ಸ್ವಾಗತ ಸಮಿತಿಗೆ ಇಂಥವರೇ ಬೇಕು

Posted by JAYAKIRANA Kirana on Monday, 12 March 2012 | 0 comments | Leave a comment...

ಮಾರ್ಚ್ ಹನ್ನೊಂದರ ಪತ್ರಿಕೆಯ ನಿಮ್ಮಿಂದ ವಿಭಾಗದಲ್ಲಿ ಹಸನ್ ಮಲ್ಲೂರು ಹೆಸರಿನಲ್ಲಿ ಪ್ರಕಟಗೊಂಡ 'ಸ್ವಾಗತ ಸಮಿತಿಗೆ ಇಂಥವರು ಬೇಕಾ? ಎಂಬ ಬರಹಕ್ಕೆ ಪ್ರತಿಕ್ರಿಯೆ. ಸದ್ರಿ ನನ್ನ ಹೆಸರಿನಲ್ಲಿ ಪ್ರಕಟವಾದ ಈ ಬರಹಕ್ಕೂ ನನಗೂ ಯಾವುದೇ ಸಂಬಂಧವಿರುವುದಿಲ್ಲ. ನನ್ನ ಹೆಸರನ್ನು ದುರ್ಬಳಕೆ ಮಾಡಲು ಕೆಲ ಹಿತಾಸಕ್ತಿಗಳು ಈ ಬರಹವನ್ನು ಪತ್ರಿಕೆಯಲ್ಲಿ ನೀಡಿರುತ್ತಾರೆ. ನಾನು ಮಲ್ಲೂರು ಸಅದಿಯೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದು, ಎಲ್ಲಾ ಸುನ್ನಿ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸು ತ್ತಿದ್ದೇನೆ. ಇದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನ ಹಾಗೂ ಮಲ್ಲೂರು ಸಅದಿಯವರ ಬಾಂಧವ್ಯಕ್ಕೆ ಹುಳಿಹಿಂಡಲು ಪ್ರಯತ್ನಿಸಿರುವರು. ಜಿಲ್ಲೆಯ ಕುಗ್ರಾಮ ವಾಗಿ ಗುರುತಿಸಿಕೊಳ್ಳುತ್ತಿದ್ದ ಮಲ್ಲೂರಿನಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಸಂಸ್ಥೆಗ ಳನ್ನು ಕಟ್ಟಿ ಬೆಳೆಸಿ ಸುನ್ನತ್ ಜಮಾತ್‌ಗಾಗಿ ಮಲ್ಲೂರು ಸಅದಿಯವರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ.

ಈ ಸಂಸ್ಥೆಯಲ್ಲಿ ನಮ್ಮ ಮನೆಯ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಸಂಸ್ಥೆ ಕರ್ನಾಟಕದಲ್ಲಿ ಅಭಿಮಾನದ ಕೇಂದ್ರವಾಗಿ ಗುರುತಿಸಿಕೊಂಡಿದೆ. ಎಪ್ರಿಲ್ ಹನ್ನೊಂ ದರಂದು ನೆಹರೂ ಮೈದಾನದಲ್ಲಿ 'ಮಾನವೀಯತೆಯ ಜಾಗೃತಿಗಾಗಿ ಎಂಬ ಘೋಷ ಣೆಯೊಂದಿಗೆ ಮಾನವತಾ ಮಹಾ ಸಂಗಮ ನಡೆಯಲಿದ್ದು, ಇದು ಬಹಳ ದೊಡ್ಡ ಸಂಗಮವಾದುದರಿಂದ ಇದರ ಕಾರ್ಯನಿರ್ವಹಣೆಗೆ ಕ್ರಿಯಾಶೀಲ, ಪ್ರಾಮಾಣಿಕರೇ ಬೇಕಾಗಿರುತ್ತಾರೆ. ಇಂಥದ್ದೊಂದು ಸ್ವಾಗತ ಸಮಿತಿಯಲ್ಲಿ ಜನರಲ್ ಕನ್ವೀನರ್ ಆಗಿ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು ಇವರು ಇದ್ದರೆ ಸಮ್ಮೇಳನವು ಐತಿಹಾಸಿಕವಾಗ ಲಿದೆಯೆಂಬುದು ಕರ್ನಾಟಕದ ಸುನ್ನಿ ಮಕ್ಕಳಿಗೆ ತಿಳಿದ ಸಂಗತಿ ತಾನೇ. ಆದುದರಿಂದ ಸ್ವಾಗತ ಸಮಿತಿಗೆ ಇಂಥವರೇ ಬೇಕು.

ಹಸನ್ ಬಾವಾ, ಮಲ್ಲೂರು

ಈ ಸಮಸ್ಯೆಗೆ ಪರಿಹಾರ ಒದಗಿಸುವವರು ಯಾರು?

Posted by JAYAKIRANA Kirana on | 0 comments | Leave a comment...

ನಾಟೆಕಲ್‌ನಿಂದ ಮಂಜನಾಡಿಗೆ ಹೋಗುವ ರಸ್ತೆಯಲ್ಲಿರುವ ತೆಂಗಿನ ತೋಟಕ್ಕೆ ಕೋಳಿಗಳ ತ್ಯಾಜ್ಯಗಳನ್ನು ಕೋಳಿ ವ್ಯಾಪಾರಸ್ಥರು ಎಸೆಯು ತ್ತಿದ್ದು, ಇದರಿಂದ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಕೊಳೆತ ಕೋಳಿ ತ್ಯಾಜ್ಯಗಳ ದುರ್ವಾ ಸನೆಯಿಂದ ಬಸ್‌ನಲ್ಲಿ ಸಂಚರಿಸುವವರು ಮೂಗಿಗೆ ಕೈ ಮುಚ್ಚಿಕೊಂಡೇ ಹೋಗಬೇಕಾದ ಪರಿಸ್ಥಿತಿ.

ಈ ಬಗ್ಗೆ ಬಹಳಷ್ಟು ಮಂದಿ ಜನಪ್ರತಿನಿಧಿ ಗಳ, ಅಧಿಕಾರಿಗಳ ಗಮನ ಸೆಳೆದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಕೋಳಿ ವ್ಯಾಪಾರಸ್ಥರು ಅವರ ಬದುಕಿನ ದಾರಿಯಾಗಿ ಕೋಳಿ ವ್ಯಾಪಾರ ಮಾಡುತ್ತಿರುವುದು ಸರಿ, ಆದರೆ ಅದರ ತ್ಯಾಜ್ಯ ವನ್ನು ನೂರಾರು ಮಂದಿ ಸಂಚರಿಸುವ ರಸ್ತೆ ಬದಿ ಯಲ್ಲಿ ಹಾಕುವುದು ಸರಿಯೇ?

ಇದರಿಂದ ಜನರ ಆರೋಗ್ಯ ಹದಗೆಟ್ಟು ಹೋದರೆ ಅದರ ಹೊಣೆ ವಹಿಸುವವರು ಯಾರು? ಈ ಬಗ್ಗೆ ಕೋಳಿ ವ್ಯಾಪಾರ ಮಾಡುವ ವರು ಕೂಡಾ ಚಿಂತಿಸಬೇಕು. ಈಗಾಗಲೇ ಕೋಳಿ ಗಳ ತ್ಯಾಜ್ಯ ಈ ತೆಂಗಿನ ತೋಟದಲ್ಲಿ ತುಂಬಿರು ವುದರಿಂದ ಪ್ರಯಾಣಿಕರು ಬಹಳ ಸಂಕಷ್ಟದಿಂದ ಪ್ರಯಾಣಿಸಬೇಕಾದ ಅನಿವಾರ್ಯತೆ ಬಂದಿದೆ. ಸಮಸ್ಯೆಗಳಿಗೆ ಪರಿಹಾರ ನಾವು ಕೊಡುತ್ತೇವೆ ಎಂದು ಊರಿಡಿ ಡಂಗುರ ಸಾರುವ ಜನಪ್ರತಿನಿಧಿಗಳು ಈ ಒಂದು ಸಮಸ್ಯೆಗೆ ಶೀಘ್ರ ಪರಿಹಾರ ಯಾಕೆ ಒದ ಗಿಸುವುದಿಲ್ಲ? ಕೋಳಿಗಳ ತ್ಯಾಜ್ಯಗಳನ್ನು ಹಾಕು ವವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುವುದಿಲ್ಲ? ಒಟ್ಟಾರೆಯಾಗಿ ಎಲ್ಲರೂ ಮೌನ ಉತ್ತರ ನೀಡು ತ್ತಿರುವುದರಿಂದ ಇಲ್ಲಿನ ಈ ಸಮಸ್ಯೆ ಹಾಗೆಯೇ ಮುಂದುವರಿಯುತ್ತಿದೆ. ಇದರಿಂದ ತೊಂದರೆಗೊ ಳಗಾಗುವುದು ಈ ಊರಿನ ಜನರು. ಇದನ್ನು ಅರ್ಥಮಾಡಿಕೊಂಡು ರಸ್ತೆ ಬದಿಯಲ್ಲಿ ತ್ಯಾಜ್ಯಗ ಳನ್ನು ಹಾಕದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈ ಗೊಳ್ಳಬೇಕಾಗಿದೆ.

ಇಲ್ಲದೇ ಹೋದಲ್ಲಿ ಇಲ್ಲಿ ಕೊಳೆತ ತ್ಯಾಜ್ಯ ತುಂಬಿ ಸಾಂಕ್ರಾಮಿಕ ರೋಗ ಹರಡುವ ದಿನ ದೂರವಿಲ್ಲ. ವ್ಯಾಪಾರ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯವೂ ಕೂಡ ಮುಖ್ಯ. ಇದನ್ನಾದರೂ ಕೋಳಿ ವ್ಯಾಪಾರ ಮಾಡುವವರು ಅರ್ಥಮಾ ಡಿಕೊಂಡು ವ್ಯಾಪಾರ ಮಾಡಿ ಕೋಳಿ ತ್ಯಾಜ್ಯ ಎಸೆ ಯುವುದನ್ನು ನಿಲ್ಲಿಸಿದರೆ ಜನರಿಗೊಂದು ನೆಮ್ಮದಿ ಸಿಗಬಹುದು.

ಓರ್ವ ನಾಗರಿಕ, ಉರುಮನೆ

ರಾಷ್ಟ್ರೀಯ ಪಕ್ಷದ ನಾಯಕರೇ ಇದಕ್ಕುತ್ತರಿಸುವಿರಾ?

Posted by JAYAKIRANA Kirana on | 0 comments | Leave a comment...

ಕರ್ನಾಟಕ ರಾಜ್ಯದಲ್ಲಿ ಸರಕಾರ ಎಂಬು ದು ಇದೆಯೇ? ಕೇಂದ್ರ ಮತ್ತು ರಾಜ್ಯ ಸರಕಾ ರದ ಭ್ರಷ್ಟಾಚಾರ ಗಂಡಾಂತರಕಾರಿಯ ಲ್ಲವೇ? ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ ಪಕ್ಷ ಗಾಢ ನಿದ್ರೆಯಿಂದ ಏಳುವುದು ಯಾಕಾಗಿ? ರಾಷ್ಟ್ರೀಯ ಪಕ್ಷಗಳನ್ನು ಜನ ಯಾಕೆ ತಿರಸ್ಕರಿ ಸುತ್ತಿದ್ದಾರೆ? ಕರಾವಳಿ ಜಿಲ್ಲೆಯ ಹಲವಾರು ಗಂಭೀರ ಪ್ರಕರಣಗಳಲ್ಲಿ ಕಾಂಗ್ರೆಸ್-ಬಿಜೆಪಿ ಪರಸ್ಪರ ಸಹಕರಿಸುವುದು ಯಾತಕ್ಕಾಗಿ? ಇತರ ಜಿಲ್ಲೆಗಳಂತೆ ಉಡುಪಿ ಜಿಲ್ಲೆಗೆ ರೈಲ್ವೇ ಪ್ರಯಾಣದ ಸೌಲಭ್ಯಗಳು ಈ ವರೆಗೆ ಯಾಕೆ ದೊರಕಿಲ್ಲ? ಇಬ್ಬರು ಮೀನುಗಾರಿಕಾ ಸಚಿವರು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು, ಶಾಶ್ವತ ತಡೆಗೋಡೆ ಯಾಕೆ ನಿರ್ಮಿಸಿಲ್ಲ. ಕಡ ಲ್ಕೊರೆತದ ಹೆಸರಿನಲ್ಲಿ ಯಾವ್ಯಾವ ತಿಮಿಂಗಿ ಲಗಳು ಎಷ್ಟೆಷ್ಟು ನುಂಗಿ ಹಾಕಿವೆ? ಈ ಹಿಂದಿನ ಕಾಂಗ್ರೆಸ್ ಬಿಜೆಪಿ ಸರಕಾರಗಳು ತಮ್ಮ ಪ್ರಣಾ ಳಿಕೆಗಳಲ್ಲಿ ಹೇಳಿ ದ್ದೇನು? ಮಾಡಿದ್ದೇನು? ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಸಿ ಜನ ಸಾಮಾನ್ಯರನ್ನು ನಿರ್ಗತಿಕರನ್ನಾಗಿಸುವ ಬದಲು ವಿದೇಶದಲ್ಲಿರುವ ಕಾಳಧನ, ೨ಜಿ ಸ್ಪೆಕ್ಟ್ರಂನ ಲಂಚದ ಹಣ ವಸೂಲಿಗೆ ಕ್ರಮ ಕೈಗೊಂಡು ಈ ಕಂಪೆನಿಗಳ ನಷ್ಟ ಭರಿಸಲು ಕ್ರಮ ಕೈಗೊಳ್ಳ ಬಾರದೇಕೆ? ಜನರಿಗೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸದೆ ಕಾರ್ಕಳ ಬಸ್ಸು ನಿಲ್ದಾಣ ಅವೈeನಿಕವಾಗಿ ಸ್ಥಳಾಂತರ ಮಾಡಲು ಕಾರ ಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವರೇ?

ಸಚಿನ್ ಹೆಗ್ಡೆ, ಕಾರ್ಕಳ

ದ.ಕ.ಜಿಲ್ಲಾ ಕಸಾಪದಲ್ಲಿ ಬದಲಾವಣೆ ಬೇಕು

Posted by JAYAKIRANA Kirana on | 0 comments | Leave a comment...

ಸ್ಥಾಪಿತ ಹಿತಾಸಕ್ತಿಗಳ ಕಪಿಮುಷ್ಠಿಯಲ್ಲಿರುವ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಾಯಕತ್ವದ ಬದ ಲಾವಣೆ ಅನಿವಾರ್ಯವಾಗಿದೆ. ಕನ್ನಡವನ್ನು, ಕನ್ನಡ ಸಾಹಿತ್ಯ ಪರಿಷತ್ತನ್ನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದೇಣಿಗೆಯನ್ನು, ಸ್ವಹಿತಕ್ಕಾಗಿ, ಸ್ವಜನಪಕ್ಷಪಾತಕ್ಕಾಗಿ ಬಳ ಸಿಕೊಳ್ಳುವವರನ್ನು ಹಾಗೂ ಲಾಭಕ್ಕಾಗಿ ಅದರ ಹಿಂದೆ ಓಡುವವರನ್ನು ಬದಿಗಿಟ್ಟು ಈ ಬಾರಿಯ ಕಸಾಪ ಚುನಾ ವಣೆಗೆ ಹೊಸ ನಾಯಕರನ್ನು ಆಯ್ಕೆ ಮಾಡಬೇಕು. ಅದಿಲ್ಲ ಎಂದಾದರೆ ಕರ್ನಾಟಕ ರಕ್ಷಣಾ ವೇದಿಕೆಯು ಸಮಾನ ಮನಸ್ಕ ಕನ್ನಡ ಪರ ಸಂಘಟನೆಗಳ ಸಹಯೋ ಗದೊಂದಿಗೆ ತನ್ನದೇ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಲು ವೇದಿಕೆಯನ್ನು ಸಿದ್ಧಗೊಳಿಸಿದೆ. ಅದಕ್ಕೆ ನಾಡು ನುಡಿಯ ಬಗ್ಗೆ ಕಾಳಜಿ ಇರುವವರೆಲ್ಲಾ ಕೈಜೋಡಿಸಲಿದ್ದಾರೆ.

ಇತ್ತೀಚಿನ ಕೆಲವೊಂದು ಬೆಳವಣಿಗೆಯಲ್ಲಿ ಹಿರಿಯ ರಾದ ಹರಿಕೃಷ್ಣ ಪುನರೂರುರವರ ನೇತೃತ್ವದಲ್ಲಿ ಬದ ಲಾವಣೆಯ ಚಿಂತನೆ ನಡೆಯುತ್ತಿರುವುದು ಉತ್ತಮ ಬೆಳ ವಣಿಗೆ. ಸಂಘಟಕರೂ, ಸಾಹಿತ್ಯಾಭಿಮಾನಿಯೂ ಆದ ಸರ್ವೋತ್ತಮ ಅಂಚನ್‌ರವರ ಬಗ್ಗೆ ಒಲವು ಮೂಡಿ ಬರುತ್ತಿರುವುದನ್ನು ಕರವೇ ಸ್ವಾಗತಿಸುತ್ತದೆ. ಆದರೆ ಯಾರೇ ಆದರೂ ಸಹ ಮಂಗಳೂರಿಗೊಂದು ಕನ್ನಡ ಭವನ, ಕಸಾಪಕ್ಕೆ ಸ್ವಂತ ಕಚೇರಿ, ಕನ್ನಡಮ್ಮನ ಮನಸ್ಸಿನವರಿಗೆಲ್ಲ ರಿಗೂ ಸದಸ್ಯರಾಗಲು ಮುಕ್ತ ಅವಕಾಶ. ಪ್ರತೀ ವರ್ಷ ಮಹಾಸಭೆ ಹಾಗೂ ಲೆಕ್ಕಪತ್ರ ಮಂಡನೆ. ಪ್ರತೀ ೨೩ ವರ್ಷ ಕ್ಕೊಮ್ಮೆ ಅಧ್ಯಕ್ಷರ ಬದಲಾವಣೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬ್ಯಾಂಕ್ ಹಾಗೂ ಇನ್ನಿತರರುಗಳಿಂದ ಬಂದ ದೇಣಿಗೆಗಳನ್ನು ನೇರ ಕಸಾಪಕ್ಕೆ ವರ್ಗಾಯಿಸುವುದು. ಕ.ಸಾ. ಪ.ದ ಪ್ರಶಸ್ತಿಗಳನ್ನು ಅಧಿಕಾರಕ್ಕೆ, ಹಣಕ್ಕೆ, ಅಂತಸ್ತಿಗೆ ಶಿಫಾ ರಸ್ಸಿಗೆ ಮಾರಿಕೊಳ್ಳದೆ, ನಾಡುನುಡಿಗಾಗಿ ಹೋರಾಡಿದ ಕನ್ನಡಪರ ಹೋರಾಟಗಾರರಿಗೆ ಹಾಗೂ ಸಂಘಟನೆಗ ಳನ್ನು ಪರಿಗಣಿಸಬೇಕು. ಅವರಿಗೂ ಪ್ರಶಸ್ತಿ ನೀಡಿ ಗೌರವಿಸ ಬೇಕು. ಈ ಎಲ್ಲಾ ಸಮಾಜಪರ, ನಾಡು ನುಡಿಯ ಪರ ಚಿಂತನೆ ಇದ್ದವರನ್ನು ಕರವೇ ಒಪ್ಪಿಕೊಳ್ಳುತ್ತದೆ. ಇಲ್ಲದಿ ದ್ದಲ್ಲಿ ಕರವೇ ಹೋರಾಟದ ಮೂಲಕ ಜನಜಾಗೃತಿ ಮೂಡಿಸಿ ತನ್ನದೇ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಲು ತೀರ್ಮಾಸಿದೆ.

ನಝೀರ್ ಹುಸೈನ್, ಪ್ರಧಾನ ಕಾರ್ಯದರ್ಶಿ ಕ.ರ.ವೇ ದ.ಕ

ಕಬಡ್ಡಿ ಆಟಗಾರರಿಗೆ ಪ್ರೋತ್ಸಾಹ ಸಾಲದು

Posted by JAYAKIRANA Kirana on | 0 comments | Leave a comment...

ಹೆಬ್ರಿ ಸಮೀಪದ ಕುಗ್ರಾಮದ ಹುಡುಗಿ ಮಮತಾ ಪೂಜಾರಿ ನೇತೃ ತ್ವದ ಕಬಡ್ಡಿ ತಂಡ ವಿಶ್ವಮಟ್ಟದಲ್ಲಿ ಗೆಲುವು ಸಾಧಿಸಿರುವುದು ಸಂತಸದ ಸಂಗತಿ. ಆದರೆ ಕಬಡ್ಡಿ ಆಟಗಾರರಿಗೆ ಸರಕಾರ ನೀಡುತ್ತಿರುವ ನೀರಸ ಪ್ರೋತ್ಸಾಹ ಕಂಡು ನಿಜಕ್ಕೂ ಬೇಸರವಾಗುತ್ತಿದೆ. ಯಾಕೆಂದರೆ ಕ್ರಿಕೆಟ್ ಮತ್ತಿ ತರ ಕ್ರೀಡೆಯಲ್ಲಿ ಗೆದ್ದವರಿಗೆ ಕೋಟಿ-ಕೋಟಿ ಕೊಡಲಾಗುತ್ತದೆ. ಆದರೆ ಕಬ ಡ್ಡಿಯಂಥ ಗ್ರಾಮೀಣ ಆಟಗಾರರಿಗೆ ಮಾತ್ರ ಪ್ರೋತ್ಸಾಹವಿಲ್ಲ. ಇದು ಮಮತಾ ಪೂಜಾರಿಯಂಥ ಒಂದಿಬ್ಬರು ಕ್ರೀಡಾಳುಗಳ ಸಮಸ್ಯೆಯಲ್ಲ. ಎಲ್ಲ ಗ್ರಾಮೀಣ ಕ್ರೀಡಾಳುಗಳ ಸಮಸ್ಯೆ ಇದೇ ಆಗಿದೆ. ಕಬಡ್ಡಿ ಆಟಕ್ಕೆ ಅಂತರಾಷ್ಟ್ರೀಯ ಮಟ್ಟ ದಲ್ಲಿ ಜನಮನ್ನಣೆ ತಂದುಕೊಟ್ಟ ಮಮತಾರನ್ನು ಸರಕಾರ ಗುರುತಿಸದೇ ಇರುವುದು ಬೇಸರದ ಸಂಗತಿ. ಬೇರೆ ರಾಜ್ಯಗಳ ಕಬಡ್ಡಿ ಆಟಗಾರರಿಗೆ ಕೋಟಿ ಮೊತ್ತವನ್ನು ಬಹುಮಾನವಾಗಿ ನೀಡುವಾಗ ನಮ್ಮಲ್ಲಿ ಕೆಲವೇ ಲಕ್ಷ ಗಳನ್ನು ಕೊಟ್ಟು ಆಟಗಾರರನ್ನು ಸಂತೃಪ್ತಿ ಪಡಿಸುವುದು ಸರಿಯೇ? ರಾಜ್ಯ ಸರಕಾರ ರಾಜಕೀಯ ಸಭೆ-ಸಮಾರಂಭಗಳಿಗೆ ಖರ್ಚು ಮಾಡುವ ಹಣ ವನ್ನು ಇಂಥ ಕ್ರೀಡಾಳುಗಳಿಗೆ ನೀಡಿದಲ್ಲಿ ನಮ್ಮ ದೇಶವೂ ಇತರ ರಾಷ್ಟ್ರಗಳ ಎದುರು ತಲೆಯೆತ್ತಿ ನಿಲ್ಲುವಂತಾದೀತು.

ಶರಣ್, ಕಾರ್ಕಳ

ಮಹಿಳೆಯರಿಗೆ ಬಸ್ಸಿನಲ್ಲಿ ಸಂಚರಿಸಲು ಅನುವು ಮಾಡಿಕೊಡಿ

Posted by JAYAKIRANA Kirana on | 0 comments | Leave a comment...

ಈಗ ಬಸ್ಸುಗಳಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟ ಸೀಟುಗಳು ಲಭಿಸುತ್ತಿದ್ದರೂ ಬಸ್ಸಿನಲ್ಲಿ ಮಹಿಳೆಯರಿಗೆ ಒಂದು ರೀತಿಯ ಕಿರುಕುಳ ತಪ್ಪಿದ್ದಲ್ಲ. ಯಾಕೆಂದರೆ ಕೆಲ ವೊಂದು ಯುವಕರು ಬಸ್ಸಿನ ಮುಂದಿನ ಬಾಗಿಲಿನಲ್ಲೇ ಹತ್ತಿ ಮಹಿಳೆಯರ ಸೀಟಿನ ಹತ್ತಿರ ಬಂದು ನಿಲ್ಲುತ್ತಾರೆ. ಹಿಂದುಗಡೆ ಬೇಕಾದಷ್ಟು ಜಾಗವಿದ್ದರೂ ಅಲ್ಲಿಯೇ ಬಂದು ನಿಲ್ಲುವುದು ಒಂದು ರೀತಿಯ ಚಟವಾಗಿ ಬೆಳೆದಿದೆ ಎಂದರೆ ತಪ್ಪಾಗಲಾರದು. ಅದಲ್ಲದೆ ಬಸ್ಸಿನ ಬಾಗಿಲಿನಲ್ಲೇ ನಿಂತು ಮಹಿಳೆಯರು ಹತ್ತುವಾಗ ತಮಾಷೆ ಮಾಡುವುದು ವಾಡಿ ಕೆಯಾಗಿದೆ. ಬೆಳಿಗ್ಗಿನ ಹೊತ್ತು ಬಸ್ಸಿನಲ್ಲಿ ರಶ್ ಇರುವಾಗಲೇ ಕೆಲವೊಂದು ಯುವಕರು ಬೇಕುಬೇಕೆಂದೇ ಬಸ್ಸಿನಲ್ಲಿ ಬರುವವರೂ ಇದ್ದಾರೆ. ಕೆಲವೊಂದು ಬಸ್ಸಿನಲ್ಲಿ ಇದನ್ನೆಲ್ಲಾ ಬಸ್ಸಿನ ಕಂಡೆಕ್ಟರ್, ನಿರ್ವಾಹಕ ಗಮನಿಸಿದರೂ ಅಂತಹ ಯುವಕರಿಗೆ ಪೋತ್ಸಾಹ ನೀಡುತ್ತಾರೆ. ರಶ್‌ನಲ್ಲಿ ಮಹಿಳೆಯರ ಹತ್ತಿರ ನಿಂತು ತಮಾಷೆ ಮಾಡುವುದು, ರೇಗಿಸುವುದು ಮಾಡುವವರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಬೇಕಾಗಿದೆ.

ನೊಂದ ವಿದ್ಯಾರ್ಥಿನಿ, ಮಂಗಳೂರು

ಬಜ್ಪೆಯಲ್ಲಿ ನೋ ಪಾರ್ಕಿಂಗ್ ಪಾಲನೆಯಾಗುತ್ತಿಲ್ಲ!

Posted by JAYAKIRANA Kirana on | 0 comments | Leave a comment...

ಬಜ್ಪೆ ಪೊಲೀಸ್ ಠಾಣೆಯ ಹಿಂದಿನ ಎಸ್ಸೈ ಜಾರಿಗೆ ತಂದಿದ್ದ ಮಹತ್ವದ ಯೋಜನೆ ನೋ ಪಾರ್ಕಿಂಗ್ ಪಾಲನೆಯಾಗುವುದು ಮಾತ್ರ ಕಾಣುತ್ತಿಲ್ಲ. ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳು ಬೇಕಾಬಿಟ್ಟಿ ತಂಗುವ ಕಾರಣ ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ ಜನರಿಗೆ ಆಶಾದಾಯಕವಾಗಿತ್ತು. ಆದರೆ ಇತ್ತೀಚಿನ ದಿನ ಗಳಲ್ಲಿ ಇಲ್ಲಿ ವಾಹನಗಳು ಸಾಲಾಗಿ ನಿಂತಿರುವುದು ಕಂಡುಬರುತ್ತದೆ. ಇದನ್ನು ನೋಡಿದರೆ ನೋ ಪಾರ್ಕಿಂಗ್ ಯಾರಿಗೆ ಎನ್ನುವುದೇ ಅರ್ಥವಾಗುವುದಿಲ್ಲ. ನೋ ಪಾರ್ಕಿಂಗ್ ಎಂದು ಬೋರ್ಡ್ ಹಾಕಿರುವಲ್ಲಿಯೂ ಬೈಕ್‌ಗಳು ನಿಂತಿ ರುತ್ತವೆ. ಇದರಿಂದ ಜನರು ಸುಗಮವಾಗಿ ಸಂಚಾರ ನಡೆ ಸಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯತ್, ಪೊಲೀಸ್ ಇಲಾಖೆ ಇತ್ತ ಕಡೆ ಗಮನ ಹರಿಸುವುದು ಒಳ್ಳೆಯದು.

ನಾಗೇಶ್, ಬಜ್ಪೆ

ಎಸ್‌ಡಿಪಿಐ ಸಮಾವೇಶ ಶ್ರೀಮಂತಿಕೆಯ ಪ್ರದರ್ಶನವೇ?

Posted by JAYAKIRANA Kirana on | 0 comments | Leave a comment...

ಇತ್ತೀಚೆಗಷ್ಟೇ ಎಸ್‌ಡಿಪಿಐ ಎಂಬ ನೂತನ ಪಕ್ಷವೊಂದು ತನ್ನ ಸಮಾವೇಶವನ್ನು ಮಂಗಳೂರಿನಲ್ಲಿ ನಡೆಸಿತು. ನಗರದಾದ್ಯಂತ ಬ್ಯಾನರ್, ಬಂಟಿಂಗ್ಸ್, ಮತ್ತು ತನ್ನ ಪಕ್ಷದ ಧ್ವಜ ಗಳನ್ನು ಹಾಕಿ ಅದ್ದೂರಿಯಾಗಿ ಸಮಾವೇಶವನ್ನು ನಡೆಸಲಾಯಿತು. ಆದರೆ ಇದಕ್ಕೆಲ್ಲಾ ಹಣದ ಮೂಲ ಯಾವುದು ಎಂಬ ಬಗ್ಗೆ ನನ್ನಲ್ಲಿ ಸಣ್ಣ ಅನುಮಾನಗಳಿವೆ.

ನಾನು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಲ್ಲ, ಹಿಂಬಾಲ ಕನೂ ಅಲ್ಲ. ಆದರೆ ಸಾಮಾನ್ಯ ನಾಗ ರಿಕನಾಗಿ ಎಸ್‌ಡಿಪಿಐ ಪಕ್ಷದ ಪ್ರಮು ಖರಲ್ಲಿ ನನ್ನದೊಂದು ಸಣ್ಣ ಪ್ರಶ್ನೆ. ಅಂಬೆಗಾಲಿಕ್ಕುತ್ತಾ ಸಾಗುತ್ತಿರುವ ನಿಮ್ಮ ಪಕ್ಷಕ್ಕೆ ಇಷ್ಟು ಹಣ ವ್ಯಯಿಸಿ, ಅದ್ದೂರಿ ಸಮಾವೇಶ ನಡೆಸಲು ಹಣ ಎಲ್ಲಿಂದ ಬಂತು? ಬಿಜೆಪಿ, ಕಾಂಗ್ರೆಸ್‌ನಂತಹ ಪಕ್ಷಗಳಿಗಾದರೆ ಇದು ದೊಡ್ಡ ವಿಚಾ ರವಲ್ಲ. ಆದರೆ ಇನ್ನೂ ಪೂರ್ಣ ಪ್ರಮಾ ಣದಲ್ಲಿ ನೆಲೆಯೂರದ ನಿಮ್ಮ ಪಕ್ಷಕ್ಕೆ ಆದಾಯದ ಮೂಲವೇನು? ನಿಮ್ಮಿಂದ ಕೆಲವೊಂದು ಪ್ರದೇಶಗಳಲ್ಲಿ ಉತ್ತಮ ಕಾರ್ಯಗಳು ನಡೆದಿರುವ ಬಗ್ಗೆ ತಿಳಿ ದುಕೊಂಡಿರುವೆ. ಕೆಟ್ಟ ರಾಜಕೀಯ ಪಕ್ಷಗಳ ಮಧ್ಯೆ ಉತ್ತಮ ನಾಯಕತ್ವದ ಅಗತ್ಯವಿದೆ. ಹೀಗಿರುವಾಗ ನಿಮ್ಮ ಪಕ್ಷ ವನ್ನು ಜನತೆ ಸ್ವೀಕರಿಸುವ ಸಾಧ್ಯತೆ ಯಿದೆ. ಆದರೆ ಈ ರೀತಿ ಅದ್ದೂ ರಿಯ ಸಮಾವೇಶಗಳ ಮೂಲಕ ನಿಮ್ಮ ಶ್ರೀಮಂತಿಕೆಯ ಪ್ರದರ್ಶನ ಕ್ಕಿಳಿದರೆ ಇತರೆ ಪಕ್ಷಗಳಂತೆ ಎಸ್‌ಡಿ ಪಿಐ ಕೂಡ ಜನರ ವಿಶ್ವಾಸ ಕಳೆದು ಕೊಳ್ಳುವುದು ನಿಶ್ಚಿತ.

ಜನಪರ ಹಿತಾಸಕ್ತಿಯ ಪಕ್ಷ ಎಂದು ಹೇಳಿಕೊಳ್ಳುವ ನೀವು ನನ್ನ ಗೊಂದಲವನ್ನು ನಿವಾರಿಸುತ್ತೀರಿ ಎಂದುಕೊಂಡಿರುವೆ.

ವಿನ್ಯಾಸ್, ಮಂಗಳೂರು

ರಾಜ್ಯದಲ್ಲಿ ನಡೆಯುತ್ತಿರುವುದು ದುರಾಡಳಿತದ ಪರಮಾವಧಿಯಲ್ಲವೇ?

Posted by JAYAKIRANA Kirana on | 0 comments | Leave a comment...


ವಿಧಾನಸೌಧ ದೇವಾಲಯ ಎನ್ನುವುದಾದರೆ ದೇವಾಲಯದಂತೆ ಶಾಂತಿಯುತವಾಗಿ ಭಕ್ತಿಯಿಂದ ದೇವಾಲಯಕ್ಕೆ ಗೌರವ ಕೊಡಬೇಕಲ್ಲ. ಅದು ಕೊಡುವುದಿಲ. ಯಾಕೆಂದರೆ ಎಲ್ಲರೂ ಸ್ವಾರ್ಥ ಸಾಧಕರು. ಅವರ ಕೆಲಸ ನಡೆಯಲೇಬೇಕು.

ಕೆ.ಭಾಸ್ಕರ ವಿಟ್ಲ, ಫರಂಗಿಪೇಟೆ
ಕರ್ನಾಟಕ ರಾಜ್ಯದಲ್ಲಿ ರಾಜಕಾರಣಿಗಳು ಏನು ಮಾಡುತ್ತಿ ದ್ದರೂ ಅದು ಪ್ರತೀ ಜನ ಸಾಮಾನ್ಯರೂ ಮತ ನೀಡಿರುವುದ ರಿಂದ ತಾನೇ. ಮತ ನೀಡುವಾಗ ಆತನಲ್ಲಿದ್ದ ಉತ್ತಮ ಗುಣ ಮತ್ತು ನಡತೆಯನ್ನು ನೋಡಿ ಮತ ನೀಡುತ್ತಾರೆ. ಚುನಾವಣೆ ಯಲ್ಲಿ ಜಯಗಳಿಸಿ ಅಧಿಕಾರ ಸ್ಥಾನಕ್ಕೆ ಬಂದ ಕೂಡಲೇ ಮಾನ ವರಾಗಿದ್ದವರು ದಾನವರಾಗುತ್ತಾರಲ್ಲ. ಇದು ಯಾವ ಧರ್ಮ. ಇದು ಆ ಪಕ್ಷ ಈ ಪಕ್ಷವೆಂದಲ್ಲ, ಎಲ್ಲಾ ಪಕ್ಷದ ರಾಜಕಾರಣಿ ಗಳ ಹಣೆ ಬರಹ ಒಂದೇ. ಈ ಕರ್ಮಕ್ಕಾಗಿ ಜನ ಮತ ನೀಡು ವುದೇ. ಚುನಾವಣೆಗೆ ಮುಂಚೆ ಮನೆ ಮನೆಗೆ ಬಂದು ಎಲು ಬಿಲ್ಲದ ನಾಲಗೆಯಲ್ಲಿ ಏನೇನೂ ಪೊಳ್ಳು ಭರವಸೆ ನೀಡುತ್ತಾ ರಲ್ಲ ನಂತರ ಆ ಎಲುಬಿಲ್ಲದ ನಾಲಿಗೆಗೆ ಎಲುಬು ಮೂಡು ವುದೇ? ಇವರ ಏನು ಮಾಡುತ್ತಾರೆ ಎಂಬುವುದೇ ಇವರಿಗೆ ಗೊತ್ತಿರುವುದಿಲ್ಲ.
ಒಟ್ಟಿನಲ್ಲಿ ನಾಯಿಗಳಿಗೆ ಜಗಿಯಲು ಎಲುಬು ಸಿಕ್ಕಿದಾಗೆ. ಹಣ ಆಸ್ತಿ ಸಂಪತ್ತು ಇದಕ್ಕೋಸ್ಕರ ಕುರ್ಚಿ ಸೀಟು ಗಟ್ಟಿ ಮಾಡುವ ದುರಾಲೋಚನೆ. ವಿಧಾನಸೌಧವನ್ನು ಪವಿತ್ರ ದೇವಾ ಲಯ ಎನ್ನುತ್ತಾರಲ್ಲ ಹೀಗೆ ಹೇಳುವವರು ಆತ್ಮಪೂರ್ವಕ ವಾಗಿ ಆ ದೇವಾಲಯಕ್ಕೆ ಬದ್ಧರಾಗಿದ್ದಾರೆಯೇ? ಅಲ್ಲಿ ಜಗಳ ವಾಡುವುದನ್ನು ದೂರದರ್ಶನದಲ್ಲಿ ಪ್ರತಿಯೊಬ್ಬರೂ ನೋಡು ತ್ತಿದ್ದಾರೆ. ನಾಯಿಗಳು ಕಚ್ಚಾಡುವಂತೆ ಚರ್ಚಿಸುವುದು ಸಾಮಾನ್ಯ. ಆದರೆ ಚರ್ಚೆಯನ್ನು ಆಲಿಸುವ ಬುದ್ಧಿ ಇವರಿಗೆ ಇದೆಯೇ? ಕೊನೆಗೆ ಸಭಾಪತಿಯೇ ಎದ್ದು ಹೋಗುವುದು ಹೊಸತೇನಲ್ಲ ಯಾರು ತನ್ನ ಮೂಗಿನ ನೇರಕ್ಕೆ ಉಗ್ರವಾಗಿ ವಾದಿಸುತ್ತಾರೋ ಆಗ ಸಭಾಪತಿ ಸಭಾತಾಗ್ಯ ಮಾಡುವ ಬದಲು ಕೂಡಲೇ ಪೊಲೀ ಸರಿಂದ ಅಂತವರನ್ನು ಬಂಧಿಸಲು ಆಜ್ಞೆ ಮಾಡಬೇಕು. ವಿಧಾ ನಸೌಧ ದೇವಾಲಯ ಎನ್ನುವುದಾದರೆ ದೇವಾಲಯದಂತೆ ಶಾಂತಿ ಯುತ ಭಕ್ತಿಯಿಂದ ದೇವಾಲಯಕ್ಕೆ ಗೌರವ ಕೊಡಬೇಕಲ್ಲ. ಅದು ಕೊಡುವುದಿಲ. ಯಾಕೆಂದರೆ ಎಲ್ಲರೂ ಸ್ವಾರ್ಥ ಸಾಧಕರು. ಅವರ ಕೆಲಸ ನಡೆಯಲೇಬೇಕು. ನಿಜವಾಗಿಯೂ ಮತ ಹಾಕಿದ ಜನತೆ ಪರವಾಗಿ ಕಾರ್ಯ ಮಾಡುವವರು ಸೌರ್ಜ ನ್ಯದಿಂದ ಚರ್ಚೆಯನ್ನು ಆಲಿಸಿ ಕಾರ್ಯಪ್ರವೃತರಾಗಬಹುದು. ಆಗ ಯಾವ ಪಕ್ಷದವರಿಗೂ ಟೀಕೆ ಮಾಡಲಾಗುವುದಿಲ್ಲ. ಸಭಾ ಪತಿ ಯವರಿಗೂ ಗೌರವ ಕೊಟ್ಟಂ ತಾಗುತ್ತದೆ. ಇದು ಇಲ್ಲವೇ ಇಲ್ಲ. ಹಿಂದಿನ ಕಾಲದಿಂದಲೂ ಗೌರವ ಭಯ ವೆನ್ನು ವುದು ಈಗಲೂ ಇಲ್ಲವೇ ಇಲ್ಲ. ಹಿಂದಿನ ಕಾಲದಿಂ ದಲೂ ಗೌರವ ಭಯವೆನ್ನು ವುದು ಇರು ತ್ತಿದ್ದರೆ ಸದನದಲ್ಲಿ ಯಾವೊಂದು ಹಗರಣವೂ ನಡೆಯುತ್ತಿರಲಿಲ್ಲ.
ತನ್ನ ಮನೆಯಲ್ಲಿ ಏನು ಮಾಡುತ್ತಿದ್ದಾರೋ ಅದನ್ನೇ ಮಾಡುತ್ತಾರೆ. ಇದೀಗ ಯಡಿಯೂರಪ್ಪನವರ ಅವಸ್ಥೆಯೂ ಇದೇ ರೀತಿಯಾಗಿದೆ. ಜನತೆ ಮುಖ್ಯಮಂತ್ರಿ ಸ್ಥಾನ ಕೊಟ್ಟಿತು ಅದನ್ನು ಪ್ರಾಮಾಣಿಕವಾಗಿ ಬಳಸಬಹುದಿತ್ತಲ್ಲ. ಆದರೆ ಹಗರಣದ ಸರಮಾಲೆಯನ್ನೇ ಧರಿಸಿಕೊಂಡು ಜೈಲು ಸೇರಿ ಬಂದರು. ಸದಾನಂದ ಗೌಡರನ್ನು ಅವರೇ ಆರಿಸಿ ಮುಖ್ಯ ಮಂತ್ರಿ ಮಾಡಿದರು. ಇದೀಗ ತನ್ನ ಬೇಳೆ ಬೇಯುವುದಿಲ್ಲ ವೆಂದು ಪುನಃ ಮುಖ್ಯಮಂತ್ರಿಯಾಗಲು ಹೋರಾಟ ಮಾಡು ತ್ತಿದ್ದಾರಲ್ಲ, ಇವರಿಗೆ ಬುದ್ದಿ ಇದೆಯೋ ಅಥವಾ ಜನತೆ ಬುದ್ಧಿಮಾಂದ್ಯರೋ? ಇಲ್ಲ ಇನ್ನಷ್ಟು ಹಗರಣ ಮಾಡುವ ಸಂಚೇ?
ಯಾಕೆ ಸದಾನಂದ ಗೌಡರಿಗೇ ಉತ್ತಮ ಜನೋ ಪಯೋಗಿ ಕಾರ್ಯ ಮಾಡಲು ಸಲಹೆ ಮಾಡಬಾರದೆ? ಆಗ ಪಕ್ಷಕ್ಕೂ ಕೀರ್ತಿ ಅವರಿಗೂ ಗೌರವ ತಾನೇ?

ಛೀ ಕಳ್ಳಿ! ಇದು ಸರಿನಾ?

Posted by JAYAKIRANA Kirana on | 0 comments | Leave a comment...

ಆತುರ ಪಡಬೇಡಿ, ಅಪಾರ್ಥ ಮಾಡ್ಕೋಬೇಡಿ. ಸಮಾ ಧಾನದಿಂದ ಓದಿ. ಇದೆಲ್ಲಾ ಸುಮ್ನೆ ಚಿತ್ರದ ಪ್ರಚಾರದ ಗಿಮಿಕ್ ಅಷ್ಟೆ. ಮಾರ್ಚ್ ೯ರಂದು ತೆರೆಗೆ ಬಂದಿದ್ದ ಬಾಲಿ ವುಡ್ ಚಿತ್ರ ಕಹಾನಿ ಪ್ರಚಾರಕ್ಕಾಗಿ ನಾಯಕಿ ವಿದ್ಯಾಬಾಲನ್ ಗರ್ಭಿಣಿ ವೇಷ ತೊಟ್ಟು ಕೊಲ್ಕತಾ, ಮುಂಬಯಿ ನಗರ ಸಾರಿಗೆ ಬಸ್ಸಿನಲ್ಲಿ ಹತ್ತಿಸಿ ಇಳಿಸಿ ಕಸರತ್ತು ನಡೆಸಿದ ಪರಿ ಇದು.
ಗರ್ಭವತಿಯೊಬ್ಬಳು ಹೊಟ್ಟೆಯೊಳಗಿರುವ ಮಗುವಿಗೆ ಯಾರಪ್ಪಾ ತಂದೆ ಎಂದು ಬೀದಿ ಬೀದಿ ಅಲೆದಾಡುವ ಹುಡುಕಾಟದ ಕಥೆಯನ್ನು ಕಹಾನಿ ಹೊಂದಿದ್ದು, ಅದಕ್ಕಾಗಿ ಅದೇ ರೀತಿಯಲ್ಲಿ ಪ್ರಚಾರ ಮಾಡಿದ್ದಾಳೆ ಎಂದಿತು ಮಾಧ್ಯ ಮಗಳ ವರದಿ.
ಆದರೆ, ಇದರಲ್ಲಿ ಕೇವಲ ಚಿತ್ರದ ಪ್ರಚಾರ ತಂತ್ರ ಮಾತ್ರ ಅಡಗಿದೆಯೋ ಅಥವಾ ಅಕ್ರಮ ಸಂಬಂಧಕ್ಕೆ ಕಡಿವಾಣ ಹಾಕಲು ಈ ರೀತಿಯ ಸಾಮಾಜಿಕ ಸಂದೇ ಶಕ್ಕೆ ಮುಂದಾಗಿದ್ದಾರೋ ಎಂಬ ಸ್ಪಷ್ಟ ವಿಷಯ ಇನ್ನೂ ಬಹಿರಂಗವಾಗಿಲ್ಲ.
ಸತ್ಯದ ಸಂಗತಿಯೆಂದರೆ, ಡರ್ಟಿ ಪಿಕ್ಚರ್ ಚಿತ್ರ ಬಂದ ನಂತರ ವಿದ್ಯಾಬಾಲನ್ ಮೇಲೆ ಎಲ್ಲರೂ ಒಂದು ಕಣ್ಣು ಇಟ್ಟಿರುವುದರಿಂದ ಆಕೆ ಅಲುಗಾಡಿದರೂ ಏಕೆ ಎಂದು ನಿರೀಕ್ಷಿ ಸುತ್ತಿರುವವರೇ ಹೆಚ್ಚಾಗಿರುವುದರಿಂದ ಕಹಾನಿ ತಂಡ ಇಂತಹಾ ಮಾರ್ಕೆಟಿಂಗ್ ಐಡಿಯಾ ಮಾಡಿದೆ ಎನ್ನಲಾಗಿದೆ.
ಅವರೇನೋ ಚಿತ್ರದ ಪ್ರಚಾರ ಮಾಡಲು ಹೇಳಿದರೆ ವಿದ್ಯಾ ಬಾಲನ್ ಹೀಗೆ ಮಾಡೋದಾ? ತುಂಬು ಗರ್ಭಿಣಿ ಯಂತೆ ವೇಷ ತೊಟ್ಟು ಬಸ್ಸಿನಲ್ಲಿ ಅಲೆದಾಡಿ ಮೈಕುಣಿಸಿ ಪ್ರಯಾಣಿಕರ ಮನಸ್ಸಿನಲ್ಲಿ ಸುಖಾಸುಮ್ಮನೆ ಊಹಾ ಪೋಹ ಸೃಷ್ಟಿಸಿ ಮಳ್ಳಿಯಂತೆ ನಗು ಬೀರಿದ್ದಾರೆ. ಕಳೆದು ಹೋದ ಗಂಡನನ್ನು ಸಮಯ ಸಂದರ್ಭ ಮರೆತು ಹೀಗಾ ಹುಡುಕೋದು? ಛೀ ಕಳ್ಳಿ! ಹೇಗಿದೆ ನೋಡಿ ಪ್ರಚಾರದ ಪೊಗರು? ಇದು ಸರಿನಾ?

SMS

Posted by JAYAKIRANA Kirana on | 0 comments | Leave a comment...

ಸ್ನೇಹ
ಪ್ರೀತಿಸೋ ಹೃದಯಕ್ಕೆ ಪ್ರೀತಿನೇ ಪ್ರಪಂಚ, ಪ್ರೇಮಿಸೋ ಹೃದಯಗಳಿಗೆ ಪ್ರೇಮನೇ ಪ್ರಪಂಚ
ಆದರೆ.. ಈ ನನ್ನಪುಟ್ಟ ಹೃದಯಕ್ಕೆ ಸ್ನೇಹಿತರೇ ಪ್ರಪಂಚ

ಜೀವನ
ಆಸೆಗಳಿಗಾಗಿ ಬದುಕುವುದಲ್ಲ ಆದರ್ಶವಾಗಿ ಬದುಕಬೇಕು
ದೀರ್ಘ ಜೀವನ ಮುಖ್ಯವಲ್ಲ
ದಿವ್ಯ ಜೀವನ ಮುಖ್ಯ

ಎಕ್ಸಾಂ
ಟೀಚರ್: ಯಾಕಪ್ಪ ಎಕ್ಸಾಂ ಹಾಲಲ್ಲಿ ವಿಸ್ಕಿ ಬಾಟಲ್ ಇಟ್ಕೊಂಡು ಕೂತಿದ್ದೀಯಾ?
ಸ್ಟ್ಟೂಡೆಂಟ್: ನೀವೇ ಹೇಳಿದ್ರಲ್ಲ ಮೇಡಂ ಪ್ರತೀ ಎಕ್ಸಾಂನಲ್ಲೂ ಮಿನಿಮಂ ೯೦ ತೆಗೀಬೇಕು ಅಂತ!

ಮನಸ್ಸು
ನನ್ ಫೋನ್ ನನ್ ಕೈಯಲ್ಲಿ
ನನ್ ಎಸ್‌ಎಂಎಸ್ ನಿಮ್ ಫೋನಲ್ಲಿ, ನಿಮ್ ನೆನಪು ನನ್ ಮನಸಲ್ಲಿ, ನಿಮ್ ಮನಸ್ಸು ನನ್ ಹಾರ್ಟ್‌ಲ್ಲಿ, ಸದಾ ಹೀಗೆ ಇರಲಿ ಸ್ನೇಹ ಜೀವನದಲ್ಲಿ..

ಮೊಟ್ಟೆ
 ವಿದ್ಯಾರ್ಥಿ: ಮಿಸ್, ನೀವು ಕೋಳಿನಾ?
ಮಿಸ್: ಯು ಸ್ಟುಪಿಡ್, ನಾನ್ ನಿನಗೆ ಕೋಳಿ ತರಾ ಕಾಣ್ತೇನಾ?
ವಿದ್ಯಾರ್ಥಿ: ಹಾಗಲ್ಲ, ನೀವು ಎಕ್ಸಾಂಲ್ಲಿ ಯಾಕೆ ನನ್ ಪೇಪರಲ್ಲಿ ಮೊಟ್ಟೆ ಇಡ್ತೀರಾ?!

ಎಮರ್ಜೆನ್ಸಿ
ಸರ್ದಾರ್: ನಮ್ಮ ಹುಡುಗಿಗೆ ಏನೂ ತಿನ್ನದ, ಕುಡಿಯದ, ಯಾವ ಅಭ್ಯಾಸಗಳೂ ಇಲ್ಲದ, ಹುಡುಗ ಬೇಕು, ಬ್ರೋಕರ್:ನಿಮಗೆ ಅಂತ ಹುಡುಗ ಬೇಕಂದ್ರೆ ಹಾಸ್ಪಿಟಲ್‌ನ ಎಮರ್ಜೆನ್ಸಿ ವಾರ್ಡ್‌ನಲ್ಲಿ ಹುಡುಕಬೇಕಾಗುತ್ತೆ!

ಸೈಪರಾ?
ಧೂಮ್-೩ ಚಿತ್ರದ ಶೂಟಿಂಗ್ ನಡೀತಾ ಇತ್ತು. ಆಗ ಜಾನ್ ಮತ್ತು ಹೃತಿಕ್ ಬೈಕ್‌ನಲ್ಲಿ ಇನ್ನೂರು ಕಿ.ಮೀ ವೇಗದಲ್ಲಿ ಹೋಗುತ್ತಿದ್ದರು. ಆಗ ಅಲ್ಲೊಂದು ಆಶ್ಚರ್ಯ
ಕಾದಿತ್ತು. ಏನು ಗೊತ್ತಾ? ಅವರಿಬ್ಬರನ್ನು ರಜನೀಕಾಂತ್ ತಮ್ಮ ಸೈಕಲ್‌ನಲ್ಲಿ ಬಂದು ಓವರ್‌ಟೇಕ್ ಮಾಡುತ್ತಾ ಹೀಗೆ ಹೇಳಿದರು 'ಬರಿಕ್ ಬಲೆಂಬೆ, ದಾನೆ ಅಡಿಕ್ ಬೂರ್ದು ಸೈಪರಾ?

ಕ್ಯಾರಮ್
ಒಮ್ಮೆ ರಜನಿಕಾಂತ್ ತಮಿಳುನಾಡಿನಲ್ಲಿ ನಾಲ್ಕು ಎಕರೆ ಜಾಗ ತೆಗೆದುಕೊಂಡ, ಅದರ ನಾಲ್ಕು ಬದಿಗಳಲ್ಲಿ ನಾಲ್ಕು ಹೊಂಡ ತೆಗೆದ, ಯಾಕೆ
ಹೇಳಿ? ಯಾಕೆಂದರೆ 'ಕ್ಯಾರಮ್' ಆಡಲಿಕ್ಕೆ ಅಷ್ಟೇ!

ಒಂಥರಾ
ಜೀವನ ಬೇಸರ, ಜೀವನ ಅವಸರ, ಜೀವನ ಅಪಸ್ವರ, ಜೀವನ ಅವಾಂತರ, ಆದ್ರೂ ಏನೋ ಒಂಥರಾ, ಜೀವನ ನಿರಂತರ, ಇದರ ನಡುವೆ ಸ್ನೇಹ ಸುಂದರ.

ದಲಿತರಿಂದ ಅಧಿಕಾರಿಗಳಿಗೆ, ಪೊಲೀಸರಿಗೆ ದಿಗ್ಬಂಧನ

Posted by JAYAKIRANA Kirana on | 0 comments | Leave a comment...

ಬಂಟ್ವಾಳ: ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮಾಜದವರಿಗೆ ಸಂಬಂಧಿಸಿದ ಭೂ ಕಡತಗಳ ಕಾಣೆ ಪ್ರಕರಣಗಳನ್ನು ಹುಡುಕಿಕೊಡುವಂತೆ ಪಟ್ಟು ಹಿಡಿದ ದಲಿತ ಸೇವಾ ಸಮಿತಿ ಯವರು ತಾಲೂಕು ಕಚೇರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ ಘಟನೆ ನಿನ್ನೆ ಬಂಟ್ವಾಳ ತಹ ಶೀಲ್ದಾರ್ ಕಚೇರಿಯಲ್ಲಿ ನಡೆಯಿತು. ಸಂಜೆ ತನಕ ಮುಂದುವರಿದ ಸಂಘಟಕರ ಪ್ರತಿಭಟನೆ ಮಂಗಳೂರು ಅಸಿಸ್ಟೆಂಟ್ ಕಮಿಷನರ್ ಭೇಟಿಯ ನಂತರ ತಾತ್ಕಾಲಿಕ ಇತ್ಯರ್ಥವಾ ಯಿತು.
 ಸುಮಾರು ೧೦ ವರ್ಷಗಳ ಹಿಂದಿನ ಭೂ ದಾಖಲಾತಿ ಕಡತಗ ಳನ್ನು ಹುಡುಕಿಕೊಡುವಂತೆ ದಲಿತ ಸೇವಾ ಸಮಿತಿಯ ಸದಸ್ಯರು ತಹಶೀ ಲ್ದಾರ್ ಹಲವು ಬಾರಿ ದೂರು ನೀಡಿ ದ್ದರು. ತಾಲೂಕು ಕಚೇರಿ ಮುಂಭಾಗ ಧರಣಿಯೂ ಮಾಡಿದ್ದರು. ಹಿಂದಿನ ತಹಶೀಲ್ದಾರ್ ನಾರಾಯಣ ರಾವ್ ಅವರು ಕಡತಗಳನ್ನು ಹುಡುಕಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೂ ಸಮಸ್ಯೆ ಬಗೆಹರಿಯದೇ ಇದ್ದಾಗ, ಕಚೇರಿಯ ಉಪ ತಹಶೀಲ್ದಾರ್ ಕಿಶೋರ್ ಹಾಗೂ ವಿಷಯ ನಿರ್ವಾಹಕ ಗುಂಡೂ ರಾವ್ ವಿರುದ್ಧ ದಲಿತ ದೌರ್ಜನ್ಯ ಮೊಕದ್ದಮೆ ಹೂಡಲಾಗಿತ್ತು.
 ಈ ಮಧ್ಯೆ ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿದ ದಲಿತರು ಜಿಲ್ಲಾಧಿಕಾರಿಯವನ್ನು ಗಮನ ಸೆಳೆದಿದ್ದರು. ಕಡತ ಪ್ರಕರಣಗಳಿಗೆ ಸಂಬಂಧಿಸಿ ಅಂದಿನ ತಹಶೀಲ್ದಾರರಾದ ಸಿ.ಎನ್.ಮಂಜುನಾಥ್, ರವಿಚಂದ್ರ ನಾಕ್, ನಾರಾಯಣ ರಾವ್ ವಿರುದ್ಧ ಕ್ರಿಮಿನಲ್ ಮೊಕದಮೆ ದಾಖಲಿಸುವಂತೆ ಆಗ್ರಹಿಸಿದ್ದರು. ಆದರೂ ಏನೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದಿಢೀರ್ ಕಚೇರಿ ವರಾಂಡ ಹಾಗೂ ಆಡಳಿತ ಶಾಖೆಗೆ ಜಮಾಯಿಸಿದ ದಲಿತರು ನೆಲದ ಮೇಲೆ ಕುಳಿತು ಕಡತಗಳನ್ನು ಹುಡುಕಿಕೊಡಿ, ಇಲ್ಲದಿದ್ದರೆ ನಾವು ನಿಮ್ಮನ್ನು ಹೊರಗೆ ಹೋಗಲು ಬಿಡೆವು ಎಂದು ಹಠ ಹಿಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳಾದ ಅನಿಲ ಕುಲಕರ್ಣಿ, ಶೇಖರ್, ವಿನಾಯಕ ಬಿಲ್ಲವ ಅವರು ತಹಶೀಲ್ದಾರ್-೨ ಭಾರತಿ, ಉಪ ತಹಶೀಲ್ದಾರ್ ಕಿಶೋರ್ ಪ್ರಕರಣದ ಬಗ್ಗೆ ಕ್ರಮ ಜರುಗಿಸಲು ಚರ್ಚಿಸಿದರು.
 ಸಮಸ್ಯೆ ಇತ್ಯರ್ಥಗೊಳ್ಳದ ಕಾರಣ ಘಟನಾ ಸ್ಥಳಕ್ಕೆ ಸಹಾಯಕ ಆಯುಕ್ತರನ್ನು ಕರೆಯಿಸಲಾಯಿತು. ಕಡತ ಕಾಣೆ ಪ್ರಕರಣಗಳಿಗೆ ಸಂಬಂಧಿಸಿ ಗುರುವಾರ ಕ್ರಮ ಜರುಗಿಸುವುದಾಗಿ ಎಸಿ ವೆಂಕಟೇಶ್ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದೆ ಪಡೆಯಲಾಯಿತು. ದಲಿತ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಸಹ ಸಂಚಾಲಕ ಚಂದ್ರ ಶೇಖರ್, ಜನಾರ್ದನ ಬೋಳಂತೂರು ಮತ್ತಿತರು ನೇತೃತ್ವ ವಹಿಸಿದ್ದರು.

ಮುಂದೂಡಲ್ಪಟ್ಟಿದ್ದ ಕರಾವಳಿ ಅಲೆ ನಿರ್ದೇಶಕಿಯ ಸಾಕ್ಷಿ ವಿಚಾರಣೆ ಇಂದು

Posted by JAYAKIRANA Kirana on | 0 comments | Leave a comment...

ರೋಹಿಣಿ ಇಂದು ಕೋರ್ಟ್‌ಗೆ
ಮಂಗಳೂರು: ಜಯಕಿರಣ ಮತ್ತು ದಿಗಂತ ಮುದ್ರಣದ ವಿರುದ್ಧ ಕರಾವಳಿ ಅಲೆ ಪತ್ರಿಕೆ ಮತ್ತು ಚಿತ್ರಾ ಪಬ್ಲಿಕೇಷನ್ಸ್ ಸಂಸ್ಥೆಯ ನಿರ್ದೇಶಕಿ ರೋಹಿಣಿ ಸೀತಾರಾಂ ಅವರ ಸಾಕ್ಷಿ ವಿಚಾರಣೆ ಇಂದು ನಡೆಯಲಿದೆ.
ಮಾರ್ಚ್ ಎರಡರಂದು ಈ ಬಗ್ಗೆ ಸಾಕ್ಷಿ ವಿಚಾರಣೆ ನಡೆಯಬೇಕಿತ್ತು. ಆದರೆ ರೋಹಿಣಿ ಪರ ವಕೀಲರು ಸಮಯಾವಕಾಶ ಕೇಳಿದ್ದರಿಂದ ಇಂದು ದಿನ ನಿಗದಿಯಾಗಿದೆ.
೨೦೦೮ರಲ್ಲಿ ಕರಾವಳಿ ಅಲೆ ಪತ್ರಿಕಾ ಸಮೂಹದ ಬಿ.ವಿ.ಸೀತಾರಾಂ ಪತ್ನಿ ರೋಹಿಣಿ ಅವರು ಜಯಕಿರಣ ಸಂಪಾದಕ, ಮುದ್ರಕ ಹಾಗೂ ಮಾಲೀಕರ ಮೇಲೆ, ದಿಗಂತ ಮುದ್ರಣದ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಿದ್ದರು.
ಜಯಕಿರಣ ಪತ್ರಿಕೆ ತನ್ನ ಪರಿವಾರದ ಮಾನಕ್ಕೆ ಹಾನಿಯಾಗುವಂತಹ ವರದಿ ಪ್ರಕಟಿ ಸಿದ್ದು, ಇನ್ನು ಮುಂದೆ ಇಂಥ ವರದಿ ಪ್ರಕಟಿಸದಂತೆ ಶಾಶ್ವತ ಪ್ರತಿಬಂಧಕಾಜ್ಞೆ ನೀಡಬೇಕೆಂದು ರೋಹಿಣಿ ಕೋರಿದ್ದರು. ಆದರೆ ಪ್ರತಿವಾದಿಗಳ ಪರ ವಾದಿಸಿದ್ದ ವಕೀಲರು 'ರೋಹಿಣಿಯವರು ಒಬ್ಬ ನ್ಯಾಯಾಲಯದ ಹಕ್ಕಿ. ಜನರ ವಿರುದ್ಧ ಸುಳ್ಳು ದಾವೆ ಹೂಡಿ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಪಡೆದುಕೊಂಡು ಆನಂತರ ನ್ಯಾಯಾಲಯಕ್ಕೆ ಬಾರದಿರುವುದು ಇವರ ಅಭ್ಯಾಸ ಎಂದು ಈ ಹಿಂದಿನ ಕೋರ್ಟ್ ಕೇಸಿನ ಉದಾಹರಣೆಯಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ರೋಹಿಣಿಯವರು ಸಾಕ್ಷಿ ವಿಚಾರಣೆ ತೀವ್ರ ಕುತೂಹಲ ಕೆರಳಿಸಿ ಸಾರ್ವಜನಿಕರನ್ನೂ ಸೆಳೆದಿತ್ತು. ಇಂದು ನಡೆಯುವ ಸಾಕ್ಷಿ ವಿಚಾರಣೆಯ ವಿವರಗಳನ್ನು ಪತ್ರಿಕೆ ಜನಾಸಕ್ತಿ ಹಿನ್ನೆಲೆಯಲ್ಲಿ ಪ್ರಕಟಿಸಲಿದೆ.

ಜೆಡಿಯು ಅಭ್ಯರ್ಥಿ ಒಂಟೆ ಮೇಲೆ ಕುಳಿತು ಮತಯಾಚನೆ

Posted by JAYAKIRANA Kirana on | 0 comments | Leave a comment...

ಉಡುಪಿ: ಸಂಯುಕ್ತ ಜನತಾ ದಳ(ಜೆಡಿಯು) ಪಕ್ಷದಿಂದ ಚುನಾ ವಣಾ ಕಣದಲ್ಲಿರುವ ಕೆ.ಭರತ್ ಅವರು ಸೋಮವಾರ ಮಧ್ಯಾಹ್ನ ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಒಂಟೆ ಮೇಲೆ ಕುಳಿತುಕೊಂಡು ಸಾರ್ವ ಜನಿಕರಿಗೆ ಕೈ ಮುಗಿಯುತ್ತಾ ಮತ ಯಾಚನೆ ಮಾಡುವ ಮೂಲಕ ಕುತೂಹಲಕ್ಕೆ ಕಾರಣರಾದರು. ಒಂದು ಒಂಟೆ ಮೇಲೆ ಅಭ್ಯರ್ಥಿ ಭರತ್ ಕುಳಿತಿದ್ದರೆ, ಇನ್ನೊಂದು ಒಂಟೆ ಮೇಲೆ ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪಾಟೀಲ್ ಕುಳಿತಿದ್ದರು. ಮಾರುತಿ ವೀಥಿಕಾದಿಂದ ಹೊರಟ ಮತಯಾಚನೆಯ ಯಾತ್ರೆ ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಸಹಿತ ವಿವಿಧ ರಸ್ತೆಗಳಲ್ಲಿ ಸಂಚರಿಸಿತು.
 ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿದ್ದರಿಂದಾಗಿ ಸಾಂಕೇತಿಕ ಪ್ರತಿಭಟನೆಯಾಗಿ ಮತ್ತು ಮುಂದಿನ ದಿನಗಳಲ್ಲಿ ವಾಹನಗಳಲ್ಲಿ ಸಂಚರಿಸುವುದೇ ಕಷ್ಟ ಸಾಧ್ಯವಾದೀತು ಎಂಬುದನ್ನು ಪ್ರಚುರಪಡಿಸುವ ಉದ್ದೇ ಶದಿಂದ ಒಂಟೆ ಮೇಲೆ ಕುಳಿತು ಮತಯಾಚನೆ ಮಾಡುತ್ತಿರುವುದಾಗಿ ಕೆ.ಭರತ್ ಸ್ಪಷ್ಟಪಡಿಸಿದರು.
 ಈ ವಿಶಿಷ್ಟವಾದ ಮತಯಾಚನೆ ಕಾರ್ಯಕ್ರಮದಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಎಂ.ಪಿ.ನಾಡಗೌಡ, ರಾಜ್ಯ ಕಾರ್ಯದರ್ಶಿಗಳಾದ ಜಿ.ಕೆ.ಸಿ.ರೆಡ್ಡಿ, ಲೋಕಪಾಲ್ ಜೈನ್, ಕೆ.ಸತ್ಯನಾರಾಯಣ, ದ.ಕ.ಜಿಲ್ಲಾಧ್ಯಕ್ಷ ಹರೀಶ್ ಆಳ್ವ, ದ.ಕ.ಜಿಲ್ಲಾ ವಕ್ತಾರ ವಿಶಾಂತ್ ಡಿಸೋಜ, ಮಹಿಳಾ ಜೆಡಿಯು ರಾಜ್ಯಾಧ್ಯಕ್ಷೆ ಮತ್ತು ಮಾಜಿ ಶಾಸಕಿ ಸಾವಿತ್ರಿ ಗುಂಡಿ, ಉಡುಪಿ ಜಿಲ್ಲಾ ಸಂಚಾಲಕಿ ಶ್ರೀಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸುನಿಲ್‌ಕುಮಾರ್‌ಗೆ ದೈವದ ಅಭಯ

Posted by JAYAKIRANA Kirana on | 0 comments | Leave a comment...

ಪಡುಬಿದ್ರೆ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮರು ಚುನಾವಣೆ ಮಾ.೧೮ಕ್ಕೆ ನಿಗದಿಯಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿದ್ದು, ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ದೈವಸ್ಥಾನಗಳ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ.
 ರವಿವಾರ ಶಿರ್ವ ಜತ್ರಬೆಟ್ಟು ಜಾರಂದಾಯ ನೇಮೋತ್ಸವ ಜರಗಿದ್ದು, ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಅಲ್ಲಿಗೆ ಆಗಮಿಸಿ ಜಾರಂದಾಯ ದೈವದ ಅಭಯ ಪಡೆದರು. ಈ ಸಂದರ್ಭ ಬಿಜೆಪಿ ನೇತಾರ ಮಟ್ಟಾರು ರತ್ನಾಕರ ಹೆಗ್ಡೆ, ತಮ್ಮಣ್ಣ ಪೂಜಾರಿ ಮತ್ತಿತರರು ಉಪಸ್ಥ್ತಿತರಿದ್ದರು.

ರಾಜ್ಯಸಭೆಯ ಪೈಪೋಟಿಯಲ್ಲಿ ಧನಂಜಯ್

Posted by JAYAKIRANA Kirana on | 0 comments | Leave a comment...

ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯ ಸರಕಾರದ ದೆಹಲಿ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದು, ಮಾತ್ರವಲ್ಲ ತಾನೆಷ್ಟು ಸಮರ್ಥ ಎಂಬುದನ್ನೂ ಸಾಬೀತು ಪಡಿಸಿದ ಧನಂಜಯಕುಮಾರ್ ಮತ್ತೊಂದು ಸ್ಥಾನಮಾನಕ್ಕಾಗಿ ಕಾದಿದ್ದಾರೆ.
ರಾಜ್ಯ ವಿಧಾನಸಭೆಯಿಂದ ರಾಜ್ಯ ಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಧನಂಜಯಕುಮಾರ್ ಆಯ್ಕೆಯಾಗುವ ಲಕ್ಷಣಗಳು ಕಾಣುತ್ತಿವೆ.
ಮಾ.೩೦ರಂದು ನಡೆಯುವ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆಯ ಕಾರ್ಯ ಆರಂಭವಾಗಿದೆ. ಉಮೇದು ವಾರಿಕೆ ಸಲ್ಲಿಸಲು ಮಾ.೧೯ ಕಡೆಯ ದಿನ. ಉಡುಪಿ-ಚಿಕ್ಕಮಗ ಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯ ನಡುವೆಯೇ ರಾಜ್ಯಸಭೆಯ ಚುನಾವಣೆಗೂ ಅಣಿಯಾಗಬೇಕಾದ ಅನಿವಾರ್ಯತೆಯಲ್ಲಿರುವ ರಾಜ್ಯ ರಾಜಕೀಯ ಪಕ್ಷಗಳು ತಮ್ಮ ಪಾಲಿನ ಅಭ್ಯರ್ಥಿಗಳ ಆಯ್ಕೆಯ ಕೆಲಸದ ಪ್ರಾಥಮಿಕ ಸಿದ್ಧತೆಯನ್ನೇ ಇನ್ನೂ ಮಾಡಿಕೊಂಡಂತೆ ಕಾಣುತ್ತಿಲ್ಲ. ಆದರೂ ಪೈಪೋಟಿಯಲ್ಲಿರುವವರು ತಮ್ಮ ಪಾಲಿನ ಒಳ ಕಸರತ್ತು ಆಗಲೇ ಆರಂಭಿಸಿದ್ದಾರೆ.
ರಾಜ್ಯ ಸಭೆಯ ಸ್ಥಾನಗಳನ್ನು ಹೊರ ರಾಜ್ಯದವರಿಗೆ ಉದಾರವಾಗಿ ಬಿಟ್ಟುಕೊಡುವ ರಾಜ್ಯ ಬಿಜೆಪಿಯ ಸಂಪ್ರದಾಯ ಈ ಬಾರಿಯೂ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆಯಾದರೂ ಎರಡು ಸ್ಥಾನಗಳನ್ನು ಗೆಲ್ಲುವ ಅವಕಾಶ ಇರುವುದರಿಂದ ಒಂದು ಸ್ಥಾನವಾದರೂ ಸ್ಥಳಿಯರಿಗೆ ದಕ್ಕಲಿದೆ ಎಂಬ ಆಶಾಭಾವ ಹೊಂದಲಾಗಿದೆ. ಸ್ಥಳೀಯರಿಗೆ ಅವಕಾಶದ ಮಾತು ಬಂದಾಗ ಧನಂಜಯಕುಮಾರ್ ಹೆಸರು ಮುಂಚೂಣಿಯಲ್ಲಿ ನಿಲ್ಲುತ್ತದೆ. ರಾಜ್ಯಸಭೆಯ ಹಾಲಿ ಸದಸ್ಯತ್ವದಿಂದ ನಿವೃತ್ತರಾಗಿರುವ ಕೆ.ಬಿ. ಶಾಣಪ್ಪ ಪುನರಾಯ್ಕೆ ಬಯಸಿದ್ದಾರೆ. ಈ ಗೊಂದಲ ನಿವಾರಣೆ ಆದರೆ ಅಥವಾ ಇಬ್ಬರೂ ರಾಜ್ಯದವರೇ ಆಯ್ಕೆಯಾಗುವ ಪ್ರಸಂಗ ಬಂದರೆ ಧನಂಜಯ್‌ಗೆ ಅಡೆತಡೆ ಇರಲಿಕ್ಕಿಲ್ಲ. ದೆಹಲಿಯ ನಾಯಕರಾಗಿ ಕರ್ನಾಟಕದಿಂದ ರಾಜ್ಯಸಭೆಗೆ ಹೋಗಲು ಬಯಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಹೊತ್ತಿರುವ ಧಮೇಂದ್ರ ಪ್ರಧಾನ್ ಹಾಗೂ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನೀರ್ಮಲಾ ಸೀತಾರಾಮನ್ ಕಾಣುತ್ತಿದ್ದಾರೆ. ಆದರೆ ಪಕ್ಷ ಈ ವಿಷಯದಲ್ಲಿ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಉಮೇದುವಾರಿಕೆ ಸಲ್ಲಿಸಲು ಮಾ.೧೯.ರವರೆಗೆ ಅವಕಾಶ ಇರುವುದರಿಂದ ಲೋಕಸಭೆಯ ಉಪಚುನಾವಣೆ ಮುಗಿದ ಬಳಿಕ ಬಿಜೆಪಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಧನಂಜಯಕುಮಾರ್ ಯಡಿಯೂರಪ್ಪರ ಸಮರ್ಥಕರಾಗಿ ಕಂಡು ಬಂದರೂ ರಾಜ್ಯದ ಇತರ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದಾರೆ. ಪಕ್ಷ ಗೊಂದಲಕ್ಕೆ ಸಿಲುಕಿದಾಗ ಅದರ ರಕ್ಷಣೆಯ ಸಾಮರ್ಥ್ಯವನ್ನೂ ಅವರು ಪ್ರದರ್ಶಿಸಿದ್ದು ಅದುವೆ ಈಗ ಅವರಿಗೆ ಬಲ ತಂದಿದೆ ಎಂದು ಬಿಜೆಪಿಯ ಸ್ಥಳೀಯ ನಾಯಕರು ಹೇಳುತ್ತಿದ್ದಾರೆ.

ಕುಂದಾಪುರ: ಪ್ರತಾಪರ ಸುಳಿವಿಲ್ಲದ ಕಾಂಗ್ರೆಸ್ ರೋಡ್‌ಶೋ

Posted by JAYAKIRANA Kirana on | 0 comments | Leave a comment...

ಕುಂದಾಪುರ: ಜಿಲ್ಲೆಯಾದ್ಯಂತ ರಾಜ್ಯದ, ದೆಹಲಿಯ ನಾಯಕರುಗಳೊಂದಿಗೆ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ ಪರವಾಗಿ ಭರ್ಜರಿ ರೋಡ್ ಶೋ ನಡೆದರೂ ಸ್ಥಳೀಯ ಕಾಂಗ್ರೆಸ್ ನಾಯಕನಾಗಿ ಮುಂಚೂಣಿಯಲ್ಲಿರಬೇಕಾದ ಮಾಜಿ ಶಾಸಕ ಹಾಲಿ ಎಂ.ಎಲ್.ಸಿ ಪ್ರತಾಪಚಂದ್ರ ಶೆಟ್ಟಿಯವರ ಸುಳಿವೇ ಇಲ್ಲದಿರುವುದು ಹಲವು ಊಹಾಪೋಹಗಳಿಗೆ ಅನುಮಾನಗಳಿಗೆಡೆ ಮಾಡಿಕೊಟ್ಟಿದೆ ಎನ್ನಲಾಗಿದೆ. ಕಾಂಗ್ರೆಸ್ ಕಾರ‍್ಯಕರ್ತರಂತೂ ಈ ಬೆಳವಣಿಗೆಯಿಂದ ವಿಚಲಿತರಾಗಿದ್ದು ತಮ್ಮ ಒಳಬೇಗುದಿ ಏನಿದ್ದರೂ ಬದಿಗಿರಿಸಿ ಪ್ರಚಾರ ಕಾರ್ಯದಲ್ಲಿ ಪ್ರತಾಪರು ತೊಡಗಿಸಿಕೊಂಡರೆ ಅದರ ಖದರ್ರೇ ಬೇರೆ ತೆರನಾಗಿರುತ್ತದೆಂದು ವಿಷಾದದಿಂದ ಹೇಳುತ್ತಾರೆ. ಒಂದು ಕಾಲದ ಸೋಲಿಲ್ಲದ ಸರದಾರನೆಂದೇ ಖ್ಯಾತಿ ಹೊಂದಿದ್ದ ಪ್ರತಾಪರು, ಪ್ರತಾಪರೆಂದರೆ ಕಾಂಗ್ರೆಸ್ ಎಂಬಂತಾಗಿ ಹೋಗಿದ್ದರು. ಕಾರ‍್ಯಕರ್ತನ ಸಣ್ಣ ಪ್ರಾಬ್ಲೆಮ್‌ಗಳಿಗೂ ಎದ್ದು ಬರುತ್ತಿದ್ದ ಪ್ರತಾಪರೆಂದರೆ ಕಾರ‍್ಯಕರ್ತರ ಪಾಲಿನ ಗಾಡ್‌ಫಾದರ್ ಎಂಬಂತಾಗಿ ಹೋಗಿದ್ದರು. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿಯೆಂಬ ಬಿಜೆಪಿ ಮುತ್ಸದಿ ಪ್ರಥಮ ಬಾರಿಗೆ ಪ್ರತಾಪರನ್ನು ಸೋಲಿಸಿ ಬಿಟ್ಟರೋ ಅಂದಿನಿಂದಲೇ ಕಾಂಗ್ರೆಸ್ ಹಾಗೂ ಕಾರ‍್ಯಕರ್ತರ ಪಾಲಿನ ಅವನತಿಗೆ ಮುನ್ನುಡಿ ಬರೆದಂತಾಗಿ ಹೋಗಿತ್ತು.ಆದರೆ ಸೋಲನ್ನು ಸವಾಲಾಗಿಸಿ ಮತ್ತೆ ಫೀನೀಕ್ಸ್ ಪಕ್ಷಿಯಂತೆ ಎದ್ದು ಬರಬೇಕಾಗಿದ್ದ ಪ್ರತಾಪರು ತನ್ನ ಸೋಲಿನ ಹೊಣೆಯನ್ನು ಕಾಂಗ್ರೆಸ್ ಮೇಲೆಯೇ ತೀರಿಸಿಕೊಳ್ಳುವಂತಾಗಿದ್ದು ಮಾತ್ರ ಸ್ಥಳೀಯ ಕಾಂಗ್ರೆಸ್‌ನ ದುರಂತವೆಂದರೂ ತಪ್ಪಾಗಲಾರದು. ತಾನು ಮಾತ್ರ ಹಿಂಬಾಗಿಲ ಮೂಲಕ ರಾಜ್ಯಸಭೆಗೆ ಪ್ರವೇಶ ಪಡೆದ ಪ್ರತಾಪರು ಕೊನೆಪಕ್ಷ ತನ್ನನ್ನು ಸತತವಾಗಿ ಗೆಲ್ಲಿಸಿ ಕಳಿಸಿದ ತನ್ನ ಕ್ಷೇತ್ರ, ತನ್ನ ಪಕ್ಷ, ತನ್ನ ಕಾರ‍್ಯಕರ್ತರು ಹೇಗಿದ್ದಾರೆಂದು ತಿಳಿದುಕೊಳ್ಳಲು ಅಪ್ಪಿತಪ್ಪಿ ಯೂ ಇತ್ತ ಹೊರಳಿಲ್ಲ. ಹೀಗಾಗಿ ಕುಂದಾಪುರ ಕಾಂಗ್ರೆಸ್ಸೆಂಬುದು ದಿಕ್ಕು ತಪ್ಪಿದ ನಡುನೀರಿನಲ್ಲಿ ಚಕ್ಕ ಚದುರಿಹೋದಂತಹ ನೌಕೆಯಾಗಿ ಹೋಗಿತ್ತು. ನಾಚಿಕೆಯ ಸಂಗತಿಯೆಂದರೆ ತದನಂತರ ಜರಗಿದ ಚುನಾವಣೆಗಳಲ್ಲಿ ಸೂಕ್ತ ಅಭ್ಯರ್ಥಿಗಾಗಿ ತಡಕಾಡುವ ದುಸ್ಥಿತಿಯೂ ಕಾಂಗ್ರೆಸ್‌ಗೆ ಬಂದೊದಗಿತ್ತು. ಇದಕ್ಕೆ ಕಾರಣ ಪ್ರತಾಪರೇ ಎಂದು ಅಳಿದುಳಿದ ಕಾಂಗ್ರೆಸ್ ಕಾರ‍್ಯಕರ್ತರು ಮಾತನಾಡಿಕೊಂಡರು. ಆದರೆ ನಮ್ಮ ಸೋಲಿಲ್ಲದ ಸರದಾರ ನಾದುಂಷಿತ ಪ್ರತಾಪರದ್ದು ಮಾತ್ರ ದಿವ್ಯ ಮೌನ. ಇಂತಹ ಪರಿಸ್ಥಿತಿಯಲ್ಲೇ ಕುಂದಾಪುರ ಕಾಂಗ್ರೆಸ್ ಪಡಸಾಲೆಗೆ ಹೆಜ್ಜೆಯಿಕ್ಕಿದ ಜಯಪ್ರಕಾಶ್ ಹೆಗ್ಡೆ ಒಡೆದ ಕಾಂಗ್ರೆಸ್ ಮನೆಯನ್ನು ಒಗ್ಗೂಡಿಸುವುದರಲ್ಲಿಯೂ ಎರಡು ಬಾರಿ ಸೋತು ಹೋದರೂ ಮತ್ತೆ ಹುಮ್ಮಸ್ಸಿನಿಂದ ಅಖಾಡಕ್ಕೆ ಇಳಿದಿ ದ್ದಾರೆ. ನವೋತ್ಸಾಹದಿಂದ ಕಾಂಗ್ರೆಸ್ ಕಾರ‍್ಯಕರ್ತರೂ ಅವರನ್ನು ಹಿಂಬಾಲಿಸು ತ್ತಿದ್ದಾರೆ.ಈಗಾಗಲೇ ಕಾಂಗ್ರೆಸ್ ರೋಡ್ ಶೋಗಳಲ್ಲಿ ಮೊಯಿಲಿ, ಸಿ.ಎಂ.ಇಬ್ರಾಹಿಂ, ಸಿದ್ದರಾಮಯ್ಯ, ಸೊರಕೆ, ಜೆ.ಡಿ.ನಾಯ್ಕ್, ಕೆ.ಸಿ.ಪಾಟೀಲ್, ರಂಜಿತಾ, ದೇಶಪಾಂಡೆ ಮುಂತಾದ ನಾಯಕರು ಭಾಗವಹಿಸಿದರೂ ಮನೆಯ ಪ್ರಮುಖನೇ ಕಾಣೆಯಾ ಗಿರುವುದು ದಿಗಿಲಿನ ಸಂಗತಿಯಾಗಿದೆ. ಹಾಗಂತ ಪ್ರತಾಪರು ಬೇರೆ ಬೇರೆ ಕಡೆ ಪ್ರಚಾರದಲ್ಲಿ ನಿರತರಾಗಿದ್ದಾರೆ ಕುಂದಾಪುರಕ್ಕೆ ಆಸ್ಕರ್ ಬರಲಿ ಆಗ ಪ್ರತಾಪರೂ ಬರುತ್ತಾರೆಂಬ ವ್ಯಂಗ್ಯ ಮಿಶ್ರಿತ ನೋವಿನ ನುಡಿ ಕಾಂಗ್ರೆಸ್ ಕಾರ‍್ಯಕರ್ತರದ್ದು.

ಬಸ್ ನಿಲ್ದಾಣ ವಿವಾದ ಚುನಾವಣೆಯ ಬ್ರಹ್ಮಾಸ್ತ್ರ!

Posted by JAYAKIRANA Kirana on | 0 comments | Leave a comment...

ಕಾರ್ಕಳ: ಹಳೆ ಬಸ್ ನಿಲ್ದಾಣ ಸ್ಥಳಾಂತರ ವಿಚಾರವು ಉಪಚುನಾವಣೆಯಲ್ಲಿ ಬ್ರಹ್ಮಾಸ್ತ್ರ ವಿಚಾರವಾಗಿ ಮಾರ್ಪಟ್ಟಿದೆ.

ಜಾತ್ಯತೀತ ಜನತಾದಳವು ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾರ್ಕಳದ ಜನತೆಯ ಅನುಕೂಲಕರವಾಗಿದ್ದ ಬಸ್ ನಿಲ್ದಾಣವನ್ನು ಜಿಲ್ಲಾಡಳಿತವು ಏಕಾಏಕಿಯಾಗಿ ಸ್ಥಳಾಂತರ ಮಾಡುವ ಮೂಲಕ ಅನ್ಯಾಯವೆಸಗಿದೆ. ಇದರ ವಿರುದ್ಧ ಹೋರಾಟಕ್ಕೆ ಕರೆ ನೀಡಿದವರನ್ನು ಬಗ್ಗುಬಡಿಸುವ ಪ್ರಯತ್ನಗಳು ನಡೆಯುತ್ತಾ ಇರುವ ದೂರುಗಳು ಗಮನಕ್ಕೆ ಬಂದಿದೆ. ಇದು ಪ್ರಜಾಪ್ರಭುತ್ವದ ಮಾರ್ಗವೇ ಎಂದು ಗುಡುಗಿದರು. ಇವರ ಈ ಮಾತುಗಳು ಕೇಳಿದ ಮಂದಿ ಕುಮಾರಸ್ವಾಮಿಯ ಪರ ಜೈಕಾರ ಹಾಕುವುದರೊಂದಿಗೆ ತಮ್ಮ ಹೋರಾಟಕ್ಕೆ ಜನತಾದಳ ಬೆಂಬಲ ಸೂಚಿಸಿರುವುದನ್ನು ಹರ್ಷ ವ್ಯಕ್ತಪಡಿಸಿರುವುದು ಕಂಡುಬಂತು.

ಧರ್ಮದ ಹೆಸರಿನಲ್ಲಿ ಅಧಿಕಾರ ಗದ್ದುಗೆ ಏರಿದ ಯಡಿಯೂರಪ್ಪ ಧರ್ಮಸ್ಥಳ ಮುಂಜುನಾಥ ಸ್ವಾಮಿಯನ್ನು ಬೀದಿಗೆ ತರಲು ಯತ್ನಿಸಿ ತಾನೇ ಬೀದಿಗೆ ಬಿದ್ದಿದ್ದಾರೆಂದು ವ್ಯಂಗ್ಯವಾಡಿದ ಕುಮಾರಸ್ವಾಮಿ ಕರಾವಳಿಯ ಜನತೆ ಜಾಗೃತವಾಗಬೇಕು. ಧರ್ಮ ಉನ್ಮಾತವನ್ನು ಬೀರುತ್ತಿರುವ ಬಿಜೆಪಿ ಹಿಂದು ರಕ್ಷಕವೆಂದು ಫೋಸ್ ಕೊಡುತ್ತಿದ್ದಾರೆ, ಅಲ್ಪಸಂಖ್ಯಾತರಾಗಿರುವ ಮುಸ್ಲಿಂ ರಕ್ಷಕ ತಾನೆಂದು ಕಾಂಗ್ರೆಸ್ ಫೋಸ್ ಕೊಡುತ್ತಿದೆಯೇ ಹೊರತು ಇತ್ತಂಡವನ್ನು ಬೆಸೆಯುವಂತೆ ಮಾಡದೇ, ಸಂಘರ್ಷ ವಾತಾವರಣ ಹುಟ್ಟು ಹಾಕುವ ಮೂಲಕ ಅಧಿಕಾರದ ಗದ್ದುಗೆ ಏರಲು ಆ ಎರಡು ಪಕ್ಷಗಳು ಮುಂದಾಗುತ್ತಿರುವುದನ್ನು ಗಮನಿಸಬೇಕಾಗಿದೆ ಎಂದರು. ಇದೇ ಕಾರಣದಿಂದಾಗಿ ಕರಾವಳಿ ಜಿಲ್ಲೆಯಲ್ಲಿ ಅಗ್ಗಿಂದಾಗೆ ಕೋಮುಗಲಭೆ ಉಂಟಾಗುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಜೆಡಿಎಸ್ ಅಭ್ಯರ್ಥಿ ಭೋಜೇಗೌಡ, ಯುವ ಘಟಕದ ರಾಜ್ಯ ಅಧ್ಯಕ್ಷ ಮಹೇಂದ್ರ ಕುಮಾರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ದ.ಕ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ರಾಜಶ್ರೀ, ಮೊದಲಾದವರು ಉಪಸ್ಥಿತರಿದ್ದರು.

ಇನ್ನು ಪಂಚಾಯತ್ ಅಧ್ಯಕ್ಷರ ಆಯ್ಕೆಯ ಹೊಣೆ ಮತದಾರರಿಗೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಗ್ರಾಮ ಪಂಚಾ ಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರನ್ನು ನೇರ ಚುನಾವಣೆಯ ಮೂಲಕ ಆಯ್ಕೆ ಮಾಡುವ ಹಾಗೂ ಅವರಿಗೆ ಐದು ವರ್ಷ ಆಡಳಿತ ನಡೆಸಲು ಅವಕಾಶ ಮಾಡಿಕೊಡುವ ಬಗ್ಗೆ ರಾಜ್ಯ ಸರಕಾರ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ರಾಮಕೃಷ್ಣ ಹೆಗಡೆಯ ಕಾಲದಲ್ಲಿ ಆರಂಭವಾಯಿತು. ಮಂಡಲ ಪಂಚಾಯತ್ ಹಾಗೂ ಜಿಲ್ಲಾ ಪರಿಷತ್ ವ್ಯವಸ್ಥೆ ಜಾರಿಗೆ ತಂದ ಅಂದಿನ ಪಂಚಾಯತ್ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ಪಂಚಾ ಯತ್ ಆಡಳಿತಕ್ಕೆ ಅದೆಷ್ಟರ ಮಟ್ಟಿಗೆ ಅಧಿಕಾರ ನೀಡಿದ್ದರು ಎಂದರೆ ಶಾಸಕರನ್ನು ಜನರು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಶಾಸಕರ ಆವಶ್ಯಕತೆಯೇ ಇಲ್ಲ ಎಂಬಂತಹ ಸ್ಥಿತಿ ರೂಪುಗೊಂಡಿತ್ತು. ಆದರೆ ಮುಂದೆ ಆಡಳಿತ ನಡೆಸಿದವರು ಪಂಚಾಯತ್ ವ್ಯವಸ್ಥೆಯನ್ನೇ ಹಾಳು ಗೆಡವಿದರು. ಒಂದೊಂದೇ ಅಧಿಕಾರ ಮೊಟಕುಗೊಳಿಸುತ್ತ ಬಂದಿದ್ದು, ಈಗಿನ ಸ್ಥಿತಿ ಹೇಗಿದೆ ಎಂದರೆ ಪಂಚಾಯತ್ ಆಡಳಿತ ಸರಕಾರದ ಸಲಹೆ ನೀಡುವ ಸ್ಥಿತಿಯಲ್ಲಿ ಮಾತ್ರ ಉಳಿದಿದೆ.

ಆದರೂ ರಾಜಕೀಯ ನಿಂತಿಲ್ಲ. ಪಂಚಾಯತ್ ಸದಸ್ಯರಾಗಲೇ ಲಕ್ಷ ಲಕ್ಷ ವೆಚ್ಚ ಮಾಡುವ ಪರಿಸ್ಥಿತಿ ಇದೆ. ಇನ್ನು ಅಧ್ಯಕ್ಷರಾಗಬಯಸುವವರು ಹೇಗೆ?

ಪಂಚಾಯತ್ ಅಧ್ಯಕ್ಷರ ಅಧಿಕಾರ ಅವಧಿ ೨೦ತಿಂಗಳುಗಳದ್ದಾಗಿದೆ. ಆದರೆ ಬೇಗ ಬೇಗ ಅಧ್ಯಕ್ಷರಾಗುವ ಆಸೆಗೆ ಬಿದ್ದವರು ರಾಜಕೀಯ ಆಟ ಆಡುತ್ತಿ ದ್ದಾರೆ. ಇದರಿಂದ ಪಂಚಾಯತ್ ಆಡ ಳಿತ ಸ್ವಾರ್ಥ ಸಾಧನೆಯ ಕೂಟದಂ ತಾಗಿದೆ. ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದು ಸಾಮಾನ್ಯ ಎಂಬಂತಾಗಿದ್ದು ಪಂಚಾ ಯತ್ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಿದೆ. ಅಧ್ಯಕ್ಷರಾಗ ಬಯಸುವವರು ಹಣ ಖರ್ಚು ಮಾಡುವುದು, ಸದಸ್ಯರನ್ನು ಅಪಹರಿಸುವುದು ನಡೆಯುತ್ತದೆ ಇಂತಹ ಬೆಳವಣಿಗೆ ಹಳ್ಳಿ ರಾಜಕೀಯವನ್ನೇ ರಾಡಿ ಎಬ್ಬಿಸಿದೆ. ಇದೆಕ್ಕೆಲ್ಲ ಕಡಿವಾಣ ಹಾಕಲು ಜನರೇ ನೇರವಾಗಿ ಪಂಚಾಯತ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಪದ್ದತಿ ಜಾರಿಗೆ ತರಲು ಸರಕಾರ ಚಿಂತಿಸುತ್ತಿದೆ.

ಇಂತಹದ್ದೇ ವ್ಯವಸ್ಥೆ ಆಂದ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಅಮೆರಿಕದಲ್ಲಿ ದೇಶದ ಅಧ್ಯಕ್ಷರ ಆಯ್ಕೆಯೂ ಹೀಗೆಯೇ ನಡೆಯುತ್ತದೆ.

ಕೈಕೊಟ್ಟ ವಾಹನ, ರಸ್ತೆಗೆ ಬಂದ ಜಾನುವಾರುಗಳು

Posted by JAYAKIRANA Kirana on | 0 comments | Leave a comment...

ಮಂಗಳೂರು: ವಾಹನ ಕೆಟ್ಟು ಹೋದ ಕಾರಣ ಹೆದರಿದ ಜಾನುವಾರು ಸಾಗಾಟಗಾರರು ಗೋವುಗಳನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾದ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.
ನಿನ್ನೆ ಬೆಳಿಗ್ಗೆ ಬಿಕರ್ನಕಟ್ಟೆಯಲ್ಲಿ ಎಂಟು ಗೋವುಗಳು ರಸ್ತೆಯಲ್ಲಿ ಅಲೆದಾಟುತ್ತಾ ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದವು. ಈ ಮಾಹಿತಿ ಯರಿತ ಬಜರಂಗದಳದ ಕಾರ್ಯ ಕರ್ತರು ಗೋವುಗಳನ್ನು ಗೋ ಆಶ್ರಮಕ್ಕೆ ಸಾಗಿಸಿದ್ದರು. ಇವುಗಳನ್ನು ನಿನ್ನೆ ಬೆಳ್ಳಂಬೆಳಗ್ಗೆ ಸ್ಕಾರ್ಪಿಯೋ ವಾಹನದಲ್ಲಿ ಬಂಟ್ವಾಳದಿಂದ ಕುದ್ರೋಳಿ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತೆನ್ನಲಾ ಗಿದ್ದು ಬಿಕರ್ನಕಟ್ಟೆ ತಲುಪಿದಾಗ ವಾಹನ ಕೆಟ್ಟು ಹೋಗಿದ್ದರಿಂದ ಹೆದರಿದ ಸಾಗಾಟಗಾರರು ಗೋವುಗಳನ್ನು ಅಲ್ಲೇ ಇಳಿಸಿ ವಾಹನವನ್ನು ಎಳೆದುಕೊಂಡು ಹೋಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಬಿಜೆಪಿ ಸರಕಾರ ಉರುಳುತ್ತೆ: ರಾಯರೆಡ್ಡಿ

Posted by JAYAKIRANA Kirana on | 0 comments | Leave a comment...

ಉಡುಪಿ: ರಾಜ್ಯದಲ್ಲಿ ಹೆಸರಿಗೆ ಮಾತ್ರ ಸರಕಾರ ಇದೆ. ಮುಖ್ಯಮಂತ್ರಿ ಗಳು ಹೇಳಿದ ಮಾತನ್ನು ಸಚಿವ ಸಂಪು ಟದ ಸದಸ್ಯರಾಗಲೀ, ಅಧಿಕಾರಿಗಳಾ ಗಲೀ ಕೇಳ್ತಾ ಇಲ್ಲ. ಸಚಿವರ ಅಸಹ ಕಾರ ಮುಂದುವರಿದಿದೆ. ಇದುವರೆಗೂ ಯಾವ ಸರಕಾರದಲ್ಲೂ ನಡೆಯದಷ್ಟು ಭ್ರಷ್ಟಾಚಾರ ಮತ್ತು ಸಚಿವರ ಅಧಿಕಾರ ದಾಹ ಆಡಳಿತ ಪಕ್ಷದಲ್ಲಿ ಕಂಡು ಬರುತ್ತಿದೆ. ಅಧಿಕಾರ ದಾಹದಿಂದಲೇ ಸರಕಾರ ಕುಸಿದುಬೀಳುತ್ತೆ. ಬಿಜೆಪಿಗೆ ಭವಿಷ್ಯವಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋ ಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಮತ್ತೆ ಮುಖ್ಯಮಂತ್ರಿಯಾಗಲು ಯಡಿಯೂರಪ್ಪನವರು ಸದಾನಂದ ಗೌಡರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿ ದ್ದಾರೆ. ತಮ್ಮ ಮೇಲಿರುವ ೮೦ ಕೇಸ್ ಗಳನ್ನು ಮುಚ್ಚಿಹಾಕೋದೇ ಅವರು ಮತ್ತೆ ಮುಖ್ಯಮಂತ್ರಿಯಾಗಲು ಪ್ರಯತ್ನ ಪಡುವ ಮುಖ್ಯ ಉದ್ದೇಶ. ಯಡಿ ಯೂರಪ್ಪನವರ ಮೇಲೆ ೮ ಪ್ರಕರಣ ಗಳಲ್ಲಿ ಎಫ್‌ಐಆರ್ ಆಗಿರಬಹುದು. ೮೦ ಪ್ರಕರಣಗಳಲ್ಲಿ ಎಫ್‌ಐಆರ್ ಆಗಿಲ್ಲ ಅಷ್ಟೇ ಎಂದು ರಾಯರೆಡ್ಡಿ ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶಾಸಕ ಯು.ಟಿ.ಖಾದರ್, ಫಾರೂಕ್ ಉಳ್ಳಾಲ, ಮಮತಾ ಗಟ್ಟಿ, ಎನ್.ಎಸ್.ಖರೀಂ, ಎಂ.ಎಸ್.ಮುಹಮ್ಮದ್, ಸಂತೋಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸವಲತ್ತು ವಂಚಿತ ಅಧ್ಯಾಪಕರು ಅಮುಕ್ತ್ ಪ್ರತಿಭಟನೆ

Posted by JAYAKIRANA Kirana on | 0 comments | Leave a comment...

ಮುಲ್ಕಿ : ಯುಜಿಸಿ ನೇಮಕಾತಿ ಯಲ್ಲಿ ವಿಳಂಬ ನಡೆಸುವ ಮೂಲಕ ಸರ್ಕಾರ ಯುವ ಶಿಕ್ಷಕ ವೃಂದವನ್ನು ಅತಂತ್ರ ಸ್ಥಿತಿಗೆ ತಳ್ಳುವುದರೊಂದಿಗೆ ಯುಜಿಸಿ ಅಧ್ಯಾಪಕರಿಗೆ ಸಿಗಬೇಕಾದ ಸವಲತ್ತುಗಳನ್ನೂ ನೀಡದೆ ಸತಾಯಿಸು ತ್ತಿರುವುದು ಖಂಡನೀಯ ಎಂದು ಅಮುಕ್ತ್ ಮಾಜಿ ಅಧ್ಯಕ್ಷ ಪ್ರೊ. ಹಯವದನ ಉಪಾಧ್ಯ ಹೇಳಿದರು.
ಸೋಮವಾರ ಅಮುಕ್ತ್ ಮೂಲ್ಕಿ ವಿಜಯಾ ಕಾಲೇಜು ಘಟಕದ ವತಿ ಯಿಂದ ನಡೆದ ಪ್ರತಿಭಟನೆಯ ಸಭೆಯಲ್ಲಿ ಮಾತನಾಡಿದರು.
ನೆರೆ ರಾಜ್ಯಗಳಲ್ಲಿ ವ್ಯಾಪಕ ನೇಮಕಾತಿ ಮತ್ತು ಬರಬೇಕಾದ ಏರಿಯಸ್‌ನ್ನು ಕ್ಲಪ್ತ ಸಮಯಕ್ಕೆ ಅಲ್ಲಿನ ಸರ್ಕಾರಗಳು ನೀಡುತ್ತಾ ಬಂದಿದ್ದು ಕರ್ನಾಟಕದಲ್ಲಿ ಅನುದಾನಿತ ಕಾಲೇಜು ಶಿಕ್ಷಕರಿಗೆ ಸರಿಯಾದ ಸಮಯದಲ್ಲಿ ಮಾಸಿಕ ಸಂಬಳ ಸಿಗದ ಪರಿಸ್ಥಿತಿ ಉಂಟಾಗಿರುವುದು ಹಾಗೂ ನೂತನ ನೇಮಕಾತಿಯಿಲ್ಲದೆ ಯುವ ಪೀಳಿಗೆ ಯನ್ನು ಅತಂತ್ರ ಸ್ಥಿತಿಗೆ ತಳ್ಳಿರುವ ಬಗ್ಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದ ಅವರು ಈ ನಿಟ್ಟಿನಲ್ಲಿ ಕಪ್ಪು ಬ್ಯಾಜ್ ಧರಿಸಿ ತರಗತಿಗಳನ್ನು ನಡೆಸಲಾಗಿದೆ ಎಂದರು.

ಮೊದಲ ಹೆರಿಗೆಯಲ್ಲೇ ನಾಲ್ಕು ಮಕ್ಕಳು!

Posted by JAYAKIRANA Kirana on | 0 comments | Leave a comment...

ಕಾಸರಗೋಡು: ೨೪ರ ಹರೆಯದ ಯುವತಿಗೆ ಮೊದಲ ಹೆರಿಗೆಯಲ್ಲೇ ನಾಲ್ಕು ಮಕ್ಕಳು ಜನಿಸಿದ್ದು, ನಾಲ್ಕು ಕೂಡ ಗಂಡು ಮಕ್ಕಳಾಗಿದ್ದು, ಮಕ್ಕಳು ಹಾಗೂ ತಾಯಿ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಾ ಗಿದ್ದಾರೆ.
ಇಲ್ಲಿನ ಕುಂಬ್ದಾಜೆ ನಾರಂಪಾಡಿ ಸಮೀಪದ ನಿವಾಸಿ ಕೊಲ್ಲಿ ಉದ್ಯೋಗಿ ಅಬ್ದುಲ್ ಲತೀಫ್‌ರ ಪತ್ನಿ ತಾಹಿರಾ (೨೬) ಎಂಬವರು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಾಲ್ಕು ಕಂದಮ್ಮ ಗಳಿಗೆ ಜನ್ಮ ನೀಡಿದ್ದಾರೆ. ಶಿಶುಗಳು ಆರೋಗ್ಯವಾಗಿದ್ದರೂ ಕಡಿಮೆ ತೂಕ ಹೊಂದಿದ್ದಾರೆ. ಎರಡು ಶಿಶುಗಳು ೭೫೦ ಗ್ರಾಂ., ಒಂದು ಮಗು ೯೦೦ ಗ್ರಾಂ ಹಾಗೂ ಮತ್ತೊಂದು ಶಿಶು ೮೦೦ ಗ್ರಾಂ ತೂಕವಿದೆ. ಖ್ಯಾತ ಪ್ರಸೂತಿ ತಜ್ಞೆ ಡಾ. ವೀಣಾ ಮಂಜುನಾಥ್ ಅವರು ತಾಹಿರಾಳ ಹೆರಿಗೆ ಚಿಕಿತ್ಸೆ ನಡೆಸಿದ್ದರು.
ನಾಲ್ಕು ಶಿಶುಗಳು ಇರುವುದಾಗಿ ಈ ಹಿಂದೆಯೇ ಸ್ಕ್ಯಾನಿಂಗ್‌ನಲ್ಲಿ ಪತ್ತೆಯಾಗಿತ್ತು. ಇದಕ್ಕಾಗಿ ತುಂಬಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳ ಲಾಗಿತ್ತು. ಶಸ್ತ್ರಚಿಕಿತ್ಸೆ ಮೂಲಕ ಶಿಶು ಗಳನ್ನು ಹೊರತೆಗೆಯಲು ಆಲೋಚಿ ಸಲಾಗಿತ್ತಾದರೂ ಬಳಿಕ ಸಾಧಾರಣ ಹೆರಿಗೆ ಮಾಡಲಾಗಿತ್ತು.
ಸಾಧಾರಣ ಹೆರಿಗೆ ಮೂಲಕ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದು ವೈದ್ಯ ಲೋಕದಲ್ಲಿ ಅಪರೂಪ ಎನ್ನಲಾಗಿದೆ.

ರೆಡ್ಡಿ ಜಾಮೀನು ಅರ್ಜಿ ವಜಾ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಒಎಂಸಿ ಕಂಪನಿಯ ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಅಲಿಖಾನ್ ಅವರ ಕಸ್ಟಡಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ನಾಲ್ಕು ದಿನಕ್ಕೆ ವಿಸ್ತರಿಸಿರುವುದಲ್ಲದೆ ರೆಡ್ಡಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಆರೋಪಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕೆಂದು ಸಿಬಿಐ ಅಧಿಕಾರಿಗಳು ಕೋರಿಕೆಯ ಹಿನ್ನೆಲೆಯಲ್ಲಿ ವಾದ ವಿವಾದ ಆಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾದೀಶ ಡಿ.ಎಂ. ಅಂಗಡಿ ಮಾರ್ಚ್ ೧೬ರವರೆಗೆ ಸಿಬಿಐ ಪೊಲೀಸರ ವಶಕ್ಕೆ ನೀಡಿದೆ. ಹತ್ತು ದಿನಗಳ ಹಿಂದೆ ಮಾಜಿ ಸಚಿವ, ಚಂಚಲಗೂಡ ಜೈಲು ವಾಸಿ ಜನಾರ್ದನ ರೆಡ್ಡಿಯನ್ನು ಸಿಟಿ ಸಿವಿಲ್ ಕೋರ್ಟ್ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯ ಆವರಣ ರಣಾಂಗವಾಗಿದ್ದ ಹಿನ್ನೆಲೆಯಲ್ಲಿ ನಿನ್ನೆ ಮುನ್ನಚ್ಚರಿಕಾ ಕ್ರಮವಾಗಿ ಪೊಲೀಸರು ನಗರದ ಹೊರ ವಲಯದಲ್ಲಿರುವ ಪರಪ್ಪನ ಅಗ್ರಹಾರದ ಜೈಲಿನ ಆವರಣದಲ್ಲಿರುವ ವಿಚಾರಣೆ ನಡೆಯಿತು.
ಮುನ್ನೆಚ್ಚರಿಕಾ ಕ್ರಮವಾಗಿ ರೆಡ್ಡಿಯವರ ವಿಚಾರಣೆಯನ್ನು ಪರಪ್ಪನ ಅಗ್ರಹಾರದಲ್ಲೂ ಆಲಿಖಾನ್ ಅವರ ವಿಚಾರಣೆಯನ್ನು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆಸಲು ವ್ಯವಸ್ಥೆಗೊಳಿಸಿದ್ದರು. ವಿಚಾರಣೆ ನಡೆಯುವ ಸಂದರ್ಭದಲ್ಲಿ ಪತ್ರಕರ್ತರನ್ನು ವಿಚಾರಣೆ ಕೇಂದ್ರದಿಂದ ಅರ್ಧ ಕಿಮೀ ದೂರದಲ್ಲಿರುವಂತೆ ನೋಡಿಕೊಂಡಿದ್ದಲ್ಲದೇ, ಅಲ್ಲಿ ವಕೀಲರಿಗೂ ಮತ್ತು ಸಾರ್ವಜನಿಕರು ಸುಳಿಯದಂತೆ ನೋಡಿಕೊಂಡರು.
ರೆಡ್ಡಿ ಮತ್ತು ಆಲಿಖಾನ್ ಅವರನ್ನು ವಿಚಾರಣೆ ನಡೆಸಲು ಹೆಚ್ಚಿನ ಕಾಲಾವಕಾಶ ನೀಡಬೇಕು. ಕಸ್ಟಡಿ ಅವಧಿಯನ್ನು ೧೫ ದಿನಗಳವೆಗೂ ವಿಸ್ತರಿಸುವಂತೆ ಎಂದು ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಅರ್ಜಿ ಸಲ್ಲಿಸಿದ್ದರು.

ಏಶ್ಯಾ ಕಪ್‌ನಲ್ಲಿ ಇಂದು ಭಾರತಕ್ಕೆ ಲಂಕಾ ಸವಾಲು

Posted by JAYAKIRANA Kirana on | 0 comments | Leave a comment...

ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಏಶ್ಯಾ ಕಪ್‌ನ ಎರಡನೇ ಅಹರ್ನಿಶಿ ಪಂದ್ಯದಲ್ಲಿ ಇಂದು ಭಾರತ ಹಾಗೂ ಶ್ರೀಲಂಕಾ ನಡುವಿನ ರೋಚಕ ಹಣಾಹಣಿ ನಡೆಯಲಿದೆ. ಸಿಬಿ ತ್ರಿಕೋನ ಸರಣಿಯಲ್ಲಿ ಭಾರತ ಹೊರಬಿದ್ದ ಸೇಡನ್ನು ಇಂದು ಲಂಕಾ ವಿರುದ್ಧ ಸಾಧಿಸುವುದೇ ಎಂಬುದು ಕುತೂಹ ಲಕಾರಿ ಪ್ರಶ್ನೆಯಾಗಿದ್ದರೆ ಅದರ ವಿರುದ್ಧದ ಕೊನೆ ಪಂದ್ಯದಲ್ಲಿ ಭಾರತ ಪ್ರದರ್ಶಿಸಿದ ಅದ್ಭುತ ಫಾರ್ಮ್ ಇಲ್ಲೂ ಮುಂದುವರೆಯಲಿದೆಯೇ ಎಂಬುದು ಇನ್ನೊಂದು ಯಕ್ಷಪ್ರಶ್ನೆ.

ಏಶ್ಯಾದ ಮಣ್ಣಿನಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿ ಸುವ ಸ್ಫೋಟಕ ವೀರೇಂದ್ರ ಸೆಹ್ವಾಗ್ ಅನುಪಸ್ಥಿತಿ ಭಾರತವನ್ನು ಹೆಚ್ಚಾಗಿ ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಚಿನ್ ಹಾಗೂ ಗಂಭೀರ್ ತಂಡಕ್ಕೆ ಅಗ್ರಕ್ರಮಾಂಕದಲ್ಲಿ ಆಸರೆಯಾಗಲಿದ್ದಾರೆ. ಅಲ್ಲದೆ ತಂಡದ ಹೊಸ ಉಪಕಪ್ತಾನ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿರುವುದು ಉತ್ತಮ ಸಂಗತಿ. ಆದರೆ ರೋಹಿತ್ ಹಾಗೂ ರೈನಾ ಇನ್ನೂ ನಿಖರವಾದ ಫಾರ್ಮ್‌ಗೆ ಮರಳದಿರುವುದು ಚಿಂತೆಯ ಸಂಗತಿಯೇ ಸರಿ. ಸವ್ಯಸಾಚಿ ಆಟಗಾರ ರಾದ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ತಂಡದಲ್ಲಿದ್ದಾರಾದರೂ ಇಬ್ಬರಲ್ಲಿ ಒಬ್ಬರಿಗೆ ಮಣೆ ಹಾಕುವುದು ಗ್ಯಾರಂಟಿ. ಸ್ಪಿನ್ ವಿಭಾಗದಲ್ಲಿ ಆರ್. ಅಶ್ವಿನ್‌ಗೆ ರವೀದ್ರ ಜಡೇಜಾ ಅಥವಾ ರಾಹುಲ್ ಶರ್ಮಾ ಸಾಥ್ ನೀಡಲಿದ್ದಾರೆ. ವಿನಯ್ ಕುಮಾರ್ ಹಾಗೂ ಪ್ರವೀನ್ ಕುಮಾರ್ ತಂಡದ ವೇಗಿಗಳ ಪಟ್ಟಿಯಲ್ಲಿದ್ದಾರೆ. ಅಲ್ಲದೆ ಎದುರಾಳಿ ಲಂಕಾ ಕೂಡ ಸಿಬಿ ಸರಣಿಯ ಫೈನಲ್‌ಗೆ ಪ್ರವೇಶಿಸಿದ ಆತ್ಮವಿಶ್ವಾಸ ವನ್ನು ಇಲ್ಲಿ ತೋರಿಸುವುದು ಖಂಡಿತ. ನಾಯಕ ಜಯವರ್ಧನೆ ಹಾಗೂ ದಿಲ್ಶಾನ್ ಮೊದಲ ವಿಕೆಟ್‌ಗೆ ನಡೆಸುವ ಜೊತೆಯಾಟವು ತಂಡಕ್ಕೆ ಪ್ರಮುಖ. ಉಪುಲ್ ತರಂಗಾ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಅಲ್ಲದೆ ಕುಮಾರ ಸಂಗಾಕ್ಕರ ಹಾಗೂ ಚಾಂದಿಮಾಲ್ ಅದ್ಭುತ ಫಾರ್ಮ್‌ನಲ್ಲಿರುವುದು ಭಾರತಕ್ಕೆ ಚಿಂತೆಯ ವಿಷಯವೇ ಸರಿ. ಆದರೆ ಸ್ಪಿನ್ ವಿಭಾಗದಲ್ಲಿ ಲಕ್ಮಲ್ ಬಹುತೇಕ ಆಡುವ ಸಾಧ್ಯತೆಯಿದೆ. ಇನ್ನು ಮಲಿಂಗಾ ಹಾಗೂ ಕುಲಶೇಕರ ತಂಡದ ಪ್ರಮುಖ ಟ್ರಂಪ್‌ಕಾರ್ಡ್ ಬೌಲರ್‌ಗಳಾ ಗಿದ್ದು, ಇವರಿಗೆ ಮಹರೂಫ್ ಹಾಗೂ ಪಿರೇರಾ ಸಾಥ್ ನೀಡಲಿದ್ದಾರೆ. ಅಲ್ಲದೆ ಉತ್ತಮ ಬ್ಯಾಟಿಂಗ್ ಟ್ರ್ಯಾಕ್ ಹೊಂದಿರುವ ಪಿಚ್‌ನಲ್ಲಿ ಟಾಸ್ ಜಯಿಸುವ ತಂಡ ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.

ಮಜೊಲಾಗೆ ಸಿಇಒ ಪದವಿಯಿಂದ ಗೇಟ್‌ಪಾಸ್?

Posted by JAYAKIRANA Kirana on | 0 comments | Leave a comment...

ಡರ್ಬನ್: ತನ್ನ ಆಡಳಿತಾವಧಿ ಯಲ್ಲಿ ಅವ್ಯವಹಾರ ನಡೆಸಿದ ಆರೋಪ ಹೊಂದಿರುವ ಕ್ರಿಕೆಟ್ ಸೌತ್ ಆಫ್ರಿಕಾ ಮುಖ್ಯಕಾರ್ಯನಿರ್ವ ಹಣಾಧಿಕಾರಿ ಜೆರಾಲ್ಡ್ ಮಜೊಲಾಗೆ ಸಂಘಟಕರು ಪದವಿಯಿಂದಲೇ ಗೇಟ್‌ಪಾಲ್ ನೀಡುವ ಎಲ್ಲಾ ಸಾಧ್ಯತೆ ಗಳಿವೆ ಎಂದು ಹೇಳಲಾಗಿದೆ.

ಕಳೆದ ನಾಲ್ಕು ತಿಂಗಳಿನಿಂದ ನಡೆ ಯುತ್ತಿದ್ದ ಮಜೊಲಾ ಕೆಟ್ಟ ನಿರ್ವ ಹಣೆಯ ಮೇಲೆ ತನಿಖೆಗೆ ಸಂಬಂಧಿಸಿ ನ್ಯಾಯಾಧೀಶ ಕ್ರಿಸ್ ನಿಕೊಲ್‌ಸನ್ ನೀಡಿರುವ ಋಣಾತ್ಮಕ ಹೇಳಿಕೆಯ ನಂತರ ಸಂಘಟಕರು ಸುಮಾರು ಒಂದು ಗಂಟೆಗಳ ಮಾತುಕತೆ ನಡೆಸಿದ್ದು, ಇಲ್ಲಿ ಪದಚ್ಯುತಿಯ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಎಲ್ಲಾ ವಿಚಾ ರದ ಪೂರ್ಣ ಮಾಹಿತಿಯನ್ನು ಕ್ರೀಡಾ ಸಚಿವ ಫಿಕಿಲೆ ಎಮ್‌ಬಲುಲಾಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಅಧ್ಯಕ್ಷ ಜೆಕೊಬ್ ಜುಮಾ ನೀಡಿದ್ದಾರೆ.

ನಿಧಾನಗತಿಯ ಓವರ್‌ರೇಟ್: ಪಾಕ್‌ಗೆ ದಂಡ

Posted by JAYAKIRANA Kirana on | 0 comments | Leave a comment...

ಢಾಕಾ: ನಿನ್ನೆ ಇಲ್ಲಿ ನಡೆದಿದ್ದ ಬಾಂಗ್ಲಾ ವಿರುದ್ಧ ನಡೆದ ಏಶ್ಯಾ ಕಪ್‌ನ ಉದ್ಘಾಟನಾ ಪಂದ್ಯದಲ್ಲಿ ನಿಧಾನಗತಿಯ ಓವರ್ ನಡೆಸಿದ್ದಕ್ಕೆ ಪಾಕ್ ತಂಡ ದಂಡ ತೆತ್ತಿದೆ. ನಿಗದಿತ ಗುರಿಗಿಂತ ತಂಡ ಎರಡು ಓವರ್‌ಗಳ ಕೊರತೆಯನ್ನು ಕಂಡ ಹಿನ್ನೆಲೆಯಲ್ಲಿ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಈ ದಂಡವನ್ನು ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಪಾಕ್ ಕಪ್ತಾನ ಪಂದ್ಯದ ೪೦ ಶೇ. ಹಾಗೂ ಇತರೆ ಆಟಗಾರರು ೨೦ ಶೇ.ದಷ್ಟು ಪಂದದ ಶುಲ್ಕವನ್ನು ದಂಡ ರೂಪದಲ್ಲಿ ಪಾವತಿ ಮಾಡಲಿದ್ದಾರೆ. ಒಂದು ವೇಳೆ ಇದೇ ಪರಿಸ್ಥಿತಿ ಇನ್ನೂ ಮುಂದುವರೆದರೆ ಮಿಸ್ಬಾ ಒಂದು ಪಂದ್ಯದಿಂದ ಖೊಕ್ ಅನುಭವಿಸಲಿದ್ದಾರೆ.

ಫಿಕ್ಸಿಂಗ್ ಬಗ್ಗೆ ಪ್ರತಿಕ್ರಿಯಿಸುವುದು ಸರಿಯಲ್ಲ: ಬಿಸಿಸಿಐ

Posted by JAYAKIRANA Kirana on | 0 comments | Leave a comment...

ದೆಹಲಿ: ಕಳೆದ ಮೊಹಾಲಿ ಯಲ್ಲಿ ನಡೆದಿದ್ದ ವಿಶ್ವಕಪ್ ಕೂಟದ ಭಾರತ ಹಾಗೂ ಪಾಕಿ ಸ್ತಾನ ಪಂದ್ಯವು ಫಿಕ್ಸಿಂಗ್ ಆಗಿತ್ತು ಎಂಬ ಮಾಧ್ಯಮ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ನಿರಾಕರಿಸಿದ್ದು, ಒಂದು ವೇಳೆ ಆ ಬಗ್ಗೆ ಮಾತನಾಡಿದರೆ ಅದು ತಪ್ಪಾಗಬಹುದು ಎಂದು ಅವರು ತಿಳಿಸಿದ್ದಾರೆ.

ಪತ್ರಿಕೆಗಳು ಏನನ್ನೂ ಬೇಕಾದರೂ ಬರೆಯಬ ಹುದು. ಅಲ್ಲದೆ ಐಸಿಸಿ ಬಳಿಯಿಂದ ನಾವು ಏನನ್ನೂ ಪಡೆದಿಲ್ಲ. ಆದರೆ ಈ ಬಗ್ಗೆ ನಮಗೆ ಐಸಿಸಿ ಅಥವಾ ಯಾವುದೇ ಸಂಸ್ಥೆಯಿಂದ ಮಾಹಿತಿ ಸಿಗುವವರೆಗೂ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ಶುಕ್ಲಾ ತಿಳಿಸಿದರು. ಇಂಡೋ-ಪಾಖ್ ನಡುವಿನ ವಿಶ್ವಕಪ್ ಸೆಮೀಸ್ ಫಿಕ್ಸ್ ಆಗಿದ್ದು, ಭಾರತೀಯ ನಟಿಯರು ಕೂಡ ಬುಕ್ಕಿಗಳಿಗೆ ನೆರವು ನೀಡುತ್ತಾರೆ ಎಂದು ದೆಹಲಿ ಮೂಲದ ಬುಕ್ಕಿಯೊಬ್ಬ ನೀಡಿದ ಹೇಳಿಕೆಯನ್ನು 'ಸಂಡೇ ಟೈಮ್ಸ್ ವರದಿ ಮಾಡಿತ್ತು.

ಡಬಲ್ಸ್‌ನಲ್ಲಿ ಸಾನಿಯಾ-ಇಲೆನಾ ಕ್ವಾರ್ಟರ‍್ಸ್‌ಗೆ

Posted by JAYAKIRANA Kirana on | 0 comments | Leave a comment...

ಇಂಡಿಯನ್ ವೆಲ್ಸ್: ಮುನ್ನಡೆದ ಅಜ್ರೆಂಕಾ
ಕ್ಯಾಲಿಫೋರ್ನಿಯಾ: ಇಲ್ಲಿ ನಡೆಯುತ್ತಿರು ವ ಪ್ರತಿಷ್ಟಿತ ಇಂಡಿಯನ್ ವೆಲ್ಸ್ ಟೆನಿಸ್ ಕೂಟದಲ್ಲಿ ವಿಶ್ವದ ಅಗ್ರಶ್ರೇಯಾಂಕದ ವಿಕ್ಟೊರಿ ಯಾ ಅಜ್ರೆಂಕಾ ಹಾಗೂ ಚೀನಾದ ಲೀ ನಾ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ರಶ್ಯಾದ ಇಲೆನಾ ವೆಸ್ನಿನಾ ಜೋಡಿ ಅಲ್ವೆರ್ಟಾ ಬ್ರಿಯಾಂಟಿ ಹಾಗೂ ತಿಮಿಯಾ ವಿರುದ್ಧ ೬-೧, ೩-೬ ಹಾಗೂ ೧೦-೨ರ ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ಗೇರಿದ್ದಾರೆ.
ಸ್ವೆಟ್ಲಾನಾ ಕುಜ್ನತ್ಸೊವಾ ವಿರುದ್ಧ ೬-೧ ಹಾಗೂ ೬-೨ ನೇರ ಅಂತರದಲ್ಲಿ ಗೆಲುವು ದಾಖಲಿಸಿದ್ದು, ಮುಂದಿನ ಸುತ್ತಿನಲ್ಲಿ ಜರ್ಮನಿಯ ಜೂಲಿಯಾ ಜಾರ್ಜಸ್ ವಿರುದ್ಧ ಹೋರಾಡಲಿ ದ್ದಾರೆ. ಈ ಮೂಲಕ ಸದ್ಯದ ಋತು ವಿನ ಅಜೇಯ ಜೈತ್ರಯಾತ್ರೆಯನ್ನು ೧೯-೦ಯ ಅಂತರ ದಲ್ಲಿ ಮುಂದುವರೆಸಿದ್ದಾರೆ. ಇನ್ನು ಚೀನಾದ ಲೀ ನಾ ತನ್ನದೇ ದೇಶದ ಜೆಂಗ್ ಜೀ ವಿರುದ್ಧ ೬-೧, ೬-೩ರ ಅಂತರದಲ್ಲಿ ಗೆದ್ದು ಕೊಂಡಿದ್ದಾರೆ. ಈ ಗೆಲುವು ಜೀ ವಿರುದ್ಧ ಲೀ ನಾ ಸಾಧಿಸುತ್ತಿರುವ ಕಳೆದ ಐದು ಹಣಾಹಣಿ ಯಲ್ಲಿ ಮೊದಲನೇ ಗೆಲುವಾಗಿದೆ.

Page1

Posted by JAYAKIRANA Kirana on | 0 comments | Leave a comment...


Page2

Posted by JAYAKIRANA Kirana on | 0 comments | Leave a comment...


Page3

Posted by JAYAKIRANA Kirana on | 0 comments | Leave a comment...


Page4

Posted by JAYAKIRANA Kirana on | 0 comments | Leave a comment...


Page5

Posted by JAYAKIRANA Kirana on | 0 comments | Leave a comment...


Page6

Posted by JAYAKIRANA Kirana on | 0 comments | Leave a comment...


Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (86) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4042) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2496) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (76) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (148) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (91) kyandi (1) lekhana (262) ln (1) lnews (3669) lokayukta (3) madikeri (1) maleria (1) mangalore (579) mangaloreairport (1) manglore (7) manipal (28) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (411) omega (1) oscar (4) overdose (15) padilhomestay (32) padubidri (55) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (271) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (797) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (949) tpchandrashekaran (1) traffic (1) train (1) udu (1) udupi (484) udyoga (60) ullal (7) upcl (2) upi (152) uppinangadi (46) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (130) water (4) wenlock (2) yeddi (53) yogishbhat (1)