇಳಲೇಬೇಕಾಗುತ್ತದೆ. ಸ್ವಪಕ್ಷೀಯರ ವಿರುದ್ಧವೇ ಸಮರ ಸಾರಿದಾಗ ರಾಜಕೀಯ ಉದ್ದೇಶ ಇಲ್ಲ ಎಂದು ಭಾವಿಸ ಬೇಕಾಗಿಲ್ಲ. ರೈಲ್ವೇ ಸಚಿವರನ್ನು ಸಂಪುಟದಿಂದ ಕೈಬಿಡಲು ಮಮತಾ ಬ್ಯಾನರ್ಜಿ ಮಾಡಿರುವ ಸಲಹೆ ಹಿಂದೆ ಬಲುದೊಡ್ಡ ರಾಜಕೀಯ ಗಿಮಿಕ್ ಇದೆ ಮತ್ತು ಇದು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯೂ ಇಲ್ಲ ಎಂದು ಹೇಳುವಂತಿಲ್ಲ.
ಕಳೆದ ೯ ವರ್ಷಗಳಿಂದ ರೈಲು ದರದಲ್ಲಿ ಏರಿಕೆಯಾಗಿಲ್ಲ. ಬಹುಷಃ ಏರಿಕೆಯಾಗದ ಒಂದು ವಿಷಯ ಇದ್ದರೆ ಇದೊಂದೇ ಆಗಿರಬೇಕು. ಇದರ ಹಿಂದೆಯೂ ರಾಜಕೀಯ ಉದ್ದೇಶವೇ ಇತ್ತೇ ವಿನಾ, ರೈಲ್ವೆ ಇಲಾಖೆಯನ್ನು ಅಭಿವೃದ್ಧಿ ಮಾಡುವ ಅಥವಾ ಜನರಿಗೆ ಸಹಾಯ ಮಾಡುವ ಉದ್ದೇಶ ಇರಲಿಲ್ಲ. ರೈಲ್ವೆ ಇಲಾಖೆಯು ಕಂಗಾಲು ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಇನ್ನು ಎಷ್ಟು ವರ್ಷ ಪ್ರಯಾಣ ದರ ಏರಿಕೆ ಮಾಡದೆ ಇರಲು ಸಾಧ್ಯ? ಲಾಲೂ ಪ್ರಸಾದ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ತೋರದ ಧೈರ್ಯವನ್ನು ದಿನೇಶ್ ತ್ರಿವೇದಿ ಅವರು ತೋರಿದ್ದು ಶ್ಲಾಘನೀಯ. ಅವರು ಈಗ ಏರಿಕೆ ಮಾಡಿ ರುವ ಟಿಕೆಟ್ ದರದಿಂದ ಜನತೆಗೆ ದೊಡ್ಡ ಹೊರೆಯೇನೂ ಆಗುವುದಿಲ್ಲ. ಆದರೆ ರೈಲ್ವೆ ಇಲಾಖೆಯ ಆರ್ಥಿಕ ಸ್ಥಿತಿ ಒಂದಿಷ್ಟು ಸುಧಾರಿಸಬಹುದು. ಯಾವುದಕ್ಕೂ ಹಣವಿಲ್ಲ ಎಂದು ಹೇಳುತ್ತಿರುವ ಇಲಾಖೆಯ ಸ್ಥಿತಿ ಸ್ವಲ್ಪ ಚಿಗುರ ಬಹುದು. ರೈಲ್ವೆ ಇಲಾಖೆ ಮೇಲೆ ಲಾಲೂಗಿದ್ದಷ್ಟೇ ಮೋಹ ಮಮತಾ ಅವರಿಗೂ ಇತ್ತು. ಇಬ್ಬರೂ ತಮ್ಮ ರಾಜ್ಯಗಳಿಗೆ ಮಾತ್ರವೇ ಭರ್ಜರಿ ರೈಲು ಲಾಭ ಮಾಡಿಕೊಂಡಿದ್ದರು. ಇದನ್ನು ಒಂದು ಮತಬ್ಯಾಂಕ್ ಆಗಿಸಿಕೊಳ್ಳಲು ಶ್ರಮಿಸಿದ್ದರು. ಲಾಲೂ ಪ್ರಸಾದ್ ಯಾದವ್ ಅವರು ರೈಲ್ವೆ ಇಲಾಖೆ ದಿವಾಳಿಯಾಗುವ ಅಪಾಯಕ್ಕೆ ತಲುಪಿದ್ದರೂ ದರ ಏರಿಕೆ ಮಾಡದೆ ಗಾಯದ ಮೇಲೆ ಬರೆ ಎಳೆದಿದ್ದರು. ದರ ಏರಿಕೆ ಮಾಡದೆ ರೈಲ್ವೆಯನ್ನು ಸಲೀಸಾಗಿ ನಡೆಸಬಹುದು ಎಂದು ಬಡಾಯಿ ಕೊಚ್ಚಿಕೊಂಡರು. ಅದನ್ನೇ ನಂಬಿರುವ ವಿಶ್ವದ ರಾಷ್ಟ್ರಗಳು ಇವರಿಗೆ ಶಹಬ್ಬಾಸ್ ಎಂದವು. ಆದರೆ ವಾಸ್ತವ ಸ್ಥಿತಿ ಬೇರೆಯೇ ಇತ್ತು. ರೈಲ್ವೆ ಆರ್ಥಿಕವಾಗಿ ಸೊರಗುತ್ತಲೇ ಬಂದಿತ್ತು.
ಲಾಲೂ ಪ್ರಸಾದ್ ಬಳಿಕ ಅಧಿಕಾರ ಪಡೆದುಕೊಂಡಿದ್ದ ಮಮತಾ ಬ್ಯಾನರ್ಜಿ ಅವರೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೇರುವುದಕ್ಕಾಗಿ ರೈಲು ದರ ಏರಿಕೆ ಮಾಡಿರಲಿಲ್ಲ. ಅವರಿಂದಲೂ ರೈಲ್ವೆಯನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸವಾಗಿಲ್ಲ. ದರ ಏರಿಕೆ ಮಾಡಿದರೆ ಎಲ್ಲಿ ತನ್ನ ಮತಗಳು ಕಳೆದು ಹೋಗುವವೋ ಎಂಬ ಆತಂಕ ಅವರಲ್ಲಿ ಮೂಡಿತ್ತು. ಆದರೆ ಇದೀಗ ಅವರು ತೋರದಿರುವ ಧೈರ್ಯ ವನ್ನು ದಿನೇಶ್ ತ್ರಿವೇದಿ ಅವರು ಮಾಡಿದ್ದಾರೆ. ಇದು ಜನರಿಗೆ ಹೊರೆಯಾ ಗದ, ಆದರೆ ರೈಲ್ವೆಗೆ ಅಭಿವೃದ್ಧಿಗೆ ಪೂರಕವಾದಂತಹ ಒಂದು ದಿಟ್ಟ ಹೆಜ್ಜೆ. ಅವರು ನಿಜವಾದ ಸುಧಾರಕರು ಎಂದು ಹೇಳಬೇಕಾಗುತ್ತದೆ.
ಮಮತಾ ಬ್ಯಾನರ್ಜಿ ಅವರು ದರ ಏರಿಕೆಯನ್ನು ತಕ್ಷಣ ವಾಪಸು ಪಡೆದುಕೊಳ್ಳುವಂತೆ ಆಗ್ರಹಿಸಿದರೂ ತ್ರಿವೇದಿ ಜಪ್ಪೆನ್ನಲಿಲ್ಲ. ಪರಿಣಾಮವಾಗಿ ಅವರನ್ನು ಸಂಪುಟದಿಂದ ಕೈಬಿಡಲು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೂ ತನ್ನ ನಿಲುವಿನಿಂದ ಹಿಂದೆ ಸರಿಯದ ತ್ರಿವೇದಿ ಕ್ರಮ ಅಭಿನಂದನೀಯ. ಅಧಿಕಾರಕ್ಕಾಗಿ ಅವರು ಮಮತಾ ತಾಳಕ್ಕೆ ತಕ್ಕಂತೆ ನಡೆದರೆ ಅವರ ಸ್ವಂತಿಕೆ ಮರೆಯಾಗುತ್ತದೆ ಮತ್ತು ರೈಲ್ವೆ ಇಲಾಖೆ ಅಭಿವೃದ್ಧಿಯಾಗುವ ಒಂದು ಅವಕಾಶ ಕೈ ತಪ್ಪುತ್ತದೆ.
ಮಮತಾ ಬ್ಯಾನರ್ಜಿಗೆ ನಿಜವಾಗಿಯೂ ಬೆಲೆಯೇರಿಕೆ ಬಗ್ಗೆ ಅಸಮಾಧಾನ ವಿದ್ದಿದ್ದರೆ, ಅವರು ಹಿಂದಿನಂತೆಯೂ ಈಗಲೂ ಬಡವರ ಪರವಾಗಿದ್ದರೆ ಅವರು ಕೇಂದ್ರದ ಯುಪಿಎ ಸರಕಾರಕ್ಕೆ ತಾನು ನೀಡಿದ್ದ ಬೆಂಬಲವನ್ನು ಯಾವತ್ತೋ ವಾಪಸ್ ತೆಗೆದುಕೊಳ್ಳುತ್ತಿದ್ದರು. ಹಲವು ಬಾರಿ ಪೆಟ್ರೋಲಿಯಂ ಬೆಲೆಯೇರಿಕೆಯಾದಾಗಲೂ ಮೌನವಾಗಿದ್ದ ಮಮತಾಳಿಗೆ ಬಡವರ ನೋವು ಯಾಕೆ ತಿಳಿಯಲಿಲ್ಲ. ಪೆಟ್ರೋಲಿಯಂ ಬೆಲೆ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮುಂದೆ ರೈಲ್ವೆ ದರ ಏರಿಕೆ ಏನೇನೂ ಅಲ್ಲ. ಇದಕ್ಕೆ ಈ ರೀತಿ ಪ್ರತಿರೋಧ ಒಡ್ಡುವವರು ಕೇಂದ್ರಕ್ಕೆ ಈವರೆಗೆ ಯಾಕಾಗಿ ಬೆಂಬಲ ನೀಡಿದ್ದರು ಎಂದು ಪ್ರಶ್ನಿಸಲೇಬೇಕಾಗುತ್ತದೆ.
ತನ್ನ ಪಕ್ಷದ ಸಚಿವರು ರೈಲ್ವೆ ದರ ಏರಿಕೆ ಮಾಡಿದ್ದಕ್ಕಾಗಿ ತಾನು ಮುಂದೆ ಬೆಲೆ ತೆರಬೇಕಾಗಿ ಬರಬಹುದು ಎಂಬ ಭೀತಿಯಿಂದ ಮಾತ್ರವೇ ಅವರು ಈ ರೀತಿ ಕೂಗಾಡುತ್ತಿದ್ದಾರೆಯೇ ಹೊರತು ನಿಜವಾದ ಬಡವರ ಮೇಲಿನ ಕಾಳಿಜಿಗಾಗಿ ಅಲ್ಲ ಎಂಬುದಕ್ಕೆ ಅವರು ಈಗಲೂ ಕೇಂದ್ರ ಸರಕಾರದ ಒಂದು ಅಂಗವಾಗಿರುವುದು ಉತ್ತಮ ಸಾಕ್ಷಿ. ೨೦೧೪ರಲ್ಲಿ ಅಥವಾ ಅದಕ್ಕಿಂತ ಮುಂಚಿತವಾಗಿ ಬರಲಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಮಮತಾ ಬ್ಯಾನರ್ಜಿ ಅವರು ಇದೀಗ ಬೊಬ್ಬಿರಿಯುತ್ತಾರೆಯೇ ಹೊರತು ಬೇರೇನೂ ಅಲ್ಲ ಎಂದು ವಾಸ್ತವ ಸಂಗತಿ.

ಕುಸಿದ ರಸ್ತೆ: ಸಂಪರ್ಕ ಕಳಕೊಂಡ ಜನತೆ

Posted by JAYAKIRANA Kirana on | 0 comments | Leave a comment...



ಮಂಜೇಶ್ವರ: ಇದು ರಸ್ತೆಯೋ, ಅಲ್ಲ ಕಾಲು ದಾರಿಯೋ? ಎಂಬ ಸಂಶಯದಲ್ಲಿದ್ದರೆ ಖಂಡಿತವಾಗಿಯು ಇದು ರಸ್ತೆ ಸ್ವಾಮಿ. ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಡ್ಕ, ಶಿರಿಯ ಅಣಿಕಟ್ಟು ಮೂಲಕ ಸೇರಾಜೆ, ಪೆರ್ಲಕ್ಕೆ ತೆರಳುವ ರಸ್ತೆ ಕಳೆದ ಮಳೆಗೆ ಪೂರ್ತಿ ಕುಸಿದಿದ್ದು ಈ ಭಾಗದ ಜನತೆ ಸಂಪರ್ಕ ಕಳೆದುಕೊಂಡು ಸುಮಾರು ಎಂಟು ತಿಂಗಳು ಕಳೆದರೂ ಕಣ್ಣಿದ್ದು ಕುರುಡಾಗಿರುವ ಅಧಿಕೃತರ ನಿರ್ಲಕ್ಷ ಧೋರಣೆಯ ವಿರುದ್ದ ಇದೀಗ ನಾಗ ರಿಕರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
೧೯೯೯-೨೦೦೦ರಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ವತಿಯಿಂದ ಸುಮಾರು ೮೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ರಸ್ತೆ ಬಗ್ಗೆ ಆರಂಭದ ಲ್ಲಿಯೇ ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದೆಯಾದರೂ ೨೦೦೦ನೇ ಫೆಬ್ರವರಿ ತಿಂಗಳಲ್ಲಿ ಉದ್ಘಾಟನೆಯಾಯಿ ತಾದರು ಅದೇ ವರ್ಷದ ಮಳೆಗೆ ಕುಸಿದು ಬಿದ್ದಿದ್ದು ಬಳಿಕ ನಬಾರ್ಡ್ ಯೋಜನೆಯಲ್ಲಿ ದುರಸ್ಥಿಗೊಳಿಸಲಾ ಯಿತು.
ಶಿರಿಯಾ ಅಣೆಕಟ್ಟಿನ ಹೊಳೆ ಬದಿ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಿ ಸಿದ ಕಾರಣ ಈ ರೀತಿ ಕುಸಿಯಲು ಕಾರಣವೆಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ. ಹೊಳೆಯ ಬದಿಗೆ ಸಾಕಷ್ಟು ಪ್ರಮಾಣದಲ್ಲಿ ಅಡಿಪಾಯ ತೆಗೆಯದೇ ಮೇಲಿಂದ ಮೇಲೆ ಕಗ್ಗಲ್ಲಿನಲ್ಲಿ ಕಟ್ಟಲಾಗಿದ್ದು ಮಾತ್ರವಲ್ಲದೆ ಅದರೊಳಗೆ ಮರಳು ತುಂಬಿಸಿ ರಸ್ತೆ ನಿರ್ಮಿಸಿರುವುದರಿಂದ ಈ ರೀತಿ ಕುಸಿಯಲು ಕಾರಣವೆನ್ನಲಾಗಿದೆ. ಪೆರ್ಲ, ಎನ್ಮಕಜೆ, ಪುತ್ತಿಗೆ ಭಾಗಕ್ಕೆ ಸಂಪರ್ಕದ ಕೊಂಡಿಯಾಗಿರುವ ಈ ರಸ್ತೆಯಲ್ಲಿ ದಿನಂಪ್ರತಿ ಹಲವಾರು ವಾಹನಗಳು ಸಂಚರಿಸುತಿದ್ದವು ಅದರಿದೀಗ ಸಂಚಾರವೇ ಅಸಾಧ್ಯವಾಗಿದ್ದು ಇದರಿಂದಾಗಿ ನಾಲ್ಕೈದು ಕಿ. ಮೀ. ಕಾಲ್ನಡಿಗೆಯಲ್ಲೇ ವಿದ್ಯಾರ್ಥಿಗಳ ಸಹಿತ ನಾಗರಿಕರು ಸಾಗಬೇಕಾದ ದುಸ್ಥಿತಿ ಬಂದೊದಗಿದೆ. ಈ ಬಗ್ಗೆ ಕಳೆದ ಜೂನ್ ತಿಂಗಳಲ್ಲೇ ಶಿರಿಯಾ ಅಣೆಕಟ್ಟು ರಸ್ತೆ ನೀರು ಪಾಲಾದ ಬಗ್ಗೆ ಪತ್ರಿಕೆಗಳು ವರದಿ ಮಾಡಿದ್ದವು. ಇದರಿಂದ ಎಚ್ಚೆತ್ತ ಪುತ್ತಿಗೆ ಗ್ರಾ. ಪಂ.ನ ಆಡಳಿತ ಸಮಿತಿಯವರು ಸ್ಥಳ ಸಂದರ್ಶಿಸಿ ತಕ್ಷಣವೇ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ತಿಳಿಸಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿದರು.ಅದಾಗಿ ಸುಮಾರು ಎಂಟು ತಿಂಗಳು ಕಳೆದರೂ ಅಧಿಕೃತರು ಅದರ ಗೋಜಿಗೆ ಹೋಗದೆ ಕಂಡೂ ಕಾಣದಂತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ಶೋಚನಿಯಾವಸ್ಥೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿರುವ ಅಧಿಕೃತರು ಇನ್ನಾದರು ಎಚ್ಚೆತ್ತುಕೊಳ್ಳಬೇಕಾಗಿದೆ. ಗ್ರಾಮೀಣ ಪ್ರದೇ ಶದ ನಾಗರಿಕರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.

ಪಲ್ಲಮಜಲು ಗಣಿಗಾರಿಕೆಗೆ ಜನರ ಆಕ್ರೋಶ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಬಿ. ಮೂಡ ಗ್ರಾಮದ ಕಲ್ಲಗುಡ್ಡೆ, ಪಲ್ಲಮಜಲು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಕಪ್ಪುಕಲ್ಲಿನ ಗಣಿಗಾರಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯ ಗ್ರಾಮಸ್ಥರು ಉದ್ದಿಮೆಯನ್ನು ತಕ್ಷಣ ನಿಲ್ಲಿಸುವಂತೆ ಅಧಿಕಾರಿ ವರ್ಗ ವನ್ನು ಆಗ್ರಹಿಸಿದ್ದಾರೆ. ಆಸುಪಾಸಿನ ಸುಮಾರು ೫೩ ಮಂದಿ ಸಹಿ ಹಾಕಿ ಬರೆಯಲಾದ ದೂರರ್ಜಿಯನ್ನು ತಹಶೀಲ್ದಾರ್, ಪುರಸಭೆಯ ಮುಖ್ಯಾಧಿಕಾರಿ, ಪೊಲೀಸ್ ವೃತ್ತ ನಿರೀಕ್ಷಕರಿಗೆ ಸಲ್ಲಿಸಿದ್ದರೂ, ಕೋರೆಯನ್ನು ನಿಲ್ಲಿಸಲು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೋರೆ ಕಾರ್ಯಾಚರಣೆಯಿಂ ದಾಗಿ ಆಸುಪಾಸಿನ ಹಾಗೂ ಆಯಕಟ್ಟಿನ ಮನೆ-ಕಟ್ಟಡಗಳ ಗೋಡೆಗಳು ಬಿರುಕು ಕಾಣಿಸಿವೆ. ಸ್ಪೋಟಕ ವಸ್ತುಗಳ ಬಳಕೆಯಿಂದಾಗಿ ಅಪಾಯದ ಸನ್ನಿವೇಶಗಳು ಎದುರಾಗಿದ್ದು, ಪ್ರಾಣ ಹಾನಿಯನ್ನು ಎದುರಿಸಲಾಗುತ್ತಿದೆ. ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಪರಿಸರ ಮಾಲಿನ್ಯ ಉಂಟಾಗಿದೆ ಎಂದು ಆರೋಪಿಸುತ್ತಿರುವ ಸ್ಥಳೀಯ ನಿವಾಸಿಗಳು ಸಾರ್ವಜನಿಕ ಹಿತದೃಷ್ಟಿಯಿಂದಾಗಿ ಕೋರೆಗೆ ನೀಡಲಾದ ಪರವಾನಿಗೆಯನ್ನು ರದ್ದುಗೊಳಿಸಬೇಕಾಗಿ ಆಗ್ರಹಿಸಿದ್ದರು.
ಸ್ಥಳೀಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ದೂರುಗಳು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರಿಗೆ ದೂರು ನೀಡಿದ್ದು, ಕೋರೆ ಉದ್ದಿಮೆ ಯಿಂದ ಎದುರಾಗುತ್ತಿರುವ ಸಾರ್ವಜನಿಕ ನೈಸರ್ಗಿಕ ಸ್ವತ್ತು ನಾಶ ಹಾಗೂ ಆರ್ಥಿಕ ನಷ್ಟವಾಗುತ್ತಿರುವ ಅಂಶಗಳ ಬಗ್ಗೆಯೂ ಗಮನ ಸೆಳೆದಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಮಾನಾಥ ರೈ, ಪುರಸಭಾಧ್ಯಕ್ಷ ಬಿ.ದಿನೇಶ ಭಂಡಾರಿ, ಸ್ಥಳೀಯ ಸದಸ್ಯ ರಾಮಕೃಷ್ಣ ಆಳ್ವ ಮತ್ತಿತರಿಗೆ ದೂರು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿ ಕಾರಿ, ಗಣಿ ಮತ್ತು ಭೂ ವಿಜ್ಞಾನ ಜಂಟಿ ನಿರ್ದೇಶಕ ದೂರು ಸಲ್ಲಿಸಿದ್ದಾರೆ.
 ಲೋಕಾಯುಕ್ತರಿಗೆ ದೂರು
 ಸ್ಥಳೀಯ ಆಡಳಿತ ಹಾಗೂ ಅಧಿಕಾರಿ ವರ್ಗ ಗಣಿಗಾರಿಕೆಯನ್ನು ನಿಲ್ಲಿಸಲು ಯಾವುದೇ ಕಾನೂನು ಕ್ರಮ ತೆಗೆಯದ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಮಸ್ಥರು ಈಗ ಮಂಗಳೂರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಾರ್ವಜನಿಕ ಕೆಲಸ-ಕಾರ್ಯಗಳಲ್ಲಿ ಕರ್ತವ್ಯ ಲೋಪ ಹಾಗೂ ವಿಳಂಬ ಮಾಡಿರುವ ಆರೋಪದಲ್ಲಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿ ಸಬೇಕಾಗಿ ಸ್ಥಳೀಯ ನಿವಾಸಿ ಗಳಾದ ಲಲಿತ, ಗೋಪಾಲಕೃಷ್ಣ, ಜೀವಿತ, ಚಂದ್ರಹಾಸ, ಮಹಾಬಲ ಶೆಟ್ಟಿ ಮತ್ತಿತ ರರು ಲೋಕಾಯುಕ್ತ ಎಸ್ಪಿ ಅವರಿಗೆ ಲಿಖಿತ ದೂರು ನೀಡಿದ್ದಾರೆ.

ಬಜ್ಪೆ ಏರ್‌ಪೋರ್ಟ್: ಪಾರ್ಕಿಂಗ್ ಶುಲ್ಕದಲ್ಲಿ ವ್ಯತ್ಯಾಸ ಆರೋಪಕ್ಕೆ ಮಣಿದ ಆಡಳಿತದಿಂದ ನೂತನ ನೀತಿ

Posted by JAYAKIRANA Kirana on | 0 comments | Leave a comment...


ಮಂಗಳೂರು: ಬಜ್ಪೆ ಏರ್ ಪೋರ್ಟ್‌ನಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಗುತ್ತಿಗೆ ಪಡೆದವರು ತರಹೇವಾರಿ ಶುಲ್ಕವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ದೂರುದಾರ ವ್ಯಕ್ತಿಗೆ ಮಣಿದ ಏರ್ ಪೋರ್ಟ್ ಆಡಳಿತ ನೂತನ ಪಾರ್ಕಿಂಗ್ ನೀತಿಯನ್ನು ಜಾರಿಗೆ ತಂದ ಘಟನೆ ನಿನ್ನೆ ನಡೆದಿದೆ.
ಬಜ್ಪೆ ನೂತನ ಏರ್‌ಪೋರ್ಟ್‌ನಲ್ಲಿ ಕಾರ್ ಹಾಗೂ ವ್ಯಾನ್‌ಗಳನ್ನು ಪಾರ್ಕ್ ಮಾಡಲು ಪ್ರೀಮಿಯಂ ಹಾಗೂ ಜನ ರಲ್ ಎಂಬ ಎರಡು ಪ್ರತ್ಯೇಕ ಪಾರ್ಕಿಂ ಗ್ ವ್ಯವಸ್ಥೆಯಿದೆ. ಇಲ್ಲಿ ಪ್ರೀಮಿಯಂ ಪಾರ್ಕಿಂಗ್‌ಗೆ ರೂ. ೬೦ ಶುಲ್ಕವಿದ್ದರೆ, ಜನರಲ್ ಪಾರ್ಕಿಂಗ್‌ಗೆ ೪೦ ರೂ. ಪಡೆದು ಕೊಳ್ಳಲಾಗುತ್ತಿದೆ. ಆದರೆ ಕಳೆದ ಕೆಲವು ಸಮಯಗಳಿಂದ ಇಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಗುತ್ತಿಗೆ ಪಡೆದವರು ಜನರಿಗೆ ಈ ಬಗ್ಗೆ ಸೂಕ್ತ ಮಾಹಿತಿ ಯನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪ ಮಾಡಿದ್ದರು. ಪಾರ್ಕಿಂಗ್ ಶುಲ್ಕ ಪಡೆ ಯುವವರು ಈ ಬಗ್ಗೆ ಮಾಹಿತಿಯನ್ನು ನೀಡದೆ ಎಲ್ಲರನ್ನೂ ಪ್ರೀಮಿಯಂ ಶುಲ್ಕ ಪಾವತಿ ಮಾಡುವಂತೆ ಬಲವಂತ ಮಾಡುತ್ತಿದ್ದರು, ತಪ್ಪಿದಲ್ಲಿ ಏರ್ ಪೋರ್ಟ್ ಪ್ರವೇಶದ್ವಾರದಲ್ಲಿ ವಾಹನವನ್ನು ತಡೆದು ಅಸಭ್ಯವಾಗಿ ವರ್ತಿಸುತ್ತಿದ್ದರು.

ಬ್ಯಾರಿ ಅಕಾಡೆಮಿ ಅಧ್ಯಕ್ಷನ ಕೊಲೆಯತ್ನ

Posted by JAYAKIRANA Kirana on | 0 comments | Leave a comment...





ಇಬ್ಬರ ಸೆರೆ | ಸಹಾಯಕ್ಕೆ ಬಾರದ ಸ್ಥಳೀಯರು
ಮಂಗಳೂರು: ನಗರದ ಜನನಿಬಿಡ ಪ್ರದೇಶದಲ್ಲಿರುವ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿಗೆ ನುಗ್ಗಿದ ಮುಸುಕುಧಾರಿಗಳು ಅಧ್ಯಕ್ಷರನ್ನು ತಲ್ವಾರಿನಿಂದ ಯದ್ವಾತದ್ವಾ ಕಡಿದು ಪರಾರಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದ್ದು, ಗಾಯಾಳುವನ್ನು ಕಚೇರಿಯಿಂದ ಹೊರಗಡೆ ತರಲು ಸಾರ್ವಜನಿಕರು ಸಹಕಾರ ನೀಡದೆ ಅಮಾನವೀಯತೆ ತೋರಿಸಿದ್ದಾರೆ.
ನಿನ್ನೆ ಮಧ್ಯಾಹ್ನ ೧.೩೦ಕ್ಕೆ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಾದ ರಹೀಂ ಉಚ್ಚಿಲ್ ಅತ್ತಾವರದ ಪ್ರೆಸಿಡಿಯಂ ಕಟ್ಟಡದಲ್ಲಿರುವ ಕಚೇರಿ ಯಲ್ಲಿದ್ದರು. ಅದೇ ವೇಳೆ ಕಚೇರಿಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು ತಲ್ವಾರಿನಿಂದ ರಹೀಂರ ಕೈ, ಭುಜ ಮತ್ತು ಹೊಟ್ಟೆಯ ಭಾಗಕ್ಕೆ ಕಡಿದಿ ದ್ದಾರೆ. ಅಲ್ಲದೆ ಕಚೇರಿಯ ಮುಖ್ಯ ದ್ವಾರದಲ್ಲಿರುವ ಗಾಜನ್ನೂ ಪುಡಿ ಮಾಡಿ ನಡೆದುಕೊಂಡೇ ಹೋಗಿ ದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿ ದ್ದಾರೆ. ಗಂಭೀರವಾಗಿ ಗಾಯಗೊಂ ಡಿರುವ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ದಾಖ ಲಿಸಿರುವ ಕಾರಣ ರಹೀಂ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬಂಧಿತರು ಸಂಘಟನೆಯೊಂದಕ್ಕೆ ಸೇರಿದವರು ಎಂದು ಹೇಳಲಾಗುತ್ತಿದೆ.
ಒಬ್ಬರು ಮದುವೆಗೆ ಹೋಗಿದ್ದರೆ, ಉಳಿದ ಸಿಬ್ಬಂದಿ ಪರಾರಿ
ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಇಬ್ಬರು ಯುವತಿಯರು, ರಿಜಿಸ್ಟ್ರಾರ್, ಸಹಿತ ನಾಲ್ವರು ಸಿಬ್ಬಂದಿ ಯಿದ್ದಾರೆ. ರಿಜಿಸ್ಟ್ರಾರ್ ನಿನ್ನೆ ಯಾವು ದೋ ಮದುವೆ ಸಮಾರಂಭಕ್ಕೆ ಹೋಗಿದ್ದರು ಎನ್ನಲಾಗಿದೆ.
ಆರೋಪಿಗಳು ಕಚೇರಿಗೆ ಬಂದಾಗ ಅಲ್ಲಿನ ಗುಮಾಸ್ತ ಕುಳಿತು ಕೊಳ್ಳುವಂತೆ ಹೇಳಿದ್ದು ಆ ವೇಳೆ ಗುಮಾಸ್ತನನ್ನು ಬೆದರಿಸಿ ಹಲ್ಲೆ ನಡೆಸಿ, ತಲ್ವಾರು ತೋರಿಸಿದಾಗ ಅವರು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಆರೋಪಿಗಳು ರಹೀಂ ಮೇಲೆ ದಾಳಿ ನಡೆಸಿದಾಗ ಇಬ್ಬರು ಯುವತಿಯರು ಊಟ ಮಾಡುತ್ತಿದ್ದು ಘಟನೆಯನ್ನು ಕಣ್ಣಾರೆ ಕಂಡು ಪರಾರಿಯಾಗಿದ್ದರಿಂದ ಕಚೇರಿ ಖಾಲಿಯಾಗಿತ್ತು.

ಆಪತ್ಬಾಂಧವನಾದ ಮುಸ್ಲಿಂಲೀಗ್ ಮುಖಂಡ
ನಿನ್ನೆ ಮಧ್ಯಾಹ್ನ ಮುಸ್ಲಿಂ ಲೀಗ್ ಮುಖಂಡ ರಿಯಾಝ್ ಹರೇಕಳ ಹಾಗೂ ಆತನ ಸ್ನೇಹಿತ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿಗೆ ಹೋಗಿದ್ದರು. ಕೆಲಹೊತ್ತು ಮಾತುಕತೆ ನಡೆಸಿದ ಬಳಿಕ ಫಳ್ನೀರ್ ಲ್ಯಾಬ್‌ನಲ್ಲಿದ್ದ ಮಧುಮೇಹ ಪರೀಕ್ಷೆಯ ವರದಿಯನ್ನು ತರುವಂತೆ ಅಧ್ಯಕ್ಷ ರಹೀಂ ಹೇಳಿದ್ದರಿಂದ ರಿಯಾಝ್ ಲ್ಯಾಬ್‌ಗೆ ಹೋಗಿದ್ದರು ಎನ್ನಲಾಗಿದೆ. ವಾಪಸ್ ಬಂದಾಗ ಬೊಬ್ಬೆ ಕೇಳಿದ್ದು ರಿಯಾಝ್ ಕಚೇರಿಯತ್ತ ಧಾವಿಸಿದಾಗ ಮುಸುಕುಧಾರಿಗಳು ಕಚೇರಿ ಗಾಜನ್ನು ಒಡೆದು ಪರಾರಿಯಾಗಿದ್ದಾರೆ. ಒಳಗಡೆ ರಕ್ತಸಿಕ್ತವಾಗಿ ಬಿದ್ದಿದ್ದ ರಹೀಂರನ್ನು ಹೊರಗಡೆ ತರಲು ಸಹಾಯ ಮಾಡುವಂತೆ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ಪರಿಪರಿಯಾಗಿ ಮನವಿ ಮಾಡಿದರೂ ಒಬ್ಬರೂ ಹತ್ತಿರ ಬರಲಿಲ್ಲ ಎನ್ನುತ್ತಾರೆ ರಿಯಾಝ್. ಕೊನೆಗೆ ತಾನೇ ಹರಸಾಹಸಪಟ್ಟು ರಹೀಂರನ್ನು ಎಳೆದುಕೊಂಡು ಹೊರಗಡೆ ಬಂದು ಅಟೋರಿಕ್ಷಾವನ್ನು ಕರೆದಾಗ ತನ್ನ ಜೊತೆ ಬಂದಿದ್ದವ ಸಹಾಯ ಮಾಡಿದ್ದರು ಎಂದು ರಿಯಾಝ್ ಬೇಸರದಿಂದಲೇ ಹೇಳಿದ್ದಾರೆ.

ನಗರದಲ್ಲಿ ಭಯದ ವಾತಾವರಣ
ಇತ್ತೀಚೆಗೆ ಮಂಗಳೂರು ನಗರದ ಜನನಿಬಿಡ ಪ್ರದೇಶದಲ್ಲಿ ಕೊಲೆ, ಕೊಲೆಯತ್ನ ಘಟನೆಗಳು ನಡೆಯುತ್ತಿದ್ದು, ಇದರಿಂದಾಗಿ ಜನರು ತಮ್ಮ ಅಂಗಡಿ, ಕಚೇರಿಗಳಲ್ಲಿ ಕುಳಿತುಕೊಳ್ಳಲು ಭಯಪಡುವಂತಾಗಿದೆ. ಕಳೆದ ತಿಂಗಳು ೧೪ರಂದು ರಾತ್ರಿ ನಗರದ ಸರ್ವೀಸ್ ಬಸ್ ನಿಲ್ದಾಣದ ಎದುರು ಇರುವ ಟೆಕ್ಸ್‌ಟೈಲ್‌ನ ವ್ಯವಸ್ಥಾಪಕ ದಿನೇಶ್‌ರಾಜ್‌ರನ್ನು ಕಡಿದು ಕೊಲೆ ಮಾಡಲಾಗಿತ್ತು. ಈ ಘಟನೆ ಜನರ ಮನದಿಂದ ಮಾಸುವ ಮುನ್ನವೇ ಅತ್ತಾವರದಲ್ಲಿ ಅಕಾಡೆಮಿಯೊಂದರ ಅಧ್ಯಕ್ಷನ ಕೊಲೆ ಯತ್ನ ನಡೆದಿದೆ. ಅದು ಕೂಡ ಹಾಡಹಗಲೇ ಎನ್ನುವುದು ಜನರಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ರಾಜೀನಾಮೆಗೆ ಮುಂದಾದ ಡಿ.ವಿ.

Posted by JAYAKIRANA Kirana on | 0 comments | Leave a comment...





ಯಡ್ಡಿ ಸಿ.ಎಂ. ಆದರೆ ಸನ್ಯಾಸ: ಅಡ್ವಾಣಿ
ಬೆಂಗಳೂರು: ಪಕ್ಷದ ಆಂತರಿಕ ಗೊಂದಲದಿಂದ ಬೇಸತ್ತಿರುವ ಮುಖ್ಯ ಮಂತ್ರಿ ಸದಾನಂದ ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ ಘಟನೆ ನಡೆದಿದೆ.
ತಮ್ಮನ್ನು ಪದಚ್ಯುತಿಗೊಳಿಸಲು ಮಾಜಿ ಮುಖ್ಯಮಂತ್ರಿ ಯಡಿಯೂ ರಪ್ಪ ಮಾರ್ಚ್ ೧೮ರಂದು ತಮ್ಮ ಬೆಂಬಲಿಗರ ಸಭೆ ಕರೆದಿರುವ ಜೊತೆಗೆ ದೆಹಲಿಯ ಪಕ್ಷದ ವರಿಷ್ಠರು ಇದಕ್ಕೆ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರದಿಂದಲೇ ಕೆಳಗಿಳಿಯಲು ತೀರ್ಮಾನಿಸಿದ್ದರು.
ಮರಳಿ ಪಟ್ಟಕ್ಕೇರಲು ಚಡಪಡಿಸುತ್ತಿರುವ ಯಡಿಯೂರಪ್ಪ ತಮ್ಮನ್ನು ಮುಖ್ಯಮಂತ್ರಿ ಎಂದು ಘೋಷಿಸದಿದ್ದರೆ ಮಾರ್ಚ್ ೧೯ರಂದು ಸರ್ಕಾರವನ್ನೇ ಉರುಳಿಸುವುದಾಗಿ ಬೆದರಿಕೆಯೊಡ್ಡಿದ್ದು ಇದಕ್ಕೆ ಮಣಿದಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಗಡ್ಕರಿ ಹಾಗೂ ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಅರುಣ್ ಜೇಟ್ಲಿ ಮತ್ತೆ ಸ್ಥಾನ ನೀಡುವ ಬಗ್ಗೆ ಒಲವು ತೋರಿದ್ದಾರೆ.
ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಬಿಡಾರ ಹೂಡಿರುವ ಯಡಿಯೂರಪ್ಪ ಪಕ್ಷದ ಮುಖಂಡರುಗಳನ್ನು ಭೇಟಿ ಮಾಡಿ, ತಮ್ಮ ಬೇಡಿಕೆ ಇಟ್ಟಿರುವುದಲ್ಲದೆ, ಕಾನೂನಿನ ಹೋರಾಟದಿಂದ ಹೊರ ಬಂದರೆ ಮತ್ತೆ ಅಧಿಕಾರ ಗದ್ದುಗೆಗೆ ಏರಿಸುವ ವಚನವನ್ನು ಪಾಲಿಸುವಂತೆ ತಾಕೀತು ಮಾಡಿದ್ದರು. ಯಾವ ಆರೋಪಕ್ಕೆ ಗುರಿಯಾಗಿ ಯಡಿಯೂರಪ್ಪ ಸ್ಥಾನ ತ್ಯಜಿಸಿದ್ದರು, ಅದೇ ಆರೋಪದಿಂದ ಮುಕ್ತರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಅಧಿಕಾರ ನೀಡುವ ಬಗ್ಗೆ ಅಧ್ಯಕ್ಷರು ನಿರ್ಧಾರ ಕೈಗೊಂಡಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಒಂದು ವೇಳೆ ಸುಪ್ರಿಂಕೋರ್ಟ್‌ನಲ್ಲಿ ಮೊಕದ್ದಮೆ ದಾಖಲೆಯಾದಲ್ಲಿ ಮತ್ತೆ ಅವರನ್ನು ಅಧಿಕಾರದಿಂದ ಕೆಳಗಿಳಿಸೋಣ. ಅಲ್ಲಿಯವರೆಗೂ ನಾವು ಕೊಟ್ಟ ಮಾತನ್ನು ಉಳಿಸಿಕೋಳ್ಳೋಣ ಎಂಬ ವಾದವನ್ನು ಗಡ್ಕರಿ ಪಕ್ಷದ ಇತರ ಮುಖಂಡರೊಟ್ಟಿಗೆ ವಾದ ಮಂಡಿಸಿದ್ದಾರೆ. ತಾವು ತೆಗೆದುಕೊಂಡಿರುವ ನಿರ್ಧಾರವನ್ನು ಗಡ್ಕರಿ ಸದಾನಂದ ಗೌಡರಿಗೆ ಮಾಹಿತಿ ತಲುಪಿಸಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆ ಮುಖ್ಯಮಂತ್ರಿಯವರು ತಮ್ಮ ಪ್ರವಾಸ ಮೊಟುಕುಗೊಳಿಸಿ, ನಗರಕ್ಕೆ ಆಗಮಿಸಿದ ಅವರು ಕಾನೂನು ಸಚಿವ ಸುರೇಶ್‌ಕುಮಾರ್ ಹಾಗೂ ಇತರ ಹಿತೈಷಿಗಳ ಜೊತೆ ಸಮಾಲೋಚನೆ ನಡೆಸಿ, ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದರು.
ಯಡಿಯೂರಪ್ಪನವರ ಬಿಗಿಮುಷ್ಠಿ ನಡುವೆ ತಾವು ಅಧಿಕಾರದಲ್ಲಿ ಮುಂದುವರೆಯಲು ಸಹಕರಿಸುತ್ತಿರುವ ಪಕ್ಷದ ಹಿರಿಯ ಧುರೀಣ ಲಾಲ್‌ಕೃಷ್ಣ ಅಡ್ವಾಣಿ ಅವರ ಗಮನಕ್ಕೆ ತಂದು ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸಲು ತೀರ್ಮಾನಿಸಿದರು. ಮುಖ್ಯಮಂತ್ರಿಯವರು ಅಡ್ವಾಣಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪಕ್ಷದ ಪ್ರಚಲಿತ ವಿದ್ಯಮಾನಗಳು, ರಾಷ್ಟ್ರೀಯ ಅಧ್ಯಕ್ಷರ ಸಂದೇಶವನ್ನು ವಿವರಿಸಿ, ತಾವು ಪಕ್ಷದ ಶಿಸ್ತಿನ ಸಿಪಾಯಿಯಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದರು. ಅಲ್ಲದೆ ರಾಜ್ಯ ಬಜೆಟ್‌ನ್ನು ಮಂಡಿಸಲು ಈ ಸಲ ಯಡಿಯೂರಪ್ಪ ಅವರಿಗೆ ಅವಕಾಶ ನೀಡಬೇಕೋ ಇಲ್ಲವೆ ನಾನೇ ಮಂಡಿಸಬೇಕೆಂಬುದರ ಬಗ್ಗೆ ಸ್ಪಷ್ಟಪಡಿಸಿ, ಈ ಗೊಂದಲಗಳಿಂದ ಇನ್ನೂ ಅಧಿವೇಶನ ಕರೆಯಲು ಸಾಧ್ಯವಾಗಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಸ್ಪಷ್ಟ ಭರವಸೆ ನೀಡಿದ ಅಡ್ವಾಣಿ, ನೀವು ಯಾವ ಕಾರಣಕ್ಕೂ ಕೆಳಗಿಳಿಯುವುದಿಲ್ಲ. ಒಂದು ವೇಳೆ ನಿಮ್ಮನ್ನು ಕೆಳಗಿಳಿಸಿ ಯಡಿಯೂರಪ್ಪ ಅವರನ್ನು ಮರಳಿ ಮುಖ್ಯಮಂತ್ರಿ ಮಾಡುವ ಯತ್ನಕ್ಕೆ ಯಾರಾದರೂ ಕೈ ಹಾಕಿದರೆ ನಾನೇ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದರು.ಬಿಜೆಪಿ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಆಗುವುದು ಬೇಕೋ, ಅಡ್ವಾಣಿ ರಾಜಕೀಯ ಸನ್ಯಾಸ ಸ್ವೀಕರಿಸುವುದು ಬೇಕೋ, ಎಂಬುದು ಇತ್ಯರ್ಥವಾಗಬೇಕು. ಎಲ್ಲಿಯವರೆಗೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಸನ್ನಿವೇಶ ಉದ್ಭವವಾಗುವುದಿಲ್ಲವೋ ಅಲ್ಲಿಯವರೆಗೆ ನೀವು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಪ್ರಶ್ನೆ ಬರುವುದಿಲ್ಲ. ಹೀಗಾಗಿ ನೀವು ಹಿಂದೆ ಮುಂದೆ ನೋಡದೇ ಬಜೆಟ್ ಅಧಿವೇಶನ ಕರೆಯಿರಿ. ನಿಮ್ಮ ಉದ್ದೇಶದಂತೆ ಮಾರ್ಚ್ ೨೧ರಂದು ರಾಜ್ಯ ಬಜೆಟ್‌ನ್ನು ಮಂಡಿಸಿರಿ ಎಂದು ಈ ಚರ್ಚೆಯ ಸಂದರ್ಭದಲ್ಲಿ ಲಾಲ್‌ಕೃಷ್ಣ ಅಡ್ವಾಣಿ ಅಭಯ ನೀಡಿದರು. ಅಡ್ವಾಣಿಯವರು ನೀಡಿದ ಅಭಯದ ಹಿನ್ನೆಲೆಯಲ್ಲಿಯೇ ಧೈರ್ಯ ತಂದುಕೊಂಡ ಮುಖ್ಯಮಂತ್ರಿ ಡಿ.ವಿ. ಇದ್ದಕ್ಕಿದ್ದಂತೆ ಬಜೆಟ್ ಅಧಿವೇಶನ ಕರೆಯಲು ಅಗತ್ಯವಾದ ಪ್ರಕ್ರಿಯೆಗೆ ಚಾಲನೆ ನೀಡಿದರು.

ಡಿ.ವಿ. ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದು
ಅನುಮಾನ: ಧನಂಜಯ್ ಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾರ್ಚ್ ೧೮ರ ನಂತರ ಅಧಿಕಾರದಲ್ಲಿ ಮುಂದುವರೆಯುವುದರ ಬಗ್ಗೆ ಕೇಂದ್ರದ ಮಾಜಿ ಸಚಿವ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಧನಂಜಯಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಹಣಕಾಸು ಇಲಾಖೆ ಹೊತ್ತಿರುವ ಸದಾನಂದ ಗೌಡರು ಮಾರ್ಚ್ ೨೧ ರಂದು ಮುಂಗಡಪತ್ರ ಮಂಡಿಸುವುದು ಅನುಮಾನ.
ಉಡುಪಿ ಚಿಕ್ಕಮಂಗಳೂರು ಲೋಕಸಭಾ ಉಪಚುನಾವಣೆ ಆಗುವವರೆಗೂ ಗೌಡರೇ ಮುಖ್ಯಮಂತ್ರಿ. ಆನಂತರ ಶಾಸಕಾಂಗ ಪಕ್ಷ ಯಾರನ್ನು ತನ್ನ ನಾಯಕನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೂ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಮುಗುಂ ಆಗಿ ಹೇಳಿದ್ದಾರೆ.
ಮಾರ್ಚ್ ೨೧ರಂದು ಬಿಜೆಪಿ ಮುಖ್ಯಮಂತ್ರಿಗಳೇ ಬಜೆಟ್ ಮಂಡಿಸುವುದು ಖಚಿತ ಆದರೆ ವ್ಯಕ್ತಿಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಚಿಕ್ಕಮಂಗಳೂರು-ಉಡುಪಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಬಾರಿ ಅಂತರದಿಂದ ಗೆಲುವು ಸಾಧಿಸುತ್ತದೆ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದ ಅವರು ಕಾಂಗ್ರೆಸ್ ನಾಯಕರುಗಳ ಹೇಳಿಕೆಗಳೆಲ್ಲ ಅಪ್ಪಟ ಸುಳ್ಳು ಎಂದರು.

ಸುಳ್ಯದಲ್ಲಿ ಜೇನು ಕುಟುಂಬಗಳಿಗೆ ರೋಗ ಹರಡುತ್ತಿರುವ ಕೇರಳಿಗರು

Posted by JAYAKIRANA Kirana on | 0 comments | Leave a comment...




ಸುಳ್ಯ: ಜೇನು ಕುಟುಂಬಗಳನ್ನು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ಸಾಕುವ ಮೂಲಕ ಅದರಿಂದ ಗುಣ ಮಟ್ಟದ ಜೇನನ್ನು ಉತ್ಪಾದಿಸುವ ಜಿಲ್ಲೆಯ ಜೇನುಗಾರರಿಗೆ ಈಗ ಸಂಕಟ ಆರಂಭವಾಗಿದೆ.
ಪುತ್ತೂರಿನಲ್ಲಿ ಕೆಂದ್ರ ಕಚೇರಿ ಹೊಂದಿರುವ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘ ದಲ್ಲಿ ಸುಮಾರು ೯೦೦೦ ಸದಸ್ಯರಿದ್ದು, ಇವರೆಲ್ಲರೂ ಉತ್ಕೃಷ್ಟ ಗುಣ ಮಟ್ಟದ ಜೇನನ್ನು ಉತ್ಪಾದಿಸುತ್ತಿದ್ದಾರೆ. ಹಾಗಾಗಿ ಈ ಸಂಘದ ಜೇನಿಗೆ ದೇಶಾ ದ್ಯಂತ ಉತ್ತಮ ಬೇಡಿಕೆ ಕೂಡಾ ಇದೆ. ಕೇವಲ ಜೇನು ಸಾಕಣೆಯನ್ನೇ ಉದ್ಯೋಗವನ್ನಾಗಿ, ಅದನ್ನು ನಂಬಿಯೇ ಜೀವನ ನಡೆಸುವ ಹಲವು ಕುಟುಂಬಗಳು ಜಿಲ್ಲೆಯಲ್ಲಿವೆ. ಸ್ವಂತ ಜಮೀನು ಹೊಂದಿಲ್ಲದ ಹಲವರು ಇಂದು ಸ್ಥಳಾಂತರ ಜೇನು ಕೃಷಿ ಮಾಡಿ ಬದುಕುತ್ತಿದ್ದಾರೆ.
ಆದರೆ ಕಳೆದ ಎರಡು ವಾರಗಳಿಂದ ಕೇರಳದ ಹಲವು ಮಂದಿ ಸುಳ್ಯ ತಾಲೂಕಿನಲ್ಲಿ ಬೃಹತ್ ಪ್ರಮಾಣದಲ್ಲಿ ಜೇನು ಸಾಕಣೆಯನ್ನು ಆರಂಭಿಸಿದ್ದಾರೆ. ಇವರು ಸಾಂಪ್ರದಾಯಿಕ ಅಥವಾ ವೈಜ್ಞಾ ನಿಕದಂತಹ ಯಾವುದೇ ಪದ್ಧತಿಯನ್ನು ಅಳವಡಿಸುತ್ತಿಲ್ಲ. ಕೇವಲ ೨೦ ಅಡಿ ಗೊಂದರಂತೆ ಜೇನು ಪೆಟ್ಟಿಗೆಗಳನ್ನು ಇಟ್ಟು ಜೇನು ಉತ್ಪಾದನೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಸ್ಥಳಾಂತರ ಜೇನು ಕೃಷಿಯಲ್ಲಿ ಒಂದು ತಿಂಗಳಲ್ಲಿ ಜೇನು ತೆಗೆಯಲು ಬರುತ್ತದೆ. ಆದರೆ ಇವರು ಕೇವಲ ೧೦ ದಿನದಲ್ಲಿ ಜೇನು ತೆಗೆಯುತ್ತಾರೆ. ಜೇನು ನೊಣಗಳಿಗೆ ಸಕ್ಕರೆ ನೀರು ನೀಡಿ ಕಳಪೆ ಜೇನನ್ನು ಉತ್ಪಾದಿಸುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ಐವರ್ನಾಡಿನ ಕೃಷಿಕರೊಬ್ಬರ ತೋಟದಲ್ಲಿ ಸುಮಾರು ೧೦೦೦ ಪೆಟ್ಟಿಗೆಗಳನ್ನು ಇಟ್ಟಿದ್ದು, ದುಗ್ಗಲಡ್ಕ, ದೊಡ್ಡತೋಟ, ಉಬರಡ್ಕ ಸೇರಿದಂತೆ ಹಲವು ಕಡೆ ಇದೇ ರೀತಿ ಕಳಪೆ ಗುಣಮಟ್ಟದ ಜೇನು ಉತ್ಪಾದನೆಯಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ಸ್ಥಳೀಯ ಜೇನು ಸಾಕಾಣೆಗಾರರು.
ರೋಗ ಬಾಧಿತ ಜೇನುಗೂಡುಗಳು:
ಇವರು ಸ್ಥಳಾಂತರಿಸುವ ಜೇನು ಗೂಡುಗಳಲ್ಲಿ ಹಲವು ರೋಗಬಾಧಿತವಾಗಿದ್ದು, ಇದರಿಂದ ಸ್ಥಳೀಯ ಜೇನು ವ್ಯವಸಾಯಗಾರರ ಜೇನು ಪೆಟ್ಟಿಗೆಗೂ ಈ ರೋಗ ಹರಡಿದೆ. ಹಾಗಾಗಿ ಈಗ ಸ್ಥಳೀಯರು ಒಟ್ಟಾಗಿದ್ದಾರೆ. ಜೇನು ವ್ಯವಸಾಯಗಾರರ ಸಂಘದ ಸದಸ್ಯರು ಸೇರಿ ಕೇರಳಿಗರು ಅವೈಜ್ಞಾನಿಕವಾಗಿ ಸ್ಥಳಾಂತರ ಜೇನು ಕೃಷಿ ಮಾಡುವಲ್ಲಿ ತೆರಳಿ ಅವರಿಗೆ ಎಚ್ಚರಿಕೆಯನ್ನು ನೀಡುವ ಕೆಲಸ ಆರಂಭಿಸಿದ್ದಾರೆ. ಅಲ್ಲದೆ ಸ್ಥಳೀಯರು ಅಂತಹವರಿಗೆ ತಮ್ಮ ತೋಟದಲ್ಲಿ ಪೆಟ್ಟಿಗೆ ಇಡಲು ಅವಕಾಶ ನೀಡಬಾರದು ಎಂದೂ ಮನವರಿಕೆ ಮಾಡುವ ಕೆಲಸ ಆರಂಭಿಸಿದ್ದಾರೆ.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


ರಹೀಂ ಉಚ್ಚಿಲನ ಮೇಲೆ ಮಾರಣಾಂತಿಕ ಹಲ್ಲೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಬೈಕಿನಲ್ಲಿ ಬಂದು ಐವರ ತಂಡವೊಂದು ನಗರದ ಅತ್ತಾವರದಲ್ಲಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿದ್ದ ಅಧ್ಯಕ್ಷ ರಹೀಂ ಉಚ್ಚಿಲನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಂದು ಮಧ್ಯಾಹ್ನದ ವೇಳೆಗೆ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಐವರ ತಂಡವೊಂದು ಬೈಕಿನಲ್ಲಿ ಕಚೇರಿಗೆ ತೆರಳಿದ್ದು, ಮೂವರು ಬಾಗಿಲಲ್ಲಿ ಕಾಯುತ್ತಿದ್ದಂತೆ ಇಬ್ಬರು ಒಳಹೊಕ್ಕು ಉಚ್ಚಿಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಪರಿಣಾಮ ಉಚ್ಚಿಲರ ಒಂದು ಕೈ ಗಂಭೀರ ಗಾಯವಾಗಿದ್ದು, ತಕ್ಷಣವೇ ನಗರದ ಯುನಿಟಿ ಆಸ್ಪತ್ರೆ ದಾಖಲಿಸಲಾಗಿದ್ದು, ದೇಹಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ತಾ.ಪಂ. ಸದಸ್ಯರಿಂದಲೇ ಲಂಚ ಕೇಳಿದ ಅಧಿಕಾರಿ

Posted by JAYAKIRANA Kirana on | 0 comments | Leave a comment...

ಸುಳ್ಯ: ತೋಟಗಾರಿಕಾ ಇಲಾ ಖೆಯ ಎಲ್ಲಾ ಸವಲತ್ತುಗಳು ದಲ್ಲಾಳಿ ಗಳ ಪಾಲಾಗುತ್ತಿವೆ. ಅರ್ಹ ಫಲಾನು ಭವಿಗಳಿಗೆ ಯಾವುದೇ ಸವಲತ್ತು ಸಿಗುತ್ತಿಲ್ಲ, ಸಾಮಾಜಿಕ ಅರಣ್ಯ ಅಧಿಕಾರಿ ಉದ್ಯೋಗ ಮಿತ್ರ ಯೋಜನೆಯಡಿ ಎಂ.ಬಿ.ಪುಸ್ತಕದಲ್ಲಿ ಬರೆಯಲು ಲಂಚ ಕೇಳುತ್ತಾರೆ. ತಾ.ಪಂ. ಸದಸ್ಯರು ನೇರ ಆರೋಪ ಮಾಡಿದ ಘಟನೆ ಬುಧವಾರ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದ್ದು ಆಕ್ರೋಶಕ್ಕೆ ಮಣಿದ ಅಧಿಕಾರಿ ಸಭೆಯಲ್ಲಿ ಕ್ಷಮೆಯಾಚಿಸಿದರು.
ತಾ.ಪಂ. ಅಧ್ಯಕ್ಷ ಮುಳಿಯ ಕೇಶವ ಭಟ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ವಿಷಯ ಪ್ರಸ್ತಾಪಿಸಿದ ಜಿ.ಪಂ. ಸದಸ್ಯ ಕೆ.ಎಸ್.ದೇವರಾಜ್, ವಿಶೇಷ ಘಟಕ ಯೋಜನೆ ಹಾಗು ಗಿರಿಜನ ಉಪ ಯೋಜನೆಯಡಿ ಹೊಸ ತೆಂಗಿ ನ ತೋಟ ವಿಸ್ತರಣೆ ಕಾರ್ಯಕ್ರಮದ ಅನ್ವಯ ಅಂತಿಮ ಕ್ಷಣದಲ್ಲಿ ಬದಲಿ ಫಲಾನುಭವಿಗಳನ್ನು ಯಾಕೆ ಆಯ್ಕೆ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಇಷ್ಟರವರೆಗೆ ಈ ಅಧಿಕಾ ರಿಗಳು ನಿದ್ರೆ ಮಾಡ್ತಿದ್ರಾ? ಕೃಷಿಕರಿಗೆ ಸವಲತ್ತು ದೊರಕಿಸುವುದರಲ್ಲಿ ಉದಾ ಸೀನ ಯಾಕೆ ಎಂದವರು ಪ್ರಶ್ನಿಸಿದರು. ಒಂದೊಂದು ಸಭೆಗೆ ಒಬ್ಬೊಬ್ಬರು ಅಧಿಕಾರಿ ಬರುತ್ತಾರೆ. ಈ ಅಧಿಕಾರಿಗಳು ಗ್ರಾಮಸಭೆಗೂ ಬರದೆ ತಪ್ಪಿಸಿಕೊಳ್ಳುತ್ತಾರೆ. ಸವಲತ್ತುಗಳ ಬಗ್ಗೆ ಸರಿಯಾದ ಮಾಹಿತಿಯನ್ನೂ ನೀಡುವುದಿಲ್ಲ. ಕಮಿಷನ್ ಏಜೆಂಟ್‌ಗಳು ಹೇಳಿದಂತೆ ಅಲ್ಲಿ ವ್ಯವಹಾರ ನಡೆಯುತ್ತದೆ ಎಂದು ಅನಿಲ್ ರೈ ಆರೋಪಿಸಿದರು.
ಜನಪ್ರತಿನಿಧಿಗಳ ಆಕ್ರೋಶವನ್ನು ಅರ್ಥಮಾಡಿಕೊಂಡ ಇ.ಒ. ಮಲ್ಲೇಸ್ವಾಮಿ ಅಧಿಕಾರಿಯನ್ನು ಬರಹೇಳುವಂತೆ ಸಭೆಯಲ್ಲಿದ್ದ ಅವರ ಸಹಾಯಕ ಅಧಿಕಾರಿಗೆ ಸೂಚಿಸಿದರು. ತಡವಾಗಿ ಬಂದ ಅಧಿಕಾರಿಯನ್ನು ಮತ್ತೆ ತರಾಟೆಗೆ ತೆಗೆದುಕೊಂಡ ದೇವರಾಜ್ ಕಚೇರಿಯಲ್ಲಿದ್ದೂ ಈ ಅಧಿಕಾರಿ ಸಭೆಗೆ ಬಂದಿಲ್ಲ ಯಾಕೆ ಎಂದು ಉತ್ತರ ನೀಡಲಿ. ಈ ಅಧಿಕಾರಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು. ಈ ರೀತಿ ಮಾಡಿರುವುದು ತಪ್ಪು ಎಂದು ಕಾರ್ಯನಿರ್ವಹಣಾಧಿಕಾರಿಗಳೂ ಹೇಳಿದರು. ಆದರೆ ಈ ಅಧಿಕಾರಿ ಕೂಡಾ ಫಲಾನುಭವಿಗಳ ಕುರಿತಾದ ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ವಿಫಲರಾದರು. ಇದರಿಂದ ಮತ್ತೂ ಕೆರಳಿದ ದೇವರಾಜ್ ಇವರು ಬೇನಾಮಿ ಹೆಸರಲ್ಲಿ ಹಣ ಪಡೆಯುತ್ತಿದ್ದಾರೆ. ಇವರಲ್ಲಿ ಕಮಿಷನ್ ದಲ್ಲಾಳಿಗಳಿದ್ದಾರೆ. ಇವರನ್ನು ಅಮಾನತು ಮಾಡಲು ಶಿಫಾರಸು ಮಾಡಿ. ಇವರ ಕಚೇರಿಯಲ್ಲಿ ಏನೇನು ನಡೀತಿದೆ. ಎಲ್ಲವನ್ನು ಹೊರಗೆ ತೆಗಿತೇನೆ ಎಂದರು. ಸದಸ್ಯರೆಲ್ಲರ ಆಕ್ರೋಶಕ್ಕೆ ಮಣಿದ ಅಧಿಕಾರಿ ದಿವಾಕರ್ ಕ್ಷಮೆಯಾಚಿಸಿದರು.
ಸಾಮಾಜಿಕ ಅರಣ್ಯ ಅಧಿಕಾರಿ ಉದ್ಯೋಗ ಮಿತ್ರ ಯೋಜನೆಯಡಿ ಎಂ.ಬಿ.ಪುಸ್ತಕದಲ್ಲಿ ಬರೆಯಲು ಲಂಚ ಕೇಳುತ್ತಾರೆ ಎಂದು ಸದಸ್ಯೆ ಭಾಗ್ಯ ಪ್ರಸನ್ನ ಗಂಭೀರ ಆರೋಪ ಮಾಡಿದರು. ನನ್ನ ಹತ್ತಿರವೇ ಕೇಳಿದ್ದಾರೆ ಎಂದು ಸದಸ್ಯ ಜಯಪ್ರಕಾಶ್ ಕುಂಚಡ್ಕ ಆರೋಪಿಸಿದರು. ನಿಮ್ಮ ಬಗ್ಗೆ ಹಾಗೂ ನಿಮ್ಮ ಸಹಾಯಕ ಅಧಿಕಾರಿ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸರಿಯಾಗಿ ಕರ್ತವ್ಯ ನಿರ್ವಹಿಸದ್ದಿದರೆ ಕಾನೂನು ಕ್ರಮಕ್ಕೆ ಜಿ.ಪಂ.ಗೆ ಬರೆಯಲಾಗುತ್ತದೆ ಎಂದು ಅಧ್ಯಕ್ಷ ಮುಳಿಯ ಕೇಶವ ಭಟ್ ಎಚ್ಚರಿಕೆ ನೀಡಿದರು.
ಸುಬ್ರಹ್ಮಣ್ಯದಲ್ಲಿ ಪಂಚಾಯತಿನ ಅನುಮತಿ ಪಡೆಯದೆ ಅನೇಕ ಕಟ್ಟಡ ಕಟ್ಟುತ್ತಿದ್ದಾರೆ. ಆದರೆ ಅಂಥ ಕಟ್ಟಡಗಳಿಗೆ ಮೆಸ್ಕಾಂನವರು ಪಂಚಾಯಿತಿ ಎನ್.ಒ.ಸಿ. ಇಲ್ಲದೆ ವಿದ್ಯುತ್ ಸಂಪರ್ಕ ನೀಡುವುದು ಎಷ್ಟು ಸರಿ ಎಂದು ಕೆ.ಎಸ್.ದೇವರಾಜ್ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅದಲ್ಲದೆ ಇದು ಧಾರ್ಮಿಕ ದತ್ತಿ ಇಲಾಖೆ ಮೂಲಕ ಆಗುತ್ತಿದೆ. ಅದಕ್ಕೆ ಅನುಮತಿ ಬೇಡ ಎಂದು ಆಯುಕ್ತರೇ ತಿಳಿಸಿದ್ದಾರೆ ಎಂದು ಮೆಸ್ಕಾಂ ಎ.ಇ.ಇ ತಿಳಿಸಿದಾಗ ನಿಮ್ಮ ಮೇಲಧಿಕಾರಿಗಳು ಹೇಳಿದರೆ ನೀವು ಪಾಲಿಸಿ. ಉಳಿದ ಇಲಾಖೆಗಳು ಹೇಳಿದರೆ ಯಾಕೆ ಪಾಲಿಸುವುದು. ನಿಮ್ಮ ಇದೆ ಪ್ರವೃತ್ತಿ ಮುಂದುವರಿದರೆ ನಿಮ್ಮ ಇಲಾಖೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ದೇವರಾಜ್ ಎಚ್ಚರಿಸಿದರು.

ಮೀಪುಗುರಿ ದೇವಳದಲ್ಲಿ ಕೋಣದ ರುಂಡವಿರಿಸಿದ್ದ ದುಷ್ಕರ್ಮಿ ಸೆರೆ

Posted by JAYAKIRANA Kirana on | 0 comments | Leave a comment...


ಮಂಗಳೂರು: ಕಾಸರಗೋಡು ಬಳಿಯ ಮೀಪುಗುರಿ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದ ದೀಪದ ಮೇಲೆ ಕೋಣದ ರುಂಡವಿರಿಸಿ ಪರಿಸರದಲ್ಲಿ ಘರ್ಷಣೆ ಹಾಗೂ ಉದ್ವಿಗ್ನ ಪರಿಸ್ಥಿತಿಗೆ ಕಾರಣನಾಗಿದ್ದ ದುಷ್ಕರ್ಮಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪೆರುಂಬಾವೂರು-ಆರ್.ಡಿ.ನಗರ ನಿವಾಸಿ ಮುಹಮ್ಮದ್ ಬಿಲಾಲ್(೨೧) ಎಂದು ಹೆಸರಿಸಲಾಗಿದೆ. ಈತ ಪೆರುಂಬಾವೂರಿನ ಬೇಕರಿಯೊಂದರಲ್ಲಿ ಕಳೆದ ಒಂದು ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಆತನಿಗೆ ಬೇಕರಿ ಮಾಲಕ ಆಶ್ರಯ ನೀಡಿದ್ದಾನೆ ಎಂದು ಹಿಂದು ಸಂಘಟನೆ ನಾಯಕರು ಪ್ರತಿಭಟನೆ ನಡೆಸಿದ್ದಾರೆ.

ಸಹೋದರಿಗೆ ಇರಿಯಲು ಯತ್ನಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕ

Posted by JAYAKIRANA Kirana on | 0 comments | Leave a comment...


ಸುಳ್ಯ: ಯುವಕನೋರ್ವ ತನ್ನ ಸಹೋದರಿಗೆ ಚೂರಿಯಿಂದ ಇರಿದು ತಾನೂ ಸೀಮೆಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸುಳ್ಯದ ತೋಡಿಕ್ಕಾನ ಗ್ರಾಮದಲ್ಲಿ ನಡೆದಿದೆ.
ಚೆನ್ನಪ್ಪ ಗೌಡರ ಪುತ್ರ ಚೇತನ್ (೨೩) ಆತ್ಮಹತ್ಯೆಗೆ ಯತ್ನಿಸಿದಾತ. ನಿನ್ನೆ ಮನೆಯಲ್ಲಿ ತನ್ನ ಸಹೋದರಿಗೆ ಚೂರಿಯಿಂದ ಇರಿಯಲು ಯತ್ನಿಸಿದ ಬಳಿಕ ಈತ ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಸುಳ್ಯ ಪೊಲೀಸರು ಈ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಗಂಭೀರ ಸ್ಥಿತಿಯಲ್ಲಿರುವ ಚೇತನ್ ನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೋಹನಕುಮಾರ ಸರಣಿ ಕೊಲೆ ಪ್ರಕರಣ: ತನಿಖೆಯ ವಿವರ ನೀಡಿದ ಚಂದ್ರಗುಪ್ತ

Posted by JAYAKIRANA Kirana on | 0 comments | Leave a comment...


ಮಂಗಳೂರು: ಮೋಹನಕುಮಾರ ನಡೆಸಿರುವನೆನ್ನಲಾದ ಸರಣಿ ಕೊಲೆ ಪ್ರಕರಣದ ಪ್ರಮುಖ ಮೂರು ಪ್ರಕರ ಣಗಳಿಗೆ ಸಂಬಂಧಿಸಿದಂತೆ ನಡೆಯು ತ್ತಿರುವ ಸಾಕ್ಷಿಗಳ ಹೇಳಿಕೆ ದಾಖಲಿಸುವ ಮೂರನೆ ಹಂತದ ಪ್ರಕ್ರಿಯೆ ಸೋಮ ವಾರದಿಂದ ಮುಂದುವವರಿದ್ದು ನಿನ್ನೆ ಪುತ್ತೂರು ಉಪವಿಭಾಗದ ಆಗಿನ ಎಎಸ್ಪಿ ಚಂದ್ರಗುಪ್ತ ತಾನು ನಡೆಸಿದ ತನಿಖೆ ಸಂಪೂರ್ಣ ವಿವರ ನ್ಯಾಯಾಲಯಕ್ಕೆ ನೀಡಿದರು.
೨೦೦೯ರ ಅ.೨೧ರಂದು ಬಂಧಿತ ನಾದ ಮೋಹನಕುಮಾರನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ದಾಗ ಆತ ಅನಿತಾಳ ಕೊಲೆ ಮಾಡಿರು ವುದಾಗಿ ತಪ್ಪೊಪ್ಪಿಕೊಂಡಿದ್ದ. ಬಳಿಕ ಆತನ ಅಂಗ ಶೋಧನೆ ನಡೆಸಲಾಯಿತು ಅವನ ಬಳಿ ಇದ್ದ ಕಪ್ಪ್ಪು ಬ್ಯಾಗ್‌ನಲ್ಲಿ ಸೈನಡ್ ಇರುವ ಕರಡಿಗೆ, ಸೈನಡ್‌ನ ಎರಡು ಬಿಲ್ಲೆಗಳು ಎರಡು ಮೊಬೈಲ್ ಪೋನ್ ಸಹಿತ ಏಳು ಸೊತ್ತುಗಳನ್ನು ವಶಪಡಿಸಿಕೊಂಡು ಮರುದಿನ ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದಿಂದ ಆರೋಪಿಯನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರಿಸಲಾಯಿತು ಎಂದು ಹೇಳಿಕೆ ನೀಡಿದ ಚಂದ್ರಗುಪ್ತ, ಅನಿತಾಳನ್ನು ಬಿಸಿರೋಡ್ ಬಸ್ ನಿಲ್ದಾಣದಿಂದ ಕರೆದೊಯ್ದ ಸ್ಥಳ, ಮೋನಕುಮಾರನ ಪತ್ನಿಯ ಮನೆಯಲ್ಲಿ ನಡೆಸಿದ ಮಹಜರು, ಅನಿತಾಳ ಮೃತದೇಹ ಸಿಕ್ಕ ಹಾಸನ ಬಸ್ ನಿಲ್ದಾಣ ಹಾಗೂ ಆತ ಅನಿತಾ ಳೊಂದಿಗೆ ಇದ್ದ ವಸತಿ ಗೃಹಗಳ ಮಹ ಜರು, ಚಿನ್ನಾಭರಣ ಅಡವಿಟ್ಟ ಪೈನಾನ್ಸ್ ಗಳಲ್ಲಿ ಚಿನ್ನಾಭರಣ ವಶಪಡಿಸಿಕೊಳ್ಳ ಲಾದ ಮಹಜರು ವಿವರವನ್ನು ಚಂದ್ರಗುಪ್ತ ನೀಡಿದರು.
ಇಂದಿನ ಕಲಾಪ ಬಳ್ಳಾರಿಯ ಎಸ್ಪಿ ಡಾ.ಚಂದ್ರಗುಪ್ತರ ಹೇಳಿಕೆ ದಾಖಲಿಸಿ ಕೊಳ್ಳುವುದಕ್ಕೆ ಮೀಸಲಾಗಿತ್ತು. ಪೂರ್ವಾಹ್ಣ ೧೧:೩೦ರಿಂದ ಸಂಜೆ ೫:೩೦ರ ವರೆಗೆ ಅವರೊಬ್ಬರ ಹೇಳಿಕೆಯನ್ನೇ ದಾಖಸಿಕೊಳ್ಳಲಾಯಿತು. ಪ್ರಕರಣ ಬೆಳ ಕಿಗೆ ಬರಲು ಪ್ರಮುಖ ಕಾರಣರಾದ ಬಂಟ್ವಾಳದ ಆಗಿನ ಇನ್‌ಸ್ಪೆಕ್ಟರ್ ನಂಜುಂ ಡೇಗೌಡ ಹಾಗೂ ಮೋಹನಕುಮಾರ ನಿಗೆ ಸೈನಡ್ ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಕೆಮಿಕಲ್ ವ್ಯಾಪಾರಿ ಮುಹಮ್ಮzನ ಹೇಳಿಕೆ ಪಡೆಯಬೇಕಿತ್ತು. ಮುಹಮ್ಮದ್ ಇಂದು ಹಾಜರಿರಲಿಲ್ಲ. ನಂಜುಂಡೇ ಗೌಡರು ತಮ್ಮ ಸರದಿಗಾಗಿ ಕಾದಿದ್ದರು. ಇಂದು ನಡೆಯುವ ಕಲಾಪದಲ್ಲಿ ಮೋಹನ ಕುಮಾರ ಪಾಟಿ ಸವಾಲು ಎಸೆಯುವ ಸಾಧ್ಯತೆಗಳಿವೆ.

ನಾರಾವಿ: ಹೊಳೆಯಲ್ಲಿ ಮುಳುಗಿ ಮೃತ್ಯು

Posted by JAYAKIRANA Kirana on | 0 comments | Leave a comment...


ಮಂಗಳೂರು: ಮಾವನ ಮನೆಗೆ ಬಂದಿದ್ದ ಅಳಿಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ಶಿರಾಡಿ ಗ್ರಾಮದಲ್ಲಿ ನಿನ್ನೆ ನಡೆದಿದೆ.
ಮೃತರನ್ನು ಎನ್.ಆರ್.ಪುರ ನಿವಾಸಿ ಸಜಿ ಮ್ಯಾಥ್ಯೂ(೪೦) ಎಂದು ಹೆಸರಿಸಲಾಗಿದೆ. ಇವರು ಮಂಗಳವಾರ ಸಂಜೆ ಶಿರಾಡಿ ಗ್ರಾಮದ ಗುಂಡ್ಯ ಹೊಳೆಗೆ ಸ್ನಾನಕ್ಕೆ ಹೋದಾಗ ಘಟನೆ ಸಂಭವಿಸಿದೆ.

ನವಜಾತ ಶಿಶು ಮಾರಾಟ

Posted by JAYAKIRANA Kirana on | 0 comments | Leave a comment...


ಮಂಗಳೂರು: ಕುಂದಾಪುರದ ಸ್ಫೂರ್ತಿ ಸಂಸ್ಥೆಯಲ್ಲಿ ಆಸರೆ ಪಡೆದಿದ್ದ ಮಹಿಳೆಯ ಮಗುವನ್ನು ಬೇಳೂರು ಉಪಕೇಂದ್ರದ ಎಎನ್‌ಎಂ ಕವಿತಾ ಬಾಬು ಮರಕಾಲ ಎಂಬವರು ಮಾರಾಟ ಮಾಡಿರುವುದಾಗಿ ಸ್ಫೂರ್ತಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಕೇಶವ ಕೋಟೇಶ್ವರ ಪೊಲೀಸರಿಗೆ ದೂರಿದ್ದಾರೆ. ಕಳೆದ ಫೆ.೨೯ರಂದು ಕವಿತಾ ಗಂಡುಮಗುವಿಗೆ ಜನ್ಮ ನೀಡಿದ್ದು, ಮಾರ್ಚ್ ಆರರಂದು ಮಗು ವನ್ನು ಕೋಟತಟ್ಟು ಗ್ರಾಮದ ಭಾಗ್ಯ ಎಂಬವರಿಗೆ ಮಗುವನ್ನು ೩೨ ಸಾವಿರ ರೂಪಾಯಿಗೆ ಮಾರಾಟ ಮಾಡಿರುವು ದಾಗಿ ದೂರಲಾಗಿದೆ.

ಬಾವಿಗೆ ವಿಷ

Posted by JAYAKIRANA Kirana on | 0 comments | Leave a comment...


ಮಂಗಳೂರು: ಬೆಳ್ತಂಗಡಿ ಸಮೀ ಪದ ಇಂದಬೆಟ್ಟು-ದೇರಾಜೆ ಎಂಬಲ್ಲಿನ ವ್ಯಕ್ತಿಯೊಬ್ಬರ ಮನೆಯ ಕುಡಿಯುವ ಬಾವಿಯ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿದ ಘಟನೆ ನಿನ್ನೆ ಬೆಳಕಿಗೆ ಬಂದಿದೆ.
ಮ್ಯಾಥ್ಯು ಕೆ.ಎ. ಎಂಬವರು ಪೊಲೀಸರಿಗೆ ದೂರಿದ್ದು, ನೀರು ಕುಡಿದ ಮ್ಯಾಥ್ಯು ಅವರ ಪತ್ನಿ ಶೆರ್ಲಿ ಮ್ಯಾಥ್ಯು, ಮಗು ಸ್ಮಿತಾ ವಾಂತಿ ಮಾಡಿದ್ದು, ಬಾವಿ ನೀರು ಹಳದಿ ಬಣ್ಣಕ್ಕೆ ತಿರುಗಿದೆ ಎಂದು ದೂರಿದ್ದಾರೆ.

ಟ್ಯಾಂಕರ್‌ಗಳ ನಡುವೆ ಡಿಕ್ಕಿ: ಓರ್ವ ಮೃತ್ಯು, ಇನ್ನೋರ್ವ ಗಂಭೀರ

Posted by JAYAKIRANA Kirana on | 0 comments | Leave a comment...


ಉಪ್ಪಿನಂಗಡಿ: ಇಂದು ನಸುಕಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗಡಿ ಯಾರ-ಪೇರಮೊಗರು ಎಂಬಲ್ಲಿ ಟ್ಯಾಂಕರ್‌ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದು ಟ್ಯಾಂಕ ರ್‌ನ ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಚಾಲಕನನ್ನು ಗಂಭೀರ ಗಾಯಗಳೊಂದಿಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತನನ್ನು ಚೆನ್ನೈ ಮೂಲದ ರಮೇಶ್ ಎಂದು ಹೆಸರಿಸಲಾಗಿದೆ. ಗಾಯಾಳುವನ್ನು ಶಂಕರ್ ಎಂದು ಗುರುತಿಸಲಾಗಿದೆ. ನಸುಕಿನ ಜಾವ ಮಂಗಳೂರಿನಿಂದ ಗ್ಯಾಸ್ ತುಂಬಿಸಿ ಕೊಂಡು ಬೆಂಗಳೂರಿಗೆ ಸಾಗುತ್ತಿದ್ದ ಟ್ಯಾಂಕರ್ ಎದುರುಗಡೆಯಿಂದ ಬರುತ್ತಿದ್ದ ಖಾಲಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಿಂದಾಗಿ ಒಂದು ಗಂಟೆಯ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.

ಮಾಟ-ಮಂತ್ರ: ಮಂತ್ರವಾದಿಗೆ ಗೂಸಾ

Posted by JAYAKIRANA Kirana on | 0 comments | Leave a comment...


ಮಂಗಳೂರು: ಮಂಜೇಶ್ವರ ಸಮೀಪದ ಹೊಸಂಗಡಿ ಎಂಬಲ್ಲಿ ಮಾಟ-ಮಂತ್ರದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಮಂತ್ರವಾದಿಗೆ ಸ್ಥಳೀಯ ಮಹಿಳೆಯರೇ ಗೂಸಾ ನೀಡಿದ ಘಟನೆ ನಿನ್ನೆ ನಡೆದಿದೆ.
ಕೃಷ್ಣಾನಂದ ಎಂಬಾತ ನಾಲ್ಕು ವರ್ಷಗಳ ಹಿಂದೆ ಕನ್ಯಾನದ ಮುಡಿಮಾರ್ ಎಂಬಲ್ಲಿಂದ ಬಂದು ಇಲ್ಲಿ ಠಿಕಾಣಿ ಹೂಡಿದ್ದ. ತನ್ನಲ್ಲಿ ಸಮಸ್ಯೆ ಎಂದು ಹೇಳಿಕೊಂಡು ಬರುತ್ತಿದ್ದ ಜನರಿಗೆ ಮಂಕುಬೂದಿ ಎರಚಿ ಹಣ ಕೀಳುತ್ತಿದ್ದ. ಇಷ್ಟೇ ಅಲ್ಲದೆ ಮನೆ-ಮನೆಗೆ ತೆರಳಿ ಗಂಡ-ಹೆಂಡತಿ ನಡುವಿನ ಸಂಸಾರದೊಳಗಿನ ಸಮಸ್ಯೆಯನ್ನು ಸರಿಪಡಿಸುತ್ತೇನೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದ ಆರೋಪ ಈತನ ಮೇಲಿತ್ತು. ಈತನ ಕಪಟತನ ಅರಿತು ಸ್ಥಳೀಯ ಮಹಿಳೆಯರು ಈತನ ಮೇಲೆ ದಾಳಿ ನಡೆಸಿದ್ದಾರೆ.

ಉಡುಪಿ: ಪ್ರತ್ಯೇಕ ಪ್ರಕರಣ: ಇಬ್ಬರು ನೀರುಪಾಲು

Posted by JAYAKIRANA Kirana on | 0 comments | Leave a comment...


ಮಂಗಳೂರು: ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಕಟಪಾಡಿ ಮಟ್ಟುವಿನ ಪದ್ಮನಾಭ(೪೧) ಮೃತಪಟ್ಟಿದ್ದಾರೆ. ನಿನ್ನೆ ಮುಂಜಾನೆ ಮಲ್ಪೆಯಲ್ಲಿ ಬೋಟ್‌ನಿಂದ ಮೀನು ಖಾಲಿ ಮಾಡುತ್ತಿದ್ದ ವೇಳೆ ಮೀನುಗಾರ ವೆಂಕಟೇಶ ತಿಂಗಳಾಯ(೪೧) ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟಿ ದ್ದಾರೆ. ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು ಪ್ರಜ್ಞಾಹೀನರಾದ ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಯುವಕನಿಗೆ ತಂಡದಿಂದ ಹಲ್ಲೆ

Posted by JAYAKIRANA Kirana on | 0 comments | Leave a comment...


ವಿಟ್ಲ: ಯುವಕನೋರ್ವನಿಗೆ ತಂಡವೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ವಿಟ್ಲ ನಾಲ್ಕು ಮಾರ್ಗ ಸಮೀಪ ಬುಧವಾರ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
 ಕೊಡಪದವು ಸಮೀಪದ ತಾಳಿತ್ತನೂಜಿ ನಿವಾಸಿ ಸುಲೈಮಾನ್ ಅವರ ಪುತ್ರ ಮಹಮ್ಮದ್ ಶರೀಫ್(೨೨) ಎಂಬವನು ಹಲ್ಲೆಗೊಳಗಾಗಿದ್ದು, ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನಿಗೆ ಆರೋಪಿಗಳಾದ ವಿಟ್ಲ ಪಡ್ನೂರು ಗ್ರಾಮದ ಶೀನಾಜೆ ನಿವಾಸಿ ಯೂಸುಫ್, ಒಕ್ಕೆತ್ತೂರು ನಿವಾಸಿ ಸುಲೈಮಾನ್, ಬೊಳತ್ತೂರು ನಿವಾಸಿ ಉನೈಶ್ ಹಾಗೂ ಇತರ ಇಬ್ಬರು ಅಪರಿಚಿತ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ದೂರಿದ್ದಾನೆ.
 ಯೂಸುಫ್ ಹಾಗೂ ಲತೀಫ್ ಪರಸ್ಪರ ವಿರೋಧಿಗಳಾಗಿದ್ದರು. ಸ್ನೇಹಿತ ಲತೀಫ್ ಎಂಬಾತ ನೊಂದಿಗೆ ಮಹಮ್ಮದ್ ಶರೀಫ್ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಆರೋಪಿಗಳು ಬೈಕನ್ನು ತಡೆದು ನಿಲ್ಲಿಸಿ ಮಹಮ್ಮದ್ ಶರೀಫ್‌ನಲ್ಲಿ ‘ನೀನು ನನ್ನ ಶತ್ರು ಲತೀಫ್‌ನೊಂದಿಗೆ ಎಲ್ಲಿಗೂ ಹೋಗಬಾರದು ಎಂದು ಜೀವ ಬೆದರಿಕೆ ಹಾಕಿ, ಬಳಿಕ ಅವನಿಗೆ ಹಲ್ಲೆ ನಡೆಸಿದರು ಎಂದು ಗಾಯಾಳು ಆರೋಪಿಸಿದ್ದಾನೆ. ಈ ಸಂದರ್ಭ ಲತೀಫ್ ಹಲ್ಲೆಕೋರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಗಂಭೀರವಾಗಿ ಗಾಯಗೊಂಡ ಮಹಮ್ಮದ್ ಶರೀಫ್‌ನನ್ನು ಸ್ಥಳೀಯರು ಆಸ್ಪತ್ರೆ ದಾಖಲು ಮಾಡಿದರು.
ಮಹಮ್ಮದ್ ಶರೀಫ್ ತಂದೆ ಸುಲೈಮಾನ್ ಅವರು ಈ ಹಿಂದೆ ಲತೀಫ್‌ನನ್ನು ತನ್ನ ಜತೆಯಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಅವರಿಗೂ ಕೂಡ ಪ್ರಮುಖ ಆರೋಪಿ ಯೂಸುಫ್ ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದ ಎಂದು ದೂರಲಾಗಿದೆ. ಈ ಪ್ರಕರಣ ಬಳಿಕ ರಾಜಿ ಪಂಚಾಯಿತಿ ಮೂಲಕ ಇತ್ಯರ್ಥಗೊಂಡಿದ್ದವು ಎಂದು ತಿಳಿದುಬಂದಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಮಹಿಳೆಯ ಸರ ಕಳವು: ನಗರದಲ್ಲಿ ಸಕ್ರಿಯವಾಗಿರುವ ತಂಡ

Posted by JAYAKIRANA Kirana on | 0 comments | Leave a comment...


ಮಂಗಳೂರು: ಮಹಿಳೆಯೊಬ್ಬರ ಸರವನ್ನು ಕಳವುಗೈದಿರುವ ಘಟನೆ ಶಕ್ತಿನಗರದ ಕುಂಟಲಪಾಡಿ ಮಠದ ಬಳಿ ನಿನ್ನೆ ಸಂಭವಿಸಿದ್ದು, ಕಳೆದ ಮೂರು ದಿನಗಳಿಂದ ಇಂತಹದೇ ಕೃತ್ಯ ನಗರದ ಹೊರವಲಯದಲ್ಲಿ ನಡೆಯುತ್ತಿರು ವುದರಿಂದ ತಂಡವೊಂದು ಕೃತ್ಯದಲ್ಲಿ ಸಕ್ರಿಯವಾಗಿರುವ ಕುರಿತು ಪೊಲೀಸ್ ವಲಯದಲ್ಲಿ ಸಂಶಯ ವ್ಯಕ್ತವಾಗಿದೆ.
ಕುಂಟಲಪಾಡಿ ನಿವಾಸಿ ಹರಿಣಾಕ್ಷಿ ಎಂಬವರು ಮಂಗಳೂರಿನಿಂದ ಬಸ್‌ನಲ್ಲಿ ಬಂದವರು ಮಧ್ಯಾಹ್ನ ೩:೩೦ರ ಸುಮಾರಿಗೆ ಕುಂಟಲಪಾಡಿಯಲ್ಲಿ ಇಳಿದು ಮನೆಯತ್ತ ನಡೆದು ಹೋಗುತ್ತಿದ್ದಾಗ ಕುಂಟಲಪಾಡಿ ಮಠದ ಬಳಿ ದಾರಿ ಕೇಳುವ ನೆಪದಲ್ಲಿ ಹತ್ತಿರ ಬಂದ ೨೫ ವರ್ಷ ಅಂದಾಜಿನ ಯುವಕನೋರ್ವ ಅವರ ಕತ್ತಿನಲ್ಲಿದ್ದ ಕರಿಮಣಿ ಸರ ಅಪಹರಿಸಿ ಪರಾರಿಯಾದನು. ಕಳವಾದ ಕರಿಮಣಿ ಸರದ ಮೌಲ್ಯ ೨೦ ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದ ಎರಡನೆ ಸರಗಳ್ಳತನದ ಪ್ರಕರಣ ಇದಾಗಿದೆ.
ಕಳೆದೆರಡು ದಿನಗಳಲ್ಲಿ ಕಾವೂರು ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಗಳಲ್ಲಿಯೂ ಒಂದೊಂದು ಸರಗಳ್ಳತನದ ಪ್ರಕರಣಗಳು ದಾಖಲಾಗಿವೆ. ಸರಗಳ್ಳರ ತಂಡವೇ ಇಲ್ಲಿ ಕಾರ್ಯಾಚರಿಸುತ್ತಿರುವ ಶಂಕೆ ಇದ್ದು ಈ ದಿಸೆಯಲ್ಲಿ ಪೊಲೀಸರು ಜಾಗೃತ ಕ್ರಮಕ್ಕೆ ಮುಂದಾಗಬೇಕಿದೆ.

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4047) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2502) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3677) lokayukta (3) madikeri (1) maleria (1) mangalore (585) mangaloreairport (1) manglore (7) manipal (29) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (415) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (272) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (799) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (951) tpchandrashekaran (1) traffic (1) train (1) udu (1) udupi (485) udyoga (60) ullal (7) upcl (2) upi (152) uppinangadi (47) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)